<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>MP election &#8211; Peepal Media</title>
	<atom:link href="https://peepalmedia.com/tag/mp-election/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 03 Apr 2024 02:43:15 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>MP election &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮೋದಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ. ಸಂವಿಧಾನ ಬದಲಾಯಿಸುವ ಜ್ಯೋತಿ ಮಿರ್ಧಾ ಹೇಳಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ</title>
		<link>https://peepalmedia.com/how-many-more-candidates-can-the-bjp-disavow-for-revealing-the-truth/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 03 Apr 2024 02:43:14 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[MP election]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37875</guid>

					<description><![CDATA[ಸಂವಿಧಾನ ಬದಲಾವಣೆ ಕುರಿತು ರಾಜಸ್ಥಾನದ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಅವರ ಹೇಳಿಕೆಗೆ ಕಾಂಗ್ರೆಸ್ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಅನಂತಕುಮಾರ್ ಹೆಗಡೆ ನಂತರ ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಸಂವಿಧಾನ ಬದಲಿಸುವ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂಬುದು ಈ ಇಬ್ಬರು ನಾಯಕರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಬಹುಮತ ಬೇಕು ಎಂದು [&#8230;]]]></description>
										<content:encoded><![CDATA[
<p>ಸಂವಿಧಾನ ಬದಲಾವಣೆ ಕುರಿತು ರಾಜಸ್ಥಾನದ ನಾಗೌರ್‌ನ ಬಿಜೆಪಿ ಅಭ್ಯರ್ಥಿ ಜ್ಯೋತಿ ಮಿರ್ಧಾ ಅವರ ಹೇಳಿಕೆಗೆ ಕಾಂಗ್ರೆಸ್ ನಿರಂತರವಾಗಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಅನಂತಕುಮಾರ್ ಹೆಗಡೆ ನಂತರ ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಸಂವಿಧಾನ ಬದಲಿಸುವ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.</p>



<p>ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದ್ವೇಷಿಸುತ್ತಾರೆ ಎಂಬುದು ಈ ಇಬ್ಬರು ನಾಯಕರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.</p>



<p>ಸಂವಿಧಾನವನ್ನು ಬದಲಾಯಿಸಲು ನಮಗೆ ಉಭಯ ಸದನಗಳಲ್ಲಿ ಬಹುಮತ ಬೇಕು ಎಂದು ಜ್ಯೋತಿ ಮಿರ್ಧಾ ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಅನಂತ್ ಹೆಗಡೆ ಈ ಹಿಂದೆ ಹೇಳಿದ್ದರು. ಬಾಬಾಸಾಹೇಬರು ನೀಡಿದ ಸಂವಿಧಾನವನ್ನು ರದ್ದುಪಡಿಸಲು ಭಾರತೀಯ ಜನತಾ ಪಕ್ಷ ಬಯಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ಅವರು ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ ಎಂದು ಅದು ಹೇಳಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">After Anant Hegde let the cat out of the bag, BJP leaders hastily stuffed it back in and dropped him from their candidate list. Now another BJP candidate openly says the BJP’s aim is to change the Constitution. How many more candidates can the BJP disavow for revealing the truth… <a href="https://t.co/iHYQWWk0mD">https://t.co/iHYQWWk0mD</a></p>&mdash; Shashi Tharoor (@ShashiTharoor) <a href="https://twitter.com/ShashiTharoor/status/1775049739630960708?ref_src=twsrc%5Etfw">April 2, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p><strong>ಸಂವಿಧಾನ ನಾಶ ಮಾಡುವುದೇ ಬಿಜೆಪಿ ಗುರಿ- ತರೂರ್</strong></p>



<p>ಜ್ಯೋತಿ ಮಿರ್ಧಾ ಅವರ ಈ ಹೇಳಿಕೆಯ ನಂತರ, ಕಾಂಗ್ರೆಸ್ ನಾಯಕ ಶಶಿ ತರೂರ್, ಸಂವಿಧಾನವನ್ನು ಬದಲಾಯಿಸುವುದು ಬಿಜೆಪಿಯ ಗುರಿಯಾಗಿದೆ. ಸತ್ಯವನ್ನು ಬಯಲು ಮಾಡಲು ಬಿಜೆಪಿ ಇನ್ನೂ ಎಷ್ಟು ಅಭ್ಯರ್ಥಿಗಳನ್ನು ತಿರಸ್ಕರಿಸುತ್ತದೆ? ಎಂದು ಕೇಳಿದ್ದಾರೆ.</p>



