<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Nalini Chikkamagaluru &#8211; Peepal Media</title>
	<atom:link href="https://peepalmedia.com/tag/nalini-chikkamagaluru/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 15 Jan 2024 03:53:42 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Nalini Chikkamagaluru &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಳ್ಳುಬಳ್ಳಿ -2 : ಕ್ರಾಂತಿಯ ಉಪಾಸನೆ ಸಂಕ್ರಾಂತಿ</title>
		<link>https://peepalmedia.com/revolution-worship-sankranti/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 15 Jan 2024 03:51:46 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[Kalluballi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Nalini Chikkamagaluru]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34981</guid>

					<description><![CDATA[ಸಂಕ್ರಾಂತಿಯ ದಿವಸ ಭೂಮಿಯ ಪಥವೇ ಬದಲಾಯಿಸುವ ಪರ್ವ ಕಾಲ. ಮನುಷ್ಯಜೀವಿಯೂ ತನ್ನ ಬದುಕಿನ ನಡೆಯನ್ನು ಬದಲಿಸುವತ್ತ ಮನಸ್ಸು ಮಾಡಲು ಪ್ರಕೃತಿಯ ಮುಕ್ತ ಆಹ್ವಾನ. ನಿನ್ನರಿವೇ ನಿನಗೆ ದಾರಿದೀಪ. ಇದೇ ಮುಂದೆ ಇತರರ ಒಳ ಹೊಕ್ಕು ಅವರ ಬದುಕಿಗೂ ದಿಟದ ದೀವಿಗೆಯಾಗುವುಂಟು. ಹೀಗೆ ಒಳ್ಳೆಯ ಚಿಂತನೆಗಳು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡುತ್ತವೆ. ಸಚ್ಚರಿತ್ರೆ, ಸದಾಚಾರ ಸಂಪನ್ನತೆ, ತನ್ನಂತೆ ಪರರನ್ನು ಸಮಾನವಾಗಿ ಆದರಿಸುವ ಗುಣಗಳು, ಜಾತಿ, ಧರ್ಮ, ಜಾತಿ-ಪಂಗಡ, ಬಣ್ಣ, ಅಂತಸ್ತು, ಲಿಂಗ ಮೊದಲಾದ ಭಿನ್ನ ಭಾವಗಳನ್ನು ಮೀರಿ ಮನುಷ್ಯ [&#8230;]]]></description>
										<content:encoded><![CDATA[
<p>ಸಂಕ್ರಾಂತಿಯ ದಿವಸ ಭೂಮಿಯ ಪಥವೇ ಬದಲಾಯಿಸುವ ಪರ್ವ ಕಾಲ. ಮನುಷ್ಯಜೀವಿಯೂ ತನ್ನ ಬದುಕಿನ ನಡೆಯನ್ನು ಬದಲಿಸುವತ್ತ ಮನಸ್ಸು ಮಾಡಲು ಪ್ರಕೃತಿಯ ಮುಕ್ತ ಆಹ್ವಾನ.</p>



<p>ನಿನ್ನರಿವೇ ನಿನಗೆ ದಾರಿದೀಪ. ಇದೇ ಮುಂದೆ ಇತರರ ಒಳ ಹೊಕ್ಕು ಅವರ ಬದುಕಿಗೂ ದಿಟದ ದೀವಿಗೆಯಾಗುವುಂಟು. ಹೀಗೆ ಒಳ್ಳೆಯ ಚಿಂತನೆಗಳು ವಿಚಾರ ಕ್ರಾಂತಿಗೆ ಆಹ್ವಾನವನ್ನು ನೀಡುತ್ತವೆ.</p>



<p>ಸಚ್ಚರಿತ್ರೆ, ಸದಾಚಾರ ಸಂಪನ್ನತೆ, ತನ್ನಂತೆ ಪರರನ್ನು ಸಮಾನವಾಗಿ ಆದರಿಸುವ ಗುಣಗಳು, ಜಾತಿ, ಧರ್ಮ, ಜಾತಿ-ಪಂಗಡ, ಬಣ್ಣ, ಅಂತಸ್ತು, ಲಿಂಗ ಮೊದಲಾದ ಭಿನ್ನ ಭಾವಗಳನ್ನು ಮೀರಿ ಮನುಷ್ಯ ಮನುಷ್ಯ ಮಾತ್ರವಾಗಿ ಪ್ರೀತಿಸುವ ಗುಣಗಳು ಮನುಷ್ಯನನ್ನು ಮಹಾನತೆಗೆ ಕೊಂಡೊಯ್ಯುತ್ತವೆ.</p>



