<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>muruga mata &#8211; Peepal Media</title>
	<atom:link href="https://peepalmedia.com/tag/muruga-mata/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 29 Apr 2024 11:02:39 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>muruga mata &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಪೋಕ್ಸೋ : ಮತ್ತೆ ಜೈಲು ಪಾಲಾದ ಚಿತ್ರದುರ್ಗದ ಡಾ.ಶಿವಮೂರ್ತಿಗಳು</title>
		<link>https://peepalmedia.com/dr-shivamurthy-of-chitradurga-who-was-jailed-again/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 29 Apr 2024 11:02:37 +0000</pubDate>
				<category><![CDATA[ಅಪರಾಧ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Dr Shivamurthy]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38906</guid>

					<description><![CDATA[ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿಗಳು ಮತ್ತೆ ಜೈಲುಪಾಲಾಗಿದ್ದಾರೆ. ಇಂದು ಚಿತ್ರದುರ್ಗದ ಸೆಶನ್ಸ್ ಕೋರ್ಟ್ ನಲ್ಲಿ ಶರಣಾಗುವ ಮೂಲಕ ಡಾ.ಶಿವಮೂರ್ತಿಗಳು ಮತ್ತೆ ಜೈಲು ಸೇರುವಂತಾಗಿದೆ. ಡಾ.ಶಿವಮೂರ್ತಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ದಾವಣಗೆರೆಯಿಂದ ಆಗಮಿಸಿದ ಮುರುಘಾ ಶ್ರೀ ಇಂದು ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗೆ ಬಂದು ಶರಣಾಗಿದ್ದಾರೆ. ಈ ವೇಳೆ ಶ್ರೀಗಳನ್ನು ನ್ಯಾಯಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುರುಘಾ [&#8230;]]]></description>
										<content:encoded><![CDATA[
<p>ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿಗಳು ಮತ್ತೆ ಜೈಲುಪಾಲಾಗಿದ್ದಾರೆ. ಇಂದು ಚಿತ್ರದುರ್ಗದ ಸೆಶನ್ಸ್ ಕೋರ್ಟ್ ನಲ್ಲಿ ಶರಣಾಗುವ ಮೂಲಕ ಡಾ.ಶಿವಮೂರ್ತಿಗಳು ಮತ್ತೆ ಜೈಲು ಸೇರುವಂತಾಗಿದೆ.</p>



<p>ಡಾ.ಶಿವಮೂರ್ತಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ದಾವಣಗೆರೆಯಿಂದ ಆಗಮಿಸಿದ ಮುರುಘಾ ಶ್ರೀ ಇಂದು ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗೆ ಬಂದು ಶರಣಾಗಿದ್ದಾರೆ.</p>



<p>ಈ ವೇಳೆ ಶ್ರೀಗಳನ್ನು ನ್ಯಾಯಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುರುಘಾ ಶ್ರೀಗಳನ್ನು ಪೊಲೀಸ್ ವ್ಯಾನ್ ನಲ್ಲಿ ಜೈಲಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.</p>



<p>ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿತ್ತು. ಅಲ್ಲದೇ ಸಂತ್ರಸ್ತೆಯರನ್ನು ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು.</p>
]]></content:encoded>
					
		
		
			</item>
		<item>
		<title>ಮುರುಘಾ ಮಠದ ಶಿವಮೂರ್ತಿಗಳ ಜಾಮೀನು ಅರ್ಜಿ ವಿಚಾರಣೆ ನವೆಂಬರ್ 15 ಕ್ಕೆ ಮುಂದೂಡಿಕೆ</title>
		<link>https://peepalmedia.com/shivamurthys-bail-application-hearing-adjourned-to-november-15/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 10 Nov 2023 12:16:44 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shivamurthi murugha]]></category>
		<guid isPermaLink="false">https://peepalmedia.com/?p=31839</guid>

					<description><![CDATA[ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನವೆಂಬರ್ 15ಕ್ಕೆ ಮುಂದೂಡಿದೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್ 15 ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಶಿವಮೂರ್ತಿಗಳಿಗೆ ಜಾಮೀನು‌ ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್ ನೀಡಿರುವ ಪ್ರತಿಯನ್ನು ಆರೋಪಿಯ ಪರ ವಕೀಲರಾದ ಸಂದೀಪ್ ಪಾಟೀಲ್ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು. ಶ್ಯೂರಿಟಿ ಪ್ರತಿಗಳನ್ನು ಪರಿಶೀಲಿಸುವ ಸಂಬಂಧ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದೆ. [&#8230;]]]></description>
										<content:encoded><![CDATA[
<p>ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನವೆಂಬರ್ 15ಕ್ಕೆ ಮುಂದೂಡಿದೆ. ಈಗಾಗಲೇ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಅದನ್ನು ಪರಿಶೀಲಿಸುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ನವೆಂಬರ್ 15 ಕ್ಕೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.</p>



<p>ಶಿವಮೂರ್ತಿಗಳಿಗೆ ಜಾಮೀನು‌ ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್ ನೀಡಿರುವ ಪ್ರತಿಯನ್ನು ಆರೋಪಿಯ ಪರ ವಕೀಲರಾದ ಸಂದೀಪ್ ಪಾಟೀಲ್ ಶುಕ್ರವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದರು.</p>



<p>ಶ್ಯೂರಿಟಿ ಪ್ರತಿಗಳನ್ನು ಪರಿಶೀಲಿಸುವ ಸಂಬಂಧ ನ್ಯಾಯಾಲಯ ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದೆ. ಶಾಸಕ ಕೆ.ಸಿ.ವಿರೇಂದ್ರ(ಪಪ್ಪಿ) ಅವರ ಸಹೋಧರ ಕೆ.ಸಿ.ನಾಗರಾಜ್ ಹಾಗೂ ಮಧುಸೂದನ್ ಎಂಬುವರಿಂದ ಶ್ಯೂರಿಟಿ ಹಾಕಿದ್ದು, ಇದರೊಟ್ಟಿಗೆ ಎರಡು ಲಕ್ಷ ರೂ. ಬಾಂಡ್ ಸಲ್ಲಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮುರುಘಾ ಮಠಕ್ಕೆ ಆಡಳಿತಾಧಿಕಾರಿ: ವರದಿಯ ನಂತರ ತೀರ್ಮಾನ: ಸಿಎಂ ಬೊಮ್ಮಾಯಿ</title>
		<link>https://peepalmedia.com/administrator-for-muruga-mutt-conclusion-after-report-cm-bommai/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 08 Nov 2022 13:55:43 +0000</pubDate>
				<category><![CDATA[ಚಿತ್ರದುರ್ಗ]]></category>
		<category><![CDATA[ರಾಜ್ಯ]]></category>
		<category><![CDATA[BASAVARAJ BOMMAYI]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[janasankalpa yatre]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[siddaramayya]]></category>
		<guid isPermaLink="false">https://peepalmedia.com/?p=14860</guid>

					<description><![CDATA[ಚಿತ್ರದುರ್ಗ (ಹೊಸದುರ್ಗ):&#160;ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು&#160; ಅರ್ಜಿ&#160; ಬಂದಿದ್ದು, ನೇಮಿಸುವ ಪೂರ್ವದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದೆ.&#160; ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ&#160; ಬಸವರಾಜ ಬೊಮ್ಮಾಯಿ ತಿಳಿಸಿದರು. &#160;ಈ ಕುರಿತು ಸಾಣೇಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವ್ಯಾಖ್ಯಾನ ಮಾಡುವುದಿಲ್ಲ. ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ನಂಬಿಕೆಗಳಿಗೆ ಕೊಡಲಿ [&#8230;]]]></description>
										<content:encoded><![CDATA[
<p><strong>ಚಿತ್ರದುರ್ಗ (ಹೊಸದುರ್ಗ):&nbsp;</strong>ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ಎಂದು&nbsp; ಅರ್ಜಿ&nbsp; ಬಂದಿದ್ದು, ನೇಮಿಸುವ ಪೂರ್ವದಲ್ಲಿ ಏನು ನಡೆದಿದೆ ಎನ್ನುವುದರ ಬಗ್ಗೆ ನ್ಯಾಯ ಸಮ್ಮತ ಪ್ರಕ್ರಿಯೆ ನಡೆಯುತ್ತಿದೆ.&nbsp; ಕಂದಾಯ ಇಲಾಖೆಯಿಂದ ಸ್ಥಿತಿಗತಿಗಳ ಬಗ್ಗೆ ವರದಿ ಕೇಳಿದ್ದು, ವರದಿ ಬಂದ ನಂತರ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ&nbsp; ಬಸವರಾಜ ಬೊಮ್ಮಾಯಿ ತಿಳಿಸಿದರು.</p>



<p>&nbsp;ಈ ಕುರಿತು ಸಾಣೇಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುರುಘಾ ಶ್ರೀಗಳ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ವ್ಯಾಖ್ಯಾನ ಮಾಡುವುದಿಲ್ಲ. ನ್ಯಾಯಾಲಯ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.</p>



