<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Narayana Gauda &#8211; Peepal Media</title>
	<atom:link href="https://peepalmedia.com/tag/narayana-gauda/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sun, 02 Oct 2022 08:46:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Narayana Gauda &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭಾರತ ಜೋಡಿಸಲು ಭಾಷಾ ಸಮಾನತೆಯೂ ಅನುಷ್ಠಾನಗೊಳ್ಳಬೇಕು: ರಾಹುಲ್‌ ಗಾಂಧಿಗೆ ಕರವೇ ನಾರಾಯಣಗೌಡ ಪತ್ರ</title>
		<link>https://peepalmedia.com/bharata-jodisalu-bhasha-samaanateyu-anushtanagollabeku-narayana-gauda/</link>
		
		<dc:creator><![CDATA[Peepal Media]]></dc:creator>
		<pubDate>Sun, 02 Oct 2022 08:46:43 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[bharath jodo yathre]]></category>
		<category><![CDATA[india]]></category>
		<category><![CDATA[Ka Ra Ve]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Narayana Gauda]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Rahul Gandhi]]></category>
		<guid isPermaLink="false">https://peepalmedia.com/?p=8560</guid>

					<description><![CDATA[ಬೆಂಗಳೂರು: ಭಾರತ ಐಕ್ಯತಾ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಭಾರತವನ್ನು ಭಾವನಾತ್ಮಕವಾಗಿ ಜೋಡಿಸುವ ಉದ್ದೇಶದ ಪಾದಯಾತ್ರೆ ಯಶಸ್ವಿಯಾಗಲೆಂದು ಹಾರೈಸಿದ್ದಾರಲ್ಲದೆ, ಭಾರತವನ್ನು ಜೋಡಿಸಲು ಭಾಷಾ ಸಮಾನತೆ ನೆಲೆಗೊಳ್ಳಬೇಕು ಎಂದು ಹೇಳಿದ್ದಾರೆ. ಭಾರತ ಸರ್ಕಾರ ಅನುಸರಿಸಿಕೊಂಡುಬಂದ ಭಾಷಾ ನೀತಿಗಳು ಭಾಷಾ ಸಮುದಾಯಗಳಲ್ಲಿ ಬೇಧಭಾವವನ್ನು ಹುಟ್ಟುಹಾಕಿದೆ, ಒಬ್ಬರು ಶ್ರೇಷ್ಠ ಮತ್ತೊಬ್ಬರು ಕನಿಷ್ಠ ಎಂಬ ತರತಮ ಸನ್ನಿವೇಶವನ್ನು ತಂದೊಡ್ಡಿದೆ. ಭಾರತ ಸಂವಿಧಾನದ 343ನೇ ವಿಧಿಯಿಂದ 355ನೇ ವಿಧಿಗಳು ಹಿಂದಿ [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು:</strong> ಭಾರತ ಐಕ್ಯತಾ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಭಾರತವನ್ನು ಭಾವನಾತ್ಮಕವಾಗಿ ಜೋಡಿಸುವ ಉದ್ದೇಶದ ಪಾದಯಾತ್ರೆ ಯಶಸ್ವಿಯಾಗಲೆಂದು ಹಾರೈಸಿದ್ದಾರಲ್ಲದೆ, ಭಾರತವನ್ನು ಜೋಡಿಸಲು ಭಾಷಾ ಸಮಾನತೆ ನೆಲೆಗೊಳ್ಳಬೇಕು ಎಂದು ಹೇಳಿದ್ದಾರೆ.</p>