<p>ಈ ಬಾರಿ ಬಿಜೆಪಿ ಆರು ಸಲ ಸಂಸದರಾಗಿದ್ದ ಹೆಗ್ಡೆಯ ಅವರ ಟಿಕೆಟ್ ರದ್ದು ಮಾಡಿದೆ. ಸಂವಿಧಾನ ಬದಲಾವಣೆ ಕುರಿತ ಹೆಗಡೆ ಹೇಳಿಕೆಯಿಂದ ಪಕ್ಷ ಅಂತರ ಕಾಯ್ದುಕೊಂಡಿತ್ತು.</p>



<p><strong>ಜ್ಯೋತಿ ಮಿರ್ಧಾ ಹೇಳಿದ್ದೇನು?</strong></p>



<p>ದೇಶದ ಹಿತದೃಷ್ಟಿಯಿಂದ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ನಾವು ಸಂವಿಧಾನದೊಳಗೆ ಯಾವುದೇ ಬದಲಾವಣೆಗಳನ್ನು ಮಾಡಬೇಕಾದರೆ, ಸಂಸತ್ತು, ಲೋಕಸಭೆ ಮತ್ತು ರಾಜ್ಯಸಭೆಯ ಉಭಯ ಸದನಗಳ ಅನುಮೋದನೆ ಅಗತ್ಯವಿದೆ ಎಂದು ನಿಮ್ಮಲ್ಲಿ ಅನೇಕರಿಗೆ ತಿಳಿದಿರುತ್ತದೆ. ಇಂದು ಬಿಜೆಪಿ ಮತ್ತು ಎನ್‌ಡಿಎ ಲೋಕಸಭೆಯಲ್ಲಿ ಪ್ರಬಲ ಬಹುಮತವನ್ನು ಹೊಂದಿದೆ ಆದರೆ ಇಂದಿಗೂ ರಾಜ್ಯಸಭೆಯಲ್ಲಿ ನಮಗೆ ಬಹುಮತವಿಲ್ಲ. ಮೂರನೇ ಬಾರಿಗೆ ಎನ್ ಡಿಎ ಸರ್ಕಾರ ಬಂದರೆ ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು.</p>
]]></content:encoded>
					
		
		
			</item>
		<item>
		<title>ಲೋಕಸಭಾ ಚುನಾವಣೆ 2024: ಕರ್ನಾಟಕದ ಯಾವ ಕ್ಷೇತ್ರದಲ್ಲಿ ಎಂದು ಚುನಾವಣೆ? ಇಲ್ಲಿದೆ ಪೂರ್ತಿ ಲಿಸ್ಟ್</title>
		<link>https://peepalmedia.com/full-details-of-parliment-election-in-karnataka/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 16 Mar 2024 11:21:58 +0000</pubDate>
				<category><![CDATA[ರಾಜ್ಯ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[MP]]></category>
		<category><![CDATA[MP election]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37091</guid>

					<description><![CDATA[ಬೆಂಗಳೂರು: ದೇಶದಲ್ಲಿ 18ನೇ ಲೋಕಸಭಾ ಚುನಾವಣೆಗೆ ದಿನಾಂಕವನ್ನ ಮುಖ್ಯ ಚುನಾವಣಾ ಆಯೋಗ ಘೋಷಿಸಿದ್ದು, ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಲಿದ್ದು. ಜೂನ್ 4ಕ್ಕೆ ಫಲಿತಾಂಶ ಹೊರ ಬೀಳಲಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ನಡೆಯಲಿದ್ದು ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಾಹಿತಿಯನ್ನು ಇಂದು ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು. ಕರ್ನಾಟಕದಲ್ಲಿ ಮೊದಲ [&#8230;]]]></description>
										<content:encoded><![CDATA[
<p>ಬೆಂಗಳೂರು: ದೇಶದಲ್ಲಿ 18ನೇ ಲೋಕಸಭಾ ಚುನಾವಣೆಗೆ ದಿನಾಂಕವನ್ನ ಮುಖ್ಯ ಚುನಾವಣಾ ಆಯೋಗ ಘೋಷಿಸಿದ್ದು, ಒಟ್ಟು 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಲಿದ್ದು. ಜೂನ್ 4ಕ್ಕೆ ಫಲಿತಾಂಶ ಹೊರ ಬೀಳಲಿದೆ.</p>



