<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mahatma gandhi &#8211; Peepal Media</title>
	<atom:link href="https://peepalmedia.com/tag/mahatma-gandhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 31 Jan 2025 06:45:25 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>mahatma gandhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಗಾಂಧಿ ಪುಣ್ಯತಿಥಿಯಂದು ಗೋಡ್ಸೆಯ ಪೂಜೆ ಮಾಡಿದ ಹಿಂದೂ ಮಹಾಸಭಾ</title>
		<link>https://peepalmedia.com/hindu-mahasabha-worships-godse-on-gandhis-death-anniversary/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 31 Jan 2025 06:44:56 +0000</pubDate>
				<category><![CDATA[ದೇಶ]]></category>
		<category><![CDATA[Akhil Bharat Hindu Mahasabha]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[communalism]]></category>
		<category><![CDATA[fascism]]></category>
		<category><![CDATA[hindu mahasabha]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[mahatma gandhi]]></category>
		<category><![CDATA[Narayan Apte]]></category>
		<category><![CDATA[Nathuram Godse]]></category>
		<guid isPermaLink="false">https://peepalmedia.com/?p=53157</guid>

					<description><![CDATA[ಅಖಿಲ ಭಾರತ ಹಿಂದೂ ಮಹಾಸಭಾ ಗುರುವಾರ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನವರಿ 30, 1948 ರಂದು ದೆಹಲಿಯಲ್ಲಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ವ್ಯಕ್ತಿ ನಾಥೂರಾಂ ಗೋಡ್ಸೆಯನ್ನು ಗೌರವಿಸಿತು ಎಂದು ಪಿಟಿಐ ವರದಿ ಮಾಡಿದೆ. ಅಮರ್ ಹುತಾತ್ಮ ನಾಥುರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್‌ನಲ್ಲಿ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ಗೌರವಿಸಲು ಹಿಂದುತ್ವ ಗುಂಪಿನ ಸದಸ್ಯರು ಸೇರಿದ್ದರು. ಮಹಾಸಭಾದ ಮುಖಂಡ ಅಶೋಕ್ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸ್‌ ಪೂಜೆ ಮತ್ತು ಪಠಣ ಮಾಡಲಾಯಿತು. ಸಮಾರಂಭದಲ್ಲಿ, ಶರ್ಮಾ ಅವರು ಮಹಾತ್ಮ ಗಾಂಧಿಯವರ [&#8230;]]]></description>
										<content:encoded><![CDATA[
<p>ಅಖಿಲ ಭಾರತ ಹಿಂದೂ ಮಹಾಸಭಾ <a href="https://www.newindianexpress.com/nation/2025/Jan/30/hindu-mahasabha-celebrates-gandhis-assassination-honours-godse" target="_blank" rel="noreferrer noopener">ಗುರುವಾರ</a> ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜನವರಿ 30, 1948 ರಂದು ದೆಹಲಿಯಲ್ಲಿ ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ವ್ಯಕ್ತಿ <u>ನಾಥೂರಾಂ ಗೋಡ್ಸೆ</u>ಯನ್ನು ಗೌರವಿಸಿತು ಎಂದು ಪಿಟಿಐ ವರದಿ ಮಾಡಿದೆ.</p>



<p>ಅಮರ್ ಹುತಾತ್ಮ ನಾಥುರಾಮ್ ಗೋಡ್ಸೆ ನಾನಾ ಆಪ್ಟೆ ಧಾಮ್‌ನಲ್ಲಿ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ಗೌರವಿಸಲು ಹಿಂದುತ್ವ ಗುಂಪಿನ ಸದಸ್ಯರು ಸೇರಿದ್ದರು.</p>



<p>ಮಹಾಸಭಾದ ಮುಖಂಡ ಅಶೋಕ್ ಶರ್ಮಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸ್‌ ಪೂಜೆ ಮತ್ತು ಪಠಣ ಮಾಡಲಾಯಿತು.</p>



<p>ಸಮಾರಂಭದಲ್ಲಿ, ಶರ್ಮಾ ಅವರು ಮಹಾತ್ಮ ಗಾಂಧಿಯವರ &#8220;ರಾಷ್ಟ್ರಪಿತ&#8221; ಬಿರುದನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದರು ಮತ್ತು ಗಾಂಧಿಯವರ ಹತ್ಯೆಗೆ ಸಂಬಂಧಿಸಿರುವ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರ ಕುಟುಂಬಗಳನ್ನು ಗೌರವಿಸುವ ಯೋಜನೆಯನ್ನು ಘೋಷಿಸಿದರು.</p>



<p>ಗಾಂಧಿಯನ್ನು ರಾಷ್ಟ್ರಪಿತ ಎಂದು ವ್ಯಾಪಕವಾಗಿ ಕರೆಯಲಾಗಿದ್ದರೂ, ಅವರಿಗೆ ಭಾರತ ಸರ್ಕಾರವು <a href="https://timesofindia.indiatimes.com/india/mahatma-gandhi-was-never-declared-father-of-nation-reveals-rti-reply/articleshow/73446044.cms" target="_blank" rel="noreferrer noopener"><u>ಔಪಚಾರಿಕವಾಗಿ ಆ ಬಿರುದು ನೀಡಲಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ನಿಯಮ ಅಥವಾ ಆದೇಶವನ್ನು ಜಾರಿಗೊಳಿಸಲಾಗಿಲ್ಲ ಎಂದು ಕೇಂದ್ರವು 2020 ರಲ್ಲಿ ಹೇಳಿತ್ತು.</u></a></p>



<p>2012 ರಲ್ಲಿ, ಕೇಂದ್ರ ಗೃಹ ಸಚಿವಾಲಯವು ಗಾಂಧಿಗೆ ಔಪಚಾರಿಕವಾಗಿ &#8220;ರಾಷ್ಟ್ರಪಿತ&#8221; ಎಂಬ ಬಿರುದನ್ನು ನೀಡಲಾಗುವುದಿಲ್ಲ, ಏಕೆಂದರೆ ಸಂವಿಧಾನವು ಶೈಕ್ಷಣಿಕ ಅಥವಾ ಮಿಲಿಟರಿ ಪದಗಳನ್ನು ಹೊರತುಪಡಿಸಿ ಬೇರೆ ಬಿರುದಾಂಕಿತಗಳನ್ನು ಅನುಮತಿಸುವುದಿಲ್ಲ ಎಂದು <a href="https://timesofindia.indiatimes.com/india/constitution-doesnt-permit-father-of-the-nation-title-government/articleshow/16961980.cms" target="_blank" rel="noreferrer noopener"><u>ಹೇಳಿತ್ತು</u></a> .</p>