<p><strong>ನಂಬಿಕೆಗಳಿಗೆ </strong><strong>ಕೊಡಲಿ </strong><strong>ಏಟು </strong><strong>ಕೊಡುವ </strong><strong>ಕೆಲಸ</strong></p>



<p>ಶಾಸಕ ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಶತಮಾನಗಳಿಂದ ಯಾವುದೇ ಧರ್ಮ ನಡೆಯುವುದು ನಂಬಿಕೆ, ವಿಶ್ವಾಸದ ಮೇಲೆ ಸ್ಥಾಪಿತವಾಗಿರುವ ನಂಬಿಕೆಗಳಿಗೆ ಕೊಡಲಿ ಏಟು ಕೊಡುವ ಕೆಲಸ ಮಾಡಿದ್ದಾರೆ. ಅದರ ಮೇಲೆ ಚರ್ಚೆ ಮಾಡುವುದೇನಿದೆ. ತಾಂತ್ರಿಕವಾಗಿ ಅವರ ಶಾಲಾ, ಕಾಲೇಜುಗಳ ಪ್ರಮಾಣಪತ್ರದಲ್ಲಿ ಹಿಂದೂ ಎಂದೇ ನಮೂದಾಗಿದೆ. ನಂಬಿಕೆಗಳು ಶತಮಾನಗಳಿಂದ ಇದೆ. ಜನರ ನಂಬಿಕೆಯನ್ನು ಘಾಸಿ ಮಾಡುವಂಥ ಕೆಲಸ ಮಾಡಿ ಪುನಃ ಚರ್ಚೆ ಮಾಡುವುದು ಏನೂ ಇಲ್ಲ. ಅವರ ಕ್ಷಮೆಯೂ ಬೇಕಾಗಿಲ್ಲ. ಜನ ತೀರ್ಮಾನ ಮಾಡುತ್ತಾರೆ ಎಂದರು.</p>



<p>&nbsp;<strong>ಜನಸಂಕಲ್ಪಯಾತ್ರೆಗೆ </strong><strong>ಸಿದ್ದರಾಮಯ್ಯ </strong><strong>ಅವರಿಗೆ </strong><strong>ಆಹ್ವಾನ</strong></p>



<p>ಜನಸಂಕಲ್ಪ ಯಾತ್ರೆಯಲ್ಲಿ ಜನರೇ ಸೇರುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡುತ್ತೇನೆ ಬಂದು ನೋಡಲಿ ಎಂದರು.&nbsp; ಮಾಧ್ಯಮದಲ್ಲಿ ತೋರಿಸುವ ಜನಸಾಗರವೇ ಉತ್ತರ. ಹೀಗಾಗಿ ಜನಸಂಕಲ್ಪ ಯಾತ್ರೆ, ವಿಜಯಸಂಕಲ್ಪವಾಗಿ ಪರಿವರ್ತನೆಯಾಗಲಿದೆ ಎಂದರು.</p>
]]></content:encoded>
					
		
		
			</item>
		<item>
		<title>ಮುರುಘಾ ಮಠಕ್ಕೆ ಪ್ರಭಾರಿ ಪೀಠಾಧ್ಯಕ್ಷರ ನೇಮಕ</title>
		<link>https://peepalmedia.com/muruga-matakke-prabhari-pithadyakshara-nemaka/</link>
		
		<dc:creator><![CDATA[Peepal Media]]></dc:creator>
		<pubDate>Mon, 17 Oct 2022 11:10:27 +0000</pubDate>
				<category><![CDATA[ಚಿತ್ರದುರ್ಗ]]></category>
		<category><![CDATA[ರಾಜ್ಯ]]></category>
		<category><![CDATA[chitradurga]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=11461</guid>

					<description><![CDATA[ಚಿತ್ರದುರ್ಗ: ಮುರುಘಾ ಮಠದ ಮುರುಘ ರಾಜೇಂದ್ರ ಶರಣರ ಮೇಲಿನ ಅತ್ಯಾಚಾರ ಪ್ರಕರಣಗಳು ಮತ್ತು ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಮಠದ ಪೂಜಾ ಕೈಂಕರ್ಯ ನೋಡಿಕೊಳ್ಳಲು ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಶ್ರೀಗಳನ್ನು ನೇಮಕ ಮಾಡಲಾಗಿದೆ. ಮುರುಘಾ ಶರಣರು ತಮ್ಮ ಮೇಲಿನ ಆರೋಪಗಳಿಂದ ಹೊರಬರುವವರೆಗೆ ಪೀಠತ್ಯಾಗ ಮಾಡಬೇಕು ಎಂದು ಭಕ್ತರ ಒಂದು ವರ್ಗ ಒತ್ತಾಯಿಸುತ್ತಿರುವ ಬೆನ್ನಲ್ಲೇ ಈ ನೇಮಕಾತಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪೀಠತ್ಯಾಗ ಮಾಡಲು ಒಲ್ಲದ ಮುರುಘಾ ಶರಣರು ಮಠದ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು [&#8230;]]]></description>
										<content:encoded><![CDATA[
<p><strong>ಚಿತ್ರದುರ್ಗ:</strong> ಮುರುಘಾ ಮಠದ ಮುರುಘ ರಾಜೇಂದ್ರ ಶರಣರ ಮೇಲಿನ ಅತ್ಯಾಚಾರ ಪ್ರಕರಣಗಳು ಮತ್ತು ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಮಠದ ಪೂಜಾ ಕೈಂಕರ್ಯ ನೋಡಿಕೊಳ್ಳಲು ಪ್ರಭಾರ ಪೀಠಾಧ್ಯಕ್ಷರಾಗಿ ದಾವಣಗೆರೆ ವಿರಕ್ತ ಮಠದ ಬಸವ ಪ್ರಭು ಶ್ರೀಗಳನ್ನು ನೇಮಕ ಮಾಡಲಾಗಿದೆ.</p>



<p>ಮುರುಘಾ ಶರಣರು ತಮ್ಮ ಮೇಲಿನ ಆರೋಪಗಳಿಂದ ಹೊರಬರುವವರೆಗೆ ಪೀಠತ್ಯಾಗ ಮಾಡಬೇಕು ಎಂದು ಭಕ್ತರ ಒಂದು ವರ್ಗ ಒತ್ತಾಯಿಸುತ್ತಿರುವ ಬೆನ್ನಲ್ಲೇ ಈ ನೇಮಕಾತಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.</p>



<p>ಪೀಠತ್ಯಾಗ ಮಾಡಲು ಒಲ್ಲದ ಮುರುಘಾ ಶರಣರು ಮಠದ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಬಸವಪ್ರಭು ಶರಣರನ್ನು ನೇಮಕಾತಿ ಮಾಡಿದ್ದು, ಈಗಾಗಲೇ ಅವರು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/10/WhatsApp-Image-2022-10-17-at-4.48.13-PM.jpeg" alt="" class="wp-image-11505" width="500" height="686"/></figure></div>


<p>ದಾವಣಗೆರೆಯ ಬಸವಪ್ರಭು ಸ್ವಾಮೀಜಿ ಭಕ್ತರಿಂದ ದುಶ್ಚಟಗಳನ್ನು ಭಿಕ್ಷೆ ಬೇಡುವ ಹೊಸ ಆಂದೋಲನ ನಡೆಸಿ ಜನಮೆಚ್ಚುಗೆ ಪಡೆದಿದ್ದರು. ಬೀಡಿ, ತಂಬಾಕು, ಸಿಗರೇಟು, ಮದ್ಯಪಾನ ಬಿಡುವಂತೆ ಮನವೊಲಿಸುವ ಅಭಿಯಾನದ ಮೂಲಕ ಸ್ವಾಮೀಜಿ ಹೆಸರು ಮಾಡಿದ್ದರು.</p>
]]></content:encoded>
					
		
		
			</item>
		<item>
		<title>&#8216;ಪೋಕ್ಸೊ&#8217; ಅಡಿಯಲ್ಲಿ ಮುರುಘಾ ಶರಣರ ವಿರುದ್ಧ ಮತ್ತೆ ಎರಡು ಪ್ರಕರಣ ದಾಖಲು</title>
		<link>https://peepalmedia.com/two-more-cases-have-been-filed-against-muruga-sharan-under-pocso/</link>
		
		<dc:creator><![CDATA[Peepal Media]]></dc:creator>
		<pubDate>Fri, 14 Oct 2022 00:51:59 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[murugha shri]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pocso]]></category>
		<category><![CDATA[POCSO act]]></category>
		<category><![CDATA[shivamurthi murugha]]></category>
		<guid isPermaLink="false">https://peepalmedia.com/?p=10565</guid>

