<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Narendra modhi road show &#8211; Peepal Media</title>
	<atom:link href="https://peepalmedia.com/tag/narendra-modhi-road-show/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 17 Oct 2024 08:50:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Narendra modhi road show &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಮೋ ಕುರ್ಚಿಗಂಟಿದ ಫೆವಿಕಾಲ್‌ ನಂಟು (ರಾಜಕೀಯ ವಿಡಂಬನಾ ಬರಹ)</title>
		<link>https://peepalmedia.com/namo-churghantida-fevikal-nantu-political-satire/</link>
		
		<dc:creator><![CDATA[Peepal Media]]></dc:creator>
		<pubDate>Thu, 17 Oct 2024 08:50:52 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[Boycott Modhi]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[narendra mdi]]></category>
		<category><![CDATA[Narendra modhi road show]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Satire]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=47386</guid>

					<description><![CDATA[“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು” ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು &#8211; ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ. &#160;ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ [&#8230;]]]></description>
										<content:encoded><![CDATA[
<p>“ಮೂರು ಬಿಟ್ಟವನು ಊರಿಗೆ…ಅಲ್ಲ…ಜಗತ್ತಿಗೆ ದೊಡ್ಡವನು”</p>



<p>ಹತಾಶೆಯಿಂದ ಮಾ.ಕೃ.ಕುಟೀರದ ಪುರೋಹಿತ ನೆಲಕ್ಕೆ ಒದ್ದು ಹೊರಟಾಗ ಹೇಳಿದ ಮಾತು ನಮೋ ಸಾಮ್ರಾಟನ ಕಿವಿಯಲ್ಲಿ ಪ್ರತಿಧ್ವನಿಸಿ ಮೈ ಕಂಪಿಸಿ ಪುಳಕಗೊಂಡಿತು. ಹೆಂಡತಿ ಬಿಟ್ಟೆ. ಮನೆ ಬಿಟ್ಟೆ. ದುಡಿಮೆ ಬಿಟ್ಟೆ. ಹೌದು…ದೇಶಕ್ಕಾಗಿ ಮೂರು ಬಿಟ್ಟೆ. ಕೊನೆಗೂ ತನ್ನನ್ನು ಜಗತ್ತಿಗೆ ದೊಡ್ಡವನು &#8211; ವಿಶ್ವಗುರು ಎಂದು ಪುರೋಹಿತ ಒಪ್ಪಿಕೊಂಡನೆಂದು ನಮೋ ಗಡ್ಡ ನೀವುತ್ತ ಸಂಪ್ರೀತನಾದ. ಮೂಲೆಯಲ್ಲಿ ಕೈಕಟ್ಟಿ ನಿಂತು ಈರ್ವರ ಸಂಭಾಷಣೆಯನ್ನು ಆಲಿಸುತ್ತಿದ್ದ ಅ.ಕುತಂತ್ರಿ ಮಂತ್ರಿ ಹಣೆ ಚಚ್ಚಿಕೊಂಡ. &nbsp;ಅಷ್ಟವಿಧಾರ್ಚನೆ ಮಾಡಿ ಮುಖಕ್ಕೆ ಮಂಗಳಾರತಿ ಎತ್ತಿದರೂ ಅದನ್ನೇ ಹೊಗಳಿಕೆ ಎಂದು ಸಂಭ್ರಮಿಸುವ ನಮೋ ಮೂರ್ಖತನಕ್ಕೆ ಮುಖ ಕಿವಿಚಿಕೊಂಡ. ಹಿನ್ನೆಲೆಯಲ್ಲಿ ʼನಗುವುದೋ…ಅಳುವುದೋ…ʼ ಎಂಬ ಪ್ಯಾಥೊ ಸಾಂಗ್‌ಕೇಳಿಬರುತ್ತಿತ್ತು.</p>



<p>ಆ ದಿನ ಬೆಳ್ಳಂಬೆಳಗ್ಗೆ ಅ.ಕು.ಮಂತ್ರಿ ಮತ್ತು ಕಮಲೀ ಪಡೆ ಮುಖ್ಯಸ್ಥ ಕಪಿ ದಡ್ಡನನ್ನು ಬರ ಹೇಳಿದ ಸಾಮ್ರಾಟ ನಮೋ, ಮಾಯಾದರ್ಪಣದಲ್ಲಿ ತನ್ನ ಫಾರಿನ್‌ಟೂರಿನ ಶೂಟಿಂಗನ್ನು ರೀವೈಂಡ್‌ಮಾಡುತ್ತ, ಡಯಾಸ್ಪೊರದಲ್ಲಿ ಅನಿವಾಸಿ ದೇಶಭಕ್ತರು ಭಜನೆ ಮಾಡುವುದನ್ನು ತೋರಿ ಆನಂದದಲ್ಲಿ ಮುಳುಗಿದ್ದ. ನಮೋವನ್ನು ಮೆಚ್ಚಿಸಲು ಕಪಿ ದಡ್ಡ ಆಗಾಗ್ಗೆ ಎದ್ದು “ಓಂ ನಮೋ…ಓಂ ನಮೋ” ಎನ್ನುತ್ತ ತಾಳ ಹಾಕಿ ಕುಣಿಯುವುದು ಕುತಂತ್ರಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಆದರೂ, ದಡ್ಡನಿಗೆ ಉಗಿಯೋಕು ಆಗದೆ ಉಗುಳನ್ನು ನುಂಗೋಕು ಆಗದೇ &nbsp;ಕುಳಿತಲ್ಲಿಯೇ ಚಡಪಡಿಸಿದ.</p>



<p>ಅಷ್ಟರಲ್ಲಿ &#8211; ಮಾ.ಕೃ.ಕುಟೀರದ ಪೂಜಾರಿ ಗಣವೇಶಧಾರಿಯಾಗಿ ನೆಲಕ್ಕೆ ಕೋಲು ಬಡಿಯುತ್ತ “ಆಲ್‌ಇಸ್‌ನಾಟ್‌ವೆಲ್”‌ಎಂದು ಕೂಗುತ್ತ ಅಂತಃಪುರದತ್ತಲೇ ಬರುವುದನ್ನು ಕುತಂತ್ರಿ ಕಿಟಕಿಯಲ್ಲಿ ಗಮನಿಸಿದ. ಎಷ್ಟು ಬಾರಿ ಹೇಳಿ ಕಳಿಸಿದರೂ ಕುಟೀರದ ಕಡೆ ತಲೆ ಹಾಕದಿದ್ದಕ್ಕೆ ರೋಸಿ ಹೋದ ಪುರೋಹಿತ, ಕ್ಯಾತೆ ತೆಗೆಯಲೆಂದೇ ಅರಮನೆಗೆ ಬರುತ್ತಿರುವುದನ್ನು ಊಹಿಸಿದ ಕುತಂತ್ರಿ ಕಪಿ ದಡ್ಡನಿಗೆ ಕಣ್ಸನ್ನೆ ಮಾಡಿದ. ಅವನು ಹೆದರುತ್ತಲೇ ಓಡಿ ಹೋಗಿ ಮಂಚದ ಕೆಳಗೆ ಅವಿತುಕೊಂಡ.</p>



<p>ಕಾವಲಿಗಿದ್ದ ರಾಜಭಟರನ್ನು ದೂಡಿಕೊಂಡು ಅಂತಃಪುರಕ್ಕೆ ಸೀದಾ ನುಗ್ಗಿದ ಪೂಜಾರಿ&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp;&nbsp; ಕುರ್ಚಿಯೊಂದನ್ನು ಎಳೆದು ನಮೋನ ಎದುರಿಗೆ ಕಾಲು ಮೇಲಾಕಿ ಕುಳಿತು ಬುಸುಗುಟ್ಟ ತೊಡಗಿದ. ಆತ್ಮರತಿಯ ಸಂತೋಷದ ಅಲೆಗಳಲ್ಲಿ ತೇಲಾಡಿ, ಓಲಾಡುತ್ತಿದ್ದ ನಮೋ ದೊಪ್ಪೆಂದು ನೆಲಕ್ಕೆ ಬಿದ್ದ.</p>



<p>“ಏನ್…ಪುರೋಹಿತರೇ? ಸುದ್ದಿ ಕೊಡದೇ ಬಂದಿದ್ದೀರ? ಕುಟೀರದಲ್ಲಿ ಎಲ್ಲರೂ ಸೌಖ್ಯವೇ?” ಎಂದು ನಮೋ ಕೇಳಿದ್ದೇ ತಡ “ನಿನ್ನ ಸೌಖ್ಯ ನೆಗೆದುಬಿತ್ತು. ಎಲ್ಲಿ? ಆ ಕಪಿ…ಆ ದಡ್ಡ…ಎಷ್ಟು ಸರ್ತಿ ಹೇಳಿ ಕಳಿಸೋದು. ಕುಟೀರಕ್ಕೆ ಅಗೌರವ ತೋರುವುದೇ? ನಂಗೆ ಗೊತ್ತು. ಎಲ್ಲವೂ ನಿಮ್ಮಗಳದೇ ಚಿತಾವಣೆ” ಎಂದ ಕಣ್ಣಲ್ಲಿ ಕೆಂಡ ಕಾರಿದ. ವಿಷಯ ತನ್ನ ಬುಡಕ್ಕೇ ಬರುತ್ತಿರುವುದನ್ನು ಗಮನಿಸಿದ ಕುತಂತ್ರಿ ಮಂತ್ರಿ, ದೂರ ಹೋಗಿ ಮೂಲೆ ಹಿಡಿದು ಕೈ ಕಟ್ಟಿಕೊಂಡು ವಿನಮ್ರತೆಯಿಂದ ನಿಂತ.</p>



<p>“ಪುರೋಹಿತರೇ…ವಿಷಯ ಏನೆಂದು ತಿಳಿಸಬಾರದೇ? ಕುಟೀರದ ವ್ಯವಹಾರದಲ್ಲಿ ನಾವ್ಯಾಕೆ ಮೂಗು ತೂರಿಸೋಣ?”</p>



<p>“ನಿಮ್ಮ ನಟನಾ ಕೌಶಲ್ಯವನ್ನು ಸಗಣಿ ಭಕ್ತರ ಮುಂದಿಡಿ. ನನ್ನತ್ರ ನವರಂಗಿ ಆಟ ಬೇಡ. ಅವಧಿ ಮುಗಿದ ಕೂಡಲೇ ಕುರ್ಚಿ ತಂದು ಕುಟೀರಕ್ಕೆ ಒಪ್ಪಿಸಬೇಕು. ಅದು ಕುಟೀರದ ನಿಯಮ. ಆ ದಡ್ಡ ಕುರ್ಚಿಗೇ ಫೆವಿಕಾಲ್‌ಹಾಕಿ ಕುಂತಿದ್ದಾನೆ. ಹೇಳಿ ಕಳಿಸಿದರೆ ಬರೋ ಸೌಜನ್ಯವಿಲ್ಲ!”</p>



