<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>modi government &#8211; Peepal Media</title>
	<atom:link href="https://peepalmedia.com/tag/modi-government/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 16 Aug 2024 11:51:43 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>modi government &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಮೋ ಮಂತ್ರ ಜಪಿಸಲು ವಿಸ್ಮೃತಿ ಈರಾಣಿ ಜಾಗಕ್ಕೆ ಟಾವೆಲ್‌ ಹಾಕಿದ ಮಂಗನಾ ಶೇಫೌಟ್‌ (ರಾಜಕೀಯ ವಿಡಂಬನೆ)</title>
		<link>https://peepalmedia.com/mangana-shafout-political-satire-puts-a-towel-in-the-space-of-bismriti-irani-to-chant-namo-mantra/</link>
		
		<dc:creator><![CDATA[Peepal Media]]></dc:creator>
		<pubDate>Fri, 16 Aug 2024 07:14:32 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[goswami]]></category>
		<category><![CDATA[india]]></category>
		<category><![CDATA[kangana]]></category>
		<category><![CDATA[Kangana Ranauth]]></category>
		<category><![CDATA[kanganaranaut]]></category>
		<category><![CDATA[karnataka]]></category>
		<category><![CDATA[modí]]></category>
		<category><![CDATA[modi government]]></category>
		<category><![CDATA[modi modi birthday]]></category>
		<category><![CDATA[modi photos]]></category>
		<category><![CDATA[MODI VISIT GUJARATH]]></category>
		<category><![CDATA[modiji]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RSS]]></category>
		<category><![CDATA[smartiirani]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43924</guid>

					<description><![CDATA[*ಚಂದ್ರಪ್ರಭ ಕಠಾರಿ ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಶನದ ಅಂಗವಾಗಿ ʼಹಾರರ್ ನ್ಯೂಸ್ʼ ಟಿವೀ ಚಾನೆಲ್ಲಿನ ಮುಖ್ಯ&#160; ಸಂಪಾದಕ ಬಕೆಟ್ ಗೋಸ್ವಾಮಿ ಕುಳಿತ ಕುರ್ಚಿಯಲ್ಲೇ ಬ್ರೇಕ್ ಡ್ಯಾನ್ಸ್ ಮಾಡಲು ಸ್ಟುಡಿಯೊದಲ್ಲಿ ಕೈಕಾಲುಗಳನ್ನು ಗಾಳಿಯಲ್ಲಿ ಜಾಡಿಸುತ್ತ ತಾಲೀಮು ನಡೆಸಿದ್ದ. ಆದರೆ, ಎಷ್ಟು ಹೊತ್ತಾದರೂ ಮೇಕಪ್ ರೂಮಿನಿಂದ ಹೊರಬರದ ನಮೋ ಆಸ್ಥಾನದ ಹೊಸ ಮಂತ್ರಿ, ನಟಿಮಣಿ ಮಂಗನಾ ಶೇಪೌಟ್ ಹೊರಬರದಿದ್ದಾಗ ಕುಳಿತ ಚೇರಿಗೆ ಅಂಟಿಸಿದ್ದ ಮುಳ್ಳುಗಳು ಚುಚ್ಚಿ, ಕೂರಲು ಆಗದೆ ಡ್ಯಾನ್ಸ್ ಆರಂಭಿಸುವಂತಾಗಿತ್ತು. ಬಾಲಿವುಡ್ಡಿನಲ್ಲಿ ನಟಿಸುತ್ತಲೇ, ಶೂಟಿಂಗ್ ನಡುವೆ ವಿರಾಮ ಸಿಕ್ಕಾಗೆಲ್ಲ [&#8230;]]]></description>
										<content:encoded><![CDATA[
<p>*<strong>ಚಂದ್ರಪ್ರಭ ಕಠಾರಿ</strong></p>



<h4 class="wp-block-heading">ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಶನದ ಅಂಗವಾಗಿ ʼಹಾರರ್ ನ್ಯೂಸ್ʼ ಟಿವೀ ಚಾನೆಲ್ಲಿನ ಮುಖ್ಯ&nbsp; ಸಂಪಾದಕ ಬಕೆಟ್ ಗೋಸ್ವಾಮಿ ಕುಳಿತ ಕುರ್ಚಿಯಲ್ಲೇ ಬ್ರೇಕ್ ಡ್ಯಾನ್ಸ್ ಮಾಡಲು ಸ್ಟುಡಿಯೊದಲ್ಲಿ ಕೈಕಾಲುಗಳನ್ನು ಗಾಳಿಯಲ್ಲಿ ಜಾಡಿಸುತ್ತ ತಾಲೀಮು ನಡೆಸಿದ್ದ. ಆದರೆ, ಎಷ್ಟು ಹೊತ್ತಾದರೂ ಮೇಕಪ್ ರೂಮಿನಿಂದ ಹೊರಬರದ ನಮೋ ಆಸ್ಥಾನದ ಹೊಸ ಮಂತ್ರಿ, ನಟಿಮಣಿ ಮಂಗನಾ ಶೇಪೌಟ್ ಹೊರಬರದಿದ್ದಾಗ ಕುಳಿತ ಚೇರಿಗೆ ಅಂಟಿಸಿದ್ದ ಮುಳ್ಳುಗಳು ಚುಚ್ಚಿ, ಕೂರಲು ಆಗದೆ ಡ್ಯಾನ್ಸ್ ಆರಂಭಿಸುವಂತಾಗಿತ್ತು.</h4>



<h4 class="wp-block-heading">ಬಾಲಿವುಡ್ಡಿನಲ್ಲಿ ನಟಿಸುತ್ತಲೇ, ಶೂಟಿಂಗ್ ನಡುವೆ ವಿರಾಮ ಸಿಕ್ಕಾಗೆಲ್ಲ ಜಪಸರ ಹಿಡಿದು ʼನಮೋ…ನಮೋ…ನಮೋʼ ಎಂದು ಜಪಿಸುತ್ತ ಸಾಮ್ರಾಟನ ಅಖಂಡಭಕ್ತಳಾಗಿದ್ದ ಮಂಗನಾಳಿಗೆ ಮಂತ್ರಿಗಿರಿ ಸಿಕ್ಕಿದ್ದು ಬರೀ ಭಜನೆಯಿಂದಲ್ಲ. ಅದಕ್ಕೆ ಹರುಕುಬಾಯಿಯಲ್ಲಿ ಅವಳ ಹಿರಿಯಕ್ಕನಂತಿದ್ದ ಮಾಜಿಮಂತ್ರಿ ವಿಸ್ಮೃತಿ ಈರಾಣಿಯೂ ಕಾರಣ.</h4>



