<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Modhi &#8211; Peepal Media</title>
	<atom:link href="https://peepalmedia.com/tag/modhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 24 Aug 2024 06:47:19 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Modhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಕಾಡೆ ಮಲಗಿದ ನಮೋ ಮತ್ಸರದ ಬಿಲ್ಲುಗಳು (ಕಠಾರಿಯವರ ರಾಜಕೀಯ ವಿಡಂಬನೆ)</title>
		<link>https://peepalmedia.com/makade-sleeping-namo-matsaras-bows-political-satire/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 24 Aug 2024 06:47:18 +0000</pubDate>
				<category><![CDATA[ಅಂಕಣ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[HDK]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[karnataka]]></category>
		<category><![CDATA[kumarswamy]]></category>
		<category><![CDATA[Modhi]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44398</guid>

					<description><![CDATA[“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು” ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? [&#8230;]]]></description>
										<content:encoded><![CDATA[
<p>“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು”</p>



<p>ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? ಅಣಬೆ ತಿನ್ಕೊಂಡ್, ಡ್ರೆಸ್ ಮಾಡ್ಕೊಂಡ್ ಹೆಂಗೊ ಮಜವಾಗಿದ್ದೆ. ನಂಬಿದ್ದ ಭಕ್ತರೇ ಕೈಕೊಟ್ಟು…ಪಲ್ಟು, ಬಾಬು ಅಂತ ಅಯೋಗ್ಯರಿಗೆ ಮಸ್ಕಾ ಹೊಡೆಯೊ ಹಂಗಾಯ್ತುʼ ಎಂದು ನಮೋ ಪರಿತಪಿಸಿದ.</p>



<p>ಹಾಗೂ ಹೀಗೂ ಏದುಸಿರು ಬಿಡುತ್ತ, ಸೂರ್ಯ ಮುಳುಗಿದ ಹೊತ್ತಲ್ಲಿ ಪಟ್ಟಾಭಿಷಕ್ತನಾದ ನಮೋಬಾಬಾನ ಕುಂಡಲಿಗೆ ಕತ್ತಲು ತುಂಬಿತ್ತು. ಶನಿ, ಮಂಗಳ, ಗುರು ಎಲ್ಲಾ ಗ್ರಹಗಳು ಒಟ್ಟಿಗೆ ರಾಗಾ ಮತ್ತವನ ಇಂಡಿಯಾ ಗ್ಯಾಂಗ್ ನಲ್ಲಿ ವಕ್ಕರಿಸಿಕೊಂಡು, ದಶದಿಕ್ಕುಗಳಿಂದಲೂ ಅಟಕಾಯಿಸಿಕೊಂಡು ಕೈಕಾಲು ಕಟ್ಟಿ ಹಾಕಿದ್ದವು. ಇಷ್ಟು ಸಾಲದೂಂತ, ಪದಗ್ರಹಣದ ನಂತರ ತುರ್ತಾಗಿ ಕುಟೀರಕ್ಕೆ ಬರಹೇಳಿದ್ದ ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತ, ಇಂಥದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದವನಂತೆ ಉರಿವ ಬೆಂಕಿಗೆ ಸುರಿಯಲು ತುಪ್ಪದ ಗಿಂಡಿ ಹಿಡಿದು ನಿಂತಿದ್ದ.</p>



<p>“ಏನು ಅಹಂಕಾರ! ಎಷ್ಟು ಕೊಬ್ಬು!”</p>



<p>“ಯಾರಿಗಪ್ಪ?”</p>



<p>“ಮರ್ಯಾದೆ…ಮರ್ಯಾದೆ. ನಾಲಿಗೆ ಮೇಲೆ ನಿಗಾ ಇರಲಿ. ಚಡ್ಡಿ ಪೂರ್ವಾಶ್ರಮದಲ್ಲಿ ಒಟ್ಟಿಗೆ ಇದ್ದು ಮೂರೊತ್ತು ಉಪ್ಪಿಟ್ಟು ತಿಂದು ಕೊಕ್ಕೊ ಕಬ್ಬಡಿ ಆಡಿರಬಹುದು. ಆಗಿನ ಪುರೋಹಿತರಿಗೆ ಇಬ್ಬರೂ ಕೂಡಿ ಬಾಡಿ ಮಸಾಜ್ ಸೇವೆ ಮಾಡಿರಬಹುದು. ಆದರೆ, ಈಗ ನಾನು ಸಾಮ್ರಾಟನನ್ನು ನಾಮಿನೇಶನ್ ಮಾಡೋನು. ಸಲಿಗೆ ಬೇಡ, ಎಚ್ಚರವಿರಲಿ”</p>



