<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mangalore &#8211; Peepal Media</title>
	<atom:link href="https://peepalmedia.com/tag/mangalore/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 04 Jul 2025 12:19:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>mangalore &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕರ್ನಾಟಕ: ಕೋಮು ಸಂಘರ್ಷದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲೂ ಪಕ್ಷ ರಾಜಕೀಯ</title>
		<link>https://peepalmedia.com/karnataka-party-politics-in-the-compensation-provided-to-victims-of-communal-conflict/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Jul 2025 12:18:32 +0000</pubDate>
				<category><![CDATA[ಅಂಕಣ]]></category>
		<category><![CDATA[communalism]]></category>
		<category><![CDATA[fascism]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[mangaluru]]></category>
		<guid isPermaLink="false">https://peepalmedia.com/?p=62122</guid>

					<description><![CDATA[ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 10 ದಿನಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದ ನಂತರ, 30 ವರ್ಷದ ಕಲಂದರ್ ಶಫಿ ತಮ್ಮ ಊರು ಕೋಲ್ತಮಜಲುಗೆ ಹೋಗುವ ಯೋಚನೆ ಮಾಡುವಾಗ ಮೈ ನಡುಗುತ್ತದೆ ಎಂದು ಹೇಳುತ್ತಾರೆ. ಅಲ್ಲಿ, ಶಫಿ ಜೊತೆ ಬೆಳೆದ ಮತ್ತು ಕೆಲಸ ಮಾಡಿದ ಜನರು ಈಗ ಅವನ ರಕ್ತ ಹೀರಲು ಹಾತೊರೆಯುತ್ತಿದ್ದಾರೆ. ಶಫಿ ಮೇ 27 ರಂದು ಕೋಲ್ತಮಜಲುನಲ್ಲಿ ನಡೆದ ಕೋಮು ಸಂಘರ್ಷದಿಂದ ಬದುಕುಳಿದವರು. ಆ ಘಟನೆಯ ನಂತರ, ಅವನು ತಮ್ಮ ಸಹೋದರಿಯೊಂದಿಗೆ [&#8230;]]]></description>
										<content:encoded><![CDATA[
<pre class="wp-block-code"><code><em><strong>ಕೋಮು ಸಂಘರ್ಷದ ಬಲಿಪಶುಗಳು ಬಡ ಕುಟುಂಬಗಳಿಂದ ಬಂದವರು, ಇವರ ದುಡಿಮೆಯಲ್ಲಿಯೇ ಮನೆಗಳು ನಡೆಯುತ್ತವೆ. ಪರಿಹಾರ ಸಿಗದೆ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ </strong></em></code></pre>



<p>ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ 10 ದಿನಗಳಿಗೂ ಹೆಚ್ಚು ಕಾಲ ಚಿಕಿತ್ಸೆ ಪಡೆದ ನಂತರ, 30 ವರ್ಷದ ಕಲಂದರ್ ಶಫಿ ತಮ್ಮ ಊರು ಕೋಲ್ತಮಜಲುಗೆ ಹೋಗುವ ಯೋಚನೆ ಮಾಡುವಾಗ ಮೈ ನಡುಗುತ್ತದೆ ಎಂದು ಹೇಳುತ್ತಾರೆ.</p>



<p>ಅಲ್ಲಿ, ಶಫಿ ಜೊತೆ ಬೆಳೆದ ಮತ್ತು ಕೆಲಸ ಮಾಡಿದ ಜನರು ಈಗ ಅವನ ರಕ್ತ ಹೀರಲು ಹಾತೊರೆಯುತ್ತಿದ್ದಾರೆ. ಶಫಿ ಮೇ 27 ರಂದು ಕೋಲ್ತಮಜಲುನಲ್ಲಿ ನಡೆದ ಕೋಮು ಸಂಘರ್ಷದಿಂದ ಬದುಕುಳಿದವರು. ಆ ಘಟನೆಯ ನಂತರ, ಅವನು ತಮ್ಮ ಸಹೋದರಿಯೊಂದಿಗೆ 20 ಕಿಲೋಮೀಟರ್ ದೂರದಲ್ಲಿರುವ ಅಡ್ಡೂರ್ ಎಂಬ ಮತ್ತೊಂದು ಊರಿಗೆ ಹೋಗಿದ್ದಾರೆ.</p>



<p>ತಮ್ಮ ಕಣ್ಣೆದುರೇ ತಮ್ಮ ಬಾಲ್ಯದ ಗೆಳೆಯ ಅಬ್ದುಲ್ ರೆಹಮಾನ್ ಅವರನ್ನು ಬಾಲ್ಯದಿಂದಲೂ ಚಿರಪರಿಚಿತರಾಗಿದ್ದ ವ್ಯಕ್ತಿಗಳು ಕಡಿದು ಕೊಂದರು ಎಂದು ಹೇಳುತ್ತಾರೆ. &#8220;ಈ ಘಟನೆಯ ದೃಶ್ಯ ನನ್ನ ಕಣ್ಣ ಮುಂದೆ ಆಗಾಗ ಬರುತ್ತದೆ,&#8221; ಎಂದು ಅವರು ಹೇಳುತ್ತಾರೆ. &#8220;ದೀಪಕ್ (ಪೂಜಾರಿ) ನಮ್ಮ ಮೇಲೆ ದಾಳಿ ಮಾಡುತ್ತಾನೆ ಎಂಬುದನ್ನು ನಂಬಲು ನಂಗೆ ಈಗಲೂ ಆಗುತ್ತಿಲ್ಲ. ಅವರು ಮತ್ತು ನಾನು ಹಲವು ವರ್ಷಗಳಿಂದ ಮೇಸನ್‌ಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದೇವೆ&#8221; ಎಂದು ಶಫಿ ಹೇಳುತ್ತಾರೆ. ಅಬ್ದುಲ್ ರೆಹಮಾನ್ ಕೋಲ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದರು ಮತ್ತು ನಿರ್ಮಾಣ ಕಾರ್ಯಕ್ಕಾಗಿ ಕಚ್ಚಾ ವಸ್ತುಗಳನ್ನು ಸಾಗಿಸುವ ಪಿಕಪ್ ಟ್ರಕ್ ಅನ್ನು ಓಡಿಸುತ್ತಿದ್ದರು.  </p>



<p>ಶಫಿ ಮತ್ತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮೇ 27 ರಂದು ದೀಪಕ್ ಪೂಜಾರಿ ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡಲು ರೆಹಮಾನ್‌ಗೆ ಫೋನ್ ಮಾಡಿದ್ದರು. ರೆಹಮಾನ್ ಶಫಿಯನ್ನು‌ ಕೆಲಸಕ್ಕೆ ಸೇರಿಕೊಳ್ಳಲು ಕೇಳಿಕೊಂಡಿದ್ದರು, ಮತ್ತು ಇಬ್ಬರೂ ಮರಳಿನೊಂದಿಗೆ ಕೆಲಸದ ಸ್ಥಳಕ್ಕೆ ಹೋದರು. &#8220;ನಾವು ದಾರಿಯಲ್ಲಿ ದೀಪಕ್‌ನ ತಾಯಿಯನ್ನು ನೋಡಿದೆವು ಮತ್ತು ಅವರನ್ನು ಮನೆ ತನಕ ಬಿಡಲು ಮುಂದಾದೆವು&#8221; ಎಂದು ಶಫಿ ಹೇಳುತ್ತಾರೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="465" height="541" src="https://peepalmedia.com/wp-content/uploads/2025/07/image-6.png" alt="" class="wp-image-62134" style="width:338px;height:auto" srcset="https://peepalmedia.com/wp-content/uploads/2025/07/image-6.png 465w, https://peepalmedia.com/wp-content/uploads/2025/07/image-6-258x300.png 258w, https://peepalmedia.com/wp-content/uploads/2025/07/image-6-150x175.png 150w, https://peepalmedia.com/wp-content/uploads/2025/07/image-6-300x349.png 300w" sizes="(max-width: 465px) 100vw, 465px" /><figcaption class="wp-element-caption"><strong>ಮೇ 27 ರಂದು ಕೋಲ್ತಮಜಲು ಗ್ರಾಮದಲ್ಲಿ ಹತ್ಯೆಗೀಡಾದ ಅಬ್ದುಲ್ ರೆಹಮಾನ್ </strong></figcaption></figure></div>


<p>ದೀಪಕ್ ಪೂಜಾರಿ ಇರುವ ಸ್ಥಳವನ್ನು ತಲುಪಿದಾಗ, ಅಲ್ಲಿ ಕೆಲವರು ಗುಂಪುಗೂಡಿರುವುದನ್ನು ಅವರಿಬ್ಬರೂ ನೋಡಿದರು. ಇವರಿಗೆ ಅವರು ತಮ್ಮ ಮೇಲೆ ದಾಳಿ ಮಾಡುತ್ತಾರೆ ಎಂಬುದು ಗೊತ್ತಾಯಿತು ಸಾಬೀತಾಯಿತು. ಅವರು ರೆಹಮಾನ್ ಜೊತೆ ಜಗಳವಾಡಿದರು ಮತ್ತು ಕ್ಷಣಮಾತ್ರದಲ್ಲೇ ಅವರನ್ನು ಕಡಿದು ಕೊಂದರು. ಶಫಿಯ ತೋಳು, ಎದೆ, ಹೊಟ್ಟೆ ಮತ್ತು ಬೆನ್ನಿನ ಕೆಳಭಾಗದಲ್ಲಿ ಕತ್ತಿಯಿಂದ ಕಡಿದು ಗಾಯವುಂಟು ಮಾಡಿದರು. </p>



<p>&#8220;ಮುಂದೆ ಅವರು ನನ್ನನ್ನು ಕೊಲ್ಲಲು ಬರುತ್ತಾರೆ ಎಂಬುದು ನನಗೆ ಗೊತ್ತಾಯಿತು. ಆ ಗಾಯಗೊಂಡ ಸ್ಥಿತಿಯಲ್ಲಿಯೇ ನಾನು ಮೂರು ಕಿಲೋಮೀಟರ್‌ಗಳಿಗಿಂತ ಹೆಚ್ಚು ಓಡಿದೆ&#8221; ಎಂದು ಅವರು ಹೇಳುತ್ತಾರೆ. ಪ್ರಕರಣದ ಪ್ರಮುಖ ಆರೋಪಿ ದೀಪಕ್ ಪೂಜಾರಿ, ಬಡ ಕಾರ್ಮಿಕ ಕುಟುಂಬದಿಂದ ಬಂದವರಾಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಪೂಜಾರಿ ಮತ್ತು ಇತರ ಆರೋಪಿಗಳು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರಾಗಿದ್ದು, ಶಫಿ ಪ್ರಕಾರ, ಹಿಂದುತ್ವವಾದಿ ಬಜರಂಗ ದಳದೊಂದಿಗೆ ಗುರುತಿಸಿಕೊಂಡಿದ್ದಾರೆ.</p>



<p>ತೋಳುಗಳಿಗೆ ರಾಡ್ ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿರುವ ಶಫಿ, ತನ್ನ ಕುಟುಂಬವನ್ನು ಸಾಕಲು ವಾಪಾಸ್ ಕೆಲಸಕ್ಕೆ ಹೋಗಲು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ತನ್ನ ಊರಿಗೆ ಮರಳಿ ಹೋಗುವ ಬಗ್ಗೆ ಅವರಿಗೆ ಇನ್ನು ವಿಶ್ವಾಸವಿಲ್ಲ.</p>



<p>ಶಫಿ ಈಗ ವಾಸಿಸುತ್ತಿರುವ ಅಡ್ಡೂರ್ ಗ್ರಾಮದಲ್ಲಿ, ಹೆಚ್ಚಿನವು ಮುಸ್ಲಿಮರ ಮನೆಗಳಾಗಿರುವುದರಿಂದ &#8220;ಸೇಫ್‌&#8221; ಎಂದು ಅವರು ಹೇಳುತ್ತಾರೆ. &#8220;ಕೋಲ್ತಮಜಲುವಿನಲ್ಲಿ, ನಾವು ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿ ಇದ್ದೇವೆ, ನನ್ನ ಮನೆ ಹಿಂದೂಗಳ ಮನೆಗಳಿಂದ ಸುತ್ತುವರೆದಿದೆ&#8221; ಎಂದು ಅವರು ಹೇಳುತ್ತಾರೆ.</p>


<div class="wp-block-image">
<figure class="alignright size-full is-resized"><img decoding="async" width="768" height="1024" src="https://peepalmedia.com/wp-content/uploads/2025/07/image-7.png" alt="" class="wp-image-62135" style="width:346px;height:auto" srcset="https://peepalmedia.com/wp-content/uploads/2025/07/image-7.png 768w, https://peepalmedia.com/wp-content/uploads/2025/07/image-7-225x300.png 225w, https://peepalmedia.com/wp-content/uploads/2025/07/image-7-150x200.png 150w, https://peepalmedia.com/wp-content/uploads/2025/07/image-7-300x400.png 300w, https://peepalmedia.com/wp-content/uploads/2025/07/image-7-696x928.png 696w" sizes="(max-width: 768px) 100vw, 768px" /><figcaption class="wp-element-caption"><strong>ದೇಹದ ತುಂಬಾ ಇರಿತದ ಗಾಯಗಳೊಂದಿಗೆ ಕಲಂದರ್ ಶಫಿ. ಫೋಟೋ: ಸುಕನ್ಯಾ ಶಾಂತ</strong></figcaption></figure></div>


<p>ಬಲಿಪಶುಗಳು ತಮ್ಮ ಊರು ಬಿಟ್ಟು ಹೋಗುವುದು ವಿಶೇಷ ಸಂಗತಿಯೇನಲ್ಲ, ಗಲಭೆಗಳು, ಕೋಮು ಹಿಂಸಾಚಾರ ಮತ್ತು ಜಾತಿ ಆಧಾರಿತ ದಾಳಿಗಳ ನಂತರ ಇದೇ ರೀತಿಯ ಪರಿಸ್ಥಿತಿ ಕಂಡುಬರುತ್ತದೆ.</p>



<p>ಈ ಘಟನೆ ಆದ ಮೇಲೆ ಶಫಿಗೆ ಮಾಡಲು ಯಾವುದೇ ಕೆಲಸವಿಲ್ಲ, ವಾಸಿಸಲು ಮನೆಯಿಲ್ಲ, ಮತ್ತು ರಾಜ್ಯ ಸರ್ಕಾರದಿಂದ ಯಾವುದೇ ಬೆಂಬಲವೂ ಇಲ್ಲ. ದೀಪಕ್ ಪೂಜಾರಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದರೂ, ಪೊಲೀಸರು ಅಥವಾ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ಯಾವುದೇ ಸಂವಹನ ನಡೆದಿಲ್ಲ ಎಂದು ಅವರು ಹೇಳುತ್ತಾರೆ. &#8220;ನನ್ನ ಕುಟುಂಬ ಪರಿಹಾರಕ್ಕಾಗಿ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ,&#8221; ಎಂದು ಅವರು ಹೇಳುತ್ತಾರೆ.</p>



<p><strong>ಸರ್ಕಾರ ಮತ್ತು ಆಡಳಿತ ಪಕ್ಷದ ವೈಫಲ್ಯ</strong></p>



<p>ಏಪ್ರಿಲ್ ಮತ್ತು ಮೇ ನಡುವೆ, ಮೂರು ಪ್ರತ್ಯೇಕ ದ್ವೇಷ ಅಪರಾಧ ಘಟನೆಗಳಲ್ಲಿ ಮೂವರು ಕೊಲೆಯಾಗಿ, ಶಫಿ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದರು. ಕೊಲ್ಲಲ್ಪಟ್ಟವರಲ್ಲಿ ಮಂಗಳೂರು ನಗರದಲ್ಲಿ ಚಿಂದಿ ಆಯುವವನಾಗಿ ಕೆಲಸ ಮಾಡುತ್ತಿದ್ದ ಕೇರಳದ ವಯನಾಡ್ ಪ್ರದೇಶದ ಮಾನಸಿಕ ಅಸ್ವಸ್ಥ ಮುಸ್ಲಿಂ ವ್ಯಕ್ತಿ ಮೊಹಮ್ಮದ್ ಅಶ್ರಫ್, 2022 ರ ಮೊಹಮ್ಮದ್ ಫಾಜಿಲ್ ಹತ್ಯೆ ಸೇರಿದಂತೆ ಹಲವಾರು ದ್ವೇಷ ಅಪರಾಧ ಪ್ರಕರಣಗಳನ್ನು ಹೊಂದಿರುವ ಹಿಂದುತ್ವ ಕಾರ್ಯಕರ್ತ ಸುಹಾಸ್ ಶೆಟ್ಟಿ ಮತ್ತು ಕೋಲ್ತಮಜಲು ಗ್ರಾಮದಲ್ಲಿ ಕೊಲ್ಲಲ್ಪಟ್ಟ ಅಬ್ದುಲ್ ರೆಹಮಾನ್ ಸೇರಿದ್ದಾರೆ. </p>



