<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>marathi &#8211; Peepal Media</title>
	<atom:link href="https://peepalmedia.com/tag/marathi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 21 Apr 2025 11:00:00 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>marathi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಹಾರಾಷ್ಟ್ರ: ತ್ರಿತೀಯ ಭಾಷೆಯಾಗಿ ಹಿಂದಿ ಕಡ್ಡಾಯವನ್ನು ವಿರೋಧಿಸಿದ ಭಾಷಾ ಸಮಾಲೋಚನಾ ಸಮಿತಿ</title>
		<link>https://peepalmedia.com/maharashtra-language-consultative-committee-opposes-making-hindi-mandatory-as-third-language/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 21 Apr 2025 11:00:00 +0000</pubDate>
				<category><![CDATA[ದೇಶ]]></category>
		<category><![CDATA[Hindi]]></category>
		<category><![CDATA[Hindi imposition]]></category>
		<category><![CDATA[maharastra]]></category>
		<category><![CDATA[marathi]]></category>
		<category><![CDATA[mumbaí]]></category>
		<category><![CDATA[three language policy]]></category>
		<category><![CDATA[two language policy]]></category>
		<guid isPermaLink="false">https://peepalmedia.com/?p=57588</guid>

					<description><![CDATA[ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಡ್ಡಾಯ ತೃತೀಯ ಭಾಷೆಯನ್ನಾಗಿ ಮಾಡುವ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ನೇಮಿಸಿದ ಭಾಷಾ ಸಮಾಲೋಚನಾ ಸಮಿತಿಯು ಭಾನುವಾರ ವಿರೋಧಿಸಿದೆ. ಸಮಿತಿಯ ಅಧ್ಯಕ್ಷರಾದ ಲಕ್ಷ್ಮಿಕಾಂತ್ ದೇಶಮುಖ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಏಪ್ರಿಲ್ 16 ರಂದು ರಾಜ್ಯ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತರುವ ಯೋಜನೆಯನ್ನು ಘೋಷಿಸಿತು. ಈ ಯೋಜನೆಯು ಮರಾಠಿ ಮತ್ತು ಇಂಗ್ಲಿಷ್ [&#8230;]]]></description>
										<content:encoded><![CDATA[
<p>ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಡ್ಡಾಯ ತೃತೀಯ ಭಾಷೆಯನ್ನಾಗಿ ಮಾಡುವ ನಿರ್ಧಾರವನ್ನು ಮಹಾರಾಷ್ಟ್ರ ಸರ್ಕಾರ ನೇಮಿಸಿದ ಭಾಷಾ ಸಮಾಲೋಚನಾ ಸಮಿತಿಯು ಭಾನುವಾರ <a href="https://www.thehindu.com/news/national/maharashtra/maharashtra-language-panel-rejects-govt-decision-to-make-hindi-compulsory-in-schools/article69471941.ece" target="_blank" rel="noreferrer noopener">ವಿರೋಧಿಸಿದೆ</a>.</p>



<p>ಸಮಿತಿಯ ಅಧ್ಯಕ್ಷರಾದ ಲಕ್ಷ್ಮಿಕಾಂತ್ ದೇಶಮುಖ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.</p>



<p>ಏಪ್ರಿಲ್ 16 ರಂದು ರಾಜ್ಯ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಜಾರಿಗೆ ತರುವ ಯೋಜನೆಯನ್ನು ಘೋಷಿಸಿತು<em>.</em></p>



<p>ಈ ಯೋಜನೆಯು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯನ್ನು ಕಲಿಯುವುದನ್ನು ಕಡ್ಡಾಯಗೊಳಿಸುತ್ತದೆ. ನೀತಿಯ ತ್ರಿಭಾಷಾ ಸೂತ್ರವು ಈ ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ದ್ವಿಭಾಷಾ ನೀತಿಯ ಬದಲಾಗಿ ಮಾಡಲಾಗಿದೆ.</p>



