<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>manipuri news &#8211; Peepal Media</title>
	<atom:link href="https://peepalmedia.com/tag/manipuri-news/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 10 Feb 2025 06:30:27 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>manipuri news &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಣಿಪುರ: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಬಿರೇನ್ ಸಿಂಗ್ ರಾಜೀನಾಮೆ &#8216;ವಿಳಂಬವಾಯಿತು&#8217; ಎಂದ ಕಾಂಗ್ರೆಸ್</title>
		<link>https://peepalmedia.com/manipur-congress-says-biren-singhs-resignation-delayed-for-inciting-violence/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 10 Feb 2025 06:30:26 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mallikarjun Kharge]]></category>
		<category><![CDATA[manipur]]></category>
		<category><![CDATA[Manipur Government]]></category>
		<category><![CDATA[Manipur violence]]></category>
		<category><![CDATA[manipuri news]]></category>
		<category><![CDATA[modi]]></category>
		<category><![CDATA[N Biren Singh]]></category>
		<category><![CDATA[narendra modi]]></category>
		<category><![CDATA[Rahul Gandhi]]></category>
		<guid isPermaLink="false">https://peepalmedia.com/?p=53625</guid>

					<description><![CDATA[ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಡವಾಗಿ ರಾಜೀನಾಮೆ ನೀಡಿದ್ದು, &#8220;ಕುದುರೆ ಓಡಿ ಹೋದ ನಂತರ ಲಾಯದ ಬಾಗಿಲು ಮುಚ್ಚುವಂತಿದೆ,&#8221; ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. &#8220;21 ತಿಂಗಳ ಕಾಲ ಭಾರತೀಯ ಜನತಾ ಪಕ್ಷವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರನ್ನು, ಎಲ್ಲಾ ಸಮುದಾಯಗಳನ್ನು ಅವರವರೇ ರಕ್ಷಿಸಿಕೊಳ್ಳುವಂತೆ ಬಿಟ್ಟಿರುವುದು,&#8221; ಎಂದು ಹೇಳುವುದು ನೋವಿನ ಸಂಗತಿ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು. &#8220;ಈ ತಿರಸ್ಕಾರ ಮತ್ತು ನಿರಾಸಕ್ತಿಗೆ ನಿಜವಾದ ಕಾರಣ ಪ್ರಧಾನಿ ನರೇಂದ್ರ ಮೋದಿ. ಮಣಿಪುರ ಭಾರತದ ಒಂದು [&#8230;]]]></description>
										<content:encoded><![CDATA[
<p><a href="https://x.com/kharge/status/1888603452441547015" target="_blank" rel="noreferrer noopener">ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಡವಾಗಿ ರಾಜೀನಾಮೆ ನೀಡಿದ್ದು, &#8220;ಕುದುರೆ ಓಡಿ ಹೋದ ನಂತರ</a> ಲಾಯದ ಬಾಗಿಲು ಮುಚ್ಚುವಂತಿದೆ,&#8221; ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.</p>



<p>&#8220;21 ತಿಂಗಳ ಕಾಲ ಭಾರತೀಯ ಜನತಾ ಪಕ್ಷವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರನ್ನು, ಎಲ್ಲಾ ಸಮುದಾಯಗಳನ್ನು ಅವರವರೇ ರಕ್ಷಿಸಿಕೊಳ್ಳುವಂತೆ ಬಿಟ್ಟಿರುವುದು,&#8221; ಎಂದು ಹೇಳುವುದು ನೋವಿನ ಸಂಗತಿ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು.</p>



<p>&#8220;ಈ ತಿರಸ್ಕಾರ ಮತ್ತು ನಿರಾಸಕ್ತಿಗೆ ನಿಜವಾದ ಕಾರಣ ಪ್ರಧಾನಿ ನರೇಂದ್ರ ಮೋದಿ. ಮಣಿಪುರ ಭಾರತದ ಒಂದು ಭಾಗ ಎಂಬುದನ್ನು ಅವರು ಮರೆತಿದ್ದಾರೆ. ಅವರು ತಮ್ಮ ಸ್ಮರಣೆಯನ್ನು ಪುನರ್ನಿರ್ಮಿಸಿಕೊಂಡು ಭಾರತದ ನಕ್ಷೆಯಲ್ಲಿ ಮಣಿಪುರ ರಾಜ್ಯವನ್ನು ಗುರುತಿಸುವ ಸಮಯ ಬಂದಿದೆ!&#8221; ಎಂದು ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">The resignation of BJP’s Manipur CM is like ‘shutting the stable door after the horse has bolted’! <br><br>It is painful to say that for 21 months, the BJP ignited a fire in Manipur and left the people, across communities to fend for themselves. <br><br>Their rank incompetence and utter…</p>&mdash; Mallikarjun Kharge (@kharge) <a href="https://twitter.com/kharge/status/1888603452441547015?ref_src=twsrc%5Etfw">February 9, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಅವರ ಪ್ರತಿಕ್ರಿಯೆ ಪಕ್ಷಪಾತದಿಂದ ಕೂಡಿತ್ತು ಮತ್ತು ಅವರು ಬಹುಸಂಖ್ಯಾತವಾದವನ್ನು ಅವರು ಪ್ರಚೋದಿಸಿದರು ಎಂಬ ಕುಕಿ-ಜೋಮಿ-ಹ್ಮಾರ್ ಗುಂಪುಗಳ ಆರೋಪಗಳ ನಡುವೆ ಭಾನುವಾರ ಸಂಜೆ <u>ಬಿರೇನ್ ಸಿಂಗ್</u> ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>



<p>ಮೇ 2023 ರಿಂದ ಮೈತೈ ಮತ್ತು ಕುಕಿ-ಜೋಮಿ-ಹ್ಮಾರ್ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಕನಿಷ್ಠ 258 ಜನರು ಸಾವನ್ನಪ್ಪಿದ್ದಾರೆ ಮತ್ತು 59,000 ಕ್ಕೂ ಹೆಚ್ಚು ಜನರು ಮನೆಮಠ ಕಳೆದುಕೊಂಡಿದ್ದಾರೆ.</p>