					<description><![CDATA[ಪೋಕ್ಸೊ ಪ್ರಕರಣದ ಅಡಿಯಲ್ಲಿ ಮುರುಘಾ ಮಠದ ಶಿವಮೂರ್ತಿಗಳ ಮೇಲೆ ಮತ್ತೆ ಎರಡು ಹೊಸ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಹೆಣ್ಣು ಮಕ್ಕಳ ಹೇಳಿಕೆ ಮತ್ತು ಪೂರಕ ಸಾಕ್ಷಾಧಾರಗಳ ಕಲೆ ಹಾಕಿದ ನಂತರ ಎಫ್ಐಆರ್ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುರುಘಾ ಮಠದ ವ್ಯಾಪ್ತಿಯಲ್ಲಿ ಬರುವ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ 12 ಮತ್ತು 14 ವರ್ಷದ ಹೆಣ್ಣು ಮಕ್ಕಳಿಬ್ಬರೂ ತಮ್ಮ ಪೋಷಕರೊಂದಿಗೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹೋಗಿ ದೂರು ದಾಖಲಿಸಿದ್ದಾರೆ. ಮುರುಘಾ ಶರಣರ ಹಿಂದಿನ [&#8230;]]]></description>
										<content:encoded><![CDATA[
<p style="font-size:20px">ಪೋಕ್ಸೊ ಪ್ರಕರಣದ ಅಡಿಯಲ್ಲಿ ಮುರುಘಾ ಮಠದ ಶಿವಮೂರ್ತಿಗಳ ಮೇಲೆ ಮತ್ತೆ ಎರಡು ಹೊಸ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಹೆಣ್ಣು ಮಕ್ಕಳ ಹೇಳಿಕೆ ಮತ್ತು ಪೂರಕ ಸಾಕ್ಷಾಧಾರಗಳ ಕಲೆ ಹಾಕಿದ ನಂತರ ಎಫ್ಐಆರ್ ಪ್ರಕ್ರಿಯೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>



<p style="font-size:20px">ಮುರುಘಾ ಮಠದ ವ್ಯಾಪ್ತಿಯಲ್ಲಿ ಬರುವ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ 12 ಮತ್ತು 14 ವರ್ಷದ ಹೆಣ್ಣು ಮಕ್ಕಳಿಬ್ಬರೂ ತಮ್ಮ ಪೋಷಕರೊಂದಿಗೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹೋಗಿ ದೂರು ದಾಖಲಿಸಿದ್ದಾರೆ. ಮುರುಘಾ ಶರಣರ ಹಿಂದಿನ ಪ್ರಕರಣಗಳ ಬಗ್ಗೆ ಸಂಪೂರ್ಣ ಜವಾಬ್ದಾರಿ ತಗೆದುಕೊಂಡಿದ್ದ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಅವರನ್ನು ಸಂಪರ್ಕಿಸಿದ ನಂತರ ಅವರ ಸಲಹೆಯ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಲಾಗಿದೆ.</p>



<figure class="wp-block-image size-full"><img decoding="async" width="640" height="360" src="https://peepalmedia.com/wp-content/uploads/2022/10/images-2022-09-13T124955.423.jpeg" alt="" class="wp-image-10566" srcset="https://peepalmedia.com/wp-content/uploads/2022/10/images-2022-09-13T124955.423.jpeg 640w, https://peepalmedia.com/wp-content/uploads/2022/10/images-2022-09-13T124955.423-300x169.jpeg 300w, https://peepalmedia.com/wp-content/uploads/2022/10/images-2022-09-13T124955.423-150x84.jpeg 150w" sizes="(max-width: 640px) 100vw, 640px" /></figure>



<p style="font-size:20px">ಸಧ್ಯ ಶಿವಮೂರ್ತಿಗಳು ದಲಿತ ದೌರ್ಜನ್ಯ ತಡೆ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಗೆ ಕೋರಿ 3 ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಈಗ ಮತ್ತೂ ಎರಡು ಪ್ರಕರಣ ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗುತ್ತಿದ್ದು, ಶಿವಮೂರ್ತಿಗಳಿಗೆ ಸಧ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ ಎಂದೇ ಅಂದಾಜಿಸಲಾಗಿದೆ‌. ಈ ಬಗ್ಗೆ <a href="https://the-file.in/2022/10/governance/13645/">&#8216;<strong>ದಿ ಫೈಲ್&#8217;</strong></a> ವರದಿ ಮಾಡಿದೆ. ಮುಂದಿನ ಬೆಳವಣಿಗೆ ಬಗ್ಗೆ ನಿರೀಕ್ಷಿಸಲಾಗುತ್ತಿದೆ.</p>
]]></content:encoded>
					
		
		
			</item>
		<item>
		<title>ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನಕ್ಕೆ</title>
		<link>https://peepalmedia.com/shivamurthi-murugha-sharanaru-nyayanga-bandanakke/</link>
		
		<dc:creator><![CDATA[Peepal Media]]></dc:creator>
		<pubDate>Mon, 05 Sep 2022 06:16:41 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[chitradurga]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pocso]]></category>
		<guid isPermaLink="false">https://peepalmedia.com/?p=3906</guid>

					<description><![CDATA[ಚಿತ್ರದುರ್ಗ: ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಶ್ರೀ ಮುರುಘಾ ಮಠದ ಮಠಾಧೀಶರಾಗಿದ್ದ ಶಿವಮೂರ್ತಿಯವರ ಪೊಲೀಸ್‌ ಕಸ್ಟಡಿ ಇಂದು ಮುಕ್ತಾಯಗೊಂಡಿದೆ. ನಾಲ್ಕು ದಿನಗಳ ಹಿಂದೆ ವಿಚಾರಣೆಗೆಂದು ಅವರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇಂದು ಅವರನ್ನು ಚಿತ್ರದುರ್ಗ ಜಿಲ್ಲಾ 2 ನೇ ಸೆಶನ್ಸ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಮುರುಘಾ ಶರಣರ ಪೊಲೀಸ್ ವಿಚಾರಣೆ ಅವಧಿ ಕೊನೆಯಾದ ಕಾರಣ ನ್ಯಾ. ಕೋಮಲ ಅವರು ಆರೋಪಿ ಶಿವಮೂರ್ತಿಯವರ ನ್ಯಾಯಾಂಗ ಬಂಧನವನ್ನು ಮತ್ತೆ 9 ದಿನಗಳ ಅವಧಿಗೆ ವಿಸ್ತರಿಸಿ [&#8230;]]]></description>
										<content:encoded><![CDATA[
<pre id="tw-target-text" class="wp-block-preformatted has-medium-font-size"><strong>ಚಿತ್ರದುರ್ಗ:</strong> ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಶ್ರೀ ಮುರುಘಾ ಮಠದ ಮಠಾಧೀಶರಾಗಿದ್ದ ಶಿವಮೂರ್ತಿಯವರ ಪೊಲೀಸ್‌ ಕಸ್ಟಡಿ ಇಂದು ಮುಕ್ತಾಯಗೊಂಡಿದೆ. ನಾಲ್ಕು ದಿನಗಳ ಹಿಂದೆ ವಿಚಾರಣೆಗೆಂದು ಅವರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಇಂದು ಅವರನ್ನು ಚಿತ್ರದುರ್ಗ ಜಿಲ್ಲಾ 2 ನೇ ಸೆಶನ್ಸ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. 

ಮುರುಘಾ ಶರಣರ ಪೊಲೀಸ್ ವಿಚಾರಣೆ ಅವಧಿ ಕೊನೆಯಾದ ಕಾರಣ ನ್ಯಾ. ಕೋಮಲ ಅವರು ಆರೋಪಿ ಶಿವಮೂರ್ತಿಯವರ ನ್ಯಾಯಾಂಗ ಬಂಧನವನ್ನು ಮತ್ತೆ 9 ದಿನಗಳ ಅವಧಿಗೆ ವಿಸ್ತರಿಸಿ ಆದೇಶ ನೀಡಿದ್ದಾರೆ. ಆರೋಪಿ ಶಿವಮೂರ್ತಿಯವರ ಜಾಮೀನು ಅರ್ಜಿ ವಿಚಾರಣೆಯು ನ್ಯಾಯಾಧೀಶರ ಎದುರು ಸೆ. 7 ಕ್ಕೆ ಬರಲಿದೆ.

