<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mental health &#8211; Peepal Media</title>
	<atom:link href="https://peepalmedia.com/tag/mental-health/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 20 Jan 2025 08:38:45 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>mental health &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಐಐಟಿ ಬಾಬಾ: ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಪೋಷಕರ ಕಾಳಜಿ</title>
		<link>https://peepalmedia.com/iit-baba-and-parent-caring-for-their-childrens-mental-health/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 20 Jan 2025 08:38:44 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[abhay singh]]></category>
		<category><![CDATA[health]]></category>
		<category><![CDATA[iit baba]]></category>
		<category><![CDATA[kumbha mela 2025]]></category>
		<category><![CDATA[mental health]]></category>
		<category><![CDATA[prayagraj]]></category>
		<category><![CDATA[uttara pradesh]]></category>
		<guid isPermaLink="false">https://peepalmedia.com/?p=52544</guid>

					<description><![CDATA[ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ‘ ಐಐಟಿ ವಾಲಿ ಬಾಬಾ ’ ಎಂದು ಜನಪ್ರಿಯತೆ ಗಳಿಸುತ್ತಿರುವ ಅಭಯ್ ಸಿಂಗ್ ಅವರ ತಂದೆ, ವಕೀಲ ಕರಣ್ ಸಿಂಗ್ ಗ್ರೆವಾಲ್ , ತಮ್ಮ ಮತ್ತು ತಮ್ಮ ಪತ್ನಿಯ ನಡುವಿನ ದಾಂಪತ್ಯ ಸಮಸ್ಯೆಯಿಂದಾಗಿ, ತಮ್ಮ ನಡುವಿನ ಸಂಘರ್ಷದಿಂದಾಗಿ ತಮ್ಮ ಮಗ ಕುಟುಂಬವನ್ನು ಬಿಟ್ಟು ಹೋಗಿರುವುದಾಗಿ ಜನವರಿ 19, 2024 ರ ಭಾನುವಾರದಂದು ಹೇಳಿದ್ದಾರೆ. ಝಜ್ಜರ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಗ್ರೆವಾಲ್ ಅವರು ತಮ್ಮ ಮಗ ನೇರ ಮತ್ತು ಸತ್ಯವಂತನಾಗಿದ್ದು, [&#8230;]]]></description>
										<content:encoded><![CDATA[
<p>ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ‘ ಐಐಟಿ ವಾಲಿ ಬಾಬಾ ’ ಎಂದು ಜನಪ್ರಿಯತೆ ಗಳಿಸುತ್ತಿರುವ ಅಭಯ್ ಸಿಂಗ್ ಅವರ ತಂದೆ, ವಕೀಲ ಕರಣ್ ಸಿಂಗ್ ಗ್ರೆವಾಲ್ , ತಮ್ಮ ಮತ್ತು ತಮ್ಮ ಪತ್ನಿಯ ನಡುವಿನ ದಾಂಪತ್ಯ ಸಮಸ್ಯೆಯಿಂದಾಗಿ, ತಮ್ಮ ನಡುವಿನ ಸಂಘರ್ಷದಿಂದಾಗಿ ತಮ್ಮ ಮಗ ಕುಟುಂಬವನ್ನು ಬಿಟ್ಟು ಹೋಗಿರುವುದಾಗಿ ಜನವರಿ 19, 2024 ರ ಭಾನುವಾರದಂದು ಹೇಳಿದ್ದಾರೆ. ಝಜ್ಜರ್ ಬಾರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಗ್ರೆವಾಲ್ ಅವರು ತಮ್ಮ ಮಗ ನೇರ ಮತ್ತು ಸತ್ಯವಂತನಾಗಿದ್ದು, ತಾವು ನೀಡಿದ ಕಾರಣವೇ ಆತ ಮನೆ ಬಿಟ್ಟು ಹೋಗಲು ನಿಜವಾದ ಕಾರಣ ಎಂದು ಹೇಳಿದ್ದಾರೆ.</p>



<p><a href="https://timesofindia.indiatimes.com/city/chandigarh/making-of-iit-waley-baba-childhood-ordeals-understanding-spirituality-through-science/articleshow/117375563.cms">ಟೈಮ್ಸ್ ಆಫ್ ಇಂಡಿಯಾ</a> 70 ವರ್ಷ ವಯಸ್ಸಿನ ಕರಣ್‌ ಸಿಂಗ್‌ ಅವರು ತಮ್ಮ ಮಗನ ಬಗ್ಗೆ ಮಾತನಾಡಿರುವುದನ್ನು ವರದಿ ಮಾಡಿದ್ದು, ಬಾಲ್ಯದಲ್ಲಿಯೇ ಕೌಟುಂಬಿಕ ಹಿಂಸೆಯಿಂದ ಅವರು ಆಳವಾಗಿ ಘಾಸಿಗೊಂಡಿದ್ದರು ಎಂದು ಹೇಳಿದ್ದಾರೆ. ಕೌಟುಂಬಿಕ ಸಮಸ್ಯೆಗಳಿಂದಾಗಿ ಮಕ್ಕಳು ಎದುರಿಸುವ ಸಮಸ್ಯೆಗಳ ಕುರಿತು ಕಾನೂನುಗಳ ಅಗತ್ಯವನ್ನು ಹೇಳುವ ಸಂಶೋಧನಾ ಲೇಖನಬನ್ನು ಅಭಯ್ ಸಿಂಗ್‌ ಬರೆದಿದ್ದಾರೆ ಎಂದು ಕರಣ್‌ ಸಿಂಗ್‌ ಹೇಳಿದ್ದಾರೆ. ಗ್ರೆವಾಲ್ ಅವರು ತಮ್ಮ ಮಗ ಅಭಯ್ ಒಬ್ಬ ಸಂವೇದನಾಶೀಲ ವ್ಯಕ್ತಿ, ದನಿಯಲ್ಲಿ ಆಗುವ ಸಣ್ಣ ಸಣ್ಣ ಬದಲಾವಣೆಗಳನ್ನೂ ಗ್ರಹಿಸಬಲ್ಲವನು ಎಂದು ಹೇಳಿದ್ದಾರೆ. &#8220;ಬಹುಶಃ ಅದಕ್ಕಾಗಿಯೇ ಅವನು ನನ್ನನ್ನು ಕಟ್ಟುನಿಟ್ಟಿನ ತಂದೆ ಎಂದು ಭಾವಿಸಿದ್ದನು&#8221; ಎಂದು ಅವರು ಮಗನ ಬಗ್ಗೆ ಹೇಳಿದ್ದಾರೆ.</p>



<p>ಪ್ರತಿ ಮನೆಯಲ್ಲೂ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಇರುವುದು ಸಾಮಾನ್ಯವಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾ, ಅಭಯ್ ಈ ಜಗಳಗಳಿಂದಾಗಿ ಆಂತರಿಕವಾಗಿ ತುಂಬಾ ನೊಂದಿದ್ದ ಎಂದು ಅವರ ತಂದೆ ಕರಣ್‌ ಸಿಂಗ್‌ ಹೇಳಿದ್ದಾರೆ. &#8220;ದಂಪತಿಗಳು ಇದರಿಂದ ಪಾಠ ಕಲಿಯಬೇಕು, ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ತಮ್ಮ ಜಗಳಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು,&#8221; ಎಂದು ಗ್ರೆವಾಲ್ ಹೇಳಿದರು.</p>



<p>ಗ್ರೇವಾಲ್‌ ಅಭಯ್ ಮತ್ತು ಹಿರಿಯ ಮಗಳು &#8220;ಶುದ್ಧ ಆತ್ಮಗಳು&#8221; ಎಂದು ಕರೆದು, ಅವರು ಎಂದಿಗೂ ಸುಳ್ಳು ಹೇಳಲಿಲ್ಲ ಎಂದು ಹೇಳಿದ್ದಾರೆ.</p>



<p>ತನ್ನ ಮಗನನ್ನು ಗೃಹಸ್ಥ ಜೀವನಕ್ಕೆ ಮರಳಲು ಒತ್ತಾಯಿಸುತ್ತೀರಾ ಎಂದು ಕೇಳಿದಾಗ, &#8220;ಅವನು ನನ್ನ ಒಬ್ಬನೇ ಮಗ, ಮತ್ತು ಅಂತಹ ನಿರ್ಧಾರದಿಂದ ಯಾವುದೇ ಪೋಷಕರಿಗೆ ಸಂತೋಷವಾಗುವುದಿಲ್ಲ. ಆದರೆ ಈಗ, ಅವನು ಎಲ್ಲಿದ್ದರೂ ಅವನು ಸಂತೋಷವಾಗಿರಲಿ ಮತ್ತು ಆರೋಗ್ಯವಂತನಾಗಿರಲಿ ಎಂದು ನಾನು ಪ್ರಾರ್ಥಿಸಬಲ್ಲೆ,&#8221; ಎಂದು ಹೇಳಿದ್ದಾರೆ.</p>



<p>&#8220;ನನ್ನ ಜೀವನದಲ್ಲಿ ನಾನು ಗಳಿಸಿದ್ದು ಮತ್ತು ಸಂಪಾದಿಸಿದ್ದೆಲ್ಲವೂ ಅವನಿಗೆ ಸೇರಿದ್ದು. ತಾನು ಹಿಡಿದ ಈ ಮಾರ್ಗವು ಅತೃಪ್ತಿಕರವಾಗಿದ್ದರೆ, ಅದನ್ನು ಬಿಟ್ಟುಬಿಡುತ್ತೇನೆ ಎಂದು ಅಭಯ್ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರಲ್ಲಿ ನನಗೆ ಭರವಸೆ ಇದೆ,&#8221; ಎಂದು ಗ್ರೆವಾಲ್ ಹೇಳಿದ್ದಾರೆ.</p>



<p>ಅಭಯ್ ಅವರ ತಾಯಿ ಶೀಲಾ ದೇವಿ ವಕೀಲರಾಗಿದ್ದು, ಪತಿ ಕರಣ್ ಸಿಂಗ್ ಅವರ ಅಭಿಪ್ರಾಯವನ್ನೇ ಹೊಂದಿದ್ದಾರೆ. &#8220;ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಒಳ್ಳೆಯ ನೆಲೆಯನ್ನು ಕಂಡುಕೊಳ್ಳಲು ಮತ್ತು ಸ್ಥಿರವಾದ ಕುಟುಂಬ ಜೀವನವನ್ನು ನಡೆಸಲು ಬಯಸುತ್ತಾರೆ. ಆದರೆ ಈಗ, ತಾನು ಬದುಕಲು ಆರಿಸಿಕೊಂಡಿರುವ ಯಾವುದೇ ನೆಲೆಯಲ್ಲೂ ಅವನು ಸಂತೋಷವನ್ನು ಕಂಡುಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ,&#8221; ಎಂದು ಅವರು ಹೇಳಿದರು.</p>



<p><strong>ಬಾಲ್ಯದ ಸಂಕಟಗಳು!</strong></p>



<p>ಅಭಯ್ 1990ರ ಮಾರ್ಚ್ 3 ರಂದು ಜನ್ಮರ್ ಜಿಲ್ಲೆಯ ಸಾಸ್ಕೃಲಿ ಗ್ರಾಮದಲ್ಲಿ ಜನಿಸಿದರು. ಅಭಯ್‌ ಹುಟ್ಟುವಾಗ ಅವರಿಗೆ ಎರಡು ವರ್ಷದ ಅಕ್ಕ ಇದ್ದರು. ಅವರೊಂದಿಗೆ ಅನ್ಯೋನ್ಯ ಬಾಂಧವ್ಯವನ್ನು ಹೊಂದಿದ್ದರು. ಮದುವೆಯ ನಂತರ ಅಭಯ್‌ ಅವರ ಅಕ್ಕ ಕೆನಡಾಕ್ಕೆ ತೆರಳಿ ಈಗ ಅಮೇರಿಕಾದಲ್ಲಿ ನೆಲೆಸಿದ್ದಾರೆ.</p>



<p>ಏಳನೇ ತರಗತಿಯವರೆಗೆ ಅಭಯ್ ಅವರು ಜಜ್ಜರ್‌ನಲ್ಲಿ ಓದಿದ್ದಾರೆ ಅವರ ತಂದೆ ಗ್ರೆವಾಲ್ ಉಲ್ಲೇಖಿಸಿದ್ದಾರೆ. ಅದರ ನಂತರ, ಅವರು ದೆಹಲಿಯಲ್ಲಿ ಐಐಟಿಗಾಗಿ ತಯಾರಿ ನಡೆಸಿದರು ಮತ್ತು ಅವರ ಮೊದಲ ಪ್ರಯತ್ನದಲ್ಲಿಯೇ, 2008 ರಲ್ಲಿ 18 ನೇ ವಯಸ್ಸಿನಲ್ಲಿ ಐಐಟಿ ಮುಂಬೈಗೆ ಪ್ರವೇಶಾತಿ ಪಡೆದರು. 2014 ರಲ್ಲಿ ಬಿಟೆಕ್ ಮುಗಿಸಿದ ನಂತರ, ಅಭಯ್ ಐಐಟಿ ಮುಂಬೈನಲ್ಲಿ ಡಿಸೈನಿಂಗ್‌ನಲ್ಲಿ ಎಂಟೆಕ್ ಅನ್ನು ಪಡೆದರು.</p>



<p>ಸುಮಾರು ಎರಡು ವರ್ಷಗಳ ನಂತರ, 2017 ರಲ್ಲಿ, ಅಭಯ್ ಅವರ ಸಹೋದರಿ ವಿವಾಹವಾಗಿ ಕೆನಡಾಕ್ಕೆ ತೆರಳಿದರು. ತಮ್ಮ ಸಹೋದರಿಯ ಕೆನಡಾಗೆ ಹೋದ ನಂತರ ಅಭಯ್‌ಗೆ ಒಂಟಿತನ ಕಾಡಲು ಆರಂಭಿಸಿತು. ಇದಕ್ಕೆ ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೂ ಹೋಗಿದ್ದರು. ವೈದ್ಯರು ಅಭಯ್‌ಗೆ ಈ ಖಿನ್ನತೆಯಿಂದ ಹೊರಬರಲು ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಲಹೆಯನ್ನು ನೀಡಿದ್ದರು. ಈ ಕಾರಣಕ್ಕಾಗಿ ಅಭಯ್ ಕಂಪನಿಯೊಂದರಲ್ಲಿ ಕೆಲಸ ಮಾಡಿದರು, ಆದರೆ ಆ ನಂತರ ತನ್ನ ಸಹೋದರಿಯೊಂದಿಗೆ ಕೆನಡಾಕ್ಕೆ ಹೋದರು.</p>



<p>&#8220;ಅವನು ತನ್ನ ಅಕ್ಕನೊಂದಿಗೆ ಕೆಲ ಸಮಯದವರೆಗೆ ಇದ್ದ. ನಂತರ, ಅಲ್ಲಿ ಕೆಲಸ ಸಿಕ್ಕದ ಮೇಲೆ ಪ್ರತ್ಯೇಕ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದನು. ಅಲ್ಲಿ ಕೆಲವು ತಿಂಗಳು ಕೆಲಸ ಮಾಡಿದ ನಂತರ, ಕೋವಿಡ್ -19 ಕಾರಣದಿಂದಾಗಿ ಲಾಕ್‌ಡೌನ್ ವಿಧಿಸಲಾಯಿತು. ಆಗ ಅಲ್ಲಿ ಅಭಯ್‌ಗೆ ತನ್ನ ಸಹೋದರಿಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಹಲವಾರು ತಿಂಗಳ ಲಾಕ್‌ಡೌನ್‌ ತೆಗೆದುಹಾಕಿದ ಮೇಲೆ ಅಭಯ್ ಭಾರತಕ್ಕೆ ವಾಪಾಸ್ ಬಂದರು.</p>



<p>&#8220;2022 ರಲ್ಲಿ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರುವಿನ ಈಶ ಯೋಗ ಕೇಂದ್ರಕ್ಕೆ ಹೋದರು ಮತ್ತು ಅಲ್ಲಿ ಸುಮಾರು ಆರು ತಿಂಗಳ ಕಾಲ ಇದ್ದರು. ಅವರು ಜಜ್ಜರ್‌ಗೆ ಹಿಂದಿರುಗಿದರು. ನಂತರ ಮೂರು ತಿಂಗಳ ಕಾಲ ದೆಹಲಿಯಲ್ಲಿ ಆಧ್ಯಾತ್ಮಿಕತೆಯನ್ನು ಅಧ್ಯಯನ ಮಾಡಿದರು. ಅಭಯ್ ನಂತರ ಧರ್ಮಶಾಲಾಗೆ ಭೇಟಿ ನೀಡಿದರು ಮತ್ತು ರಿಷಿಕೇಶಕ್ಕೆ ಪ್ರವಾಸ ಮಾಡಿದರು. ಆದರೆ ಸುಮಾರು ಆರು ತಿಂಗಳ ಹಿಂದೆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದನು., ನಾವು ಪದೇ ಪದೇ ಮನೆಗೆ ಬರುವಂತೆ ಕೇಳಿದಾಗ ಅವನು ಒಪ್ಪಲಿಲ್ಲ. ನಂತರ ಕುಟುಂಬದ ಸದಸ್ಯರಿಗೆ ಅವನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ,&#8221; ಎಂದು ಗ್ರೆವಾಲ್ ಹೇಳಿದ್ದಾರೆ..</p>



<p>&#8220;ಅಭಯ್ ಬಾಬಾನ ಮೊದಲ ವೀಡಿಯೋ ನೋಡಿದಾಗಲೇ ಶಾಕ್ ಆಯ್ತು. ಅಭಯ್ ಈ ದಾರಿ ಇಷ್ಟವಾಗದಿದ್ದರೆ ಇದನ್ನೂ ಬಿಟ್ಟು ಬಿಡುತ್ತೇನೆ ಎಂದು ಅವನು ಹೇಳಿರುವ ಹಲವು ವಿಡಿಯೋಗಳನ್ನು ನೋಡಿದ್ದೆ. ಒಂದು ದಿನ ತಾನೇ ಮನೆಗೆ ಬರುತ್ತೇನೆ ಎಂದು ಹೇಳಿರುವುದು ಒಂದು ಸಮಧಾನ, ನಾವು ಕರೆದರೆ ಅವನು ಬರುವುದಿಲ್ಲ,” ಎಂದು ಅಭಯ್‌ ತಂದೆ ಕರಣ್‌ ಸಿಂಗ್‌ ಹೇಳಿದ್ದಾರೆ.</p>



