<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>narendramodi &#8211; Peepal Media</title>
	<atom:link href="https://peepalmedia.com/tag/narendramodi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 24 Aug 2024 06:47:19 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>narendramodi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಕಾಡೆ ಮಲಗಿದ ನಮೋ ಮತ್ಸರದ ಬಿಲ್ಲುಗಳು (ಕಠಾರಿಯವರ ರಾಜಕೀಯ ವಿಡಂಬನೆ)</title>
		<link>https://peepalmedia.com/makade-sleeping-namo-matsaras-bows-political-satire/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 24 Aug 2024 06:47:18 +0000</pubDate>
				<category><![CDATA[ಅಂಕಣ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[HDK]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[karnataka]]></category>
		<category><![CDATA[kumarswamy]]></category>
		<category><![CDATA[Modhi]]></category>
		<category><![CDATA[modhiji]]></category>
		<category><![CDATA[modi]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44398</guid>

					<description><![CDATA[“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು” ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? [&#8230;]]]></description>
										<content:encoded><![CDATA[
<p>“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು”</p>



<p>ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? ಅಣಬೆ ತಿನ್ಕೊಂಡ್, ಡ್ರೆಸ್ ಮಾಡ್ಕೊಂಡ್ ಹೆಂಗೊ ಮಜವಾಗಿದ್ದೆ. ನಂಬಿದ್ದ ಭಕ್ತರೇ ಕೈಕೊಟ್ಟು…ಪಲ್ಟು, ಬಾಬು ಅಂತ ಅಯೋಗ್ಯರಿಗೆ ಮಸ್ಕಾ ಹೊಡೆಯೊ ಹಂಗಾಯ್ತುʼ ಎಂದು ನಮೋ ಪರಿತಪಿಸಿದ.</p>



<p>ಹಾಗೂ ಹೀಗೂ ಏದುಸಿರು ಬಿಡುತ್ತ, ಸೂರ್ಯ ಮುಳುಗಿದ ಹೊತ್ತಲ್ಲಿ ಪಟ್ಟಾಭಿಷಕ್ತನಾದ ನಮೋಬಾಬಾನ ಕುಂಡಲಿಗೆ ಕತ್ತಲು ತುಂಬಿತ್ತು. ಶನಿ, ಮಂಗಳ, ಗುರು ಎಲ್ಲಾ ಗ್ರಹಗಳು ಒಟ್ಟಿಗೆ ರಾಗಾ ಮತ್ತವನ ಇಂಡಿಯಾ ಗ್ಯಾಂಗ್ ನಲ್ಲಿ ವಕ್ಕರಿಸಿಕೊಂಡು, ದಶದಿಕ್ಕುಗಳಿಂದಲೂ ಅಟಕಾಯಿಸಿಕೊಂಡು ಕೈಕಾಲು ಕಟ್ಟಿ ಹಾಕಿದ್ದವು. ಇಷ್ಟು ಸಾಲದೂಂತ, ಪದಗ್ರಹಣದ ನಂತರ ತುರ್ತಾಗಿ ಕುಟೀರಕ್ಕೆ ಬರಹೇಳಿದ್ದ ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತ, ಇಂಥದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದವನಂತೆ ಉರಿವ ಬೆಂಕಿಗೆ ಸುರಿಯಲು ತುಪ್ಪದ ಗಿಂಡಿ ಹಿಡಿದು ನಿಂತಿದ್ದ.</p>



<p>“ಏನು ಅಹಂಕಾರ! ಎಷ್ಟು ಕೊಬ್ಬು!”</p>



<p>“ಯಾರಿಗಪ್ಪ?”</p>



<p>“ಮರ್ಯಾದೆ…ಮರ್ಯಾದೆ. ನಾಲಿಗೆ ಮೇಲೆ ನಿಗಾ ಇರಲಿ. ಚಡ್ಡಿ ಪೂರ್ವಾಶ್ರಮದಲ್ಲಿ ಒಟ್ಟಿಗೆ ಇದ್ದು ಮೂರೊತ್ತು ಉಪ್ಪಿಟ್ಟು ತಿಂದು ಕೊಕ್ಕೊ ಕಬ್ಬಡಿ ಆಡಿರಬಹುದು. ಆಗಿನ ಪುರೋಹಿತರಿಗೆ ಇಬ್ಬರೂ ಕೂಡಿ ಬಾಡಿ ಮಸಾಜ್ ಸೇವೆ ಮಾಡಿರಬಹುದು. ಆದರೆ, ಈಗ ನಾನು ಸಾಮ್ರಾಟನನ್ನು ನಾಮಿನೇಶನ್ ಮಾಡೋನು. ಸಲಿಗೆ ಬೇಡ, ಎಚ್ಚರವಿರಲಿ”</p>



<p>“ಪೂಜಾರಿಗಳು ಕ್ಷಮಿಸಬೇಕು. ತಮ್ಮ ಕೋಪಕ್ಕೆ ಕಾರಣ ತಿಳಿಯಬಹುದೇ?”</p>



<p>“ಯಾವನೋ ಅವ್ನು…ಕಪಿ ನಡ್ಡ…ಸಾಮ್ರಾಟರಿಗೆ ಕುಟೀರದ ಅವಶ್ಯಕತೆ ಇಲ್ಲ ಅಂದವನು?”</p>



<p>“ಅಯ್ಯೋ ಬಿಡಿ…ಆ ದಡ್ಡನ ಮಾತು”</p>



<p>“ಆ ಕಪಿ ಬಾಯಿಗೆ ಆ ಮಾತನ್ನ ಯಾರು ತುರುಕಿರೋದು ನಂಗೊತ್ತು. ನಾನಷ್ಟು ದಡ್ಡ ಅಲ್ಲ. ಇರಲಿ…ದಾನದ ಹೆಸರಲ್ಲಿ ಆಸ್ತಿ ಮಾಡ್ಕೊಂಡ್ ಮಜಾ ಮಾಡ್ತಿರೊ ಸಾಬ್ರ ಬಾಲನ ಕಟ್ ಮಾಡ್ಬೇಕು. ಅದು ಬಿಟ್ಟು ಸಾಬ್ರಿಗೆ ಮೀಸಲಾತಿ ಕೊಡ್ತಿರೊ ತೆಲುಗು ಬಾಬುನ…ಮತ್ತೆ ʼಅಲ್ಲಾ….ಅಲ್ಲಾʼ ಅಂತ ಭಜನೆ ಮಾಡೋ ಪಲ್ಟುನ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದೀಯ!”</p>



<p>“ಅದೆಲ್ಲ ನಾಟಕ…ನಿಮಗೆ ಗೊತ್ತಿರೋದೆ. ಎಲ್ರನ್ನೂ ತಬ್ಕೊಬೇಕು ಅಂತ ಅದೆಷ್ಟು ಬಾರಿ ನೀವೇ ಹೇಳಿದ್ದೀರ!”</p>



<p>“ಆಯ್ತು… ಆಯ್ತು. ಹಾಗೆ ಕುಟೀರದ ವತಿಯಿಂದ ದೀಕ್ಷೆ ಪಡೆದ ಚಡ್ಡಿ ಪಂಡಿತರನ್ನು ಉನ್ನತ ಹುದ್ದೆಗೆ ಲಾಂಗಿಟ್ಯುಡಿನಲ್ಲಿ ನೇರವಾಗಿ ಅಪಾಯಿಂಟ್ ಮಾಡ್ಬೇಕು. ಜಾರಿ ಮಾಡಬೇಕಾದ ಮನುವಿಕೃತಿ ಸನಾತನಿ ಅಜೆಂಡಾಗಳು ಸಾಕಷ್ಟಿದೆ”</p>



<p>“ಅದು ಲಾಂಗಿಟ್ಯುಡಿನಲಿ…ಆಗಲ್ಲ…ಲ್ಯಾಟರಲಿ ಮಾಡಬಹುದು”</p>



<p>“ಲ್ಯಾಟರಲ್…ಪರ್ಪೆಂಡಿಕ್ಯುಲರ್…ಯಾವುದೊ ಒಂದು. ಒಟ್ನಲ್ಲಿ ಮಾಡು. ಸದ್ಯಕ್ಕೆ ಹೊರಡು. ನಂಗೆ ಬ್ರೈನ್ ವಾಶಿಂಗ್ ಟೈಮಾಯ್ತು”</p>



<p>ಯಾವ ಆಸೆ ತೋರಿಸಿ ಪಲ್ಟುಕುಮಾರ, ತೆಲುಗುಬಾಬುರನ್ನು ಹೊಸ ಬಿಲ್ಲಿಗೆ ಒಪ್ಪಿಸೋದು ಅಂತ ನಮೋ ಯೋಚಿಸುತ್ತಿರ ಬೇಕಾದರೆ, ಅಪರಿಮಿತ ಕುತಂತ್ರಿ ಆಯೋಜಿಸಿದ್ದ ʼಸಕಲ ಗೋದಿ ಮೀಡಿಯಾ ಪೆಡಿಗ್ರೆ ಬಿಸ್ಕತ್ ಪಾರ್ಟಿʼ ಗೆ ತಡವಾಗುತ್ತಿರುವ ಬಗ್ಗೆ ಆಪ್ತಕಾರ್ಯದರ್ಶಿ ಸೂಚನೆ ನೀಡಿದ.</p>



<p>ವಿಶಾಲವಾದ ಕಾನ್ ಫರೆನ್ಸ್ ರೂಮಿನಲ್ಲಿ – ಬಕೆಟ್ ಗೊಸ್ವಾಮಿ, ತುತ್ತೂರಿ ಕುಮಾರಿ, ಬೆಇಜ್ಜತ್ ಶರ್ಮ, ಪಜಿತ್ ಅವನಪ್ಪನವರ್, ತಂಗಣ್ಣ, ಕುದೀರ್ ಕೌದರಿ…..ಸಕಲ ಗೋದಿ ಮೀಡಿಯಾದ ಮುಖ್ಯ ಆಂಕರ್ ಗಳು ನಮೋಬಾಬಾರ ಪಾದಗಳನ್ನು ಚುಂಬಿಸಿ, ಕುರ್ಚಿಗಳಲ್ಲಿ ಆಸೀನರಾದರು. ಅಪರಿಮಿತ ಕುತಂತ್ರಿ ಎಸೆದ ಬಿಸ್ಕತ್ ಗಳನ್ನು ಕ್ಯಾಚ್ ಹಿಡಿದು ಸವಿಯುತ್ತ ಆನಂದದಲ್ಲಿ ತೇಲಾಡುತ್ತಿರುವಾಗ, ಸಡನ್ನಾಗಿ ಅಪರಿಮಿತ ಕುತಂತ್ರಿ ಕುಪಿತನಾಗಿ “ನೀವೆಲ್ಲಾ ನಿಮ್ಮದೇ ಲೋಕದಲ್ಲಿ… ಹೊರ ಜಗತ್ತಿನ ಪರಿವೇ ಇಲ್ಲದೆ ಮೋಜು ಮಸ್ತಿ ಮಾಡ್ತಿದ್ದೀರ! ಸರ್ವೆ ರಿಪೋರ್ಟ್ ಬಂದಿದೆ. ನಿಮ್ಮ ಚಾನೆಲ್ ಗಳನ್ನ ಯಾರೂ ನೋಡ್ತಾ ಇಲ್ಲಾಂತ! ಅದರಲ್ಲೂ ನಮೋಬಾಬಾ ಸ್ಕ್ರೀನ್ ಮೇಲೆ ಕಂಡ ಕೂಡಲೇ ಟೀವಿ ಆಫ್ ಮಾಡ್ತಿದ್ದಾರಂತೆ! ಜನರು ರಾಗಾ…ರಾಗಾ ಅಂತಿದ್ದಾರೆ. ನೀವುಗಳು ಭೋಗ…ಭೋಗ ಅಂತಿದ್ದೀರ. ಜನ ನಮೋಭಜನೆ ಮಾಡ್ತಾ ಇಲ್ಲ? ನಿಮಗ್ಯಾಕೆ ಬಿಸ್ಕತ್ ಕೊಡ್ಬೇಕು?” ಎಂದು ಕಿರುಚಿದ್ದೇ, ಎಲ್ಲರ ಬಾಯಿಂದ ತಿಂದ ಬಿಸ್ಕತ್ ಹೊರ ಕಕ್ಕಿದವು.</p>