<p>“ಪೂಜಾರಿಗಳು ಕ್ಷಮಿಸಬೇಕು. ತಮ್ಮ ಕೋಪಕ್ಕೆ ಕಾರಣ ತಿಳಿಯಬಹುದೇ?”</p>



<p>“ಯಾವನೋ ಅವ್ನು…ಕಪಿ ನಡ್ಡ…ಸಾಮ್ರಾಟರಿಗೆ ಕುಟೀರದ ಅವಶ್ಯಕತೆ ಇಲ್ಲ ಅಂದವನು?”</p>



<p>“ಅಯ್ಯೋ ಬಿಡಿ…ಆ ದಡ್ಡನ ಮಾತು”</p>



<p>“ಆ ಕಪಿ ಬಾಯಿಗೆ ಆ ಮಾತನ್ನ ಯಾರು ತುರುಕಿರೋದು ನಂಗೊತ್ತು. ನಾನಷ್ಟು ದಡ್ಡ ಅಲ್ಲ. ಇರಲಿ…ದಾನದ ಹೆಸರಲ್ಲಿ ಆಸ್ತಿ ಮಾಡ್ಕೊಂಡ್ ಮಜಾ ಮಾಡ್ತಿರೊ ಸಾಬ್ರ ಬಾಲನ ಕಟ್ ಮಾಡ್ಬೇಕು. ಅದು ಬಿಟ್ಟು ಸಾಬ್ರಿಗೆ ಮೀಸಲಾತಿ ಕೊಡ್ತಿರೊ ತೆಲುಗು ಬಾಬುನ…ಮತ್ತೆ ʼಅಲ್ಲಾ….ಅಲ್ಲಾʼ ಅಂತ ಭಜನೆ ಮಾಡೋ ಪಲ್ಟುನ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದೀಯ!”</p>



<p>“ಅದೆಲ್ಲ ನಾಟಕ…ನಿಮಗೆ ಗೊತ್ತಿರೋದೆ. ಎಲ್ರನ್ನೂ ತಬ್ಕೊಬೇಕು ಅಂತ ಅದೆಷ್ಟು ಬಾರಿ ನೀವೇ ಹೇಳಿದ್ದೀರ!”</p>



<p>“ಆಯ್ತು… ಆಯ್ತು. ಹಾಗೆ ಕುಟೀರದ ವತಿಯಿಂದ ದೀಕ್ಷೆ ಪಡೆದ ಚಡ್ಡಿ ಪಂಡಿತರನ್ನು ಉನ್ನತ ಹುದ್ದೆಗೆ ಲಾಂಗಿಟ್ಯುಡಿನಲ್ಲಿ ನೇರವಾಗಿ ಅಪಾಯಿಂಟ್ ಮಾಡ್ಬೇಕು. ಜಾರಿ ಮಾಡಬೇಕಾದ ಮನುವಿಕೃತಿ ಸನಾತನಿ ಅಜೆಂಡಾಗಳು ಸಾಕಷ್ಟಿದೆ”</p>



<p>“ಅದು ಲಾಂಗಿಟ್ಯುಡಿನಲಿ…ಆಗಲ್ಲ…ಲ್ಯಾಟರಲಿ ಮಾಡಬಹುದು”</p>



<p>“ಲ್ಯಾಟರಲ್…ಪರ್ಪೆಂಡಿಕ್ಯುಲರ್…ಯಾವುದೊ ಒಂದು. ಒಟ್ನಲ್ಲಿ ಮಾಡು. ಸದ್ಯಕ್ಕೆ ಹೊರಡು. ನಂಗೆ ಬ್ರೈನ್ ವಾಶಿಂಗ್ ಟೈಮಾಯ್ತು”</p>



<p>ಯಾವ ಆಸೆ ತೋರಿಸಿ ಪಲ್ಟುಕುಮಾರ, ತೆಲುಗುಬಾಬುರನ್ನು ಹೊಸ ಬಿಲ್ಲಿಗೆ ಒಪ್ಪಿಸೋದು ಅಂತ ನಮೋ ಯೋಚಿಸುತ್ತಿರ ಬೇಕಾದರೆ, ಅಪರಿಮಿತ ಕುತಂತ್ರಿ ಆಯೋಜಿಸಿದ್ದ ʼಸಕಲ ಗೋದಿ ಮೀಡಿಯಾ ಪೆಡಿಗ್ರೆ ಬಿಸ್ಕತ್ ಪಾರ್ಟಿʼ ಗೆ ತಡವಾಗುತ್ತಿರುವ ಬಗ್ಗೆ ಆಪ್ತಕಾರ್ಯದರ್ಶಿ ಸೂಚನೆ ನೀಡಿದ.</p>