<p style="font-size:20px">ಭಾರತ ಸರ್ಕಾರ ಅನುಸರಿಸಿಕೊಂಡುಬಂದ ಭಾಷಾ ನೀತಿಗಳು ಭಾಷಾ ಸಮುದಾಯಗಳಲ್ಲಿ ಬೇಧಭಾವವನ್ನು ಹುಟ್ಟುಹಾಕಿದೆ, ಒಬ್ಬರು ಶ್ರೇಷ್ಠ ಮತ್ತೊಬ್ಬರು ಕನಿಷ್ಠ ಎಂಬ ತರತಮ ಸನ್ನಿವೇಶವನ್ನು ತಂದೊಡ್ಡಿದೆ. ಭಾರತ ಸಂವಿಧಾನದ 343ನೇ ವಿಧಿಯಿಂದ 355ನೇ ವಿಧಿಗಳು ಹಿಂದಿ ಭಾಷಿಕರ ಪಾರಮ್ಯವನ್ನು ಎತ್ತಿಹಿಡಿಯುತ್ತವೆ ಮತ್ತು ಭಾರತದ ಇತರ ಭಾಷಿಕ‌ ಜನಾಂಗವನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುತ್ತವೆ. ಒಂದು ನಾಗರಿಕ ಸಮಾಜವಾಗಿ ನಾವು ಈ ರೀತಿಯ ತಾರತಮ್ಯ ನೀತಿಯನ್ನು ಅನುಸರಿಸುತ್ತ‌ ಬಂದಿರುವುದು ದೇಶದ ಉದ್ಧಾರಕ್ಕೆ ದೊಡ್ಡ ತಡೆಯಾಗಿದೆ. ಹೀಗಾಗಿ ಒಕ್ಕೂಟ ವ್ಯವಸ್ಥೆ, ಹಿಂದಿಹೇರಿಕೆ, ರಾಜ್ಯಗಳ ಅಧಿಕಾರದ ಕುರಿತು ಕಾಂಗ್ರೆಸ್‌ ಪಕ್ಷ ಸ್ಪಷ್ಟ ನಿಲುವು ತಳೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.</p>



<p style="font-size:20px"><strong>ಟಿ.ಎ.ನಾರಾಯಣಗೌಡರು ರಾಹುಲ್ ಗಾಂಧಿಯವರಿಗೆ ಬರೆದ ಪತ್ರದ ಪೂರ್ಣಪಾಠ ಇಲ್ಲಿದೆ:</strong></p>



<p style="font-size:20px">ಇವರಿಗೆ,<br>ಶ್ರೀ ರಾಹುಲ್ ಗಾಂಧಿಯವರು<br>ಮಾಜಿ ಅಧ್ಯಕ್ಷರು, ಅಖಿಲ ಭಾರತ ಕಾಂಗ್ರೆಸ್ ಸಮಿತಿ<br>ನವದೆಹಲಿ</p>



<p style="font-size:20px">ನಮಸ್ಕಾರಗಳು,<br>ಭಾರತ ಐಕ್ಯತಾ ಯಾತ್ರೆಯನ್ನು ಕೈಗೊಂಡಿರುವ ತಮಗೆ ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಕರ್ನಾಟಕಕ್ಕೆ ಹೃದಯಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಭಾರತವನ್ನು ಭಾವನಾತ್ಮಕವಾಗಿ ಜೋಡಿಸುವ ಉದ್ದೇಶದ ತಮ್ಮ ಈ ಪಾದಯಾತ್ರೆ ಸಫಲವಾಗಲಿ ಎಂದು ಹಾರೈಸುತ್ತೇನೆ.</p>



<p style="font-size:20px">ಮತ, ಧರ್ಮ, ಲಿಂಗ, ಜಾತಿ ಇತ್ಯಾದಿಗಳಿಂದ ಒಡೆದು ಹೋಗಿರುವ, ಇನ್ನಷ್ಟು ಒಡೆದುಹೋಗುತ್ತಿರುವ ಭಾರತವನ್ನು ಜೋಡಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಉದ್ಭವಿಸಿದೆ. ಭಾರತೀಯರ ಹೃದಯದಿಂದ ದ್ವೇಷ ಮತ್ತು ಅಸಹನೆಯನ್ನು ಕಿತ್ತುಹಾಕಿ ಪ್ರೀತಿಯನ್ನು ಬೆಸೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ತಮ್ಮ ಭಾರತ ಜೋಡಿಸುವ ಪಾದಯಾತ್ರೆ ಅತ್ಯಂತ ಮಹತ್ವಪೂರ್ಣದ್ದಾಗಿದೆ.</p>