<p>“ಸ್ವಾಮಿಗಳೇ…ನಾವಾದ್ರೂ ಎಷ್ಟೂಂತ ಬೊಗಳೋದು? ನಮೋ ಅವರು ತುಂಬಾನಿಗೆ ಹೇಳಿ ಪುಗಸಟ್ಟೆ ಡೇಟಾ ಕೊಟ್ಟಾಗಿಂದ ಎಲ್ರೂ ಮೊಬೈಲ್, ಕಂಪ್ಯೂಟರಲ್ಲಿ ಬರೋ ಅರ್ಬನ್ ನಕ್ಸಲ್, ಟೆರರಿಸ್ಟ್ ಗಳ ನ್ಯೂಸ್ ನೋಡೋಕೆ ಮುಗಿ ಬಿದ್ದಿದ್ದಾರೆ. ಅವರೆಲ್ಲಾ ದೇಶದ್ರೋಹಿಗಳು, ಒಳಗಾಕಿ. ನಮ್ ಹೊಟ್ಟೆ ಮೇಲೆ ಬರೆ ಹಾಕ್ಬೇಡಿ” ಎಂದು ಗೋಗೆರೆದರು.</p>



<p>ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್ ಜೊತೆಗೆ ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲನ್ನೂ ಒಟ್ಟಿಗೆ ತಂದರಾಯಿತು ಎಂದು ಅಪರಿಮಿತ ಕುತಂತ್ರಿ ಸಲಹೆ ಕೊಟ್ಟ. ಹಾಗೆ ಪಲ್ಟು, ಬಾಬುವನ್ನು ಯಾಮಾರಿಸಲು ʼಲಾಲಿಪಪ್ʼ ಐಡಿಯಾವನ್ನು ಕಿವಿಯಲ್ಲಿ ಸುರಿದಾಗ, ಮೂವತ್ತಾರು ಇಂಚಿಗೆ ಕುಗಿದ್ದ ಎದೆಯನ್ನು ಐವತ್ತಾರಕ್ಕೆ ಉಬ್ಬಿಸಿ ನಮೋ ಪ್ರಸನ್ನನಾದ.</p>



<p>ಲಾಲಿಪಪ್ ಆಸೆಗೆ ಜೊಲ್ಲು ಸುರಿಸುತ್ತ ಪಲ್ಟುಕುಮಾರ, ತೆಲುಗುಬಾಬು ಬಂದಾಗ ನಮೋ ಅವರನ್ನು ತಬ್ಬಿ, ಅಪ್ಪಿ ಮುದ್ದಾಡಿ ಬರಮಾಡಿಕೊಂಡ. ʼಇದ್ಯಾಕೊ ಅತಿಯಾಯಿತುʼ ಎಂದು ಪಲ್ಟು, ಬಾಬು ಮುಖಕ್ಕೆ ಮೆತ್ತಿದ್ದ ಎಂಜಲನ್ನು ಒರೆಸಿಕೊಂಡರು.</p>



<p>“ಪಲ್ಟು, ಬಾಬುಗಾರು…ಇದು ನಿಮಗೋಸ್ಕರ ಆರ್ಡರ್ ಮಾಡಿ ತರಿಸಿದ ಡೆಲಿಶಿಯಸ್ ಲಾಲಿಪಪ್!” ಎಂದು ಕೈಲಿಡಿದ ಚಿನ್ನಾರಿ ಪೇಪರ್ ಸುತ್ತಿಕೊಂಡ ವಿಶೇಷ ಪ್ಯಾಕೇಜನ್ನು ನಮೋ ತೋರಿಸಿದ. ಆತುರದಿಂದ ಅವರು ಪ್ಯಾಕೇಜನ್ನು ತೆಗೆದುಕೊಳ್ಳಲು ಕುರ್ಚಿಯಿಂದ ಎದ್ದಾಗ ನಮೋ ನಗುತ್ತ “ಅವಸರ ಬೇಡ…ಮಿತ್ರೋ. ಇದು ನಿಮಗಾಗಿಯೇ ಇರೋದು” ಎಂದು ಟೇಬಲ್ಲಿನ ಮೇಲಿಟ್ಟು “ಕೊಡ್ತೀನಿ. ಆದರೆ, ಅದಕ್ಕೂ ಮುಂಚೆ ಒಂದಷ್ಟು ಆಟ ಆಡೋಣ. ನನಗೂ ಇತ್ತೀಚಿಗೆ ಫೋಟೊ ಶೂಟ್ ಗಳಿಲ್ಲದೆ ಬೋರ್ ಆಗ್ತಿದೆ” ಎಂದಾಗ ನಮೋನ ಕಳ್ಳಾಟದ ವಾಸನೆ ಹಿಡಿದ ಪಲ್ಟು, ಬಾಬು ಪರಸ್ಪರ ಮುಖ ನೋಡಿಕೊಂಡರು.</p>



<p>ಸರಿ. ಆಪ್ತಕಾರ್ಯದರ್ಶಿ ನೆಲದಲ್ಲಿ ಚೌಕವನ್ನು ಬರೆದು, ಚೌಕಬಾರ ಆಡಲು ಕವಡೆಗಳನ್ನು ತಂದಿಟ್ಟ. ಕವಡೆಗಳನ್ನು ಚೆಲ್ಲುತ್ತ ನಾಲ್ವರು ಆಟವಾಡುವಾಗ, ಅವರನ್ನು ಸಂಪ್ರೀತಗೊಳಿಸಲು ಕುತಂತ್ರಿ ನಮೋ – ಅವಕಾಶ ಸಿಕ್ಕರೂ ಕಾಯಿಗಳನ್ನು ಹೊಡೆಯದೆ ಬೇಕಂತಲೇ ತಪ್ಪುತಪ್ಪಾಗಿ ನಡೆಸಿ ಆಟದಲ್ಲಿ ಹಿನ್ನೆಡೆ ಸಾಧಿಸುವುದನ್ನು ಪಲ್ಟು, ಬಾಬು ಗಮನಿಸಿದರು.</p>



<p>ಅಮರಾವತಿ, ಗುಂಟೂರ್ ಮೆಣಸಿನಕಾಯಿ, ಗಯಾ, ಬೋಜ್ ಪುರಿ ಅಂತೆಲ್ಲ ಹರಟೆ ಮಾತಿನ ಮಧ್ಯೆ &#8211; ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್, ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲಿನ ಪ್ರಸ್ತಾಪವನ್ನು ನಮೋ ನವಿರಾಗಿ ಜೋಡಿಸಿದ. ʼಮುಸ್ಲಿಮ್ʼ ಪದ ಕಿವಿಗೆ ಬಿದ್ದದ್ದೇ ಪಲ್ಟು, ಬಾಬು ಕೈಕೊಡವಿಕೊಂಡು ಎದ್ದದ್ದು ನೋಡಿ ನಮೋ ಆತುರ ಪಟ್ಟೆನೆಂದು ಕೈಕೈ ಹಿಸುಕಿಕೊಂಡ.</p>



<p>“ಏಕೆ ಆಟ ಬೇಸರ ಬಂತಾ? ನೀವೇ ಗೆಲ್ತಿದ್ದೀರಿ”</p>



<p>“ಚೌಕಬಾರ ಮಕ್ಕಳಾಟ…ಐಸ್ ಪೈಸ್ ಆಡೋಣ, ನಾವಷ್ಟೇ! ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ &#8211; ಎಲ್ಲರನ್ನೂ ಹೊರಗೆ ಕಳಿಸಿ” ಎಂದ ತೆಲುಗುಬಾಬು, ಯಾರು ಮೊದಲು ಹುಡುಕೋದೆಂದು ನಿರ್ಧರಿಸಲು ಹಸ್ತದ ಮೇಲೆ ಹಸ್ತ ಇರಿಸಲು ಹೇಳಿದ. ಸೋತ ನಮೋ ಗೋಡೆಗೆ ಮುಖ ಮಾಡಿ ನೂರರವರೆಗೆ ಎಣಿಸುತ್ತ ನಿಂತ.</p>



<p>ಸಂಖ್ಯೆಗಳನ್ನು ಎಗರಿಸಿ “ತೊಂಭತ್ತೊಂಭತ್ತು…ನೂರು” ಎಂದು ಎಣಿಕೆ ಮುಗಿಸಿ ʼಎಲ್ರೂ ಬಚ್ಚಿಟ್ ಕೊಂಡ್ರಾ…ಹುಡುಕೋಕೆ ಬರ್ಲಾʼ ಅಂತ ಹುಡುಕುತ್ತ ಹೊರಟಾಗ ಪಲ್ಟುಕುಮಾರ, ತೆಲುಗುಬಾಬು ಎಲ್ಲೂ ಕಾಣದೆ ಮಂಗಮಾಯವಾಗಿದ್ದರು.</p>



<p>ಜನವಿರೋಧಿ, ಅಸಮಾನತೆ ಮೆತ್ತಿಕೊಂಡ, ಸೊಲ್ಲೆತ್ತುವ ಬಾಯಿಗೆ ಬೀಗ ಜಡಿಯುವ ಮತ್ಸರದ ನಮೋ ಬಿಟ್ಟ ಬಾಣದ ಬಿಲ್ಲುಗಳು ಜನಾಕ್ರೋಶಕ್ಕೆ ಸಿಕ್ಕು ನಪಾಸಾಗಿ ಮಕಾಡೆ ಮಲಗಿದವು.</p>



<p><strong>ಚಂದ್ರಪ್ರಭ ಕಠಾರಿ<br>cpkatari@yahoo.com</strong></p>
]]></content:encoded>
					
		
		
			</item>
		<item>
		<title>ಪ್ರಧಾನಿ ಜೈಲು ಸೇರಲಿದ್ದಾರೆ ಎಂದು ನಾನು ಹೇಳಿಲ್ಲ: ಲಾಲು ಪುತ್ರಿ ಮೀಸಾ</title>
		<link>https://peepalmedia.com/i-didnt-say-pm-will-go-to-jail-lalus-daughter-misa/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 12 Apr 2024 12:18:22 +0000</pubDate>
				<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bjp]]></category>
		<category><![CDATA[bjppolitics]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[laluprasadyadav]]></category>
		<category><![CDATA[meesha]]></category>
		<category><![CDATA[modi]]></category>
		<category><![CDATA[modji]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[trjd]]></category>
		<guid isPermaLink="false">https://peepalmedia.com/?p=38276</guid>

					<description><![CDATA[ಪಟ್ನಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೈಲು ಸೇರಲಿದ್ದಾರೆ ಎಂದು ಅವರನ್ನು ಗುರಿಯಾಗಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರ ಜೈಲು ಸೇರಲಿದ್ದಾರೆ ಎಂದು ಮೀಸಾ ಅವರು ಹೇಳಿದ್ದಾಗಿ ವರದಿಯಾಗಿತ್ತು. ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಇಂಥ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು [&#8230;]]]></description>
										<content:encoded><![CDATA[
<p><strong>ಪಟ್ನಾ:</strong> ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೈಲು ಸೇರಲಿದ್ದಾರೆ ಎಂದು ಅವರನ್ನು ಗುರಿಯಾಗಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.</p>