<p>“ಅಯ್ಯೋ…ಒಂದೆರೆಡು ತಿಂಗಳು ತಡ ಆದ್ರೆ ಆಕಾಶ ಕಳಚಿ ಬೀಳುತ್ತಾ? ಇಷ್ಟು ವರ್ಷ ಅಂಟಿಕೊಂಡಿರೊ ಫೆಲಿಕಾಲ್ನ ಬಿಡಿಸಬೇಡವೇ? ಅಧ್ಯಕ್ಷ ಕುರ್ಚಿನ ನಾನೇ ಖುದ್ದಾಗಿ ಮೆರವಣಿಗೆಲೀ ತಂದು ಕುಟೀರಕ್ಕೆ ಒಪ್ಪಿಸುತ್ತೇನೆ. ಸಮಾಧಾನ ಮಾಡಿಕೊಳ್ಳಿ”</p>



<p>“ನಿಮ್ಮೆಲ್ಲಾ ಕುತಂತ್ರಗಳು ಗೊತ್ತಿರೋದೆ” ಎಂದು ಒಮ್ಮೆ ಅ.ಕು.ಮಂತ್ರಿಯ ಕಡೆ ದಿಟ್ಟಿಸಿ “ನಮೋ ಸಾಮ್ರಾಟ ದೇವರ ಎತ್ತರಕ್ಕೆ ಬೆಳೆದಿದ್ದಾನೆ. ಈಗ ಕಮಲಿಗಳಿಗೆ ಕುಟೀರದ ಹಂಗಿಲ್ಲಾಂತ ಆ ದಡ್ಡನ ಬಾಯಲ್ಲಿ ಹೇಳಿಸಿದ್ದು ಯಾರೂಂತ ನಂಗೊತ್ತು. ತಿಪ್ಪೆ ಸಾರಿಸೋ ಮಾತು ಬೇಡ. ಇದು ನಾನು…ಅಂದರೆ ಕುಟೀರದ ಪೂಜಾರಿಯಾಗಿ ಕೊಡುತ್ತಿರೋ ಕೊನೆ ವಾರ್ನಿಂಗ್!‌ನಿಮಗೂ ಎಪ್ಪತೈದು ಆಯ್ತು. ರೂಲ್ಸ್‌ಎಲ್ಲರಿಗೂ ಒಂದೇ. ಇರೋದು ಎರಡೇ ಅಪ್ಷನ್.‌ಒಂದೋ ಸಿಂಹಾಸನದ ವ್ಯಾಮೋಹ ಬಿಡಿ. ಇಲ್ಲಾ…ಅಧ್ಯಕ್ಷ ಕುರ್ಚಿನಾ ಕುಟೀರಕ್ಕೆ ತಂದೊಪ್ಪಿಸಿ”</p>



<p>ಸುತ್ತಿಬಳಸಿ ಇಂಡೈರೆಕ್ಟಾಗಿ ಸಿಂಹಾಸನಕ್ಕೆ ಕೈ ಹಾಕಿದ್ದರಿಂದ ನಮೋ ಒಮ್ಮೆಗೆ ಕಂಗಾಲಾದ. ಸಿಂಹಾಸನವಿಲ್ಲದ ಶೋಕಿಲಾಲ ಬದುಕು ಹೇಗೆ? ಫಾರಿನ್‌ಟೂರು ಹೊಡೆಯುತ್ತ, ಫೋಟೊ ಶೂಟಿಂಗಂತ ಮೋಜು ಮಸ್ತಿ ಮಾಡೋದು ಹೇಗೆ? ದಶಕಗಳಿಂದ ಸಾಕಿದ ಅಖಂಡ ಲಂಡಭಕ್ತರ ಗತಿ ಏನು? ಕಣ್ಣಿಗೆ ಕತ್ತಲು ಕಟ್ಟಿದಂತಾಗಿ ತಳ ಮುಟ್ಟಿ ನೋಡಿಕೊಂಡ. ಫೆಲಿಕಾಲ್‌ಅಂಟು ಗಟ್ಟಿಯಾಗಿದ್ದು ನಿಟ್ಟುಸಿರು ಬಿಟ್ಟ. ಬೌನ್ಸ್‌ಬಾಲ್‌ಹಾಕಿ ಪ್ರಯೋಜನವಿಲ್ಲವೆಂದು ಗೂಗ್ಲೀ ಹಾಕಲು ಯೋಚಿಸಿದ.</p>



<p>“ಸ್ವಲ್ಪ ಸಮಯ ಕೊಡಿ. ಎಲ್ಲಾ ಸರಿ ಮಾಡ್ತೇನೆ. ಅದಿರಲಿ. ಆಶ್ರಮವಾಸಿಗಳಿಗೆ, ಯುವಕರ ತಲೇಲಿ &nbsp;&nbsp;&nbsp;ಸನಾತನ ಸಗಣಿ ತುಂಬೋರಿಗೆ, ಮಂದಿ ಮಧ್ಯೆ ಬೆಂಕಿ ಹಚ್ಚೋರಿಗೆ ಕೊಡಲು ದುಡ್ಡು ಸಾಕಾಗ್ತಿಲ್ಲ ಅಂತ ಕೇಳಿದೆ. ವ್ಯವಸ್ಥೆ ಮಾಡ್ತೀನಿ. ಚಿಂತೆ ಮಾಡ್ಬೇಡಿ” &nbsp;</p>



<p>“ಏನೂಂತ…ಮಾತಾಡ್ತಿದ್ದೀಯ. ಕೂತ ಸಿಂಹಾಸನಕ್ಕಾದರೂ ಗೌರವ ಬೇಡವೇ? ಅವರೆಲ್ಲ ದೇಶ ರಕ್ಷಣೆ, ಧರ್ಮ ರಕ್ಷಣೆ ಮಾಡ್ತಿರೋದು. ಅದು ನಿಂಗೆ ಗೊತ್ತಿರೋದೆ ಅಲ್ವಾ? ನಾಲಿಗೇನಾ ಇಷ್ಟು ಹಗುರ ಬಿಡಬಾರದು. ಆಯ್ತು…ಬೇಗ ವ್ಯವಸ್ಥೆ ಮಾಡು. ಆದರೆ, ಆಶ್ರಮವಾಸಿಗಳನ್ನು ಟುರುಪೀಸ್‌ಟ್ರೋಲ್ಗಳಿಗೆ ಹೋಲಿಸಿ ದುಡ್ಡು ಕೊಡೋವಾಗ ಕಂಜೂಸಿತನ ಬೇಡ. ಖರ್ಚು ಬಹಳಷ್ಟಿದೆ. ಹಾಗೆ ದಡ್ಡನ ಕುರ್ಚಿ ಬೇಗ ಕಳಿಸು…ಇಲ್ಲಾಂದ್ರೆ ಸಿಂಹಾಸನ ಬಿಡು. ರಾಜನಾಗಲು ನಿನಗಿಂತ ಯೋಗ್ತೆ ಇರೋ ಪೂರ್ವಾಶ್ರಮದ ನಿವಾಸಿಗಳು ಬಹಳ ಮಂದಿ ಇದ್ದಾರೆ” ಎಂದು ಕುಳಿತಲ್ಲಿಂದ ಎದ್ದವನು “ಕುರ್ಚಿ ಮೇಲೆ ಕೂತಾಕ್ಷಣ ರಾಜ್ಯಭಾರ ಮಾಡೋ ಕ್ಯಪ್ಯಾಸಿಟಿ ಬಂದ್ಬಿಡುತ್ತ!   ಬುದ್ದಿ ಬೇಕು. ಖಾಲಿ ಡಬ್ಬದಿಂದ ಬರೀ ಸೌಂಡೇ ಬರೋದು. ಟೆಲಿಪ್ರಾಂಟರ್‌ಇಲ್ಲದೆ ನೆಟ್ಟಗೆ ಮೂರು ಮಾತು ಆಡೋಕೆ ಬಾರದ ಸಾಮ್ರಾಟ ಅಂತ ಜನ ಉಗಿತ್ತಿದ್ದಾರೆ. ಯಾವ ಲೋಕದಿಂದ ಉದುರಿದ ದೇವರು ಇವ್ನು…ಮೂರು ಬಿಟ್ಟವ….ಊರಿಗೆ…ಅಲ್ಲಾ ಜಗತ್ತಿಗೆ ದೊಡ್ಡವ” ಎಂದು ಗೊಣಗುತ್ತ ಅಲ್ಲಿಂದ ಹೊರಟ. </p>



<p>(ಸಶೇಷ)</p>



<ul class="wp-block-list">
<li><strong>ಚಂದ್ರಪ್ರಭ ಕಠಾರಿ</strong></li>
</ul>



<p><strong>cpkatari@yahoo</strong><strong>.com</strong></p>
]]></content:encoded>
					
		
		
			</item>
		<item>
		<title>ಫೊರೆನಿಕ್ಸ್ ಲ್ಯಾಬಲ್ಲಿ ಪತ್ತೆಯಾದ ಮೊಸಳೆ ಕಣ್ಣೀರು (ರಾಜಕೀಯ ವಿಡಂಬನೆ)</title>
		<link>https://peepalmedia.com/crocodile-tears-discovered-in-forensics-lab-political-satire/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Sep 2024 11:43:00 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[bjp govt]]></category>
		<category><![CDATA[Bjp IT cell]]></category>
		<category><![CDATA[bjp karnataka]]></category>
		<category><![CDATA[BJP leader]]></category>
		<category><![CDATA[BJP leader Gurtaj Bhullar wife]]></category>
		<category><![CDATA[Boycott Modhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[Narendra modhi road show]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Satire]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44863</guid>

					<description><![CDATA[ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ [&#8230;]]]></description>
										<content:encoded><![CDATA[
<p>ತಣ್ಣಗೆ ಮಲಗಿದ್ದ ಕತ್ತಲನ್ನು ಸೀಳುತ್ತ ಸುದ್ದಿ ನಿಧಾನವಾಗಿ ಹರಡುತ್ತಿತ್ತು. ಆ ತಡರಾತ್ರಿ ಅಶರೀರವಾಣಿಯಾಗಿ ಕೇಳಿ ಬಂದ ಸುದ್ದಿಯಿಂದ ಆತಂಕಗೊಂಡ ಅಖಿಲ ಬ್ರಹ್ಮಾಂಡ ಅಂಡಾಂಡ ಪಿಂಡ ಲಂಡ ಭಕ್ತರು ತಂಡೋಪತಂಡವಾಗಿ, ಪ್ರಜೆಗಳ ತೆರಿಗೆಯ ಬೆವರಲ್ಲಿ ಕಟ್ಟಿದ ನಮೋನ ಐಷಾರಾಮಿ ಅರಮನೆಯತ್ತ ದೌಡಾಯಿಸಿದ್ದರು. ವಿಷಯವೇನೆಂದು ವಿಶದವಾಗಿ ಯಾರಿಗೂ ತಿಳಿದಿರಲಿಲ್ಲ. ಮುಂಜಾನೆ ಎದ್ದಾಗಿಂದ, ಮೂಲೆ ಸಂದಿಯಲ್ಲಿದ್ದ ನಮೋ ವಿರೋಧಿಗಳನ್ನು ಹುಡುಕಿ, ಮತ್ತವರು ಉಸಿರೆತ್ತದಂತೆ ತದುಕಲು ಇಡಿ, ಐಟಿ, ಸಿಬಿಐಗಳನ್ನು ಛೂ ಬಿಟ್ಟು ಸುಸ್ತಾಗಿ ಮಲಗಿದ್ದ ಅಪರಿಮಿತ ಕುತಂತ್ರಿ ಮಂತ್ರಿ ಕೂಡ ಸುದ್ದಿ ಕೇಳಿ ಗೊಣಗುತ್ತ ಅರೆನಿದ್ದೆಯಿಂದ ಎಚ್ಚೆತ್ತ. ನಮೋ ಗ್ರಹಚಾರವನ್ನು ಹಳಿಯುತ್ತ ಅರಮನೆಯತ್ತ ಹೆಜ್ಜೆ ಹಾಕಿದ.</p>



