<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>nalina chikkamagaluru &#8211; Peepal Media</title>
	<atom:link href="https://peepalmedia.com/tag/nalina-chikkamagaluru/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 03 Apr 2024 04:47:39 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>nalina chikkamagaluru &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>BBL ಜಾಗತಿಕ ಸಮಸ್ಯೆಗಳು &#8211; ಕಳ್ಳುಬಳ್ಳಿ -10</title>
		<link>https://peepalmedia.com/10-bbl-global-issues-kakhuballi-10/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 03 Apr 2024 04:40:05 +0000</pubDate>
				<category><![CDATA[ಅಂಕಣ]]></category>
		<category><![CDATA[ಹೆಣ್ಣೋಟ]]></category>
		<category><![CDATA[Kalluballi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nalina chikkamagaluru]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=37890</guid>

					<description><![CDATA[ಬ್ರೆಜಿಲಿಯನ್ ಬಟ್ ಲಿಫ್ಟ್ ಅನ್ನುವ ಇದೊಂದು ನಿತಂಬ ದುಂಡಗಾಗಿಸುವ ಖಯಾಲಿ.&#160; ದಕ್ಷಿಣ ಆಫ್ರಿಕಾ ದೇಶದ ಮಹಿಳೆಯರು ಸೇರಿದಂತೆ ವಿದೇಶಿ ಮಹಿಳೆಯರು ಅತಿಹೆಚ್ಚಾಗಿ ಈ BBL ಎಂಬ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ದೇಶೀಯರಿಗೆ ಈ BBL ಹುಚ್ಚು ಅತಿಯಾಗಿ ಕಾಡುತ್ತಿದೆ.&#160; ಅವರು ಚಿಕನ್ ಬಟ್ಸ್ ಎಂದು ಸಹ ಕರೆಯುತ್ತಾರೆ.&#160; ಮಹಿಳೆಯರು ತಮ್ಮ ನಿತಂಬಗಳನ್ನು ಅತಿಯಾಗಿ ಗುಂಡಗೆ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ.&#160; ಇದೊಂದು ತರಹ ದೇಹದ ಆಕರ್ಷಣೆಯ ಪ್ರಮುಖ ಭಾಗವಾಗಿದೆ ಅನ್ನುವ ರೀತಿಯ ಮನಸ್ಥಿತಿ ಬೆಳೆಯುತ್ತಿದೆ. ಇವರಲ್ಲಿ ಜಗತ್ಪ್ರಸಿದ್ಧ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಬ್ರೆಜಿಲಿಯನ್ ಬಟ್ ಲಿಫ್ಟ್ ಅನ್ನುವ ಇದೊಂದು ನಿತಂಬ ದುಂಡಗಾಗಿಸುವ ಖಯಾಲಿ.&nbsp; ದಕ್ಷಿಣ ಆಫ್ರಿಕಾ ದೇಶದ ಮಹಿಳೆಯರು ಸೇರಿದಂತೆ ವಿದೇಶಿ ಮಹಿಳೆಯರು ಅತಿಹೆಚ್ಚಾಗಿ ಈ BBL ಎಂಬ ಪ್ರಕ್ರಿಯೆಗೆ ಒಳಗಾಗುತ್ತಿದ್ದಾರೆ.</p>
</blockquote>



<p>ಆದರೆ ದಕ್ಷಿಣ ಆಫ್ರಿಕಾ ದೇಶೀಯರಿಗೆ ಈ BBL ಹುಚ್ಚು ಅತಿಯಾಗಿ ಕಾಡುತ್ತಿದೆ.&nbsp; ಅವರು ಚಿಕನ್ ಬಟ್ಸ್ ಎಂದು ಸಹ ಕರೆಯುತ್ತಾರೆ.&nbsp; ಮಹಿಳೆಯರು ತಮ್ಮ ನಿತಂಬಗಳನ್ನು ಅತಿಯಾಗಿ ಗುಂಡಗೆ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ.&nbsp; ಇದೊಂದು ತರಹ ದೇಹದ ಆಕರ್ಷಣೆಯ ಪ್ರಮುಖ ಭಾಗವಾಗಿದೆ ಅನ್ನುವ ರೀತಿಯ ಮನಸ್ಥಿತಿ ಬೆಳೆಯುತ್ತಿದೆ.</p>



<p>ಇವರಲ್ಲಿ ಜಗತ್ಪ್ರಸಿದ್ಧ ಗಾಯಕಿಯರು, ನೃತ್ಯಗಾರ್ತಿಯರು ಸಹ ಇದ್ದಾರೆ. ಸಿಲಿಕಾನ್ ಬಟ್ಸ್ ಸಹ ಚರ್ಮದೊಳಗೆ ಸೇರಿಸುವ ಕ್ರಮ ಇದೆ.&nbsp; ಸಿಲಿಕಾನ್ ಇಂಜೆಕ್ಷನ್ ಕೊಟ್ಟು ಬಟ್ಸ್ ಬೆಳೆದಿರುವಂತೆ ಮಾಡುವ ವೈದ್ಯಕೀಯ ಕ್ರಮ ಸಹ ದುಬಾರಿ ವೆಚ್ಚದಲ್ಲಿ ಲಭ್ಯವಿದೆ.</p>



<p>BBL ಆಸಕ್ತಿ ಇರುವ ಹೆಣ್ಣು ಮಗಳ ದೇಹದ ಕೊಬ್ಬನ್ನು ತೆಗೆದು ಆಕೆಯ ನಿತಂಬಗಳಿಗೆ ಏರಿಸುವ ವೈದ್ಯಕೀಯ ಚಿಕಿತ್ಸೆಯ ಕ್ರಮಕ್ಕೆ ೩ ಸಾವಿರದಿಂದ ೧೦ ಸಾವಿರ ಡಾಲರ್ ವೆಚ್ಚವಾಗುತ್ತದೆ.&nbsp; ಅಂದರೆ ಇದೆಲ್ಲಾ ದುಬಾರಿ ದುಡ್ಡು ತೆತ್ತು ಮಾಡಿಕೊಳ್ಳುವ ಅದ್ವಾನ.</p>



<p>BBL ವಿಫಲಗೊಂಡು ಅನೇಕ ಮಹಿಳೆಯರು ಸಾವಿಗೀಡಾದ ಘಟನೆಗಳು ಸಹ ಇವೆ.&nbsp; ಇನ್ನೂ ಅನೇಕ ಘಟನೆಗಳನ್ನು ಗಮನಿಸಿದಾಗ ನಿತಂಬಗಳು ಇಳಿದು ಬಿದ್ದು ನರಮಂಡಲದ ಮೇಲೆ ಭಾರಿ ತೂಕ ಬಿದ್ದ ಪರಿಣಾಮ ಹೃದಯದ ಒತ್ತಡ ಸಹ ಹೆಚ್ಚಾಗುತ್ತದೆ.&nbsp; ನರಗಳು ತುಂಡಾದ ಪ್ರಕರಣಗಳಲ್ಲಿ ರಕ್ತ ಹೆಪ್ಪುಗಟ್ಟಿದ್ದಿದೆ.&nbsp; ನೋವಿರುವ ಜಾಗದಲ್ಲಿ ಊತವೂ ಆಗಿ ಜೀವನ‌ ನರಕ ಸದೃಶ ಆದದ್ದಿದೆ.</p>