<p>ಬಡತನ, ದಾರಿದ್ರ್ಯ, ತುತ್ತು ಅನ್ನಕ್ಕಾಗಿ ತಾತ್ವಾರ, ದುಡಿಯುವ ಮನಸ್ಸಿದ್ದರೂ ದುಡಿಯುವ ಕೈನ ಕೆಲಸ ಕಿತ್ತುಕೊಳ್ಳುವ ದುಷ್ಟ ಶಕ್ತಿಗಳು, ಮತಭ್ರಾಂತಿಯಲ್ಲೇ ಕೊಳೆಯುವ ಮೂಢಮತಿಗಳು ಇಲ್ಲೆಲ್ಲಾ ವಿಚಾರ ಕ್ರಾಂತಿಯ ಆಹ್ವಾನವಾಗಬೇಕಿದೆ.</p>



<p>ವಿಚಾರಕ್ರಾಂತಿ ಮತ್ತು ಮತದಿಂದ ಉಂಟಾದ ಮತಿಭ್ರಮಣೆ ಕಳೆಯಲು, ವಿಶ್ವಮಾನವತೆಯ ಕಡೆಗೆ ಸಂಚರಿಸಲು ಸಂ-ಕ್ರಾಂತಿಯ ಅವಶ್ಯಕತೆ ಇದ್ದೇ ಇದೆ. ರಾಷ್ಟ್ರಕವಿ ಕುವೆಂಪು ವಿರಚಿತ ವಿಚಾರ ಸಾಹಿತ್ಯ ಇದೇ ಸಕ್ರಾಂತಿಯಲಿ ಡಮರಿನಂತೆ ಸದ್ದು ಮಾಡಬೇಕಾಗಿದೆ.</p>



<p>ವಿಚಾರ ಸಾಹಿತ್ಯ ಓದಿದಷ್ಟು ಜಗತ್ತು ಕಿರಿದಾಗಿ, ಎಲ್ಲರೂ ಸಹೋದರತೆಯ ಹೊಳೆಯಲ್ಲಿ ಮಿಂದು ಹೊಸ ಬದುಕು ಪಡೆದಷ್ಟೇ ಜನ್ಮ ಪಾವನಗೊಂಡ ಅನುಭವವಾಗುತ್ತದೆ.</p>



<p>ಭೂಮಿ ತನ್ನದೇ ಆದ ದಿಕ್ಕು ಬದಲಿಸುವುದು, ಹಾಗೆಯೇ ಮನುಷ್ಯನ ಮೆದುಳು ಸಹ ತನ್ನ ವಿಚಾರದ ದಿಕ್ಕು ಬದಲಾಯಿಸಿ ನವನವೀನತೆಯಲ್ಲಿ ಬೆಳಗಬೇಕು.</p>