<p>ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಮೋದಿ ಅವರ ಜೈಲು ಸೇರಲಿದ್ದಾರೆ ಎಂದು ಮೀಸಾ ಅವರು ಹೇಳಿದ್ದಾಗಿ ವರದಿಯಾಗಿತ್ತು. ಪಾಟಲಿಪುತ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಈಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಇಂಥ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.</p>



<p>ಪ್ರಧಾನಿ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಪೂರ್ಣ ಹೇಳಿಕೆಯನ್ನು ಪ್ರಸಾರ ಮಾಡದೆ, ತಿರುಚಿದ ತುಣಕನ್ನು ಮಾತ್ರ ಬಿತ್ತರಿಸಿವೆ. ಅದು ಬಿಜೆಪಿಯ ಕಾರ್ಯಸೂಚಿ’ ಎಂದು ಮೀಸಾ ಆರೋಪಿಸಿದ್ದಾರೆ.</p>



<p>ಚುನಾವಣಾ ಬಾಂಡ್‌ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಮತ್ತು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವ ಬಗ್ಗೆ ಅಷ್ಟೇ ನಾನು ಮಾತನಾಡಿದ್ದೇನೆ. ಮೋದಿ ಬಗ್ಗೆ ಇಂಥ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮೋದಿ ಮುಖ ತೋರಿಸುವುದೇ ಮಾಧ್ಯಮಗಳ ಕೆಲಸ: ರಾಹುಲ್ ಗಾಂಧಿ</title>
		<link>https://peepalmedia.com/medias-job-is-to-show-modis-face-rahul-gandhi/</link>
		
		<dc:creator><![CDATA[Hanumanth Halageri]]></dc:creator>
		<pubDate>Thu, 11 Apr 2024 13:41:43 +0000</pubDate>
				<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[india]]></category>
		<category><![CDATA[modi]]></category>
		<category><![CDATA[modijí]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[rahulgandhi]]></category>
		<guid isPermaLink="false">https://peepalmedia.com/?p=38245</guid>

					<description><![CDATA[ಜೈಪುರ: ದಿನದ ಇಪ್ಪತ್ತನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿಯವರ ಮುಖ ತೋರಿಸುವುದೇ ಇಂದಿನ ಕೆಲವು ಮಾಧ್ಯಮಗಳ ಕೆಲಸವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಅನುಪ್‌ಗಢದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಮಾಧ್ಯಮಗಳ ನಿಜವಾದ ಕರ್ತವ್ಯವಾಗಿದೆ. ಆದರೆ ಇಂದಿನ ಸುದ್ದಿ ಮಾಧ್ಯಮಗಳು ಆ ಕೆಲಸವನ್ನೇ ಮರೆತಿವೆ. ಪತ್ರಕರ್ತರ ಧ್ವನಿಯನ್ನು ಇಂದಿನ ಸುದ್ದಿ ಮಾಧ್ಯಮಗಳ ಬಿಲೇನಿಯರ್‌ ಮಾಲೀಕರು ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು. &#160;ಕೆಲವು ದಿನಗಳ ಹಿಂದೆ [&#8230;]]]></description>
										<content:encoded><![CDATA[
<p><strong>ಜೈಪುರ</strong>: ದಿನದ ಇಪ್ಪತ್ತನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿಯವರ ಮುಖ ತೋರಿಸುವುದೇ ಇಂದಿನ ಕೆಲವು ಮಾಧ್ಯಮಗಳ ಕೆಲಸವಾಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>



<p>ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಅನುಪ್‌ಗಢದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಮಾಧ್ಯಮಗಳ ನಿಜವಾದ ಕರ್ತವ್ಯವಾಗಿದೆ. ಆದರೆ ಇಂದಿನ ಸುದ್ದಿ ಮಾಧ್ಯಮಗಳು ಆ ಕೆಲಸವನ್ನೇ ಮರೆತಿವೆ. ಪತ್ರಕರ್ತರ ಧ್ವನಿಯನ್ನು ಇಂದಿನ ಸುದ್ದಿ ಮಾಧ್ಯಮಗಳ ಬಿಲೇನಿಯರ್‌ ಮಾಲೀಕರು ಹತ್ತಿಕ್ಕುತ್ತಿದ್ದಾರೆ ಎಂದು ದೂರಿದರು.</p>



<p>&nbsp;ಕೆಲವು ದಿನಗಳ ಹಿಂದೆ ದೇಶದ ನೈಜ ಸಮಸ್ಯೆಗಳನ್ನು ಬಿಟ್ಟು ಮಾಧ್ಯಮಗಳು ಅಂಬಾನಿ ಮಗನ ಮದುವೆ ಕಾರ್ಯಕ್ರಮ ಪ್ರಸಾರ ಮಾಡುವುದರಲ್ಲಿಯೇ ನಿರತವಾಗಿದ್ದವು. ಈ ದೇಶದಲ್ಲಿನ ನಿರುದ್ಯೋಗ, ಹಣದುಬ್ಬರ ಮಾಧ್ಯಮಗಳಿಗೆ ಸಮಸ್ಯೆಯಾಗಿಯೇ ಕಾಣಿಸುತ್ತಿಲ್ಲ. ದಿನದ ಇಪ್ಪತ್ತನಾಲ್ಕು ಗಂಟೆ ಪ್ರಧಾನಿ ನರೇಂದ್ರ ಮೋದಿ ಅವರ ಮುಖ ತೋರಿಸುವುದೇ ಅವುಗಳ ಕೆಲಸ &nbsp;ಎಂದು ಆರೋಪಿಸಿದರು.</p>



<p>‘ಮಾಧ್ಯಮ ಕ್ಷೇತ್ರದಲ್ಲಿ ಶೇಕಡ 2ರಿಂದ 3ರಷ್ಟು ಜನರು ಉದ್ಯೋಗ ಪಡೆಯುತ್ತಿದ್ದಾರೆ. 15ರಿಂದ 20 ಜನರು ಇಡೀ ಮಾಧ್ಯಮಲೋಕವನ್ನು ನಿಯಂತ್ರಿಸುತ್ತಿದ್ದಾರೆ. &nbsp;ಅವರಿವೆ</p>



<p>ದೇಶದ ರೈತರು ತಮ್ಮ ಬೆಳಗೆ ಕನಿಷ್ಠ ಬೆಂಬಲ ಬೆಲೆ ಕೇಳುತ್ತಿರುವುದು, ಯುವಕರು ಉದ್ಯೋಗ ಹುಡುಕುತ್ತಿರುವುದು, ಮಹಿಳೆಯರು ಹಣದುಬ್ಬರದಿಂದ ಬೇಸತ್ತಿರುವುದು ಕಾಣಿಸುತ್ತಲೇ ಇಲ್ಲ. ಈ ಜನ ಸಾಮಾನ್ಯರ ರ ಕೂಗನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.</p>



<p>&nbsp;ನಿರುದ್ಯೋಗ, ಹಣದುಬ್ಬರ ಈ ದೇಶದ ಅತಿದೊಡ್ಡ ಸಮಸ್ಯೆಗಳೆಂದು ದೇಶದ ಯಾರನ್ನೇ ಕೇಳಿದರೂ ಹೇಳುತ್ತಾರೆ. ನಿಮ್ಮ ಸಾಲವನ್ನು ಮನ್ನಾ ಮಾಡುವುದಿಲ್ಲ, ನೀವು ಭಯೋತ್ಪಾದಕರು, ನಿಮ್ಮ ಬೆಳೆಗಳಿಗೆ ಎಂಎಸ್‌ಪಿ ನೀಡುವುದಿಲ್ಲ ಎಂದು ಮೋದಿ ರೈತರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಜಾರಿಗೆ ತಂದೆ ತರುತ್ತದೆ. ಶತಕೋಟಿ ಒಡೆಯರ ಸಾಲವನ್ನು ಮೋದಿ ಮನ್ನಾ ಮಾಡಿದರೆ, ರೈತರ ಸಾಲವನ್ನು ಕಾಂಗ್ರೆಸ್ ಮನ್ನಾ ಮಾಡುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಬಡವರು ಮತ್ತು ಶತಕೋಟಿ ಒಡೆಯರ ನಡುವಿನ ಚುನಾವಣೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.</p>
]]></content:encoded>
					
		
		
			</item>
		<item>
		<title>ದೆಹಲಿ ಪ್ರವೇಶಕ್ಕೆ ತಯಾರಾದ ರೈತರು: ಒಬ್ಬ ರೈತನೂ ಒಳಬರದಂತೆ ತಡೆಯಿರಿ ಎಂದ ಸರ್ಕಾರ</title>
		<link>https://peepalmedia.com/farmers-ready-to-enter-delhi-govt-said-to-prevent-even-a-single-farmer-from-entering/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 21 Feb 2024 07:27:36 +0000</pubDate>
				<category><![CDATA[ದೇಶ]]></category>
		<category><![CDATA[#modi]]></category>
		<category><![CDATA[#sentral governament]]></category>
		<category><![CDATA[AAP]]></category>
		<category><![CDATA[aravind kejrival]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Delhi]]></category>
		<category><![CDATA[farmer protest delhi]]></category>
		<category><![CDATA[farmers]]></category>
		<category><![CDATA[india]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=36285</guid>

					<description><![CDATA[ನವದೆಹಲಿ: ಕೇಂದ್ರ ಸರ್ಕಾರ ರೈತರೊಂದಿಗೆಮಾತುಕತೆ ನಡೆಸಿ ಒಂದು ಪ್ರಸ್ತಾವವನ್ನು ಮುಂದಿಟ್ಟಿತ್ತಾದರೂ ರೈತರು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಇಂದಿನಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಲು ಸಜ್ಜಾಗಿದ್ದು. ಸರ್ಕಾರ ಕೂಡ ರಾಷ್ಟ್ರರಾಜಧಾನಿಯಲ್ಲಿ ಭದ್ರತೆ ಬಿಗಿ ಹೆಚ್ಚಿಸಿದೆ. ಬಿಗಿ ಭದ್ರತೆ ನೆಪದಲ್ಲಿ ನಮಗೆ ಸರ್ಕಾರದಿಂದ ಇನ್ನಷ್ಟು ಕಿರುಕುಳ ಹೆಚ್ಚಲಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿವೆ.ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ವಾರದಿಂದ ಸಾವಿರಾರು ರೈತರು [&#8230;]]]></description>
										<content:encoded><![CDATA[
<p>ನವದೆಹಲಿ: ಕೇಂದ್ರ ಸರ್ಕಾರ ರೈತರೊಂದಿಗೆಮಾತುಕತೆ ನಡೆಸಿ ಒಂದು ಪ್ರಸ್ತಾವವನ್ನು ಮುಂದಿಟ್ಟಿತ್ತಾದರೂ ರೈತರು ಆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಇಂದಿನಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಲು ಸಜ್ಜಾಗಿದ್ದು. ಸರ್ಕಾರ ಕೂಡ ರಾಷ್ಟ್ರರಾಜಧಾನಿಯಲ್ಲಿ ಭದ್ರತೆ ಬಿಗಿ ಹೆಚ್ಚಿಸಿದೆ. ಬಿಗಿ ಭದ್ರತೆ ನೆಪದಲ್ಲಿ ನಮಗೆ ಸರ್ಕಾರದಿಂದ ಇನ್ನಷ್ಟು ಕಿರುಕುಳ ಹೆಚ್ಚಲಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ.</p>



<p><br>ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿವೆ.<br>ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ಕಳೆದ ವಾರದಿಂದ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡಿದ್ದ ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ಐದು ವರ್ಷಗಳವರೆಗೆ ಖರೀದಿಸುವ ಪ್ರಸ್ತಾವವನ್ನೂ ತಿರಸ್ಕರಿಸಿದ್ದಾರೆ. ಇಂದು ದೆಹಲಿ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ.</p>