<p>BBL ತ್ವಚೆಯ ಮೇಲ್ಬಾಗದ ಬಣ್ಣ ಬದಲಾಯಿಸಿ ಬಿಡುತ್ತದೆ.&nbsp; ಆ ಭಾಗವು ಊಹಿದಲಾರದಂತ ಅತಿಯಾದ ನೋವು ಕೊಡುತ್ತದೆ.&nbsp;</p>



<p>ಸಿಲಿಕಾನ್ ಬಟ್ಸ್ ಅನ್ನು ಒಮ್ಮೆ ಸೇರಿಸಿದ ಮೇಲೆ ಅದನ್ನು ತೆಗೆದು ಹಾಕಲು ವೈದ್ಯಕೀಯ ವೆಚ್ಚ ೨ ಸಾವಿರದಿಂದ ೧೨ ಸಾವಿರ ಡಾಲರ್ ಆಗುವುದು.&nbsp;</p>



<p>ಹೊಸದಾಗಿ ಇದೀಗ ಕಾಲೆಜಿನ್ ಇಂಜೆಕ್ಷನ್ ನೀಡಿ ಬಂಪ್ ಬೆಳೆಸುವ ಕ್ರಮವೂ ಜಾರಿಯಲ್ಲಿದೆ.&nbsp; ಒಟ್ಟಿನಲ್ಲಿ ಹೇಳುವುದಾದರೆ ಇವೆಲ್ಲಾ ವಿಧಾನವೂ ಹೆಣ್ತನಕ್ಕೆ ಅಗತ್ಯವೇನೂ ಅಲ್ಲ.&nbsp; ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇಂತಹ ವಿಪರೀತ ಚಿಕಿತ್ಸೆಗಳು</p>



<p>ಆರೋಗ್ಯದ ಸಮಸ್ಯೆಗಳನ್ನು ಸಹ ಹೊತ್ತು ತಂದಿವೆ.</p>



<p>ಚಿಕನ್ ಬಟ್ಸ್ ಶಾಟ್ಸ್ ಎನ್ನುವ ಮತ್ತೊಂದು ವಿಧಾನ ದಕ್ಷಿಣ ಆಫ್ರಿಕಾ ದೇಶೀಯ ಮಹಿಳೆಯರಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.&nbsp; ಇದನ್ನು ಮ್ಯಾಗಿ ಬಟ್ ಟ್ರಿಕ್ ಅಂತಲೂ ಕರೆಯುತ್ತಾರೆ.&nbsp; ಚಿಕನ್&nbsp; ದ್ರಾವಣವನ್ನು ಸಿದ್ದಪಡಿಸಿ ಅದನ್ನು ಗುದದ್ವಾರದ ಮೂಲಕ ಮಹಿಳೆಯರ ದೇಹಕ್ಕೆ ಸೇರಿಸುವ ಮೂಲಕ ಚಿಕನ್ ಬಟ್ಸ್ ವಿಧಾನ ನಡೆಸುತ್ತಾರೆ.&nbsp; ಇದು ಸಹ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ.</p>



<p>ದಕ್ಷಿಣ ಆಫ್ರಿಕಾ ಖಂಡದ ಕೆಲವು ದೇಶಗಳಲ್ಲಿ ಹೆಂಗಸರು ಸಣ್ಣದಾದ ದೇಹ ಹೊಂದಿರುವುದಕ್ಕೆ ಇಷ್ಟಪಡುವುದಿಲ್ಲ.&nbsp; ಏಕೆಂದರೆ ಸಣಕಲಿ‌ ಎಂದು ಆಡಿಕೊಳ್ಳುವರಂತೆ.&nbsp; ತುಂಬಿದ ತೊಡೆಗಳು ಮತ್ತು ಗುಂಡಾದ ನಿತಂಬಗಳನ್ನು ಹೊಂದಿರಲು ಮಹಿಳೆಯರಲ್ಲಿ ಕೆಲವರು ಆಸಕ್ತಿ ವಹಿಸುತ್ತಾರೆ.&nbsp; ಹೀಗಾಗಿ ಈ ಎಲ್ಲಾ ಕೃತಕ ವಿಧಾನಗಳು ಸಹ ಮಹಿಳೆಯರಿಗೆ ಆರೋಗ್ಯದ ಸಮಸ್ಯೆಗಳನ್ನು ಹೊತ್ತು ತರುವಂತವೇ ಆಗಿವೆ.</p>



<p>ಮಹಿಳೆಯರು ಹುಟ್ಟಿದ ರೀತಿಯಲ್ಲಿ ಬದುಕು ನಡೆಸುವ ಅವಕಾಶ ಇಲ್ಲವೇ? ಎಂಬ ಮೂಲಭೂತ ಪ್ರಶ್ನೆ ಇಂತಹ ಸಮಸ್ಯೆಗಳನ್ನು ಕಂಡಾಗ ಕಾಡಿದ್ದಿದೆ.&nbsp; ಈ ಎಲ್ಲಾ ಸವಾಲುಗಳನ್ನು ಸಹ ಜಾಗತಿಕವಾಗಿ ಮಹಿಳೆಯರು ಎದುರಿಸುತ್ತಲೇ ಇದ್ದಾರೆ.</p>



<p>ಇತ್ತೀಚೆಗೆ ರಿಹಾನಾ ಎಂಬ ಪಾಪ್ ಹಾಡುಗಾರ್ತಿ ಭಾರತಕ್ಕೆ ಬಂದು ಹಾಡಿ ಪಾಡಿ ಹೋದರು.&nbsp; ಆದರೆ ಇವರಿಗೆ ಈ BBL ಖಯಾಲಿ ಇಲ್ಲದಿರುವುದು ಸಂತೋಷದ ವಿಚಾರ.&nbsp;</p>



<p>ಇದೇ ರೀತಿ ಇತ್ತೀಚೆಗೆ ಹಾಲಿವುಡ್ ನಲ್ಲೇ&nbsp; BBL ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಮಹಿಳೆಯರಿಗೆ ಬುದ್ದಿಮಾತು ಹೇಳಿದ್ದಾರೆ.&nbsp; BBL ನಿಂತ ಸಾವಿಗೀಡಾದ ಮಹಿಳೆಯರ ಸಂಖ್ಯೆ ಹೆಚ್ಚೇ ಇರುವುದರಿಂದ ಹಾಲಿವುಡ್ ಸೆಲೆಬ್ರಿಟಿಗಳು ಈ ರೀತಿ ಸಾಮಾನ್ಯ ಮಹಿಳೆಯರಿಗೆ ಬಟ್ಸ್ ಮಾರ್ಪಾಡಿಗೆ ಒಳಗಾಗದಂತೆ ಬುದ್ದಿ ಹೇಳಿ ಮಾದರಿ ಎನಿಸುತ್ತಿದ್ದಾರೆ.&nbsp; ಏಕೆಂದರೆ ಇವರಿಂದಲೇ ಅನೇಕ ಫ್ಯಾಷನ್ ಟ್ರೆಂಡ್ ಹುಟ್ಟುತ್ತವೆ.&nbsp;</p>