<p>ಹಿಂದೂ ಮಹಾಸಭಾವು ನವೆಂಬರ್ 15, 1949 ರಂದು ಗೋಡ್ಸೆ ಮತ್ತು ಆಪ್ಟೆಯನ್ನು ಗಲ್ಲಿಗೇರಿಸಿದ ದಿನ ನವೆಂಬರ್ 15 ನ್ನು ಪ್ರತಿ ವರ್ಷ &#8220;<u>ಬಲಿದಾನ್ ದಿವಸ್&#8221; ಎಂದು ಆಚರಿಸುತ್ತದೆ.</u></p>



<p>ಗುರುವಾರ ನಡೆದ ಸಮಾರಂಭವು &#8220;ಕರಮಚಂದ್ ಗಾಂಧಿಯವರ ಆತ್ಮವನ್ನು ಮತ್ತು ಭಾರತದಿಂದ ಗಾಂಧಿವಾದವನ್ನು,&#8221; ತೊಡೆದುಹಾಕುವ ಗುರಿಯನ್ನು ಹೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಹಿಂದುತ್ವ ಸಂಘಟನೆಯು ಭಾರತದ ವಿಭಜನೆಗೆ <u>ಗಾಂಧಿಯನ್ನು ಹೊಣೆಗಾರರನ್ನಾಗಿಸುತ್ತದೆ.</u></p>



<p>2019 ರಲ್ಲಿ, ಉತ್ತರ ಪ್ರದೇಶ ಪೊಲೀಸರು ಗಾಂಧಿ ಹತ್ಯೆಯನ್ನು ಅಭಿನಯಿಸಿ ತೋರಿಸಿದ ಕಾರಣ ಪಾಂಡೆ ಮತ್ತು ಆತನ ಪತ್ನಿಯನ್ನು ಬಂಧಿಸಿದರು. ಇವರ ಮರಣ ವಾರ್ಷಿಕೋತ್ಸವವನ್ನು &#8220;ಶೌರ್ಯ ದಿವಸ್&#8221; ಅಥವಾ ಶೌರ್ಯ ದಿನ ಎಂದು ಆಚರಿಸಿದ್ದರು. 2018 ರಲ್ಲಿ, ಗಾಂಧಿ ಹಂತಕನ ಗೌರವಾರ್ಥ ಮೀರತ್ ಅನ್ನು <u>ಗೋಡ್ಸೆ ನಗರ</u> ಎಂದು ಮರುನಾಮಕರಣ ಮಾಡುವಂತೆ ಸಂಘಟನೆಯು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಒತ್ತಾಯಿಸಿತ್ತು.</p>
]]></content:encoded>
					
		
		
			</item>
		<item>
		<title>ಮಹಾತ್ಮಾ ಗಾಂಧಿಗೆ ಅವಹೇಳನ : ಬಲಪಂಥೀಯ ಸಂಘಟಕ ಸಂಭಾಜಿ ಭಿಡೆ ವಿರುದ್ಧ ಪ್ರಕರಣ ದಾಖಲು</title>
		<link>https://peepalmedia.com/file-a-case-against-right-wing-organizer-sambhaji-bhide/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 29 Jul 2023 12:57:39 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[maharashtra]]></category>
		<category><![CDATA[mahatma gandhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sambhaji bhide]]></category>
		<guid isPermaLink="false">https://peepalmedia.com/?p=24613</guid>

					<description><![CDATA[ಮಹಾತ್ಮಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಬಲಪಂಥೀಯ ಕಾರ್ಯಕರ್ತ ಸಂಭಾಜಿ ಭಿಡೆ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ, ಶುಕ್ರವಾರ ಕಾಂಗ್ರೆಸ್ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಒಂದು ದಿನದ ನಂತರ, ಸಂಭಾಜಿ ಭಿಡೆ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜಪೇತ್ ಪೊಲೀಸರು ಸಂಭಾಜಿ ಭಿಡೆ ವಿರುದ್ಧ IPC ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕದಡಿದ [&#8230;]]]></description>
										<content:encoded><![CDATA[
<p>ಮಹಾತ್ಮಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಾರಣಕ್ಕೆ ಬಲಪಂಥೀಯ ಕಾರ್ಯಕರ್ತ ಸಂಭಾಜಿ ಭಿಡೆ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ, ಶುಕ್ರವಾರ ಕಾಂಗ್ರೆಸ್ ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಒಂದು ದಿನದ ನಂತರ, ಸಂಭಾಜಿ ಭಿಡೆ ವಿರುದ್ಧ ಪ್ರಕರಣ ದಾಖಲಾಗಿದೆ.</p>



<p>ರಾಜಪೇತ್ ಪೊಲೀಸರು ಸಂಭಾಜಿ ಭಿಡೆ ವಿರುದ್ಧ IPC ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕದಡಿದ ಆರೋಪ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>



<p>ಗುರುವಾರ ಅಮರಾವತಿ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ಸಂಭಾಜಿ ಭಿಡೆ ತಮ್ಮ ಭಾಷಣದಲ್ಲಿ ಮಹಾತ್ಮಾ ಗಾಂಧಿಯವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>



<p>ಶುಕ್ರವಾರ, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಸಂಭಾಜಿ ಭಿಡೆ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಾಗೂ ಸಂಭಾಜಿ ಭಿಡೆ ಅವರು ಮಹಾತ್ಮಾ ಗಾಂಧೀಜಿ ಬಗ್ಗೆ ಆಡಿರುವ ಮಾತುಗಳು ಅತ್ಯಂತ ಕೆಳಮಟ್ಟದ್ದಾಗಿವೆ ಎಂದು ಆರೋಪಿಸಿದ್ದಾರೆ.</p>



