<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>news update &#8211; Peepal Media</title>
	<atom:link href="https://peepalmedia.com/tag/news-update/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 23 Oct 2024 09:54:20 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>news update &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಿ; ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹ</title>
		<link>https://peepalmedia.com/file-a-case-of-incitement-to-murder-against-persons-who-honored-gauris-killers-hassan-district-peoples-movement-union-demand/</link>
		
		<dc:creator><![CDATA[Murali Maluru]]></dc:creator>
		<pubDate>Wed, 23 Oct 2024 09:54:19 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[hassan dc]]></category>
		<category><![CDATA[hassan news update]]></category>
		<category><![CDATA[news update]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=47636</guid>

					<description><![CDATA[ಹಾಸನ : ಗೌರಿ ಲಂಕೇಶ್‌ ಹತ್ಯೆ ಮಾಡಿದವ್ರಿಗೆ ಸನ್ಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾಸನ ಜನಪರ ಚಳುವಳಿಗಳ ಒಕ್ಕೂಟದ ಸದಸ್ಯರು ಗೃಹ ಮಂತ್ರಿಗಳಾದ ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದು ಸನ್ಮಾನ ಮಾಡಿದವ್ರನ್ನು ಈ ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇಡೀ ರಾಜ್ಯ ತಲೆ ತಗ್ಗಿಸುವಂತಹ ಕೆಲಸ ಇದಾಗಿದ್ದು ಇದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡುವುದಕ್ಕೆ ಇವರು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಪತ್ರದ ಮೂಲಕ ಗೃಹ ಸಚಿವರಿಗೆ &#8220;ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತೆ&#8221; ತಿಳೀಸಿದ್ದಾರೆ. ಪತ್ರದ ಸಾರಾಂಶವನ್ನು [&#8230;]]]></description>
										<content:encoded><![CDATA[
<h2 class="wp-block-heading"></h2>



<p>ಹಾಸನ : ಗೌರಿ ಲಂಕೇಶ್‌ ಹತ್ಯೆ ಮಾಡಿದವ್ರಿಗೆ ಸನ್ಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಹಾಸನ ಜನಪರ ಚಳುವಳಿಗಳ ಒಕ್ಕೂಟದ ಸದಸ್ಯರು ಗೃಹ ಮಂತ್ರಿಗಳಾದ ಜಿ.ಪರಮೇಶ್ವರ್‌ ಅವರಿಗೆ ಪತ್ರ ಬರೆದು ಸನ್ಮಾನ ಮಾಡಿದವ್ರನ್ನು ಈ ಕೂಡಲೆ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇಡೀ ರಾಜ್ಯ ತಲೆ ತಗ್ಗಿಸುವಂತಹ ಕೆಲಸ ಇದಾಗಿದ್ದು ಇದರಿಂದ ಸಮಾಜಕ್ಕೆ ಯಾವ ರೀತಿಯ ಸಂದೇಶ ಕೊಡುವುದಕ್ಕೆ ಇವರು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಪತ್ರದ ಮೂಲಕ ಗೃಹ ಸಚಿವರಿಗೆ &#8220;ಇಂತಹ ಶಕ್ತಿಗಳನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕುವಂತೆ&#8221; ತಿಳೀಸಿದ್ದಾರೆ. ಪತ್ರದ ಸಾರಾಂಶವನ್ನು ಇಲ್ಲಿ ಹಾಕಲಾಗಿದೆ.</p>



<figure class="wp-block-image size-large"><img fetchpriority="high" decoding="async" width="1024" height="472" src="https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-1024x472.jpeg" alt="" class="wp-image-47637" srcset="https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-1024x472.jpeg 1024w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-300x138.jpeg 300w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-768x354.jpeg 768w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-150x69.jpeg 150w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-696x321.jpeg 696w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM-1068x492.jpeg 1068w, https://peepalmedia.com/wp-content/uploads/2024/10/WhatsApp-Image-2024-10-23-at-1.15.00-PM.jpeg 1280w" sizes="(max-width: 1024px) 100vw, 1024px" /></figure>



<p>ಮಾನ್ಯ ಗೃಹ ಸಚಿವರೇ,</p>



<p>ಕೊಲೆ ಪಾತಕರಿಗೆ ಸನ್ಮಾನ ಕರ್ನಾಟಕಕ್ಕಾದ ಅವಮಾನ ಹಿಂಸೆಗೆ ನೀಡಿರುವ ಬಹಿರಂಗ ಪ್ರಚೋದನೆ</p>



<p>ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತು, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಛೆ, ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು, ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್‌ ಅವರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದ ಕಂಡು ನಾವು ದಂಗಾಗಿದ್ದೇವೆ. ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ ಎಂದು ನಾವು ಭಾವಿಸುತ್ತೇವೆ. ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ.</p>



<p>ಕೋಮುಸೌಹಾರ್ಧತೆ ಹಾಗು ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಗೌರಿ ಲಂಕೇಶ ಹಾಗು ಡಾ. ಎಂ.ಎಂ. ಕಲಬುರಗಿಯವರ ಕೊಲೆ ಗಡುಕ ಆರೋಪಿಗಳು ಬಿಡುಗಡೆಯ ಸಂದರ್ಭದಲ್ಲಿ ಹಿಂದು ಮತಾಂದ ಶಕ್ತಿಗಳು ಇಂತಹ ದುಷ್ಕೃತ್ಯ ನಡೆಸಿವೆ ಮತ್ತು ಈ ಹಿಂದೆ ಗುಜರಾತಿನ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಆ ಕುಟುಂಬದ ಸದಸ್ಯರ ಕೊಲೆಗೈದ ಅಪರಾಧಿಗಳು ಬಿಡುಗೊಂಡಾಗ ಹಿಂದುತ್ವ ಕೋಮುವಾದಿ ಶಕ್ತಿಗಳು ಅಂತಹ ಅಪರಾಧಿಗಳ ಪರ ನಿಂತು ಅಪರಾದಿ ದುಷ್ಕೃತ್ಯ ಬೆಂಬಲಿಸಿದ್ದಿದೆ.</p>



<figure class="wp-block-image size-large"><img decoding="async" width="1024" height="473" src="https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-1024x473.jpeg" alt="" class="wp-image-47638" srcset="https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-1024x473.jpeg 1024w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-300x139.jpeg 300w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-768x355.jpeg 768w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-150x69.jpeg 150w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-696x321.jpeg 696w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM-1068x493.jpeg 1068w, https://peepalmedia.com/wp-content/uploads/2024/10/WhatsApp-Image-2024-10-23-at-1.14.59-PM.jpeg 1152w" sizes="(max-width: 1024px) 100vw, 1024px" /></figure>



<p>ಇದು, ಇಂತಹ ಸಮಾಜ ಘಾತುಕ ಶಕ್ತಿಗಳು ನಾಚಿಕೆ ಇಲ್ಲದೆ ತಮ್ಮ ದುಷ್ಕೃತ್ಯ ಮುಂದುವರೆಸಲು ನೈತಿಕ ಶಕ್ತಿಯನ್ನು ಒದಗಿಸುವ ಮೂಲಕ ಸಮಾಜದ ಶಾಂತಿ ಸೌಹಾರ್ಧತೆಗೆ ಗಂಡಂತಾರವಾಗಿ ಪರಿಣಮಿಸಲಿದೆ. ದುಡಿಯುವ ಜನರು ಹಾಗು ಮಹಿಳೆಯರು ಮತ್ತು ದಲಿತರ ಮೇಲಿನ ದೌರ್ಜನ್ಯಕ್ಕೆ ಇಂಬು ನೀಡಲಿದೆ. ಆದ್ದರಿಂದ, ಇಂತಹ ವೈಭವೀಕರಣದ ನಿಗ್ರಹಕ್ಕೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗೆ ಅಗತ್ಯ ಕಾನೂನು ರೂಪಿಸಲು ಮತ್ತು ಕಾನೂನು ಕ್ರಮಕ್ಕೆ ಮುಂದಾಗುವಂತೆ ಕೇಂದ್ರ ಹಾಗು ರಾಜ್ಯ ಸರಕಾರಗಳನ್ನು ನಾವು ಆಗ್ರಹಿಸುತ್ತಿದ್ದೇವೆ. ಎಲ್ಲ ಪ್ರಜಾಪ್ರಭುತ್ವ ಹಾಗು ಸಾಮಾಜಿಕ ಸೌಹಾರ್ಧತೆಗಾಗಿ ಕಾರ್ಯ ನಿರ್ವಹಿಸುವ ಶಕ್ತಿಗಳು ಈ ದಿಕ್ಕಿನಲ್ಲಿ ಸರಕಾರಗಳ ಮೇಲೆ ಒತ್ತಡ ಹೇರಲು ಮನವಿ ಮಾಡುತ್ತಿದ್ದೇವೆ.</p>



<p>ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ, ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡತೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಹಾಗೂ ಗೃಹ ಸಚಿವರ ಮುಂದೆ ಈ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ.</p>



<ol class="wp-block-list">
<li>ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು.</li>



<li>ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು.</li>



<li>ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.</li>
</ol>



<p>ಮೇಲ್ಕಂಡ ಹಕ್ಕೊತ್ತಾಯಗಳೊಂದಿಗೆ ಸರ್ಕಾರದ ಮತ್ತು ಸಮಾಜದ ಗಮನ ಸೆಳೆಯಲು ಅಕ್ಟೋಬರ್‌ 23 ರಂದು ಹಾಸನದಲ್ಲಿ ನಾಗರಿಕರ ಪ್ರತಿರೋಧ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಿಗೆ ಮನವಿ ನೀಡುತ್ತಿದ್ದೇವೆ.. ಸರ್ಕಾರ ನಾಗರೀಕರ ಈ ಒತ್ತಾಯಕ್ಕೆ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸುತ್ತಿದ್ದೇವೆ. ಧನ್ಯವಾದಗಳು</p>



<figure class="wp-block-image size-large"><img decoding="async" width="1024" height="473" src="https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-1024x473.jpeg" alt="" class="wp-image-47639" srcset="https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-1024x473.jpeg 1024w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-300x139.jpeg 300w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-768x355.jpeg 768w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-150x69.jpeg 150w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-696x321.jpeg 696w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1-1068x493.jpeg 1068w, https://peepalmedia.com/wp-content/uploads/2024/10/WhatsApp-Image-2024-10-23-at-1.14.58-PM-1.jpeg 1152w" sizes="(max-width: 1024px) 100vw, 1024px" /></figure>



<p>ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಈ ಪತ್ರವನ್ನು ಗೌಹ ಮಂತ್ರಿಗಳಿಗೆ ತಲುಪಿಸುವಂತೆ ಹಾಸನ ಜಿಲ್ಲೆಯ ಜನಪರ ಸಂಘಟನೆಗಳು ಮನವಿಯನ್ನು ಸಲ್ಲಿಸಿದರು. ಈ ಸಂಧರ್ಭದಲ್ಲಿ ಧರ್ಮೇಶ್<br>ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ, ಎಚ್.ಕೆ. ಸಂದೇಶ್ ಹಿರಿಯ ದಲಿತ ಮುಂಖಂಡರು, ಎಂ. ಸೋಮಶೇಖರ್ ರಾಜ್ಯ ಸಂಚಾಲಕರು ಕ.ದ.ಸಂ.ಸ, ಹುಲಿಕಲ್ ರಾಜಶೇಖರ್ ಹಿರಿಯ ದಲಿತ ಮುಖಂಡರು, ಇರ್ಷಾದ್ ಅಹಮದ್ ದೇಸಾಯಿ ಸಾಮಾಜಿಕ ಕಾರ್ಯಕರ್ತರು, ಈರೇಶ್ ಹಿರೇಹಳ್ಳಿ ದಸಂಸ ಅಂಬೇಡ್ಕರ್‌ವಾದ , ಎಂ.ಜಿ. ಪೃಥ್ವಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ, ರಮೇಶ್ಎ ಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ, ಅಂಬುಗ ಮಲ್ಲೇಶ್ ದಸಂಸ ಅಂಬೇಡ್ಕರ್‌ವಾದ ಮತ್ತಿತರರು ಇದ್ದರು.</p>
]]></content:encoded>
					
		
		
			</item>
		<item>
		<title>ನಂದಿ ಪ್ರಶಸ್ತಿ ಬದಲು ಗದ್ದರ್‌ ಅವಾರ್ಡ್‌: ರೇವಂತ್ ರೆಡ್ಡಿ ಘೋಷಣೆ</title>
		<link>https://peepalmedia.com/revanth-reddy-renamed-nandi-award-to-gaddar-award/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Feb 2024 06:11:51 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[gaddar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nandi award]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[revanth reddy]]></category>
		<category><![CDATA[state politics]]></category>
		<category><![CDATA[telangana]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35568</guid>

					<description><![CDATA[ತೆಲುಗು ಸಿನಿಮಾ ಕಲಾವಿದರಿಗೆ ನೀಡುತ್ತಿದ್ದ &#8216;ನಂದಿ ಪ್ರಶಸ್ತಿ&#8217; ಬದಲು &#8216;ಗದ್ದರ್ ಅವಾರ್ಡ್&#8217; ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ಆಯೋಜಿಸಿದ್ದ ಗದ್ದರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ ಚಲನಚಿತ್ರ ಕಲಾವಿದರಿಗೆ ನಂದಿ ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರ ಪುನಃ ಪ್ರಾರಂಭಿಸಬೇಕೆಂದು ಕೇಳಿಕೊಂಡ ಹಿನ್ನಲೆಯಲ್ಲಿ, ನಂದಿ ಪ್ರಶಸ್ತಿಯ ಹೆಸರನ್ನು ಗದ್ದರ್‌ ಪ್ರಶಸ್ತಿ ಎಂದು ಬದಲಾಯಿಸಿ ನೀಡಲಾಗುವುದು ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ತೆಲಂಗಾಣ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಉಪಸ್ಥಿತರಿದ್ದರು. [&#8230;]]]></description>
										<content:encoded><![CDATA[
<p>ತೆಲುಗು ಸಿನಿಮಾ ಕಲಾವಿದರಿಗೆ ನೀಡುತ್ತಿದ್ದ &#8216;ನಂದಿ ಪ್ರಶಸ್ತಿ&#8217; ಬದಲು &#8216;ಗದ್ದರ್ ಅವಾರ್ಡ್&#8217; ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ.</p>



<p>ಹೈದರಾಬಾದ್‌ನ ರವೀಂದ್ರ ಭಾರತಿಯಲ್ಲಿ ಆಯೋಜಿಸಿದ್ದ ಗದ್ದರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ ಚಲನಚಿತ್ರ ಕಲಾವಿದರಿಗೆ ನಂದಿ ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರ ಪುನಃ ಪ್ರಾರಂಭಿಸಬೇಕೆಂದು ಕೇಳಿಕೊಂಡ ಹಿನ್ನಲೆಯಲ್ಲಿ, ನಂದಿ ಪ್ರಶಸ್ತಿಯ ಹೆಸರನ್ನು ಗದ್ದರ್‌ ಪ್ರಶಸ್ತಿ ಎಂದು ಬದಲಾಯಿಸಿ ನೀಡಲಾಗುವುದು ಎಂದು ಹೇಳಿದ್ದಾರೆ. </p>



<p>ಈ ಕಾರ್ಯಕ್ರಮದಲ್ಲಿ ತೆಲಂಗಾಣ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಉಪಸ್ಥಿತರಿದ್ದರು.</p>



<p>&#8220;ತನ್ನ ಮಾತೇ ಸರ್ಕಾರದ ಆದೇಶ. ಆದಷ್ಟು ಬೇಗ ಈ ಕುರಿತಂತೆ ಸರ್ಕಾರದಿಂದ ಅಧಿಕೃತ ಅದೇಶ ಹೊರಡಿಸಲಾಗುವುದು. ಮುಂದಿನ ವರ್ಷದಿಂದ ಗದ್ದರ್ ಜಯಂತಿಯಂದು ಈ ಪ್ರಶಸ್ತಿಗಳನ್ನು ನೀಡಲಾಗುವುದು. ರಾಜ್ಯ ಸರ್ಕಾರದ ವತಿಯಿಂದ ಕವಿಗಳು, ಕಲಾವಿದರು ಹಾಗೂ ಚಿತ್ರರಂಗದ ಕಲಾವಿದರಿಗೆ ಗದ್ದರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು,&#8221; ಎಂದು ಹೇಳಿದ್ದಾರೆ.</p>



<p>&#8220;ತೆಲಂಗಾಣ ರಾಜ್ಯಕ್ಕಾಗಿ ಚಳವಳಿ ಆರಂಭಿಸಿದ ವ್ಯಕ್ತಿ ಗದ್ದರ್ ಸಮಾಜವನ್ನು ಜಾಗೃತಗೊಳಿಸಲು ಧ್ವನಿ ಎತ್ತಿದ ಮಹಾನ್ ವ್ಯಕ್ತಿ, ಜನಪರ ಸರ್ಕಾರ ರಚಿಸುವ ಗದ್ದರಣ್ಣನವರ ಮಾತು ನಮಗೆ ಸ್ಪೂರ್ತಿ ನೀಡಿದೆ,&#8221; ಎಂದು ಹೇಳಿದ್ದಾರೆ.</p>