<p><br>ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿಯ ಕೇಂದ್ರ ಭಾಗಕ್ಕೆ ಹೋಗುವ ವಿವಿಧ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ಮಾಡುವುದರಿಂದ ಟ್ರಾಫಿಕ್‌ ಸಮಸ್ಯೆ ಹೆಚ್ಚಲಿದೆ. ಪ್ರಯಾಣಿಕರು ಸಂಚಾರ ದಟ್ಟಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈಗಾಗಲೇ ಟಿಕ್ರಿ ಮತ್ತು ಸಿಂಘು ಗಡಿಗಳನ್ನು ಬಂದ್‌ ಮಾಡಲಾಗಿದೆ. ಪೊಲೀಸರು ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜತೆಗೆ ಕಾಂಕ್ರೀಟ್‌ ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅಗತ್ಯಬಿದ್ದರೆ, ಗಾಜಿಪುರ ಗಡಿಯನ್ನು ಬುಧವಾರವೂ ಬಂದ್‌ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದಾರೆ.</p>



<p><br>ಒಬ್ಬ ಪ್ರತಿಭಟನಾಕಾರ ಅಥವಾ ಒಂದು ವಾಹನವೂ ದೆಹಲಿಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ದೆಹಲಿ ಪೊಲೀಸರು ಈಗಾಗಲೇ 30,000 ಅಶ್ರುವಾಯು ಶೆಲ್‌ಗಳನ್ನು ಸಂಗ್ರಹಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಇತಿಹಾಸ ಪಠ್ಯದಲ್ಲಿ ರಾಮಾಯಣ – ಮಹಾಭಾರತ: NCERT ಸಮಿತಿ</title>
		<link>https://peepalmedia.com/ramayana-mahabharata-in-history-books-ncert/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 22 Nov 2023 06:26:17 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[education]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahabharatha]]></category>
		<category><![CDATA[modi]]></category>
		<category><![CDATA[narendra]]></category>
		<category><![CDATA[narendramodi]]></category>
		<category><![CDATA[ncert]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ramayana]]></category>
		<category><![CDATA[RSS]]></category>
		<category><![CDATA[state politics]]></category>
		<category><![CDATA[text book]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=32896</guid>

					<description><![CDATA[ಬೆಂಗಳೂರು: NCERTಯ ಉನ್ನತ ಮಟ್ಟದ ಸಮಿತಿ ಶಾಲಾ ಇತಿಹಾಸ ಪಠ್ಯಕ್ರಮದಲ್ಲಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಲು ಶಿಫಾರಸು ಮಾಡಿದೆ. &#8220;ಸಮಾಜ ವಿಜ್ಞಾನದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಮಿತಿಯು ಒತ್ತು ನೀಡಿದೆ&#8221; ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಹೇಳಿದ್ದಾರೆ. &#8220;ತಮ್ಮ ಹದಿಹರೆಯದ ಪ್ರಾಯದಲ್ಲಿ ವಿದ್ಯಾರ್ಥಿಗಳು ಸ್ವಾಭಿಮಾನ, ದೇಶಭಕ್ತಿ ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ,&#8221; ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂಸ್ಕೃತಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> NCERTಯ ಉನ್ನತ ಮಟ್ಟದ ಸಮಿತಿ ಶಾಲಾ ಇತಿಹಾಸ ಪಠ್ಯಕ್ರಮದಲ್ಲಿ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಲು ಶಿಫಾರಸು ಮಾಡಿದೆ.</p>



<p>&#8220;ಸಮಾಜ ವಿಜ್ಞಾನದಲ್ಲಿ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಲು ಸಮಿತಿಯು ಒತ್ತು ನೀಡಿದೆ&#8221; ಎಂದು ಸಮಿತಿಯ ಅಧ್ಯಕ್ಷ <a href="https://peepalmedia.com/saffronisation-of-ncert-text-books/" data-type="link" data-id="https://peepalmedia.com/saffronisation-of-ncert-text-books/">ಸಿಐ ಐಸಾಕ್</a> ಹೇಳಿದ್ದಾರೆ. &#8220;ತಮ್ಮ ಹದಿಹರೆಯದ ಪ್ರಾಯದಲ್ಲಿ ವಿದ್ಯಾರ್ಥಿಗಳು ಸ್ವಾಭಿಮಾನ, ದೇಶಭಕ್ತಿ ಮತ್ತು ರಾಷ್ಟ್ರದ ಬಗ್ಗೆ ಹೆಮ್ಮೆಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ,&#8221; ಎಂದು ಅವರು ಹೇಳಿದ್ದಾರೆ.</p>



<p>ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂಸ್ಕೃತಿ ಹಾಗೂ ದೇಶದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ ಎಂದು ಐಸಾಕ್ ಹೇಳಿದ್ದಾರೆ. &#8220;ಕೆಲವು ಬೋರ್ಡ್‌ಗಳು ಈಗಾಗಲೇ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುತ್ತಿವೆ, ಆದರೆ ಅದನ್ನು ಹೆಚ್ಚು ವಿಸ್ತಾರವಾದ ರೀತಿಯಲ್ಲಿ ಮಾಡಬೇಕಾಗಿದೆ,&#8221; ಎಂದು ಅವರು ಹೇಳಿದ್ದಾರೆ.</p>



<p>7 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹಾಕಾವ್ಯಗಳನ್ನು ಕಲಿಸಲು ಶಿಫಾರಸು ಮಾಡಲಾಗಿದೆ. ಹಾಗೂ, ಸಂವಿಧಾನದ ಪೀಠಿಕೆಯನ್ನು ತರಗತಿಯ ಗೋಡೆಗಳ ಮೇಲೆ ಬರೆಯುವಂತೆಯೂ ಸಮಿತಿ ಶಿಫಾರಸು ಮಾಡಿದೆ.</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="glb39OfOjv"><a href="https://peepalmedia.com/saffronisation-of-ncert-text-books/">NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!</a></blockquote><iframe class="wp-embedded-content" sandbox="allow-scripts" security="restricted"  title="&#8220;NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!&#8221; &#8212; Peepal Media" src="https://peepalmedia.com/saffronisation-of-ncert-text-books/embed/#?secret=orqnodzjVo#?secret=glb39OfOjv" data-secret="glb39OfOjv" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p>ಅಕ್ಟೋಬರ್‌ನಲ್ಲಿ ಸಮಿತಿಯು ಶಾಲಾ ಪಠ್ಯಪುಸ್ತಕಗಳಲ್ಲಿ &#8220;ಇಂಡಿಯಾ&#8221; ಬದಲಿಗೆ &#8220;ಭಾರತ್&#8221; ಎಂದು ಬಳಸಲು ಶಿಫಾರಸು ಮಾಡಿತ್ತು. ಪಠ್ಯಕ್ರಮದಲ್ಲಿ &#8220;ಪ್ರಾಚೀನ ಇತಿಹಾಸ &#8211; ancient history&#8221; ಬದಲಿಗೆ &#8220;ಶಾಸ್ತ್ರೀಯ ಇತಿಹಾಸ-classical history&#8221; ಎಂದು ಬಳಸಲು ಮತ್ತು ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ &#8220;ಭಾರತೀಯ ಜ್ಞಾನ ವ್ಯವಸ್ಥೆ &#8211; “Indian Knowledge System&#8221; ಅನ್ನು ಸೇರಿಸಲು ಸಲಹೆ ನೀಡಲಾಗಿದೆ.</p>



<p>National Council of Educational Research and Training ಇಂಡಿಯಾ ಎಂಬುದನ್ನು ಭಾರತ ಎಂದು ಬದಲಿಸುವಂತಹ &nbsp;ಯಾವುದೇ ಬದಲಾವಣೆಗಳ ಬಗ್ಗೆ ಕಾಮೆಂಟ್ ಮಾಡುವುದು &#8220;ತುಂಬಾ ಅಕಾಲಿಕ&#8221; ಎಂದು ಹೇಳಿದೆ.</p>



<p>ಏಳು ಸದಸ್ಯರ ಸಮಾಜ ವಿಜ್ಞಾನದ ಮೇಲೆ ಕೆಲಸ ಮಾಡುವ ಈ &nbsp;ಸಮಿತಿಯು ವಿವಿಧ ವಿಷಯಗಳ ಕುರಿತು ಶಿಫಾರಸುಗಳನ್ನು ನೀಡಲು NCERT ರಚಿಸಿರುವ 25 ತಜ್ಞರ ಸಮಿತಿಗಳಲ್ಲಿ ಒಂದಾಗಿದೆ.</p>
]]></content:encoded>
					
		
		
			</item>
		<item>
		<title>ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?: ವಿ.ಪರಿಷತ್ ನಲ್ಲಿ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದ ಸಿಎಂ</title>
		<link>https://peepalmedia.com/why-are-you-angry-with-hitler/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 14 Jul 2023 08:16:42 +0000</pubDate>
				<category><![CDATA[ರಾಜಕೀಯ]]></category>
		<category><![CDATA[Hitler]]></category>
		<category><![CDATA[karnataka]]></category>
		<category><![CDATA[narendramodi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=23692</guid>

					<description><![CDATA[ಬೆಂಗಳೂರು : ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಬಿಜೆಪಿ ಪಕ್ಷ ಹೇಗೆ ಹಂತಹಂತದಲ್ಲೂ ಜನವಿರೋಧಿ ಆಗುತ್ತಿದೆ ಎಂಬುದನ್ನು ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿಯವರು ಹೇಗೆ ಜನರಿಂದ ದೂರವಾಗುತ್ತಿದೆ, ನರೇಂದ್ರ ಮೋದಿಯವರ ಎಡೆಬಿಡದ [&#8230;]]]></description>
										<content:encoded><![CDATA[
<p>ಬೆಂಗಳೂರು : ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.</p>



<p>ಬಿಜೆಪಿ ಪಕ್ಷ ಹೇಗೆ ಹಂತಹಂತದಲ್ಲೂ ಜನವಿರೋಧಿ ಆಗುತ್ತಿದೆ ಎಂಬುದನ್ನು ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. ಬಿಜೆಪಿ ಮತ್ತು ನರೇಂದ್ರ ಮೋದಿಯವರು ಹೇಗೆ ಜನರಿಂದ ದೂರವಾಗುತ್ತಿದೆ, ನರೇಂದ್ರ ಮೋದಿಯವರ ಎಡೆಬಿಡದ ಪ್ರಚಾರಕ್ಕೂ ಕರ್ನಾಟಕದ ಜನ ಸೊಪ್ಪು ಹಾಕಿಲ್ಲ ಎಂಬುದನ್ನು ಎಳೆಎಳೆಯಾಗಿ ಸಿದ್ದರಾಮಯ್ಯ ವಿಧಾನ ಪರಿಷತ್ ನಲ್ಲಿ ಹೇಳಿದರು.</p>



<p>ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 28 ಬಾರಿ ಕರ್ನಾಟಕಕ್ಕೆ ಬಂದು ಚುನಾವಣಾ ಪ್ರಚಾರ, ರ್ಯಾಲಿಗಳನ್ನು ನಡೆಸಿದರು. ಹಿಂದಿನ ಯಾವ ಪ್ರಧಾನಿಗಳೂ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಉಳಿದ ಪ್ರಧಾನಿಗಳಿಗೆ ದೇಶವನ್ನು ಮುನ್ನಡೆಸುವುದು ಪ್ರಥಮ ಆಧ್ಯತೆ ಆಗಿರುತ್ತಿತ್ತು. ಬರೀ ಚುನಾವಣೆಗಳನ್ನು ಮಾಡುತ್ತಾ ಓಡಾಡುತ್ತಿರಲಿಲ್ಲ ಎಂದರು.</p>



