<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>nagpur &#8211; Peepal Media</title>
	<atom:link href="https://peepalmedia.com/tag/nagpur/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 25 Mar 2025 06:44:13 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>nagpur &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಾಗಪುರ ಹಿಂಸಾಚಾರ: ಆರೋಪಿಯ ಮನೆ ಧ್ವಂಸಕ್ಕೆ ಹೈಕೋರ್ಟ್ ತಡೆ</title>
		<link>https://peepalmedia.com/nagpur-violence-hc-stays-demolition-of-accuseds-house/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Mar 2025 06:41:55 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Bombay High Court]]></category>
		<category><![CDATA[maharashtra]]></category>
		<category><![CDATA[nagpur]]></category>
		<category><![CDATA[Nagpur violence]]></category>
		<guid isPermaLink="false">https://peepalmedia.com/?p=55709</guid>

					<description><![CDATA[ಮಾರ್ಚ್ 17 ರಂದು ನಾಗಪುರ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲ್ಪಟ್ಟ ಇಬ್ಬರು ವ್ಯಕ್ತಿಗಳ ಮನೆಗಳ ಧ್ವಂಸವನ್ನು ಬಾಂಬೆ ಹೈಕೋರ್ಟ್ ಸೋಮವಾರ ತಡೆಹಿಡಿದಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಸೋಮವಾರ ಬೆಳಿಗ್ಗೆ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಫಾಹೀಮ್ ಖಾನ್ ಅವರ ಮನೆಯನ್ನು ಪುರಸಭೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮ ಮಾಡಿದ ಕೆಲವೇ ಗಂಟೆಗಳ ನಂತರ‌ ಮಧ್ಯಪ್ರವೇಶ ಮಾಡಿದ ನ್ಯಾಯಾಲಯ ಮತ್ತೊಬ್ಬ ಆರೋಪಿ ಯೂಸುಫ್ ಶೇಖ್ ಅವರ ನಿವಾಸದ ಅಕ್ರಮ ಭಾಗಗಳನ್ನು ಕೆಡವುವ ಪ್ರಕ್ರಿಯೆಯನ್ನು ತಡೆಹಿಡಿಯಿತು. ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಖಾನ್ ಮತ್ತು ಇತರರ ವಿರುದ್ಧ ದೇಶದ್ರೋಹ ಮತ್ತು [&#8230;]]]></description>
										<content:encoded><![CDATA[
<p>ಮಾರ್ಚ್ 17 ರಂದು ನಾಗಪುರ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲ್ಪಟ್ಟ ಇಬ್ಬರು ವ್ಯಕ್ತಿಗಳ ಮನೆಗಳ <a href="https://www.barandbench.com/news/litigation/nagpur-violence-bombay-high-court-stays-demolition-of-properties-linked-to-two-accused" target="_blank" rel="noreferrer noopener">ಧ್ವಂಸವನ್ನು</a> ಬಾಂಬೆ ಹೈಕೋರ್ಟ್ ಸೋಮವಾರ ತಡೆಹಿಡಿದಿದೆ ಎಂದು <em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>ಸೋಮವಾರ ಬೆಳಿಗ್ಗೆ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಫಾಹೀಮ್ ಖಾನ್ ಅವರ ಮನೆಯನ್ನು ಪುರಸಭೆ ಅಧಿಕಾರಿಗಳು ಬುಲ್ಡೋಜರ್ ಮೂಲಕ ನೆಲಸಮ ಮಾಡಿದ ಕೆಲವೇ ಗಂಟೆಗಳ ನಂತರ‌ ಮಧ್ಯಪ್ರವೇಶ ಮಾಡಿದ ನ್ಯಾಯಾಲಯ ಮತ್ತೊಬ್ಬ ಆರೋಪಿ ಯೂಸುಫ್ ಶೇಖ್ ಅವರ ನಿವಾಸದ ಅಕ್ರಮ ಭಾಗಗಳನ್ನು ಕೆಡವುವ ಪ್ರಕ್ರಿಯೆಯನ್ನು ತಡೆಹಿಡಿಯಿತು.</p>



<p>ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಖಾನ್ ಮತ್ತು ಇತರರ ವಿರುದ್ಧ <a href="https://www.hindustantimes.com/india-news/nagpur-violence-prime-accused-fahim-khan-among-six-booked-for-sedition-101742469876646.html" target="_blank" rel="noreferrer noopener">ದೇಶದ್ರೋಹ</a> ಮತ್ತು ಘರ್ಷಣೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ ಹೊರಿಸಲಾಗಿದೆ.</p>



<p>ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವವಾದಿ ಗುಂಪುಗಳು ನಾಗಪುರದಲ್ಲಿ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ಹಿಂಸಾಚಾರ ಭುಗಿಲೆದ್ದಿತು .</p>



<p>ಸೋಮವಾರ, ನ್ಯಾಯಮೂರ್ತಿಗಳಾದ ನಿತಿನ್ ಸಾಂಬ್ರೆ ಮತ್ತು ವೃಶಾಲಿ ಜೋಶಿ ಅವರ ಪೀಠವು ಪುರಸಭೆಯ ಅಧಿಕಾರಿಗಳನ್ನು ಅವರ &#8220;ಉಗ್ರವಾದ&#8221; ವರ್ತನೆಗಾಗಿ ಟೀಕಿಸಿತು ಮತ್ತು ಕಟ್ಟಡಗಳ ಮೇಲೆ ಬುಲ್ಡೋಜರ್‌ ಹತ್ತಿಸುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2022 ರಲ್ಲಿ ನೀಡಿದ ತೀರ್ಪಿನ ಉಲ್ಲಂಘನೆಯಾಗಿ ಧ್ವಂಸಗಳು ಮೇಲ್ನೋಟಕ್ಕೆ ಕಂಡುಬರುತ್ತವೆ ಎಂದು <em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ನಾಗಪುರ ಪೀಠದಲ್ಲಿ ನಡೆಸಲಾಯಿತು.</p>



<p>&#8220;ಸರಿಯಾದ ತನಿಖೆ&#8221; <a href="https://x.com/ANI/status/1904043880607318067" target="_blank" rel="noreferrer noopener">ಯ ನಂತರ</a> ಖಾನ್ ಅವರ ಮನೆಯ ಧ್ವಂಸವನ್ನು ನಡೆಸಲಾಗಿದೆ ಎಂದು ನಾಗಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಉಪ ಎಂಜಿನಿಯರ್ ಸುನಿಲ್ ಗಜ್ಭಿಯೆ ಸೋಮವಾರ ANI ಗೆ ತಿಳಿಸಿದ್ದಾರೆ .</p>



