<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Malenadu &#8211; Peepal Media</title>
	<atom:link href="https://peepalmedia.com/tag/malenadu/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 18 Nov 2022 09:30:33 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Malenadu &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅಡಿಕೆ -ಮಲೆನಾಡಿಗರ ದುರಾಸೆ ಅತಿಯಾಯಿತೆ!?</title>
		<link>https://peepalmedia.com/malenadu-arecanut-cultural-crop/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Nov 2022 09:24:03 +0000</pubDate>
				<category><![CDATA[ಯುವ ನೋಟ]]></category>
		<category><![CDATA[arecanut]]></category>
		<category><![CDATA[Digant Bimbail]]></category>
		<category><![CDATA[kannada]]></category>
		<category><![CDATA[Malenadu]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Yuva nota]]></category>
		<guid isPermaLink="false">https://peepalmedia.com/?p=15827</guid>

					<description><![CDATA[ಮಲೆನಾಡಿಗರು ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂಥದ್ದೇನಾಗಿದೆ? ಹವ್ಯಾಸಿ ಬರಹಗಾರ ದಿಗಂತ್‌ ಬಿಂಬೈಲ್‌ ಅವರ ಅಂಕಣ ಓದಿ. ಮಲೆನಾಡಿಗರ ಅರ್ಥಿಕ ಬಲವಾಗಿದ್ದ ಅಡಿಕೆಗೆ ದಾಳಿ ಇಟ್ಟಿರುವ ಎಲೆಚುಕ್ಕಿ ರೋಗ ಅಡಿಕೆ ತೋಟವನ್ನು ಸಂಪೂರ್ಣ ನಿರ್ನಾಮ ಮಾಡಿಬಿಡುವುದೆ? ಎನ್ನುವ ಅನುಮಾನ ಈಗ ದಟ್ಟವಾಗುತ್ತಿದೆ. ಅಡಿಕೆ ನಂಬಿದವರು ಮುಂದೆ ಬದುಕು ಹೇಗೆ ಎಂಬ ಯೋಚನೆಗಳಲ್ಲಿ ಮಂಡೆ ಕೆರೆದು ಕೊಳ್ಳುತ್ತಿರುವಾಗ, ಗದ್ದೆ ಗುಡ್ಡಗಳನ್ನೆಲ್ಲ ಅಡಿಕೆಯ ತೋಟಗಳನ್ನಾಗಿ ಮಾರ್ಪಡಿಸಿಕೊಂಡು ಆಡಂಬರದ [&#8230;]]]></description>
										<content:encoded><![CDATA[
<p style="font-size:20px"><strong>ಮಲೆನಾಡಿಗರು ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಂಥದ್ದೇನಾಗಿದೆ? ಹವ್ಯಾಸಿ ಬರಹಗಾರ ದಿಗಂತ್‌ ಬಿಂಬೈಲ್‌ ಅವರ ಅಂಕಣ ಓದಿ.</strong></p>



<p style="font-size:20px">ಮಲೆನಾಡಿಗರ ಅರ್ಥಿಕ ಬಲವಾಗಿದ್ದ ಅಡಿಕೆಗೆ ದಾಳಿ ಇಟ್ಟಿರುವ ಎಲೆಚುಕ್ಕಿ ರೋಗ ಅಡಿಕೆ ತೋಟವನ್ನು ಸಂಪೂರ್ಣ ನಿರ್ನಾಮ ಮಾಡಿಬಿಡುವುದೆ? ಎನ್ನುವ ಅನುಮಾನ ಈಗ ದಟ್ಟವಾಗುತ್ತಿದೆ. ಅಡಿಕೆ ನಂಬಿದವರು ಮುಂದೆ ಬದುಕು ಹೇಗೆ ಎಂಬ ಯೋಚನೆಗಳಲ್ಲಿ ಮಂಡೆ ಕೆರೆದು ಕೊಳ್ಳುತ್ತಿರುವಾಗ, ಗದ್ದೆ ಗುಡ್ಡಗಳನ್ನೆಲ್ಲ ಅಡಿಕೆಯ ತೋಟಗಳನ್ನಾಗಿ ಮಾರ್ಪಡಿಸಿಕೊಂಡು ಆಡಂಬರದ ಬದುಕಿಗೆ ಓಡುವ ದುರಾಸೆ ಅತಿಯಾಗಿತ್ತು ಎನ್ನುವ ವಾದ ಕೇಳಿ ಬರುತ್ತಿದೆ.</p>



<p style="font-size:20px">ಸೂಕ್ಷ್ಮವಾಗಿ ಗಮನಿಸಿದಾಗ ಆಸೆ ಅತಿಯಾಗಿರುವುದು ಪ್ರತ್ಯಕ್ಷವಾಗಿ ಎದುರಿಗಿದ್ದರೂ ಸಹ ಅದೇನು ಕೇವಲ ಮಲೆನಾಡಿಗರ ಗುಣವಲ್ಲ. ಮಲೆನಾಡಿನ ಹೊರತಾಗಿ ಉಳಿದೆಲ್ಲ ಪ್ರದೇಶಗಳ ಜನಸಮೂಹ ಸರ್ವಸಂಗ ಪರಿತ್ಯಾಗಿಗಳಾಗಿ ಕುಳಿತಿಲ್ಲ. ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಇಡೀ ಜಗತ್ತು ಅಭಿವೃದ್ಧಿ ಎಂಬ ಹಣೆಪಟ್ಟಿ ಹೊತ್ತು ಓಡುತ್ತಿರುವಾಗ ಅದೇ ಹಾದಿಗೆ ಮಲೆನಾಡು ಕಾಲಿಟ್ಟಿದೆ. ಈಗೀಗ ಹೆಜ್ಜೆ ತಪ್ಪಿದಂತೆನಿಸಿದರೂ ಮಲೆನಾಡಿಗರನ್ನ ಆಧುನಿಕ ಬದುಕಿಗೆ ಎಳೆದಿದ್ದೇ ಈ ವ್ಯವಸ್ಥೆ.</p>



<figure class="wp-block-image size-full"><img fetchpriority="high" decoding="async" width="720" height="907" src="https://peepalmedia.com/wp-content/uploads/2022/11/IMG-20221118-WA0016.jpg" alt="" class="wp-image-15832" srcset="https://peepalmedia.com/wp-content/uploads/2022/11/IMG-20221118-WA0016.jpg 720w, https://peepalmedia.com/wp-content/uploads/2022/11/IMG-20221118-WA0016-238x300.jpg 238w, https://peepalmedia.com/wp-content/uploads/2022/11/IMG-20221118-WA0016-150x189.jpg 150w, https://peepalmedia.com/wp-content/uploads/2022/11/IMG-20221118-WA0016-300x378.jpg 300w, https://peepalmedia.com/wp-content/uploads/2022/11/IMG-20221118-WA0016-696x877.jpg 696w" sizes="(max-width: 720px) 100vw, 720px" /></figure>



<p style="font-size:20px">ಮನೆ ಪಕ್ಕದ ಕಾಡುಗಳಲ್ಲಿ ಆಹಾರ, ಮನೋರಂಜನೆ, ಔಷಧಿ ಎಂಬಿತರ ಬದುಕಿನ ಅಗತ್ಯಗಳನ್ನ ಹುಡುಕಿಕೊಂಡಿದ್ದ, ಹಾಗೆಯೇ ಪರಿಸರದೊಂದಿಗೆ ಹೊಂದಾಣಿಕೆಯಲ್ಲಿ ಬದುಕುತ್ತಿದ್ದವರ ಪರಿಸರ ಪ್ರೀತಿಯ ಕೊಂಡಿಯನ್ನ ವ್ಯವಸ್ಥಿತವಾಗಿ ಕತ್ತರಿಸಲಾಯಿತು.</p>