<p>ಯೋಜನೆಯ ಹಂತ ಹಂತದ ಅನುಷ್ಠಾನವು 2025-26 ರಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಲಿದ್ದು, 2028-29 ರ ವೇಳೆಗೆ ಎಲ್ಲಾ ಶ್ರೇಣಿಗಳನ್ನು ಒಳಗೊಳ್ಳಲಿದೆ.</p>



<p>ಭಾನುವಾರ ಫಡ್ನವೀಸ್‌ಗೆ ಬರೆದ ಪತ್ರದಲ್ಲಿ ದೇಶಮುಖ್, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯಲ್ಲಿಯೇ ಬೋಧನೆ ಮಾಡಬೇಕು ಮತ್ತು ತ್ರಿಭಾಷಾ ನೀತಿಯನ್ನು ಉನ್ನತ ಮಾಧ್ಯಮಿಕ ಮಟ್ಟದಲ್ಲಿ ಮಾತ್ರ ಜಾರಿಗೆ ತರಬೇಕು ಎಂದು ಹೇಳಿದ್ದಾರೆ.</p>



<p>&#8220;ಹಿಂದಿ ಭಾಷೆಯ ಮೇಲೆ ಬಲವಂತದ ನಿರ್ಧಾರ ಅನಗತ್ಯ&#8221; ಎಂದು <em>ದಿ ಹಿಂದೂ</em> ಪತ್ರದಲ್ಲಿರುವ ಹೇಳಿಕೆಯನ್ನು ಉಲ್ಲೇಖಿಸಿದೆ.</p>



<p>ಹೆಚ್ಚಿನ ಶಾಲೆಗಳಲ್ಲಿ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಮಾತ್ರ ಇರುವುದರಿಂದ ಮರಾಠಿ ಮತ್ತು ಇಂಗ್ಲಿಷ್ ಭಾಷಾ ಬೋಧನೆಯ ಗುಣಮಟ್ಟ ಕಳಪೆಯಾಗಿದೆ ಎಂದು ದೇಶಮುಖ್ ಹೇಳಿದ್ದಾರೆ. &#8220;ಮೂರನೇ ಭಾಷೆಯನ್ನು ಪರಿಚಯಿಸುವುದರಿಂದ ಶಿಕ್ಷಕರ ಹೊರೆ ಹೆಚ್ಚಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಒಂದು ಭಾಷೆಯನ್ನು ಸರಿಯಾಗಿ ಕಲಿಯುವ ಸಾಧ್ಯತೆ ಕಡಿಮೆಯಾಗುತ್ತದೆ&#8221; ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>



<p>ಹಿಂದಿ ಭಾಷೆಯಿಂದ ಮಹಾರಾಷ್ಟ್ರದಷ್ಟು &#8220;ಭಾಷಾ ಮತ್ತು ಸಾಂಸ್ಕೃತಿಕ ಹಾನಿ&#8221;ಯನ್ನು ಕೆಲವೇ ರಾಜ್ಯಗಳು ಅನುಭವಿಸಿವೆ ಎಂದು ಅನೇಕ ಭಾಷಾ ವಿದ್ವಾಂಸರು ಮತ್ತು ಭಾಷಾಶಾಸ್ತ್ರಜ್ಞರು ನಂಬಿದ್ದಾರೆ ಎಂದು ಸಮಿತಿ ಹೇಳಿದೆ.</p>