<p>ಇನ್ನೇನು ಅರಮನೆ ಬಂತು ಅನ್ನುವಷ್ಟರಲ್ಲಿ ಗಕ್ಕನೆ ನಿಂತ ಅಪರಿಮಿತ ಕುತಂತ್ರಿ ಆಕಾಶದತ್ತ ದಿಟ್ಟಿಸಿದ. ಫಳಫಳನೆ ಹೊಳೆವ ನಕ್ಷತ್ರಗಳು, ಚಂದ್ರನ ಬಿಟ್ಟರೆ ಎಲ್ಲೂ ಚಾದರದಷ್ಟು ಮೋಡಗಳು ಕಾಣಲಿಲ್ಲ. ಹಾಗಿದ್ದರೆ, ರಸ್ತೆಯೆಲ್ಲಾ ತೇವಗೊಂಡು ನೀರು ಹರಿದು ಬರುತ್ತಿರುವುದಾದರೂ ಎಲ್ಲಿಂದ? ಗಾಬರಿಯಿಂದ ಅರಮನೆ ಹೊಕ್ಕಾಗ ಅಲ್ಲಿಯ ದೃಶ್ಯ ಕಂಡು ಗಕ್ಕನೆ ನಿಂತ. ನೆರೆದಿದ್ದ ನೂರಾರು ಲಂಡಭಕ್ತರ ರೋದನೆಯ ಕಣ್ಣೀರು ಹೊಳೆಯಾಗಿ ಹರಿದು ಬರುತ್ತಿತ್ತು.</p>



<p>ಹೆಜ್ಜೆ ಇರಿಸಲು ಜಾಗವಿಲ್ಲದಂತೆ ನೆರೆದಿದ್ದ ಭಕ್ತರ ಮಧ್ಯೆ ಇರುಕಿಸಿಕೊಂಡವನು ತಳ್ಳಾಡುತ್ತ ಅವರನ್ನು ದೂಡಿ ಕೊಂಡು ನಮೋ ಕೊಠಡಿಯತ್ತ ಬಂದ. ಅದಾಗಲೇ ಮಂತ್ರಿಗಳು, ಪೂರ್ವಾಶ್ರಮದ ಚಡ್ಡಿಧಾರಿಗಳು, ಗೋದಿ ಮಾಧ್ಯಮದ ಬಕೆಟ್ ಪತ್ರಕರ್ತರು &#8211; ಎಲ್ಲರೂ ಮ್ಲಾನವದನರಾಗಿ ನಿಂತದ್ದು ಕಂಡ ಅಪರಿಮಿತ ಕುತಂತ್ರಿಗೆ ಸುದ್ದಿ ತನಗೆ ತಡವಾಗಿ ಸಿಕ್ಕು ಕೊನೆಯವನಾಗಿ ಬಂದದ್ದಕ್ಕೆ ಮುಜುಗರವಾಯಿತು. ಏನು ನಡೆದಿದೆ? ಸಾಮ್ರಾಟನಿಗೆ ಏನಾದರೂ ವಿಪತ್ತು ಒದಗಿ ಬಂತೆ? ಏನೊಂದು ತಿಳಿಯದೆ ಕಮಲೀ ಮುಖಂಡ ಕಪಿ ದಡ್ಡನತ್ತ ಕಣ್ಸನ್ನೆಯಲ್ಲಿ ಕೇಳಿದರೆ ʼಎಲ್ಲಾ ಮುಗಿದು ಹೋದ ಹಾಗೆ!ʼ ಎನ್ನುವಂತೆ ಕೊಠಡಿಯತ್ತ ಜೋಲು ಮೋರೆ ಮಾಡಿದ. ಕೊಠಡಿಯ ಬಾಗಿಲ ಕೆಳಗಿನ ಸಂದಿಯಲ್ಲಿ ನೀರು ಹರಿದು ಬಂದು ಲಂಡಭಕ್ತರ ಕಣ್ಣೀರನ ಮುಖ್ಯವಾಹಿನಿಯಲ್ಲಿ ಸೇರುತ್ತಿತ್ತು.</p>



<p>ಮತ್ತಷ್ಟು ಗೊಂದಲಗೊಂಡ ಅಪರಿಮಿತ ಕುತಂತ್ರಿ, ಅಲ್ಲೇ ನಿಂತು ಕಣ್ಣೀರನ್ನು ಒರೆಸುತ್ತ ಕರ್ಚೀಫನ್ನು ಹಿಂಡುತ್ತಿದ್ದ ನಮೋ ಆಪ್ತಕಾರ್ಯದರ್ಶಿಗೆ “ಸಾಮ್ರಾಟರು ಎಲ್ಲಿ?” ಎಂದ.</p>



<p>“ವಿದೇಶಕ್ಕೆ ತೆರಳಿದ್ದ ನಮೋ ಮಹಾಸ್ವಾಮಿಗಳು ತಡರಾತ್ರಿ ಬಂದಾಗ ಬಹಳ ಚಿಂತೆಯಲ್ಲಿದ್ದಂತೆ ಕಂಡರು. ತುಟಿ ಎರಡು ಮಾಡದೆ ಬಿರುಗಾಳಿಯಂತೆ ಕೊಠಡಿ ಸೇರಿ ದಢಾರೆಂದು ಅಗುಳಿ ಹಾಕಿಕೊಂಡರು. ನಾನು ಮಾತಾಡಿಸುವ ಧೈರ್ಯ ಮಾಡಲಿಲ್ಲ. ಅರ್ಧತಾಸಿನ ನಂತರ “ಅಯ್ಯೋ!” ಎಂದು ಕೂಗಿದ ಹಾಗಾಯಿತು. ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ. ಒಳಗಿನಿಂದ ಒಂದೇ ಸಮನೆ ನೀರು ಪ್ರವಾಹದಂತೆ ಹರಿದು ಬಂತು”</p>



<p>ಕಳೆದ ವರ್ಷ ಕೂಡ ಇಂಥದ್ದೇ ಪ್ರಸಂಗ ನಡೆದದ್ದು ಅ. ಕುತಂತ್ರಿಯ ನೆನಪಿಗೆ ಬಂತು. ʼಆಗ ಮಮ್ಮೀ…ಮಮ್ಮೀನ ನೋಡ್ಬೇಕು ಅಂತ ರಚ್ಚೆ ಹಿಡಿದಿದ್ದ. ಈಗ ಮಮ್ಮೀ ಇಲ್ಲ. ಮತ್ಯಾವ ಹೊಸ ನೌಟಂಕಿ ಶುರು ಮಾಡಿದ್ದಾನೊ! ಇತ್ತೀಚಿಗೆ ಮೆಥೆಡ್ ಆಕ್ಟಿಂಗ್ ಬೇರೆ ಪ್ರಾಕ್ಟಿಸ್ ಮಾಡ್ತಿದ್ದಾನೆʼ ಎಂದು ತಲೆ ಕೆರೆದುಕೊಂಡು, ಬಾಗಿಲನ್ನು ಒಡೆಯಲು ಕಾವಲುಗಾರರಿಗೆ ಹೇಳಿದ.</p>



<p>ಯಾರೂ ಒಳ ಬರದಂತೆ ಎಚ್ಚರಿಸಿ ತಾನೊಬ್ಬನೇ ರೂಮಿನೊಳಗೆ ಬಂದರೆ, ನಮೋ ಬಿಟ್ಟ ಕಣ್ಣು ಬಿಟ್ಟಂತೆ ಶೂನ್ಯದತ್ತ ದಿಟ್ಟಿಸುತ್ತ ಮಂಚದ ಮೇಲೆ ಕುಳಿತಿದ್ದ. ಮುಖದಲ್ಲಿ ದುಃಖ ಕೆರೆಯಂತೆ ನಿಂತಿತ್ತು. ಬಲಗಣ್ಣಿಂದ ಮಾತ್ರ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ʼಒಂದೇ ಕಣ್ಣಿನಿಂದ ಅಳು…ವಾಹ್! ಗ್ರೇಟ್ ಆಕ್ಟಿಂಗ್ʼ. ಯಾವುದಕ್ಕೂ ಇರಲಿ ಎಂದು ತನ್ನ ಮೊಬೈಲಲ್ಲಿ ಫೋಟೊ ಕ್ಲಿಕ್ಕಿಸಿದ. ಹಿನ್ನೆಲೆಯಲ್ಲಿ ಕಣ್ಣೀರಧಾರೆ…ಇದೇಕೆ…ಇದೇಕೆ…ಪ್ಯಾತೊ ಸಾಂಗ್ ಕೇಳಿಬರುತ್ತಿತ್ತು. “ಮಹಾಸ್ವಾಮಿಗಳೆ… ಏನಾಯಿತು? ಎಚ್ಚರಗೊಳ್ಳಿ” ಎಂದರೆ ನಮೋ ಅಲುಗಾಡದೆ ಶಿಲೆಯಾಗಿದ್ದ.</p>



<p>ಅ. ಕುತಂತ್ರಿ ಕೂಡಲೇ &#8211; ಆಪ್ತಕಾರ್ಯದರ್ಶಿ, ಕಪಿ ದಡ್ಡ, ಮಂತ್ರಿಮಂಡಲ, ಮಾ.ಕೃ.ಕುಟೀರದ ಪುರೋಹಿತ ಸೇರಿದಂತೆ ಎಲ್ಲಾ ಕೇಸರಿ ಪ್ರಮುಖರನ್ನು ಸೇರಿಸಿ ನಮೋ ಸಾಮ್ರಾಟರಿಗೆ ಆಗಿರುವ ಆಘಾತವನ್ನು ಅರಿಯಲು ತುರ್ತುಸಭೆಯನ್ನು ಕರೆದ. ಸಭೆಯಲ್ಲಿ ಕಳೆದೆರೆಡು ದಿನಗಳಿಂದ ನಮೋ ಸುತ್ತ ಆದ ಘಟನೆಗಳನ್ನು ಕೆದಕುತ್ತ ಶೋಧನೆ ನಡೆಯಿತು.</p>



