<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Malayalam cinema &#8211; Peepal Media</title>
	<atom:link href="https://peepalmedia.com/tag/malayalam-cinema/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 29 Oct 2024 09:25:16 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Malayalam cinema &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕರ್ನಾಟಕದಲ್ಲಿ ನಟನಿಂದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ</title>
		<link>https://peepalmedia.com/malayalam-director-ranjith-booked-for-sexually-assaulting-karnataka-actor/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 29 Oct 2024 09:16:41 +0000</pubDate>
				<category><![CDATA[ಅಪರಾಧ]]></category>
		<category><![CDATA[bengaluru]]></category>
		<category><![CDATA[director Ranjith]]></category>
		<category><![CDATA[malayalam]]></category>
		<category><![CDATA[Malayalam cinema]]></category>
		<category><![CDATA[Sexual assault]]></category>
		<guid isPermaLink="false">https://peepalmedia.com/?p=48018</guid>

					<description><![CDATA[ಬೆಂಗಳೂರು: ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ. 31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್&#160;ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ.&#160;ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು. ಇದಾದ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ.</p>



<p>31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.</p>



<p><em>ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್</em>&nbsp;ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ.&nbsp;ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು.</p>



<p>ಇದಾದ ಬಳಿಕ, ಬಾಲಕೃಷ್ಣನ್ ಡಿಸೆಂಬರ್ 2012 ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗೆ ದೂರುದಾರರನ್ನು ಕರೆದಿದ್ದಾರೆ. ನಿರ್ದೇಶಕರು ಈ ನಟನಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ಆರಂಭದಲ್ಲಿ ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ನಗರದ ಹೋಟೆಲ್‌ನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.</p>



<p>ಈ ಘಟನೆಯು 2012 ರಲ್ಲಿ ನಡೆದಿದೆ ಎಂದು ಹೇಳಲಾಗಿದೆ ಆದರೆ ಮಲಯಾಳಂ ಚಲನಚಿತ್ರೋದ್ಯಮದ ಅನೇಕ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಹೇಮಾ ಕಮಿಟಿಯ ನಂತರ ಹೊರಬಂದಿರುವ ಹಿನ್ನೆಲೆಯಲ್ಲಿ ದೂರುದಾರರು ಈಗ ಈ ವಿಚಾರವನ್ನು ಹೊರಹಾಕಿದ್ದಾರೆ, ಕೇರಳದ ಈ ಬೆಳವಣಿಗೆ ತನಗೆ ಈ ಧೈರ್ಯ ನೀಡಿತು ಎಂದು ಅವರು ಹೇಳಿದ್ದಾರೆ.</p>



<p><u><a href="https://peepalmedia.com/233-page-report-of-hema-committee-kerala-high-court/">ಜಸ್ಟಿಸ್ ಹೇಮಾ ಸಮಿತಿಯ</a></u> ವರದಿಯ ಬಿಡುಗಡೆಯ ನಂತರ ತಮ್ಮ ಸಹೋದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ <u><a href="https://peepalmedia.com/metoo-shocks-in-mollywood/">ಮಲಯಾಳಂ ಚಲನಚಿತ್ರೋದ್ಯಮದ</a></u> ಹಲವಾರಲ್ಲಿ ಈ ನಟ ಕೂಡ ಸೇರಿದ್ದಾರೆ .<a href="https://scroll.in/latest/1072207/kerala-government-releases-2019-report-on-gender-inequality-in-malayalam-film-industry"></a></p>



<p>ಬಾಲಕೃಷ್ಣನ್ ವಿರುದ್ಧ ಅಸ್ವಾಭಾವಿಕ ಅಪರಾಧಗಳು ಮತ್ತು ಖಾಸಗಿತನದ ಉಲ್ಲಂಘನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. &#8220;ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ&#8221; ಎಂದು ಅವರು ಹೇಳಿದರು.</p>



<p>ಆಗಸ್ಟ್‌ನಲ್ಲಿ, 2009 ರಲ್ಲಿ ನಟನೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಂತರ&nbsp;<a href="https://scroll.in/latest/1072422/kerala-government-forms-panel-after-sexual-abuse-allegations-against-malayalam-film-industry-members">ಬಾಲಕೃಷ್ಣನ್ ಅವರು</a>&nbsp;ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p>



<p><em>ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥಾ</em>&nbsp;ಸಿನಿಮಾ ನಿರ್ಮಾಣವಾಗುತ್ತಿದ್ದಾಗ&nbsp;ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದರು.</p>