<p>ಗ್ರೆವಾಲ್ ಭಾವುಕರು, ತಮ್ಮ ಮಗನನ್ನು ತುಂಬಾ ಪ್ರೀತಿಸುತ್ತಿದ್ದರು. ಶಾಲೆಗೆ ಹೋಗುವ ಮೊದಲು ಅಭಯ್ ಅವರ ಸೈಕಲ್ ಅನ್ನು ಹೇಗೆ ಸಿದ್ದಪಡಿಸುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು. &#8220;ಅಭಯ್ ತುಂಬಾ ಸಂವೇದನಾಶೀಲನಾಗಿದ್ದ ಮತ್ತು ಕೌಟುಂಬಿಕ ಕಲಹಗಳಿಂದ ನೊಂದುಹೋಗಿದ್ದ. ಈ ಜಗಳಗಳು ಮಕ್ಕಳ ಮೇಲೆ ಅಂತಹ ದೊಡ್ಡ ಪರಿಣಾಮ ಬೀರುತ್ತವೆ ಎಂದು ನನಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ತಮ್ಮ ತಮ್ಮ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಜಗಳಗಳನ್ನು ನಿಲ್ಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ&#8221; ಎಂದು ಅವರು ಹೇಳಿದರು.</p>



<p><strong>ಆಧ್ಯಾತ್ಮದ ಹಾದಿ</strong></p>



<p>ಪ್ರಯಾಗ್‌ರಾಜ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವಾಗ, ಐಐಟಿ ವಾಲಿ ಬಾಬಾ ಎಂದು ದೀಡೀರ್‌ ಖ್ಯಾತಿ ಪಡೆದಿರುವ ಅಭಯ್ ಸಿಂಗ್ ತನ್ನ ಹೆತ್ತವರ ನಡುವಿನ ಜಗಳಗಳಿಂದ ತಾನು ನೊಂದಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ.</p>



<p>ಕಾಲೇಜು, ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಪ್ರೇಯಸಿಯ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಭಯ್ ಅವರು ತಾವು ಏನು ಮಾಡಿದರೂ ತಮ್ಮ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ಮದುವೆಯ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ ಮತ್ತು ಮನೆಯಿಂದ ದೂರ ಹೋಗಲು ಬಯಸಿದ್ದರು.</p>



<p>ತಮಗೊಬ್ಬ ಪ್ರೇಯಸಿ ಇದ್ದದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಜೊತೆಯಾಗಿ ಇದ್ದರು ಎಂದು ಅಭಯ್ ಬಹಿರಂಗಪಡಿಸಿದ್ದರು, ಆದರೆ ಇದು ಮದುವೆಯ ಹಂತದ ವರೆಗೆ ತಲುಪಲಿಲ್ಲ. ತಂದೆ-ತಾಯಿಯ ಜಗಳ ನೋಡಿ ಮದುವೆಯಾಗಲು ಇಷ್ಟವಾಗಲಿಲ್ಲ ಎಂದಿದ್ದರು. ಒಂಟಿಯಾಗಿ ಇದ್ದು ಸಂತೋಷದಿಂದ ಇರುವುದೇ ಉತ್ತಮ ಎಂದು ಅನ್ನಿಸಿತು ಎಂದು ಅಭಯ್ ಹೇಳಿದ್ದರು.</p>



<p>ಶಾಲೆಯಿಂದ ಬಂದ ನಂತರ ನಿದ್ದೆ ಮಾಡಿ ರಾತ್ರಿ 12 ಗಂಟೆಗೆ ಏಳುತ್ತಿದ್ದೆ ಎಂದು ಅವರು ಹೇಳಿದ್ದರು. &#8220;ಈಗ, ನಾನು ವಿಜ್ಞಾನದ ಮೂಲಕ ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಮತ್ತು ಆಳವಾಗಿ ಅರಿಯಲು ಪ್ರಯತ್ನಿಸುತ್ತಿದ್ದೇನೆ . ಎಲ್ಲವೂ ಶಿವ, ಶಿವನೇ ಸತ್ಯ, ಮತ್ತು ಶಿವನೇ ಸುಂದರ,&#8221; ಎಂದು ಅವರು ಹೇಳಿದ್ದರು.</p>
]]></content:encoded>
					
		
		
			</item>
		<item>
		<title>LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!</title>
		<link>https://peepalmedia.com/meta-allow-lgbtq-people-to-be-insulted-as-mentally-ill/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 09 Jan 2025 07:31:26 +0000</pubDate>
				<category><![CDATA[LGBTQ+]]></category>
		<category><![CDATA[acceptance]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[meta]]></category>
		<category><![CDATA[meta guidelines]]></category>
		<category><![CDATA[Namma Pride]]></category>
		<category><![CDATA[parents]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<guid isPermaLink="false">https://peepalmedia.com/?p=51929</guid>

					<description><![CDATA[ಬೆಂಗಳೂರು: ಮೆಟಾದ ಹೊಸ ಮಾರ್ಗಸೂಚಿಯಲ್ಲಿ ( Guideline) ಬಳಕೆದಾರರಿಗೆ ಅವರ ಲೈಂಗಿಕತೆ ಅಥವಾ ಲಿಂಗ ಗುರುತನ್ನು ಆಧರಿಸಿ ಮಾನಸಿಕ ಅಸ್ವಸ್ಥರೆಂದು ಕರೆಯಲು ಅನುವು ಮಾಡಿಕೊಡುತ್ತದೆ.  ಮಂಗಳವಾರದಂದು ನವೀಕರಿಸಲಾದ ಮಾರ್ಗಸೂಚಿಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಥ್ರೆಡ್‌ಗಳ ಬಳಕೆದಾರರಿಗೆ ಅವರ ಮಾನಸಿಕ ಆರೋಗ್ಯದ ಆಧಾರದ ಮೇಲೆ ಜನರನ್ನು ಅವಮಾನಿಸಲು ಇನ್ನೂ ಅನುಮತಿಸುವುದಿಲ್ಲ. &#8220;ಆದರೆ ಲಿಂಗ ಮತ್ತು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಒಬ್ಬರನ್ನು ಮಾನಸಿಕ ರೋಗಿ ಅಥವಾ ಅಸಹಜ/ಅನೈಸರ್ಗಿಕ ಎಂದು ಕರೆಯುವುದು, ಸಮಲೈಂಗಿಕತೆ ಮತ್ತು ಟ್ರಾನ್ಸ್‌ಜೆಂಡರಿಸಂ ಬಗ್ಗೆ ರಾಜಕೀಯ ಮತ್ತು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಮೆಟಾದ ಹೊಸ ಮಾರ್ಗಸೂಚಿಯಲ್ಲಿ ( Guideline)  ಬಳಕೆದಾರರಿಗೆ ಅವರ ಲೈಂಗಿಕತೆ ಅಥವಾ ಲಿಂಗ ಗುರುತನ್ನು ಆಧರಿಸಿ ಮಾನಸಿಕ ಅಸ್ವಸ್ಥರೆಂದು ಕರೆಯಲು ಅನುವು ಮಾಡಿಕೊಡುತ್ತದೆ. </p>



<p>ಮಂಗಳವಾರದಂದು ನವೀಕರಿಸಲಾದ ಮಾರ್ಗಸೂಚಿಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಥ್ರೆಡ್‌ಗಳ ಬಳಕೆದಾರರಿಗೆ ಅವರ ಮಾನಸಿಕ ಆರೋಗ್ಯದ ಆಧಾರದ ಮೇಲೆ ಜನರನ್ನು ಅವಮಾನಿಸಲು ಇನ್ನೂ ಅನುಮತಿಸುವುದಿಲ್ಲ. &#8220;ಆದರೆ ಲಿಂಗ ಮತ್ತು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಒಬ್ಬರನ್ನು ಮಾನಸಿಕ ರೋಗಿ ಅಥವಾ ಅಸಹಜ/ಅನೈಸರ್ಗಿಕ ಎಂದು ಕರೆಯುವುದು, ಸಮಲೈಂಗಿಕತೆ ಮತ್ತು ಟ್ರಾನ್ಸ್‌ಜೆಂಡರಿಸಂ ಬಗ್ಗೆ ರಾಜಕೀಯ ಮತ್ತು ಧಾರ್ಮಿಕ ಚರ್ಚೆ ಮಾಡಲು, ಅವರನ್ನು ʼವಿಲಕ್ಷಣ- weird&#8217; ಎಂದು ಕರೆಯಲು ಅನುಮತಿ ನೀಡುತ್ತೇವೆ,&#8221; ಎಂದು ಮೆಟಾ ಹೇಳಿದೆ. </p>



<p>ತನ್ನ <a href="https://transparency.meta.com/en-gb/policies/community-standards/hateful-conduct/">ಪರಿಷ್ಕೃತ ಮಾರ್ಗಸೂಚಿ</a>ಯಲ್ಲಿ ಹೀಗೆ ಹೇಳಿದೆ: </p>



<p>Mental characteristics, including, but not limited to, allegations of stupidity, intellectual capacity and mental illness, and unsupported comparisons between PC groups on the basis of inherent intellectual capacity. <strong>We do allow allegations of mental illness or abnormality when based on gender or sexual orientation, given political and religious discourse about transgenderism and homosexuality and common non-serious usage of words such as &#8220;weird&#8221;.</strong></p>



<p><a href="https://www.nbcnews.com/tech/social-media/meta-ends-fact-checking-program-community-notes-x-rcna186468" target="_blank" rel="noreferrer noopener">ದ್ವೇಷದ ಭಾಷಣದ ಸುತ್ತಲಿನ ಹೊಸ ಮಾರ್ಗಸೂಚಿಗಳಲ್ಲಿ ಮೆಟಾ ಪ್ರಮುಖ ಬದಲಾವಣೆಗಳನ್ನು ತಂದಿದೆ. </a> ಮಂಗಳವಾರ, CEO ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾದಲ್ಲಿರುವ ಸತ್ಯ-ಪರಿಶೀಲನಾ ವಿಭಾಗವನ್ನು ತೆಗೆದು ಹಾಕುವುದಾಗಿ ಹೇಳಿದ್ದರು. ಈ ವ್ಯವಸ್ಥೆಯನ್ನು ಕೆಲವು ವಿಶ್ವಾಸಾರ್ಹ ಸಂಸ್ಥೆಗಳ ಸಹಯೋಗದಿಂದ ನಡೆಸಲಾಗುತ್ತಿತ್ತು.  X ನ ಸಮುದಾಯ ಮಾರ್ಗಸೂಚಿಗಳಂತೆ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕಿಂಗ್‌ ಸೇವೆಯನ್ನು ಮೆಟಾ ತೆಗೆದು ಹಾಕಿದೆ.</p>



<p> X ತನ್ನ ಬಳಕೆದಾರರಿಗೆ ಇತರರ ವಿಚಾರದ ಮೇಲೆ ಸೂಚಿಸಲಾದ &#8220;ಟಿಪ್ಪಣಿಗಳನ್ನು&#8221; ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ. ಇದರಲ್ಲಿ. ಈ ಟಿಪ್ಪಣಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಅನುಮತಿ ನೀಡಬೇಕೆ, ಅಥವಾ ಬೇಡವೇ ಎಂಬ ಬಗ್ಗೆ ವೋಟಿಂಗ್‌ ಮಾಡುವ ವ್ಯವಸ್ಥೆ ಇದೆ. </p>



<p>ಇದರಿಂದಾಗಿ, ಯಾವುದೇ ಬಳಕೆದಾರನಿಗೆ ಸುಲಭವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಈ ಸುಳ್ಳನ್ನು ಬೆಂಬಲಿಸುವವರು ಈ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಪ್ರೋತ್ಸಾಹ ನೀಡುತ್ತಾರೆ. </p>



<p>ಇದರ ಬೆನ್ನಲ್ಲೇ, ಮೆಟಾ ತನ್ನ ಹೊಸ ಮಾರ್ಗಸೂಚಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮಾನಸಿಕ ರೋಗಿಗಳು ಎಂದು ಕರೆಯಲು ಅನುಮತಿ ನೀಡಿರುವುದು ಜಾಗತಿಕ ವಿರೋಧಕ್ಕೆ ಕಾರಣವಾಗಿದೆ. ಇದರಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಪ್ರಪಂಚದಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸಿದಂತಾಗುತ್ತದೆ.</p>



<p>ಟ್ರಾನ್ಸ್ಜೆಂಡರ್ ಹಕ್ಕುಗಳು, ವಲಸೆ ಅಥವಾ ಸಮಲೈಂಗಿಕತೆಯ ಬಗ್ಗೆ  ರಾಜಕೀಯ ಅಥವಾ ಧಾರ್ಮಿಕ ವಿಚಾರಗಳನ್ನು ಚರ್ಚಿಸುವ ಸಂದರ್ಭದಲ್ಲಿ ಅವರನ್ನು ಅಂಚಿಗೆ  ತಳ್ಳುತ್ತಾರೆ ಅಥವಾ ಅವಮಾನಕರ ಭಾಷೆಯನ್ನು ಬಳಸುತ್ತಾರೆ. ಕೆಲವೊಮ್ಮೆ ಜನರು ಪ್ರೇಮ ಸಂಬಂಧ ಮುರಿದಾಗ (ಬ್ರೇಕಪ್) ಲಿಂಗತ್ವವನ್ನು ಶಪಿಸುತ್ತಾರೆ. ಈ ರೀತಿಯ ಭಾಷಣಕ್ಕೆ ಅವಕಾಶ ನೀಡುವಂತೆ ನಮ್ಮ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ,&#8221; ಎಂದು ಮೆಟಾ ಹೇಳಿದೆ.</p>



<p>They call for exclusion or use insulting language in the context of discussing political or religious topics, such as when discussing transgender rights, immigration or homosexuality. Finally, sometimes people curse at a gender in the context of a romantic break-up. Our policies are designed to allow room for these types of speech.</p>



<p>ಇದರಿಂದ, ಜಾಗತಿಕವಾಗಿ ವಲಸಿಗರ, ಲೈಂಗಿಕ ಅಲ್ಪಸಂಖ್ಯಾತರನ್ನು ಅವಮಾನಿಸುವ, ಅವರ ವಿರುದ್ಧ ದ್ವೇಷ ಹರಡುವವರಿಗೆ ತಮ್ಮ ಕೃತ್ಯವನ್ನು ಎಸಗಲು ಗ್ರೀನ್‌ ಸಿಗ್ನಲ್‌ ಸಿಕ್ಕಿದಂತಾಗಿದೆ.</p>



<p>ಟೆಕ್ ಕಂಪನಿಗಳು ಮತ್ತು ಇತರ ಕಂಪನಿಗಳ ಸಿಇಒಗಳು ಮತ್ತು ಉದ್ಯಮಿಗಳು ಅಮೇರಿಕಾದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅನ್ನು ಓಲೈಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಇದರಲ್ಲಿ ಅಮೆಜಾನ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಜೊತೆಗೆ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಮತ್ತು ಸಿಇಒಗಳು ಇದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಇವರೆಲ್ಲಾ ಸೇರಿ ಟ್ರಂಪ್‌ರ ಎರಡನೇ ಉದ್ಘಾಟನಾ ನಿಧಿಗೆ 1 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದರು. ಟ್ರಂಪ್ ಬೆಂಬಲಿಗ ಯುಎಫ್‌ಸಿಯ ಡಾನಾ ವೈಟ್‌ ಅನ್ನು <a href="https://www.cnbc.com/2025/01/06/ufcs-dana-white-joins-metas-board-weeks-before-trump-takes-office.html" target="_blank" rel="noreferrer noopener"> ತನ್ನ ಮಂಡಳಿಗೆ ಸೇರಿಸಿರುವುದಾಗಿ</a> ಮೆಟಾ ಜೂನ್‌ 6, 2025  ಮಂಗಳವಾರ ಘೋಷಿಸಿತ್ತು.</p>



<p></p>
]]></content:encoded>
					
		
		
			</item>
		<item>
		<title>LGBTQIA+ಮಕ್ಕಳು: ಮನೆಯಿಂದಲೇ ಬದಲಾವಣೆ ಆರಂಭ</title>
		<link>https://peepalmedia.com/lgbtqia-children-change-starts-at-home/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 26 Dec 2024 13:03:44 +0000</pubDate>
				<category><![CDATA[LGBTQ+]]></category>
		<category><![CDATA[acceptance]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[Namma Pride]]></category>
		<category><![CDATA[parents]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<guid isPermaLink="false">https://peepalmedia.com/?p=51269</guid>

					<description><![CDATA[ವಿಭಿನ್ನ ಲೈಂಗಿಕ ಅಭಿವ್ಯಕ್ತಿಯು ಬಹಳ ಸಂಕೀರ್ಣವಾದದ್ದು. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕಿದೆ. ಏಕೆಂದರೆ ನಮ್ಮ ಭಾವನೆಗಳು ಹಾಗೂ ಲೈಂಗಿಕತೆಗಿಂತ ಮತ್ತು ಕೆಲವೊಮ್ಮೆ ಲೈಂಗಿಕ ಅವಯವಯಗಳ ರಚನೆ LGBTQIA+ಮಕ್ಕಳಲ್ಲಿ ಭಿನ್ನವಾಗಿರುತ್ತದೆ. ಕೆಲ ಮಕ್ಕಳು ಸಾಧಾರಣವಾಗಿರುವಂತೆ ಕಂಡರೂ ಕೂಡಾ ಅವರ ಬಯಕೆ ಹಾಗೂ ಭಾವನೆಗಳು ಹದಿಹರಯಕ್ಕೆ ಬಂದಾಗ ಉದ್ಭವಿಸುವುದು ಅವರ ವಿರುದ್ಧವಾಗಿರುತ್ತವೆ. ಇದು ಬಲವಂತದಿಂದ ಉಂಟಾದ ಮಾರ್ಪಾಡು ಆಗಿರುವುದಿಲ್ಲ ಎನ್ನುವ ವಿಚಾರವನ್ನು ಪೋಷಕರು ಸ್ವೀಕರಿಸಬೇಕಾಗುತ್ತದೆ. ತಾವು ಇತರರಿಗಿಂತ ಭಿನ್ನವಾಗಿ ಇರುವುದನ್ನು ಅರಿತ ಮಕ್ಕಳು [&#8230;]]]></description>
										<content:encoded><![CDATA[
<pre class="wp-block-code"><code>LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಲೇಖಕಿ <strong>ರುಕ್ಮಿಣಿ ಎಸ್‌ ನಾಯರ್</strong> ರವರ ಈ ಲೇಖನ ಓದಿ</code></pre>