<p>ರಾಜ್ಯದಲ್ಲಿ ಹಿಂಸಾಚಾರಕ್ಕೆ ಸಿಂಗ್ ಪ್ರಚೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ <a href="https://x.com/RahulGandhi/status/1888596005433815336" target="_blank" rel="noreferrer noopener"><u>ರಾಹುಲ್ ಗಾಂಧಿ</u></a> ಆರೋಪಿಸಿ, &#8220;ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡ, ಸುಪ್ರೀಂ ಕೋರ್ಟ್ ತನಿಖೆ ಮತ್ತು ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ,&#8221; ದ ಪರಿಣಾಮವಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">For nearly two years, BJP&#39;s CM Biren Singh instigated division in Manipur. PM Modi allowed him to continue despite the violence, loss of life, and the destruction of the idea of India in Manipur. <br><br>The resignation of CM Biren Singh shows that mounting public pressure, the SC…</p>&mdash; Rahul Gandhi (@RahulGandhi) <a href="https://twitter.com/RahulGandhi/status/1888596005433815336?ref_src=twsrc%5Etfw">February 9, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವುದು ಆದ್ಯತೆಯಾಗಿರಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ ಅವರು, &#8220;ಸಾಮಾನ್ಯ ಸ್ಥಿತಿಗೆ ಮರಳಲು ತಮ್ಮ ಯೋಜನೆಯನ್ನು ವಿವರಿಸಲು&#8221; ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.</p>



<p>ಸೋಮವಾರ ಮಣಿಪುರ ವಿಧಾನಸಭೆಯಲ್ಲಿ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತಮ್ಮ ಪಕ್ಷ ಸಜ್ಜಾಗಿದೆ ಎಂದು ಕಾಂಗ್ರೆಸ್ ನಾಯಕ <a href="https://x.com/Jairam_Ramesh/status/1888584196714537032" target="_blank" rel="noreferrer noopener">ಜೈರಾಮ್ ರಮೇಶ್ ಹೇಳಿದ್ದಾರೆ. ಸಂಘರ್ಷ ಪೀಡಿತ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಬೇಕು ಎಂಬ ವಿರೋಧ ಪಕ್ಷದ ಬೇಡಿಕೆಯನ್ನು ರಮೇಶ್ ಪುನರುಚ್ಚರಿಸಿದರು.</a></p>



<p>&#8220;ಮುಖ್ಯಮಂತ್ರಿಗಳ ರಾಜೀನಾಮೆ ತಡವಾಯಿತು. ಮಣಿಪುರದ ಜನರು ಈಗ ಫ್ರಾನ್ಸ್ ಮತ್ತು ಯುಎಸ್ಎಗೆ ಆಗಾಗ ಹಾರುವ ನಮ್ಮ ಪ್ರಧಾನ ಮಂತ್ರಿಯ ಭೇಟಿಗಾಗಿ ಕಾಯುತ್ತಿದ್ದಾರೆ &#8211; ಮತ್ತು ಕಳೆದ ಇಪ್ಪತ್ತು ತಿಂಗಳುಗಳಿಂದ ಮಣಿಪುರಕ್ಕೆ ಹೋಗಲು ಅವರಿಗೆ ಸಮಯ ಅಥವಾ ಒಲವು ಸಿಗಲಿಲ್ಲ,&#8221; ಎಂದು <a href="https://x.com/Jairam_Ramesh/status/1888584196714537032" target="_blank" rel="noreferrer noopener">ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ</a>.</p>



<p>21 ತಿಂಗಳ ಹಿಂದೆ ಹಿಂಸಾಚಾರ ಆರಂಭವಾದಾಗಿನಿಂದ, ಕುಕಿ-ಜೋಮಿ-ಹ್ಮಾರ್ ಗುಂಪುಗಳು ಸಂಘರ್ಷಕ್ಕೆ ಪಕ್ಷಪಾತದ ಧೋರಣೆ ಮತ್ತು ಬಹುಸಂಖ್ಯಾತ ನೀತಿಗಳಿಗಾಗಿ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕೆಂದು ಒತ್ತಾಯಿಸುತ್ತಿವೆ.</p>



<p>ಫೆಬ್ರವರಿ 3 ರಂದು, ಸುಪ್ರೀಂ ಕೋರ್ಟ್ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಂಗ್ ಅವರನ್ನು ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಆಡಿಯೋ ತುಣುಕುಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿತು.</p>



<p>ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. &#8220;ಸಂಘರ್ಷ ಹೇಗೆ ಮತ್ತು ಏಕೆ ಪ್ರಾರಂಭವಾಯಿತು&#8221; ಎಂಬುದಕ್ಕೆ ಮುಖ್ಯಮಂತ್ರಿಗಳೇ ಕಾರಣ ಎಂದು ಧ್ವನಿಮುದ್ರಿಕೆಗಳು ಹೇಳುತ್ತಿವೆ ಎಂದು ಆರೋಪಿಸಿ ಸಂಘಟನೆಯು ಆಡಿಯೋ ರೆಕಾರ್ಡಿಂಗ್‌ಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸಲು ಕೋರಿದೆ.</p>



<p>ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸ್ವತಂತ್ರ ವಿಧಿವಿಜ್ಞಾನ ಪ್ರಯೋಗಾಲಯ ಟ್ರುತ್‌ ಲ್ಯಾಬ್ಸ್ ಟೇಪ್‌ಗಳನ್ನು ಪರಿಶೀಲಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಧ್ವನಿಮುದ್ರಣಗಳಲ್ಲಿ ಕೇಳಿಬಂದ ಧ್ವನಿ ಮುಖ್ಯಮಂತ್ರಿಯವರದ್ದೇ ಎಂದು ಪ್ರಯೋಗಾಲಯವು 93% ಖಚಿತತೆಯೊಂದಿಗೆ ದೃಢಪಡಿಸಿದೆ ಎಂದು ಭೂಷಣ್ ಹೇಳಿದರು.</p>



<p></p>
]]></content:encoded>
					
		
		
			</item>
		<item>
		<title>ಹೊಸ ವರ್ಷದಲ್ಲಿ ಮತ್ತೆ ಭುಗಿಲೆದ್ದ ಮಣಿಪುರ ಹಿಂಸಾಚಾರ: ರಬ್ಬರ್‌ ಬುಲ್ಲೆಟ್‌ಗೆ ದೃಷ್ಟಿ ಕಳೆದುಕೊಂಡ ಮಹಿಳೆ</title>
		<link>https://peepalmedia.com/first-manipura-violence-to-break-out-in-the-new-year-woman-loses-sight-after-being-hit-by-rubber-bullet/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 06 Jan 2025 07:54:35 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manipur]]></category>
		<category><![CDATA[Manipur Government]]></category>
		<category><![CDATA[Manipur violence]]></category>
		<category><![CDATA[manipuri news]]></category>
		<guid isPermaLink="false">https://peepalmedia.com/?p=51732</guid>