<p style="font-size:20px"><strong>ಗದ್ದರ್ ಪ್ರತಿಮೆ ನಿರ್ಮಾಣಕ್ಕೆ ಹಸಿರು ನಿಶಾನೆ</strong></p>



<p>ಸಾರ್ವಜನಿಕ ಯುದ್ಧನೌಕೆ, ಕ್ರಾಂತಿಕಾರಿ ಕವಿ, ಸಾರ್ವಜನಿಕ ಗಾಯಕ ಗದ್ದರ್ ಪ್ರತಿಮೆ ಸ್ಥಾಪಿಸಲು ಸಿಎಂ ರೇವಂತ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗದ್ದರ್ ಪ್ರತಿಮೆ ಸ್ಥಾಪಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ರೇವಂತ್ ರೆಡ್ಡಿ ಭರವಸೆ ನೀಡಿದ್ದರು. ಇದಕ್ಕಾಗಿ  ಸಂಗಾರೆಡ್ಡಿ ಜಿಲ್ಲೆಯ ತೇಲಾಪುರ್ ಪುರಸಭೆಯ ನಿರ್ಣಯವನ್ನು ಸರ್ಕಾರ ಅನುಮೋದಿಸಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಪ್ರಗತಿಪರ ದಲಿತ ಪರ ಸಂಘಟನೆಗಳು ಸಂತಸವನ್ನು ವ್ಯಕ್ತಪಡಿಸಿವೆ.</p>
]]></content:encoded>
					
		
		
			</item>
		<item>
		<title>ನವೋದ್ಯಮಿಗಳಿಗೆ ತೆರಿಗೆ ವಿನಾಯತಿ: ಹರ್ಷ ವ್ಯಕ್ತಪಡಿಸಿದ ಮೋದಿ</title>
		<link>https://peepalmedia.com/budget-2024-benefits-young-entrepreneurs/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 01 Feb 2024 09:45:35 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[budget 2024]]></category>
		<category><![CDATA[Election 2024]]></category>
		<category><![CDATA[entrepreneur]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[namo]]></category>
		<category><![CDATA[narendra modi]]></category>
		<category><![CDATA[news update]]></category>
		<category><![CDATA[nirmala sitaraman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[viral trending news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35564</guid>

					<description><![CDATA[ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.<br>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ ಒದಗಿಸುತ್ತಿಲ್ಲ. ಅಗಣಿತ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ. ನವೋದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿರುವುದರಿಂದ ಭಾರತ ಹೊಸ ಹೆಜ್ಜೆ ಇಡಲಿದೆ ಎಂದಿದ್ದಾರೆ.<br>ಬಜೆಟ್ ಯುವ ಭಾರತವನ್ನು ಪ್ರತಿಫಲಿಸಿದೆ. ಯುವ ಭಾರತದಲ್ಲಿ ಉದ್ಯೋಗ ಮತ್ತು ಉದ್ದಿಮೆಗಳನ್ನು ಸ್ಥಾಪನೆಯ ಉದ್ದೇಶಕ್ಕಾಗಿ ಸಂಶೋಧನೆಗಾಗಿ ರೂ. ಒಂದು ಲಕ್ಷ ಕೋಟಿ ನಿಧಿಯನ್ನು ತೆಗೆದಿಟ್ಟಿರುವುದು ಮತ್ತು ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವುದು; ಈ ಎರಡು ಪ್ರಮುಖ ನಿರ್ಧಾರಗಳು ಭಾರತದ ದಿಕ್ಕನ್ನು ಬದಲಿಸಲಿವೆ ಎಂದಿದ್ದಾರೆ</p>
]]></content:encoded>
					
		
		
			</item>
		<item>
		<title>ರಾಜ್ಯಪಾಲರಿಂದ ಕನ್ನಡ ಕಡ್ಡಾಯ ತಿರಸ್ಕಾರ</title>
		<link>https://peepalmedia.com/karnataka-governor-sends-ordinance-on-60-use-of-kannada/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 31 Jan 2024 09:14:02 +0000</pubDate>
				<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[breakimg news]]></category>
		<category><![CDATA[breaking news]]></category>
		<category><![CDATA[dk shivakumar]]></category>
		<category><![CDATA[dks]]></category>
		<category><![CDATA[Governor]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karave]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[siddramaiah]]></category>
		<category><![CDATA[state politics]]></category>
		<category><![CDATA[Thawar Chand Gehlot]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35501</guid>

					<description><![CDATA[ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬಳಕೆಯ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಕರ್ನಾಟಕ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್ ತಿರಸ್ಕರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನವರಿ 30 ಮಂಗಳವಾರ ತಿಳಿಸಿದ್ದಾರೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ (Kannada Language Comprehensive Development Act) ತಿದ್ದುಪಡಿ ತರಲು ಮತ್ತು ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಹೊರಡಿಸಲಾದ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಜನವರಿ 5ರಂದು ಅನುಮೋದನೆ ನೀಡಿತ್ತು. “ನಾವು [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ರಾಜ್ಯದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ಬಳಕೆಯ ಮಾಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಕರ್ನಾಟಕ ರಾಜ್ಯಪಾಲ ತಾವರ್‌ಚಂದ್‌ ಗೆಹ್ಲೋಟ್ ತಿರಸ್ಕರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜನವರಿ 30 ಮಂಗಳವಾರ ತಿಳಿಸಿದ್ದಾರೆ.</p>



<p>ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆಗೆ (Kannada Language Comprehensive Development Act) ತಿದ್ದುಪಡಿ ತರಲು ಮತ್ತು ನಾಮ ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲು ಹೊರಡಿಸಲಾದ ಸುಗ್ರೀವಾಜ್ಞೆಗೆ ರಾಜ್ಯ ಸಚಿವ ಸಂಪುಟ ಜನವರಿ 5ರಂದು ಅನುಮೋದನೆ ನೀಡಿತ್ತು.</p>



<p>“ನಾವು ಕಾನೂನನ್ನು ರಚಿಸಿದ್ದೇವೆ ಮತ್ತು ಸುಗ್ರೀವಾಜ್ಞೆಯನ್ನು ಅನುಮೋದಿಸಿದ್ದೇವೆ. ರಾಜ್ಯಪಾಲರು ಒಪ್ಪಿಗೆ ನೀಡಬಹುದಿತ್ತು. ಬದಲಿಗೆ ವಿಧಾನಸಭೆಯಲ್ಲಿ ಅಂಗೀಕಾರ ಆಗಬೇಕು ಎಂದು ವಾಪಸ್ ಕಳುಹಿಸಿದ್ದಾರೆ,” ಎಂದು ಡಿಕೆಶಿ ತಿಳಿಸಿದ್ದಾರೆ.</p>



<p>ಬೆಂಗಳೂರಿನಲ್ಲಿ ಅಂಗಡಿ- ಉದ್ಯಮಗಳನ್ನು ಗುರಿಯಾಗಿಸಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು.</p>



<p>ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ರಾಜಭವನದ ನಡುವಿನ ಮೊದಲ ಭಿನ್ನಾಭಿಪ್ರಾಯ ಈಗ ಬಹಿರಂಗವಾಗಿದೆ.</p>



<p>ಮುಂದಿನ ತಿಂಗಳು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಮುನ್ನವೇ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದು ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರ ಅಸಹಕಾರದ ಪ್ರಕರಣಗಳಲ್ಲಿ ಒಂದಾಗಲಿದೆ. ಗೆಹ್ಲೋಟ್ ಫೆಬ್ರವರಿ 12 ರಂದು ಶಾಸಕಾಂಗದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.</p>



<p>ಶಿವಕುಮಾರ್ ಘೋಷಣೆಗೂ ಮುನ್ನ ಸಿದ್ದರಾಮಯ್ಯ ಅವರು ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದರು. ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಅಂಗೀಕರಿಸಿದ ಮಸೂದೆಗಳನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿ ಒತ್ತಾಯಿಸಿದ ನಂತರ ಗೆಹ್ಲೋಟ್ ಮೂರು ಮಸೂದೆಗಳಿಗೆ ಸಹಿ ಹಾಕಿದರು.</p>



<p>ಕ್ಲಿಯರ್ ಮಾಡಿದ ಬಿಲ್‌ಗಳಲ್ಲಿ ಒಂದು ವೈದ್ಯಕೀಯ ಪದವೀಧರರಿಗೆ ಕಡ್ಡಾಯ ಗ್ರಾಮೀಣ ಸೇವೆಯನ್ನು ತೆಗೆದುಹಾಕುವುದೂ ಸೇರಿದೆ. ಆದರೆ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಲಾದ 17 ವಿಧೇಯಕಗಳ ಪೈಕಿ ರಾಜ್ಯಪಾಲರು ಕೇವಲ ಐದಕ್ಕೆ ಮಾತ್ರ ಒಪ್ಪಿಗೆ ನೀಡಿದ್ದಾರೆ.</p>



<p>ಅಲ್ಲದೇ, ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ರದ್ದುಗೊಳಿಸುವ ನಿರ್ಧಾರವು ರಾಜ್ಯ ಮತ್ತು ರಾಜಭವನದ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ. ಇತ್ತೀಚೆಗೆ People’s Forum for Karnataka Education ರಾಜ್ಯದಲ್ಲಿ ಎನ್‌ಇಪಿಯ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸುವಂತೆ ಕೋರಿ 10 ಲಕ್ಷ ಸಹಿ ಸಂಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.</p>
]]></content:encoded>
					
		
		
			</item>
		<item>
		<title>ಬಿಹಾರದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕ್ಷುಬ್ಧತೆ</title>
		<link>https://peepalmedia.com/political-development-in-bihar/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jan 2024 05:19:14 +0000</pubDate>
				<category><![CDATA[ಮೀಡಿಯಾ]]></category>
		<category><![CDATA[Bangalore]]></category>
		<category><![CDATA[bharat]]></category>
		<category><![CDATA[bihar]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[INDIA Alliance]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news update]]></category>
		<category><![CDATA[nitish kumar]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[political]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35421</guid>

					<description><![CDATA[ಪಾಟ್ನಾ: ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ. ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ [&#8230;]]]></description>
										<content:encoded><![CDATA[
<pre class="wp-block-code"><code><strong>ಬಿಹಾರದ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ. ಅತ್ತ ಪಟ್ನಾದಲ್ಲಿ ಬಿಜೆಪಿ ಪಕ್ಷವು ತನ್ನ ಪಕ್ಷದ ಸಂಸದರು, ಶಾಸಕರ ಸಭೆಗೆ ಕರೆ ಕೊಟ್ಟಿದ್ದರೆ, ಮತ್ತೊಂದು ಕಡೆ, ಪುರ್ನಿಯಾದಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೆ ಕರೆ ಕೊಟ್ಟಿರುವುದು ಜನರಲ್ಲಿ ಕುತೂಹಲದ ಜೊತೆ, ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತಿದೆ</strong></code></pre>



<p><strong>ಪಾಟ್ನಾ:</strong> ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ.</p>



<p>ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ.</p>



<p>ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಚೌಧರಿ, &#8220;ನಮ್ಮ ಮಟ್ಟದಲ್ಲಿ ಅಂತಹ ಯಾವುದೇ ವಿಷಯ ಚರ್ಚಿಸಲಾಗಿಲ್ಲ&#8221; ಎಂದು ಹೇಳಿದರು. ಇದೇ ಸಮಯದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, “ರಾಜಕೀಯದಲ್ಲಿ ಯಾವುದೇ ಬಾಗಿಲು ಮುಚ್ಚಿಲ್ಲ, ಅಗತ್ಯ ಬಿದ್ದಾಗ ಬಾಗಿಲು ತೆರೆಯಬಹುದು” ಎಂದು ಹೇಳಿಕೆ ಕೊಡುವುದರ ಮೂಲಕ, ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾರೆ.</p>



<p>ಏತನ್ಮಧ್ಯೆ, ಬಿಹಾರ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪೂರ್ಣೆಯಾದಲ್ಲಿ, ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.</p>



<p>&#8220;ಎಲ್ಲಾ ಕಾಂಗ್ರೆಸ್ ಶಾಸಕರು (ಇಂದಿನ ಮತ್ತು ಮಾಜಿ) ಮತ್ತು ಪಕ್ಷದ ಹಿರಿಯ ನಾಯಕರು ನಾಳೆ ಪೂರ್ಣೆಯಾದಲ್ಲಿ ಸಭೆ ಸೇರಿ ರಾಹುಲ್ ಗಾಂಧಿಯವರ &#8216;ಭಾರತ್ ಜೋಡೋ ನ್ಯಾಯ್ ಯಾತ್ರೆ&#8217; ಜನವರಿ 29 ರಂದು ಬಿಹಾರಕ್ಕೆ ಪ್ರವೇಶಿಸಿದಾಗ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ವರದಿಗಳನ್ನೂ &#8221; ಎಂದು ಖಾನ್ ತಿಳಿಸಿದರು.</p>



<p>ಜನವರಿ 29ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದ್ದು, ಅದೇ ದಿನ ಕಿಶನ್‌ಗಂಜ್‌ನಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ. ತದ ನಂತರ ಜನವರಿ 30 ಮತ್ತು 31 ರಂದು ಕ್ರಮವಾಗಿ ಪೂರ್ಣೆಯಾ ಮತ್ತು ಕತಿಹಾರ್‌ನಲ್ಲಿ ಎರಡು ರ್ಯಾಲಿಗಳು ನಡೆಯಲಿವೆ&#8221; ಎಂದು ಖಾನ್ ಮಾಧ್ಯಮಗಳಿಗೆ ತಿಳಿಸಿದರು.</p>



<p></p>
]]></content:encoded>
					
		
		
			</item>
		<item>
		<title>ಮೋದಿಯವರ ಹೊಸ ಕಾಲಚಕ್ರದಲ್ಲಿ ಉದ್ಯೋಗ ಸಿಗಲಿದೆಯೇ?</title>
		<link>https://peepalmedia.com/unemotional-in-modis-naya-kalachakra/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 26 Jan 2024 08:05:38 +0000</pubDate>
				<category><![CDATA[ಅಂಕಣ]]></category>
		<category><![CDATA[ayodhya]]></category>
		<category><![CDATA[banagalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[crisis]]></category>
		<category><![CDATA[gaza]]></category>
		<category><![CDATA[GDP]]></category>
		<category><![CDATA[india]]></category>
		<category><![CDATA[isreal]]></category>
		<category><![CDATA[jai sri ram]]></category>
		<category><![CDATA[job]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[palestinian]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[ram mandir]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[work]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35387</guid>

					<description><![CDATA[ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ. 2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ [&#8230;]]]></description>
										<content:encoded><![CDATA[
<pre class="wp-block-code" style="font-size:16px"><code><strong><em>ಕಳೆದ ಎರಡು ವರ್ಷಗಳಿಂದ ಪ್ರಧಾನಿ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಇದಕ್ಕೆ ಒಂದು ಉದಾಹರಣೆಯಷ್ಟೇ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ</em></strong>

<strong>ಲೇಖನ: ಚರಣ್ ಐವರ್ನಾಡು</strong></code></pre>



<p>ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ.</p>



<p>2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?<br>2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ ಮೂರು ವರ್ಷಗಳ ಕಾಲ ತೀವ್ರ ಕುಸಿತವನ್ನು ಕಂಡಿತು. 2003-04 ರಿಂದ ವರ್ಷಕ್ಕೆ ಸರಾಸರಿ 70 ಲಕ್ಷಕ್ಕಿಂತಲೂ ಹೆಚ್ಚಿನ ಕೃಷಿಯೇತರ ಉದ್ಯೋಗದ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ.</p>



<p>ಈ ಸಂದರ್ಭದಲ್ಲಿ ಪಿಎಂ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಈ ಬಣ್ಣ ಬಣ್ಣದ ಬರವಸೆಯನ್ನು ನಂಬಿದ ಯುವಕರು ಅವರನ್ನು ನಂಬಿ ಅಧಿಕಾರಕ್ಕೆ ತರಲು ಮತ ಹಾಕಿದರು. ಆದರೆ ಅವರ ಸರ್ಕಾರಕ್ಕೆ ಈ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾರ್ಚ್ 2020 ರ ಹೊತ್ತಿಗೆ, ಕೋವಿಡ್‌ ತಾಪತ್ರಯ ಶುರುವಾಗುವ ಮೊದಲು ಭಾರತದ ಆರ್ಥಿಕತೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಇದರಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುವಕರು.</p>



<p style="font-size:20px"><strong>ಭಾರತೀಯರು ಒಪ್ಪತ್ತಿನ ಊಟಕ್ಕೆ ಇಸ್ರೇಲ್‌ಗೆ ಹೋಗಬೇಕೇ? </strong></p>