<p>ವಿಭಿನ್ನ ಲೈಂಗಿಕ ಅಭಿವ್ಯಕ್ತಿಯು ಬಹಳ ಸಂಕೀರ್ಣವಾದದ್ದು. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕಿದೆ. ಏಕೆಂದರೆ ನಮ್ಮ ಭಾವನೆಗಳು ಹಾಗೂ ಲೈಂಗಿಕತೆಗಿಂತ ಮತ್ತು ಕೆಲವೊಮ್ಮೆ ಲೈಂಗಿಕ ಅವಯವಯಗಳ ರಚನೆ LGBTQIA+ಮಕ್ಕಳಲ್ಲಿ ಭಿನ್ನವಾಗಿರುತ್ತದೆ. ಕೆಲ ಮಕ್ಕಳು ಸಾಧಾರಣವಾಗಿರುವಂತೆ ಕಂಡರೂ ಕೂಡಾ ಅವರ ಬಯಕೆ ಹಾಗೂ ಭಾವನೆಗಳು ಹದಿಹರಯಕ್ಕೆ ಬಂದಾಗ ಉದ್ಭವಿಸುವುದು ಅವರ ವಿರುದ್ಧವಾಗಿರುತ್ತವೆ. ಇದು ಬಲವಂತದಿಂದ ಉಂಟಾದ ಮಾರ್ಪಾಡು ಆಗಿರುವುದಿಲ್ಲ ಎನ್ನುವ ವಿಚಾರವನ್ನು ಪೋಷಕರು ಸ್ವೀಕರಿಸಬೇಕಾಗುತ್ತದೆ.</p>



<p>ತಾವು ಇತರರಿಗಿಂತ ಭಿನ್ನವಾಗಿ ಇರುವುದನ್ನು ಅರಿತ ಮಕ್ಕಳು ಮಾನಸಿಕವಾಗಿ ಕೀಳರಿಮೆ ಹೊಂದಿರುವಂತಹ ಸಂದರ್ಭದಲ್ಲಿ ಅವರಿಗೆ ಆಸರೆಯಾಗಿ ನಿಂತು ನಾವು ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ತುಂಬಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮಕ್ಕಳು ಏನು ಮಾಡಬೇಕು ಎಂದು ತಿಳಿಯದೇ, ತಮ್ಮಂತೆ ಇರುವ ಇತರರಿಗೆ ಆಗುತ್ತಿರುವ ಭೀತಿ ಹುಟ್ಟಿಸುವ ಅನುಭವಗಳನ್ನು ಕಂಡು ಹೆದರಿ ಪೋಷಕರಿಗೆ ತಿಳಿಯದಂತೆ ಸ್ವತಃ ತಾವೇ ಮನೆ ಬಿಟ್ಟು ಹೊರಹೋಗುವ ಸಾಧ್ಯತೆಗಳು ಇರುತ್ತವೆ.&nbsp;</p>



<p>ವಿದ್ಯೆ ಕಲಿತು ಉದ್ಯೋಗಸ್ಥರಾಗಿ ಸಬಲರಾಗುವವರೆಗೂ ಹಾಗೂ ಅದರ ನಂತರವೂ ಮಕ್ಕಳಿಗೆ ಪೋಷಕರ ಆಶ್ರಯದ ಅಗತ್ಯವಿರುತ್ತದೆ. ಹಾಗೆಯೇ ಕಾಯಿಲೆಗೆ ಬಿದ್ದಾಗ ವೃದ್ಧಾಪ್ಯದಲ್ಲಿ ಪೋಷಕರಿಗೆ ಮಕ್ಕಳು ಕೂಡ ಊರಗೋಲಾಗಿ ಇರಬೇಕಾಗುತ್ತದೆ. ದುಡುಕಿ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಮನೆ ಬಿಟ್ಟು ಹೋದ ಅಥವಾ ಮನೆಯಿಂದ ಹೊರ ಹಾಕಿದ LGBTQIA+ಮಕ್ಕಳು ನಾನಾ ತರದ ತೊಂದರೆಗೆ ಹಾಗೂ ಶೋಷಣೆಗೆ ಒಳಗಾಗುತ್ತಾರೆ. ಇದರಿಂದ ಅವರು ನೊಂದು ಕುಗ್ಗಿಹೋಗಿ ಕೊನೆಗೆ ಬದುಕಲಾರದೆ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಪೋಷಕರೂ ಕೂಡ ಮಾನಸಿಕವಾಗಿ ನೋವಿಗೊಳಗಾಗುತ್ತಾರೆ. ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಇಲ್ಲದೆ ಶಾರೀರಿಕವಾಗಿ ಮಾನಸಿಕವಾಗಿ ನರಳಿ ಮರಣ ಸಮಯದಲ್ಲಿ ಮಕ್ಕಳು ಜೊತೆ ಇಲ್ಲದೇ ಪ್ರಾಣ ಬಿಡುವ ಪರಿಸ್ಥಿತಿ ಉಂಟಾಗುತ್ತದೆ.</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/confusions-in-lgbtq-childrens-life/">LGBTQ+ ಮಕ್ಕಳ ತೊಳಲಾಟಗಳು!</a></p>



<p>ಯಾವುದೇ ಭಾವನೆಗಳನ್ನು ಕೃತಕವಾಗಿ ಮೂಡಿಸುವುದು ಸಾಧ್ಯವಿಲ್ಲ. ಹಾಗಾಗಿಯೇ ಪೋಷಕರಿಗೂ ಮಕ್ಕಳ ಭಿನ್ನ ಭಾವನೆಗಳನ್ನು ಸ್ವೀಕರಿಸುವುದು ಕೂಡ ಕಷ್ಟವಾಗುತ್ತದೆ. ಆದರೆ ಯಾರೂ ಬೇಕೆಂದು ವಿಭಿನ್ನ ಭಾವನೆಗಳನ್ನು ಬೆಳೆಸಿಕೊಳ್ಳುವುದಿಲ್ಲ. ತಮ್ಮ ಅಭಿವ್ಯಕ್ತಿಯು ಕುಟುಂಬ ಹಾಗೂ ಸಮಾಜ ವಿರೋಧಿ ಎನಿಸಿದರೂ ಅದನ್ನು ಬದಲಾವಣೆ ಮಾಡಿಕೊಳ್ಳಲು ಈ ಮಕ್ಕಳು ಆದಷ್ಟು ಪ್ರಯತ್ನಪಟ್ಟು ಸಾಧ್ಯವಾಗದೆ ಹೋದಾಗ ವಿಧಿಯಿಲ್ಲದೇ ತಮ್ಮ ಭಿನ್ನತೆಯನ್ನು ಒಪ್ಪಿಕೊಂಡು ಅದರೊಂದಿಗೇ ಜೀವನ ಸಾಗಿಸಲು ನಿರ್ಧರಿಸುತ್ತಾರೆ. ಆ ಮಕ್ಕಳಿಗೂ ತಂದೆ ತಾಯಿ ಹಾಗೂ ಕುಟುಂಬದ ಇನ್ನಿತರ ಸದಸ್ಯರ ಬಗ್ಗೆ ಗೌರವ ಇರುತ್ತದೆ. ಆದರೆ ಅವರ ಮನಸ್ಸಿನ ಕೂಗನ್ನು ತಿರಸ್ಕರಿಸಿ ಬದುಕಲು ಕೂಡ ಅವರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹ ಮಕ್ಕಳನ್ನು ಹಾಗೂ ಅವರ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ.&nbsp;</p>



<p>ಇಲ್ಲಿ ಹೆತ್ತವರಿಗಿಂತ ಹೆಚ್ಚು ಪಟ್ಟು ನೋವಿಗೆ ಒಳಪಡುವುದು LGBTQIA+ಮಕ್ಕಳೇನೆ. ಇತ್ತ ಮನೆಯಲ್ಲಿ ಆಶ್ರಯವಿಲ್ಲದೆ, ತಂದೆ ತಾಯಿಯ ಪ್ರೀತಿ ಕಾಣದೇ ನೆರೆಹೊರೆ ಹಾಗೂ ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಬದುಕಲು ದಾರಿ ಇಲ್ಲದೆ ಶೋಷಣೆಗೆ ಒಳಗಾಗಿ ಹೆಣಗಾಡುವ ಪರಿಸ್ಥಿತಿ ಈ ಮಕ್ಕಳದು. ಈ ಮಕ್ಕಳ ವಿಭನ್ನತೆಯು ಸಮಾಜಕ್ಕೆ ತಿಳಿದರೆ ವಿದ್ಯಾಭ್ಯಾಸ, ಕಚೇರಿಗಳಲ್ಲಿ ಉತ್ತಮ ಕೆಲಸ ಹುದ್ದೆ ಕೊನೆಗೆ ಸಮಾಜದಲ್ಲಿ ಉತ್ತಮ ಬದುಕನ್ನು ಸಾಗಿಸುವುದರಿಂದಲೂ ವಂಚಿತವಾಗುತ್ತಾರೆ ಎನ್ನುವ ಭಯ ಅವರನ್ನು ಹಗಲು ರಾತ್ರಿ ಕಾಡುತ್ತಿರುತ್ತದೆ.&nbsp;</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></p>



<p>ನಮ್ಮ ಮನೆಗಳಿಂದಲೇ ಮೊದಲು ಬದಲಾವಣೆ ಪ್ರಾರಂಭವಾಗಬೇಕು. ನಮ್ಮ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವಲ್ಲದೆ ಅವರಿಗೆ ಇನ್ಯಾರಿದ್ದಾರೆ. ಪೋಷಕರಿಂದ ದೂರಾಗಿ ಬದುಕುವ ಆಸೆ ಆ ಮಕ್ಕಳಿಗೆ ಖಂಡಿತ ಇರದು. LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ನಮ್ಮ ಮಕ್ಕಳ ಮೇಲೆ ನಮಗೆ ಕರುಣೆ ಇರಲಿ. ಅವರು ನಮ್ಮ ಕುಟುಂಬದ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಮನಗಂಡು ಪರಿಗಣಿಸಬೇಕು. ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗೆಯೇ LGBTQIA+ ಮಕ್ಕಳು ಅವರ ಅಭಿವ್ಯಕ್ತಿಯಂತೆ ಬದುಕುವ ಹಕ್ಕನ್ನು ನಾವು ಕಸಿದುಕೊಳ್ಳದೆ ಅವರನ್ನು ಮಾನವರಾಗಿ ಕಾಣೋಣ. ನಮ್ಮ ಮಕ್ಕಳು ನಮ್ಮವರು. ಪೋಷಕರಿಗೆ ಮಕ್ಕಳಿಲ್ಲದೆ ಹೇಗೆ ಬದುಕುವುದು ಕಷ್ಟ ಸಾಧ್ಯವೋ ಹಾಗೆ ಮಕ್ಕಳಿಗೂ ಕೂಡ. ಮಕ್ಕಳು ಹೇಗಿರುವರೋ ಹಾಗೆ ಅವರನ್ನು ಆಲಂಗಿಸೋಣ. ಸುಖ, ಸಂತೋಷದಿಂದ, ನೆಮ್ಮದಿಯಿಂದ ಬಾಳುವ ಸದವಕಾಶವನ್ನು ನಾವು ಪೋಷಕರು ನಮ್ಮ ಕರುಳ ಕುಡಿಗಳಿಗೆ ಒದಗಿಸಿ ಕೊಡೋಣ.&nbsp;</p>



<p><strong>ಸಂಬಂಧಗಳು</strong></p>



<p>ಋತುಗಳಿಗನುಗುಣವಾಗಿ<br>ಮರಗಳಿಂದೆಲೆಗಳು<br>ಉದುರಿ ಹೋಗುವ ತೆರದಿ <br>ಕಾಲಕ್ಕನುಗುಣವಾಗಿ<br>ಬದಲಾಗುವ ಸ್ನೇಹಗಳು<br>ಹೂಹಣ್ಣುಗಳ ಭಾರದಿ<br>ರೆಂಬೆಕೊಂಬೆಗಳು<br>ಮುರಿದು ಬೀಳುವ ತೆರದಿ<br>ಜವಾಬ್ದಾರಿಗಳಿಗಂಜಿ<br>ತೊರೆವ ಸಂಬಂಧಗಳು<br>ಹವಾಮಾನ ವೈಪರೀತ್ಯದಿ<br>ಬಿರುಗಾಳಿಯಬ್ಬರಕೆ<br>ಬುಡಮೇಲಾದ ವೃಕ್ಷದ ತೆರದಿ<br>ಭದ್ರತೆಯ ಕಳಚಿ<br>ಬೇರ್ಪಟ್ಟ ಅನುಬಂಧಗಳು<br>ಋತುಗಳು ಬದಲಾಗಲಿ<br>ಹೊರೆಯಾದರಾಗಲಿ<br>ಕಷ್ಟನಷ್ಟಗಳೇನೇ ಬರಲಿ<br>ನಿನ್ನೊಂದಿಗಿರುವೆನೆಂಬ<br>ಭರವಸೆಯೀವ ಜೀವಗಳು<br>ಬೇಕಿದೀಬಾಳನೌಕೆಗೆ<br>ಹುಟ್ಟಾಗಿ ಜೀಕಿ<br>ಸುಳಿಸೆಳೆತದಿಂಕಾಪಾಡಿ<br>ದಡಕೆ ಹೊತ್ತೊಯ್ಯುವ<br>ಮಾನವೀಯ ಹೃದಯಗಳು</p>



<p><strong>ಲೇಖನ: ರುಕ್ಮಿಣಿ.ಎಸ್.ನಾಯರ್</strong></p>



<p>ಬೆಂಗಳೂರು</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="Rgp5OEMveE"><a href="https://peepalmedia.com/responsibilities-of-parents-of-lgbtqia-children/">LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು</a></blockquote><iframe class="wp-embedded-content" sandbox="allow-scripts" security="restricted"  title="&#8220;LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು&#8221; &#8212; Peepal Media" src="https://peepalmedia.com/responsibilities-of-parents-of-lgbtqia-children/embed/#?secret=mNqSV40Zyu#?secret=Rgp5OEMveE" data-secret="Rgp5OEMveE" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು</title>
		<link>https://peepalmedia.com/responsibilities-of-parents-of-lgbtqia-children/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 19 Dec 2024 05:36:23 +0000</pubDate>
				<category><![CDATA[LGBTQ+]]></category>
		<category><![CDATA[acceptance]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[Namma Pride]]></category>
		<category><![CDATA[parents]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<category><![CDATA[transgender]]></category>
		<guid isPermaLink="false">https://peepalmedia.com/?p=50912</guid>

					<description><![CDATA[LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ. ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ [&#8230;]]]></description>
										<content:encoded><![CDATA[
<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow" style="flex-basis:100%">
<pre class="wp-block-code"><code>ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾ, ಒಳಗೊಳಗೆ ತಮ್ಮ ಲಿಂಗತ್ವವನ್ನು ಬಚ್ಚಿಟ್ಟುಕೊಂಡು ಬದುಕುವ LGBTQ+ ಮಕ್ಕಳಿಗೆ ದೊಡ್ಡ ಧೈರ್ಯವೆಂದರೆ ಅವರ ಹೆತ್ತವರು. ಆದರೆ, ಹೆತ್ತವರೇ ತಮ್ಮ ಮಗುವಿನ ಲೈಂಗಿಕ ಭಿನ್ನತೆಯನ್ನು ಒಪ್ಪದೆ, ಆ ಮಗುವಿಗೆ ಹಿಂಸೆ ನೀಡಿದರೆ ಅದರ ಕೈ ಹಿಡಿಯುವವರು ಯಾರು? ಜಗತ್ತಿನಲ್ಲಿ ಕೋಟ್ಯಾಂತರ ಮಂದಿ LGBTQ+ ಮಕ್ಕಳು ತಮ್ಮ ಮನೆಯನ್ನು ತೊರೆದು, ಕುಟುಂಬದಿಂದ ದೂರವಾಗಿ ಬದುಕುತ್ತಾರೆ. ಮಕ್ಕಳ ಪೋಷಕರು ತಮ್ಮ ಮಗು ಗೇ, ಲೆಸ್ಬಿಯನ್‌, ಟ್ರಾನ್ಸ್‌ಜೆಂಡರ್‌ ಇತ್ಯಾದಿಗಳಲ್ಲಿ ಒಂದು ಎಂದು ಅರಿತೂ, ಅವರನ್ನು ಒಪ್ಪದೆ, ತಮಗೆ ಬೇಕಾದಂತೆ ಅವರು ಬದುಕಲು ಒತ್ತಡ ಹೇರುತ್ತಾರೆ. ಹೀಗಾಗಿ, ಮಾನಸಿಕ ಖಿನ್ನತೆಯಿಂದ ಈ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ. LGBTQ+ ಮಕ್ಕಳ ತಂದೆ ತಾಯಿಯ ಜವಾಬ್ದಾರಿಗಳ ಬಗ್ಗೆ ಬರೆಯುತ್ತಾರೆ ಲೇಖಕಿ <strong><a href="https://peepalmedia.com/namma-pride-bengaluru-rukmini-s-nair/">ರುಕ್ಮಿಣಿ ಎಸ್ ನಾಯರ್</a></strong></code></pre>
</div>
</div>



<p>LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ.</p>



<p>ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡುತ್ತಾರೆ. ಸಣ್ಣ ಪುಟ್ಟ ಆಸೆಗಳನ್ನು ಕೂಡಾ ಬದಿಗೊತ್ತಿ ಮಕ್ಕಳಿಗಾಗಿ ಉತ್ತಮ ಜೀವನವನ್ನು ರೂಪಿಸುವತ್ತ ಗಮನ ಹರಿಸುತ್ತಾರೆ. ಹಗಲಿರುಳು ಮಕ್ಕಳಿಗಾಗಿ ದುಡಿಯುತ್ತಾರೆ ಅವರ ಉಡುಗೆ ತೊಡುಗೆ, ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ರೀತಿಯ ಖರ್ಚು ವೆಚ್ಚಕ್ಕಾಗಿ ಒಂದೊಂದು ರೂಪಾಯಿಯನ್ನು ಶೇಖರಿಸಿ ಇಡುತ್ತಾರೆ. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲೆಂದು ಪ್ರತಿಷ್ಠಿತ ಶಾಲೆಗಳನ್ನು ಹುಡುಕಿ ತಮ್ಮ ವರಮಾನಕ್ಕೂ ಮೀರಿದ ಖರ್ಚು ವೆಚ್ಚಗಳನ್ನು ಭರಿಸಿ ಸೇರಿಸುತ್ತಾರೆ. ಮಕ್ಕಳು ಬೆಳೆದು ಮುಂದೊಂದು ದಿನ ಶ್ರೇಷ್ಠ ವ್ಯಕ್ತಿಯಾಗಲೆಂದು ಬಯಸುತ್ತಾರೆ. ತಮಗೆಷ್ಟೇ ನೋವುಗಳು ತೊಂದರೆಗಳು ಇದ್ದರೂ ಮಕ್ಕಳ ಮೊಗದಲ್ಲಿ ಕಿರುನಗೆಯನ್ನು ಕಾಣಲು ಬಯಸುತ್ತಾರೆ.&nbsp;</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="677" src="https://peepalmedia.com/wp-content/uploads/2024/12/Screenshot-2024-12-19-105636-1024x677.jpg" alt="" class="wp-image-50913" style="width:866px;height:auto" srcset="https://peepalmedia.com/wp-content/uploads/2024/12/Screenshot-2024-12-19-105636-1024x677.jpg 1024w, https://peepalmedia.com/wp-content/uploads/2024/12/Screenshot-2024-12-19-105636-300x198.jpg 300w, https://peepalmedia.com/wp-content/uploads/2024/12/Screenshot-2024-12-19-105636-768x508.jpg 768w, https://peepalmedia.com/wp-content/uploads/2024/12/Screenshot-2024-12-19-105636-150x99.jpg 150w, https://peepalmedia.com/wp-content/uploads/2024/12/Screenshot-2024-12-19-105636-696x460.jpg 696w, https://peepalmedia.com/wp-content/uploads/2024/12/Screenshot-2024-12-19-105636-1068x706.jpg 1068w, https://peepalmedia.com/wp-content/uploads/2024/12/Screenshot-2024-12-19-105636.jpg 1254w" sizes="(max-width: 1024px) 100vw, 1024px" /><figcaption class="wp-element-caption">image: VectorStock.com/46119393</figcaption></figure></div>