<p>&#8220;ಅಕ್ರಮ ನಿರ್ಮಾಣದ ಬಗ್ಗೆ ಬಂದ ದೂರನ್ನು ತನಿಖೆ ಮಾಡಲು ನಮಗೆ ಆದೇಶವಿತ್ತು. ನಾವು ಸರಿಯಾದ ತನಿಖೆ ನಡೆಸಿದ್ದೇವೆ. MRTP ಕಾಯ್ದೆಯ [1966 ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ] ಸೆಕ್ಷನ್ 53(1) ರ ಪ್ರಕಾರ 24 ಗಂಟೆಗಳ ಕಾಲ ನೋಟಿಸ್ ನೀಡಲಾಗಿದೆ. ಅವಧಿ ಪೂರ್ಣಗೊಂಡ ತಕ್ಷಣ, ಈ ಕ್ರಮ ಕೈಗೊಳ್ಳಲಾಯಿತು,&#8221; ಎಂದು ಗಜ್ಭಿಯೆ ಹೇಳಿದ್ದಾರೆ. </p>



<p>ಭಾರತೀಯ ಕಾನೂನಿನಲ್ಲಿ ಶಿಕ್ಷಾರ್ಹ ಕ್ರಮವಾಗಿ ಆಸ್ತಿಯನ್ನು ಕೆಡವಲು ಅವಕಾಶ ನೀಡುವ ಯಾವುದೇ ನಿಬಂಧನೆಗಳಿಲ್ಲ. ಆದಾಗ್ಯೂ, ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಈ ಕರಾಳ ಪದ್ಧತಿ ಸಾಮಾನ್ಯವಾಗಿದೆ.</p>



<p>ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ , ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಆಸ್ತಿಗಳನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವುವುದನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತು. ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಮೊದಲು ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.</p>



<p>ಪುರಸಭೆ ಆಯುಕ್ತರು ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಿದ ನಂತರ, ಪುರಸಭೆ ಅಧಿಕಾರಿಗಳು ಅರ್ಜಿದಾರರಿಗೆ ನೀಡಿರುವ ಕೆಡವುವಿಕೆ ನೋಟಿಸ್‌ಗಳ ಕಾನೂನುಬದ್ಧತೆ ಮತ್ತು ಅವರ ನಂತರದ ಕ್ರಮಗಳನ್ನು ಪರಿಶೀಲಿಸುವುದಾಗಿ ಸೋಮವಾರ ಹೈಕೋರ್ಟ್ ನ್ಯಾಯಾಲಯ ಹೇಳಿದೆ.</p>
]]></content:encoded>
					
		
		
			</item>
		<item>
		<title>ನಾಗಪುರ ಹಿಂಸಾಚಾರ: ಆರೋಪಿಯ ಮನೆಯನ್ನು ಭಾಗಶಃ ಧ್ವಂಸ ಮಾಡಿದ ಅಧಿಕಾರಿಗಳು</title>
		<link>https://peepalmedia.com/nagpur-violence-officials-partially-demolish-accuseds-house/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Mar 2025 06:52:10 +0000</pubDate>
				<category><![CDATA[ಕೋಮುವಾದ]]></category>
		<category><![CDATA[Aurangzeb]]></category>
		<category><![CDATA[Aurangzeb’s tomb]]></category>
		<category><![CDATA[bulldozer justice]]></category>
		<category><![CDATA[Curfew]]></category>
		<category><![CDATA[Dara Shikoh]]></category>
		<category><![CDATA[Mughal emperor]]></category>
		<category><![CDATA[nagpur]]></category>
		<guid isPermaLink="false">https://peepalmedia.com/?p=55627</guid>

					<description><![CDATA[ಮಾರ್ಚ್ 17 ರಂದು ನಗರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾನೆ ಎಂದು&#160;ಆರೋಪಿಸಿ ಫಾಹೀಮ್ ಖಾನ್ ಎಂಬ ವ್ಯಕ್ತಿಯ ಮನೆಯ ಭಾಗಗಳನ್ನು&#160;ನಾಗ್ಪುರದ ಅಧಿಕಾರಿಗಳು ಸೋಮವಾರ&#160;ಕೆಡವಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಖಾನ್ ಮತ್ತು ಇತರ ಐವರ ವಿರುದ್ಧ&#160;ದೇಶದ್ರೋಹ&#160;ಮತ್ತು ಘರ್ಷಣೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ ಹೊರಿಸಲಾಗಿದೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವವಾದಿ ಗುಂಪುಗಳು ನಾಗ್ಪುರದಲ್ಲಿ ಪ್ರತಿಭಟನೆ ನಡೆಸಿದ&#160;ಕೆಲವೇ ಗಂಟೆಗಳ ನಂತರ&#160;ಹಿಂಸಾಚಾರ [&#8230;]]]></description>
										<content:encoded><![CDATA[
<p>ಮಾರ್ಚ್ 17 ರಂದು ನಗರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾನೆ ಎಂದು&nbsp;ಆರೋಪಿಸಿ ಫಾಹೀಮ್ ಖಾನ್ ಎಂಬ ವ್ಯಕ್ತಿಯ ಮನೆಯ ಭಾಗಗಳನ್ನು&nbsp;ನಾಗ್ಪುರದ ಅಧಿಕಾರಿಗಳು ಸೋಮವಾರ&nbsp;<a href="https://x.com/PTI_News/status/1904039489678508478" target="_blank" rel="noreferrer noopener">ಕೆಡವಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.</a><a href="https://scroll.in/latest/1080514/nagpur-violence-six-charged-with-sedition-curfew-partially-lifted"></a></p>



<p>ಅಲ್ಪಸಂಖ್ಯಾತರ ಪ್ರಜಾಸತ್ತಾತ್ಮಕ ಪಕ್ಷದ ನಾಯಕ ಖಾನ್ ಮತ್ತು ಇತರ ಐವರ ವಿರುದ್ಧ&nbsp;<a href="https://www.hindustantimes.com/india-news/nagpur-violence-prime-accused-fahim-khan-among-six-booked-for-sedition-101742469876646.html" target="_blank" rel="noreferrer noopener">ದೇಶದ್ರೋಹ</a>&nbsp;ಮತ್ತು ಘರ್ಷಣೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ ಹೊರಿಸಲಾಗಿದೆ.</p>