<p>ಈ ಹಿಂದೆಯೂ ಸಹ ಸಂಭಾಜಿ ಭಿಡೆ ಅವರು ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಲ್ಲಿ ಬರುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ &#8220;ಸಂಭಾಜಿ ಭಿಡೆಯವರು ವಿಕೃತ ಮನಸ್ಥಿತಿ ಹೊಂದಿದ್ದಾರೆ. ರಾಷ್ಟ್ರಪಿತನ ಕುರಿತು ಅವರ ಹೇಳಿಕೆಗಳು ದೇಶದ ಜನರನ್ನು ಕಳವಳಕ್ಕೆ ದೂಡಿದೆ. ಅವರು ಪದೇ ಪದೇ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಅವರನ್ನು ಬೆಂಬಲಿಸುವವರು ಯಾರು ಎಂಬುದನ್ನು ಕಂಡುಹಿಡಿಯಬೇಕು. ಹಾಗೇ ಅವರ ವಿರುದ್ಧವೂ ಕಠಿಣ ಕ್ರಮವನ್ನು ಬಯಸುತ್ತೇವೆ ಎಂದು ಸಿಎಲ್ಪಿ ನಾಯಕ ನಾಯಕ ಬಾಳಾಸಾಹೇಬ್ ಥೋರಟ್ ಆಗ್ರಹಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಹಾತ್ಮಾ ಗಾಂಧಿ, ಭಗತ್ ಸಿಂಗ್ ಭಾರತೀಯ ವಿದ್ಯಾರ್ಥಿಗಳ ನೆಚ್ಚಿನ ರಾಷ್ಟ್ರನಾಯಕರು: ಸಮೀಕ್ಷೆ</title>
		<link>https://peepalmedia.com/mahatma-gandhi-bhagat-sing-bharateeya-vidyarthi-nechhina-rashtranayakaru-sameekshe/</link>
		
		<dc:creator><![CDATA[Peepal Media]]></dc:creator>
		<pubDate>Thu, 25 Aug 2022 07:16:15 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[bhagat sing]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[leaders]]></category>
		<category><![CDATA[mahatma gandhi]]></category>
		<category><![CDATA[national]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=2848</guid>

					<description><![CDATA[ಬ್ರೈನ್ಲಿ ಆನ್‌ ಲೈನ್‌ ಕಲಿಕಾ ವೇದಿಕೆ ನಡೆಸಿದ ಸಮೀಕ್ಷೇಯೊಂದರಲ್ಲಿ, ಮಹಾತ್ಮ ಗಾಂಧಿ ಮತ್ತು ಭಗತ್‌ ಸಿಂಗ್‌ ಭಾರತೀಯ ವಿಧ್ಯಾರ್ಥಿಗಳ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೂಲಕ ಶೇ 89% ವಿಧ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನಷ್ಟು ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಈ ಆಗಸ್ಟ್‌ 15 ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಮೃತಮಹೋತ್ವವನ್ನು ಆಚರಿಸಿಕೊಂಡಿತು. ಹೀಗಾಗಿ ಈ ದಿನವನ್ನು ನಮ್ಮ ಸ್ವಾತಂತ್ರ್ಯ [&#8230;]]]></description>
										<content:encoded><![CDATA[
<p class="has-medium-font-size">ಬ್ರೈನ್ಲಿ ಆನ್‌ ಲೈನ್‌ ಕಲಿಕಾ ವೇದಿಕೆ ನಡೆಸಿದ ಸಮೀಕ್ಷೇಯೊಂದರಲ್ಲಿ, ಮಹಾತ್ಮ ಗಾಂಧಿ ಮತ್ತು ಭಗತ್‌ ಸಿಂಗ್‌ ಭಾರತೀಯ ವಿಧ್ಯಾರ್ಥಿಗಳ ನೆಚ್ಚಿನ ನಾಯಕರಾಗಿ ಹೊರಹೊಮ್ಮಿದ್ದು, ಮೊದಲ ಮತ್ತು ಎರಡನೇ ಸ್ಥಾನಗಳನ್ನು ಪಡೆದಿದ್ದಾರೆ. ಈ ಮೂಲಕ ಶೇ 89% ವಿಧ್ಯಾರ್ಥಿಗಳು ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಇನ್ನಷ್ಟು ತಿಳಿಯಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.</p>



<p class="has-medium-font-size">ಈ ಆಗಸ್ಟ್‌ 15 ರಂದು ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ 75 ನೇ ವರ್ಷಕ್ಕೆ ಕಾಲಿಟ್ಟಿದ್ದು ಅಮೃತಮಹೋತ್ವವನ್ನು ಆಚರಿಸಿಕೊಂಡಿತು. ಹೀಗಾಗಿ ಈ ದಿನವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರ ಧೀರ ತ್ಯಾಗದ ಸಂಕೇತವಾಗಿ ಗುರುತಿಸಲಾಗಿದೆ.</p>



<p class="has-medium-font-size">75 ನೇ ಸ್ವಾತಂತ್ರ್ಯ ಅಮೃತಮಹೋತ್ಸವ  ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ,  ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಭಾರತೀಯ ವಿಧ್ಯಾರ್ಥಿಗಳು  ಎಷ್ಟು ತಿಳಿದಿದ್ದಾರೆಂದು ತಿಳಿಯಲು ಸಮೀಕ್ಷೇ ನಡೆಸಿತು.ಹೀಗಾಗಿ ಬ್ರೈನ್ಲಿ ಆನ್‌ಲೈನ್ ಕಲಿಕಾ ವೇದಿಕೆಯು ಒಟ್ಟು 5.5 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳ ಬಳಕೆದಾರರ ನೆಲೆಯನ್ನು ಹೊಂದಿದೆ ಎಂದು ಸಮೀಕ್ಷೇಯಲ್ಲಿ ತಿಳಿಸಲಾಗಿದೆ. </p>