<p>ವಿಶಾಲವಾದ ಕಾನ್ ಫರೆನ್ಸ್ ರೂಮಿನಲ್ಲಿ – ಬಕೆಟ್ ಗೊಸ್ವಾಮಿ, ತುತ್ತೂರಿ ಕುಮಾರಿ, ಬೆಇಜ್ಜತ್ ಶರ್ಮ, ಪಜಿತ್ ಅವನಪ್ಪನವರ್, ತಂಗಣ್ಣ, ಕುದೀರ್ ಕೌದರಿ…..ಸಕಲ ಗೋದಿ ಮೀಡಿಯಾದ ಮುಖ್ಯ ಆಂಕರ್ ಗಳು ನಮೋಬಾಬಾರ ಪಾದಗಳನ್ನು ಚುಂಬಿಸಿ, ಕುರ್ಚಿಗಳಲ್ಲಿ ಆಸೀನರಾದರು. ಅಪರಿಮಿತ ಕುತಂತ್ರಿ ಎಸೆದ ಬಿಸ್ಕತ್ ಗಳನ್ನು ಕ್ಯಾಚ್ ಹಿಡಿದು ಸವಿಯುತ್ತ ಆನಂದದಲ್ಲಿ ತೇಲಾಡುತ್ತಿರುವಾಗ, ಸಡನ್ನಾಗಿ ಅಪರಿಮಿತ ಕುತಂತ್ರಿ ಕುಪಿತನಾಗಿ “ನೀವೆಲ್ಲಾ ನಿಮ್ಮದೇ ಲೋಕದಲ್ಲಿ… ಹೊರ ಜಗತ್ತಿನ ಪರಿವೇ ಇಲ್ಲದೆ ಮೋಜು ಮಸ್ತಿ ಮಾಡ್ತಿದ್ದೀರ! ಸರ್ವೆ ರಿಪೋರ್ಟ್ ಬಂದಿದೆ. ನಿಮ್ಮ ಚಾನೆಲ್ ಗಳನ್ನ ಯಾರೂ ನೋಡ್ತಾ ಇಲ್ಲಾಂತ! ಅದರಲ್ಲೂ ನಮೋಬಾಬಾ ಸ್ಕ್ರೀನ್ ಮೇಲೆ ಕಂಡ ಕೂಡಲೇ ಟೀವಿ ಆಫ್ ಮಾಡ್ತಿದ್ದಾರಂತೆ! ಜನರು ರಾಗಾ…ರಾಗಾ ಅಂತಿದ್ದಾರೆ. ನೀವುಗಳು ಭೋಗ…ಭೋಗ ಅಂತಿದ್ದೀರ. ಜನ ನಮೋಭಜನೆ ಮಾಡ್ತಾ ಇಲ್ಲ? ನಿಮಗ್ಯಾಕೆ ಬಿಸ್ಕತ್ ಕೊಡ್ಬೇಕು?” ಎಂದು ಕಿರುಚಿದ್ದೇ, ಎಲ್ಲರ ಬಾಯಿಂದ ತಿಂದ ಬಿಸ್ಕತ್ ಹೊರ ಕಕ್ಕಿದವು.</p>



<p>“ಸ್ವಾಮಿಗಳೇ…ನಾವಾದ್ರೂ ಎಷ್ಟೂಂತ ಬೊಗಳೋದು? ನಮೋ ಅವರು ತುಂಬಾನಿಗೆ ಹೇಳಿ ಪುಗಸಟ್ಟೆ ಡೇಟಾ ಕೊಟ್ಟಾಗಿಂದ ಎಲ್ರೂ ಮೊಬೈಲ್, ಕಂಪ್ಯೂಟರಲ್ಲಿ ಬರೋ ಅರ್ಬನ್ ನಕ್ಸಲ್, ಟೆರರಿಸ್ಟ್ ಗಳ ನ್ಯೂಸ್ ನೋಡೋಕೆ ಮುಗಿ ಬಿದ್ದಿದ್ದಾರೆ. ಅವರೆಲ್ಲಾ ದೇಶದ್ರೋಹಿಗಳು, ಒಳಗಾಕಿ. ನಮ್ ಹೊಟ್ಟೆ ಮೇಲೆ ಬರೆ ಹಾಕ್ಬೇಡಿ” ಎಂದು ಗೋಗೆರೆದರು.</p>



<p>ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್ ಜೊತೆಗೆ ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲನ್ನೂ ಒಟ್ಟಿಗೆ ತಂದರಾಯಿತು ಎಂದು ಅಪರಿಮಿತ ಕುತಂತ್ರಿ ಸಲಹೆ ಕೊಟ್ಟ. ಹಾಗೆ ಪಲ್ಟು, ಬಾಬುವನ್ನು ಯಾಮಾರಿಸಲು ʼಲಾಲಿಪಪ್ʼ ಐಡಿಯಾವನ್ನು ಕಿವಿಯಲ್ಲಿ ಸುರಿದಾಗ, ಮೂವತ್ತಾರು ಇಂಚಿಗೆ ಕುಗಿದ್ದ ಎದೆಯನ್ನು ಐವತ್ತಾರಕ್ಕೆ ಉಬ್ಬಿಸಿ ನಮೋ ಪ್ರಸನ್ನನಾದ.</p>