<p>ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವವಾದಿ ಗುಂಪುಗಳು ನಾಗ್ಪುರದಲ್ಲಿ ಪ್ರತಿಭಟನೆ ನಡೆಸಿದ&nbsp;ಕೆಲವೇ ಗಂಟೆಗಳ ನಂತರ&nbsp;ಹಿಂಸಾಚಾರ ಭುಗಿಲೆದ್ದಿತು .</p>



<p>&#8220;ಸರಿಯಾದ ತನಿಖೆ&#8221;ಯ&nbsp;<a href="https://x.com/ANI/status/1904043880607318067" target="_blank" rel="noreferrer noopener">ನಂತರ</a>&nbsp;ಕೆಡವಲಾಗಿದೆ ಎಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ನ ಉಪ ಎಂಜಿನಿಯರ್ ಸುನಿಲ್ ಗಜ್ಭಿಯೆ ತಿಳಿಸಿದ್ದಾರೆ .</p>



<p>&#8220;ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಬಂದ ದೂರನ್ನು ತನಿಖೆ ಮಾಡಲು ನಮಗೆ ಆದೇಶವಿತ್ತು. ನಾವು ಸರಿಯಾದ ತನಿಖೆ ನಡೆಸಿದ್ದೇವೆ. MRTP ಕಾಯ್ದೆಯ [1966 ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ] ಸೆಕ್ಷನ್ 53(1) ರ ಪ್ರಕಾರ 24 ಗಂಟೆಗಳ ಕಾಲ ನೋಟಿಸ್ ನೀಡಲಾಗಿತ್ತು. ಅವಧಿ ಪೂರ್ಣಗೊಂಡ ತಕ್ಷಣ, ಈ ಕ್ರಮ ಕೈಗೊಳ್ಳಲಾಯಿತು,&#8221; ಎಂದು ಗಜ್ಭಿಯೆ ಹೇಳಿದ್ದಾರೆ. </p>



<p>ಭಾರತೀಯ ಕಾನೂನಿನಲ್ಲಿ&nbsp;ಶಿಕ್ಷೆಯ ಕ್ರಮವಾಗಿ ಆಸ್ತಿಯನ್ನು ಕೆಡವಲು ಅವಕಾಶ ನೀಡುವ ಯಾವುದೇ ನಿಬಂಧನೆಗಳಿಲ್ಲ. ಆದಾಗ್ಯೂ, ಭಾರತೀಯ ಜನತಾ ಪಕ್ಷ ಆಡಳಿತವಿರುವ ರಾಜ್ಯಗಳಲ್ಲಿ ಈ ಕರಾಳ ಪದ್ಧತಿ ಜಾರಿಯಲ್ಲಿದೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | Maharashtra: House of Nagpur violence accused Faheem Khan being demolished in Nagpur. Police personnel are present at the spot. <a href="https://t.co/RKzAFCokED">pic.twitter.com/RKzAFCokED</a></p>&mdash; ANI (@ANI) <a href="https://twitter.com/ANI/status/1904040288286601403?ref_src=twsrc%5Etfw">March 24, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ನವೆಂಬರ್‌ನಲ್ಲಿ&nbsp;ಸುಪ್ರೀಂ ಕೋರ್ಟ್, ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ&nbsp;ಆಸ್ತಿಗಳನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವುವುದನ್ನು&nbsp;ಕಾನೂನುಬಾಹಿರ ಎಂದು ತೀರ್ಪು ನೀಡಿತು.&nbsp;ಅಕ್ರಮ ಅತಿಕ್ರಮಣಗಳನ್ನು ತೆಗೆದುಹಾಕುವ ಮೊದಲು&nbsp;ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಅದು ಹೇಳಿತ್ತು.</p>



<p>&#8220;ಯಾರಾದರೂ ಅಂತಹ ಹಿಂಸಾಚಾರ ಮಾಡಿದರೆ ಅವರ ಮನೆಯ ಮೇಲೆ ಅಲ್ಲ,&nbsp;<a href="https://x.com/PTI_News/status/1904045946557853899" target="_blank" rel="noreferrer noopener">ಅವರ ಮೇಲೆಯೇ ಬುಲ್ಡೋಜರ್ ಹತ್ತಿಸಬೇಕು</a>&nbsp;&#8221; ಎಂದು ರಾಜ್ಯ ಸಚಿವ ಪ್ರತಾಪ್ ಸರ್ನಾಯಕ್ ವರದಿಗಾರರಿಗೆ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ .</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="y8BSwuWhQ0"><a href="https://peepalmedia.com/nagpur-violence-police-lift-curfew-in-all-areas-of-the-district/">ನಾಗಪುರ ಹಿಂಸಾಚಾರ: ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕಿದ ಪೊಲೀಸರು</a></blockquote><iframe class="wp-embedded-content" sandbox="allow-scripts" security="restricted"  title="&#8220;ನಾಗಪುರ ಹಿಂಸಾಚಾರ: ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕಿದ ಪೊಲೀಸರು&#8221; &#8212; Peepal Media" src="https://peepalmedia.com/nagpur-violence-police-lift-curfew-in-all-areas-of-the-district/embed/#?secret=9ILvqa1Rx8#?secret=y8BSwuWhQ0" data-secret="y8BSwuWhQ0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>ನಾಗಪುರ ಹಿಂಸಾಚಾರ: ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕಿದ ಪೊಲೀಸರು</title>
		<link>https://peepalmedia.com/nagpur-violence-police-lift-curfew-in-all-areas-of-the-district/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Mar 2025 06:43:52 +0000</pubDate>
				<category><![CDATA[ಕೋಮುವಾದ]]></category>
		<category><![CDATA[Aurangzeb]]></category>
		<category><![CDATA[Aurangzeb’s tomb]]></category>
		<category><![CDATA[Curfew]]></category>
		<category><![CDATA[Dara Shikoh]]></category>
		<category><![CDATA[Mughal emperor]]></category>
		<category><![CDATA[nagpur]]></category>
		<category><![CDATA[RSS]]></category>
		<guid isPermaLink="false">https://peepalmedia.com/?p=55621</guid>