<p>ಈ ಆರೋಪಗಳು ತನ್ನ ಮೇಲಿನ ಸಂಘಟಿತ ದಾಳಿಯ ಭಾಗವಾಗಿದೆ ಎಂದು ನಿರ್ದೇಶಕ ಆ ಸಮಯದಲ್ಲಿ ಹೇಳಿಕೊಂಡಿದ್ದರು.</p>



<p>&#8220;ಒಬ್ಬ ವ್ಯಕ್ತಿಯಾಗಿ ಆರೋಪವು ನನ್ನ ಮೇಲೆ ಉಂಟು ಮಾಡಿದ ಹಾನಿಯನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಿಲ್ಲ&#8221; ಎಂದು ಅವರು ಹೇಳಿದ್ದರು. “ಆದರೂ, ಆರೋಪ ತಪ್ಪು ಎಂದು ನಾನು ಸಾಬೀತುಪಡಿಸಬೇಕಾಗಿದೆ. ಅದು ಸುಳ್ಳು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ. ಏನೇ ಆಗಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ,&#8221; ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.</p>



<p></p>
]]></content:encoded>
					
		
		
			</item>
		<item>
		<title>ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟಿ ರೆಂಜೂಷಾ ಮೆನನ್</title>
		<link>https://peepalmedia.com/malayalam-actor-renjusha-menon-found-dead-at-her-flat/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Oct 2023 12:06:53 +0000</pubDate>
				<category><![CDATA[ಸಿನಿಮಾ]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[Malayalam cinema]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30812</guid>

					<description><![CDATA[ಹೊಸದಿಲ್ಲಿ: &#8216;ಸ್ತ್ರೀ&#8217;, &#8216;ನಿಜಾಲಟ್ಟಂ&#8217; ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ನಟಿ ರೆಂಜೂಷಾ ಮೆನನ್ (35) ಇಂದು (ಸೋಮವಾರ, ಅಕ್ಟೋಬರ್ 30 ) ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ, ಅವರು ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರೆಂಜೂಷಾ ಪತಿ, ತಾಯಿ ಮತ್ತು ತಂದೆಯನ್ನು ಅಗಲಿದ್ದು, ಇವರ ಹಠಾತ್ ನಿಧನದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ. ನಟಿ ರೆಂಜೂಷಾ ಮೆನನ್ ಅವರು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: &#8216;ಸ್ತ್ರೀ&#8217;, &#8216;ನಿಜಾಲಟ್ಟಂ&#8217; ಮತ್ತು ಇನ್ನೂ ಅನೇಕ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ ನಟಿ ರೆಂಜೂಷಾ ಮೆನನ್ (35) ಇಂದು (ಸೋಮವಾರ, ಅಕ್ಟೋಬರ್ 30 ) ತಿರುವನಂತಪುರಂನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.</p>



<p>ಲಭ್ಯ ಮಾಹಿತಿಯ ಪ್ರಕಾರ, ಅವರು ಕೇರಳದ ತಿರುವನಂತಪುರಂನ ಕರಿಯಂನಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರೆಂಜೂಷಾ ಪತಿ, ತಾಯಿ ಮತ್ತು ತಂದೆಯನ್ನು ಅಗಲಿದ್ದು, ಇವರ ಹಠಾತ್ ನಿಧನದ ಕುರಿತು ಹೆಚ್ಚಿನ ವಿವರಗಳನ್ನು ಇನ್ನೂ ನಿರೀಕ್ಷಿಸಲಾಗುತ್ತಿದೆ.</p>



<p>ನಟಿ ರೆಂಜೂಷಾ ಮೆನನ್ ಅವರು, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವು ಆಕೆಯ ಕುಟುಂಬದ ಸದಸ್ಯರು ಮತ್ತು ಸಹೋದ್ಯೋಗಿಗಳಿಗೆ ಆಘಾತವನ್ನುಂಟು ಮಾಡಿದೆ, ಇದೀಗ ಆಕೆಯ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕಾದುನೋಡಬೇಕು ಎಂದು ಕೇರಳ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.</p>



<p>ವರದಿಗಳ ಪ್ರಕಾರ ಅವರು ಕಳೆದ ಕೆಲವು ತಿಂಗಳುಗಳಿಂದ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ನಟಿ ರೆಂಜೂಷಾ ಮೆನನ್ ಅವರು ಮಲಯಾಳಂ ಚಲನಚಿತ್ರಗಳು ಮತ್ತು ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುವುದರ ಜೊತೆಗೆ ದೂರದರ್ಶನ ಧಾರಾವಾಹಿಗಳಲ್ಲಿ ಲೈನ್ ಪ್ರೊಡ್ಯೂಸರ್ ಆಗಿಯೂ ಕೆಲಸ ಮಾಡಿದ್ದಾರೆ.</p>