<p>24&#215;7 – ನಮೋಗೆ ಸಕಲ ಇಷ್ಟಾರ್ಥ ಸೇವೆ ಸಲ್ಲಿಸುತ್ತ ಜೊತೆಗಿರುವ ಆಪ್ತಕಾರ್ಯದರ್ಶಿಯ ಅಭಿಪ್ರಾಯವನ್ನು ಮೊದಲು ಕೇಳಲಾಗಿ “ಬಾಲಕನಂತಿದ್ದ ರಾಗಾ ಈಗ ಬ್ಲಾಕ್ ಬೆಲ್ಟ್ ತೊಟ್ಟು, ತೊಡೆ ತಟ್ಟುತ್ತ ಅಗ್ನಿವೀರ್, ಶೇರ್ ಮಾರ್ಕೆಟ್ ಸ್ಕಾಂಡಲ್, ಪರೀಕ್ಷೆ ಪೇಪರ್ ಲೀಕ್, ಜಾತಿ ಜನಗಣತಿ..ಎಕ್ಸೆಟ್ರಾಂತ ಇತ್ತೀಚಿಗೆ ಎಸೆಯುವ ಸವಾಲುಗಳಿಗೆ ಕೌಂಟರ್ ಕೊಡಲಾಗದೆ ಮಹಾಸ್ವಾಮಿಗಳು ಕಂಗೆಟ್ಟಿದ್ದರು. ಅದೂ ಸಾಲದೂಂತ ತಮ್ಮದೇ ಕಮಲೀ ಸಭಾ ನಡಾವಳಿಗಳ ಬಗ್ಗೆ ಬಹಳ ಕಳವಳಗೊಂಡಿದ್ದರು. ತಾನು ಎತ್ತಿ ಆಡಿಸಿ, ಮುದ್ದಾಡಿ ಗದ್ದುಗೆ ಮೇಲೆ ಕೂರಿಸಿದ ಬುಲ್ಡ್ ಡೋಜರ್ ಭೋಗಿಬಾಬಾ, ಸಭೆಗಳಲ್ಲಿ ಎಲ್ಲರಂತೆ ಸಾಷ್ಟಾಂಗ ಬೀಳುವುದಿರಲಿ ಕನಿಷ್ಟ ನಮಸ್ಕರಿಸಿ ಗೌರವ ಕೊಡದೆ ಅಪಮಾನಿಸಿದ್ದು ಅವರನ್ನು ಚಿಂತೆಯ ಕೂಪಕ್ಕೆ ತಳ್ಳಿತ್ತು. ಮೊನ್ನೆ ಅವರ ಫ್ಯಾಷನ್ ಡಿಸೈನರ್ ಅಳತೆ ತೆಗೆದುಕೊಳ್ಳುವಾಗ ಐವತ್ತಾರು ಇದ್ದ ಎದೆ ಗಾತ್ರ ಇಂಚಿನ ಪಟ್ಟಿಯಲ್ಲಿ ಮೂವತ್ತಾರಕ್ಕೆ ಇಳಿದದ್ದನ್ನು ನೋಡಿ ಅವರು ಕುಸಿದು ಹೋಗಿದ್ದರು” ಎಂದು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದ.</p>



<p>“ಅದು ಇರಬಹುದು. ಆದರೆ…” ಎಂದು ಮಧ್ಯೆ ಬಾಯಿ ಹಾಕಿದ ವಿದೇಶಾಂಗ ಮಂತ್ರಿ “ನೆನ್ನೆ ರೂಸ್ ಗೆ ಹೋಗಿದ್ದಾಗ ಎರಡೂ ದೇಶದ ಪ್ರಧಾನಿಗಳನ್ನು ಕೂಡಿಸಿ ʼಫಾರಿನ್ ಮಿತ್ರೋ…ಇದು ಕಲಹಕ್ಕೆ ಕಾಲವಲ್ಲ. ಯುದ್ದ ನಿಲ್ಲಿಸಿʼ ಎಂದು ಶಾಂತಿಯ ಮಂತ್ರ ಜಪಿಸಿದ ವಿಶ್ವಗುರುವಿನ ಮಾತಿಗೆ ಅವರುಗಳು ಮೊದಲಿಗೆ ತಲೆಯಾಡಿಸಿ, ಕೈ ಕುಲುಕಿ ಹಗ್ ಮಾಡಿದ್ದರು. ಆದರೆ…ಅನಿವಾಸಿಗಳನ್ನು ಸ್ಟೇಡಿಯಮ್ಮಲ್ಲಿ ಗುಡ್ಡೇ ಹಾಕಿ, ದೇಶದಲ್ಲಿ ಆಗುತ್ತಿರುವ ಬುಲೆಟ್ ಟ್ರೈನ್ ಸ್ಪೀಡಿನ ಡೆವಲಪ್ ಮೆಂಟ್ ಬಗ್ಗೆ ಬುರುಡೆ ಬಿಡುತ್ತಿರಬೇಕಾದರೆ ಬಾಂಬೊಂದು ನಮೋ ಸಾಹೇಬರ ಅಡಿಗೆ ಬಂದು ಬಿತ್ತು. ಎದ್ದೇನೊ ಬಿದ್ದೇನೆಂದು ಪುಷ್ಪಕ ವಿಮಾನ ಹತ್ತಿ ವಾಪಸ್ಸು ಬರೋವಾಗ ನಮೋ ಸಾಹೇಬರು ಭಯದಿಂದ ನಡುಗುತ್ತಿದ್ದರು. ಅದೂ ಒಂದು ಕಾರಣ ಇರಬಹುದು” ಎಂದದ್ದು ಅ.ಕುತಂತ್ರಿಗೆ ಸರಿಬರಲಿಲ್ಲ. “ಹು…ಹು…ಇಲ್ಲ..ನಮೋ ಸಾಹೇಬರು ರಾಕೆಟ್ಟುಗಳನ್ನು ಕೈಯಲ್ಲೇ ಹಿಡಿದು ಹಾರಿಸುವ ಎಂಟೆದೆ ಅಲ್ಲ…ಹದಿನೆಂಟೆದೆ ಭಂಟ. ಹೆದರಿಕೊಂಡು ಬಂದಿರಲಾರರು. ತಾನಿಲ್ಲದ ಟೈಮಲ್ಲಿ ವೈರಿಗಳು ದೇಶವನ್ನು ಒಡೆದು ಹಾಕುತ್ತಾರೆಂದು ಬೇಗ ಬಂದಿದ್ದಾರೆ…ಅಷ್ಟೇ” ಎಂದು ಕಿತ್ತು ಹೋದ ನಮೋ ಧೈರ್ಯಕ್ಕೆ ಒಂದಷ್ಟು ತೇಪೆ ಮೆತ್ತಿದ.</p>



<p>ಅಷ್ಟರಲ್ಲಿ ಕಪಿ ದಡ್ಡ “ಕುತಂತ್ರಿಗಳೇ…ಸಾಮ್ರಾಟರ ಮನೋ ವೇದನೆಗೆ ನಾನೂ ಕಾರಣ ಇರಬಹುದು. ಆ ಪೊಮೆರಿಯನ್ ತಳಿಯ ಮಂಗನಾ ಶೇಪೌಟನ್ನು ಕಮಲೀ ಪಕ್ಷಕ್ಕೆ ಸೇರಿಸಿ ತಪ್ಪು ಮಾಡಿದೆ. ಎಷ್ಟು ಹೇಳಿದರೂ ನಾಬಾಲಿಕ್ ಬುದ್ದಿಯ ಅದಕ್ಕೆ ಅರ್ಥವಾಗುತ್ತಿಲ್ಲ. ಚಳುವಳಿ ಮಾಡುತ್ತಿರುವ ರೈತರು ಟೆರರಿಷ್ಟ್ ಗಳು. ಅಲ್ಲಿ ರೇಪ್ ಗಳು ಆಗುತ್ತಿವೆ. ಮರ್ಡರ್ ಮಾಡಿ ಡೆಡ್ ಬಾಡಿಗಳನ್ನು ನೇತು ಹಾಕಿದ್ದಾರೆ…ಹೀಗೆ ತಲೆಬುಡ ಇಲ್ಲದೆ ಮಾತಾಡುತ್ತಿದ್ದಾಳೆ. ಜನರು, ವಿರೋಧಿಗಳು ಇವೆಲ್ಲ ನಮೋ ಹೇಳಿಕೊಟ್ಟ ಗಿಳಿಮಾತುಗಳು ಎಂದು ವೃಥಾ ಸಾಮ್ರಾಟರನ್ನು ಛೇಡಿಸುತ್ತಿದ್ದಾರೆ. ಅಕಟಕಟಾ…” ಎಂದು ಗದ್ಗದಿತನಾದ.</p>



<p>ಎಷ್ಟು ಚರ್ಚಿಸಿದರೂ ನಮೋ ರೋದನೆಯ ಮೂಲ ಯಾವುದೆಂದು ತಿಳಿಯಲು ಸಭೆ ಸೋತಾಗ ಅ.ಕುತಂತ್ರಿ ಫೋರೆನಿಕ್ಸ್ ಲ್ಯಾಬ್ ತಂತ್ರಜ್ಞರಿಗೆ ಬರಹೇಳಿದ. ಇಡೀ ದೇಹ ಮುಚ್ಚುವಂತೆ ಪಿಪಿಇ ತೊಟ್ಟು ಬಂದ ಪರಿಣಿತರು ಸ್ಟ್ಯಾಚು ಆಗಿದ್ದ ನಮೋ ಕಣ್ಣೀರಿನ ಸ್ಯಾಂಪಲ್ಲನ್ನು ಸಂಗ್ರಹಿಸಿ ಅ.ಕುತಂತ್ರಿಗೆ ವಂದಿಸಿ ಹೊರಟಾಗ, “ವರ್ಷಗಟ್ಟಲೆ ರಿಸರ್ಚ್ ಮಾಡುತ್ತ ಕೂರಬೇಡಿ. ಬೇಗ ರಿಸಲ್ಟ್ ಬೇಕು. ಇದು ದೇಶದ ಅಳಿವು ಉಳಿವಿನ ಪ್ರಶ್ನೆ” ಎಂದು ಗುಟುರು ಹಾಕಿದ. ಅಷ್ಟರಲ್ಲಿ ಕಾವಲುಗಾರ ಬಂದು ಆಪ್ತಕಾರ್ಯದರ್ಶಿಯ ಕಿವಿಗೆ ಉಸಿರಿದ್ದನ್ನು, ಅವನು ಅ.ಕುತಂತ್ರಿಯ ಕಿವಿಗೆ ಸುರಿದ.</p>



<p>ನಮೋ ಸಂಕಟದಲ್ಲಿ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದ. “ಏನದು ಹೇಳಿ. ನಿಮ್ಮ ಬೇಗುದಿ ಕಡಿಮೆಯಾಗುತ್ತೆ” ಎಂದು ಅ.ಕುತಂತ್ರಿ ಬೆನ್ನನ್ನು ನೀವಿದ. “ಅಲ್ಲಿ…ಅಲ್ಲಿ…ಬಂಗಾಲದಲ್ಲಿ… ಅತ್ಯಾಚಾರ…ಬಲಾತ್ಕಾರ…ದೀದಿ…ದೀದಿ…ಬೇಟಿ ಬಚಾವ್…ಬೇಟಿ ಪಡಾವ್” ಎಂದು ತೊದಲುತ್ತ ತೆರೆದಿದ್ದ ಕಣ್ಣುಗಳನ್ನು ಮುಚ್ಚಿ ಹಾಸಿಗೆಗೆ ಒರಗಿದ. ಒಂಟಿ ಕಣ್ಣೀರು ಮತ್ತಷ್ಟು ಒಸರಿ ಬಂತು.</p>