<p class="has-medium-font-size">ಈ ಸಮಿಕ್ಷೇಯನ್ನು ರಾಷ್ಟ್ರಪಿತನಿಂದ ಪ್ರಾರಂಭಿಸಿದ್ದು,  ಮಹಾತ್ಮ ಗಾಂಧಿಯವರು 41% ಮತಗಳನ್ನು ಗಳಿಸುವ ಮೂಲಕ ಅತ್ಯಂತ ನೆಚ್ಚಿನ ಮತ್ತು ಸ್ಪೂರ್ತಿದಾಯಕ ರಾಷ್ಟ್ರೀಯ ಐಕಾನ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಇತಿಹಾಸದಲ್ಲಿ ಗಮನಾರ್ಹ ಅಧ್ಯಾಯವಾಗಿ ಉಳಿದಿರುವ ಗಾಂಧಿ ಅವರು ಅವರ ಅಹಿಂಸೆ ಮತ್ತು ಬಲವಾದ ನಾಯಕತ್ವದ ತತ್ತ್ವಶಾಸ್ತ್ರಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. </p>



<pre class="wp-block-preformatted has-medium-font-size">ನಂತರದ ಸ್ಥಾನವನ್ನು ಯುವ ಕ್ರಾಂತಿಕಾರಿ ಭಗತ್ ಸಿಂಗ್ 32% ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದು, ಭಾರತೀಯ ಇತಿಹಾಸದಲ್ಲಿ ಅವರ ದಂಗೆಗಳು ಗಮನಾರ್ಹ ಅಧ್ಯಯನಗಳಾವಿವೆ. 
<strong>ಸಮೀಕ್ಷೆ ಏಕೆ ನಡೆಸಲಾಯಿತು?</strong></pre>



<pre class="wp-block-preformatted has-medium-font-size">"ಬ್ರೈನ್ಲಿ ಸಮೀಕ್ಷೆಯು ಇಂದು ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಸ್ತುತತೆಯನ್ನು ಅಳೆಯುವ ಪ್ರಯತ್ನಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಾಯಕರುಗಳು ಹೇಗೆ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು, ಇಂತಹ ನಾಯಕರ ಬಗ್ಗೆ ವಿಧ್ಯಾರ್ಥಿಗಳಲ್ಲಿ ಎಷ್ಟು ಅರಿವು ಇದೆ ಎಂಬುದನ್ನು ತಿಳಿಯುವುದಕ್ಕೆ ಈ ಸಮೀಕ್ಷೆ ಎಂದು ಬ್ರೈನ್ಲಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ನರಸಿಂಹ ಜಯಕುಮಾರ್ ಹೇಳಿದರು.</pre>



<pre class="wp-block-preformatted has-medium-font-size">ನಮ್ಮ ಸಂಶೋಧನೆಯು ವಿದ್ಯಾರ್ಥಿಗಳು ನಮ್ಮ ಇತಿಹಾಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ ಹೊಂದಿದ್ದಾರೆಂದು ತೋರಿಸುತ್ತದೆ ಆದರೆ ಮಾಹಿತಿ ವಿತರಣೆಯಲ್ಲಿ ಅಂತರಗಳಿವೆ, ಅದನ್ನು ಉತ್ತಮವಾಗಿ ತಿಳಿಸಬೇಕಾಗಿದೆ" ಎಂದು ಹೇಳಿದರು.</pre>



<pre class="wp-block-preformatted has-medium-font-size">ಇಂದು, ಭಾರತವು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 550 ಮಿಲಿಯನ್‌ &nbsp;ಜನರಿಗೆ ನೆಲೆಯಾಗಿದೆ, ಇದು ವಿಶ್ವದಾದ್ಯಂತ ಯುವ ಜನಸಂಖ್ಯೆಯಲ್ಲಿ ಅತಿ ಹೆಚ್ಚು ವಿಸ್ತಾರ ಹೊಂದಿದೆ. ಅವರೇ ನಮಗೆ ಉತ್ತಮ ನಾಳೆಯನ್ನು ಸ್ಕ್ರಿಪ್ಟ್ ಮಾಡುತ್ತಾರೆ. ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು, ಅವರು ಈ ರಾಷ್ಟ್ರವನ್ನು ನಿರ್ಮಿಸಲು ಮಾಡಿದ ತ್ಯಾಗ ಮತ್ತು ನಾಗರಿಕರಾಗಿ ನಾವು ಅನುಭವಿಸುವ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ತಿಳಿದಿರಬೇಕು ಎಂದು ಜಯಕುಮಾರ್ ತಿಳಿಸಿದರು. </pre>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<pre class="wp-block-preformatted has-medium-font-size"><strong><mark style="background-color:rgba(0, 0, 0, 0)" class="has-inline-color has-vivid-red-color">ಸಮೀಕ್ಷೆಯ ಮುಖ್ಯಾಂಶಗಳು</mark></strong></pre>



<pre class="wp-block-preformatted has-medium-font-size"><strong>1) ಸಮೀಕ್ಷೆಯಲ್ಲಿ 59% ವಿದ್ಯಾರ್ಥಿಗಳು 75 ನೇ ವರ್ಷದ ಸ್ವಾತಂತ್ರ್ಯದ ಬಗ್ಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಭಾರತದಂತಹ ಐತಿಹಾಸಿಕ ಅಪ್ರತಿಮ ರಾಷ್ಟ್ರಕ್ಕಾಗಿ, ಮುಂದಿನ ಪೀಳಿಗೆಗೆ, ಭಾರತದ ರಾಷ್ಟ್ರೀಯ ವೀರರ ಬಗ್ಗೆ ಮತ್ತು ಅವರು ಸ್ವಾತಂತ್ರ್ಯವನ್ನು ತರಲು ಏನೇಲ್ಲಾ ಹೋರಾಟ ಮಾಡಿದರು ಎಂದು ತಿಳಿಸಬೇಕು ಎಂಬುದು ಈ ಸಮೀಕ್ಷೆಯ ಮುಖ್ಯ ಅಂಶವಾಗಿತ್ತು.</strong></pre>