<p>ಈ ಕೊಲೆಗಳು ಹಿಂಸಾಚಾರದ ಸ್ಪಷ್ಟ ಪ್ರಕರಣಗಳಾಗಿದ್ದರೂ, ಕಾಂಗ್ರೆಸ್ ಸರ್ಕಾರವು ಯಾವುದೇ ಕೊಲೆಗಳಿಗೆ ಪರಿಹಾರವನ್ನು ಘೋಷಿಸಿಲ್ಲ. ಅಬ್ದುಲ್ ರೆಹಮಾನ್ ಅವರ ಸಹೋದರ ಮೊಹಮ್ಮದ್ ಹನೀಫ್, ರಾಜ್ಯ ಸರ್ಕಾರವು ಕುಟುಂಬವನ್ನು ಭೇಟಿ ಮಾಡಲು ಯಾವುದೇ ಪ್ರತಿನಿಧಿಯನ್ನು ಕಳುಹಿಸಿಲ್ಲ ಎಂದು ಹೇಳುತ್ತಾರೆ. &#8220;ಪೊಲೀಸರು ಹೇಳಿಕೆಗಳನ್ನು ದಾಖಲಿಸಲು ಕೆಲವು ಬಾರಿ ಬಂದಿದ್ದಾರೆ, ಅಷ್ಟೇ. ಕುಟುಂಬ ಹೇಗೆ ಬದುಕುತ್ತಿದೆ ಎಂದು ನೋಡಲು ಯಾವ ಶಾಸಕನಾಗಲೀ, ಯಾವುದೇ ಜಿಲ್ಲಾಧಿಕಾರಿಯಾಗಲೀ ಬಂದಿಲ್ಲ&#8221; ಎಂದು ಪಿಕ್-ಅಪ್ ವ್ಯಾನ್‌ನ ಚಾಲಕನಾಗಿಯೂ ಕೆಲಸ ಮಾಡುವ ಹನೀಫ್ ಹೇಳುತ್ತಾರೆ.</p>



<p>ಘಟನೆಯ ಬಗ್ಗೆ ಕಾಂಗ್ರೆಸ್ ತಕ್ಷಣ ಕ್ರಮ ಕೈಗೊಳ್ಳದಿರುವುದು ಮುಸ್ಲಿಂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ನಂತರ, ಮಾಜಿ ಮೇಯರ್ ಕೆ. ಅಶ್ರಫ್ ಸೇರಿದಂತೆ ಮುಸ್ಲಿಂ ಸಮುದಾಯದ ಸುಮಾರು 200 ಕಾಂಗ್ರೆಸ್ ಕಾರ್ಯಕರ್ತರು ಸಾಮೂಹಿಕ ಪ್ರತಿಭಟನೆಯ ಸಂಕೇತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. &#8220;ಈ ಪ್ರದೇಶದ ಮತ್ತು ಇಡೀ ರಾಜ್ಯದ ಮುಸ್ಲಿಮರು ಸರ್ವಾನುಮತದಿಂದ ಪಕ್ಷಕ್ಕೆ ಮತ ಹಾಕಿದ ಕಾರಣ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಲಪಂಥೀಯ ಶಕ್ತಿಗಳು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರದಂತೆ ಮತ್ತು ಹೆಚ್ಚಿನ ಸಮಸ್ಯೆಗಳು ಉಂಟಾಗದಂತೆ ಮಾಡಲು ನಮ್ಮ ಸಮುದಾಯವು ತೆಗೆದುಕೊಂಡ ಪ್ರಜ್ಞಾಪೂರ್ವಕ ನಿರ್ಧಾರ ಇದು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ಏನಾಗುತ್ತಿದೆ ಎಂಬುದನ್ನು ನೀವೇ ನೋಡಿ?&#8221; ಎಂದು ಅಶ್ರಫ್ ಹೇಳುತ್ತಾರೆ.</p>



<p><strong>ಕೋಮು ಸಂಘರ್ಷಗಳ ಇತಿಹಾಸ</strong></p>



<p>ದಕ್ಷಿಣ ಕನ್ನಡ ಪ್ರದೇಶವು ಯಾವಾಗಲೂ ಕೋಮು ಉದ್ವಿಗ್ನತೆಯಿಂದ ಕೂಡಿರುತ್ತದೆ. ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ದ್ವೇಷ ಅಪರಾಧಗಳ ಪ್ರಕರಣಗಳನ್ನು ನಿಕಟವಾಗಿ ದಾಖಲಿಸುತ್ತಿರುವ ಕಾರ್ಯಕರ್ತ ಶಬೀರ್ ಅಹಮದ್, ಅಶ್ರಫ್ ಹೇಳಿದ್ದನ್ನೇ ಪುನರುಚ್ಚರಿಸುತ್ತಾರೆ. &#8220;ಅಸಮಾಧಾನವು ಪಕ್ಷದೊಳಗೆ ಮಾತ್ರವಲ್ಲ, ಸಮುದಾಯದಲ್ಲೂ ಇದೆ&#8221; ಎಂದು ಅವರು ಹೇಳುತ್ತಾರೆ.</p>



<p>ಇತ್ತೀಚೆಗೆ ಮೊಹಮ್ಮದ್ ಅಶ್ರಫ್ ಹತ್ಯೆಯ ಬಗ್ಗೆ ವಿವರವಾದ ವರದಿಯನ್ನು ಪ್ರಕಟಿಸಿದ ಸತ್ಯಶೋಧನಾ ತಂಡದಲ್ಲಿ ಶಬೀರ್ ಕೂಡ ಇದ್ದರು. ವಾಮಂಜೂರು ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುಡುಪು ಎಂಬ ಗ್ರಾಮದಲ್ಲಿ ಕೇರಳದ 30 ವರ್ಷದ ಅಶ್ರಫ್ ಅವರನ್ನು 30 ಕ್ಕೂ ಹೆಚ್ಚು ಜನರ ಗುಂಪೊಂದು ಹೊಡೆದು ಕೊಂದು ಹಾಕಿತು. ಏಪ್ರಿಲ್ 27 ರಂದು ಅವರು ಸಾವನ್ನಪ್ಪಿದ ಕೂಡಲೇ, ಮಾಧ್ಯಮಗಳು ಅಶ್ರಫ್ &#8220;ಪಾಕಿಸ್ತಾನ ಜಿಂದಾಬಾದ್&#8221; ಘೋಷಣೆ ಕೂಗಿದ್ದಾನೆ ಎಂದು ವರದಿ ಮಾಡಿದವು, ಹೀಗೆ ಗುಂಪು ಹತ್ಯೆಯನ್ನು ಸಮರ್ಥಿಸಲು ಪ್ರಯತ್ನಿಸಿದರು. </p>



<p>ಯಾವುದೇ ಪರಿಶೀಲನೆ ಇಲ್ಲದೆ ಮಾಧ್ಯಮಗಳು ಮಾಡಿದ ವರದಿಗಳನ್ನು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸಹ ಒಪ್ಪಿಕೊಂಡರು. &#8220;&#8216;ಪಾಕಿಸ್ತಾನ ಜಿಂದಾಬಾದ್&#8217; ಘೋಷಣೆ ಕೂಗಿದ್ದರೆ, ಅದು ತಪ್ಪು, ಅದು ಯಾರೇ ಆಗಿರಲಿ. ವಿಚಾರಣೆ ಇನ್ನೂ ನಡೆಯುತ್ತಿದೆ, ಪ್ರಕರಣ ದಾಖಲಾಗಿದೆ. ವರದಿ ಬರಲಿ, ಯಾರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ಸ್ಪಷ್ಟವಾಗುತ್ತದೆ. ಯಾರಾದರೂ ಪಾಕಿಸ್ತಾನದ ಪರವಾಗಿ ಮಾತನಾಡಿದರೆ ಅದು ತಪ್ಪು, ಅದು ದೇಶದ್ರೋಹ,&#8221; ಎಂದು ಘಟನೆಯ ನಂತರ ಸಿದ್ದರಾಮಯ್ಯ ಹೇಳಿದ್ದರು. </p>



<p>ಹಾಗಿದ್ದೂ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಅಸೋಸಿಯೇಷನ್ ​​ಆಫ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ (ಎಪಿಸಿಆರ್) ಮತ್ತು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ​​ಫಾರ್ ಜಸ್ಟೀಸ್ (ಎಐಎಲ್‌ಎಜೆ) ಕರ್ನಾಟಕ ಘಟಕ ನಡೆಸಿದ ಸತ್ಯಶೋಧನಾ ಕಾರ್ಯದಲ್ಲಿ, ಅಂತಹ ಯಾವುದೇ ಘೋಷಣೆಗಳನ್ನು ಕೂಗಿರುವುದು ಎಂದಿಗೂ ನಡೆದಿಲ್ಲ ಎಂಬುದು ಕಂಡುಬಂದಿದೆ. ಕಾಂಗ್ರೆಸ್ ನಾಯಕರು ಮಾಧ್ಯಮಗಳ ಪರಿಶೀಲಿಸದ ಹೇಳಿಕೆಗಳನ್ನು ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಮತ್ತೆ ಮತ್ತೆ ಹೇಳುತ್ತಲೇ ಬಂದರು.</p>



<p>ವಾಸ್ತವದಲ್ಲಿ, ಆರೋಪಿಗಳೆಲ್ಲರೂ ಭಟ್ರ ಕಲ್ಲುರ್ಟಿ ದೇವಸ್ಥಾನದ ಪಕ್ಕದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ, ಅಶ್ರಫ್ ದೇವಸ್ಥಾನದ ಹತ್ತಿರ ನೀರು ಕುಡಿಯುತ್ತಿರುವುದನ್ನು ನೋಡಿ ಯಾವುದೇ ಪ್ರಚೋದನೆಯಿಲ್ಲದೆ ಅವರ ಮೇಲೆ ಹಲ್ಲೆ ನಡೆಸಿದರು. ಮಂಗಳೂರು ಪೊಲೀಸ್ ಈ ಪ್ರಕರಣವನ್ನು ಮೊದಲು &#8220;ಅಕಾಲಿಕ ಮರಣ ವರದಿ&#8221; ದಾಖಲಿಸಿದ್ದರು ಮತ್ತು ಕೆಲವು ದಿನಗಳ ನಂತರ ಒತ್ತಡದ ಮೇರೆಗೆ ನಿರ್ದಿಷ್ಟ ಎಫ್‌ಐಆರ್ ದಾಖಲಿಸಲಾಯಿತು. ಘಟನೆಯ ನಂತರ, ಮಂಗಳೂರು ಪೊಲೀಸ್ ಆಯುಕ್ತ <a href="https://www.thehindu.com/news/cities/Mangalore/former-mangaluru-police-commissioner-ex-sp-of-dakshina-kannada-failed-to-take-effective-action-against-hate-mongers-says-speaker-u-t-khader/article69686047.ece">ಅನುಪಮ್ ಅಗರ್ವಾಲ್ ಅವರನ್ನು</a> ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ವರ್ಗಾವಣೆ ಮಾಡಲಾಯಿತು.</p>



<p>&#8220;ಇವೆಲ್ಲವೂ ಬಡ ಕುಟುಂಬಗಳು, ಈ ಗಂಡಸರು ದುಡಿದು ತಂದ ಆದಾಯದ ಮೇಲೆ ಮನೆ ನಡೆಯುತ್ತದೆ&#8221; ಎಂದು ಶಬೀರ್ ಹೇಳುತ್ತಾರೆ.</p>



<p><strong>ಪರಿಹಾರ ರಾಜಕೀಯ</strong></p>



<p>ಮೂರು ವರ್ಷಗಳ ಹಿಂದೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಈ ಪ್ರದೇಶವು ಇದೇ ರೀತಿಯ ಗುಂಪು ಹತ್ಯೆಗಳಿಗೆ ಸಾಕ್ಷಿಯಾಗಿತ್ತು. 2022 ರಲ್ಲಿ ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಕೊಲೆ ಮಾಡಿದ ಬಿಜೆಪಿ ಯುವ ಮೋರ್ಚಾ ಸದಸ್ಯ <a href="https://www.thehindu.com/news/cities/bangalore/nia-files-chargesheet-against-four-more-in-praveen-nettaru-murder-case/article69452817.ece">ಪ್ರವೀಣ್ ನೇಟ್ಟಾರು</a> ಅವರ ಕುಟುಂಬಕ್ಕೆ ಮಾತ್ರ ಬಿಜೆಪಿ ಪರಿಹಾರ ನೀಡಿತ್ತು. ಉಳಿದವರು ಪರಿಹಾರದ ಬೇಡಿಕೆಗಳ ಬೇಡಿಕೆ ಇಟ್ಟರೂ ರಾಜ್ಯ ಬಿಜೆಪಿ ಸರ್ಕಾರ ನಿರ್ಲಕ್ಷಿಸಿತ್ತು ಮತ್ತು ಮೇ 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೇ ಕೊಲ್ಲಲ್ಪಟ್ಟವರ ಕುಟುಂಬಗಳಿಗೆ <a href="https://www.thehindu.com/news/cities/Mangalore/karnataka-government-sanctions-25-lakh-compensation-each-to-family-of-4-victims-of-communal-murders-in-dakshina-kannada-district/article66979231.ece">ತಲಾ 25 ಲಕ್ಷ ರೂ. ಪರಿಹಾರವನ್ನು</a> ನೀಡಲಾಯಿತು. ಅವರಲ್ಲಿ ಮೂವರು ಮುಸ್ಲಿಂ ಯುವಕರು ಮತ್ತು ಒಬ್ಬರು ಬಜರಂಗದಳದೊಂದಿಗೆ ಸಂಬಂಧ ಹೊಂದಿರುವ ಹಿಂದೂ ವ್ಯಕ್ತಿ.</p>



<p><a href="https://www.scobserver.in/reports/tehseen-poonawalla-union-of-india-tushar-gandhi-plain-english-summary-of-judgment/"><em>ತೆಹ್ಸೀನ್ </em><em>ಪೂನಾವಾಲಾ</em> ಪ್ರಕರಣದಲ್ಲಿ</a> ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪರಿಣಾಮವಾಗಿ ಗುಂಪು ಹಿಂಸಾಚಾರ ಮತ್ತು ದ್ವೇಷ ಅಪರಾಧ ಪ್ರಕರಣಗಳಲ್ಲಿ ಪರಿಹಾರಗಳು ಸಿಗುವಂತಾಗಿದೆ. ಪ್ರತಿಯೊಂದು ರಾಜ್ಯವೂ ಗುಂಪು ಹಿಂಸಾಚಾರದ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ, ಬಲಿಪಶುಗಳ ಕುಟುಂಬಗಳಿಗೆ ಪರಿಹಾರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.</p>



<p>ಬಜರಂಗದಳ ಸದಸ್ಯ ಸುಹಾಸ್ ಶೆಟ್ಟಿ ಕೂಡ ಕೋಮು ದ್ವೇಷ ಅಪರಾಧದಲ್ಲಿ ಕೊಲ್ಲಲ್ಪಟ್ಟ ಕಾರಣ, ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಲು ಹಿಂಜರಿಯುತ್ತಿದೆ ಎಂದು ಹಿಂದುತ್ವ ಕಾರ್ಯಕರ್ತರು ಆರೋಪಿಸಿದ್ದಾರೆ. ಬಿಜೆಪಿ ತನ್ನ ಪಕ್ಷದ ಪರವಾಗಿ ಶೆಟ್ಟಿ ಕುಟುಂಬಕ್ಕೆ ಈಗಾಗಲೇ 25 ಲಕ್ಷ ರುಪಾಯಿಗಳನ್ನು ನೀಡಿದೆ ಮತ್ತು ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾಗಿದೆ. ಮುಸ್ಲಿಂ ಹುಡುಗರ ಹತ್ಯೆಗಳನ್ನು ರಾಜ್ಯ ಪೊಲೀಸರು ನಿರ್ವಹಿಸುತ್ತಿದ್ದಾರೆ.  </p>



<p>&#8220;ಗುಂಪು ಹಿಂಸಾಚಾರದ ಆರೋಪ ಹೊತ್ತಿರುವ ಹಿಂದುತ್ವವಾದಿ ವ್ಯಕ್ತಿಗೆ ಪರಿಹಾರ ನೀಡುವುದು ಅವರಿಗೆ (ಕಾಂಗ್ರೆಸ್) ಬೇಕಾಗಿಲ್ಲ&#8221; ಎಂದು ಹಿರಿಯ ಕಾರ್ಯಕರ್ತರೊಬ್ಬರು ಹೇಳಿದರು. ಆದರೆ ಪಕ್ಷ ರಾಜಕಾರಣದ ನಡುವೆ, ಬಲಿಪಶುಗಳ ಕುಟುಂಬಗಳು ಬಳಲುತ್ತಿವೆ ಎಂದು ಶಬೀರ್ ಹೇಳುತ್ತಾರೆ.</p>



<p>ಆರೋಪಗಳ ಕುರಿತು ಹೇಳಿಕೆಗಾಗಿ ರಾಜ್ಯ ವಿಧಾನಸಭಾ ಸ್ಪೀಕರ್ ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್ ಅವರಿಗೆ ಹಲವಾರು ಕರೆಗಳು ಮತ್ತು ಸಂದೇಶಗಳನ್ನು ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಖಾದರ್ ಪ್ರತಿಕ್ರಿಯಿಸಿದರೆ ಸುದ್ದಿಯನ್ನು ನವೀಕರಿಸಲಾಗುತ್ತದೆ.</p>



<p><strong>ವರದಿ:</strong> ಸುಕನ್ಯಾ ಶಾಂತಾ</p>



<p>(ದಿ ವೈರ್‌ನ <a href="https://thewire.in/rights/dakshina-kannada-karnataka-communal-hate-crime-compensation">In Karnataka, Compensation for Victims of Communal Hate Crimes Is Beholden to Party Politics</a> ವರದಿಯ ಕನ್ನಡಾನುವಾದ)</p>



<p></p>
]]></content:encoded>
					
		
		