<p>ಸಿಲಿಂಡರ್ ರಾಣಿ ಎಂದೇ ಕುಖ್ಯಾತಿಯಾಗಿದ್ದ ವಿಸ್ಮೃತಿ ಈರಾಣಿ ಜನಾದೇಶದಲ್ಲಿ ಸೋತು, ಸಾಮ್ರಾಟ ನಮೋ ವಿರೋಧಿಗಳ ಎಲೆಅಡಿಕೆ ತಾಂಬೂಲಕ್ಕೆ ಸುಣ್ಣವಾಗಿದ್ದು ಈಗ ಇತಿಹಾಸ. ಭಾರೀ ಬಹುಮತದಲ್ಲಿ ಗೆಲ್ಲುತ್ತೇನೆಂದು ದೆವ್ವ ಮೆಟ್ಟಿದವಳಂತೆ ಕುಣಿಯುತ್ತಿದ್ದವಳಿಗೆ ಜನರು ಗಂಜಲ ಎರಚಿ ಎಚ್ಚರಿಸಿ, ಮುಖಕ್ಕೆ ಮಂಗಳಾರತಿ ಎತ್ತಿ ʼಗಂಟೆಮೂಟೆ ಕಟ್ಟಿ ಹೊರಡುʼ ಎಂದದ್ದು ಈರಾಣಿಗೆ ಕನಸಿನಲ್ಲಿಯೂ ಎಣಿಸದ ಸಂಗತಿಯಾಗಿತ್ತು. ಅವಳೇನೊ ರಾತ್ರೋರಾತ್ರಿ ಸೋಲಿನ&nbsp; ಅಪಮಾನದಿಂದ ಸೆರಗಲ್ಲಿ ಮುಖ ಮುಚ್ಚಿ, ʼಹೋಂ ಸ್ವೀಟ್ ಹೋಂʼ ಎಂದು ಮನೆದಾರಿ ಹಿಡಿದಿದ್ದಳು. ಆದರೆ &#8211; ಸಾಮ್ರಾಟ ನಮೋನನ್ನು ಹೊಗಳಿ ಅಟ್ಟಕ್ಕೇರಿಸಲು, ವಿರೋಧಿಗಳನ್ನು ಮಣಿಸಲು ಬಾಯಿ ಬಡಿದುಕೊಳ್ಳುವ ನಾರಿಮಣಿಗಳೇ ಕಮಲಪಕ್ಷದಲ್ಲಿ ಇಲ್ಲವಾಗಿ ಪರಿಸ್ಥಿತಿ ದಯನೀಯವಾಗಿತ್ತು.</p>



<p>ಹರುಕು ಬಾಯಿಯ ಸ್ಥಾನ ಖಾಲಿ ಬಿಡಬಾರದೆಂದು ವಿಧಿ ಇಲ್ಲದೆ, ಡಾಬರ್ ಮನ್ ತಳಿ ಅಲ್ಲದ ಪೊಮೆರಿಯನ್ ಜಾತಿಯ ಮಂಗನಾ ಶೇಪೌಟ್ ಳನ್ನು ಬೊಗಳೊ ಮಂತ್ರಿಯನ್ನಾಗಿ ನೇಮಕ ಮಾಡಲಾಯಿತು. ಕೆಸರು ಮೆತ್ತಿಕೊಂಡ ಕೆಲ ಕಮಲೀಗಳು ಇದ್ದರಾದರೂ ಮಂಗನಾಳನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಅವಳ ಬೇವ್ಕೂಫಿತನ. ಕಿರಿಗಂಟಲಿನಿಂದ ಹೊರಡುವ ಅಸಂಬದ್ಧ ಪ್ರಲಾಪಗಳಿಗೆ ಡಾಲ್ಬಿ ಸೌಂಡ್ ಎಫೆಕ್ಟ್ ಇರದಿದ್ದರೂ, ಬಳಸುವ ಪದಗಳ ಗುರುತ್ವ ಅಗಾಧವಾಗಿದ್ದು ಅಟ್ಮೊಸ್ ಸೌಂಡಿಗೆ ಸರಿಸಮವಾಗಿತ್ತು.&nbsp;</p>



<p>ಕೊನೆಗೂ ಸ್ಟುಡಿಯೊಗೆ ಹಂಸದಂತೆ ಬಳುಕುತ್ತ ಮಂಗನಾಳು ಬಂದಾಗ, ʼಆಕಾಶದಿಂದ ಧರೆಗಿಳಿದ ಗೊಂಬೆ…ಇವಳೇ…ಇವಳೇ ಚಂದನದ ಗೊಂಬೆʼ ಎಂಬ ಹಾಡು ಬಕೆಟ್ ಗೋಸ್ವಾಮಿಯ ಕಿವಿಯಲ್ಲಿ ಮಾರ್ದನಿಸಿ ಮೈಯಲ್ಲಿ ಕರೆಂಟ್ ಪಾಸಾಯಿತು.&nbsp;</p>



<p>ಬಕೆಟ್ ಸ್ವಾಮಿ: ಪ್ಲೀಸ್…ಟೇಕ್ ಯುರ್ ಸೀಟ್…</p>



<p>ಮಂಗನಾ: ಧನ್ಯವಾದ್…ಬಕೆಟ್ ಜೀ.</p>



<p>ಬಕೆಟ್ ಸ್ವಾಮಿ: ಇಂಟರ್ ವ್ಯೂ…ಶುರುಮಾಡೋಕೆ ಮುಂಚೆ ಒಂದು ಪ್ರಶ್ನೆ. ಆಫ್ ದ ರೆಕಾರ್ಡ್&#8230;ಅದೇನು ನಿಮ್ಮ ಹೆಸ್ರು…ಮಂಗ…ಸಾರಿ…ಮಂಗನಾ…ಶೇಪೌಟ್ ಅಂತ ಬೇರೆ ಸೇರಿಸ್ಕೊಂಡಿದ್ದೀರ?</p>



<p>ಮಂಗನಾ: (ಮಲ್ಲಿಗೆಯ ನಗೆ ಚೆಲ್ಲುತ್ತ) ಅದು…ನಮ್ಮನೇಲಿ ಇಟ್ಟ ಹೆಸ್ರು….ನಂದು ಕೋತಿ ಬುದ್ದಿ ಅಂತ… ಶೇಪೌಟ್ ಅಂದರೆ ನನ್ನ ಶೇಪು…ಔಟ್ ಟು ದಿ ಸ್ಟಾಂಡಿಂಗ್ ಅಂತ.</p>



<p>ಬಕೆಟ್ ಸ್ವಾಮಿ: (ಅಣಕಿಸುವಂತೆ) ಸೊ ವಿಯರ್ಡ್&#8230;!</p>



<p>ಮಂಗನಾ: (ಕೋಪಗೊಂಡು) ನಿಮ್ ಹೆಸ್ರು…ಭಾರೀ ಚೆಂದಾನ…ಬಕೆಟ್ ಅಂತೆ…ಪ್ಲಾಸ್ಟಿಕ್ದಾ ಅಥ್ವಾ ಐರನ್ದಾ?</p>



<p>ಬಕೆಟ್ ಸ್ವಾಮಿ: (ದೇಶಾವರಿ ನಗೆ) ಎರಡು ಅಲ್ಲ…ಅದು ತಾಮ್ರದ್ದು… ನಮೋ ಸಾಹೇಬರಿಗೆ ಹೆಚ್ಚು ಬಕೆಟ್ ಹಿಡಿಯೋದು ನಾನೇ! ʼಬಕೆಟ್ ಸ್ವಾಮಿʼ ಅವರೇ ಕೊಟ್ಟ ಬಿರುದು. ಇರಲಿ…ಇಂಟರ್ ವ್ಯೂ ಶುರು ಮಾಡೋಣ್ವ?</p>



<p>ಹಿಂಬದಿಯ ಎಲ್ಇ‌ಡಿಯ ದೊಡ್ಡ ಪರದೆಯಲ್ಲಿ “ಸಾಮ್ರಾಟ್ ನಮೋ ಅಮರ್ ಹೈ…ವಿಶ್ವಗುರು ಜಿಂದಾಬಾದ್…ಫೇಕ್ ಫಕೀರನಿಗೆ ಜಯವಾಗಲಿ” ಎಂದು ಬೃಹತ್ತಾದ ಸ್ಟೇಡಿಯಮ್ ನಲ್ಲಿ ಗುಡ್ಡೆ ಹಾಕಿದ್ದ ಸಾವಿರಾರು ಭಕ್ತಗಣಗಳು ಜೈಕಾರ ಹಾಕುತ್ತಿರುವ ದೃಶ್ಯಾವಳಿಯು ಬಿತ್ತರಿಸಲಿತ್ತು.&nbsp;</p>