<p>ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ನಡೆಯಲಿದ್ದು ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಈ ಮಾಹಿತಿಯನ್ನು ಇಂದು ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.</p>



<p>ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.</p>



<p>ಏಪ್ರಿಲ್ 26, ಮೇ 7ರಂದು ಮತದಾನ </p>



<p>ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಲೋಕಸಭೆಗೆ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.</p>



<p><strong>ಏಪ್ರಿಲ್ 26ಕ್ಕೆ ಮತದಾನ ನಡೆಯಲಿರುವ ಕ್ಷೇತ್ರಗಳು</strong></p>



<p><strong>1)</strong>&nbsp;ಚಿತ್ರದುರ್ಗ<br><strong>2)</strong>&nbsp;ಉಡುಪಿ-ಚಿಕ್ಕಮಗಳೂರು<br><strong>3)</strong>&nbsp;ದಕ್ಷಿಣ ಕನ್ನಡ<br><strong>4)</strong>&nbsp;ಹಾಸನ<br><strong>5)</strong>&nbsp;ತುಮಕೂರು<br><strong>6)</strong>&nbsp;ಚಿಕ್ಕಬಳ್ಳಾಪುರ<br><strong>7)</strong>&nbsp;ಕೋಲಾರ<br><strong>8)</strong>&nbsp;ಮಂಡ್ಯ<br><strong>9)</strong>&nbsp;ಮೈಸೂರು-ಕೊಡಗು<br><strong>10)</strong>&nbsp;ಚಾಮರಾಜನಗರ<br><strong>11)</strong>&nbsp;ಬೆಂಗಳೂರು ಗ್ರಾಮಾಂತರ<br><strong>12)</strong>&nbsp;ಬೆಂಗಳೂರು ದಕ್ಷಿಣ<br><strong>13)</strong>&nbsp;ಬೆಂಗಳೂರು ಉತ್ತರ<br><strong>14)</strong>&nbsp;ಬೆಂಗಳೂರು ಕೇಂದ್ರ</p>



<p><strong>ಮೇ 7ರಂದು ಚುನಾವಣೆ ಎದುರಿಸಲಿರುವ ಕ್ಷೇತ್ರಗಳು</strong></p>



<p><strong>1)</strong>&nbsp;ಬೆಳಗಾವಿ<br><strong>2)</strong>&nbsp;ಬಳ್ಳಾರಿ<br><strong>3)</strong>&nbsp;ಚಿಕ್ಕೋಡಿ<br><strong>4)</strong>&nbsp;ಹಾವೇರಿ-ಗದಗ<br><strong>5)</strong>&nbsp;ಕಲಬುರಗಿ<br><strong>6)</strong>&nbsp;ಬೀದರ್​<br><strong>7)</strong>&nbsp;ಹುಬ್ಬಳಿ &#8211; ಧಾರವಾಡ<br><strong>8)</strong>&nbsp;ಕೊಪ್ಪಳ<br><strong>9)</strong>&nbsp;ರಾಯಚೂರು<br><strong>10)</strong>&nbsp;ಉತ್ತರ ಕನ್ನಡ<br><strong>11)</strong>&nbsp;ದಾವಣಗೆರೆ<br><strong>12)</strong>&nbsp;ಶಿವಮೊಗ್ಗ<br><strong>13)</strong>&nbsp;ಬಾಗಲಕೋಟೆ<br><strong>14)</strong>&nbsp;ವಿಜಯಪುರ</p>
]]></content:encoded>
					
		
		
			</item>
		<item>
		<title>BJP: ಬಿಜೆಪಿ ಮೊದಲ ಪಟ್ಟಿಯಲ್ಲಿ ಕಂಗನಾ ರಣಾವತ್, ಅಕ್ಷಯ್ ಕುಮಾರ್..?</title>
		<link>https://peepalmedia.com/akshay-kumar-and-kangana-to-contest-mp-election-from-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 02 Mar 2024 09:46:55 +0000</pubDate>
				<category><![CDATA[ದೇಶ]]></category>
		<category><![CDATA[Akshay Kumar]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[Kangana Ranauth]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[MP election]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=36598</guid>