			</item>
		<item>
		<title>ರಹಿಮಾನ್ ಕೊಲೆಯ ಕತೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಹೆಮ್ಮೆಯ ತುಳುನಾಡಿಗೆ ಈ ಗತಿ ತಂದಿಟ್ಟವರು ಯಾರು ?</title>
		<link>https://peepalmedia.com/you-will-be-shocked-to-hear-the-story-of-rahimans-murder-who-brought-this-fate-to-the-proud-tulunadi/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 31 May 2025 09:29:07 +0000</pubDate>
				<category><![CDATA[ಕೋಮುವಾದ]]></category>
		<category><![CDATA[communalism]]></category>
		<category><![CDATA[Dakshina kananda]]></category>
		<category><![CDATA[fascism]]></category>
		<category><![CDATA[hindu]]></category>
		<category><![CDATA[hindutva]]></category>
		<category><![CDATA[koltamajal]]></category>
		<category><![CDATA[mangalore]]></category>
		<category><![CDATA[muslims]]></category>
		<category><![CDATA[rahim]]></category>
		<guid isPermaLink="false">https://peepalmedia.com/?p=60130</guid>

					<description><![CDATA[ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು. ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ [&#8230;]]]></description>
										<content:encoded><![CDATA[
<p>ಸಿಪಿಐಎಂ ದ.ಕ. ಜಿಲ್ಲಾ ಸಮಿತಿಯ ನಿಯೋಗ ಇತ್ತೀಚೆಗೆ ಮತಾಂಧರಿಂದ ಹತ್ಯೆಗೀಡಾದ ಕೊಳ್ತಮಜಲು ಅಬ್ದುಲ್ ರೆಹಮಾನ್ ಮನೆಗೆ ಇಂದು ಭೇಟಿ ನೀಡಿತು. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿತು.</p>



<p>ಪೊಳಲಿ ದೇವಸ್ಥಾನದಿಂದ ಸುಮಾರು ನಾಲ್ಕು ಕಿ ಮೀ ದೂರದ ಕೊಳತ್ತಮಜಲು ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಅಬ್ದುಲ್ ರೆಹಮಾನ್ ಮನೆಗೆ ಭೇಟಿ ನೀಡಿದಾಗ, ಮನೆಯ ಮುಂಭಾಗ ಸಾವಿನ ಮೂರನೆ ದಿನದ ಪ್ರಾರ್ಥನೆಯ ಅಡುಗೆಯ ಸಿದ್ದತೆ ನಡೆಯುತ್ತಿತ್ತು. ನಿರ್ಮಾಣ ಹಂತದ ರೆಹಮಾನ್ ಮನೆಯ ಮುಂಭಾಗ ಪ್ರಾರ್ಥನಾ ಕೂಟಕ್ಕಾಗಿ ಚಪ್ಪರ ಹಾಕಲಾಗಿತ್ತು. ಅಜ್ಜನ (ತಾಯಿಯ ತಂದೆ) ಕೈಯಲ್ಲಿದ್ದ ರೆಹಮಾನ್ ನ ಎರಡು ಪುಟಾಣಿ ಮಕ್ಕಳು (ಮೂರು ವರ್ಷ ಹಾಗೂ ಎಂಟು ತಿಂಗಳಿನ) ಮನೆಯ ಮುಂಭಾಗ ದೊಡ್ಡ, ದೊಡ್ಡ ಪಾತ್ರೆಗಳಲ್ಲಿ ನಡೆಯುತ್ತಿದ್ದ ಅಡುಗೆ ತಯಾರಿ, ಸಂಬಂಧಿಗಳ ಓಡಾಟವನ್ನು ಅಮಾಯಕ ಕಣ್ಣುಗಳಲ್ಲಿ ನೋಡುತ್ತಿದ್ದರು. ಮನೆಯ ಒಳಗಡೆ ಗಂಡನನ್ನು ಕಳೆದುಕೊಂಡ ಯುವ ವಿಧವೆಯ, ಮಗನನ್ನು ಕಳೆದುಕೊಂಡ ತಾಯಿಯ ಮೂಕ ರೋಧನೆ ನಮ್ಮ ಹೃದಯಕ್ಕೆ ತಟ್ಟುತ್ತಿತ್ತು.</p>



<p>ನಾವು ಮನೆಯ ಅಂಗಳ ತಲುಪಿದ ಸುದ್ದಿ ತಿಳಿದು ಊರಿನ ಯುವಕರು ನಮ್ಮ ಸುತ್ತ ಜಮಾಯಿಸಿದರು. ರೆಹಮಾನ್ ತಂದೆ ಸ್ವರ ಹೊರಡದ ಗಂಟಲಿನಲ್ಲಿ ತಮ್ಮ ನೋವನ್ನು ಕಣ್ಣೀರು ಸುರಿಸುತ್ತಲೆ ಒಂದಿಷ್ಟು ಹಂಚಿಕೊಂಡರು. ರೆಹಮಾನ್ ನ ಆತ್ಮೀಯ ಗೆಳಯರು, ಒಡನಾಡಿಗಳು ತಮ್ಮ ಮನಸ್ಸಿಗಾದ ಘಾಸಿಯನ್ನು, ಒಳಗಡೆ ಕಟ್ಟಿಕೊಂಡಿರುವ ನೋವನ್ನು, ಜೊತೆಗೆ ಓಡಾಡಿದವರೆ ಕತ್ತರಿಸಿ ಕೊಂದದ್ದನ್ನು ಅರಗಿಸಿಕೊಳ್ಳಲು ಅಸಾಧ್ಯವಾದ ಭಾವದೊಂದಿಗೆ ನಮ್ಮೊಂದಿಗೆ ತಡೆ ರಹಿತವಾಗಿ ತೆರೆದಿಟ್ಟರು.</p>



<p>ಅಲ್ಲಿದ್ದ ಸ್ಥಳೀಯರು ರೆಹಮಾನ್ ಕೊಲೆಯ ದಾರುಣತೆಯನ್ನು, ಅದರ ರಾಜಕಾರಣವನ್ನು, ಕೊಲೆಗಡುಕರ ಮನಸ್ಥಿತಿಯನ್ನು ವಿವರಿಸುತ್ತಿದ್ದರೆ, ಕಳೆದ ಮೂರು ದಶಕದಲ್ಲಿ ಕರಾವಳಿಯ ಕೋಮು ಸಂಘರ್ಷ, ಅದರ ರಾಜಕಾರಣವನ್ನು ಹತ್ತಿರದಿಂದ ಕಂಡಿರುವ ನಾವೇ ರೆಹಮಾನ್ ಕೊಲೆಯ ಭಯಾನಕತೆಗೆ ಬೆಚ್ಚಿಬಿದ್ದೆವು. ಅವರ ವಿವರಣೆ ಹೀಗಿದೆ.</p>



<p>ಅಬ್ದುಲ್ ರೆಹಮಾನ್ ಯಾರೊಂದಿಗೂ ಜಗಳಗಳಿಲ್ಲದ ಸ್ನೇಹಮಯಿ ವ್ಯಕ್ತಿತ್ವದ ಯುವಕ. ತನ್ನ ಶ್ರಮದ ದುಡಿಮೆಯಿಂದ ಮೂರು ಪಿಕಪ್ ಗಳನ್ನು ಖರೀದಿಸಿದ್ದಾನೆ. ಮರಳು, ಕಟ್ಟಡ ನಿರ್ಮಾಣ ಸಾಮಾಗ್ರಿಗಳು, ತೋಟದ ಗೊಬ್ಬರ ಸಾಗಾಟ ಮಾಡುತ್ತಾನೆ. ಸಂಬಂಧಿಯಾದ ತೀರಾ ಬಡ ಕುಟುಂಬದ ಹೆಣ್ಣು ಮಗಳನ್ನು ಮದುವೆಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಮಸೀದಿಯ ಕಾರ್ಯದರ್ಶಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಊರಿನ ಹಿಂದುಗಳಿಗೂ ರೆಹಮಾನ್ ಅಂದರೆ ಅಚ್ಚು ಮೆಚ್ಚು. ಅವರೆ ರೆಹಮಾನ್‌ಗೆ<br>ದೊಡ್ಡ ಗ್ರಾಹಕರು. ಶಾರದೋತ್ಸವ ಮೆರವಣಿಗೆ ಸಂದರ್ಭ ಮನೆಯ ಮುಂದೆಯೆ ಗೆಳೆಯರನ್ನು ಸಂಘಟಿಸಿ ತಂಪು ಪಾನೀಯ ವಿತರಿಸುತ್ತಿದ್ದ. ಶಾರದೆಯ ವಿಗ್ರಹದ ಮೆರವಣಿಗೆಗೆ ರೆಹಮಾನ್ ಸಹೋದರ ಪಿಕಪ್ ಒದಗಿಸುತ್ತಿದ್ದ, ಸ್ವತಹ ಶಾರದೆ ಇದ್ದ ಪಿಕಪ್ ಚಲಾಯಿಸುತ್ತಿದ್ದ. ಇಂತಹ ಊರಲ್ಲಿ ಹೀಗಾಯ್ತಲ್ಲ….. !!</p>



<p>ಕೊಲೆಯ ಮುಂಚೂಣಿಯಲ್ಲಿದ್ದ ದೀಪಕ್ (21 ವರ್ಷ) ರೆಹಮಾನ್ ಗೆ ತೀರಾ ಪರಿಚಿತ. ಊರಿನ ಹುಡುಗ. ಬಡ ಕುಟುಂಬದ ಆತ ಮನೆ ಕಟ್ಟಲು ಆರಂಭಿಸಿದಾಗ ರೆಹಮಾನ್ ಒಂದು ಲೋಡ್ ಮರಳು ಉಚಿತವಾಗಿ ಒದಗಿಸಿದ್ದ. ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ರೆಹಮಾನ್ ನೆ ಸಾಗಾಟ ಮಾಡಿದ್ದ‌. ಅದರಲ್ಲಿ 30 ಸಾವಿರ ರೂಪಾಯಿ ದೀಪಕ್ ಬಾಕಿ ಉಳಿಸಿಕೊಂಡಿದ್ದ.</p>



<p>ರೆಹಮಾನ್ ಅದಕ್ಕಾಗಿ ದೀಪಕ್ ಮೇಲೆ ಒತ್ತಡ ಏನೂ ಹಾಕಿರಲಿಲ್ಲ. ಇದಲ್ಲದೆ ದೀಪಕ್ ತಂದೆ ವಿದ್ಯುತ್ ತಂತಿ ತಾಗಿ ವರ್ಷದ ಹಿಂದೆ ನಿಧನ ಹೊಂದಿದ್ದರು. ಆ ಸಂದರ್ಭ ತುರ್ತು ಚಿಕಿತ್ಸೆಗೆ ರಕ್ತದ ಅಗತ್ಯ ಬಿದ್ದಾಗ ಇದೇ ರೆಹಮಾನ್, ದೀಪಕ್ ತಂದೆಗೆ ರಕ್ತದ ಏರ್ಪಾಡು ಮಾಡಿದ್ದ.</p>



<p>ಕೊಲೆಯ ಹಿಂದಿನ ದಿವಸ ರೆಹಮಾನ್ ನನ್ನು ಸಂಪರ್ಕಿಸಿದ ದೀಪಕ್, &#8220;ಅರ್ಜೆಂಟ್ ಒಂದು ಲೋಡ್ ಮರಳು ಬೇಕಿತ್ತು, ಮನೆಯ ಕೆಲಸ ಪೂರ್ಣ ಗೊಳಿಸಬೇಕಿದೆ, ನಾಳೆಯ ಹಾಕಬೇಕು &#8221; ಎಂದು ವಿನಂತಿಸಿದ್ದಾನೆ. ಅದರಂತೆ, ಕೊಲೆಯಾದ ದಿನ ಮಧ್ಯಾಹ್ನ ಕೂಲಿ ಕಾರ್ಮಿಕ ಶಾಫಿಯನ್ನು ಜೊತೆ ಸೇರಿಸಿ, ನಿರ್ಮಾಣ ಹಂತದ ತನ್ನ ಮನೆಯ ಮುಂಭಾಗದಲ್ಲಿ ಇದ್ದ ಮರಳನ್ನೆ ಪಿಕಪ್ ನಲ್ಲಿ ಲೋಡ್ ಮಾಡಿ ಕೊಂಡು ದೀಪಕ್ ನ ಮನೆಗೆ ತೆರಳಿದ್ದಾನೆ. ಮರಳು ಅನ್ ಲೋಡ್ ಮಾಡಿದ್ದಾರೆ. ಅಷ್ಟು ಹೊತ್ತಿಗೆ ಸುತ್ತಮುತ್ತ ಅವಿತು ಹೊಂಚು ಹಾಕುತ್ತಿದ್ದ ಮತಾಂಧತೆಯ ಅಫೀಮು ಸೇವಿಸಿದ ಪರಿಚಿತ ಯುವಕರ ದಂಡು ಪಿಕಪ್ ಮುಂದೆ ಆಯುಧಗಳ ಸಹಿತ ಪ್ರತ್ಯಕ್ಷಗೊಂಡಿದೆ. ಕೊಲೆಯ ಸಂಚಿನ ಸಣ್ಣ ಸುಳಿವೂ ಇಲ್ಲದ, ರೆಹಮಾನ್ ನಗುತ್ತಲೆ ಮಾತಾಡಲು ಯತ್ನಿಸಿದ್ದಾನೆ. ದೀಪಕ್ ನಗು ನಗುತ್ತಲೆ ಮಚ್ಚು ಬೀಸಿದ್ದಾನೆ. ವಿಷಯ ಅರ್ಥ ಆಗುವಷ್ಟರಲ್ಲಿ ರೆಹಮಾನ್ ಕುಸಿದಿದ್ದಾನೆ. ಜೊತೆಗಿದ್ದ ಶಾಫಿಗೆ ಓಡಲು ತಿಳಿಸಿದ್ದಾನೆ. ಶಾಫಿ ಪರಿಚಿತ ಕೊಲೆಗಡುಕರ ಕಾಲು ಹಿಡಿದು ರೆಹಮಾನ್ ನನ್ನು ಬಿಟ್ಟು ಬಿಡಿ ಎಂದು ಅಂಗಲಾಚಿದ್ದಾನೆ. ಆದರೆ ನಿರ್ದಯಿ ಹಂತಕರು ಗುರಿಯಿಟ್ಟು ಕಡಿಯತೊಡಗಿದ್ದಾರೆ. ಅಡ್ಡ ಬಂದ ಶಾಫಿಯ ಕಡೆಗೂ ಮಚ್ಚು ತಿರುಗಿದೆ. ರೆಹಮಾನ್, ನನ್ನ ಕತೆ ಮುಗಿಯಿತು, ನೀನು ಓಡು ಓಡು&#8221; ಎಂದು ಕೂಗಿದ್ದಾನೆ. ಗಾಯಗೊಂಡ ಶಾಫಿ ತಪ್ಪಿಸಿಕೊಂಡು ಓಡಿ ಹೋಗಿ ಊರಿನ ಯುವಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.‌</p>



<p>ಊರಿನ ಮುಸ್ಲಿಂ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟು ಹೊತ್ತಿಗೆ ರೆಹಮಾನ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇಷ್ಟೆಲ್ಲಾ ನಡೆಯುವಾಗ ದೀಪಕ್ ನ ತಾಯಿ ಹಾಗು ಇತರೆ ಮಕ್ಕಳು ಆ ಮನೆಯ ಒಳಗಡೆಯೇ ಇದ್ದರು. ಮತಾಂಧತೆಯಿಂದ ಕುರುಡಾಗಿದ್ದ ದೀಪಕ್, ಮೇಲಿನ &#8220;ನಾಯಕ&#8221; ರ ಮಾತು ಕೇಳಿ ತನ್ನ ಹೊಸ ಮನೆಯ ಅಂಗಳದಲ್ಲಿ ತನಗೆ ಹಲವು ಬಾರಿ ನೆರವಾಗಿದ್ದ ಪರಿಚಿತ ಮುಸಲ್ಮಾನನ್ನು ತನ್ನ ತಾಯಿ, ಸಣ್ಣ ಸಹೋದರರ ಕಣ್ಣ ಮುಂದೆಯೆ ಸಹಚರರ ಜೊತೆ ಕಡಿದು ನಿರ್ದಯವಾಗಿ ಕೊಂದು ಹಾಕಿದ್ದ. &#8220;ಧರ್ಮ&#8221; ರಕ್ಷಣೆಯ ಕಾರ್ಯ ಮಾಡಿದೆ ಎಂದು ಬೀಗಿದ್ದ.</p>



<p>ರೆಹಮಾನ್ ನ ಗೆಳೆಯರ ಈ ವಿವರಣೆ ನಮ್ಮನ್ನು ದಿಗ್ಮೂಢರನ್ನಾಗಿಸಿತು. ಕೋಟಿ ಚೆನ್ನಯರು, ಕಾನದ ಕಟರು, ಕೊರಗ ತನಿಯ, ಮಾಲಿಕುದ್ದಿನಾರ್, ಸಯ್ಯದ್ ಮದನಿ, ಸಿರಿಯಪ್ಪೆ, ರಾಣಿ ಅಬ್ಬಕ್ಕ, ಕುದ್ಮಲ್ ರಂಗರಾಯರು ಮುನ್ನಡೆಸಿದ ಕರಾವಳಿಯ ಸ್ಥಿತಿ ಯಾವ ಪಾತಾಳಕ್ಕೆ ಕುಸಿಯಿತು…!</p>



<p>ಕೊಳತ್ತಮಜಲು ಕೋಮು ಸೋಂಕು ಪೂರ್ಣ ಪ್ರಮಾಣದಲ್ಲಿ ತಾಗದ ಒಂದು ಸಾಮಾನ್ಯ ಹಳ್ಳಿ. ಇಲ್ಲಿ ಯಾವ ರಾಜಕೀಯವೂ ಇರಲಿಲ್ಲ, ನಾವು ಮನುಷ್ಯರಾಗಿ ಅಷ್ಟೆ ಬದುಕಿದ್ದೆವು ಎಂದು ನುಡಿಯುವ ಊರಿನ ಮುಸ್ಲಿಮರಿಗೆ, ತಮ್ಮ ಊರಿನಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ನಂಬಲೆ ಆಗುತ್ತಿಲ್ಲ. ದೂರದ ಬಜ್ಪೆಯ ಸುಹಾಸ್ ಶೆಟ್ಟಿಯ ಹತ್ಯೆಯ ಪ್ರತೀಕಾರ ತಮ್ಮ ಊರಿಗೆ ತಲುಪುತ್ತದೆ ಎಂಬುದು ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ.</p>