					<description><![CDATA[ಬೆಂಗಳೂರು: ಮಣಿಪುರದಲ್ಲಿ ಹೊಸ ವರ್ಷದಲ್ಲಿ ಹಿಂಸಾಚಾರದ ಹೊಸ ಅಲೆ ಎದ್ದಿದ್ದು, 20 ತಿಂಗಳ ಅವಧಿಯ ಕಲಹ ಮುಂದುವರೆದಿದೆ. ಜನವರಿ 3 ರಂದು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ನಾಗರಿಕರ ಗುಂಪೊಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ಕಚೇರಿಗಳ ಮೇಲೆ ದಾಳಿ ಮಾಡಿದ ನಂತರ ಕಾಂಗ್ಪೊಕ್ಪಿ ಪಟ್ಟಣದ ಇಮಾ ಮಾರುಕಟ್ಟೆಯ ಬಳಿ ಹಿಂಸಾಚಾರ ಆರಂಭವಾಗಿದೆ. ಕಾಂಗ್‌ಪೊಕ್ಪಿ ಎಸ್‌ಪಿ ಮನೋಜ್ ಪ್ರಭಾಕರ್ ಅವರ ಹಣೆಯ ಮೇಲಿನ ಗಾಯಗಳ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ . ಕುಕಿ-ಜೋ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೇಂದ್ರೀಯ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಮಣಿಪುರದಲ್ಲಿ ಹೊಸ ವರ್ಷದಲ್ಲಿ ಹಿಂಸಾಚಾರದ ಹೊಸ ಅಲೆ ಎದ್ದಿದ್ದು, 20 ತಿಂಗಳ ಅವಧಿಯ ಕಲಹ ಮುಂದುವರೆದಿದೆ. ಜನವರಿ 3 ರಂದು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ನಾಗರಿಕರ ಗುಂಪೊಂದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರ ಕಚೇರಿಗಳ ಮೇಲೆ ದಾಳಿ ಮಾಡಿದ ನಂತರ ಕಾಂಗ್ಪೊಕ್ಪಿ ಪಟ್ಟಣದ ಇಮಾ ಮಾರುಕಟ್ಟೆಯ ಬಳಿ ಹಿಂಸಾಚಾರ ಆರಂಭವಾಗಿದೆ.</p>



<p>ಕಾಂಗ್‌ಪೊಕ್ಪಿ ಎಸ್‌ಪಿ ಮನೋಜ್ ಪ್ರಭಾಕರ್ ಅವರ ಹಣೆಯ ಮೇಲಿನ ಗಾಯಗಳ ಫೋಟೋವನ್ನು  ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ <a href="https://x.com/ros2648/status/1875736137270264106/photo/1">.</a></p>



<p>ಕುಕಿ-ಜೋ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೇಂದ್ರೀಯ ಪಡೆಗಳು ಡಿಸೆಂಬರ್ 31 ರಂದು ಈ ಪ್ರದೇಶದಲ್ಲಿ ದಬ್ಬಾಳಿಕೆ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆದವು ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಭದ್ರತಾ ಪಡೆಗಳ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ರಬ್ಬರ್ ಗುಂಡುಗಳನ್ನು ಹಾರಿಸಿದರು. ಇದರಿಂದ  45 ವರ್ಷದ ಹೆಶಿ ಮೇಟ್ ಎಂಬ ಮಹಿಳೆ ಕಣ್ಣು ಕಳೆದುಕೊಂಡಿದ್ದಾಳೆ. ಆ ದಿನ ಒಟ್ಟು 50 ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. </p>



<p>ಕುಕಿ-ಜೋ ಸಮುದಾಯದ ಸದಸ್ಯರು ಕಾಂಗ್‌ಪೋಕ್ಪಿ ಜಿಲ್ಲೆಯ ಸೈಬೋಲ್ ಗ್ರಾಮದಲ್ಲಿ ಕೇಂದ್ರ ಪಡೆಗಳ ಸಿಬ್ಬಂದಿಯನ್ನು ತೆಗೆದುಹಾಕಬೇಕು ಅಥವಾ ಬದಲಾಯಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.</p>



<p>ಸೈಬೋಲ್ ಗ್ರಾಮವು ಟ್ವಿಚಿನ್‌ನಿಂದ ಸರಿಸುಮಾರು ಎರಡು-ಕಿಲೋಮೀಟರ್ ದೂರದಲ್ಲಿದೆ, ಇದು &#8216;ಬಫರ್ ಝೋನ್&#8217; ನೊಳಗೆ ಬರುತ್ತದೆ, ಇದು ರಾಜ್ಯದ ಕುಕಿ ಪ್ರಾಬಲ್ಯದ ಬೆಟ್ಟಗಳನ್ನು ಮೈಥೈ ಪ್ರಾಬಲ್ಯದ ಇಂಫಾಲ್ ಕಣಿವೆಯಿಂದ ಪ್ರತ್ಯೇಕಿಸುತ್ತದೆ.</p>



<p>ಜನವರಿ 3 ರಂದು ನಡೆದ ಹಿಂಸಾಚಾರದಲ್ಲಿ ಏಳು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಎಸ್ಪಿ ಪ್ರಭಾಕರ್ ಹೇಳಿರುವುದು <a href="https://thewire.in/government/manipur-kuki-zo-security-forces-eye">ದಿ ವೈರ್‌ನಲ್ಲಿ</a> ವರದಿಯಾಗಿದೆ. </p>



<p>&#8220;ಪ್ರತಿಭಟನಾಕಾರರು CAPF ತೆಗೆದುಹಾಕಿ CRPF ತರುವ ಅವರ ಬೇಡಿಕೆಯನ್ನು ಈಡೇರಿಸದ ಕಾರಣ ನಮ್ಮ SP ಕಚೇರಿಗೆ ಬೀಗ ಹಾಕಲು ಬಂದರು, ಆದರೆ ಅವರು ವಿಫಲರಾದರು&#8221; ಎಂದು ಅವರು ಹೇಳಿದರು.</p>



<p>ಆದಾಗ್ಯೂ, CAPF ಪಡೆಗಳನ್ನು ಹಿಂತೆಗೆದುಕೊಂಡು CRPF ತರಲಾಗುವುದು ಎಂದು ಕಾಂಗ್ಪೊಕ್ಪಿ ಎಸ್ಪಿ ಭರವಸೆ ನೀಡಿದ್ದಾರೆ. &#8220;ಕೆಲವು ಕಾರ್ಯತಂತ್ರದ ಕಾರಣಗಳಿಂದ, ಇದು ಆಗಿರಲಿಲ್ಲ &#8211; ಆದ್ದರಿಂದ ಅವರು ನಮ್ಮ ಕಚೇರಿಯನ್ನು ಸೀಲ್ ಮಾಡಲು ಬಂದರು ಮತ್ತು ಕಾನೂನು ಹಾಗೂ ಸುವ್ಯವಸ್ಥೆಗೆ ಅಡ್ಡಿಪಡಿಸಿದರು, ಆದರೆ ಭಾರತದಲ್ಲಿ ನ್ಯಾಯ ವ್ಯವಸ್ಥೆಯು ಇನ್ನೂ ಜೀವಂತವಾಗಿರುವುದರಿಂದ ನಾವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದೇವೆ&#8221; ಎಂದು ಪ್ರಭಾಕರ್ ಹೇಳಿದರು. </p>