</pre>



<figure class="wp-block-image size-large"><img decoding="async" width="1024" height="707" src="https://peepalmedia.com/wp-content/uploads/2022/09/WhatsApp-Image-2022-09-05-at-11.35.15-AM-1-1024x707.jpeg" alt="" class="wp-image-3908" srcset="https://peepalmedia.com/wp-content/uploads/2022/09/WhatsApp-Image-2022-09-05-at-11.35.15-AM-1-1024x707.jpeg 1024w, https://peepalmedia.com/wp-content/uploads/2022/09/WhatsApp-Image-2022-09-05-at-11.35.15-AM-1-300x207.jpeg 300w, https://peepalmedia.com/wp-content/uploads/2022/09/WhatsApp-Image-2022-09-05-at-11.35.15-AM-1-768x530.jpeg 768w, https://peepalmedia.com/wp-content/uploads/2022/09/WhatsApp-Image-2022-09-05-at-11.35.15-AM-1.jpeg 1191w" sizes="(max-width: 1024px) 100vw, 1024px" /></figure>
]]></content:encoded>
					
		
		
			</item>
		<item>
		<title>ಮುರುಘಾ ಮಠದ ಶಿವಮೂರ್ತಿಗಳ ಜಾಮೀನು ಅರ್ಜಿ ವಜಾ</title>
		<link>https://peepalmedia.com/muruga-matada-shivamurty-jaminu-vaja/</link>
		
		<dc:creator><![CDATA[Peepal Media]]></dc:creator>
		<pubDate>Fri, 02 Sep 2022 07:24:21 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[breaking news]]></category>
		<category><![CDATA[chitradurga]]></category>
		<category><![CDATA[kannada]]></category>
		<category><![CDATA[kannada news]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=3618</guid>

					<description><![CDATA[ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿ ಮೇಲಿನ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಾಗಿ ನಿನ್ನೆಯ ದಿನ ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಸ್ವಾಮಿಗಳ ಜಾಮೀನು ಅರ್ಜಿ ವಜಾಗೊಂಡಿದೆ. ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಶಿವಮೂರ್ತಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ. ಅದರಂತೆ ಶಿವಮೂರ್ತಿಗಳಿಗೆ 14 ದಿನ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಕಳೆದ ಆಗಸ್ಟ್ ತಿಂಗಳ 30 ರಂದು ಶಿವಮೂರ್ತಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ಕ್ಕೆ ಜಾಮೀನು ಅರ್ಜಿ ವಿಚಾರಣೆ [&#8230;]]]></description>
										<content:encoded><![CDATA[
<p class="has-medium-font-size">ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿ ಮೇಲಿನ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಾಗಿ ನಿನ್ನೆಯ ದಿನ ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಸ್ವಾಮಿಗಳ ಜಾಮೀನು ಅರ್ಜಿ ವಜಾಗೊಂಡಿದೆ.</p>



<p class="has-medium-font-size">ಚಿತ್ರದುರ್ಗದ ಎರಡನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಇಂದು ಶಿವಮೂರ್ತಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ. ಅದರಂತೆ ಶಿವಮೂರ್ತಿಗಳಿಗೆ 14 ದಿನ ನ್ಯಾಯಾಂಗ ಬಂಧನ ಮುಂದುವರೆಯಲಿದೆ. ಕಳೆದ ಆಗಸ್ಟ್ ತಿಂಗಳ 30 ರಂದು ಶಿವಮೂರ್ತಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 1 ಕ್ಕೆ ಜಾಮೀನು ಅರ್ಜಿ ವಿಚಾರಣೆ ಸೆಪ್ಟೆಂಬರ್ 2 ಕ್ಕೆ ಮುಂದೂಡಲಾಗಿತ್ತು. ಈಗ ಜಿಲ್ಲಾ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.</p>



<p class="has-medium-font-size">ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿಗಳಿಗೆ ಬಂಧನದ ನಂತರದ ಕೆಲವೇ ಗಂಟೆಗಳಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಪ್ರಸ್ತುತ ಸ್ಥಳೀಯ ವೈದ್ಯಾಧಿಕಾರಿಗಳ ತಪಾಸಣೆಯಂತೆ ಸ್ವಾಮಿಗಳಿಗೆ ಹೃದಯ ಸಂಬಂಧಿ ಖಾಯಿಲೆ ಇರುವುದು ದೃಢಪಟ್ಟಿದೆ.</p>
]]></content:encoded>
					
		
		
			</item>
		<item>
		<title>ಸ್ವಾಮೀಜಿಗಳೂ ಮಠ ಮಾನ್ಯಗಳೂ..</title>
		<link>https://peepalmedia.com/swameejigalu-mata-maanyagalu/</link>
		
		<dc:creator><![CDATA[Mamata R]]></dc:creator>
		<pubDate>Thu, 01 Sep 2022 06:37:02 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mata]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=3474</guid>

					<description><![CDATA[ಜನರಿಗೆ ರಕ್ಷಣೆ ಕೊಡಲು ಸರ್ಕಾರ ಒಂದು ಸಾಕು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ&#160; ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳನ್ನು ಮುರುಘಾ ಮಠದ‌ ಘಟನೆಯ ಹಿನ್ನೆಲೆಯಲ್ಲಿ ಎತ್ತಿದ್ದಾರೆ ಲೇಖಕಿ, ಚಿಂತಕಿ ಮಮತಾ ಆರ್. ಮುರುಘಾ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಜನರಿಗೆ ರಕ್ಷಣೆ ಕೊಡಲು ಸರ್ಕಾರ ಒಂದು ಸಾಕು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ&nbsp; ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳನ್ನು ಮುರುಘಾ ಮಠದ‌ ಘಟನೆಯ ಹಿನ್ನೆಲೆಯಲ್ಲಿ ಎತ್ತಿದ್ದಾರೆ ಲೇಖಕಿ, ಚಿಂತಕಿ ಮಮತಾ ಆರ್.</strong></p></blockquote>



<p class="has-text-align-justify has-medium-font-size">ಮುರುಘಾ ಮಠದ ಸ್ವಾಮಿಗಳ ವಿಚಾರದಲ್ಲಿ ಇದೊಂದು ಪೊಲಿಟಿಕಲ್ ಗೇಮ್ ಆಗಿರಬಹುದು. ಚುನಾವಣಾ ಸಮಯದಲ್ಲಿ ಈ ರಾದ್ಧಾಂತ ಆಚೆ ಬಂದಿರುವುದರಿಂದ ಯಾರಾದರೂ ಮಠದ ಏಳ್ಗೆಯನ್ನು ಸಹಿಸದೇ ಪಿತೂರಿ ನಡೆಸಿದ್ದಿರಬಹುದು. ಸ್ವಾಮಿಗಳು ಹಾಸ್ಟೆಲ್ ಬಾಲಕಿಯರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡಿರಬಹುದು, ಇಲ್ಲದೆಯೂ ಇರಬಹುದು. ಇದೆಲ್ಲ ನಿರಂತರವಾಗಿ ನಡೆದು ಬಂದಿದ್ದು ಕಾರಣಾಂತರಗಳಿಂದ ಈ ಸಮಯದಲ್ಲಿ ವಿಷಯ ಬೆಳಕಿಗೆ ಬಂದಿರಬಹುದು ಎಂಬೆಲ್ಲ ಬಹು ಆಯಾಮಗಳಲ್ಲಿ ಈಗ ಚರ್ಚೆಯಾಗುತ್ತಿದೆ.</p>