<pre class="wp-block-preformatted has-medium-font-size"><strong>2) 50% ವಿದ್ಯಾರ್ಥಿಗಳು &nbsp;ಜ್ಞಾನದ ಪ್ರಾಥಮಿಕ ಮೂಲ ಶಾಲೆಗಳು &nbsp;ಎಂದು ಪ್ರತಿಪಾದಿಸಿದರೆ, ಆದಾಗ್ಯೂ ಕೇವಲ 13% ವಿದ್ಯಾರ್ಥಿಗಳು ಅವರು ಮನೆಯಲ್ಲಿ ಅಥವಾ ಅವರ ಪೋಷಕರಿಂದ ಕಲಿತಿದ್ದಾರೆ ಎಂದು ಹೇಳಿದರು. ಆದರೆ ಇನ್ನುಳಿದ 17% ವಿದ್ಯಾರ್ಥಿಗಳು &nbsp;ಆನ್‌ಲೈನ್ ಮೂಲಕ ರಾಷ್ಟ್ರನಾಯಕರ ಬಗ್ಗೆ ಮಾಹಿತಿ ಹುಡುಕಾಡಿದ್ದು ಬ್ರೈನ್ಲಿ ಸಂಶೋಧನೆಗೆ ಕಾರಣವಾಗಿದೆ.</strong></pre>



<pre class="wp-block-preformatted has-medium-font-size"><strong>3) ಮಹಾತ್ಮ ಗಾಂಧಿಯವರ 'ಮಾಡು ಇಲ್ಲವೇ ಮಡಿ' ಎಂಬುದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ ಜನಪ್ರಿಯ ಯುದ್ಧದ ಕೂಗು. ಅವರು ಅದನ್ನು ರೂಪಿಸಿದ ಬಂಡಾಯದ ಬಗ್ಗೆ ಕೇಳಿದಾಗ, 50% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕ್ವಿಟ್ ಇಂಡಿಯಾ ಚಳುವಳಿಗೆ ಸರಿಯಾಗಿ ಮತ ಹಾಕಿದ್ದಾರೆ. ಈ ಮೂಲಕ ಇನ್ನೂ 50% ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ಅರಿವಿಲ್ಲ ಎಂದು ತಿಳಿಯುತ್ತದೆ.</strong> </pre>



<pre class="wp-block-preformatted has-medium-font-size"><strong>4) ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 47% ವಿದ್ಯಾರ್ಥಿಗಳು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧೈರ್ಯ ಮತ್ತು ನಿರ್ಭಯತೆಗಾಗಿ 'ಭಾರತದ ಉಕ್ಕಿನ ಮನುಷ್ಯ' ಎಂದು ಕರೆಯುತ್ತಾರೆ ಎಂದು ತಿಳಿದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. </strong></pre>



<pre class="wp-block-preformatted has-medium-font-size"><strong>5) 89% ಜನರು ಭಾರತ ಮತ್ತು ಅದರ ಸ್ವಾತಂತ್ರ್ಯ ಚಳುವಳಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಮುಂದಿನ ಪೀಳಿಗೆಗೆ ಭಾರತದ ಇತಿಹಾಸ ಮತ್ತು ವೈಭವವನ್ನು ಮನೆಗೆ ತರಲು ಏನು ಮಾಡಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಲು ಮಹತ್ವದ ಅವಕಾಶವಾಗಿದೆ.</strong></pre>
</div></div>



<pre class="wp-block-preformatted has-medium-font-size"><strong>ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅರಿವಿನ ಕೊರತೆ</strong></pre>



<pre class="wp-block-preformatted has-medium-font-size">ಬ್ರೈನ್ಲಿ ಸಮೀಕ್ಷೆಯು ಭಾರತದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಂವಿಧಾನದ ಬಗ್ಗೆ ಸೀಮಿತ ಅರಿವನ್ನು ಬಹಿರಂಗಪಡಿಸಿದೆ. ಆದಾಗ್ಯೂ ಕೇವಲ 22% ವಿದ್ಯಾರ್ಥಿಗಳಿಗೆ ಮಾತ್ರ ಮತಂಗನಿ ಹಜ್ರಾ ಬಗ್ಗೆ ತಿಳಿದಿತ್ತು, ಅವರ ನೆನಪಿಗಾಗಿ ಕೋಲ್ಕತ್ತಾದಲ್ಲಿ ಮಹಿಳಾ ಕ್ರಾಂತಿಕಾರಿಯ ಮೊದಲ ಪ್ರತಿಮೆಯನ್ನು ನಿರ್ಮಿಸಲಾಯಿತು. ಅಲ್ಲದೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಕ್ರಮದಲ್ಲಿ ಭಾರತೀಯ ನಾಗರಿಕರಿಗೆ ನಿಗದಿಪಡಿಸಿದ ಮೂಲಭೂತ ಹಕ್ಕುಗಳ ಬಗ್ಗೆ 40% ಕ್ಕಿಂತ ಕಡಿಮೆ ಜನರು ತಿಳಿದುಕೊಂಡಿದ್ದರು ಎಂದು ಸಮೀಕ್ಷೇ ಮುಖ್ಯಾಂಶದಲ್ಲಿ ಗುರುತಿಸಲಾಗಿದೆ. </pre>
]]></content:encoded>
					
		
		
			</item>
		<item>
		<title>ಅಸ್ಸಾಮಿನಲ್ಲೊಬ್ಬರು ಮಂಗಳೂರಿನ ಗಾಂಧೀವಾದಿ</title>
		<link>https://peepalmedia.com/assaminallobbaru-mangalurina-gandhivaadi/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 15 Aug 2022 12:22:18 +0000</pubDate>
				<category><![CDATA[ವಿಶೇಷ]]></category>
		<category><![CDATA[asssm]]></category>
		<category><![CDATA[freedom fighters]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahatma gandhi]]></category>
		<category><![CDATA[mangalore]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1919</guid>

					<description><![CDATA[ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ. (ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.) ಚರಣ್ ಐವರ್ನಾಡುಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳುಇವರ ಬರವಣಿಗೆಯ ಕ್ಷೇತ್ರಗಳು]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><mark style="background-color:rgba(0, 0, 0, 0)" class="has-inline-color has-vivid-red-color">ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.</mark></p></blockquote>



