<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Muslim &#8211; Peepal Media</title>
	<atom:link href="https://peepalmedia.com/tag/muslim/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 27 Nov 2024 10:41:14 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Muslim &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಂಭಾಲ್‌ ಸುತ್ತ ಕಟ್ಟಿದ ಸುಳ್ಳುಗಳು!</title>
		<link>https://peepalmedia.com/false-narratives-around-sambhal/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 27 Nov 2024 10:41:13 +0000</pubDate>
				<category><![CDATA[ಅಂಕಣ]]></category>
		<category><![CDATA[communalism]]></category>
		<category><![CDATA[hindu]]></category>
		<category><![CDATA[Muslim]]></category>
		<category><![CDATA[sambhal]]></category>
		<category><![CDATA[sambhal mosque]]></category>
		<category><![CDATA[uttara pradesh]]></category>
		<category><![CDATA[yogi adhityanatha]]></category>
		<guid isPermaLink="false">https://peepalmedia.com/?p=49699</guid>

					<description><![CDATA[ಸಂಭಾಲ್‌ ಮಸೀದಿಯ ಮುಂದೆ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಭಾರತೀಯರು, ಆದರೆ ನಾಲ್ಕು ಮುಸ್ಲಿಮರು. ಬಹುಶಃ ಪೊಲೀಸರು ಅವರನ್ನೂ ಹಿಂದೂಗಳನ್ನು ನಡೆಸಿಕೊಂಡಂತೆ ನಡೆಸಿಕೊಂಡಿದ್ದರೆ ಬದುಕಿರುತ್ತಿದ್ದರೋ ಏನೋ! ಹಿಂದೂಗಳು ಕೋಮುದ್ರಿಕ್ತರಾಗಿ ನಡೆದುಕೊಂಡರೆ ಪೊಲೀಸರ ಗುಂಡು ಕೆಲಸ ಮಾಡುವುದಿಲ್ಲ, ಮಾಡಿದರೂ ಪಟಾಕಿ ಬೆಂಕಿಕೊಟ್ಟು ಎಸೆದಂತೆ ಗಾಳಿಯಲ್ಲಿ ಹಾರುತ್ತವೆ. ಹಿಂದೂವಿನ ಎದೆಯನ್ನು ಅದು ಸೀಳುವುದಿಲ್ಲ. ಹಿಂದೂಗಳು ಇತರರ ಮನೆಗಳು , ವಾಹನಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚುವ ಮತ್ತು ದಾಳಿ ಮಾಡುವ ಸುದ್ದಿಯನ್ನು ನೀವು ಓದಿರುತ್ತೀರಿ. ಅನೇಕ ಕಡೆ ಹಿಂದುತ್ವದವರು ದಲಿತ-ಮುಸಲ್ಮಾನರ ಮೇಲೆ ಗುಂಪುದಾಳಿ ನಡೆಸಿದ್ದಾರೆ. [&#8230;]]]></description>
										<content:encoded><![CDATA[
<p><strong>ಸಂ</strong>ಭಾಲ್‌ ಮಸೀದಿಯ ಮುಂದೆ ನಾಲ್ವರು ಸಾವನ್ನಪ್ಪಿದ್ದಾರೆ. ನಾಲ್ವರೂ ಭಾರತೀಯರು, ಆದರೆ ನಾಲ್ಕು ಮುಸ್ಲಿಮರು. ಬಹುಶಃ ಪೊಲೀಸರು ಅವರನ್ನೂ ಹಿಂದೂಗಳನ್ನು ನಡೆಸಿಕೊಂಡಂತೆ ನಡೆಸಿಕೊಂಡಿದ್ದರೆ ಬದುಕಿರುತ್ತಿದ್ದರೋ ಏನೋ!</p>



<p>ಹಿಂದೂಗಳು ಕೋಮುದ್ರಿಕ್ತರಾಗಿ ನಡೆದುಕೊಂಡರೆ ಪೊಲೀಸರ ಗುಂಡು ಕೆಲಸ ಮಾಡುವುದಿಲ್ಲ, ಮಾಡಿದರೂ ಪಟಾಕಿ ಬೆಂಕಿಕೊಟ್ಟು ಎಸೆದಂತೆ ಗಾಳಿಯಲ್ಲಿ ಹಾರುತ್ತವೆ. ಹಿಂದೂವಿನ ಎದೆಯನ್ನು ಅದು ಸೀಳುವುದಿಲ್ಲ. ಹಿಂದೂಗಳು <a href="https://tribune.com.pk/story/2164097/watch-hindu-mob-sets-delhi-mosque-fire-places-hanuman-flag-top">ಇತರರ</a> ಮನೆಗಳು , ವಾಹನಗಳು ಮತ್ತು ಧಾರ್ಮಿಕ ಸ್ಥಳಗಳಿಗೆ <a href="https://economictimes.indiatimes.com/news/india/bahraich-violence-aftermath-uttar-pradesh-government-initiates-action-against-police-officials/articleshow/114271752.cms?from=mdr">ಬೆಂಕಿ ಹಚ್ಚುವ ಮತ್ತು ದಾಳಿ ಮಾಡುವ ಸುದ್ದಿಯನ್ನು ನೀವು ಓದಿರುತ್ತೀರಿ. </a>ಅನೇಕ ಕಡೆ ಹಿಂದುತ್ವದವರು ದಲಿತ-ಮುಸಲ್ಮಾನರ ಮೇಲೆ ಗುಂಪುದಾಳಿ ನಡೆಸಿದ್ದಾರೆ. ಆದರೆ ಅವರ್ಯಾರ ಮೇಲೂ ಪೊಲೀಸರು ಸಂಭಾಲ್‌ನಲ್ಲಿ ಮಾಡಿದಂತೆ ಪೊಲೀಸರು ನಡೆದುಕೊಂಡ ಸುದ್ದಿ ಇಲ್ಲ. <a href="https://m.thewire.in/article/communalism/arson-loot-and-unidentified-vandals-how-muslims-were-targeted-in-bahraich"> </a> </p>



<p>ಹಿಂದೂ ಕನ್ವಾರಿಯಾಗಳು ಜನರನ್ನು ಮಾತ್ರವಲ್ಲದೆ ಪೊಲೀಸರ ಮೇಲೂ ಹಲ್ಲೆ&nbsp;ನಡೆಸಿರುವ&nbsp;<a href="https://www.ndtv.com/india-news/suv-with-police-written-on-it-vandalised-by-kanwariyas-in-up-cops-6214958">ವೀಡಿಯೊಗಳನ್ನು</a>&nbsp;ನೀವು ನೋಡಿರುತ್ತೀರಿ&nbsp;, ಆದರೂ ಪೊಲೀಸರು ಮೂಕರಾಗಿ ನೋಡುತ್ತಿದ್ದರು. ಪ್ರಶ್ನೆ ಎಂದರೆ, ಪ್ರಕ್ಷುಬ್ಧ ಹಿಂದುತ್ವವಾದಿ ಗುಂಪು ಕಲ್ಲು ತೂರಾಟದ ಮಾಡಿದರೆ ಅವರ ಜೊತೆಗೂ ಪೊಲೀಸರು ಹೀಗೆ ನಡೆದುಕೊಳ್ಳುತ್ತಾರಾ? </p>



<p>ಪೊಲೀಸರು ಹೇಳುತ್ತಾರೆ, ತಾವು ಯಾವುದೇ ಮುಸ್ಲಿಮರನ್ನು ಕೊಂದಿಲ್ಲ ಎಂದು. ಅವರ ಪ್ರಕಾರ, ಮುಸ್ಲಿಮರೇ ಗುಂಡು ಹಾರಿಸಿಕೊಂಡು ನಾಲ್ವರನ್ನು ಕೊಂದರು. ಇದೊಂದು ಹೊಸ ಬದಲಾವಣೆ: ಮುಸ್ಲೀಮರ ಸಾವಿಗೆ ಅವರನ್ನೇ ದೂಷಿಸುವುದು. ಡಿಸೆಂಬರ್ 2019 ರಲ್ಲಿ ಉತ್ತರ ಪ್ರದೇಶದಲ್ಲಿ <a href="https://www.newsclick.in/who-were-23-people-killed-during-anti-caa-nrc-protests">ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ 21 ಮುಸ್ಲಿಮರು ಕೊಲ್ಲಲ್ಪಟ್ಟಾಗ</a> ಪೊಲೀಸರು ಇದೇ ಮಾತನ್ನು ಹೇಳಿದ್ದರು. ಮುಸ್ಲಿಮರನ್ನು ಕೊಂದ ಆ ಗುಂಡುಗಳು ಅವರ ಅಧಿಕೃತ ಬಂದೂಕುಗಳಿಗೆ ಸೇರಿದ್ದಲ್ಲ ಎಂದು ಪೊಲೀಸರು ಹೇಳಿದ್ದರು. ದೆಹಲಿ <a href="https://www.livelaw.in/news-updates/delhi-riots-larger-conspiracy-case-court-warns-accused-persons-over-delay-in-commencing-arguments-on-charge-271692">ಹಿಂಸಾಚಾರವನ್ನು ಮುಸ್ಲಿಂ ಕಾರ್ಯಕರ್ತರ ಮೇಲೆ ಆರೋಪಿಸಲಾಗಿದೆ ಮತ್ತು ಎಲ್ಗರ್ ಪರಿಷತ್ ಹಿಂಸಾಚಾರ</a>ದಲ್ಲೂ ಮುಸಲ್ಮಾನರ ಮೇಲೆ ಗೂಬೆ ಕೂರಿಸಲಾಗಿದೆ.</p>



<p>ಮುಸ್ಲಿಮರನ್ನು ಪ್ರಚೋದಿಸಿ, ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎಂದು ಸಂಭಾಲ್ ಸಂಸದ ಮತ್ತು ಸ್ಥಳೀಯ ಶಾಸಕರ ಪುತ್ರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮುಸ್ಲಿಮರ ಹಿಂಸಾಚಾರ ಮತ್ತು ಹತ್ಯೆಯ ನಂತರ ಪೊಲೀಸರು ಧ್ವಜ ಮೆರವಣಿಗೆಗಳನ್ನು ನಡೆಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ!</p>



<p>ಮುಸ್ಲಿಮರ ಸಾವಿಗೆ ಪೊಲೀಸ್ ಅಧಿಕಾರಿಗಳು ವಿಷಾದ ಕೂಡ ವ್ಯಕ್ತಪಡಿಸಲಿಲ್ಲ.&nbsp;ಬದಲಾಗಿ, ಮೃತರಾದವರ<a href="https://m.thewire.in/article/religion/three-muslims-killed-as-locals-opposing-survey-of-mughal-era-mosque-in-sambhal-clash-with-police"> ಕುಟುಂಬದವರಿಗೆ</a>, “ಆಪಾದನೆಗಳನ್ನು ಮಾಡುವ ಮೊದಲು, ಅವರು [ಮೃತರ ಕುಟುಂಬ] ತಮ್ಮ ಮಕ್ಕಳು ಕಲ್ಲೆಸೆಯಲು ಏಕೆ ಅಲ್ಲಿಗೆ ಬಂದರು ಎಂದು ಕೇಳಬೇಕು. ಅವರು ಯಾವುದೇ ಧಾರ್ಮಿಕ ಕೆಲಸ, ಪವಿತ್ರ ಕಾರ್ಯ ಅಥವಾ ಉದ್ಯೀಗ ಮಾಡಲು ಹೋಗಿದ್ದಲ್ಲ,&#8221; ಎಂದು ಹೇಳುತ್ತಾರೆ. ಜನಸಮೂಹ ನಡೆಸಿದ ಈ ಕಲ್ಲು ತೂರಾಟ ಮತ್ತು ಗುಂಪುಗೂಡುವಿಕೆಯು &#8216;ಪ್ರಚೋದಿತ&#8217; ಕೃತ್ಯವಾಗಿ ಕಂಡುಬಂದಿದೆ ಎಂದು ಪೊಲೀಸರು ಹೇಳುತ್ತಾರೆ. </p>



<p>ಸ್ಥಳೀಯ ಸಂಸದ ಮತ್ತು ಶಾಸಕನ ಪುತ್ರನ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ. ಮುಸಲ್ಮಾನರ ಮೇಲೆ ಪೊಲೀಸರು ಹೇಳುತ್ತಿರುವ ಮಾತುಗಳನ್ನು ಸಾಬೀತು ಮಾಡಲು- ಸಮೀಕ್ಷಾ ತಂಡವು ಮಸೀದಿಯನ್ನು ತಲುಪಿದ ನಂತರ ನೆರೆದಿದ್ದ ಮುಸ್ಲಿಮರು ಹಿಂಸಾಚಾರಕ್ಕೆ ಸಂಚುಕೋರರಿಂದ ಸನ್ನದ್ಧರಾಗಿದ್ದರು ಮತ್ತು ಪ್ರಚೋದಿತರಾಗಿದ್ದರು ಎಂದು ಹೇಳುತ್ತಿದ್ದಾರೆ.  ಮಸೀದಿ ಬಳಿ ಹಿಂಸಾಚಾರ ನಡೆಸಲು ಸ್ವಯಂಪ್ರೇರಿತವಾಗಿ ಜನರು ಬರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇವರು ಜೈಶ್ರೀರಾಮ್‌ ಘೋಷಣೆಯ ಕೂಗುವುದನ್ನು ಕೇಳಿ ಆಕ್ರೋಶಿತರಾಗಿದ್ದರು ಎಂದು ಪೊಲೀಸರು ಹೇಳುತ್ತಾರೆ.</p>



<p>ಅಂದರೆ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತಾ ಗಲಭೆ ಎಬ್ಬಿಸಲು ಪ್ರಚೋದನೆ ಮಾಡಿದ್ದು ಮುಸಲ್ಮಾನರೇ? </p>



<p>ನ್ಯಾಯಾಲಯದಿಂದ ನೇಮಿಸಲ್ಪಟ್ಟ ವ್ಯಕ್ತಿಯೊಂದಿಗೆ ಜನಸಂದಣಿಯನ್ನು ಮಸೀದಿಗೆ ಬರದಂತೆ ತಡೆಯುವುದು ಮತ್ತು ಪ್ರಚೋದನಕಾರಿ ಘೋಷಣೆಗಳನ್ನು ನಿಲ್ಲಿಸುವುದು ಆಡಳಿತ ಮತ್ತು ಪೊಲೀಸರ ಕರ್ತವ್ಯವಲ್ಲವೇ? ಸರ್ವೆ ಮುಗಿಸಿ ಅಧಿಕಾರಿಗಳು ತೆರಳುವಾಗ ಜೈ ಶ್ರೀರಾಮ್ ಘೋಷಣೆಗಳು ಕೇಳಿ ಬಂದವು. ಸಮೀಕ್ಷೆ ಆಗಬೇಕಿದ್ದರೆ ಅಲ್ಲಿ ಜನಜಂಗುಳಿ ಏಕೆ ಬೇಕು? &#8216;ಜೈ ಶ್ರೀರಾಮ್&#8217; ಘೋಷಣೆಗಳು ಹೇಗೆ ಬಂದವು? ಈ ರೀತಿ ಪ್ರಚೋದನೆ ನೀಡಲು ಅಧಿಕಾರಿಗಳು ಹೇಗೆ ಬಿಟ್ಟರು?  </p>



<p>ಈ ಇಡೀ ಕೇಸ್‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದು. ಒಂದು ನಿರ್ದಿಷ್ಟ ದೇವಾಲಯವು ಮೊದಲು ಮಸೀದಿಯಾಗಿತ್ತು ಎಂದು ಮುಸ್ಲಿಂ ಫಿರ್ಯಾದಿ ಕೋರ್ಟ್‌ಗೆ ಹೋಗುವ ಸನ್ನಿವೇಶವನ್ನು ಊಹಿಸಿ ಅಥವಾ ಬೌದ್ಧರು ನಿರ್ದಿಷ್ಟ ದೇವಾಲಯವು ಮೊದಲು ಬೌದ್ಧ ದೇವಾಲಯವಾಗಿತ್ತು ಎಂದು ಪ್ರತಿಪಾದಿಸಿ ಕೋರ್ಟ್‌ನ ಸಹಾಯ ಕೇಳುವ ಸನ್ನಿವೇಶವನ್ನು ಯೋಚಿಸಿ. ಈ ಅರ್ಜಿಗಳಿಗೆ ಆದ್ಯತೆ ನೀಡಿ ನ್ಯಾಯಾಲಯ ಪರಿಗಣಿಸುತ್ತದೆಯೇ? ದೇವಾಲಯ ಬರುವ ಮೊದಲು ಅಲ್ಲಿ ಬೌದ್ಧ ಚೈತ್ಯ ಅಥವಾ ಸ್ತೂಫ ಇತ್ತೇ ಎಂಬುದನ್ನು ಪತ್ತೆ ಮಾಡಲು ಸಮೀಕ್ಷೆಗೆ ಕೋರ್ಟ್‌ ಅನುಮತಿ ನೀಡುತ್ತದೆಯೇ? ಎಲ್ಲರಿಗೂ ಉತ್ತರ ಗೊತ್ತೇ ಇದೆ. ಒಂದೋ ಆ ಅರ್ಜಿಗಳು ವಜಾ ಆಗುತ್ತವೆ, ಇಲ್ಲವೇ ಅರ್ಜಿ ಹಾಕಿದವನಿಗೆ ದಂಡ ವಿಧಿಸುತ್ತಾರೆ.  </p>