<p>ಈಗ ಅವರ ಆಗ್ರಹ ಒಂದೇ ಇರುವುದು. ರೆಹಮಾನ್ ಕೊಲೆಯ ಆರೋಪಿಗಳು, ಪಿತೂರಿದಾರರಿಗೆ ಕಠಿಣ ಶಿಕ್ಷೆ ಆಗಬೇಕು, ಊರಿನ ನೆಮ್ಮದಿ, ಸೌಹಾರ್ದತೆ ಉಳಿಯಬೇಕು, ದೀಪಕ್ ಹಾಗೂ ಗೆಳೆಯರನ್ನು ಈ ಕೊಲೆಗೆ ಪ್ರೇರೇಪಿಸಿದ್ದು, ಸಂಚು ರೂಪಿಸಿದ್ದು ಬಜರಂಗ ದಳದ ನಾಯಕ ಭರತ್ ಕುಮ್ಡೇಲು (ಈತ ಸುಹಾಸ್ ಕೊಲೆಗೆ ಪ್ರತೀಕಾರ ಭೀಕರವಾಗಿ ಮಾಡುತ್ತೇವೆ ಎಂದು ಪತ್ರಿಕಾಗೋಷ್ಟಿ ನಡೆಸಿ ಹೇಳಿದ್ದ, ಈ ಹೇಳಿಕೆ ಮೇಲೆ ಎಫ್ಐಆರ್ ಆಗಿದೆ, ಅಶ್ರಪ್ ಕಲಾಯಿ ಹತ್ಯೆಯಲ್ಲೂ ಈತ ಆರೋಪಿ) ಆತ, ಕೊಲೆಯ ಹಿಂದಿನ ದಿನ ಕೊಳತ್ತಮಜಲಿಗೆ ಬಂದು ದೀಪಕ್ ಹಾಗು ಸಹಚರರ ಜೊತೆ ಮೀಟಿಂಗ್ ಮಾಡಿದ್ದ, ಸೂಚನೆ ನೀಡಿದ್ದ, ಆತನನ್ನು ತಕ್ಷಣ ಬಂಧಿಸಬೇಕು ಎಂಬುದು.‌</p>



<p>ರೆಹಮಾನ್ ನ ವೃದ್ಧ ತಂದೆ ಹಾಗೂ ಕೆಲವು ಹಿರಿಯರು ಇನ್ನೊಂದು ನೋವನ್ನು ನಮ್ಮಲ್ಲಿ ತೋಡಿಕೊಂಡರು. ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಕನಿಷ್ಟ ಸಾಂತ್ವನವನ್ನೂ ಹೇಳಲಿಲ್ಲ ಎಂಬುದು ಅವರ ಸಂಕಟವನ್ನು ಹೆಚ್ಚಿಸಿತು. ಸುಹಾಸ್ ಶೆಟ್ಟಿ ಕೊಲೆಯ ಸಂದರ್ಭ ಶವ ಮೆರವಣಿಗೆ, ಅಂತ್ಯ ಕ್ರಿಯೆಯವರೆಗೂ ಸ್ಥಳ ಬಿಟ್ಟು ಕದಲದ, ಆ ಮೇಲಿನ ಸುಹಾಸ್ ಕೊಲೆ ಖಂಡಿಸಿ ನಡೆದ ಪ್ರತಿಭಟನಾ ಸಭೆಗಳು, ಪ್ರತೀಕಾರದ ಮಾತುಗಳಿಗೆ ಸಾಕ್ಷಿ ಆದ ರಾಜೇಶ್ ನಾಯ್ಕ್ ತನ್ನ ಕ್ಷೇತ್ರದಲ್ಲಿ ನಡೆದ ಅಮಾಯಕನೊಬ್ಬ ಹತ್ಯೆಗೆ ಆತನ ಧರ್ಮದ ಗುರುತಿನ ಕಾರಣಕ್ಕೆ ಕನಿಷ್ಟ ಸಂತಾಪವನ್ನೂ ಸೂಚಿಸಲಿಲ್ಲ ಎಂಬದು ಕರಾವಳಿ ರಾಜಕಾರಣದ ಸದ್ಯದ ಹೆಗ್ಗುರುತು. ದೀಪಕ್ ಬೀಸಿದ ಮಚ್ಚಿನ ಏಟಿಗಿಂತಲೂ ಬಿಜೆಪಿ ಶಾಸಕರುಗಳ ಸದ್ಯದ ನಿಲುವುಗಳು ಕಡಿಮೆ ಅಪಾಯಕಾರಿ ಏನಲ್ಲ.</p>



<pre class="wp-block-code"><code><strong>ಲೇಖನ:</strong> <strong>ಮುನೀರ್ ಕಾಟಿಪಳ್ಳ</strong>, ಜಿಲ್ಲಾ ಕಾರ್ಯದರ್ಶಿ,  ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲೆ</code></pre>



<p></p>
]]></content:encoded>
					
		
		
			</item>
		<item>
		<title>&#8216;ಮಸೀದಿಯೊಳಗೆ &#8216;ಜೈ ಶ್ರೀರಾಮ್&#8217; ಎಂದು ಕೂಗುವುದು ಹೇಗೆ ಅಪರಾಧ?&#8217;: ದೂರುದಾರರು, ಕರ್ನಾಟಕ ಪೊಲೀಸರ ನಿಲುವನ್ನು ಕೇಳಿದ ಸುಪ್ರೀಂ ಕೋರ್ಟ್</title>
		<link>https://peepalmedia.com/shouting-jai-shri-ram-inside-a-mosque-a-crime-supreme-court-hears-stand-of-complainant-karnataka-police/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 16 Dec 2024 11:16:56 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Bangalore]]></category>
		<category><![CDATA[dakshina kannada]]></category>
		<category><![CDATA[high court]]></category>
		<category><![CDATA[kadaba]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka police]]></category>
		<category><![CDATA[law]]></category>
		<category><![CDATA[legal]]></category>
		<category><![CDATA[mangalore]]></category>
		<guid isPermaLink="false">https://peepalmedia.com/?p=50758</guid>

					<description><![CDATA[ಬೆಂಗಳೂರು: ಮಸೀದಿಯೊಳಗೆ &#8216;ಜೈ ಶ್ರೀರಾಮ್&#8217; ಎಂದು ಘೋಷಣೆ ಕೂಗುವುದು ಅಪರಾಧವಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ದೃಷ್ಟಿಕೋನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಡಿಸೆಂಬರ್ 16, ಸೋಮವಾರ ಕರ್ನಾಟಕ ಸರ್ಕಾರದ ನಿಲುವನ್ನು ಕೇಳಿದೆ. ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಸೆಪ್ಟೆಂಬರ್ 13 ರಂದು ಕರ್ನಾಟಕ ಹೈಕೋರ್ಟ್ ಬದ್ರಿಯಾ ಮಸೀದಿಗೆ ಮುತ್ತಿಕ್ಕಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪಿಗಳ ಮೇಲಿನ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸಿ ನೀಡಿದ್ದ ತೀರ್ಪಿನ ವಿರುದ್ಧ ದೂರುದಾರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು. [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಮಸೀದಿಯೊಳಗೆ &#8216;ಜೈ ಶ್ರೀರಾಮ್&#8217; ಎಂದು ಘೋಷಣೆ ಕೂಗುವುದು ಅಪರಾಧವಾಗುವುದಿಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ದೃಷ್ಟಿಕೋನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಡಿಸೆಂಬರ್ 16, ಸೋಮವಾರ ಕರ್ನಾಟಕ ಸರ್ಕಾರದ ನಿಲುವನ್ನು ಕೇಳಿದೆ.</p>



<p><strong>ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಸಂದೀಪ್ ಮೆಹ್ತಾ ಅವರ</strong> ಪೀಠವು ಸೆಪ್ಟೆಂಬರ್ 13 ರಂದು <a href="https://www.livelaw.in/high-court/karnataka-high-court/karnataka-high-court-shouting-jai-sriram-outrage-religious-feelings-criminal-case-quashing-272513#:~:text=Quashing%20a%20case%20against%20two,religious%20feelings%20of%20any%20class." target="_blank" rel="noreferrer noopener">ಕರ್ನಾಟಕ ಹೈಕೋರ್ಟ್ ಬದ್ರಿಯಾ ಮಸೀದಿಗೆ ಮುತ್ತಿಕ್ಕಿ ಜೈ ಶ್ರೀರಾಮ್‌ ಘೋಷಣೆ ಕೂಗಿದ ಆರೋಪಿಗಳ ಮೇಲಿನ ಕ್ರಿಮಿನಲ್‌ ಮೊಕದ್ದಮೆಯನ್ನು ರದ್ದುಗೊಳಿಸಿ ನೀಡಿದ್ದ ತೀರ್ಪಿನ</a> ವಿರುದ್ಧ ದೂರುದಾರರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು. ‘ಯಾರಾದರೂ ಜೈ ಶ್ರೀರಾಮ್’ ಎಂದು ಕೂಗಿದರೆ ಅದು ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಹೇಗೆ ಕೆರಳಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿತ್ತು.</p>



<p><strong>ಅರ್ಜಿದಾರರ ಪರ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು</strong>&nbsp;, ತನಿಖೆ ಪ್ರಾಥಮಿಕ ಹಂತದಲ್ಲಿದ್ದಾಗಲೂ ಎಫ್‌ಐಆರ್ ದಾಖಲಿಸಿದ ಇಪ್ಪತ್ತು ದಿನಗಳಲ್ಲಿ ವಿಚಾರಣೆಗೆ ತಡೆ ನೀಡಲಾಯಿತು.</p>



<p>&#8220;ಸರಿ, ಅವರು ನಿರ್ದಿಷ್ಟ ಧಾರ್ಮಿಕ ಘೋಷಣೆಯನ್ನು ಕೂಗುತ್ತಿದ್ದಾರೆ ಎಂದಿಟ್ಟುಕೊಂಡರೂ. ಅದು ಹೇಗೆ ಅಪರಾಧವಾಗುತ್ತದೆ?&#8221; ಎಂದು ನ್ಯಾಯಮೂರ್ತಿ ಮೆಹ್ತಾ ಪ್ರಶ್ನಿಸಿದ್ದಾರೆ.</p>



<p>ಮತ್ತೊಂದು ಧರ್ಮದ ಧಾರ್ಮಿಕ ಕೇಂದ್ರದಲ್ಲಿ ಇತರ ಧರ್ಮದ ಧಾರ್ಮಿಕ ಘೋಷಣೆ ಕೂಗುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಅಡಿಯಲ್ಲಿ ಕೋಮು ಸೌಹಾರ್ದತೆಯನ್ನು ಪ್ರಚೋದಿಸುವ ಅಪರಾಧವಾಗುತ್ತದೆ ಎಂದು ಕಾಮತ್ ವಾದಿಸಿದರು</p>



<p>ಆರೋಪಿಗಳನ್ನು ಗುರುತಿಸಲಾಗಿದೆಯೇ ಎಂದು ಪೀಠ ಕೇಳಿತು. ಸಿಸಿಟಿ ದೃಶ್ಯಗಳನ್ನು ಸಂಗ್ರಹಿಸಲಾಗಿದೆ ಮತ್ತು ರಿಮಾಂಡ್ ವರದಿಯಲ್ಲಿ ದಾಖಲಾಗಿರುವಂತೆ ಆರೋಪಿಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಕಾಮತ್ ಉತ್ತರಿಸಿದರು. ಕೇವಲ ಮಸೀದಿಯ ಬಳಿ ಆರೋಪಿಗಳನ್ನು ಗುರುತಿಸಿದರೆ ಅವರು ಘೋಷಣೆಗಳನ್ನು ಕೂಗಿದರು ಎಂದರ್ಥವೇ ಎಂದು ಪೀಠ ಪ್ರಶ್ನಿಸಿತು.</p>



<p>&#8220;ನಿಜವಾದ ಆರೋಪಿಯನ್ನು ಗುರುತಿಸಲು ನಿಮಗೆ ಸಾಧ್ಯವೇ? ನೀವು ಯಾವ ಸಾಕ್ಷಿಯನ್ನು ತಂದಿದ್ದೀರಿ?&#8221; ಎಂದು ನ್ಯಾಯಾಲಯ ಕೇಳಿದೆ. ಕಾಮತ್ ಅವರು ದೂರುದಾರರನ್ನು (ಮಸೀದಿಯ ಕಾವಲುಗಾರ) ಮಾತ್ರ ಪ್ರತಿನಿಧಿಸುತ್ತಿದ್ದಾರೆ ಮತ್ತು ತನಿಖೆ ನಡೆಸುವುದು ಹಾಗೂ ಸಾಕ್ಷ್ಯವನ್ನು ಸಂಗ್ರಹಿಸುವುದು ಪೊಲೀಸರ ಕೆಲಸ ಎಂದು ಸ್ಪಷ್ಟಪಡಿಸಿದರು. ಎಫ್‌ಐಆರ್ ಅಪರಾಧದ ಬಗ್ಗೆ ಮಾಹಿತಿಯನ್ನು ಮಾತ್ರ ನೀಡಬೇಕೇ ಹೊರತು ಎಲ್ಲಾ ಪುರಾವೆಗಳನ್ನು ಒಳಗೊಂಡಿರುವ &#8216;ಎನ್‌ಸೈಕ್ಲೋಪೀಡಿಯಾ&#8217; ಆಗಿರಬೇಕಾಗಿಲ್ಲ ಎಂದು ಅವರು ಹೇಳಿದರು.</p>



<p>ಔಪಚಾರಿಕವಾಗಿ ನೋಟಿಸ್ ನೀಡುತ್ತಿಲ್ಲ ಎಂದು ಹೇಳಿದ ಪೀಠ, ಅರ್ಜಿಯ ಪ್ರತಿಯನ್ನು ಕರ್ನಾಟಕ ರಾಜ್ಯಕ್ಕೆ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಈ ವಿಚಾರವನ್ನು  2025 ಜನವರಿಗೆ ಪೋಸ್ಟ್ ಮಾಡಲಾಗಿದೆ.</p>



<p><strong>ಅರ್ಜಿದಾರರ ಅಭಿಪ್ರಾಯಗಳು</strong></p>



<p>ಎಸ್‌ಎಲ್‌ಪಿಯಲ್ಲಿ ಹೇಳಲಾದ ಅಂಶಗಳ ಪ್ರಕಾರ, ದೂರುದಾರ ನೌಶಾದ್ ಸಖಾಫಿ ಎಂಬಾತನೊಂದಿಗೆ ಮರ್ದಾಳ, ಐತ್ತೂರು ಗ್ರಾಮದ ಬದ್ರಿಯಾ ಜುಮ್ಮಾ ಮಸೀದಿಯ ಕಚೇರಿ ಪ್ರದೇಶದಲ್ಲಿ ಕುಳಿತಿದ್ದರು. ರಾತ್ರಿ 10:50 ರ ಸುಮಾರಿಗೆ, ಕೆಲವು ಅಪರಿಚಿತ ವ್ಯಕ್ತಿಗಳು ಮಸೀದಿಯ ಆವರಣವನ್ನು ಪ್ರವೇಶಿಸಿದರು ಮತ್ತು &#8220;ಜೈ ಶ್ರೀರಾಮ್&#8221; ಎಂದು ಧಾರ್ಮಿಕ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.</p>



<p>ದೂರುದಾರ ಮತ್ತು ನೌಶಾದ್ ಸಖಾಫಿ ತಮ್ಮ ಕಚೇರಿಯಿಂದ ಹೊರಗೆ ಬಂದಾಗ ಇಬ್ಬರು ಅಪರಿಚಿತರು ಮಸೀದಿ ಆವರಣದಿಂದ ಹೊರಬಂದು ದ್ವಿಚಕ್ರ ವಾಹನದಲ್ಲಿ ವೇಗವಾಗಿ ಹಿಂತುರುಗಿ ಹೋಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೂರುದಾರರು ಮಸೀದಿಯ ಮುಂಭಾಗದಲ್ಲಿ ಅನುಮಾನಾಸ್ಪದವಾಗಿ ಒಂದು ಡಸ್ಟರ್ ಕಾರ್ ಅನ್ನು ನೋಡಿದರು ಮತ್ತು ಮಸೀದಿಯ ಆವರಣಕ್ಕೆ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳನ್ನು ನೋಡಿದರು.</p>