<p><strong>ಡಿಸೆಂಬರ್ 31</strong></p>



<p>ಕುಕಿ-ಜೋ ಬೆಟ್ಟದ ಬುಡಕಟ್ಟು ಮಂಡಳಿಯ ಪ್ರಕಾರ, ಡಿಸೆಂಬರ್ 31 ರಂದು,  &#8220;ಕುಕಿ ಮಹಿಳೆಯರು, ಅಚಲವಾದ ಶಕ್ತಿ ಮತ್ತು ನಿರ್ಣಯದೊಂದಿಗೆ, ರಾತ್ರಿಯಿಡೀ ದೃಢವಾಗಿ ನಿಂತರು, ಸೈಬೋಲ್ ಗ್ರಾಮವನ್ನು ಪ್ರವೇಶಿಸದಂತೆ ಕೇಂದ್ರೀಯ ಪಡೆಗಳನ್ನು ತಡೆದರು.&#8221;</p>



<p>ಆ ಪ್ರದೇಶದಲ್ಲಿ ವಾಸಿಸುವ ಕುಕಿಗಳು ತಮ್ಮ ಮೇಲೆ ದಾಳಿ ಮಾಡಲು ಕೇಂದ್ರ ಪಡೆಗಳು ಸಶಸ್ತ್ರ ಅರಂಬೈ ತೆಂಗೋಲ್‌ನಂತಹ ಗುಂಪುಗಳಿಗೆ ಸಹಾಯ ಮಾಡುತ್ತಿವೆ ಎಂದು ನಂಬುತ್ತಾರೆ.</p>



<p>ಹೇಶಿ ಮೇಟ್ ಕಣ್ಣು ಕಳೆದುಕೊಂಡರು ಎಂದು ಕುಕಿಸ್ ಹೇಳಿದರೆ, ಮಣಿಪುರ ಪೊಲೀಸರು ಪರಿಸ್ಥಿತಿ ಶಾಂತಿಯುತವಾಗಿದೆ ಎಂದು ವಿವರಿಸಿದರು.</p>



<p>ಡಿಸೆಂಬರ್ 31 ರಂದು ಪತ್ರಿಕಾ ಪ್ರಕಟಣೆಯಲ್ಲಿ ಪೊಲೀಸರು ಹೀಗೆ ಹೇಳಿದ್ದಾರೆ, “ತಮ್ನಾಪೊಕ್ಪಿ ಬಳಿಯ ಉಯೋಕ್ಚಿಂಗ್‌ನಲ್ಲಿ ಸೇನೆ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ನಿಯೋಜನೆಯನ್ನು ಅಡ್ಡಿಪಡಿಸಲು ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರಯತ್ನಿಸಿದರು. ಜಂಟಿ ಭದ್ರತಾ ಪಡೆಗಳು ಕನಿಷ್ಠ ಬಲದ ಬಳಕೆಯಿಂದ ಗುಂಪನ್ನು ಚದುರಿಸಿದವು ಮತ್ತು ಪರಿಸ್ಥಿತಿ ಈಗ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಪ್ರದೇಶದಲ್ಲಿ ಪ್ರಾಬಲ್ಯ ಸಾಧಿಸಲು ಮತ್ತು ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಪಡೆಗಳನ್ನು ಬೆಟ್ಟದ ತುದಿಯಲ್ಲಿ ನಿಯೋಜಿಸಲಾಗಿದೆ.&#8221;</p>



<p>ಕುಕಿ ಜನರ ಪ್ರಕಾರ ಗಾಯಗೊಂಡ ಮಹಿಳೆಯರನ್ನು, ಕಾಂಗ್ಪೊಕ್ಪಿ ಜಿಲ್ಲೆಯ ಸೈಕುಲ್ ಪಟ್ಟಣಕ್ಕೆ ಕರೆತರಲಾಯಿತು. ಸೈಕುಲ್ ಸೈಬೋಲ್ ಗ್ರಾಮಕ್ಕೆ ಸಮೀಪವಿರುವ ಪಟ್ಟಣವಾಗಿದೆ ಮತ್ತು ಕಾಂಗ್ಪೋಕ್ಪಿ ಪಟ್ಟಣದಿಂದ 28 ಕಿಲೋಮೀಟರ್ ದೂರದಲ್ಲಿದೆ. ಸರಿಸುಮಾರು 70,000 ಜನಸಂಖ್ಯೆಯನ್ನು ಹೊಂದಿರುವ ಸೈಕುಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇವಲ ಇಬ್ಬರು ವೈದ್ಯರಿದ್ದಾರೆ. ಮೊದಲು, ನಾಲ್ವರು ಇದ್ದರು, ಆದರೆ ಅವರಲ್ಲಿ ಇಬ್ಬರು ಮೈಥೈ ಸಮುದಾಯದವರಾಗಿದ್ದರಿಂದ, ಮೇ 2023 ರಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಅವರು ಸೈಕುಲ್ ಅನ್ನು ತೊರೆದರು.</p>



<p>ಹೇಶಿ ಮೇಟ್ ಮಾತ್ರ ಗಾಯಗೊಂಡ ವ್ಯಕ್ತಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ. ಆಕೆಯ ಕುಟುಂಬವು ಗುವಾಹಟಿಯ ಶ್ರೀ ಶಂಕರದೇವ ನೇತ್ರಾಲಯವನ್ನು ತಲುಪಿದಾಗ, ಆಕೆಯ ಎಡಗಣ್ಣಿನ ದೃಷ್ಟಿ ಸಂಪೂರ್ಣವಾಗಿ ಕಳೆದುಕೊಂಡಿತ್ತು ಎಂದು ವೈದ್ಯರು ಹೇಳಿದರು.</p>



<p>ಕಾರ್ಯಾಚರಣೆಯ ಸಂದರ್ಭದಲ್ಲಿ ಕುಟುಂಬದೊಂದಿಗೆ ಉಪಸ್ಥಿತರಿದ್ದ ಕುಕಿ ವಿದ್ಯಾರ್ಥಿ ಸಂಘಟನೆಯ (ಕೆಎಸ್‌ಒ) ನಾಯಕ ಪಾವೊಲೆಂಥಾಂಗ್ ಡೌಂಗೆಲ್ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ಕುಟುಂಬದ ಬಳಿ ಹಣವಿಲ್ಲ ಮತ್ತು ಮಣಿಪುರ ಸರ್ಕಾರವು ಹೇಶಿಯ ಶಸ್ತ್ರಚಿಕಿತ್ಸೆಗೆ ನಮಗೆ ಸಹಾಯ ಮಾಡುತ್ತಿಲ್ಲ. ಗಿರಿಜನರು ಅವರ ಆಪರೇಷನ್‌ಗಾಗಿ ಹೇಗಾದರೂ ಮಾಡಿ, ಬಹಳ ಅವಸರದ ನಡುವೆಯೇ ಹಣವನ್ನು ಸಂಗ್ರಹಿಸಿದ್ದಾರೆ. ಇಲ್ಲದಿದ್ದರೆ, ಆ ಮಹಿಳೆ ಗಾಯಗಳಿಂದ ಮಣಿಪುರದಲ್ಲಿ ಸಾಯುತ್ತಿದ್ದರು, ”ಎಂದು ಅವರು ಹೇಳಿದರು.</p>