<p>ಬಕೆಟ್ ಸ್ವಾಮಿ: ಹಾರರ್ ನ್ಯೂಸ್ ಚಾನೆಲ್ಲಿನ ಸಮಸ್ತ ಭಕ್ತ ವೀಕ್ಷಕರಿಗೆ ಎಪ್ಪತ್ತೆಂಟನೇ ಸ್ವಾತಂತ್ರೋತ್ಸದ ಶುಭಾಶಯಗಳು. ಇವತ್ತಿನ ನಮ್ಮ ವಿಶೇಷ ಸಂದರ್ಶನದಲ್ಲಿ ನಿಮ್ಮೆಲ್ಲರ ಮತ್ತು ಸಾಮ್ರಾಟರ ಮೆಚ್ಚಿನ ಮಂಗನಾ ಶೇಪೌಟ್….</p>



<p>ಮಂಗನಾ: ಸಾರಿ…ಒಂದ್ ಸೆಕೆಂಡ್…ಇದು ದೇಶದ ಹತ್ತನೇ ಸ್ವಾತಂತ್ರೋತ್ಸವ…</p>



<p>ಬಕೆಟ್ ಸ್ವಾಮಿ: ಮರೆತಿದ್ದೆ…ಥ್ಯಾಂಕ್ಸ್…ನಮೋ ಸಾಹೇಬರು ಕೊಟ್ಟ ಹತ್ತನೇ ದ್ವಿತೀಯ ಸ್ವಾತಂತ್ರೋತ್ಸದ ಶುಭಾಶಯಗಳು.</p>



<p>ಮಂಗನಾ: ಹೌದು…ದೇವಾಂಶ ಸಂಭೂತ ನಮೋರು ಅವತರಿಸದಿದ್ದರೆ ನಾವೆಲ್ಲ ಗುಲಾಮರಾಗಿ ಬಾಳ ಬೇಕಾಗಿತ್ತು. ಹೊಟ್ಟೆಗೆ ಪಿಜ್ಜಾ, ಬರ್ಗರ್ ಇಲ್ಲದೆ…ತೊಡಲು ಮೇಡಮ್, ಬಿಬಾ, ಜಾರ ಕ್ಲೋತಿಂಗ್ ಇಲ್ಲದೇ…ಮ್ಯಾನ್ ಷನ್ ಇಲ್ಲದೆ ಜೋಪಡಿಯಲ್ಲಿ ಅನಾಥರಂತೆ ಇರಬೇಕಿತ್ತು.</p>



<p>ಬಕೆಟ್ ಸ್ವಾಮಿ: ಯೆಸೆಸ್…ಮಂಗನಾ ಅವರೇ…ಎಂದಿನಿಂದ ನಿಮಗೆ ನಮೋ ದೇವರು ಮತ್ತು ಹೇಗೆ ಸ್ಪೂರ್ತಿ?</p>



<p>ಮಂಗನಾ: ಅದೊಂದು ಬ್ಯೂಟಿಫುಲ್ ಎಕ್ಸ್ ಪಿರೀಯನ್ಸ್…ಒಂದಾದ ಮೇಲೊಂದರಂತೆ ನನ್ನ ಸಿನಿಮಾಗಳು ತೋಪೆದ್ದು ಮಕಾಡೆ ಮಲಗುತ್ತಿದ್ದಾಗ,&nbsp; ಕಾಲ್ ಶೀಟ್ ಕೇಳೋರು ಗತಿ ಇಲ್ಲದೆ ಏನು ಮಾಡುವುದೆಂದು ತೋಚದೆ ಡಿಪ್ರೆಶನ್ನಿಗೆ ಹೋಗಿದ್ದೆ. ಒಂದು ರಾತ್ರಿ ಮಲಗಿದ್ದಾಗ “ಮಂಗಾ! ಎದ್ದೇಳು ನಿನ್ನ ಕಷ್ಟಗಳು ಮಾಯವಾಗುವ ದಿನಗಳು ಹತ್ತಿರದಲ್ಲಿದೆ” ಎಂದು ಯಾರೋ ಕೂಗಿದ ಹಾಗಾಯ್ತು. ಭಯದಿಂದ ಎದ್ದರೆ, ನಮೋ ಭಗವಾನರು ಸಾಕ್ಷಾತ್ ವಿಷ್ಣುವಿನ ಹನ್ನೊಂದನೇ ಅವತಾರದಲ್ಲಿ ಗಡ್ಡ ನೀವುತ್ತ ನಿಂತಿದ್ದರು.</p>



<p>ಬಕೆಟ್ ಸ್ವಾಮಿ: (ಸ್ವಗತ &#8211; ನಾನೇ ರೀಲ್ ಮಾಸ್ಟರ್ ಅಂದ್ರೆ ಇವ್ಳು ನನ್ನೇ ಮೀರಿಸ್ತಾಳೆ…ಏನ್ ಸೂಪರ್ ಆಕ್ಟಿಂಗ್!)</p>



<p>ಖಂಡಿತ…ಅವರು ದೇಶವನ್ನು ಕಾಪಾಡಲು ಬಂದ ಅವತಾರ ಪುರುಷ. ಅವರ ಮಾತಲ್ಲೇ ಹೇಳೋದಾದರೆ…ಕೋಟ್…ನಾನು, ನನ್ನ ಅಮ್ಮನ ಹೊಟ್ಟೇಲಿ ಹುಟ್ಟಿಲ್ಲ. ನಾನು, ನಾನ್ ಬಯೊಲಾಜಿಕಲ್ ಬಾರ್ನ್…ನನ್ನನ್ನು ಈ ಭೂಮಿಗೆ ಆಕಾಶದಿಂದ ದೇವರೇ ಸೀದಾ ಉದುರಿಸಿದ್ದು….ಅನ್ ಕೋಟ್…ಇಂಟೆರೆಸ್ಟಿಂಗ್…ಆಮೇಲೆ…</p>



<p>ಮಂಗನಾ: ಆವತ್ತಿನಿಂದ ಅವರನ್ನು ಜಪಮಾಲೇಲಿ ಸ್ತುತಿಸುತ್ತ ಭಕ್ತಿಯ ಸಾಗರದಲ್ಲಿ ಜಂಪ್ ಮಾಡಿ…&nbsp;&nbsp;&nbsp;&nbsp;&nbsp;&nbsp;&nbsp;&nbsp; ವೇವ್ಸ್ ಗಳಲ್ಲಿ ಮುಳುಗಿ ಏಳುತ್ತಿದ್ದೇನೆ…ಓಂ ನಮೋ ( ಕಣ್ಮುಚ್ಚಿ, ಕೆನ್ನೆ ಬಡಿದುಕೊಂಡು ವಂದಿಸಿದಳು)</p>



<p>ಬಕೆಟ್ ಸ್ವಾಮಿ: ಹೌದೌದು…ನನಗೂ ಆಗಾಗ ಖುದ್ದಾಗಿ ಬಂದು ಪೆಡಿಗ್ರೆ ಬಿಸ್ಕತ್ ಹಾಕಿ ಹೋಗ್ತಾರೆ. ಅದಿರಲಿ…ನೀವು ಬಾಲಿವುಡ್ಡು…ಹಾಲಿವುಡ್ಡು…ಟಾಲಿವುಡ್ಡು…ಅಂತ ಎಷ್ಟೊಂದು ವುಡ್ಡುಗಳಲ್ಲಿ ಆಕ್ಟಿಂಗ್ ಮಾಡ್ತಾ ಫೇಮಸ್ ಆಗಿದ್ದೀರಿ…</p>