<p>ಪ್ಯಾಲಿಸ್ತೇನ್‌ ಹಅಗೂ ಗಾಜಾದ ಮೇಲೆ ಇಸ್ರೇಲ್‌ ಆಕ್ರಮಣ ಆರಂಭವಾಗಿ ಸುಮಾರು ನೂರು ದಿನಗಳಿಗೂ ಹೆಚ್ಚಾಗುತ್ತಿದೆ. ಗಾಜಾ ನಿರ್ಣಾಮವಾಗಿ ಹೋಗಿದೆ. ಇಸ್ರೇಲ್‌ ಯುದ್ಧದ ಉನ್ಮಾದದಲ್ಲಿಯೇ ಇದೆ. </p>



<p>ಪ್ಯಾಲಿಸ್ತೇನಿಯರ ಉದ್ಯೋಗ ಪರವಾನಗಿಯನ್ನು ಇಸ್ರೇಲ್‌ ಅಮಾನತು ಮಾಡಿರುವುದರಿಂದ ಅಲ್ಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಾಗಾಗಿ ಅಲ್ಲಿ ಉದ್ಯೋಗಗಳು ಖಾಲಿ ಬಿದ್ದಿವೆ. ಅಕ್ಟೋಬರ್‌ನಲ್ಲಿ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಕಂಪನಿಗಳು   ಪ್ಯಾಲೆಸ್ತೇನಿಯರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರವನ್ನು ಕೋರಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಹರ್ಯಾಣ ಸರ್ಕಾರವು ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಕಳುಹಿಸಲು 10,000 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಇದರಲ್ಲಿ ಬಡಗಿಗಳು ಮತ್ತು ಕಬ್ಬಿಣದ ಮಾಡುವ 3,000 ಹುದ್ದೆಗಳಿದ್ದವು. ನೆಲಕ್ಕೆ ಟೈಲ್ ಹಾಕುವವರಿಗಾಗಿ 2,000 ಉದ್ಯೋಗಗಳು ಮತ್ತು ಗಾರೆ ಕೆಲಸಕ್ಕೆ 2,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸಂಬಳ ತಿಂಗಳಿಗೆ 6,100 ಶೆಕೆಲ್‌ಗಳು ಅಥವಾ ಸುಮಾರು 1,625 ಡಾಲರ್ (1 ಲಕ್ಷದ 30 ಸಾವಿರ ರುಪಾಯಿ). ಹರ್ಯಾಣದ ತಲಾ ತಿಂಗಳ ಆದಾಯ (per capita income) <a href="https://www.pib.gov.in/PressReleasePage.aspx?PRID=1942055" data-type="link" data-id="https://www.pib.gov.in/PressReleasePage.aspx?PRID=1942055">ಸುಮಾರು 24723.75 ರುಪಾಯಿ (2022-23)</a>.</p>



<p>ಅದೇ ತಿಂಗಳು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 10,000 ಕಾರ್ಮಿಕರಿಗಾಗಿ ಇದೇ ರೀತಿಯ ಇಸ್ರೇಲಿ ಉದ್ಯೋಗ ನೀಡುವ ಭರವಸೆಯ ಜಾಹೀರಾತನ್ನು ಬಿಡುಗಡೆ ಮಾಡಿತು. ಕಳೆದ ಮಂಗಳವಾರದಂದು ಲಕ್ನೋದಲ್ಲಿ ನೇಮಕಾತಿ ಚಾಲನೆ ಆರಂಭಗೊಂಡಿದ್ದು, ನೂರಾರು ಅರ್ಜಿದಾರರನ್ನು ಸರತಿ ಸಾಲಿನಲ್ಲಿ ನಿಂತಿದ್ದಾರೆ.</p>



<p>ಭಾರತ ಸರ್ಕಾರ ತನ್ನ ಪ್ರಜಾಪ್ರಭುಗಳಿಗೆ ವಿದೇಶಿ ಉದ್ಯೋಗ ನೀಡುವಷ್ಟು ಮುಂದೆ ಹೋಗಿದೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಯುದ್ಧದಲ್ಲಿ ಮುಳುಗಿರುವ ಒಂದು ದೇಶ ಉದ್ಯೋಗ ನೀಡಲು ಶಕ್ತವಾದರೆ, ಭಾರತಕಕ್ಕೆ ಉದ್ಯೋಗ ಸೃಷ್ಟಿಸಲು ಯಾಕೆ ಸಾಧ್ಯವಾಗುತ್ತಿಲ್ಲ? </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">This is the queue for recruitment drive to send labourers to work in Israel. The registration cum screening began at ITI Lucknow on January 23 is witnessing huge influx of job seekers from UP, Bihar and West Bengal. <a href="https://t.co/jLsVogk7QC">pic.twitter.com/jLsVogk7QC</a></p>&mdash; Piyush Rai (@Benarasiyaa) <a href="https://twitter.com/Benarasiyaa/status/1750030998006571009?ref_src=twsrc%5Etfw">January 24, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px"><strong>ನಿರುದ್ಯೋಗದಿಂದ ಭಾರತ ತತ್ತರಿಸಿ ಹೋಗಲಿದೆ?</strong></p>



<p>ಸದ್ಯ ಯುವಕರ ಅವರ ಭವಿಷ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ತೋರಿಸಲು ಮೂರು ಉದಾಹರಣೆಗಳು ಸಾಕು. 2018 ರಲ್ಲಿ, ಭಾರತೀಯ ರೈಲ್ವೇ ವಿವಿಧ ಕೆಳಮಟ್ಟದ ಉದ್ಯೋಗಗಳಲ್ಲಿ 63,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಿತು. 1.91 ಕೋಟಿ ಪದವಿ ಮತ್ತು ಡಿಪ್ಲೋಮಾ ಓದಿರುವ ಯುವಕರು ಈ ಹುದ್ದೆಗಳಿಗೆ ಅಪ್ಲೈ ಮಾಡಿದ್ದರು.</p>



<p>ಒಂದು ವರ್ಷದ ನಂತರ, Personnel and Training Department 12,000 ಖಾಲಿ ಹುದ್ದೆಗಳನ್ನು ಅರ್ಜಿ ಕರೆದಾಗ, 1.2 ಕೋಟಿಗೂ ಹೆಚ್ಚು ಯುವಕರು ಮತ್ತೆ ಅರ್ಜಿ ಸಲ್ಲಿಸಿದರು.</p>



<p>ಆಯ್ದ ಯುವಕರಿಗೆ ನಾಲ್ಕು ವರ್ಷಗಳ ಮಿಲಿಟರಿ ತರಬೇತಿ ನೀಡಲು ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಘೋಷಿಸಿದಾಗ, ಇದಕ್ಕೆ ಆಯ್ಕೆಯಾಗದೆ ವಿಫಲರಾಗಿ ಯುವಕರು ಹತಾಶೆಗೆ ಒಳಗಾದರು. ಹತಾಶ ಯುವಕರು ಆತ್ಮಹತ್ಯೆ ಮಾಡಿಕೊಂಡರು. <a href="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms" data-type="link" data-id="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms">ಬಿಹಾರದ ದಾನಪುರ ನಿಲ್ದಾಣದಲ್ಲಿ ರೈಲಿಗೆ ಬೆಂಕಿ</a> ಕೂಡ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.</p>



<p>ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು., 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ. 2019-20 ರ ಹೊತ್ತಿಗೆ, GDP ಬೆಳವಣಿಗೆಯು 4.2 ಶೇಕಡಾಕ್ಕೆ ಕುಸಿದಿದೆ. ಇದು ಹಿಂದೆಂದೂ ಕಾಣದ ಕುಸಿತವಾಗಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಆಗಸ್ಟ್ 2020 ರಲ್ಲಿ ಪ್ರಕಟವಾದ ಮೆಕಿನ್ಸೆ ವರದಿ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತದೆ: ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ ಶೇಕಡಾ 8 ರಿಂದ 8.5 ರಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ 2019-20 ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 4.2 ರ ಬೆಳವಣಿಗೆಯ ಡಬಲ್‌ ಆಗುತ್ತದೆ. ಆಗ 2023 ಮತ್ತು 2030 ರ ನಡುವೆ 9 ಕೋಟಿ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇವುಗಳಲ್ಲಿ 6 ಕೋಟಿ ಹೊಸ ಉದ್ಯೋಗಿಗಳು ವರ್ಕ್‌ ಫೋರ್ಸ್‌ ಪ್ರವೇಶಿಸಲಿದ್ದಾರೆ.</p>



<p>ಆದರೆ ಇವರಿಗೆ ಮಾಡಲು ಕೆಲಸ ಇದ್ಯಾ? ಇದೊಂದು ಪ್ರಶ್ನೆ… ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನೆನ್ಸ್ ಈ ಬಗ್ಗೆ ಮಾತನಾಡುತ್ತದೆ. COVID ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು.</p>



<p>COVID ಆಟ ಮುಗಿದಾಗ ಅವರು ಮತ್ತೆ ಬಂದು ಮಾಡಲು ಏನೂ ಉದ್ಯೋಗ ಇರಲಿಲ್ಲ. ಇದರ ಪರಿಣಾಮವಾಗಿ, ಏಪ್ರಿಲ್ 2020 ಮತ್ತು ಜೂನ್ 2023 ರ ನಡುವೆ 6 ಕೋಟಿ ಕಾರ್ಮಿಕರು ಕೃಷಿ ಕೆಲಸದ ಚಟುವಟಿಕೆಗೆ ಬಂದರು ಎಂದು ಈ ಅಧ್ಯಯನ ಹೇಳುತ್ತದೆ.<br>2011 ಮತ್ತು 2021 ರ ನಡುವೆ, 16 ರಿಂದ 60 ವರ್ಷ ವಯಸ್ಸಿನ 7 ಕೋಟಿ ಜನರು ಕೆಲಸ ಹುಡುಕುವುದನ್ನೇ ಬಿಟ್ಟಿದ್ದಾರೆ. ಇವರು ದೇಶದ ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ. ಇದನ್ನು ಹೇಳಿದ್ದು ಸ್ವತಃ ಸರ್ಕಾರದ್ದೇ ಆದ Periodic Labour Force Studies.</p>



<p>ಸದ್ಯ ಮೋದಿಯವರು ಹೇಳಿದ ಚಕ್ರ ಮುಂದಕ್ಕೆ ಚಲಿಸುತ್ತೀಲ್ಲ. ಮುಂದಕ್ಕೆ ಹೋಗದೇ ಇದ್ದರೂ ಪರವಾಗಿಲ್ಲ, ನಿಂತಲ್ಲೇ ನಿಂತಿದ್ದರೂ ಫೈನ್… ಆದರೆ ಚಕ್ರ ಈಗ ಹಿಂದಕ್ಕೆ ಓಡುತ್ತಿದೆ. ಯುವಕ ಯುವತಿಯರು ಉದ್ಯೋಗದ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಇದು ಒಂದು ಕಡೆ ಇದ್ದರೆ, ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಏಕಾಏಕಿ ದುರಂತಮಯವಾದ ಕುಸಿತವಾಗಿದೆ.</p>



<p>ಕಳೆದ ಎರಡು ದಶಕಗಳಲ್ಲಿ, ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆ ಅಣಬೆಯಂತೆ ಹೆಚ್ಚಾಗುತ್ತಿದೆ. ಎರಡು ದಶಕಗಳ ಹಿಂದೆ ಸುಮಾರು 10,000 ಇದ್ದ ಖಾಸಗಿ ಕಾಲೇಜುಗಳ ಸಂಖ್ಯೆ ಈಗ 42,000ಕ್ಕೂ ಹೆಚ್ಚಾಗಿದೆ. ಇವೆಲ್ಲವೂ ಸುಳ್ಳು ಭರವಸೆಗಳನ್ನು ನೀಡುತ್ತಾ, ಫೀಸು ಹೆಚ್ಚಿಸುವುದನ್ನು ಮೂಮದುವರಿಸಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe loading="lazy" title="SHIVAJI&#039;S BANGALORE PALACE | ಬೆಂಗಳೂರಿನಲ್ಲಿ ಶಿವಾಜಿ ಅರಮನೆ |" width="696" height="392" src="https://www.youtube.com/embed/xygNejGWbRY?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>
</div></figure>



<p>ಕಳೆದ ಎರಡು ವರ್ಷಗಳಿಂದ ಪಿಎಂ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು. ಅಯೋಧ್ಯೆಯಲ್ಲಿ ಮಾಡಿರುವ ರಾಮನ ಪ್ರತಿಷ್ಠಾಪನೆ ಇದಕ್ಕೆ ಉದಾಹರಣೆ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ.</p>



<p>ಜನತೆಯನ್ನು ಎಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮೋದಿಯವರು ಮಾಡಿದ್ದಾರೆ. ಭ್ರಮೆಯಿಂದ ತೇಲಾಡುತ್ತಿದ್ದೇವೆ ನಾವು. ಸಮಸ್ಯೆಗಳನ್ನು ಮರೆತಿದ್ದೇವೆ. ಆದರೆ, ಸಮಸ್ಯೆಗಳು ನಮ್ಮನ್ನು ಮರೆಯಲ್ಲ. ಹುಚ್ಚುನಾಯಿಯಂತೆ ನಮ್ಮನ್ನು ಬೆನ್ನಟ್ಟಿ ಕಚ್ಚಲಿವೆ. ಒಂದು ದಿನ ದೀಡೀರನೇ ಮೋದಿಯವರು ಚುನಾವಣೆಯನ್ನು ಮುಂದೂಡುತ್ತಿದ್ದೇವೆ ಎಂದರೂ ಅಚ್ಚರಿಯಿಲ್ಲ.</p>



<p>ಹೀಗೇ ಆದರೆ ಮೋದಿಯವರು ಹೇಳಿದ ಭರತವರ್ಷದ ಹೊಸ ಕಾಲ ಚಕ್ರ ತುಂಬಾ ಸ್ಪೀಡಾಗಿ ಓಡಲಿದೆ. ಆದರೆ ಮುಂದಕ್ಕಲ್ಲ, ಹಿಂದಕ್ಕೆ…..</p>
]]></content:encoded>
					
		
		
			</item>
		<item>
		<title>ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ</title>
		<link>https://peepalmedia.com/karpoori-thakur-awarded-bharat-ratna-posthumously/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 24 Jan 2024 08:44:37 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bharata ratna]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35347</guid>

					<description><![CDATA[ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23 ರ ಮಂಗಳವಾರ ಪೋಸ್ಟ್ ಮಾಡಿದ್ದಾರೆ. &#8220;ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಜಿ ಅವರ ಜನ್ಮ ಶತಮಾನೋತ್ಸವವನ್ನು ನಾವು ಆಚರಿಸುತ್ತಿರುವ ಸಮಯದಲ್ಲಿ ಭಾರತ ರತ್ನವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ&#8221; ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ [&#8230;]]]></description>
										<content:encoded><![CDATA[
<p>ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23 ರ ಮಂಗಳವಾರ ಪೋಸ್ಟ್ ಮಾಡಿದ್ದಾರೆ.</p>



<p>&#8220;ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಜಿ ಅವರ ಜನ್ಮ ಶತಮಾನೋತ್ಸವವನ್ನು ನಾವು ಆಚರಿಸುತ್ತಿರುವ ಸಮಯದಲ್ಲಿ ಭಾರತ ರತ್ನವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ&#8221; ಎಂದು ಪ್ರಧಾನಿ ಮೋದಿ <a href="https://x.com/narendramodi/status/1749806381497270300?s=20" data-type="link" data-id="https://x.com/narendramodi/status/1749806381497270300?s=20">ಎಕ್ಸ್ ನಲ್ಲಿ ಬರೆದಿದ್ದಾರೆ</a>.</p>



<p>&#8220;ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಕರ್ಪೂರಿ ಠಾಕೂರ್ ಅವರಲ್ಲಿದ್ದ ಅಚಲವಾದ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವ ಭಾರತದ ಸಾಮಾಜಿಕ-ರಾಜಕೀಯ ಸಂರಚನೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಈ ಪ್ರಶಸ್ತಿ ನೀಡುತ್ತಿರುವುದು ಮೂಲಕ ಅವರ ಗಮನಾರ್ಹ ಕೊಡುಗೆಗೆ ಗೌರವ ನೀಡಿದಂತೆ,  ಮತ್ತು ನ್ಯಾಯಯುತವಾದದ್ದು. ಸಮಾಜದಲ್ಲಿ ಸಮಾನತೆ ತರುವ ಬಗೆಗಿನ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ,&#8221; ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬಹುಕಾಲದ ಬೇಡಿಕೆ ಈಡೇರಿದೆ ಎಂದು ಟ್ವೀಟ್ ಮಾಡಿದ್ದಾರೆ.</p>



<p>ಎರಡು ಬಾರಿ ಬಿಹಾರದ&nbsp; ಮುಖ್ಯಮಂತ್ರಿಯಾಗಿದ್ದ ಠಾಕೂರ್ ಅವರು ಹಿಂದುಳಿದ ಸಮುದಾಯಗಳ ಪರ ಹೋರಾಡಿದ್ದರು. ಫೆಬ್ರವರಿ 1988 ರಲ್ಲಿ ನಿಧನರಾದರು.</p>



<p><strong>ಕರ್ಪೂರಿ ಠಾಕೂರ್ ಯಾರು?</strong></p>



<p>ಬಿಹಾರದ ಸಮಸ್ತಿಪುರ್ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದ ಠಾಕೂರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1924 ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.</p>