<p style="font-size:20px">ಜನರನ್ನು ಜೋಡಿಸಬೇಕೆಂದರೆ ಮೊದಲು ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಟಿಕೋನ ನಮ್ಮದಾಗಬೇಕು. ಆದರೆ ಭಾಷಾ ಸಮುದಾಯಗಳನ್ನು ಸಮಾನವಾಗಿ ನೋಡದ ಕಾರಣ ಬೆಸುಗೆ ಎಂಬುದು ಮರೀಚಿಕೆಯಾಗಿದೆ. ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಅನುಸರಿಸಿಕೊಂಡುಬಂದ ಭಾಷಾ ನೀತಿಗಳು ಭಾಷಾ ಸಮುದಾಯಗಳಲ್ಲಿ ಬೇಧಭಾವವನ್ನು ಹುಟ್ಟುಹಾಕಿದೆ, ಒಬ್ಬರು ಶ್ರೇಷ್ಠ ಮತ್ತೊಬ್ಬರು ಕನಿಷ್ಠ ಎಂಬ ತರತಮ ಸನ್ನಿವೇಶವನ್ನು ತಂದೊಡ್ಡಿದೆ. ಭಾರತ ಸಂವಿಧಾನದ 343ನೇ ವಿಧಿಯಿಂದ 355ನೇ ವಿಧಿಗಳು ಹಿಂದಿ ಭಾಷಿಕರ ಪಾರಮ್ಯವನ್ನು ಎತ್ತಿಹಿಡಿಯುತ್ತವೆ ಮತ್ತು ಭಾರತದ ಇತರ ಭಾಷಿಕ‌ ಜನಾಂಗವನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ಕಾಣುತ್ತವೆ. ಒಂದು ನಾಗರಿಕ ಸಮಾಜವಾಗಿ ನಾವು ಈ ರೀತಿಯ ತಾರತಮ್ಯ ನೀತಿಯನ್ನು ಅನುಸರಿಸುತ್ತ‌ ಬಂದಿರುವುದು ದೇಶದ ಉದ್ಧಾರಕ್ಕೆ ದೊಡ್ಡ ತಡೆಯಾಗಿದೆ.</p>