<p>&#8220;ಭಾಷಾ ಹೋಲಿಕೆಯ ಹೊರತಾಗಿಯೂ ಉತ್ತರ ಭಾರತದ ಜನರು ಮರಾಠಿಯನ್ನು ಮೂರನೇ ಭಾಷೆಯಾಗಿ ಕಲಿಯದಿದ್ದರೆ ಮತ್ತು ಮಹಾರಾಷ್ಟ್ರದಲ್ಲಿ ವಲಸಿಗರಾಗಿಯೂ ಮರಾಠಿ ಮಾತನಾಡಲು ಸಿದ್ಧರಿಲ್ಲದಿದ್ದರೆ, ಸರ್ಕಾರವು ಹಿಂದಿಯನ್ನು ಕಡ್ಡಾಯಗೊಳಿಸುವುದು ಮರಾಠಿ ಭಾಷೆ ಮತ್ತು ಅದರ ಭಾಷಿಕರಿಗೆ ಮಾಡಿದ ಅವಮಾನ&#8221; ಎಂದು ಸಮಿತಿಯು ಹೇಳಿದೆ<em>.</em></p>



<p>&#8220;ಭಾಷಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹಾರಾಷ್ಟ್ರ ಹೆಚ್ಚು ತೊಂದರೆ ಅನುಭವಿಸಬಾರದು ಎಂದು ನಾವು ಬಯಸಿದರೆ, ಸರ್ಕಾರವು ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಿ ರದ್ದುಗೊಳಿಸಬೇಕು&#8221; ಎಂದು ಅದು ಹೇಳಿದೆ.</p>



<p>2020 ರ ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಶಿಕ್ಷಣದ ಪಠ್ಯಕ್ರಮದ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ. ಇದು ಶೈಕ್ಷಣಿಕ ಭವಿಷ್ಯವನ್ನು ಆಯ್ಕೆ ಮಾಡುವ ಹೊಸತನವನ್ನು ಉತ್ತೇಜಿಸುತ್ತದೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯನ್ನು ಪ್ರಮುಖ ಬೋಧನಾ ಮಾಧ್ಯಮವಾಗಿ ಬಳಸುವುದರ ಮೇಲೆ ಒತ್ತು ನೀಡುತ್ತದೆ ಎಂದು ಹೇಳುತ್ತದೆ.</p>



<p>ಈ ನೀತಿಯು ಸಾರ್ವಜನಿಕ ಸಂಸ್ಥೆಗಳ <a href="https://www.thehindu.com/news/national/andhra-pradesh/nep-leads-to-privatisation-of-education-say-student-unions/article65801394.ece" target="_blank" rel="noreferrer noopener">ಖಾಸಗೀಕರಣವನ್ನು</a> ಪ್ರೋತ್ಸಾಹಿಸುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ ಹಲವಾರು &#8220;ಡ್ರಾಪ್‌ಔಟ್&#8221; ಆಯ್ಕೆಗಳನ್ನು ಸೃಷ್ಟಿಸುತ್ತಿದೆ ಎಂದು <a href="https://www.freepressjournal.in/education/student-groups-to-stage-nationwide-protests-against-nep-at-jantar-mantar" target="_blank" rel="noreferrer noopener">ಟೀಕಿಸಲಾಗಿದೆ</a>, ಇದು ಶಾಲೆ ಬಿಡುವವರಿಗೆ ಪ್ರೋತ್ಸಾಹ ನೀಡಬಹುದು ಎಂದು ವಿರೋಧಿಗಳು ಹೇಳುತ್ತಾರೆ.<a href="https://www.thehindu.com/news/national/andhra-pradesh/nep-leads-to-privatisation-of-education-say-student-unions/article65801394.ece" target="_blank" rel="noreferrer noopener"></a></p>



<p>ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಪದೇ ಪದೇ ವಿರೋಧಿಸುತ್ತಿದೆ. ತಮಿಳು ಮತ್ತು ಇಂಗ್ಲಿಷ್ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ದಶಕಗಳಷ್ಟು ಹಳೆಯದಾದ <a href="https://www.newindianexpress.com/states/tamil-nadu/2025/Mar/16/ru-symbol-in-tn-budget-to-show-our-determination-for-language-policy-tamil-nadu-cm-stalin" target="_blank" rel="noreferrer noopener">ದ್ವಿಭಾಷಾ ನೀತಿಯನ್ನು</a> ಬದಲಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.</p>