<p>ನಮ್ಮಲ್ಲಿ ಅಂತರ್ಗತವಾಗಿರುವ ಸನಾತನ ಧರ್ಮದ ಮೌಲ್ಯಗಳನ್ನು ಎತ್ತಿಹಿಡಿದು, ಹಿಂದೂ ಧರ್ಮದ ಅಂಟುಜಾಡ್ಯಗಳನ್ನು ಜಾಡಿಸಿದ ವೀರ ಸನ್ಯಾಸಿ ಸ್ವಾಮಿವಿವೇಕಾನಂದರವರು ಪ್ರಚಾರಪಡಿಸಿದ ವಿಚಾರಗಳು ಇಡೀ ಜಗತ್ತಿಗೇ ಸಕ್ರಾಂತಿಯಂತೆ ಕೆಲಸ ಮಾಡಿದ್ದು ಸುಳ್ಳಲ್ಲ. ಸಿಸ್ಟರ್ ನಿವೇದಿತಾ ಇದೇ ಸಂಕ್ರಾಂತಿಯ ದೀವಿಗೆಯಂತೆ ಬೆಳಗಿದರು. ಚಿಕ್ಕಮಗಳೂರಿನಲ್ಲಿ ಜನಿಸಿದ ಅಳಸಿಂಗ ಪೆರುಮಾಳ್ ಸಹ ಸ್ವಾಮಿ ವಿವೇಕಾನಂದರನ್ನ ಧರ್ಮ ಸಮ್ಮೇಳನಕ್ಕೆ ಹೋಗಲು ಒತ್ತಾಯಿಸಿ ಅವರಿಗೆ ಹಣದ ಸಹಾಯ ಮಾಡಿ ಕೃತಾರ್ಥತೆ ಮೆರೆದರು. ಐವತ್ತು ವರ್ಷದೊಳಗೆ ಇಲ್ಲವಾದ ಪೆರುಮಾಳ್ ಸ್ವಾಮಿವಿವೇಕಾನಂದರ ಅಪ್ಪಟ ಅನುಯಾಯಿಯಾಗಿ ಬೆಳಗಿದರು. ಹೀಗೆ ವಿಚಾರ ಕ್ರಾಂತಿಯನ್ನು ಜಗತ್ತಿನಲ್ಲಿ ಬೆಳಗಿದವರ ಕತೆಗಳು ಓದಿದವರ, ಕೇಳಿದವರಲ್ಲೂ ಸಂ-ಕ್ರಾಂತಿಯನ್ನು ಮೂಡಿಸುತ್ತದೆ.</p>



<p>ಸಕ್ರಾಂತಿ ಸುಗ್ಗಿ, ರೈತರ ಹಬ್ಬವಾಗಿಯೇ ಉಳಿದಿಲ್ಲ. ಮಳೆಯಿರದ, ಬಿಸಿಲಿನ ಸೀಮೆಗಳಿಗೂ ಸಂಕ್ರಾಂತಿ ಹಬ್ಬ ಇದ್ದೇ ಇದೆ.</p>



<p>ಹೊಸ ದೀಪ ಬೆಳಗಲು, ಹೊಸ ವಿಚಾರಗಳನ್ನು ಚಿಂತಿಸಲು ನಮಗೆ ಸಕ್ರಾಂತಿಯ ಅವಶ್ಯಕತೆ ಇದೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಡಿವಿಜಿ ಹೇಳಿರುವ ಹಾಗೆ ಭಿನ್ನ ಬೇಧವ ಮರೆವಿಗೆ ತಳ್ಳಿ, ಹಚ್ಚುತಾ ಕೆಡುಕಿಗೆ ಒಳ್ಳೆಯತನದ ಕೊಳ್ಳಿ, ಸುಟ್ಟು ಬಿಡೋಣ ಸಕ್ರಾಂತಿಯ ಕಿಚ್ಚಲಿ, ಬೆಳಗಲಿ ಬಡವರ ಭಾಗ್ಯ.</p>



<p>ಹೊರಗಿನ ಆಚರಣೆಗಳಾದ ದೇಹಕೆ ತೈಲ ಎರೆದು, ಸ್ನಾನ ಮಾಡುವುದು, ಹೊಸ ಬಟ್ಟೆ ಉಡುವುದು, ಎಣ್ಣೆ ತುಂಬಿದ ತಟ್ಟೆಯಲಿ ಮುಖ ನೋಡಿಕೊಳ್ಳುವುದು, ಇವುಗಳೆಲ್ಲಾ ಹಬ್ಬದ ಜೊತೆಗೆ ಇದ್ದೇ ಇರುತ್ತದೆ. ಎಳ್ಳುಬೆಲ್ಲ ಮೆದ್ದು ಒಳ್ಳೆ ಮಾತಾಡಿ ಎನ್ನುವ ಹಾಗೇ, ಒಳ್ಳೆಯ ವಿಚಾರಗಳನ್ನು ಹಂಚಲು ಸಕ್ರಾಂತಿಯ ದಿವಸ ಬಂದಿದೆ.</p>