					<description><![CDATA[ಮಹಾರಾಷ್ಟ್ರದ ನಾಗ್ಪುರದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಆರು ದಿನಗಳ ನಂತರ, ಪೊಲೀಸರು ಭಾನುವಾರ&#160;ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ&#160;ತೆಗೆದುಹಾಕಿದ್ದಾರೆ ಎಂದು&#160;ದಿ ಹಿಂದೂ&#160;ವರದಿ ಮಾಡಿದೆ. &#8220;ನಾವು ಕರ್ಫ್ಯೂ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ನಾಗ್ಪುರದಲ್ಲಿ ಸಾಮಾನ್ಯ ಸ್ಥಿತಿ ಮರಳಿದೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ&#8221; ಎಂದು ನಾಗ್ಪುರ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. ಘಟನೆಗೆ ಸಂಬಂಧಿಸಿದಂತೆ 13 ಪ್ರಕರಣಗಳು ದಾಖಲಾಗಿದ್ದು, ಶನಿವಾರದವರೆಗೆ 104 ಜನರನ್ನು ಬಂಧಿಸಲಾಗಿದೆ ಎಂದು ಸಿಂಗಲ್ ತಿಳಿಸಿದ್ದಾರೆ. ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ [&#8230;]]]></description>
										<content:encoded><![CDATA[
<p>ಮಹಾರಾಷ್ಟ್ರದ ನಾಗ್ಪುರದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದ ಆರು ದಿನಗಳ ನಂತರ, ಪೊಲೀಸರು ಭಾನುವಾರ&nbsp;ಜಿಲ್ಲೆಯ ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ&nbsp;<a href="https://www.thehindu.com/news/national/maharashtra/6-days-after-violence-curfew-completely-lifted-from-nagpur/article69364779.ece" rel="noreferrer noopener" target="_blank">ತೆಗೆದುಹಾಕಿದ್ದಾರೆ ಎಂದು&nbsp;</a><em>ದಿ ಹಿಂದೂ</em>&nbsp;ವರದಿ ಮಾಡಿದೆ.</p>



<p>&#8220;ನಾವು ಕರ್ಫ್ಯೂ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದೇವೆ. ನಾಗ್ಪುರದಲ್ಲಿ ಸಾಮಾನ್ಯ ಸ್ಥಿತಿ ಮರಳಿದೆ ಮತ್ತು ಪರಿಸ್ಥಿತಿ ಶಾಂತಿಯುತವಾಗಿದೆ&#8221; ಎಂದು ನಾಗ್ಪುರ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ. </p>



<p>ಘಟನೆಗೆ ಸಂಬಂಧಿಸಿದಂತೆ 13 ಪ್ರಕರಣಗಳು ದಾಖಲಾಗಿದ್ದು, ಶನಿವಾರದವರೆಗೆ 104 ಜನರನ್ನು ಬಂಧಿಸಲಾಗಿದೆ ಎಂದು ಸಿಂಗಲ್ ತಿಳಿಸಿದ್ದಾರೆ.</p>



<p>ಛತ್ರಪತಿ ಸಂಭಾಜಿ ನಗರದಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದುತ್ವ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳ ನಂತರ ಮಾರ್ಚ್ 17 ರಂದು ನಾಗ್ಪುರದಲ್ಲಿ ಹಿಂಸಾಚಾರ ನಡೆಯಿತು.</p>



<p>ನಂತರ, ನಾಗ್ಪುರದ 11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸುವ ನಿಷೇಧಾಜ್ಞೆಗಳನ್ನು ವಿಧಿಸಲಾಯಿತು.</p>



<p>ಗುರುವಾರ, ಪೊಲೀಸರು ನಂದನವನ್ ಮತ್ತು ಕಪಿಲ್ ನಗರದಂತಹ <a href="https://indianexpress.com/article/cities/mumbai/nagpur-violence-sedition-firs-curfew-9897135/" target="_blank" rel="noreferrer noopener">ಪ್ರದೇಶಗಳಲ್ಲಿ ಕರ್ಫ್ಯೂ ತೆಗೆದುಹಾಕಿದ್ದರು</a> ಮತ್ತು ನಗರದ ಇತರ ಭಾಗಗಳಲ್ಲಿ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಿವಾಸಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ನಿಷೇಧಾಜ್ಞೆಗಳನ್ನು ಸಡಿಲಿಸಿದ್ದರು.</p>



<p>ಕೊತ್ವಾಲಿ, ತೆಹಸಿಲ್, ಗಣೇಶಪೇಟೆ ಮತ್ತು ಯಶೋಧರ ನಗರ ಪ್ರದೇಶಗಳು ಸೇರಿದಂತೆ ಉಳಿದ ಪ್ರದೇಶಗಳಿಂದ ಭಾನುವಾರ ಆದೇಶಗಳನ್ನು ತೆಗೆದುಹಾಕಲಾಗಿದೆ ಎಂದು&nbsp;<em>ದಿ ಹಿಂದೂ</em>&nbsp;ವರದಿ ಮಾಡಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮುಂದುವರಿಯುತ್ತದೆ ಎಂದು ಸಿಂಗಲ್ ಹೇಳಿದರು.</p>



<p>ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಂತಹ ಹಿಂದುತ್ವ ಗುಂಪುಗಳು ಇತ್ತೀಚಿನ ವಾರಗಳಲ್ಲಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ತಮ್ಮ ಅಭಿಯಾನವನ್ನು ತೀವ್ರಗೊಳಿಸಿವೆ, ಈ ರಚನೆಯು &#8220;ನೋವು ಮತ್ತು ಗುಲಾಮಗಿರಿಯ ಸಂಕೇತ&#8221; ಎಂದು ಹೇಳಿಕೊಂಡಿವೆ.</p>



<p>ಎರಡೂ ಗುಂಪುಗಳು ಮಾರ್ಚ್ 17 ರಂದು ಮಹಾರಾಷ್ಟ್ರದ <a href="https://www.hindustantimes.com/cities/pune-news/vhp-bajrang-dal-protest-over-removal-of-aurangzeb-s-tomb-101742236566693.html" target="_blank" rel="noreferrer noopener">ಹಲವಾರು ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದವು.</a></p>



<p>ಮಾರ್ಚ್ 17 ರಂದು ಹಿಂದುತ್ವ ಗುಂಪಿನ ಪ್ರತಿಭಟನೆ ನಡೆದ ಕೆಲವೇ ಗಂಟೆಗಳ ನಂತರ, ಮಧ್ಯ ನಾಗ್ಪುರದ ಚಿಟ್ನಿಸ್ ಪಾರ್ಕ್‌ನಲ್ಲಿ ಸಂಜೆ 7.30 ಕ್ಕೆ ಘರ್ಷಣೆಗಳು ಭುಗಿಲೆದ್ದವು. ಮಧ್ಯಾಹ್ನ ಹಿಂದುತ್ವ ಗುಂಪಿನ ಪ್ರತಿಭಟನೆಯ ಸಮಯದಲ್ಲಿ ಕಲ್ಮಾ ಎಂದು ಕರೆಯಲ್ಪಡುವ <a href="https://x.com/PTI_News/status/1901900931262013746" target="_blank" rel="noreferrer noopener">ಇಸ್ಲಾಮಿಕ್ ನಂಬಿಕೆಯ ಘೋಷಣೆಯ ಬಟ್ಟೆಯನ್ನು</a> ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ನಡುವೆ ಪೊಲೀಸರ ಮೇಲೆ ಕಲ್ಲುತೂರಾಟ ನಡೆಯುತು.</p>