<p>ಲಾಲಿಪಪ್ ಆಸೆಗೆ ಜೊಲ್ಲು ಸುರಿಸುತ್ತ ಪಲ್ಟುಕುಮಾರ, ತೆಲುಗುಬಾಬು ಬಂದಾಗ ನಮೋ ಅವರನ್ನು ತಬ್ಬಿ, ಅಪ್ಪಿ ಮುದ್ದಾಡಿ ಬರಮಾಡಿಕೊಂಡ. ʼಇದ್ಯಾಕೊ ಅತಿಯಾಯಿತುʼ ಎಂದು ಪಲ್ಟು, ಬಾಬು ಮುಖಕ್ಕೆ ಮೆತ್ತಿದ್ದ ಎಂಜಲನ್ನು ಒರೆಸಿಕೊಂಡರು.</p>



<p>“ಪಲ್ಟು, ಬಾಬುಗಾರು…ಇದು ನಿಮಗೋಸ್ಕರ ಆರ್ಡರ್ ಮಾಡಿ ತರಿಸಿದ ಡೆಲಿಶಿಯಸ್ ಲಾಲಿಪಪ್!” ಎಂದು ಕೈಲಿಡಿದ ಚಿನ್ನಾರಿ ಪೇಪರ್ ಸುತ್ತಿಕೊಂಡ ವಿಶೇಷ ಪ್ಯಾಕೇಜನ್ನು ನಮೋ ತೋರಿಸಿದ. ಆತುರದಿಂದ ಅವರು ಪ್ಯಾಕೇಜನ್ನು ತೆಗೆದುಕೊಳ್ಳಲು ಕುರ್ಚಿಯಿಂದ ಎದ್ದಾಗ ನಮೋ ನಗುತ್ತ “ಅವಸರ ಬೇಡ…ಮಿತ್ರೋ. ಇದು ನಿಮಗಾಗಿಯೇ ಇರೋದು” ಎಂದು ಟೇಬಲ್ಲಿನ ಮೇಲಿಟ್ಟು “ಕೊಡ್ತೀನಿ. ಆದರೆ, ಅದಕ್ಕೂ ಮುಂಚೆ ಒಂದಷ್ಟು ಆಟ ಆಡೋಣ. ನನಗೂ ಇತ್ತೀಚಿಗೆ ಫೋಟೊ ಶೂಟ್ ಗಳಿಲ್ಲದೆ ಬೋರ್ ಆಗ್ತಿದೆ” ಎಂದಾಗ ನಮೋನ ಕಳ್ಳಾಟದ ವಾಸನೆ ಹಿಡಿದ ಪಲ್ಟು, ಬಾಬು ಪರಸ್ಪರ ಮುಖ ನೋಡಿಕೊಂಡರು.</p>



<p>ಸರಿ. ಆಪ್ತಕಾರ್ಯದರ್ಶಿ ನೆಲದಲ್ಲಿ ಚೌಕವನ್ನು ಬರೆದು, ಚೌಕಬಾರ ಆಡಲು ಕವಡೆಗಳನ್ನು ತಂದಿಟ್ಟ. ಕವಡೆಗಳನ್ನು ಚೆಲ್ಲುತ್ತ ನಾಲ್ವರು ಆಟವಾಡುವಾಗ, ಅವರನ್ನು ಸಂಪ್ರೀತಗೊಳಿಸಲು ಕುತಂತ್ರಿ ನಮೋ – ಅವಕಾಶ ಸಿಕ್ಕರೂ ಕಾಯಿಗಳನ್ನು ಹೊಡೆಯದೆ ಬೇಕಂತಲೇ ತಪ್ಪುತಪ್ಪಾಗಿ ನಡೆಸಿ ಆಟದಲ್ಲಿ ಹಿನ್ನೆಡೆ ಸಾಧಿಸುವುದನ್ನು ಪಲ್ಟು, ಬಾಬು ಗಮನಿಸಿದರು.</p>