<p style="font-size:20px">ಈ ವ್ಯವಸ್ಥೆ ಹಸಿರು ಕ್ರಾಂತಿಯ ಹೆಸರಿನಲ್ಲಿ ಹಳ್ಳಿಹಳ್ಳಿಗೆ ರಾಸಾಯನಿಕಗಳ ತುರುಕಿತು. ಹೆಂಡ ಕಳ್ಳು ಬ್ಯಾನ್ ಮಾಡಿ ಒತ್ತಾಯ ಪೂರ್ವಕವಾಗಿ ಸಾರಾಯಿ ಬ್ರಾಂಡಿಗಳ ಪರಿಚಯಿಸಿತು. ಉದ್ಯಮಿಗಳ ಬಂಡವಾಳ ಹಿಂಪಡೆಯಲು ಪ್ರಕೃತಿಯೊಂದಿಗಿನ ಬಂಧದವರನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿತು. ನಡುವೆ ಸಾವಿರಾರು ಎಕರೆ ಮಲೆಕಾಡನ್ನ ಅಣೆಕಟ್ಟುಗಳ ಹೆಸರಲ್ಲಿ ಮುಳುಗಿಸಿತು. ಆ ಮುಖೇನ ಅಭಿವೃದ್ಧಿ ಎನ್ನುವುದನ್ನ ಹೇರಿಕೆ ಮಾಡಿ ಉದ್ಯೋಗದ ಆಸೆ ತೋರಿಸಿ, ಕಾಡುಗಳ ನಡುವೆ ಪಟ್ಟಣಗಳನ್ನ ಕಟ್ಟಿತು. ಅಷ್ಟಕ್ಕೂ ಬಿಡದೆ ಮತ್ತೆ ಸಾವಿರಾರು ಎಕರೆ ಮಲೆಗುಡ್ಡಗಳಿಗೆ ಅಕೇಶಿಯ, ನೀಲಗಿರಿ ಇಟ್ಟು ಗುಡ್ಡಗಳನ್ನೆಲ್ಲ ತನ್ನ ಬಂಡವಾಳದ ಭಾಗವಾಗಿ ಮಾಡಿಕೊಂಡ ಸರ್ಕಾರ, ಅದಾಗಲೇ ಪರಿಸರ ಕೊಂಡಿ ಕಳಚಿದ ಜನರಿಗೆ ನಾವೂ ಹೀಗೆ ಮನೆ ಪಕ್ಕದ ಕಾಡು ಗುಡ್ಡಗಳನ್ನ ಕೃಷಿ ನೆಲವನ್ನಾಗಿ ಮಾರ್ಪಡಿಸಿಕೊಂಡರೆ ವಾಣಿಜ್ಯವಾಗಿ ಅಭಿವೃದ್ಧಿ ಹೊಂದಬಹುದೆಂದು ಪರೋಕ್ಷವಾಗಿ ಹೇಳಿದಂತಿತ್ತು.</p>



<figure class="wp-block-image size-full"><img decoding="async" width="720" height="540" src="https://peepalmedia.com/wp-content/uploads/2022/11/IMG-20221118-WA0015.jpg" alt="" class="wp-image-15833" srcset="https://peepalmedia.com/wp-content/uploads/2022/11/IMG-20221118-WA0015.jpg 720w, https://peepalmedia.com/wp-content/uploads/2022/11/IMG-20221118-WA0015-300x225.jpg 300w, https://peepalmedia.com/wp-content/uploads/2022/11/IMG-20221118-WA0015-150x113.jpg 150w, https://peepalmedia.com/wp-content/uploads/2022/11/IMG-20221118-WA0015-696x522.jpg 696w" sizes="(max-width: 720px) 100vw, 720px" /></figure>



<p style="font-size:20px">ಮನೆಪಕ್ಕದ ಕಾಡಿನಲ್ಲಿಯೇ ದೊರೆಯುತ್ತಿದ್ದ ಆಹಾರ, ಔಷಧಿ, ಮನೋರಂಜನೆ ಇವೆಲ್ಲಕ್ಕೂ ಉದ್ಯಮಿಗಳನ್ನ ಅವಲಂಬಿಸಿದ್ದರಿಂದ ಅವುಗಳನ್ನೆಲ್ಲ ಪಡೆಯಬೇಕಾದರೆ ದುಡ್ಡೇ ಮುಖ್ಯವಾಗಿ ನಿಲ್ಲುವ ದಿನಗಳಿಗೆ ಕಾಲಿಟ್ಟಾಯ್ತು. ಹೀಗೆ, ಈ ವ್ಯವಸ್ಥೆ ಮಲೆಜನರ ಬದುಕಿನ ಗಡಿಯೊಳಗೆ ಬಂದು ಪ್ರಹಾರ ನಡೆಸಿ ಅವರ ಸಂಸ್ಕೃತಿಯೇ ಅಲ್ಲದ, ಅಲ್ಲಿಗೆ ಅಗತ್ಯವೇ ಇಲ್ಲದ, ಮಲೆನಾಡ ಭೌಗೋಳಿಕ ವಿನ್ಯಾಸಕ್ಕೆ, ಹವಾಗುಣಕ್ಕೆ ಸಂಪೂರ್ಣ ವಿರುದ್ಧದ ಬದುಕಿಗೆ ಮಲೆಜನರನ್ನ ಎಳೆದು, ಪೇಟೆಯ ಧಾವಂತದ ಲೆಕ್ಕಾಚಾರದ ಬದುಕನ್ನ ಪರಿಚಯಿಸಿ ರುಚಿತೋರಿಸಿ ಸಂಪೂರ್ಣ ಮಲೆನಾಡ ವ್ಯವಸ್ಥೆಯನ್ನೇ ಹದಗೆಡಿಸಿ ಬಿಟ್ಟಿತು.</p>



<p style="font-size:20px">&nbsp;ಆಹಾರದ ಬೆಳೆಯ ಗದ್ದೆಗಳನ್ನು ವಾಣಿಜ್ಯವಾಗಿ ಪರಿವರ್ತಿಸಿಕೊಂಡು ಅಡಿಕೆ ಬೆಳೆದು ಇಲ್ಲಿಯ ಪರಿಸರಕ್ಕೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ ಕಟ್ಟಡ, ಅಗಲವಾದ ರಸ್ತೆ, ಅದ್ದೂರಿ ಆಡಂಬರದ ಜೀವನ ಶೈಲಿಗಳಿಗೆ ಮಾರುಹೋಗಿ ಅವುಗಳನ್ನೇ ನೆಚ್ಚಿ ಹಾಗೆ ಬದುಕಲು ಬೇಕಾದ ಹಣಕ್ಕಾಗಿ ಮತ್ತೆ ಮತ್ತೆ ಅಡಿಕೆ ತೋಟಗಳ ವಿಸ್ತೀರ್ಣವನ್ನ ಹೆಚ್ಚಿಸಿಕೊಳ್ಳುತ್ತ ಅವುಗಳ ಮೇಲೆಯೇ ಅವಲಂಬಿತರಾದ ಮಲೆನಾಡ ಜನರ ಬದುಕು ಈಗ ಅಡಕತ್ತರಿಯಲ್ಲಿ ನಿಂತಿದೆ. ಮತ್ತೆ ತಮ್ಮ ಹಿಂದಿನ ಬದುಕಿಗೆ ಹೊರಳಲಾಗದೆ, ಇಂದಿನ ಬದುಕಿಗೆ ಹೊಂದಿಕೊಳ್ಳಲಾಗದ ತೊಳಲಾಟದಿಂದ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿವೃದ್ಧಿ ಎಂಬ ರಾಕ್ಷಸನ ಬೆನ್ನತ್ತಿ ಓಡುತ್ತಿರುವ ಆಳುವ ವರ್ಗಕ್ಕೆ ನಮ್ಮ ನೋವಿನ ಕೂಗು ಕೇಳುವುದೇ ಇಲ್ಲ. ದುರಾಸೆಯ ಬದುಕಿಗೆ ಎಳೆತಂದು ನಿಲ್ಲಿಸಿ ಈಗ ಬೆತ್ತಲಾಗುತ್ತಿರುವ ಮಲೆಜನರನ್ನ ನೋಡಿ ತನ್ನ ತಪ್ಪೇ ಇಲ್ಲದಂತೆ ನಿಂತಿರುವ ಸರ್ಕಾರ ವ್ಯಂಗ್ಯ ಮಾಡುವಂತಿದೆ. ದೇಶ ರಾಜ್ಯ ಜಿಲ್ಲೆಗಳೆಂದು ವಿಭಜಿಸಿಕೊಂಡಿರುವ ನಾವು ಅಲ್ಲಿಯ ಪ್ರಾದೇಶಿಕತೆಯನ್ನ ಕೆಡಿಸಿ ಪರಿಸರ ವ್ಯವಸ್ಥೆಯಲ್ಲಿ ಹೊಂದಿಕೊಂಡಿರುವವರ ಗಡಿಯೊಳಗೆ ನುಸುಳುವುದು, ಮತ್ತವರನ್ನ ಗಡಿಯಾಚೆ ಎಳೆತರುವುದು ಯಾವ ಮಟ್ಟದ ಸಾಂಸ್ಕೃತಿಕ ಸ್ಫೋಟಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಇಂದಿನ ಅರೆಬೆಂದ ಮಲೆನಾಡೇ ಸಾಕ್ಷಿ.</p>