<p>ಸಂಭಾಲ್‌ನಲ್ಲಿ ಮಾಡಿದ ರೀತಿಯಲ್ಲಿಯೇ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಸಮೀಕ್ಷೆಗಳನ್ನು ನಡೆಸಲು ಬಿಡುತ್ತವೆಯೇ ಎಂದು ನಾವು ಕೇಳಬೇಕಾಗಿದೆ. ಅರ್ಜಿ ಸಲ್ಲಿಕೆಯಾದ ತಕ್ಷಣ ಕ್ರಮಕ್ಕೆ ಆದೇಶ ನೀಡುವಷ್ಟು ನಮ್ಮ ನ್ಯಾಯಾಲಯಗಳು ಯಾವಾಗಿನಿಂದ ದಕ್ಷವಾಗಿ ಕೆಲಸ ಮಾಡಲು ಆರಂಭ ಮಾಡಿದವು? ಈ ಆದೇಶವನ್ನು ತಕ್ಷಣವೇ ಕಾರ್ಯಗತಗೊಳಿಸಲು ತನ್ನ ಎಲ್ಲಾ ಸಂಪನ್ಮೂಲಗಳನ್ನು ನೀಡುವ ಆಡಳಿತ ವ್ಯವಸ್ಥೆ ಇಷ್ಟು ಚುರುಕಾಗಿದ್ದು ಯಾವಾಗ?</p>



<p>ಸಂಭಾಲ್‌ನಲ್ಲಿ ನಡೆದಿರುವುದು ಇದೇ.</p>



<p>ಮಸೀದಿಯ ಮೊದಲು ದೇವಸ್ಥಾನವಿತ್ತು ಎಂಬುದಾಗಿ ಅದರ ಸ್ವರೂಪವನ್ನು ಖಚಿತಪಡಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಲಾಯಿತು. ನ್ಯಾಯಾಧೀಶರು ತಕ್ಷಣವೇ ಆಡಳಿತ ಮತ್ತು ಮಸೀದಿ ಸಮಿತಿಗೆ ನೋಟಿಸ್ ಜಾರಿ ಮಾಡದೆ, ಸಮೀಕ್ಷೆಗೆ ಆದೇಶಿಸಿದರು ಮತ್ತು ಇದಕ್ಕಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿದರು. ಆದೇಶ ಬಂದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಆಡಳಿತವು ಸರ್ವೆಗೆ ಬೇಕಾದ ವ್ಯವಸ್ಥೆ ನೀಡಿತು. ಇದು ಸ್ಥಳೀಯ ಮುಸ್ಲಿಂ ಜನರಲ್ಲಿ ಅಸಮಾಧಾನ ಮೂಡಿಸಿತು. </p>



<p>ಆದರೆ ಅದಾದ ಎರಡು ದಿನಗಳ ನಂತರ ಯಾವುದೇ ಪೂರ್ವ ಮಾಹಿತಿ ಇಲ್ಲದೆ ತಂಡ ಮತ್ತೆ ದೇವಸ್ಥಾನಕ್ಕೆ ಬಂತು. ಆಡಳಿತವು ಜನರ ಗುಂಪಿನ ಜೊತೆಗೂಡಿ ಮಸೀದಿಯನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಸಮೀಕ್ಷೆ ನಡೆಸಲು ಬಂದಿದ್ದ ತಂಡದ ಜೊತೆಗಿದ್ದ ಕೆಲವರು ಹೊರಹೋಗುವಾಗ &#8216;ಜೈ ಶ್ರೀ ರಾಮ್&#8217; ಘೋಷಣೆಗಳನ್ನು ಕೂಗಿದರು. ಇದು ಸ್ಥಳೀಯ ಮುಸ್ಲಿಮರನ್ನು ಕೆರಳಿಸಿತು. ಅವರು ಕಲ್ಲುಗಳನ್ನು ಎಸೆದರು. ಧರಣಿ ನಿರತ ಜನರ ಮೇಲೆ ನೇರವಾಗಿ ಗುಂಡು ಹಾರಿಸುತ್ತಿರುವುದನ್ನು ಪೊಲೀಸರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ. ನಾಲ್ವರು ಕೊಲ್ಲಲ್ಪಟ್ಟರು. </p>



<p>ಈಗ ಪೊಲೀಸರು ಈ ಹತ್ಯೆಯ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸುತ್ತಿದ್ದಾರೆ. ಈ ಹತ್ಯೆಗಳಿಗೆ ಮುಸ್ಲಿಮರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಡೀ ಪ್ರತಿಭಟನೆಯನ್ನು ಪಿತೂರಿ ಎಂದು ಕರೆದರು. ಮುಸ್ಲಿಂ ಮುಖಂಡರ ಮೇಲೆ ಕೇಸು ಹಾಕಿದರು.</p>



<p>ಮುಸ್ಲಿಮರು ಸದ್ಯ ಸರ್ಕಾರ ತಮ್ಮ ವಿರುದ್ಧವಾಗಿದೆ ಎಂದು ನಂಬಿದ್ದಾರೆ. ನ್ಯಾಯಾಂಗವೂ ಅವರನ್ನು ಮೂಲೆಗೆ ತಳ್ಳುವ ಪ್ರಕ್ರಿಯೆಗಳನ್ನು ತಣ್ಣಗಾಗಿಸುತ್ತಿದೆ. ಎಲ್ಲವನ್ನೂ ಕಾನೂನುಬದ್ಧವಾಗಿ ಮಾಡಲಾಗುತ್ತಿದೆ. ಮುಸ್ಲಿಮರು ಪ್ರತಿಭಟಿಸಲು ಸಾಧ್ಯವಿಲ್ಲ, ಮಾಡಿದರೆ ಅವರು ದೇಶದ ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸುತ್ತಾರೆ.</p>



<p>ಈ ನೆಲದ ಕಾನೂನಿಗೆ ಏನಾಯಿತು?- 1991 ರ ಪೂಜಾ ಸ್ಥಳಗಳ ಕಾಯಿದೆಗೆ ಏನಾಯಿತು? ಈ ಪ್ರಶ್ನೆಯನ್ನು ಬದಿಗಿಟ್ಟು ಒಂದು ರಚನೆಯ ಬಗ್ಗೆ ತಮ್ಮ ಕುತೂಹಲವನ್ನು ತಣಸಿಕೊಳ್ಳಲು ಹಿಂದೂಗಳಿಗೆ ಎಲ್ಲ ಹಕ್ಕಿದೆ ಎಂದು ಹೇಳಿದ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮಾತುಗಳನ್ನು ನೆನಪು ಮಾಡಿಕೊಳ್ಳಬೇಕು. ಇದರ ಅರ್ಥ, ಒಬ್ಬ ಹಿಂದು ತಾನು ಕಂಡ ಮಸೀದಿಯ ಅಡಿಯಲ್ಲಿ ದೇವಾಲಯ ಇದ್ಯಾ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿದ್ದಾನೆ, ಕಂಡ ಕಂಡ ಅನ್ಯರ ಧಾರ್ಮಿಕ ಕೇಂದ್ರಗಳಿಗೆ ಕನ್ನ ಹಾಕಬಹುದು ಎಂದೆ? ಇದಾದ ನಂತರ, ಹಿಂದುತ್ವದವರು ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಭಾರತದಾದ್ಯಂತ ಮಸೀದಿಗಳು, ದರ್ಗಾಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಬಗ್ಗೆ ಕುತೂಹಲವನ್ನು ಬೆಳೆಸಲು ಪ್ರಾರಂಭಿಸಿದರು. ಚಂದ್ರಚೂಡ್ ತೋರಿದ ಉದಾಸೀನವನ್ನು, ನಿರಾಳತೆಯನ್ನು ಈಗ ಎಲ್ಲ ಪ್ರಾಥಮಿಕ ನ್ಯಾಯಾಲಯಗಳು ತೋರಿಸುತ್ತಿವೆ. ಮುಸ್ಲಿಮರು ಪ್ರತಿಭಟಿಸಲು ಮತ್ತು ವಿರೋಧಿಸಲು ಹೋದರೆ ಬಲಿಕೊಡಬೇಕಾಗಿ ಬರುವುದು ಅರ ಜೀವವನ್ನು ಮಾತ್ರ.  </p>



<p><strong>ಲೇಖನ: ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಸಾಧುಗಳ ವೇಷದಲ್ಲಿದ್ದವರು ಮುಸಲ್ಮಾನರೇ? Fact Check</title>
		<link>https://peepalmedia.com/muslims-were-caught-in-surat-posing-as-sadhus-fact-check/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 08 Nov 2024 13:15:38 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[communal]]></category>
		<category><![CDATA[communal issues]]></category>
		<category><![CDATA[Fact check]]></category>
		<category><![CDATA[hindu]]></category>
		<category><![CDATA[hindutva]]></category>
		<category><![CDATA[Muslim]]></category>
		<category><![CDATA[viral]]></category>
		<guid isPermaLink="false">https://peepalmedia.com/?p=48572</guid>

					<description><![CDATA[ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&#160;ಶ್ಲೋಕವನ್ನು&#160;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ [&#8230;]]]></description>
										<content:encoded><![CDATA[
<p>ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು.</p>



<p>ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&nbsp;<em>ಶ್ಲೋಕವನ್ನು</em>&nbsp;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ ಮೂವರಲ್ಲಿ ಒಬ್ಬ ವ್ಯಕ್ತಿ, &#8220;ನಾವು&nbsp;<em>ಭೋಲೆನಾಥನನ್ನು</em>&nbsp;ಆರಾಧಿಸುತ್ತೇವೆ &#8221; ಎಂದು ಉತ್ತರಿಸುತ್ತಾನೆ. </p>



<p>ವೀಡಿಯೋ ಮಾಡುತ್ತಿರುವ ವ್ಯಕ್ತಿ, &#8220;ನಿಮಗೆ ಒಂದೇ ಒಂದು ಹಿಂದೂ ದೇವತೆಯ ಹೆಸರು ತಿಳಿಯದಿದ್ದರೆ ನಿಮ್ಮನ್ನು ನಿಜವಾದ ಸಾಧುಗಳು ಎಂದು ಹೇಗೆ ನಂಬುವುದು,&#8221; ಎಂದು ಕೇಳುತ್ತಾರೆ. ಅಷ್ಟು ಹೊತ್ತಗೆ ಸುತ್ತಮುತ್ತ ಜನ ಸೇರುತ್ತಾರೆ, ಈ ಮೂವರು ಖಾವಿದಾರಿಗಳನ್ನು &#8216;ಬಾಂಗ್ಲಾದೇಶಿ&#8217; ಮತ್ತು &#8216;ರೋಹಿಂಗ್ಯಾ&#8217; ಎಂದೆಲ್ಲಾ ಬೈಯುತ್ತಾರೆ, ಕೆಲವರು ಪೆಟ್ಟು ಹೊಡೆಯಲು ಹೇಳುತ್ತಾರೆ.</p>



<p>ಆಮೇಲೆ ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಮೂವರು ಸಾಧುಗಳಲ್ಲಿ ಒಬ್ಬನ ಹೆಸರು &#8216;ಸಲ್ಮಾನ್&#8217; ಎಂದು ಸುತ್ತಮುತ್ತ ಸೇರಿದವರಿಗೆ ಹೇಳುತ್ತಾನೆ, ಅದನ್ನು ಸಾಬೀತುಪಡಿಸಲು ಐಡಿ ಕಾರ್ಡ್‌ ಕೂಡ ತೋರಿಸುತ್ತಾನೆ. </p>



<p>ಗುಜರಾತಿ ನ್ಯೂಸ್ ಚಾನೆಲ್ Zee 24 Kalak (@Zee24Kalak) ನವೆಂಬರ್ 2 ರಂದು ಈ ಘಟನೆಯ ಕುರಿತು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದೆ: “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ! ಸೂರತ್‌ನಲ್ಲಿ ಸಾಧು ಭಿಕ್ಷೆ ಬೇಡುತ್ತಿದ್ದ ಸತ್ಯವನ್ನು ಐಡಿ ಚೆಕ್‌ನಿಂದ ಬಯಲಾದ ವಂಚನೆ,&#8221; ಎಂದು ಟೈಟಲ್‌ ನೀಡಲಾಗಿದೆ. (&nbsp;<a href="https://archive.is/kQybb" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="gu" dir="ltr">સાધુના વેશમાં સલમાનનાથ પકડાયો! સુરતમાં ભીક્ષા માગી રહેલા સાધુનું આઇડી ચેક કરાતા ફૂટ્યો ભાંડો<a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://twitter.com/hashtag/Viral?src=hash&amp;ref_src=twsrc%5Etfw">#Viral</a> <a href="https://twitter.com/hashtag/ViralVideo?src=hash&amp;ref_src=twsrc%5Etfw">#ViralVideo</a> <a href="https://twitter.com/hashtag/Trending?src=hash&amp;ref_src=twsrc%5Etfw">#Trending</a> <a href="https://twitter.com/hashtag/TrendingNow?src=hash&amp;ref_src=twsrc%5Etfw">#TrendingNow</a> <a href="https://twitter.com/hashtag/India?src=hash&amp;ref_src=twsrc%5Etfw">#India</a> <a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://t.co/891kz7qBdG">pic.twitter.com/891kz7qBdG</a></p>&mdash; Zee 24 Kalak (@Zee24Kalak) <a href="https://twitter.com/Zee24Kalak/status/1852752530348122214?ref_src=twsrc%5Etfw">November 2, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಗೋದಿ ಮೀಡಿಯಾ OpIndia (@OpIndia_in&nbsp;) ಕೂಡ Zee 24 Kalak ಅವರ ಟ್ವೀಟ್ ಇರುವ&nbsp;<a href="https://hindi.opindia.com/national/salman-was-begging-as-hindus-in-saffron-with-his-companions-in-surat-gujarat-video-viral/" target="_blank" rel="noreferrer noopener">ವರದಿಯನ್ನು</a>&nbsp;ಪ್ರಕಟಿಸಿದೆ.&nbsp;<br>ಜೊತಗೆ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಈ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದೆ.  “ಸಲ್ಮಾನ್ ಮತ್ತು ಅವನ ಸಹಚರರು ಕೇಸರಿ ಬಟ್ಟೆಗಳನ್ನು ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕವನ್ನು ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ,&#8221; ಎಂಬ ಟೈಟಲನ್ನು ಓಪ್‌ಇಂಡಿಯಾ ತನ್ನ X ನಲ್ಲಿ ಪೋಸ್ಟ್‌ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">भगवा वस्त्र पहन सलमान और उसके साथी भीख माँग रहे थे। आईडी कार्ड से उनकी असली पहचान सामने आई। वे न कोई श्लोक सुना सके और न ही हिंदू देवी-देवताओं का ठीक से नाम बता सके।<a href="https://twitter.com/hashtag/surat?src=hash&amp;ref_src=twsrc%5Etfw">#surat</a> <a href="https://twitter.com/hashtag/Muslims?src=hash&amp;ref_src=twsrc%5Etfw">#Muslims</a> <a href="https://t.co/RpzS60uCZ7">https://t.co/RpzS60uCZ7</a></p>&mdash; ऑपइंडिया (@OpIndia_in) <a href="https://twitter.com/OpIndia_in/status/1853248297416135101?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಹಿಂದಿಯಲ್ಲಿ ಇರುವ ಓಪ್‌ಇಂಡಿಯಾ ವರದಿಯ ಶೀರ್ಷಿಕೆಯಲ್ಲಿ ಹೀಗೆ ಹೇಳಲಾಗಿದೆ: “ಸಂಸ್ಕೃತ ಶ್ಲೋಕಗಳನ್ನು ಕೇಳಿದಾಗ, ಅವನು ಪ್ರಾರ್ಥಿಸಲು ಪ್ರಾರಂಭಿಸಿದನು, ಅವನಿಗೆ ಒಂದೇ ಒಂದು ಹಿಂದೂ ದೇವರ ಹೆಸರನ್ನು ಹೇಳಲು ಸಾಧ್ಯವಾಯಿತು: ಸಲ್ಮಾನ್ ಮತ್ತು ಗ್ಯಾಂಗ್ ಸೂರತ್‌ನಲ್ಲಿ &#8216;ಸಾಧು&#8217;ಗಳಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದರು, ಈ ರಹಸ್ಯವು ಐಡಿ ಕಾರ್ಡ್‌ ಮೂಲಕ ಬಹಿರಂಗವಾಯಿತು.&#8221; <br><br>ತನ್ನ ವರದಿಯಲ್ಲಿ ಮೂವರು ವ್ಯಕ್ತಿಗಳು &#8216;ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ ಮುಸ್ಲಿಮರು&#8217; ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು OpIndia ಹೇಳಿಕೊಂಡಿದೆ. (ಆರ್ಕೈವ್ <a href="https://archive.is/ozZlY" target="_blank" rel="noreferrer noopener">1</a>,&nbsp;<a href="https://archive.is/UL0TQ" target="_blank" rel="noreferrer noopener">2</a>,&nbsp;<a href="https://archive.is/KMBET" target="_blank" rel="noreferrer noopener">3</a>)</figcaption></figure>