<p>ಮಹಿಳೆ ಶೋಷಣೆ ಬಗ್ಗೆ ನಮೋ ಸುರಿಸಿದ ಕೊಳಗಗಟ್ಟಲೆ ಕಣ್ಣೀರ ಬಗ್ಗೆ ಬಕೆಟ್ ಮಾಧ್ಯಮಗಳು ತರಹೇವಾರಿ ಹೆಡ್ಡಿಂಗ್ ಗಳನ್ನು ಕೊಟ್ಟು ಪ್ರಸಾರ ಮಾಡಿದವು. ಮಾತೃಹೃದಯದ ನಮೋ ಸಂಕಟಕ್ಕೆ ಲಂಡಭಕ್ತರ ಕರುಳು ಕಿವಿಚಿ ಬಂದು ಕಣ್ಣೀರಧಾರೆಯನ್ನು ಹರಿಸಿ, ಅಂಗಡಿಮುಂಗಟ್ಟು ಆಸ್ಪತ್ರೆಗಳ ಮೇಲೆ ದಾಳಿ ಎಸಗಿ ಧ್ವಂಸ ಮಾಡಿದರು. ರಸ್ತೆಗಳನ್ನು ಬಂದು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಶೋಷಿತಳಿಗೆ ಸಂತಾಪ ಸೂಚಿಸಿದರು.</p>



<p>ಫೋರೆನಿಕ್ಸ್ ಲ್ಯಾಬ್ ನಲ್ಲಿ ತನಿಖೆ ನಡೆಸಿದ್ದ ತಂತ್ರಜ್ಞರಿಗೆ ಅಸಹಜ, ವಿಶೇಷವಾದ ಫಲಿತಾಂಶ ದೊರೆತು ʼಯುರೇಕಾ!ʼ ಎಂದು ಸಂಭ್ರಮಗೊಂಡರು. “ನಮೋ ಅವರ ಒಂದೇ ಕಣ್ಣಿನಲ್ಲಿ ಅಶ್ರು ಬಂದದ್ದಕ್ಕೆ ಕಾರಣ ಸಿಗುತ್ತಿಲ್ಲ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬಹುದು. ಆದರೆ, ನಮೋ ಅವರು ಸುರಿಸಿದ ಕಣ್ಣೀರು, ಮೊಸಳೆ ಕಣ್ಣೀರಿಗೆ ಹೋಲಿಕೆಯಾಗುತ್ತಿರುವುದು ತನಿಖೆಯಲ್ಲಿ ತಿಳಿದು ಬಂದು ಅಚ್ಚರಿ ತಂದಿದೆ” ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು.</p>



<p>“ದೇಶದಲ್ಲಿ ಇಪ್ಪತ್ತು ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿದೆ. ಯೋಧರ ಪತ್ನಿಯರನ್ನು ಸೇರಿ ಹಲವು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಮಾನಭಂಗ ಎಸಗಲಾಗಿದೆ. ಇದ್ಯಾವುದರ ಬಗ್ಗೆ ಉಸಿರೆತ್ತದೆ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುವ ಸಾಮ್ರಾಟ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಎಂಥಾ ನಾಚಿಗೆಗೇಡು!” ಎಂದು ದೇಶವಾಸಿಗಳು ನಮೋ ಆಷಾಢಭೂತಿತನಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರು.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ʼಓಲಂಪಿಕ್‌ʼನಲ್ಲಿ ಗೋಲ್ಡ್‌ ಮೇಡಲ್‌ ಗೆದ್ದ ʼನಮೋ&#8217;! (ಕಠಾರಿಯವರ ವಿಡಂಬನಾ ಬರಹ)</title>
		<link>https://peepalmedia.com/%ca%bcnamo-winning-gold-medal-in-chaddi-olympics-satire-by-kathari/</link>
		
		<dc:creator><![CDATA[Peepal Media]]></dc:creator>
		<pubDate>Mon, 12 Aug 2024 09:46:27 +0000</pubDate>
				<category><![CDATA[ಅಂಕಣ]]></category>
		<category><![CDATA[ದೇಶ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modijí]]></category>
		<category><![CDATA[Narendra modhi road show]]></category>
		<category><![CDATA[olampic]]></category>
		<category><![CDATA[olempic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm]]></category>
		<category><![CDATA[pm modi]]></category>
		<category><![CDATA[pm narendra modi]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Vinesh pogat]]></category>
		<category><![CDATA[vineshpogat]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43704</guid>

					<description><![CDATA[ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು. ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ [&#8230;]]]></description>
										<content:encoded><![CDATA[
<p>ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು.</p>



<p>ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ ಪೋರ್ಟಿನ ಚಾವಣಿಗಳು ಆಕಾಶಕ್ಕೆ ಹಾರಿ ಹೋಗುತ್ತಿದ್ದರೆ, ಹೈವೇಗಳು ಒಂದೇ ಮಳೆಗೆ ಬಿರುಕು ಬಿಟ್ಟು ಬಾಯ್ತೆರೆದಿದ್ದವು. ಒಂದು ವರ್ಷವೂ ತುಂಬಿರದ ಹೊಸ, ನಿರ್ಮಾಣ ಹಂತದ ಸೇತುವೆಗಳು ಸ್ಪರ್ಧೆಗೆ ಬಿದ್ದಂತೆ ಸಾಲುಸಾಲಾಗಿ ಧರೆಗುರುಳುತ್ತಿದ್ದವು. ಇನ್ನು ಪರೀಕ್ಷೆ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ʼಎಕ್ಸಾಮ್ ಪೇ ಚರ್ಚಾʼ ಮಾಡಿ ಪುಕ್ಕಟೆ ಸಲಹೆ ಕೊಡೋಣವೆಂದರೆ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬೀದೀಲಿ ಗಲಾಟೆ ಮಾಡುತ್ತಿದ್ದರು. ಮನೆಯಿಂದ ಹೊರ ಹೋಗುವ ಹಾಗೆ ಇರಲಿಲ್ಲ.</p>



<p>ರೂಮಲ್ಲೇ ಕೂತು &#8211; ಕಾಂತಿಯಿಂದ ಹೊಳೆಯುತ್ತಿದ್ದ ಮುಖಾರವಿಂದವು ಕಪ್ಪುಗಟ್ಟಿ, ಕನ್ನಡಿಯಲ್ಲಿನ ಪ್ರತಿಬಿಂಬ ನಮೋನನ್ನು ʼಗೆದ್ದು ಸೋತ ಸಾಮ್ರಾಟʼ ಎಂದು ಅಣಕಿಸುತ್ತಿತ್ತು. ಕಾರಿನಲ್ಲಿ ಮುಂದೆ ಆಸೀನವಾದರೆ ಪ್ರಭಾವಳಿಯಾಗಿದ್ದ ಚಾವಣಿ ಲೈಟನ್ನು ತೆಗೆಸಿ, ಜನರಿಗೆ ಹ್ಯಾಪು ಮೋರೆ ತೋರಿಸಲಾಗದೆ ಹಿಂಬದಿಗೆ ಕೂರುವ ದುರ್ದೆಶೆಯನ್ನು ಶಪಿಸುವುದು ಬಿಟ್ಟು ನಮೋಗೆ ಬೇರೆ ಪರಿಹಾರ ಕಾಣಲಿಲ್ಲ.</p>



<p>ಮನೆಯಲ್ಲೇ ಕೂತರೆ ಹುಚ್ಚು ಹಿಡಿಯುತ್ತದೆಂದು ಫಾರಿನ್ ಟೂರ್ ಹೊರಟರೆ ಅಲ್ಲೂ ನಿರಾಶೆ. ಏರ್ ಪೋರ್ಟಲ್ಲಿ ಸ್ವಾಗತ ಕೋರಲು ವಿದೇಶದಲ್ಲಿ ಗಣ್ಯರು ನಾಪತ್ತೆ. ಇನ್ನು ಸ್ವದೇಶಕ್ಕೆ ಮರಳಿದರೆ ತನ್ನ ಪಾರ್ಟಿಯ ಕಮಲಿಗಳೇ ಬೊಕ್ಕೆ ಹಿಡಿದು ನಿಲ್ಲಲು ಅಸಡ್ಡೆ ತೋರಿ ನೊಣ ಹೊಡೆಯುವುದಕ್ಕೂ ಯಾರೂ ಇರುತ್ತಿರಲಿಲ್ಲ.</p>



<p>ಯಾವುದಾದರೂ ಸನ್ನಿವೇಶವನ್ನು ಸೃಷ್ಟಿಸಿ ನಂದಿ ಹೋಗಿದ್ದ ಲೈಮ್ ಲೈಟನ್ನು ಹೇಗೆ ಹೊತ್ತಿಸುವುದೆಂಬ ದೇಶೋದ್ಧಾರದ ಚಿಂತನೆಯಲ್ಲಿ ಮುಳುಗಿದ್ದ ನಮೋಗೆ ಯಾರೋ ಕೂಗಿದಂತಾಯಿತು. “ವಿಶ್ವಗುರು ಚಿರಾಯುವಾಗಲಿ” ಎಂದು ಮುಖ್ಯ ಆಪ್ತಕಾರ್ಯದರ್ಶಿ ಸಂಘೀ ಸಲಾಮು ಮಾಡುತ್ತ ಎದುರಿಗೆ ನಿಂತಿದ್ದ.</p>



<p>“ಮಹಾಸ್ವಾಮಿಗಳೇ…ತಮಗೆ ಸಂತೋಷ ಸುದ್ದಿ. ಲೈಮ್ ಲೈಟಿಗೆ ಮತ್ತೆ ಬರಲು ಸುವರ್ಣಾವಕಾಶ!”</p>



<p>ತನ್ನ ಮನದ ತಳಮಳ ತಿಳಿದದ್ದು ಹೇಗೆ ಎಂದು ಅಚ್ಚರಿಗೊಂಡರೂ “ಲೈಮ್ ಲೈಟಲ್ಲಿ ಇರೋದೆ ನಂಗೆ ಕೆಲ್ಸನಾ? ಜನರೋದ್ಧಾರದ ವಿಚಾರಗಳು ಇಲ್ವಾ? ಅಧಿಕಪ್ರಸಂಗಿ…ಸರಿ…ಏನದು ಸಮಾಚಾರ?” ಎಂದು ಹುಸಿ ಕೋಪ ಪ್ರದರ್ಶಿಸಿದ.</p>



<p>“ಸ್ವಾಮಿಗಳೇ…ಒಲಂಪಿಕ್ ಗೇಮ್ಸ್ ಶೂಟಿಂಗಲ್ಲಿ ನಮಗೆ ಬ್ರಾಂಜ್ ಮೆಡಲ್ ಬಂದಿದೆ!”</p>



<p>“ಓಹ್…ಹೌದಾ! ಒಳ್ಳೆಯ ಸುದ್ದಿ ತಂದಿದ್ದೀಯ. ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಗೋ…” ಎಂದು ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದು “ಬೇಗ ಕ್ಯಾಮೆರಾಮೆನ್ನ ಕರೆಸು. ಹಾಗೆ ಆ ಸ್ಪರ್ಧಿಗೆ ಫೋನು ಮಾಡು”</p>



<p>“ಹಲೋ…”</p>



<p>“ಹಲೋ…ಯಾರು?”</p>



<p>“ನಾನಮ್ಮ…ವಿಶ್ವಗುರು…ಭರತಖಂಡದಿಂದ”</p>



<p>“ಹ!…ಖಂಡ?…ಯಾವ ಆಶ್ರಮಕ್ಕೂ ನಾನು ಭಕ್ತೆಯಾಗಿಲ್ಲ….ರಾಂಗ್ ನಂಬರ್”</p>



<p>ಆ ಕಡೆಯಿಂದ ಫೋನ್ ಕಟ್ ಮಾಡಿದ್ದು ನಮೋಗೆ ಕಪಾಳಮೋಕ್ಷ ಆದಂತಾಯಿತು.</p>



<p>“ಮೇಡಮ್…ಪ್ರಧಾನಿ ನಮೋ ಮಾತಾಡ್ತಿರೋದು. ನಿಮ್ಗೆ ಕಂಗ್ರಾಟ್ಸ್ ಹೇಳೋಕೆ” ಮತ್ತೆ ಆಪ್ತಕಾರ್ಯದರ್ಶಿ ಕರೆ ಮಾಡಿದ.</p>