<p>ಆದರೆ, ಅಂತಹ ಬಟ್ಟೆಯನ್ನು ಸುಟ್ಟು ಹಾಕಲಾಗಿದೆ ಎಂಬ ಆರೋಪವನ್ನು ಪೊಲೀಸರು ನಿರಾಕರಿಸಿದರು.</p>



<p>ಚಿಟ್ನಿಸ್ ಪಾರ್ಕ್ ಬಳಿಯ <a href="https://theprint.in/india/prohibitory-orders-imposed-in-maharashtras-nagpur-amidst-ongoing-violence/2552052/" target="_blank" rel="noreferrer noopener"><u>ಹಂಸ</u>ಪು<u>ರಿಯಲ್ಲಿ</u></a> ರಾತ್ರಿ 10.30 ರಿಂದ 11.30 ರ ನಡುವೆ ಮತ್ತೊಂದು ಘರ್ಷಣೆ ಭುಗಿಲೆದ್ದಿತು. ಹಿಂಸಾಚಾರವು ಕೊತ್ವಾಲಿ ಮತ್ತು ಗಣೇಶಪೇಟೆ ಪ್ರದೇಶಗಳಿಗೂ <a href="https://indianexpress.com/article/cities/mumbai/nagpur-tense-after-protest-against-aurangzeb-tomb-sparks-violence-9891520/" target="_blank" rel="noreferrer noopener">ಹರಡಿತು.</a></p>



<p><a href="https://scroll.in/latest/1080563/nagpur-violence-man-dies-five-days-after-being-injured">ಘರ್ಷಣೆಯಲ್ಲಿ ಗಾಯಗೊಂಡಿದ್ದ</a> 38 ವರ್ಷದ ವ್ಯಕ್ತಿಯೊಬ್ಬರು ಶನಿವಾರ ನಗರದ ಆಸ್ಪತ್ರೆಯಲ್ಲಿ ನಿಧನರಾದರು.</p>



<p>ನಂತರ ಶನಿವಾರ, ಹಿಂಸಾಚಾರದ ಸಮಯದಲ್ಲಿ ಆಸ್ತಿಪಾಸ್ತಿಗೆ ಉಂಟಾದ ಹಾನಿಯ ವೆಚ್ಚವನ್ನು ಗಲಭೆಕೋರರಿಂದ ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು.</p>



<p><strong>ದೇಶದ ಒಳ್ಳೆಯದಕ್ಕಾಗಿ ಔರಂಗಜೇಬ್‌ಗೆ ವಿರೋಧ: ಆರ್‌ಎಸ್‌ಎಸ್ ನಾಯಕ</strong></p>



<p>ಭಾನುವಾರ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ&nbsp;<a href="https://www.thehindu.com/news/national/religion-based-reservation-violates-constitution-rss/article69364948.ece" rel="noreferrer noopener" target="_blank">ದತ್ತಾತ್ರೇಯ ಹೊಸಬಾಳೆ ಅವರು</a>&nbsp;ಭಾರತದ ನೀತಿಗೆ ವಿರುದ್ಧವಾಗಿರುವ ವ್ಯಕ್ತಿಯನ್ನು ಪ್ರತಿಮೆ ಮಾಡುವುದು ಸರಿಯೇ ಎಂದು ಕೇಳಿದ್ದಾರೆ ಎಂದು&nbsp;<em>ದಿ ಹಿಂದೂ</em>&nbsp;ವರದಿ ಮಾಡಿದೆ.</p>



<p>&#8220;ಗಂಗಾ-ಜಮುನಾ ಸಂಸ್ಕೃತಿಯನ್ನು ಪ್ರತಿಪಾದಿಸುವ&#8221; ಅಥವಾ ಹಿಂದೂ ಮತ್ತು ಇಸ್ಲಾಮಿಕ್ ಸಾಂಸ್ಕೃತಿಕ ಅಂಶಗಳ ಸಮ್ಮಿಳನವನ್ನು ಪ್ರತಿಪಾದಿಸುವ ವ್ಯಕ್ತಿಗಳು &#8220;ದಾರಾ ಶಿಕೋ ಅವರನ್ನು ಮುಂದಕ್ಕೆ ತರುವ ಬಗ್ಗೆ ಏಕೆ ಯೋಚಿಸಲಿಲ್ಲ&#8221; ಎಂದು ಹೊಸಬಾಳೆ ಕೇಳಿದರು.</p>



<p><strong>ಔರಂಗಜೇಬನ ಅಣ್ಣ ದಾರಾ ಶಿಕೋ</strong> </p>



<p>ಔರಂಗಜೇಬ್ ಇವತ್ತು &#8220;ಪ್ರಸ್ತುತ ಅಲ್ಲ&#8221; ಎಂದು ಆರ್‌ಎಸ್‌ಎಸ್ ನಾಯಕ ಸುನಿಲ್ ಅಂಬೇಕರ್ ಬುಧವಾರ ಹೇಳಿದ ನಂತರ ಈ ಹೇಳಿಕೆ ಬಂದಿದೆ . &#8220;ಔರಂಗಜೇಬನ ವೈಭವೀಕರಣ <a href="https://timesofindia.indiatimes.com/india/aurangzeb-not-relevant-today-but-tomb-issue-is-says-rss/articleshow/119227529.cms" target="_blank" rel="noreferrer noopener">ನಿಲ್ಲಬೇಕು</a> &#8221; ಎಂದು ಅಂಬೇಕರ್ <em>ಟೈಮ್ಸ್ ಆಫ್ ಇಂಡಿಯಾಗೆ</em> ತಿಳಿಸಿದ್ದರು.<a href="https://timesofindia.indiatimes.com/india/aurangzeb-not-relevant-today-but-tomb-issue-is-says-rss/articleshow/119227529.cms" target="_blank" rel="noreferrer noopener"></a></p>