<p>ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರು ರೋಡ್ ಶೋ&nbsp; ನಡೆಸಿದ, ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಮತ್ತು ಸುತ್ತ ಮುತ್ಯಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅತ್ಯಂತ ಬಹುಮತದಿಂದ ಗೆದ್ದಿದೆ. ಹೀಗಾಗಿ ಮೋದಿ ಅವರ ಪ್ರಭಾವ ಮಂಕಾಗುತ್ತಿರುವುದನ್ನು ನೀವು ಒಪ್ಪಿಕೊಳ್ಳಿ. ಇನ್ಮೇಲೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಬಿಜೆಪಿ ಸದಸ್ಯರಿಗೆ ತಿಳಿಸಿದರು.</p>



<p>ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿಯ ಜನಪ್ರಿಯತೆ ಹೇಗೆ ಕುಸಿದಿದೆ, ಯಾಕೆ ಕುಸಿದಿದೆ ಹಾಗೂ ಕಾಂಗ್ರೆಸ್ ಪಕ್ಷ ಹೇಗೆ ಜನರಿಗೆ ಹತ್ತಿರವಾಗಿದೆ ಎಂಬುದನ್ನ ವಿವರಿಸಿದರು.</p>



<figure class="wp-block-image size-large"><img fetchpriority="high" decoding="async" width="1024" height="683" src="https://peepalmedia.com/wp-content/uploads/2023/07/IMG-20230714-WA0025-1024x683.jpg" alt="" class="wp-image-23694" srcset="https://peepalmedia.com/wp-content/uploads/2023/07/IMG-20230714-WA0025-1024x683.jpg 1024w, https://peepalmedia.com/wp-content/uploads/2023/07/IMG-20230714-WA0025-300x200.jpg 300w, https://peepalmedia.com/wp-content/uploads/2023/07/IMG-20230714-WA0025-768x512.jpg 768w, https://peepalmedia.com/wp-content/uploads/2023/07/IMG-20230714-WA0025-150x100.jpg 150w, https://peepalmedia.com/wp-content/uploads/2023/07/IMG-20230714-WA0025-696x464.jpg 696w, https://peepalmedia.com/wp-content/uploads/2023/07/IMG-20230714-WA0025.jpg 1032w" sizes="(max-width: 1024px) 100vw, 1024px" /></figure>



<p><strong>ಜನರ ಜೇಬಿನಲ್ಲಿರುವುದನ್ನು ಕಿತ್ತುಕೊಂಡಿರಿ</strong><br>ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು &#8220;ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.</p>



<p><strong>ಪಂಪ ಮತ್ತು ಹಿಟ್ಲರ್</strong><br>ಕನ್ನಡ ಮಣ್ಣಿನ ಸೌಹಾರ್ದ ಪರಂಪರೆಯ 2000 ವರ್ಷಗಳ ಮೌಲ್ಯವನ್ನು ವಿವರಿಸಿದ ಮುಖ್ಯಮಂತ್ರಿಗಳು, ಪಂಪ &#8220;ಮನುಷ್ಯ ಜಾತಿ ತಾನೊಂದೇ ವಲಂ&#8221; ಎನ್ನುವ ಮೌಲ್ಯದಿಂದ ಕನ್ನಡ ಸಂಸ್ಕೃತಿಯನ್ನು ಅರಳಿಸಿದರು. ಹೀಗೆ ಪಂಪನಿಂದ ಹಿಡಿದು ಬಸವಣ್ಣನವರನ್ನು ಪ್ರಸ್ತಾಪಿಸಿ ಇವರೆಲ್ಲರ ಆಶಯಗಳೇ ನಮ್ಮ ಸಂವಿಧಾನದಲ್ಲಿದೆ. ಆದರೆ ತಾನು ಮಾತ್ರ ಶ್ರೇಷ್ಠ ಎನ್ನುವ ಹಿಟ್ಲರ್ ಒಬ್ಬ ಮತಾಂಧ. ಆತ ಮನುಷ್ಯ ವಿರೋಧಿ ಎಂದರು.</p>



<p><strong>ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?</strong><br>ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿಗಳು, &#8216;ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?&#8221; ಎಂದು ಪ್ರಶ್ನಿಸಿದರು.</p>
]]></content:encoded>
					
		
		
			</item>
		<item>
		<title>ಮೋದಿ ಪತ್ರಿಕಾಗೋಷ್ಠಿ; ಕರಾರಿನ ಮೇಲೆ ಪತ್ರಕರ್ತರ ಪ್ರಶ್ನೆ ಎದುರಿಸಲಿರುವ ಭಾರತದ ಪ್ರಧಾನಿ</title>
		<link>https://peepalmedia.com/modi-press-conference-prime-minister-of-india-to-face-questions-from-journalists-on-the-deal/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 Jun 2023 13:41:58 +0000</pubDate>
				<category><![CDATA[ರಾಜಕೀಯ]]></category>
		<category><![CDATA[America visit]]></category>
		<category><![CDATA[narendramodi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[press meet]]></category>
		<guid isPermaLink="false">https://peepalmedia.com/?p=22634</guid>

					<description><![CDATA[2014 ರಲ್ಲಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡದವರು ಈಗ ಅಮೇರಿಕಾದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಅಪರೂಪದ ಪ್ರಸಂಗ ನರೇಂದ್ರ ಮೋದಿಗೆ ಎದುರಾಗಿದೆ. ಮೂರು ದಿನಗಳ ಅಮೇರಿಕಾ ಭೇಟಿಯ ಕೊನೆಯ ದಿನ ಜೋ ಬಿಡೆನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತರರಾಷ್ಟ್ರೀಯ ಮಾಧ್ಯಮ CNN ಮಾಡಿರುವ ವರದಿಯಲ್ಲಿ ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿ ಕುರಿತು ಪ್ರಸ್ತಾಪವಾಗಿದೆ. ಮೋದಿ ಮತ್ತು ಜೋ ಬಿಡೆನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಶ್ವೇತಭವನದ ಪ್ರಸ್ತಾಪಕ್ಕೆ [&#8230;]]]></description>
										<content:encoded><![CDATA[
<p>2014 ರಲ್ಲಿ ಪ್ರಧಾನಿಯಾದ ಬಳಿಕ ಭಾರತದಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡದವರು ಈಗ ಅಮೇರಿಕಾದಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಅಪರೂಪದ ಪ್ರಸಂಗ ನರೇಂದ್ರ ಮೋದಿಗೆ ಎದುರಾಗಿದೆ. ಮೂರು ದಿನಗಳ ಅಮೇರಿಕಾ ಭೇಟಿಯ ಕೊನೆಯ ದಿನ ಜೋ ಬಿಡೆನ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ಮೋದಿ ಕಾಣಿಸಿಕೊಳ್ಳುತ್ತಿದ್ದಾರೆ.</p>



<p>ಅಂತರರಾಷ್ಟ್ರೀಯ ಮಾಧ್ಯಮ CNN ಮಾಡಿರುವ ವರದಿಯಲ್ಲಿ ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿ ಕುರಿತು ಪ್ರಸ್ತಾಪವಾಗಿದೆ. ಮೋದಿ ಮತ್ತು ಜೋ ಬಿಡೆನ್ ಜಂಟಿ ಪತ್ರಿಕಾಗೋಷ್ಠಿ ನಡೆಸುವ ಶ್ವೇತಭವನದ ಪ್ರಸ್ತಾಪಕ್ಕೆ ಭಾರತೀಯ ಅಧಿಕಾರಿಗಳು ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅಪರಿಚಿತ ಯುಎಸ್ ಅಧಿಕಾರಿಗಳು ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಆದರೆ &#8220;ಸುದೀರ್ಘ ಮತ್ತು ಸೂಕ್ಷ್ಮ&#8221; ವಿಚಾರಗಳ ಹೊರತಾಗಿ ಕೇಳುವ ಪ್ರಶ್ನೆಗಳಿಗಷ್ಟೆ ಅವಕಾಶ ಎಂಬ ಭಾರತೀಯ ಅಧಿಕಾರಿಗಳ ಕರಾರಿಗೆ ಪತ್ರಿಕಾ ಕಾರ್ಯಕ್ರಮಕ್ಕೆ ಒಪ್ಪಿಕೊಂಡರು ಎಂದು CNN ವರದಿ ಮಾಡಿದೆ.</p>



<p>ಇಂದಿನ ಪತ್ರಿಕಾಗೋಷ್ಠಿಯ ಸ್ವರೂಪವು ಯುಎಸ್ ಪ್ರೆಸ್‌ನಿಂದ ಒಂದು ಮತ್ತು ಭಾರತೀಯ ಪತ್ರಕರ್ತರಿಂದ ಒಂದು ಪ್ರಶ್ನೆಗೆ ಮಾತ್ರ ಅವಕಾಶ ನೀಡುತ್ತದೆ.&nbsp;ಸಮಾವೇಶದ ಮೂಲಕ, ನಾಯಕರು ಪ್ರತಿ ಬದಿಯಲ್ಲಿ ಇಬ್ಬರು ವರದಿಗಾರರಿಂದ ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತಾರೆ. ಆ ನಂತರ ಮೋದಿಯವರು ಪ್ರಶ್ನೆಗೆ ಉತ್ತರಿಸಲಾಗುತ್ತದೆ.</p>



<p>ಈ ಬೆಳವಣಿಗೆಯ ಬಗ್ಗೆ ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಪ್ರಧಾನಿ ಮೋದಿ ಅವರು ಭೇಟಿಯ ಕೊನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ಒಪ್ಪಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ.&nbsp;ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುವುದು ಅತ್ಯವಶ್ಯಕ ಎಂದು ನಾವು ಭಾವಿಸುತ್ತೇವೆ ಮತ್ತು ಅದು ಮುಖ್ಯವೆಂದು ಅವರು ಭಾವಿಸಿದರೆ ನಮಗೆ ಸಂತೋಷವಾಗುತ್ತದೆ.&#8221; ಎಂದು ಪ್ರತಿಕ್ರಿಯಿಸಿದ್ದಾರೆ.</p>



<p>ಪ್ರಧಾನಿಯಾದ ನಂತರ ನರೇಂದ್ರ ಮೋದಿ ಐದು ಬಾರಿ ಅಮೆರಿಕಕ್ಕೆ ಭೇಟಿ ನೀಡಿದ್ದರೂ, ಆ ಭೇಟಿಯ ಸಂಪೂರ್ಣ ರಾಜತಾಂತ್ರಿಕ ಸ್ಥಾನಮಾನದೊಂದಿಗೆ ನಡೆದದ್ದು ಇದೇ ಮೊದಲನೆಯದು. ಹಾಗಾಗಿ ಈ ಭೇಟಿಯಲ್ಲಿ 75 ಸೆನೆಟರ್ ಗಳು ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸದಸ್ಯರು ಮೋದಿ ಅವರೊಂದಿಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಎತ್ತುವಂತೆ ಒತ್ತಾಯಿಸಿದ್ದರಿಂದ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಒತ್ತಡಕ್ಕೆ ಒಳಗಾಗಿದ್ದಾರೆ.</p>



<figure class="wp-block-image size-full"><img decoding="async" width="725" height="423" src="https://peepalmedia.com/wp-content/uploads/2023/06/images-2023-06-22T190946.977.jpeg" alt="" class="wp-image-22636" srcset="https://peepalmedia.com/wp-content/uploads/2023/06/images-2023-06-22T190946.977.jpeg 725w, https://peepalmedia.com/wp-content/uploads/2023/06/images-2023-06-22T190946.977-300x175.jpeg 300w, https://peepalmedia.com/wp-content/uploads/2023/06/images-2023-06-22T190946.977-150x88.jpeg 150w, https://peepalmedia.com/wp-content/uploads/2023/06/images-2023-06-22T190946.977-696x406.jpeg 696w" sizes="(max-width: 725px) 100vw, 725px" /></figure>