<p>ಉಳಿದ ಆಚರಣೆಗಳಾದ ಪೊಂಗಲ್ ಮಾಡಿ ಹಂಚುವುದು, ದೇವರಿಗೆ ಎಡೆ ಮಾಡುವುದು, ಎಳ್ಳು ಬೆಲ್ಲ, ಕಬ್ಬು ಮನೆಮನೆಗೆ ತಿದ್ದುವುದು, ಇವುಗಳ ಜೊತೆಗೆ ನೆರೆಹೊರೆಯವರೊಂದಿಗೆ ವಿರಸ ಮರೆಸಿ ಸ್ನೇಹ ಹಂಚೋಣ. ಇರುವಷ್ಟು ಕಾಲ ಒಳ್ಳೆಯತನದಿ ಆಲೋಚಿಸಿ ಸಂತೃಪ್ತಿಯ ಸಂಕ್ರಾಂತಿ ಆಚರಿಸೋಣ.</p>



<p>ಮನುಷ್ಯ ಜೀವನದಲ್ಲಿ ವಯಸ್ಸು ಕಳೆದಂತೆ ಮದುವೆ, ಮಕ್ಕಳು, ಮೊಮ್ಮಕ್ಕಳು, ಸ್ನೇಹಿತರು, ಪರಿವಾರದವರು ಹೆಚ್ಚುತ್ತಾ ಹೋಗುತ್ತಾರೆ. ಪ್ರೀತಿ ಪ್ರೇಮ ಇವು ಅಲ್ಪಕಾಲದ ಸುಖ ನೀಡುತ್ತವೆ. ಸ್ನೇಹ, ಸಾಂಗತ್ಯ ಇವು ನಮಗೆ ಅವಶ್ಯಕವಾಗಿ ಬರುತ್ತವೆ. ಮಾನವೀಯ ಮೌಲ್ಯಗಳು ಜೀವನ ಪೂರ್ತಿ ಮನುಷ್ಯ ನಿಗೆ ಆತ್ನ ಸಂತೋಷದ ಬದುಕನ್ನು ದಯಪಾಲಿಸುತ್ತದೆ. ಇದಕ್ಕಾಗಿಯೇ ಕೆಲವರು ನಮ್ಮ ನಿಮ್ಮ ನಿಮ್ಮಂತೆ ಸಾಮಾನ್ಯರಾಗಿ ಹುಟ್ಡಿದರೂ ಮಹಾನ್ ಚೇತನಗಳಾಗಿ ಇಂದಿಗೂ ನಮ್ಮ ನಿಮ್ಮ ನಡುವೆ ಇದ್ದಾರೆ, ಇರುತ್ತಾರೆ.</p>
]]></content:encoded>
					
		
		
			</item>
		<item>
		<title>ಕಳ್ಳುಬಳ್ಳಿ : ಹೆಣ್ಣು ಮತ್ತು ಲೈಂಗಿಕ ಸ್ವಾತಂತ್ರ್ಯ</title>
		<link>https://peepalmedia.com/kalluballi-female-and-sexual-freedom/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 09 Jan 2024 12:59:54 +0000</pubDate>
				<category><![CDATA[ವಿಶೇಷ]]></category>
		<category><![CDATA[Kalluballi]]></category>
		<category><![CDATA[kannada]]></category>
		<category><![CDATA[Nalini Chikkamagaluru]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=34761</guid>

					<description><![CDATA[ಮಹಿಳೆ ಮತ್ತು ಸ್ತ್ರೀ ಪರ ಚಿಂತನೆ ಹಿನ್ನೆಲೆಯಲ್ಲಿ ಕಳ್ಳುಬಳ್ಳಿ ಅಂಕಣದಲ್ಲಿ ಲೇಖಕರಾದ ನಳಿನಿ ಚಿಕ್ಕಮಗಳೂರು ಅಂಕಣಕ್ಕೆ ಜೀವ ತುಂಬಲಿದ್ದಾರೆ. ಪೀಪಲ್ ಮೀಡಿಯಾದ ಕಳ್ಳುಬಳ್ಳಿಗೆ ಇದು ಅವರ ಮೊದಲ ಅಂಕಣ. ರಾಜ ಮಹಾರಾಜರ ಕಾಲದಲ್ಲಿ ವಿಶೇಷವಾಗಿ ರಾಣಿಯರು ಲೋಹದ ಚಡ್ಡಿಯನ್ನು ಧರಿಸಿಕೊಳ್ಳಬೇಕಾಗಿತ್ತು.&#160; ಅದರ ಬೀಗವನ್ನು ರಾಜ ಮಾತ್ರ ತೆರೆಯಲು ಅವಕಾಶ ಇರುತ್ತಿತ್ತು.&#160; ಹೀಗೆ ಮಾಡುವ ಕ್ರಮ ಏಷ್ಯಾದ ದೇಶಗಳಲ್ಲಿ ನಡೆಯುತ್ತಿತ್ತು.&#160; ಚೀನಾ ದೇಶದಲ್ಲೂ ಈ ಕ್ರಮ ಇತ್ತು.&#160; ಓರ್ವ ಚೀನಿ ಯುವತಿಯ ತಂದೆ ಮಾಡಿಸಿದ್ದ ಇಂಥಾ ಒಂದು ಸಾಧನ [&#8230;]]]></description>
										<content:encoded><![CDATA[
<p><br><br></p>