<p>&#8220;ಸಮಾಧಿ ವಿಷಯವು ಅಪ್ರಸ್ತುತವಲ್ಲ, ಔರಂಗಜೇಬ್ ಕೂಡ ಅಪ್ರಸ್ತುತ,&#8221; ಎಂದು ಅವರು ಸ್ಪಷ್ಟಪಡಿಸಿದ್ದಾರೆಂದು ಪತ್ರಿಕೆ ಉಲ್ಲೇಖಿಸಿದೆ.</p>



<p>ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಹೊಸಬಾಳೆ, ಹಿಂದೆಯೂ ಔರಂಗಜೇಬನ ಪ್ರಸ್ತುತತೆಯ ವಿಷಯವನ್ನು ಎತ್ತಲಾದ ಬಹಳಷ್ಟು ಘಟನೆಗಳು ನಡೆದಿವೆ ಎಂದು ಹೇಳಿದರು.</p>



<p>&#8220;ದೆಹಲಿಯಲ್ಲಿ &#8216;ಔರಂಗಜೇಬ್ ರಸ್ತೆ&#8217; ಇತ್ತು, ಅದನ್ನು ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ ಮಾಡಲಾಯಿತು. ಇದರ ಹಿಂದೆ ಏನೋ ಕಾರಣವಿತ್ತು. ನಾವು ದಾರಾ ಶಿಕೋ ಅವರನ್ನು ಎಂದಿಗೂ ನಾಯಕ ಎಂದು ಕರೆಯಲಿಲ್ಲ. ಅವರು ಔರಂಗಜೇಬನ ಸಹೋದರ. ಗಂಗಾ-ಯಮುನಿ ಸಂಸ್ಕೃತಿಯನ್ನು ಪ್ರತಿಪಾದಿಸುವವರು ದಾರಾ ಶಿಕೋ. ಅವರನ್ನು ಮುಂದಕ್ಕೆ ತರುವ ಬಗ್ಗೆ ಎಂದಿಗೂ ಯೋಚಿಸಲಿಲ್ಲ.&#8221; ಎಂದು ಅವರು ಹೇಳಿರುವುದಾಗಿ <em>ದಿ ಹಿಂದೂ</em> ಉಲ್ಲೇಖಿಸಿದೆ. </p>



<p>ಬ್ರಿಟಿಷರ ವಿರುದ್ಧದ ಚಳುವಳಿ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದಿದ್ದರೆ, ಬ್ರಿಟಿಷರಿಗಿಂತ ಮೊದಲು ದೇಶವನ್ನು ಆಳಿದವರ ವಿರುದ್ಧದ ಹೋರಾಟವೂ ಅಂತಹ ಚಳುವಳಿಯ ಭಾಗವಾಗಿದೆ ಎಂದು ಅವರು ಹೇಳಿದರು.</p>



<p>&#8220;ಅಸಹಿಷ್ಣುತೆಗೆ ಹೆಸರುವಾಸಿಯಾದವರು, ಸಮಾಜ ಮತ್ತು ರಾಷ್ಟ್ರದ ಸಂಸ್ಕೃತಿಯ ಸಂಕೇತಗಳಾಗಿರುವವರು ನಮ್ಮ ಆದರ್ಶವಾಗಬೇಕು, ರಾಷ್ಟ್ರದ ಪಾತ್ರವನ್ನು ಪ್ರತಿನಿಧಿಸದವರು ಅಲ್ಲ. ಔರಂಗಜೇಬ್‌ನಂತಹ ಜನರಿಗೆ ಇರುವ ನಮ್ಮ ವಿರೋಧವು ಧಾರ್ಮಿಕವಲ್ಲ, ರಾಷ್ಟ್ರ ಮತ್ತು ಅದರ ಏಕತೆಯ ಹಿತದೃಷ್ಟಿಯಿಂದ&#8221; ಎಂದು ಆರ್‌ಎಸ್‌ಎಸ್ ನಾಯಕ ಹೇಳಿದರು.</p>



<p>&#8220;ನಾವು 1947 ರಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದಿದ್ದರೂ,  ವಸಾಹತುಶಾಹಿ ಮಾನಸಿಕತೆ ಇನ್ನೂ ಜೀವಂತವಾಗಿದೆ ಮತ್ತು ಈ ಮಾನಸಿಕ ವಸಾಹತುಶಾಹಿಯನ್ನು ಕೊನೆಗೊಳಿಸುವುದು ಅವಶ್ಯಕ&#8221; ಎಂದು ಅವರು ಹೇಳಿದರು.</p>



<p></p>
]]></content:encoded>
					
		
		
			</item>
		<item>
		<title>ನಾಗಪುರ: ಒಂದೇ ಮನೆಯ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ</title>
		<link>https://peepalmedia.com/4-of-family-hang-selves-in-nagpur/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Oct 2024 09:45:35 +0000</pubDate>
				<category><![CDATA[ಅಪರಾಧ]]></category>
		<category><![CDATA[crime]]></category>
		<category><![CDATA[death]]></category>
		<category><![CDATA[maharashtra]]></category>
		<category><![CDATA[nagpur]]></category>
		<category><![CDATA[suicide]]></category>
		<guid isPermaLink="false">https://peepalmedia.com/?p=46585</guid>

					<description><![CDATA[ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ [&#8230;]]]></description>
										<content:encoded><![CDATA[
<p>ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.</p>



<p>ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>



<p>ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು.</p>



<p>ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಕುಟುಂಬದ ನಾಲ್ವರು ಸೀಲಿಂಗ್ ಕೊಕ್ಕೆಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>



<p>ಮೃತರನ್ನು ನಿವೃತ್ತ ಶಿಕ್ಷಕ ವಿಜಯ್ ಮಧುಕರ್ ಪಚೋರಿ (68), ಅವರ ಪತ್ನಿ ಮಾಲಾ (55) ಮತ್ತು ಅವರ ಮಕ್ಕಳಾದ ಗಣೇಶ್ (38) ಮತ್ತು ದೀಪಕ್ (36) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>



<p>ಮಧ್ಯಪ್ರದೇಶದ ಪಾಂಡುರ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಗಣೇಶ್ ಬಂಧನದಿಂದಾಗಿ ಕುಟುಂಬವು ಅಪಾರ ಒತ್ತಡದಲ್ಲಿದ್ದುದು ಸೂಸೈಡ್ ನೋಟ್‌ನಲ್ಲಿ ಕಂಡುಬಂದಿದೆ.&nbsp; ಇದರಲ್ಲಿ ಕುಟುಂಬದ ನಾಲ್ಕು ಸದಸ್ಯರ ಸಹಿಯನ್ನುಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.</p>