<p>“ಓಹ್…ಸಾರಿ ಸರ್, ಗೊತ್ತಾಗ್ಲಿಲ್ಲ. ಥ್ಯಾಂಕ್ಯು ಸರ್”</p>



<p>“ಪರವಾಗಿಲ್ಲ. ಶೂಟಿಂಗ್ ಅಂದ್ರೆ…ರೀಲ್ಸ… ಶಾರ್ಟ್ ಫಿಲ್ಮಾ ಅಥ್ವಾ ಫೂಚರ್ ಫಿಲ್ಮಾ?”</p>



<p>“ಇಲ್ಲಾ ಸಾರ್…ಅದು ಪಿಸ್ತೂಲ್ ಶೂಟಿಂಗ್….ಟೆನ್ ಮೀಟರ್ ರೇಂಜು”</p>



<p>“ಗನ್ ಶೂಟಿಂಗಾ…ಒಳ್ಳೇದು. ನಮ್ಮ ದೇಶಕ್ಕೆ ಮೆಡಲ್ ತಂದು ವರ್ಲ್ಡ್ ಫೇಮಸ್ ಮಾಡಿದ್ದೀಯ…ಬದಾಯಿ”</p>



<p>“ಥ್ಯಾಂಕ್ಯು ವೆರಿ ಮಚ್…ಸರ್”</p>



<p>“ಬೇಟಿ ಪಡಾವ್…ಬೇಟಿ ಬಚಾವ್…ನನ್ನ ಸ್ಲೋಗನ್ ಸಾರ್ಥಕ ಆಯ್ತು ನೋಡು, ವೆಲ್ ಡನ್…ಹ…ಒಂದ್ ವಿಷ್ಯ ನಿಂಗೆ ಗೊತ್ತಾ? ನಾನೂ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್!”</p>



<p>“ಗ್ರೇಟ್ ಸರ್…ಗೊತ್ತೇ ಇರಲಿಲ್ಲ!”</p>



<p>“ಹಳೇ ಮಾತು…ಯಂಗ್ ಆಗಿದ್ದಾಗ, ನನ್ನ ಪೂರ್ವಾಶ್ರಮ ಮಾ.ಕೃಪಾಕಟಾಕ್ಷ ಕುಟೀರದ ಅಂತರರಾಷ್ಟ್ರೀಯ ಚಡ್ಡಿ ಒಲಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ನಮ್ಮ ತಾಲ್ಲೂಕಿಗೆ ನಾನೇ ಮೂರು ಬಾರಿ ಗೋಲ್ಡ್ ಮೆಡಲ್ ಗೆದ್ದಿದ್ದೆ”</p>



<p>“ಸೂಪರ್…ಯಾವ ಗೇಮಲ್ಲಿ ಸರ್”</p>



<p>“ಬಹಳ ಟಫ್ ಗೇಮ್…ಹಳಿ ಇಲ್ಲದೆ ಬುಲೆಟ್ ಟ್ರೈನ್ ಬಿಡೋದು…”</p>



<p>ಬುರುಡೆ ಬಿಡುತ್ತಿದ್ದ ನಮೋನ ನಾನ್ ಸ್ಟಾಪ್ ಮಾತಿಗೆ ಆ ತುದಿಯಿಂದ ಪ್ರತಿಕ್ರಿಯೆ ಬರುವುದು ನಿಂತಾಗ, ಸಾಕಷ್ಟು ರೀಲು ಸುತ್ತಿಕೊಂಡ ಡೈರೆಕ್ಟರ್ ಕೊನೆಗೆ ʼಕಟ್…ಕಟ್ʼ ಎಂದಾಗಲೇ ನಮೋ ಮಾತು ನಿಲ್ಲಿಸಿದ.</p>



<p>ಬದಾಯಿ ಹೇಳಿದ ನಮೋನ ರೀಲ್ಸ್ ಸಿಕ್ಕಿದ್ದೇ ತಡ ವೈರಲ್ ಮಾಡಲು ಅಮಿತ ಮನೆಹಾಳ, ರಾಗಾನ ಸಂಸತ್ತು ಭಾಷಣ ನೋಡುವುದರಲ್ಲಿ ಮಗ್ನರಾಗಿದ್ದ ಕೇಸರಿ ಐಟಿ ಸೆಲ್ಲಿನ ಟು ರುಪೀಸ್ ಕೂಲಿಗಳನ್ನು ಕೆಲಸಕ್ಕೆ ಹಚ್ಚಿದ.</p>



<p>ಕನ್ನಡಿ ಮುಂದೆ ನಿಂತಾಗ ಮೈಮೇಲೆ ಮಂದ ಬೆಳಕು ಚೆಲ್ಲಿದ್ದನ್ನು ಕಂಡು ಮುಖವರಳಿಸಿ ʼಬ್ಯಾಕ್ ಟು ಲೈಮ್ ಲೈಟುʼ ಎಂದು ನಮೋ ಗಡ್ಡ ನೀವಿಕೊಳ್ಳುವ ಹೊತ್ತಿಗೆ, ಆಪ್ತಕಾರ್ಯದರ್ಶಿ “ಸ್ವಾಮಿಗಳೇ…. ಮತ್ತೊಂದು ಶುಭ ಸಮಾಚಾರ. ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಮಿಸ್ಸಾದರೆ….ಸಿಲ್ವರ್ ಮೆಡಲ್ ಅಂತೂ ಗ್ಯಾರಂಟಿ” ಅಂದ.</p>



<p>“ಕುಸ್ತಿ!” ಶಬ್ಧ ಕಿವಿಗೆ ಬಿದ್ದದ್ದೇ ಅರಳಿದ ನಮೋ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ಕೈ ಸನ್ನೆ ಮಾಡಿ ಹೊರಡು ಎಂದದ್ದು ಆಪ್ತಕಾರ್ಯದರ್ಶಿಗೆ ʼತೊಲಗಾಚೆ!ʼ ಎನ್ನುವಂತಿತ್ತು.</p>



<p>ತನ್ನ ಬಲಗೈಬಂಟ, ಕುಖ್ಯಾತ ಕಚ್ಚೆಹರುಕ &#8211; ತ್ಯಾಜ್ಯ ಅವಲಕ್ಷಣ್ ವಿರುದ್ಧ ಮಹಿಳಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದೇ ಅಲ್ಲದೇ ರಾಜಧಾನಿಯ ಮೈನ್ ರೋಡಲ್ಲಿ ಟೆಂಟಾಕಿ “ರೇಪಿಸ್ಟ್ ಅನ್ನು ಫೆಡರೇಷನ್ ನಿಂದ ಹೊರ ಹಾಕಿ, ಬೇಟಿ ಬಚಾವ್ ಮಾತನ್ನು ಉಳಿಸಿಕೊಳ್ಳಿ. ಇಲ್ಲಾ ಒಲಂಪಿಕ್ಸ್ ನಲ್ಲಿ ಗೆದ್ದು ನಿಮ್ಮ ಹಿಪಾಕ್ರಸಿಯನ್ನು, ದುರಹಂಕಾರವನ್ನು ಸೋಲಿಸಿಯೇ ಸೋಲಿಸುತ್ತೇನೆ” ಎಂದು ತನಗೆ ಸವಾಲು ಹಾಕಿದ ಮಹಿಳಾ ಪೈಲ್ವಾನರ ಪ್ರತಿಭಟನೆ ನಮೋನ ಕಣ್ಮುಂದೆ ಹಾದು ಹೋಗಿ, ದೇಹ ಬೆಂಕಿಯಾಗಿ, ಉರಿ ಅಸಹನೀಯವಾಯಿತು.</p>



<p>“ನನ್ನನ್ನು ಬೆದರಿಸುವಷ್ಟು ಧೈರ್ಯದ ವೈರಿಗೆ ಪದಕ ಸನ್ಮಾನವೇ? ಅದನ್ನು ತಡೆಯುವುದು ಹೇಗೆ? ಇಲ್ಲಿಯೇ ಆಗಿದ್ದರೆ ಕುತಂತ್ರಿಗೆ ಹೇಳಿ ಇಡಿ, ಐಟಿ, ಸಿಬಿಐಯನ್ನು ಛೂ ಬಿಡಬಹುದಿತ್ತು. ಆ ದೇಶದ ಪ್ರಧಾನಿಗೆ ಹೇಳಿದರೆ ಹೇಗೆ?” ಮುಷ್ಟಿ ಹಿಡಿದು ಯೋಚಿಸುತ್ತ ನಮೋ ಶತಪಥ ಹಾಕಿದ.</p>



<p>ಓಡೋಡಿ ಬಂದ ಆಪ್ತಕಾರ್ಯದರ್ಶಿ “ಘಾತವಾಯಿತು ಮಹಾಸ್ವಾಮಿ…ಪೈಲ್ವಾನ್ ತೂಕ ನೂರೇ ಗ್ರಾಮ್ ಹೆಚ್ಚಾಗಿ ಅವಳನ್ನು ಡಿಸ್ ಕ್ವಾಲಿಫೈ ಮಾಡಿದ್ದಾರೆ!” ಎಂದಾಗ, ನಮೋಗೆ ಕುಣಿಯಬೇಕು ಅನ್ನಿಸಿದರೂ “ಅಯ್ಯೋ…ಎಂಥಾ ದುರ್ವಿಧಿ. ಅದೆಂಥ ರೂಲ್ಸುಗಳು! ಹೋಗಲಿ…ನಾವೇನು ಮಾಡುವಂತಿಲ್ಲ. ಒಂದು ಚೊಂಬು ತಣ್ಣಗಿನ ಹಾಲು ತಗೊಂಬಾ. ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು, ಹಾಲು ಕುಡಿದು ದೇಹದ ತಾಪಮಾನ ಇಳಿಸಿಕೊಂಡ.</p>



<p>“ಮಗಳೇ…ನೀನು ಚಾಂಪಿಯನ್ನರ ಚಾಂಪಿಯನ್, ನಮ್ಮ ದೇಶದ ಹೆಮ್ಮೆ. ಪದಕ ಕೈತಪ್ಪಿದ್ದಕ್ಕಾಗಿ ನಿನಗಿಂತ ನನಗೆ ಎಷ್ಟು ನೋವಾಗಿದೆ ಎಂದರೆ ಅದನ್ನು ಪದಗಳಲ್ಲಿ ಬರೆಯಲಾಗುತ್ತಿಲ್ಲ. ಧೃತಿಗೆಡಬೇಡ…ನಾವೆಲ್ಲ ನಿನ್ನೊಂದಿಗಿದ್ದೇವೆ” ಎಂದು ತೋರಿಕೆ ಸಂದೇಶ ಹಾಕಿ, ಅತ್ತ ಕ್ರೀಡಾ ಮಂತ್ರಿ ಅಮಾನುಷ್ ಮಂಡೂಕನಿಗೆ ಪೈಲ್ವಾನಳಿಗೆ ವ್ಯಯಿಸಿದ ಖರ್ಚುವೆಚ್ಚವನ್ನು ಪ್ರಕಟಿಸಲು ಚಿತಾವಣೆ ಮಾಡಿದ.</p>