<p>ಮಹಿಳೆಯ ವ್ಯಕ್ತಿತ್ವ ಹೊರಗಿನ ಮಾರ್ಪಾಡು ಮಾಡುವುದರಿಂದ ಬದಲಾಗುವುದಿಲ್ಲ.&nbsp; ಬದಲಿಗೆ ಮಹಿಳೆಯರಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ, ಉದ್ಯೋಗ, ಅವಕಾಶ ಒದಗಿಸಿದಾಗ ಬದಲಾಗುತ್ತದೆ.</p>
]]></content:encoded>
					
		
		
			</item>
		<item>
		<title>ಗಂಡೆಂಬ ಬೇಡಿಕೆ : ಕಳ್ಳುಬಳ್ಳಿ 9</title>
		<link>https://peepalmedia.com/should-all-three-chicks-laid-be-female/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 25 Mar 2024 05:56:08 +0000</pubDate>
				<category><![CDATA[ಅಂಕಣ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[ವಿಶೇಷ]]></category>
		<category><![CDATA[Kalluballi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nalina chikkamagaluru]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=37451</guid>

					<description><![CDATA[&#8220;ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ..&#8221; ನಳಿನಾ ಚಿಕ್ಕಮಗಳೂರು ಅವರ ಕಳ್ಳುಬಳ್ಳಿ 9 ನೇ ಅಧ್ಯಾಯ ಮೊನ್ನೆ ಬೆಳಿಗ್ಗೆ ಇನ್ನೂ ಒಂಬತ್ತು ಗಂಟೆ ಕಳೆದಿರಲಿಲ್ಲ.&#160; ನನಗೆ ಪರೀಕ್ಷೆಯ ಒತ್ತಡ ಇದ್ದುದರಿಂದ ಲಗುಬಗೆಯಿಂದ ಹತ್ತಿರದ ಹೊಟೇಲ್ ಒಂದಕ್ಕೆ ತಿಂಡಿ ಕಟ್ಟಿಸಿಕೊಂಡು ಬರಲು ಹೋಗಿದ್ದೆ.&#160; ಆರ್ಡರ್ ತಿಳಿಸಿ ಟೇಬಲ್ ಬಳಿ ಕೂತಿದ್ದಾಗ ಎಳೆ ಬೆಕ್ಕಿನ ದ್ವನಿ ತೇಲಿ ಬಂತು.&#160; [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>&#8220;ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.  ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?  ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ..&#8221; ನಳಿನಾ ಚಿಕ್ಕಮಗಳೂರು ಅವರ ಕಳ್ಳುಬಳ್ಳಿ 9 ನೇ ಅಧ್ಯಾಯ</p>
</blockquote>



<p>ಮೊನ್ನೆ ಬೆಳಿಗ್ಗೆ ಇನ್ನೂ ಒಂಬತ್ತು ಗಂಟೆ ಕಳೆದಿರಲಿಲ್ಲ.&nbsp; ನನಗೆ ಪರೀಕ್ಷೆಯ ಒತ್ತಡ ಇದ್ದುದರಿಂದ ಲಗುಬಗೆಯಿಂದ ಹತ್ತಿರದ ಹೊಟೇಲ್ ಒಂದಕ್ಕೆ ತಿಂಡಿ ಕಟ್ಟಿಸಿಕೊಂಡು ಬರಲು ಹೋಗಿದ್ದೆ.&nbsp; ಆರ್ಡರ್ ತಿಳಿಸಿ ಟೇಬಲ್ ಬಳಿ ಕೂತಿದ್ದಾಗ ಎಳೆ ಬೆಕ್ಕಿನ ದ್ವನಿ ತೇಲಿ ಬಂತು.&nbsp; ಬಲಕ್ಕೆ ಹೊರಳಿದಾಗ ಮೆಲ್ಲಗೆ ಹೆಜ್ಜೆ ಇಡುತ್ತಾ ಪುಟಾಣಿ ಬೆಕ್ಕು ರಾಗ ಹಾಡಿ ನಡೆದಾಡುತ್ತಿದ್ದದು ಕಂಡು ಬಂತು.&nbsp; ಕ್ರೀಮ್ ಬಣ್ಣದ ಪಟ್ಟಾ ಪಟ್ಟೆ ಮೈಯ ಅದರ ಅಂದವನ್ನು ಹೊಗಳುತ್ತಾ ಖುಷಿಪಟ್ಟೆ.&nbsp;</p>



<p>ಹೊಟೇಲ್ ಬಾಗಿನಲ್ಲಿ ನಾಲ್ಕಾರು ಪುರುಷರು ಮಾತನಾಡುತ್ತಿದ್ದರು.&nbsp; ಅದೂ ಬೆಕ್ಕಿನ ಬಗ್ಗೆನೆ.&nbsp; ಅಷ್ಟರಲ್ಲಿ ಬೆಕ್ಕು ಆ ಮಧ್ಯವಯಸ್ಕ ಪುರುಷರ ಕಾಲ ಬಳಿ ಕಾಣಿಸಿಕೊಂಡಿತು.&nbsp; ಅದರಲ್ಲೊಬ್ಬಾತ ‘ಅವನವ್ವನ್ನಾ … ಹಾಕಿರೋ ಮೂರೂ ಹೆಣ್ಣು ಮರಿನೇ ಆಗಬೇಕಾ?&nbsp; ಅಲ್ಲಾ ಒಂದಾರಾ ಗಂಡಾಗಬಾರದಿತ್ತಾ’? ಎಂದು ಜೋರಾಗೇ ಹೇಳಿದಾಗ ಹಿಂದೆ ತಿರುಗಿ, ಆತನ ಮುಖವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ.&nbsp; ಆತನ ಅಪೇಕ್ಷೆ ಗಂಡೆಂಬ ಬೇಡಿಕೆಯಾಗಿತ್ತು ಎಂಬುದು ಅತ್ಯಂತ ಸ್ಪಷ್ಟವಾಗುತ್ತಿತ್ತು.</p>



<p>ಹೆಣ್ಣು ಮರಿ ಹುಟ್ಟಿ ಬಂದರೆ ಮತ್ತೆಮತ್ತೆ ಮರಿ ಹಾಕುತ್ತದೆ.&nbsp; ಅಗ ಮನೆ ತುಂಬಾ ಮರಿಗಳು ಎನ್ನುವ ಬೇಸರ ಇರಬಹುದೇನೋ?&nbsp; ಅದೇ ಗಂಡಾದರೆ ಈ ಯಾವುದೇ ತಲೆಬಿಸಿ ಇರೋದೆಲ್ಲವಲ್ಲ.</p>