<p>ಮತ್ತೊಂದು ಕೂಗುಮಾರಿ ಚಾನೆಲ್ , ಸುದರ್ಶನ್ ನ್ಯೂಸ್ (@SudarshanNewsTV), ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಈ  ರೀತಿಯ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ: &#8220;ಗುಜರಾತ್‌ನ ಸೂರತ್‌ನಲ್ಲಿ, &#8216;ಜಿಹಾದಿ&#8217; ಸಲ್ಮಾನ್ ಮತ್ತು ಅವನ ಗ್ಯಾಂಗ್ ಸಾಧುಗಳಂತೆ ಪೋಸ್ ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು &#8230; ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಟ್ಟ ಈ ಮೂರು &#8216;ಜಿಹಾದಿಗಳು&#8217; ಬಂಧಿಸಲಾಗಿದೆ. (&nbsp;<a href="https://archive.is/EwDAJ" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">गुजरात के सूरत में ‘साधु’ बन भीख मांग रहा था जिहादी सलमान और उसकी गैंग&#8230;<br><br>साधू वेश में भगवा वस्त्र पहन कर घूम रहे 3 जिहादी गिरफ्तार&#8230;<a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://t.co/RQDu5uWvIk">pic.twitter.com/RQDu5uWvIk</a></p>&mdash; Sudarshan News (@SudarshanNewsTV) <a href="https://twitter.com/SudarshanNewsTV/status/1853383294391636450?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ (@epanchjanya) ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಈ ಟ್ವೀಟ್‌ನಲ್ಲಿ, “ಸಾಧುಗಳ ವೇಷದಲ್ಲಿ ಸಿಕ್ಕಿಬಿದ್ದ ಮುಸ್ಲಿಮರು! ನೀವು ಸಾಧು ಆಗಬೇಕೆಂದಿದ್ದರೆ, ಹಿಂದೂವಾಗಿ ಯಾಕೆ ಬದಲಾಗಬಾರದು? ಸಲ್ಮಾನ್ ಎಂಬ ಮುಸ್ಲಿಂ ವ್ಯಕ್ತಿ ಕೇಸರಿ ವೇಷ ಧರಿಸಿ ಸಾಧುವಿನಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನವೆಂಬರ್ 3, 2024 ರಂದು ನಡೆದಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ ಮೊದಲಲ್ಲ-ಸಾಧುಗಳ ವೇಷ ಧರಿಸಿದ ಮುಸ್ಲಿಮರು ಈ ಹಿಂದೆ 16 ಬಾರಿ ಸಿಕ್ಕಿಬಿದ್ದಿದ್ದಾರೆ!” (<a href="https://archive.is/6fh1t" target="_blank" rel="noreferrer noopener">ಆರ್ಕೈವ್</a>&nbsp;)</figcaption></figure>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">साधु भेष में पकड़े गए मुस्लिम!<br><br>साधु ही बनना है तो हिन्दू क्यों नहीं बन जाते!<br><br>भगवा वस्त्र पहना हुआ मुस्लिम युवक सलमान, साधु के भेष में भीख माँगते हुए पकड़ा गया।<br><br>गुजरात के सूरत में 3 नवंबर, 2024 को ये घटना हुई जिसके बाद पुलिस ने उसे गिरफ्तार किया।<br><br>ऐसा पहली बार नहीं 16 बार हो… <a href="https://t.co/3knDytJfXo">pic.twitter.com/3knDytJfXo</a></p>&mdash; Panchjanya (@epanchjanya) <a href="https://twitter.com/epanchjanya/status/1853426572537000040?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಈ ವೀಡಿಯೋ ಫೇಸ್ಬುಕ್‌, X, ವಾಟ್ಸಾಪ್‌ ಗ್ರೂಪುಗಳಲ್ಲಿ ಜನರು ಹಂಚಿಕೊಂಡಿದ್ದಾರೆ. (ನೋಡಿ: <a href="https://archive.is/gFT8p" target="_blank" rel="noreferrer noopener">&nbsp;@ajaychauhan41</a>&nbsp;,&nbsp;<br><a href="https://archive.is/XTZVV" target="_blank" rel="noreferrer noopener">@Sudanshutrivedi</a>)</figcaption></figure>



<p><strong>ಸತ್ಯ ಏನು?</strong></p>



<p>ಸತ್ಯಾನ್ವೇಷಣೆಯ ನಂತರ ಈ ಮೂವರೂ ಸಂತರು ಹಿಂದೂಗಳು ಎಂಬುದು ಕಂಡುಬಂದಿದೆ. ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ಈ ಬಗ್ಗೆ&nbsp;<a href="https://x.com/Divya_Bhaskar/status/1853390257640898813" target="_blank" rel="noreferrer noopener">ವರದಿ</a> ಮಾಡಿದೆ. ನವೆಂಬರ್ 4 ರಂದು, ಪೊಲೀಸ್ ತನಿಖೆಯ ನಂತರ ಇವರು&nbsp;ಮೂವರೂ ಹಿಂದೂಗಳು ಮತ್ತು ಜುನಾಗಢದಿಂದ ಬಂದವರು ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ತಿಳಿದುಬಂದಿದೆ</a>&nbsp;ಎಂದು ವರದಿ ಹೇಳುತ್ತದೆ.</p>



<p>ಸೂರತ್‌ನ ಅದಾಜನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್‌ಬಿ ಗೋಜಿಯಾ ಅವರು ಮೂವರು ಸನ್ಯಾಸಿಗಳನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ವರದಿ ಮಾಡಿದ್ದಾರೆ ಮತ್ತು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ವರದಿ</a>&nbsp;ಉಲ್ಲೇಖಿಸಿದೆ.&nbsp;ವಿಚಾರಣೆಯ ನಂತರ, ಪರಿಶೀಲನೆಗಾಗಿ, ಅವರ ನಿಜವಾದ ಗುರುತನ್ನು ನಿರ್ಧರಿಸಲು ಜುನಾಗಢದಲ್ಲಿ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರು ನೀಡಿದ ಹೆಸರುಗಳು ಸತ್ಯವಾಗಿವೆ ಎಂದು ಕಂಡುಬಂದಿದೆ. ಒಬ್ಬ ವ್ಯಕ್ತಿಯ ಹೆಸರು ಸಲ್ಮನಾಥ್ ಆಗಿದ್ದು, ಆತನನ್ನು ಸಲ್ಮಾನ್‌, ಓರ್ವ ಮುಸಲ್ಮಾನ ಎಂದು ಹಿಂದೂಗಳು ಭಾವಿಸಿ ಆತನ ಮೇಲೆಗೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ, ಆತ ಹಿಂದೂ ಎಂಬುದು ದೃಢಪಟ್ಟಿದೆ.</p>



<p>Alt News ಈತನ ಮತದಾರ ಚೀಟಿಯನ್ನು ವರದಿ ಮಾಡಿದ್ದು, ಈ ಚೀಟಿಯಲ್ಲಿ ಈತನ ಹೆಸರು ಹೆಸರು ಸಲ್ಮನಾಥ್ ಪರ್ಮಾರ್ ಮತ್ತು ಅವನ ತಂದೆಯ ಹೆಸರು ಸೂರಮ್ನಾಥ್ ಪರ್ಮಾರ್ ಎಂದು ಉಲ್ಲೇಖಿಸಲಾಗಿದೆ.&nbsp;<br></p>



<p>ರಜಪೂತರಲ್ಲಿ <a href="https://forebears.io/surnames/parmar#meaning" target="_blank" rel="noreferrer noopener">ಪರ್ಮಾರ್</a>&nbsp;ಎಂಬ ಉಪನಾಮವಿದೆ. ಈ ಪರ್ಮಾರರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಿಂದ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಿಂದ ಬಂದವರು.</p>



<p><em>ಆದ್ದರಿಂದ ಸಾಧುವಿನ ವೇಷ</em> ಧರಿಸಿದ ಮೂವರು ಮುಸ್ಲಿಮರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದು ಹಸಿಹಸಿ ಸುಳ್ಳು, ಭಿಕ್ಷೆ ಬೇಡುತ್ತಿದ್ದವರು ಹಿಂದೂ ಸಾಧುಗಳೇ ಆಗಿದ್ದಾರೆ.</p>



<p>ಈ ರೀತಿ ಹಿಂದೂ ಸಾಧುಗಳನ್ನು ಮುಸಲ್ಮಾನರು ಎಂದು ಕರೆದು ಕಿರುಕುಳ ನೀಡಿದ್ದು ಇದೇ ಮೊದಲೇನಲ್ಲ. <a href="https://www.altnews.in/up-meerut-sadhus-thrashed-suspicion-of-being-child-kidnappers-video-viral-with-false-muslim-angle/" target="_blank" rel="noreferrer noopener">ಈ 2024 ರ ಜುಲೈನಲ್ಲಿ</a> ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಯಿತು. ಸಂಚಾರಿ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಘಟನೆಗಳೂ ನಡೆದಿವೆ. </p>



<p></p>
]]></content:encoded>
					
		
		
			</item>
		<item>
		<title>ಕೊಲೆಗಡುಕರಿಗೆ ಭವ್ಯ ಸ್ವಾಗತ l ನವಭಾರತದ ಆತಂಕಕಾರಿ ಬೆಳವಣಿಗೆ</title>
		<link>https://peepalmedia.com/grand-welcome-for-thugs-l-alarming-development-of-new-india/</link>
		
		<dc:creator><![CDATA[Peepal Media]]></dc:creator>
		<pubDate>Tue, 29 Oct 2024 12:18:10 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[gouri lankesh]]></category>
		<category><![CDATA[hindu]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RSS]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=48041</guid>

					<description><![CDATA[ಇದೇ ತಿಂಗಳ 9ರಂದು ಗೌರಿ ಲಂಕೇಶ್‌ ಹಂತಕರೆಂದು ಆಪಾದಿಸಲಾಗಿರುವ ಪರಶುರಾಮ್‌ ವಾಘ್‌ಮೋರೆ ಮತ್ತು ಮನೋಹರ್‌ ಯಾದವೆ ಅವರಿಗೆ ಬೆಂಗಳೂರಿನ ಶೆಷನ್ಸ್‌ ಕೋರ್ಟ್‌ ಜಾಮೀನನ್ನು ನೀಡಿತು. ಅವರಿಬ್ಬರು ಆರು ವರ್ಷಗಳ ಕಾಲ ಕಂಬಿಯನ್ನು ಎಣಿಸಿದ್ದರು. ಇವರಿಬ್ಬರನ್ನು ವಿಜಯಪುರದಲ್ಲಿ ಕೆಲವು ಹಿಂದುತ್ವಾದಿ ಸಂಘಟನೆಗಳ ಕಾರ್ಯಕರ್ತರು “ ಭಾರತ್‌ ಮಾತಾ ಕಿ ಜೈ ʼ,” ಸನಾತನ್‌ ಧರ್ಮ್‌ ಕಿ ಜೈ” ಎಂದು ಘೋಷಣೆಗಳನ್ನು ಕೂಗುತ್ತ ಭವ್ಯ ಸ್ವಾಗತವನ್ನು ಮಾಡಿದರು! ಅವರನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯ ಬಳಿ ಕರೆದುಕೊಂಡು ಹೋಗಿ, ಕೇಸರಿ [&#8230;]]]></description>
										<content:encoded><![CDATA[
<p>ಇದೇ ತಿಂಗಳ 9ರಂದು ಗೌರಿ ಲಂಕೇಶ್‌ ಹಂತಕರೆಂದು ಆಪಾದಿಸಲಾಗಿರುವ ಪರಶುರಾಮ್‌ ವಾಘ್‌ಮೋರೆ ಮತ್ತು ಮನೋಹರ್‌ ಯಾದವೆ ಅವರಿಗೆ ಬೆಂಗಳೂರಿನ ಶೆಷನ್ಸ್‌ ಕೋರ್ಟ್‌ ಜಾಮೀನನ್ನು ನೀಡಿತು. ಅವರಿಬ್ಬರು ಆರು ವರ್ಷಗಳ ಕಾಲ ಕಂಬಿಯನ್ನು ಎಣಿಸಿದ್ದರು. ಇವರಿಬ್ಬರನ್ನು ವಿಜಯಪುರದಲ್ಲಿ ಕೆಲವು ಹಿಂದುತ್ವಾದಿ ಸಂಘಟನೆಗಳ ಕಾರ್ಯಕರ್ತರು “ ಭಾರತ್‌ ಮಾತಾ ಕಿ ಜೈ ʼ,” ಸನಾತನ್‌ ಧರ್ಮ್‌ ಕಿ ಜೈ” ಎಂದು ಘೋಷಣೆಗಳನ್ನು ಕೂಗುತ್ತ ಭವ್ಯ ಸ್ವಾಗತವನ್ನು ಮಾಡಿದರು! ಅವರನ್ನು ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯ ಬಳಿ ಕರೆದುಕೊಂಡು ಹೋಗಿ, ಕೇಸರಿ ಶಾಲುಗಳನ್ನು ಹೊದಿಸಿ, ಕೊರಳಿಗೆ ಹಾರಗಳನ್ನು ಹಾಕಲಾಯಿತು! ನಂತರ ಅವರು ದೇವಾಲಯವೊಂದಕ್ಕೆ ಭೇಟಿಯನ್ನು ನೀಡಿದರು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಯಿತು.</p>



<p>ನಮ್ಮ ದೇಶದಲ್ಲಿ, ಹಿಂದೂ ಮತ/ಸನಾತನ ಧರ್ಮದ ಸಂರಕ್ಷಣೆಗಾಗಿ ಹೇಯ ಕೃತ್ಯಗಳನ್ನು ಎಸಗಿದ ಕೆಲವು ಕೊಲೆಗಡುಕರು/ಅತ್ಯಾಚಾರಿಗಳಿಗೆ, ಕೆಲವು ಹಿಂದುತ್ವವಾದಿ ಸಂಘಟನೆಗಳು ಅದ್ದೂರಿ ಸ್ವಾಗತ ಹಾಗೂ ಸನ್ಮಾನವನ್ನು ಮಾಡಿದ ಅನೇಕ ಉದಾಹರಣೆಗಳಿವೆ. ಅಂತಹವರು ತಮ್ಮ ಹಿತವನ್ನು ಬದಿಗಿಟ್ಟು ತ್ಯಾಗವನ್ನು ಮಾಡಿದ್ದಾರೆ ಎಂಬರ್ಥದ ಹೇಳಿಕೆಗಳನ್ನು ಹರಿಬಿಡಲಾಗುತ್ತದೆ! ಅವರು ಸೂಪರ್‌ ಹೀರೋಗಳು ಎಂದು ಬಿಂಬಿಸಲಾಗುತ್ತದೆ. ಇವುಗಳನ್ನು ನಂಬುವ, ಸಮರ್ಥಿಸುವ ದೊಡ್ಡ ದಂಡೇ ನಮ್ಮ ನಡುವೆ ಇದೆ! ಇಂತಹ ಬೆಳವಣಿಗೆಗಳ ಸುದ್ದಿಗಳನ್ನು ಯಾವ ಬಗೆಯ ಹಿಂಜರಿತವಿಲ್ಲದೆ, ರಾಜಾರೋಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಪರಮತ ದ್ವೇಷ, ಹಿಂಸೆ ಮತ್ತು ಹತ್ಯೆಗಳನ್ನು ವಿಜೃಂಭಿಸಲಾಗುತ್ತದೆ.</p>



<p>ಕೆಳಗಿನ ವಿವರಣಾ ಪಟ್ಟಿಯಲ್ಲಿ ಹೀನ ಅಪರಾಧಗಳನ್ನು ಎಸಗಿದವರು/ಆಪಾದಿತರನ್ನು ಹಿಂದುತ್ವವಾದಿ ಸಂಘಟನೆಗಳು ಸನ್ಮಾನ ಮಾಡಿದ ಪ್ರಸಂಗಗಳನ್ನು ಉಲ್ಲೇಖಿಸಲಾಗಿದೆ:<br>ಅ) ಉತ್ತರಪ್ರದೇಶದ ಮುಝಫರ್‌ನಗರ್ನಲ್ಲಿ 2013ರಲ್ಲಿ ಕೋಮು ಹಿಂಸೆ ಜರುಗಿತು. ಸುಮಾರು 60ಕ್ಕೂ ಹೆಚ್ಚು ಮಂದಿ ಹತ್ಯೆಗಿಡಾದರು; ಸುಮಾರು 40,000 ಹೆಚ್ಚು ಮಂದಿ ನಿರ್ವಸತಿಗೆ ಒಳಗಾದರು. ಅವರಲ್ಲಿ ಹೆಚ್ಚಿನ ಮಂದಿ ಮುಸಸ್ಮಾನರಾಗಿದ್ದರು. ಕೋಮುವಾದಿ ಕೃತ್ಯಗಳಿಗೆ ಕಾರಣಕರ್ತರು ಎಂದು ಆಪಾದಿಸಲಾಗಿದ್ದ ಸಂಗೀತ್‌ ಸೋಮ್‌ ಮತ್ತು ಸುರೇಶ್‌ ರಾಣಾ ಎಂಬ ಕಾರ್ಯಕರ್ತರನ್ನು ನರೇಂದ್ರ ಮೋದಿ ಭಾಷಣ ಮಾಡಿದ ರ್ಯಾಲಿಯಲ್ಲಿ ಸನ್ಮಾನಿಸಲಾಯಿತು ಎಂದು ಮಾಧ್ಯಮಗಳಲ್ಲಿ ವರದಿಯಾಯಿತು.</p>