<p>ಸೆಕ್ಷನ್ <a href="https://devgan.in/ipc/section/447/" target="_blank" rel="noreferrer noopener">447 </a>(ಅಪರಾಧದ ಉಲ್ಲಂಘನೆಗೆ ಶಿಕ್ಷೆ), <a href="https://devgan.in/ipc/index.php?q=295A&amp;a=1" target="_blank" rel="noreferrer noopener">295 (ಎ) </a>(ಉದ್ದೇಶಪೂರ್ವಕ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತವಾಗಿ ಯಾವುದೇ ವರ್ಗವು ತನ್ನ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಮಾಡಿದ ಕೃತ್ಯಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.), <a href="https://devgan.in/ipc/index.php?q=505&amp;a=1" target="_blank" rel="noreferrer noopener">505 </a>(ಸಾರ್ವಜನಿಕ ಕಿಡಿಗೇಡಿತನವನ್ನು ಉಂಟುಮಾಡುವ ಹೇಳಿಕೆಗಳು), <a href="https://devgan.in/ipc/index.php?q=506&amp;a=1" target="_blank" rel="noreferrer noopener">506 </a>(ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಭಾರತೀಯ ದಂಡ ಸಂಹಿತೆಯ <a href="https://devgan.in/ipc/index.php?q=34&amp;a=1" target="_blank" rel="noreferrer noopener">34 (ಸಾಮಾನ್ಯ ಉದ್ದೇಶವನ್ನು ಪೂರೈಸಲು ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) </a>ಅಡಿಯಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಮುಂಜಾನೆ 1:00 ಗಂಟೆಗೆ ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.<a href="https://devgan.in/ipc/index.php?q=34&amp;a=1" target="_blank" rel="noreferrer noopener"></a></p>



<p>ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ವ್ಯಕ್ತಿಗಳು ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ದೂರಿದ್ದಾರೆ.</p>



<p>ಎಫ್‌ಐಆರ್ ದಾಖಲಿಸಿದ ನಂತರ, ಪೊಲೀಸರು ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಗುರುತಿಸಿ ಸೆಪ್ಟೆಂಬರ್ 25, 2023 ರಂದು ಸಂಜೆ 6:30 ರ ಸುಮಾರಿಗೆ ಬಂಧಿಸಿದರು. ನಂತರ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗಿದ್ದೂ, ಈ ಮಧ್ಯೆ, ಆರೋಪಿಗಳು ಜಾಮೀನಿನ ಮೊರೆಹೋಗಿ, ಸೆಪ್ಟೆಂಬರ್ 29, 2023 ರಂದು ಜಾಮೀನು ಪಡೆದುಕೊಂಡರು. </p>



<p>ನಂತರ ಆರೋಪಿಗಳು ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ರಿಟ್ ಅರ್ಜಿ ಸಲ್ಲಿಸಿದ್ದರು. ನವೆಂಬರ್ 29, 2023 ರಂದು, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಪುತ್ತೂರು, ದಕ್ಷಿಣ ಕನ್ನಡದ ಮುಂದೆ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಪರಿಣಾಮವಾಗಿ, ದೂರು/ಎಫ್‌ಐಆರ್‌ನಲ್ಲಿ ಮಾಡಲಾದ ಆಪಾದನೆಯು ಆರೋಪಿಸಲಾದ ಅಪರಾಧಗಳ ಅಂಶಗಳನ್ನು ಬಹಿರಂಗಪಡಿಸದ ಕಾರಣ ಸಂಪೂರ್ಣ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಯಿತು.</p>



<p><strong>ಹೈಕೋರ್ಟ್ ಹೇಳಿದ್ದೇನು?</strong></p>



<p>ಹೈಕೋರ್ಟಿನ <strong>ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಮಾತನಾಡಿ, </strong><em>ಸೆಕ್ಷನ್ 295ಎ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಬಗ್ಗೆ ಮಾತನಾಡುತ್ತದೆ. ಯಾರಾದರೂ ಜೈ ಶ್ರೀರಾಮ್ ಎಂದು ಕೂಗಿದರೆ ಅದು ಹೇಗೆ <em>ಯಾವುದೇ ವರ್ಗದ ಧಾರ್ಮಿಕ ಭಾವನೆಯನ್ನು ಕೆರಳಿ</em></em>ಸುತ್ತದೆ ಎಂಬುದನ್ನು ಅದು<em> ವ್ಯಾಖ್ಯಾನಿಸುವುದಿಲ್ಲ. ಆದರೆ, ಆ ಪ್ರದೇಶದಲ್ಲಿ ಹಿಂದೂ-ಮುಸಲ್ಮಾನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ದೂರುದಾರರು ಹೇಳಿದಾಗ ಕಲ್ಪನೆಯು ಆಂಟಿಮನಿಗೆ ಕಾರಣವಾಗಬಹುದು,&#8221; ಎಂದು ಹೇಳಿದ್ದಾರೆ.</em></p>



<p><em><a href="https://www.livelaw.in/deliberate-malicious-acts-insult-religion-can-penalised-sc/" target="_blank" rel="noreferrer noopener">ಈ ತೀರ್ಪು ಮಹೇಂದ್ರ ಸಿಂಗ್ ಧೋನಿ ವರ್ಸಸ್ ಯರ್ರಗುಂಟ್ಲ ಶ್ಯಾಮಸುಂದರ್</a></em> (2017) ತೀರ್ಪಿನ ಮೇಲೆ ಅವಲಂಬಿತವಾಗಿದೆ. ಈ ತೀರ್ಪು ಭಾರತೀಯ ದಂಡನೆ ಸಂಹಿತೆಯ ಸೆಕ್ಷನ್ 295-ಎ ಅಡಿಯಲ್ಲಿ ಧರ್ಮ ಅಥವಾ ನಾಗರಿಕರ ಒಂದು ವರ್ಗದ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಪ್ರತಿಯೊಂದು ಕೃತ್ಯ ಅಥವಾ ಪ್ರಯತ್ನಕ್ಕೆ ದಂಡ ವಿಧಿಸಲಾಗುವುದಿಲ್ಲ ಎಂದು ಹೇಳುತ್ತದೆ.</p>



<p>ನ್ಯಾಯಾಧೀಶರು ಧೋನಿ ತೀರ್ಪಿನ ಪ್ಯಾರಾ.6 ಅನ್ನು ಉಲ್ಲೇಖಿಸಿದ್ದಾರೆ: &#8221; <em>ಮೇಲೆ ಹೇಳಿದ ಭಾಗಗಳ ಅವಲೋಕನದ ಮೇಲೆ, ಸೆಕ್ಷನ್ 295A ಎಲ್ಲವನ್ನೂ ದಂಡನೆಗೆ ಒಳಪಡಿಸುವುದಿಲ್ಲ ಮತ್ತು ಯಾವುದೇ ಹಾಗೂ ಪ್ರತಿ ಕ್ರಿಯೆಯು ಅವಮಾನಿಸಲು ಅಥವಾ ಅವಮಾನಿಸಲು ಪ್ರಯತ್ನಿಸುತ್ತದೆ ಎಂದು ಸ್ಫಟಿಕದಂತೆ ಸ್ಪಷ್ಟವಾಗುತ್ತದೆ. ಧರ್ಮ ಅಥವಾ ನಾಗರಿಕರ ಧಾರ್ಮಿಕ ನಂಬಿಕೆಗಳು ಅವಮಾನಿಸುವ ಅಥವಾ ಆ ರೀತಿಯ ಪ್ರಯತ್ನಗಳಿಗೆ ಮಾತ್ರ ದಂಡ ವಿಧಿಸುತ್ತವೆ. ಆ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶವಿಲ್ಲದೆ ಅಥವಾ ಅರಿವಿಲ್ಲದೆ ಅಥವಾ ಅಜಾಗರೂಕತೆಯಿಂದ ಮಾಡಲಾಗುವ ಧರ್ಮದ ಅವಮಾನಗಳು ವಿಭಾಗದೊಳಗೆ ಬರುವುದಿಲ್ಲ …</em></p>



<p>ಇತರ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ, ಆಪಾದಿತ ಘಟನೆಯು ಸಾರ್ವಜನಿಕ ಕಿಡಿಗೇಡಿತನವನ್ನು ಉಂಟುಮಾಡಿದೆ ಅಥವಾ ಸೆಕ್ಷನ್ 505 ಐಪಿಸಿಯನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.</p>



<p>ಇದಲ್ಲದೆ, ನ್ಯಾಯಾಲಯವು ಹೀಗೆ ಹೇಳಿತು: <em>&#8220;ದೂರು ಐಪಿಸಿಯ ಸೆಕ್ಷನ್ 503 ಅಥವಾ ಸೆಕ್ಷನ್ 447 ರ ಅಂಶಗಳಿಗೆ ಅನುಗುಣವಾಗಿಲ್ಲ. ಹಾಗೆ ಆಪಾದಿಸಲಾದ ಯಾವುದೇ ಅಪರಾಧಗಳ ಯಾವುದೇ ಅಂಶಗಳನ್ನು ಕಂಡುಹಿಡಿಯುವುದು, ಈ ಅರ್ಜಿದಾರರ ವಿರುದ್ಧ ಮುಂದಿನ ಪ್ರಕ್ರಿಯೆಗಳಿಗೆ ಅನುಮತಿ ನೀಡುವುದು ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಕಾನೂನು ಮತ್ತು ನ್ಯಾಯದ ತಪ್ಪಿಗೆ ಕಾರಣವಾಗುತ್ತದೆ.&#8221;</em></p>



<p><strong>ಎಸ್‌ಎಲ್‌ಪಿಗೆ ಸವಾಲು</strong></p>



<p>ಪ್ರಾಥಮಿಕವಾಗಿ, ಎಸ್‌ಎಲ್‌ಪಿ ತೀರ್ಪನ್ನು ಸುಪ್ರೀಂ ಕೋರ್ಟ್‌ನ ಪೂರ್ವನಿದರ್ಶನಗಳಿಗೆ ವಿರುದ್ಧವಾಗಿ ಪ್ರಶ್ನಿಸಿದೆ, ಅದರ ಮೂಲಕ ಎಫ್‌ಐಆರ್ ಪ್ರಾಥಮಿಕ ಅಪರಾಧದ ಆಯೋಗವನ್ನು ಬಹಿರಂಗಪಡಿಸಿದಾಗ ತನಿಖೆ ಪೂರ್ಣಗೊಳ್ಳುವ ಮೊದಲು ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವುದನ್ನು ಟೀಕಿಸಿದೆ.</p>



<p>&#8216;ಜೈ ಶ್ರೀರಾಮ್&#8217; ಎಂದು ಘೋಷಣೆ ಕೂಗುವುದರಿಂದ ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದಿಲ್ಲ ಮತ್ತು ಯಾವುದೇ ಕಲ್ಪನೆಯ ಮೂಲಕ ಘಟನೆಯು ವಿರೋಧಾಭಾಸಕ್ಕೆ ಕಾರಣವಾಗಬಹುದು ಎಂಬ ಹೈಕೋರ್ಟ್‌ನ ಅವಲೋಕನವು ಕನಿಷ್ಠ ಈ ಹಂತದಲ್ಲಿ ಘಟನೆಯ ಸಂಭವವನ್ನು ಅಲ್ಲಗಳೆಯುವಂತಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸಲ್ಲಿಸಲಾಗಿದೆ.</p>



<p>&#8221; <em>ಮಸೀದಿ ಆವರಣದಲ್ಲಿ ಇಂತಹ ಘಟನೆ ನಡೆದಿದ್ದು, ಮುಸ್ಲಿಮರ ಜೀವಕ್ಕೆ ಬೆದರಿಕೆಯೊಡ್ಡಿದೆ, ಆರೋಪಗಳ ತಿರುಳಿನಿಂದ ಪ್ರಸ್ತುತ ಪ್ರಕರಣದಲ್ಲಿ ಹೈಕೋರ್ಟ್ ಮಾಡಿದಂತೆ ತನಿಖೆಗೆ ಅಡ್ಡಿಯಾಗಬಾರದು ಎಂಬುದನ್ನು ತೋರಿಸುತ್ತದೆ. ತನಿಖೆಯ ಅಗತ್ಯವಿರುವ ಕಾಗ್ನಿಜಬಲ್ ಅಪರಾಧಗಳ ಆಯೋಗವನ್ನು ತೋರಿಸುತ್ತದೆ, ಇವೆಲ್ಲವೂ ನ್ಯಾಯಸಮ್ಮತವಾದ ಕಾನೂನು ಕ್ರಮವಾಗಿದೆ</em> ,&#8221; ಎಸ್‌ಎಲ್‌ಪಿ ಸಮರ್ಥಿಸಿಕೊಂಡಿದೆ.</p>



<p><strong>ಪ್ರಕರಣದ ವಿವರಗಳು: ಶ್ರೀ. ಹೈದರಲಿ ಸಿಎಂ ವಿರುದ್ಧ ಶ್ರೀ ಕೀರ್ತನ್ ಕುಮಾರ್ ಮತ್ತು ಓಆರ್ಎಸ್., ವಿಶೇಷ ರಜೆ ಅರ್ಜಿ (ಸಿಆರ್ಎಲ್) ನಂ. 17009 ಆಫ್ 2024</strong></p>



<p><strong>ಅರ್ಜಿ  ಸಲ್ಲಿಸಿದವರು</strong>: <strong>ವಕೀಲ ಜಾವೇದ್‌ಪುರ್ ರೆಹಮಾನ್</strong></p>
]]></content:encoded>
					
		
		
			</item>
		<item>
		<title>ಬಂಟ್ವಾಳ: ಶರಣ್‌ ಪಂಪ್‌ವೆಲ್‌ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್</title>
		<link>https://peepalmedia.com/fir-on-sharan-pumpwell-and-three-others-in-bantwal/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Sep 2024 11:10:02 +0000</pubDate>
				<category><![CDATA[ಅಪರಾಧ]]></category>
		<category><![CDATA[bantwala]]></category>
		<category><![CDATA[Dakshina kananda]]></category>
		<category><![CDATA[DK]]></category>
		<category><![CDATA[hindutva]]></category>
		<category><![CDATA[mangalore]]></category>
		<category><![CDATA[vhp]]></category>
		<guid isPermaLink="false">https://peepalmedia.com/?p=45633</guid>

					<description><![CDATA[ಬಂಟ್ವಾಳ: ಹಿಂದುತ್ವವಾದಿ ಸಂಘಟನೆಗಳು ʼಬಿಸಿ ರೋಡ್‌ ಚಲೋʼ ನಡೆಸಿರುವ ಹಿನ್ನಲೆಯಲ್ಲಿ ಶರಣ್‌ ಪಂಪ್‌ವೆಲ್‌, ಭರತ್‌ ಕುಂಡೇಲು, ಯಶೋಧರ ಕರ್ಬೆಟ್ಟು ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ಬಂಟ್ವಾಳ ನಗರ ಪಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಇಸ್ಲಾಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯಶೋಧರ ಕರ್ಬೆಟ್ಟು ವಿರುದ್ಧ ಬಂಟ್ವಳದ ಮಹಮ್ಮದ್‌ ನವಾಜ್‌ ಎಂಬವರು ದೂರು ನೀಡಿದ್ದಾರೆ, ಬಂಟ್ವಾಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಲ್ಲದೇ, ಸೆ.16 ರಂದು ಬಿಸಿ ರೋಡ್‌ ಚಲೋ ನಡೆಸಿ ಇಸ್ಲಾಮ್‌ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ [&#8230;]]]></description>
										<content:encoded><![CDATA[
<p><strong>ಬಂಟ್ವಾಳ:</strong> ಹಿಂದುತ್ವವಾದಿ ಸಂಘಟನೆಗಳು ʼಬಿಸಿ ರೋಡ್‌ ಚಲೋʼ ನಡೆಸಿರುವ ಹಿನ್ನಲೆಯಲ್ಲಿ ಶರಣ್‌ ಪಂಪ್‌ವೆಲ್‌, ಭರತ್‌ ಕುಂಡೇಲು, ಯಶೋಧರ ಕರ್ಬೆಟ್ಟು ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ಬಂಟ್ವಾಳ ನಗರ ಪಲೀಸ್‌ ಠಾಣೆಯಲ್ಲಿ ದಾಖಲಾಗಿದೆ.</p>



<p>ಇಸ್ಲಾಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯಶೋಧರ ಕರ್ಬೆಟ್ಟು ವಿರುದ್ಧ ಬಂಟ್ವಳದ ಮಹಮ್ಮದ್‌ ನವಾಜ್‌ ಎಂಬವರು ದೂರು ನೀಡಿದ್ದಾರೆ, ಬಂಟ್ವಾಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಲ್ಲದೇ, ಸೆ.16 ರಂದು ಬಿಸಿ ರೋಡ್‌ ಚಲೋ ನಡೆಸಿ ಇಸ್ಲಾಮ್‌ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ ಪ್ರಚೋದನೆಗೆ ಪ್ರಯತ್ನಿಸಿದ್ದಾರೆ ಎಂದು ಮಹಮ್ಮದ್‌ ರಫೀಕ್‌ ಎಂಬವರು ಪ್ರತ್ಯೇಕವಾಗಿ ಶರಣ್‌ ಪಂಪ್‌ವೆಲ್‌ ಹಾಗೂ ಭರತ್‌ ಕುಂಡೇಲು ಮೇಲೆ ದೂರು ನೀಡಿದ್ದಾರೆ.</p>



<p>ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮಧ್ಯ ನಿಷೇಧ ಮತ್ತು ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.</p>
]]></content:encoded>
					
		
		
			</item>
		<item>
		<title>ರಂಗಕರ್ಮಿ ಸದಾನಂದ ಸುವರ್ಣ ನಿಧನ</title>
		<link>https://peepalmedia.com/sadananda-suvarna-no-more/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 16 Jul 2024 09:09:19 +0000</pubDate>
				<category><![CDATA[ನಿಧನ ಸುದ್ದಿ]]></category>
		<category><![CDATA[dakshina kannada]]></category>
		<category><![CDATA[mangalore]]></category>
		<category><![CDATA[sadananda suvarna]]></category>
		<guid isPermaLink="false">https://peepalmedia.com/?p=42325</guid>