<p>ಸೈಕುಲ್‌ನ ಕೆಎಸ್‌ಒ ವಿಭಾಗದ ಮುಖಂಡ ಗೌಪು ಮಾತನಾಡಿ, “ವೈದ್ಯರ ಕೊರತೆಯ ನಡುವೆಯೂ ಸಿಎಚ್‌ಸಿ ಸಾಯಿಕುಲ್‌ನಲ್ಲಿ ಲಭ್ಯವಿರುವ ವೈದ್ಯರು ಎಲ್ಲಾ ಗಾಯಾಳುಗಳನ್ನು ಹಾಜರುಪಡಿಸಿದರು ಮತ್ತು ಅಗತ್ಯ ವೈದ್ಯಕೀಯ ಸೇವೆಯನ್ನು ಒದಗಿಸಿದರು. ತಜ್ಞ ಅಥವಾ ತೃತೀಯ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೇಳಲಾಗಿದೆ,&#8221; ಎಂದು ಹೇಳಿದ್ದಾರೆ</p>



<p>ಪ್ರತಿಭಟನೆಯಲ್ಲಿ, ಕಾಂಗ್ಪೊಕ್ಪಿ ಮೂಲದ ಬುಡಕಟ್ಟು ಐಕ್ಯತೆಯ ಸಮಿತಿ (COTU) ರಾಷ್ಟ್ರೀಯ ಹೆದ್ದಾರಿ 2 ರ ಪ್ರಮುಖ ಸಾರಿಗೆ ಮಾರ್ಗವನ್ನು ಎರಡು ದಿನಗಳ ಕಾಲ ತಡೆಹಿಡಿದಿದೆ, ಇದು ಮೈಥೈಗಳ ತವರು ಇಂಫಾಲ್ ಕಣಿವೆಗೆ ಸರಕುಗಳ ಸಾಗಣೆಯಲ್ಲಿ ಅಡಚಣೆಯನ್ನು ಉಂಟುಮಾಡಿತು. ಇದೀಗ ಹೆದ್ದಾರಿ ಪುನಾರಂಭಗೊಂಡಿದೆ. </p>



<p>ಮಣಿಪುರದಲ್ಲಿ ಮೇ 2023 ರಂದು ಪ್ರಾರಂಭವಾದ ಜನಾಂಗೀಯ ಹಿಂಸಾಚಾರವು ಕನಿಷ್ಠ 250 ಜನರ ಪ್ರಾಣವನ್ನು ತೆಗೆದುಕೊಂಡಿದೆ ಮತ್ತು 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಮತ್ತು 11,000 ಜನರು ಊರು ಬಿಟ್ಟಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಣಿಪುರ ಹಿಂಸಾಚಾರ: ಒಟ್ಟು 3,023 ಪ್ರಕರಣಗಳಲ್ಲಿ ಕೇವಲ 6% ಪ್ರಕರಣಗಳಲ್ಲಿ ಮಾತ್ರ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿಗಳು</title>
		<link>https://peepalmedia.com/manipur-violence-sits-file-chargesheets-in-only-6-of-total-3023-cases/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Dec 2024 10:53:40 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[manipur]]></category>
		<category><![CDATA[Manipur Government]]></category>
		<category><![CDATA[Manipur violence]]></category>
		<category><![CDATA[manipuri news]]></category>
		<category><![CDATA[SITs]]></category>
		<guid isPermaLink="false">https://peepalmedia.com/?p=50858</guid>

					<description><![CDATA[ಬೆಂಗಳೂರು: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ 42 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಿತ್ತು. 42 ಎಸ್‌ಐಟಿಗಳು ದಾಖಲಾಗಿರುವ ಒಟ್ಟು 3,023 ಪ್ರಕರಣಗಳಲ್ಲಿ ಕೇವಲ 6 ಪ್ರತಿಶತದಷ್ಟು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿವೆ. ಅತ್ಯಾಚಾರ, ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಬೆಂಕಿ ಹಚ್ಚುವಿಕೆ, ಲೂಟಿ, ಕೊಲೆಯಂತಹ ಘೋರ ಅಪರಾಧಗಳಿಗೆ ಸಂಬಂಧಿಸಿದ ಚಾರ್ಜ್‌ಶೀಟ್‌ಗಳನ್ನು ಕೇವಲ 192 ಪ್ರಕರಣಗಳಲ್ಲಿ ಮಾತ್ರ ದಾಖಲಿಸಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ . ದೇಶಾದ್ಯಂತ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಆಗಸ್ಟ್ 2023 [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ 42 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಿತ್ತು. 42 ಎಸ್‌ಐಟಿಗಳು ದಾಖಲಾಗಿರುವ ಒಟ್ಟು 3,023 ಪ್ರಕರಣಗಳಲ್ಲಿ ಕೇವಲ 6 ಪ್ರತಿಶತದಷ್ಟು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿವೆ.</p>



<p>ಅತ್ಯಾಚಾರ, ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಬೆಂಕಿ ಹಚ್ಚುವಿಕೆ, ಲೂಟಿ, ಕೊಲೆಯಂತಹ ಘೋರ ಅಪರಾಧಗಳಿಗೆ ಸಂಬಂಧಿಸಿದ ಚಾರ್ಜ್‌ಶೀಟ್‌ಗಳನ್ನು ಕೇವಲ 192 ಪ್ರಕರಣಗಳಲ್ಲಿ ಮಾತ್ರ ದಾಖಲಿಸಲಾಗಿದೆ ಎಂದು <a href="https://www.thehindu.com/news/national/manipur/manipur-sits-file-chargesheets-in-just-6-of-3023-cases/article68996210.ece"><em>ದಿ ಹಿಂದೂ</em></a> ವರದಿ ಮಾಡಿದೆ .</p>



<p>ದೇಶಾದ್ಯಂತ ಪೊಲೀಸ್ ಅಧಿಕಾರಿಗಳನ್ನು ಸೇರಿಸಿ ಆಗಸ್ಟ್ 2023 ರಲ್ಲಿ ರಚಿಸಲಾದ ಎಸ್‌ಐಟಿಗಳು ನವೆಂಬರ್ 20 ರವರೆಗೆ 384 ಜನರನ್ನು ಬಂಧಿಸಿ, 742 ಶಂಕಿತರನ್ನು ಗುರುತಿಸಿ, 11,901 ಸಾಕ್ಷಿಗಳನ್ನು ವಿಚಾರಣೆ ನಡೆಸಿದ್ದವು.</p>