<p style="font-size:20px">ಭಾರತ ಸರ್ಕಾರ ಇಂಗ್ಲಿಷ್ ಮತ್ತು ಹಿಂದಿಯನ್ನು ತನ್ನ ಆಡಳಿತ ಭಾಷೆಯನ್ನಾಗಿ ಮಾಡಿಕೊಂಡಿದೆ. ಹಿಂದಿಯನ್ನು ಆಡಳಿತ ಭಾಷೆ ಮಾಡಿಕೊಂಡಿರುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಭಾರತದ ಇತರ ಭಾಷೆಗಳನ್ನೇಕೆ ಆಡಳಿತ ಭಾಷೆಗಳನ್ನಾಗಿ ಮಾಡಲಿಲ್ಲ ಎಂಬುದು ನಮ್ಮ ಪ್ರಶ್ನೆಯಾಗಿದೆ. ಇಂಗ್ಲಿಷ್, ಹಿಂದಿಯನ್ನು ಆಡಳಿತ ಭಾಷೆ ಮಾಡಿಕೊಂಡ ಸಂದರ್ಭದಲ್ಲಿ ತಂತ್ರಜ್ಞಾನ ಬೆಳೆದಿರಲಿಲ್ಲ, ಹೀಗಾಗಿ ಹೆಚ್ಚು ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಮಾಡಿಕೊಳ್ಳುವುದು ಕಷ್ಟದ ಕೆಲಸವಾಗಿತ್ತು ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ಈಗ ತಂತ್ರಜ್ಞಾನ ಇಷ್ಟು ಮುಂದುವರೆದಿರುವಾಗ ಹಲವು ನುಡಿಗಳನ್ನು ಆಡಳಿತ ಭಾಷೆ‌ ಮಾಡಿಕೊಳ್ಳಲು ಯಾವ ಸಮಸ್ಯೆಯೂ ಇರುವುದಿಲ್ಲ. ಸಿಂಗಪುರದಂಥ ಪುಟ್ಟ ದೇಶದಲ್ಲಿ ನಾಲ್ಕು ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಮಾಡಿಕೊಳ್ಳಲಾಗಿದೆ. ಆದರೆ ನೂರಾ ಮೂವತ್ತು ಕೋಟಿ ಜನಸಂಖ್ಯೆಯ ಭಾರತದಲ್ಲಿ ಇತರ ದೇಸೀ ಭಾಷೆಗಳನ್ನು ಯಾಕೆ ಆಡಳಿತ ಭಾಷೆಗಳನ್ನಾಗಿ ಮಾಡುತ್ತಿಲ್ಲ? ಹೀಗೆ ಮಾಡದೇ ಹೋಗಿದ್ದರ ಪರಿಣಾಮವಾಗಿ ಭಾರತದಲ್ಲಿ ಹಿಂದಿ ಭಾಷಿಕರು ಮೊದಲನೇ ದರ್ಜೆ ಪ್ರಜೆಗಳು, ಹಿಂದಿಯೇತರರು ಎರಡನೇ ದರ್ಜೆ ಪ್ರಜೆಗಳು ಎಂಬಂತೆ ಆಗಿಹೋಗಿದೆ.</p>



<p style="font-size:20px">ಭಾರತ ಸರ್ಕಾರದ ಭಾಷಾನೀತಿಯಿಂದಾಗಿ ಹಿಂದಿ ಭಾಷಿಕರು ಭಾರತದ ಯಾವುದೇ ಭಾಗದಲ್ಲಿ ತಮ್ಮ ನುಡಿಯಲ್ಲೇ ಎಲ್ಲ ಬಗೆಯ ಸೇವೆಯನ್ನು ಪಡೆಯಬಹುದು, ಉದ್ಯೋಗ ಮಾಡಬಹುದು. ಆದರೆ ಹಿಂದಿಯೇತರಿಗೆ ಈ ಅವಕಾಶ ಇಲ್ಲ. ಭಾರತ ಸರ್ಕಾರದ ಹಲವಾರು ಇಲಾಖೆಗಳು, ಬ್ಯಾಂಕುಗಳ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಭಾಷಿಕರು ತಮ್ಮ ಮಾತೃಭಾಷೆಯಲ್ಲೇ ಬರೆಯಬಹುದು, ಆದರೆ ಹಿಂದಿಯೇತರ ಭಾಷಿಕರು ತಮ್ಮ ಭಾಷೆಯಲ್ಲಿ‌ ಪರೀಕ್ಷೆಗಳನ್ನು ಬರೆಯುವಂತಿಲ್ಲ. ಹೀಗಾಗಿ ಹಿಂದಿಯೇತರ ರಾಜ್ಯಗಳ ಜನರು ಉದ್ಯೋಗ ನೇಮಕಾತಿಗಳಲ್ಲಿ ಭಾರೀ ಪ್ರಮಾಣದ ವಂಚನೆಗೆ ಗುರಿಯಾಗಿದ್ದಾರೆ. ಇದಲ್ಲದೆ, ರಾಜಭಾಷಾ ಆಯೋಗದ ಮೂಲಕ ಭಾರತ ಸರ್ಕಾರ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಕಾರ್ಯವನ್ನು ಮೊದಲಿನಿಂದಲೂ ಮಾಡುತ್ತ ಬಂದಿದ್ದು, ಈಗ‌ ಅದು ತೀವ್ರಗತಿಯಲ್ಲಿ ಸಾಗುತ್ತಿದೆ. ನಾವು ಹಿಂದಿ ಭಾಷೆ ಅಥವಾ ಹಿಂದಿ ಭಾಷಿಕರ ವಿರುದ್ಧವಾಗಿಲ್ಲ, ಆದರೆ ಹಿಂದಿಯ ಹೇರಿಕೆಯ ವಿರುದ್ಧ ಇದ್ದೇವೆ. ಇದಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದೇವೆ. ಉತ್ತರ ಪ್ರದೇಶದಲ್ಲೋ, ಬಿಹಾರದಲ್ಲೋ ಕನ್ನಡ ಕಲಿಕೆ, ಕನ್ನಡ ಆಡಳಿತವನ್ನು ಕಡ್ಡಾಯ‌ ಮಾಡಲು ಹೊರಟರೆ ಅಲ್ಲಿನ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ಊಹಿಸಿದರೆ ನಾವು ಪ್ರತಿಪಾದಿಸುತ್ತಿರುವ ವಿಷಯ ತಮಗೆ ಹೆಚ್ಚು ಸಮರ್ಪಕವಾಗಿ ಅರ್ಥವಾಗುತ್ತದೆ ಎಂದು ವಿನಮ್ರವಾಗಿ ಹೇಳಲು ಬಯಸುತ್ತೇನೆ.</p>