<p class="has-text-align-justify has-medium-font-size">ಮೊದಲಿಗೆ ಮಠಗಳು ಹೇಗೆ ಹುಟ್ಟಿಕೊಂಡವು, ಸ್ವಾಮೀಜಿಗಳು ಹೇಗೆ ಮಠಗಳಲ್ಲಿ ಪೀಠಾಧಿಪತಿಗಳಾಗುವರು ಎಂಬುದು ಈಗ ಎಲ್ಲರಿಗೂ ಗೊತ್ತಿರುವ ವಿಚಾರ. ಧಾರ್ಮಿಕ ಶಕ್ತಿ ಪ್ರದರ್ಶನಗಳಿಗೆ ಮಠಗಳು ಹುಟ್ಟಿಕೊಂಡವು. ಯಾವುದೇ ಸ್ವಾಮೀಜಿಗೆ ಇಂತಿಷ್ಟೇ ವಿದ್ಯಾರ್ಹತೆ ಎನ್ನುವುದು ನಿಗದಿಯಾಗಿರುವುದಿಲ್ಲ. ಸ್ವಾಮೀಜಿಗಳಿಗಾಗಿಯೇ ಯಾವುದೇ ಪವಿತ್ರ ಗ್ರಂಥಗಳು ಇರುವುದಿಲ್ಲ. ಆಯಾ ಜಾತಿಗಳನ್ನು ಪ್ರತಿನಿಧಿಸುವ ಗಣ್ಯರೊಬ್ಬರು ದೀಕ್ಷೆ ತೆಗೆದುಕೊಂಡು ಸುಲಭದಲ್ಲಿ ಸ್ವಾಮೀಜಿಗಳಾಗುತ್ತಾರೆ. ಹಿಂದಿನ ದಿನಗಳಲ್ಲಿ ಜನರಲ್ಲಿ ಮುಗ್ಧತೆ ಇತ್ತು. ಸ್ವಾಮೀಜಿಗಳಲ್ಲೂ ಇತ್ತು. ನನ್ನಲ್ಲಿ ದೈವೀ ಶಕ್ತಿ ಇದೆ ಎಂದು ಅವರು ಹೇಳಿದರೆ ನೂರಾರು ಜನರು ನಂಬುತ್ತಿದ್ದರು .ಆ ಪೀಠಾಧಿಪತಿಗಳ ಸ್ಥಾನಕ್ಕೆ ಗೌರವವೂ ಇತ್ತು. ಅದರೆ ಈಗ ಹಾಗಿಲ್ಲ. ಮೊದಲು ಜನರಿಗೆ ಸ್ವಾಮೀಜಿಗಳ ಬಗೆಗಿದ್ದ ಧಾರ್ಮಿಕ ಭಾವನೆಗಳು ಈಗೀಗ ಕಡಿಮೆಯಾಗುತ್ತಿವೆ. ಒಂದು ಮಠ ಎಂದರೆ ಅಲ್ಲಿ ಸಾವಿರ ಕೋಟಿ ರುಪಾಯಿಗಳ ವ್ಯವಹಾರ ನಡೆಯುತ್ತಿರುತ್ತದೆ. ಸ್ವಾಮೀಜಿಗಳ ಮಾಲ್ ಗಳು ಅಂಗಡಿ ಮಳಿಗೆಗಳು ಮಠದ ಹಣದಲ್ಲಿ ನಡೆಯುತ್ತಿರುತ್ತವೆ.&nbsp; ಮುಗ್ಧ ಮಕ್ಕಳು ಮಹಿಳೆಯರು ಇವರಿಗೆ ಆಹಾರವಾಗುತ್ತಿದ್ದಾರೆ. ಒಂದು ದಿನದ ಮಟ್ಟಿಗೆ ಮಠಗಳಿಗೆ ಭೇಟಿ ಕೊಟ್ಟು ಅಲ್ಲಿಯ ಒಳ ವಿಚಾರಗಳನ್ನು ಗಮನಿಸಿದರೆ ಬಹುತೇಕ ಮಠಗಳು ಹಣ, ಮೋಜು, ಮಸ್ತಿಗಳಲ್ಲಿ ತೇಲಾಡುತ್ತಿರುವುದರ ಪ್ರತೀಕವಾಗಿ ಆ ದಿನದಲ್ಲಿ ಸಂಗ್ರಹವಾದ ಹಣ ಮತ್ತು ಇಶ್ಯೂ ಆದ ಚೆಕ್ ಗಳು ಇವೆಲ್ಲ ಗಮನಕ್ಕೆ ಬರುತ್ತವೆ.</p>



<p class="has-text-align-justify has-medium-font-size">ಸ್ವಾಮೀಜಿ ಒಂದು ಮಠ ಕಟ್ಟಿದರೆ ಗಂಡಸೊಬ್ಬ ಸಂಸಾರಿಯಾಗಿ ಬಂಧನದಲ್ಲಿ ಸಿಲುಕಿದ ಕತೆ ನೆನಪಾಗುತ್ತದೆ..ಒಬ್ಬನೇ ಇದ್ದ ಎಂದು ಹಸು ತರುತ್ತಾನೆ ಹಸು ನೋಡಿಕೊಳ್ಳಲು ಹೆಂಗಸನ್ನು ಮದುವೆಯಾಗುತ್ತಾನೆ. ನಂತರ ಹಸುವಿನ ಹಾಲು ಕುಡಿಯಲು ಬೆಕ್ಕು ಬಂದು ಸೇರಿಕೊಳ್ಳುತ್ತದೆ. ನಂತರ ಇಲಿಗಳು ಬಂದು ಸೇರಿದಂತೆ ಸ್ವಾಮೀಜಿಯೊಬ್ಬರು ಮಠ ಕಟ್ಟಿದರೆ ಅಲ್ಲೊಂದು ಹೆಡ್ ಆಫೀಸ್ ಬರುತ್ತದೆ ಅದೊಂದು ಧಾರ್ಮಿಕ ಸ್ಥಳವಾಗುತ್ತದೆ. ನಂತರ ʼಕ್ಯಾಸ್ಟ್ ಕಾರ್ಡ್ʼ ಆಗಿ ರಾಜಕಾರಣಿಗಳಿಗೆ ಲಾಭಕ್ಕೆ ಬರುತ್ತದೆ. ಟ್ಯಾಕ್ಸ್ ಲೆಕ್ಕಕ್ಕೆ ಸಿಗದ ರಾಜಕಾರಣಿಗಳ ಹಣಕ್ಕೆ ಮಠಗಳಲ್ಲಿ ಭಧ್ರತೆ ಸಿಗುತ್ತದೆ. ಒಂದರ್ಥದಲ್ಲಿ ರಾಜಕಾರಣಿಗಳ ಪ್ರೋತ್ಸಾಹದಿಂದಲೇ ಅವುಗಳು ನಡೆಯುತ್ತವೆ ಅಂದರೆ ಅದು ನಿಜವೇ ಆಗಿರುತ್ತದೆ!.</p>



<p class="has-text-align-justify has-medium-font-size">ಈ ಮಠಗಳು ಜನರಿಗೆ ಯಾವುದೇ ಗೈಡಿಂಗ್ಸ್ ಗಳನ್ನು ಕೊಡುವುದಿಲ್ಲ. ಆದರೆ ವಿಪುಲವಾದ ಧಾರ್ಮಿಕ ಗುಂಪುಗಳು ತಮ್ಮ ಧಾರ್ಮಿಕ ಭಕ್ತಿಗನುಗುಣವಾಗಿ ಇಂತಹ ಧಾರ್ಮಿಕ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಳ್ಳುತ್ತಾರೆ. ಇಂದು ಯಾವ ಸ್ವಾಮೀಜಿಗಳೂ ಹೇಳಿರುವ ಮಾತುಗಳು ನಿಜವಾಗಿಲ್ಲ. ಇಂತಹ ಕಡೆ ಬೆಂಕಿ ಬೀಳುತ್ತದೆ ಎಂದರೆ ಬಿದ್ದಿಲ್ಲ. ಅವರಲ್ಲಿ ಯಾವುದೋ ಒಂದು ಅತಿಮಾನುಷ ಶಕ್ತಿ ಇದೆ ಎಂಬುದೂ ಗೋಚರವಾಗಿಲ್ಲ. ಹೀಗಿರುವಾಗ, ಕೆಲವೊಂದು ಸಾಂಪ್ರದಾಯಿಕ ಮೌಲ್ಯಗಳ ಸಲುವಾಗಿ ಮಠಗಳನ್ನು ಕಾಯ್ದಿರಿಸಿಕೊಳ್ಳಬೇಕೇ ವಿನಃ ಸ್ವಾಮೀಜಿಗಳು ಸುಪರ್ ಪವರ್ ಎಂದಾಗಲಿ ಸ್ವಾಮೀಜಿಗಳು ಹೇಳಿದ್ದೆಲ್ಲ ನಿಜವಾಗುತ್ತದೆ ಎಂದಾಗಲೀ ಇವರನ್ನು ಮೇಲಿನ ಸ್ಥಾನದಲ್ಲಿ ಕೂಡಿಸಿದರೆ ಒಂದಲ್ಲಾ ಒಂದು ಇಂತಹ ಅವಘಡಗಳು ಘಟಿಸಿ ಹೋಗುತ್ತಿರುತ್ತವೆ.</p>



<p class="has-text-align-justify has-medium-font-size">ದೂರದ ಊರುಗಳಿಂದ, ಮಠದ ಹಾಸ್ಟೆಲ್ ಗಳಲ್ಲಿ ಭದ್ರತೆ ಸಿಗುತ್ತದೆ ಮತ್ತು ಸುರಕ್ಷೆಯ ದೃಷ್ಟಿಯಿಂದ ಮಠಗಳು ಒಳ್ಳೆಯದೆಂದು ಪೋಷಕರು ಹೊರಗಡೆ ಹೆಚ್ಚಿನ ಹಣ ಭರಿಸಲಾಗದೇ ಇಲ್ಲಿಗೆ ತಂದು ಸೇರಿಸುತ್ತಾರೆ. ಆಗ ಬೇಲಿಯೇ ಎದ್ದು ಹೊಲ ಮೇಯ್ದರೆ ಕೇಳುವವರಾರು? ಈಗಾಗಲೇ ಹಲವಾರು ಆಪಾದನೆಗಳು ಬೇರೆ ಮಠದ ಸ್ವಾಮೀಜಿಗಳ ಮೇಲೂ ಬಂದಿರುವುದರಿಂದ ಮತ್ತು ಬಾಲಕಿಯರ ಮೇಲೆ ನಡೆಸಿದ ಈ ಅತ್ಯಾಚಾರ ಘಟನೆಗಳಿಂದ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕಾವಿಧಾರಿಗಳಿಂದ ಎಚ್ಚರದಲ್ಲಿರಬೇಕಾಗಿ ಬಂದಿರುವುದು ಜನರ ದುರ್ದೈವ.</p>