<p>1952 ರಲ್ಲಿ ಮೊದಲ ಬಾರಿಗೆ ಶಾಸಕರಾದ ಇವರ ರಾಜ್ಯ ಮಟ್ಟದಲ್ಲಿ ಅವರ ಚುನಾವಣಾ-ಗೆಲುವಿನ ಓಟ 1985 ರವರೆಗೆ ಮುಂದುವರೆಯಿತು. &#8216;ಜನ್ ನಾಯಕ್&#8217; ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಇವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾದರು. ಒಮ್ಮೆ 1970 ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಮತ್ತೊಮ್ಮೆ 1977 ಜನತಾ ಪಕ್ಷದಿಂದ.</p>



<p>ಮುಖ್ಯಮಂತ್ರಿಯಾಗಿ ಹಿಂದಿ ಭಾಷೆಗೆ ಪ್ರೋತ್ಸಾಹ ನೀಡಿದ ಠಾಕೂರ್, ಶಾಲಾ ಶುಲ್ಕವನ್ನು ಮನ್ನಾ ಮಾಡುವುದು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ನೀತಿಗಳನ್ನು ಜಾರಿಗೊಳಿಸಿ ಜನಪ್ರಿಯರಾಗಿದ್ದರು. ಬಿಹಾರದಲ್ಲಿ ಲೇಯರ್ಡ್ ಮೀಸಲಾತಿ ವ್ಯವಸ್ಥೆಯ ಅನುಷ್ಠಾನವು ಠಾಕೂರ್ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿತು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="yCX2YftRCkw"><iframe loading="lazy" title="ಪ್ರಾದೇಶಿಕತೆ v/s ರಾಷ್ಟ್ರೀಯತೆ - ಜ್ಞಾನ ಮಧು ಕಲ್ಲಹಳ್ಳಿ  |Peepal Media | ಪೀಪಲ್‌ ಮೀಡಿಯಾ" width="696" height="392" src="https://www.youtube.com/embed/yCX2YftRCkw?start=1599&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ಅವರ ಆಡಳಿತದ ಅಡಿಯಲ್ಲಿ, ಇತರೆ ಹಿಂದುಳಿದ ವರ್ಗಗಳ (OBC) ಸಮುದಾಯಗಳ ಸದಸ್ಯರಿಗೆ 12% ಕೋಟಾವನ್ನು ನೀಡಲಾಗಿತ್ತು. OBC ಗಳು ಮತ್ತು ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲಾ 8% ಮತ್ತು ಮಹಿಳೆಯರಿಗೆ 3% ಮೀಸಲಾತಿ ನೀಡಲಾಗಿತ್ತು.</p>



<p>ಸದ್ಯ ಭಾರತ ರತ್ನ ನೀಡಿರುವ ಹಿನ್ನಲೆಯಲ್ಲಿ ಇವರ ನಾಯಕತ್ವದ ಮೇಲೆ ಜೆಡಿಯು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಹಕ್ಕು ಸಾಧಿಸಲು ಯತ್ನಿಸುತ್ತಿವೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಕರ್ಪೂರಿ ಠಾಕೂರ್&nbsp; ಬದುಕಿರುವಾಗ ಅವರನ್ನು ಬಿಜೆಪಿಯವರು ಅವಾಚ್ಯವಾಗಿ ನಿಂದಿಸುತ್ತಿದ್ದರು.&nbsp; 9 ವರ್ಷಗಳಿಂದ ಅವರನ್ನು ನೆನಪಿಸಿಕೊಳ್ಳಲಿಲ್ಲ. ನಮ್ಮ ಪಕ್ಷ ಮತ್ತು ನಾಯಕ ಲಾಲು ಯಾದವ್ ಠಾಕುರ್‌ ಅವರಿಗೆ ಭಾರತ ರತ್ನ ನೀಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈಗ ಚುನಾವಣೆ ಸಮೀಪಿಸುತ್ತಿರುವಾಗ ಅವರು ಕರ್ಪೂರಿ ಠಾಕೂರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಭಾರತ ರತ್ನ ನೀಡಲಾಯಿತು. ಓಟಿಗಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ&#8221; ಎಂದು ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಹೇಳಿರುವುದು ಎಎನ್‌ಐಯಲ್ಲಿ ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಬಿಜೆಪಿಯಿಂದ 2023 ರಲ್ಲಿ ಹೆಚ್ಚು ಹಿಂಸಾಚಾರ ಮತ್ತು ಮೂಲಭೂತ ಹಕ್ಕುಗಳ ದಮನ: ಹ್ಯೂಮನ್ ರೈಟ್ಸ್ ವಾಚ್ ವರದಿ</title>
		<link>https://peepalmedia.com/bjp-sparked-violence-and-rights-abuses-in-india-2023-human-right-watch/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 12 Jan 2024 07:13:08 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[Human rights]]></category>
		<category><![CDATA[Human Rights Watch]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manipur]]></category>
		<category><![CDATA[Manipur violence]]></category>
		<category><![CDATA[modi]]></category>
		<category><![CDATA[modi government]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[viral news]]></category>
		<category><![CDATA[WORLD REPORT 2024]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34878</guid>

					<description><![CDATA[2023 ರಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ತಾರತಮ್ಯ ಮತ್ತು ಧ್ರುವೀಕರಣದ ನೀತಿಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಹೆಚ್ಚಾಗಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ ಮತ್ತು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ (Human Rights Watch) ತನ್ನ ವಿಶ್ವ ವರದಿಯಲ್ಲಿ ಜನವರಿ 11, 2024 ಗುರುವಾರ ಹೇಳಿದೆ. ಮೋದಿ ಸರ್ಕಾರವು ನಿರಂತರ ತಾರತಮ್ಯ ಮಾಡುವ ಮೂಲಕ ಹಕ್ಕುಗಳನ್ನು ಗೌರವಿಸುವ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ನಾಯಕತ್ವದ ಆಶಯಗಳನ್ನು ದುರ್ಬಲಗೊಳಿಸಿದೆ ಅದು ಹೇಳಿದೆ.&#160; &#8220;ಅಪರಾಧ ಮಾಡಿದವರನ್ನು  [&#8230;]]]></description>
										<content:encoded><![CDATA[
<p>2023 ರಲ್ಲಿ ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ತಾರತಮ್ಯ ಮತ್ತು ಧ್ರುವೀಕರಣದ ನೀತಿಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರವನ್ನು ಹೆಚ್ಚಾಗಿದೆ, ಭಯದ ವಾತಾವರಣ ಸೃಷ್ಟಿಯಾಗಿದೆ ಮತ್ತು ಸರ್ಕಾರವನ್ನು ಟೀಕಿಸುವವರನ್ನು ಹತ್ತಿಕ್ಕಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ (Human Rights Watch) ತನ್ನ <a href="https://www.hrw.org/world-report/2024">ವಿಶ್ವ ವರದಿಯಲ್ಲಿ</a> ಜನವರಿ 11, 2024 ಗುರುವಾರ ಹೇಳಿದೆ.</p>



<p>ಮೋದಿ ಸರ್ಕಾರವು ನಿರಂತರ ತಾರತಮ್ಯ ಮಾಡುವ ಮೂಲಕ ಹಕ್ಕುಗಳನ್ನು ಗೌರವಿಸುವ ಪ್ರಜಾಪ್ರಭುತ್ವವಾಗಿ ಭಾರತದ ಜಾಗತಿಕ ನಾಯಕತ್ವದ ಆಶಯಗಳನ್ನು ದುರ್ಬಲಗೊಳಿಸಿದೆ ಅದು ಹೇಳಿದೆ.&nbsp;</p>



<p>&#8220;ಅಪರಾಧ ಮಾಡಿದವರನ್ನು  ಹೊಣೆಗಾರರನ್ನಾಗಿ ಮಾಡುವ ಬದಲು, ಅಧಿಕಾರಿಗಳು ಅಪರಾಧಕ್ಕೆ ಬಲಿಯಾದವರನ್ನು ಶಿಕ್ಷಿಸುತ್ತಿದ್ದಾರೆ ಮತ್ತು ಇದನ್ನು ಪ್ರಶ್ನಿಸಿದವರಿಗೆ ಕಿರುಕುಳ ನೀಡಿದ್ದಾರೆ,&#8221; ಎಂದು ಹ್ಯೂಮನ್ ರೈಟ್ಸ್ ವಾಚ್‌ನ ಏಷ್ಯಾದ ಉಪ ನಿರ್ದೇಶಕಿ ಮೀನಾಕ್ಷಿ ಗಂಗೂಲಿ ಹೇಳಿದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="aek9tIplPWA"><iframe loading="lazy" title="#rammandir ರಾಮನ  ಕಥನಗಳನ್ನ ಸ್ಥಳೀಯಗೊಳಿಸುವ ಗುಣವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಿಜೆಪಿ...  |Peepal Media" width="696" height="392" src="https://www.youtube.com/embed/aek9tIplPWA?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>740 ಪುಟಗಳ ವಿಶ್ವ ವರದಿ 2024 ರ 34 ನೇ ಆವೃತ್ತಿಯಲ್ಲಿ, ಹ್ಯೂಮನ್ ರೈಟ್ಸ್ ವಾಚ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದೆ.&nbsp;</p>



<p>ಭಾರತದಲ್ಲಿ ಹಣಕಾಸಿನ ಅಕ್ರಮಗಳ ಆರೋಪ ಮತ್ತು <a href="https://www.hrw.org/news/2022/01/18/india-should-stop-using-abusive-foreign-funding-law">ಸರ್ಕಾರೇತರ ಸಂಸ್ಥೆಗಳಿಗೆ ವಿದೇಶಿ ಧನಸಹಾಯವನ್ನು ನಿಯಂತ್ರಿಸುವ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ</a>ಯನ್ನು ಬಳಸಿ&nbsp; ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಟೀಕಾಕಾರ ಮೇಲೆ ದಾಳಿ ಮಾಡಿ ಕಿರುಕುಳ ನೀಡಿದ್ದಾರೆ.</p>



<p>ಫೆಬ್ರವರಿಯಲ್ಲಿ, ಭಾರತೀಯ ತೆರಿಗೆ ಅಧಿಕಾರಿಗಳು ನವ ದೆಹಲಿ ಮತ್ತು ಮುಂಬೈನಲ್ಲಿರುವ<a href="https://www.hrw.org/news/2023/02/14/tax-authorities-raid-bbc-offices-india"> ಬಿಬಿಸಿ ಕಚೇರಿಗಳ ಮೇಲೆ ದಾಳಿ</a> ನಡೆಸಿದರು. 2002 ರ ಗುಜರಾತ್‌ ಗಲಭೆಯ ಬಗ್ಗೆ ʼಇಂಡಿಯಾ: ದಿ ಮೋದಿ ಕ್ವೆಸ್ಚನ್‌ʼ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಕ್ಕಾಗಿ ಪ್ರತೀಕಾರವೆಂಬಂತೆ ಇದನ್ನು ನಡೆಸಲಾಗಿತ್ತು. ದೇಶದ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ಜನವರಿಯಲ್ಲಿ ಭಾರತದಲ್ಲಿ ಈ <a href="https://www.hrw.org/news/2023/01/23/indias-blocking-bbc-documentary-reflects-broader-crackdown">BBC ಸಾಕ್ಷ್ಯಚಿತ್ರದ ಎರಡು ಎಪಿಸೋಡ್‌ಗಳನ್ನೂ ನಿಷೇಧಿಸಿತ್ತು</a>.</p>



<p>ವರದಿಯಲ್ಲಿ ಇಂತಹ ಅನೇಕ ಘಟನೆಗಳನ್ನು ಪಟ್ಟಿಮಾಡಲಾಗಿದೆ, ಧಾರ್ಮಿಕ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯದ ಬಗ್ಗೆ ಎತ್ತಿ ತೋರಿಸಿದೆ.</p>



<p><em>ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: <a href="https://chat.whatsapp.com/BoGCVVQyXYVE5m7RhIQRWv"><strong>ಪೀಪಲ್ ಮೀಡಿಯಾ</strong></a></em></p>



<p>&#8220;ಜುಲೈ 31 ರಂದು, ಹರಿಯಾಣ ರಾಜ್ಯದ ನುಹ್ ಜಿಲ್ಲೆಯಲ್ಲಿ ಹಿಂದೂಗಳ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಹಿಂಸಾಚಾರ (nuh violence) ಭುಗಿಲೆದ್ದಿತು. ಅದು ಹಲವಾರು ಪಕ್ಕದ ಜಿಲ್ಲೆಗಳಿಗೂ ಹರಡಿತು. ಹಿಂಸಾಚಾರದ ನಂತರ, ಅಧಿಕಾರಿಗಳು ನೂರಾರು ಮುಸ್ಲಿಂಮರ ಆಸ್ತಿಗಳನ್ನು ಅಕ್ರಮವಾಗಿ ಕೆಡವುವ ಮೂಲಕ ಮತ್ತು ಮುಸ್ಲಿಂ ಪುರುಷರನ್ನು ಬಂಧಿಸುವ ಮೂಲಕ ಮುಸ್ಲೀಮರ ವಿರುದ್ಧ ಪ್ರತೀಕಾರ ತೀರಿಸಿಕೊಂಡರು. ಈ ವಿಧ್ವಂಸಕ ಘಟನೆಗಳನ್ನು ನೋಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸರ್ಕಾರ &#8220;ಜನಾಂಗೀಯ ನಿರ್ಮೂಲನೆ&#8221; ನಡೆಸುತ್ತಿದೆಯೇ ಎಂದು ಕೇಳಿತ್ತು ಎಂದು ವರದಿ ಹೇಳಿದೆ.</p>



<p>“ಮೇ ತಿಂಗಳಲ್ಲಿ ಮಣಿಪುರದಲ್ಲಿ, ಬಹುಸಂಖ್ಯಾತ ಮೈತೇಯಿ ಮತ್ತು ಅಲ್ಪಸಂಖ್ಯಾತ ಕುಕಿ ಝೋ ಸಮುದಾಯಗಳ ನಡುವೆ ಹಿಂಸಾಚಾರವು ಭುಗಿಲೆದ್ದು 200 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು, ನೂರಾರು ಜನರು ಸ್ಥಳಾಂತರಗೊಂಡರು, ಮನೆಗಳು ಮತ್ತು ಚರ್ಚ್‌ಗಳು ನಾಶವಾದವು ಮತ್ತು ತಿಂಗಳುಗಳವರೆಗೆ ಇಂಟರ್ನೆಟನ್ನು ಸ್ಥಗಿತಗೊಳಿಸಲಾಯಿತು. ಮಣಿಪುರ ಮುಖ್ಯಮಂತ್ರಿ&nbsp; ಬಿಜೆಪಿಯ ಎನ್ ಬಿರೇನ್ ಸಿಂಗ್ ಕುಕಿಗಳ ಬಗ್ಗೆ ಅವಮಾನಕಾರಿ ಹೇಳಿಕೆಗಳನ್ನು ನೀಡಿ ಸಮುದಾಯಗಳ ವಿಭಜನೆಗೆ ಉತ್ತೇಜನ ನೀಡಿದರು. ಬಿರೇನ್ ಅವರು‌ ಕುಕಿಗಳು ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದಾರೆ, ಮ್ಯಾನ್ಮಾರ್‌ನಿಂದ ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು, ”ಎಂದು ವರದಿಯಲ್ಲಿ ಹೇಳಲಾಗಿದೆ.</p>



<p>&#8220;ಆಗಸ್ಟ್‌ನಲ್ಲಿ, ರಾಜ್ಯ ಪೊಲೀಸರು &#8216;ಪರಿಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ&#8217; ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ಹಿಂಸಾಚಾರದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಲು ಆದೇಶಿಸಿತ್ತು. ಸೆಪ್ಟೆಂಬರ್‌ನಲ್ಲಿ, ವಿಶ್ವಸಂಸ್ಥೆಯ (United Nations)&nbsp; ಹನ್ನೆರಡು ತಜ್ಞರು ಮಣಿಪುರದಲ್ಲಿ (Manipur) ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು, ಸರ್ಕಾರದ ಪ್ರತಿಕ್ರಿಯೆ ನಿಧಾನ ಮತ್ತು ಅಸಮರ್ಪಕವಾಗಿದೆ ಎಂದು ಹೇಳಿದ್ದರು.</p>



<p><em>ಪೀಪಲ್‌ ಮೀಡಿಯಾದ ವಾಟ್ಸಾಪ್‌ ಗುಂಪನ್ನು ಸೇರಲು ಇಲ್ಲಿ ಕ್ಲಿಕ್‌ ಮಾಡಿ: </em><a href="https://chat.whatsapp.com/BoGCVVQyXYVE5m7RhIQRWv"><strong><em>ಪೀಪಲ್ ಮೀಡಿಯಾ</em></strong></a></p>



<p>ಭಾರತೀಯ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಇತರ ಹಕ್ಕುಗಳನ್ನು ನಿರಂತರವಾಗಿ ಹತ್ತಿಕ್ಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭದ್ರತಾ ಪಡೆಗಳಿಂದ ಕಾನೂನುಬಾಹಿರ ಹತ್ಯೆಗಳು ವರ್ಷವಿಡೀ ಮುಂದುವರಿದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>