<p>ನಾರ್ಖೇಡ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ದೇಶದಲ್ಲಿ 6ನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ</title>
		<link>https://peepalmedia.com/launch-of-6th-vande-bharat-express-train-in-the-country/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 11 Dec 2022 08:05:08 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nagpur]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[prime minister]]></category>
		<category><![CDATA[vande bharath express train]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18212</guid>

					<description><![CDATA[ನಾಗ್ಪುರ : ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರದಂದು ದೇಶದಲ್ಲಿ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದಾರೆ. ಇಂದು ಚಾಲನೆ ನಾಗ್ಪುರದಲ್ಲಿ ಚಾಲನೆ ನೀಡುವ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಾಗ್ಪುರ ಮತ್ತು ಬಿಲ್ಸಾಪುರ ನಡುವೆ ಚಲಿಸಲಿದೆ. ಈ ಮೊದಲು ಚಾಲನೆ ನೀಡಿದ ಐದನೇ ವಂದೇ ಭಾರತ್‌ ಎಕ್ಸ್‌ಪ್ರಸ್‌ ರೈಲು ದಕ್ಷಿಣ ಭಾರತದ ಚೆನ್ನೈ, ಬೆಂಗಳೂರು, ಮೈಸೂರು ನಡುವೆ ಒಟ್ಟು 483ಕಿಮೀ ನಷ್ಟು ದೂರವನ್ನು ಕ್ರಮಿಸುತ್ತಿದೆ. ನವೆಂಬರ್‌ 11ರಂದು ಚಾಲನೆಗೊಂಡ ದಕ್ಷಿಣ ಭಾರತದ [&#8230;]]]></description>
										<content:encoded><![CDATA[
<p><strong>ನಾಗ್ಪುರ : </strong>ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರದಂದು ದೇಶದಲ್ಲಿ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡಿದ್ದಾರೆ.</p>



<p>ಇಂದು ಚಾಲನೆ ನಾಗ್ಪುರದಲ್ಲಿ ಚಾಲನೆ ನೀಡುವ ಆರನೇ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ನಾಗ್ಪುರ ಮತ್ತು ಬಿಲ್ಸಾಪುರ ನಡುವೆ ಚಲಿಸಲಿದೆ.</p>



<p>ಈ ಮೊದಲು ಚಾಲನೆ ನೀಡಿದ ಐದನೇ ವಂದೇ ಭಾರತ್‌ ಎಕ್ಸ್‌ಪ್ರಸ್‌ ರೈಲು ದಕ್ಷಿಣ ಭಾರತದ ಚೆನ್ನೈ, ಬೆಂಗಳೂರು, ಮೈಸೂರು ನಡುವೆ ಒಟ್ಟು 483ಕಿಮೀ ನಷ್ಟು ದೂರವನ್ನು ಕ್ರಮಿಸುತ್ತಿದೆ.</p>



<p>ನವೆಂಬರ್‌ 11ರಂದು ಚಾಲನೆಗೊಂಡ ದಕ್ಷಿಣ ಭಾರತದ ಮೊದಲ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೆಂಗಳೂರು ಮಾರ್ಗವಾಗಿ ಚೆನ್ನೈನಿಂದ ಮೈಸೂರಿಗೆ ಓಡಾಡುತ್ತಿದ್ದು, ಅಲ್ಪ ಕಾಲದಲ್ಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.</p>



<p>ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಇತರ ಮೂರು ರೈಲುಗಳು ನವದೆಹಲಿಯಿಂದ ವಾರಣಾಸಿ , ನವದೆಹಲಿ – ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ಮತ್ತು ಗಾಂಧಿನಗರ – ಮುಂಬೈನ ಮಧ್ಯೆ ಚಾಲನೆಯಲ್ಲಿವೆ.</p>



<p>ಹೊಸ ವಂದೇ ಭಾರತ್‌ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುತ್ತಿದೆ. ಈ ರೈಲು ಮೂರು ಗಂಟೆಗಳ ಬ್ಯಾಟರಿ ಬ್ಯಾಕಪ್‌ನೊಂದಿಗೆ ಕೋಚ್ ಗಳು ಡಿಸಾಸ್ಟರ್‌ ಲೈಟ್ ಗಳನ್ನು ಹೊಂದಿದೆ.</p>
]]></content:encoded>
					
		
		
			</item>
		<item>
		<title>NEP ಎಂದರೆ ನಾಗಪುರ ಎಜುಕೇಷನ್‌ ಪಾಲಿಸಿ: ರಾಜೀವ ಗೌಡ</title>
		<link>https://peepalmedia.com/nep-means-nagpur-education-policy-says-rajeev-gowda/</link>
		
		<dc:creator><![CDATA[Peepal Media]]></dc:creator>
		<pubDate>Fri, 07 Oct 2022 13:33:42 +0000</pubDate>
				<category><![CDATA[ರಾಜಕೀಯ]]></category>
		<category><![CDATA[bharat jodo]]></category>
		<category><![CDATA[bharath jodo yathre]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nagpur]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rajeev gowda]]></category>
		<category><![CDATA[RSS]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=9256</guid>

					<description><![CDATA[ಎನ್‌ಇಪಿ ಎನ್ನುವುದು ನಾಗಪುರದ ಸಿದ್ಧಾವಂತನ್ನು ಸೀದಾ ತರಗತಿಗಳಲ್ಲಿ ತಂದು ಸುರಿಯುವ ನೀತಿಯಾಗಿದೆ ಎಂದು ಮಾಜಿ ರಾಜ್ಯಸಭೆ ಸದಸ್ಯರಾದ ರಾಜೀವ ಗೌಡ ಅವರು ಇಂದಿನ ರಾಹುಲ್‌ ಗಾಂಧಿಯವರೊಡನೆ ನಡೆದ ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ಹೇಳಿದರು. ಎನ್ ಇಪಿ ಮಾರ್ಪಾಡಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣಕ್ಕೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ [&#8230;]]]></description>
										<content:encoded><![CDATA[
<p>ಎನ್‌ಇಪಿ ಎನ್ನುವುದು ನಾಗಪುರದ ಸಿದ್ಧಾವಂತನ್ನು ಸೀದಾ ತರಗತಿಗಳಲ್ಲಿ ತಂದು ಸುರಿಯುವ ನೀತಿಯಾಗಿದೆ ಎಂದು ಮಾಜಿ ರಾಜ್ಯಸಭೆ ಸದಸ್ಯರಾದ ರಾಜೀವ ಗೌಡ ಅವರು ಇಂದಿನ ರಾಹುಲ್‌ ಗಾಂಧಿಯವರೊಡನೆ ನಡೆದ ಶಿಕ್ಷಣ ತಜ್ಞರೊಂದಿಗಿನ ಸಂವಾದದಲ್ಲಿ ಹೇಳಿದರು.</p>