<p>ಸಾಕು ಪ್ರಾಣಿ ಪ್ರಪಂಚದಲ್ಲಿ ಸಹ ಗಂಡಿನ ಬೇಡಿಕೆ ಇದ್ದೇ ಇದೆ.&nbsp; ಇದು ಹೆಚ್ಚು ಕಾಣಿಸೋದು ಸಾಕು ನಾಯಿ ವಿಚಾರದಲ್ಲಿ. ಸಾಕಿದ&nbsp; ನಾಯಿಗೆ ಮರಿ ಆಗಬಾರದು ಅಂತಲೇ ಸಂತಾನ ಹರಣ ಇಂಜೆಕ್ಷನ್ ಕೊಡಿಸುವುದು ಕಂಡಿದ್ದೇವೆ.&nbsp; ಇದೆಲ್ಲಾ ಮರಿ ಸಾಕುವ ಗೊಜಿಗೆ ಹೋಗದ ಮನಸ್ಥಿತಿಗಳಿಂದಲ್ಲವೇ?&nbsp;</p>



<p>ಹಸು, ಎಮ್ಮೆಗಳು ಕರು ಹಾಕಿದಾಗ ಹೆಣ್ಣೇ ಹುಟ್ಟಲಿ ಎಂದು ದೇವರು ಬೇಡುವ ಜನರು ಇದ್ದಾರೆ.&nbsp; ಆಗ ಮನೆಯಲ್ಲಿ ಕರಾವು ಇನ್ನೂ ಅಧಿಕವಾಗಿ ಹಣದ ಗಳಿಕೆ ಸಹ ಸಾಧ್ಯವಿದೆ ಎಂಬ ಹಿನ್ನೆಲೆಯಲ್ಲಿ.&nbsp;</p>



<p>ನಿಸರ್ಗಕ್ಕೆ ಮಾತ್ರ ಹೆಣ್ಣು ಗಂಡೆಂಬ ಬೇಧ ಇಲ್ಲವೇ ಇಲ್ಲ.&nbsp; ಮನುಷ್ಯ ಯಾವಾಗಲೂ ತನ್ನ ಆದ್ಯತೆಯಂತೆಯೇ ಬದುಕಲು ನೋಡಿತ್ತಾನೆ.&nbsp; ಅವನಿಗೆ ಬೇಕಾದ್ದು ಮಾತ್ರ ಬೇಕು, ಬೇಡದ್ದು ಬೇಡವೇ ಬೇಡ.</p>



<p>ಎಮ್ಮೆ, ಹಸು ಕರು ಹಾಕಿದಾಗ ಗಂಡಾದರೆ ಅದು ಅಷ್ಟೇನು ಉಪಯುಕ್ತ ಅಲ್ಲ, ಮನೆ ತುಂಬಾ ಎತ್ತು, ಹೋರಿ ಏತಕ್ಕೆ?&nbsp; ಊಳಲು ಸರಿಯಾದ ಎರಡು ಹೋರಿಗಳು ಸಂತೆಯಿಂದ ತಂದು ಇರಿಸಿಕೊಂಡರೆ ಸಾಕು ಎನ್ನುವ ಮನೋಭಾವನೆ ಇದ್ದವರೂ ಇರುತ್ತಾರೆ.&nbsp; ಗಂಡು ಕರುಗಳನ್ನು ಬೇರೆಯವರ ಉಪಯೋಗಕ್ಕೆ ಮಾರುವುದೂ ಹೆಚ್ಚು.&nbsp; ಕಟುಕರೂ ಸಹ ಗಂಡು ಕರುವಿನ ಖರೀದಿಗಾರರೇ.</p>



<p>ರಸ್ತೆಯ ಬದಿಯಲ್ಲಿ ಸಹ ಹೆಣ್ಣು ನಾಯಿಗಳು ಅಧಿಕ ಇರುವ ಏರಿಯಾಗಳಲ್ಲಿ ಕಡೆಗೆ ನಾಯಿ ಕಾಟ ಮೊದಲಾದ ಕಾರಣಗಳಿಂದ ಆ ಹೆಣ್ಣು ಮರಿಗಳನ್ನು ಹೇಗಾದರೂ ದೂರ ಮಾಡುವವರಿದ್ದಾರೆ.&nbsp;</p>



<p>ನನ್ನ ಬಾಲ್ಯದಲ್ಲಿ ವಾಸವಿದ್ದ ಚಿಕ್ಕಮಗಳೂರು ಪಕ್ಕದ ಹಳ್ಳಿಯಲ್ಲಿ ನನ್ನ ಜೊತೆಯ ಆಟಗಾರರು ಒಂದು ದಿನ ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ಊರಿನ ಕೆರೆಯ ಬಳಿಗೆ ಹೋಗಲು ಪುಸಲಾಯಿಸಿದರು.&nbsp; ನಾಕಾರು ಮಕ್ಕಳೊಡನೆ ನಾನೂ ನೇರಳಕಟ್ಟೆಯ ಬಳಿಗೆ ಹೋದಾಗ, ಪ್ಲಾಸ್ಟಿಕ್ ಚೀಲದಿಂದ ನಾಯೊ ಮರಿಗಳನ್ನು ಹೊರಹೆ ತೆಗೆದ ಹುಡುಗರು ಒಂದೊಂದನ್ನೇ ಕತ್ತಿನ ಬಳಿ ಚರ್ಮದಿಂದ ಹಿಡಿದು ನೀರಿನೊಳಗೆ ಎಸೆದರು.&nbsp; ಆ ಹೆಣ್ಣು ಮರಿಗಳು ಕಾಲು ಆಡಿಸುತ್ತಾ ನೀರಿನೊಳಗೆ ಮುಳುಗಿದಾಗ ಅತಿ ಸುಂದರವಾಗಿ ಕಾಣಿಸಿದುವು‌.&nbsp; ಏನೋ ಒಂಥರ ಖಾಲಿ ಭಾವನೆಯಿಂದ ಕಣ್ಣು ತುಂಬಿ ಬಂತು.&nbsp; ಆ ಹುಡುಗರೇಕೆ ಹೀಗೆ ಮಾಡಿದರೆಂದು ಕೇಳಿದರೆ, ಅವರಿಗೆ ಮನೆಯಲ್ಲಿ ತಾಕೀತು ಮಾಡಲಾಗಿತ್ತು ಎಂದಿದ್ದರು.</p>