<p>ಅಮರಾವತಿ, ಗುಂಟೂರ್ ಮೆಣಸಿನಕಾಯಿ, ಗಯಾ, ಬೋಜ್ ಪುರಿ ಅಂತೆಲ್ಲ ಹರಟೆ ಮಾತಿನ ಮಧ್ಯೆ &#8211; ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್, ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲಿನ ಪ್ರಸ್ತಾಪವನ್ನು ನಮೋ ನವಿರಾಗಿ ಜೋಡಿಸಿದ. ʼಮುಸ್ಲಿಮ್ʼ ಪದ ಕಿವಿಗೆ ಬಿದ್ದದ್ದೇ ಪಲ್ಟು, ಬಾಬು ಕೈಕೊಡವಿಕೊಂಡು ಎದ್ದದ್ದು ನೋಡಿ ನಮೋ ಆತುರ ಪಟ್ಟೆನೆಂದು ಕೈಕೈ ಹಿಸುಕಿಕೊಂಡ.</p>



<p>“ಏಕೆ ಆಟ ಬೇಸರ ಬಂತಾ? ನೀವೇ ಗೆಲ್ತಿದ್ದೀರಿ”</p>



<p>“ಚೌಕಬಾರ ಮಕ್ಕಳಾಟ…ಐಸ್ ಪೈಸ್ ಆಡೋಣ, ನಾವಷ್ಟೇ! ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರನ್ನೂ ಹೊರಗೆ ಕಳಿಸಿ” ಎಂದ ತೆಲುಗುಬಾಬು, ಯಾರು ಮೊದಲು ಹುಡುಕೋದೆಂದು ನಿರ್ಧರಿಸಲು ಹಸ್ತದ ಮೇಲೆ ಹಸ್ತ ಇರಿಸಲು ಹೇಳಿದ. ಸೋತ ನಮೋ ಗೋಡೆಗೆ ಮುಖ ಮಾಡಿ ನೂರರವರೆಗೆ ಎಣಿಸುತ್ತ ನಿಂತ.</p>



<p>ಸಂಖ್ಯೆಗಳನ್ನು ಎಗರಿಸಿ “ತೊಂಭತ್ತೊಂಭತ್ತು…ನೂರು” ಎಂದು ಎಣಿಕೆ ಮುಗಿಸಿ ʼಎಲ್ರೂ ಬಚ್ಚಿಟ್ ಕೊಂಡ್ರಾ…ಹುಡುಕೋಕೆ ಬರ್ಲಾʼ ಅಂತ ಹುಡುಕುತ್ತ ಹೊರಟಾಗ ಪಲ್ಟುಕುಮಾರ, ತೆಲುಗುಬಾಬು ಎಲ್ಲೂ ಕಾಣದೆ ಮಂಗಮಾಯವಾಗಿದ್ದರು.</p>



<p>ಜನವಿರೋಧಿ, ಅಸಮಾನತೆ ಮೆತ್ತಿಕೊಂಡ, ಸೊಲ್ಲೆತ್ತುವ ಬಾಯಿಗೆ ಬೀಗ ಜಡಿಯುವ ಮತ್ಸರದ ನಮೋ ಬಿಟ್ಟ ಬಾಣದ ಬಿಲ್ಲುಗಳು ಜನಾಕ್ರೋಶಕ್ಕೆ ಸಿಕ್ಕು ನಪಾಸಾಗಿ ಮಕಾಡೆ ಮಲಗಿದವು.</p>



<p><strong>ಚಂದ್ರಪ್ರಭ ಕಠಾರಿ<br>cpkatari@yahoo.com</strong></p>
]]></content:encoded>
					
		
		
			</item>
		<item>
		<title>ರಾಹುಲ್ ಗಾಂಧಿ ಈಗ ಮತ್ತೆ ಸಂಸದ ; ಅನರ್ಹತೆ ಸಮ್ಮತವಲ್ಲ ಎಂದ ಸು.ಕೋರ್ಟ್</title>
		<link>https://peepalmedia.com/rahul-gandhi-is-mp-again/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Aug 2023 09:21:23 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Gujarat high court]]></category>
		<category><![CDATA[Modhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=24893</guid>

					<description><![CDATA[&#8216;ಮೋದಿ ಉಪನಾಮ&#8217; ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ಶಿಕ್ಷೆಯು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗಿತ್ತು. 2019 ರ ಮಾನನಷ್ಟ ಮೊಕದ್ದಮೆಯಲ್ಲಿ ಅವರ &#8216;ಮೋದಿ&#8217; ಉಪನಾಮದ ಟೀಕೆಗಳ ಮೇಲಿನ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಡಿತಗೊಳಿಸಿದೆ.&#160;ಇದರೊಂದಿಗೆ ರಾಹುಲ್ ಗಾಂಧಿ ಅವರ ದೋಷಾರೋಪಣೆಯ ನಂತರ ಹಿಂಪಡೆದಿದ್ದ ಸಂಸತ್ ಸದಸ್ಯ ಸ್ಥಾನವನ್ನು ಮರುಸ್ಥಾಪಿಸಲಾಗಿದೆ. &#8216;ಮೋದಿ&#8217; ಉಪನಾಮದ ಕುರಿತು ಗಾಂಧಿಯವರ ಟೀಕೆಗಳ ಕುರಿತು ಮಾತನಾಡಿದ [&#8230;]]]></description>
										<content:encoded><![CDATA[
<p>&#8216;ಮೋದಿ ಉಪನಾಮ&#8217; ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಪ್ರಕರಣದ ಶಿಕ್ಷೆಯು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗಿತ್ತು.</p>