<p>ಆ) ಪುಣೆಯ ಟೆಕ್ಕಿ ಮೋಹ್ಸೀನ್‌ ಶೇಖ್‌ನನ್ನು ಕೊಲ್ಲಲಾಯಿತು. ಈತನ ಕೊಲೆಯಲ್ಲಿ ಹಿಂದೂ ರಾಷ್ಟ್ರ ಸೇನೆಯ ಮುಖ್ಯಸ್ಥನಾದ ಧನಂಜಯ್‌ ದೇಸಾಯಿಯ ಕೈವಾಡವಿದೆ ಎಂದು ಶಂಕಿಸಿ, ಆತನನ್ನು ದಸ್ತಗಿರಿ ಮಾಡಲಾಯಿತು. ಅತನಿಗೆ ʼ ಹಿಂದುತ್ವ ಶೌರ್ಯ ಪುರಸ್ಕಾರ್‌ʼ ಬಿರುದನ್ನು ನೀಡಲಾಗುವುದೆಂದು ಕೆಲವು ಹಿಂದೂ ಸಂಘಟನೆಗಳು ಘೋಷಿಸಿದವು.</p>



<p>ಇ) 2018ರಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ ಎಂಟು ವರ್ಷದ ಹುಡುಗಿಯ ಮೇಲೆ ಬರ್ಬರವಾಗಿ ಗುಂಪು ಅತ್ಯಾಚಾರ ಮಾಡಿ, ಆಕೆಯನ್ನು ಕೊಲ್ಲಲಾಯಿತು. ಆ ಕೇಸಿನಲ್ಲಿ ಆಪಾದಿತರನ್ನು ಬಂಧಿಸಲಾಯಿತು. ಅವರ ಪರವಾಗಿ ಹಿಂದೂ ಏಕತಾ ಮಂಚ್‌ ಮತ್ತು ಕೆಲವು ಬಿಜೆಪಿ ನಾಯಕರು ಬಹಿರಂಗವಾಗಿ ರ್ಯಾಲಿಗಳನ್ನು ನಡೆಸಿದರು,</p>



<p>ಈ) ಜಾರ್ಖಂಡ್‌ನ ರಾಮ್‌ಗರ್ನಲ್ಲಿ 2017ರಲ್ಲಿ ಗೋವಿನ ಅಕ್ರಮ/ಕಳ್ಳ ಸಾಗಣೆ, ಹತ್ಯೆಯ ಕಾರಣವನ್ನು ಇರಿಸಿಕೊಂಡು ಅಲಿಮುದ್ದೀನ್‌ ಅನ್ಸಾರಿ ಎಂಬ ವ್ಯಕ್ತಿಯನ್ನು ಗುಂಪು ಹಿಂಸೆಯಲ್ಲಿ ಕೊಲ್ಲಲಾಯಿತು. ಕೆಳಹಂತದ ನ್ಯಾಯಾಲಯದಲ್ಲಿ ಎಂಟು ಮಂದಿಯನ್ನು ಆಪಾದಿತರೆಂಬ ತೀರ್ಪು ಹೊರಬಂದಿತು. ಉಚ್ಚ ನ್ಯಾಯಾಲಯದಲ್ಲಿ ಅವರಿಗೆ ಜಾಮೀನು ದೊರಕಿತು. 2018ರಲ್ಲಿ ಕೇಂದ್ರ ಸರ್ಕಾರದಲ್ಲಿ ಸಿವಿಲ್‌ ಏವಿಯೇಷನ್‌ ಖಾತೆಯ ರಾಜ್ಯ ಮಂತ್ರಿಯಾಗಿದ್ದ ಜಯಂತ್‌ ಸಿನ್ಹಾ ಈ ಎಂಟು ಮಂದಿಯನ್ನು ಭೇಟಿ ಮಾಡಿದ್ದಷ್ಟೇ ಅಲ್ಲದೆ ಅವರಿಗೆ ಮಾಲಾರ್ಪಣೆಯನ್ನೂ ಮಾಡಿದರು!</p>



<p>ಉ) ಗುಜರಾತಿನ 2002ರ ಕೋಮು ಗಲಭೆಯ ಭೀಕರ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಎಂಬ ಮಹಿಳೆಯನ್ನು ಗ್ಯಾಂಗ್‌ ರೇಪ್‌ ಮಾಡಲಾಯಿತು. ಆಕೆಯ 14 ಮಂದಿ ಸಂಬಂಧಿಕರನ್ನು ಹೇಯವಾಗಿ ಹತ್ಯೆ ಮಾಡಲಾಯಿತು. ಈ ಕೇಸ್‌ನಲ್ಲಿ ಆಪಾದಿತರಾಗಿದ್ದ 11 ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಆದರೆ 2022ರಲ್ಲಿ ಅವರ ಶಿಕ್ಷೆಯನ್ನು ಮೊಟಕುಗೊಳಿಸಲಾಯಿತು. ಅಗಸ್ಟ್‌ 15, 2022ರಂದು ಜರುಗಿದ ಸಮಾರಂಭವೊಂದರಲ್ಲಿ ಈ 11 ಮಾಹಾಮಾನವರಿಗೆ ಹೂಮಾಲೆಗಳನ್ನು ಹಾಕಿ, ಸಿಹಿಯನ್ನು ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮವನ್ನು ಆರ್‌ಎಸ್‌ಎಸ್ ಗೆ ಸೇರಿದ ಅರವಿಂದ್‌ ಸಿಸೋಡಿಯಾ ಎಂಬ ವ್ಯಕ್ತಿ ದೀನ್‌ ದಯಾಳ್‌ ಟ್ರಸ್ಟ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಯಿತು! ನಮ್ಮ ದೇಶದ ಸ್ವಾತಂತ್ರ್ಯ ದಿನವನ್ನು ಇದಕ್ಕಿಂತ ಉತ್ತಮ ಬಗೆಯಲ್ಲಿ ಆಚರಿಸಲು ಸಾಧ್ಯವೇ?</p>



<p>ಊ) ಇದೇ ವರ್ಷದ ಜೂನ್‌ 30ರಂದು ಗೋವಾದ ಪೊಂಡಾದಲ್ಲಿ ಹಿಂದೂ ಜನಜಾಗೃತಿ ಸಮಿತಿ ಒಂದು ಸನ್ಮಾನ ಸಮಾರಂಭವನ್ನು ಆಯೋಜಿಸಿತು. ಅದರಲ್ಲಿ ವಿಚಾರವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಡಾ. ನರೇಂದ್ರ ಧಬೋಲ್ಕರ್‌ ಹತ್ಯೆಗೆ ಸಂಬಂಧಿಸಿದಂತೆ ಖುಲಾಸೆಗೊಂಡಿದ್ದ ಸನಾತನ ಸಂಸ್ಥೆಯ ಜೊತೆ ಸಂಪರ್ಕವಿದ್ದ ವಿಕ್ರಮ್‌ ಭಾವೆ ಮತ್ತು ಆತನ ವಕೀಲರಿಗೆ ಸನ್ಮಾನವನ್ನು ಮಾಡಲಾಯಿತು.</p>



<p>ಮೇಲೆ ಪ್ರಸ್ತಾಪಿಸಿರುವಂತಹ ಇನ್ನು ಅನೇಕ ಸನ್ಮಾನ ಸಮಾರಂಭಗಳು ನಮ್ಮ ದೇಶದ ಅನೇಕ ಭಾಗಗಳಲ್ಲಿ ಜರುಗಿವೆ. ಯು ಆರ್ ಅನಂತಮೂರ್ತಿ ಗತಿಸಿದಾಗ ಕೆಲವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಇಂತಹ ಒಂದು ಮನಸ್ಥಿತಿ ಬೆಳೆಯುತ್ತಿರುವುದರ, ಬೆಳೆಸುತ್ತಿರುವುದರ ಹಿಂದೆ ಯಾವ ಶಕ್ತಿಗಳ ಕಾರಸ್ಥಾನಗಳಿವೆ? ಇದರಿಂದಾಗುವ ರಾಜಕೀಯ ಲಾಭಗಳೇನು ಎಂಬಿತ್ಯಾದಿ ಪ್ರಶ್ನೆಗಳ ಬಗೆಗೆ ಪ್ರತ್ಯೇಕವಾದ ವಿವರಣೆ ಬೇಕಿಲ್ಲ! ಡಾ,ನರೇಂದ್ರ ಧಬೋಲ್ಕರ್‌, ಗೋವಿಂದ್‌ ಪನ್ಸಾರೆ, ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್‌ ಅಂತಹ ವ್ಯಕ್ತಿಗಳ ಕಗ್ಗೊಲೆಯನ್ನು ಮಾಡಿದವರಿಗೆ, ಲಿಂಚಿಂಗ್‌ನಲ್ಲಿ ಭಾಗವಹಿಸಿದವರಿಗೆ ಸೂಕ್ತವಾದ ಶಿಕ್ಷೆ ದೊರಕುತ್ತದೆಯೇ?</p>



<p>ಇಂತಹ ಕೃತ್ಯಗಳನ್ನು ಖಂಡಿಸಿದರೇ, ಪ್ರಶ್ನಿಸಿದರೇ, ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಟ್ರೋಲ್‌ ಮಾಡಲಾಗುತ್ತದೆ. ಅನ್ಯಮತದವರು ಕುಕೃತ್ಯಗಳನ್ನು ಮಾಡುವುದಿಲ್ಲವೇ, ಏಕೆ ಅವುಗಳ ಬಗೆಗೆ ನೀವು ಬರೆಯುವುದಿಲ್ಲ: ಹೇಳಿಕೆಗಳನ್ನು ಕೊಡುವುದಿಲ್ಲ ಎಂಬ ವಿತ್ತಂಡ, ಅಸಂಬದ್ಧ ವಾದಗಳನ್ನು ಮುಂದಿಡಲಾಗುತ್ತದೆ. ಮಾನವತೆಯಲ್ಲಿ ನೈಜ ನಂಬಿಕೆಯಿರುವ ವ್ಯಕ್ತಿ ಎಲ್ಲ ಮತಗಳ ಮೂಲಭೂತವಾದ/ಕೋಮುವಾದಗಳನ್ನು ವಿರೋಧಿಸುತ್ತಾನೆ. ಅಂತಹ ವ್ಯಕ್ತಿ ಎಷ್ಟೇ ಬಾರಿ ತನ್ನ ಪಕ್ಷಪಾತರಹಿತ ನಿಲುವಿನ ನಿದರ್ಶನಗಳನ್ನು ನೀಡಿದರೂ, ಅವುಗಳನ್ನು ಸಾರಾಸಗಟಾಗಿ, ನಕಾರಾತ್ಮಕ ರೀತಿಯಲ್ಲಿ ಕಡೆಗಣಿಸಲಾಗುತ್ತದೆ! ಇದು ನವಭಾರತದ ಒಂದು ಬೆಳವಣಿಗೆ!</p>



<p>ಕೊಲೆಗಳನ್ನು ಸಂಭ್ರಮಿಸುವ ಈ ಪರಿ ವಿಕೃತಿಯೇ ಸರಿ. ಆತಂಕಕಾರಿಯಾದ ಈ ಬೆಳವಣಿಗೆ ನಮ್ಮ ಸಮ್ಮಿಳಿತ ಸಂಸ್ಕೃತಿಯ ಮೇಲೆ ಆಗುತ್ತಿರುವ ಅನೇಕ ಪ್ರಹಾರಗಳಲ್ಲಿ ಒಂದಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೂ ಇದು ಮಾರಕ!</p>



<p>ಬರೆದವರು: ಮ ಶ್ರೀ ಮುರಳಿ ಕೃಷ್ಣ</p>



<h2 class="wp-block-heading"></h2>
]]></content:encoded>
					
		
		
			</item>
		<item>
		<title>  ರೋಹಿಣಾಕ್ಷ ಶಿರ್ಲಾಲುರಿಂದ ಬೌದ್ಧ-ಮುಸ್ಲಿಮರಲ್ಲಿ ಕೋಮುಭಾವನೆ ಕೆರಳಿಸುವ ಬರಹ: ವಿವಿಗೆ ಪತ್ರ ಬರೆಯಲು ನಿರ್ಧಾರ</title>
		<link>https://peepalmedia.com/writing-by-rohinaksha-shirlalu-inciting-communal-feelings-among-buddhists-and-muslims-decision-to-write-letter-to-v-v/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 22 May 2024 07:08:52 +0000</pubDate>
				<category><![CDATA[ಇತಿಹಾಸ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[ದಲಿತ ನೋಟ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[ಸೈನ್ಸ್ + ಟೆಕ್ನಾಲಜಿ]]></category>
		<category><![CDATA[bengalure]]></category>
		<category><![CDATA[bhowdha]]></category>
		<category><![CDATA[Gulbarga]]></category>
		<category><![CDATA[hindu]]></category>
		<category><![CDATA[india]]></category>
		<category><![CDATA[kalaburagi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=39774</guid>

					<description><![CDATA[ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ &#160;ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ. &#160;ರೋಹಿಣಾಕ್ಷ ಅವರು &#8216;ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ&#8217; ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ &#8216;ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ. &#160;ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, [&#8230;]]]></description>
										<content:encoded><![CDATA[
<p>ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲ ಎಂಬುವವರು ಬರೆದಿರುವ ಲೇಖನದಲ್ಲಿ &nbsp;ಬೌದ್ಧರು, ಮುಸ್ಲಿಮರು, ಅಂಬೇಡ್ಕರ್‌ವಾದಿಗಳಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಲೇಖಕರು ಸುಳ್ಳು ಬರೆದಿದ್ದಾರೆ ಎಂದು ಕಲಬುರಗಿಯ ಸೌಹಾರ್ಧ ಬಳಗದ ದತ್ತಾತ್ರೆಯ ಇಕ್ಕಳಕಿ ಆರೋಪಿಸಿದ್ದಾರೆ.</p>



<p>&nbsp;ರೋಹಿಣಾಕ್ಷ ಅವರು &#8216;ಅಂಬೇಡ್ಕರರನ್ನು ಬುದ್ಧನೇಕೆ ಸೆಳೆದ&#8217; ಶಿರ್ಷಿಕೆಯೊಂದಿಗೆ ಇಂದು ಬುಧವಾರ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದಾರೆ. ಈ ಲೇಖನದಲ್ಲಿ &#8216;ಬೌದ್ಧಧಮ್ಮಕ್ಕೆ ಬಾರಿ ಪೆಟ್ಟು ಬಿದ್ದದ್ದು ಮುಸ್ಲಿಂ ಆಕ್ರಮಣದಿಂದ. &nbsp;ಮುಸ್ಲಿಮರು ಬೌದ್ಧ ವಿಗ್ರಹಗಳನ್ನು ನಾಶ ಮಾಡಿದರು, ಬಿಕ್ಕುಗಳನ್ನು ಕೊಂದುಬಿಟ್ಟರು, ನಳಂದವನ್ನು ಸುಟ್ಟುಹಾಕಿದರು, ಭಾರತದಲ್ಲಿ ಮಾತ್ರವಲ್ಲ ಇಸ್ಲಾಂ ಹೋದಡೆಯಲ್ಲೆಲ್ಲಾ ನಾಶ ಮಾಡಿತು&#8217; ಎಂಬ ಸತ್ಯವನ್ನು ಅಂಬೇಡ್ಕರ್‌ ಅರ್ಥ ಮಾಡಿಕೊಂಡಿದ್ದರು ಎಂದು ರೋಹಿಣಾಕ್ಷ ಅಂಬೇಡ್ಕರ್‌ ಹೆಸರಲ್ಲಿ ಸುಳ್ಳು ಮಾಹಿತಿಯನ್ನು ಬಿತ್ತುತ್ತಿದ್ದಾರೆ ಎಂದು ಎಂದು ಇಕ್ಕಳಿಕೆ ಆರೋಪಿಸಿದ್ದಾರೆ.</p>