<p>&#8220;ಸ್ವತಂತ್ರ, ವಿಶ್ವಾಸಾರ್ಹ ವರದಿಗಳ ಸರಣಿಯು ಭಾರತದಲ್ಲಿ ರಾಜಕೀಯ ಅವಕಾಶಗಳ ಕುಗ್ಗುವಿಕೆ, ಧಾರ್ಮಿಕ ಅಸಹಿಷ್ಣುತೆಯ ಏರಿಕೆ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಟರ್ನೆಟ್ ಪ್ರವೇಶದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳ ಕಡೆಗೆ ಹೆಚ್ಚಿನ ಪರಿಣಾಮಗಳನ್ನು ಪ್ರತಿಬಿಂಬಿಸುತ್ತದೆ&#8221; ಎಂದು ಶ್ವೇತಭವನಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದರ ನಡುವೆ ಭಾರತ ಮತ್ತು ಅಮೇರಿಕಾ ಹಲವಷ್ಟು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದು, ಮುಜುಗರಕ್ಕೆ ಸಿಕ್ಕುವ ಪ್ರಶ್ನೆಗಳಿಂದ ಬಾಂಧವ್ಯದಲ್ಲಿ ಒಡಕು ಉಂಟಾಗಬಾರದು ಎಂಬ ಉದ್ದೇಶದಿಂದ ಕರಾರಿನ ಪತ್ರಿಕಾಗೋಷ್ಠಿಗೆ ಉತ್ತರಿಸಲಾಗುವುದು ಎಂದು ಶ್ವೇತ ಭವನದ ಮೂಲಗಳಿಂದ ತಿಳಿದು ಬಂದಿದೆ.</p>



<p>ಬುಧವಾರದ ದಿನ ಆರು ಜಾಗತಿಕ ಪತ್ರಕರ್ತ ಸಂಸ್ಥೆಗಳ ಗುಂಪು&nbsp;ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತದಲ್ಲಿ&nbsp;ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಯುತ್ತಿದೆ<a href="https://scroll.in/latest/1051352/press-freedom-under-attack-in-india-say-global-journalist-bodies-ahead-of-modi-biden-meeting">&nbsp;</a>ಎಂದು ವಾಷಿಂಗ್ಟನ್ ಪೋಸ್ಟ್‌ನಲ್ಲಿನ ವರದಿ ಹೇಳಿತ್ತು. ಪತ್ರಿಕಾ ಸಂಸ್ಥೆಗಳು ಭಾರತದಲ್ಲಿ ಪತ್ರಕರ್ತರು ದೈಹಿಕ ಹಿಂಸೆ, ಕಿರುಕುಳ, ನಕಲಿ ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷದ ಪ್ರಚಾರಗಳನ್ನು ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕೆ ಪ್ರತ್ಯೇಕ ಸಂವಾದ ಸಭೆಗಳನ್ನು ಆಯೋಜಿಸಿದ್ದೂ ಸಹ ಅಮೇರಿಕಾದಲ್ಲಿ ಈ ಭಾರಿಯ ಮೋದಿ ಭೇಟಿ ಸಂದರ್ಭದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.</p>
]]></content:encoded>
					
		
		
			</item>
		<item>
		<title>ಅಮೇರಿಕಾದಲ್ಲಿ ಮೋದಿಯ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸಿರುವ ಶಾಸಕರು ಹೇಳೋದೇನು?</title>
		<link>https://peepalmedia.com/what-do-the-legislators-who-have-boycotted-modis-joint-congress-speech-in-america-say/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 Jun 2023 03:43:28 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[America visit]]></category>
		<category><![CDATA[Boycott Modhi]]></category>
		<category><![CDATA[india]]></category>
		<category><![CDATA[narendramodi]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=22590</guid>

					<description><![CDATA[ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು [&#8230;]]]></description>
										<content:encoded><![CDATA[
<p>ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕಾ ಭೇಟಿ ಮತ್ತು ಇಂದು ನಡೆಯಲಿರುವ ಜಂಟಿ ಕಾಂಗ್ರೆಸ್ ಭಾಷಣದ ವಿಚಾರವಾಗಿ ಮತ್ತೆ ಅಪಸ್ವರ ಕೇಳಿ ಬಂದಿದೆ. ಅಮೇರಿಕಾದ ಇಬ್ಬರು ಶಾಸಕರುಗಳಾದ ಇಲ್ಹಾನ್ ಒಮರ್ ಮತ್ತು ರಶೀದಾ ತ್ಲೈಬ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಅವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.</p>



<p>ಭಾರತದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ಆಡಳಿತ ಪಕ್ಷದ ಧಮನಕಾರಿ ನಡೆ, ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಆತಂಕದಲ್ಲಿ ಬದುಕು ನಡೆಸುತ್ತಿರುವ ಭಾರತದ ಅಲ್ಪಸಂಖ್ಯಾತರನ್ನು ಉಲ್ಲೇಖಿಸಿ ಇಬ್ಬರು ಶಾಸಕರು ಮೋದಿಯವರ ಜಂಟಿ ಕಾಂಗ್ರೆಸ್ ಭಾಷಣವನ್ನು ಬಹಿಷ್ಕರಿಸುವುದಾಗಿ ತಮ್ಮ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.</p>



<p>ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ಮತ್ತು 25 ರ ನಡುವೆ ಅಮೇರಿಕಾ ಮತ್ತು ಈಜಿಪ್ಟ್‌ ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಹ್ವಾನದ ಮೇರೆಗೆ ಇಂದಿನ ಕೊನೆಯ ದಿನದ ಅಮೇರಿಕಾ ಭೇಟಿಯಲ್ಲಿ ಜೂನ್ 22 ರಂದು ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನದಲ್ಲಿ ಮಾತನಾಡಲು ಅವರನ್ನು ಆಹ್ವಾನಿಸಲಾಗಿದೆ.</p>



<p>ಕಾಂಗ್ರೆಸ್ ಜಂಟಿ ಅಧಿವೇಶನವನ್ನು ಬಹಿಷ್ಕರಿಸಿರುವ ಶಾಸಕರಾದ ಇಲ್ಹಾನ್ ಒಮರ್ “ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ದಮನ ಮಾಡಿದೆ. ಹಿಂಸಾತ್ಮಕ ಹಿಂದೂ ರಾಷ್ಟ್ರೀಯತಾವಾದಿ ಗುಂಪುಗಳನ್ನು ಉತ್ತೇಜಿಸಿದೆ ಮತ್ತು ಭಾರತದ ಪತ್ರಕರ್ತರು / ಮಾನವ ಹಕ್ಕುಗಳ ಹೋರಾಟಗಾರರಿಗೆ ಭಯದ ವಾತಾವರಣ ನಿರ್ಮಿಸಿದೆ. ನಾನು ಮೋದಿ ಭಾಷಣದಲ್ಲಿ ಭಾಗವಹಿಸುವುದಿಲ್ಲ. ಮೋದಿಯವರ ದಮನ ಮತ್ತು ಹಿಂಸಾಚಾರದ ದಾಖಲೆಯನ್ನು ಚರ್ಚಿಸಲು ನಾನು ಮಾನವ ಹಕ್ಕುಗಳ ಗುಂಪುಗಳೊಂದಿಗೆ ಚರ್ಚೆ ನಡೆಸುತ್ತೇನೆ, ”ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.</p>



<figure class="wp-block-image size-full"><img loading="lazy" decoding="async" width="674" height="375" src="https://peepalmedia.com/wp-content/uploads/2023/06/images-2023-06-22T091049.519.jpeg" alt="" class="wp-image-22592" srcset="https://peepalmedia.com/wp-content/uploads/2023/06/images-2023-06-22T091049.519.jpeg 674w, https://peepalmedia.com/wp-content/uploads/2023/06/images-2023-06-22T091049.519-300x167.jpeg 300w, https://peepalmedia.com/wp-content/uploads/2023/06/images-2023-06-22T091049.519-150x83.jpeg 150w" sizes="auto, (max-width: 674px) 100vw, 674px" /></figure>



<p><a href="https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&amp;s=19">https://twitter.com/IlhanMN/status/1671302972699996160?t=ZDCUtPqkmi1gbjoC6_fgiQ&amp;s=19</a></p>



<p>ಅಮೇರಿಕಾದ ಮತ್ತೋರ್ವ ಕಾಂಗ್ರೆಸ್ ಶಾಸಕಿಯಾದ ರಶೀದಾ ತ್ಲೈಬ್, &#8220;ನಮ್ಮ ರಾಷ್ಟ್ರದ ರಾಜಧಾನಿಯಲ್ಲಿ ಮೋದಿಗೆ ವೇದಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ಮಾನವ ಹಕ್ಕುಗಳ ಉಲ್ಲಂಘನೆ, ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ಮುಸ್ಲಿಮರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದು ಮತ್ತು ಭಾರತೀಯ ಪತ್ರಕರ್ತರನ್ನು ದೂರವಿರಿಸುವುದನ್ನು ಮಾಡುವ ಮೋದಿಯವರ ಸುದೀರ್ಘ ಇತಿಹಾಸವು ಸ್ವೀಕಾರಾರ್ಹವಲ್ಲ. ನಾನು ಕಾಂಗ್ರೆಸ್ ಅನ್ನು ಉದ್ದೇಶಿಸುವ ಮೋದಿಯವರ ಜಂಟಿ ಭಾಷಣವನ್ನು ಬಹಿಷ್ಕರಿಸುತ್ತೇನೆ.&#8221; ಎಂದು ಬರೆದುಕೊಂಡಿದ್ದಾರೆ.</p>



<figure class="wp-block-image size-full"><img loading="lazy" decoding="async" width="706" height="434" src="https://peepalmedia.com/wp-content/uploads/2023/06/images-2023-06-22T091210.452.jpeg" alt="" class="wp-image-22593" srcset="https://peepalmedia.com/wp-content/uploads/2023/06/images-2023-06-22T091210.452.jpeg 706w, https://peepalmedia.com/wp-content/uploads/2023/06/images-2023-06-22T091210.452-300x184.jpeg 300w, https://peepalmedia.com/wp-content/uploads/2023/06/images-2023-06-22T091210.452-150x92.jpeg 150w, https://peepalmedia.com/wp-content/uploads/2023/06/images-2023-06-22T091210.452-696x428.jpeg 696w" sizes="auto, (max-width: 706px) 100vw, 706px" /></figure>



<p><a href="https://twitter.com/RepRashida/status/1671179922197340160?t=KCJI6cdYDRNZDI5j_XLkIw&amp;s=19">https://twitter.com/RepRashida/status/1671179922197340160?t=KCJI6cdYDRNZDI5j_XLkIw&amp;s=19</a></p>



<p>ಏತನ್ಮಧ್ಯೆ, ಅಮೇರಿಕಾ ಕಾಂಗ್ರೆಸ್‌ನ 70 ಕ್ಕೂ ಹೆಚ್ಚು ಡೆಮಾಕ್ರಟಿಕ್ ಸದಸ್ಯರು ಅಧ್ಯಕ್ಷ ಜೋ ಬಿಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡುವ ಅಧಿವೇಶನಕ್ಕೆ ಸಾಕ್ಷಿಯಾಗಲಿದೆ. ನಂತರ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಜೂನ್ 22 ರಂದು ಆಯೋಜಿಸಿರುವ ಭೋಜನಕೂಟದಲ್ಲಿ ಪ್ರಧಾನಿ ಮೋದಿಗೆ ಆತಿಥ್ಯ ನೀಡಲಿದ್ದಾರೆ.</p>