<p>ಇದುವರೆಗೆ 574 ಆರೋಪಿಗಳ ವಿರುದ್ಧ ಆರೋಪ ಮಾಡಲಾಗಿದೆ. ಎಸ್‌ಐಟಿಗಳು 13,464 ಮದ್ದುಗುಂಡುಗಳ ಜೊತೆಗೆ ರಾಜ್ಯದ ಪೊಲೀಸ್ ಶಸ್ತ್ರಾಸ್ತ್ರಗಳಿಂದ ಲೂಟಿ ಮಾಡಿದ್ದ 501 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.</p>



<p>ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಿ, SITಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗಿದೆ &#8211; ಕೊಲೆ ಮತ್ತು ಘೋರ ಅಪರಾಧದ ಪ್ರಕರಣಗಳಿಗೆ ಒಂದು ಗುಂಪು; ಮಹಿಳೆಯರ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಮತ್ತೊಂದು ಗುಂಪು; ಮತ್ತು ಬೆಂಕಿ ಹಚ್ಚುವಿಕೆ, ಲೂಟಿ ಮತ್ತು ಇತರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ನಾಲ್ಕು ಗುಂಪುಗಳು.</p>



<p>42 ಎಸ್‌ಐಟಿಗಳು 126 ಕೊಲೆ ಪ್ರಕರಣಗಳು, ಒಂಬತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧ ಪ್ರಕರಣಗಳು ಮತ್ತು 2,888 ಲೂಟಿ, ಬೆಂಕಿ ಹಚ್ಚುವಿಕೆ ಮತ್ತು ಇತರ ಆಸ್ತಿ ಅಪರಾಧಗಳ ಬಗ್ಗೆ ತನಿಖೆ ನಡೆಸುತ್ತಿವೆ.</p>



<p>ಮೇ 2023 ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರವು ಪ್ರಾರಂಭವಾಯಿತು. ಈಗಲೂ ಈ ಹಿಂಸಾಚಾರ ಮುಂದುವರಿದಿದೆ. ನೂರಾರು ಜನರ ಹತ್ಯೆಯಾಗಿದೆ, ಹತ್ತಾರು ಸಾವಿರ ಜನರು ಮನೆಮಠ ಕಳೆದುಕೊಂಡಿದ್ದಾರೆ, ಜನರು ಜನಾಂಗೀಯವಾಗಿ ವಿಭಜಿಸಲ್ಪಟ್ಟಿದ್ದಾರೆ.  </p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ಮಣಿಪುರ: ಇಂಟರ್ನೆಟ್‌ ಬ್ಯಾನ್, ಕರ್ಫ್ಯೂ, ಮಾಜಿ ಸೈನಿಕನ ಹತ್ಯೆ</title>
		<link>https://peepalmedia.com/manipur-internet-shutdown-curfew/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 11 Sep 2024 06:06:18 +0000</pubDate>
				<category><![CDATA[ದೇಶ]]></category>
		<category><![CDATA[Curfew]]></category>
		<category><![CDATA[internet shutdown]]></category>
		<category><![CDATA[manipur]]></category>
		<category><![CDATA[Manipur Government]]></category>
		<category><![CDATA[Manipur violence]]></category>
		<category><![CDATA[manipuri news]]></category>
		<guid isPermaLink="false">https://peepalmedia.com/?p=45225</guid>

					<description><![CDATA[ಬೆಂಗಳೂರು: ಮಣಿಪುರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಡುವೆ, ಅಧಿಕಾರಿಗಳು ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಿದ್ದಾರೆ. ಇದು ಮಂಗಳವಾರ (ಸೆಪ್ಟೆಂಬರ್ 10) ರಿಂದ  ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 163 ರ ಅಡಿಯಲ್ಲಿ ಜಾರಿಗೆ ಬಂದಿದೆ. ಮಂಗಳವಾರ ಮಣಿಪುರ ಸರ್ಕಾರ ರಾಜ್ಯಾದ್ಯಂತ ಐದು ದಿನಗಳ ಕಾಲ&#160; ಲೀಸ್ ಲೈನ್‌ಗಳು, ವಿಎಸ್‌ಎಟಿಗಳು, ಬ್ರಾಡ್‌ಬ್ಯಾಂಡ್‌ಗಳು ಮತ್ತು ವಿಪಿಎನ್ ಸೇವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳ ಮೇಲೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಮಣಿಪುರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಡುವೆ, ಅಧಿಕಾರಿಗಳು ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಅನಿರ್ದಿಷ್ಟ ಕರ್ಫ್ಯೂ ವಿಧಿಸಿದ್ದಾರೆ. ಇದು ಮಂಗಳವಾರ (ಸೆಪ್ಟೆಂಬರ್ 10) ರಿಂದ  ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 163 ರ ಅಡಿಯಲ್ಲಿ ಜಾರಿಗೆ ಬಂದಿದೆ.</p>



<p>ಮಂಗಳವಾರ ಮಣಿಪುರ ಸರ್ಕಾರ ರಾಜ್ಯಾದ್ಯಂತ ಐದು ದಿನಗಳ ಕಾಲ&nbsp; ಲೀಸ್ ಲೈನ್‌ಗಳು, ವಿಎಸ್‌ಎಟಿಗಳು, ಬ್ರಾಡ್‌ಬ್ಯಾಂಡ್‌ಗಳು ಮತ್ತು ವಿಪಿಎನ್ ಸೇವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳ ಮೇಲೆ ನಿಷೇಧ ಹೇರಿದೆ . ನಂತರ, ಪರಿಷ್ಕೃತ ಆದೇಶವನ್ನು ಹೊರಡಿಸಲಾಗಿದ್ದು, ಇದರಲ್ಲಿ ಕಣಿವೆ ಜಿಲ್ಲೆಗಳಿಗೆ ಮಾತ್ರ ಇಂಟರ್ನೆಟ್ ನಿಷೇಧ ಎಂದು ಒತ್ತಿಹೇಳಲಾಗಿದ್ದು, ಬೆಟ್ಟದ ಜಿಲ್ಲೆಗಳನ್ನು ಹೊರಗಿಡಲಾಗಿದೆ.</p>