<p>ಮಂಗನಾ: ವೇಟ್…ಸಧ್ಯಕ್ಕೆ ಬಚ್ಚನ್, ಖಾನ್ ಗಳಿಗಿಂತ ನಾನೇ ಮುಂದು…ನಂಬರ್ ಒನ್ ಆಕ್ಟರ್…</p>



<p>ಬಕೆಟ್ ಸ್ವಾಮಿ: ಓಹ್&#8230;ಅಮೇಜಿಂಗ್…ನನ್ನ ಪ್ರಶ್ನೆಯ ಎರಡನೇ ಭಾಗ…ನಮೋ ಭಗವಾನರು ನಿಮಗೆ ಹೇಗೆ ಸ್ಪೂರ್ತಿ? ಆ ಬಗ್ಗೆ ಹೇಳಿ.</p>



<p>ಮಂಗನಾ: ಓಹ್&#8230;ಆ ಬಗ್ಗೆ ಏನ್ ಹೇಳೋದು…ಅವರು ಫೆಂಟಾಸ್ಟಿಕ್, ಹಾರಿಬಲ್, ವೆರ್ಸಟೈಲ್ ಆಕ್ಟರ್&#8230;ಅವರನ್ನು ಮೀರಿಸೋರು ಜಗತ್ತಲ್ಲೇ ಯಾರೂ ಇಲ್ಲ…ಮುಂದೆ ಹುಟ್ಟೋದು ಇಲ್ಲ. ಮಹಾನ್ ನಟ. ಅವರ ಮುಂದೆ ನಂದು ಯಾವ ಆಕ್ಟಿಂಗ್! ಅವರ ಡ್ರೆಸ್ ಸೆನ್ಸ್…ಮ್ಯಾನರಿಸಮ್…ವಾಯ್ಸ್ ಮಾಡುಲೇಷನ್&#8230;ಅಬ್ಬಾ…ನಟ ಭಯಂಕರ…ಅವರಿಂದ ಕಲಿಯೋದು ಬಹಳಷ್ಟಿದೆ. ಅವರನ್ನು ನೋಡಿ ಚೂರುಪಾರು ಕಲೀತಿದ್ದೇನೆ.</p>



<p>ಬಕೆಟ್ ಸ್ವಾಮಿ: ಮತ್ತೆ…ನಮೋ ಅವರಿಗೆ ಆಸ್ಕರ್ ಅವಾರ್ಡ್&nbsp; ಯಾಕೆ ಇನ್ನು ಸಿಕ್ಕಿಲ್ಲ?</p>



<p>ಮಂಗನಾ: ಓ…ಆಸ್ಕರ್ ಗೆ ನಿಜಕ್ಕೂ ಆ ಯೋಗ್ಯತೆ ಇದ್ಯಾ? ನಮೋ ಅವರಿಗೆ ಕೊಡುವಂಥ ಅವಾರ್ಡ್ ಗಳು ಭೂಮಿ ಮೇಲೆ ಯಾವುದು ಇಲ್ಲ. ಮಂಗಳ ಅಥವಾ ಶನಿಗ್ರಹದಲ್ಲಿ ಹುಡುಕಬೇಕು.</p>



<p>ಬಕೆಟ್ ಸ್ವಾಮಿ: (ಮಾತಾಡುತ್ತ ತನ್ನ ಆಕ್ಟಿಂಗ್ ಮಿಸ್ ಆಗುತ್ತಿರುವುದು ನೆನಪಿಗೆ ಬಂದು, ತಲೆಕೊಡವಿ, ಜೋರಾಗಿ ಮೇಜು ಕುಟ್ಟುತ್ತ) ಮಂಗನಾ ಮೇಡಮ್…ಹಾಗಾದರೆ, ದೇಶದ ಜನರಿಗೋಸ್ಕರ ಜನ್ಮ ತಾಳಿದವನಿಗೆ ವಿರೋಧಿಗಳು ಯಾಕಿದ್ದಾರೆ? ಅವರೆಲ್ಲ ಫೇಕು, ಜುಮ್ಲಾ, ಕಿಂಗ್ ಆಫ್ ಕರಪ್ಷನ್, ಬಾಯಿಹರುಕ ಅಂತೆಲ್ಲಾ ಏಕೆ ಟನ್ ಗಟ್ಟಲೆ ಬೈಯ್ತಿದ್ದಾರೆ?</p>



<p>ಮಂಗನಾ: ಅವರೆಲ್ಲ ದುಷ್ಟರು…ದೇಶದ್ರೋಹಿಗಳು…ನಮೋಬಾಬಾರು ಬಂದ ಮೇಲೆ ದೇಶದಲ್ಲಿ ಬಡತನ ಮಾಯವಾಗಿದೆ. ಆದರೂ ತಿಂಗಳಿಗೆ ಪುಕ್ಕಟೆ ಸಿಗುವ ಐದು ಕೇಜಿ ಅಕ್ಕಿ ತಿಂದು ವಿಷ ಕಾರುತ್ತಿದ್ದಾರೆ… ಬೆಗ್ಗರ್ಸ್…ಹತ್ತುವರ್ಷಗಳ ಹಿಂದೆ&nbsp; ಭಿಕಾರಿಗಳ ದೇಶ ಎಂದು ಮುಖ ತಿರುಗಿಸುತ್ತಿದ್ದ ಫಾರಿನರ್ಸ್ ಗಳು…ಈಗ ನಮ್ಮ ದೇಶದತ್ತ ಎಗರಿ ಎಗರಿ ನೋಡುತ್ತಿದ್ದಾರೆ.</p>



<p>ಬಕೆಟ್ ಸ್ವಾಮಿ: ಹೌದು…ಹಾಗೆ ನಮೋರ ಬೆಸ್ಟ್ ಫ್ರೆಂಡ್ಸ್ ಗಳಾದ ಅಂದಾನಿ, ತುಂಬಾನಿಯರಂಥ ಮಹನೀಯರನ್ನು ಬಿಡುತ್ತಿಲ್ಲ. ಅವರ ಬಾಯಿಗೆ ನಮೋ ದೇಶವನ್ನು ತುರುಕುತ್ತಿದ್ದಾನೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂಡನ್ ಬರ್ಗ್ ರಿಪೋರ್ಟ್ ಅಂತೆಲ್ಲ ಕೂಗಾಡುತ್ತಿದ್ದಾರೆ.</p>



<p>ಮಂಗನಾ: ಅಂದಾನಿ ಅಂಕಲ್, ತುಂಬಾನಿ ಅಂಕಲ್ ಗಳು ಇಲ್ಲದಿದ್ದರೆ ಈ ದೇಶವೇ ಇರುತ್ತಿರಲಿಲ್ಲ. ಕೆಲಸವಿಲ್ಲದೆ ಯಂಗ್ ಸ್ಟರ್ ಗಳು ತಿರುಪೆ ಎತ್ತಬೇಕಿತ್ತು. A1 A2 ಅಂಕಲ್ ಗಳಿಂದ ವಿಶ್ವದಲ್ಲೇ ನಮ್ಮ ದೇಶ ಆರ್ಥಿಕತೆಯಲ್ಲಿ ನಂಬರ್ ಒನ್ ರ್ಯಾಂಕ್ ಲ್ಲಿದೆ.</p>



<p>ಬಕೆಟ್ ಸ್ವಾಮಿ: ಮತ್ತೆ ಈ ರಾಗಾ…ನ್ಯಾಯ…ನ್ಯಾಯ ಅಂತ ರಾಗ ತೆಗೀತ್ತಿದ್ದಾನೆ. ಜಾತಿ ಜನಗಣತಿ ಮಾಡಿದ್ರೆ ಮಾತ್ರ ದೇಶೋದ್ಧಾರ ಆಗೋದು ಅಂತಿದ್ದಾನೆ. ಆ ಬಗ್ಗೆ ಬೊಗಳೆ ಮಂತ್ರಿಯಾಗಿ ನಿಮ್ಮ ಒಪಿನಿಯನ್ ಏನು?</p>