<p>ಇನ್ನು ಮೋದಿ ಭಾಷಣವನ್ನು ಬಹಿಷ್ಕರಿಸಿರುವ ಅಮೇರಿಕಾ ಶಾಸಕರು &#8220;ಭಾರತವು ತನ್ನ ಇತಿಹಾಸದಲ್ಲಿ ನಿಷ್ಪಕ್ಷಪಾತ ಮತ್ತು ಸ್ವತಂತ್ರ ಪತ್ರಿಕಾ ಮಾಧ್ಯಮಕ್ಕೆ ಹೆಸರುವಾಸಿಯಾಗಿತ್ತು. ಆದರೆ ಈಗ ಪತ್ರಿಕಾ ಸ್ವಾತಂತ್ರ್ಯದ ಶ್ರೇಯಾಂಕದಲ್ಲಿ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ರಾಜಕೀಯ ಪಕ್ಷಗಳ ಮೇಲಿನ ಅಭಿವ್ಯಕ್ತಿಯ ಹಿಡಿತವನ್ನೂ ಕೂಡಾ ಅಲ್ಲಿನ ಮೋದಿ ಸರ್ಕಾರ ಬಿಗಿಗೊಳಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದ ಅಂಶ. ಅದೇ ರೀತಿ, ಭಾರತದಲ್ಲಿನ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ 2022 ರ ವರದಿಯು ಆತಂಕಕಾರಿ ಎನ್ನಿಸಿದೆ&#8221; ಎಂದು ಪ್ರತಿಕ್ರಿಯೆ ನೀಡಿದ್ದಾರೆ.</p>



<p>ಕಳೆದ ಒಂದು ವಾರದಿಂದ ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಲ್ಲಿನ ಮಾನವ ಹಕ್ಕು ಸಂಘಟನೆಗಳು &#8216;ವೈಟ್ ಹೌಸ್ ಗೆ ಅವಮಾನ&#8217; ಎಂಬಂತೆ ಅಭಿಯಾನ ಮಾಡುತ್ತಿವೆ. ಇದರ ಜೊತೆಗೆ ಭಾರತದ ಒಳಗಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆಯೂ ಚರ್ಚೆ ಮತ್ತು ಸಂವಾದಗಳನ್ನು ಏರ್ಪಡಿಸಿವೆ. ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು&nbsp;ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಈ ಸಾಕ್ಷ್ಯಚಿತ್ರ ಕೂಡಾ ಅಲ್ಲಿನ ಪ್ರತಿರೋಧ ಸಭೆಯಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.</p>
]]></content:encoded>
					
		
		
			</item>
		<item>
		<title>ಮೋದಿ ಅಮೇರಿಕಾ ಭೇಟಿಗೆ ತೀವ್ರ ವಿರೋಧ ; ಮಾನವ ಹಕ್ಕುಗಳ ಸಂಘಟನೆಗಳು ಹೇಳೋದೇನು?</title>
		<link>https://peepalmedia.com/strong-opposition-to-modis-us-visit-what-do-human-rights-organizations-say/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 20 Jun 2023 07:18:17 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[America visit]]></category>
		<category><![CDATA[BBC Documentary]]></category>
		<category><![CDATA[Gujarat riots]]></category>
		<category><![CDATA[Human rights]]></category>
		<category><![CDATA[india]]></category>
		<category><![CDATA[Islamophobia]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=22537</guid>

					<description><![CDATA[ನರೇಂದ್ರ ಮೋದಿ ಅಮೇರಿಕಾ ಭೇಟಿಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಭಾರತದ ಒಳಗಿನ ಜನಾಂಗೀಯ ದ್ವೇಷ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಇಲ್ಲಿನ ಆಡಳಿತ ಪಕ್ಷವೇ ತುಚ್ಛವಾಗಿ ಕಾಣುವುದನ್ನು ಉಲ್ಲೇಖಿಸಿ, ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಮೇರಿಕಾ ಮಾನವ ಹಕ್ಕುಗಳ ಸಂಘಟನೆ ವೈಟ್ ಹೌಸ್ ನ್ನು ಉಲ್ಲೇಖಿಸಿ ಗಂಭೀರವಾಗಿ ಟೀಕೆ ಮಾಡಿವೆ. ಬಾಂಧವ್ಯ ವೃದ್ಧಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಹ್ವಾನದ ಬೆನ್ನಲ್ಲೇ ಅಲ್ಲಿನ ಮಾನವ [&#8230;]]]></description>
										<content:encoded><![CDATA[
<p>ನರೇಂದ್ರ ಮೋದಿ ಅಮೇರಿಕಾ ಭೇಟಿಗೆ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಭಾರತದ ಒಳಗಿನ ಜನಾಂಗೀಯ ದ್ವೇಷ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಇಲ್ಲಿನ ಆಡಳಿತ ಪಕ್ಷವೇ ತುಚ್ಛವಾಗಿ ಕಾಣುವುದನ್ನು ಉಲ್ಲೇಖಿಸಿ, ಮೋದಿ ಅಮೇರಿಕಾ ಭೇಟಿಯ ಬಗ್ಗೆ ಅಮೇರಿಕಾ ಮಾನವ ಹಕ್ಕುಗಳ ಸಂಘಟನೆ ವೈಟ್ ಹೌಸ್ ನ್ನು ಉಲ್ಲೇಖಿಸಿ ಗಂಭೀರವಾಗಿ ಟೀಕೆ ಮಾಡಿವೆ.</p>



<p>ಬಾಂಧವ್ಯ ವೃದ್ಧಿ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಹ್ವಾನದ ಬೆನ್ನಲ್ಲೇ ಅಲ್ಲಿನ ಮಾನವ ಹಕ್ಕುಗಳ ಸಂಘಟನೆಗಳು ಈ ಬೆಳವಣಿಗೆಯನ್ನು ಅಮೇರಿಕಾಕ್ಕೆ ಇದು ಅವಮಾನಕರ ಸಂಗತಿ ಎಂದು ಆರೋಪಿಸಿವೆ.</p>



<p>ಇದೇ ಸಂದರ್ಭದಲ್ಲಿ ಸಂಘಟನೆಗಳು ಮತ್ತು ವಿಮರ್ಶಕರು &#8216;ಭಾರತದಲ್ಲಿನ ಹಿಂದೂ ಧಾರ್ಮಿಕ ರಾಷ್ಟ್ರೀಯತೆಯ ಬಗ್ಗೆ ಎದ್ದಿರುವ ಸಂಘರ್ಷ ಹಾಗೂ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಜೋ ಬಿಡೆನ್ ನರೇಂದ್ರ ಮೋದಿಯವರನ್ನು ಪ್ರಶ್ನಿಸಬೇಕು. ಭಾರತದಲ್ಲಿ ಇಂತಹದ್ದೊಂದು ಬೆಳವಣಿಗೆ ಜಾತ್ಯತೀತ ಮತ್ತು ವೈವಿಧ್ಯಮಯ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ಆ ಮೂಲಕ ಇದು ಜನಾಂಗೀಯ ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ರಾಜಕೀಯ ಮತ್ತು ತೀವ್ರವಾದ ಸಿದ್ಧಾಂತವಾಗಿದೆ.&nbsp;ಭಾರತದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರು ಹಿಂದೆಂದಿಗಿಂತಲೂ ಹೆಚ್ಚು ಹಿಂಸಾಚಾರ ಮತ್ತು ಕಿರುಕುಳದ ಅಪಾಯದಲ್ಲಿದ್ದಾರೆ, ಅದರಲ್ಲಿ ಮೋದಿಯವರ ಪಾತ್ರವನ್ನು ಅಮೇರಿಕಾ ಪ್ರಶ್ನಿಸಬೇಕು&#8221; ಎಂದು ಒತ್ತಾಯಿಸಿದ್ದಾರೆ.</p>



<p>&#8220;ಭಾರತದಲ್ಲಿ ಮೋದಿಯವರ ಆಡಳಿತ ಸರ್ವಾಧಿಕಾರಿ ಧೋರಣೆ ಹೊಂದಿದೆ. 2005 ರಲ್ಲಿ ಮೋದಿ ಅವರು ಪ್ರಧಾನಿಯಾಗುವ ಮೊದಲು, ತೀವ್ರವಾದ ಗಲಭೆ ಮತ್ತು ಮುಸ್ಲಿಮರನ್ನು ಗುರಿಯಾಗಿಸುವ ಹಿಂದೂ ಭಯೋತ್ಪಾದಕ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದ್ದಕ್ಕಾಗಿ ಅಮೇರಿಕಾದಿಂದಲೇ VISA ನಿಷೇಧಿಸಲ್ಪಟ್ಟರು. ಆದರೆ ಈಗ ನರೇಂದ್ರ ಮೋದಿಯವರದ್ದು ಮೂರನೇ ವೈಟ್ ಹೌಸ್ ಭೇಟಿಯಾಗಿದೆ. ಇದು ಅಮೇರಿಕಾಗೆ ಮತ್ತು ವೈಟ್ ಹೌಸ್ ಗೆ ಅವಮಾನಕರ ಎಂದು ಆರೋಪಿಸಲಾಗಿದೆ. ಹಾಗೂ ಅಂದು ಮತ್ತು ಇಂದಿನ ನರೇಂದ್ರ ಮೋದಿಯವರ ನಡೆ ಬಲಪಂಥೀಯ, ಮುಸ್ಲಿಂ ವಿರೋಧಿ ಮತ್ತು ಅಲ್ಪಸಂಖ್ಯಾತ ಆಡಳಿತವಾಗಿದೆ&#8221; ಎಂದು &#8220;ಮಿಡ್ನೈಟ್ಸ್ ಬಾರ್ಡರ್ಸ್: ಎ ಪೀಪಲ್ಸ್ ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ&#8221; ಲೇಖಕಿ ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.</p>



<figure class="wp-block-image size-full"><img loading="lazy" decoding="async" width="739" height="415" src="https://peepalmedia.com/wp-content/uploads/2023/06/images-2023-06-20T123513.690.jpeg" alt="" class="wp-image-22539" srcset="https://peepalmedia.com/wp-content/uploads/2023/06/images-2023-06-20T123513.690.jpeg 739w, https://peepalmedia.com/wp-content/uploads/2023/06/images-2023-06-20T123513.690-300x168.jpeg 300w, https://peepalmedia.com/wp-content/uploads/2023/06/images-2023-06-20T123513.690-150x84.jpeg 150w, https://peepalmedia.com/wp-content/uploads/2023/06/images-2023-06-20T123513.690-696x391.jpeg 696w" sizes="auto, (max-width: 739px) 100vw, 739px" /></figure>



<p>ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಮತ್ತು ಮತ್ತು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಅಮೇರಿಕಾಗೆ ಬಲವಾದ ಮಿತ್ರರಾಷ್ಟ್ರವಾಗಿ ನಡೆದುಕೊಂಡು ಬಂದಿದೆ. ಇಂತಹ ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಏನಾಗುತ್ತದೆಯೋ ಅದು ಜಾಗತಿಕವಾಗಿಯೂ ಮುಂಚೂಣಿ ಪರಿಣಾಮಗಳನ್ನು ಹೊಂದಿರುತ್ತದೆ. ಆ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯನ್ನು ಅಮೇರಿಕಾ ಶ್ವೇತಭವನಕ್ಕೆ ಆಹ್ವಾನಿಸುವುದು ಜಗತ್ತಿನಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಪಾಯಕಾರಿ ಸಂದೇಶವನ್ನು ರವಾನಿಸುತ್ತಿದೆ. ಇದು ಅಮೇರಿಕಾ ಮತ್ತು ಅಲ್ಲಿನ ಶ್ವೇತ ಭವನಕ್ಕೆ ಅವಮಾನಕರ ಎಂದು ಸುಚಿತ್ರಾ ವಿಜಯನ್ ಆರೋಪಿಸಿದ್ದಾರೆ.</p>