<p style="font-size:20px"><strong>ದಿಗಂತ್‌ ಬಿಂಬೈಲ್‌</strong></p>



<p style="font-size:20px">ಹವ್ಯಾಸಿ ಬರಹಗಾರರು</p>


]]></content:encoded>
					
		
		
			</item>
		<item>
		<title>ಎಲೆಚುಕ್ಕೆ ರೋಗದ ಸಮಸ್ಯೆಯನ್ನು ಮರೆಮಾಚಲು ಹೊರಟಿದ್ದಾರಾ ಆರಗ ಜ್ಞಾನೇಂದ್ರ!?</title>
		<link>https://peepalmedia.com/ele-chukke-rogada-samasyeyannu-maremaachalu-horatiddira-araga-jnanendra/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 10 Nov 2022 07:31:11 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜಕೀಯ]]></category>
		<category><![CDATA[aaraga jnanendra]]></category>
		<category><![CDATA[bengalure]]></category>
		<category><![CDATA[ele chukke samasye]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Malenadu]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15087</guid>

					<description><![CDATA[ಬೆಂಗಳೂರು : ಅಡಿಕೆ ಎಂಬುದು ಮಲೆನಾಡಿಗರ ಸಾಂಪ್ರದಾಯಿಕ ಬೆಳೆ. ಲೆಕ್ಕದಲ್ಲಿ ವಾಣಿಜ್ಯ ಬೆಳೆ ಅನ್ನಿಸಿಕೊಂಡರೂ ಮಲೆನಾಡಿಗರ ಅಷ್ಟೂ ಆದಾಯದ ಮೂಲ ಇದರಲ್ಲಿದೆ. ಈ ದಿನಗಳಲ್ಲಿ ಸಾಮಾನ್ಯ ಒಬ್ಬ ಕೂಲಿ ಕಾರ್ಮಿಕ ಕೂಡಾ ತನ್ನ ಮನೆ ಹಿತ್ತಲಿನ ಅಲ್ಪಸ್ವಲ್ಪ ಜಾಗದಲ್ಲಿ ಕೂಡ ತನ್ನ ಕೈಲಾದಷ್ಟು ಅಡಿಕೆ ಸಸಿಗಳನ್ನು ಹಾಕಿ ಪಾಲನೆ, ಪೋಷಣೆ ಮಾಡಿಕೊಂಡು ಬಂದಿರುತ್ತಾರೆ. ಆ ಮಟ್ಟಿಗೆ ಅಲ್ಪಸ್ವಲ್ಪ ಖರ್ಚು ವೆಚ್ಚಗಳನ್ನು ನಿಭಾಯಿಸಲೂ ಕೂಡಾ ಅಡಿಕೆ ಸಹಕಾರಿಯಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಕೊರೋನಾ ವೈರಸ್ ಬಂದಂತೆ ಅಡಿಕೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು</strong> : ಅಡಿಕೆ ಎಂಬುದು ಮಲೆನಾಡಿಗರ ಸಾಂಪ್ರದಾಯಿಕ ಬೆಳೆ. ಲೆಕ್ಕದಲ್ಲಿ ವಾಣಿಜ್ಯ ಬೆಳೆ ಅನ್ನಿಸಿಕೊಂಡರೂ ಮಲೆನಾಡಿಗರ ಅಷ್ಟೂ ಆದಾಯದ ಮೂಲ ಇದರಲ್ಲಿದೆ. ಈ ದಿನಗಳಲ್ಲಿ ಸಾಮಾನ್ಯ ಒಬ್ಬ ಕೂಲಿ ಕಾರ್ಮಿಕ ಕೂಡಾ ತನ್ನ ಮನೆ ಹಿತ್ತಲಿನ ಅಲ್ಪಸ್ವಲ್ಪ ಜಾಗದಲ್ಲಿ ಕೂಡ ತನ್ನ ಕೈಲಾದಷ್ಟು ಅಡಿಕೆ ಸಸಿಗಳನ್ನು ಹಾಕಿ ಪಾಲನೆ, ಪೋಷಣೆ ಮಾಡಿಕೊಂಡು ಬಂದಿರುತ್ತಾರೆ. ಆ ಮಟ್ಟಿಗೆ ಅಲ್ಪಸ್ವಲ್ಪ ಖರ್ಚು ವೆಚ್ಚಗಳನ್ನು ನಿಭಾಯಿಸಲೂ ಕೂಡಾ ಅಡಿಕೆ ಸಹಕಾರಿಯಾಗಿದೆ.</p>



<p>ಆದರೆ ಇಂತಹ ಸಂದರ್ಭದಲ್ಲಿ ಮನುಷ್ಯನಿಗೆ ಕೊರೋನಾ ವೈರಸ್ ಬಂದಂತೆ ಅಡಿಕೆ ಮರಗಳಿಗೆ &#8216;ಎಲೆಚುಕ್ಕೆ ರೋಗ&#8217;ದಂತಹ ಮಾರಣಾಂತಿಕ ಖಾಯಿಲೆ ತಗುಲುತ್ತಿದೆ. ನಿರೀಕ್ಷೆಗೂ ಮೀರಿದ ವೇಗದಲ್ಲಿ ಈ ಖಾಯಿಲೆ ಅಡಿಕೆ ತೋಟಗಳಿಗೆ ತಗುಲಿ ಇಲ್ಲಿಯ ರೈತರು ಇನ್ನು ತಲೆ ಎತ್ತಲಾಗದ ಸ್ಥಿತಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ಅರಿತು ಮಲೆನಾಡಿನ ರೈತರ ನೆರವಿಗೆ ಬರಬೇಕಾಗಿದ್ದು ಸರ್ಕಾರದ ಕರ್ತವ್ಯವಾಗಬೇಕಿತ್ತು. ಆದರೆ ಈ ವರೆಗೆ ರೈತರ ನೆರವಿಗೆ ಸರ್ಕಾರ ಬಂದಿಲ್ಲ ಅನ್ನೋದು ಖೇದಕರ.</p>