<p>ಲೋಕೋ ಭಿನ್ನ ರುಚಿ.&nbsp; ಹೆಣ್ಣು ಗಂಡೆಂಬ ಬೇಧ ಮಾಡುವ ಹಕ್ಕು ಯಾರಿಗೂ ಇಲ್ಲ.&nbsp; ಆದರೆ ಕಳೆದ ವರ್ಷ ಬೀದಿಯಲ್ಲಿ ಹೆಚ್ಚು ನಾಯಿಗಳಿವೆ ಅಂತ ಅನಾಮಿಕರ್ಯಾರೋ ವಿಷವಿಕ್ಕಿ ನಾಲ್ಕಾರು ಮರಿ ಕೊಂದರು.&nbsp; ಅವುಗಳಲ್ಲಿ ಹೆಣ್ಣು ಗಂಡು ಎರಡೂ ಇದ್ದಿರಬಹುದು.&nbsp; ಏಕೆಂದರೆ ತಿಂಡಿಗೆ ಬೆರೆಸಿದ್ದ ವಿಷ ಎಲ್ಲವೂ ತಿಂದಿದ್ದವು.&nbsp; ನನ್ನ ನಾಲ್ಕು ವರ್ಷದ ಮಗಳಿಗೆ ಈ ನಾಯಿ ಮರಿಗಳ ಸಾವಿಗೆ ಕಾರಣ ವಿವರಿಸುವುದು ಬಹು ಕಷ್ಟಸಾಧ್ಯವಾದ ವಿಚಾರವಾಗಿತ್ತು.&nbsp; ಮಕ್ಕಳಿಗೆ ಪ್ರಾಣಿ ಅಂದರೆ ಎಲ್ಲಾ ಒಂದೇ.&nbsp; ಹೆಣ್ಣು ಗಂಡು ಎಂಬ ಬೇಧವೂ ತಿಳಿಯದು.&nbsp; ಈ ಬೇಧಗಳನ್ನು ನಾವು ಅರ್ಥಮಾಡಿಸಿ&nbsp; ತಿಳಿಸುವುದು ಬಹು ಕಷ್ಟ.&nbsp; ಆದರೆ ಅದರ ಪರಿಣಾಮಗಳನ್ನು ಮಾತ್ರ ತೋರಿಸಬಹುದು.</p>



<p>ಪ್ರಾಣಿ ಲೋಕದಲ್ಲೂ ಹೆಣ್ಣು ಗಂಡಿನ ಬೇಧ ಎಣಿಸುವುದು ಸಲ್ಲ.&nbsp; ಪ್ರತಿಯೊಂದು ಜೀವಿಗೂ ತನ್ನದೇ ಆದ ಬದುಕುವ ಹಕ್ಕು ಇದ್ದೇ ಇದೆ.&nbsp; ಅದನ್ನು ಕಸಿಯುವ ಮನುಜನದು ಮಿತಿ ಮೀರಿದ ಸ್ವಾರ್ಥ.&nbsp; ಇಂಥ ಸ್ವಾರ್ಥ ಮೀರಿ ಮಾನವೀಯತೆಯ ಆದರ್ಶ ಬೇಳೆಯಲಿ.</p>
]]></content:encoded>
					
		
		
			</item>
		<item>
		<title>ಕಳ್ಳುಬಳ್ಳಿ &#8211; ೩ : ಮದುವೆಯ ಈ ಬಂಧ</title>
		<link>https://peepalmedia.com/kalluballi-3-about-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 29 Jan 2024 10:56:02 +0000</pubDate>
				<category><![CDATA[ಅಂಕಣ]]></category>
		<category><![CDATA[kallu balli]]></category>
		<category><![CDATA[karnataka]]></category>
		<category><![CDATA[nalina chikkamagaluru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35444</guid>

					<description><![CDATA[ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ ಋಣವಿರಬೇಕು ಎನ್ನುತ್ತಾರೆ.  ಸಮಾಜ ಗಂಡು ಹೆಣ್ಣಿನ ಮನೋಕಾಮನೆಗಳ ಪೂರೈಕೆಗಾಗಿಯೇ ವಿಧಿಸೂತ್ರವಾದ ಮದುವೆ ಎಂಬ ವ್ಯವಸ್ಥೆ ಹುಟ್ಟು ಹಾಕಿತು.  ಮದುವೆಯ ಅನುಬಂಧವೇ ಅಂಥದ್ದು.&#160; ಕ್ಷಮೆ ಮತ್ತು ಕ್ಷಮಿಸುವ ಔದಾರ್ಯ ದೊಡ್ಡದು.&#160; ಸುಖ ದುಃಖ ಏನೇ ಬರಲಿ ಎಲ್ಲದರಲ್ಲೂ ಈಸಬೇಕು ಇದ್ದು ಜೈಸಬೇಕು. ಒಂದು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು</p>
</blockquote>



<p>ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ ಋಣವಿರಬೇಕು ಎನ್ನುತ್ತಾರೆ.  ಸಮಾಜ ಗಂಡು ಹೆಣ್ಣಿನ ಮನೋಕಾಮನೆಗಳ ಪೂರೈಕೆಗಾಗಿಯೇ ವಿಧಿಸೂತ್ರವಾದ ಮದುವೆ ಎಂಬ ವ್ಯವಸ್ಥೆ ಹುಟ್ಟು ಹಾಕಿತು. </p>



<p>ಮದುವೆಯ ಅನುಬಂಧವೇ ಅಂಥದ್ದು.&nbsp; ಕ್ಷಮೆ ಮತ್ತು ಕ್ಷಮಿಸುವ ಔದಾರ್ಯ ದೊಡ್ಡದು.&nbsp; ಸುಖ ದುಃಖ ಏನೇ ಬರಲಿ ಎಲ್ಲದರಲ್ಲೂ ಈಸಬೇಕು ಇದ್ದು ಜೈಸಬೇಕು.</p>



<p>ಒಂದು ಗಂಡಿನ ಪುಸಲಾಯಿಸುವಿಕೆ ಇಲ್ಲದೆ ಹೆಣ್ಣೊಬ್ಬಳು ಹದ್ದು ಮೀರುವುದಿಲ್ಲ ಎನ್ನುವ ಮಾತಿದೆ.&nbsp; ಗಂಡು ಹೆಣ್ಣಿನ ಆಕರ್ಷಣೆಗೆ ಬೀಳುವ ವಯಸ್ಸು ಹದಿನಾರರದ್ದು.&nbsp; ಆದರೂ ಸಹ ಕಾಲದಿಂದ ಕಾಲಕ್ಕೆ ಈ ಆಕರ್ಷಣೆಯ ಬೆಂಕಿಯನ್ನು ತಾಳ್ಮೆ, ಸಂಯಮಗಳಿಂದ ನಂದಿಸುತ್ತಿರಬೇಕು.</p>



<p>ಗಂಡಿರಲಿ ಅಥವಾ ಹೆಣ್ಣಿರಲಿ, ಹೊಸ್ತಿಲು ದಾಟಿದವರು ಕೊಲೆಯಾಗಲೇಬೇಕೆ? ಎಡಕಲ್ಲು ಗುಡ್ಡದ ಮೇಲೆ ಎಂಬ‌ ಸಿನೆಮಾ ದಲ್ಲಿ ಯುವಕನ ಪ್ರಲೋಬನೆಗೆ ಗುರಿಯಾದ ವಿವಾಹಿತ ಸ್ತ್ರೀ ಆತನೊಂದಿಗೆ ಕೈ ಜೋಡಿಸಲಾರದೆ ಸಾವಿನ ದಾರಿ ಹಿಡಿಯುತ್ತಾಳೆ.&nbsp; ಗಂಡನ ಕ್ಷಮಿಸುವ ಔದಾರ್ಯ ಆಕೆಗೆ ತೃಪ್ತಿ ನೀಡಲಿಲ್ಲ.&nbsp;</p>