<p>ಪೊಲೀಸರಿಂದ ರಸ್ತೆಲೀ ದರದರ ಎಳೆದಾಡಿಸಿಕೊಂಡು ಅವಮಾನಕ್ಕೆ ಈಡಾಗಿದ್ದ ಕುಸ್ತಿಪಟುವಿನ ಪ್ರತಿಭಟನೆ ಮರೆಯದ ದೇಶದ ವಿವೇಕವಂತರು &#8211; ಗೆದ್ದಾಗ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದಿಸುವಂತೆ ಕುಸ್ತಿಪಟುವಿಗೆ ಶುಭಾಶಯ ಹೇಳದೆ, ಅನರ್ಹಗೊಂಡಾಗ ಲೇವಡಿಸುವಂತೆ ಹಾಕಿದ ಮೊಸಳೆ ಕಣ್ಣೀರಿನ ಸಂದೇಶಕ್ಕೆ ನಮೋನ ಮೇಲೆ ಆಕ್ರೋಶಗೊಂಡರು. ಕ್ಷುಲ್ಲಕ ಕಾರಣಕ್ಕೆ ಪದಕ ಕೈತಪ್ಪಿದ್ದಕ್ಕಾಗಿ ಇಡೀ ದೇಶವೇ ನಿರಾಶಭಾವ ಹೊಂದಿರುವಾಗ, ಪೈಲ್ವಾನಳಿಗೆ ಸರ್ಕಾರ ವ್ಯಯಿಸಿದ್ದ ಹಣದ ಉಲ್ಲೇಖ ಮಾಡಿದ್ದು ನಮೋನ ಸೇಡಿನ ಕ್ರಮವೆಂದು ಖಂಡಿಸಿದರು.</p>



<p>“ಈ ನಮೋ ಒಬ್ಬ ಹೇಡಿ. ಅಸೂಕ್ಷ, ಕಿಡಿಗೇಡಿ. ಶೋಷಣೆಯ ವಿರುದ್ಧ ಸಿಡಿದೆದ್ದ ಕುಸ್ತಿಪಟುವಿಗೆ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ಅದನ್ನು ಪ್ರಕಟಿಸಿದರೆ – ದಿನಕ್ಕೆ ಇಪ್ಪತ್ತು ಬಟ್ಟೆ ಬದಲಿಸಿ ಶೋಕಿ ಮಾಡುತ್ತ, ವಿಮಾನದಲ್ಲಿ ಫಾರಿನ್ ಸುತ್ತಿ ಮಜಾ ಮಾಡುವ ಖರ್ಚನ್ನು ಜನರ ಮುಂದಿಡಲಿ” ಎಂದು ಪ್ರಜ್ಞಾವಂತರು ನಮೋವನ್ನು ಛೇಡಿಸಿದರು.</p>



<p>ಮೂರು ಬಿಟ್ಟ ನಮೋಗೆ ಅದು ತಾಕುವುದೇ? ಉತ್ತರ ಸಿಗದೆ ಉಳಿವ ಪ್ರಶ್ನೆ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ಮೋದಿಯಿಂದ ತಮ್ಮ ಸ್ನೇಹಿತ ಅದಾನಿಗೆ ಇನ್ನೊಂದು‌ ಗಿಫ್ಟ್!:‌ ಧಾರಾವಿ ಯೋಜನೆ ಬಗ್ಗೆ ಕಾಂಗ್ರೇಸ್</title>
		<link>https://peepalmedia.com/modi-benefitting-adani-with-another-revdi/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 17 Nov 2023 12:37:37 +0000</pubDate>
				<category><![CDATA[ರಾಜಕೀಯ]]></category>
		<category><![CDATA[adani]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[dharavi]]></category>
		<category><![CDATA[gautham adani]]></category>
		<category><![CDATA[india]]></category>
		<category><![CDATA[jairam ramesh]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[Narendra modhi road show]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=32463</guid>

					<description><![CDATA[ಬೆಂಗಳೂರು: &#8220;ಮೋದಿ ಮೇಡ್ ಮೊನೋಪೊಲಿಯಿಂದ (Modi Made  Monoploy &#8211; 3M) ಅದಾನಿ ಲಾಭ ಪಡೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ, ಮೂಲ ಬಿಡ್ಡರ್ ಅನ್ನು ಬದಲಾಯಿಸುವ ಮೂಲಕ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರು ತಮ್ಮ ಆಪ್ತ ಸ್ನೇಹಿತನಿಗೆ ಹಸ್ತಾಂತರಿಸಿದ್ದಾರೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸುವಂತೆ ಮಹಾರಾಷ್ಟ್ರ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಲಾಗಿದೆ,&#8221; ಎಂದು ಏಐಸಿಸಿ ಮುಖ್ಯ ಕಾರ್ಯದರ್ಶಿ, ಸಂಸದ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ. ತಮ್ಮ x ನಲ್ಲಿ ಈ ಬಗ್ಗೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> &#8220;ಮೋದಿ ಮೇಡ್ ಮೊನೋಪೊಲಿಯಿಂದ (Modi Made  Monoploy &#8211; 3M) ಅದಾನಿ ಲಾಭ ಪಡೆದಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ, ಮೂಲ ಬಿಡ್ಡರ್ ಅನ್ನು ಬದಲಾಯಿಸುವ ಮೂಲಕ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ಪ್ರಧಾನಿಯವರು ತಮ್ಮ ಆಪ್ತ ಸ್ನೇಹಿತನಿಗೆ ಹಸ್ತಾಂತರಿಸಿದ್ದಾರೆ. ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸುವಂತೆ ಮಹಾರಾಷ್ಟ್ರ ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಲಾಗಿದೆ,&#8221; ಎಂದು ಏಐಸಿಸಿ ಮುಖ್ಯ ಕಾರ್ಯದರ್ಶಿ, ಸಂಸದ ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.</p>



<p>ತಮ್ಮ <a href="https://x.com/Jairam_Ramesh/status/1725448036103688536?s=20" data-type="link" data-id="https://x.com/Jairam_Ramesh/status/1725448036103688536?s=20">x ನಲ್ಲಿ ಈ ಬಗ್ಗೆ ಬರೆದಿದ್ದು</a>, ಇದನ್ನು ಮೋದಿಯವರು ತಮ್ಮ ನೆಚ್ಚಿನ ವ್ಯಾಪಾರಿ ಸಂಸ್ಥೆಗೆ ನೀಡಿದ ಮತ್ತೊಂದು &#8216;ರೆವಿಡಿ &#8211; ಗಿಫ್ಟ್&#8217; ಎಂದು ಕರೆದಿದ್ದಾರೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="737" height="718" src="https://peepalmedia.com/wp-content/uploads/2023/11/image-57.png" alt="" class="wp-image-32464" style="width:346px;height:auto" srcset="https://peepalmedia.com/wp-content/uploads/2023/11/image-57.png 737w, https://peepalmedia.com/wp-content/uploads/2023/11/image-57-300x292.png 300w, https://peepalmedia.com/wp-content/uploads/2023/11/image-57-150x146.png 150w, https://peepalmedia.com/wp-content/uploads/2023/11/image-57-696x678.png 696w" sizes="(max-width: 737px) 100vw, 737px" /></figure></div>


<p>“ಹಮ್ ಅದಾನಿ ಕೆ ಹೈ ಕೌನ್ (Hum Adani Ke Hain Kaun – HAHK) ಹೆಸರಿನಲ್ಲಿ 27 ಫೆಬ್ರವರಿ 2023 ಮತ್ತು 23 ಏಪ್ರಿಲ್ 2023 ರಂದು ಕೇಳಿದ ಸರಣಿ ಪ್ರಶ್ನಾವಳಿಯಲ್ಲಿ ಅದಾನಿ ಗ್ರೂಪ್‌ಗೆ 2022 ರಲ್ಲಿ ಕೇವಲ 5,069 ಕೋಟಿ ರುಪಾಯಿ ಬಿಡ್‌ಗೆ ಧಾರಾವಿ ಮರುಅಭಿವೃದ್ಧಿ ಯೋಜನೆಯನ್ನು ತೆಗೆದುಕೊಳ್ಳಲು ಹೇಗೆ ಅನುಮತಿ ನೀಡಿದಿರಿ ಎಂದು ಕೇಳಿದ್ದೆವು. ಇದು 2018 ರಲ್ಲಿ ಇದ್ದ ಗೆದ್ದಿರುವ ಮೂಲ ಬಿಡ್‌ಗಿಂತ 2,131 ಕೋಟಿ ರುಪಾಯಿ ಕಡಿಮೆ ಇದೆ. ಬಿಡ್‌ ಗೆದ್ದಿರುವವರನ್ನು ಹೊರಗಿಟ್ಟು ಇದ್ದನ್ನು ಮಾಡಲಾಗಿದೆ,” ಎಂದು ಜೈರಾಮ್‌ ರಮೇಶ್‌ ಆರೋಪಿಸಿದ್ದಾರೆ.</p>



<p>Maharashtra Urban Development Departmentಗೆ  Dharavi&#8217;s real estate Transferable Development Rights (TDR)  ಸೂಚ್ಯಂಕವನ್ನು ತೆಗೆದುಹಾಕುವ ಅಧಿಸೂಚನೆಯನ್ನು ಹೊರಡಿಸಲು ಒತ್ತಾಯಿಸಲಾಗಿದೆ. ಮುಂಬೈನ ಎಲ್ಲಾ ಬಿಲ್ಡರ್‌ಗಳು ತಮ್ಮ ಮೊದಲ 40% TDRಗಳನ್ನು ಅದಾನಿಯಿಂದ ಖರೀದಿಸುವಂತೆ ಹೇಳಲಾಗಿದೆ. ಈ ಮೂಲಕ ಧಾರಾವಿ ಯೋಜನೆಯಿಂದ ಅದಾನಿಗೆ, ಕೇವಲ ಅದಾನಿಗೆ ಮಾತ್ರ TDRಗಳ  ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜೈರಾಮ್‌ ತಿಳಿಸಿದ್ದಾರೆ.</p>


<div class="wp-block-image">
<figure class="aligncenter size-large is-resized"><img decoding="async" width="719" height="1024" src="https://peepalmedia.com/wp-content/uploads/2023/11/image-58-719x1024.png" alt="" class="wp-image-32465" style="width:265px;height:auto" srcset="https://peepalmedia.com/wp-content/uploads/2023/11/image-58-719x1024.png 719w, https://peepalmedia.com/wp-content/uploads/2023/11/image-58-211x300.png 211w, https://peepalmedia.com/wp-content/uploads/2023/11/image-58-768x1094.png 768w, https://peepalmedia.com/wp-content/uploads/2023/11/image-58-1078x1536.png 1078w, https://peepalmedia.com/wp-content/uploads/2023/11/image-58-150x214.png 150w, https://peepalmedia.com/wp-content/uploads/2023/11/image-58-300x427.png 300w, https://peepalmedia.com/wp-content/uploads/2023/11/image-58-696x991.png 696w, https://peepalmedia.com/wp-content/uploads/2023/11/image-58-1068x1521.png 1068w, https://peepalmedia.com/wp-content/uploads/2023/11/image-58.png 1119w" sizes="(max-width: 719px) 100vw, 719px" /></figure></div>