<p class="has-text-align-justify has-medium-font-size">ಸರ್ಕಾರ ಒಂದು ಸಾಕು ಜನರಿಗೆ ರಕ್ಷಣೆ ಕೊಡಲು. ಅಥವಾ ಮಾರ್ಗಸೂಚಿಗಾಗಿ ಸಂವಿಧಾನ ಇರುವುದು ಸಾಕು. ಹೀಗಿರುವಾಗ&nbsp; ಇಂತೆಲ್ಲ ಮಠಗಳು ಹುಟ್ಟಿಕೊಂಡು ಇಷ್ಟೆಲ್ಲಾ ಅವ್ಯವಹಾರಗಳ ಕೇಂದ್ರಗಳಾಗಿ ಮಠಗಳು ಬೆಳೆಯಬೇಕಿದೆಯೇ? ಇವರ ಶಾಲೆಗಳ ಮಕ್ಕಳು, ಹಾಸ್ಟೆಲ್ ನಲ್ಲಿರುವ ಮಕ್ಕಳು, ಮಠಕ್ಕೆ ಬರುವ ಮಹಿಳೆಯರು ಇವರೆಲ್ಲರೂ ಇವರ ಕಾಮ ತೃಷೆಗೆ ಬಲಿಯಾಗುತ್ತಿರಬೇಕೇ? ಸ್ವಾಮೀಜಿ ಹುದ್ದೆಯ ಗೌರವವನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ಒಬ್ಬ ಸ್ವಾಮೀಜಿ ಶಕ್ತರೇ? ಈ ಎಲ್ಲ ಪ್ರಶ್ನೆಗಳು ಇಂದು ಮುಖ್ಯವಾಗುತ್ತವೆ.</p>



<p class="has-text-align-right"><strong><mark style="background-color:rgba(0, 0, 0, 0)" class="has-inline-color has-vivid-red-color">(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳಾಗಿರುತ್ತವೆ)</mark></strong></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/09/s.jpg" alt="" class="wp-image-3479" width="142" height="126" srcset="https://peepalmedia.com/wp-content/uploads/2022/09/s.jpg 361w, https://peepalmedia.com/wp-content/uploads/2022/09/s-300x267.jpg 300w" sizes="auto, (max-width: 142px) 100vw, 142px" /></figure>



<p class="has-medium-font-size"><strong>ಮಮತಾ ಆರ್ </strong><br>ಚಿಂತಕರು</p>
]]></content:encoded>
					
		
		
			</item>
		<item>
		<title>ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ʼನ್ಯಾಯ ದೊರೆಯಬೇಕಿದೆʼ: ಲೆಹರ್‌ ಸಿಂಗ್‌</title>
		<link>https://peepalmedia.com/atyachara-aropa-madiruva-balakiyarige-nyaya-sigabekide-lehar-singh-siroya/</link>
		
		<dc:creator><![CDATA[Peepal Media]]></dc:creator>
		<pubDate>Mon, 29 Aug 2022 10:39:30 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[chitradurga]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lehar singh siroya]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shivamurthi murugha]]></category>
		<guid isPermaLink="false">https://peepalmedia.com/?p=3323</guid>

					<description><![CDATA[ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶ ಶಿವಮೂರ್ತಿ ಮುರುಘಾ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ‘ನ್ಯಾಯ’ ದೊರಕಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸಂಸದ ಲೆಹರ್‌ ಸಿಂಗ್ ಸಿರೋಯ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪ ‘ಸುಳ್ಳು’ ಎಂದು ಪ್ರತಿಪಾದಿಸಿ, ಆರೋಪಿಗೆ ಬೆಂಬಲ ನೀಡಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡ, ಶರಣರ ವಿರುದ್ಧ ಮಠದ ಒಳಗಿನಿಂದಲೇ ಪಿತೂರಿ ನಡೆದಂತಿದೆ ಎಂದು ಸಮರ್ಥನೆಯ ದಾಟಿಯ [&#8230;]]]></description>
										<content:encoded><![CDATA[
<p class="has-text-align-justify has-medium-font-size"><strong>ಬೆಂಗಳೂರು:</strong> ಚಿತ್ರದುರ್ಗದ ಮುರುಘಾ ಮಠದ ಪೀಠಾಧೀಶ ಶಿವಮೂರ್ತಿ ಮುರುಘಾ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಬಾಲಕಿಯರಿಗೆ ‘ನ್ಯಾಯ’ ದೊರಕಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ರಾಜ್ಯಸಭಾ ಸಂಸದ ಲೆಹರ್‌ ಸಿಂಗ್ ಸಿರೋಯ ಹೇಳಿದ್ದಾರೆ.</p>



<p class="has-text-align-justify has-medium-font-size">ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಆರೋಪ ‘ಸುಳ್ಳು’ ಎಂದು ಪ್ರತಿಪಾದಿಸಿ, ಆರೋಪಿಗೆ ಬೆಂಬಲ ನೀಡಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡ, ಶರಣರ ವಿರುದ್ಧ ಮಠದ ಒಳಗಿನಿಂದಲೇ ಪಿತೂರಿ ನಡೆದಂತಿದೆ ಎಂದು ಸಮರ್ಥನೆಯ ದಾಟಿಯ ಹೇಳಿಕೆ ನೀಡಿದ್ದರು. ಇದಾದ ಒಂದು ದಿನದ ನಂತರ ಲೆಹರ್‌ ಸಿಂಗ್ ಬಾಲಕಿಯರ ಪರವಾಗಿ ಹೇಳಿಕೆ ನೀಡಿದ್ದಾರೆ.</p>



<p class="has-text-align-justify has-medium-font-size">ಲೆಹರ್‌ ಸಿಂಗ್ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ದುಃಖದ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.</p>



<p class="has-text-align-justify has-medium-font-size">ಪ್ರತಿ ಬಾರಿ ಈ ರೀತಿಯಲ್ಲಿ ಏನಾದರೂ ಸಂಭವಿಸಿದಾಗ, ಅದು ನಮ್ಮ ಸ್ವಂತ ಮತ್ತು ಸುತ್ತಮತ್ತಲಿನ ಜನರಲ್ಲಿ ನಮ್ಮ ವಿಶ್ವಾಸವನ್ನು ಅಲುಗಾಡಿಸುತ್ತದೆ. ಈ ಆರೋಪಗಳನ್ನು ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ನಾವು ಬದ್ಧರಾಗಿರಬೇಕು. ಹೀಗಿರುವಾಗ ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳು ಮತ್ತು ರಾಜಕೀಯ ಹಸ್ತಕ್ಷೇಪಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಸಿಂಗ್ ತಿಳಿಸಿದ್ದಾರೆ.</p>



<p class="has-text-align-justify has-medium-font-size">‌ʼಹೆಣ್ಣುಮಕ್ಕಳಿಗೆ ನ್ಯಾಯದ ಹೊರತಾಗಿ ಬೇರೇನೂ ಅರ್ಹವಾಗಿಲ್ಲʼ. ಈ ಪ್ರಕರಣವನ್ನು ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯದ ಹಿತಾಸಕ್ತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬ ಅನುಮಾನವಿದ್ದರೆ, ಅದನ್ನು ಸಹ ಪರಿಗಣಿಸಬೇಕು. ಈ ಸಂದರ್ಭದಲ್ಲಿ, ಗ್ರಹಿಕೆಗಳು ಮಾತ್ರ ಮುಖ್ಯವಲ್ಲ ಆದರೆ ನಮ್ಮ ಸಮಾಜದ ಆರೋಗ್ಯದಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ನಿರ್ಣಾಯಕ ಪಾತ್ರವಿದೆ ಎಂದಿದ್ದಾರೆ.</p>



<p class="has-text-align-justify has-medium-font-size">ಇಷ್ಟೇ ಅಲ್ಲದೆ, ನ್ಯಾಯದಾನದ ವಿಷಯದಲ್ಲಿ ಪ್ರಭಾವಗಳಿಗೆ ತನಿಖಾ ಸಂಸ್ಥೆಗಳು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳು ಇದ್ದಲ್ಲಿ, ಪ್ರಕರಣವನ್ನು ಕರ್ನಾಟಕದಿಂದ ಹೊರಗಿನ ರಾಜ್ಯಕ್ಕೆ ವರ್ಗಾವಣೆ ಮಾಡುವುದು ಸೂಕ್ತ ಎಂದು ಲೆಹರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Rajya sabha MP from Karnataka &amp; senior <a href="https://twitter.com/BJP4India?ref_src=twsrc%5Etfw">@BJP4India</a> leader Lahar Singh Siroya demands justice for minor girls in the Murugha Matha POCSO case. &quot;The girls deserve nothing but justice,&quot; he says.<br>Comes a day after <a href="https://twitter.com/BSYBJP?ref_src=twsrc%5Etfw">@BSYBJP</a> backed the seer accused of sexual abuse &amp; said case was &quot;false&quot; <a href="https://t.co/K9ffj5QdIq">pic.twitter.com/K9ffj5QdIq</a></p>&mdash; Anusha Ravi Sood (@anusharavi10) <a href="https://twitter.com/anusharavi10/status/1564129647511552001?ref_src=twsrc%5Etfw">August 29, 2022</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಮುರುಘಾಶರಣರು ಮತ್ತು ಸತ್ಯಸಂಧತೆ</title>
		<link>https://peepalmedia.com/muruga-sharanaru-analysis/</link>
		