<p>ಎನ್ ಇಪಿ ಮಾರ್ಪಾಡಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಎನ್ ಇಪಿ ಎಂದರೆ ನಾಗ್ಪುರ ಶಿಕ್ಷಣ ನೀತಿ. ಅಲ್ಲಿ ಇತಿಹಾಸ ಹಾಗೂ ಪುರಾಣಕ್ಕೆ ಗೊಂದಲವಿದೆ. ನಾವು ಪುರಾಣ, ಮಹಾಭಾರತ, ರಾಮಾಯಣದ ವಿರುದ್ಧ ಇಲ್ಲ. ಅದನ್ನು ಕಲಿತು ಅದರ ಜತೆ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ಪಾಠಗಳನ್ನು ಕಲಿಸಬೇಕು’ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಈ ಎನ್ಇಪಿ ವಿಚಾರವಾಗಿ ಕೇಂದ್ರ ಸರ್ಕಾರ ಸದನದಲ್ಲಿ ಚರ್ಚೆ ಮಾಡಿಲ್ಲ. ನಾಗ್ಪುರದ ಸಿದ್ಧಾಂತವನ್ನು ಇಲ್ಲಿಗೆ ತಂದು ಹಾಕಿದ್ದಾರೆ’ ಎಂದರು.</p>



<p>ಕಾಂಗ್ರೆಸ್ ಸರ್ಕಾರ ಬಂದರೆ ಎನ್ ಇಪಿ ರದ್ದು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜೀವ್ ಗೌಡ ಅವರು, ‘ಶಿಕ್ಷಣವು ಕೇಂದ್ರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ರಾಜ್ಯದ ವಿಚಾರ. ಹೀಗಾಗಿ ನಮ್ಮ ಸರ್ಕಾರ ಬಂದರೆ ವೈಜ್ಞಾನಿಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ನೀಡುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು. ನಂತರ ಮಾತನಾಡಿದ ಜೈರಾಮ್ ರಮೇಶ್ ಅವರು ‘ನಮ್ಮ ಸರ್ಕಾರ ಬಂದರೆ ಈ ಎನ್ಇಪಿಯ ಪ್ರತಿ ಪದವನ್ನು ರದ್ದು ಮಾಡಲಾಗುವುದು’ ಎಂದರು.</p>



<p>ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ರಾಜ್ಯ ಸರ್ಕಾರ ಎನ್ ಇಪಿ ಬಗ್ಗೆ ಒಂದು ಪುಸ್ತಕ ಬಿಡುಗಡೆ ಮಾಡಿದ್ದು, ಅದರಲ್ಲಿ ಸ್ವತಃ ಸರ್ಕಾರವೇ ಈ ಎನ್ಇಪಿಗೆ ರಾಜ್ಯ ಸಿದ್ಧವಾಗಿಲ್ಲ. ಹೀಗಾಗಿ ಇದನ್ನು ಜಾರಿಗೆ ತರಲು ಹಲವು ವರ್ಷಗಳು ಬೇಕಿದೆ ಎಂದು ಹೇಳಿದೆ. ಕೆಲವು ಮಂತ್ರಿಗಳು ಈ ಎನ್ಇಪಿ ಜಾರಿ ಮಾಡಿದರೆ ನಾಗ್ಪುರದವರನ್ನು ಮೆಚ್ಚಿಸಬಹುದು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಇದು ಮಂತ್ರಿಗಳ ಅನುಕೂಲಕ್ಕೆ ಹೊರತು, ವಿದ್ಯಾರ್ಥಿಗಳಿಗೆ ಅಲ್ಲ’ ಎಂದರು.</p>



<p>ಆರ್ ಎಸ್ಎಸ್ ನವರು 5 ವಿವಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ರಾಜ್ಯದಲ್ಲಿ ಚಾಣಕ್ಯ ವಿವಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿವಿಗೆ ಕಡಿಮೆ ಬೆಲೆಗೆ ಸರ್ಕಾರ ಜಾಗವನ್ನು ಮಂಜೂರು ಮಾಡಿದೆ. ಸದನದಲ್ಲಿ ನಮಗೆ ಸಂಖ್ಯಾಬಲದ ಕೊರತೆಯಿಂದ ಇದನ್ನು ತಡೆಯಲು ಆಗಲಿಲ್ಲ. ಹೀಗಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಬೇಕಾದರೆ ಕಾಂಗ್ರೆಸ್ ಪಕ್ಷವೇ ಉತ್ತಮ ಆಯ್ಕೆ’ ಎಂದರು.</p>



<p>ಈ ವೇಳೆ ಎನ್ಇಪಿ ವಿಚಾರವಾಗಿ ಮಾತನಾಡಿದ ಜೈರಾಮ್ ರಮೇಶ್ ಅವರು, ‘1996ರಲ್ಲಿ ಜಾರಿಗೆ ತಂದ ಶಿಕ್ಷಣ ನೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಆರಂಭಿಸಲಾಗಿತ್ತು. ಅಲ್ಲಿ ಎಲ್ಲ ವರ್ಗದವರು ವಿದ್ಯಾಭ್ಯಾಸ ಮಾಡಿ ಉನ್ನತ ಮಟ್ಟಕ್ಕೆ ಬೆಳೆದಿದ್ದು, ಇದೊಂದು ಕ್ರಾಂತಿಕಾರಕ ನಿರ್ಧಾರವಾಗಿತ್ತು ಶಿಕ್ಷಣದ ಖಾಸಗಿಕರಣ ಬಹಳ ಅಪಾಯಕಾರಿ’ ಎಂದರು.</p>



<p>ಮೀಸಲಾತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ಅವರು, ‘ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯು ತನ್ನ ವರದಿ ನೀಡಿ ಎರಡೂವರೆ ವರ್ಷವಾಗಿದೆ. ಸಮಿತಿ ವರದಿ ಮೇಲೆ ಮತ್ತೊಂದು ಸಮಿತಿ ಮಾಡಿರುವುದು ಕಾಲಹರಣದ ಪ್ರಯತ್ನವಲ್ಲದೇ ಬೇರೆನೂ ಅಲ್ಲ’ ಎಂದು ತಿಳಿಸಿದರು.</p>
]]></content:encoded>
					
		
		
			</item>
	</channel>
</rss>