<p>ಮಕ್ಕಳ ಬಾಲಲೀಲೆಗಳನ್ನು ನೋಡುತ್ತಾ ಅವರ ಆಟ ಪಾಠಗಳ ಜೊತೆಗೂಡುತ್ತಾರೆ. ಮಗುವು ಹೊರಳಿ, ತೆವಳಿ, ಅಂಬೆಗಾಲಿಟ್ಟು, ಬಿದ್ದು ಎದ್ದು ನಿಂತು ತಡವರಿಸಿ ಹೆಜ್ಜೆ ಇಟ್ಟು ನಡೆವಾಗ ತಮ್ಮ ಮಗು ಏನೋ ಸಾಧಿಸಿದ ಹೆಮ್ಮೆ ಮಾತಾಪಿತರಿಗೆ. ಮಗುವಿನ ಕಿಲಕಿಲ ನಗು ಮನೆಯ ತುಂಬಾ ಮಾರ್ದನಿಸುವಾಗ ಅಪ್ಪ ಅಮ್ಮನ ಮನದಲ್ಲಿಯೂ ಆ ನಗುವಿನ ಅಲೆಗಳು ಸಂತೋಷವನ್ನು ತುಂಬುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಮಗುವಿನ ಹೆಜ್ಜೆಯ ಗೆಜ್ಜೆ ಸದ್ದು ತುಂಬಿದಾಗ ಹಿರಿಹಿರಿ ಹಿಗ್ಗಿ ಮನೆಮಂದಿಯೆಲ್ಲಾ ಸಂತಸದಿಂದ ಉಬ್ಬಿ ಹೋಗುತ್ತಾರೆ. ಅಜ್ಜಿ ತಾತರಿಗಂತೂ ತಮ್ಮ ಮೊಮ್ಮಕ್ಕಳಿಗೆ ದೃಷ್ಟಿ ತೆಗೆದು ಎಷ್ಟು ನಿವಾಳಿಸಿದರೂ ಸಾಲದು. ಮಗುವಿನ ತಲೆಗೂದಲನ್ನು ಬಾಚಿ ಜುಟ್ಟು, ಜಡೆ ಕಟ್ಟಿ, ಪುಟ್ಟ ಫ್ರಾಕ್, ಲಂಗ ರವಿಕೆ,ಅಂಗಿ ಚಡ್ಡಿ, ದೋತಿ ತೊಡಿಸಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಹಚ್ಚಿ, ಕೆನ್ನೆಗೆ ಗಲ್ಲಕ್ಕೆ ಕಪ್ಪಾದ ದೃಷ್ಟಿ ಬೊಟ್ಟು ಇಟ್ಟು, ಮುದ್ದಾಗಿ ಕಾಣುವ ಮಗುವನ್ನು ಮುದ್ದಿಸಿ, ಲಾಲಿಸಿ ಸಂಭ್ರಮಿಸುವರು ಮನೆ ಮಂದಿಯೆಲ್ಲಾ. ಸಣ್ಣ ಮಗುವಾಗಿದ್ದಾಗ ಹೆಣ್ಣು ಗಂಡು ಎಂಬ ಬೇಧ ಭಾವ ತೋರದೇ ಎಲ್ಲಾ ರೀತಿಯ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಖುಷಿಪಡುವ ಮನೆ ಮಂದಿ ಮಗು ದೊಡ್ಡದಾಗುತ್ತಾ ಬಂದಂತೆ ಹೆಣ್ಣು ಅಥವಾ ಗಂಡು ಎನ್ನುವ ವ್ಯತ್ಯಾಸಕ್ಕೆ ಅನುಗುಣವಾಗಿ ವಸ್ತ್ರಗಳನ್ನು ತೊಡಿಸಲು ಪ್ರಾರಂಭಿಸುತ್ತಾರೆ. ಆಗಿನಿಂದಲೇ ತಾನು ನಿರ್ದಿಷ್ಟ ಲಿಂಗಕ್ಕೆ ಸೇರಿದವನು/ವಳು ಎಂದು ಮಗುವಿನ ಮನಸ್ಸಿಗೆ ಮನದಟ್ಟು ಆಗುವಂತೆ ನಡೆದುಕೊಳ್ಳುತ್ತಾರೆ.&nbsp;</p>



<p>ತಾನು ಸಣ್ಣ ಮಗುವಿದ್ದಾಗ ಯಾವ ರೀತಿಯ ಉಡುಗೆ ತೊಡುಗೆ ತೊಡಿಸಿ ಪಾಲಕರು, ಪೋಷಕರು ತನ್ನನ್ನು ಅಲಂಕರಿಸಿದ್ದರು ಎನ್ನುವುದು ಕೂಡಾ ಆ ಕಂದನ ನೆನಪಿನಲ್ಲಿ ಉಳಿದಿರುವುದಿಲ್ಲ. ಆದರೂ ಬೆಳೆದಂತೆ ಕಾಲಕ್ರಮೇಣ ತನ್ನ ಇಷ್ಟದ ಅನುಸಾರವಾಗಿ ಆರಾಮದಾಯಕ ಎನಿಸುವ ಬಟ್ಟೆಯನ್ನು ತೊಡಲು ಬಯಸುತ್ತದೆ. ಆಗ ಪೋಷಕರಲ್ಲಿ ಗೊಂದಲ ಉಂಟಾಗುತ್ತದೆ. ತನ್ನ ಇಷ್ಟದ ಆಭರಣಗಳನ್ನು ಧರಿಸಲು ಬಯಸುತ್ತದೆ. ತನಗೆ ಪ್ರಿಯವೆನಿಸುವ ರೀತಿಯಲ್ಲಿ ಅಲಂಕರಿಸಿಕೊಳ್ಳಲು ಆಸೆಪಡುತ್ತದೆ. ಇದೆಲ್ಲವೂ ಪೋಷಕರ ಗಮನಕ್ಕೆ ಬಂದಾಗ ಹೌಹಾರಿ ಹೋಗುತ್ತಾರೆ. </p>



<p>ತಮ್ಮ ಮಗುವಿನಲ್ಲಿ ಏಕೆ ಇಂತಹ ತದ್ವಿರುದ್ಧ ಬಯಕೆಗಳು ಎಂದು ಚಿಂತಾಕ್ರಾಂತರಾಗುತ್ತಾರೆ. ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಏನೆಂದುಕೊಳ್ಳುತ್ತಾರೆ ಎನ್ನುವ ಅಂಜಿಕೆ ಪೋಷಕರ ಮನದಲ್ಲಿ ಮೂಡುತ್ತದೆ. ತಮ್ಮ ಮಗುವಿನಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಭಾವನೆಗಳ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುವ ಇವರು ಮಗುವನ್ನು ಗದರಿಸಿ ಮಗುವು ತನ್ನ ಇಷ್ಟದ ಹಾಗೆ ನಡೆದುಕೊಳ್ಳುವುದನ್ನು ವಿರೋಧಿಸುತ್ತಾರೆ. ಇದರಿಂದ ಆ ಪುಟ್ಟ ಮನಸ್ಸಿಗೆ ಎಷ್ಟು ಆಘಾತವಾಗುತ್ತದೆ ಎನ್ನುವುದನ್ನು ಮನಗಾಣದಾಗುತ್ತಾರೆ.&nbsp;</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></p>



<p>ಬಲವಂತವಾಗಿ ಮಗುವನ್ನು ಅದರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿರ್ಬಂಧವನ್ನು ಹೇರುತ್ತಾರೆ. ಮಗುವಿಗೆ ತನ್ನ ತಪ್ಪು ಏನೆಂದು ಕೂಡಾ ಇಲ್ಲಿ ತಿಳಿದಿರುವುದಿಲ್ಲ. ತನಗೇನು ಅನಿಸುತ್ತದೆ ಅದನ್ನೇ ಮಾಡಲು ಹಾಗೂ ಹಾಗೆ ನಡೆದುಕೊಳ್ಳಲು ಮಗುವು ಇಚ್ಚಿಸುತ್ತದೆ. ಆದರೆ ತನ್ನ ಇಷ್ಟಾನಿಷ್ಟಗಳಿಗೆ ಅಪ್ಪ ಅಮ್ಮನ ವಿರೋಧ ಕಂಡಾಗ ಮಗು ಒಳಗೊಳಗೇ ಕೊರಗಲು ಪ್ರಾರಂಭಿಸುತ್ತದೆ. ಮಗುವಲ್ಲವೇ ಅದಕ್ಕೇನು ತಿಳಿಯುತ್ತದೆ? ತಿಳಿಯದೇ ಮಾಡಿದ್ದನ್ನು ನಾವು ಸರಿಪಡಿಸಿದರೆ ಆಯಿತು ಎಂದುಕೊಳ್ಳುವ ಪೋಷಕರು ಆ ಪುಟ್ಟ ಮನಸ್ಸಿಗೆ ಆಗುವ ಆಘಾತವನ್ನು ಊಹಿಸದಾಗುತ್ತಾರೆ.&nbsp;</p>



<p>ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಟ್ಟಾಗ ಅವರಲ್ಲಿ ಆಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಮಕ್ಕಳನ್ನು ಕುತೂಹಲಕ್ಕೆ ಹಾಗೂ ಮುಜುಗರಕ್ಕೆ ಒಳಪಡಿಸುತ್ತದೆ. ಅಂತಹಾ ಸಮಯದಲ್ಲಿ ಮಕ್ಕಳು ಕೇಳುವ ಸಂಶಯಭರಿತ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಹೇಳಲು ಪೋಷಕರು ಅಸಮರ್ಥರಾಗುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ಮನೆಗಿಂತ ಹೆಚ್ಚಾಗಿ ಹೊರಗೆ ಅಂದರೆ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ ಹಾಗಾಗಿ ಇವರ ಮೇಲೆ ಹೆಚ್ಚು ಗಮನ ಕೊಡಲು ಕೂಡಾ ಪೋಷಕರಿಗೆ ಅಸಾಧ್ಯವಾಗುತ್ತದೆ. </p>



<p>ಜೊತೆಗೆ ಇಬ್ಬರೂ ಹೊರಗೆ ದುಡಿಯಲು ತೆರಳುವುದರಿಂದ ಮಕ್ಕಳೊಂದಿಗೆ ಕಳೆಯುವ ಸಮಯವೂ ಕಡಿಮೆ ಇರುತ್ತದೆ. ಹಲವಾರು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿ ಮಕ್ಕಳು ತಮ್ಮ ಜೊತೆ ಮಾತನಾಡಲು ಬಯಸಿದಾಗ ಕೆಲವೊಮ್ಮೆ ಅವರ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಹೀಗಾದಾಗ ತಮ್ಮ ಜಿಜ್ಞಾಸೆಗಳಿಗೆ ಸರಿಯಾದ ಪರಿಹಾರ ದೊರೆಯದೇ ಮಕ್ಕಳು ಪೋಷಕರಿಂದ ದೂರವೇ ಉಳಿದುಬಿಡುತ್ತಾರೆ. ಕೆಲವೊಮ್ಮೆ ತಮ್ಮ ಮಕ್ಕಳು ಏನು ಮಾಡುತ್ತಾರೆ? ಶಾಲೆಗೆ ಹೋದಾಗ ಹೊರಗೆ ಹಾಗೂ ಮನೆಯಲ್ಲಿ ಒಬ್ಬರೇ ಇದ್ದಾಗ ಹೇಗೆ ಇರುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ತಮಗೆ ತಿಳಿದಂತೆ, ತಮ್ಮ ಅನುಭವದ ಮೇರೆಗೆ ಮಕ್ಕಳಿಗೆ ತಿಳಿಹೇಳಿ ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿಯೇ ಬೆಳೆಯುತ್ತಿದ್ದಾರೆ ಎಂದು ತಮ್ಮಲ್ಲಿಯೇ ಅಂದುಕೊಳ್ಳುತ್ತಾರೆ. ಇತ್ತ ಮಾತಾಪಿತರ ಬಳಿ ಮಾತನಾಡಲು ಅವಕಾಶ ಸಿಗದೇ ಗೊಂದಲಕ್ಕೆ ಒಳಗಾದ ಮಕ್ಕಳು ತಮ್ಮ ಮನಸ್ಸಲ್ಲಿ ಮೂಡುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇತರೇ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.&nbsp;</p>


<div class="wp-block-image">
<figure class="aligncenter size-large is-resized"><img decoding="async" width="1024" height="748" src="https://peepalmedia.com/wp-content/uploads/2024/12/Screenshot-2024-12-19-105949-1024x748.jpg" alt="" class="wp-image-50914" style="width:744px;height:auto" srcset="https://peepalmedia.com/wp-content/uploads/2024/12/Screenshot-2024-12-19-105949-1024x748.jpg 1024w, https://peepalmedia.com/wp-content/uploads/2024/12/Screenshot-2024-12-19-105949-300x219.jpg 300w, https://peepalmedia.com/wp-content/uploads/2024/12/Screenshot-2024-12-19-105949-768x561.jpg 768w, https://peepalmedia.com/wp-content/uploads/2024/12/Screenshot-2024-12-19-105949-150x110.jpg 150w, https://peepalmedia.com/wp-content/uploads/2024/12/Screenshot-2024-12-19-105949-696x508.jpg 696w, https://peepalmedia.com/wp-content/uploads/2024/12/Screenshot-2024-12-19-105949-1068x780.jpg 1068w, https://peepalmedia.com/wp-content/uploads/2024/12/Screenshot-2024-12-19-105949.jpg 1152w" sizes="(max-width: 1024px) 100vw, 1024px" /><figcaption class="wp-element-caption">image: VectorStock.com/50881516</figcaption></figure></div>


<p>ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೆರೆಹೊರೆಯವರಿಂದ, ಪರಿಚಿತರಿಂದ, ಸಂಬಂಧಿಕರಿಂದ ಲೈಂಗಿಕ ಶೋಷಣೆಗೂ ಒಳಗಾಗುತ್ತಾರೆ. ಇದನ್ನು ಪೋಷಕರಲ್ಲಿ ಹೇಳಲು ಅಂಜುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶಗಳೂ ಇರುವುದಿಲ್ಲ. ಶಾಲೆಯ ಚಟುವಟಿಕೆ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಮಾತನಾಡುವ ಪೋಷಕರು ಮಕ್ಕಳಿಗೆ ಆಗುವ ಇಂತಹಾ ಅಹಿತಕರ ಅನುಭವಗಳ ಬಗ್ಗೆ ಚಿಂತಿಸಿಯೇ ಇರುವುದಿಲ್ಲ. ತಾವು ತಮ್ಮ ಮಕ್ಕಳಿಗೆ ಸಂಪೂರ್ಣ ಸುರಕ್ಷತೆಯನ್ನು ಕೊಟ್ಟಿದ್ದೇವೆ ಎನ್ನುವ ಭ್ರಮೆಯಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ಮಕ್ಕಳು ಏನಾದರೂ ಹೇಳಲು ಹತ್ತಿರ ಬಂದರೆ ನಿರ್ಲಕ್ಷ್ಯವನ್ನು ತೋರುತ್ತಾರೆ. ತಮ್ಮ ಓರಗೆಯವರಿಗಿಂತ ತಮ್ಮ ಮಕ್ಕಳು ಭಿನ್ನರು ಎನ್ನುವುದು ಎಷ್ಟೋ ಪಾಲಕರ ಗಮನಕ್ಕೆ ಬಾರದೇ ಹೋಗುತ್ತದೆ. ಹದಿ ಹರೆಯದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳದೆ ಇರುವುದು ಕೂಡಾ ಇದಕ್ಕೆ ಕಾರಣ. ತಾವು ಹೇಳಿದಂತೆ ಮಕ್ಕಳು ಕೇಳಬೇಕು, ಅವರಿಗೆ ಪ್ರಪಂಚ ಜ್ಞಾನವಿಲ್ಲವೆಂದು ತಿಳಿದು ಮಕ್ಕಳು ಏನಾದರೂ ಸಂಶಯವನ್ನು ಕೇಳಿ ಬಳಿ ಬಂದಾಗ ತಮ್ಮ ಅನುಭವಕ್ಕೆ ಅನುಗುಣವಾಗಿ ಬೋಧಿಸಲು ಪ್ರಾರಂಭಿಸುತ್ತಾರೆ. ತಮ್ಮ ಮಗುವಿನ ಅನುಭವ ತಮಗಿಂತಲೂ ಭಿನ್ನ ಎನ್ನುವುದನ್ನು ಒಪ್ಪಿಕೊಳ್ಳಲು ಪೋಷಕರು ತಯಾರಾಗುವುದೇ ಇಲ್ಲ. ಹೀಗಾದಾಗ ಮಕ್ಕಳು ಪೋಷಕರ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡಿ ಅಂತರ್ಮುಖಿಯಾಗುತ್ತಾರೆ.</p>



<p><strong>ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ:</strong> <a href="https://peepalmedia.com/confusions-in-lgbtq-childrens-life/">LGBTQ+ ಮಕ್ಕಳ ತೊಳಲಾಟಗಳು!</a></p>