		<dc:creator><![CDATA[Ravi Kumar N]]></dc:creator>
		<pubDate>Sun, 28 Aug 2022 09:44:16 +0000</pubDate>
				<category><![CDATA[ವಿಶೇಷ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[muruga mata]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[trending news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=3261</guid>

					<description><![CDATA[ತಮ್ಮ ನಿರಪರಾಧಿತನವನ್ನು ಸಾಬೀತು ಪಡಿಸಿಕೊಳ್ಳಲು ಮುರುಘಾಶರಣರು ಸಾಕ್ಷಿ, ವಾದಗಳನ್ನು ಆಧರಿಸಬೇಕಿಲ್ಲ. ಈ‌ ತಕ್ಷಣವೇ ಪೀಠತ್ಯಾಗ ಮಾಡಿ ತಮ್ಮ ಧರ್ಮನಿಷ್ಠೆಯನ್ನು, ನ್ಯಾಯ ಪರತೆಯನ್ನೂ ಅದಕ್ಕೂ ಮಿಗಿಲಾದ ನೈತಿಕ ಘನತೆಯನ್ನು ಎತ್ತಿ ಹಿಡಿಯಬೇಕು. ಮುರುಘಾಬೃಹನ್ನಠದ ಮುರುಘಾ ಶರಣರ ಮೇಲೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಕೇಸು ದಾಖಲಾಗಿದೆ. ಸಚ್ಚಾರಿತ್ರ್ಯರೂ, ಪ್ರಖರ ವೈಚಾರಿಕರೂ, ಪ್ರಗತಿಪರರೂ ಆದ ಮುರುಘಾಶರಣರ ಮೇಲಿನ ಈ ಆರೋಪ ದ ಹಿಂದೆ ಅಧಿಕಾರದ ದಾಹ ಇದೆ. ಪಿತೂರಿ ಇದೆ ಎಂಬ ಪ್ರತಿಕ್ರಿಯೆಗಳು ಈಗ ಹೊರಬಿದ್ದಿವೆ. [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ತಮ್ಮ ನಿರಪರಾಧಿತನವನ್ನು ಸಾಬೀತು ಪಡಿಸಿಕೊಳ್ಳಲು ಮುರುಘಾಶರಣರು ಸಾಕ್ಷಿ, ವಾದಗಳನ್ನು ಆಧರಿಸಬೇಕಿಲ್ಲ. ಈ‌ ತಕ್ಷಣವೇ ಪೀಠತ್ಯಾಗ ಮಾಡಿ ತಮ್ಮ ಧರ್ಮನಿಷ್ಠೆಯನ್ನು, ನ್ಯಾಯ ಪರತೆಯನ್ನೂ ಅದಕ್ಕೂ ಮಿಗಿಲಾದ ನೈತಿಕ ಘನತೆಯನ್ನು ಎತ್ತಿ ಹಿಡಿಯಬೇಕು. </strong></p></blockquote>



<p class="has-text-align-justify has-medium-font-size">ಮುರುಘಾಬೃಹನ್ನಠದ ಮುರುಘಾ ಶರಣರ ಮೇಲೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಕೇಸು ದಾಖಲಾಗಿದೆ. ಸಚ್ಚಾರಿತ್ರ್ಯರೂ, ಪ್ರಖರ ವೈಚಾರಿಕರೂ, ಪ್ರಗತಿಪರರೂ ಆದ ಮುರುಘಾಶರಣರ ಮೇಲಿನ ಈ ಆರೋಪ ದ ಹಿಂದೆ ಅಧಿಕಾರದ ದಾಹ ಇದೆ. ಪಿತೂರಿ ಇದೆ ಎಂಬ ಪ್ರತಿಕ್ರಿಯೆಗಳು ಈಗ ಹೊರಬಿದ್ದಿವೆ.</p>



<p class="has-text-align-justify has-medium-font-size">ಯಾವುದೇ ಪ್ರಭಾವಿ ವ್ಯಕ್ತಿಯ ವಿರುದ್ಧ ಇಂತಹ ಆರೋಪಗಳು ಕೇಳಿಬಂದಾಗ ಅದರ ಹಿಂದೆ &#8216; ಪಿತೂರಿ&#8217; ಗಳಿರುವುದನ್ನು ಅವರ ಹಿಂಬಾಲಕರು, ಸಮರ್ಥಕರು ಕ್ಷಣಮಾತ್ರದಲ್ಲಿ ಕಂಡುಕೊಂಡುಬಿಡುತ್ತಾರೆ. ಇದು ನಿಜ ಇರಲೂ ಬಹುದು,ಇಲ್ಲದಿರಲೂ ಬಹುದು. ಆದರೆ ತನಿಖೆಗೂ ಮುಂಚೆ ಇಂತಹ ಸಮರ್ಥನೆಗಳು, ಕವರ್ ಫೈರಿಂಗ್ ಥಿಯೇರಿಗಳಿಂದ ಆರೋಪದ ಮಹತ್ವವನ್ನೂ, ಗಂಭೀರತೆಯನ್ನು ಸಡಿಲಗೊಳಿಸುವ ಕೆಲಸಗಳು ಆರಂಭವಾಗುತ್ತವೆ. ಮುರುಘಾಶ್ರೀಶರಣರ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಈ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು &#8216;ಸ್ವಾಮೀಜಿ ವಿರುದ್ಧ ಮಠದಲ್ಲಿದ್ದವರೆ ತೊಂದರೆ ಮಾಡಿದಂತಿದೆ. ಈ ಬಗ್ಗೆ ಮಾಹಿತಿ ಇದೆ&#8217; ಎಂದು ಹೇಳಿದ್ದಾರೆ. ಗೃಹ ಸಚಿವರ ಈ ಹೇಳಿಕೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ನಡೆಯುವುದು ಅಷ್ಟು ಸುಲಭವಲ್ಲ ಎಂಬ ಸೂಚನೆಯನ್ನೂ ಬಿಟ್ಟುಕೊಟ್ಟಂತಿದೆ.</p>



<p class="has-text-align-justify has-medium-font-size">ಮುರುಘಾ ಶರಣರ ವಿರುದ್ಧ ಗಂಭೀರವಾದ ಪೋಕ್ಸ್ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ಕಾನೂನು ಪ್ರಕ್ರಿಯೆಗಳು ಏನಿವೆ ಅವೆಲ್ಲವೂ ನಡೆಯಲಿ, ಅಪರಾಧ ಸಾಬೀತಾದರೆ ಕಠಿಣ ಶಿಕ್ಷೆ ಆಗಲೇಬೇಕು, ನಿರಪರಾಧಿ ಆದರೆ ಅದನ್ನು ಸ್ವಾಗತಿಸೋಣ, ಇದು ಕಾನೂನಿನ‌ ಪ್ರಕ್ರಿಯೇಯ ಭಾಗ. ಇದಕ್ಕಾಗಿ ಎಲ್ಲರೂ ಕಾಯೋಣ.</p>



<p class="has-medium-font-size">ಆದರೆ…?</p>



<p class="has-text-align-justify has-medium-font-size">ಮುರುಘಾಶರಣರು ತಮ್ಮ ಮೇಲಿನ ಆರೋಪ ದ ಹಿಂದೆ &#8216; ಪಿತೂರಿ&#8217; ಇದೆ. ಈ ಪಿತೂರಿಗಾರರ ಜೊತೆಗೆ &#8216;ಸಂಧಾನಕ್ಕೂ ಸಿದ್ದ, ಸಮರಕ್ಕೂ ಬದ್ಧ&#8217; ಎಂದು ಘೋಷಿಸುವ ಮೂಲಕ ತಾವೂ ಕೂಡ ಪುಢಾರಿ ರಾಜಕಾರಣಿಗಳಿಗಿಂತ ಭಿನ್ನರಲ್ಲ ಎಂಬುದನ್ನು ಪ್ರದರ್ಶಿಸಿದ್ದಾರೆ‌.</p>


<div class="wp-block-image">
<figure class="alignleft size-full is-resized"><img loading="lazy" decoding="async" src="https://peepalmedia.com/wp-content/uploads/2022/08/ShivamurthyMurughaSharanaru_Facebook_270822_1200.jpg" alt="" class="wp-image-3262" width="341" height="227" srcset="https://peepalmedia.com/wp-content/uploads/2022/08/ShivamurthyMurughaSharanaru_Facebook_270822_1200.jpg 750w, https://peepalmedia.com/wp-content/uploads/2022/08/ShivamurthyMurughaSharanaru_Facebook_270822_1200-300x200.jpg 300w" sizes="auto, (max-width: 341px) 100vw, 341px" /></figure></div>