<p>ಬೌದ್ಧ ಧರ್ಮದ ಉದಯವನ್ನು ಒಂದು ಕ್ರಾಂತಿಯೆಂದೂ, ಬ್ರಾಹ್ಮಣರಿಂದ ಪ್ರಾರಂಭವಾದ ಪ್ರತಿಕ್ರಾಂತಿಯು ಬೌದ್ಧಧಮ್ಮದ ಅವನತಿ ಮತ್ತು ಪತನಕ್ಕೆ ಕಾರಣವಾಯಿತು ಎಂದು ಡಾ. ಅಂಬೇಡ್ಕರ್‌ ದಾಖಲಿಸಿರುವುದು (ಸಂ:3/2015, ಪುಟ:163) ಅಂಬೇಡ್ಕರ್‌ ಸಂಪುಟಗಳಲ್ಲಿ ದಾಖಲಾಗಿದೆ. ತಾವು ಬೌದ್ಧ ಧಮ್ಮಕ್ಕೆ ಮತಾಂತರ ಆಗಲು ಹಿಂದೂ ಧರ್ಮದ ಸನಾತನತೆಯೆ ಕಾರಣ ಎಂದು ಅಂಬೇಡ್ಕರ್‌ ಪದೆ ಪದೆ ಹೇಳುತ್ತಿದ್ದರು ಎಂದು ಇಕ್ಕಳಕಿ ತಿಳಿಸಿದ್ದಾರೆ.</p>



<p>3.10.1935 ರಲ್ಲಿ ನಾಸಿಕ್ ಜಿಲ್ಲೆಯ ಯಹೋಲ ಮುನಿಸಿಪಾಲಟಿಯು ಡಾ.ಅಂಬೇಡ್ಕರ್ ಅವರಿಗೆ ಬಿನ್ನವತ್ತಳೆ ಅರ್ಪಿಸಿತು. ಇದಕ್ಕೆ ಉತ್ತರಿಸುತ್ತಾ ಡಾ. ಅಂಬೇಡ್ಕರ್ &#8216;ಹಿಂದೂಧರ್ಮದಲ್ಲಿ ಬೇರೂರಿದ ಅಸಮಾನತೆಯು ಆ ಧರ್ಮವನ್ನು ತೊರೆಯುವಂತೆ ನನ್ನನ್ನು ಒತ್ತಾಯಿಸುತ್ತಿದೆ. ನನ್ನ ತಪ್ಪಿಲ್ಲದೆ ಇದ್ದರೂ ನಾನು&nbsp; ಅಸ್ಪೃಶ್ಯನಾಗಿ ಜನಿಸಿದೆ. ಈಗ ನಾನು ಹಿಂದೂವಾಗಿ ಸಾಯಲಾರೆ, ಇದರ ನಿರ್ಧಾರ ನನ್ನ ಕೈಯಲ್ಲಿದೆ&#8217; ಎಂದು ಹೇಳುತ್ತಾರೆ. ಹೀಗೆ ಬೌದ್ಧ ಧರ್ಮ ನಾಶವಾಗಲು ಬ್ರಾಹ್ಮಣರು ಕಾರಣ ಎಂಬ ಸತ್ಯ ಅಂಗೈಯಲ್ಲಿ ಇರುವಾಗ ರೋಹಿಣಾಕ್ಷ ಅವರು ಬೌದ್ಧ ಧರ್ಮದ ನಾಶಕ್ಕೆ ಮುಸ್ಲಿಮರು ಕಾರಣ ಎನ್ನುವ ಮೂಲಕ ಕೋಮು ಬಾವನೆ ಕೆರಳಿಸಲು ಕಾರಣರಾಗಿದ್ದಾರೆ. ಲೇಖಕರು ಇಡೀ ಲೇಖನದಲ್ಲಿ ಒಂದೇ ಒಂದು ಪದವನ್ನು ಹಿಂದೂ ಧರ್ಮದ ಸನಾತನೆಯ ಬಗ್ಗೆ ಉಲ್ಲೇಖ ಮಾಡದೆ ಲೇಖಕರು ದಿಡೀರ್ &#8216;ಮುಸ್ಲಿಮರೆ ಬೌದ್ಧಧರ್ಮದ ನಾಶಕರು&#8217; ಎಂದು ಬರೆದಿದ್ದಾರೆ ಎಂದು ದೂರಿದ್ದಾರೆ.</p>



<p>ಕಲಬುರಗಿ ಹಿಂದೂ-ಬೌದ್ಧ-ಮುಸ್ಲಿಂ ಧರ್ಮೀಯರು ಸಾಮರಸ್ಯದಿಂದ ಬದುಕುವ ಸೂಫಿ-ಶರಣರ ಸೌಹಾರ್ಧದ ನೆಲೆ. ಇಂತಹ ನೆಲೆಯಲ್ಲಿ ಬೌದ್ಧರು-ಮುಸ್ಲೀಮರ ಮಧ್ಯೆ ಕೋಮು ದ್ವೇಶವನ್ನು ಬಿತ್ತಲು ಈ ಲೇಖಕರು ಪ್ರಯತ್ನಿಸಿದ್ದಾರೆ. ಈ ಮೂಲದ ಸ್ವತಃ ಅಂಬೇಡ್ಕರ್ ಆಲೋಚನೆಗಳನ್ನು ತಪ್ಪಾಗಿ ಅರ್ಥೈಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಕಲಬುರಗಿಯ ಅಂಬೇಡ್ಕರ್ ವಾದಿಗಳಿಗೂ ಪರೋಕ್ಷವಾಗಿ ಅವಮಾನ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಜೈಭೀಮ್ ಬಂಧುಗಳು, ಬೌದ್ಧಾನುಯಾಯಿಗಳು, ಮುಸ್ಲೀಂ ಬಂಧುಗಳು ಒಟ್ಟಾಗಿ ಈ ಬರಹವನ್ನೂ, ಈ ಬರಹ ಬರೆದ ಲೇಖಕರಿಗೂ ಕಲಬುರಗಿಯ ಸೌಹಾರ್ಧ ಕದಡುವ ನೀಚತನಕ್ಕೆ ದಿಕ್ಕಾರ ಹೇಳಬೇಕಿದೆ. ಈ ಕುರಿತು ಸೆಂಟ್ರಲ್ ಯುನಿವರ್ಸಿಟಿಯ ಕುಲಪತಿಗಳಿಗೆ ಎಚ್ಚರಿಕೆಯ ಪತ್ರ ನೀಡಲಾಗುವುದು ಎಂದು ದತ್ರಾತ್ರೆಯ ಇಕ್ಕಳಕಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>CAA ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ: ಅಮಿತ್ ಶಾ</title>
		<link>https://peepalmedia.com/caa-will-not-be-revoked-for-any-reason-amit-shah/</link>
		
		<dc:creator><![CDATA[Hanumanth Halageri]]></dc:creator>
		<pubDate>Thu, 14 Mar 2024 07:23:28 +0000</pubDate>
				<category><![CDATA[Uncategorized]]></category>
		<category><![CDATA[ಇತಿಹಾಸ]]></category>
		<category><![CDATA[ಕರ್ನಾಟಕ ಚುನಾವಣೆ - 2023]]></category>
		<category><![CDATA[ಚುನಾವಣೆ 2023]]></category>
		<category><![CDATA[ಚುನಾವಣೆ 2023- ಪರಿಣಾಮ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[amith shah]]></category>
		<category><![CDATA[amithsha]]></category>
		<category><![CDATA[CAA]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[Muslim]]></category>
		<category><![CDATA[news]]></category>
		<category><![CDATA[NRC]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37007</guid>

					<description><![CDATA[ನವದೆಹಲಿ:&#160; ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ. ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ &#8216;ಸಿಎಎ ಅಸಾಂವಿಧಾನಿಕ&#8217; ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು. ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು [&#8230;]]]></description>
										<content:encoded><![CDATA[
<p><strong>ನವದೆಹಲಿ</strong>:&nbsp; ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆಯನ್ನು) ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಸ್ಪಷ್ಟಪಡಿಸಿದ್ದಾರೆ.</p>



<p>ಎಎನ್‌ಐ ಜೊತೆ ಮಾತನಾಡುವ ಸಂದರ್ಭದಲ್ಲಿ &#8216;ಸಿಎಎ ಅಸಾಂವಿಧಾನಿಕ&#8217; ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಅವರು,  ಈ ಕಾಯ್ದೆ ದೇಶದಲ್ಲಿ ಭಾರತೀಯ ಪೌರತ್ವವನ್ನು ಖಾತ್ರಿಪಡಿಸಿಕೊಳ್ಳಲು ಇರುವ ಸಾರ್ವಭೌಮ ಹಕ್ಕಾಗಿದೆ. ಸಿಎಎ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಇದನ್ನು ಹಿಂಪಡೆಯುವ ಅವಕಾಶವೇ ಇಲ್ಲ ಎಂದರು.</p>



<p>ವಿರೋಧ ಪಕ್ಷಗಳ ನಾಯಕರು ಸಂವಿಧಾನದ 14ನೇ ವಿಧಿ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ಆದರೆ, ಅದರಲ್ಲಿರುವ ಎರಡು ಅನುಚ್ಛೇದಗಳನ್ನು ಮರೆತಿದ್ದಾರೆ. ಅವುಗಳಲ್ಲಿ ಸ್ಪಷ್ಟ, ಸಮಂಜಸವಾದ ವರ್ಗೀಕರಣಗಳಿವೆ.&nbsp;ಈ ಕಾನೂನು 14ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ&#8217; ಎಂದು ಶಾ ಹೇಳಿದರು.</p>



<p>2024ರಲ್ಲಿ &#8216;ಇಂಡಿಯಾ&#8217; ಮೈತ್ರಿಕೂಟ ಅಧಿಕಾರಕ್ಕೇರಿದರೆ,&nbsp;ಸಿಎಎ ರದ್ದುಗೊಳಿಸುವುದಾಗಿ&nbsp;ವಿರೋಧ ಪಕ್ಷಗಳು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, &#8216;ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸುತ್ತಿರುವ ಸಿಎಎ ಅನ್ನು ರದ್ದುಪಡಿಸುವುದು ಅಸಾಧ್ಯ. ಇದು ಸಂಪೂರ್ಣ ಸಾಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ ಸಹ ಈ ಕಾನೂನು ಜಾರಿಗೆ ತಡೆ ನೀಡಿಲ್ಲ ಎಂಬುದನ್ನು ಮರೆಯಬಾರದು ಎಂದರು. ಎಂದಿದ್ದಾರೆ.</p>



<p>ಇದು ಜಾರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಉದ್ಧವ್‌ ಠಾಕ್ರೆ ಅವರನ್ನು ಕೇಳಲು ಬಯಸುತ್ತೇನೆ. ಅವರು ಅಲ್ಪಸಂಖ್ಯಾತರ ಮತಗಳನ್ನು ಬಯಸುತ್ತಿದ್ದು, ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಠಾಕ್ರೆಯವರನ್ನು ಈ ಸಂದರ್ಭದಲ್ಲಿ ಶಾ ತಿವಿದರು.</p>



<p>ಈ ಕಾನೂನು &#8216;ಮುಸ್ಲಿಂ ವಿರೋಧಿ&nbsp; ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. ಓವೈಸಿ ಅವರ ಈ ಹೇಳಿಕೆ ಖಂಡನೀಯ, ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸುವುದರಿಂದ ಮುಸ್ಲಿಮರ ಮೇಲೆ ಧಾರ್ಮಿಕ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ.&nbsp;ಹಾಗೆಯೇ ರಾಷ್ಟ್ರೀಯ ಪೌರತ್ವ ನೋಂದಣಿಗೆ &nbsp;ಹಾಗೂ ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೆ ಈ ಕಾನೂನಿನಲ್ಲಿ ಅವಕಾಶವಿಲ್ಲ&#8217; ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ರಾಜಸ್ಥಾನ ಸರ್ಕಾರದಿಂದ ಸೂರ್ಯ ನಮಸ್ಕಾರ ಕಡ್ಡಾಯ: ಅಲ್ಪಸಂಖ್ಯಾತ ಧರ್ಮಿಯರಿಂದ ವಿರೋಧ</title>
		<link>https://peepalmedia.com/surya-namaskar-mandatory-by-rajasthan-govt-opposition-from-religious-minorities/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 17 Feb 2024 11:26:07 +0000</pubDate>
				<category><![CDATA[ದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rajastan]]></category>
		<category><![CDATA[rajastan governament]]></category>
		<guid isPermaLink="false">https://peepalmedia.com/?p=36142</guid>

					<description><![CDATA[ಜೈಪುರ: ರಾಜಸ್ಥಾನದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ. ಸೂರ್ಯ ನಮಸ್ಕಾರ ಮಾಡುವಂತೆ ಎಲ್ಲ ಶಾಲಾ ಮಕ್ಕಳಿಗೂ ಬಲವಂತಗೊಳಿಸಬಾರದು ಸರಕಾರದ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಜಮೀಯತ್ ಉಲೇಮಾ ಹಿಂದ್ ಸೇರಿದಂತೆ ಮುಸ್ಲಿಮ್ ಸಂಘಟನೆಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿವೆ. ಸೋಮವಾರ ಜೈಪುರದಲ್ಲಿ ಸಮಾವೇಶಗೊಂಡ ಜಮೀಯತ್ ಉಲೇಮಾ ಹಿಂದ್ ನ ರಾಜ್ಯ ಕಾರ್ಯಕಾರಣಿಯು ಸೂರ್ಯ ನಮಸ್ಕಾರ [&#8230;]]]></description>
										<content:encoded><![CDATA[
<p>ಜೈಪುರ: ರಾಜಸ್ಥಾನದಲ್ಲಿ ಎಲ್ಲ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿದ್ದು, ಭಾರೀ ವಿವಾದ ಸೃಷ್ಟಿಯಾಗಿದೆ.</p>



<p><br>ಸೂರ್ಯ ನಮಸ್ಕಾರ ಮಾಡುವಂತೆ ಎಲ್ಲ ಶಾಲಾ ಮಕ್ಕಳಿಗೂ ಬಲವಂತಗೊಳಿಸಬಾರದು ಸರಕಾರದ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಜಮೀಯತ್ ಉಲೇಮಾ ಹಿಂದ್ ಸೇರಿದಂತೆ ಮುಸ್ಲಿಮ್ ಸಂಘಟನೆಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿವೆ. ಸೋಮವಾರ ಜೈಪುರದಲ್ಲಿ ಸಮಾವೇಶಗೊಂಡ ಜಮೀಯತ್ ಉಲೇಮಾ ಹಿಂದ್ ನ ರಾಜ್ಯ ಕಾರ್ಯಕಾರಣಿಯು ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಮುಸ್ಲಿಮ್ ಸಮುದಾಯವನ್ನು ಆಗ್ರಹಿಸಿದೆ.</p>



<p><br>ರಾಜಸ್ಥಾನದ ಶಾಲೆಗಳಲ್ಲಿ ಫೆ.15ರಿಂದ ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸಿರುವ ಭಜನ್ ಲಾಲ್ ಶರ್ಮಾ ನೇತೃತ್ವದ ಸರಕಾರವು, ಆದೇಶವನ್ನು ಪಾಲಿಸದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.</p>



<p><br>ಸೂರ್ಯ ನಮಸ್ಕಾರವು ಮಂತ್ರಗಳ ಪಠಣದೊಂದಿಗೆ ಸೂರ್ಯನನ್ನು ಆರಾಧಿಸುವ ಹಲವಾರು ಯೋಗಭಂಗಿಗಳನ್ನು ಒಳಗೊಂಡಿದೆ. ಸೂರ್ಯ ನಮಸ್ಕಾರವನ್ನು ಮಾಡುವುದರಿಂದ ಸೂರ್ಯನನ್ನು ದೇವರು ಎಂದು ಒಪ್ಪಿಕೊಂಡಂತಾಗುತ್ತದೆ ಮತ್ತು ತಮ್ಮ ಧರ್ಮವು ಇದನ್ನು ಅನುಮತಿಸುವುದಿಲ್ಲ ಎಂದು ಮುಸ್ಲಿಮ್ ಸಂಘಟನೆಗಳು ವಾದ ಮಂಡಿಸಿವೆ.</p>



<p><br>ರಾಜ್ಯದಲ್ಲಿಯ ನೂತನ ಬಿಜೆಪಿ ಸರಕಾರವು ಫೆ.15, ಸೂರ್ಯ ಸಪ್ತಮಿಯಂದು ಆಯೋಜಿಸಿರುವ ಬೃಹತ್ ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಮುಸ್ಲಿಮ್ ಸಂಸ್ಥೆಗಳು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಸೂಚಿಸಿದ್ದು, ಇದು ಈಗ ವಿವಾದಕ್ಕೆ ಕಾರಣವಾಗಿದೆ.</p>
]]></content:encoded>
					
		
		
			</item>
		<item>
		<title>ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ,‌ ದಲಿತ, ಮಹಿಳೆಯರ ಅವಗಣನೆ</title>
		<link>https://peepalmedia.com/ignoring-muslim-dalit-women-in-kannada-sahitya-sammelan/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Jan 2023 12:01:35 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada sahithya sammelana]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[women]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18972</guid>