<p>ತಮ್ಮ ಲಿಂಗತ್ವಕ್ಕೆ ವಿಭಿನ್ನವಾದ ನಡವಳಿಕೆ ಮಕ್ಕಳಲ್ಲಿ ಕಂಡುಬಂದರೆ ಅವರನ್ನು ಟೀಕೆಮಾಡಿ, ನಿಂದಿಸಿ, ಗದರಿ ಹಾಗೆಲ್ಲಾ ನಡೆಕೊಳ್ಳದ ಹಾಗೆ ತಾಕೀತು ಮಾಡುತ್ತಾರೆ. ಮನೆಯ ಹೊರಗಿನಿಂದಲೂ ಮಕ್ಕಳು ಅವಹೇಳನಕ್ಕೆ ಒಳಗಾಗುತ್ತಾರೆ. ಹೀಗೆ ಅಪಹಾಸ್ಯಕ್ಕೆ ಒಳಗಾದ ಮಕ್ಕಳು ತಾವು ಏನೋ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎನ್ನುವ ಕೀಳರಿಮೆಗೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ತಮ್ಮ ಘನತೆ ಗೌರವ ಮನೆತನದ ಮರ್ಯಾದೆ ಹಾಳಾಗುತ್ತದೆ ಎಂದೆಲ್ಲಾ ಹೆದರುವ ಪಾಲಕರು ತಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ತರಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಾರೆ. ಸಮಾಜದ ಕುಹಕಕ್ಕೆ ಹೆದರಿ ತಮ್ಮ ಮಕ್ಕಳಲ್ಲಿ ಸಹಜವಾಗಿ ಉಂಟಾಗುವ ವಿಭಿನ್ನ ರೀತಿಯ ಬದಲಾವಣೆಯನ್ನು ಪ್ರಾರಂಭದಲ್ಲೇ ಚಿವುಟಿ ಹಾಕುವ ವ್ಯರ್ಥ ಪ್ರಯತ್ನಗಳು ಅವಿರತವಾಗಿ ಪೋಷಕರಿಂದ ನಡೆಯುತ್ತವೆ. ಆಗೆಲ್ಲಾ ಮಕ್ಕಳು ಮಾನಸಿಕವಾಗಿ ಜರ್ಜರಿತರಾಗುವುದನ್ನು ಅರ್ಥಮಾಡಿಕೊಳ್ಳದೇ ಕಾಲಕ್ರಮೇಣ ಸರಿಹೋಗುವರು ಎಂದು ಪೋಷಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಪೋಷಕರ ಕಾಳಜಿ ಅತ್ಯಗತ್ಯ. ತಾವು ಸದಾ ಜೊತೆಗಿದ್ದೇವೆ ಎನ್ನುವ ಭರವಸೆ ಮಕ್ಕಳ ಮನಸ್ಸಲ್ಲಿ ಸುರಕ್ಷಿತ ಭಾವನೆ ಮೂಡಿಸುತ್ತದೆ. ಸಣ್ಣ ಮಗುವಾಗಿದ್ದಾಗ ನಾವು ತೋರುವ ಕಾಳಜಿ, ಪ್ರೀತಿ, ಸಹಕಾರ, ಎಲ್ಲವೂ ಸದಾ ಕಾಲವಿರಬೇಕು ಎಂದು ಮಕ್ಕಳು ಬಯಸುತ್ತಾರೆ. ಶಿಸ್ತಿನಿಂದ ಪಾಲನೆ ಪೋಷಣೆ ಮಾಡದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಆದರೂ ಅವರಿಗೆ ಅಗತ್ಯವಿದ್ದಾಗ ಏನೇ ಆದರೂ ನಾವು ಜೊತೆಗಿದ್ದೇವೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹಾಗಾಗಬೇಕಾದರೆ ನಾವು ಸ್ನೇಹಿತರಂತೆ ಅವರ ಜೊತೆ ನಡೆದುಕೊಳ್ಳಬೇಕು.&nbsp;</p>



<p><strong>ಲೇಖನ: ರುಕ್ಮಿಣಿ ಎಸ್ ನಾಯರ್</strong></p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="ujGhMUTni3"><a href="https://peepalmedia.com/confusions-in-lgbtq-childrens-life/">LGBTQ+ ಮಕ್ಕಳ ತೊಳಲಾಟಗಳು!</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;LGBTQ+ ಮಕ್ಕಳ ತೊಳಲಾಟಗಳು!&#8221; &#8212; Peepal Media" src="https://peepalmedia.com/confusions-in-lgbtq-childrens-life/embed/#?secret=wCGb7dptOt#?secret=ujGhMUTni3" data-secret="ujGhMUTni3" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>LGBTQ+ ಮಕ್ಕಳ ತೊಳಲಾಟಗಳು!</title>
		<link>https://peepalmedia.com/confusions-in-lgbtq-childrens-life/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 05 Dec 2024 07:04:19 +0000</pubDate>
				<category><![CDATA[LGBTQ+]]></category>
		<category><![CDATA[ಅಂಕಣ]]></category>
		<category><![CDATA[adult]]></category>
		<category><![CDATA[bengaluru]]></category>
		<category><![CDATA[fundumental rights]]></category>
		<category><![CDATA[gay]]></category>
		<category><![CDATA[Human rights]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[mental health]]></category>
		<category><![CDATA[Namma Pride]]></category>
		<category><![CDATA[Pride March]]></category>
		<category><![CDATA[sex education]]></category>
		<category><![CDATA[sexual minorities]]></category>
		<category><![CDATA[transgender]]></category>
		<guid isPermaLink="false">https://peepalmedia.com/?p=50216</guid>

					<description><![CDATA[ಲೇಖನ: ರುಕ್ಮಿಣಿ ಎಸ್ ನಾಯರ್ LGBTQIA+ ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ. ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. [&#8230;]]]></description>
										<content:encoded><![CDATA[
<pre class="wp-block-code"><code><strong>LGBTQIA+</strong> ಮಕ್ಕಳು ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ <strong><a href="https://en.wikipedia.org/wiki/Lavender_marriage">ಲ್ಯಾವೆಂಡರ್‌ ಮ್ಯಾರೆಜ್‌ </a></strong>ಎಂದು ಕರೆಯುತ್ತಾರೆ.</code></pre>



<p><strong>ಲೇಖನ:</strong> ರುಕ್ಮಿಣಿ ಎಸ್ ನಾಯರ್ </p>



<p><strong>LGBTQIA+ </strong>ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ.</p>



<p><br>ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. ತಮ್ಮ ದೇಹದ ಅಂಗಾಂಗಗಳನ್ನು ಕೌತುಕದಿಂದ ಮುಟ್ಟಿ ನೋಡಿಕೊಳ್ಳುತ್ತಾರೆ. ತಾವು ಕೂಡಾ ಇತರರಂತೆಯೇ ಎನ್ನುವುದನ್ನು ಕೂಡಾ ಗಮನಿಸಲು ಪ್ರಾರಂಭಿಸುತ್ತಾರೆ.</p>



<p>ತಮ್ಮ ಲಿಂಗತ್ವದ ಬಗ್ಗೆ ಸಣ್ಣ ವಯಸ್ಸಿನಿಂದಲೇ ಭಾವನಾತ್ಮಕವಾಗಿ ಪೋಷಕರ ಗಮನಕ್ಕೆ ಬಂದೂ ಬಾರದಂತಹ, ಕಣ್ಣಿಗೆ ಕಂಡೂ ಕಾಣದಂತಹ ಹಲವಾರು ಸೂಚನೆಗಳನ್ನು ನೀಡುತ್ತಾರೆ. ಸ್ವತಃ ಆ ಮಕ್ಕಳಿಗೂ ಕೂಡಾ ತಮ್ಮ ಹಾವಭಾವದಲ್ಲಿ ಉಂಟಾಗುವ ವ್ಯತ್ಯಾಸ ತಿಳಿದಿರುವುದಿಲ್ಲ. ಸಹಜವಾಗಿ ತಮಗೆ ಅನಿಸಿದಂತೆ, ತಮ್ಮ ಇಷ್ಟಕ್ಕೆ ಅನುಗುಣವಾಗಿ ಆಟವಾಡುವ ರೀತಿಯಿಂದ, ವಸ್ತ್ರಗಳನ್ನು ತೊಡುವಾಗ ತೋರುವ ಆಸಕ್ತಿಯಿಂದ, ಅವರ ನಡೆನುಡಿ, ಹಾವಭಾವಗಳಿಂದ ತಮ್ಮಲ್ಲಿನ ನಿಜವಾದ ಆಸಕ್ತಿಯನ್ನು ಹೊರಹಾಕುತ್ತಾರೆ. ನಾವು ಪೋಷಕರು ವಯೋಸಹಜವಾಗಿ ಅವರಲ್ಲಿ ಉಂಟಾಗುವ ಬದಲಾವಣೆಗಳನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಆದರೆ ನಮ್ಮ ಮಕ್ಕಳು ಇತರರಂತೆ ಅಲ್ಲ ಎನ್ನುವುದು ಕಾಲಕ್ರಮೇಣ ನಮ್ಮ ಅರಿವಿಗೆ ಬಂದಂತೆ ನಾವು ಅಧೀರಾಗುತ್ತೇವೆ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ವರ್ತಿಸುವುದು ನಿಧಾನವಾಗಿ ಪೋಷಕರ ಗಮನಕ್ಕೆ ಬರುತ್ತದೆ. ಆಗ ಆ ಮಕ್ಕಳನ್ನು ಗದರಿ, ಮೂದಲಿಸಿ ʼನೀನು ಹೀಗೆ ಆಡಬೇಡ, ಮಾತನಾಡಬೇಡ, ವರ್ತಿಸಬೇಡ,ʼ ಎಂದೆಲ್ಲಾ ಹೇಳಿ ಮಕ್ಕಳ ಗುಣದಲ್ಲಿ, ನಡತೆಯಲ್ಲಿ ವ್ಯತ್ಯಾಸವನ್ನು ತರಲು ಪೋಷಕರು ಪ್ರಯತ್ನಿಸುತ್ತಾರೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತೇವೆ.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="536" src="https://peepalmedia.com/wp-content/uploads/2024/12/LGBTQ-1697545194-1024x536.jpg" alt="" class="wp-image-50218" srcset="https://peepalmedia.com/wp-content/uploads/2024/12/LGBTQ-1697545194-1024x536.jpg 1024w, https://peepalmedia.com/wp-content/uploads/2024/12/LGBTQ-1697545194-300x157.jpg 300w, https://peepalmedia.com/wp-content/uploads/2024/12/LGBTQ-1697545194-768x402.jpg 768w, https://peepalmedia.com/wp-content/uploads/2024/12/LGBTQ-1697545194-150x79.jpg 150w, https://peepalmedia.com/wp-content/uploads/2024/12/LGBTQ-1697545194-696x364.jpg 696w, https://peepalmedia.com/wp-content/uploads/2024/12/LGBTQ-1697545194-1068x559.jpg 1068w, https://peepalmedia.com/wp-content/uploads/2024/12/LGBTQ-1697545194.jpg 1200w" sizes="auto, (max-width: 1024px) 100vw, 1024px" /></figure></div>


<p>ಆದರೆ ಆ ಮಕ್ಕಳು ತಾವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಗೊಂದಲಕ್ಕೆ ಒಳಗಾಗಿ ಮಂಕಾಗುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರೂ ತಮ್ಮಲ್ಲಿ ಅಡಗಿರುವ ಸಹಜ ಭಾವನೆಯನ್ನು, ಗುಣವನ್ನು ಆ ಮಕ್ಕಳು ತೋರಿಸುತ್ತಾರೆ. ಮತ್ತೂ ಪೋಷಕರು ಗದರಿ ನಿಂದಿಸಿದಾಗ ಪೋಷಕರ ಮುಂದೆ ನಟಿಸಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ತಮ್ಮ ಸಹಜ ನಡವಳಿಕೆಯನ್ನು ಬಚ್ಚಿಡಲು ಕಲಿಯುತ್ತಾರೆ. ಹಾಗೂ ಮಾನಸಿಕವಾಗಿ ಒಳಗೊಳಗೇ ಕೊರಗಲು ಪ್ರಾರಂಭಿಸುತ್ತಾರೆ. ತಾನು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಗೊಂದಲದ ನಡುವೆ ಸಿಲುಕಿ ತೊಳಲಾಡುತ್ತಾರೆ. ಆದರೂ ತನ್ನಲ್ಲಿ ಅಡಗಿರುವ ಸಹಜ ಗುಣಗಳನ್ನು ಭಾವಗಳನ್ನು ಭಾವನೆಗಳನ್ನು ಬಚ್ಚಿಡಲು ವಿಫಲ ಪ್ರಯತ್ನ ಮಾಡಿ ಸೋಲುತ್ತಾರೆ. ತಾವು ಒಂಟಿಯಾಗಿರುವಾಗ, ಪೋಷಕರು ಜೊತೆ ಇಲ್ಲದ ಸಮಯದಲ್ಲಿ ಯಾರಿಗೂ ತಿಳಿಯದಂತೆ ತನ್ನಿಷ್ಟದಂತೆ ಇದ್ದು ಖುಷಿ ಪಡುತ್ತಾರೆ. ಕೃತಕವಾಗಿ ನಡವಳಿಕೆಯನ್ನು, ಗುಣವನ್ನು ಪೋಷಕರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ತನ್ನ ಸಹಜ ನಡವಳಿಕೆಯನ್ನು, ಗುಣವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.</p>



<p>ಇದರಿಂದ ಮಕ್ಕಳು ಮಾನಸಿಕವಾಗಿ ಬಲಹೀನವಾಗುತ್ತಾ ಹೋಗುತ್ತಾರೆ. ಆಟ ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾ ಮೌನಕ್ಕೆ ಶರಣಾಗುತ್ತಾರೆ. ಪೋಷಕರು ಇತರೇ ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸುತ್ತಾ ಹೋದಂತೆ ಈ ಮಕ್ಕಳು ಇತರ ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಾರೆ. ಬೆಳೆದಂತೆ ಅವರಲ್ಲಿ ಮೌನವೂ ಹೆಚ್ಚಾಗುತ್ತಾ ಹೋಗುತ್ತದೆ. ಆದಷ್ಟೂ ತಮ್ಮಷ್ಟಕ್ಕೆ ತಾನು ಇರಲು ಬಯಸುತ್ತಾರೆ. ಕಾಲಕ್ರಮೇಣ ಹದಿ ಹರೆಯವನ್ನು ತಲುಪಿದಾಗ ಆ ಮಕ್ಕಳ ಸಂಕಷ್ಟ ಇನ್ನೂ ಹೆಚ್ಚಾಗುತ್ತದೆ. ಹದಿ ಹರೆಯದಲ್ಲಿ ತಮ್ಮ ದೇಹದಲ್ಲಿ ಆಗುವ ಮಾರ್ಪಾಡಿನಿಂದಾಗಿ ಗಲಿಬಿಲಿಗೆ ಒಳಗಾಗುತ್ತಾರೆ. ತಮ್ಮ ಓರಗೆಯ ಮಕ್ಕಳ ಜೊತೆ ಬೆರೆತರೂ ತಾವು ಅವರಂತೆ ಇಲ್ಲ ತಾವು ಇವರೆಲ್ಲರಿಗಿಂತ ಭಿನ್ನ ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಕೆಲವು ಮಕ್ಕಳು ಪೋಷಕರನ್ನು ಕೇಳಿ ತಿಳಿದುಕೊಳ್ಳಲು ಧೈರ್ಯ ಮಾಡುತ್ತಾರೆ. ಆಗ ಪೋಷಕರು ಕೂಡಾ ಅದನ್ನು ಅಷ್ಟು ಮುಖ್ಯ ವಿಷಯವಾಗಿ ತೆಗೆದುಕೊಳ್ಳದೇ, ಆ ಮಕ್ಕಳಿಗೆ ಸಮರ್ಪಕವಾದ ಉತ್ತರ ದೊರೆಯದೇ ತೊಳಲಾಡುತ್ತಾರೆ.</p>



<p>ತಮ್ಮ ಓರಗೆಯವರೊಂದಿಗೆ ಮುಜುಗರದಿಂದ ತಮ್ಮ ಮನಸ್ಸಿನ ಸಂದೇಹವನ್ನು ಹಂಚಿಕೊಂಡಾಗ ನಗೆಪಾಟಲಿಗೆ ಗುರಿಯಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಕೇಳಿ ತಿಳಿದುಕೊಳ್ಳಲು ಅಂಜಿಕೆಯಾದ ಕಾರಣ ಅವರೊಂದಿಗೂ ಕೇಳಿ ತಿಳಿದುಕೊಳ್ಳಲು ಈ ಮಕ್ಕಳು ಹಿಂಜರಿಯುತ್ತಾರೆ. ತಾವು ನಿಜಕ್ಕೂ ಏನು? ಹೆಣ್ಣೇ, ಗಂಡೇ ಅಥವಾ ಎರಡೂ ಅಲ್ಲವೇ ಎನ್ನುವ ಸಂಶಯ LGBTQIA+ ಮಕ್ಕಳಲ್ಲಿ ತಲೆದೋರುತ್ತದೆ. ತಮ್ಮ ದೈಹಿಕ ಬದಲಾವಣೆಗೂ ಮಾನಸಿಕ ಬದಲಾವಣೆಗೂ, ತಮ್ಮಲ್ಲಿ ಉದ್ಭವಿಸುವ ಭಾವನೆಗಳ ಬದಲಾವಣೆಗೂ ತಾಳೆಯಾಗದೇ ಇರುವುದನ್ನು ಅರಿತ ಮಕ್ಕಳು ತಮಗೇನೋ ಆಗಿದೆ ಎಂದು ಹೆದರುತ್ತಾರೆ. ತಮ್ಮ ಲೈಂಗಿಕತೆಯ ಬಗೆಗಿನ ಗೊಂದಲ ಹೆಚ್ಚಾಗಿ ಅವರಿಗೇ ಅರಿವಿಲ್ಲದಂತೆ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಾಜದಲ್ಲಿ ತಾವು ಹೇಗೆ ಬದುಕಿದರೆ ಸರಿ ಮತ್ತು ತಾವು ಹೇಗೆ ಬದುಕಿದರೆ ತೊಂದರೆಗೆ ಒಳಗಾಗುತ್ತೇವೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿ, ಆತಂಕಕ್ಕೆ ಒಳಗಾಗುತ್ತಾರೆ. ಅವರು ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳಲಾರದೇ ತಮ್ಮಲ್ಲಿಯೇ  ಹತ್ತಿಕ್ಕಿಕೊಳ್ಳುತ್ತಾರೆ.</p>


<div class="wp-block-image">
<figure class="aligncenter size-full"><img loading="lazy" decoding="async" width="759" height="500" src="https://peepalmedia.com/wp-content/uploads/2024/12/DSCN0116-759x500-1.jpg" alt="" class="wp-image-50220" srcset="https://peepalmedia.com/wp-content/uploads/2024/12/DSCN0116-759x500-1.jpg 759w, https://peepalmedia.com/wp-content/uploads/2024/12/DSCN0116-759x500-1-300x198.jpg 300w, https://peepalmedia.com/wp-content/uploads/2024/12/DSCN0116-759x500-1-150x99.jpg 150w, https://peepalmedia.com/wp-content/uploads/2024/12/DSCN0116-759x500-1-696x458.jpg 696w" sizes="auto, (max-width: 759px) 100vw, 759px" /></figure></div>