<p>ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ (Brij Bhushan Singh) ಅವರು ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಒಂದು ದಶಕದ ಅವಧಿಯಲ್ಲಿ ಕನಿಷ್ಠ ಆರು ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಕ್ಕೆ ಗುರಿಯಾದ ಪ್ರಕರಣವನ್ನು ಕೂಡಾ ವರದಿಯಲ್ಲಿ ಹೇಳಲಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿದ್ದ, ಮಹಿಳಾ ಕುಸ್ತಿಪಟುಗಳನ್ನು ಭದ್ರತಾ ಪಡೆಗಳು ಬಲವಂತವಾಗಿ ಬಂಧಿಸಿದ್ದರು.</p>



<p><strong><em>ಸಂಪೂರ್ಣ ವರದಿಯನ್ನು ಇಲ್ಲಿ ಓದಿ:</em></strong><a href="https://www.hrw.org/sites/default/files/media_2024/01/World%20Report%202024%20LOWRES%20WEBSPREADS_0.pdf"> WORLD REPORT 2024 &#8211; Our Annual Review Of Human Rights Around The Globe</a></p>
]]></content:encoded>
					
		
		
			</item>
		<item>
		<title>ಸಾಲು ಸಾಲು ಅಪರಾಧಗಳು: ಶ್ರೀಕಾಂತ್ ಪೂಜಾರಿ ಬಂಧನ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ</title>
		<link>https://peepalmedia.com/cm-siddaramaiah-defends-srikanth-poojaris-arrest-with-lists-other-cases/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 04 Jan 2024 09:03:54 +0000</pubDate>
				<category><![CDATA[Uncategorized]]></category>
		<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[CM]]></category>
		<category><![CDATA[CM siddaramaiah]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[srikanth pujary]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34474</guid>

					<description><![CDATA[31 ವರ್ಷಗಳ ಹಳೆಯ ಪ್ರಕರಣವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷ ಹಾಗೂ ಹೊಸ ಪ್ರತಿಪಕ್ಷ ನಾಯಕನ ಆಯ್ಕೆಯ ನಂತರ ಅಂತಹ ಪರಿಣಾಮಕಾರಿ ವಿಚಾರದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಬಿಸಿ ಮುಟ್ಟಿಸಿರಲಿಲ್ಲ. ಆದರೆ ಈಗ 1992ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ&#160;ಗುಂಪು ಗಲಭೆ ಪ್ರಕರಣದಲ್ಲಿ ಬಂಧಿತನಾದ ಶ್ರೀಕಾಂತ್ ಪೂಜಾರಿ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ &#8220;ಹಿಂದೂ ಕಾರ್ಯಕರ್ತನ ಬಂಧನ&#8221;, &#8220;ಹಿಂದೂ ವಿರೋಧಿ ಸರ್ಕಾರ&#8221; ಎಂಬ ಆರೋಪ [&#8230;]]]></description>
										<content:encoded><![CDATA[
<p>31 ವರ್ಷಗಳ ಹಳೆಯ ಪ್ರಕರಣವೊಂದು ಈಗ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿ ಮಾರ್ಪಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷ ಹಾಗೂ ಹೊಸ ಪ್ರತಿಪಕ್ಷ ನಾಯಕನ ಆಯ್ಕೆಯ ನಂತರ ಅಂತಹ ಪರಿಣಾಮಕಾರಿ ವಿಚಾರದ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಬಿಸಿ ಮುಟ್ಟಿಸಿರಲಿಲ್ಲ. ಆದರೆ ಈಗ 1992ರಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ&nbsp;ಗುಂಪು ಗಲಭೆ ಪ್ರಕರಣದಲ್ಲಿ ಬಂಧಿತನಾದ ಶ್ರೀಕಾಂತ್ ಪೂಜಾರಿ ಬಂಧನದ ಹಿನ್ನೆಲೆಯಲ್ಲಿ ಬಿಜೆಪಿ &#8220;ಹಿಂದೂ ಕಾರ್ಯಕರ್ತನ ಬಂಧನ&#8221;, &#8220;ಹಿಂದೂ ವಿರೋಧಿ ಸರ್ಕಾರ&#8221; ಎಂಬ ಆರೋಪ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ಪ್ರಯತ್ನದಲ್ಲಿದೆ.</p>



<p>ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ವಿಲೇವಾರಿ ಮಾಡುವಾಗ ಹುಬ್ಬಳ್ಳಿ-ಧಾರವಾಡ ಪೊಲೀಸರು ನಾಲ್ಕು ದಿನಗಳ ಹಿಂದೆ ಶ್ರೀಕಾಂತ್ ಪೂಜಾರಿಯ ಬಂಧಿಸಿದ್ದರು. ಬಂಧಿತ ಪೂಜಾರಿ 31 ವರ್ಷಗಳ ಹಿಂದೆ ರಾಮಮಂದಿರ ನಿರ್ಮಾಣದ ಆಂದೋಲನದಲ್ಲಿ ಪಾಲ್ಗೊಂಡಿದ್ದರು, ಆಗ ದಾಖಲಾದ ಪ್ರಕರಣ ಈಗ, ಅದರಲ್ಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹಂತದಲ್ಲಿ ಬಂಧನವಾಗಿರುವುದು ಬಿಜೆಪಿ ಪರೋಕ್ಷವಾಗಿ ಈ ಪ್ರಕರಣದ ಲಾಭ ಪಡೆಯಲು ಹೊರಟಿರುವುದು ಬಹಿರಂಗ ರಹಸ್ಯ ಎನ್ನಬಹುದು.</p>



<p><em><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</strong></em> <strong>: <a href="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>ಅದರಲ್ಲಿ ರಾಜ್ಯ ಬಿಜೆಪಿ ಘಟಕವು ಬೆಂಗಳೂರು, ಹುಬ್ಬಳ್ಳಿ ಧಾರವಾಡ ಸೇರಿದಂತೆ ಬಿಜೆಪಿ ಪ್ರಾಬಲ್ಯ ಹೊಂದಿರುವ ಅನೇಕ ಕಡೆಗಳಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಕ್ಕಿರುವ ಅವಕಾಶವನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವುದು ಬೇಡ ಎಂದು ಹಿಂದುಮುಂದು ನೋಡದೇ ಬೀದಿಗಿಳಿದಿದೆ. ಆದರೆ ರಾಮಭಕ್ತನ ಬೆನ್ನಿಗೆ ಬಿದ್ದ ಬಿಜೆಪಿ ಅಸಲಿ ವಿಚಾರವನ್ನು ಮರೆಮಾಚಿ ಏಕಮುಖವಾಗಿ ಪ್ರಕರಣವನ್ನು ರಾಜ್ಯದ ಜನತೆಯ ಮುಂದು ಪ್ರಸ್ತುತಪಡಿಸುತ್ತಿದೆ. ಇದೇ ರೀತಿಯ ಯಡವಟ್ಟುಗಳೇ ಹಿಂದೆ ಬಿಜೆಪಿ ಸೋಲಿಗೆ ಕಾರಣ ಎಂಬ ಕಟು ಸತ್ಯ ಬಿಜೆಪಿಗೆ ಅರಿವಾದಂತಿಲ್ಲ.</p>



<p>ಅಂದಹಾಗೆ ಈಗ ಬಿಜೆಪಿ ಯಾರನ್ನು ರಾಮಭಕ್ತ, ಹಿಂದೂ ಕಾರ್ಯಕರ್ತ, ರಾಮ ಜನ್ಮಭೂಮಿ ಹೋರಾಟಗಾರ ಎಂದು ಕರೆಯಲು ಹೊರಟಿದೆಯೋ ಆ ವ್ಯಕ್ತಿಯ ಹಿನ್ನೆಲೆಯನ್ನು ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತೆರೆದಿಟ್ಟಿದ್ದಾರೆ. ಬಂಧಿತ ಆರೋಪಿ ಶ್ರೀಕಾಂತ ಪೂಜಾರಿ ರಾಜ್ಯದಲ್ಲಿ ಅಕ್ರಮ ಕಳ್ಳಬಟ್ಟಿ ದಂಧೆ, ಮಟ್ಕಾ, ಜೂಜಾಟ ದೊಂಬಿ ಸೇರಿದಂತೆ ಸುಮಾರು 16 ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸರಿಗೆ ಬೇಕಾಗಿರುವ ದೊಡ್ಡ ಸಮಾಜಘಾತುಕ ವ್ಯಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.</p>



<p>ಅಷ್ಟೆ ಅಲ್ಲದೆ ಈತ ತಾನು ತೊಡಗಿರುವ ಅಪರಾಧಿ ಕೃತ್ಯಗಳ ರಕ್ಷಣೆಗೆ ರಾಮಭಕ್ತ, ಹಿಂದೂ ಭಕ್ತ ಎಂದು ಬಿಜೆಪಿ ಆಶ್ರಯ ಪಡೆಯುತ್ತಿದ್ದಾನೆ. ಬಿಜೆಪಿ ಪಕ್ಷ ಇಂಥವರನ್ನು ಬೆಂಬಲಿಸಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಧರ್ಮರಕ್ಷಕನ ಮುಖವಾಡ ಹೊತ್ತ ಇಂತವರನ್ನು ಹಾಗೆಯೇ ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ. ಇದು ಬಿಜೆಪಿ ಪಕ್ಷದ ಕಪಟ ಧರ್ಮಭಕ್ತಿಗೆ ಉದಾಹರಣೆಯಾಗಿ ನಿಲ್ಲಲಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.</p>



<p><em><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</strong></em> <strong>: <a href="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>ಅಕ್ರಮ ಸಾರಾಯಿ ಮಾರಾಟ, ದೊಂಬಿ, ಮಟಕಾ, ಜೂಜಾಟ ಮುಂತಾದ 16 ಸಮಾಜ ಘಾತುಕ ಪ್ರಕರಣದ ಅಡಿಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಈತನ ಎಲ್ಲಾ ಅಪರಾಧ ಕೃತ್ಯಗಳಿಗೆ ತಮ್ಮ ಪಕ್ಷದ ಬೆಂಬಲವಿದೆ ಎಂಬುದನ್ನು ಬಹಿರಂಗವಾಗಿ ಹೇಳಬೇಕು ಅಥವಾ ಇಂತಹ ವ್ಯಕ್ತಿಯ ಪರವಾಗಿ ಪ್ರತಿಭಟನೆ ಕೈಬಿಟ್ಟು ಸಾರ್ವಜನಿಕವಾಗಿ ಕ್ಷಮೆ ಕೋರಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.</p>



<p>ಕಳೆದ 2023ನೇ ಸಾಲಿನಲ್ಲಿ ಹುಬ್ಬಳ್ಳಿ &#8211; ಧಾರವಾಡ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ, ಕಳ್ಳತನ, ಸುಲಿಗೆ, ವಂಚನೆ, ದೊಂಬಿ ಮುಂತಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಎಲ್.ಪಿ.ಸಿ ( ಕಾನೂನು ವಿಚಾರಣಾ ಪ್ರಮಾಣಪತ್ರ ) ಪ್ರಕರಣಗಳಲ್ಲಿ ಒಟ್ಟು 36 ಜನರನ್ನು ದಸ್ತಗಿರಿ ಮಾಡಲಾಗಿದೆ. ಇದರಲ್ಲಿ ಶ್ರೀಕಾಂತ ಪೂಜಾರಿ 32ನೆಯ ವ್ಯಕ್ತಿ. ಈತನನ್ನು ಕರಸೇವಕನೆಂಬ ಕಾರಣಕ್ಕೆ ಹೊರಗಡೆ ಬಿಡಬೇಕೋ? ಅಥವಾ ಆರೋಪಿ ಎಂಬ ಕಾರಣಕ್ಕೆ ಬಂಧಿಸಬೇಕೋ? ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದು ನಮ್ಮ ಸರ್ಕಾರದ ವಿರುದ್ಧವಲ್ಲ, ದೇಶದ ಕಾನೂನು ಮತ್ತು ಸಂವಿಧಾನದ ವಿರುದ್ಧ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>



<p>ಅಪರಾಧಿ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿ ಕರಸೇವಕನಾದ ಕಾರಣಕ್ಕೆ ಆತನನ್ನು ಬಿಟ್ಟರೆ ಅಥವಾ ಬಿಡಲು ಆಗ್ರಹಿಸಿದರೆ ಅದು ಸಂವಿಧಾನ ವಿರೋಧಿ ನಡೆಯಾಗಲಿದೆ. ಬಿಜೆಪಿ ಪಕ್ಷ ಹಿಂದಿನಿಂದಲೂ ಇಂತವರ ಪರವಾಗಿಯೇ ಇದ್ದು, ದೇಶದ ಕಾನೂನುಗಳನ್ನು ಗಾಳಿಗೆ ತೂರಿದೆ. ಅಷ್ಟಕ್ಕೂ ಈತನ ಮೇಲಿದ್ದ ರಾಮಮಂದಿರ ಗಲಭೆ ಪ್ರಕರಣವನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲೇ ವಜಾಗೊಳಿಸಲು ಅವಕಾಶವಿದ್ದರೂ, ಇಂತಹದ್ದೊಂದು ಸನ್ನಿವೇಶ ಉದ್ಭವಿಸುವ ಮುನ್ಸೂಚನೆ ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅವಕಾಶ ಇದ್ದ ಹಿನ್ನೆಲೆಯಲ್ಲಿ ಬಿಜೆಪಿ ಅದನ್ನು ಹಾಗೆಯೇ ಉಳಿಸಿಕೊಂಡಿದೆ. ರಾಮಮಂದಿರದ ಉದ್ಘಾಟನೆ ವೇಳೆ ಶ್ರೀಕಾಂತ ಪೂಜಾರಿಯ ಬಂಧನವಾಗಿರುವುದು ಕಾಕತಾಳೀಯ ಅಷ್ಟೆ. ಹಳೆಯ ಪ್ರಕರಣಗಳನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸರು ಇತರೆ 36 ಜನರ ಜೊತೆಗೆ ಇವರನ್ನು ಕೂಡ ಬಂಧಿಸಿದ್ದಾರೆ. ಇದರಲ್ಲಿ ಪ್ರತೀಕಾರವೂ ಇಲ್ಲ, ತುಷ್ಟೀಕರಣವೂ ಇಲ್ಲ. ಕಾನೂನು ಪಾಲನೆ ಮಾಡಬೇಕು.. ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>2023 ರಲ್ಲಿ ಬಂದ ಮಹತ್ವದ ಕೋರ್ಟ್‌ ತೀರ್ಪುಗಳು</title>
		<link>https://peepalmedia.com/major-judgements-of-2023-by-supreme-and-high-courts/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 01 Jan 2024 10:40:48 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[high court]]></category>
		<category><![CDATA[india]]></category>
		<category><![CDATA[information]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news updat']]></category>
		<category><![CDATA[news update]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34299</guid>

					<description><![CDATA[2023 ಮೆಲ್ಲಗೆ ಸರಿದು ಹೋಯ್ತು.&#160; ದೇಶದ ಮಹತ್ವದ ಘಟನೆಗಳು, ದುರಂತಗಳು, ಒಳಿತು-ಕೆಡುಕುಗಳಿಗೆ&#160; 2023 ಸಾಕ್ಷಿಯಾಗಿದೆ. ದೇಶದ ಚರಿತ್ರೆಯ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿಯೇ ಉಳಿಯುವ ಮಣಿಪುರ ಜನಾಂಗೀಯ ಹಿಂಸಾಚಾರದಂತವು ನಡೆದು ಹೋದವು. 2023ರಲ್ಲಿ ಕೆಲವು ಮಹತ್ವದ ತೀರ್ಪುಗಳು ಬಂದಿವೆ. ನೋಟ್‌ ಬ್ಯಾನ್‌ನಿಂದ ಹಿಡಿದು ಸಂವಿಧಾನದ ಆರ್ಟಿಕಲ್‌ 370 ರದ್ದು ಮಾಡುವ ವರೆಗೆ ಅನೇಕ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿವೆ. ದೇಶದ ಅನೇಕ ಮಹತ್ವದ ಸಮಸ್ಯೆಗಳನ್ನು ನಿವಾರಿಸಿವೆ. ನೋಟು ಅಮಾನ್ಯೀಕರಣದಿಂದ ಸಂವಿಧಾನದ 370ನೇ ವಿಧಿಯ ರದ್ದತಿಯವರೆಗೆ ನ್ಯಾಯಾಲಯಗಳು 2023ರಲ್ಲಿ ಹಲವು ಮಹತ್ವದ ತೀರ್ಪುಗಳನ್ನು [&#8230;]]]></description>
										<content:encoded><![CDATA[
<p>2023 ಮೆಲ್ಲಗೆ ಸರಿದು ಹೋಯ್ತು.&nbsp; ದೇಶದ ಮಹತ್ವದ ಘಟನೆಗಳು, ದುರಂತಗಳು, ಒಳಿತು-ಕೆಡುಕುಗಳಿಗೆ&nbsp; 2023 ಸಾಕ್ಷಿಯಾಗಿದೆ. ದೇಶದ ಚರಿತ್ರೆಯ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿಯೇ ಉಳಿಯುವ ಮಣಿಪುರ ಜನಾಂಗೀಯ ಹಿಂಸಾಚಾರದಂತವು ನಡೆದು ಹೋದವು.</p>