<p>ಗಂಡಾಗಲಿ ಹೆಣ್ಣಾಗಲಿ ಆಸೆಗೆ ಅಂಕುಶ&nbsp; ಮಾಡಿಟ್ಟುಕೊಳ್ಳಬೇಕು.&nbsp; ಸಮಾಜದ ಇತಿಮಿತಿಗಳನ್ನು ಅರಿತುಕೊಂಡು ಒಳ್ಳೆಯ ರೀತಿಯಲ್ಲಿ ಬದುಕುವ ಪ್ರಯತ್ನ ಮಾಡಬೇಕು.</p>



<p>ಬಂದದ್ದೆಲ್ಲಾ ಬರಲಿ, ಭಗವಂತನ ದಯವೊಂದಿರಲಿ ಎನ್ನುವ ಮನೋಭಾವ ಸ್ವಲ್ಪ ಮಟ್ಟಿಗೆ ಮಾನಸಿಕ ಸ್ಥಿತ್ಯಂತರವನ್ನು ಹಗುರ ಇರಿಸುವುದು.&nbsp; ದೇವರು, ನಂಬಿಕೆ ಅವರವರ ವೈಯಕ್ತಿಕ ಜೀವನದ ವಿಚಾರ.&nbsp;&nbsp; ಆಗುವುದು ಆಗೇ ತೀರುತ್ತದೆ.</p>



<p>ಒಮ್ಮೆ ಆದದ್ದು ಜೀವನಪೂರ್ತಿ ಆಗಲೇಬೇಕು ಎಂಬುದಿಲ್ಲ.&nbsp; ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದ ದೋಣಿಯನ್ನು ನ್ಯಾಯಯುತವಾಗಿ ನಡೆಸಿಕೊಂಡು ಹೋಗುವ ಅಧಿಕಾರವಿದ್ದೇ ಇದೆ.&nbsp; ಅದರ ಜೊತೆಗೆ ಲೀವ್ ಅಂಡ್ ಲೆಟ್ ಲೀವ್ ಎನ್ನುವ ಬಹುದೊಡ್ಡ ಮಾತನ್ನು ಸಹ ಅನುಸರಿಸಬೇಕಾದ ಅಗತ್ಯವಿದ್ದೇ ಇದೆ.&nbsp; ಕೆವಲ ದೇಹ ಸುಖ ಪಡೆಯಲು ಕೊಲೆ ಮುಂತಾದವು ನಡೆಸುವುದು ಹೇಯ.</p>



<p>ತಮ್ಮ ಚಿತ್ತ ಚಾಂಚಲ್ಯ, ದೇಹದ ಚಪಲಕ್ಕಾಗಿ ಮತ್ತೊಬ್ಬರ ಕುಟುಂಬದ ಸದಸ್ಯರನ್ನ ಕೊಲೆ ಮಾಡುವ, ಕೊಲೆ ಮಾಡುವ ಮಟ್ಟಕ್ಕೆ ಹೋಗುವುದು ಬಹಳ ಹೀನ ಕೃತ್ಯ.</p>



<p>ಮನಸ್ಸನ್ನು ಹರಿಯ ಬಿಟ್ಟಷ್ಟು ಹರಿಯುತ್ತದೆ.&nbsp; ಹಳ್ಳ ಕೊಳ್ಳ, ದಿಣ್ಣೆ, ತಗ್ಗು ಎಲ್ಲೆಡೆ ಹರಿದಾಗ ಮನಸ್ಸಿಗೆ ಅಣೆಕಟ್ಟಿನ&nbsp;&nbsp; ಶಕ್ತಿ ಇರುವುದಿಲ್ಲ.</p>



<p>ಇಂದು ಇದ್ದು ನಾಳೆ ಇಲ್ಲವಾಗುವ ಯಕಶ್ಚಿತ್ ಬದುಕಿನಲ್ಲಿ ದೇಹ ಸುಖಗಳಿಗಾಗಿ ಹಿಂದೆಬೀಳುವುದು, ಅದನ್ನೇ ಮುಂದುವರೆಸಲು ನೋಡುವುದು ಇವೆಲ್ಲಾ ಒಂದು ಹಂತದ ಮನಸ್ಥಿತಿ.&nbsp; ಸ್ವಲ್ಪ ಬೆಳೆದು ಆ ಮನಸ್ಥಿತಿ ಬಿಟ್ಟು ಹೊರಬಂದು ನೋಡಿದಾಗಲೇ ತಾವೆಲ್ಲಿ ಇದ್ದೆವು ಎಂಬುದು ಅರಿವಾಗೋದು.</p>



<p>ಕೇವಲ ದೇಹ ಪ್ರೀತಿಗೆ ಬಿದ್ದು ಉಳಿದ ಸಂಬಂಧ ಹಾಳು ಮಾಡಿಕೊಳ್ಳಲು ಯತ್ನಿಸುವುದು ಮೂರ್ಖತನದ ಪರಮಾವಧಿ.&nbsp; ಇಂಥದ್ದರಲ್ಲೇ ಖುಷಿ ಪಡೆಯುವವರು ವಿವಾಹಕ್ಕೆ ಒಗ್ಗಿಕೊಳ್ಳುವುದು ದುಸ್ತರ.&nbsp; ಆದರೆ ಅವರಿಗೆ ಸಿಗುವ ಆತ್ಮತೃಪ್ತಿ ಎಂತದ್ದೋ, ಅದನ್ನು ಅವರೇ ಅರ್ಥಮಾಡಿಕೊಳ್ಳಲು ಯತ್ನಿಸಬೇಕು.</p>



<p>ತೀರಾ ಪರಸಂಗಕ್ಕೆ ಎಳಸುವುದು ವಿಕೃತಿಯೇ ಸರಿ.&nbsp; ಪರಸಂಗದ ಗೆಂಡೆತಿಮ್ಮ ಸಿನೆಮಾದಲ್ಲಿ ಮುಗ್ದ ವ್ಯಕ್ತಿ ಪತ್ನಿಯ ವ್ಯಭಿಚಾರ ಸಹಿಸಲಾರದೆ ಸತ್ತೆ ಹೋದ.&nbsp; ಹೀಗೆ ಸತ್ತವರ ಸಂಖ್ಯೆ ದೊಡ್ಡದಿದೆ.&nbsp; ತಾವು ಧರ್ಮ ಅರ್ಥ ಕಾಮ‌ ಮೋಕ್ಷಕ್ಕಾಗಿ ನಂಬಿದ್ದ ಸಂಗಾತಿಯ ದೋಖಾ ಸಹಿಸದ ಮುಗ್ದ ಮನಸ್ಸುಗಳಿಗೆ ತಕ್ಕ ಸಂಗಾತಿಯಾಗಿ ನಡೆದುಕೊಳ್ಳುವ ಅವಶ್ಯಕತೆ ಬಹಳ ಇದೆ.&nbsp;</p>