<div class="wp-block-cover is-light"><span aria-hidden="true" class="wp-block-cover__background has-pale-cyan-blue-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-medium-font-size">ಅಸ್ಸಾಮಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕ ಮತ್ತು ಗಾಂಧಿ ಚಿಂತನೆಯ ಪ್ರಬಲ ಪ್ರತಿಪಾದಕರಲ್ಲಿ &#8216;ಬಿ.ಕೆ ಭಂಡಾರಿ&#8217;ಯವರ ಓರ್ವರು. ನಾನು ಈಶಾನ್ಯ ಭಾರತದ ಪ್ರವಾಸದಲ್ಲಿದ್ದಾಗ ಗುವಾಹಟಿಯ ಕಸ್ತೂರ್ಬಾ ಗಾಂಧಿ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಆ ಆಶ್ರಮದ ಗೋಡೆಯ ಮೇಲೆ ಅಸ್ಸಾಮಿನ ಮಹನೀಯರ ಭಾವಚಿತ್ರಗಳ ಮಧ್ಯೆ ಬಿ ಕೆ ಭಂಡಾರಿಯವರ ಚಿತ್ರವೂ ಇತ್ತು. ಕುತೂಹಲದಿಂದ ಅವರೆಲ್ಲರ ಬಗ್ಗೆ ಆಶ್ರಮವಾಸಿಗಳಲ್ಲಿ ಕೇಳುವಾಗ ಬಿ ಕೋಚಣ್ಣ ಭಂಡಾರಿಯವರ ಹೆಸರು ನನ್ನ ಕುತೂಹಲವನ್ನು ಕೆರಳಿಸಿತು. ಇದಂತು ಅಪ್ಪಟ ಕರಾವಳಿಯ ಬಂಟ ಸಮುದಾಯದ ಹೆಸರು !</p>



<p class="has-medium-font-size">ಆಶ್ರಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿ ಕೆ ಭಂಡಾರಿಯವರ ಮಗಳು ನಯನ್ ಭಂಡಾರಿ ಶರ್ಮ ಬಂದಿದ್ದರು. ಇವರು ಅಸ್ಸಾಮಿನ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ನಿವೃತ್ತಿ ಹೊಂದಿದವರು. ಕಾರ್ಯಕ್ರಮದಲ್ಲಿ ಮಂಗಳೂರಿನ ನಾನು ಇದ್ದದ್ದನ್ನು ಅರಿತ ಅವರು ತಮ್ಮ ತಂದೆ ಮಂಗಳೂರು ಸಮೀಪದವರು, ಮಹಾತ್ಮ ಗಾಂದಿಯವರು ಮಂಗಳೂರಿಗೆ ಬಂದಿದ್ದಾಗ ಅವರೊಂದಿಗೆ ಅಸ್ಸಾಮಿಗೆ ತಮ್ಮ ಪತ್ನಿಯೊಂದಿಗೆ ಬಂದು ಇಲ್ಲಿಯೇ ನೆಲೆಸಿದರು ಎಂದರು. ಮಂಗಳೂರಿನ ಬಜ್ಪೆಯ ಸಮೀಪದ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಓರ್ವ ರಾಷ್ಟ್ರೀಯ ಚಳುವಳಿಯ ಹೋರಾಟಗಾರ!</p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM.jpeg" alt="" class="wp-image-1921" width="502" height="616" srcset="https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM.jpeg 480w, https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM-244x300.jpeg 244w" sizes="(max-width: 502px) 100vw, 502px" /></figure></div>


<p class="has-medium-font-size">ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ ಬೇಟಿ ನೀಡಿದ್ದಾರೆ. 1920ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿ ಅದರೊಂದಿಗೆ ಖಿಲಾಫತ್ ಚಳುವಳಿಗೆ ಭಾರತೀಯರ ಬೆಂಬಲ ಪಡೆಯಲು ಆಲಿ ಸಹೋದರರೊಂದಿಗೆ ರಾಷ್ಟ್ರವ್ಯಾಪಿ ಖಿಲಾಫತ್ ಪ್ರವಾಸ ಕೈಗೊಂಡು 19 ನೇ ಅಗಸ್ಟ್ 1920 ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ಸ್ವದೇಶಿ ಖಾದಿಯ ಪ್ರಚಾರ ಮಾಡುತ್ತಾ 26ನೇ ಅಕ್ಟೋಬರ್ 1927ರಂದು ಮಂಗಳೂರಿನಲ್ಲಿ ಜನತೆಯನ್ನು ಉದ್ಧೇಶಿಸಿ ಮಾತನಾಡಿದ್ದರು. 1933-34ರಲ್ಲಿ ಗಾಂಧೀಜಿಯವರ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ದೇಶಪ್ರವಾಸ ಮಾಡಿದಾಗ ಅವರು ಮಂಗಳೂರಿಗೆ ಮೂರನೇಯ ಭೇಟಿ ನೀಡಿದ್ದರು. 24ನೇ ಫೆಬ್ರವರಿ 1934ರಂದು ಮಡಿಕೇರಿಯಿಂದ ಸಂಪಾಜೆ, ಸುಳ್ಯ ಮೂಲಕ ಪುತ್ತೂರನ್ನು ತಲುಪಿ ಸಾರ್ವಜನಿಕ ಭಾಷಣ ಮಾಡಿದ್ದರು. ಅಲ್ಲಿನ ಹರಿಜನಕೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂರು ಭೇಟಿಗಳು ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವು. ಅನೇಕ ತರುಣರು ರಾಷ್ಟ್ರೀಯ ಚಳುವಳಿಗೆ ಧುಮುಕಿದರು. ಅಂತ ಮಹನೀಯರಲ್ಲಿ ಬೈಲು ಕೋಚಣ್ಣ ಭಂಡಾರಿ ಓರ್ವರು.</p>