<p>ಮಂಗನಾ: ಅಯ್ಯೋ…ರಾಗಾ ಒಬ್ಬ ಶತದಡ್ಡ. ಕಳೆದ ಹತ್ತು ವರ್ಷದಲ್ಲಿ ಸನಾತನ ಬಿಟ್ಟು ಉಳಿದ ಜಾತಿಗಳನ್ನೆಲ್ಲ ನಮೋಬಾಬಾರು ಖತಮ್ ಮಾಡಿದ್ದಾರೆ. ದೇಶದಲ್ಲಿ ಈಗ ಜಾತಿ ಎಲ್ಲಿದೆ? ಮಹಿಳೆ, ಯುವ, ಬಡವರು ಮತ್ತು ರೈತರು – ಇವಿಷ್ಟೇ ಮಾತ್ರ ಜಾತಿಗಳು ಅಂತ ನಮೋಬಾಬಾರೇ ಹೇಳಿಲ್ವೇ?</p>



<p>ಬಕೆಟ್ ಸ್ವಾಮಿ: ಹೌದೌದು…ಕೊನೆಯಲ್ಲಿ ನಮ್ಮ ಭಕ್ತ ವೀಕ್ಷಕರಿಗೆ ಮತ್ತು ದೇಶಕ್ಕೆ ಹತ್ತನೇ ಸ್ವತಂತ್ರ ದಿನಾಚರಣೆಯ ದಿನ ನಿಮ್ಮ ಸಂದೇಶವೇನು?</p>



<p>ಮಂಗನಾ: ನಾನು ಹೇಳೋದಿಷ್ಟು…ತಮ್ಮ ತಪಶ್ಯಕ್ತಿಯಿಂದ ನಮೋ ಭಗವಾನ್ ದೇಶವನ್ನು ಮುಂದಕ್ಕೆ ತಳ್ಳುತ್ತಿದ್ದಾರೆ. ದೇಶವಾಸಿಗಳೆಲ್ಲ ನಮೋ ಭಜನೆ ಮಾಡುತ್ತ, ತಮ್ಮ ಕೈಲಿ ಆದಷ್ಟು ದೇಶವನ್ನು ಮುಂದೆ ತಳ್ಳಬೇಕು. ಅದು ಬಿಟ್ಟು, ನಮೋ ಅವರ ಪೈಜಾಮ ಎಳೆದು ದೇಶದ್ರೋಹಿಗಳಾಗ ಬಾರದು. ಹ…ಮರೆತಿದ್ದೆ. ಮುಂದಿನ ತಿಂಗಳು ನನ್ನ ಹೊಸ ಸಿನಿಮಾ ʼಆಪತ್ಕಾಲ್ʼ ರಿಲೀಸ್ ಆಗ್ತಿದೆ. ಮನೆಮಠ ಎಲ್ಲಾ ಮಾರಿ ಸಿನಿಮಾ ಮಾಡಿದ್ದೇನೆ. ಎಲ್ರೂ ಸಿನಿಮಾ ನೋಡಿ ದೇಶ ಸೇವೆ ಮಾಡ್ಬೇಕು. ʼಮತ್ತೆ ಸಿನಿಮಾ ತೋಪಾದ್ರೆ ಕೈಗೆ ತೆಂಗಿನ ಕರಟ ಗ್ಯಾರಂಟಿ!ʼ ಎಂಬ ಮಂಗನಾಳ ಸ್ವಗತದ ಮಾತುಗಳು &#8211;&nbsp; ಲೈಟುಗಳು ನಂದಿ, ಸ್ಟುಡಿಯೊದ ಕತ್ತಲಲ್ಲಿ ಕರಗಿ ಹೋದವು</p>
]]></content:encoded>
					
		
		
			</item>
		<item>
		<title>ಇಲ್ಲಿ ನಮ್ಮವರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನದಿಂದ ಕರೆತಂದು ಉದ್ಯೋಗ ಕೊಡುವುದು ಸರಿಯೇ?: CAA ಕುರಿತು ಕೇಜ್ರಿವಾಲ್‌ ಪ್ರತಿಕ್ರಿಯೆ</title>
		<link>https://peepalmedia.com/we-dont-have-jobs-here-is-it-right-to-bring-jobs-from-pakistan-kejriwals-response-on-caa/</link>
		
		<dc:creator><![CDATA[Peepal Media]]></dc:creator>
		<pubDate>Wed, 13 Mar 2024 12:01:59 +0000</pubDate>
				<category><![CDATA[ಚುನಾವಣೆ 2023- ಪರಿಣಾಮ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[ವ್ಯಾಪಾರ- ವಹಿವಾಟು]]></category>
		<category><![CDATA[Aam Aadmi Party]]></category>
		<category><![CDATA[AAP]]></category>
		<category><![CDATA[aravind kejrival]]></category>
		<category><![CDATA[BJP ADVERTISMENT]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[Bjp IT cell]]></category>
		<category><![CDATA[bjp karnataka]]></category>
		<category><![CDATA[BJP leader]]></category>
		<category><![CDATA[bjp narendra modi]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modi government]]></category>
		<category><![CDATA[modiji]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=36985</guid>

					<description><![CDATA[ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ. ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ [&#8230;]]]></description>
										<content:encoded><![CDATA[
<p>ನವದೆಹಲಿ: ಇಲ್ಲಿ ನಮ್ಮ ನಮ್ಮ ದೇಶದ ಯುವಜನರಿಗೆ ಉದ್ಯೋಗ ಇಲ್ಲ, ಪಾಕಿಸ್ತಾನ, ಅಪಘಾನಿಸ್ತಾನಗಳಿಂದ ಜನರನ್ನು ಕರೆತಂದು ಅವರಿಗೆ ಉದ್ಯೋಗ ಕೊಡುವುದು ಸರಿಯೇ ಎಂದು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.</p>



<p>ಸಿಎಎ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ ಈ ಮೂರು ದೇಶಗಳ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರು ಭಾರತೀಯ ಪೌರತ್ವ ಪಡೆಯಲು ಬಯಸಿದರೆ ಅಂಥವರಿಗೆ ಮಾತ್ರ ಸಿಎಎ ಕಾನೂನು ಅನ್ವಯ ಬಿಜೆಪಿಯ ಕೇಂದ್ರ ಸರ್ಕಾರ ಹೇಳುತ್ತದೆ. ಅಂದರೆ  ಹೆಚ್ಚಿನ ಸಂಖ್ಯೆಯ ಹಿಂದೂ ಅಲ್ಪಸಂಖ್ಯಾತರು ನಮ್ಮ ದೇಶಕ್ಕೆ ಬರುವಂತೆ ಮಾಡುತ್ತೇವೆ,  ಕರೆ ತರುತ್ತೇವೆ. ಅವರಿಗೆ ಉದ್ಯೋಗ ಕೊಡಿಸುತ್ತೇವೆ, ಮನೆ ಕಟ್ಟಿಸಿಕೊಡುತ್ತೇವೆ, ಇಲ್ಲೇ ನೆಲೆಸುವಂತೆ ಮಾಡುತ್ತೇವೆ ಅನ್ನುವುದು ವಿಚಿತ್ರ ಅಲ್ಲವೇ ಎಂದು ಪ್ರಶ್ನಿಸಿದರು.</p>



<p> ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರದ ಮೋದಿ ಸರ್ಕಾರಕ್ಕೆ ಯಾವ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಚುನಾವಣೆ ಸಂದರ್ಭದಲ್ಲಿ CAA ಜಾರಿಗೆ ಅಧಿಸೂಚನೆ ಹೊರಡಿಸಿದೆ. ಬಿಜೆಪಿ ಸರ್ಕಾರ ಏನಾದರು ಒಳ್ಳೆ ಕೆಲಸ ಮಾಡಿದ್ದರೆ ಇವತ್ತು CAA ಬದಲಾಗಿ ತಾವು ಮಾಡಿದ ಕೆಲಸ ತೋರಿಸಿ ಓಟು ಕೇಳಬಹುದ್ದೀತು ಎಂದರು.</p>