<figure class="wp-block-image size-full"><img decoding="async" width="640" height="480" src="https://peepalmedia.com/wp-content/uploads/2022/11/4b38aa90-9dc1-446c-93ca-8e7194d6d7de.jpg" alt="" class="wp-image-15091" srcset="https://peepalmedia.com/wp-content/uploads/2022/11/4b38aa90-9dc1-446c-93ca-8e7194d6d7de.jpg 640w, https://peepalmedia.com/wp-content/uploads/2022/11/4b38aa90-9dc1-446c-93ca-8e7194d6d7de-300x225.jpg 300w, https://peepalmedia.com/wp-content/uploads/2022/11/4b38aa90-9dc1-446c-93ca-8e7194d6d7de-150x113.jpg 150w" sizes="(max-width: 640px) 100vw, 640px" /></figure>



<p>ಹೋಗಲಿ, ಅಡಿಕೆಗೆ ತಗುಲಿರುವ ಎಲೆಚುಕ್ಕೆ ರೋಗಕ್ಕೆ ಏನಾದರೂ ಔಷಧೀಯ ಪರಿಹಾರ ಏನಾದರೂ ಸರ್ಕಾರದ ಕಡೆಯಿಂದ ಇದೆಯೇ? ಸಂಶೋಧನೆ ಮೂಲಕ ಸರ್ಕಾರ ರೋಗಕ್ಕೆ ಪ್ರಮುಖ ಕಾರಣವನ್ನು ಏನಾದರೂ ಹುಡುಕಿದೆಯೇ? ಅದೂ ಇಲ್ಲ. ಹೋಗಲಿ, ತೋಟಗಾರಿಕೆ ಇಲಾಖೆ ಕಡೆಯಿಂದ ಪರ್ಯಾಯ ಬೆಳೆಗೆ ಏನಾದರೂ ಮಾರ್ಗದರ್ಶನ ನಡೆದಿದೆಯೇ? ಆದೂ ಇಲ್ಲ. ಹಾಗಾದರೆ ಸರ್ಕಾರವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಏನು ಮಾಡಿದ್ದಾರೆ.</p>



<p>ಹೇಳ್ತೀವಿ ಕೇಳಿ. ಮಾನ್ಯ ಗೃಹ ಸಚಿವರು, ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆದ ಆರಗ ಜ್ಞಾನೇಂದ್ರ ಅವರು ಎಲೆಚುಕ್ಕೆ ರೋಗ ಹರಡದಂತೆ ತಡೆಗಟ್ಟಲು ಮತ್ತು ಮಲೆನಾಡು ಭಾಗದ ಜನರ ಗ್ರಹಚಾರ ದೋಷ ಪರಿಹಾರಾರ್ಥವಾಗಿ &#8216;ಓಂ ನಮಃ ಶಿವಾಯ&#8217; ಸಾಮೂಹಿಕ ಮಂತ್ರೋಚ್ಛಾರಣೆ ಪೂಜಾ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಿದ್ದಾರೆ. ಅವರೇ ಹೇಳುವಂತೆ &#8216;ಸರ್ಕಾರ ತನ್ನೆಲ್ಲಾ ಕಾರ್ಯ ಮಾಡಿದೆ. ಇನ್ನು ನೊಂದಿರುವ ಜನರ ಮಾನಸಿಕ ನೆಮ್ಮದಿಗಾಗಿ ಈ ಧಾರ್ಮಿಕ ಕಾರ್ಯ ಮಾಡಲಾಗುತ್ತಿದೆ&#8217; ಎಂದು ಹೇಳಿದ್ದಾರೆ. ಅಂದ್ರೆ ಸರ್ಕಾರವಾಗಲಿ ಜನಪ್ರತಿನಿಧಿಗಳಾಗಲಿ ಅಡಿಕೆ ರೋಗಕ್ಕೆ ತಗುಲಿರುವ ಎಲೆಚುಕ್ಕೆ ರೋಗದ ಶಮನಕ್ಕೆ ಕೈ ಚೆಲ್ಲಿ ಕುಳಿತರೇ?</p>



<figure class="wp-block-image size-large"><img loading="lazy" decoding="async" width="1024" height="591" src="https://peepalmedia.com/wp-content/uploads/2022/11/714d7559-e4a8-488e-9004-3854bf5f592a-1024x591.jpg" alt="" class="wp-image-15092" srcset="https://peepalmedia.com/wp-content/uploads/2022/11/714d7559-e4a8-488e-9004-3854bf5f592a-1024x591.jpg 1024w, https://peepalmedia.com/wp-content/uploads/2022/11/714d7559-e4a8-488e-9004-3854bf5f592a-300x173.jpg 300w, https://peepalmedia.com/wp-content/uploads/2022/11/714d7559-e4a8-488e-9004-3854bf5f592a-768x443.jpg 768w, https://peepalmedia.com/wp-content/uploads/2022/11/714d7559-e4a8-488e-9004-3854bf5f592a-150x87.jpg 150w, https://peepalmedia.com/wp-content/uploads/2022/11/714d7559-e4a8-488e-9004-3854bf5f592a-696x401.jpg 696w, https://peepalmedia.com/wp-content/uploads/2022/11/714d7559-e4a8-488e-9004-3854bf5f592a-1068x616.jpg 1068w, https://peepalmedia.com/wp-content/uploads/2022/11/714d7559-e4a8-488e-9004-3854bf5f592a.jpg 1080w" sizes="auto, (max-width: 1024px) 100vw, 1024px" /></figure>



<p>ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದಂತೆ ಸರ್ಕಾರದ ಕಡೆಯಿಂದ ಈಗಾಗಲೇ 10 ಕೋಟಿ ಮಂಜೂರಾತಿ ಆಗಿದೆ. ಅದರಲ್ಲಿ ಐದು ಕೋಟಿ ಬಿಡುಗಡೆ ಕೂಡಾ ಆಗಿದೆ. ಬಿಡುಗಡೆ ಆಗಿರುವ ಹಣದಲ್ಲಿ ರೈತರಿಗೆ ಔಷಧಿ ಸಿಂಪಡಣೆಗೆ ಸರ್ಕಾರ ನೆರವಾಗಲಿದೆ ಎಂದಿದ್ದಾರೆ. ಪ್ರಶ್ನೆ ಎದ್ದಿರುವುದು ಏನೆಂದರೆ ಗೃಹ ಸಚಿವರೇ ಪ್ರತಿನಿಧಿಸುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಇರುವ ಅಡಿಕೆ ತೋಟಗಳಲ್ಲಿ ಶೇ 60 ರಷ್ಟು ಅಡಿಕೆ ತೋಟ ಬಗರ್ ಹುಕುಂ ವ್ಯಾಪ್ತಿಯಲ್ಲಿ ಬರುವಂತವು. ತೋಟಗಾರಿಕಾ ಇಲಾಖೆ ಕಡೆಯಿಂದ ಬಿಡುಗಡೆ ಆಗುವ ಔಷಧಿಗಳು ಪಹಣಿ ಪತ್ರ ಇಟ್ಟೇ ತಗೆದುಕೊಳ್ಳಬೇಕು. ಹಾಗಾದರೆ ಆ ಶೇ 60 ರಷ್ಟು ತೋಟಗಳ ಕಥೆ ಏನು?</p>