<p>ಮೋದಿ ಅಮೇರಿಕಾ ಭೇಟಿಗೆ ಸರಿಯಾಗಿ ಅಲ್ಲಿನ ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ BBC ಸಿದ್ದಪಡಿಸಿದ ಸಾಕ್ಷ್ಯಚಿತ್ರದ ಖಾಸಗಿ ಪ್ರದರ್ಶನವನ್ನು ನಿಗದಿಪಡಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನರೇಂದ್ರ ಮೋದಿ ಮತ್ತು 2002 ರ ಗುಜರಾತ್ ಗಲಭೆಯಲ್ಲಿ ಅವರ ಪಾತ್ರದಿಂದ ಕನಿಷ್ಠ 1,000 ಜನರ ಹತ್ಯೆಗೆ ಕಾರಣವಾಗಿತ್ತು. ಅವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಹತ್ಯಾಕಾಂಡದ ಸಮಯದಲ್ಲಿ, ಹಿಂದೂ ಉಗ್ರಗಾಮಿ ಗುಂಪುಗಳು ಮುಸ್ಲಿಂ ಮನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಅಕ್ಷರಶಃ ಸುಟ್ಟು ಹಾಕಿದ್ದರು. ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳನ್ನು ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಕೊಂದು ಹಾಕಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಆ ಗಲಭೆಗಳು ಅವರ ಕುಮ್ಮಕ್ಕಿನಿಂದಲೇ ನಡೆದಿತ್ತು. ಈ ಬಗ್ಗೆ ಅಂದಿನ ಮಾಧ್ಯಮಗಳು ವಿಸ್ತೃತವಾಗಿ ವರದಿ ಮಾಡಿದ್ದವು. ಅದನ್ನೇ BBC ಕೂಡಾ ಇತ್ತೀಚೆಗೆ ಸಾಕ್ಷ್ಯಚಿತ್ರದ ಮೂಲಕ ಹೊರತಂದಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ವಲಯಗಳಲ್ಲಿ ಈ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.</p>



<figure class="wp-block-image size-full"><img loading="lazy" decoding="async" width="679" height="452" src="https://peepalmedia.com/wp-content/uploads/2023/06/images-2023-06-20T124357.981.jpeg" alt="" class="wp-image-22540" srcset="https://peepalmedia.com/wp-content/uploads/2023/06/images-2023-06-20T124357.981.jpeg 679w, https://peepalmedia.com/wp-content/uploads/2023/06/images-2023-06-20T124357.981-300x200.jpeg 300w, https://peepalmedia.com/wp-content/uploads/2023/06/images-2023-06-20T124357.981-150x100.jpeg 150w" sizes="auto, (max-width: 679px) 100vw, 679px" /></figure>



<p>2002 ರ ಗುಜರಾತ್ ಗಲಭೆಯ ನಂತರ ಭಾರತ ಹಂತಹಂತವಾಗಿ ಅಲ್ಪಸಂಖ್ಯಾತರಿಗೆ ಸುರಕ್ಷಿತ ಅಲ್ಲದ ದೇಶವಾಗಿ ಬದಲಾಗುತ್ತಿದೆ. ಅದು ನರೇಂದ್ರ ಮೋದಿ ಪ್ರಧಾನಿ ಆದ ನಂತರ ಅದರ ವೇಗ ಹೆಚ್ಚಿಸಿಕೊಂಡಿದೆ. ಇದು ಒಳ್ಳೆಯ ಬೆಳವಣಿಗೆ ಖಂಡಿತಾ ಅಲ್ಲ. ಈ ಬಗ್ಗೆ ಅಮೇರಿಕಾದ ಸೇರಿದಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಭಾರತದ ಈ ಬೆಳವಣಿಗೆಗಳನ್ನು ಗಮನಿಸಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಂಘಟನೆಗಳು ಮೋದಿಯ ಅಮೇರಿಕಾ ಭೇಟಿಯ ಬಗ್ಗೆ ವಿರೋಧ ವ್ಯಕ್ತಪಡಿಸಿವೆ. ಹಾಗೂ ಈ ಭೇಟಿ ಅಮೇರಿಕಾಕ್ಕೆ ಅವಮಾನಕರ ಎಂದು ಗಂಭೀರವಾಗಿ ಆರೋಪಿಸಿವೆ.</p>
]]></content:encoded>
					
		
		
			</item>
		<item>
		<title>ಪ್ರಧಾನಿ ಲೂಟಿ ತಂತ್ರ vs ಕಾಂಗ್ರೆಸ್ ಲೋಕತಂತ್ರ&#8217;:  ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ</title>
		<link>https://peepalmedia.com/prime-ministers-loot-strategy-vs-congress-loktantra-rahul-gandhi-attacks-central-govt/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 04 Dec 2022 04:55:58 +0000</pubDate>
				<category><![CDATA[ದೇಶ]]></category>
		<category><![CDATA[Central Government]]></category>
		<category><![CDATA[disel]]></category>
		<category><![CDATA[india]]></category>
		<category><![CDATA[lpg]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pertol]]></category>
		<category><![CDATA[rahulgandhi]]></category>
		<guid isPermaLink="false">https://peepalmedia.com/?p=17434</guid>

					<description><![CDATA[ಮಧ್ಯ ಪ್ರದೇಶ: ಪೆಟ್ರೋಲ್‌, ಡಿಸೇಲ್‌, ಮತ್ತು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಇನ್ನು ಏಕೆ ಕಡಿಮೆಯಾಗಿಲ್ಲ ಎಂದು ಪ್ರಶ್ನಿಸಿ?, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಧ್ಯ‌ ಪ್ರದೇಶದಲ್ಲಿ ನಡೆದ ಭಾರತ ಐಕ್ಯಾತಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ &#8216;ಲೂಟಿ-ವ್ಯವಸ್ಥೆ&#8217;ಯ ವಿರುದ್ಧ ಈಗಾಗಲೇ ಧ್ವನಿ ಎತ್ತಿದ್ದೇವೆ ಅದುವೇ ಭಾರತ ಐಕ್ಯತಾ ಯಾತ್ರೆ ಎಂದು ಹೇಳಿದರು. ಕಾಂಗ್ರೆಸ್ ನೇತೃತ್ವದ ಭಾರತ ಐಕ್ಯತಾ ಯಾತ್ರೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು ಬಿಜೆಪಿಯ [&#8230;]]]></description>
										<content:encoded><![CDATA[
<p><strong>ಮಧ್ಯ ಪ್ರದೇಶ:</strong> ಪೆಟ್ರೋಲ್‌, ಡಿಸೇಲ್‌, ಮತ್ತು ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಇನ್ನು ಏಕೆ ಕಡಿಮೆಯಾಗಿಲ್ಲ ಎಂದು ಪ್ರಶ್ನಿಸಿ?, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.</p>



<p>ಈ ಕುರಿತು ಮಧ್ಯ‌ ಪ್ರದೇಶದಲ್ಲಿ ನಡೆದ ಭಾರತ ಐಕ್ಯಾತಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ &#8216;ಲೂಟಿ-ವ್ಯವಸ್ಥೆ&#8217;ಯ ವಿರುದ್ಧ ಈಗಾಗಲೇ ಧ್ವನಿ ಎತ್ತಿದ್ದೇವೆ ಅದುವೇ ಭಾರತ ಐಕ್ಯತಾ ಯಾತ್ರೆ ಎಂದು ಹೇಳಿದರು.</p>



<p>ಕಾಂಗ್ರೆಸ್ ನೇತೃತ್ವದ ಭಾರತ ಐಕ್ಯತಾ ಯಾತ್ರೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಇದು ಬಿಜೆಪಿಯ ಲೂಟಿ-ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತರಿವ ಯಾತ್ರೆ ಎಂದು ಬಣ್ಣಿಸಿದರು.</p>



<p>ಇನ್ನು ಮುಂದುವರೆದು ʼನನಗೆ ಉತ್ತರ ಕೋಡಿ!ʼ ಎಂದು ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿಯವರು, ಜಾಗತಿಕವಾಗಿ ಎಲ್‌ಪಿಜಿ ಮತ್ತು ಕಚ್ಚಾ ತೈಲ ಬೆಲೆಗಳನ್ನು ಕ್ರಮವಾಗಿ 40% ಮತ್ತು 25% ರಷ್ಡು ಕಡಿತಗೊಳಿಸಲಾಗಿದೆ, ಆದರೆ ಭಾರತದಲ್ಲಿ ಏಕೆ ಬೆಲೆಗಳು ಒಂದೇ ಆಗಿವೆ, 6 ತಿಂಗಳಲ್ಲಿ ಆಂತರಾಷ್ಟ್ರೀಯ ದತ್ತಾಂಶಗಳ ಬೆಲೆ ಅಗ್ಗವಾಗಿದೆ, ಅಂದರೆ ಕಚ್ಚಾತೈಲ 25%, ಎಲ್‌ಪಿಜಿ 40%, ಬೆಲೆ ಕಡಿಮೆಯಾಗಿದೆ. ಆದರೂ ಕೂಡ ಪೆಟ್ರೋಲ್‌, ಡೀಸೆಲ್‌ ಮತ್ತು ಸಿಲಿಂಡರ್‌ಗಳ ಬೆಲೆಗಳು ಏಕೆ ಕಡಿಮೆಯಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">कच्चा तेल &#8211; 25% सस्ता <br>एलपीजी &#8211; 40% सस्ती <br><br>ये 6 महीनों के अंतरराष्ट्रीय कीमतों के आंकड़े हैं। फिर भी पेट्रोल, डीज़ल और गैस सिलेंडर के दाम कम क्यों नहीं हुए?<br><br>प्रधानमंत्री जी, आपके &#39;लूट-तंत्र&#39; के खिलाफ लोकतंत्र की आवाज़ है &#8211; भारत जोड़ो यात्रा। जवाब दीजिए!</p>&mdash; Rahul Gandhi (@RahulGandhi) <a href="https://twitter.com/RahulGandhi/status/1598982504601395202?ref_src=twsrc%5Etfw">December 3, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p><strong>ಪೆಟ್ರೋಲ್, ತೈಲ ಬೆಲೆಗಳು</strong></p>



<p>ಮೇ 21, 2022 ರಿಂದ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಒಂದೇ ಆಗಿವೆ. ಶನಿವಾರ, 1 ಲೀಟರ್ ಪೆಟ್ರೋಲ್ ಬೆಲೆ 96.72 ರೂ.ನಲ್ಲಿ ಮುಂದುವರಿದರೆ, 1 ಲೀಟರ್ ಡೀಸೆಲ್ ಬೆಲೆ 89.62 ರೂ. ನೋಯ್ಡಾದಲ್ಲಿ ಪೆಟ್ರೋಲ್ ಬೆಲೆ 96.79 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.96 ರೂ. ಕೋಲ್ಕತಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 106.03 ರೂ., ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ.ಗೆ ಮಾರಾಟವಾಗುತ್ತಿದೆ. ಮತ್ತೊಂದೆಡೆ, ಪೆಟ್ರೋಲ್ ಪ್ರತಿ ಲೀಟರ್ಗೆ 106.31 ರೂ., ಡೀಸೆಲ್ ಪ್ರತಿ ಲೀಟರ್‌ಗೆ 94.27 ರೂ.ಗೆ ಮಾರಾಟವಾಗುತ್ತಿದೆ. ಹರಿಯಾಣದ ಗುರುಗ್ರಾಮದ ಡೀಸೆಲ್ ಬೆಲೆ 90.05 ರೂ ಮತ್ತು ಪೆಟ್ರೋಲ್ ಬೆಲೆ 97.18 ರೂ. ದೇಶದ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಅಂಡಮಾನ್ ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ನಲ್ಲಿ ಮಾರಾಟ ಮಾಡಲಾಗುತ್ತದೆ, ಪೆಟ್ರೋಲ್ ಬೆಲೆ 84.10 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 79.94 ರೂ. ಇದೆ ಎನ್ನಲಾಗಿದೆ.</p>
]]></content:encoded>
					
		
		
			</item>
	</channel>
</rss>
