<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>mohamad shami &#8211; Peepal Media</title>
	<atom:link href="https://peepalmedia.com/tag/mohamad-shami/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 08 Nov 2022 08:15:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>mohamad shami &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ವೇಗದ ಬೌಲರ್‌ಗಳಿಗೆ ಬಿಜಿನೆಸ್‌ ಕ್ಲಾಸ್ ಸೀಟ್‌ ಬಿಟ್ಟುಕೊಟ್ಟ ದ್ರಾವಿಡ್‌, ಕೊಹ್ಲಿ, ರೋಹಿತ್‌</title>
		<link>https://peepalmedia.com/dravid-kohli-rohit-give-up-business-class-seats-for-fast-bowlers/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 08 Nov 2022 08:15:11 +0000</pubDate>
				<category><![CDATA[ಆಟೋಟ]]></category>
		<category><![CDATA[ARSHADEEP SINGH]]></category>
		<category><![CDATA[Bhuvneshwar Kumar]]></category>
		<category><![CDATA[HARDHIK PANDYA]]></category>
		<category><![CDATA[india]]></category>
		<category><![CDATA[mohamad shami]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[RAHUL DRAVID]]></category>
		<category><![CDATA[ROHITH SHARMA]]></category>
		<category><![CDATA[sports news]]></category>
		<category><![CDATA[t20 world cup]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=14761</guid>

					<description><![CDATA[ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ): ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ [&#8230;]]]></description>
										<content:encoded><![CDATA[
<p><strong>ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ):</strong> ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.</p>



<p>ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣ ನಡೆಸಬಹುದಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾನದಂಡಗಳ ಪ್ರಕಾರ, ಸಾಮಾನ್ಯವಾಗಿ ತಂಡದ ಕೋಚ್, ನಾಯಕ, ಉಪನಾಯಕ ಮತ್ತು ಮ್ಯಾನೇಜರ್‌ಗೆ ಬಿಸಿನೆಸ್‌ ಕ್ಲಾಸ್ ಸೀಟ್‌ಗಳು ಮತ್ತು ಉಳಿದ ಆಟಗಾರರಿಗೆ ಎಕನಮಿ ಕ್ಲಾಸ್‌ ಸೀಟ್‌ಗಳು ನೋಂದಣಿಯಾಗಿರುತ್ತವೆ.</p>



<p>ಸಾಮಾನ್ಯವಾಗಿ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ನೀಡಿಕೊಂಡು ಆರಾಮದಾಯಕ ಪ್ರಯಾಣ ನಡೆಸಬಹುದಾಗಿದೆ. ಆದರೆ ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಕೊಂಚ ಇಕ್ಕಟ್ಟು ಇರುವುದರಿಂದ ಪ್ರಯಾಣಿಕರು ಬಿಸಿನೆಸ್‌ ಕ್ಲಾಸ್‌ನಷ್ಟು ಆರಾಮದಾಯಕ ಪ್ರಯಾಣ ನಡೆಸಲು ಸಾಧ್ಯವಾಗುವುದಿಲ್ಲ.</p>



<p>ವೇಗದ ಬೌಲರ್‌ಗಳು ಮೈದಾನದಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ, ಬೆವರು ಹರಿಸಬೇಕಾಗುತ್ತದೆ. ಇತರ ಆಟಗಾರರಿಗಿಂತ ಹೆಚ್ಚು ವೇಗದ ಬೌಲರ್‌ಗಳ ಕಾಲುಗಳಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ತಂಡದ ವೇಗದ ಬೌಲರ್‌ಗಳು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಸುವುದರಿಂದ, ಅವರಿಗೆ ಆರಾಮದಾಯಕ ವಿಶ್ರಾಂತಿ ಸಿಗುವುದಿಲ್ಲ.</p>



<p>ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ತಮ್ಮ ಸೀಟುಗಳನ್ನು ತಂಡದ ವೇಗಿ ಬೌಲರ್‌ಗಳಾದ ಮಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಮತ್ತು ಅರ್ಶದೀಪ್‌ ಸಿಂಗ್‌ ಅವರಿಗೆ aಬಿಟ್ಟುಕೊಟ್ಟು, ಆಟಗಾರರ ಬಗ್ಗೆ ಕಾಳಜಿ ತೋರಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.</p>
]]></content:encoded>
					
		
		