<p>ದೂರದರ್ಶನ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಾಲಿಡುವ ಮೊದಲು ರೆಂಜೂಷಾ ದೂರದರ್ಶನ ನಿರೂಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೆಲೆಬ್ರಿಟಿ ಟಿವಿ ಶೋನಲ್ಲಿ ಭಾಗವಹಿಸಿದ್ದು ನಟಿ ರೆಂಜೂಷಾ ಮೆನನ್ ಅವರಿಗೆ ಮನ್ನಣೆ ತಂದುಕೊಟ್ಟಿತ್ತು.<br>ಕೊಚ್ಚಿಯವರಾದ ರೆಂಜೂಷಾ ತಮ್ಮ ವೃತ್ತಿಜೀವನವನ್ನು ಟಿವಿ ನಿರೂಪಕಿಯಾಗಿ ಪ್ರಾರಂಭಿಸಿದರು. ದೂರದರ್ಶನ ಧಾರಾವಾಹಿಗಳಾದ &#8216;ಸ್ತ್ರೀ&#8217;, &#8216;ನಿಜಾಲಟ್ಟಂ&#8217;, &#8216;ಮಗಳುಡೆ ಅಮ್ಮ&#8217; ಮತ್ತು &#8216;ಬಾಲಾಮಣಿ&#8217;, ನಟಿ &#8216;ಸಿಟಿ ಆಫ್ ಗಾಡ್&#8217;, &#8216;ಬಾಂಬೆ ಮಾರ್ಚ್ 12&#8217;, &#8216;ಲಿಸಮ್ಮಾಯುಡೆ ವೀಡು&#8217;, &#8216;ಅದ್ಭುತ ದ್ವೀಪ&#8217;, ಮತ್ತು &#8216;ಕಾರ್ಯಸ್ಥಾನ&#8217; ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಸೆಟ್ಟೇರಿತು &#8216;ಅಜಯಂತೆ ರಂದಂ ಮೋಷನಂ&#8217;- 3ಡಿಯಲ್ಲಿ ಮೋಡಿ ಮಾಡಲಿದ್ದಾರೆ ಟೊವಿನೋ ಥಾಮಸ್, ಕೃತಿ ಶೆಟ್ಟಿ..!</title>
		<link>https://peepalmedia.com/ajayanthe-randam-moshanam-malayalam-movie/</link>
		
		<dc:creator><![CDATA[Peepal Media]]></dc:creator>
		<pubDate>Tue, 11 Oct 2022 16:51:11 +0000</pubDate>
				<category><![CDATA[ಸಿನಿಮಾ]]></category>
		<category><![CDATA[Kruthi Shetty]]></category>
		<category><![CDATA[Malayalam cinema]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Tovin thomas]]></category>
		<guid isPermaLink="false">https://peepalmedia.com/?p=10154</guid>

					<description><![CDATA[ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ ಅಭಿನಯದ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ ಇಂದು ಸೆಟ್ಟೇರಿದೆ. ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದೆ. ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ [&#8230;]]]></description>
										<content:encoded><![CDATA[
<p>ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್, ನಟಿ ಕೃತಿ ಶೆಟ್ಟಿ ಅಭಿನಯದ ನೂತನ ಪ್ಯಾನ್ ಇಂಡಿಯಾ ಸಿನಿಮಾ ‘ಅಜಯಂತೆ ರಂದಂ ಮೋಷನಂ’ ಇಂದು ಸೆಟ್ಟೇರಿದೆ. ಫ್ಯಾಂಟಸಿ ಅಡ್ವೆಂಚರ್ ಸಿನಿಮಾ ಇದಾಗಿದ್ದು, 3ಡಿಯಲ್ಲಿ ತೆರೆ ಕಾಣಲಿರುವ ಬಿಗ್ ಬಜೆಟ್ ಚಿತ್ರದ ಮುಹೂರ್ತ ಇಂದು ಅದ್ದೂರಿಯಾಗಿ ನೆರವೇರಿದೆ.</p>