<p class="has-text-align-justify has-medium-font-size">ಶರಣರ ಮೇಲೆ ಬಂದಿರುವುದು ಅಪ್ರಾಪ್ತ ಬಾಲಕಿಯರಿಬ್ಬರ ಮೇಲಿನ ಲೈಂಗಿಕ ಕಿರುಕುಳದ ಆರೋಪ. ಶರಣರು ತಮಗಿರುವ ಪ್ರಭಾವ, ಸಾಮರ್ಥ್ಯಗಳಿಂದ &#8216;ಪಿತೂರಿಗಾರರೊಂದಿಗೆ&#8217; ಸಂಧಾನವನ್ನೇನೋ ನಡೆಸಿ ವಿಜಯಂಗೈಯ್ಯಬಹುದು. ಆದರೆ ಸಂತ್ರಸ್ತ ಬಾಲಕಿಯರ ಬದುಕು.ಭವಿಷ್ಯದ ಕತೆಯೇನು?</p>



<p class="has-text-align-justify has-medium-font-size">ಮುರುಘಾ ಶರಣರು ತಮ್ಮ ಮೇಲೆ ಬಂದಿರುವ ಗುರುತರ ಆರೋಪವನ್ನು ಕಾನೂನು ದೃಷ್ಟಿಗಿಂತ ಬಸವಾದಿಶರಣತ್ವದ ನೈತಿಕತೆ ಮತ್ತು ಆತ್ಮಸಾಕ್ಷಿಯ ನೆಲೆಯಲ್ಲಿ ಎದುರುಗೊಳ್ಳಬೇಕಾದ ಸಂದರ್ಭವಿದು. ಈ ಆರೋಪದಿಂದ ಮಠದ ಲಕ್ಷಾಂತರ ಭಕ್ತರ ಭಾವನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿರುತ್ತದೆ. ಮಠಗಳ ಮೇಲಿನ ವಿಶ್ವಾಸದ ಪದವೆ ಕುಸಿಯುವಂತಾಗಿರುತ್ತದೆ. ಇದನ್ನೆಲ್ಲಾ ಉಳಿಸಿಕೊಳ್ಳಲು ಮುರುಘಾಶರಣರು ತಮ್ಮ ನೈತಿಕ ನಡೆಯನ್ನು ಪ್ರತಿಪಾದಿಸಬೇಕಾದದ್ದು ಕರ್ತವ್ಯ ಕೂಡ. ಇದಕ್ಕಿರುವ ದಾರಿ ಎಂದರೆ ಅದು ಗುರುಪೀಠವನ್ನು ತ್ಯೇಜಿಸುವುದೇ ಆಗಿರುತ್ತದೆ.</p>



<p class="has-text-align-justify has-medium-font-size">ತಮ್ಮ ನಿರಪರಾಧಿತನವನ್ನು ಸಾಬೀತು ಪಡಿಸಿಕೊಳ್ಳಲು ಮುರುಘಾಶರಣರು ಸಾಕ್ಷಿ, ವಾದಗಳನ್ನು ಆಧರಿಸಬೇಕಿಲ್ಲ. ಈ‌ ತಕ್ಷಣವೇ ಪೀಠತ್ಯಾಗ ಮಾಡಿ ತಮ್ಮ ಧರ್ಮನಿಷ್ಠೆಯನ್ನು .ನ್ಯಾಯ ಪರತೆಯನ್ನೂ ಅದಕ್ಕೂ ಮಿಗಿಲಾದ ನೈತಿಕ ಘನತೆಯನ್ನು ಎತ್ತಿ ಹಿಡಿಯಬೇಕು. ಸೀತೆ ತನ್ನ ಮೇಲಿನ ಆರೋಪದಿಂದ ಅಗ್ನಿಪ್ರವೇಶ ಮಾಡಿ ತನ್ನ ಪಾವಿತ್ರ್ಯತೆಯನ್ನು ಸಾಬೀತು ಮಾಡಿದ ಆದರ್ಶಮೌಲ್ಯದಂತೆ ಶರಣರು ಅಗ್ನಿ ಪ್ರವೇಶ ಮಾಡಬೇಕಾಗಿಲ್ಲ. ಕಲಿಯುಗದಲ್ಲಿ ಇದು ಸಾಧ್ಯವೂ ಇಲ್ಲ. ಆದರೆ ಶರಣರು ಮಠವೆಂಬ. ಮಠಾಧಿಪತಿ ಎಂಬ ಪ್ರಭಾವಳಿಯ ಸ್ಥಾವರರೂಪಗಳನ್ನು ತೊರೆದು ತಮ್ಮ ಸತ್ಯಸಂಧತೆಯನ್ನೂ , ಶರಣತ್ವವನ್ನು ಲೋಕದ ವಿಶ್ವಾಸಕ್ಕಿಡಬಾರದೇಕೆ?</p>



<p class="has-text-align-justify has-medium-font-size">ಎನ್ನ ತಪ್ಪು ಅನಂತಕೋಟಿ<br>ನಿಮ್ಮ ಆತ್ಮಸೈರಣೆಗೆ ಲೆಕ್ಕವಿಲ್ಲ<br>ಇನ್ನೂ ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ…<br>…<br>ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ?<br>ಎನ್ನೊಳಗೆ ಶುದ್ಧವಿಲ್ಲ ನೋಡಯ್ಯಾ.</p>



<p class="has-medium-font-size">ಆತ್ಮಶುದ್ದಿಯ ಇಂತಹ ಮಹಾಮಾರ್ಗವನ್ನೆ ತೆರೆದಿಟ್ಟ ಬಸವಣ್ಣ ಮುರುಘಾಶರಣರಿಗೆ ನೆನಪಾಗುವುದಿಲ್ಲವೆ?</p>



<p class="has-text-align-justify has-medium-font-size">ಬಸವಣ್ಣ ಹೇಳಿದಂತೆ ಶರಣನ ಬ್ರಹ್ಮ ಚರ್ಯ ಶ್ರೋತ್ರ,ತ್ವಕ್ಕು,ನಾಸಿಕ,ನೇತ್ರ ಮತ್ತು ಜಿಹ್ವೆಗಳಲ್ಲಿಯೂ ಇರಬೇಕು. ನಿಜ ಶರಣರೆನಿಸಿಕೊಂಡ ಮುರುಘಾಶರಣರ ಬ್ರಹ್ಮಚರ್ಯವೂ , ಇಂದ್ರೀಯ ನಿಗ್ರಹದ ವೈಫಲ್ಯದ ಅನುಮಾನಗಳೂ ಈಗ ಅವರನ್ನು‌ಮುತ್ತಿಕೊಂಡಿವೆ.<br>ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ:<br>ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ:<br>… ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ.</p>



<p class="has-medium-font-size">ಮಠಗಳು,ಮಠಾಧಿಪತಿಗಳೂ ಪರಿಶುದ್ದರಾಗಿಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತಲೆ ಇವೆ. ಮಠಗಳಲ್ಲಿ ನಿರ್ಲಜ್ಜ ಕಾಮ, ಕ್ಷುದ್ರ ರಾಜಕೀಯದಂತಹ ಧರ್ಮಗೇಡಿತನಗಳ ಅಂತಃಪುರಗಳನ್ನು ಕಟ್ಟಿಕೊಂಡ ಕಾವಿಧಾರಿಗಳು ಆತ್ಮವಂಚನೆಯ ಉಪ್ಪರಿಗೆಯಲಿ ಕುಳಿತು ಜನರಿಗೆ ನೈತಿಕ ಮೌಲ್ಯಗಳನ್ನು, ನ್ಯಾಯ ಮತ್ತು ಧರ್ಮನಿಷ್ಠೆಯನ್ನು ಬೋಧಿಸುವುದನ್ನು ಕಂಡಾಗ ಅವರೆಲ್ಲಾ ಮಠದೊಳಗಿನ ಮಾರ್ಜಾಲಗಳಂತೆ ಕಂಡರೆ ಆಶ್ಚರ್ಯವೇನಿಲ್ಲ.</p>



<p class="has-text-align-right has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</mark></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/08/ravi.png" alt="" class="wp-image-3263" width="183" height="201" srcset="https://peepalmedia.com/wp-content/uploads/2022/08/ravi.png 365w, https://peepalmedia.com/wp-content/uploads/2022/08/ravi-273x300.png 273w" sizes="auto, (max-width: 183px) 100vw, 183px" /></figure>



<p class="has-medium-font-size"><strong>ಎನ್.ರವಿಕುಮಾರ್</strong> <br>ಬರಹಗಾರರು</p>
]]></content:encoded>
					
		
		
			</item>
	</channel>
</rss>