					<description><![CDATA[ಲೋಕಸಭೆ ಚುನಾವಣೆ 2024 ಸಮೀಪಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಜ್ಜಾಗಿದೆ. ಚುನಾವಣಾ ವೇಳಾಪಟ್ಟಿಗೂ ಮುನ್ನ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಪಟ್ಟಿಯಲ್ಲಿ ಹೊಸಬರು ಹಾಗೂ ಯುವ ನಾಯಕರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಬಾಲಿವುಡ್ ಖ್ಯಾತ ನಟರಾದ ಕಂಗನಾ ರಣಾವತ್ ಮತ್ತು ಅಕ್ಷಯ್ ಕುಮಾರ್ ಕೂಡಾ ಕಣಕ್ಕಿಳಿಯಲಿದ್ದಾರೆನ್ನುವ ಸುದ್ದಿಯೂ ಓಡಾಡುತ್ತಿದೆ. ಇವರಿಬ್ಬರ ಹೆಸರು ಮೊದಲ ಪಟ್ಟಿಯಲ್ಲಿರಬಹುದು ಎಂದು ಹಲವು ಆಂಗ್ಲ ಮಾಧ್ಯಮದ ಲೇಖನಗಳು ಬಹಿರಂಗಪಡಿಸಿವೆ. ದೆಹಲಿಯ ಚಾಂದಿನಿ ಚೌಕ್‌ನಿಂದ ಅಕ್ಷಯ್ ಕುಮಾರ್ ಮತ್ತು [&#8230;]]]></description>
										<content:encoded><![CDATA[
<p>ಲೋಕಸಭೆ ಚುನಾವಣೆ 2024 ಸಮೀಪಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಜ್ಜಾಗಿದೆ.</p>



<p>ಚುನಾವಣಾ ವೇಳಾಪಟ್ಟಿಗೂ ಮುನ್ನ ಮೊದಲ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಪಟ್ಟಿಯಲ್ಲಿ ಹೊಸಬರು ಹಾಗೂ ಯುವ ನಾಯಕರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಬಾಲಿವುಡ್ ಖ್ಯಾತ ನಟರಾದ ಕಂಗನಾ ರಣಾವತ್ ಮತ್ತು ಅಕ್ಷಯ್ ಕುಮಾರ್ ಕೂಡಾ ಕಣಕ್ಕಿಳಿಯಲಿದ್ದಾರೆನ್ನುವ ಸುದ್ದಿಯೂ ಓಡಾಡುತ್ತಿದೆ.</p>



<p>ಇವರಿಬ್ಬರ ಹೆಸರು ಮೊದಲ ಪಟ್ಟಿಯಲ್ಲಿರಬಹುದು ಎಂದು ಹಲವು ಆಂಗ್ಲ ಮಾಧ್ಯಮದ ಲೇಖನಗಳು ಬಹಿರಂಗಪಡಿಸಿವೆ. ದೆಹಲಿಯ ಚಾಂದಿನಿ ಚೌಕ್‌ನಿಂದ ಅಕ್ಷಯ್ ಕುಮಾರ್ ಮತ್ತು ಹಿಮಾಚಲ ಪ್ರದೇಶದ ಮಂಡಿಯಿಂದ ಕಂಗನಾ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ರಾಜಕೀಯಕ್ಕೆ ಬರಲು ಇದೇ ಸರಿಯಾದ ಸಮಯ ಎಂದು ಕಂಗನಾ ಇತ್ತೀಚೆಗಷ್ಟೇ ಇಂಟರೆಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಈ ಹಿಂದೆ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಬಿಜೆಪಿ ಸೇರಿದರೆ ಸ್ವಾಗತಿಸುವುದಾಗಿ ಹೇಳಿದ್ದರು. ಅಕ್ಷಯ್ ಕುಮಾರ್ ಅವರು ವಿವಿಧ ಸಂದರ್ಭಗಳಲ್ಲಿ ಬಿಜೆಪಿ ಸರ್ಕಾರದ ಪರವಾಗಿ ಮಾತನಾಡಿದ್ದರು.</p>



<p>ಬಿಜೆಪಿಯ ಮೊದಲ ಪಟ್ಟಿಯಲ್ಲಿ 110 ಹೆಸರುಗಳು</p>



<p>ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇತ್ತೀಚೆಗೆ ಮಹತ್ವದ ಸಭೆ ನಡೆಸಿದೆ. ಸದ್ಯದಲ್ಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ 110 ಕ್ಕೂ ಹೆಚ್ಚು ಹೆಸರುಗಳನ್ನು ಘೋಷಿಸಲಾಗುವುದು ಎಂದು ವರದಿಯಾಗಿದೆ. ಹಲವೆಡೆ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಕೇಳಿಬರುತ್ತಿರುವಾಗಲೇ ಹೊಸ ಮುಖಗಳಿಗೂ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.</p>
]]></content:encoded>
					