<p>ಹಣದುಬ್ಬರ ಮತ್ತು ನಿರುದ್ಯೋಗ ಇಂದು ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಾಗಿವೆ. ಮಧ್ಯಮವರ್ಗದ ಕುಟುಂಬಕ್ಕೂ ಇಂದು ಮನೆ ನಡೆಸುವುದು ಕಷ್ಟವಾಗುತ್ತಿದೆ. ಹಣದುಬ್ಬರ ಬೆನ್ನು ಮುರಿಯುತ್ತಿದೆ, ಮತ್ತೊಂದೆಡೆ ನಮ್ಮ ಯುವಕರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಅವರ ಮೇಲೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿರುದ್ಯೋಗ, ಮತ್ತು ಹಣದುಬ್ಬರಕ್ಕೆ ಸರಕಾರ ಪರಿಹಾರ ಹುಡುಕುವ ಬದಲು ಸಿಎ ಬಗ್ಗೆ ಮಾತನಾಡುತ್ತಿರುವುದು ತುಂಬಾ ದುಖಃಕರ ಸಂಗತಿ ಎಂದರು.</p>



<p>ಭಾರತದ ಅನೇಕ ಜನರು ನಿರಾಶ್ರಿತರಾಗಿದ್ದಾರೆ. &nbsp;ಆದರೆ ಬಿಜೆಪಿಯವರು ಪಾಕಿಸ್ತಾನದಿಂದ ಜನರನ್ನು ಕರೆತಂದು ಭಾರತದಲ್ಲಿ ನೆಲೆಸಲು ಬಯಸುತ್ತಾರೆ. &nbsp;ಅವರಿಗೆ ಮನೆಗಳನ್ನು ನೀಡಲು ಬಯಸುತ್ತಾರೆ. &nbsp;ನಮ್ಮ ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಖರ್ಚು ಮಾಡಬೇಕಾದ ಭಾರತ ಸರ್ಕಾರದ ಸರ್ಕಾರಿ ಹಣ ಬೇರೆ ದೇಶದ ಜನರಿಗೆ ಖರ್ಚು ಮಾಡಲು ಹೊರಟಿರುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.</p>



<p>ಆ ಮೂರು ದೇಶಗಳಲ್ಲಿ ಸುಮಾರು 2.5 ರಿಂದ 3 ಕೋಟಿ ಹಿಂದೂ ಧಾರ್ಮಿಕ ಅಲ್ಪಸಂಖ್ಯಾತರಿದ್ದಾರೆ. ಈ ಮೂರು ದೇಶಗಳು ಬಡ ದೇಶಗಳು ಹೌದು. ಭಾರತದ ಬಾಗಿಲು ತೆರೆದ ತಕ್ಷಣ ಈ ಮೂರು ದೇಶಗಳಿಂದ ಭಾರಿ ಜನಸಮೂಹವು ನಮ್ಮ ಭಾರತಕ್ಕೆ ಬರುತ್ತದೆ, ಈ 2.5 ಕೋಟಿ ಜನರಲ್ಲಿಯೂ ಸಹ. 1.5 ಕೋಟಿ ಜನರು ಭಾರತಕ್ಕೆ ಬರುತ್ತಾರೆ. ಹಾಗಾದರೆ ಅವರಿಗೆಲ್ಲ &nbsp;ಯಾರು ಉದ್ಯೋಗ ಕೊಡುತ್ತಾರೆ? &nbsp;ನೀವು ಅವರನ್ನು ಎಲ್ಲಿ ನೆಲೆಗೊಳಿಸುತ್ತೀರಿ? ಇವರಿಗೆಲ್ಲ ಬಿಜೆಪಿಯವರು ತಮ್ಮ &nbsp;ಮನೆಯಲ್ಲಿ ಪಾಲು ಕೊಡುತ್ತಾರೆಯೇ? ಅವರು ತಮಗೆ ಸಿಗುವ ಉದ್ಯೋಗವನ್ನು ಇವರಿಗೆಲ್ಲ ಬಿಟ್ಟುಕೊಡುತ್ತಾರೆಯೇ ಎಂದು ಕೇಜ್ರಿವಾಲ್‌ ಪ್ರಶ್ನಿಸಿದರು.</p>



<p>ಹಾಗಾದರೆ ಬಿಜೆಪಿ ಏಕೆ ಇಂಥ ಮಹಾನ್‌ ತಪ್ಪನ್ನು ಮಾಡುತ್ತಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.̤ ಉತ್ತರ ಬಹಳ ಸರಳವಾಗಿದೆ. ಕೇವಲ ವೋಟ್ ಬ್ಯಾಂಕ್ ಸೃಷ್ಟಿಸುವ ಕೊಳಕು ರಾಜಕೀಯವನ್ನು ಬಿಜೆಪಿ ಮಾಡುತ್ತಿದೆ. ಒಂದೂವರೆ ಕೋಟಿ ಜನರನ್ನು ಭಾರತಕ್ಕೆ ಕರೆತಂದು ಓಟ್‌ ಬ್ಯಾಂಕ್‌ ಮಾಡಿಕೊಳ್ಳುವುದು ಬಿಜೆಪಿ ಉದ್ದೇಶ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಇದರಿಂದ ಭಾರೀ ಲಾಭವಾಗಬಹುದು. ಒಂದೆಡೆ &nbsp;ಹರಿಯಾಣದ ಬಿಜೆಪಿಯ ಸರ್ಕಾರಕ್ಕೆ ಅಲ್ಲಿನ ಮಕ್ಕಳಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಮಕ್ಕಳನ್ನು ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಕಳುಹಿಸುತ್ತಿದೆ. &nbsp;ನಮ್ಮ ಮಕ್ಕಳನ್ನು ಯುದ್ಧಕ್ಕೆ ತಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದರು.</p>



<p>ಇಡೀ ಪ್ರಪಂಚದ ಯಾವುದೇ ದೇಶವು ತನ್ನ ನೆರೆಹೊರೆಯವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ. ದೇಶಗಳ ಬಡವರನ್ನು ನೆರೆಯ ದೇಶಗಳ ಜನರು ತಮ್ಮ ದೇಶಕ್ಕೆ ಬರುವುದನ್ನು ತಡೆಯಲು ವಿವಿಧ ರೀತಿಯ ಕಾನೂನುಗಳನ್ನು ಮಾಡುತ್ತದೆ. ಗಡಿಗಳಲ್ಲಿ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ವಿದ್ಯುತ್ ತಂತಿಗಳನ್ನು ಅಳವಡಿಸಲಾಗುತ್ತಿದೆ. &nbsp;ಪಕ್ಕದ ದೇಶದ ಬಡವರಿಗೆ ದೇಶವನ್ನು ಪ್ರವೇಶಿಸಲು ಬಾಗಿಲು ಪ್ರವೇಶಿಸುವುತ್ತಿರುವುದು ನಮ್ಮಲ್ಲಿಯೇ ಮೊದಲು. ಇಂಥ ಕೊಳಕು ರಾಜಕೀಯ ಮಾಡುತ್ತಿರುವ ಪ್ರಪಂಚದಲ್ಲೇ ಏಕೈಕ ಪಕ್ಷವೆಂದರೆ ಅದು ಬಿಜೆಪಿಯಾಗಿದೆ ಎಂದು ಹರಿಹಾಯ್ದರು.</p>