<p>ಮಲಯಾಳಂ ಖ್ಯಾತ ನಟ ಟೊವಿನೋ ಥಾಮಸ್ ವೃತ್ತಿ ಜೀವನದ ಬಹು ವಿಶೇಷ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಲಾವಿದನಾಗಿ ಮೊದಲ ಬಾರಿ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮುತ್ತಿದ್ದಾರೆ. ಮೂರು ಯುಗಗಳನ್ನು ಸುತ್ತುವ ಕಥೆ ಚಿತ್ರದಲ್ಲಿದ್ದು ಟೊವಿನೋ ಥಾಮಸ್ ಮಣಿಯನ್, ಅಜಯನ್, ಕುಂಜಿಕೇಲು ಎಂಬ ಮೂರು ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಈ ಚಿತ್ರ ಸೌತ್ ಸಿನಿರಂಗದ ಸೆನ್ಸೇಷನಲ್ ನಟಿ ಕೃತಿ ಶೆಟ್ಟಿಗೂ ಸ್ಪೆಷಲ್ ಆಗಿದ್ದು ತೆಲುಗು, ತಮಿಳಿನಲ್ಲಿ ಮಿಂಚಿದ್ದ ಕೃತಿ ಈಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ನಟಿಯರಾದ ಐಶ್ವರ್ಯ ರಾಜೇಶ್, ಸುರಭಿ ಲಕ್ಷಿ ಕೂಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.</p>


<div class="wp-block-image">
<figure class="aligncenter size-large"><img fetchpriority="high" decoding="async" width="1024" height="574" src="https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-1024x574.jpeg" alt="" class="wp-image-10157" srcset="https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-1024x574.jpeg 1024w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-300x168.jpeg 300w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-768x431.jpeg 768w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-150x84.jpeg 150w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-696x390.jpeg 696w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2-1068x599.jpeg 1068w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-2.jpeg 1280w" sizes="(max-width: 1024px) 100vw, 1024px" /></figure></div>


<p>‘ಅಜಯಂತೆ ರಂದಂ ಮೋಷನಂ’ ನಿರ್ದೇಶಕ ಜಿತಿನ್ ಲಾಲ್ ನಿರ್ದೇಶಿಸುತ್ತಿದ್ದು ಇದು ಇವರ ಮೊದಲ ಸಿನಿಮಾ. ಸುಜಿತ್ ನಂಬಿಯಾರ್ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದು, ಬಾಸಿಲ್ ಜೋಸೆಫ್, ಕಿಶೋರ್, ಹರೀಶ್ ಉತ್ತಮನ್, ಹರೀಶ್ ಪೆರಾಡಿ, ಜಗದೀಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.</p>



<p>ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣವಾಗುತ್ತಿರುವ 3ಡಿಯಲ್ಲಿ ತೆರೆ ಕಾಣುವ ‘ಅಜಯಂಂತೆ ರಂದಂ ಮೋಷನಂ’ ಚಿತ್ರವನ್ನು ಯುಜಿಎಂ ಪ್ರೊಡಕ್ಷನ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಮ್ಯಾಜಿಕ್ ಫ್ರೇಮ್ಸ್ ಸಹ ನಿರ್ಮಾಣ ಮಾಡುತ್ತಿದೆ.</p>



<figure class="wp-block-image size-large"><img decoding="async" width="1024" height="675" src="https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-1024x675.jpeg" alt="" class="wp-image-10159" srcset="https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-1024x675.jpeg 1024w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-300x198.jpeg 300w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-768x506.jpeg 768w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-150x99.jpeg 150w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-696x459.jpeg 696w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1-1068x704.jpeg 1068w, https://peepalmedia.com/wp-content/uploads/2022/10/WhatsApp-Image-2022-10-11-at-7.33.38-PM-1.jpeg 1280w" sizes="(max-width: 1024px) 100vw, 1024px" /></figure>



<p>ಚಿತ್ರದ ತಾಂತ್ರಿಕ ಬಳಗ ಅನುಭವಿ ತಂತಜ್ಞರಿಂದ ಕೂಡಿದ್ದು, ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ದೀಪು ನೈನನ್ ಥಾಮಸ್ ಸಂಗೀತ ನಿರ್ದೇಶನ, ಜೋಮನ್ ಟಿ ಜಾನ್ ಛಾಯಾಗ್ರಹಣ, ಶಮೀರ್ ಮೊಹಮ್ಮದ್ ಸಂಕಲನ ಚಿತ್ರಕ್ಕಿದೆ.</p>
]]></content:encoded>
					
		
		
			</item>
	</channel>
</rss>