<blockquote class="wp-block-quote is-layout-flow wp-block-quote-is-layout-flow">
<p>ಮಹಿಳೆ ಮತ್ತು ಸ್ತ್ರೀ ಪರ ಚಿಂತನೆ ಹಿನ್ನೆಲೆಯಲ್ಲಿ ಕಳ್ಳುಬಳ್ಳಿ ಅಂಕಣದಲ್ಲಿ ಲೇಖಕರಾದ ನಳಿನಿ ಚಿಕ್ಕಮಗಳೂರು ಅಂಕಣಕ್ಕೆ ಜೀವ ತುಂಬಲಿದ್ದಾರೆ. ಪೀಪಲ್ ಮೀಡಿಯಾದ ಕಳ್ಳುಬಳ್ಳಿಗೆ ಇದು ಅವರ ಮೊದಲ ಅಂಕಣ.</p>
</blockquote>



<p>ರಾಜ ಮಹಾರಾಜರ ಕಾಲದಲ್ಲಿ ವಿಶೇಷವಾಗಿ ರಾಣಿಯರು ಲೋಹದ ಚಡ್ಡಿಯನ್ನು ಧರಿಸಿಕೊಳ್ಳಬೇಕಾಗಿತ್ತು.&nbsp; ಅದರ ಬೀಗವನ್ನು ರಾಜ ಮಾತ್ರ ತೆರೆಯಲು ಅವಕಾಶ ಇರುತ್ತಿತ್ತು.&nbsp; ಹೀಗೆ ಮಾಡುವ ಕ್ರಮ ಏಷ್ಯಾದ ದೇಶಗಳಲ್ಲಿ ನಡೆಯುತ್ತಿತ್ತು.&nbsp;</p>



<p>ಚೀನಾ ದೇಶದಲ್ಲೂ ಈ ಕ್ರಮ ಇತ್ತು.&nbsp; ಓರ್ವ ಚೀನಿ ಯುವತಿಯ ತಂದೆ ಮಾಡಿಸಿದ್ದ ಇಂಥಾ ಒಂದು ಸಾಧನ ಧರಿಸಿದ್ದ ಹೆಣ್ಣೊಬ್ಬಳಿಗೆ ವಿವಾಹ ನಡೆದ ಮೇಲೂ ಅದನ್ನು ಬಿಚ್ಚಿಕೊಳ್ಳಲು ಕಬ್ಬಿಣದ ಕೆಲಸಗಾರನ ಬಳಿಗೆ ಕೋರಿದರೂ ಸಾಧ್ಯವಾಗಲಿಲ್ಲ.&nbsp; ಹೀಗೇ ನಿರಾಸೆಯಲ್ಲೇ ಗಂಡ ಹೆಂಡಿರು ಆ ಲೋಹದ ಸಾಧನ ಬಿಚ್ಚುವ&nbsp; ವಿಫಲ ಯತ್ನ ನಡೆಸುತ್ತಲೇ ವರ್ಷಗಳನೇಕ ಕಳೆಯುತ್ತಾರೆ.&nbsp; ಹೀಗೇ&nbsp; ಒಂದು ದಿನ ಆಕೆಯ ಗಂಡನೂ ಸಾಯುತ್ತಾನೆ.&nbsp; ಗಂಡ ಸತ್ತ ದಿವಸ ಅಚಾನಕ್ ಆಕೆಯ ಲೋಹದ ಒಳ ಉಡುಗೆ ತೆರೆದುಕೊಂಡು ಆಕೆಗೆ ಇನ್ನಿಲ್ಲದಷ್ಟು ದುಃಖ ಉಂಟು ಮಾಡುತ್ತದೆ.</p>