<p class="has-medium-font-size">ಬೈಲು ಕೋಚಣ್ಣ ಭಂಡಾರಿಯವರು 1935ರಲ್ಲಿ ಮಂಗಳೂರಿನ ಬಜ್ಪೆಯಲ್ಲಿ ವಾಸಿಸುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಇವರ ಪತ್ನಿ ಸಾವಿತ್ರಿಯವರು ಕಾರಂತರ ಪತ್ನಿ ಲೀಲಾರವರ ಸಹೋದರಿ. ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾಗಿದ್ದ ಬಿ ಕೆ ಭಂಡಾರಿಯವರು ಪ್ರಸಿದ್ಧ ಸಮಾಜ ಸೇವಕ &#8216;ಥಕ್ಕರ್ ಬಾಪಾ&#8217;ರ ಅನುಯಾಯಿಯಾಗಿದ್ದರು. 1933ರಲ್ಲಿ ಗಾಂಧೀಜಿ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು &#8216;ಹರಿಜನ ಸೇವಾ ಸಂಘ&#8217; ಸ್ಥಾಪಿಸಿ ಭಾರತದಾದ್ಯಂತ ಪ್ರವಾಸ ಆರಂಭಿಸಿದರು. ಥಕ್ಕರ್ ಬಾಪಾ ಈ ಸಂಘದ ಕಾರ್ಯದರ್ಶಿಯಾಗಿ ಅಸ್ಸಾಂನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸೇವೆ ಮಾಡುತ್ತಿದ್ದರು. ಇದು ಬಿ ಕೆ ಭಂಡಾರಿಯವರನ್ನು ಆಕರ್ಷಿಸಿ 1936ರಲ್ಲಿ ಅಸ್ಸಾಂ ಕಡೆ ಪಯಣ ಬೆಳೆಸುವಂತೆ ಮಾಡಿತು. ಗಾಂಧೀಜಿಯವರ ಪ್ರವಾಸಗಳಲ್ಲಿ ಅವರ ಕಾರನ್ನು ತಾವೇ ಚಲಾಯಿಸುತ್ತಾರೆ. ಕಾಮರೂಪವನ್ನು ಕೇಂದ್ರವಾಗಿಟ್ಟುಕೊಂಡು ಸೇವೆಯನ್ನು ಅರಂಭಿಸಿದ ಭಂಡಾರಿಯವರು ಬಕ್ಸಾ ಎಂಬ ಜಾಗದ ಶೈಕ್ಷಣಿಕವಾಗಿ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿದ್ದ ಬೋರೊ ಮೊದಲಾದ ಬುಡಕಟ್ಟುಗಳ ಸೇವೆಯನ್ನು ಮಾಡುತ್ತಾರೆ. ಇದು ದಟ್ಟವಾದ ಕಾಡಿನಿಂದ ಆವೃತವಾದ ಸ್ಥಳವಾಗಿದ್ದು ಮಲೇರಿಯಾ, ಕಾಲಾರಗಳಿಂದ ಬಾಧಿತವಾಗಿತ್ತು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ.</p>



<figure class="wp-block-image size-large"><img decoding="async" width="1024" height="1013" src="https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-1024x1013.jpeg" alt="" class="wp-image-1922" srcset="https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-1024x1013.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-300x297.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-768x760.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2.jpeg 1280w" sizes="(max-width: 1024px) 100vw, 1024px" /></figure>



<p class="has-medium-font-size">ಕೋಚಣ್ಣ ಭಂಡಾರಿಯವರ ಮೊದಲ ಪತ್ನಿ ಸುಮತಿಯವರು ಅಸ್ಸಾಮಿನಲ್ಲಿ ಮರಣಹೊಂದಿದ ನಂತರ ಅವರು ಮಂಗಳೂರು ಮೂಲದ &#8216;ಸಾವಿತ್ರಿ ಆಳ್ವ&#8217;ರನ್ನು ವಿವಾಹವಾಗುತ್ತಾರೆ. ಸಾವಿತ್ರಿಯವರು ತುಳು ಮೂಲದವರಾದರೂ ಅಸ್ಸಾಮಿ ಕಲಿತು ಅಸ್ಸಾಮಿ ಬಟ್ಟೆ ತೊಡಲು ಆರಂಭಿಸಿದರು. ಹೈನುಗಾರಿಕೆ, ಜೇನು, ಹೂದೋಟ, ತರಕಾರಿ ಮೊದಲಾದವನ್ನು ಬೆಳೆಸುವ ಅರಿವನ್ನು ಇವರು ಅಲ್ಲಿಯ ಮಹಿಳೆಯರಲ್ಲಿ ಮೂಡಿಸಿದರು. ಕೋಚಣ್ಣ ಭಂಡಾರಿಯವರಿಗೆ ಡಾ.ಸುಮನ್, ನಯನ್ ಭಂಡಾರಿ ಶರ್ಮ, ಶೋಭನ್ ಭಂಡಾರಿ ದೇಕಾ ಮತ್ತು ಮಲಯ ಭಂಡಾರಿ ದೇಕಾ ಎಂಬ ಪುತ್ರಿಯರು ಹಾಗೂ ಮೋಹನದಾಸ್ ಎಂಬ ಓರ್ವ ಪುತ್ರ. ಇವರಲ್ಲಿ ಡಾ. ಸುಮನ್ ಮರಣಹೊಂದಿದ್ದು ಉಳಿದವರೆಲ್ಲರೂ ಕುಟುಂಬದೊಂದಿಗೆ ಅಸ್ಸಾಮಿನಲ್ಲೇ ನೆಲೆಸಿದ್ದಾರೆ.</p>



<p class="has-medium-font-size">ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಬರಮದಲ್ಲಿ ಆರಂಭಿಸಿದ ಅಸ್ಸಾಂ ಸೇವಾ ಸಂಘ್ ಬಕ್ಸಾ, ಬರಮ ಮೊದಲಾದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳು, ವಸತಿ ನಿಲಯಗಳ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿತು. ಭಂಡಾರಿಯವರು ಅಸ್ಸಾಮಿನಲ್ಲಿ ಸೇವೆಯನ್ನು ಆರಂಭಿಸುವಾಗ ಅನೇಕ ಕೊರತೆಗಳಿದ್ದವು. ಸಂಘದ ಕಟ್ಟಡದ ನಿರ್ಮಾಣದ ಕೆಲಸವನ್ನು ಸ್ವತಃ ತಾವೇ ಮಾಡಿದ್ದರು. ಈ ಸಂಘದ ಅಡಿಯಲ್ಲಿ ಗೋರೊ, ಖಾಸಿ ಮೊದಲಾದ ಗಿರಿ ಪ್ರದೇಶಗಳಲ್ಲಿ ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಮಂಗಳೂರಿನ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಜನತೆಯ ಸೇವೆಯನ್ನು ಮಾಡಿ ಅಜರಾಮರರಾಗಿದ್ದಾರೆ.</p>



<p class="has-medium-font-size">ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.</p>
</div></div>