<p>ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ಒಂದು ರಾಜ್ಯದ ಸ್ಥಳೀಯ ಭಾಷೆಯನ್ನು ಕಲಿಸುವುದನ್ನು ಸೂಚಿಸುತ್ತದೆ. ಇದನ್ನು 1968 ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಚಯಿಸಲಾಯಿತು ಮತ್ತು 2020 ರಲ್ಲಿ ಪರಿಚಯಿಸಲಾದ ಹೊಸ ನೀತಿಯಲ್ಲಿ ಅದನ್ನು ಉಳಿಸಿಕೊಳ್ಳಲಾಯಿತು.</p>



<p></p>
]]></content:encoded>
					
		
		
			</item>
		<item>
		<title>‌ಪುಣೆ: ಜೈ ಶ್ರೀರಾಮ್‌ ಘೋಷಣೆ ಕೂಗಿ ಪ್ರವಾಸಿಗನಿಗೆ ಮರಾಠಿಯಲ್ಲಿ ಅಶ್ಲೀಲವಾಗಿ ನಿಂದಿಸಿದ ಯುವಕರ ಮೇಲೆ ಎಫ್‌ಐಆರ್</title>
		<link>https://peepalmedia.com/pune-fir-lodged-against-youth-for-shouting-jai-shri-ram-and-abusing-a-tourist-in-marathi/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 14 Apr 2025 05:23:12 +0000</pubDate>
				<category><![CDATA[ಅಪರಾಧ]]></category>
		<category><![CDATA[hindutva]]></category>
		<category><![CDATA[jai sriram]]></category>
		<category><![CDATA[maharashtra]]></category>
		<category><![CDATA[marathi]]></category>
		<category><![CDATA[NEWZELAND]]></category>
		<category><![CDATA[pune]]></category>
		<guid isPermaLink="false">https://peepalmedia.com/?p=57174</guid>

					<description><![CDATA[ನ್ಯೂಜಿಲೆಂಡ್‌ನ ಪ್ರವಾಸಿಗರನ್ನು ಮರಾಠಿಯಲ್ಲಿ ನಿಂದಿಸುವ ವೀಡಿಯೊ ವೈರಲ್ ಆಗಿದ್ದು, ಪುಣೆ ಗ್ರಾಮೀಣ ಪೊಲೀಸರು ಶನಿವಾರ ಅಪರಿಚಿತ ವ್ಯಕ್ತಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಪ್ರವಾಸಿ ಲ್ಯೂಕ್ ಎಂಬವರು ಏಪ್ರಿಲ್ 6 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಿಂಹಗಢ ಕೋಟೆಗೆ ಭೇಟಿ ನೀಡಿದ ಬಗ್ಗೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ವೀಡಿಯೊದಲ್ಲಿ ಅವರು ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿದ್ದ ಛತ್ರಪತಿ ಸಂಭಾಜಿ ನಗರದಿಂದ ಬಂದಿದ್ದೇವೆ ಎಂದು ಹೇಳುತ್ತಿದ್ದಂತೆ ಯುವಕರ ಗುಂಪಲ್ಲೊಬ್ಬ ʼಜೈ ಶ್ರೀರಾಮ್‌ʼ ಎಂದು ಘೋಷಣೆ ಕೂಗುತ್ತಾನೆ. ನಂತರ ಈ [&#8230;]]]></description>
										<content:encoded><![CDATA[
<p>ನ್ಯೂಜಿಲೆಂಡ್‌ನ ಪ್ರವಾಸಿಗರನ್ನು ಮರಾಠಿಯಲ್ಲಿ ನಿಂದಿಸುವ ವೀಡಿಯೊ ವೈರಲ್ ಆಗಿದ್ದು, ಪುಣೆ ಗ್ರಾಮೀಣ ಪೊಲೀಸರು ಶನಿವಾರ ಅಪರಿಚಿತ ವ್ಯಕ್ತಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ <a href="https://indianexpress.com/article/cities/pune/new-zealand-sinhagad-fort-viral-video-sparks-outrage-9941708/" target="_blank" rel="noreferrer noopener">ಇಂಡಿಯನ್ </a><em>ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ಪ್ರವಾಸಿ ಲ್ಯೂಕ್ ಎಂಬವರು ಏಪ್ರಿಲ್ 6 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಿಂಹಗಢ ಕೋಟೆಗೆ ಭೇಟಿ ನೀಡಿದ ಬಗ್ಗೆ <a href="https://www.youtube.com/watch?v=r8IILTDKWyA&amp;t=4s" target="_blank" rel="noreferrer noopener">ವೀಡಿಯೊವನ್ನು</a> ಅಪ್‌ಲೋಡ್ ಮಾಡಿದ್ದರು. ವೀಡಿಯೊದಲ್ಲಿ ಅವರು ಹಿಂದೆ ಔರಂಗಾಬಾದ್ ಎಂದು ಕರೆಯಲಾಗುತ್ತಿದ್ದ ಛತ್ರಪತಿ ಸಂಭಾಜಿ ನಗರದಿಂದ ಬಂದಿದ್ದೇವೆ ಎಂದು ಹೇಳುತ್ತಿದ್ದಂತೆ ಯುವಕರ ಗುಂಪಲ್ಲೊಬ್ಬ ʼಜೈ ಶ್ರೀರಾಮ್‌ʼ ಎಂದು ಘೋಷಣೆ ಕೂಗುತ್ತಾನೆ. ನಂತರ ಈ ಯುವಕರ ಗುಂಪು ಪ್ರವಾಸಿಗನಿಗೆ ತಿಳಿಯದ ಮರಾಠಿಯಲ್ಲಿರುವ ಅಶ್ಲೀಲ ಮತ್ತು ನಿಂದನೀಯ ಪದಗಳನ್ನು ಹೇಳಿಕೊಡುತ್ತವೆ.  </p>