<p>2019 ರ ಮಾನನಷ್ಟ ಮೊಕದ್ದಮೆಯಲ್ಲಿ ಅವರ &#8216;ಮೋದಿ&#8217; ಉಪನಾಮದ ಟೀಕೆಗಳ ಮೇಲಿನ ಶಿಕ್ಷೆಯನ್ನು ಸುಪ್ರೀಂಕೋರ್ಟ್ ಕಡಿತಗೊಳಿಸಿದೆ.&nbsp;ಇದರೊಂದಿಗೆ ರಾಹುಲ್ ಗಾಂಧಿ ಅವರ ದೋಷಾರೋಪಣೆಯ ನಂತರ ಹಿಂಪಡೆದಿದ್ದ ಸಂಸತ್ ಸದಸ್ಯ ಸ್ಥಾನವನ್ನು ಮರುಸ್ಥಾಪಿಸಲಾಗಿದೆ.</p>



<p>&#8216;ಮೋದಿ&#8217; ಉಪನಾಮದ ಕುರಿತು ಗಾಂಧಿಯವರ ಟೀಕೆಗಳ ಕುರಿತು ಮಾತನಾಡಿದ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರ ತ್ರಿಸದಸ್ಯ ಪೀಠವು&nbsp;ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ &nbsp;&#8220;ಎಚ್ಚರಿಕೆಯಿಂದ ವರ್ತಿಸುವ ಅಭ್ಯಾಸ ಬೇಕಿದೆ&#8221; ಎಂದು ಹೇಳಿದರು. ಆದರೆ, ರಾಹುಲ್ ಗಾಂಧಿಗೆ ಗರಿಷ್ಠ ಶಿಕ್ಷೆ ವಿಧಿಸಲು ಸೂರತ್ ನ್ಯಾಯಾಲಯ ಯಾವುದೇ ಕಾರಣವನ್ನು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>



<p>ಇದರ ಜೊತೆಗೆ &#8220;ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾ ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡಿಲ್ಲ, ಅಂತಿಮ ತೀರ್ಪಿನವರೆಗೆ ಶಿಕ್ಷೆಯ ಆದೇಶವನ್ನು ತಡೆಹಿಡಿಯಬೇಕಾಗಿದೆ&#8221; ಎಂದು ಪೀಠ ಹೇಳಿದೆ.</p>



<p>ಮಾರ್ಚ್ 23 ರಂದು ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಿ ಎರಡು ವರ್ಷಗಳ ಶಿಕ್ಷೆ ವಿಧಿಸಿತ್ತು.&nbsp;ಒಂದು ದಿನದ ನಂತರ, ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು.&nbsp;ಕಳೆದ ತಿಂಗಳು ಗುಜರಾತ್ ಹೈಕೋರ್ಟ್ ತನ್ನ ಅಪರಾಧವನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನಂತರ ಕಾಂಗ್ರೆಸ್ ನಾಯಕ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು.</p>



<p>ಇದಕ್ಕೂ ಮುಂಚೆ ಶಿಕ್ಷೆಗೆ ತಡೆ ಕೋರಿ ಗುಜರಾತ್ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್, ಜುಲೈ 7 ರಂದು &#8220;ರಾಜಕೀಯದಲ್ಲಿ ಶುದ್ಧತೆ&#8221; ಈ ಕಾಲದ ಅಗತ್ಯ ಎಂದು ಹೇಳಿತ್ತು.&nbsp;ಅಷ್ಟೆ ಅಲ್ಲದೆ ಶಿಕ್ಷೆಯನ್ನು ಕಡಿತಗೊಳಿಸಲು ಅಥವಾ ತಡೆ ಹಿಡಿಯಲು ಯಾವುದೇ ಸಮಂಜಸವಾದ ಕಾರಣವಿಲ್ಲ ಎಂದು ಹೇಳಿದ ಹೈಕೋರ್ಟ್, ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿತ್ತು.</p>