<p>&nbsp;ಯೋಚಿಸಬೇಕಾದ ವಿಷಯವೆಂದರೆ ಕಳೆದ 10 ವರ್ಷಗಳಲ್ಲಿ ಭಾರತದ 11 ಲಕ್ಷಕ್ಕೂ ಹೆಚ್ಚು ದೊಡ್ಡ ಶ್ರೀಮಂತ ಕೈಗಾರಿಕೋದ್ಯಮಿಗಳು ಮತ್ತು ಉದ್ಯಮಿಗಳು ಭಾರತವನ್ನು ತೊರೆದಿದ್ದಾರೆ. ಈ ಜನರು ಭಾರತದಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳನ್ನು ನಡೆಸುತ್ತಿದ್ದರು. &nbsp;ಜನರಿಗೆ ಉದ್ಯೋಗ ನೀಡುತ್ತಿದ್ದರು. &nbsp;ಬಿಜೆಪಿಯ ತಪ್ಪು ನೀತಿಗಳು ಮತ್ತು ಅವರ ದೌರ್ಜನ್ಯಗಳಿಂದ ಬೇಸತ್ತು ಅವರು ಭಾರತವನ್ನು ತೊರೆದರು. ನಿಜವಾಗಿಯೂ ವಾಪಸ್‌ ಕರೆತರಬೇಕಾದರೆ ಆ ಉದ್ಯಮಿಗಳನ್ನು ಕರೆತನ್ನಿ. ಅವರು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ. &nbsp;ಅವರು ಹೊಸ ಕಾರ್ಖಾನೆಗಳನ್ನು ಮತ್ತು &nbsp;ಹೊಸ ಉದ್ಯಮಗಳನ್ನು ತೆರೆಯುತ್ತಾರೆ ಎಂದು ಅವರು ಕಿವಿಮಾತು ಹೇಳಿದರು.</p>



<p>2014ರ ಹಿಂದೆ ಬಂದ ನುಸುಳುಕೋರರಿಗೆ ಪೌರತ್ವ ನೀಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ಇದು ಕೇವಲ ಆರಂಭ. &nbsp;ಒಮ್ಮೆ ಬಾಗಿಲು ತೆರೆದರೆ ಪಾಕಿಸ್ತಾನ, ಬಾಂಗ್ಲಾದೇಶಗಳಿಂದ ಸಮುದ್ರೋಪಾದಿಯಲ್ಲಿ ಜನ ಬರುತ್ತಾರೆ. &nbsp;ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಈಶಾನ್ಯ ರಾಜ್ಯಗಳು ಅದರಲ್ಲೂ ವಿಶೇಷವಾಗಿ ಅಸ್ಸಾಂ ಈ ವಲಸೆ ಜನರ ಭಾರವನ್ನು ಹೊರಬೇಕಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.</p>
]]></content:encoded>
					
		
		
			</item>
		<item>
		<title>ಬಿಜೆಪಿಯಿಂದ 2023 ರಲ್ಲಿ ಹೆಚ್ಚು ಹಿಂಸಾಚಾರ ಮತ್ತು ಮೂಲಭೂತ ಹಕ್ಕುಗಳ ದಮನ: ಹ್ಯೂಮನ್ ರೈಟ್ಸ್ ವಾಚ್ ವರದಿ</title>
		<link>https://peepalmedia.com/bjp-sparked-violence-and-rights-abuses-in-india-2023-human-right-watch/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 12 Jan 2024 07:13:08 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[Human rights]]></category>
		<category><![CDATA[Human Rights Watch]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manipur]]></category>
		<category><![CDATA[Manipur violence]]></category>
		<category><![CDATA[modi]]></category>
		<category><![CDATA[modi government]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[viral news]]></category>
		<category><![CDATA[WORLD REPORT 2024]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34878</guid>

					<description><![CDATA[2023 ರಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ತಾರತಮ್ಯ ಮತ್ತು ಧ್ರುವೀಕರಣದ ನೀತಿಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಹೆಚ್ಚಾಗಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ ಮತ್ತು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ (Human Rights Watch) ತನ್ನ ವಿಶ್ವ ವರದಿಯಲ್ಲಿ ಜನವರಿ 11, 2024 ಗುರುವಾರ ಹೇಳಿದೆ. ಮೋದಿ ಸರ್ಕಾರವು ನಿರಂತರ ತಾರತಮ್ಯ ಮಾಡುವ ಮೂಲಕ ಹಕ್ಕುಗಳನ್ನು ಗೌರವಿಸುವ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ನಾಯಕತ್ವದ ಆಶಯಗಳನ್ನು ದುರ್ಬಲಗೊಳಿಸಿದೆ ಅದು ಹೇಳಿದೆ.&#160; &#8220;ಅಪರಾಧ ಮಾಡಿದವರನ್ನು  [&#8230;]]]></description>
										<content:encoded><![CDATA[
<p>2023 ರಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ತಾರತಮ್ಯ ಮತ್ತು ಧ್ರುವೀಕರಣದ ನೀತಿಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಹೆಚ್ಚಾಗಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ ಮತ್ತು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ (Human Rights Watch) ತನ್ನ <a href="https://www.hrw.org/world-report/2024">ವಿಶ್ವ ವರದಿಯಲ್ಲಿ</a> ಜನವರಿ 11, 2024 ಗುರುವಾರ ಹೇಳಿದೆ.</p>



<p>ಮೋದಿ ಸರ್ಕಾರವು ನಿರಂತರ ತಾರತಮ್ಯ ಮಾಡುವ ಮೂಲಕ ಹಕ್ಕುಗಳನ್ನು ಗೌರವಿಸುವ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ನಾಯಕತ್ವದ ಆಶಯಗಳನ್ನು ದುರ್ಬಲಗೊಳಿಸಿದೆ ಅದು ಹೇಳಿದೆ.&nbsp;</p>



<p>&#8220;ಅಪರಾಧ ಮಾಡಿದವರನ್ನು  ಹೊಣೆಗಾರರನ್ನಾಗಿ ಮಾಡುವ ಬದಲು, ಅಧಿಕಾರಿಗಳು ಅಪರಾಧಕ್ಕೆ ಬಲಿಯಾದವರನ್ನು ಶಿಕ್ಷಿಸುತ್ತಿದ್ದಾರೆ ಮತ್ತು ಇದನ್ನು ಪ್ರಶ್ನಿಸಿದವರಿಗೆ ಕಿರುಕುಳ ನೀಡಿದ್ದಾರೆ,&#8221; ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಏಷ್ಯಾದ ಉಪ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="aek9tIplPWA"><iframe title="#rammandir ರಾಮನ  ಕಥನಗಳನ್ನ ಸ್ಥಳೀಯಗೊಳಿಸುವ ಗುಣವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ...  |Peepal Media" width="696" height="392" src="https://www.youtube.com/embed/aek9tIplPWA?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>740 ಪುಟಗಳ ವಿಶ್ವ ವರದಿ 2024 ರ 34 ನೇ ಆವೃತ್ತಿಯಲ್ಲಿ, ಹ್ಯೂಮನ್ ರೈಟ್ಸ್ ವಾಚ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದೆ.&nbsp;</p>



<p>ಭಾರತದಲ್ಲಿ ಹಣಕಾಸಿನ ಅಕ್ರಮಗಳ ಆರೋಪ ಮತ್ತು <a href="https://www.hrw.org/news/2022/01/18/india-should-stop-using-abusive-foreign-funding-law">ಸರ್ಕಾರೇತರ ಸಂಸ್ಥೆಗಳಿಗೆ ವಿದೇಶಿ ಧನಸಹಾಯವನ್ನು ನಿಯಂತ್ರಿಸುವ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ</a>ಯನ್ನು ಬಳಸಿ&nbsp; ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಟೀಕಾಕಾರ ಮೇಲೆ ದಾಳಿ ಮಾಡಿ ಕಿರುಕುಳ ನೀಡಿದ್ದಾರೆ.</p>