<p>ಪೋಷಕರಿಗೆ ತಮ್ಮಲ್ಲಿ ಉಂಟಾಗುವ ವಿಭಿನ್ನ ಭಾವನೆಗಳ ಬಗ್ಗೆ ಹೇಳಿಕೊಂಡರೆ ಎಲ್ಲಿ ನಿಂದನೆಗೆ ಒಳಗಾಗುತ್ತೇವೆಯೋ ಎಂದು ಹೆದರಿ ತಮ್ಮಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಹೇಳದೆ ಮನಸ್ಸಿನಲ್ಲಿಟ್ಟು ಕೊರಗುತ್ತಾರೆ. ಕೆಲವು ಮಕ್ಕಳು ಸಹಜವಾಗಿ ತಮ್ಮ ವಿರುದ್ಧ ಲಿಂಗಿಗಳ ಕಡೆಗೆ ಆಕರ್ಷಿತರಾಗದೆ, ತಮ್ಮದೇ ಲಿಂಗದವರ ಕಡೆಗೆ ಆಕರ್ಷಿತರಾಗುತ್ತಾರೆ ( ಗೇ ಮತ್ತು ಲೆಸ್ಬಿಯನ್‌) . ಕೆಲವು ಮಕ್ಕಳು ಗಂಡು ಮತ್ತು ಹೆಣ್ಣು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುತ್ತಾರೆ (ಬೈ-ಸೆಕ್ಷಿವಲ್). ಇನ್ನು ಕೆಲವರು ತಾವು ಹೆಣ್ಣೋ ಅಥವಾ ಗಂಡೋ ಎಂದು ಅರ್ಥ ಆಗದೇ ಸಂದೇಹಕ್ಕೆ ಒಳಗಾಗುತ್ತಾರೆ‌ (ಟ್ರಾನ್ಸ್‌ಜೆಂಡರ್). ಅಪರೂಪಕ್ಕೆ ಕೆಲವು ಮಕ್ಕಳಲ್ಲಿ ಲೈಂಗಿಕ ಭಾವನೆಗಳು ಉಂಟಾಗುವುದೇ ಇಲ್ಲ‌ (ಅಸೆಕ್ಷುವಲ್). ಹೊರಗಿನ ಸಮಾಜದಲ್ಲಿ ಕಂಡು ಬರುವ ಸಹಜವಾದ ಲೈಂಗಿಕ ಜೀವನ ಹಾಗೂ ತಮ್ಮಲ್ಲಿ ಉದ್ಭವವಾಗಿರುವ ಭಾವನೆಗಳು ಅಸಹಜವಾಗಿ ಕಂಡಾಗ ಅಧೀರರಾಗುತ್ತಾರೆ. ಇದಕ್ಕೆಲ್ಲಾ ಕಾರಣ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದೇ ಆಗಿದೆ. ‌</p>



<p>ಲೈಂಗಿಕತೆಯ ಬಗ್ಗೆ ತೆರೆದು ಮಾತನಾಡುವುದನ್ನು ಕೆಟ್ಟದಾಗಿ ಹಾಗೂ ತಪ್ಪಾಗಿ ಅಶ್ಲೀಲವಾಗಿ ತಿಳಿಯುವುದೇ ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಉದ್ಭವವಾಗುವ ಲೈಂಗಿಕತೆಯ ಬಗೆಗಿನ ಸಂದೇಹಗಳನ್ನು ಅಳುಕಿಲ್ಲದೆ ಪರಿಹರಿಸುವ ಮಾರ್ಗವು ದೊರೆಯದೇ ಹೋದಾಗ ಮಕ್ಕಳು ಸಾಮಾಜಿಕ ಜಾಲತಾಣಗಳ ಕಡೆಗೆ ತೆರಳುತ್ತಾರೆ ಅಥವಾ ತಮ್ಮ ಇತರ ಕೆಲವು ಸ್ನೇಹಿತರಲ್ಲಿ ಸಂದೇಹಗಳ ಪರಿಹಾರಕ್ಕೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅವರಿಗೆ ಅಲ್ಲಿ ಸರಿಯಾದ ಮಾಹಿತಿ ದೊರೆಯುವ ಬದಲು ಅವರನ್ನು ಇನ್ನೂ ಗೊಂದಲಕ್ಕೆ ಒಳಪಡಿಸುವ ಮಾಹಿತಿ ಸಿಗುತ್ತದೆ. ಇದರಿಂದ ಮಕ್ಕಳು ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆಯೂ ಇರುತ್ತದೆ. ಅನಿವಾರ್ಯವಾಗಿ ನೋವನ್ನು ಮರೆಯಲು ಕೆಲವರು ಮಾದಕವಸ್ತು, ಧೂಮಪಾನ, ಮದ್ಯಪಾನ ಇಂಥಹಾ ಅನೇಕ ದುಚ್ಚಟಗಳ ವ್ಯಸನಗಳಿಗೆ ದಾಸರಾಗುತ್ತಾರೆ.</p>



<p>ತಮ್ಮಲ್ಲಿ ಉದ್ಭವಿಸುತ್ತಿರುವ ಭಾವನೆಗಳು ತಪ್ಪು ಹಾಗೂ ತಮಗೇನೋ ಮಾನಸಿಕ ಅಥವಾ ದೈಹಿಕ ಖಾಯಿಲೆ ಬಂದಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಮ್ಮನ್ನು ಸಮಾಜದಿಂದ, ಹೊರಲೋಕದಿಂದ, ಅಪ್ಪ ಅಮ್ಮನಿಂದ, ಹಾಗೂ ಇತರೇ ಸ್ನೇಹಿತರಿಂದ ಪ್ರತ್ಯೇಕಿಸಿಕೊಂಡು ಒಂಟಿಯಾಗಿ ಇದ್ದು ಬಿಡುತ್ತಾರೆ. ತಾವೇನೋ ತಪ್ಪು ಮಾಡುತ್ತಿದ್ದೇವೆ, ತಮ್ಮ ಲೈಂಗಿಕತೆಯ ಬಗ್ಗೆ ಹೊರಲೋಕ ಅರಿತರೆ ಎಲ್ಲಿ ತಮ್ಮನ್ನು ದೂರ ಮಾಡುವರೋ ಎಂಬ ಭಯಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಕಾರಣ ಪೋಷಕರು ಹಾಗೂ ಹೊರ ಪ್ರಪಂಚ ಈ ಮಕ್ಕಳನ್ನು ಅಸಹಜ ಗುಣದವರೆಂದು ಹೀಯಾಳಿಸುವುದರಿಂದ, ನಿಂದಿಸುವುದರಿಂದ, ಇವರೊಂದಿಗೆ ಬೆರೆಯದೇ ಇರುವುದರಿಂದ ಹಾಗೂ ಅವರನ್ನು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರುವುದರಿಂದ. ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ನಡೆದುಕೊಳ್ಳದೇ ಮಕ್ಕಳು ತಮ್ಮ ಅಧಿಕಾರ ಎಂದು ತಿಳಿದು ತಮ್ಮ ಇಷ್ಟಾನಿಷ್ಟಗಳನ್ನು ಮಕ್ಕಳ ಮೇಲೆ ಹೇರುವುದರಿಂದ, ಹೆದರುವ ಮಕ್ಕಳು ಎಲ್ಲಿ ತಮ್ಮನ್ನು ಮನೆಯಿಂದ ಆಚೆ ತಳ್ಳುವರೋ ಎಂಬ ಭಯದಿಂದ ತಮ್ಮ ಲಿಂಗತ್ವ ಹಾಗೂ ಲೈಂಗಿಕತೆಯನ್ನು ಬಹಿರಂಗ ಪಡಿಸಲು ಅಥವಾ ತಮ್ಮ ಮಾನಸಿಕ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆಗದೇ ತಮ್ಮಲ್ಲೇ ತಾವು ಕೊರಗುತ್ತಾ ಖಿನ್ನತೆಗೆ ಒಳಗಾಗಿ ಅದು ಕೆಲವೊಮ್ಮೆ ತೀವ್ರವಾದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.</p>



<p><strong>ಲೇಖಕರ ಹಿಂದಿನ ಲೇಖನ:</strong> <a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></p>



<p>ಮನೆಗೆ ನೆಂಟರು, ಅತಿಥಿಗಳು ಬರುವಾಗಲೂ ತಾವು ಏನೆಂದು ಅರಿಯಬಾರದು ಎನ್ನುವುದನ್ನು ಮನಗಂಡ ಮಕ್ಕಳು ಅವರು ಉಪಯೋಗಿಸುವಂತಹ ವಸ್ತುಗಳನ್ನು ಬಚ್ಚಿಡುತ್ತಾರೆ. ಪೋಷಕರಿಗಾಗಿ ಮತ್ತು ಸಮಾಜಕ್ಕಾಗಿ ಈ ಮಕ್ಕಳು ತಮ್ಮ ಇಚ್ಚೆ, ಆಸೆ, ಕಾಮನೆ, ಆಕಾಂಕ್ಷೆಗಳನ್ನು ತ್ಯಜಿಸಿ ಬಾಳುವೆ ನಡೆಸುವಂತಹ ಸಂದರ್ಭಗಳೇ ಹೆಚ್ಚು. ತಾವು ಯಾರು ಎಂದು ಸಮಾಜಕ್ಕೆ ಗೊತ್ತಾಗದೇ ಇರುವಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ಮಕ್ಕಳು ಹರಸಾಹಸ ಪಡಬೇಕಾಗುತ್ತದೆ. ಹೊರಜಗತ್ತಿಗೆ ಗೊತ್ತಾದರೆ ಕಲಿಯುವ ಶಾಲೆಯಲ್ಲಿ ಇತರೇ ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಸಮಾಜದ ಜನ ಇವರನ್ನು ಕಂಡು ನಗುತ್ತಾರೆ. ಈ ಮಕ್ಕಳು ಮಾಡಿದಂತಹ ತಪ್ಪಾದರೂ ಏನು? ಎಲ್ಲಾ ಜೀವಿಗಳಂತೆ ಈ ಪ್ರಪಂಚದಲ್ಲಿ ಜನ್ಮ ತಾಳಿದ್ದು ಇವರ ತಪ್ಪೇ? ತಮಗೆ ಜನ್ಮ ಕೊಡು ಎಂದು ಈ ಮಕ್ಕಳು ಮಾತಾಪಿತರನ್ನು ಕೇಳಿದರೇ? ತಾವು ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟಬೇಕು ಎಂದು ಇವರು ಬಯಸಿದ್ದರೆ?</p>



<p><br>ಯಾವ ತಪ್ಪಿಗೆ ಸಮಾಜದಲ್ಲಿ ಕುಟುಂಬದಲ್ಲಿ ಬದುಕಲು ಈ ಮಕ್ಕಳು ಅನರ್ಹರಾಗುತ್ತಾರೆ? ಈ ಲೋಕದಲ್ಲಿ ಬದುಕಲು ಇವರಿಗೂ ಹಕ್ಕಿಲ್ಲವೇ? ತಮ್ಮದಲ್ಲದ ತಪ್ಪಿಗೆ ಈ ಮಕ್ಕಳನ್ನು ಏಕೆ ಅಸಹ್ಯ ಭಾವನೆಯಿಂದ ಕಾಣುವುದು? ಈ ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಸಹಜವಾಗಿ ಇರುವಂತೆ ನಟಿಸಬೇಕಾಗುತ್ತದೆ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಭಿನ್ನ ಲೈಂಗಿಕ ಅಭಿವ್ಯಕ್ತಿ ತಿಳಿದಿರುವುದಿಲ್ಲ. ಲಿಂಗತ್ವ ಹಾಗೂ ಲೈಂಗಿಕ ಮನೋಭಾವಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಎನ್ನುವ ಬಗ್ಗೆ ಅರಿವು ಮೂಡಿಸಿ ಈ ಮಕ್ಕಳು ನೆಮ್ಮದಿಯ ಬದುಕನ್ನು ಬಾಳಲು ಅನುವು ಮಾಡಿಕೊಡಬೇಕು.</p>



<p>ಯುವಾವಸ್ಥೆಗೆ ಬಂದಾಗ ಈ ಮಕ್ಕಳು ಅನುಭವಿಸುವ ಸಂಕಷ್ಟ ಇಮ್ಮಡಿಯಾಗುತ್ತದೆ. ಪ್ರಾಥಮಿಕ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿ ಪಡೆದುಕೊಂಡಿರುತ್ತಾರೆ. ಉದ್ಯೋಗ ಗಳಿಸಿ ತಾವು ಸ್ವತಂತ್ರವಾಗಿ ಬದುಕಲು ಕೂಡಾ ಇವರು ತಮ್ಮ ಲೈಂಗಿಕತೆಯನ್ನು ಮರೆಮಾಚಿಕೊಳ್ಳಬೇಕಾಗುತ್ತದೆ. <strong>ಇನ್ನು ವೈವಾಹಿಕ ಜೀವನವಂತೂ ದುಸ್ತರವೇ ಸರಿ. ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ.</strong> <strong>ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. </strong>ಇದಕ್ಕೆ <strong><a href="https://en.wikipedia.org/wiki/Lavender_marriage">ಲ್ಯಾವೆಂಡರ್‌ ಮ್ಯಾರೆಜ್‌</a></strong> ಎಂದು ಕರೆಯುತ್ತಾರೆ. <strong> </strong>ಹೊರನೋಟಕ್ಕೆ ಏನೇ ಬದಲಾವಣೆ ಮಾಡಿಕೊಂಡರೂ ಮನೋಸಹಜ ಭಾವನೆಗಳನ್ನು ಮೆಟ್ಟಿನಿಂತು ಬದುಕುವುದು ದುಸ್ತರವಾಗುತ್ತದೆ. ಆಗ ವೈವಾಹಿಕ ಜೀವನದಲ್ಲಿ ಕೂಡಾ ಬಿರುಕು ಮೂಡುತ್ತದೆ. ಒಬ್ಬರ ಲೈಂಗಿಕತೆಯನ್ನು ಮರೆಮಾಚಲು ಹೋಗಿ ಇಬ್ಬರ ಜೀವನವೂ ಹಾಳಾಗುತ್ತದೆ.</p>



<p><br>ಈ ಮಕ್ಕಳು ಅನುಭವಿಸುವ ನೋವು ಸಂಕಟಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಒಂದು ಉತ್ತಮ ಪರಿಹಾರ. ಎಲ್ಲರಂತೆ ಈ ಮಕ್ಕಳು ಕೂಡಾ ಉತ್ತಮ ರೀತಿಯಲ್ಲಿ ಬದುಕುವ ಅವಕಾಶ, ಹಕ್ಕು ಇವರಿಗೂ ಇದೆ ಎನ್ನುವುದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರಕೃತಿಯಲ್ಲಿ ಇವೆಲ್ಲವೂ ಸಹಜವೇ ಎನ್ನುವ ಅರಿವು ಜಾಗೃತವಾಗಬೇಕು. ಆಗಲೇ ಈ ಮಕ್ಕಳು ತಮ್ಮತನವನ್ನು ತ್ಯಾಗ ಮಾಡದೇ, ಮುಜುಗರ, ಅವಮಾನ, ಅವಹೇಳನ, ತಿರಸ್ಕಾರಗಳನ್ನು ಸಹಿಸಿಕೊಂಡು ಒಳಗೊಳಗೇ ನೊಂದು ಬದುಕುವುದನ್ನು ತಡೆಗಟ್ಟಿ, ಅವರು ಕೂಡಾ ಎಲ್ಲರಂತೆ ನಗು ನಗುತ್ತಾ ಬಾಳುವೆ ನಡೆಸಲು ಸಾಧ್ಯವಾಗುತ್ತದೆ.</p>



<p><strong>ರುಕ್ಮಿಣಿ ಎಸ್ ನಾಯರ್</strong> <br>ಬೆಂಗಳೂರು.</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="CKPLO96AV0"><a href="https://peepalmedia.com/namma-pride-bengaluru-rukmini-s-nair/">ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ&#8221; &#8212; Peepal Media" src="https://peepalmedia.com/namma-pride-bengaluru-rukmini-s-nair/embed/#?secret=MYV7UvpRpP#?secret=CKPLO96AV0" data-secret="CKPLO96AV0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>ನಿಮ್ಮ Gayಳೆಯನ ಕಥೆ!-1 ಗ್ರಿಂಡರ್‌ ದೋಖಾ…!</title>
		<link>https://peepalmedia.com/grindr-dokha-nimma-gay-leyana-kathe/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 14 Nov 2024 06:47:33 +0000</pubDate>
				<category><![CDATA[LGBTQ+]]></category>
		<category><![CDATA[care]]></category>
		<category><![CDATA[dating stories]]></category>
		<category><![CDATA[gay]]></category>
		<category><![CDATA[Grindr]]></category>
		<category><![CDATA[love]]></category>
		<category><![CDATA[mental health]]></category>
		<category><![CDATA[sexual minorities]]></category>
		<guid isPermaLink="false">https://peepalmedia.com/?p=48963</guid>

					<description><![CDATA[ಲೇಖನ: ಸೂರಜ್‌ ಹೊನಗಂಗಪ್ಪ 2020 ರ ಮಾರ್ಚ್‌ ತಿಂಗಳು, ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ. ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ [&#8230;]]]></description>
										<content:encoded><![CDATA[
<pre class="wp-block-code"><code>LGBTQ+ ಸಮುದಾಯಗಳ ಕತೆಗಳನ್ನು ಪೀಪಲ್‌ ನಿಮ್ಮ ಮುಂದೆ ಇಡುತ್ತಿದೆ. ಡೇಟಿಂಗ್‌, ನಿರುದ್ಯೋಗ, ಮನೆಯಿಂದ ತಿರಸ್ಕಾರ, ಪ್ರೇಮ-ಕಾಮ, ಮಾನಸಿಕ ಸಮಸ್ಯೆಗಳು.. ಹೇಗೆ ಸಾಲು ಸಾಲು ಸಮಸ್ಯೆಗಳಿಂದ ನಲುಗಿ ಹೋಗುತ್ತಿರುವ ಗೇ ಸಮುದಾಯ ಅತ್ಯಂತ ಹೆಚ್ಚು ಸೃಜನಶೀಲ ಜನರನ್ನು ಹೊಂದಿದೆ. ಹೆಟರೋಸೆಕ್ಸುವಲ್‌ ಸಮುದಾಯಗಳು ಕಂಡಿರದ ಕಥೆಗಳನ್ನು 'ನಿಮ್ಮ Gayಳೆಯನ ಕಥೆ!' ಎಂಬ ಅಂಕಣದ ಮೂಲಕ ನಿಮ್ಮ ಮುಂದಿಡುತ್ತೇವೆ.</code></pre>



<p><strong>ಲೇಖನ: ಸೂರಜ್‌ ಹೊನಗಂಗಪ್ಪ</strong></p>



<p>2020 ರ ಮಾರ್ಚ್‌ ತಿಂಗಳು,</p>



<p>ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ.</p>



<p>ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ ಸ್ನೇಹಿತರನ್ನು ಮಾಡಿಕೊಳ್ಳಬಹುದು, ಸುತ್ತಾಡಬಹುದು, ಸಿನೇಮಾ ನೋಡಬಹುದು, ಓದಬಹುದು ಎಂಬೆಲ್ಲಾ ಯೋಚನೆಗಳು.</p>