<p style="font-size:20px"><strong>ಟಿಡಿಆರ್‌ ಎಂದರೇನು?</strong></p>



<p>TDR ಎನ್ನುವುದು ಇನ್ನೊಬ್ಬರಿಗೆ ಬೇಕಾದಾಗ ಕೊಡಬಹುದಾದ ಕ್ರೆಡಿಟ್. ಪ್ರಾಕೃತಿಕ, ಐತಿಹಾಸಿಕ ಮೊದಲಾದ ವಿಶೇಷತೆಗಳನ್ನು ಹೊಂದಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟಡ ನಿರ್ಮಿಸಲು ಇರುವ ತಮ್ಮ ಹಕ್ಕುಗಳನ್ನು ಬಿಟ್ಟುಕೊಡಲು ಅನುಮತಿ ನೀಡುತ್ತದೆ. ಅಲ್ಲದೇ, ಹೀಗೆ ಬಿಟ್ಟುಕೊಟ್ಟರೆ ಅವರಿಗೆ ಬೇರೆ ಅನುಮೋದಿತ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ಅವಕಾಶವನ್ನು ನೀಡಲಾಗುತ್ತದೆ.  </p>



<p>ಈ ಸೂಚ್ಯಂಕವನ್ನು ತೆಗೆದುಹಾಕುವುದರಿಂದ ಧಾರಾವಿಯಂತಹ ಕಡಿಮೆ-ವೆಚ್ಚದ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ TDRS ಅನ್ನು ಬಾಂದ್ರಾ, ದಕ್ಷಿಣ ಮುಂಬೈ ಮತ್ತು ಜುಹು ಮುಂತಾದ ಪ್ರಮುಖ ಸ್ಥಳಗಳಲ್ಲಿ ದುಬಾರಿ ರಿಯಲ್ ಎಸ್ಟೇಟ್ ಅನ್ನು ಅಭಿವೃದ್ಧಿಪಡಿಸಲು ಬಳಸಬಹುದು. ಇದರಿಂದ ಈಗಾಗಲೇ ದುಬಾರಿಯಾಗಿರುವ ಮುಂಬೈನ ಹೌಸಿಂಗ್‌ ಮಾರ್ಕೆಟ್‌ನ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.</p>



<p>ಈ ನೀತಿಯ ಬದಲಾವಣೆಯಿಂದ ಲಾಭವಾಗುವುದು ಅದಾನಿಗೆ ಮಾತ್ರ, ಇದು ಪ್ರಧಾನ ಮಂತ್ರಿಯವರು ತಮ್ಮ ಪ್ರೀತಿಯ ಬಿಸಿನೆಸ್‌ ಗ್ರೂಪಿಗೆ ನೀಡಿದ ಉಡುಗೊರೆ ಎಂದು ಜೈರಾಮ್‌ ರಮೇಶ್‌ ಟೀಕಿಸಿದ್ದಾರೆ. &#8220;ಬಿಜೆಪಿ ಮತ್ತು ಅದಾನಿ ನಡುವಿನ ಈ ಬಲವಾದ ಚುನಾವಣಾ ಬಾಂಧವ್ಯದ ಸ್ವರೂಪವೇನು? ಜಂಟಿ ಸಂಸದೀಯ ಸಮಿತಿ ಮಾತ್ರ ಇದರ ಹಿಂದಿನ ಸಂಪೂರ್ಣ ಸತ್ಯವನ್ನು ಬಿಚ್ಚಿಡಬಲ್ಲದು,&#8221; ಎಂದು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಬೆಂಗಳೂರಿನಲ್ಲಿ ಮೋದಿ ರೋಡ್ ಶೋ : ಬಿಜೆಪಿಯಿಂದ ISRO ಸಂಸ್ಥೆಯ ಸಾಧನೆಯ ಹೈಜಾಕ್!</title>
		<link>https://peepalmedia.com/modi-road-show-hijacking-isros-achievement-by-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Aug 2023 11:59:17 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bjp]]></category>
		<category><![CDATA[isro]]></category>
		<category><![CDATA[Narendra modhi road show]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=26324</guid>

					<description><![CDATA[ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಇಸ್ರೋ (ISRO) ಸಂಸ್ಥೆಯ ವಿಜ್ಞಾನಿಗಳ ಜೊತೆಗೆ ಯಶಸ್ಸಿನ ಅಭಿನಂದನೆ ಸಲ್ಲಿಸಲು ಬರುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್, ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ. ಮೋದಿಯವರನ್ನು ಸ್ವಾಗತಿಸಲು ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಬೆಂಗಳೂರು ಭೇಟಿಯ ಹಿಂದೆ ಬಿಜೆಪಿ ಮತ್ತದೇ [&#8230;]]]></description>
										<content:encoded><![CDATA[
<p>ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಇಸ್ರೋ (ISRO) ಸಂಸ್ಥೆಯ ವಿಜ್ಞಾನಿಗಳ ಜೊತೆಗೆ ಯಶಸ್ಸಿನ ಅಭಿನಂದನೆ ಸಲ್ಲಿಸಲು ಬರುವ ಮಾಹಿತಿ ಹೊರಬಿದ್ದಿದೆ.</p>



<p>ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್, ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ. ಮೋದಿಯವರನ್ನು ಸ್ವಾಗತಿಸಲು ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದ್ದಾರೆ.</p>



<p>ನರೇಂದ್ರ ಮೋದಿ ಬೆಂಗಳೂರು ಭೇಟಿಯ ಹಿಂದೆ ಬಿಜೆಪಿ ಮತ್ತದೇ ರಾಜಕೀಯ ಲಾಭಕ್ಕೆ ಮುಂದಾಗಲಿದೆ ಎಂಬ ಸಣ್ಣ ಅನುಮಾನ ಕೂಡಾ ವ್ಯಕ್ತವಾಗಿದೆ. ಈ ಬಗ್ಗೆ ಸುಳಿವು ನೀಡಿದ ಬಿಜೆಪಿ ನಾಯಕ ಆರ್.ಅಶೋಕ್ &#8216;ನರೇಂದ್ರ ಮೋದಿಯವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಇಸ್ರೋ ಸಂಸ್ಥೆ ಇರುವ ಪ್ರದೇಶದ ವರೆಗೂ ನಾವು ರೋಡ್ ಶೋ ನಡೆಸುತ್ತೇವೆ&#8217; ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.</p>



<p>ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ, ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ‌ ಮಾಡಲಾಗುತ್ತದೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.</p>



<p>ಇದನ್ನು ರಾಜಕೀಯವಾಗಿ ನೋಡಿದರೆ ನರೇಂದ್ರ ಮೋದಿ ಬೆಂಗಳೂರು ಭೇಟಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವುದು ಸಹಜ ಎಂದರೂ, ರೋಡ್ ಶೋ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ತನ್ನ ಹಳೆಯ ಹಳಸಲು ಪ್ರಚಾರದ ಸೋಗಿಗೆ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಚಂದ್ರಯಾನ &#8211; 3 ಸಂಪೂರ್ಣ ಯಶಸ್ಸು ಸಿಗಬೇಕಿರುವುದು ಇಸ್ರೋ ಸಂಸ್ಥೆಗೆ, ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ. ಆದರೆ ನರೇಂದ್ರ ಮೋದಿಯವರ ರೋಡ್ ಶೋ ಅರ್ಥವೇ ಇಲ್ಲದಂತಿದೆ.</p>



<p>ಒಬ್ಬ ಪ್ರಧಾನಿಯಾಗಿ ಅವರು ಇಸ್ರೋ ಸಂಸ್ಥೆಗೆ ಭೇಟಿ ನೀಡುವುದು ಅವರ ಒಂದು ಜವಾಬ್ದಾರಿಯನ್ನು ಸೂಚಿಸಿದರೆ, ರೋಡ್ ಶೋ ಮಾತ್ರ ಬಿಜೆಪಿ ಪಕ್ಷ ಸಂಪೂರ್ಣವಾಗಿ ಪ್ರಚಾರದ ಹುಚ್ಚಿಗೆ ಬಿದ್ದದ್ದನ್ನು ಎತ್ತಿ ಹಿಡಿಯುತ್ತಿದೆ. ಆ ಮೂಲಕ ಇಸ್ರೋ ಸಂಸ್ಥೆಯ ಸಾಧನೆಯನ್ನು ನೇರವಾಗಿ ತನ್ನದೇ ಸಾಧನೆ ಎಂಬಂತೆ ಬಿಜೆಪಿ ಪಕ್ಷ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.</p>



<p>ಇನ್ನು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಂದರ್ಭದಲ್ಲಿ ಇಸ್ರೋ ಯೂಟ್ಯೂಬ್ ಚಾನಲ್ ನಲ್ಲಿ ಲೈವ್ ನಲ್ಲೂ ಉಪಗ್ರಹ ಲ್ಯಾಂಡ್ ಆಗುವುದನ್ನು ಸಂಪೂರ್ಣವಾಗಿ ತೋರಿಸದೇ, ನರೇಂದ್ರ ಮೋದಿ ಭಾಷಣಕ್ಕೆ ಆರಂಭಿಸಿದ ಬಗ್ಗೆಯೂ ಸಹ ಹಲವಷ್ಟು ಟೀಕೆ ವ್ಯಕ್ತವಾಗಿದೆ. ದೇಶ ಏನೇ ಸಾಧನೆ ಮಾಡಲಿ, ಆ ಸಾಧನೆಗೆ ಯಾರೇ ಕಾರಣರಾಗಲಿ ಯಶಸ್ಸಿನ ಕ್ರೆಡಿಟ್ ತನಗೇ ಸಿಗಬೇಕು ಎಂಬ ಧೋರಣೆ ಬಗ್ಗೆ ಟೀಕೆಗಳು ಶುರುವಾಗಿವೆ. ಸಧ್ಯ ಶನಿವಾರ ನಡೆಯಬಹುದಾದ ನರೇಂದ್ರ ಮೋದಿಯವರ ರೋಡ್ ಶೋ ಕೂಡಾ ಇಂತದ್ದೇ ಇಂದು ಗಿಮಿಕ್ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.</p>



<p>ಇನ್ನು ಶನಿವಾರ ಬೆಳಗ್ಗೆ ನೇರವಾಗಿ ದಕ್ಷಿಣ ಆಫ್ರಿಕಾದಿಂದ 5.55ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಒಂದೂವರೆ ಕಿಲೋಮೀಟರ್ ರೋಡ್‌ಶೋಗೆ ಬಿಜೆಪಿ ತೀರ್ಮಾನಿಸಿದೆ. 7 ಗಂಟೆಗೆ ಪೀಣ್ಯದಲ್ಲಿರುವ ಇಸ್ಟ್ರಾಕ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಅಲ್ಲಿ, ಇಸ್ರೋ ಮುಖ್ಯಸ್ಥರು, ವಿಜ್ಞಾನಿಗಳಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ವಿಜ್ಞಾನಿಗಳ ಜತೆಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ವಾಪಸ್ ಹೋಗಲಿದ್ದಾರೆ.</p>
]]></content:encoded>
					
		
		
			</item>
	</channel>
</rss>