		
		
			</item>
		<item>
		<title>ಮಧ್ಯಪ್ರದೇಶದ 230 ಹೊಸ ಎಂಪಿಗಳಲ್ಲಿ 205 ಮಂದಿ ಕೋಟ್ಯಾಧಿಪಗಳು&#8230;ಬಿಜೆಪಿ ಶಾಸಕ ಟಾಪರ್!- ಎಡಿಆರ್ ವರದಿ</title>
		<link>https://peepalmedia.com/assets-of-newly-elected-mlas-in-mp/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 07 Dec 2023 11:33:58 +0000</pubDate>
				<category><![CDATA[ಚುನಾವಣೆ 2023]]></category>
		<category><![CDATA[ದೇಶ]]></category>
		<category><![CDATA[2023]]></category>
		<category><![CDATA[Association of Democratic Reforms]]></category>
		<category><![CDATA[Bhadra Upper Bank Project]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[election]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[madhya pradesh]]></category>
		<category><![CDATA[MP election]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[trending news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33463</guid>

					<description><![CDATA[ಮಧ್ಯಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾಗಿರುವ 230 ಶಾಸಕರಲ್ಲಿ 205 ಮಂದಿ ಕೋಟ್ಯಾಧಿಪತಿಗಳಾಗಿದ್ದು, 134 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಮೂವರು ಶ್ರೀಮಂತ ಶಾಸಕರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಕೂಡಾ ಇದ್ದಾರೆ. ಎಲ್ಲಾ ಶಾಸಕರ ಸರಾಸರಿ ಆಸ್ತಿ 11.77 ಕೋಟಿ ರುಪಾಯಿ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ &#160;(Association for Democratic Reforms &#8211; ADR) ವರದಿ ಪ್ರಕಾರ, ರತ್ಲಾಮ್ ಸಿಟಿಯಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ 296 ಕೋಟಿ ರೂಪಾಯಿ ಮೌಲ್ಯದ [&#8230;]]]></description>
										<content:encoded><![CDATA[
<p>ಮಧ್ಯಪ್ರದೇಶದಲ್ಲಿ ಹೊಸದಾಗಿ ಚುನಾಯಿತರಾಗಿರುವ 230 ಶಾಸಕರಲ್ಲಿ 205 ಮಂದಿ ಕೋಟ್ಯಾಧಿಪತಿಗಳಾಗಿದ್ದು, 134 ಕೋಟಿ ರುಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ಮೂವರು ಶ್ರೀಮಂತ ಶಾಸಕರಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಕೂಡಾ ಇದ್ದಾರೆ. ಎಲ್ಲಾ ಶಾಸಕರ ಸರಾಸರಿ ಆಸ್ತಿ 11.77 ಕೋಟಿ ರುಪಾಯಿ.</p>



<p>ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ &nbsp;(Association for Democratic Reforms &#8211; ADR) ವರದಿ ಪ್ರಕಾರ, ರತ್ಲಾಮ್ ಸಿಟಿಯಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಚೈತನ್ಯ ಕಶ್ಯಪ್ 296 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಅವರ ಪಕ್ಷದ ಸಹೋದ್ಯೋಗಿ ಸಂಜಯ್ ಸತ್ಯೇಂದ್ರ ಪಾಠಕ್ (ವಿಜಯರಾಘವಗಢ) 242 ಕೋಟಿ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.</p>



<p>1 ಕೋಟಿ ರುಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಶಾಸಕರ ಸಂಖ್ಯೆ 2018 ರಲ್ಲಿ 187 ಇತ್ತು, ಈಗ 2023 ರಲ್ಲಿ ಈ ಸಂಖ್ಯೆ 205 ಕ್ಕೆ ಏರಿದೆ ಎಂದು ಎಡಿಆರ್‌ ವರದಿ ತಿಳಿಸಿದೆ. ಈ ಕೋಟ್ಯಾಧಿಪತಿ ಶಾಸಕರಲ್ಲಿ 144 ಬಿಜೆಪಿ ಮತ್ತು 61 ಕಾಂಗ್ರೆಸ್‌ನವರು.</p>