<p>ವಿಚಾರಣಾ ನ್ಯಾಯಾಲಯದ ಆದೇಶವು ನ್ಯಾಯಯುತ, ಸರಿಯಾದ ಮತ್ತು ಕಾನೂನುಬದ್ಧವಾಗಿದೆ ಮತ್ತು ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಅನರ್ಹತೆಯು ಕೇವಲ ಸಂಸದರು ಮತ್ತು ಶಾಸಕರಿಗೆ ಸೀಮಿತವಾಗಿಲ್ಲ,&#8221; ಎಂದು ನ್ಯಾಯಾಲಯ ಹೇಳಿದೆ.</p>



<p>ಆ ನಂತರದಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ,</p>



<p>ಜುಲೈ 15 ರಂದು ಸುಪ್ರೀಂ ಕೋರ್ಟ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಮನವಿಗೆ ಸಂಬಂಧಿಸಿದಂತೆ ಅರ್ಜಿದಾರ ಪೂರ್ಣೇಶ್ ಮೋದಿ ಮತ್ತು ಗುಜರಾತ್ ಸರ್ಕಾರದಿಂದ ಪ್ರತಿಕ್ರಿಯೆಯನ್ನು ಕೋರಿತ್ತು. ಜುಲೈ 7 ರಂದು ಹೈಕೋರ್ಟ್‌ನ ತೀರ್ಪು ತಡೆಹಿಡಿಯದಿದ್ದಲ್ಲಿ, &#8220;ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯನ್ನು&#8221; ಹತ್ತಿಕ್ಕಲು ಕಾರಣವಾಗಬಹುದು ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.</p>



<p>ವಾದ ವಿವಾದಗಳನ್ನು ಆಲಿಸಿದ ನಂತರ ರಾಹುಲ್ ಗಾಂಧಿಯವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದ್ದು, ಸಂಸತ್ ಸದಸ್ಯರಾಗಿ ಅವರ ಸ್ಥಾನಮಾನವನ್ನು ಮತ್ತೆ ನೀಡಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ, ರಾಹುಲ್ ಗಾಂಧಿಯವರ ಶಿಕ್ಷೆಯ ಪರಿಣಾಮಗಳು ವ್ಯಾಪಕವಾಗಿದ್ದು, ಇದು ಅವರನ್ನು ಆಯ್ಕೆ ಮಾಡಿದ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.</p>



<p>ರಾಹುಲ್ ಗಾಂಧಿಯವರಿಗೆ ವಿಧಿಸಿರುವ ಶಿಕ್ಷೆಯಿಂದಾಗಿ ವಯನಾಡ್ ಕ್ಷೇತ್ರಕ್ಕೆ ಪ್ರಾತಿನಿಧ್ಯ ಸಿಗದಿರುವುದು ಸೂಕ್ತ ಅಂಶವೇ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಇದುಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಗರಿಷ್ಠ ಶಿಕ್ಷೆಯನ್ನು ಏಕೆ ನೀಡಿದರು ಎಂಬುದನ್ನು ವಿಚಾರಣಾ ನ್ಯಾಯಾಧೀಶರು ವಿವರಿಸಬೇಕು ಎಂದು ಹೇಳಿದ್ದಾರೆ.</p>



<p>&#8220;ದೂರುದಾರ ಪೂರ್ಣೇಶ್ ಮೋದಿ ಅವರೇ ತಮ್ಮ ಮೂಲ ಉಪನಾಮ ಮೋದಿ ಅಲ್ಲ ಎಂದು ಹೇಳಿದ್ದಾರೆ. ಅವರು ಮೋದ್ ವನಿಕಾ ಸಮಾಜಕ್ಕೆ ಸೇರಿದವರು. ರಾಹುಲ್ ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ ಹೆಸರಿಸಿದ ವ್ಯಕ್ತಿಗಳಲ್ಲಿ ಒಬ್ಬರೂ ತಮ್ಮ ವಿರುದ್ಧ ಮೊಕದ್ದಮೆ ಹೂಡಲಿಲ್ಲ ಎಂಬುದನ್ನು ಬೊಟ್ಟು ಮಾಡಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.</p>



<p>ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ಮತ್ತು ನಂತರ ಸಂಸತ್ತಿನ ಅನರ್ಹತೆಗೆ ಕಾರಣವಾದ ಮೋದಿ ಉಪನಾಮದ ಹೇಳಿಕೆಗೆ ಕ್ಷಮೆಯಾಚಿಸಲು ರಾಹುಲ್ ಗಾಂಧಿ ಮತ್ತೊಮ್ಮೆ ನಿರಾಕರಿಸಿದ್ದರು. ತಾವು ತಪ್ಪಿತಸ್ಥರಲ್ಲ ಎಂದು ಹೇಳಿದ್ದ ಅವರು ಸುಪ್ರೀಂ ಕೋರ್ಟ್‌ಗೆ ತಮ್ಮ ಶಿಕ್ಷೆಯನ್ನು ತಡೆಯುವಂತೆ ಒತ್ತಾಯಿಸಿದ್ದರು.</p>
]]></content:encoded>
					