<p>ಇನ್ನೊಂದು ಬಹುಮುಖ್ಯ ಪ್ರಶ್ನೆ ಎಂದರೆ ಅಡಿಕೆ ಮರಕ್ಕೆ ತಗುಲಿರುವ ಎಲೆಚುಕ್ಕೆ ರೋಗಕ್ಕೆ ಸ್ಪಷ್ಟ ಕಾರಣ ಏನು ಎಂದು ಇವತ್ತಿಗೂ ಯಾರಿಗೂ ಮಾಹಿತಿ ಇಲ್ಲ. ಖಾಯಿಲೆ ಏನು ಎಂದೇ ತಿಳಿಯದೇ ಸರ್ಕಾರ ಅಥವಾ ಫರ್ಟಿಲೈಜರ್ ಕಂಪನಿಗಳು ವಿತರಿಸುವ ಔಷಧಿಗಳು ಎಷ್ಟು ವಿಶ್ವಾಸಾರ್ಹತೆ ಉಳಿಸಿಕೊಳ್ಳುತ್ತವೆ? ಈಗಾಗಲೇ ಕೆಲವು ಫರ್ಟಿಲೈಜರ್ ಕಂಪನಿಗಳು ವಿತರಿಸಿರುವ ಔಷಧಿಗಳು ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಔಷಧಿ ಸಿಂಪಡಣೆ ನಂತರ ಒಂದೆರಡು ದಿನ ಕಣ್ಣು ಬಿಡಲಾಗುವುದಿಲ್ಲ, ಚರ್ಮಕ್ಕೆ ದುಷ್ಪರಿಣಾಮ ಬೀರುತ್ತಿವೆ ಎಂಬ ಮಾತುಗಳು ರೈತರಿಂದ ಕೇಳಿ ಬರುತ್ತಿವೆ. ಜೊತೆಗೆ ಯಾವ ವಿಜ್ಞಾನಿಗಳು ಅಥವಾ ಅಧ್ಯಯನ ಸಂಸ್ಥೆ ಕೂಡಾ ಈ ಔಷಧಿಗಳನ್ನು ಬಳಸಲು ಸೂಚಿಸಿಲ್ಲ. ಎಲೆಚುಕ್ಕೆ ರೋಗದ ಅಧ್ಯಯನ ಕೂಡಾ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ಈ ಔಷಧಿಗಳೂ ಎಷ್ಟು ಸೂಕ್ತ ಎಂಬುದು ಪ್ರಶ್ನಾರ್ಹ.</p>



<p>ಇಂತಹ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತುರ್ತು ಸಂಶೋಧನೆಗೆ ಕರೆ ಕೊಟ್ಟು ಅದರ ಮಾಹಿತಿಗಳನ್ನು ಜನರಿಗೆ ತಲುಪಿಸಬೇಕು. ಸ್ವತಃ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಇವರು ಜನರಲ್ಲಿ ಮೂಡಿರುವ ಗೊಂದಲ ಸರಿಪಡಿಸಬೇಕು. ಅದು ಬಿಟ್ಟು ಸಾಮೂಹಿಕ ಮಂತ್ರೋಚ್ಛಾರಣೆ ಎಷ್ಟು ಸರಿ. &#8216;ಮಂತ್ರದಿಂದ ಮಾವಿನಕಾಯಿ ಉದುರಿಸಲಾಗಲ್ಲ&#8217; ಎಂಬ ಗಾದೆಮಾತು ಇಂತಹ ಜನಪ್ರತಿನಿಧಿಗಳಿಗೆ ಅರ್ಥವಾಗುವುದಾದರೂ ಯಾವಾಗ? ಅಥವಾ ಆರಗ ಜ್ಞಾನೇಂದ್ರ ಸರ್ಕಾರದ ಅಸಮರ್ಥತೆಯನ್ನು ಮರೆಮಾಚಲು ಧಾರ್ಮಿಕ ಆಚರಣೆಯನ್ನು ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆಯೇ? ಎಂಬ ಅನುಮಾನಗಳೂ ದಟ್ಟವಾಗಿವೆ.</p>



<figure class="wp-block-image size-full"><img loading="lazy" decoding="async" width="318" height="159" src="https://peepalmedia.com/wp-content/uploads/2022/11/456e549f-11ea-4cfc-a09c-cbebf126a0f5.jpg" alt="" class="wp-image-15093" srcset="https://peepalmedia.com/wp-content/uploads/2022/11/456e549f-11ea-4cfc-a09c-cbebf126a0f5.jpg 318w, https://peepalmedia.com/wp-content/uploads/2022/11/456e549f-11ea-4cfc-a09c-cbebf126a0f5-300x150.jpg 300w, https://peepalmedia.com/wp-content/uploads/2022/11/456e549f-11ea-4cfc-a09c-cbebf126a0f5-150x75.jpg 150w" sizes="auto, (max-width: 318px) 100vw, 318px" /></figure>



<p>&#8216;ಅಡಿಕೆಗೆ ಬಂದ ಮಾರಣಾಂತಿಕ ಎಲೆಚುಕ್ಕೆ ರೋಗ ನಿವಾರಣೆಗೆ ಸಾಮೂಹಿಕ ಮಂತ್ರೋಚ್ಛಾರಣೆ ಜೊತೆಗೆ ಬಿಲ್ವಪತ್ರೆ ಮೂಲಕ ದೇವರಿಗೆ ಅರ್ಪಿಸಲಾಗುತ್ತಂತೆ. ನಂತರ ನಡೆಯುವ ಹೋಮ ಹವನದ ಮೂಲಕ ಸಿಗುವ ಬೂದಿಯನ್ನು ಅಡಿಕೆ ತೋಟಕ್ಕೆ ಹಾಕಿದರೆ ಎಲೆಚುಕ್ಕೆ ರೋಗಕ್ಕೆ ಕಡಿವಾಣ ಹಾಕಬಹುದಂತೆ. ಹಾಗಾದರೆ ಸಂಶೋಧನೆ, ಔಷಧಿ ಸಿಂಪಡಣೆ ಎಲ್ಲವನ್ನೂ ಕೈಬಿಟ್ಟು ತೋಟಕ್ಕೆ ಹೋಮದ ಬೂದಿ ಸಿಂಪಡಿಸಿದರೆ ರೋಗ ನಿವಾರಣೆ ಆಗುತ್ತದೆಯೇ? ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಆರಗ ಜ್ಞಾನೇಂದ್ರ ವೈಜ್ಞಾನಿಕ ಚಿಂತನೆಯನ್ನು ಜನರಲ್ಲಿ ಬಿತ್ತುವುದು ಬಿಟ್ಟು ಧಾರ್ಮಿಕ ಭಾವನೆಗಳ ಮೂಲಕ ಜನರ ದಿಕ್ಕು ತಪ್ಪಿಸುವುದು ಸರಿಯೇ? ಮತ್ತೆ ನಾವೆಲ್ಲಾ ಶಿಲಾಯುಗದತ್ತ ಮುಖ ಮಾಡಬೇಕಾದ ದೌರ್ಭಾಗ್ಯಕ್ಕೆ ಬಂದಿರುವುದು ಮಲೆನಾಡಿಗರ ದುರಂತದ ದಿನಗಳಿವು&#8217; ಎಂದು ಮಲೆನಾಡಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ.</p>



<p>ಇನ್ನು ಈ ಭಾಗದ ಕೆಲವು ಮಠಾಧೀಶರು ದೇವರಿಗೆ ಕುಂಕುಮಾರ್ಚನೆ ಮಾಡಿಸಿ ತೋಟಗಳಿಗೆ ಹಾಕಲೂ ಕರೆ ಕೊಟ್ಟಿದ್ದಾರೆ. ವೈಚಾರಿಕತೆ ಮತ್ತು ಧಾರ್ಮಿಕತೆಯ ಸಂಘರ್ಷ ಬಿಟ್ಟು ಇವರೆಲ್ಲ ವಾಸ್ತವಕ್ಕೆ ಬಂದು ಯಾಕೆ ಯೋಚಿಸುತ್ತಿಲ್ಲ. ಮನುಷ್ಯನಲ್ಲಿ ಬೇಧದ ಗುಣಗಳಿಯಬಹುದು. ಆದರೆ ಕಾಯಿಲೆಗಳಿಗೆ ಯಾವ ಬೇಧಗಳೂ ಇಲ್ಲ. ಕೋವಿಡ್ ಸಾಂಕ್ರಾಮಿಕವನ್ನೇ ಉದಾಹರಣೆಗೆ ಇಟ್ಟು ನೋಡಬಹುದು. ಅದೆಷ್ಟೇ ದೊಡ್ಡ ಧಾರ್ಮಿಕ ವ್ಯಕ್ತಿ ಅಥವಾ ಅದೆಷ್ಟೇ ದೊಡ್ಡ ಬುದ್ದಿಜೀವಿಯನ್ನೂ ಸಹ ಕೋವಿಡ್ ಸಾಂಕ್ರಾಮಿಕ ಬಿಡದೇ ಕಾಡಿದ್ದು ಇನ್ನೂ ಯಾರೂ ಮರೆತಿಲ್ಲ. ಅಂದು ಇದೇ ರೀತಿ ಧಾರ್ಮಿಕ ಪೂಜೆ ಪುನಸ್ಕಾರ ಮಾಡಿಕೊಂಡು ಕೂತಿದ್ದರೆ ಕೋವಿಡ್ ವೈರಸ್ ಬಿಡುತ್ತಿತ್ತೇ? ಖಂಡಿತಾ ಇಲ್ಲ.</p>