<p>ಈ ವಿಡಿಯೋ ವೈರಲ್ ಆದ ನಂತರ, ಹಲವಾರು ಸಾಮಾಜಿಕ ಮಾಧ್ಯಮದಲ್ಲಿ ಪ್ರವಾಸಿಗರನ್ನು ನಿಂದನೀಯ ಭಾಷೆ ಬಳಸಿ ಮೋಸ ಮಾಡಿರುವ ಈ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.</p>



<p>ಶನಿವಾರ ಪೊಲೀಸರು ಈ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವುದು, ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ ಮತ್ತು ಪ್ರಚೋದನೆಗಾಗಿ ಶಿಕ್ಷೆಯ ಅಡಿಯಲ್ಲಿ <a href="https://www.deccanherald.com/india/maharashtra/foreign-tourist-made-to-speak-swear-words-fir-registered-against-4-3491559" target="_blank" rel="noreferrer noopener">ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.</a></p>



<p>ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಆದಾಗ್ಯೂ, ವೀಡಿಯೊದಲ್ಲಿ ಕಂಡುಬರುವವರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.</p>



<p> ಭಾನುವಾರ ಲ್ಯೂಕ್ ತಮ್ಮ ವೀಡಿಯೊಗೆ ಒಂದು ಕಾಮೆಂಟ್ ಪೋಸ್ಟ್ ಮಾಡಿದ್ದಾರೆ: &#8220;ಹುಡುಗರು ನನಗೆ ಬೇಜಾರು ಮಾಡಿಲ್ಲ ಮತ್ತು ಎಲ್ಲರೂ ಕ್ಷಮಿಸಿ. ಜೈ ಮಹಾರಾಷ್ಟ್ರ.&#8221;</p>



<p>ಇದರ ನಂತರ ಮಹಾರಾಷ್ಟ್ರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಬಗ್ಗೆ ಇನ್ನೂ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.</p>
]]></content:encoded>
					
		
		
			</item>
	</channel>
</rss>