<p>ಫೆಬ್ರವರಿಯಲ್ಲಿ, ಭಾರತೀಯ ತೆರಿಗೆ ಅಧಿಕಾರಿಗಳು ನವ ದೆಹಲಿ ಮತ್ತು ಮುಂಬೈನಲ್ಲಿರುವ<a href="https://www.hrw.org/news/2023/02/14/tax-authorities-raid-bbc-offices-india"> ಬಿಬಿಸಿ ಕಚೇರಿಗಳ ಮೇಲೆ ದಾಳಿ</a> ನಡೆಸಿದರು. 2002 ರ ಗುಜರಾತ್‌ ಗಲಭೆಯ ಬಗ್ಗೆ ʼಇಂಡಿಯಾ: ದಿ ಮೋದಿ ಕ್ವೆಸ್ಚನ್‌ʼ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಕ್ಕಾಗಿ ಪ್ರತೀಕಾರವೆಂಬಂತೆ ಇದನ್ನು ನಡೆಸಲಾಗಿತ್ತು. ದೇಶದ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ಜನವರಿಯಲ್ಲಿ ಭಾರತದಲ್ಲಿ ಈ <a href="https://www.hrw.org/news/2023/01/23/indias-blocking-bbc-documentary-reflects-broader-crackdown">BBC ಸಾಕ್ಷ್ಯಚಿತ್ರದ ಎರಡು ಎಪಿಸೋಡ್‌ಗಳನ್ನೂ ನಿಷೇಧಿಸಿತ್ತು</a>.</p>



<p>ವರದಿಯಲ್ಲಿ ಇಂತಹ ಅನೇಕ ಘಟನೆಗಳನ್ನು ಪಟ್ಟಿಮಾಡಲಾಗಿದೆ, ಧಾರ್ಮಿಕ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಬಗ್ಗೆ ಎತ್ತಿ ತೋರಿಸಿದೆ.</p>



<p><em>ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: <a href="https://chat.whatsapp.com/BoGCVVQyXYVE5m7RhIQRWv"><strong>ಪೀಪಲ್ ಮೀಡಿಯಾ</strong></a></em></p>



<p>&#8220;ಜುಲೈ 31 ರಂದು, ಹರಿಯಾಣ ರಾಜ್ಯದ ನುಹ್ ಜಿಲ್ಲೆಯಲ್ಲಿ ಹಿಂದೂಗಳ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರ (nuh violence) ಭುಗಿಲೆದ್ದಿತು. ಅದು ಹಲವಾರು ಪಕ್ಕದ ಜಿಲ್ಲೆಗಳಿಗೂ ಹರಡಿತು. ಹಿಂಸಾಚಾರದ ನಂತರ, ಅಧಿಕಾರಿಗಳು ನೂರಾರು ಮುಸ್ಲಿಂಮರ ಆಸ್ತಿಗಳನ್ನು ಅಕ್ರಮವಾಗಿ ಕೆಡವುವ ಮೂಲಕ ಮತ್ತು ಮುಸ್ಲಿಂ ಪುರುಷರನ್ನು ಬಂಧಿಸುವ ಮೂಲಕ ಮುಸ್ಲೀಮರ ವಿರುದ್ಧ ಪ್ರತೀಕಾರ ತೀರಿಸಿಕೊಂಡರು. ಈ ವಿಧ್ವಂಸಕ ಘಟನೆಗಳನ್ನು ನೋಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸರ್ಕಾರ &#8220;ಜನಾಂಗೀಯ ನಿರ್ಮೂಲನೆ&#8221; ನಡೆಸುತ್ತಿದೆಯೇ ಎಂದು ಕೇಳಿತ್ತು ಎಂದು ವರದಿ ಹೇಳಿದೆ.</p>



<p>“ಮೇ ತಿಂಗಳಲ್ಲಿ ಮಣಿಪುರದಲ್ಲಿ, ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಝೋ ಸಮುದಾಯಗಳ ನಡುವೆ ಹಿಂಸಾಚಾರವು ಭುಗಿಲೆದ್ದು 200 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ನೂರಾರು ಜನರು ಸ್ಥಳಾಂತರಗೊಂಡರು, ಮನೆಗಳು ಮತ್ತು ಚರ್ಚ್‌ಗಳು ನಾಶವಾದವು ಮತ್ತು ತಿಂಗಳುಗಳವರೆಗೆ ಇಂಟರ್ನೆಟನ್ನು ಸ್ಥಗಿತಗೊಳಿಸಲಾಯಿತು. ಮಣಿಪುರ ಮುಖ್ಯಮಂತ್ರಿ&nbsp; ಬಿಜೆಪಿಯ ಎನ್ ಬಿರೇನ್ ಸಿಂಗ್ ಕುಕಿಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ ಸಮುದಾಯಗಳ ವಿಭಜನೆಗೆ ಉತ್ತೇಜನ ನೀಡಿದರು. ಬಿರೇನ್ ಅವರು‌ ಕುಕಿಗಳು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ, ಮ್ಯಾನ್ಮಾರ್‌ನಿಂದ ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು, ”ಎಂದು ವರದಿಯಲ್ಲಿ ಹೇಳಲಾಗಿದೆ.</p>



<p>&#8220;ಆಗಸ್ಟ್‌ನಲ್ಲಿ, ರಾಜ್ಯ ಪೊಲೀಸರು &#8216;ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ&#8217; ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾಚಾರದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲು ಆದೇಶಿಸಿತ್ತು. ಸೆಪ್ಟೆಂಬರ್‌ನಲ್ಲಿ, ವಿಶ್ವಸಂಸ್ಥೆಯ (United Nations)&nbsp; ಹನ್ನೆರಡು ತಜ್ಞರು ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಸರ್ಕಾರದ ಪ್ರತಿಕ್ರಿಯೆ ನಿಧಾನ ಮತ್ತು ಅಸಮರ್ಪಕವಾಗಿದೆ ಎಂದು ಹೇಳಿದ್ದರು.</p>



<p><em>ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: </em><a href="https://chat.whatsapp.com/BoGCVVQyXYVE5m7RhIQRWv"><strong><em>ಪೀಪಲ್ ಮೀಡಿಯಾ</em></strong></a></p>



<p>ಭಾರತೀಯ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಇತರ ಹಕ್ಕುಗಳನ್ನು ನಿರಂತರವಾಗಿ ಹತ್ತಿಕ್ಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭದ್ರತಾ ಪಡೆಗಳಿಂದ ಕಾನೂನುಬಾಹಿರ ಹತ್ಯೆಗಳು ವರ್ಷವಿಡೀ ಮುಂದುವರಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>



<p>ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ಅವರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಒಂದು ದಶಕದ ಅವಧಿಯಲ್ಲಿ ಕನಿಷ್ಠ ಆರು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಗುರಿಯಾದ ಪ್ರಕರಣವನ್ನು ಕೂಡಾ ವರದಿಯಲ್ಲಿ ಹೇಳಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ, ಮಹಿಳಾ ಕುಸ್ತಿಪಟುಗಳನ್ನು ಭದ್ರತಾ ಪಡೆಗಳು ಬಲವಂತವಾಗಿ ಬಂಧಿಸಿದ್ದರು.</p>



<p><strong><em>ಸಂಪೂರ್ಣ ವರದಿಯನ್ನು ಇಲ್ಲಿ ಓದಿ:</em></strong><a href="https://www.hrw.org/sites/default/files/media_2024/01/World%20Report%202024%20LOWRES%20WEBSPREADS_0.pdf"> WORLD REPORT 2024 &#8211; Our Annual Review Of Human Rights Around The Globe</a></p>
]]></content:encoded>
					
		
		
			</item>
	</channel>
</rss>