			</item>
		<item>
		<title>T20 ವಿಶ್ವಕಪ್‌ನಿಂದ ಹೊರಗುಳಿದ ದೀಪಕ್ ಚಹಾರ್: ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮೂವರು ವೇಗಿ ಬೌಲರ್‌ಗಳು</title>
		<link>https://peepalmedia.com/deepak-chahar-ruled-out-of-t20-world-cup-three-new-fast-bowlers-in-the-squad/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 12 Oct 2022 14:04:10 +0000</pubDate>
				<category><![CDATA[ಆಟೋಟ]]></category>
		<category><![CDATA[cricket]]></category>
		<category><![CDATA[Deepak Chaha]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mohamad shami]]></category>
		<category><![CDATA[MOHAMAD SIRAJ]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shardul thakur]]></category>
		<category><![CDATA[T-20 WORLD CUP]]></category>
		<guid isPermaLink="false">https://peepalmedia.com/?p=10370</guid>

					<description><![CDATA[ನವದೆಹಲಿ: ಬೆನ್ನುನೋವಿನ ಕಾರಣ ದೀಪಕ್ ಚಹಾರ್ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ತಂಡದ ಮೊದಲ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ವೇಗಿ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿದ್ದ ಕಾರಣ ಆ ಸ್ಥಾನ ತುಂಬವಲ್ಲಿ ದೀಪಕ್‌ ಚಹಾರ್‌ ಯಶಸ್ವಿಯಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಕೂಡ ಬೆನ್ನುನೋವಿನಿಂದ ಬಳಲುತ್ತಿದ್ದು, ಬೆನ್ನುನೋವು ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು [&#8230;]]]></description>
										<content:encoded><![CDATA[
<p style="font-size:20px"><strong>ನವದೆಹಲಿ:</strong> ಬೆನ್ನುನೋವಿನ ಕಾರಣ ದೀಪಕ್ ಚಹಾರ್ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ತಂಡದ ಮೊದಲ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ವೇಗಿ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.</p>



<p style="font-size:20px">ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿದ್ದ ಕಾರಣ ಆ ಸ್ಥಾನ ತುಂಬವಲ್ಲಿ ದೀಪಕ್‌ ಚಹಾರ್‌ ಯಶಸ್ವಿಯಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಕೂಡ ಬೆನ್ನುನೋವಿನಿಂದ ಬಳಲುತ್ತಿದ್ದು, ಬೆನ್ನುನೋವು ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಿಸಿಸಿಐ ಚಹಾರ್‌ ಅವರನ್ನು T20 ವಿಶ್ವಕಪ್‌ನಿಂದ ಹೊರಗಿಡುವ ನಿರ್ಧಾರ ಮಾಡಿದೆ.</p>



<p style="font-size:20px">ಈ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಘೋಷಿಸಲು ತಂಡಕ್ಕೆ ಅಕ್ಟೋಬರ್ 15 ರವರೆಗೆ ಕಾಲಾವಕಾಶ ಇರುವುದರಿಂದ, ಎಲ್ಲಾ ಮೂರು ವೇಗಿ ಬೌಲರ್‌ಗಳ ಫಾರ್ಮ್ ಮತ್ತು ಫಿಟ್‌ನೆಸ್ ಅನ್ನು ಪರಿಶೀಲಿಸಲು ತಂಡದ ನಿರ್ವಹಣೆಗೆ ಸಮಯವಿದೆ ಎಂದು ತಿಳಿದುಬಂದಿದೆ.</p>



<p style="font-size:20px">ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್‌ನಲ್ಲಿ ವೇಗಿ ಬೌಲರ್‌ಗಳ ಅವಶ್ಯಕತೆ ಇದ್ದು, ಮೂವರು ಆಟಗಾರರಿಗೆ ತಂಡದ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತದೆ. ಹೀಗಾಗಿ ತಂಡದಲ್ಲಿ ಆಟವಾಡಲು ಯಾರು ಹೆಚ್ಚು ಸಮರ್ಥರೋ, ಅವರೇ ಸ್ಪರ್ಧೆಗೆ ಸಿದ್ಧರಾಗುತ್ತಾರೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.</p>



<p style="font-size:20px">ಶಮಿ ಅವರು ತಮ್ಮ ಉತ್ತಮ ಅನುಭವದೊಂದಿಗೆ ಆಟವಾಡುತ್ತಾರೆ ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಶಮಿ ಕಣಕ್ಕಿಳಿಯುತ್ತಾರೆ ಎನ್ನುವ ಸೂಚನೆ ತಿಳಿದುಬಂದಿದೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಯಲ್ಲಿ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ರಾಂಚಿ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಮುಂಬರುವ ಟಿ- 20 ವಿಶ್ವಕಪ್‌ನಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. &nbsp;&nbsp;</p>
]]></content:encoded>
					
		
		
			</item>
	</channel>
</rss>