					<description><![CDATA[ರಂಗನಟ, ನಿರ್ದೇಶಕ, ರಂಗಸಂಯೋಜಕ, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ ಸದಾನಂದ ಸುವರ್ಣರವರು ಇಂದು ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ತೊಂಬತ್ತಮೂರು ವರ್ಷ ಪ್ರಾಯದ ಸುವರ್ಣರವರು ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಕೆಲವಾರು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ದಣಿವರಿಯದೆ ಸೇವೆ ಸಲ್ಲಿಸಿದವರು.ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿಯಲ್ಲಿ, 24-12-1931ರಂದು ಜನಿಸಿದ ಇವರ ತಾಯಿ ಪೂವಮ್ಮ, ತಂದೆ ರುಕ್ಕ ಕೋಟ್ಯಾನ್. ಅವರ ಪ್ರಾಥಮಿಕಶಿಕ್ಷಣ ತಾಯಿಯ ತವರಿನಲ್ಲಿ ಅಜ್ಜಿಯ ಆಶ್ರಯದಲ್ಲಿ &#8216;ಮುಲ್ಕಿಯ ಬೋರ್ಡ್ ಹೈಸ್ಕೂಲ್&#8217; [&#8230;]]]></description>
										<content:encoded><![CDATA[
<p>ರಂಗನಟ, ನಿರ್ದೇಶಕ, ರಂಗಸಂಯೋಜಕ, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ ಸದಾನಂದ ಸುವರ್ಣರವರು ಇಂದು ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.<br>ತೊಂಬತ್ತಮೂರು ವರ್ಷ ಪ್ರಾಯದ ಸುವರ್ಣರವರು ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಕೆಲವಾರು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ದಣಿವರಿಯದೆ ಸೇವೆ ಸಲ್ಲಿಸಿದವರು.<br>ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿಯಲ್ಲಿ, 24-12-1931ರಂದು ಜನಿಸಿದ ಇವರ ತಾಯಿ ಪೂವಮ್ಮ, ತಂದೆ ರುಕ್ಕ ಕೋಟ್ಯಾನ್. ಅವರ ಪ್ರಾಥಮಿಕಶಿಕ್ಷಣ ತಾಯಿಯ ತವರಿನಲ್ಲಿ ಅಜ್ಜಿಯ ಆಶ್ರಯದಲ್ಲಿ &#8216;ಮುಲ್ಕಿಯ ಬೋರ್ಡ್ ಹೈಸ್ಕೂಲ್&#8217; ನಲ್ಲಿ ಐದನೆಯ ಇಯತ್ತೆವರೆಗೆ ನಡೆಯಿತು. ತಮ್ಮ ಚಿಕ್ಕವಯಸ್ಸಿನಲ್ಲೇ ಬೊಂಬಾಯಿಗೆ ಬಂದ ಸುವರ್ಣರವರ ತಂದೆ &#8216;ಬ್ಯಾಂಕ್ ಆಫ್ ಬರೋಡ&#8217;ದಲ್ಲಿ ಕೆಲಸಮಾಡುತ್ತಿದ್ದರು.<br>ಉದಯ ಕಲಾ ನಿಕೇತನ ಎಂಬ ಸಂಸ್ಥೆಯ ಮೂಲಕ 70 ರ ದಶಕದಲ್ಲಿ ಹಲವಾರು ಉದಯನ್ಮುಖಿ ರಂಗಕರ್ಮಿಗಳಿಗೆ ಕಲಾಕಾರರಿಗೆ ಪ್ರೋತ್ಸಾಹನೀಡಿ ಅವರು ತಮ್ಮ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲು ಸಹಾಯಮಾಡಿದರು. ಈ ಸಂಸ್ಥೆಯ ವತಿಯಿಂದ ತಾವೇ ಬರೆದ ಕೆಲವಾರು ನಾಟಕಗಳನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸನ್ನು ಹಾಸಲುಮಾಡಿದರು. ಕಾಲೇಜಿನ ವಾರ್ಷಿಕೋತ್ಸವಗಳಿಗಾಗಿಯೇ ವಿಶೇಷವಾಗಿ ರಚಿಸಿದ ನಾಟಕಗಳನ್ನು ತಾವೇ ನಿರ್ದೇಶಿಸಿ, ಅಭಿನಯಿಸಿ ಯಶಸ್ಸನ್ನು ಕಂಡರು. ಥಿಯೇಟರ್ ಟ್ರೇನಿಂಗ್ ಡಿಪ್ಲೊಮ ಕೋರ್ಸ್ ಗೆ ಸೇರಿ ಅಲ್ಲಿ ರಂಗ ತಜ್ಞರ ಜೊತೆಯಲ್ಲಿ ವಿಚಾರ-ವಿನಿಮಯ, ವಿಮರ್ಶೆ, ರಸಆಸ್ವಾನ, ಜಿಜ್ಞಾಸೆ ನಡೆಸಿ, ಆಳವಾದ ಜ್ಞಾನವನ್ನು ಸಂಪಾದಿಸಿದರು. ಸಾಮೂಹಿಕ ಮಾಧ್ಯಮಗಳಲ್ಲಿ ಭಾಗವಹಿಸಿ, ಮುಂಬಯಿನ ಐ. ಎ. ಸೊಸೈಟಿಯ ಫೋಟೋಗ್ರಫಿಯ ವಿಶೇಷ ತರಪೇತಿ ಪಡೆದು, ಅನೇಕ ನಾಟಕಗಳನ್ನು ದಿಗ್ದರ್ಶಿಸಿದ್ದಾರೆ.<br>ಇವರ ಪ್ರಮುಖ ನಾಟಕಗಳು: ಈಡಿಪಸ್, ಕದಡಿದ ನೀರು, ಪ್ರಜಾಪ್ರಭುತ್ವ-ಲೊಳಲೊಟ್ಟೆ, ಧರ್ಮ ಚಕ್ತ್ರ, ಸತ್ಯಂ ವದ-ಧರ್ಮಂ ಚರ, ಯಾರು ನನ್ನವರು ?<br><strong>ಸುವರ್ಣರ ಚಲನಚಿತ್ರ ಬದುಕು:</strong><br>ಇವರ ನಿರ್ಮಾಣದ ಘಟಶ್ರಾದ್ಧ ಚಲನಚಿತ್ರ ಭಾರತದಲ್ಲಿ ಕಳೆದ ಶನಮಾನದಲ್ಲಿ ತಯಾರಾದ ಉತ್ಕೃಷ್ತ 100 ಚಲನಚಿತ್ರಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆಯಿತು. 15 ಪ್ರಶಸ್ತಿಗಳನ್ನು ಹೆಗಲಿಗೇರಿಸಿದ ಈ ಚಿತ್ರ, ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು. ಇದಲ್ಲದೆ ಅವರು ತಯಾರಿಸಿದ ಬೇರೆ ಚಿತ್ರಗಳು ಕುಬಿ, ಇಯಾಲ.<br>ತುಳು ಭಾಷೆಯಲ್ಲಿ ಬರೆದ ನಾಟಕ, ’ಗುಡ್ಡದ ಭೂತ,’ ಅವರ ಸೃಜನ ಶೀಲ ಸಾಹಿತ್ಯಕ್ಕೆ ಉದಾಹರಣೆಯಾಗಿದೆ. ಯಶಸ್ಸಿನ ಶಿಖರದ ಮೇಲಿದ್ದ ಈ ಪ್ರಯೋಗಕ್ಕೆ ಮತ್ತೊಂದು ಗರಿಮೂಡಿದ್ದು ಅದನ್ನು ಧಾರಾವಾಹಿಯಾಗಿ ದೂರದರ್ಶನದಲ್ಲಿ ಪ್ರದರ್ಶಿಸಿದ ನಂತರ.</p>
]]></content:encoded>
					
		
		
			</item>
		<item>
		<title>ಮಂಗಳೂರು ವಿವಿ ಗೌರವ ಡಾಕ್ಟರೇಟ್‌ ವಿವಾದ</title>
		<link>https://peepalmedia.com/honorarydoctorate-controversy-of-mangalore-university/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 15 Jun 2024 09:11:17 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Controversy]]></category>
		<category><![CDATA[honorary doctorate]]></category>
		<category><![CDATA[honorary doctorate controversy]]></category>
		<category><![CDATA[mangalore]]></category>
		<category><![CDATA[mangalore uiversity]]></category>
		<category><![CDATA[pl dharma]]></category>
		<guid isPermaLink="false">https://peepalmedia.com/?p=40807</guid>

					<description><![CDATA[ಮಂಗಳೂರು: &#8220;ಮಂಗಳೂರು ವಿವಿಯ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆಯಲಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಎಂಆರ್​ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು,&#8221; ಎಂದು ಉಪ ಕುಲಪತಿ ಡಾ. ಪಿ ಎಲ್ ಧರ್ಮ ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇವರು, &#8220;ಘಟಿಕೋತ್ಸವದಲ್ಲಿ Research and Information System for Developing Countries (RIS)ನ ಮಹಾ ನಿರ್ದೇಶಕರು ಪ್ರೊ. ಸಚಿನ್ [&#8230;]]]></description>
										<content:encoded><![CDATA[
<p><strong>ಮಂಗಳೂರು: </strong>&#8220;ಮಂಗಳೂರು ವಿವಿಯ 42ನೇ ವಾರ್ಷಿಕ ಘಟಿಕೋತ್ಸವ ಜೂನ್ 15ರಂದು ನಡೆಯಲಿದ್ದು, ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ಘೋಷಿಸಲಾಗಿದೆ. ಎಂಆರ್​ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು,&#8221; ಎಂದು ಉಪ ಕುಲಪತಿ ಡಾ. ಪಿ ಎಲ್ ಧರ್ಮ ಹೇಳಿದ್ದಾರೆ.</p>



<p>ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇವರು, &#8220;ಘಟಿಕೋತ್ಸವದಲ್ಲಿ Research and Information System for Developing Countries (RIS)ನ ಮಹಾ ನಿರ್ದೇಶಕರು ಪ್ರೊ. ಸಚಿನ್ ಚತುರ್ವೇದಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿದ್ದು, ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿ ಥಾವರ್ ಚಂದ್ ಗೆಹ್ಲೋಟ್ ಈ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಭಾಗವಹಿಸಲಿದ್ದಾರೆ,&#8221; ಎಂದು ತಿಳಿಸಿದ್ದಾರೆ.</p>



<p><strong>ಉದ್ಯಮಿಗಳಿಗೆ ಗೌ.ಡಾ ಪದವಿ?</strong></p>



<p>ಈ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್‌ ನೀಡಲಿದೆ. ವಿವಿಯ ಮುಂದೆ ಬಂದಿರುವ ಒಟ್ಟು 15 ಪ್ರಸ್ತಾಪಗಳಲ್ಲಿ ಎಂಆರ್​ಜಿ ಗ್ರೂಪ್ ಮಾಲೀಕ ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ &#8211; ಮೂವರಿಗೆ ಈ ಗೌರವ ನೀಡಲಾಗುತ್ತಿದೆ.</p>



<p>ಉದ್ಯಮಿಗಳಿಗೆ ಈ ಪದವಿಯನ್ನು ನೀಡುತ್ತಿರುವ ಹಿನ್ನಲೆಯಲ್ಲಿ ಟೀಕೆಗಳು ವ್ಯಕ್ತವಾಗಿದ್ದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ, &#8220;ಹಾಗಾದರೆ, ಈ ಸಾವಿರ ಕೋಟಿ ವ್ಯವಹಾರಗಳುಲ್ಲ ಮೂವರು ಉದ್ಯಮಿಗಳು ಗೌರವ ಡಾಕ್ಟರೇಟ್ ಗಾಗಿ ಸ್ವತಹ ಅರ್ಜಿ ಸಲ್ಲಿಸಿದರೆ !, ಅಥವಾ ಅವರ ಸ್ಥಳೀಯ ಚಮಚಾ ರಾಜಕಾರಣಿಗಳು ಅರ್ಜಿ ತುಂಬಿದರೆ ? ಅರ್ಜಿ ಸಲ್ಲಿಸಿ ಗೌರವ ಡಾಕ್ಟರೇಟ್ ಪಡೆಯುವ ಅಗತ್ಯ ಸರಕಾರಗಳನ್ನೇ ಕುಣಿಸಬಲ್ಲ ಇಂತಹ ದೊಡ್ಡ ಉದ್ಯಮಿಗಳಿಗೆ ಏನಿತ್ತು? ಕುಲಪತಿ ಧರ್ಮ ಅವರ ಹೇಳಿಕೆ ಈ ಉದ್ಯಮಿಗಳಿಗೆ ದೊಡ್ಡ ಅವಮಾನವಲ್ಲವೆ ? ಸಮಾಜದಲ್ಲಿ ದೊಡ್ಡ ಹೆಸರಿರುವ ಈ ಉದ್ಯಮಿಗಳು ಇಂತಹ ಗೌರವ ಕಳೆದು ಕೊಂಡಿರುವ ಡಾಕ್ಟರೇಟ್ ಅನ್ನು ತಿರಸ್ಕರಿಸಿ ತಮ್ಮ ಗೌರವವನ್ನು ಕಾಪಾಡಿಕೊಳ್ಳಲಿ. ಮಂಗಳೂರು ವಿ ವಿ ಯಾವುದೋ ಖಾಸಗಿ ಫೇಕ್ ವಿ ವಿ ಮಟ್ಟಕ್ಕೆ ಇಳಿದಿರುವುದು ದುಃಖ ಉಂಟು ಮಾಡಿದೆ,&#8221; ಎಂದು ಹೇಳಿದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" width="925" height="898" src="https://peepalmedia.com/wp-content/uploads/2024/06/448475946_7715637681828982_993773163019296869_n.jpg" alt="" class="wp-image-40808" style="width:318px;height:auto" srcset="https://peepalmedia.com/wp-content/uploads/2024/06/448475946_7715637681828982_993773163019296869_n.jpg 925w, https://peepalmedia.com/wp-content/uploads/2024/06/448475946_7715637681828982_993773163019296869_n-300x291.jpg 300w, https://peepalmedia.com/wp-content/uploads/2024/06/448475946_7715637681828982_993773163019296869_n-768x746.jpg 768w, https://peepalmedia.com/wp-content/uploads/2024/06/448475946_7715637681828982_993773163019296869_n-150x146.jpg 150w, https://peepalmedia.com/wp-content/uploads/2024/06/448475946_7715637681828982_993773163019296869_n-696x676.jpg 696w" sizes="(max-width: 925px) 100vw, 925px" /><figcaption class="wp-element-caption">ಕೆ ಪ್ರಕಾಶ್ ಶೆಟ್ಟಿ, ಡಾ. ತುಂಬೆ ಮೊಯ್ದಿನ್ ಮತ್ತು ರೊನಾಲ್ಡೋ ಕೊಲಾಸೋ</figcaption></figure></div>

<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="768" src="https://peepalmedia.com/wp-content/uploads/2024/06/448504074_7715638035162280_6268159180708488911_n-1024x768.jpg" alt="" class="wp-image-40809" style="width:322px;height:auto" srcset="https://peepalmedia.com/wp-content/uploads/2024/06/448504074_7715638035162280_6268159180708488911_n-1024x768.jpg 1024w, https://peepalmedia.com/wp-content/uploads/2024/06/448504074_7715638035162280_6268159180708488911_n-300x225.jpg 300w, https://peepalmedia.com/wp-content/uploads/2024/06/448504074_7715638035162280_6268159180708488911_n-768x576.jpg 768w, https://peepalmedia.com/wp-content/uploads/2024/06/448504074_7715638035162280_6268159180708488911_n-150x113.jpg 150w, https://peepalmedia.com/wp-content/uploads/2024/06/448504074_7715638035162280_6268159180708488911_n-696x522.jpg 696w, https://peepalmedia.com/wp-content/uploads/2024/06/448504074_7715638035162280_6268159180708488911_n-1068x801.jpg 1068w, https://peepalmedia.com/wp-content/uploads/2024/06/448504074_7715638035162280_6268159180708488911_n.jpg 1280w" sizes="auto, (max-width: 1024px) 100vw, 1024px" /><figcaption class="wp-element-caption">ಉದ್ಯಮಿಗಳಿಗೆ ಗೌರವ ಡಾಕ್ಟರೇಟ್‌ ಘೋಷಣೆಯಾಗುತ್ತಿದ್ದಂತೆ ಅಭಿನಂದನೆಯ ಫಲಕಗಳು ಮಂಗಳೂರಿನ ಬೀದಿಗಳಲ್ಲಿ ರಾರಾಜಿಸುತ್ತಿವೆ</figcaption></figure></div>


<p>1986 ರಲ್ಲಿ ಮಂಗಳೂರು ವಿವಿ ತೆಲುಗು ಸಿನೇಮಾ ನಿರ್ಮಾಪಕ ಸುಬ್ಬ ರಾಮ ರೆಡ್ಡಿಯವರಿಗೆ ಗೌರವ ಡಾಕ್ಟರೇಟ್ ನೀಡುವಾಗ ಮಂಗಳೂರಿನಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಮಂಗಳೂರಿನ ಜನಪರ ಸಂಘಟನೆಗಳು, ಪ್ರಜ್ಞಾವಂತರು ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ರ ನಾಯಕತ್ವದಲ್ಲಿ ಟೌನ್ ಹಾಲ್ ಮುಂಭಾಗ ಕತ್ತೆಯ ಕೊರಳಿಗೆ &#8220;ಗೌರವ ಡಾಕ್ಟರೇಟ್&#8221; ಎಂಬ ಫಲಕ ಹಾಕಿ ಪ್ರತಿಭಟನೆ ನಡೆಸಿದ್ದರು. </p>