<p style="font-size:20px">ಭಾರತದ ಒಕ್ಕೂಟ ವ್ಯವಸ್ಥೆ ಬಲಪಡಿಸಬೇಕೆಂದರೆ ಭಾರತದ ಎಲ್ಲ ನುಡಿಗಳನ್ನು, ಭಾಷಾ ಸಮುದಾಯಗಳನ್ನು ಸಮಾನವಾಗಿ ನೋಡುವ ಪರಿಪಾಠವನ್ನು ಒಕ್ಕೂಟ ಸರ್ಕಾರ ಬೆಳೆಸಿಕೊಳ್ಳಬೇಕಾಗಿದೆ. ಇದು ಆಗದ ಹೊರತು ಸಂವಿಧಾನದ 14ನೇ ವಿಧಿಯ ಅನುಸಾರ ಭಾರತದ ಎಲ್ಲ ಪ್ರಜೆಗಳೂ ಸಮಾನರು ಎಂಬ ಮೂಲ ಆಶಯಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ.</p>



<p style="font-size:20px">ತಾವು ಇತ್ತೀಚಿನ ದಿನಗಳಲ್ಲಿ ಪ್ರಾದೇಶಿಕ ಅಸ್ಮಿತೆಗಳನ್ನು ಗೌರವಿಸುವ ಹೇಳಿಕೆಗಳನ್ನು ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಆಶಾದಾಯಕ ಬೆಳವಣಿಗೆ. ಈ ಆಶಯಗಳನ್ನು ತಾವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷವು ಅಳವಡಿಸಿಕೊಳ್ಳಬೇಕು ಮತ್ತು ಭಾರತದಲ್ಲಿ ಭಾಷಾ ಸಮುದಾಯಗಳ ನಡುವೆ ಸಮಾನತೆ ತರಲು ಶ್ರಮಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ. ಕಾಂಗ್ರೆಸ್ ಪಕ್ಷ ಮಾತ್ರವಲ್ಲ, ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲ ರಾಜಕೀಯ ಪಕ್ಷಗಳೂ ಭಾಷಾ ಸಮುದಾಯಗಳ ನಡುವೆ ಸಮಾನತೆಗಾಗಿ ದುಡಿಯಬೇಕು, ಒಂದು ಭಾಷಿಕರನ್ನು ಮೊದಲದರ್ಜೆ, ಇನ್ನೊಂದು ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡುವ ಕರಾಳ ವ್ಯವಸ್ಥೆಯನ್ನು ತೊಡೆದುಹಾಕಲು ಶ್ರಮಿಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ.</p>