<p>ವರ್ತಮಾನದ ತಲ್ಲಣವೆಂದರೆ ಅಪಮೌಲ್ಯಗಳನ್ನೇ ವಿಜೃಂಭಿಸುವುದು.&nbsp; ಹೀಗೇ ಒಬ್ಬರು ವಿವಾಹದ ನಂತರವೂ ಮತ್ತೊಂದು ಸಂಬಂಧ ಇರಿಸಿಕೊಂಡು ಎರೆಡನೇ ಮದುವೆಯಾದರು.&nbsp; ಎರಡನೇ ಪತ್ನಿಯ ವಿವಾಹ ಗುಟ್ಟಾಗಿತ್ತು.&nbsp; ಆಕೆ ಬೇಕೆಂತಲೇ ಫೇಸ್‌ಬುಕ್‌ ಮೊದಲಾದವುಗಳಲ್ಲಿ ತಮ್ಮ ಪತಿಯೊಂದಿಗೆ ಇದ್ದ ಫೋಟೋಗಳನ್ನು ಹಂಚಿಕೊಂಡು ಮೊದಲ ಪತ್ನಿಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದರು.&nbsp;</p>



<p>ಭಾರತೀಯ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಎಂದೋ ನಿಷೇಧಗೊಂಡಿದೆ.&nbsp; ಕಾನೂನು ಬೆಂಬಲವೂ ಇದ್ದಕ್ಕಿದೆ.&nbsp; ಹೀಗಿರುವಾಗ ಕಾನೂನಿನ ಚೌಕಟ್ಟು ಮೀರಿ ಬೇಷರತ್ತು ಸಂಬಂಧ ಇರಿಸಿಕೊಂಡು ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದು ಅದೆಷ್ಟು ಸರಿ?</p>



<p>ಕಾನೂನು ಲೀವ್ ಇನ್‌ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ಪಾಲಕರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಿದೆ.&nbsp; ಮಕ್ಕಳು ಹೇಳಿ ಕೇಳಿ ಹುಟ್ಟುವುದಿಲ್ಲ.‌‌&nbsp; ಹುಟ್ಡಿದ ಮೇಲೆ ಎಲ್ಲರೂ ಮಕ್ಕಳೇ.,&nbsp;</p>



<p>ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು.</p>



<p>ಒಂದು‌ ಗಂಡು ಮತ್ತೊಂದು ಹೆಣ್ಣು ವಿವಾಹದ ಪರಮಾರ್ಥಕ್ಕಾಗಿ ಸೇರುವುದು, ಬದುಕುವುದು ಅತ್ಯಂತ ಗೌರವಿಸಲ್ಪಡುವ ಮದುವೆ ಎಂಬ ವ್ಯವಸ್ಥೆಗೆ ತನ್ನದೇ ಆದ ಅಸ್ತಿತ್ವ ಇದೆ.  ಅದನ್ನು ಕಾನೂನು ಮಾನ್ಯ ಮಾಡಿದೆ.  ಉಳಿದದ್ದೆಲ್ಲಾ ಕಾನೂನಿನ ಮೂಲಕ ಶೂನ್ಯ ಅಥವಾ ಅನೂರ್ಜಿತ ಎನಿಸುವುದು. </p>



<p>ನಳಿನಾ ಚಿಕ್ಕಮಗಳೂರು</p>
]]></content:encoded>
					
		
		
			</item>
		<item>
		<title>ವಧು ವರರ ಹೆಚ್ ಐ ವಿ ಪರೀಕ್ಷೆಗೆ ಅಸಡ್ಡೆ ಸಲ್ಲ</title>
		<link>https://peepalmedia.com/hiv-test-of-couple-kallu-balli-column/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 22 Jan 2024 10:51:19 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[Column]]></category>
		<category><![CDATA[HIV]]></category>
		<category><![CDATA[husband]]></category>
		<category><![CDATA[india]]></category>
		<category><![CDATA[kallu balli]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[marriage]]></category>
		<category><![CDATA[nalina chikkamagaluru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[wedding]]></category>
		<category><![CDATA[wife]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35288</guid>

					<description><![CDATA[ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ. ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌ ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.</p>
</blockquote>



<p>ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌</p>



<p>ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ ಹಿತಾಸಕ್ತಿ ಪೂರೈಕೆ ಕಾರ್ಯವನ್ನು ನಡೆಸಿಕೊಂಡು ಬರುತ್ತಾರೆ. ಈ ಕಾರಣಗಳಿಗಾಗಿಯೇ ಲೈಂಗಿಕ ರೋಗಗಳು ಮನುಕುಲದ ಬೆನ್ನು ಬಿಡದಂತೆ ಕಾಡುತ್ತಲೇ ಬಂದಿವೆ. ಅವುಗಳಲ್ಲಿ ಏಡ್ಸ್ ಒಂದು ಮಹಾಮಾರಿ. ಮಹಾನಗರಗಳಲ್ಲಿ ವೇಶ್ಯಾವಾಟಿಕೆಗಳು ಇರುವ ಕೆಲವು ಏರಿಯಾಗಳೇ ಇವೆ. ಅವು ಇಂದಿಗೂ ಜೀವಂತ ಇವೆ. ರಾಜಮಹಾರಾಜರ ಕಾಲದಿಂದಲೂ ಸಹ ವೇಶ್ಯಾವಾಟಿಕೆಗಳು ಇದ್ದೇ ಇವೆ. ಹಾಗೆಯೇ ಲೈಂಗಿಕ ರೋಗಗಳು, ಗುಪ್ತ ರೋಗಗಳು ಸಹ ಇದ್ದೇ ಇವೆ.</p>



<p>ಚಿಕ್ಕ ವಯಸ್ಸಿನಲ್ಲಿಯೇ ಈ ಮಾರಕ ಲೈಂಗಿಕ ರೋಗಕ್ಕೆ ತುತ್ತಾದ ಯುವಜನತೆ ಬಹಳ ನೋವಿನ ಜೀವನ ನಡೆಸುತ್ತಿದೆ.</p>