<p>&#8220;ಆ ಪ್ರತಿಭಟನೆಯಲ್ಲಿ ಆಗಿನ್ನು ಬಿಸಿ ರಕ್ತದ ತರುಣರಾಗಿದ್ದ ಈಗಿನ ಮಂಗಳೂರು ವಿ ವಿ ಉಪಕುಲಪತಿ ಡಾ. ಪಿ ಎಲ್ ಧರ್ಮ ಭಾಗಿಯಾಗಿದ್ದರು. ಈಗ ಇದೇ ಧರ್ಮರವರು ನಾಡಿನ ಮೂವರು ಅತಿ ದೊಡ್ಡ ಶ್ರೀಮಂತರಿಗೆ ತಮ್ಮ ಮೊದಲ ಅವಧಿಯಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡುತ್ತಿದ್ದಾರೆ,&#8221; ಎಂದು ಮುನೀರ್‌ ಟೀಕಿಸಿದ್ದಾರೆ. </p>



<p></p>
]]></content:encoded>
					
		
		
			</item>
		<item>
		<title>ಸಕ್ಕರೆ ನಾಡಿನ ಸ್ನೇಹಿತರಿಗೊಂದು ಪತ್ರ&#8230;</title>
		<link>https://peepalmedia.com/mg-hegdes-letter-to-mandya-people/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 30 Jan 2024 07:23:45 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[Bhajarang dal]]></category>
		<category><![CDATA[bjp]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mandya]]></category>
		<category><![CDATA[mangalore]]></category>
		<category><![CDATA[MG heggade]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RSS]]></category>
		<category><![CDATA[Sri ram sena]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[vhp]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35484</guid>

					<description><![CDATA[ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ, ನಮಸ್ಕಾರ&#8230; ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ ನಾನು. ಒಂದು ಕಾಲದಲ್ಲಿ ಇಂತಹ ಮತೀಯ ಸಂಗತಿಗಳೇ ಶ್ರೇಷ್ಠವೆಂದು ಅದರ ಹಿಂದೆ ಹೋಗಿ ಅಲ್ಲಿನ ಸಾಮರಸ್ಯದ ಬದುಕಿಗೆ ಧಕ್ಕೆ ತಂದ ಪಾಪದಲ್ಲಿ ನನ್ನ ಪಾಲೂ ಇದೆ. ಈ ಪತ್ರ ನಾನು ಮಾಡಿದ ಪಾಪಕ್ಕೆ ಕೊಂಚ ಪ್ರಾಯಶ್ಚಿತ್ತ ಆದೀತೂ ಎಂದೂ ಭಾವಿಸುತ್ತೇನೆ. [&#8230;]]]></description>
										<content:encoded><![CDATA[
<p><strong>ಸಕ್ಕರೆ ನಾಡು ಎಂದು ಪ್ರಸಿದ್ಧಿಯಾದ ಮಂಡ್ಯದ ಸ್ನೇಹಿತರೇ, ನಮಸ್ಕಾರ&#8230;</strong></p>



<p>ನಾನು ಕರಾವಳಿಯ ಮಂಗಳೂರಿನವ. ಸರ್ವ ಜಾತಿ ಮತದ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದ ನಾಡು ಒಮ್ಮೆ ಮತೀಯ ಮತ್ತು ಭಾವನಾತ್ಮಕ ಸಂಗತಿಗಳಿಗೆ ಬಲಿಯಾದರೆ ಎನಾಗುತ್ತದೆ ಎಂಬುವುದಕ್ಕೆ ಸಾಕ್ಷಿ ನಾನು.</p>



<p>ಒಂದು ಕಾಲದಲ್ಲಿ ಇಂತಹ ಮತೀಯ ಸಂಗತಿಗಳೇ ಶ್ರೇಷ್ಠವೆಂದು ಅದರ ಹಿಂದೆ ಹೋಗಿ ಅಲ್ಲಿನ ಸಾಮರಸ್ಯದ ಬದುಕಿಗೆ ಧಕ್ಕೆ ತಂದ ಪಾಪದಲ್ಲಿ ನನ್ನ ಪಾಲೂ ಇದೆ. ಈ ಪತ್ರ ನಾನು ಮಾಡಿದ ಪಾಪಕ್ಕೆ ಕೊಂಚ ಪ್ರಾಯಶ್ಚಿತ್ತ ಆದೀತೂ ಎಂದೂ ಭಾವಿಸುತ್ತೇನೆ.</p>



<p>ಕರಾವಳಿಯಲ್ಲಿ ಪದೇ ಪದೇ ನಡೆದ ಕೋಮು ದಳ್ಳುರಿಯ ಸುದ್ದಿ ಕೇಳಿದವರೇ ನೀವು. ಇಲ್ಲಿ ಹಂತ ಹಂತವಾಗಿ ಬೆಳೆದ ಕೋಮುವಾದದಿಂದ ಅನೇಕ ಹಿಂದೂ ಮತ್ತು ಮುಸ್ಲಿಂ ಯುವಕರು ಸ್ಮಶಾನಯಾತ್ರೆ ಮಾಡಿದ್ದರೆ, ಸಾವಿರಾರು ಯುವಕರು ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.</p>



<p>ಅತ್ಯಂತ ಖಚಿತವಾಗಿ ನಾನು ಕಳೆದ ೨೫ ವರ್ಷಗಳಿಂದ ಹೇಳಿಕೊಂಡು ಬಂದ ಒಂದು ವಿವರ ನಿಮಗೆ ಹೇಳಲೇ ಬೇಕಾಗಿದೆ.<br>ಹೀಗೆ ಜೈಲು ಸೇರಿದವರು ಮತ್ತು ಸ್ಮಶಾನ ಸೇರಿದವರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ ಯುವಕರು ಮಾತ್ರ.</p>



<p>ನೀವು ಈಗ ಹನುಮ ಧ್ವಜದ ಹೋರಾಟ ಎಂದು ಭಾವನಾತ್ಮಕವಾಗಿ ಬೀದಿಗೆ ಇಳಿಯತೊಡಗಿದ್ದೀರಿ. ಮಂಡ್ಯದಲ್ಲಿ ವಿಶ್ವವಿದ್ಯಾಲಯ ಸರ್ ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ ಸಾಕಷ್ಟು ಪದವಿ ಕಾಲೇಜುಗಳು,ಇಂಜಿನಿಯರಿಂಗ್ ಕಾಲೇಜು ಗಳು, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) &#8211; ವೈದ್ಯಕೀಯ ಕಾಲೇಜು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಉನ್ನತ ಕೇಂದ್ರ, ಕೃಷಿ ವಿಶ್ವವಿದ್ಯಾಲಯದ ಕೇಂದ್ರ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರ ಆವರಣ ಕೇಂದ್ರ ಶೈಕ್ಷಣಿಕ ವ್ಯವಸ್ಥೆಯಿದೆ.</p>



<p>ಶ್ರೀರಂಗಪಟ್ಟಣ ,ಟಿಪ್ಪೂ ಅರಮನೆ , ಕೋಟೆ, ಕುಂತಿ ಬೆಟ್ಟ , ರಂಗನ ತಿಟ್ಟು, ಚೆನ್ನ ಕೇಶವ ಸ್ವಾಮಿ ಗುಡಿ, ಸೇರಿದಂತೆ ಅನೇಕ ದೇವಸ್ಥಾನಗಳು, ಫಾಲ್ಸ್ ಗಳು, ಕೃಷ್ಣರಾಜ ಸಾಗರ ಆಣೆಕಟ್ಟು ಬೃಂದಾವನ ಹೀಗೆ ಬೇಕಾದಷ್ಟು ಪ್ರವಾಸಿ ತಾಣಗಳಿವೆ. ಅನೇಕ ಸಾಹಿತಿಗಳನ್ನು , ಒಳ್ಳೆಯ ರಾಜಕೀಯ ನಾಯಕರನ್ನೂ ನಿಮ್ಮ ಜಿಲ್ಲೆ ನೀಡಿದೆ.</p>



<p>ಈ ಹಿಂದೆ ನಿಮ್ಮ ಊರಿನಲ್ಲಿ ಹಿಂದೂ ದೇವಸ್ಥಾನಗಳು ಅಭಿವೃದ್ಧಿಯಾಗಿದೆಯಲ್ಲವೇ. ಬೇಕಾದಷ್ಟು ಧಾರ್ಮಿಕ ಕಾರ್ಯಕ್ರಮ ಆಗಿದೆಯಲ್ಲವೇ. ನಿಮ್ಮ ದೇವಸ್ಥಾನದ ಮೇಲೆ ದೇವರ ಧ್ವಜ ಹಾರಿಸಿದ್ದರೆ ಯಾರೂ ಬಂದು ತಡೆದದ್ದೂ ಇಲ್ಲ ಅಲ್ಲವೇ?.. ಯೋಚಿಸಿ. ಈಗ ಏಕಾಏಕಿ ಈ ಸಾರ್ವಜನಿಕ ಸ್ಥಳದಲ್ಲಿ ಅದೂ ರಾಷ್ಟ್ರ ಧ್ವಜ ಹಾರಿಸಲೆಂದು ಪರವಾನಿಗೆ ಪಡೆದು, ಹನುಮ ಧ್ವಜ ಹಾರಿಸಬೇಕೆಂಬ ಬೇಡಿಕೆಯ ಹಿಂದಿರುವ ಹುನ್ನಾರ ನೀವು ಅರ್ಥ ಮಾಡಿಕೊಳ್ಳಬೇಕಿದೆ.</p>



<p>ನೀವು ಯಾವುದೇ ರಾಜಕೀಯ ಪಕ್ಷದ ಹಿಂದೆ ಹೋಗಿ ನನ್ನ ಆಕ್ಷೇಪ ಕಿಂಚಿತ್ತೂ ಇಲ್ಲ. ಆದರೆ ಇಂತಹ ಭಾವನಾತ್ಮಕ ಸಂಗತಿಗಳನ್ನು ಮುಂದಿಟ್ಟು ಸಾರ್ವಜನಿಕವಾಗಿ ರಾಜಕೀಯ ಹೋರಾಟ ಎಂದಾದರೆ ಸಾವಿರ ಬಾರಿ ಯೋಚಿಸಬೇಕು.</p>



<p>ಬಿಜೆಪಿ ಅಂತಲ್ಲ. ನಾಳೆ ಜನತಾ ದಳ ಎಸ್ ಡಿ ಪಿ ಐ ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷವಾದರೂ ಸರಿ ಇಂತಹ ಹಿಂದೂ ಮುಸ್ಲಿಂ ಭಾವನಾತ್ಮಕ ವಿಷಯ ಇಟ್ಟು ಕೊಂಡು ಚುನಾವಣೆ ಸಮಯದಲ್ಲಿ ಗಲಭೆ ಎಬ್ಬಿಸುವ ಯಾವುದೇ ಸಂಗತಿಗಳನ್ನು ನೀವು ಈಗಲೇ ತಿರಸ್ಕರಿಸುವುದು ಒಳಿತು.</p>



<p>ಇಲ್ಲವಾದರೆ ನಿಮ್ಮ ಬಡವರ ಮನೆಯ ಮಕ್ಕಳು ಹೆಣವಾಗುವುದು, ಜೈಲು ಸೇರುವುದು ನಿಮ್ಮಲ್ಲೂ ಪ್ರಾರಂಭವಾಗುತ್ತದೆ. ಇದು ಮುಂದುವರಿದರೆ ನೆನಪಿಡಿ, ಚುನಾವಣೆ ಹತ್ತಿರ ಬಂದಂತೆ ಇನ್ನೂ ಕೆಟ್ಟ ಘಟನೆಗಳಿಗೆ ನೀವೇ ಸಾಕ್ಷಿಯಾಗುತ್ತೀರಿ.</p>



<p>೨೦೦೬ ರ ಮಂಗಳೂರು ಕೋಮು ಗಲಭೆ ವಿವರ ತೆಗೆದು ನೋಡಿ. ಸುಮಾರು ೫೦೦ ಯುವಕರು ಜೈಲಿಗೆ ಸೇರಿದ್ದು ಅವರೆಲ್ಲರೂ ರೂ ಬಡವರ ಮನೆಯ ಮಕ್ಕಳು.</p>



<p>ಈಗ ಮೊನ್ನೆ ನಡೆದ ನಿಮ್ಮ ಊರಿನ ಧ್ವಜದ ಪ್ರತಿಭಟನೆಯಲ್ಲಿ ಇದ್ದವರು ಯಾರು. ನನಗೆ ಗೊತ್ತಿಲ್ಲ. ನಿಮ್ಮ ಊರಿನ ರಾಜಕೀಯ ನಾಯಕರ ಮನೆಯ ಮಕ್ಕಳು, ಶ್ರೀಮಂತ ವರ್ಗದವರು, ಉತ್ತಮ ಉದ್ಯೋಗದಲ್ಲಿರುವವರು, ವೈಧ್ಯಕೀಯ ತಂತ್ರಜ್ಞಾನ ಇತ್ಯಾದಿ ಕಲಿಯುವ ವಿದ್ಯಾರ್ಥಿಗಳು ನಿಮ್ಮ ಜೊತೆಗಿದ್ದರೋ?<br></p>



<p>ಖಂಡಿತ ಇರಲಿಕ್ಕಿಲ್ಲ. ಮುಂದಿನ ದಿನಗಳಲ್ಲೂ ಇರುವುದಿಲ್ಲ. ಹಾಗಾದಾರೆ ಇವರಿಗಿಲ್ಲದ ಸಮಸ್ಯೆ ನಿಮಗೆ ಮಾತ್ರ ಆಗುವುದು ಹೇಗೇ? ನಿಮ್ಮನ್ನು ಪ್ರಚೋದಿಸುವವರ ಬಳಿ ನಾಳೆ ಕೇಸ್ ಆದರೆ ಜಾಮೀನಿಗೆ ಬರ್ತಿರಾ ಅಂತಾ ಒಂದು ಮಾತು ಕೇಳಿನೋಡಿ. ಸತ್ಯದ ಹುಡುಕಾಟಕ್ಕೆ ದೂರ ಹೋಗಬೇಕಿಲ್ಲ. ನಿಮಗೇ ಸಿಗುತ್ತದೆ.</p>



<p>ದೀರ್ಘ ಕಾಲದ ನಂತರ ಕರಾವಳಿಯಲ್ಲಿ ಭಾವನಾತ್ಮಕ ವಿಷಯಕ್ಕೆ ಹೊಡೆದಾಡಲು ಯುವಕರು ಕಡಿಮೆಯಾಗಿದ್ದಾರೆ. ಜನ ಬೆಂಬಲ ಕಡಿಮೆಯಾಗುತ್ತಿದೆ. ಇದಕ್ಕೆ ನಿಮ್ಮ ಊರು ಹೊಸ ಪ್ರಯೋಗ ಶಾಲೆಯಾಗಬೇಕೆ?</p>



<p>ಇಂತಹ ಕೋಮು ಗಲಭೆಯಿಂದಾಗಿ ಕಳೆದ ೩೦ ವರ್ಷಗಳಿಂದ ದ. ಕ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬರಲು ಹಿಂದೇಟು ಹಾಕುತ್ತಿವೆ. ಒಮ್ಮೆ ಕೋಮು ಗಲಭೆಯಾದರೆ ೨ ವರ್ಷ ವ್ಯಾಪಾರ ವ್ಯವಹಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.</p>



<p>ನಿಮ್ಮ ಊರು ಬೆಂಗಳೂರು ಮತ್ತು ಮೈಸೂರಿಗೆ ಸಮೀಪವಿದೆ. ಅಭಿವೃದ್ಧಿಯ ಪಥದಲ್ಲಿದೆ. ನಿಮ್ಮ ಸಕ್ಕರೆ ನಾಡು ಪ್ರೀತಿ ಸಹಬಾಳ್ವೆಯ ನಾಡು. ಒಮ್ಮೆ ಮತೀಯ ಹುಚ್ಚು ಶುರುವಾದರೆ ಹಳ್ಳಿ ಹಳ್ಳಿಯಲ್ಲಿ ಮನಸ್ಸುಗಳು ಒಡೆಯುತ್ತವೆ. ಅನಗತ್ಯ ಕ್ರೋಧಗೊಳ್ಳುತ್ತವೆ.</p>



<p>ಸಂಶಯದ ಸುಳಿ ಪ್ರತಿಯೊಬ್ಬರ ಬದುಕನ್ನೂ ಸುಡುತ್ತದೆ. ವ್ಯಾಪಾರ ವಹಿವಾಟು ಪದೇ ಪದೇ ಹೊಡೆತ ತಿನ್ನುತ್ತದೆ.<br>ಬಂದ್ ಲಾಠಿ ಚಾರ್ಜ್ ನಿತ್ಯದ ಕೆಲಸವಾಗುತ್ತದೆ. ನೆಮ್ಮದಿ ಸುಡುಗಾಡಿನ ಸಮಾಧಿಯ ಮೇಲಿನ ಹೂವಾಗುತ್ತದೆ.</p>



<p>ಸಾಮಾಜಿಕ ಜಾಲತಾಣದಲ್ಲಿ ಸುಳ್ಳುಗಳು ಕೇಕೆ ಹಾಕಲು ನಿಮ್ಮಲ್ಲಿ ಪ್ರಾರಂಭವಾಗಿದೆ. ಅದು ಬೆಂಕಿಗೆ ತುಪ್ಪ ಸುರಿಯುತ್ತದೆ.</p>