					<description><![CDATA[ಮಹೇಶ್‌ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ. ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ [&#8230;]]]></description>
										<content:encoded><![CDATA[
<p><strong>ಮಹೇಶ್‌ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ.</strong></p>



<p>ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರು, ಮತ್ತು ಮುಸಲ್ಮಾನ&nbsp; ಸಾಹಿತಿಗಳನ್ನು ಒಳಗೊಂಡಿಲ್ಲವೆಂದು ಅದರಲ್ಲೂ ಮಹಿಳೆಯರ ಅವಗಣನೆ ಕುರಿತು ವಿವಾದ ಸೃಷ್ಟಿಯಾಗಿದೆ. ಹಿಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಆಗ ಪರಿಷತ್ತಿನ ಅಧ್ಯಕ್ಷರಾದ ಹಂಪ ನಾಗರಾಜಯ್ಯನವರಿಗೆ ಚೆನ್ನಣ್ಣ ವಾಲೀಕಾರ ಮತ್ತು ಜಂಬಣ್ಣ ಅಮರಚಿಂತ ಅವರು ಹೋಗಿ ಸಮ್ಮೇಳನದಲ್ಲಿ ದಲಿತ ಗೋಷ್ಟಿಯೊಂದನ್ನು ಇಡಲು ಹೇಳಿದಾಗ ಹಂಪನಾರವರು “ಕನ್ನಡ ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಎಂದೇನೂ ಇಲ್ಲ” ಎಂದು ಹೇಳಿದಾಗ ಅದನ್ನು ವಿರೋಧಿಸಿದ ಸಾಹಿತಿಗಳು ಅಂದಿನ ಪರಿಷತ್ತಿಗೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಿದ್ದು ಈಗ ಇತಿಹಾಸ.</p>



<p>ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆಯೇ ಹೊರತು ಅದು ಮನುವಾದಿಗಳ ಕೇಂದ್ರವಲ್ಲ. 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ನೂರಾ ಏಳು ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷೆಯಾಗದಿರುವ ಕೆಟ್ಟ ದುರಿತ ಕಾಲದಲ್ಲಿ ನಾವು ಪರಿಷತ್ತಿನ ಸಮ್ಮೆಳನಗಳಲ್ಲಿ ಸಾಮಾಜಿಕ ನ್ಯಾಯವನ್ನು ಬಯಸುತ್ತಿದ್ದೇವೆ. ಮಹಿಳೆಯರ ಅವಗಣನೆಯನ್ನು ಪ್ರಶ್ನಿಸುತ್ತಿದ್ದೇವೆ. ಪರಿಷತ್ತಿನ ಅಧ್ಯಕ್ಷರು, ಕೋಮುವಾದಿ ಪಕ್ಷದ ಶಾಸಕರು ಸಂಸದರ ಮೂಲಕವೇ ಆರಿಸಿ ಬಂದಾಗ ಅವರಿಗೆ ವಿಧೇಯರಾಗಿರುತ್ತಾರೆ. ಆದರೆ ಪರಿಷತ್ತು ನಡೆಯುತ್ತಿರುವುದು ಸರ್ಕಾರದ ಅನುದಾನದಿಂದ ಮತ್ತು ಸರ್ಕಾರವು ನೀಡುತ್ತಿರುವ ಹಣ ಜನಸಾಮಾನ್ಯರದು.&nbsp; ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ. ಆದರೆ, ಅವರು ಜನತೆಯ ಅಭಿಪ್ರಾಯವನ್ನು ಗೌರವಿಸಬೇಕಾಗುತ್ತದೆ. ಆಗ ಸಹಜವಾಗಿಯೇ ಅಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಬರುತ್ತದೆ. ನಾಡಿನ ಬಹುಸಂಸ್ಕೃತಿಗೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನಾಗರೀಕರ ಜವಾಬ್ದಾರಿಯಾಗಿದೆ.&nbsp;&nbsp;&nbsp;&nbsp;&nbsp;&nbsp;</p>



<p>&nbsp;ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಗಳಿಗೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ ನಂಟು ತುಂಬಾ ಪ್ರಾಚೀನವಾದುದು. ಬದುಕು ಚಲನಶೀಲವಾಗಿರುವಂತೆ ಸಾಹಿತ್ಯವೂ ಚಲನಶೀಲವಾಗಿದೆ. ಕನ್ನಡ ಸಾಹಿತ್ಯಕ್ಕೆ ಇರುವ ದೀರ್ಘ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದಾಗ ಅಲ್ಲಿ ಆರಂಭದ ಕನ್ನಡ ಸಾಹಿತ್ಯದ ಘಟ್ಟಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆಗಳನ್ನು ಕಾಣಲು ಸಾಧ್ಯವಾಗುವುದಿಲ್ಲ.&nbsp;</p>



<p>14ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಮುಸ್ಲಿಂ ದೊರೆಗಳು, ರಾಣಿಯರು ರಾಜ್ಯಭಾರ ಮಾಡಿದ ಚರಿತ್ರೆಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ಕನ್ನಡದ ಮುಸ್ಲಿಂ ಸಾಹಿತಿಗಳು ಸಿಗುವುದಿಲ್ಲ. ಅದಕ್ಕೆ ಅದರದೇ ಆದ ಐತಿಹಾಸಿಕ ಕಾರಣಗಳಿವೆ. ಒಬ್ಬ ಲೇಖಕ ತಾನು ಬಯಸಿದರೂ ಬಯಸದೇ ಇದ್ದರೂ ಸಹ ಯಾವುದಾದರೂ ಒಂದು ಧರ್ಮದಲ್ಲಿ ಹುಟ್ಟುವುದು ಅನಿವಾರ್ಯವಾಗಿದೆ. ಆದರೆ ಅವರು ಆ ಧರ್ಮದ ಚೌಕಟ್ಟುಗಳನ್ನು ಮೀರುವ ಕ್ರಿಯೆಯಿಂದ ಸಾರ್ವಜನಿಕ, ಮತ್ತು ಸಾರ್ವತ್ರಿಕ ವ್ಯಕ್ತಿಗಳಾಗುತ್ತಾರೆ.</p>



<p>ಇಪ್ಪತ್ತನೆಯ ಶತಮಾನದಲ್ಲಿ&nbsp; ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ&nbsp; ಘಟ್ಟಗಳು ಮತ್ತು ಚಳುವಳಿಗಳು ನಡೆದವು. ಆದರೆ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳು ದಾಖಲಾಗಲು ಆರಂಭಿಸಿದ್ದು ದಲಿತ ಬಂಡಾಯದ ಕಾಲದಲ್ಲಿ ಎಂದು ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಮುಸ್ಲಿಂ ಲೇಖಕರು ಕನ್ನಡದಲ್ಲಿ ಕಥೆ, ಕವನ, ಕಾದಂಬರಿ, ಲೇಖನ, ನಾಟಕ, ವಿಮರ್ಶೆ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಮುಸ್ಲಿಂ ಸಂವೇದನೆಗಳ ತೊರೆಯನ್ನು ಹರಿಸುತ್ತ ಶ್ರೀಮಂತಗೊಳಿಸಿದ್ದಾರೆ.</p>



<p>ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂಕಟಗಳನ್ನು, ದಲಿತ ಬಂಡಾಯ ಸಂದರ್ಭದಲ್ಲಿ ಬಂದ ಈ ಸಮುದಾಯದ ಸಾಹಿತಿಗಳು ಈ ಧರ್ಮದೊಳಗಿನ ಕುಟುಂಬ, ಲಿಂಗತಾರತಮ್ಯ, ಬಹುಪತ್ನಿತ್ವ, ತಲ್ಲಾಕ್, ಇದ್ದತ್, ಖುಲಾಹ್, ಕೋಮುವಾದ, ಮೂಲಭೂತವಾದ, ಮತಾಂತರ, ಮೆಹರ್, ವಸ್ತ್ರಸಂಹಿತೆ, ವರ್ಗನೆಲೆ, ಪುರುಷಾಧಿಪತ್ಯ, ಅವಳ ಚಲನವಲನದ ಮೇಲೆ ನಿಯಂತ್ರಣ, ಹೀಗೆ ಹಲವಾರು ವಿಷಯಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆದಾಗ್ಯೂ ಅವರ ಅನುಭವಕ್ಕೆ ದಕ್ಕಿದ ಸೀಮಿತ ವಿಷಯಗಳು ಮಾತ್ರ ಸಾಹಿತ್ಯದಲ್ಲಿ ದಾಖಲಾಗಿವೆ. ಒಂದು ಜನಸಮುದಾಯದ ಹೋರಾಟಗಳು ಲೇಖನಿಗಿಂತ ಹರಿತವಾದವುಗಳು. ಬರಹವು ಇಂತಹ ಚಳುವಳಿ ಹೋರಾಟಗಳ ಮೂಲಕವೇ ಯಾವುದೇ ಧರ್ಮದಡಿಯ ಅಧರ್ಮವನ್ನು ಪ್ರಶ್ನಿಸುವ ಕಸುವು ಪಡೆಯುತ್ತದೆ. ಈ ಲೇಖಕರು ಧರ್ಮದ ಒಳಗಿನ ಮತ್ತು ಹೊರಗಿನ ವಿರೋಧಿ ಶಕ್ತಿಗಳನ್ನು ತೆರೆದು ತೋರಿದರು. ಈ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆಗಿನ ಕಾಲದಲ್ಲಿ ದಲಿತ ಚಳುವಳಿಯಿಂದ ಬಂದ ಲೇಖಕರು ಪುರೋಹಿತಶಾಹಿಯನ್ನು ವಿರೋಧಿಸಿ ಬರೆದಂತೆ ಮುಸ್ಲಿಂ ಸಮುದಾಯದ ಸಾಹಿತಿಗಳು ತಮ್ಮ ಧರ್ಮದ ಒಳಗಿನ ಶತ್ರು ಮತ್ತು ಹೊರಗಿನ ಶತ್ರುಗಳನ್ನು ಏಕಕಾಲಕ್ಕೆ ಗುರುತಿಸಿದರು. ಮೂಲಭೂತವಾದವನ್ನು ಪ್ರಶ್ನಿಸುತ್ತಲೇ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಮುಖಾಮುಖಿ ಮಾಡಿದರು. ಬೊಳುವಾರು ಮಹಮ್ಮದ್ ಕುಂಞಯವರು “ಇಡೀ ಜಗತ್ತಿನಲ್ಲಿ ಮುಸ್ಲಿಂ ಗೆಳತಿಯರು ಒಟ್ಟಾರೆ ಕಾಲದ ಅಗತ್ಯಕ್ಕೆ ಸ್ಪಂದಿಸಲಾರದಂತಹ ಸಂಕ್ರಮಣ ಕಾಲ ಒದಗಿ ಬಂದಿದೆ. ಇಂಡಿಯಾದ ಅಲ್ಪಸಂಖ್ಯಾತರ ಬರವಣಿಗೆಗೆ ವಿಶಿಷ್ಟ&nbsp; ಆರ್ಥವಿದೆ” ಎನ್ನುತ್ತಾರೆ. ಅದಷ್ಟೇ ಅಲ್ಲದೇ ಮುಂದುವರಿಯುತ್ತಾ “ದಲಿತ ಪ್ರಜ್ಞಾವಂತನೊಬ್ಬ ತನ್ನ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ತನ್ನ ಕೋಮಿನ ಮೇಲುವರ್ಗದವನನ್ನಷ್ಟೇ ವಿರೋಧಿಸಿದರೆ ಸಾಕಾಗುತ್ತದೆ. ಆದರೆ ಮುಸ್ಲಿಂ ಪ್ರಜ್ಞಾವಂತನೊಬ್ಬ ತನ್ನ ಕೋಮಿನ ಮೇಲುವರ್ಗದ ವಿರುದ್ಧ ಧ್ವನಿಯೆತ್ತುವುದರ ಜತೆಯಲ್ಲೇ ಮುಸ್ಲಿಂ ವಿರೋಧಿ ಧೋರಣೆಗಳನ್ನು ತಳೆಯುವ ಮುಸ್ಲಿಮೇತರ ಕೋಮುಶಕ್ತಿಯನ್ನೂ ಸಹ ವಿರೋಧಿಸ ಬೇಕಾಗುತ್ತದೆ” ಎನ್ನುತ್ತಾರೆ.</p>



<p>ಮುಸ್ಲಿಂ ಸಮುದಾಯ ಕನ್ನಡದಲ್ಲಿ ಬರೆಯಲು ಆರಂಭಿಸಿದ ಕಾಲವೆಂದರೆ ಅದು ಶಿಶುನಾಳ ಷರೀಫರಿಂದಲೇ ಆರಂಭವಾಗುತ್ತದೆ.&nbsp; ಆನಂತರದಲ್ಲಿ ಈ ಸಮುದಾಯದಿಂದ ಬಂದ ಮೊದಲ ತಲೆಮಾರಿನ ಬರಹಗಾರರಾದ ಎಸ್.ಕೆ.ಕರಿಂಖಾನ್, ಎಂ.ಜೀವನ, ಎಂ.ಅಕಬರಲಿ, ಬಿ.ಎ.ಸನದಿ, ಅಬ್ದುಲ್ ಮಜೀದ್‍ಖಾನ್, ಎಂ.ದಸ್ತಗೀರ್, ಕೆ.ಎಸ್.ನಿಸಾರ್ ಅಹಮದ್ ಮೊದಲಾದ ಸಾಹಿತಿಗಳು ಬಂದರು. ಎರಡನೇ ತಲೆಮಾರಿನ ಲೇಖಕರಾದ ಫಕೀರ್ ಮಹಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಙ್ಞ , ಸಾರಾ ಅಬೂಬಕರ್‌, ಮುಮ್ತಾಜ್ ಬೇಗಂ (ಮುಲ್ಕಿ) ಕೆ.ಷರೀಫಾ, ಅಬ್ದುಲ್ ರಶೀದ್,&nbsp; ರಂಜಾನ್ ದರ್ಗಾ, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ.ರಜಿಯಾ, ಪೀರಬಾಷಾ, ಬಾನು ಮುಷ್ತಾಕ್, ನಜೀರ್ ಚಂದಾವರ, ಸಬೀಹಾ, ಹಸನ್ ನಯಿಂ ಸುರಕೋಡ, ಎನ್.ಎಮ್. ಇಸ್ಮಾಯಿಲ್, ಎಲ್. ಕೆ.ಅತೀಕ್‌, ಮುಜಫರ್ ಅಸ್ಸಾದಿ, ಅದಿಬ್ ಅಖ್ತರ್, ದಸ್ತಗೀರಸಾಬ ದಿನ್ನಿ, (ಕೊಪ್ಪಳದ) ಮುಮ್ತಾಜ ಬೇಗಂ, ರಜಿಯಾ ಬಳಬಟ್ಟಿ, ಎಂ.ಷಹನಾಜ್ ಮುಂತಾದ ಮುಸ್ಲಿಂ ಸಮಾಜದ ಲೇಖಕರು ಮುನ್ನೆಲೆಗೆ ಬಂದರು.</p>



<p>ಶತಶತಮಾನಗಳಿಂದ ಮೌನವಾಗಿದ್ದ ಈ ಜನಾಂಗದ ಮಹಿಳಾ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡು ದಾಖಲಿಸಿಕೊಂಡು, ಜನಮನ್ನಣೆ ಪಡೆಯಿತು. ಕನ್ನಡದಲ್ಲಿ ರಚಿತವಾದ ಮೊದಲ ಮಹಿಳಾ ಕಾದಂಬರಿ, 1908 ರಲ್ಲಿ ಶಾಂತಾಬಾಯಿ ನೀಲಗಾರರವರು ಬರೆದ “ಸದ್ಗುಣಿ ಕೃಷ್ಣಾಬಾಯಿ” ಪ್ರಕಟವಾಯಿತು. ಆದರೆ ಸಾರಾ ಅಬೂಬಕರವರು ಬರೆದ “ಚಂದ್ರಗಿರಿಯ ತೀರದಲ್ಲಿ” 1984ರಲ್ಲಿ ಪ್ರಕಟವಾಯಿತು. ಹಿಂದೂ ಮಹಿಳೆಯೊಬ್ಬಳು ಕನ್ನಡದಲ್ಲಿ ಕಾದಂಬರಿ ರಚಿಸಿದ 75 ವರ್ಷಗಳ ಬಳಿಕ ಒಬ್ಬ ಮುಸ್ಲಿಂ ಮಹಿಳೆ ಕನ್ನಡದಲ್ಲಿ ಮೊದಲ ಕಾದಂಬರಿಯೊಂದು ಬರೆಯುತ್ತಾಳೆಂದರೆ ಅದಕ್ಕೆ ಅದರದೇ ಆದ ಸಾಂಸ್ಕೃತಿಕ&nbsp; ಚಾರಿತ್ರಿಕ, ಮತ್ತು ರಾಜಕೀಯ ಕಾರಣಗಳಿರುತ್ತವೆ. ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂವೇದನೆಯ ಮೊದಲ ಕಾದಂಬರಿ ಸಾರಾ ಅಬೂಬಕ್ಕರ್‌ ರವರದು 1984ರಲ್ಲಿ ಪ್ರಕಟವಾದರೆ, ಕನ್ನಡದ ಮೊದಲ ಮುಸ್ಲಿಂ ಕಥೆಗಾರ್ತಿ ಮುಮ್ತಾಜ ಬೇಗಂ ರವರ ಮೊದಲ ಕಥಾ ಸಂಕಲನ ‘ಅವ್ಯಕ್ತ’ 1985ರಲ್ಲಿ ಪ್ರಕಟವಾಯಿತು. 1975ರಿಂದಲೂ ಕವಿತೆಗಳನ್ನು ಬರೆಯುತ್ತಿರುವ ಡಾ.ಕೆ.ಷರೀಫಾರವರು ಮುಸ್ಲಿಂ ಸಮಾಜದಿಂದ ಬಂದ ಕನ್ನಡದ ಮೊದಲ ಕವಯಿತ್ರಿಯಾದರು.ಮುಂದೆ ಹಲವಾರು ಬರಹಗಾರ್ತಿಯರು ಈ ಸಮುದಾಯದಿಂದ ಬಂದರು</p>