<p>ಹೆಣ್ಣು ರಾಜನೊಬ್ಬನಿಗೇ ನಿಗದಿ ಪಡಿಸಿದಂತೆ ಬಾಳಬೇಕು ಎಂಬ ಉದ್ದೇಶದಿಂದ ಲೋಹದ ಒಳ ಉಡುಪನ್ನು ಆತನನ್ನು ವರಿಸುವ ಹೆಣ್ಣುಗಳು ಧರಿಸಬೇಕಾಗಿತ್ತು.</p>



<p>ಈ ಕ್ರಮ ರಾಜ ಮಹಾರಾಜರಲ್ಲಷ್ಟೇ ಅಲ್ಲದೆ ಉಚ್ಚ ಜಾತಿಯವರಲ್ಲೂ ರೂಢಿಯಲ್ಲಿತ್ತು.&nbsp; ಇಂಥಾ ಲೋಹದ ಒಳಾಂಗ ಸಾಧನ ಧರಿಸುವ ಹೆಣ್ಣುಮಕ್ಕಳಲ್ಲಿ ಎಲ್ಲರಿಗೂ ಅದರ ಕೀ ಹೊಂದುವ ಅವಕಾಶ ಇರಲಿಲ್ಲ.&nbsp; ಆಕೆಯ ವಿವಾಹಿತ ಪುರುಷರು ಅದರ ಕೀಲಿಕೈಗಳನ್ನು ಹೊಂದಿರುತ್ತಿದ್ದರು.</p>



<p>ಕೆಲವು ವರ್ಷಗಳ ಹಿಂದೆ ಉತ್ತರ ಭಾರತದ ಭಾಗದಲ್ಲಿ ನಡೆದ ಪ್ರಕರಣವೊಂದರ ಸುದ್ದಿ ಹೀಗೆ ಪ್ರಕರಣವಾಗಿತ್ತು.&nbsp; ಪತ್ನಿಯ ಮೇಲಿನ ಶಂಕೆಯಿಂದ ಓರ್ವ ಪತಿಯು ತನ್ನ ಪತ್ನಿಯ ಮರ್ಮಾಂಗವನ್ನು ಹೊಲೆದಿದ್ದ.&nbsp; ಘಟನೆ ಬಗ್ಗೆ ಸ್ಥಳೀಯರಿಂದ ಪೊಲೀಸರು ಆಕೆಯನ್ನು ರಕ್ಷಿಸಿ ವೈದ್ಯಕೀಯ ಚಿಕಿತ್ಸೆ ನೀಡಲು ಯಶಸ್ವಿಯಾಗಿದ್ದರು.&nbsp; ಇಂತಹ ಕ್ರೌರ್ಯ ಮೆರೆದ ಪತಿಗೆ ಶಿಕ್ಷೆ ಸಹ ವಿಧಿಸಲು ನ್ಯಾಯಾಂಗಕ್ಕೆ ಕೋರಿದ್ದರು.&nbsp;</p>



<p>ಶತಶತಮಾನಗಳಿಂದಲೂ ಹೆಣ್ಣಿನ ಲೈಂಗಿಕ ಸ್ವಾತಂತ್ರ್ಯದ ಹಕ್ಕನ್ನು ಹತ್ತಿಕ್ಕಲಾಗುತ್ತಿದೆ.&nbsp; ಇಂದಿಗೂ ಜರುಗುವ ಮರ್ಯಾದೆ ಹತ್ಯೆಗಳು ಇದಕ್ಕೆ ನೈಜ ಉದಾಹರಣೆ.</p>



<p>ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ ಎನ್ನುವಂತಹ ಅಮಾನವೀಯ ಹೇಳಿಕೆಗಳು ಇದೇ ಸಾಲಿನಲ್ಲಿ ಸರಿಗಟ್ಟಿ ನಿಲ್ಲುತ್ತವೆ.</p>