<p>ಇಂದು ಮಲೆನಾಡಿಗರಿಗೆ ತಗುಲಿರುವ ಸಮಸ್ಯೆ ಕೂಡಾ ಕೋವಿಡ್ ನಷ್ಟೇ ಭಯಾನಕವಾಗಿದೆ. ಇದು ಈ ಭಾಗದ ಜನರ ಬದುಕಿನ ಪ್ರಶ್ನೆ. ಜನಪ್ರತಿನಿಧಿಗಳು ಇನ್ನಾದರೂ ವಾಸ್ತವಕ್ಕೆ ಬಂದು, ಸರ್ಕಾರದ ಮೇಲೆ ಪಕ್ಷಾತೀತವಾಗಿ ಎಲ್ಲರೂ ಒಟ್ಟುಗೂಡಿ ಒತ್ತಡ ಹೇರಿದರೆ ಸಮಸ್ಯೆ ಬಗೆಹರಿಯಬಹುದು. ಅದು ಬಿಟ್ಟು ಜನರ ಧಾರ್ಮಿಕ ಭಾವನೆ ಅಡಿಯಲ್ಲಿ ಇಂತದ್ದೇ ಮಾಡುತ್ತಾ ಕುಳಿತರೆ ನೂರಕ್ಕೆ ನೂರರಷ್ಟು ಮುಂಬರುವ ದಿನಗಳಲ್ಲಿ ಮಲೆನಾಡಿನಲ್ಲಿ ಜನ ಅತ್ಯಂತ ದುರಂತದ ದಿನಗಳನ್ನು ಎದುರು ನೋಡಲಿದ್ದಾರೆ.</p>
]]></content:encoded>
					
		
		
			</item>
		<item>
		<title>ಭೂಮ್ತಾಯಿಯ ಬಯಕೆ ತೀರಿಸುವ ಭೂಮಿ ಹುಣ್ಣಿಮೆ ಹಬ್ಬ</title>
		<link>https://peepalmedia.com/bhumi-hunnime-celebrated-malenadu/</link>
		
		<dc:creator><![CDATA[N Shivananda Kugve]]></dc:creator>
		<pubDate>Sat, 08 Oct 2022 17:55:42 +0000</pubDate>
				<category><![CDATA[ಕೃಷಿ ನೋಟ]]></category>
		<category><![CDATA[ವಿಶೇಷ]]></category>
		<category><![CDATA[Agriculture]]></category>
		<category><![CDATA[Bumi Hunnime]]></category>
		<category><![CDATA[Divaru]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Malenadu]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sagar]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=9478</guid>

					<description><![CDATA[ಮಹಾನವಮಿ- ವಿಜಯದಶಮಿ ಕಳೆದು ಐದನೇ ದಿನ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿಲಲ್ಲಿರುವ ರೈತಾಪಿಗಳ ವಿಶೇಷ ಹಬ್ಬವೇ ಭೂಮಿ ಹುಣ್ಣಿಮೆ ಹಬ್ಬ ಅತವಾ ಬೂಮಣ್ಣಿ ಹಬ್ಬ. ಬಯಲುಸೀಮೆಯ ರೈತರು ಸೀಗೆ ಹುಣ್ಣಿಮೆ ಆಚರಿಸಿದರೆ, ಮಲೆನಾಡಿನ ರೈತಾಪಿ ಸಮುದಾಯಗಳು ಈ ಬೂಮಣ್ಣಿ ಹಬ್ಬ ಆಚರಿಸುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಸೀಮೆಯ ಕೃಷಿ ಮೂಲದ ದೀವರು ಬೂಮಣ್ಣಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವುದು ವಾಡಿಕೆಯಾಗಿ ಬಂದಿದೆ. ಈ ಹಬ್ಬಕ್ಕೆ ನಾಲ್ಕೈದು ದಿನಗಳ ಮೊದಲೇ ಅಂದರೆ ಮಹಾನವಮಿ ಹಿಂದಿನ ದಿನ ಅಟ್ಟದ ಮೇಲಿಂದ [&#8230;]]]></description>
										<content:encoded><![CDATA[
<p style="font-size:20px">ಮಹಾನವಮಿ- ವಿಜಯದಶಮಿ ಕಳೆದು ಐದನೇ ದಿನ ಬರುವ ಹುಣ್ಣಿಮೆಯೇ ಭೂಮಿ ಹುಣ್ಣಿಮೆ. ಮಲೆನಾಡಿಲಲ್ಲಿರುವ ರೈತಾಪಿಗಳ ವಿಶೇಷ ಹಬ್ಬವೇ ಭೂಮಿ ಹುಣ್ಣಿಮೆ ಹಬ್ಬ ಅತವಾ ಬೂಮಣ್ಣಿ ಹಬ್ಬ. ಬಯಲುಸೀಮೆಯ ರೈತರು ಸೀಗೆ ಹುಣ್ಣಿಮೆ ಆಚರಿಸಿದರೆ, ಮಲೆನಾಡಿನ ರೈತಾಪಿ ಸಮುದಾಯಗಳು ಈ ಬೂಮಣ್ಣಿ ಹಬ್ಬ ಆಚರಿಸುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ ಸೀಮೆಯ ಕೃಷಿ ಮೂಲದ ದೀವರು ಬೂಮಣ್ಣಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವುದು ವಾಡಿಕೆಯಾಗಿ ಬಂದಿದೆ. ಈ ಹಬ್ಬಕ್ಕೆ ನಾಲ್ಕೈದು ದಿನಗಳ ಮೊದಲೇ ಅಂದರೆ ಮಹಾನವಮಿ ಹಿಂದಿನ ದಿನ ಅಟ್ಟದ ಮೇಲಿಂದ ಬೂಮಣ್ಣಿ ಬುಟ್ಟಿ, ಹಚ್ಚಂಬಲಿ ಬುಟ್ಟಿ ಕೆಳಗೆ ಇಳಿಸಿ ಅವುಗಳನ್ನು ತೊಳೆದು ಸಗಣಿ ಸಾರಿಸಿ ಬಿಸಿಲಲ್ಲಿ ಒಣಗಿಸಿ ನಂತರ ಕೆಮ್ಮಣ್ಣು ಬಳಿದು ಬಿಸಿಲಲ್ಲಿ ಮತ್ತೆ ಒಣಗಿಸುತ್ತಾರೆ. ನಂತರ ಅದರ ಮೇಲೆ ಚಿತ್ತಾರ ಬಿಡಿಸುವುದು. ಇದಕ್ಕೆ ಅಕ್ಕಿ ನೆನೆಸಿಟ್ಟು, ಅದನ್ನು ತಿರುವಿ ಬಿಳಿ ಹಾಲಿನಂತ ಬಣ್ಣ ತಯಾರಿಸಿಕೊಂಡಿರುತ್ತಾರೆ. ಕೆಮ್ಮಣ್ಣು ಬಳಿದಿಟ್ಟಿರುವ ಬುಟ್ಟಿಗಳಿಗೆ ಮನೆಯ ಹೆಂಗಸರು ಚಿತ್ತಾರ ಬಿಡಿಸುತ್ತಾರೆ. ಈ ಚಿತ್ತಾರ ಬುಟ್ಟಿ ಬರೆಯುವುದು ಕೂಡ ಅವ್ವಂದಿರಿಂದ ಹೆಣ್ಣು ಮಕ್ಕಳಿಗೆ ತಲೆಮಾರಿನಿಂದ ನೋಡಿ ಕಲಿತು ಬರೆಯುವ ಕಲೆಯಾಗಿ ಅನೂಚಾನವಾಗಿ ಬಂದಿದೆ.  </p>