<p>ಮುಂದೆ ಶಾಬಾನುವಿನ ಜೀವನಾಂಶದ ತಲ್ಲಾಕಿನ ವಿಷಯ ಬಂದಾಗ ಮುಸ್ಲಿಂ ಮೂಲಭೂತವಾದಿಗಳು “ಇದು ನಮ್ಮ ಸಮಾಜದ ಆಂತರಿಕ ವಿಷಯ”ವೆಂದು ಇತರರ ಪ್ರವೇಶವನ್ನು ನಿರಾಕರಿಸಿದವು. ಅಕ್ರಮಣಕಾರಿ “ದೇಶಭಕ್ತಿ” ಸಾಬೀತುಪಡಿಸುವಂತಹ ಮಾದರಿಗಳು ನಂತರದ ಕಾಲಘಟ್ಟದಲ್ಲಿ ಸೃಷ್ಟಿಯಾದವು. ಅನಂತರದಲ್ಲಿ ಭಾರತೀಯ ಮುಸ್ಲಿಮರಲ್ಲಿ ಅಭದ್ರತೆ, ಅನಾಥಪ್ರಜ್ಞೆ ಕಾಡತೊಡಗಿದವು. ಅಲ್ಲದೇ ಹಿಂದೂ ಮುಸ್ಲಿಂ ಎರಡೂ ಧರ್ಮದ ಮಹಿಳೆಯರ ಮೇಲೆ ಧರ್ಮಾಚರಣೆಯ ಒತ್ತಡಗಳೂ ಹೆಚ್ಚಾದವು. ರೂಪ್ ಕನ್ವರಳ ಸತಿಯಾದುದು, ಬಾಬ್ರಿ ಮಸೀದಿ ಧ್ವಂಸವಾದುದು ಇಡೀ ಜನಶಕ್ತಿಯನ್ನು ಕೋಮುವಾದಿಗಳನ್ನಾಗಿಸಿತು. ಆಗಲೇ ಸಾಹಿತ್ಯ ಚಳುವಳಿಗಳು ಮತ್ತು ಸಾಂಸ್ಕೃತಿಕ ಚಳುವಳಿಗಳಿಗೆ ಹಿನ್ನಡೆಯಾಯಿತು. ಯಾವ ಧರ್ಮದ ಕೋಮುವಾದವೇ ಇರಲಿ ಅದು ಆಯಾ ಧರ್ಮದ ಮಹಿಳೆಯರನ್ನು ಹಿಂಸೆ, ಕ್ರೌರ್ಯಗಳಿಗೆ ಬಲಿಯಾಗಿಸಿತು. ಇಂತಹ ನಿರ್ಭಂಧಗಳು ಅವಳ ಬದುಕಿನ ನೆಲೆಗಳನ್ನು ಕಿತ್ತುಕೊಳ್ಳತೊಡಗಿತು. ಅವಳ ಪ್ರಗತಿಗೆ ಮಾರಕವಾಗತೊಡಗಿದ್ದಂತೂ ಸತ್ಯ. ಶಾಹೀನ್‍ಬಾಗ್‍ನ ಎನ್.ಆರ್.ಸಿ., ಸಿಎಎ, ಕುರಿತು ಹೋರಾಟ ಮಾಡಿದ ದಾದಿಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಅವರು ತಮ್ಮ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಲೇ ಹಕ್ಕು ಸ್ಥಾಪನೆಯತ್ತ ಸಾಗಿದ ಧೀಮಂತ ಮಹಿಳೆಯರಾಗಿದ್ದಾರೆ.&nbsp;&nbsp;&nbsp;&nbsp;&nbsp;</p>



<p>ಅನಂತರ ಬರುವ ಮೂರನೇ ತಲೆಮಾರಿನ ಬರಹಗಾರರಾದ, ಸಂತೆಬೆನ್ನೂರ ಫೈಜ್ ನಟರಾಜ, ಇಸ್ಮತ್ ಫಜೀರ್, ಚಾಂದ್‌ ಪಾಷ, ದಾದಾಪೀರ್ ಜೈಮನ್, ನಜ್ಮಾ ನಜೀರ್, ಮಿಸ್ರಿಯಾ, ತಾಜುಮಾ, ಮುಮ್ತಾಜ್ ಬಿರಾದಾರ್, ಯು.ಟಿ.ಫರ್ಜಾನಾ, ಮುಹಮ್ಮದ್ ಮುಸ್ತಫಾ, ಫಾತಿಮಾ ರಲಿಯಾ, ಬಿ.ಎಂ ಸಿಹಾನ ಮುಂತಾದ ಮುಸ್ಲಿಂ ಸಮುದಾಯದಿಂದ ಮೂರು ತಲೆಮಾರುಗಳಿಂದಲೂ ಬಂದ ಇಷ್ಟೆಲ್ಲ ಸಾಹಿತಿಗಳಿರಬೇಕಾದರೆ ಹಾಗೂ ಇವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವಾಗಲೂ ಅವರನ್ನು ದೂರ ಮಾಡುವುದು ಸರಿಯೇ? ಹುಟ್ಟಿದ ಮನೆಯಂಗಳದಿಂದ, ವ್ಯಾಪಾರದಿಂದ, ಹಲಾಲ್ಕಟ್, ಜಟ್ಕಾಕಟ್, ತಲೆ ಮೇಲಿನ ತುಂಡು ಬಟ್ಟೆಯಿಂದ, ಈಗ ಪರಿಷತ್ತಿನ ಸಮ್ಮೇಳನದಿಂದಲೇ ಹೊರಗು ಮಾಡುತ್ತಿದ್ದಾರಲ್ಲ ಇದು ನ್ಯಾಯವೇ?. ಪರಿಷತ್ತಿನಂತಹ ಮಹತ್ತ್ವದ ಸಂಸ್ಥೆಯೊಂದು ಕೋಮುವಾದಿಗಳ ಕೈಗೆ ಸಿಕ್ಕು ಯಾವ ರೀತಿ ಅಂಗವಿಕಲವಾಗುತ್ತಿದೆ ಎಂಬುದರ ಬಗ್ಗೆ ಕನ್ನಡಿಗರು ಗಮನಿಸುತ್ತಿದ್ದಾರೆ. ಮಹಿಳೆಯರು, ದಲಿತರು ಮತ್ತು ಮುಸ್ಲಿಮರನ್ನು ದೂರವಿಟ್ಟು ಇವರು ಏನನ್ನು ಸಾಧಿಸುವವರಿದ್ದಾರೆ? ಒಟ್ಟು 86 ಜನ ಸನ್ಮಾನಿತರಲ್ಲಿ ದೊಡ್ಡಮನಿ ಮತ್ತು ನದಾಫ್ ಇಬ್ಬರನ್ನು ಬಿಟ್ಟರೆ ಬೇರಾರೂ ಮುಸ್ಲಿಮರಿಲ್ಲ. ಒಟ್ಟು ಮೂರು ಬೇರೆ, ಬೇರೆ ವೇದಿಕೆಗಳಿದ್ದು, ಮೊದಲ ವೇದಿಕೆಯಲ್ಲಿ 9 ಗೋಷ್ಟಿಗಳಿದ್ದು ಅದರಲ್ಲಿ ಒಬ್ಬ ಭಾಷಣಕಾರರೂ ಮುಸ್ಲಿಮರಿಲ್ಲ. ಅದರಲ್ಲಿ ಒಬ್ಬ ಕವಿಯೂ ಮುಸ್ಲಿಮನಿಲ್ಲ. ಎರಡನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು, ಅದರಲ್ಲಿ ಕವನ ಓದುವುದಕ್ಕೆ ಮಾತ್ರ ಒಬ್ಬ ಮುಸ್ಲಿಂ ಮಹಿಳೆಯಿದ್ದಾರೆ. ಮೂರನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು ಅದರಲ್ಲಿ ಕವಿಗೋಷ್ಟಿಗೊಬ್ಬರು ಮತ್ತು ಗೋಷ್ಠಿಯಲ್ಲಿ ಒಬ್ಬರನ್ನು ಬಿಟ್ಟರೆ ಇನ್ನುಳಿದವರನ್ನು ಸ್ವಾಗತಕ್ಕೆ, ವಂದನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪರಿಷತ್ ಅಧ್ಯಕ್ಷರು ರಥ ಕೆತ್ತಿದವರನ್ನು, ಹೂ ಹೆಣೆದವರನ್ನು, ಕಸ ಗುಡಿಸಿದವರನ್ನು, ಷಾಮಿಯಾನಾ ಕಟ್ಟಿದವರನ್ನೆಲ್ಲ ಮುಸ್ಲಿಮರೆಂದು ಹೇಳಿ ದಿಕ್ಕು ತಪ್ಪಿಸುವುದೆಂದರೆ ಏನು?.&nbsp;</p>



<p>ಇಲ್ಲಿ ಪ್ರಶ್ನೆಯಿರುವುದು ಸಾಹಿತಿಗಳದು. ಜೋಶಿಯವರು ಇಂತಹ ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ.</p>



<p><strong>ಡಾ.ಕೆ.ಷರೀಫಾ</strong></p>



<p><strong>ಸಮಾಜ ಮತ್ತು ಸಂಸ್ಕೃತಿ ಚಿಂತಕರು.</strong><br></p>
]]></content:encoded>
					
		
		
			</item>
		<item>
		<title>ಮುಸ್ಲಿಂ ಹೆಸರುಗಳ ದುರ್ಬಳಕೆ ; ಒಂದೇ ನಾಣ್ಯದ ಎರಡು ಮುಖಗಳಾದ ಬಿಜೆಪಿ, ಕಾಂಗ್ರೆಸ್</title>
		<link>https://peepalmedia.com/use-of-derogatory-names-of-muslim-community-bjp-congress-two-sides-of-the-same-coin/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 07 Dec 2022 06:54:49 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[CT Ravi]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[siddaramothsava]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=17793</guid>

					<description><![CDATA[ಎರಡು ಪ್ರಮುಖ ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ರಾಜ್ಯದಲ್ಲಿ ತೀರಾ ಕೆಟ್ಟ ಪ್ರವೃತ್ತಿಯ ಬೆಳವಣಿಗೆಯೊಂದು ತಲೆ ಎತ್ತಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಎಂಬಂತೆ ಬರುತ್ತಿರುವ ಹೇಳಿಕೆ, ಜಾಲತಾಣಗಳ ಟ್ರೋಲ್ ಮಾದರಿಯ ಪೋಸ್ಟ್ ಗಳು ಯಾವ ತಪ್ಪಿಗೂ ಒಳಪಡದ ಇಡೀ ಮುಸ್ಲಿಂ ಸಮುದಾಯವನ್ನು ತೀವ್ರ ಮುಜುಗರಕ್ಕೆ ಸಿಕ್ಕಿಸಿದೆ. ಕೆಲವೇ ದಿನಗಳ ಈಚೆಗೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ರಾಜಕೀಯದ ಆರೋಪ ಪ್ರತ್ಯಾರೋಪಗಳ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು &#8216;ಸಿದ್ರಾಮುಲ್ಲಾ ಖಾನ್&#8217; ಎಂಬ ಪದ ಬಳಸಿ ಹೀಯಾಳಿಸಲು [&#8230;]]]></description>
										<content:encoded><![CDATA[
<p style="font-size:20px">ಎರಡು ಪ್ರಮುಖ ರಾಜಕೀಯ ಪಕ್ಷಗಳ ಕೆಸರೆರಚಾಟದಲ್ಲಿ ರಾಜ್ಯದಲ್ಲಿ ತೀರಾ ಕೆಟ್ಟ ಪ್ರವೃತ್ತಿಯ ಬೆಳವಣಿಗೆಯೊಂದು ತಲೆ ಎತ್ತಿದೆ. ಅವರ ಮೇಲೆ ಇವರು, ಇವರ ಮೇಲೆ ಅವರು ಎಂಬಂತೆ ಬರುತ್ತಿರುವ ಹೇಳಿಕೆ, ಜಾಲತಾಣಗಳ ಟ್ರೋಲ್ ಮಾದರಿಯ ಪೋಸ್ಟ್ ಗಳು ಯಾವ ತಪ್ಪಿಗೂ ಒಳಪಡದ ಇಡೀ ಮುಸ್ಲಿಂ ಸಮುದಾಯವನ್ನು ತೀವ್ರ ಮುಜುಗರಕ್ಕೆ ಸಿಕ್ಕಿಸಿದೆ.</p>



<p style="font-size:20px">ಕೆಲವೇ ದಿನಗಳ ಈಚೆಗೆ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ.ಟಿ.ರವಿ ರಾಜಕೀಯದ ಆರೋಪ ಪ್ರತ್ಯಾರೋಪಗಳ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು &#8216;ಸಿದ್ರಾಮುಲ್ಲಾ ಖಾನ್&#8217; ಎಂಬ ಪದ ಬಳಸಿ ಹೀಯಾಳಿಸಲು ಶುರುವಿಟ್ಟುಕೊಂಡರು. ಇಂತಹ ಒಂದು ಹೇಳಿಕೆಯ ಖಂಡಿಸುವುದು ಬಿಟ್ಟು ಇನ್ನಷ್ಟು ಬಿಜೆಪಿ ನಾಯಕರೇ ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಶುರುವಿಟ್ಟುಕೊಂಡಿದ್ದಾರೆ.</p>



<p style="font-size:20px">ಈ ಹಿಂದೆ ಈ ರೀತಿಯ ಅಸಭ್ಯ ಮಾದರಿಯ ಟ್ರೋಲ್ ಗಳು ಬಿಜೆಪಿ ಪಕ್ಷದ ಹಿನ್ನೆಲೆಯ ಜಾಲತಾಣಗಳ ಕಾರ್ಯಕರ್ತರ ಕಡೆಯಿಂದ ಬರುತ್ತಿದ್ದವು. ಈಗ ಬಿಜೆಪಿ ನಾಯಕರ ಮಟ್ಟದಲ್ಲಿ ಇದು ಬೆಳೆದಿದೆ ಎಂದರೆ ಇದೊಂದು ಕೆಟ್ಟ ರಾಜಕೀಯ ಮಾದರಿ ಎಂದೇ ನಿರ್ಧರಿಸಬಹುದು. ಸಿ.ಟಿ.ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ &#8216;ಕಾಂಗ್ರೆಸ್ ನವರಿಗೆ ಇಷ್ಟೊಂದು ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೆ 10 ವರ್ಷ ಹಿಂದೆಯೇ ಈ ಹೇಳಿಕೆ ಕೊಡುತ್ತಿದ್ದೆ&#8217; ಎಂದು ಹೇಳಿ ಈ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.</p>



<p style="font-size:20px">&#8216;ಮುಸಲ್ಮಾನರ ತುಷ್ಟೀಕರಣಕ್ಕೆ ಇಳಿದ ಸಿದ್ದರಾಮಯ್ಯರನ್ನು ಸಿದ್ರಾಮುಲ್ಲಾ ಖಾನ್ ಎನ್ನದೇ ಕೇಶವ ಎನ್ನಲು ಸಾಧ್ಯವೇ?&#8217; ಎಂದು ಇನ್ನೊಬ್ಬ ಬಿಜೆಪಿ ನಾಯಕ ಹೇಳಿಕೆ ಕೊಡುತ್ತಾರೆ ಎಂದರೆ ಇದು ರಿಪೇರಿ ಮಾಡೋಕೆ ಆಗದ ಖಾಯಿಲೆ ಎಂದೇ ಹೇಳಬೇಕು.</p>