<p>“ಮಣಿಪುರ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾರ್ವಜನಿಕರ ಭಾವೋದ್ರೇಕಗಳನ್ನು ಪ್ರಚೋದಿಸುವ ಚಿತ್ರಗಳು, ದ್ವೇಷ ಭಾಷಣ ಮತ್ತು ದ್ವೇಷದ ವೀಡಿಯೊ ಸಂದೇಶಗಳನ್ನು ಪ್ರಸಾರ ಮಾಡಲು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಬಹುದೆಂಬ ಆತಂಕವಿದೆ. ಮಣಿಪುರ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ, ”ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="724" height="1024" src="https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1.png" alt="" class="wp-image-45226" style="width:403px;height:auto" srcset="https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1.png 724w, https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1-212x300.png 212w, https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1-150x212.png 150w, https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1-300x424.png 300w, https://peepalmedia.com/wp-content/uploads/2024/09/Screenshot-2024-09-10-at-6.18.56-PM-724x1024-1-696x984.png 696w" sizes="(max-width: 724px) 100vw, 724px" /><figcaption class="wp-element-caption">ಇಟರ್ನೆಟ್ ನಿಷೇಧಿಸಲು ಮಣಿಪುರ ಸರ್ಕಾರ ಹೊರಡಿಸಿದ ಪರಿಷ್ಕೃತ ಆದೇಶ</figcaption></figure></div>


<p>.</p>



<p>ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ರಾಜ್ಯ ರಾಜಧಾನಿಯಲ್ಲಿ ಬೀದಿಗಿಳಿದರು, ಅಧಿಕಾರಿಗಳು ವಿಧಿಸಿದ ಕರ್ಫ್ಯೂ ಅನ್ನು ಧಿಕ್ಕರಿಸಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಯಿತು ಎಂದು <a href="https://x.com/ImphalFreePress/status/1833449898114441311" data-type="link" data-id="https://x.com/ImphalFreePress/status/1833449898114441311">ಇಂಫಾಲ್ ಫ್ರೀ ಪ್ರೆಸ್ </a>ವರದಿ ಮಾಡಿದೆ. <a href="https://www.thehindu.com/news/national/manipur/manipur-students-attempt-to-march-to-raj-bhavan-injured-in-clashes-with-police/article68626222.ece">ಪಿಟಿಐ ಪ್ರಕಾರ</a> , ಘರ್ಷಣೆಯಲ್ಲಿ 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.</p>



<p>ಮಣಿಪುರದ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಶಾಂತಿ ಮತ್ತು ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.</p>



<p>“ಹಿಂಸಾತ್ಮಕ ಘಟನೆಗಳ ಹಠಾತ್ ಉಲ್ಬಣದ ಹಿನ್ನೆಲೆಯಲ್ಲಿ, ರಾಜ್ಯಪಾಲ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಸಮಸ್ಯೆಗೆ ಹಿಂಸಾಚಾರ ಪರಿಹಾರವಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ. ಪ್ರತಿಯೊಬ್ಬರೂ ಶಾಂತಿಗಾಗಿ ಕೊಡುಗೆ ನೀಡಬೇಕು ಮತ್ತು ಈ ಸಮಸ್ಯೆಯನ್ನು ನಿವಾರಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ಸಾರ್ವಜನಿಕರ ಸಹಾಯದೊಂದಿಗೆ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ ಗೌರವಾನ್ವಿತ ರಾಜ್ಯಪಾಲರು ಸಾರ್ವಜನಿಕ ಮುಖಂಡರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರೊಂದಿಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಇದಲ್ಲದೆ, ಈ ನಿಟ್ಟಿನಲ್ಲಿ ಸಮರ್ಪಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯಪಾಲರ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.</p>



<p>ಭಾನುವಾರ ರಾತ್ರಿ, ಕುಕಿ-ಜೋ ಸಮುದಾಯದ ನಿವೃತ್ತ ಸೇನಾ ಸಿಬ್ಬಂದಿಯನ್ನು ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ ಅವರು ಉದ್ದೇಶಪೂರ್ವಕವಾಗಿ ಮೈಥೆಯಿ ಪ್ರಾಬಲ್ಯದ ಪ್ರದೇಶಕ್ಕೆ ಪ್ರವೇಶಿಸಿದ ಕಾರಣಕ್ಕೆ ಮಾರಣಾಂತಿಕವಾಗಿ ಥಳಿಸಲಾಗಿತ್ತು.</p>



<p>ಕಾಂಗ್‌ಪೋಕ್ಪಿ ಜಿಲ್ಲೆಯ ಮಾಜಿ ಹವಲ್ದಾರ್ ಲಿಮ್ಖೋಲೋಯ್ ಮೇಟ್ ಅವರು ಸೋಮವಾರ ಬೆಳಿಗ್ಗೆ ಇಂಫಾಲ್ ಪಶ್ಚಿಮದ ಸೆಕ್ಮೈನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಇವರು ಸ್ನೇಹಿತನನ್ನು ಬಿಟ್ಟು ಬರಲು ಲೀಮಾಖೋಂಗ್‌ಗೆ ಹೋಗಿದ್ದರೆಂದು ವರದಿಯಾಗಿದೆ. ಆದರೆ ಅವರು ಹಿಂದಿರುಗುತ್ತಿದ್ದಾಗ ಕುಕಿ-ಜೋ ಮತ್ತು ಮೈಥೆಯಿ ಪ್ರದೇಶಗಳ ನಡುವಿನ ಬಫರ್ ವಲಯವನ್ನು ದಾಟಿದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಮೇಟ್‌ರವರ ಮರಣವು ಕುಕಿ-ಜೋಸ್ ಮತ್ತು ಮೈಥೆಯಿಗಳ ನಡುವಿನ ಬಿರುಕು ಇನ್ನೂ ಆಳವಾಗಿರುವುದನ್ನು ಬಹಿರಂಗಪಡಿಸಿದೆ.</p>



<p>ಅಪರಿಚಿತ ವ್ಯಕ್ತಿಗಳು ತನ್ನ ತಂದೆಯನ್ನು ಅಪಹರಿಸಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಮೇಟ್ ಅವರ ಮಗ ಸೋಮವಾರ ಬೆಳಗ್ಗೆ ಕಾಂಗ್‌ಪೊಕ್ಪಿಯ ಗಾಮ್ನೋಮ್ ಸಪರ್ಮಿನಾ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೂಲವೊಂದು <a href="https://www.telegraphindia.com/north-east/kuki-ex-soldier-killed-on-meitei-turf-accidental-breach-costs-havildar-his-life/cid/2046908">ದಿ ಟೆಲಿಗ್ರಾಫ್‌</a>ಗೆ ತಿಳಿಸಿದೆ. ಹೆಚ್ಚಿನ ತನಿಖೆ ಮತ್ತು ಸೂಕ್ತ ಕ್ರಮಕ್ಕಾಗಿ ಪ್ರಕರಣವನ್ನು ಇಂಫಾಲ್ ಪಶ್ಚಿಮ ಪೊಲೀಸರಿಗೆ ರವಾನಿಸಲಾಗಿದೆ.</p>