<p></p>



<figure class="wp-block-image size-large"><img loading="lazy" decoding="async" width="1024" height="682" src="https://peepalmedia.com/wp-content/uploads/2022/10/IMG_0096-1024x682.jpg" alt="" class="wp-image-9480" srcset="https://peepalmedia.com/wp-content/uploads/2022/10/IMG_0096-1024x682.jpg 1024w, https://peepalmedia.com/wp-content/uploads/2022/10/IMG_0096-300x200.jpg 300w, https://peepalmedia.com/wp-content/uploads/2022/10/IMG_0096-768x511.jpg 768w, https://peepalmedia.com/wp-content/uploads/2022/10/IMG_0096-1536x1023.jpg 1536w, https://peepalmedia.com/wp-content/uploads/2022/10/IMG_0096-2048x1364.jpg 2048w, https://peepalmedia.com/wp-content/uploads/2022/10/IMG_0096-150x100.jpg 150w, https://peepalmedia.com/wp-content/uploads/2022/10/IMG_0096-696x463.jpg 696w, https://peepalmedia.com/wp-content/uploads/2022/10/IMG_0096-1068x711.jpg 1068w, https://peepalmedia.com/wp-content/uploads/2022/10/IMG_0096-1920x1278.jpg 1920w" sizes="auto, (max-width: 1024px) 100vw, 1024px" /></figure>



<p></p>



<p class="has-text-align-left" style="font-size:20px">ಪುಂಡಿ ನಾರಿನ ಕುಂಚದಿಂದ ಬುಟ್ಟಿಯ ಸುತ್ತಲೂ ಗೆರೆಗಳ ಚಿತ್ತಾರಗಳು ಅನಾವರಣಗೊಳ್ಳುತ್ತವೆ. ಅಲ್ಲಿ ಕೃಷಿ ಪರಿಕರಗಳು, ಭತ್ತದ ಸಸಿ, ಭತ್ತದ ಬಣವೆ, ಜೋಗಿ ಜಡೆ, ತೆಂಗಿನ ಮರ, ಗೂಡಿನ ಹಕ್ಕಿ, ಸೀತೆ ಮುಡಿ, ನೇಗಿಲು ಉಳುಮೆ, ಭೂಮಣ್ಣಿ ಬುಟ್ಟಿ ಹೊತ್ತುಕೊಂಡು ಹೊರಟ ಗಂಡಸು, ಹೆಂಗಸು ಮಕ್ಕಳು, ಹೀಗೆ ಬಿಳಿ ರೇಖೆಯ  ನಾನಾ ಚಿತ್ತಾರಗಳು ರೂಪುಗೊಳ್ಳುತ್ತವೆ. ಆ ಎಲ್ಲಾ ಚಿತ್ತಾರಗಳೂ ಬುಟ್ಟಿಯ ತುಂಬಾ ರೇಖೆಗಳಿಂದ ರಚಿಸಿದ ಚೌಕಗಳ ನಡುವೆ ಬರೆಯಲ್ಪಟ್ಟಿರುತ್ತವೆ. ಅಂದು ಹೆಣ್ಣುಮಕ್ಕಳು ರಾತ್ರಿ ಇಡೀ ಎಚ್ಚರವಿದ್ದು ತಯಾರಿಸಿಟ್ಟ ಸಿಹಿತಿಂಡಿ, ಕಡುಬು, ಕಜ್ಜಾಯ, ಮೊಸರು ಬುತ್ತಿ, ಮೀನು ಸಾರು, ಹೀಗೆ ವಿವಿಧ ತಿನಿಸುಗಳನ್ನು ಬೂಮಣ್ಣಿ ಬುಟ್ಟಿಯಲ್ಲಿ ತುಂಬಿಕೊಂಡು ಹೊಲಗಳಿಗೆ, ತೋಟಗಳಿಗೆ ಹೊತ್ತೊಯ್ದು ಕುಟುಂಬದ ಎಲ್ಲಾ ಸದಸ್ಯರು, ಸಸಿ ಪೂಜೆ ಮಾಡುವುದೇ ಒಂದು ವಿಶೇಷ.</p>



<p class="has-text-align-left" style="font-size:20px">ಹೊಡೆಗೆ ಬಂದ ಸಸಿಗಳೆಂದರೆ ಗರ್ಭವತಿಯಾದ ಹೆಣ್ಣೆಂದು ಕಲ್ಪಿಸಿಕೊಂಡು ಆಕೆಗೆ ಬಯಕೆ ತೀರಿಸುವುದೇ ಈ ಹಬ್ಬದ ವಿಶಿಷ್ಟತೆ. ಸಸಿ ಎಡೆ, ಇಲಿ ಎಡೆ, ಗೂಳಿ ಎಡೆ ಎಂದು ಬಾಳೆ ಎಲೆಯಲ್ಲಿ ಇಟ್ಟ ಎಡೆಗಳನ್ನು ಪೂಜೆ ಮಾಡುತ್ತಾರೆ. ಪೂಜೆಗೆ ಮೊದಲು ಎರಡು ಸಸಿಗಳಿಗೆ ತೋರಣ ಕಟ್ಟಿ ಮನೆಯ ಯಜಮಾನಿ ತನ್ನ ತಾಳಿಸರವನ್ನು ಕಟ್ಟಿ, ಹೂ ಮುಡಿಸಿ, ಪೂಜೆ ಮಾಡುತ್ತಾಳೆ. ನಂತರ ಗೂಳಿ ಎಡೆಯನ್ನು ಹೊಲದಲ್ಲೇ ಅಷ್ಟು ದೂರ ಹೋಗಿ ಕರೆದು ದೂರದಲ್ಲಿ ಇಟ್ಟು ಬರುತ್ತಾರೆ. ಗೂಳಿ ಎಂದರೆ ದೆವ್ವಕಾಗೆ ಎಂದು ಕರೆಯಲಾಗುವ ಕಾಗೆಗಳು. ʼನಮ್ಮ ಹಿರಿಯರು ಕಾಗೆಗಳ ರೂಪದಲ್ಲಿ ಈ ಹಬ್ಬಕ್ಕೆ ವಿಶೇಷ ಅಡುಗೆ ತಿನ್ನಲು ಬರುತ್ತಾರೆ ಎಂದು ನಂಬುಗೆ. ಆ ಕಾಗೆಗಳು ಬಂದು ಆ ಎಡೆಯಲ್ಲಿರುವ ತಿನಿಸುಗಳನ್ನು ತಿನ್ನುವವರೆಗೂ ಮನೆಮಂದಿ ಯಾರೂ ಊಟ ಮಾಡುವುದಿಲ್ಲ. ನಂತರ ಹೊಲದಲ್ಲಿಯೇ ಊಟ ಮಾಡಿ ಮನೆಗೆ ತೆರಳುತ್ತಾರೆ.</p>



<p></p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/10/IMG-20151027-WA0029-768x1024.jpg" alt="" class="wp-image-9481" width="680" height="900"/></figure></div>