<p style="font-size:20px">ಇದಕ್ಕೂ ದೊಡ್ಡ ದುರಂತ ಎಂದರೆ ಕಳೆದ ಎರಡು ದಿನಗಳಿಂದ ಕಾಂಗ್ರೆಸ್ ಕೂಡಾ ಬಿಜೆಪಿ ಹಾಕಿಕೊಟ್ಟ ಹಾದಿಯನ್ನೇ ತುಳಿದಿದೆ. ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಸ್ಲಿಂ ಟೊಪ್ಪಿ ಹಾಕಿದ ಫೋಟೋವನ್ನು ಇಟ್ಟು &#8216;ಸಿದ್ದರಾಮಯ್ಯ ಸಿದ್ರಾಮುಲ್ಲಾ ಖಾನ್ ಆದರೆ ಬೊಮ್ಮಾಯಿ ಬೊಮ್ಮಾಯುಲ್ಲಾ ಖಾನ್ ಅಲ್ಲವೇ&#8217; ಎಂಬಂತೆ ನಾಲಿಗೆ ಹರಿಬಿಟ್ಟಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಇವರನ್ನು &quot;ಬೊಮ್ಮಾಯುಲ್ಲಾ ಖಾನ್&quot; ಎಂದು ಕರೆಯಬಹುದೇ <a href="https://twitter.com/BJP4Karnataka?ref_src=twsrc%5Etfw">@BJP4Karnataka</a>? <a href="https://t.co/XXRI64IYRt">pic.twitter.com/XXRI64IYRt</a></p>&mdash; Karnataka Congress (@INCKarnataka) <a href="https://twitter.com/INCKarnataka/status/1600086832775327747?ref_src=twsrc%5Etfw">December 6, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px">ಇದರ ಜೊತೆಗೆ ಜಗದೀಶ್ ಶೆಟ್ಟರ್, ಆರ್.ಅಶೋಕ್ ಫೋಟೋಗಳನ್ನು ಇಟ್ಟು ಜಬ್ಬಾರ್ ಖಾನ್, ಅಶ್ವಾಖ್ ಇನಾಯತ್ ಖಾನ್ ಎಂಬ ಹೆಸರುಗಳಿಂದ, ನಿತಿನ್ ಗಡ್ಕರಿ ಫೋಟೋವನ್ನು ಬಳಸಿ ಮೊಹಮ್ಮದ್ ಗಡ್ಕರಿ ಶೇಕ್ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಟ್ರೋಲ್ ಮಟ್ಟದ ಕೆಟ್ಟ ಪ್ರವೃತ್ತಿಯತ್ತ ಹೆಜ್ಜೆ ಹಾಕಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಇವರಿಗೆ  &quot;ಜಬ್ಬಾರ್ ಖಾನ್&quot;<br>&quot;ಅಶ್ವಾಖ್ ಇನಾಯತ್ ಖಾನ್&quot; ಎಂದು ಹೆಸರಿಡುತ್ತೀರಾ <a href="https://twitter.com/CTRavi_BJP?ref_src=twsrc%5Etfw">@CTRavi_BJP</a> ? <a href="https://t.co/91HcuOVxb1">pic.twitter.com/91HcuOVxb1</a></p>&mdash; Karnataka Congress (@INCKarnataka) <a href="https://twitter.com/INCKarnataka/status/1600093445120565248?ref_src=twsrc%5Etfw">December 6, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಇವರಿಗೆ ಮಹಮದ್ ಗಡ್ಕರಿ ಶೇಕ್ ಎಂದು ಮರುನಾಮಕರಣ ಮಾಡುವಿರಾ <a href="https://twitter.com/BJP4Karnataka?ref_src=twsrc%5Etfw">@BJP4Karnataka</a>? <a href="https://t.co/gvEhZEuJna">pic.twitter.com/gvEhZEuJna</a></p>&mdash; Karnataka Congress (@INCKarnataka) <a href="https://twitter.com/INCKarnataka/status/1600089670263615489?ref_src=twsrc%5Etfw">December 6, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px">ಇಷ್ಟೂ ಸಾಲದೆಂಬಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕೂಡ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಯಡಿಯೂರಪ್ಪರನ್ನು ಯೂಸುಫ್ ಖಾನ್, ಜಗದೀಶ್ ಶೆಟ್ಟರ್ ಯಾವ ಖಾನ್ ಎಂಬಂತೆ ಹೇಳಿಕೆ ನೀಡಿದ್ದಾರೆ. ಬಿಜೆಪಿ ಆ ಮಟ್ಟಕ್ಕೆ ಇಳಿದಿದೆ ಎಂದು ಕಾಂಗ್ರೆಸ್ ಕೂಡಾ ಅದೇ ಹಾದಿ ತುಳಿದರೆ ಎರಡೂ ಪಕ್ಷಗಳಿಗೆ ಇರುವ ವ್ಯತ್ಯಾಸವೇನು?</p>



<p style="font-size:20px">ಇದರಿಂದ ಒಂದಂತೂ ಸ್ಪಷ್ಟ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮ ರಾಜಕೀಯ ಕೆಸರೆರಚಾಟಕ್ಕೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಅವಮಾನಕ್ಕೆ ಗುರಿ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಪಕ್ಷವಾದರೂ ಸ್ವಲ್ಪ ಮಟ್ಟಿಗೆ ವಿವೇಚನೆ ಇಟ್ಟು ವರ್ತಿಸಿದ್ದರೆ ತನ್ನ ಘನತೆಯನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಬಿಜೆಪಿ ಹಳಿಯುವ ಒಂದೇ ಉದ್ದೇಶದಿಂದ ಬಿಜೆಪಿ ಪಕ್ಷದ ಮಟ್ಟಕ್ಕೆ ಇಳಿದು ಮಾತನಾಡಿರುವುದು ಇಬ್ಬರಿಗೂ ಯಾವ ವ್ಯತ್ಯಾಸವೂ ಇಲ್ಲ ಎಂಬಂತಾಗಿದೆ.</p>



<p><a href="https://fb.watch/hf6wU_ENJ7/?mibextid=RUbZ1f">https://fb.watch/hf6wU_ENJ7/?mibextid=RUbZ1f</a></p>



<p style="font-size:20px">ಬಿಜೆಪಿ ಪಕ್ಷಕ್ಕೆ ಮೊದಲೇ ಮುಸ್ಲಿಂ ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯ ಎಂದರೆ ಅಷ್ಟಕ್ಕಷ್ಟೆ. ಮುಸಲ್ಮಾನರನ್ನು ಈ ದೇಶದವರೇ ಅಲ್ಲ ಎಂಬಂತೆ ಬಿಂಬಿಸುವ ಒಂದು ಹಿಡನ್ ಅಜೆಂಡಾ ಈ ಪಕ್ಷದ ಒಳಗೇ ಇದ್ದಂತಿದೆ. ಹಾಗಾಗೇ ಮುಸ್ಲಿಮರಿಗೆ ಸಂಬಂಧಿಸಿದ, ಇಸ್ಲಾಂಗೆ ಸಂಬಂಧಿಸಿದ ಪ್ರತೀ ಆಚರಣೆ, ಆಹಾರ ಪದ್ಧತಿ, ವಸ್ತ್ರದ ಮಾದರಿಗಳನ್ನು ದಿನಂಪ್ರತಿ ಗೇಲಿ, ಅಪಹಾಸ್ಯ ಮಾಡಿಕೊಂಡೇ ಬಂದಿದ್ದಾರೆ. ಇಂತಹ ದಂಡಿ ದಂಡಿ ಉದಾಹರಣೆಗಳು ಬಿಜೆಪಿ ಪಾಳಯದಲ್ಲೇ ಇವೆ. ಆದರೆ ಮುಸ್ಲಿಂ ಸಮುದಾಯದ ಪರ ಎಂದೇ ಬಿಜೆಪಿ ಕಡೆಯಿಂದ ಬಿಂಬಿಸಿಕೊಂಡು ಬಂದ ಕಾಂಗ್ರೆಸ್ ಗೆ ಏನಾಗಿತ್ತು?</p>



<p style="font-size:20px">ನಿಜವಾಗಿಯೂ ಬಿಜೆಪಿ ಪಕ್ಷ ತನ್ನ ಘನತೆ ಉಳಿಸಿಕೊಳ್ಳಬೇಕಾದರೆ ತನ್ನ ಪಕ್ಷದ ಮುಖಂಡರ ಈ ಹೇಳಿಕೆಗಳಿಗೆ ಬ್ರೇಕ್ ಹಾಕಬೇಕಿತ್ತು. ಆದರೆ ಬಿಜೆಪಿಯ ಒಬ್ಬೊಬೇ ಮುಖಂಡರು ಸಿ.ಟಿ.ರವಿ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೆ ಅಲ್ಲದೇ ಸಿ.ಟಿ.ರವಿಗಿಂತ ಕೆಳ ಮಟ್ಟಕ್ಕೂ ಇಳಿದು ಮಾತನಾಡುವ ಮಂದಿಯೂ ಬಿಜೆಪಿಯಲ್ಲಿ ಇದ್ದಾರೆ. ಕಾಂಗ್ರೆಸ್ ಕೂಡಾ ಇದೇ ಹಾದಿ ತುಳಿದಿರುವುದು ಕಾಂಗ್ರೆಸ್ ಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದೆಯೇ ಎಂಬ ಅನುಮಾನ ಹುಟ್ಟುವಂತಾಗಿದೆ.</p>



<figure class="wp-block-image size-full"><img fetchpriority="high" decoding="async" width="540" height="473" src="https://peepalmedia.com/wp-content/uploads/2022/12/IMG_20221207_121456.jpg" alt="" class="wp-image-17794" srcset="https://peepalmedia.com/wp-content/uploads/2022/12/IMG_20221207_121456.jpg 540w, https://peepalmedia.com/wp-content/uploads/2022/12/IMG_20221207_121456-300x263.jpg 300w, https://peepalmedia.com/wp-content/uploads/2022/12/IMG_20221207_121456-150x131.jpg 150w" sizes="(max-width: 540px) 100vw, 540px" /></figure>



<p style="font-size:20px">ಇದರ ನಡುವೆ ಹುಟ್ಟುವ ಮತ್ತೊಂದು ಪ್ರಶ್ನೆ ಎಂದರೆ, ಒಂದು ಸಮುದಾಯಕ್ಕೆ ಸಂಬಂಧಿಸಿದಂತೆ ಇದೇ ರೀತಿಯ ಟ್ರೋಲ್ ಮಾದರಿಯ ಹೇಳಿಕೆಗಳು, ಆರೋಪ ಪ್ರತ್ಯಾರೋಪಗಳು ರಾಜ್ಯದ ಇತರೆ ಸಮುದಾಯಗಳಾದ ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ಇನ್ನಾವುದೇ ಸಮುದಾಯದ ಅಡಿಯಲ್ಲಿ ಬಂದಿದ್ದರೆ ನಿಜವಾಗಿಯೂ ಆ ಸಮುದಾಯಗಳು ಸುಮ್ಮನೆ ಇರುತ್ತಿದ್ದವ? ಖಂಡಿತ ಇಲ್ಲ. ಇಷ್ಟು ಹೊತ್ತಿಗಾಗಲೇ ಇಡೀ ಪಕ್ಷಗಳೇ ಆ ಸಮುದಾಯದ ಕೆಳಗೆ ಮಂಡಿಯೂರುವಷ್ಟು ಪ್ರತಿಭಟನೆ ನಡೆಯುತ್ತಿದ್ದವು. ರಾಜ್ಯಾದ್ಯಂತ ಧರಣಿ, ಸತ್ಯಾಗ್ರಹ ಕಲ್ಲು ತೂರಾಟಕ್ಕೂ ಕಡಿಮೆ ಇಲ್ಲದಂತಾ ಪ್ರತಿಭಟನೆ ನಡೆಯುತ್ತಿತ್ತು.</p>



<p style="font-size:20px">ಅಷ್ಟಕ್ಕೂ ಅಲ್ಪಸಂಖ್ಯಾತ ಮತ್ತು ತಳ ಸಮುದಾಯಗಳು ಇಂತವುಗಳನ್ನ ಕೇಳಿಯೂ ಪ್ರತಿಭಟಿಸುವುದಿಲ್ಲ ಅಥವಾ ಪ್ರತಿಭಟಿಸಿಯೂ ಅವುಗಳ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬ ಉಡಾಫೆ ಎರಡೂ ಪಕ್ಷಗಳಿಗೆ ಇದ್ದಂತಿದೆ. ಎರಡೂ ಪಕ್ಷಗಳ ವರ್ತನೆ ನೋಡಿದರೆ ಇಡೀ ಮುಸ್ಲಿಂ ಸಮುದಾಯವನ್ನೇ ಒಂದು ರೀತಿಯ ಅಸ್ಪೃಶ್ಯರಂತೆ ಮಾಡುವ ಒಂದು ಒಳಹುನ್ನಾರ ಕೂಡಾ ನಡೆದಿರುವ ಸಾಧ್ಯತೆಗಳೂ ಹೆಚ್ಚಿದೆ.</p>



<p style="font-size:20px">ಸಧ್ಯ ಈ ಬಗ್ಗೆ ಸಾಮಾಜಿಕವಾಗಿ ಹಾಗೂ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆ ಶುರುವಾಗಿದೆ. ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಪರವಾಗಿಯೇ ಇದ್ದ ವಿಚಾರವಾದಿಗಳೂ ಸಹ ಕಾಂಗ್ರೆಸ್ ಪಕ್ಷದ ಈ ನಿಲುವನ್ನು ಸಾರಾಸಗಟಾಗಿ ವಿರೋಧಿಸಿದ್ದಾರೆ. ಬಿಜೆಪಿಯಂತೂ ತಾನು ಅಲ್ಪಸಂಖ್ಯಾತ ವಿರೋಧಿ ಎಂದು ಬ್ರಾಂಡ್ ಮಾಡಿಕೊಂಡಿದೆ. ತಾನೊಂದು ಜಾತ್ಯತೀತ, ಧರ್ಮಾತೀತ, ಸಂವಿಧಾನ ಪರವಾದ ಪಕ್ಷ ಎಂದೇ ಬಿಂಬಿಸಿಕೊಂಡು ಬಂದ ಕಾಂಗ್ರೆಸ್ ಗೆ ಏನಾಗಿದೆ? ಎಂದು ಹಲವರು ಆರೋಪಿಸಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ನೋವಿನ ಬಗ್ಗೆ ಯಾರೂ ಸಹ ಯೋಚಿಸುತ್ತಿಲ್ಲ ಎಂದೂ ಸಹ ಹಲವು ವಿಚಾರವಾದಿಗಳು ದನಿಗೂಡಿಸಿದ್ದಾರೆ.</p>



<figure class="wp-block-image size-large"><img decoding="async" width="898" height="1024" src="https://peepalmedia.com/wp-content/uploads/2022/12/IMG-20221207-WA0005-898x1024.jpg" alt="" class="wp-image-17795" srcset="https://peepalmedia.com/wp-content/uploads/2022/12/IMG-20221207-WA0005-898x1024.jpg 898w, https://peepalmedia.com/wp-content/uploads/2022/12/IMG-20221207-WA0005-263x300.jpg 263w, https://peepalmedia.com/wp-content/uploads/2022/12/IMG-20221207-WA0005-768x875.jpg 768w, https://peepalmedia.com/wp-content/uploads/2022/12/IMG-20221207-WA0005-150x171.jpg 150w, https://peepalmedia.com/wp-content/uploads/2022/12/IMG-20221207-WA0005-300x342.jpg 300w, https://peepalmedia.com/wp-content/uploads/2022/12/IMG-20221207-WA0005-696x793.jpg 696w, https://peepalmedia.com/wp-content/uploads/2022/12/IMG-20221207-WA0005-1068x1217.jpg 1068w, https://peepalmedia.com/wp-content/uploads/2022/12/IMG-20221207-WA0005.jpg 1080w" sizes="(max-width: 898px) 100vw, 898px" /></figure>



<p style="font-size:20px">ಇಲ್ಲಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪರಂತಹ ಹಿರಿಯ ರಾಜಕಾರಣಿಗಳು ಮಧ್ಯ ಪ್ರವೇಶಿಸಿ ಎರಡೂ ಪಕ್ಷಗಳ ಇಂತಹ ಕೀಳು ಮಟ್ಟದ ಕೆಸರೆರಚಾಟಕ್ಕೆ ತಡೆ ತರಬೇಕು. ರಾಜಕೀಯ ಏನೇ ಇದ್ದರೂ ಸಮುದಾಯಕ್ಕೆ ಅಪಚಾರ ಆಗುವಂತಹ ಹೇಳಿಕೆಗಳನ್ನು ಹರಿಬಿಡುವವರ ವಿರುದ್ಧ ಅವರೇ ದನಿಗೂಡಿಸಬೇಕು. ಇಲ್ಲವಾದರೆ ಒಂದಿಡೀ ಸಮುದಾಯವನ್ನು ಇಡೀ ಸಮಾಜವೇ Untouchability ಮಾದರಿಯಲ್ಲಿ ಹೊರಗಿಡುವಂತಹ ವ್ಯವಸ್ಥೆ ಸೃಷ್ಟಿ ಆಗುವುದರಲ್ಲಿ ಎರಡು ಮಾತಿಲ್ಲ.</p>
]]></content:encoded>
					
		
		
			</item>
	</channel>
</rss>