<p>ಅದೊಂದು ಭ್ರಮೆಯಷ್ಟೇ!</p>



<p>ಬೆಳೆದ ಊರಿನಲ್ಲಿ &#8216;ಗೇ&#8217; ಎಂದು ತಮ್ಮನ್ನು ಗುರುತಿಸಿಕೊಂಡವರನ್ನು ಹುಡುಕಿ ಸ್ನೇಹಿತರ ಬಳಗ ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ನನ್ನಂತ ಸಾವಿರಾರು ಮಂದಿ ಬೆಂಗಳೂರಿನಲ್ಲಿದ್ದಾರೆ, ಅವರ ಪರಿಚಯವಾಗುವುದು ತುಂಬಾ ಸುಲಭ ಎಂದೆನ್ನಿಸಿತ್ತು.</p>



<p>ಆಗ ಗ್ರಿಂಡರ್‌ ಎಂಬ ಡೇಟಿಂಗ್‌ ಆಪ್‌ ತುಂಬಾ ಬಳಕೆಯಲ್ಲಿತ್ತು. ಸ್ನೇಹಿತರಾಗಲೋ, ಸೆಕ್ಸ್‌ ಮಾಡಲೋ, ಕೊನೆಗೆ ದುಡಿಮೆ ಇಲ್ಲದೆ ನಾಲ್ಕು ಕಾಸು ಮಾಡಲು ಗೇಗಳ ದಂಡೇ ಅಲ್ಲಿರುತ್ತಿತ್ತು.</p>



<p>ಮೊದಲ ಲಾಕ್‌ ಡೌನ್‌ ನಂತರ ಇಡೀ ಬೆಂಗಳೂರು ಖಾಲಿ ಖಾಲಿಯಾಗಿತ್ತು. ರಸ್ತೆಗಳಲ್ಲಿ ನಡೆದು ಹೋಗುವವರನ್ನೂ ಬಿಡದೆ, ಸುಮ್ಮನೆ ಸುತ್ತಾಡುವವರ ಕುಂಡೆಗೆ ಪೊಲೀಸರು ನಿರ್ದಯವಾಗಿ ಭಾರಿಸುತ್ತಿದ್ದರು. ನಾನು ವಾಸವಿದ್ದ ಅಪಾರ್ಟ್‌ಮೆಂಟಿನ ಕೆಳಗೆ ಬೈಕುಗಳಲ್ಲಿ ಬರುವವರನ್ನು ಪೊಲೀಸರು ಬೆಂಡೆತ್ತುತ್ತಿದ್ದರು.</p>



<p>ಒಂದು ಕಡೆ ಸೋಂಕು ಬರಬಹುದು ಎಂಬ ಭಯವಾದರೆ, ಇನ್ನೊಂದು ಕಡೆ ಸ್ಟ್ರಿಕ್ಟ್‌ ನಿಯಮಕ್ಕೆ ಹೆದರಿ ಮನೆಯಿಂದ ಹೊರಬರುತ್ತಿರಲಿಲ್ಲ.</p>



<p>ಹೀಗೆ ಹತ್ತಿರತ್ತಿರ ಒಂದು ತಿಂಗಳೇ ಕಳೆಯಿತು. ಒಂಟಿಯಾಗಿ ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದೆ. ಮಾತನಾಡಲು ಯಾರೂ ಇಲ್ಲ. ಇಡೀ ಅಪಾರ್ಟ್‌ಮೆಂಟಿನಲ್ಲಿ ಇದ್ದಿದ್ದು ನನ್ನನ್ನು ಬಿಟ್ಟರೆ, ಕೆಳಗಿರುವ ನಂದಿನಿ ಹಾಲಿನಂಗಡಿಯವನು.</p>



<p>ಒಂಟಿತನ ನೆಮ್ಮದಿಯನ್ನು ಕಿತ್ತು ತಿನ್ನುತ್ತಿತ್ತು. ಫೋನಿನಲ್ಲಿ ಮಾತನಾಡಲೂ ಯಾರೂ ಇಲ್ಲ. ಕೊರೋನ ಬಹುತೇಕರ ಮಾನಸಿಕ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತ್ತು. ಗ್ರಿಂಡರ್‌ ಓಪನ್‌ ಮಾಡಿದರೆ ನೂರಾರು ಜನ. ಕೆಲವರು ಬೆತ್ತಲೆ ಫೋಟೋ ಕಳಿಸುವವರು, ತುಂಬಾ ಜನಕ್ಕೆ ಮುಖವೇ ಇರಲಿಲ್ಲ. ಯಾವುದೋ ಪಾರ್ನ್‌ ಸ್ಟಾರ್‌, ಸಿನೇಮಾ ನಟರ ಫೋಟೋಗಳನ್ನು ಡಿಪಿ ಹಾಕಿಕೊಂಡಿದ್ದಾರೆ.</p>



<p>ಲಾಕ್‌ಡೌನ್‌ ಕೊಂಚ ಸಡಿಲ ಮಾಡಿದ್ದರು.</p>



<p>ನಾನು ಗ್ರಿಂಡರ್‌ನಲ್ಲಿ ಒಬ್ಬನೊಂದಿಗೆ ಚಾಟ್‌ ಮಾಡುತ್ತಿದ್ದೆ. ಆತ ತನ್ನ ಫೋಟೋವನ್ನು ಕಳುಹಿಸಿದ್ದ, ನಾನೂ ನನ್ನ ಮುಖವನ್ನು ತೋರಿಸಿದ್ದೆ. ಆತನ ಮನೆ ಅಲ್ಲೇ ಹತ್ತಿರದಲ್ಲೇ ಎಲ್ಲೋ.</p>



<p>ಅದೂ ಇದೂ ಅಂತ ಸೆಕ್ಸ್‌ಗೆ ಹೊರತಾದ ಚಾಟ್‌. ಒಂದು ದಿನ ಸಂಜೆ ಕಾಫಿ ಕುಡಿಯಲು ಮನೆಗೆ ಕರೆದೆ. ಯಾರೋ ಒಬ್ಬರ ಜೊತೆಗೆ ಮಾತನಾಡುವುದೆಂದರೆ ಆ ಸ್ಥಿತಿಯಲ್ಲಿ ಅದೇನೋ ಸಂಭ್ರಮ.</p>



<p>“ಸಂಜೆ ಬಾ, ಕಾಫಿ ಕುಡಿಯುತ್ತಾ ಮಾತನಾಡುವ!” ಅಂತ ಮನೆಗೆ ಕರೆದೆ.</p>



<p>ನಾನು ಕಳುಹಿಸಿದ ಲೊಕೇಷನ್‌ ಬಳಸಿ ಅಪಾರ್ಟ್‌ಮೆಂಟಿನ ಕೆಳಗೆ ಬಂದವನನ್ನು ಮೇಲಕ್ಕೆ ಕರೆದೆ. ಕಾಫಿ ಕುಡಿಯುತ್ತಾ ಕಾಲೇಜು, ಕೊರೋನ, ಮನೆ ಹೀಗೆಲ್ಲಾ ಎನೇನೋ ಹದಿನೈದು ನಿಮಿಷ ಮಾತನಾಡಿದೆವು. ನಾನು ಕಾಫಿ ಕಪ್ ತೊಳೆಯಲು ಅಡುಗೆ ಕೋಣೆಗೆ ಹೋಗಿ, ಮತ್ತೆ ಆತನ ಪಕ್ಕ ಬಂದು ಕುಳಿತುಕೊಂಡೆ.</p>



<p>ಆತ ನಿಧಾನವಾಗಿ ನನ್ನ ಭುಜಗಳಿಗೆ ಕೈ ಹಾಕಿ ಸವರ ತೊಡಗಿದೆ. ನನ್ನ ಅಂಗಿಗಳನ್ನು ಕಳಚಿ ನನ್ನ ತೊಡೆಯ ಮೇಲೆ ಕುಳಿತುಕೊಂಡ.</p>



<p>ಇದ್ದಕ್ಕಿದ್ದಂತೆ ಮನೆಯ ಬಾಗಿಲನ್ನು ತೆರೆದು ಇಬ್ಬರು ಹುಡುಗರು ಒಳಬಂದರು. ನನ್ನ ಅಂಗಿಯನ್ನು ಕಸಿದುಕೊಂಡು ವೀಡಿಯೋ ಮಾಡತೊಡಗಿದರು. ಒಬ್ಬ ನನ್ನ ಕೆನ್ನೆಗೆ ಪಟಾರನೆ ಭಾರಿಸಿದ.</p>



<p>ಭಯದಿಂದ ಹೊಟ್ಟೆ ಕಿವುಚಿದಂತಾದರೂ ಧೈರ್ಯ ತಪ್ಪುವಂತಿಲ್ಲ.</p>



<p>“ಕೆಲಸ ಆಯ್ತಲ್ಲಾ, ಕಾಸು ಕೊಡು..ಐದು ಸಾವಿರ!” ಎಂದು ಒಬ್ಬ ಕೇಳಿದ.</p>



<p>“ಅಯ್ಯೋ, ನಾನು ಕಾಸು ಕೊಡುತ್ತೇನೆ ಎಂದು ಇವನನ್ನು ಕರೆದಿಲ್ಲ,” ಎಂದು ಹೇಳಿದರೂ ಕೇಳದೆ, “ಹಣ ಕೊಡದಿದ್ದರೆ ನಾವು ನಿನ್ನ ಈ ವಿಡಿಯೋವನ್ನು ಟ್ರಾನ್ಸ್‌ಜೆಂಡರ್‌ಗಳ ಗ್ರೂಪುಗಳಲ್ಲಿ ಹಾಕುತ್ತೇವೆ!” ಎಂದು ಧಮ್ಕಿ ಹಾಕಿದ. ಇನ್ನೊಬ್ಬ ಟ್ರಾನ್ಸ್‌ಜೆಂಡರ್‌ಗಳಂತೆಯೇ ಚಟಚಟ ಎಂದು ಚಪ್ಪಾಳೆ ಹೊಡೆದ.</p>



<p>ನಾನು ಸಮಧಾನದಿಂದ, “ಕುಳಿತುಕೊಳ್ಳಿ, ,ಮಾತನಾಡುವ. ಹಣ ಕೊಡುತ್ತೇನೆ,” ಎಂದೆ.</p>



<p>ಅದರಲ್ಲೊಬ್ಬ ಮನೆಗೆ ಬಂದಿದ್ದ ಹುಡುಗ ಹುಡುಗಿಯಂತೆ ಬಟ್ಟೆ ಧರಿಸಿರುವ ಫೋಟೋವನ್ನು ತೋರಿಸಿ ಅವರೆಲ್ಲರೂ ಪಕ್ಕಾ ಟ್ರಾನ್ಸ್‌ಜೆಂಡರ್ ಸಮುದಾಯದವರು ಎಂದು ನಂಬಿಸಲು ಪ್ರಯತ್ನಿಸುತ್ತಿದ್ದ.</p>



<p>ಎಸ್, ಅವರ್ಯಾರೂ ಟ್ರಾನ್ಸ್‌ಜೆಂಡರ್‌ಗಳಲ್ಲ. ಮನೆಗೆ ಬಂದ ಹುಡುಗ ನನ್ನಂತೆ ಗೇ ಇದ್ದಿರಲೂ ಬಹುದು. ಮೂವರೂ ಗ್ರಿಂಡರ್‌ ಬಳಸಿಕೊಂಡು ಅಸಹಾಯಕರನ್ನು ದರೋಡೆ ಮಾಡುವವರು.</p>



<p>“ನನ್ನಲ್ಲಿ ಹಣ ಇಲ್ಲ, ನಾನು ನನ್ನ ಫ್ರೆಂಡನ್ನು ಕೇಳಿ ಕೊಡ್ತೇನೆ. ಪ್ಲೀಸ್‌ ವಿಡಿಯೋ ಡಿಲಿಟ್ ಮಾಡಿ!” ಎಂದು ಕೇಳಿಕೊಂಡೆ.</p>



<p>“ಮೊದಲು ಕಾಸು ಕೊಡು, ಆಮೇಲೆ ಡಿಲಿಟ್‌ ಮಾಡ್ತೇನೆ.”</p>



<p>ಹೇಗೋ ಏನೋ ಐದು ಸಾವಿರವನ್ನು ಮೂರು ಸಾವಿರಕ್ಕೆ ಇಳಿಸಿದೆ. ಅಪಾರ್ಟ್‌ಮೆಂಟಿನ ಕೆಳಗೆ ಬಂದು ಹಿರಿಯ ಸ್ನೇಹಿತರೊಬ್ಬರಿಗೆ ಫೋನ್‌ ಮಾಡಿ ಮೂರು ಸಾವಿರ ತೆಗೆದುಕೊಂಡು, ಅದನ್ನು ಮೂವರಲ್ಲೊಬ್ಬನ ಗೂಗಲ್‌ಪೇಗೆ ಹಾಕಿದೆ.</p>



<p>ಮೂವರೂ ಒಂದೇ ಸ್ಕೂಟರ್‌ ಹತ್ತಿದರು. ಮನೆಗೆ ಕಾಫಿ ಕುಡಿಯಲು ಬಂದ ಹುಡುಗ ಇಳಿದು ಬಂದು, ಪೆಚ್ಚು ಮೋರೆ ಹಾಕಿ “ಸ್ಸಾರಿ…!” ಎಂದ.</p>



<p>ಆತನ ಬೆನ್ನನ್ನು ಮೆದುವಾಗಿ ತಟ್ಟಿ, “ಇಟ್ಸ್‌ ಓಕೆ!” ಎಂದೆ.</p>
]]></content:encoded>
					
		
		
			</item>
		<item>
		<title>ಮನೋರೋಗಕ್ಕೆ ಮದ್ದಿದೆ</title>
		<link>https://peepalmedia.com/mnorogakke-maddide/</link>
		
		<dc:creator><![CDATA[Yogesh Master]]></dc:creator>
		<pubDate>Mon, 10 Oct 2022 06:16:39 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[health day]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mental health]]></category>
		<category><![CDATA[mental health day]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[world]]></category>
		<guid isPermaLink="false">https://peepalmedia.com/?p=9788</guid>

					<description><![CDATA[ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕರಾದ ಯೋಗೇಶ್ ಮಾಸ್ಟರ್. ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ&#160; ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ [&#8230;]]]></description>
										<content:encoded><![CDATA[
<p><strong>ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕರಾದ ಯೋಗೇಶ್ ಮಾಸ್ಟರ್.</strong></p>



<p>ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ&nbsp; ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ ತಾನೊಂದೇ ಹೊತ್ತುಕೊಂಡಿದೆ. ಇನ್ನೂ ಗಾಬರಿಯ ವಿಷಯವೆಂದರೆ ಭಾರತದಲ್ಲಿ ನುರಿತ ಮತ್ತು ವೃತ್ತಿಪರ ಮನೋರೋಗ ತಜ್ಞರು ಸುಮಾರು ನಾಲ್ಕು ಸಾವಿರಕ್ಕೂ ಕಡಿಮೆ ಇದ್ದಾರೆ.</p>



<p>ಭಾರತದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಮನೋರೋಗಗಳು ಇಷ್ಟರ ಮಟ್ಟಿಗೆ ತೀವ್ರತರವಾಗಿದ್ದರೂ, ಕೆಲವು ಅಂಕಿಅಂಶಗಳ ಪ್ರಕಾರ ಸೈಕ್ರಿಯಾಟಿಸ್ಟ್‌ಗಳ ಸಂಖ್ಯೆ ಪ್ರತಿ ಹತ್ತು ಸಾವಿರ ಜನಕ್ಕೆ ಒಂದಕ್ಕಿಂತ ಕಡಿಮೆ ಇದ್ದಾರೆ. ಇನ್ನು ಸಮಾಲೋಚಕರು ಎಂದರೆ ಒಂದೋ ಕನಿಷ್ಠ ತರಬೇತಿ ಪಡೆದವರು ಅಥವಾ ತರಬೇತಿಯನ್ನೇ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿಶ್ಲೇಷಣೆಗಳು ವೈಜ್ಞಾನಿಕವಾಗಿರದೇ ಕೆಲವು ಸಲ ಸಹಾಯವಾಗುವುದಕ್ಕಿಂತ ತೊಂದರೆಯೇ ಆಗಬಹುದು.</p>



<p>ಒಟ್ಟಾರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತನ್ನು ನಿಜವಾಗಿಸುವಂತಹ ಪ್ರಯತ್ನದಲ್ಲಿದೆ ನಮ್ಮ ಸದ್ಯದ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ.</p>



<p></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/WhatsApp-Image-2022-10-10-at-12.18.30-PM.jpeg" alt="" class="wp-image-9846" width="712" height="396"/></figure></div>


<p><strong>ಹದಗೆಟ್ಟ ವ್ಯವಸ್ಥೆಗೆ ಕಾರಣಗಳು..</strong></p>



<p>ಭಾರತದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ ಹದಗೆಡಲು ಕಾರಣವೇನು ಎಂಬುದನ್ನು ಗಮನಿಸಿದರೆ ಮೊಟ್ಟ ಮೊದಲನೆಯದಾಗಿ ನಿರ್ಲಕ್ಷ್ಯ, ತನ್ನಲ್ಲಿ ಮಾನಸಿಕ ಸಮಸ್ಯೆ ಇರುವುದೇ ಇಲ್ಲ ಎಂಬ ಭ್ರಮೆ, ಆತ್ಮಾವಲೋಕನ ಅಥವಾ ಸ್ವಯಂವಿಶ್ಲೇಷಣೆಗೆ ತಯಾರಿಲ್ಲದಿರುವುದು, ಸಾಮಾಜಿಕ ಕಳಂಕವೆಂಬಂತೆ ಮನೋರೋಗವನ್ನು ಕಾಣುವುದು; ಹೀಗೆ ಹಲವು ಕಾರಣಗಳಿವೆ. ಆದರೆ ಮಾನಸಿಕ ಆರೋಗ್ಯದ ವ್ಯವಸ್ಥೆಯನ್ನು ಕಾಪಾಡುವ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಅದರ ಬಗ್ಗೆ ಅರಿವು ನೀಡುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮೊಟ್ಟ ಮೊದಲನೆಯ ಸ್ಥಾನವನ್ನು ಹೊಂದಲು ಸಾಧ್ಯ. ವಾಸ್ತವವಾಗಿ ಇದು ಮನೆಯಲ್ಲಿಯೇ ಪ್ರಾರಂಭವಾಗಬೇಕು. ಆದರೆ ಭಾರತವಿನ್ನೂ ಗುಣಮಟ್ಟದ ಜೀವನ, ಆಲೋಚನೆ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಗಳಿಕೆ, ಸಂವಹನ, ಸಂವೇದನೆ, ಸಂಬಂಧ, ಆಡಳಿತ ವ್ಯವಸ್ಥೆಗಳನ್ನು ಅಗತ್ಯವಿರುವಷ್ಟರ ಮಟ್ಟಿಗೆ ಖಂಡಿತ ಹೊಂದಿಲ್ಲ. ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾದರೂ, ಮನೆಗಳನ್ನು ನೆಚ್ಚಿಕೊಳ್ಳುವಷ್ಟು ಧೈರ್ಯ ತಾಳಲಾಗದು. ಹೋಗಲಿ, ಶಿಕ್ಷಣ ಸಂಸ್ಥೆಗಳಾದರೂ ಈ ಪಾತ್ರವನ್ನು ವಹಿಸಬೇಕು. ಆದರೆ ಮಗುವಿನ ಉಚ್ಚಾರಣೆಯ ಸಮಸ್ಯೆಯನ್ನು ಅಥವಾ ಕಲಿಕೆಯ ನ್ಯೂನ್ಯತೆಯನ್ನು ಅಣಕಿಸುವ ಅಥವಾ ದಂಡಿಸುವ ಕುಚೇಷ್ಟೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುತ್ತಾ ಮಜ ತೆಗೆದುಕೊಳ್ಳುವ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿದ್ದರೆ ಎಂತಹ ಮಾನಸಿಕ ಆರೋಗ್ಯದ ಪ್ರತಿನಿಧಿಗಳನ್ನು ನಾವು ನಿರೀಕ್ಷಿಸಬಹುದು!</p>