<ol class="wp-block-list" style="font-size:20px"><li>ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳನ್ನೂ ಭಾರತ ಸರ್ಕಾರದ ಆಡಳಿತ ಭಾಷೆಯನ್ನಾಗಿ ಮಾಡಬೇಕು, ಭಾಷಾ‌ ತಾರತಮ್ಯವನ್ನು ಕೊನೆಗೊಳ್ಳಿಸಬೇಕು.</li><li>ಸಂವಿಧಾನದ 343ನೇ ವಿಧಿಯಿಂದ 355ನೇ ವಿಧಿಗಳವರೆಗೆ ಪರಿಷ್ಕರಣೆ ಮಾಡಿ ಎಲ್ಲ ಭಾರತೀಯ ನುಡಿಗಳಿಗೂ ಸಮಾನವಾದ ಸ್ಥಾನಮಾನ ನೀಡಬೇಕು, ಹಿಂದಿಗೆ ನೀಡಿರುವ ಹೆಚ್ಚುಗಾರಿಕೆಯನ್ನು ಕೊನೆಗೊಳ್ಳಿಸಬೇಕು.</li></ol>



<p style="font-size:20px">ಈ ಎರಡು ಬೇಡಿಕೆಗಳತ್ತ ತಾವು ಗಮನಹರಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರುತ್ತೇನೆ.</p>



<p style="font-size:20px">ಮತ್ತೊಮ್ಮೆ ಭಾರತ ಜೋಡಿಸುವ ತಮ್ಮ ಪಾದಯಾತ್ರೆಗೆ ಶುಭಾಶಯಗಳು. ನಿಮ್ಮ‌ ಆಶಯಗಳು ಈಡೇರಲಿ.</p>



<p style="font-size:20px">ಗೌರವಾದರಗಳೊಂದಿಗೆ,</p>



<p style="font-size:20px">ತಮ್ಮ‌ ವಿಶ್ವಾಸಿ</p>



<p style="font-size:20px">(ಟಿ.ಎ.ನಾರಾಯಣಗೌಡ)<br>ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ</p>



<p></p>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p></p>



<p style="font-size:20px"><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ನೋಡಿ:</mark></strong> <mark style="background-color:rgba(0, 0, 0, 0)" class="has-inline-color has-vivid-purple-color">ಮಹಾತ್ಮ ಗಾಂಧಿ- ಕಸ್ತೂರ್ಬಾ ಅವರ ದಾಂಪತ್ಯ ಹೇಗಿತ್ತು ಗೊತ್ತೆ? ಕಸ್ತೂರ್ಬಾ ಅವರ ಕೊನೆಯ ಆಸೆ ಏನಾಗಿತ್ತು? ಗಾಂಧೀಜಿ ಅದನ್ನು ಈಡೇರಿಸಿದರೆ? ಈ ಮನಕಲಕುವ ವಿವರಗಳನ್ನು ಬಿಡಿಸಿಟ್ಟಿದ್ದಾರೆ ಚಿಂತಕ ನಿಕೇತ್ ರಾಜ್ ಮೌರ್ಯ.</mark></p>



<figure class="wp-block-embed is-type-video is-provider-youtube wp-block-embed-youtube wp-embed-aspect-4-3 wp-has-aspect-ratio"><div class="wp-block-embed__wrapper">
<iframe title="ಕಸ್ತೂರ್ಬಾ ಕೊನೆಯ ಆಸೆಯನ್ನು ಗಾಂಧಿ ಈಡೇರಿಸಿದರೆ? Niketh Raj Mourya | Kasturba Gandhi | Mahatma Gandhi" width="696" height="522" src="https://www.youtube.com/embed/h1uV5eRcSqM?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
	</channel>
</rss>