<p>ಒಂದುಕಡೆ ಹೆಣ್ಣು ತನ್ನ ಇಷ್ಟದ ಸಂಗಾತಿ ಹೊಂದಲು ಅವಕಾಶ ನೀಡುವಲ್ಲಿ ಜಾತಿ, ಧರ್ಮ, ಅಂತಸ್ತಿನ ತಡೆಗೋಡೆಗಳನ್ನು ಎತ್ತಿ ಕಟ್ಟುತ್ತದೆ.&nbsp; ಮತ್ತೊಂದೆಡೆ ವಿವಾಹಿತ ಮಹಿಳೆಯರು ತಮ್ಮ ಸಂಗಾತಿ ಯೊಡನೆ ಸುಖಿಸುವ ಹಕ್ಕನ್ನೂ ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತದೆ.</p>



<p>ಧರ್ಮದ ಹೆಸರಿನಲ್ಲಿ ಸಾವಿರಾರು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡಿದ್ದ ಅಸಾರಾಮ್ ಬಾಪು ತರಹದ ಧರ್ಮಾಂಧ ವಿಟರಿಗೆ ಕೋಟಿ ಕೋಟಿ ಬಂದು ಕೊಳೆಯುತ್ತಿತ್ತು.&nbsp; ಚಿತ್ರದುರ್ಗದ ಮಠದ ಕಾಮಕತೆಗಳು ಮುಕ್ಕಿದ ಹಸುಳೆಗಳ ಭವಿಷ್ಯ ಬದಲಿಸಿಲ್ಲ ಇನ್ನೂ.</p>



<p>ಒಟ್ಟಾರೆ ಹೇಳುವುದಾದರೆ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹತೆ ಪಡೆದಿಲ್ಲ.&nbsp; ಅದರಲ್ಲೂ ಲೈಂಗಿಕ ಸ್ವಾತಂತ್ರ್ಯ ಕನಸಿನ ಮಾತು.&nbsp;</p>



<p>ರಾಣಿಯರು ರಾಜ ವರ್ಷಗಟ್ಟಲೆ ಯುದ್ಧ, ಬೇಟೆ ಮೊದಲಾದವುಗಳನ್ನು ನಡೆಸಿ ಅಂತಃಪುರಕ್ಕೆ ಬರುವವರೆಗೂ ಸಹ ಕೀಲಿಕೈಗಾಗಿ ಕಾಯಬೇಕಿತ್ತು.&nbsp; ಇಂತಹ ಸಾಧನ ಧರಿಸಿದ ಮೇಲೆ ಮುಟ್ಟಿನ ನಿರ್ವಹಣೆ, ಮಲಮೂತ್ರ ವಿಸರ್ಜನೆಯೂ ಸಹ ತಾಪತ್ರಯವೇ ಆಗಿರುತ್ತಿತ್ತು.&nbsp; ಕೆಲವೊಮ್ಮೆ ದಾಸಿಯರು ಸಹ ಈ ಕೀಲಿಕೈ ನಿರ್ವಹಣೆ ಮಾಡಿದ್ದಿರಬಹುದೆನೋ.. ಒಂದರ್ಥದಲ್ಲಿ ಇದು ದೈಹಿಕ ಹಿಂಸೆ ಹುಟ್ಟಿಸಿದ್ದಲ್ಲಿ ಆಶ್ಚರ್ಯವಿಲ್ಲ.</p>



<p>ಬಹು ಪತ್ನಿತ್ವ ಅನುಸರಿಸುವ ಕುಟುಂಬದಲ್ಲಿ ಯಾವ ಪತ್ನಿಗೆ ಲೈಂಗಿಕ ಸ್ವಾತಂತ್ರ್ಯ ಇದೆ?&nbsp; ತನ್ನ ಗಂಡನ ಬಳಿಗೆ ಹೋಗಲು ಸಹ ಆತನದೇ ಒಪ್ಪಿಗೆಯ ಅವಶ್ಯಕತೆ ಇರುತ್ತದೆ.&nbsp;</p>