		
		
			</item>
		<item>
		<title>&#8216;ಮೋದಿ ಸರ್ ನೇಮ್&#8217; ವಿವಾದ ; ಸು.ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ</title>
		<link>https://peepalmedia.com/modi-sir-name-controversy-rahul-gandhi-ascended-the-supreme-court/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 15 Jul 2023 13:31:16 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Modhi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[state politics]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=23768</guid>

					<description><![CDATA[&#8216;ಮೋದಿ ಸರ್ ನೇಮ್&#8217; ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮರುಪರಿಶೀಲನಾ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದ ನಂತರ, ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿಯವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. 2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ಮಾಡಿದ ಭಾಷಣವೊಂದು ರಾಹುಲ್ ಗಾಂಧಿಯವರ ಸದಸ್ಯತ್ವ ಅನರ್ಹಗೊಳ್ಳುವ ಮಟ್ಟಕ್ಕೆ ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಅಂದು &#8216;.. ಕಳ್ಳರೆಲ್ಲರಿಗೂ ಮೋದಿ ಉಪಾನಾಮ ಏಕೆ ಇರುತ್ತದೆ..&#8217; ಎಂದು ರಾಹುಲ್ ಗಾಂಧಿಯವರು ಪ್ರಶ್ನಿಸಿದ್ದರು. ಸಧ್ಯ ಈಗ ಇದೇ ಒಂದು [&#8230;]]]></description>
										<content:encoded><![CDATA[
<p>&#8216;ಮೋದಿ ಸರ್ ನೇಮ್&#8217; ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮರುಪರಿಶೀಲನಾ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾ ಮಾಡಿದ ನಂತರ, ಗುಜರಾತ್ ಹೈಕೋರ್ಟ್ ತೀರ್ಪಿನ ವಿರುದ್ಧ ರಾಹುಲ್ ಗಾಂಧಿಯವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.</p>



<p>2019 ರಲ್ಲಿ ಕರ್ನಾಟಕದ ಕೋಲಾರದಲ್ಲಿ ಮಾಡಿದ ಭಾಷಣವೊಂದು ರಾಹುಲ್ ಗಾಂಧಿಯವರ ಸದಸ್ಯತ್ವ ಅನರ್ಹಗೊಳ್ಳುವ ಮಟ್ಟಕ್ಕೆ ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಅಂದು &#8216;.. ಕಳ್ಳರೆಲ್ಲರಿಗೂ ಮೋದಿ ಉಪಾನಾಮ ಏಕೆ ಇರುತ್ತದೆ..&#8217; ಎಂದು ರಾಹುಲ್ ಗಾಂಧಿಯವರು ಪ್ರಶ್ನಿಸಿದ್ದರು. ಸಧ್ಯ ಈಗ ಇದೇ ಒಂದು ಅಂಶ ರಾಹುಲ್ ಗಾಂಧಿಯವರಿಗೆ ದೊಡ್ಡ ಮುಳುವಾಗಿ ಪರಿಣಮಿಸಿದೆ.</p>



<p>ಇದರಿಂದ ಮೋದಿ ಉಪನಾಮ ಹೊಂದಿರುವ ಎಲ್ಲರಿಗೂ ಅಪಮಾನ ಮಾಡಿದಂತಾಗಿದೆ ಎಂದು ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರ ಬೆನ್ನಲ್ಲೇ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಕೂಡಾ ರದ್ದು ಮಾಡಲಾಗಿತ್ತು. ಹಾಗೆಯೇ ಸೂರತ್ ಕೋರ್ಟ್, ರಾಹುಲ್ ಗಾಂಧಿಯವರನ್ನು ತಪ್ಪಿತಸ್ಥ ಎಂದು ಘೋಷಣೆ ಮಾಡಿತ್ತು. ಹಾಗೂ 2 ವರ್ಷಗಳ ಸಜೆಯ ಶಿಕ್ಷೆ ಕೂಡಾ ವಿಧಿಸಿತ್ತು.</p>



<p>ನಂತರ ಗುಜರಾತ್ ಹೈಕೋರ್ಟ್ ಗೆ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟ್ ಕೂಡಾ ರಾಹುಲ್ ಗಾಂಧಿಯವರ ಮೇಲ್ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ನಿರೀಕ್ಷಿತವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ</p>



<p>ಈ ಪ್ರಕರಣದಲ್ಲಿ ರಾಹುಲ್ ಗಾಂಧಿಯವರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ, ಅವರ ಪರವಾಗಿ ಎಸ್.ಪ್ರಸನ್ನ ಅವರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