<p>ಇಂದು ಒಂದು ಧ್ವಜ, ನಾಳೆ ಮಂದಿರ ,ಮಸೀದಿ ಹೀಗೆ ನಿಧಾನವಾಗಿ ಕಿಚ್ಚು ಹಬ್ಬುತ್ತದೆ. ಅಮಾಯಕರ ಶವಗಳನ್ನು ಮೆಟ್ಟಿಲಾಗಿಸಿಕೊಂಡು ಶಾಸಕ , ಎಂಪಿ ಗಳಾಗುವ ರಾಜಕೀಯ ನಾಯಕರ ತಂತ್ರ ನಿಮ್ಮೆಲ್ಲರ ಬದುಕನ್ನೂ ನಾಶಮಾಡುತ್ತದೆ. ಮತ್ತೆ ಪ್ರತೀ ಚುನಾವಣೆ ಬರುವಾಗ ಒಂದು ಗಲಾಟೆ ಎರಡು ಹೆಣ, ಸಿಟ್ಟು ಉದ್ರೇಖದಿಂದ ನಮ್ಮ ಓಟಿನ ಚಲಾವಣೆ ಆಗುತ್ತದೆ ಇಷ್ಟೆ.</p>



<p>ನೀವು ನಾಡಿಗೆ ಸಕ್ಕರೆ ಹಂಚುವವರು.<br>ನೀವು ಸದಾ ಸಕ್ಜರೆಯನ್ನೇ ಹಂಚಬೇಕು.</p>



<p>ನಿಮ್ಮ ಬದುಕೂ ಸಿಹಿಯಾಗಿರಬೇಕು ಎಂಬುವುದಷ್ಟೇ ನನ್ನ ಆಸೆ. ಇಂತಹ ಸಮಸ್ಯೆ ಯುಾವುದೇ ಸಂಘ ಸಂಸ್ಥೆ ರಾಜಕೀಯ ಪಕ್ಷದವರು ಮಾಡಿದರೂ ಸರಿ. ಸಕ್ಕರೆ ಕಬ್ಬಿನ ಒಂದು ತುಂಡು ಕೊಟ್ಟು ಮರ್ಯಾದೆಯಿಂದ ಹೊರಗೆ ಕಳಿಸಿಬಿಡಿ.</p>



<p style="font-size:20px"><strong>ಎಂ ಜಿ ಹೆಗಡೆ,</strong> ಮಂಗಳೂರು </p>



<p></p>
]]></content:encoded>
					
		
		
			</item>
		<item>
		<title>ಇತರ ಧರ್ಮಗಳ ವ್ಯಾಪಾರಿಗಳಿಗೆ ಬಹಿಷ್ಕಾರ: ವಿಹಿಂಪ ನಡೆಯನ್ನು ಖಂಡಿಸಿದ ನಾಗರಿಕ ಸಂಘಟನೆಗಳು</title>
		<link>https://peepalmedia.com/organisations-opposes-vhps-call-to-boycott-traders/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Oct 2023 04:13:57 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[dasara]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=30056</guid>

					<description><![CDATA[ಮಂಗಳೂರು: ಜಿಲ್ಲೆಯ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಸ್ಥಳ ನೀಡಬಾರದೆಂದು ರಚ್ಚೆ ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌ ಈಗ ಹೊಸದೊಂದು ವರಾತ ತೆಗೆದಿದ್ದು, ಜನರಿಗೆ ಅಂಗಡಿಯ ಮುಂದೆ ಕೇಸರಿ ಬಾವುಟ ಕಟ್ಟಿರುವ ಜನರ ಬಳಿಯಷ್ಟೇ ವ್ಯಾಪಾರ ಮಾಡುವಂತೆ ಅದು ಕರೆ ನೀಡಿದೆ. ಈ ಕರೆಗೆ ವಿರೋಧ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ, ಮಂಗಳೂರಿನ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯು ಈ ಕರೆ ನೀಡಿರುವ ನಾಯಕರ ವಿರುದ್ಧ ಸರಕಾರ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪ್ರಕಟಣೆಯಲ್ಲಿ [&#8230;]]]></description>
										<content:encoded><![CDATA[
<p>ಮಂಗಳೂರು: ಜಿಲ್ಲೆಯ ಮಂಗಳಾದೇವಿ ದೇವಸ್ಥಾನದ ರಥಬೀದಿಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಸ್ಥಳ ನೀಡಬಾರದೆಂದು ರಚ್ಚೆ ಹಿಡಿದಿದ್ದ ವಿಶ್ವ ಹಿಂದೂ ಪರಿಷದ್‌ ಈಗ ಹೊಸದೊಂದು ವರಾತ ತೆಗೆದಿದ್ದು, ಜನರಿಗೆ ಅಂಗಡಿಯ ಮುಂದೆ ಕೇಸರಿ ಬಾವುಟ ಕಟ್ಟಿರುವ ಜನರ ಬಳಿಯಷ್ಟೇ ವ್ಯಾಪಾರ ಮಾಡುವಂತೆ ಅದು ಕರೆ ನೀಡಿದೆ.</p>



<p>ಈ ಕರೆಗೆ ವಿರೋಧ ವ್ಯಕ್ತಪಡಿಸಿರುವ ದಕ್ಷಿಣ ಕನ್ನಡ, ಮಂಗಳೂರಿನ ಜಾತ್ಯತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯು ಈ ಕರೆ ನೀಡಿರುವ ನಾಯಕರ ವಿರುದ್ಧ ಸರಕಾರ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿಎಚ್‌ಪಿ ಇತರ ಧರ್ಮದ ವ್ಯಾಪಾರಿಗಳನ್ನು ಬಹಿಷ್ಕರಿಸಲು ಕರೆ ನೀಡುವ ಮೂಲಕ ಜನರನ್ನು ವಿಭಜಿಸುತ್ತಿದೆ ಅದು ಹೇಳಿದೆ.</p>



<p>ವಿಎಚ್‌ಪಿ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ್ ಅವರು ಹೇಳಿಕೆ ನೀಡಿ, 2002ರಲ್ಲಿ ಜಾರಿಗೆ ತಂದಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ದತ್ತಿ ಕಾಯ್ದೆಯ ಪ್ರಕಾರ ಹಿಂದೂ ಧಾರ್ಮಿಕ ಸಂಸ್ಥೆಯ ಬಳಿ ಇರುವ ಜಾಗವನ್ನು ಅನ್ಯ ಧರ್ಮದ ವ್ಯಕ್ತಿಗೆ ಗುತ್ತಿಗೆ ನೀಡುವುದನ್ನು ನಿಷೇಧಿಸಲಾಗಿದೆ. ಆದರೆ ಮಂಗಳಾದೇವಿ ದೇವಿ ದೇವಸ್ಥಾನದ ಆಡಳಿತ ಮಂಡಳಿ ಇತರೆ ಧರ್ಮದ ಜನರಿಗೂ ಅವಕಾಶ ನೀಡಿದೆ ಎಂದು ಆರೋಪಿಸಿದ್ದಾರೆ.</p>



<p>ಆದರೆ ಈ ಹೇಳಿಕೆಯನ್ನು ಖಂಡಿಸಿರುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವ ಒಕ್ಕೂಟದ (ಡಿವೈಎಫ್‌ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ &#8220;ಈ ಹೇಳಿಕೆಯನ್ನು ಖಂಡಿಸಿದ ಮಾತನಾಡಿ, ಶತಮಾನಗಳಿಂದಲೂ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಆಚರಣೆಯಲ್ಲಿ ಎಲ್ಲಾ ಧರ್ಮದ ಜನರು ಸೇರುತ್ತಿದ್ದರು. ದೇವಸ್ಥಾನದ ಆಸುಪಾಸಿನಲ್ಲಿ ಎಲ್ಲಾ ಧರ್ಮದ ಜನರು ನಿಂತು ದಸರಾ ಹುಲಿ ಕುಣಿತವನ್ನು ನೋಡಿ ಆನಂದಿಸುತ್ತಿದ್ದರು, ಜಾತ್ರೆಯ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು. ಎಲ್ಲಾ ಧರ್ಮದ ಜನರು ಒಟ್ಟಾಗಿ ಸೇರುವ ಮೂಲಕ ಜಾತಿ, ಮತ ಮತ್ತು ಧರ್ಮದ ಮಿತಿಗಳನ್ನು ಮೀರಿ ಬದುಕು ನಡೆಸುತ್ತಿದ್ದಾರೆ&#8221; ಎಂದು ಹೇಳಿದರು.</p>



<p>ದೇವಸ್ಥಾನದ ಮುಂಭಾಗದ ರಸ್ತೆ ಮಂಗಳೂರು ಮಹಾನಗರ ಪಾಲಿಕೆಗೆ (ಎಂಸಿಸಿ) ಸೇರಿದ್ದು, ಅದರ ಜಮೀನಿನಲ್ಲಿ ಮಳಿಗೆಗಳನ್ನು ಹಾಕಲಾಗಿದೆ ಎಂದು ಹೇಳಿದರು.</p>



<p>ದೇವಸ್ಥಾನದ ಜಾತ್ರೆಯಲ್ಲಿ ಅನ್ಯ ಧರ್ಮದ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುವಂತೆ ಕರೆ ನೀಡುವುದು ಅಪರಾಧ ಎಂದು ವೇದಿಕೆ ಹೇಳಿದೆ. ಇದು ಸಂವಿಧಾನದ ಉಲ್ಲಂಘನೆಯಾಗಿದ್ದು, ಪೊಲೀಸರು ಹಾಗೂ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ.</p>



<p>ಮಂಗಳಾದೇವಿ ದೇವಸ್ಥಾನದ ದಸರಾ ಉತ್ಸವದಲ್ಲಿ ಬಿಜೆಪಿ ತನ್ನ ಕೋಮುವಾದಿ ತಂತ್ರ ಪ್ರಯೋಗ ಮಾಡುವ ಮೂಲಕ ಮುಂದಿನ ವರ್ಷದ ಲೋಕಸಭೆ ಚುನಾವಣೆಗೆ ಮುನ್ನ ಸಮಾಜವನ್ನು ಧ್ರುವೀಕರಣಗೊಳಿಸಲು ವಿಎಚ್‌ಪಿ ಮತ್ತು ಬಜರಂಗದಳವನ್ನು ಬಳಸಿಕೊಳ್ಳುತ್ತಿದೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದರು. ಕರಾವಳಿ ಭಾಗದ ಜನರು‌ ಇದಕ್ಕೆ ಮರುಳಾಗದೆ ಜಿಲ್ಲೆಯ ಒಗ್ಗಟ್ಟಿನ ಪರಂಪರೆಯನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.</p>



<p>ಈ ನಡುವೆ ವಿಎಚ್‌ಪಿ ಕರೆಗೆ ಸ್ಪಂದಿಸಿರುವ ಕೆಲವು ವ್ಯಾಪಾರಿಗಳು ತಮ್ಮ ಸ್ಟಾಲ್‌ಗಳ ಮುಂದೆ ಕೇಸರಿ ಧ್ವಜವನ್ನು ಪ್ರದರ್ಶಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮುಲ್ಕಿ&#124; ಹೆಂಗಸು ಸ್ನಾನ ಮಾಡುವಾಗ ವಿಡಿಯೋ ಮಾಡಿ ಸಿಕ್ಕಿಬಿದ್ದ ಹಿಂ ಜಾ ವೇ ಕಾರ್ಯಕರ್ತ</title>
		<link>https://peepalmedia.com/mulki-youth-arrested-for-peeking-in-to-bathroom/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Aug 2023 16:07:34 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[mulki]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=24933</guid>

					<description><![CDATA[ಮುಲ್ಕಿ: ಇಲ್ಲಿನ ಪಕ್ಷಿಕೆರೆ ಎನ್ನುವಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ಅದನ್ನು ಕದ್ದು ರೆಕಾರ್ಡ್‌ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಯುವಕ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯ ಎನ್ನಲಾಗಿದ್ದು, ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ ಪೂಜಾರಿ ಎಂದು ಗುರುತಿಸಲಾಗಿದೆ. ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು ಈ ವೇಳೆ ನೆರೆಮನೆಯವರು ಸುಮಂತ್ ನನ್ನು [&#8230;]]]></description>
										<content:encoded><![CDATA[
<p>ಮುಲ್ಕಿ: ಇಲ್ಲಿನ ಪಕ್ಷಿಕೆರೆ ಎನ್ನುವಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುತ್ತಿರುವಾಗ ಅದನ್ನು ಕದ್ದು ರೆಕಾರ್ಡ್‌ ಮಾಡುತ್ತಿದ್ದ ಯುವಕನೊಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.</p>



<p>ಯುವಕ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಸದಸ್ಯ ಎನ್ನಲಾಗಿದ್ದು, ಬಂಧಿತನನ್ನು ಪಕ್ಷಿಕೆರೆ ಹೊಸಕಾಡು ನಿವಾಸಿ ಸುಮಂತ ಪೂಜಾರಿ ಎಂದು ಗುರುತಿಸಲಾಗಿದೆ.</p>



<p>ಆರೋಪಿ ಸುಮಂತ್ ತನ್ನ ನೆರೆ ಮನೆಯ ಬಚ್ಚಲು ಕೋಣೆಯಲ್ಲಿ ಮಹಿಳೆಯೊಬ್ಬರು ಸ್ನಾನ ಮಾಡುವುದನ್ನು ವೀಡಿಯೊ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮೊಬೈಲ್ ಕ್ಯಾಮರಾ ಗಮನಿಸಿದ ಮಹಿಳೆ ಕಿರುಚಾಡಿದ್ದು ಈ ವೇಳೆ ನೆರೆಮನೆಯವರು ಸುಮಂತ್ ನನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಮುಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆ ಸ್ನಾನ ಮಾಡುವ ವೀಡಿಯೊ ಮಾಡಿದ್ದ ಮೊಬೈಲ್ ಸಹಿತ ಆತನನ್ನು ವಶಕ್ಕೆ ಪಡೆದು ಠಾಣೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.</p>



<p>ಸ್ಥಳೀಯ ಸಂಘ ಪರಿವಾರದ ನಾಯಕರ ಮಾತುಗಳಿಗೆ ಮಣಿದು ಪೊಲೀಸರು ಜಾಮೀನು ನೀಡಬಹುದಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಲಾಗಿದೆಯೆಂದು ವರದಿಯಾಗಿದೆ.</p>



<p>ಯುವಕನ ಮಾವ ಐವತ್ತು ಸಾವಿರ ರೂಪಾಯಿಗಳ ಬಾಂಡ್‌ ನೀಡಿದ ನಂತರ ಬಿಡುಗಡೆ ಮಾಡಲಾಗಿದೆಯೆಂದೂ ಹೇಳಲಾಗುತ್ತಿದೆ. ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ.</p>



<p>ಇತ್ತೀಚೆಗಷ್ಟೇ ಉಡುಪಿಯ ಟಾಯ್ಲೆಟ್ಟಿನಲ್ಲಿ ಮೊಬೈಲ್‌ ಇಟ್ಟು ರೆಕಾರ್ಡ್‌ ಮಾಡಿದ್ದಾರೆಂದು ಕರಾವಳಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಲಪಂಥೀಯ ಸಂಘಟನೆಯ ನಾಯಕರು ಈ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.</p>
]]></content:encoded>
					
		
		
			</item>
		<item>
		<title>ವಿಟ್ಲ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ</title>
		<link>https://peepalmedia.com/vitla-four-arrested-under-pocso-act/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Aug 2023 06:47:28 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[ARREST]]></category>
		<category><![CDATA[dakshina kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=24731</guid>

					<description><![CDATA[ಮಂಗಳೂರು: ವಿಟ್ಲದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಜುಲೈ 29ರಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಐದು ವ್ಯಕ್ತಿಗಳು ವಿವಿಧ ದಿನಾಂಕಗಳಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಸುಕುಮಾರ್‌, ಕಮಲಾಕ್ಷ, ಅಕ್ಷಯ್, ಮತ್ತು ಜಯಪ್ರಕಾಶ್ ಎನ್ನುವ ನಾಲ್ವರನ್ನು ಬಂಧಿಸಿದ್ದಾರೆ. ಐದನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಬಂಧಿತರಲ್ಲಿ [&#8230;]]]></description>
										<content:encoded><![CDATA[
<p>ಮಂಗಳೂರು: ವಿಟ್ಲದಲ್ಲಿ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.</p>



<p>ಜುಲೈ 29ರಂದು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ ತನ್ನ ಮಗಳ ಮೇಲೆ ಐದು ವ್ಯಕ್ತಿಗಳು ವಿವಿಧ ದಿನಾಂಕಗಳಂದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.</p>



<p>ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಸುಕುಮಾರ್‌, ಕಮಲಾಕ್ಷ, ಅಕ್ಷಯ್, ಮತ್ತು ಜಯಪ್ರಕಾಶ್ ಎನ್ನುವ ನಾಲ್ವರನ್ನು ಬಂಧಿಸಿದ್ದಾರೆ. ಐದನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.</p>



<p>ಬಂಧಿತರಲ್ಲಿ ಅಕ್ಷಯ್ ಪೇಂಟರ್ ಕೆಲಸ ಮಾಡುತ್ತಿದ್ದು, ಬೇರಿಪದವುನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದ. ಕಮಲಾಕ್ಷ ಗಾರೆ ಕೆಲಸ ಮಾಡುತ್ತಿದ್ದರೆ, ಸುಕುಮಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.</p>



<p>ಆರೋಪಿಗಳಲ್ಲಿ ಸುಕುಮಾರ್‌ ಮತ್ತು ಜಯಪ್ರಕಾಶ್‌ ಬಜರಂಗ ದಳಕ್ಕೆ ಸೇರಿದವರು ಎನ್ನಲಾಗುತ್ತಿದೆ</p>



<p>ಆದರೆ, ಸುಕುಮಾರ್ ಮತ್ತು ಜಯಪ್ರಕಾಶ್ ಬಜರಂಗದಳದೊಂದಿಗೆ ಸಂಬಂಧ ಹೊಂದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್ ಹೇಳಿದ್ದಾರೆ.</p>
]]></content:encoded>
					
		
		
			</item>
	</channel>
</rss>