<p>2023ರಲ್ಲಿ ಕೆಲವು ಮಹತ್ವದ ತೀರ್ಪುಗಳು ಬಂದಿವೆ. ನೋಟ್‌ ಬ್ಯಾನ್‌ನಿಂದ ಹಿಡಿದು ಸಂವಿಧಾನದ ಆರ್ಟಿಕಲ್‌ 370 ರದ್ದು ಮಾಡುವ ವರೆಗೆ ಅನೇಕ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿವೆ. ದೇಶದ ಅನೇಕ ಮಹತ್ವದ ಸಮಸ್ಯೆಗಳನ್ನು ನಿವಾರಿಸಿವೆ.</p>



<p>ನೋಟು ಅಮಾನ್ಯೀಕರಣದಿಂದ ಸಂವಿಧಾನದ 370ನೇ ವಿಧಿಯ ರದ್ದತಿಯವರೆಗೆ ನ್ಯಾಯಾಲಯಗಳು 2023ರಲ್ಲಿ ಹಲವು ಮಹತ್ವದ ತೀರ್ಪುಗಳನ್ನು ನೀಡಿವೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿರುವ ಇಂತಹ ಕೆಲವು ತೀರ್ಪುಗಳು ಇಲ್ಲಿವೆ</p>



<p style="font-size:20px"><strong>ನೋಟ್‌ ಬ್ಯಾನ್</strong></p>



<p>ನವೆಂಬರ್‌ 2016 ರಂದು ಮೋದಿ ಸರ್ಕಾರ 500 ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿತು. ಜನವರಿ 2, 4:1 ಬಹುಮತದಿಂದ ಈ ನಿರ್ಧಾರವನದನು ಎತ್ತಿ ಹಿಡಿಯುವ ಮೂಲಕ <a href="https://www.livelaw.in/top-stories/demonetisation-supreme-court-uphold-reasonable-nexus-rbi-act-217846" data-type="link" data-id="https://www.livelaw.in/top-stories/demonetisation-supreme-court-uphold-reasonable-nexus-rbi-act-217846">ಸುಪ್ರೀಂ ಕೋರ್ಟ್</a> 2023ಕ್ಕೆ ಹೆಜ್ಜೆ ಇಟ್ಟಿತು.</p>



<p>ಈ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ.ರಾಮಸುಬ್ರಮಣಿಯನ್, ಮತ್ತು ಬಿ.ವಿ.ನಾಗರತ್ನ ಇದ್ದರು. ಇವರಲ್ಲಿ ನಾಗರತ್ನ ಅವರನ್ನು ಹೊರತು ಪಡಿಸಿ ಉಳಿದ ನಾಲ್ವರು ನೋಟ್‌ ಬ್ಯಾನ್‌ ಪರ ಬಹುಮತದ ತೀರ್ಪನ್ನು ಬರೆದರು. &nbsp;</p>


<div class="wp-block-image">
<figure class="aligncenter size-full is-resized"><img loading="lazy" decoding="async" width="670" height="419" src="https://peepalmedia.com/wp-content/uploads/2024/01/13queue9.jpg" alt="" class="wp-image-34300" style="width:563px;height:auto" srcset="https://peepalmedia.com/wp-content/uploads/2024/01/13queue9.jpg 670w, https://peepalmedia.com/wp-content/uploads/2024/01/13queue9-300x188.jpg 300w, https://peepalmedia.com/wp-content/uploads/2024/01/13queue9-150x94.jpg 150w" sizes="auto, (max-width: 670px) 100vw, 670px" /></figure></div>


<p>ಆರ್‌ಬಿಐ ಕಾಯಿದೆಯ ಸೆಕ್ಷನ್ 26 (2) ರ ಅಡಿಯಲ್ಲಿ ನೋಟ್‌ ಬ್ಯಾನ್‌ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ.  ಇದರ ಅಡಿಯಲ್ಲಿ ಆರ್‌ಬಿಐನ ಕೇಂದ್ರೀಯ ಮಂಡಳಿಯ ಶಿಫಾರಸಿನ ನಂತರ &#8220;ಯಾವುದೇ ಮುಖಬೆಲೆಯ ಯಾವುದೇ ಬ್ಯಾಂಕ್ ನೋಟುಗಳ ಕಾನೂನುಬದ್ಧ ಟೆಂಡರ್ ಅನ್ನು ನಿಲ್ಲಿಸಲು“  ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ  ಎಂದು <a href="https://www.livelaw.in/top-stories/any-means-all-supreme-court-says-centre-can-demonetise-all-series-of-bank-notes-invoking-section-262-of-rbi-act-217884" data-type="link" data-id="https://www.livelaw.in/top-stories/any-means-all-supreme-court-says-centre-can-demonetise-all-series-of-bank-notes-invoking-section-262-of-rbi-act-217884">ಬಹುಮತದ ತೀರ್ಪು ಹೇಳಿದೆ</a>. ಉದ್ದೇಶಕ್ಕೆ ಸಾಧಿಸಲು ಜಾರಿ ಮಾಡಿದ ಕ್ರಮಗಳನ್ನು ಪೂರೈಸಲು ಅದು ಪ್ರಯತ್ನಿಸಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.</p>



<p><strong><em>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</em></strong> <strong>: <a href="https://chat.whatsapp.com/BoGCVVQyXYVE5m7RhIQRWv" data-type="link" data-id="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>ನಕಲಿ ಕರೆನ್ಸಿ ನೋಟುಗಳು, ಕಪ್ಪುಹಣ, ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ಹೋಗುವುದನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ&nbsp; ಎಂದು ಕೇಂದ್ರ ಸರ್ಕಾರ ಹೇಳಿತ್ತು.</p>



<p style="font-size:20px"><strong>ಜಮ್ಮು-ಕಾಶ್ಮೀರ ಆರ್ಟಿಕಲ್‌ 370 ರದ್ದು &nbsp;</strong></p>



<p>ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು &nbsp;ರದ್ದು ಮಾಡಲು ಸುಪ್ರೀಂ ಕೋರ್ಟ್ ಡಿಸೆಂಬರ್ 11 ರಂದು ಸರ್ವಾನುಮತದ ತೀರ್ಪನ್ನು ನೀಡಿತ್ತು.</p>



<p>ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಸಂವಿಧಾನದಿಂದ ವಿನಾಯಿತಿ ನೀಡುತ್ತದೆ. ಅದು ತನ್ನದೇ ಆದ ಸಂವಿಧಾನವನ್ನು ರೂಪಿಸಲು ಅವಕಾಶ ನೀಡುತ್ತದೆ. ಕೇಂದ್ರ ಕಾನೂನುಗಳು ರಾಜ್ಯಕ್ಕೆ ಅನ್ವಯಿಸುವ ಬಗ್ಗೆಯೂ ಮಾತನಾಡುತ್ತದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="900" height="600" src="https://peepalmedia.com/wp-content/uploads/2024/01/img_119483_bgkashmir-rtx728u2.jpg" alt="" class="wp-image-34304" style="width:596px;height:auto" srcset="https://peepalmedia.com/wp-content/uploads/2024/01/img_119483_bgkashmir-rtx728u2.jpg 900w, https://peepalmedia.com/wp-content/uploads/2024/01/img_119483_bgkashmir-rtx728u2-300x200.jpg 300w, https://peepalmedia.com/wp-content/uploads/2024/01/img_119483_bgkashmir-rtx728u2-768x512.jpg 768w, https://peepalmedia.com/wp-content/uploads/2024/01/img_119483_bgkashmir-rtx728u2-150x100.jpg 150w, https://peepalmedia.com/wp-content/uploads/2024/01/img_119483_bgkashmir-rtx728u2-696x464.jpg 696w" sizes="auto, (max-width: 900px) 100vw, 900px" /><figcaption class="wp-element-caption">Indian security personnel stand guard along a deserted street during restrictions in Jammu, August 5, 2019. REUTERS/Mukesh Gupta &#8211; RC1BA0225360</figcaption></figure></div>


<p>ಸಂಸತ್ತಿನಲ್ಲಿ ಜಮ್ಮು ಕಾಶ್ಮೀರಕ್ಕೆ &nbsp;ರಕ್ಷಣೆ, ಬಾಹ್ಯ ವ್ಯವಹಾರಗಳು (external affairs) ಮತ್ತು ಸಂವಹನ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಹೊರತುಪಡಿಸಿ ಉಳಿದ ಕಾನೂನುಗಳನ್ನು ರಚಿಸಲು &nbsp;ರಾಜ್ಯ ಸರ್ಕಾರದ ಒಪ್ಪಿಗೆಯ ಅಗತ್ಯವಿತ್ತು.</p>



<p>ಭಾರತದ ಸಂವಿಧಾನದ ವಿವಿಧ ನಿಬಂಧನೆಗಳನ್ನು ಜಮ್ಮು ಕಾಶ್ಮೀರಕ್ಕೆ &nbsp;ಅನ್ವಯಿಸಲು 370 ನೇ ವಿಧಿಯು ರಾಷ್ಟ್ರಪತಿಗೆ ಅಧಿಕಾರ ನೀಡಿತು. ಅದಕ್ಕೂ ಮೊದಲು ರಾಷ್ಟ್ರಪತಿಗಳು &nbsp;ಜಮ್ಮು ಕಾಶ್ಮೀರ ಸರ್ಕಾರದ&nbsp; ಅನುಮತಿಯನ್ನು ತೆಗೆದುಕೊಳ್ಳಬೇಕು.</p>



<p>ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ, ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ ಎಲ್ಲಾ ನಿಬಂಧನೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಏಕಪಕ್ಷೀಯವಾಗಿ ಅನ್ವಯಿಸಬಹುದು ಮತ್ತು 370 ನೇ ವಿಧಿ ತಾತ್ಕಾಲಿಕವಾಗಿತ್ತು, ಈಗ ಅದು ರದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು.</p>



<p>ಆದರೂ &nbsp;ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆ, (Jammu and Kashmir Reorganisation Act) 2019 ರ ಮೂಲಕ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿಲ್ಲ. ಯಾಕೆಂದರೆ, ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಯ ಪ್ರಕಾರ ಕೇಂದ್ರಾಡಳಿತ ಪ್ರದೇಶದ ಘೋಷನೆ ತಾತ್ಕಾಲಿಕ. ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಮತ್ತೆ ನೀಡಲಾಗುವುದು ಎಂದು ಮೆಹ್ತಾ ಹೇಳಿದ್ದಾರೆ.</p>



<p style="font-size:20px"><strong>ಸಮಲಿಂಗೀಯ ವಿವಾಹಕ ಅಮಾನ್ಯ (ಸೇಮ್‌ ಸೆಕ್ಸ್‌ ಮ್ಯಾರೆಜ್)</strong></p>



<p>ಅಕ್ಟೋಬರ್ 17 ರಂದು ಭಾರತದಲ್ಲಿ ಸಮಲಿಂಗೀಯ ವಿವಾಹವನ್ನು ಕಾನೂನುಬದ್ಧಗೊಳಿಸುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತು.</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ನೇತೃತ್ವದ <a href="https://www.livelaw.in/top-stories/right-to-civil-union-adoption-transgender-persons-right-to-marry-where-supreme-court-bench-agreed-disagreed-in-marriage-equality-case-240420" data-type="link" data-id="https://www.livelaw.in/top-stories/right-to-civil-union-adoption-transgender-persons-right-to-marry-where-supreme-court-bench-agreed-disagreed-in-marriage-equality-case-240420">ಐವರು ನ್ಯಾಯಮೂರ್ತಿಗಳ ಪೀಠ</a>, &nbsp;ಕ್ವೀಯರ್ ಜೋಡಿಗಳ ನಡುವಿನ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯವು ವಿಶೇಷ ವಿವಾಹ ಕಾಯಿದೆಯನ್ನು (Special&nbsp; Marriage Act) ತಿರುಚಲು ಸಾಧ್ಯವಿಲ್ಲ ಎಂದು ಘೋಷಿಸಿತು. ಸಮಲಿಂಗೀ ವಿವಾಹಕ್ಕೆ ಕಾನೂನುಗಳನ್ನು ರೂಪಿಸುವ ಜವಬ್ದಾರಿಯನ್ನು ಸುಪ್ರೀಂ ಕೋರ್ಟ್‌ ಸಂಸತ್ತಿಗೆ ಬಿಟ್ಟಿದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="538" src="https://peepalmedia.com/wp-content/uploads/2024/01/187861-bpsreekphc-1678621432-1024x538.jpg" alt="" class="wp-image-34305" style="width:585px;height:auto" srcset="https://peepalmedia.com/wp-content/uploads/2024/01/187861-bpsreekphc-1678621432-1024x538.jpg 1024w, https://peepalmedia.com/wp-content/uploads/2024/01/187861-bpsreekphc-1678621432-300x158.jpg 300w, https://peepalmedia.com/wp-content/uploads/2024/01/187861-bpsreekphc-1678621432-768x403.jpg 768w, https://peepalmedia.com/wp-content/uploads/2024/01/187861-bpsreekphc-1678621432-150x79.jpg 150w, https://peepalmedia.com/wp-content/uploads/2024/01/187861-bpsreekphc-1678621432-696x365.jpg 696w, https://peepalmedia.com/wp-content/uploads/2024/01/187861-bpsreekphc-1678621432-1068x561.jpg 1068w, https://peepalmedia.com/wp-content/uploads/2024/01/187861-bpsreekphc-1678621432.jpg 1200w" sizes="auto, (max-width: 1024px) 100vw, 1024px" /></figure></div>


<p>ಪೀಠದಲ್ಲಿ ಡಿ.ವೈ. ಚಂದ್ರಚೂಡ್ ಮತ್ತು ಎಸ್.ಕೆ. ಕೌಲ್ &nbsp;ಗೇ, ಲೆಸ್ಬಿಯನ್‌ ಸೇರಿದಂತೆ ಹೆಟರೋ ಸೆಕ್ಸುವಲ್‌ (ಅಂದ್ರೆ, ಭಿನ್ನಲಿಂಗೀಯ) ಅಲ್ಲದ ಜೋಡಿಗಳ ʼಯೂನಿಯನ್-ದಾಂಪತ್ಯ) ರಚಿಸುವ ಹಕ್ಕನ್ನು ಎತ್ತಿಹಿಡಿದಿದ್ದಾರೆ. &nbsp;ಆದರೂ, ಈ ಪೀಠ ಸರ್ವಾನುಮತದಿಂದ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಮದುವೆಯನ್ನು ಕಾನೂನುಬದ್ದಗೊಳಿಸುವುದನ್ನು ಪ್ರತಿಪಾದಿಸಿದ್ದಾರೆ.</p>



<p style="font-size:20px"><strong>ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ಅಧಿಕಾರವಿದೆ</strong></p>



<p>ಮೇ 11 ರಂದು <a href="https://www.livelaw.in/top-stories/supreme-court-delhi-government-control-services-lieutenant-governor-democratically-elected-administration-will-people-228494" data-type="link" data-id="https://www.livelaw.in/top-stories/supreme-court-delhi-government-control-services-lieutenant-governor-democratically-elected-administration-will-people-228494">ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ</a>ವು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ತನ್ನ ಕಾರ್ಯಾಂಗ ಮತ್ತು ಶಾಸಕಾಂಗ ಅಧಿಕಾರವನ್ನು ವಿವಿಧ ಸೇವೆಗಳ ಅಧಿಕಾರಿಗಳ ಮೇಲೆ ಚಲಾಯಿಸಲು ಅನುಮತಿ ನೀಡಿತು. ಇದರಲ್ಲಿ ದೆಹಲಿ ಸರ್ಕಾರದಿಂದ ಅಲ್ಲದ, ಅಂದರೆ ಕೇಂದ್ರ ಸರ್ಕಾರದಿಂದ ನೇಮಕವಾದ ಅಧಿಕಾರಿಗಳೂ ಸೇರಿದ್ದಾರೆ.</p>