<p>ಬಿಜೆಪಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 163 ಸ್ಥಾನಗಳನ್ನು ಗೆದ್ದಿದೆ. 2018 ರಲ್ಲಿ ಇದ್ದ 109 ಸ್ಥಾನಗಳ &nbsp;ಸಂಖ್ಯೆಯನ್ನು ಈ ಬಾರಿ ಹೆಚ್ಚಿಸಿಕೊಂಡಿದೆ. ರಾಜ್ಯದಲ್ಲಿ 2018 ರಲ್ಲಿ 114 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 66 ಸ್ಥಾನಗಳಿಗೆ ಇಳಿದಿದೆ. ಮಧ್ಯಪ್ರದೇಶದ ರಾಜಕೀಯಕ್ಕೆ ಹೊಸದಾದ ಭಾರತ್ ಆದಿವಾಸಿ ಪಕ್ಷವು ಒಂದು ಕ್ಷೇತ್ರದಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.</p>



<p>ಭಾರತ್ ಆದಿವಾಸಿ ಪಕ್ಷದಿಂದ ಗೆದ್ದಿರುವ ಅಭ್ಯರ್ಥಿ ಕಮಲೇಶ್ ದೊಡಿಯಾರ್ ಅವರು ಕಡಿಮೆ ಆಸ್ತಿಯನ್ನು ಹೊಂದಿದ್ದು, 18 ಲಕ್ಷ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ.</p>



<p>ಕಡಿಮೆ ಆಸ್ತಿ ಹೊಂದಿರುವ ಇತರ ಇಬ್ಬರು ಅಭ್ಯರ್ಥಿಗಳಲ್ಲಿ ಬಿಜೆಪಿಯ ಸಂತೋಷ್ ವರ್ಕಡೆ (ಸಿಹೋರಾ) 25 ಲಕ್ಷ ಮೌಲ್ಯದ ಆಸ್ತಿ ಮತ್ತು ಅವರ ಬಿಜೆಪಿಯ ಕಾಂಚನ್ ಮುಖೇಶ್ ತನ್ವೆ (ಖಾಂಡ್ವಾ) ಒಟ್ಟು 26 ಲಕ್ಷ ಆಸ್ತಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.</p>



<p>ಅತಿ ಹೆಚ್ಚು ಲಯೇಬಿಲಿಟಿ ಹೊಂದಿರುವ ಅಭ್ಯರ್ಥಿಗಳ ಪೈಕಿ ಬಿಜೆಪಿಯ ಮಾಜಿ ಸಚಿವ ಸುರೇಂದ್ರ ಪಟ್ವಾ (ಭೋಜ್‌ಪುರ್) 57 ಕೋಟಿ ರುಪಾಯಿ ಸಾಲವನ್ನು ಹೊಂದಿದ್ದಾರೆ. ಕಾಂಗ್ರೆಸ್‌ನ ದಿನೇಶ್ ಜೈನ್ (ಮಹಿದ್‌ಪುರ) 30 ಕೋಟಿ &nbsp;ರುಪಾಯಿ ಸಾಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು &nbsp;23 &nbsp;ಕೋಟಿ ರುಪಾಯಿ ಸಾಲದೊಂದಿಗೆ ಬಿಜೆಪಿಯ ಭೂಪೇಂದ್ರ ಸಿಂಗ್ (ಖುರೈ) ಮೂರನೇ ಸ್ಥಾನದಲ್ಲಿದ್ದಾರೆ.</p>



<p>205 ಕೋಟ್ಯಾಧಿಪತಿಗಳ ಪೈಕಿ 102 ಶಾಸಕರು 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ. ಸುಮಾರು 71 ಶಾಸಕರು 2 ಕೋಟಿಯಿಂದ 5 ಕೋಟಿ ರುಪಾಯಿಯವರೆಗೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಅಲ್ಲದೆ, 48 ಶಾಸಕರು 50 ಲಕ್ಷದಿಂದ 2 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದರೆ, ಒಂಬತ್ತು ಚುನಾಯಿತ ಶಾಸಕರು 50 ಲಕ್ಷಕ್ಕಿಂತ ಕಡಿಮೆ ಆಸ್ತಿ ಹೊಂದಿದ್ದಾರೆ.</p>



<p>ಹೊಸದಾಗಿ ಆಯ್ಕೆಯಾದ ಶಾಸಕರ ಸರಾಸರಿ ಆಸ್ತಿ 2018 ರಲ್ಲಿ 10.17 ಕೋಟಿಯಿಂದ &nbsp;ಈ ವರ್ಷಕ್ಕೆ 11.77 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಎಡಿಆರ್ ವರದಿ ತಿಳಿಸಿದೆ.</p>
]]></content:encoded>
					
		
		
			</item>
	</channel>
</rss>