<p></p>



<p></p>



<p><strong>ಮನೋರೋಗ ಅಂದರೆ ಯಾವುದು? ಮನೋರೋಗಿಗಳು ಎಂದರೆ ಯಾರು?</strong></p>



<p>ಯಾರನ್ನೂ ಸೇರದೇ, ತಮ್ಮ ಪಾಡಿಗೆ ತಾವು ಏನೇನೋ ಮಾತಾಡಿಕೊಂಡು, ಯಾವುದೋ ಮೂಲೆಯಲ್ಲಿ, ಕತ್ತಲೆಯಲ್ಲಿ, ಯಾರಿಗೂ, ಯಾವುದಕ್ಕೂ ಸ್ಪಂದಿಸದೇ, ಅಥವಾ ಎಲ್ಲಕ್ಕೂ ಭಯಂಕರವಾಗಿ ಪ್ರತಿಕ್ರಿಯಿಸುತ್ತಾ ಇರುವವರೋ ಅಥವಾ ಬಟ್ಟೆ ಹರಿದುಕೊಂಡು, ಯಾರನ್ನೂ ಗುರುತಿಸದೇ, ಯಾರೆಂದರೆ ಅವರಿಗೆ ಕಲ್ಲುಗಳಲ್ಲಿ ಹೊಡೆಯುತ್ತಾ ಇರುವವರು ಎಂದೇನಾದರೂ ಅಂದುಕೊಂಡಿದ್ದರೆ ಅವರ ಬಗ್ಗೆ ನನಗೆ ತೀವ್ರ ಅನುಕಂಪವಿದೆ.</p>



<p>ತಲೆಗೆ, ಕಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ, ಚರ್ಮಕ್ಕೆ, ಕೈ ಕಾಲಿಗೆ ನೋವೋ, ಬಾವೋ, ತುರಿಕೆಯೋ, ಊತವೋ, ಉರಿಯೋ ಎಂತದ್ದೋ ಬರುತ್ತದೆ. ಯಾವುದೇ ಕಾರಣದಿಂದ ಸಮಸ್ಯೆ ಬಂದು ಅದು ಆ ಹೊತ್ತಿಗೆ, ಒಂದು ಮಟ್ಟಕ್ಕೆ ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ಔಷಧವನ್ನು ತೆಗೆದುಕೊಳ್ಳುತ್ತೇವೆ. ನಿವಾರಿಸಿಕೊಳ್ಳುತ್ತೇವೆ. ನೋವು, ಬಾವು, ಊತ, ಉರಿ ಹೋಯಿತೆಂದರೆ ಸಮಸ್ಯೆ ಹೋಯಿತೆಂದರ್ಥ. ಒಂದು ವೇಳೆ ಯಾವುದೇ ಒಂದು ಸಮಸ್ಯೆ ಬಂದು, ಸಣ್ಣ ಪುಟ್ಟ ಮದ್ದುಗಳಿಂದ, ಉಪಚಾರಗಳಿಂದ ಹೋಗದೇ ಒಂದೇ ಸಮನೆ ಕಾಡುತ್ತಿದ್ದರೆ ಅದಕ್ಕೆ ರೋಗ ಎನ್ನಬಹುದೇನೋ. ಅದಕ್ಕೂ ದೀರ್ಘಕಾಲದ ಉಪಚಾರ, ನಿಯಮಿತ ಮದ್ದಿನ ಸೇವನೆ ಇರುತ್ತದೆ. ಒಟ್ಟಾರೆ ದೇಹಕ್ಕೆ ಏನಾದರೂ ಆದರೆ ಕಾಣುವಂತಹ ಲಕ್ಷಣಗಳಿಂದ ಸಮಸ್ಯೆಯನ್ನೋ, ರೋಗವನ್ನೋ ಪತ್ತೆ ಹಚ್ಚಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಮಾಡುತ್ತೇವೆ ಅಥವಾ ಮಾಡಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿಗೂ ಆಗಾಗ ಸಮಸ್ಯೆ ಬರುತ್ತದೆ. ಆ ಸಮಸ್ಯೆಯನ್ನು, ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ರೋಗವಾಗಿ ಮುಂದುವರಿಯುತ್ತದೆ. ವಿಪರ್ಯಾಸವೆಂದರೆ ತಮಗೆ ತಲೆನೋವು ಇದೆ ಎಂದು ಒಪ್ಪಿಕೊಂಡಂತೆ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ ಇದೆ ಎಂದು ಒಪ್ಪಿಕೊಂಡಂತೆ ಮನೋರೋಗವಿದೆ ಎಂದು ಒಪ್ಪಿಕೊಳ್ಳಲು ಸಾಮಾನ್ಯವಾಗಿ ತಯಾರಿರುವುದಿಲ್ಲ. ಅದೇ ಸಮಸ್ಯೆ.</p>



<p></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/image-39.png" alt="" class="wp-image-9797" width="764" height="342" srcset="https://peepalmedia.com/wp-content/uploads/2022/10/image-39.png 780w, https://peepalmedia.com/wp-content/uploads/2022/10/image-39-300x135.png 300w, https://peepalmedia.com/wp-content/uploads/2022/10/image-39-768x345.png 768w, https://peepalmedia.com/wp-content/uploads/2022/10/image-39-150x67.png 150w, https://peepalmedia.com/wp-content/uploads/2022/10/image-39-696x312.png 696w" sizes="auto, (max-width: 764px) 100vw, 764px" /></figure></div>


<p></p>



<p>ಮೂಡುವ ಭಾವನೆಗಳಿಂದಾಗಿ, ಮಾಡುವ ಆಲೋಚನೆಗಳಿಂದಾಗಿ, ತೋರುವ ವರ್ತನೆಗಳಿಂದಾಗಿ, ನೀಡುವ ಪ್ರತಿಕ್ರಿಯೆಗಳಿಂದಾಗಿ, ಸ್ಪಂದಿಸುವ ರೀತಿಗಳಿಂದಾಗಿ ರೋಗಗ್ರಸ್ತ ಮನಸ್ಥಿತಿಯು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಅದನ್ನು ಆ ಹೊತ್ತಿನ ಸಂಗತಿ ಅಥವಾ ಸನ್ನಿವೇಶಕ್ಕೆ ತಮ್ಮ ಪ್ರತಿಕ್ರಿಯೆ ಅಥವಾ ತಮ್ಮ ಮೇಲಾಗಿರುವ ಪ್ರಭಾವ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಅದು ಮತ್ತೂ ದೊಡ್ಡ ಸಮಸ್ಯೆ. ಹೀಗಾಗಿ ತಾವೇ ತಮ್ಮ ಮನೋರೋಗವನ್ನು ಪತ್ತೆ ಹಚ್ಚಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರು ಪತ್ತೆ ಹಚ್ಚಿದರೆ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಮಾಜದಲ್ಲಿ ಮನೋರೋಗಿಗಳು ತುಂಬಾ ಸಹಜವಾಗಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಅವರೂ ಇರ್ತಾರೆ. ಅವರಿರೋದೇ ಹಾಗೆ ಅಂತ ಉಳಿದವರೂ ಇರ್ತಾರೆ.</p>



<p>ತನ್ನನ್ನು ತಾನು ಅರಿಯುವಂತಹ, ತನ್ನೊಳಗಿನ ಮತ್ತು ವಿಶ್ವದ ಆಂತರ್ಯದ ರಹಸ್ಯವನ್ನು ತಿಳಿಯುವಂತಹ ಆಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರ ಅತ್ಯಂತ ಮಹತ್ತರವಾದದ್ದು ಮತ್ತು ಉನ್ನತವಾದದ್ದು. ಹಾಗೆಯೇ ಯಾರೊಬ್ಬರೂ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತನ್ನನ್ನು ತಾನು ಮಾನಸಿಕ ನೆಲೆಯಿಂದ ತಿಳಿಯುವುದು ಮತ್ತು ಸಮಸ್ಯೆಗಳಿದ್ದಲ್ಲಿ ಪತ್ತೆ ಹಚ್ಚುವುದು, ರೋಗವಾಗಿದ್ದಲ್ಲಿ ಅದನ್ನು ಗುಣಪಡಿಸಿಕೊಳ್ಳೋದು ಬಹಳ ಮುಖ್ಯವಾದದ್ದು. ಇದು ಆಧ್ಯಾತ್ಮಿಕ ಸಾಧನೆಗಿಂತಲೂ ಬಹಳ ಹೆಚ್ಚಿನದು ಎಂದು ನನ್ನ ಅಭಿಪ್ರಾಯ. ತಾನೂ, ತನ್ನೊಂದಿಗೆ ಇತರರು, ಕುಟುಂಬ, ಸಮಾಜ, ದೇಶ ಎಲ್ಲವೂ ಆರೋಗ್ಯವಾಗಿರಲು ಸಾಧ್ಯವಾಗುವುದು ಇದರಿಂದ ಎಂದೇ ನನ್ನ ಅಂಬೋಣ.</p>



<p></p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2022/10/image-38-1024x768.png" alt="" class="wp-image-9796" srcset="https://peepalmedia.com/wp-content/uploads/2022/10/image-38-1024x768.png 1024w, https://peepalmedia.com/wp-content/uploads/2022/10/image-38-300x225.png 300w, https://peepalmedia.com/wp-content/uploads/2022/10/image-38-768x576.png 768w, https://peepalmedia.com/wp-content/uploads/2022/10/image-38-150x113.png 150w, https://peepalmedia.com/wp-content/uploads/2022/10/image-38-696x522.png 696w, https://peepalmedia.com/wp-content/uploads/2022/10/image-38-1068x801.png 1068w, https://peepalmedia.com/wp-content/uploads/2022/10/image-38.png 1200w" sizes="auto, (max-width: 1024px) 100vw, 1024px" /></figure>



<p></p>



<p>ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ತಾನು ಮತ್ತು ಇತರರನ್ನು ಅವರವರ ವರ್ತನೆಗಳ, ಭಾವನೆಗಳ, ವಿಚಾರಗಳ, ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಮನೋವೈಜ್ಞಾನಿಕವಾಗಿ ಅರಿಯುತ್ತಾನೋ ಆಗ ಅವನಿಗೆ ಸಮಸ್ಯೆಗಳನ್ನು, ಸಂಘರ್ಷಗಳ ಕಾರಣಗಳನ್ನು, ಸಂಬಂಧಗಳಲ್ಲಿನ ಬಿರುಕುಗಳನ್ನು, ಖಿನ್ನತೆಗೆ ಮೂಲಗಳನ್ನು, ಭಿನ್ನ ಮನಸ್ಥಿತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ್ರಹ ತೋರುವ&nbsp; ಎಡೆಯಲ್ಲಿ ಅನುಕಂಪ ತೋರಲು ಸಾಧ್ಯವಾಗುತ್ತದೆ. ದ್ವೇಷ ಸಾಧಿಸುವ ಬದಲು ಪ್ರೀತಿಸಲು ಸಾಧ್ಯವಾಗುತ್ತದೆ. ದೂರುವ ಬದಲು ತಿದ್ದಲು ಸಾಧ್ಯವಾಗುತ್ತದೆ. ದೂಷಿಸುವ ಬದಲು ಅರಿಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬನ ಮಾತಿಗೆ, ಕೃತ್ಯಕ್ಕೆ ಆತನನ್ನೇ ಎತ್ತಿ ಎಸೆಯುವ ಬದಲು, ಅವನ ಯಾವುದೋ ದೋಷಪೂರಿತ ಗುಣದ ಕಣವನ್ನು ಹೆಕ್ಕಿ ಎಸೆಯಲು ಸಾಧ್ಯವಾಗುತ್ತದೆ. ಮೆತ್ತಿಕೊಂಡಿರುವ ಮಲಿನವನ್ನು ತೊಳೆಯಲು ಸಾಧ್ಯವಾಗುತ್ತದೆ. ಕಾಟ ಕೊಡುವ ಅವರ್ಯಾರದೋ ಹಟಕ್ಕೆ, ಮುಂದುವರಿಯಲು ಬಿಡದ ಇವರ್ಯಾರದೋ ಮೌಢ್ಯಕ್ಕೆ, ಎಷ್ಟೇ ತಿಳಿಯಾದ ತಿಳುವಳಿಕೆಯನ್ನು ನೀಡಿದರೂ ತಾವೆಂದಿಗೂ ಬಿಡದ ತಮ್ಮ ವಾದಕ್ಕೆ ಕಾರಣಗಳು ತಿಳಿಯುತ್ತವೆ.</p>



<p>ಹೀಗೆ ಮನೋವಿಜ್ಞಾನವು ವ್ಯಕ್ತಿಯ ಮತ್ತು ಸಮಾಜದ ಹೂರಣವನ್ನು ಅರಿವಿಗೆ ತರುತ್ತಾ ವ್ಯಕ್ತಿಗತವಾದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸಮಾಜದ ಮಟ್ಟಿಗಾದರೂ ರಾಕೆಟ್ ವಿಜ್ಞಾನವು ಮನೋವಿಜ್ಞಾನದ ಅಗತ್ಯದ ಮುಂದೆ ಮೊದಲನೆಯ ಪ್ರಾಧಾನ್ಯತೆ ಆಗಲಾರದು ಎಂಬುದು ನನ್ನ ಗ್ರಹಿಕೆ.</p>



<p></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/image-42.png" alt="" class="wp-image-9800" width="720" height="417"/></figure>



<p></p>



<p>ಮನೋರೋಗಕ್ಕೆ ನಾನಾ ಕಾರಣಗಳಿದ್ದಂತೆ, ನಾನಾ ಆಯಾಮಗಳೂ, ಮುಖಗಳೂ, ರೀತಿಗಳೂ ಇವೆ. ಯಾವುದೇ ಆದರೂ ಗುರುತು ಹಚ್ಚಲು ಸಾಕಷ್ಟು ಸಾಧ್ಯವಿದೆ. ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ.</p>



<p><strong>ಮನೋರೋಗದ ಹಾಳು ಗಾದೆ</strong></p>



<p>ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯ ಮಾತು ತಿಳಿವಿನ ಕಾಲ ಪಕ್ವವಾಗಿಲ್ಲದಿದ್ದಾಗ ಹುಟ್ಟಿದೆ. ಆದರೆ ಇಂದು ಹಾಗಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬುದೇನೂ ನಿಜವಲ್ಲ. ಆಯಾ ಕಾಲಘಟ್ಟದಲ್ಲಿ, ಆಯಾ ವ್ಯವಸ್ಥೆಗಳಿಗೆ ಅನುಗುಣವಾಗಿ ಹುಟ್ಟಿರುವ ಗಾದೆಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಇರಲಿ, ಸದ್ಯಕ್ಕೆ ಇಷ್ಟು ನಂಬೋಣ. ಯಾವುದೇ ಮನೋರೋಗಕ್ಕೆ ಮದ್ದಿದೆ. ಆದರೆ ಗುರುತಿಸಬೇಕು, ಒಪ್ಪಿಕೊಳ್ಳಬೇಕು ಮತ್ತು ಚಿಕಿತ್ಸೆ ನೀಡಬೇಕು. ವ್ಯಕ್ತಿಗತವಾಗಿ ಒಬ್ಬ ಮಾನಸಿಕವಾಗಿ ಆರೋಗ್ಯವಂತನಾದರೆ ಅವನು ಆರೋಗ್ಯಕರವಾದಂತಹ ಪರಿಸರ ನಿರ್ಮಿಸುವುದರಲ್ಲಿ, ಆರೋಗ್ಯಕರವಾದಂತಹ ವಾತಾವರಣವನ್ನು ಮೂಡಿಸುವುದರಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾನೆ. ತಾನೂ ನೆಮ್ಮದಿಯಾಗಿ ಬಾಳುತ್ತಾನೆ, ಇತರರನ್ನೂ ಬಾಳಗೊಡುತ್ತಾನೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/mental.jpg" alt="" class="wp-image-9837" width="645" height="575" srcset="https://peepalmedia.com/wp-content/uploads/2022/10/mental.jpg 518w, https://peepalmedia.com/wp-content/uploads/2022/10/mental-300x268.jpg 300w, https://peepalmedia.com/wp-content/uploads/2022/10/mental-150x134.jpg 150w" sizes="auto, (max-width: 645px) 100vw, 645px" /></figure></div>


<p>ತನ್ನಲ್ಲಿ ಮತ್ತು ಇತರರಲ್ಲಿ ರೋಗಲಕ್ಷಣಗಳನ್ನು ಕಂಡುಕೊಂಡು, ಎಚ್ಚೆತ್ತುಕೊಂಡು ಮಾನಸಿಕವಾಗಿ ಎಲ್ಲರೂ ಗುಣಮುಖರಾಗಲಿ ಎಂಬುದೇ ಈ ಲೇಖನಮಾಲೆಯ ಉದ್ದೇಶ.</p>



<p class="has-text-align-right">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.)</p>



<p><strong>ಯೋಗೇಶ್ ಮಾಸ್ಟರ್</strong><br>ಕಾದಂಬರಿ, ನಾಟಕ, ಕವಿತೆ, ಮಕ್ಕಳ ಸಾಹಿತ್ಯ ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಇವರು ಖ್ಯಾತ ಆಪ್ತ ಸಮಾಲೋಚಕರು.</p>
]]></content:encoded>
					
		
		
			</item>
	</channel>
</rss>