<p>ಇಲ್ಲಿ, ದೆಹಲಿ ಸರ್ಕಾರಕ್ಕೆ ಅಧಿಕಾರಿಗಳ ವರ್ಗವಣೆ, ಪೋಸ್ಟಿಂಗ್‌ ಮಾಡುವ ಅಧಿಕಾರವೂ ಸೇರಿದೆ. ಸೇವಾ ನಿಯಮಗಳನ್ನು ರೂಪಿಸುವುದು, &nbsp;ಶಾಸಕಾಂಗ ಸಭೆಯಲ್ಲಿ ಕಾನೂನನ್ನು ಅಂಗೀಕರಿಸುವುದು ಸೇರಿದಂತೆ ಆಡಳಿತದ ಉದ್ದೇಶಗಳಿಗಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳಲು ದೆಹಲಿ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="665" src="https://peepalmedia.com/wp-content/uploads/2024/01/Screenshot-2024-01-01-154456-1024x665.png" alt="" class="wp-image-34306" style="width:535px;height:auto" srcset="https://peepalmedia.com/wp-content/uploads/2024/01/Screenshot-2024-01-01-154456-1024x665.png 1024w, https://peepalmedia.com/wp-content/uploads/2024/01/Screenshot-2024-01-01-154456-300x195.png 300w, https://peepalmedia.com/wp-content/uploads/2024/01/Screenshot-2024-01-01-154456-768x499.png 768w, https://peepalmedia.com/wp-content/uploads/2024/01/Screenshot-2024-01-01-154456-150x97.png 150w, https://peepalmedia.com/wp-content/uploads/2024/01/Screenshot-2024-01-01-154456-696x452.png 696w, https://peepalmedia.com/wp-content/uploads/2024/01/Screenshot-2024-01-01-154456-1068x694.png 1068w, https://peepalmedia.com/wp-content/uploads/2024/01/Screenshot-2024-01-01-154456.png 1198w" sizes="auto, (max-width: 1024px) 100vw, 1024px" /></figure></div>


<p>ಇದಾಗಿ ಕೆಲವೇ ದಿನಗಳಲ್ಲಿ ಮೋದಿ ಸರ್ಕಾರವು ರಾಷ್ಟ್ರದ &nbsp;ರಾಜಧಾನಿಯಲ್ಲಿ ನಾಗರಿಕ ಸೇವೆಗಳ ಅಧಿಕಾರಿಗಳ &nbsp;ವರ್ಗಾವಣೆ ಮತ್ತು ಪೋಸ್ಟಿಂಗ್ ಅನ್ನು ನಿರ್ವಹಿಸಲು ಸುಪ್ರೀಂ ಕೋರ್ಟ್‌&nbsp; ಆದೇಶವನ್ನು ನಿರಾಕರಿಸಿ &nbsp;ಹೊಸ ಶಾಸನಬದ್ಧ ಪ್ರಾಧಿಕಾರವನ್ನು ರಚಿಸುವ ಸುಗ್ರೀವಾಜ್ಞೆಯನ್ನು ಹೊರಡಿಸಿತು.</p>



<p>ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವಾ ಪ್ರಾಧಿಕಾರ (NCCSA) ದೆಹಲಿಯ ಮುಖ್ಯಮಂತ್ರಿಯ ಅಡಿಯಲ್ಲಿ ಬರುತ್ತದೆ. ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಇದರ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಾರೆ.</p>



<p>ದೆಹಲಿ ಸರ್ಕಾರವು ಕೇಂದ್ರ ಹೊರಡಿಸಿದ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು. ಈ ಅರ್ಜಿಯನ್ನು ಜುಲೈ 20 ರಂದು ಮತ್ತೊಂದು ಸಾಂವಿಧಾನಿಕ ಪೀಠಕ್ಕೆ ಉಲ್ಲೇಖಿಸಲಾಯಿತು ನೀಡಲಾಗಿದೆ. ಅಂದಿನಿಂದ ಸುಗ್ರೀವಾಜ್ಞೆಯನ್ನು ಕಾಯಿದೆಯಾಗಿ ಔಪಚಾರಿಕವಾಗಿ ಜಾರಿಗೊಳಿಸಲಾಗಿದೆ.</p>



<p style="font-size:20px"><strong>ಮಹಾರಾಷ್ಟ್ರ ಬಿಕ್ಕಟ್ಟು</strong></p>



<p>ಶಿವಸೇನೆಯಲ್ಲಿ ಮಹಾರಾ಼ಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಹಿಂದಿನ ಮುಖ್ಯಮಂತ್ರಿ &nbsp;ಉದ್ಧವ್ ಠಾಕ್ರೆ ಅವರ ಗುಂಪುಗಳ ನಡುವೆ ಭಿನ್ನಾಭಿಪ್ರಾಯಗಳು ಎದ್ದು , ಕಳೆದ ವರ್ಷ ಮಹಾರಾಷ್ಟ್ರದ ರಾಜಕೀಯ ಪತನವಾದ ಮೇಲೆ <a href="https://www.livelaw.in/top-stories/shiv-sena-crisis-legislative-party-political-party-uddhav-thackeray-faction-supreme-court-eknath-shinde-222262" data-type="link" data-id="https://www.livelaw.in/top-stories/shiv-sena-crisis-legislative-party-political-party-uddhav-thackeray-faction-supreme-court-eknath-shinde-222262">ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠ</a>ವು ಮೇ ತಿಂಗಳಲ್ಲಿ&nbsp;ತೀರ್ಪೊಂದನ್ನು ನೀಡಿದೆ.</p>



<p>ಶಿಂಧೆ ತಮ್ಮ ಬಣದ ಪ್ರಾಬಲ್ಯವನ್ನು ಪ್ರತಿಪಾದಿಸಲು ಪಕ್ಷದಿಂದ ದೂರ ಸರಿದು , ಜುಲೈ 2022 ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಸಿಎಂ ಆದರು.</p>



<p><strong><em>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</em></strong> <strong>: <a href="https://chat.whatsapp.com/BoGCVVQyXYVE5m7RhIQRWv" data-type="link" data-id="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>ಜೂನ್ 2022 ರಲ್ಲಿ, ಶಿವಸೇನೆಯಲ್ಲಿ ಬಂಡಾಯ ಎದ್ದಾಗ ವಿಧಾನ ಪರಿಷತ್ತಿನ ಸದಸ್ಯರ ಚುನಾವಣೆಯ ಸಂದರ್ಭದಲ್ಲಿ ಮತ ಚಲಾಯಿಸುವಾಗ ಪಕ್ಷದ ವಿಪ್ ವಿರುದ್ಧ ನಡೆದುಕೊಂಡದಕ್ಕಾಗಿ ಉಪಸಭಾಪತಿ ಶಿಂಧೆ ಬಣಕ್ಕೆ ಅನರ್ಹತೆಯ ನೋಟೀಸ್ ನೀಡಿದರು. ಶಿಂಧೆ ಮತ್ತು ಇತರ 15 ಶಾಸಕರ ವಿರುದ್ಧ ಅನರ್ಹತೆ ನೋಟಿಸ್ ಜಾರಿ ಮಾಡಲಾಗಿದ್ದು, ಜೂನ್ 27 ರಂದು ಸಂಜೆ 5.30 ರೊಳಗೆ ಉಪಸಭಾಪತಿಯ ಮುಂದೆ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸಬೇಕಾಗಿತ್ತು.</p>



<p>ಈ ನೋಟೀಸನ್ನು ಶಿಂಧೆ ಬಣ ಪ್ರಶ್ನಿಸಿ, ಉಪಸಭಾಪತಿ ಅವರು ಅನರ್ಹತೆ ಅರ್ಜಿಗಳನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="900" height="600" src="https://peepalmedia.com/wp-content/uploads/2024/01/1683730419_newshivsenabattle.jpg" alt="" class="wp-image-34307" style="width:597px;height:auto" srcset="https://peepalmedia.com/wp-content/uploads/2024/01/1683730419_newshivsenabattle.jpg 900w, https://peepalmedia.com/wp-content/uploads/2024/01/1683730419_newshivsenabattle-300x200.jpg 300w, https://peepalmedia.com/wp-content/uploads/2024/01/1683730419_newshivsenabattle-768x512.jpg 768w, https://peepalmedia.com/wp-content/uploads/2024/01/1683730419_newshivsenabattle-150x100.jpg 150w, https://peepalmedia.com/wp-content/uploads/2024/01/1683730419_newshivsenabattle-696x464.jpg 696w" sizes="auto, (max-width: 900px) 100vw, 900px" /></figure></div>


<p>ಜೂನ್ 2022 ರಲ್ಲಿ, ನ್ಯಾಯಾಲಯವು ಈ ಬಣಕ್ಕೆ <a href="https://www.thehindu.com/news/national/sc-gives-sena-rebels-time-till-july-12-to-respond-to-disqualification-notice-for-defection/article65570536.ece" data-type="link" data-id="https://www.thehindu.com/news/national/sc-gives-sena-rebels-time-till-july-12-to-respond-to-disqualification-notice-for-defection/article65570536.ece">ಮಧ್ಯಂತರ ಪರಿಹಾರವ</a>ನ್ನು (interim relief) ನೀಡಿ, ಅನರ್ಹತೆಯ ನೋಟೀಸ್‌ಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವ ಸಮಯಾವಧಿಯನ್ನು ಜುಲೈ 12 ರವರೆಗೆ ವಿಸ್ತರಿಸಿತು.</p>



<p>ಎರಡು ದಿನಗಳ ನಂತರ, ವಿಧಾನಸಭೆಯಲ್ಲಿ ವಿಶ್ವಾಸಮತ ಕರೆಯಲು ಆಗಿನ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಸುಪ್ರೀಂ ಕೋರ್ಟ್‌ ತಿಳಿಸಿತು.</p>



<p>ಠಾಕ್ರೆ ಬಣವು ತಮ್ಮ ಬಣದ ನಾಮನಿರ್ದೇಶಿತರ ಬದಲಿಗೆ ಲೋಕಸಭೆಯಲ್ಲಿ ಶಿಂಧೆ ಬಣದ ಹೊಸ ನಾಯಕ ಮತ್ತು ಮುಖ್ಯ ಸಚೇತಕರನ್ನು ಗುರುತಿಸುವ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ<a href="https://timesofindia.indiatimes.com/india/uddhav-faction-moves-sc-against-speakers-decision-on-new-shiv-sena-leader-in-ls/articleshow/93172203.cms" data-type="link" data-id="https://timesofindia.indiatimes.com/india/uddhav-faction-moves-sc-against-speakers-decision-on-new-shiv-sena-leader-in-ls/articleshow/93172203.cms"> ಠಾಕ್ರೆ ಬಣವು ನ್ಯಾಯಾಲಯದಲ್ಲಿ </a>ಹೊಸ ಅರ್ಜಿಯನ್ನು ಸಲ್ಲಿಸಿತು.</p>



<p>ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠವು ಮೇ 2023 ರಲ್ಲಿ ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಅವರಿಗೆ ಅವಿಭಜಿತ ಶಿವಸೇನೆಯಲ್ಲಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಮಹಜರು ಪರೀಕ್ಷೆಯನ್ನು ಎದುರಿಸಲು ಹೇಳವುದು &#8220;ಸಮರ್ಥನೀಯ&#8221; ಇಲ್ಲ ಎಂದು ತೀರ್ಪು ನೀಡಿತು. ಆಂತರಿಕ ಪಕ್ಷದ ವಿವಾದಗಳನ್ನು ಪರಿಹರಿಸಲು ಫ್ಲೋರ್‌ ಟೆಸ್ಟ್‌ ಅನ್ನು ಮಾಧ್ಯಮವಾಗಿ ಬಳಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಪ್ರತಿಪಾದಿಸಿತು ಮತ್ತು. &nbsp;ಏಕನಾಥ್ ಶಿಂಧೆ ಬಣದಿಂದ ವಿಪ್ ಅನ್ನು ನೇಮಿಸುವ ಸ್ಪೀಕರ್ ಅವರ ನಿರ್ಧಾರವು &#8220;ಕಾನೂನಿಗೆ ವಿರುದ್ಧವಾಗಿದೆ&#8221; ಎಂದು ಹೇಳಿದೆ.</p>



<p>ಆದರೂ, ಠಾಕ್ರೆ ಅವರು ಮಹತ್ತರ ಪರೀಕ್ಷೆಯನ್ನು ಎದುರಿಸದ ಕಾರಣ ಮತ್ತು 29 ಜೂನ್ 2022 ರಂದು ರಾಜೀನಾಮೆ ಸಲ್ಲಿಸಿದ ಕಾರಣ ಪೀಠವು ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮತ್ತೆ ಮಾಡಲಿಲ್ಲ. ಶಿಂಧೆ ಬಣವನ್ನು ಸೇರಿದ ಶಾಸಕರ ಅನರ್ಹತೆ ಕುರಿತು ತೀರ್ಮಾನಿಸುವಂತೆ ವಿಧಾನಸಭಾ ಸ್ಪೀಕರ್‌ಗೆ ನ್ಯಾಯಾಲಯ ಸೂಚಿಸಿದೆ.</p>



<p style="font-size:20px"><strong>ರಾಜ್ಯಪಾಲರ ಅಧಿಕಾರಗಳು</strong></p>



<p>2023 ರಲ್ಲಿ ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರದಿಂದ ನೇಮಿಸಲ್ಪಟ್ಟ ಅನೇಕ ರಾಜ್ಯಪಾಲರು ಗುಡ್ಡಾಟಕ್ಕೆ ಇಳಿದಿದ್ದರು. ರಾಜ್ಯ ಶಾಸಕಾಂಗವು ಅಂಗೀಕರಿಸಿದ ನಿರ್ಣಾಯಕ ಮಸೂದೆಗಳಿಗೆ ರಾಜ್ಯಪಾಲರು ತಮ್ಮ ಒಪ್ಪಿಗೆಯನ್ನು ನೀಡದಿರುವುದು ಅನೇಕ ವಿವಾದಗಳಿಗೆ ಕಾರಣವಾಗಿದೆ.</p>



<p>ರಾಜ್ಯಪಾಲರು ಮಸೂದೆಗೆ ಒಪ್ಪಿಗೆಯನ್ನು ನೀಡದೇ ಇದ್ದರೆ, ಅವರು ಅದನ್ನು ಮರುಪರಿಶೀಲನೆಗಾಗಿ ಶಾಸಕಾಂಗಕ್ಕೆ ಹಿಂದಿರುಗಿಸಬೇಕು ಎಂದು ನವೆಂಬರ್‌ನಲ್ಲಿ <a href="https://www.livelaw.in/supreme-court/governor-must-return-bill-to-assembly-on-withholding-assent-supreme-court-242884" data-type="link" data-id="https://www.livelaw.in/supreme-court/governor-must-return-bill-to-assembly-on-withholding-assent-supreme-court-242884">ಸುಪ್ರೀಂ ಕೋರ್ಟ್ </a>ಹೇಳಿತು. ಪಂಜಾಬ್ ಸರ್ಕಾರ ಮತ್ತು ರಾಜ್ಯಪಾಲರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ತೀರ್ಪು ನೀಡಿದೆ.</p>



<p><strong><em>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</em></strong> <strong>: <a href="https://chat.whatsapp.com/BoGCVVQyXYVE5m7RhIQRWv" data-type="link" data-id="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>ಸಂವಿಧಾನದ ಪ್ರಕಾರ, ರಾಜ್ಯ ಶಾಸಕಾಂಗವು ಮಸೂದೆಯನ್ನು ಅಂಗೀಕರಿಸಿದಾಗ, ಅದನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ನಂತರ ರಾಜ್ಯಪಾಲರಿಗೆ ನಾಲ್ಕು ಆಯ್ಕೆಗಳಿವೆ: ಅವರು ಮಸೂದೆಗೆ ತಮ್ಮ ಒಪ್ಪಿಗೆಯನ್ನು ನೀಡಬಹುದು, ಆ ನಂತರ ಅದು ಕಾನೂನಾಗಿ ಬದಲಾಗುತ್ತದೆ, ಅಥವಾ ಅವರು ತಮ್ಮ ಒಪ್ಪಿಗೆಯನ್ನು ತಡೆಹಿಡಿಯಬಹುದು ಅಥವಾ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸಬಹುದು ಅಥವಾ ಅವರು ಮರುಪರಿಶೀಲನೆಗಾಗಿ ಮಸೂದೆಯನ್ನು ರಾಜ್ಯ ಶಾಸಕಾಂಗಕ್ಕೆ ಮತ್ತೆ ಕೊಡಬಹುದು.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="600" height="450" src="https://peepalmedia.com/wp-content/uploads/2024/01/ANI-20230410080259.jpg" alt="" class="wp-image-34308" style="width:504px;height:auto" srcset="https://peepalmedia.com/wp-content/uploads/2024/01/ANI-20230410080259.jpg 600w, https://peepalmedia.com/wp-content/uploads/2024/01/ANI-20230410080259-300x225.jpg 300w, https://peepalmedia.com/wp-content/uploads/2024/01/ANI-20230410080259-150x113.jpg 150w" sizes="auto, (max-width: 600px) 100vw, 600px" /><figcaption class="wp-element-caption"><strong>ಗವರ್ನರ್‌ ವಿರುದ್ಧ ತಮಿಳುನಾಡು ಸರ್ಕಾರದಿಂದ ರೆಸಲ್ಯೂಷನ್</strong></figcaption></figure></div>


<p>ಒಂದು ಮಸೂದೆಯು ತಮ್ಮ ಅಧಿಕಾರಕ್ಕೆ ಅಥವಾ ಸುಪ್ರೀಂ ಕೋರ್ಟಿನ ಸ್ಥಾನಮಾನಕ್ಕೆ ಸ್ಥಾನಕ್ಕೆ ಅಪಾಯವನ್ನುಂಟುಮಾಡಿದಾಗ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಬೇಕು ಎಂದು ಸಂವಿಧಾನವು ಸ್ಪಷ್ಟವಾಗಿ ಹೇಳಿದೆ.</p>