<p>ಈ ಮಧ್ಯೆ, ಸೋಮವಾರ, ಸಾವಿರಾರು ವಿದ್ಯಾರ್ಥಿಗಳು ಮಣಿಪುರದ ಸಚಿವಾಲಯ ಮತ್ತು ರಾಜಭವನದ ಮುಂದೆ ಜಮಾಯಿಸಿದ್ದು, ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ವಿರುದ್ಧ ಪ್ರತಿಭಟಿಸಿದರು ಮತ್ತು ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ವಿಫಲರಾದ ಆರೋಪದ ಮೇಲೆ ಉನ್ನತ ಅಧಿಕಾರಿಗಳ ಮತ್ತು ಶಾಸಕರ ರಾಜೀನಾಮೆಗಾಗಿ ಒತ್ತಾಯಿಸಿದ್ದರು.</p>



<p>ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ನಡೆಸಿದರು. ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ವಿದ್ಯಾರ್ಥಿ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದರು.</p>



<p>ಅಸ್ಸಾಂ ರೈಫಲ್ಸ್ ಬೆಟಾಲಿಯನ್‌ಗಳನ್ನು ತೆಗೆದುಹಾಕಲು ಉದ್ದೇಶಿಸಿರುವ ಮತ್ತು ಭದ್ರತೆಯ ಹದಗೆಡುವಿಕೆಯನ್ನು ವಿರೋಧಿಸಿ ಕಾಂಗ್‌ಪೊಕ್ಪಿಯಲ್ಲಿ ಪ್ರತ್ಯೇಕ ಪ್ರತಿಭಟನೆಗಳು ನಡೆದವು. ಭಾನುವಾರ ರಾತ್ರಿ ಇಂಫಾಲ್‌ನಲ್ಲಿ ನಡೆದ ಟಾರ್ಚ್-ಲೈಟ್ ಪ್ರತಿಭಟನೆಗಳ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದರು.</p>
]]></content:encoded>
					
		
		
			</item>
		<item>
		<title>ಗದಗ: ನಟ ಯಶ್ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ, ಅಭಿಮಾನಿ ಸಾವು</title>
		<link>https://peepalmedia.com/fan-of-actor-yash-succumbs-to-injuries/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 09 Jan 2024 06:25:24 +0000</pubDate>
				<category><![CDATA[ಗದಗ]]></category>
		<category><![CDATA[actor yash]]></category>
		<category><![CDATA[actor yash fan suicide attempt in his residence]]></category>
		<category><![CDATA[actor's fan suicide]]></category>
		<category><![CDATA[casino royale]]></category>
		<category><![CDATA[casino royale reaction]]></category>
		<category><![CDATA[election in jammu and kashmir]]></category>
		<category><![CDATA[etv urdu kashmir news today]]></category>
		<category><![CDATA[india]]></category>
		<category><![CDATA[injuries]]></category>
		<category><![CDATA[is manipuri news]]></category>
		<category><![CDATA[kannada]]></category>
		<category><![CDATA[kannada actor]]></category>
		<category><![CDATA[karnataka]]></category>
		<category><![CDATA[manipuri news]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[reaction to casino royale]]></category>
		<category><![CDATA[sandalwood actor yash]]></category>
		<category><![CDATA[srimanthudu movie scenes]]></category>
		<category><![CDATA[state politics]]></category>
		<category><![CDATA[succumbed]]></category>
		<category><![CDATA[the history and evolution of godzilla]]></category>
		<category><![CDATA[top 30 news of the day]]></category>
		<category><![CDATA[yash fan]]></category>
		<category><![CDATA[yash fan attempted suicide]]></category>
		<category><![CDATA[yash fan ravi]]></category>
		<guid isPermaLink="false">https://peepalmedia.com/?p=34710</guid>

					<description><![CDATA[ಬೆಂಗಳೂರು: ಗದಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಮತ್ತೊಬ್ಬ ಅಭಿಮಾನಿ ಮಂಗಳವಾರ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದ ನಟನ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಅಪಘಾತಕ್ಕೀಡಾಗಿದ್ದಾನೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಯಶ್ ಸೋಮವಾರ ಸಂಜೆ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಜನವರಿ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಗ್ರಾಮದಲ್ಲಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತರಾದ ಮೂವರು ಯುವಕರ ಕುಟುಂಬ [&#8230;]]]></description>
										<content:encoded><![CDATA[
<p>ಬೆಂಗಳೂರು: ಗದಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಮತ್ತೊಬ್ಬ ಅಭಿಮಾನಿ ಮಂಗಳವಾರ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದ ನಟನ ಬೆಂಗಾವಲು ವಾಹನ ಡಿಕ್ಕಿ ಹೊಡೆದು ಇಂಜಿನಿಯರಿಂಗ್ ವಿದ್ಯಾರ್ಥಿ ಅಪಘಾತಕ್ಕೀಡಾಗಿದ್ದಾನೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.</p>



<p>ಯಶ್ ಸೋಮವಾರ ಸಂಜೆ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಜನವರಿ 8ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಗ್ರಾಮದಲ್ಲಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತರಾದ ಮೂವರು ಯುವಕರ ಕುಟುಂಬ ಸದಸ್ಯರನ್ನು ಭೇಟಿಯಾದರು. ನಂತರ ನಟ ಯಶ್ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಬ್ಬರು ಗಾಯಾಳುಗಳನ್ನು ಭೇಟಿಯಾದರು.</p>



<p>ನಂತರ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹಿಂತಿರುಗುತ್ತಿದ್ದಾಗ ಯಶ್ ಪೊಲೀಸ್ ಬೆಂಗಾವಲು ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಮಂಗಳವಾರ ಬೆಳಗ್ಗೆ ಗಾಯಾಳು ಮೃತಪಟ್ಟಿದ್ದಾನೆ. ಗದಗ ಸಮೀಪದ ಮುಳುಗುಂದ ನಾಕಾದಲ್ಲಿ ಅಪಘಾತ ಸಂಭವಿಸಿದೆ. ನಟನನ್ನು ನೋಡಲೆಂದು ಈ ಯುವಕರು ಯಶ್ ಅವರ ವಾಹನವನ್ನು ಅನುಸರಿಸುತ್ತಿದ್ದರು.</p>



<p>ಮೃತರನ್ನು 20 ವರ್ಷದ ನಿಖಿಲ್ ಎಂದು ಗುರುತಿಸಲಾಗಿದೆ. ಇವರು ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿಯಾಗಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.</p>



<p>injuries, actor yash fan suicide attempt in his residence, actor yash, sandalwood actor yash, reaction to casino royale, succumbed, actor&#8217;s fan suicide, kannada actor, the history and evolution of godzilla, top 30 news of the day,casino royale reaction,election in jammu and kashmir, yash fan, yash fan ravi</p>
]]></content:encoded>
					
		
		
			</item>
	</channel>
</rss>