<p></p>



<p class="has-text-align-left" style="font-size:20px">ಅಂದು ಬೆಳಕು ಹರಿಯುವುದರೊಳಗೆ ಹಚ್ಚಂಬಲಿಯನ್ನು ತಮ್ಮ ಎಲ್ಲಾ ಹೊಲಗದ್ದೆ, ತೋಟ, ಹಿತ್ತಲುಗಳಿಗೆ ಬೀರುವುದು ಒಂದು ಸಂಪ್ರದಾಯ. ಈ ಹಚ್ಚಂಬಲಿ ಎಂದರೆ ʼಚರಗʼ ಎಂದೂ ಕರೆಯುತ್ತಾರೆ. ಹಿತ್ತಲಲ್ಲಿ ಬೆಳೆದ ವಿವಿಧ ತರಕಾರಿ, ಸೊಪ್ಪುಗಳನ್ನು ಸೇರಿಸಿ ಅದಕ್ಕೆ ಅಕ್ಕಿಯನ್ನು ಹಾಕಿ ಮಿಶ್ರಣ ಮಾಡಿ ಬೇಯಿಸುವುದೇ ಹಚ್ಚಂಬಲಿ. ಈ ಹಚ್ಚಂಬಲಿ ಅಥವಾ ಚರಗವನ್ನು ಒಯ್ಯಲು ಇನ್ನೊಂದು ಚಿಕ್ಕ ಬುಟ್ಟಿ ಇದ್ದು ಅದನ್ನೂ ಚಿತ್ತಾರಗಳಿಂದ ಸಿಂಗರಿಸಲಾಗಿರುತ್ತದೆ. ಅದರಲ್ಲಿ ಮನೆಯ ಗಂಡಸರು ಬೆಳಕು ಹರಿಯುವುದರೊಳಗೆ ಚರಗ ಬೀರಿ ಬರುತ್ತಾರೆ. ಚರಗದಲ್ಲಿ ಅಮಟೆ ಕಾಯಿಯನ್ನು ಬೇಯಿಸಿ ಬೆರೆಸುವುದು ವಿಶೇಷ. ಹೀಗೆ ಬೀರುವಾಗ, &#8220;ಹಚ್ಚಂಬಲಿ ಹರಿವೆ ಸೊಪ್ಪು, ಹಿತ್ಲಾಗಿದ್ದ ಧಾರೆ ಹೀರೇಕಾಯಿ, ಹೋಯ್‌ ಹೊಯ್‌ ಹೊಯ್‌ ಹೊಯ್&#8221;‌ ಎಂದು ಕೂಗಿಹೇಳುವುದು ವಾಡಿಕೆ. ಚರಗ ಬೀರಿದಾಗ ಮಣ್ಣು ಹೆಚ್ಚು ಸಾರವಾಗಿ ಬೆಳೆ ಹುಲುಸಾಗುವುದು ಎಂಬ ನಂಬಿಕೆ ಜನಪದರಲ್ಲಿದೆ. ಆನಂತರ ಚಿತ್ತಾರದ ದೊಡ್ಡ ಬುಟ್ಟಿಯಲ್ಲಿ ಮನೆಯಲ್ಲಿ ಮಾಡಿದ ತಿಂಡಿ, ತಿನಿಸು ಹೊತ್ತುಕೊಂಡು ಹೋಗಿ ಭೂಮ್ಕ್ಯವ್ವಳಿಗೆ ಅಂದರೆ ಭೂಮಿತಾಯಿಗೆ ಬಯಕೆ ತೀರಿಸುವುದೇ ಈ ಹಬ್ಬದ ಆಚರಣೆ. ಈಗಲೂ ಸಂಭ್ರಮದಿಂದ ನಡೆದುಕೊಂಡು ಬಂದಿದೆ. ಹಬ್ಬದ ಊಟ ಮಾಡಿದ ನಂತರ ಕೈಗೆ ಮನೆ ಮಂದಿಯೆಲ್ಲ ಹಂಗು ನೂಲು ಕಟ್ಟಿಕೊಳ್ಳುತ್ತಾರೆ. ಭೂಮ್ಕ್ಯವ್ವಳ ಹಂಗು ತಮ್ಮ ಮೇಲಿದೆ ಎಂಬ ಸಂಕೇತ ಇದಿರಬಹುದು. ಮುಂದೆ ಸುಗ್ಗಿಯ ಸಮಯದಲ್ಲಿ ಭತ್ತ ಕುಯ್ದು ಕಣದಲ್ಲಿ ಬಣವೆ ಹಾಕಿದಾಗ ಈ ಹಂಗು ನೂಲನ್ನು ಬಿಚ್ಚಿ ಬಣವೆ ಮೇಲಿಡುತ್ತಾರೆ. </p>



<p></p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2022/10/Bumannii-18-1024x768.jpg" alt="" class="wp-image-9482" srcset="https://peepalmedia.com/wp-content/uploads/2022/10/Bumannii-18-1024x768.jpg 1024w, https://peepalmedia.com/wp-content/uploads/2022/10/Bumannii-18-300x225.jpg 300w, https://peepalmedia.com/wp-content/uploads/2022/10/Bumannii-18-768x576.jpg 768w, https://peepalmedia.com/wp-content/uploads/2022/10/Bumannii-18-150x113.jpg 150w, https://peepalmedia.com/wp-content/uploads/2022/10/Bumannii-18-696x522.jpg 696w, https://peepalmedia.com/wp-content/uploads/2022/10/Bumannii-18.jpg 1040w" sizes="auto, (max-width: 1024px) 100vw, 1024px" /></figure>



<p></p>



<p class="has-text-align-left" style="font-size:20px">ಕೃಷಿ ಸಮುದಾಯಗಳು ಭೂಮಿಯನ್ನು ತಾಯಿ ಎಂದು ಬಗೆಯುವ ಪರಿಪಾಠ ಇಂದು ನೆನ್ನೆಯದಲ್ಲ. ಸುಮಾರು ಹನ್ನೊಂದು ಸಾವಿರ ವರ್ಶಗಳ ಹಿಂದೆ ಭಾರತದ ಭೂಖಂಡದಲ್ಲಿ ದ್ರಾವಿಡ ಸಮುದಾಯಗಳು ಆರಂಭಿಸಿದ ಕೃಷಿ ಸಂಸ್ಕೃತಿಯಲ್ಲೇ ಈ ತತ್ವದ ಬೇರುಗಳನ್ನು ಕಾಣಬಹುದು. ಪ್ರಾಚೀನ ಕಾಲದಲ್ಲಿ ಜಗತ್ತಿನಲ್ಲೇ ಅತಿ ದೊಡ್ಡ ಕೃಷಿ ನಾಗರಿಕತೆಯಾಗಿದ್ದ  ಸಿಂಧೂ ಬಯಲಿನ ಹರಪ್ಪಾ ನಾಗರಿಕತೆಯಲ್ಲಿ ಈ ಮಾತೃ ಪ್ರಧಾನ ಸಂಸ್ಕೃತಿಯ ಬೇರುಗಳನ್ನು ಗುರುತಿಸಲಾಗಿದೆ. ನಾಡಿನ ಉದ್ದಗಲಕ್ಕೂ ಇರುವ ಗ್ರಾಮ ದೇವತೆಗಳು, ಸ್ತ್ರೀ ಭೂತಗಳು, ತುಳುನಾಡ ಸಿರಿಗಳು ಸಹ ಇಂತಹ ಒಂದು ದ್ರಾವಿಡ ಮಾತೃಪ್ರಧಾನ ಸಂಸ್ಕೃತಿಯ ಭಾಗವೇ ಆಗಿವೆ. </p>



<p style="font-size:20px">&#8211; <strong>ಎನ್‌ ಶಿವಾನಂದ ಕುಗ್ವೆ, ಸಾಮಾಜಿಕ ಚಿಂತಕರು ಸಾಗರ</strong></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/ss.jpg" alt="" class="wp-image-9483" width="127" height="152"/><figcaption><strong>ಎನ್‌ ಶಿವಾನಂದ ಕುಗ್ವೆ</strong></figcaption></figure>



<p class="has-text-align-left" style="font-size:20px"></p>
]]></content:encoded>
					
		
		
			</item>
	</channel>
</rss>