<p>ಇನ್ನು ಕರ್ನಾಟಕದ ಅಂಕಿ ಸಂಖ್ಯೆ ಗಮನಿಸಿದರೆ ಬೆಳಗಾವಿಯಲ್ಲಿ ಮೂವತ್ತೆಂಟು ಸಾವಿರ ಮಂದಿಗೆ ಹೆಚ್ ಐವಿ ಪಾಸಿಟಿವ್ ಇದೆ. ಇವರು ನೊಂದಾಯಿತ ಏಡ್ಸ್ ರೋಗಿಗಳು. ಅಲ್ಲಿಯ ಒಟ್ಟು ಜನಸಂಖ್ಯೆ ಸುಮಾರು ೨೭ ಲಕ್ಷವಿದೆ. ಇವರಲ್ಲಿಯೇ ಇಪ್ಪತ್ತು ಸಾವಿರ ವಿಧವೆಯರಿದ್ದಾರೆ. ಇವರು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಹ ಇದ್ದು ಇವರ ಪತಿ ವಿವಾಹದ ಒಂದೆರಡು ವರ್ಷಗಳಲ್ಲಿ ಏಡ್ಸ್ ರೋಗದಿಂದಾಗೇ ತೀರಿಹೋಗಿದ್ದಾರೆ.</p>



<p>ಹೀಗೆ ಏಡ್ಸ್ ಹಬ್ಬಲು ಕಾರಣ ಅಸುರಕ್ಷಿತ ಲೈಂಗಿಕ ಸಂಪರ್ಕ. ಕಾಂಡೂಂ ಇಲ್ಲದೆಯೇ ಸೆಕ್ಸ್ ಮಾಡಬೇಕೆಂದು ಒತ್ತಾಯಿಸುವ ಕ್ಲೈಂಟ್ ಗಳು ಹೆಚ್ಚಿನ ಹಣದ ಆಮಿಶ ತೋರಿದ್ದರು ಎಂಬುದು ಹಲವಾರು ಏಡ್ಸ್ ರೋಗಿಗಳ ಅಳಲು.</p>



<p>ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ವಿದ್ಯಾರ್ಥಿಗಳು ಏಡ್ಸ್ ಬಾಧಿತರಾಗುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಏಡ್ಸ್ ರೋಗ ಪೀಡಿತರಾಗುತ್ತಿದೆ ಯುವಜನತೆ.</p>



<p>ಮದುವೆಗೆ ಮುಂಚೆ ವಧು ವರರ ಹೆಚ್ ಐ ವಿ ಪರೀಕ್ಷೆ ಕಡ್ಡಾಯವಾಗುವುದು ಯಾವಾಗಲೋ ಗೊತ್ತಿಲ್ಲ. ಆದರೆ ಹಿರಿಯರು ಮಾಡಿದ ಮದುವೆ ನಂಬಿ ನೂರಾರು ಯುವತಿಯರು ಏಡ್ಸ್ ಗೆ ಬಲಿಯಾಗಿದ್ದುಂಟು. ಇತ್ತ ಪತಿಯೂ ಇಲ್ಲ, ಜೊತೆಗೆ ಏಡ್ಸ್ ರೋಗವೂ ಹಬ್ಬಿ ದುರ್ಬಲರಾಗುವ ನವವಿವಾಹಿತೆಯರ ಸಂಖ್ಯೆ ಸಾವಿರಾರಿದೆ.</p>



<p>ಸಂಯಮ ಯುವಜನತೆಯ ಹಾಡಾಗಬೇಕು. ಆಗಲೇ ಅವರು ಆದರ್ಶಯುತ ಜೀವನ ನಡೆಸಲು ಅವಕಾಶ ಒದಗುತ್ತದೆ.</p>



<p>ಸಂಯಮದ‌ ಬದುಕಿಗಾಗಿ ನಮಗೆ ಆದರ್ಶಪ್ರಾಯವಾದ ಸ್ವಾಮಿ ವಿವೇಕಾನಂದರು ಕಸಲ್ಲ</p>



<p>ದೇಶ ಮೀರಿ ನಿಲ್ಲುವ ಸಾಧಕ. ಯುವ ಜನತೆ ಇವರ ಬದುಕನ್ನು ಹತ್ತಿರದಿಂದ ನೋಡಿ, ಗ್ರಹಿಸಿ ಓದಬೇಕು. ಆಗಲೇ ವೈಯಕ್ತಿಕ ಜೀವನದಲ್ಲಿ ಸಹ ಬದಲಾವಣೆ ಸಾಧ್ಯವಿದೆ.</p>



<p>ಮದುವೆಗೆ ಮುನ್ನ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೆ ಸಂಯಮದಿಂದ ವರ್ತಿಸಿ ತಮ್ಮ ಯೌವನ ಮತ್ತು ಬದುಕನ್ನು ಶಕ್ತಿಯುತವಾಗಿ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ.</p>



<p>ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.</p>



<p>ಏಡ್ಸ್ ಬಾಧಿತರಿಗೆ ಪ್ರೀತಿ‌ಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವರಿಗೂ ಬದುಕುವ ಅವಕಾಶ ಕಲ್ಪಿಸಿ ಕೊಡಬೇಕು. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿ ಬದುಕಿನೆಡೆಗೆ ಸೆಳೆಯಬೇಕು.</p>



<p>ಏಡ್ಸ್ ಬಾಧಿತ ಇಬ್ಬರು ದಂಪತಿಗಳು ಧೈರ್ಯದಿಂದ ಸಾವನ್ನು ಎದುರಿಸಿ ಮೂವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ್ದಾರೆ.‌‌ ಇವರನ್ನು ಕಂಡಾಗ ಸಮಸ್ಯೆ ಇರದ ಅದೆಷ್ಟೋ ಗಂಡ ಹೆಂಡಿರು ಅನವಶ್ಯಕ ಜೀವನ ನರಕ‌ ಮಾಡಿಕೊಂಡಿರುವುದು ನೆನಪಾಗುತ್ತದೆ. ಪರಸ್ಪರ ಸಂಗಾತಿ ಪ್ರೀತಿ, ಸಮಯಕ್ಕೆ ಸರಿಯಾದ ಔಷಧಿ ಸೇವನೆ, ಆರೋಗ್ಯಕರ ಅಭ್ಯಾಸಗಳು ಈ‌ ದಂಪತಿಯನ್ನು ಸಾವಿನ ದವಡೆಯಿಂದ ಪಾರಾಗಿಸಿವೆ ಎನ್ನಬಹುದು.</p>



<p>ಏಡ್ಸ್ ಬಾರದಂತೆ ತಡೆಯಬೇಕಾದ್ದು ಮೊದಲ ಕಾರ್ಯ, ಹೀಗಾಗಿ ವಿವಾಹವಾಗುವವರ ಏಡ್ಸ್ ನೆಗೆಟಿವ್ ವರದಿ‌ ಪಡೆಯುವುದು ಅತೀ ಅವಶ್ಯಕ. ಮುಂದೆ ರೋಗ ಇದ್ದವರು ಸರಿಯಾದ ಚಿಕಿತ್ಸೆ ಪಡೆದು ಆತ್ಮವಿಶ್ವಾಸದಿಂದ ದಿಟ್ಟ ಜೀವನ ನಡೆಸಬೇಕು.</p>



<p style="font-size:20px"><strong>ಲೇಖಕರು:</strong> ನಳಿನಾ ಚಿಕ್ಕಮಗಳೂರು</p>
]]></content:encoded>
					
		
		
			</item>
	</channel>
</rss>