<p class="has-text-align-right has-medium-font-size"><strong>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</strong></p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1024x1024.jpeg" alt="" class="wp-image-1925" width="205" height="205" srcset="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1024x1024.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-300x300.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-150x150.jpeg 150w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-768x768.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM.jpeg 1151w" sizes="(max-width: 205px) 100vw, 205px" /></figure>



<p class="has-medium-font-size"><strong>ಚರಣ್ ಐವರ್ನಾಡು</strong><br>ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.<br>ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು<br>ಇವರ ಬರವಣಿಗೆಯ ಕ್ಷೇತ್ರಗಳು</p>
]]></content:encoded>
					
		
		
			</item>
		<item>
		<title>ಸೆಪ್ಟೆಂಬರ್ 7 ರಿಂದ 150 ದಿನಗಳ &#8216;ಭಾರತ್ ಜೋಡೋ&#8217; ಪಾದಯಾತ್ರೆ</title>
		<link>https://peepalmedia.com/september-7-rinda-150-dinagala-bharat-jodo-paadayatre/</link>
		
		<dc:creator><![CDATA[Peepal Media]]></dc:creator>
		<pubDate>Wed, 10 Aug 2022 02:52:24 +0000</pubDate>
				<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[congress]]></category>
		<category><![CDATA[india]]></category>
		<category><![CDATA[kannada news]]></category>
		<category><![CDATA[karnataka]]></category>
		<category><![CDATA[mahatma gandhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[quit india]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1215</guid>

					<description><![CDATA[ಮಹಾತ್ಮಾ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳುವಳಿ ನೆನಪಿಸುವಂತೆ ಕಾಂಗ್ರೆಸ್ ಪಕ್ಷ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಗೆ ರೂಪುರೇಷೆ ಸಿದ್ದಪಡಿಸಿದೆ. ಒಟ್ಟು 3500 ಕಿಲೋಮೀಟರ್ ದೂರದ ಸುಧೀರ್ಘ ಪಾದಯಾತ್ರೆ ಇದಾಗಿದ್ದು ಒಟ್ಟು 150 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ. ಸೆಪ್ಟೆಂಬರ್ 7 ರಿಂದ ಈ ಪಾದಯಾತ್ರೆ ನಿಗದಿಯಾಗಿದ್ದು, ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದ ಮರು ಸಂಘಟನೆಗೆ ಪಕ್ಷ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಿದೆ. &#8220;ಭಾರತ್ ಜೋಡೋ&#8221; ಹೆಸರಿನಲ್ಲಿ ನಡೆಯುವ ಈ ಯಾತ್ರೆಗೆ ರಾಹುಲ್ [&#8230;]]]></description>
										<content:encoded><![CDATA[
<p class="has-medium-font-size">ಮಹಾತ್ಮಾ ಗಾಂಧೀಜಿಯವರ ಕ್ವಿಟ್ ಇಂಡಿಯಾ ಚಳುವಳಿ ನೆನಪಿಸುವಂತೆ ಕಾಂಗ್ರೆಸ್ ಪಕ್ಷ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಪಾದಯಾತ್ರೆಗೆ ರೂಪುರೇಷೆ ಸಿದ್ದಪಡಿಸಿದೆ. ಒಟ್ಟು 3500 ಕಿಲೋಮೀಟರ್ ದೂರದ ಸುಧೀರ್ಘ ಪಾದಯಾತ್ರೆ ಇದಾಗಿದ್ದು ಒಟ್ಟು 150 ದಿನಗಳ ಕಾಲ ಈ ಪಾದಯಾತ್ರೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.</p>



<p class="has-medium-font-size">ಸೆಪ್ಟೆಂಬರ್ 7 ರಿಂದ ಈ ಪಾದಯಾತ್ರೆ ನಿಗದಿಯಾಗಿದ್ದು, ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದ ಮರು ಸಂಘಟನೆಗೆ ಪಕ್ಷ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಿದೆ. &#8220;ಭಾರತ್ ಜೋಡೋ&#8221; ಹೆಸರಿನಲ್ಲಿ ನಡೆಯುವ ಈ ಯಾತ್ರೆಗೆ ರಾಹುಲ್ ಗಾಂಧಿಯವರ ನೇತೃತ್ವ ಇರಲಿದ್ದು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆ.</p>



<p class="has-medium-font-size">80 ವರ್ಷಗಳ ಹಿಂದೆ ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲು ಕ್ವಿಟ್ ಇಂಡಿಯಾ ಚಳುವಳಿ ರೂಪಿಸಿದ್ದರು, ಅದಾಗಿ ಕೇವಲ 5 ವರ್ಷಕ್ಕೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಆ ಹಿನ್ನೆಲೆಯಲ್ಲಿ ಇಂದು ಕಾಂಗ್ರೆಸ್ ಅದೇ ಮಾದರಿಯಲ್ಲಿ ಕಾಂಗ್ರೆಸ್ ಸಂಘಟಿಸಲು ಈ ಯಾತ್ರೆ ನಡೆಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.</p>



<p class="has-medium-font-size">ಇಡೀ ಪಾದಯಾತ್ರೆಯಲ್ಲಿ ದೇಶದಲ್ಲಿ ತಲೆದೋರಿರುವ ಬಡತನ, ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆ, ಅಸಮಾನತೆ, ಧರ್ಮಾಂಧತೆ ಇಂತಹ ಪ್ರಮುಖ ವಿಚಾರಗಳನ್ನು ಇಟ್ಟು ಜನರ ಮುಂದೆ ಹೋಗುವ ನಿರ್ಧಾರಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಟ್ಟಾರೆ ಬಿಜೆಪಿ ಪಕ್ಷದ ಆಡಳಿತಕ್ಕೆ ಒಂದು ದೊಡ್ಡ ಮಟ್ಟದ ಪ್ರತಿರೋಧ ತೋರಿಸುವ ಉದ್ದೇಶದಿಂದ ಕಾಂಗ್ರೆಸ್ ಒಟ್ಟು 12 ರಾಜ್ಯಗಳಲ್ಲಿ ಈ ಪಾದಯಾತ್ರೆಗೆ ಸಂಪೂರ್ಣ ರೂಪುರೇಷೆ ಸಿದ್ಧಪಡಿಸಿದೆ.</p>
]]></content:encoded>
					
		
		
			</item>
	</channel>
</rss>