<p>ರಾಜನೊಬ್ಬನ ಹಲವಾರು ಪತ್ನಿಯರು ಎಲ್ಲಾ ಅರಸೊತ್ತಿಗೆ ನಡುವೆ ತನ್ನ ರಾಜನ ಬಳಿಗೆ ಹೋಗಲು, ಸುಖಿಸಲು ಸ್ವಾತಂತ್ರ್ಯವಿಲ್ಲದೇ ಬದುಕುತ್ತಾರೆ.&nbsp; ಈ ಅಸುಖದ ಮನಸ್ಸುಗಳಿಗೆ ಬಹಳ. ನೋವಿರುತ್ತದೆ.&nbsp; ಇದರ ಜೊತೆಗೆ ರಾಜನ ಮೊದಲ ಮಗನಿಗೆ ಮಾತ್ರ ಧಕ್ಕುವ ಸಿಂಹಾಸನ ಉಳಿದ ಮಕ್ಕಳು ಹಡೆದವರನ್ನು ಅತಂತ್ರ ಸ್ಥಿತಿಗೆ ದೂಕುತ್ತಿತ್ತು.&nbsp; ಹೀಗಿರುವಾಗ ಅಂಥಾ ರಾಣಿಯರು ರಾಜನೊಂದಿಗೆ ನಿಜವಾಗಿಯೂ ಸುಖಿಸಲು ಅವಕಾಶ ಇರುತ್ತಿತ್ತೇ ಎಂಬುದೇ ಯಕ್ಷಪ್ರಶ್ನೆ.</p>



<p>ಒಂದರ್ಥದಲ್ಲಿ ಕೆಲವು ಹೆಣ್ಣು ಮಕ್ಕಳು ವಿವಾಹಿತರಾದರೂ ಊರ್ಮಿಳೆಯರಂತೆ ಕಾಯುತ್ತಲೇ ಜೀವನ ಸಾಗಿಸಬೇಕಾದ ಸಂದರ್ಭಗಳು ಅನೇಕ.&nbsp; ಸೈನ್ಯದಲ್ಲಿ ಉದ್ಯೋಗ ಮಾಡುವ ಪತಿ, ದುಬೈ ಸೇರಿದಂತೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿ ಹೀಗೆ ಪತಿ ಸತಿಯಿಂದ ದೂರ ಇದ್ದಾಗ ಆತನಿಗಾಗಿ ಕಾಯುತ್ತಲೇ ಬಾಳಬೇಕಾಗುವುದು.&nbsp;</p>



<p>ಹದಿನಾರಕ್ಕಿಂತ ಬೇಗ ಋತುಮತಿಯರಾಗುವ ಹೆಣ್ಣುಮಕ್ಕಳು ಐರೋಪ್ಯ ರಾಷ್ಟ್ರಗಳಲ್ಲಿ ಕಿರಿಯ ವಯಸ್ಸಿಗೇ ತಾಯಂದಿರಾಗಿ ಆ ಮಗುವನ್ನು ಬೆಳೆಸುವ&nbsp; ತಾಯಿಯಾಗಿ ಬದಲಾವಣೆ ಆಗುತ್ತಿದ್ದಾರೆ.&nbsp;&nbsp; ದೇಹದ ಅಂಗಗಳ ಬಗ್ಗೇ ಏನೂ ಅರಿಯದ ಕಿರಿಯ ಹೆಣ್ಣುಮಕ್ಕಳಿಗೆ ಒತ್ತಾಯವೋ, ದೇಹ ಚಪಲವೋ ಕಾಮ ಕ್ರೀಡೆಗೆ ಇಳಿಸಿ ಗರ್ಭಿಣಿಯರನ್ನಾಗಿ ಮಾಡುತ್ತಿರುವವರು ಸಹ ಕಿರಿಯ ವಯೋಮಾನದ ಗಂಡು ಮಕ್ಕಳೇ.&nbsp; ಇಂಥಾ ಪ್ರಕರಣಗಳಲ್ಲಿ ನೋಯುವ ಹೆಣ್ಣು ಭವಿಷ್ಯದಲ್ಲಿ ಇನ್ಯಾವ ಸುಖಗಳ ನಿರೀಕ್ಷೆ ಇರಿಸಿಕೊಳ್ಳಲು ಸಾಧ್ಯ?&nbsp;&nbsp; ಇನ್ನು ಲೈಂಗಿಕ ಸ್ವಾತಂತ್ರ್ಯದ ಹಕ್ಕು ದೂರವೇ ಉಳಿಯುವುದು.</p>
]]></content:encoded>
					
		
		
			</item>
	</channel>
</rss>