<p>ಆದರೆ, ವಿಧೇಯಕವನ್ನು ಶಾಸಕಾಂಗಕ್ಕೆ ಹಿಂತಿರುಗಿಸಿ, ನಂತರ ಮತ್ತೆ ರಾಜ್ಯಪಾಲರಿಗೆ ಸಲ್ಲಿಸಿದರೆ ರಾಜ್ಯಪಾಲರು ಒಪ್ಪಿಗೆ ನೀಡುವುದು ಕಡ್ಡಾಯ.</p>



<p>ಮಸೂದೆಯನ್ನು ಪರಿಗಣಿಸುವಾಗ ರಾಜ್ಯಪಾಲರು ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬುದರ ಕುರಿತು ಯಾವುದೇ ಟೈಮ್‌ಲೈನ್ ಇಲ್ಲದಿದ್ದರೂ, ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ <a href="https://main.sci.gov.in/supremecourt/2023/44896/44896_2023_1_19_48220_Judgement_10-Nov-2023.pdf" data-type="link" data-id="https://main.sci.gov.in/supremecourt/2023/44896/44896_2023_1_19_48220_Judgement_10-Nov-2023.pdf">ಸಂವಿಧಾನದ 200 ನೇ ವಿಧಿಯ ನಿಬಂಧನೆಯಲ್ಲಿರುವಂತೆ</a> “ಸಾಧ್ಯವಾದಷ್ಟು ಬೇಗ”ರಾಜ್ಯಪಾಲರು ಮಸೂದೆ ಶಾಸಕಾಂಗದಿಂದ ಬಂದ ತಕ್ಷಣ ತಮ್ಮ ಒಪ್ಪಿಗೆಯನ್ನು ನೀಡುವುದು ಕಡ್ಡಾಯ ಎಂದು ಪ್ರತಿಪಾದಿಸಿದೆ.</p>



<p style="font-size:20px"><strong>ಮುಖ್ಯ ಚುನಾವಣಾ ಆಯುಕ್ತರ ನೇಮಕ </strong></p>



<p>2023ರ ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಂವಿಧಾನಿಕ ಪೀಠವು ಭಾರತದ ಚುನಾವಣಾ ಆಯೋಗದ (EC) ಸದಸ್ಯರನ್ನು ನೇಮಿಸುವ ಪ್ರಕ್ರಿಯೆಯನ್ನು ಬದಲಾಯಿಸಿದೆ. ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಚುನಾವಣಾ ಆಯೋಗದ ಸದಸ್ಯರ ನೇಮಕಾತಿಗಳ ಕುರಿತು ರಾಷ್ಟ್ರಪತಿಗಳಿಗೆ ಸಲಹೆ ನೀಡಲಿದೆ ಎಂದು ನ್ಯಾಯಾಲಯ ಹೇಳಿದೆ. ಇ.ಸಿಯ ಸದಸ್ಯರನ್ನು ಕೇಂದ್ರ ನೇಮಕ ಮಾಡುವ ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 2015ರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹೂಡಲಾಗಿತ್ತು. ಈ ಹಿನ್ನಲೆಯಲ್ಲಿ ತೀರ್ಪು ನೀಡಲಾಗಿದೆ.‌</p>


<div class="wp-block-image">
<figure class="aligncenter size-full is-resized"><img loading="lazy" decoding="async" width="900" height="500" src="https://peepalmedia.com/wp-content/uploads/2024/01/1615829572_16eci_5c.jpg" alt="" class="wp-image-34309" style="width:518px;height:auto" srcset="https://peepalmedia.com/wp-content/uploads/2024/01/1615829572_16eci_5c.jpg 900w, https://peepalmedia.com/wp-content/uploads/2024/01/1615829572_16eci_5c-300x167.jpg 300w, https://peepalmedia.com/wp-content/uploads/2024/01/1615829572_16eci_5c-768x427.jpg 768w, https://peepalmedia.com/wp-content/uploads/2024/01/1615829572_16eci_5c-150x83.jpg 150w, https://peepalmedia.com/wp-content/uploads/2024/01/1615829572_16eci_5c-696x387.jpg 696w" sizes="auto, (max-width: 900px) 100vw, 900px" /></figure></div>


<p>ಆದಾಗ್ಯೂ, ತೀರ್ಪನ್ನು ರದ್ದುಗೊಳಿಸುವ ಸಲುವಾಗಿ, ಕೇಂದ್ರ ಸರ್ಕಾರವು 2023 ರ ಆಗಸ್ಟ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ <a href="https://prsindia.org/files/bills_acts/bills_parliament/2023/Bill_Text_Chief_Election_Commissioner_and_other_Election_Commissioners_Bill_2023.pdf" data-type="link" data-id="https://prsindia.org/files/bills_acts/bills_parliament/2023/Bill_Text_Chief_Election_Commissioner_and_other_Election_Commissioners_Bill_2023.pdf">ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ 2023</a> ಅನ್ನು ಪರಿಚಯಿಸಿತು. ಈ ಮಸೂದೆಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಸದಸ್ಯರನ್ನು ಪ್ರಧಾನ ಮಂತ್ರಿ, ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಒಳಗೊಂಡ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ . ಹಿಂದೆ ಸಮಿತಿಯಲ್ಲಿ ಇದ್ದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲಾಗಿದೆ. ಇದು ಡಿಸೆಂಬರ್‌ನಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿತು.</p>



<p style="font-size:20px"><strong>ಮರಣ ಇಚ್ಚೆಗೊಂದು ವಿಲ್</strong></p>



<p>ಲಿವಿಂಗ್ ವಿಲ್ &nbsp;ಪರಿಕಲ್ಪನೆಯನ್ನು ಭಾರತದಲ್ಲಿ ಮಾರ್ಚ್ 2018 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಪರಿಚಯಿಸಲಾಯಿತು. ಲಿವಿಂಗ್ ವಿಲ್ ಎನ್ನುವುದು ಸಾವಿನ ಕ್ಷಣಗಳನ್ನು ಎಣಿಸುತ್ತಿರುವ, ಆರೋಗ್ಯ ಸರಿಯಾಗುವ ಯಾವುದೇ ಲಕ್ಷಣಗಳು ಇಲ್ಲದೇ ಇದ್ದಾಗ ಆ ವ್ಯಕ್ತಿಯ ಇಚ್ಚೆಯಂತೆ ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸಲು ಆ ವ್ಯಕ್ತಿ ಮುಂಚಿತವಾಗಿ ಹೇಳುವ ದಾಖಲೆ. ಈ ದಾಖಲೆಯ ಮೂಲಕ ತಾನು ಮಾತನಾಡಲು ಸಾಧ್ಯವಾಗದೇ ಇದ್ದಾಗ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆಯನ್ನು ನಿಲ್ಲಿಸಲು ಆತ&nbsp; ತನ್ನ ಇಚ್ಚೆಯನ್ನು ಮೊದಲೇ ಹೇಳುತ್ತಾನೆ. &nbsp;ಖಚಿತಪಡಿಸುತ್ತದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="683" src="https://peepalmedia.com/wp-content/uploads/2024/01/living-will-1024x683.jpg" alt="" class="wp-image-34310" style="width:473px;height:auto" srcset="https://peepalmedia.com/wp-content/uploads/2024/01/living-will-1024x683.jpg 1024w, https://peepalmedia.com/wp-content/uploads/2024/01/living-will-300x200.jpg 300w, https://peepalmedia.com/wp-content/uploads/2024/01/living-will-768x512.jpg 768w, https://peepalmedia.com/wp-content/uploads/2024/01/living-will-150x100.jpg 150w, https://peepalmedia.com/wp-content/uploads/2024/01/living-will-696x464.jpg 696w, https://peepalmedia.com/wp-content/uploads/2024/01/living-will-1068x712.jpg 1068w, https://peepalmedia.com/wp-content/uploads/2024/01/living-will.jpg 1200w" sizes="auto, (max-width: 1024px) 100vw, 1024px" /></figure></div>


<p>2018 ರ ತೀರ್ಪು ಘನತೆಯಿಂದ ಸಾಯುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಿದೆ ಮತ್ತು ಭವಿಷ್ಯದಲ್ಲಿ ಮಾರಣಾಂತಿಕವಾಗಿ ಅನಾರೋಗ್ಯ ಪೀಡಿತ ರೋಗಿಗಳಿಗೆ ವೈದ್ಯಕೀಯ ನಿರ್ದೇಶನದ ಮೂಲಕ ಈ &nbsp;ಹಕ್ಕನ್ನು ಜಾರಿಗೊಳಿಸಲು ಮಾರ್ಗಸೂಚಿಗಳನ್ನು ಹಾಕಿದೆ.</p>



<p>2023ರ ಜನವರಿ 24 ರಂದು, ಸುಪ್ರೀಂ ಕೋರ್ಟ್ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಮಾರ್ಪಡಿಸುವ ಮೂಲಕ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಮುಂಗಡ ನಿರ್ದೇಶನವನ್ನು ಅನುಷ್ಠಾನಗೊಳಿಸುವಲ್ಲಿ ಹಿಂದೆ ಇದ್ದ ಮ್ಯಾಜಿಸ್ಟ್ರೇಟ್‌ನ ಪಾತ್ರವನ್ನು ಅದು ತೆಗೆದುಹಾಕಿದೆ. ಜೀವ ಉಳಿಸುತ್ತಿರುವ ವೈದ್ಯಕೀಯ ವ್ಯವಸ್ಥೆಯನ್ನು ಹಿಂಪಡೆಯಲು ಇರುವ ವೈದ್ಯಕೀಯ ಮಂಡಳಿಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಮಂಡಳಿಗಳಿಗೆ ಸಮಯ ಮಿತಿಗಳನ್ನು ನಿಗದಿಪಡಿಸಿದೆ.</p>



<p style="font-size:20px"><strong>ಕಾಶಿ ವಿಶ್ವನಾಥ ದೇವಸ್ಥಾನ-ಗ್ಯಾನವಾಪಿ ಮಸೀದಿ ತೀರ್ಪು</strong></p>



<p>ಡಿಸೆಂಬರ್ 19 ರಂದು, ಅಲಹಾಬಾದ್ ಹೈಕೋರ್ಟ್ ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿ ಸಮಿತಿಯ ಐದು ಅರ್ಜಿಗಳನ್ನು ವಜಾಗೊಳಿಸಿತು.&nbsp; 1991 ರಲ್ಲಿ ವಾರಣಾಸಿ ಮಸೀದಿಯ ಮೇಲೆ ಹೂಡಲಾದ ಮೊಕದ್ದಮೆಯನ್ನು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯ (Places of Worship (Special Provisions) Act) 1991 ನಿಬಂಧನೆಗಳ ಅಡಿಯಲ್ಲಿ ನಿರ್ಬಂಧಿಸಲಾಗಿಲ್ಲ ಎಂದು ಪ್ರತಿಪಾದಿಸಿದೆ.&nbsp;</p>



<p>ಈ ಪ್ರಕರಣದ ಮೂಲ ಮೊಕದ್ದಮೆಯನ್ನು 1991 ರಲ್ಲಿ ಭಕ್ತರು &#8216;ಸ್ವಯಂಭು ಭಗವಾನ್ ವಿಶ್ವೇಶ್ವರ&#8217; ದೇವರ ಹೆಸರಿನಲ್ಲಿ ಸಲ್ಲಿಸಿದರು.&nbsp; ಅವರು &#8220;ತಮ್ಮ ದೇವಾಲಯವನ್ನು ನವೀಕರಿಸಲು ಮತ್ತು ಪುನರ್ನಿರ್ಮಿಸಲು&#8221; ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಏಕೆಂದರೆ ದೇವಾಲಯದ ಸ್ಥಳದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ &nbsp;ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂಬುದು ಅವರ ವಾದವಾಗಿತ್ತು.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="797" height="499" src="https://peepalmedia.com/wp-content/uploads/2024/01/Screenshot-2024-01-01-155056.png" alt="" class="wp-image-34311" style="width:511px;height:auto" srcset="https://peepalmedia.com/wp-content/uploads/2024/01/Screenshot-2024-01-01-155056.png 797w, https://peepalmedia.com/wp-content/uploads/2024/01/Screenshot-2024-01-01-155056-300x188.png 300w, https://peepalmedia.com/wp-content/uploads/2024/01/Screenshot-2024-01-01-155056-768x481.png 768w, https://peepalmedia.com/wp-content/uploads/2024/01/Screenshot-2024-01-01-155056-150x94.png 150w, https://peepalmedia.com/wp-content/uploads/2024/01/Screenshot-2024-01-01-155056-696x436.png 696w" sizes="auto, (max-width: 797px) 100vw, 797px" /></figure></div>


<p>ಈ ಮೊಕದ್ದಮೆ ಬಾಕಿ ಇರುವಾಗ, ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ, ಅಂಜುಮನ್ ಇಂತೇಜಾಮಿಯಾ ಮಸೀದಿ, 1998 ರಲ್ಲಿ ಅಲಹಾಬಾದ್ ಹೈಕೋರ್ಟ್‌ನಿಂದ ವಿಚಾರಣೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಯಿತು. ಅಂತಹ ದಾವೆಯನ್ನು ಪೂಜಾ ಸ್ಥಳಗಳ ಕಾಯಿದೆಯ ನಿಬಂಧನೆಗಳಿಂದ ನಿರ್ಬಂಧಿಸಲಾಗಿದೆ ಎಂದು ಸಮಿತಿಯು ಆರೋಪಿಸಿತ್ತು. ಈ ಕಾಯಿದೆ 1947 ರ ಆಗಸ್ಟ್ 15 ರಂದು ಇದ್ದಂತ ಪೂಜಾ ಸ್ಥಳಗಳನ್ನು ಅದೇ &nbsp;ಸ್ವರೂಪದಲ್ಲಿ ಉಳಿಸುತ್ತದೆ.</p>



<p>ಈ ತಡೆಯಾಜ್ಞೆ ಮುಂದಿನ ಎರಡು ದಶಕಗಳವರೆಗೆ ಮುಂದುವರಿಯಿತು. ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಒಂದು ತಿಂಗಳ ನಂತರ, ಡಿಸೆಂಬರ್ 2019 ರಲ್ಲಿ  ಇನ್ನೊಂದು ಅರ್ಜಿ ಸಲ್ಲಿಸಿ ವಿವಾದಿತ ಸ್ಥಳದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಸರ್ವೇ ನಡೆಸಬೇಕು ಎಂದು ಒತ್ತಾಯಿಸಲಾಯಿತು.</p>



<p><strong><em>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ</em></strong> <strong>: <a href="https://chat.whatsapp.com/BoGCVVQyXYVE5m7RhIQRWv" data-type="link" data-id="https://chat.whatsapp.com/BoGCVVQyXYVE5m7RhIQRWv"><em>ಪೀಪಲ್‌ ಮೀಡಿಯಾ</em></a></strong></p>



<p>1998 ರ ಹೈಕೋರ್ಟ್ ತಡೆಯಾಜ್ಞೆಯ ಹೊರತಾಗಿಯೂ, ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಅಶುತೋಷ್ ತಿವಾರಿ ಅವರು ಏಪ್ರಿಲ್ 2021 ರಲ್ಲಿ ಜ್ಞಾನವಾಪಿ ಸಂಕೀರ್ಣದಲದಲ್ಲಿ ಎಎಸ್‌ಐಗೆ ಸಮೀಕ್ಷೆ ನಡೆಸಲು ಅನುಮತಿ ನೀಡಿದರು.</p>



<p>ಅಲಹಾಬಾದ್ ಹೈಕೋರ್ಟ್ ಮತ್ತೆ ಸಿವಿಲ್ ನ್ಯಾಯಾಧೀಶರ ಆದೇಶವನ್ನು ಟೀಕಿಸಿತು. 2021 ರ ಸೆಪ್ಟೆಂಬರ್ 9 ರಂದು ಈ ಅನುಮತಿಯನ್ನು ತಡೆಹಿಡಿಯಿತು. ಅಲಹಾಬಾದ್ ಹೈಕೋರ್ಟ್ ಈಗ ಈ ಮೊಕದ್ದಮೆಯನ್ನು 1991 ರ ಕಾನೂನಿನಿಂದ ತಡೆಯುವುದಿಲ್ಲ ಎಂದು ತೀರ್ಪು ನೀಡಿದೆ ಮತ್ತು ಪ್ರಕರಣವನ್ನು ವಾರಣಾಸಿ ಸಿವಿಲ್ ಜಡ್ಜ್‌ ಕೋರ್ಟ್‌ ವಿಚಾರಣೆ ನಡೆಸುತ್ತದೆ. ಆರು ತಿಂಗಳೊಳಗೆ &#8220;ವಿಚಾರವನ್ನು ತ್ವರಿತವಾಗಿ ಮುಂದುವರಿಸಿ, ಪ್ರಕ್ರಿಯೆಗಳನ್ನು ಮುಗಿಸಲು&#8221; &nbsp;ನಿರ್ದೇಶನ ನೀಡಿದೆ.</p>



<p style="font-size:20px"><strong>ಬರಿಗೈಯಲ್ಲಿ ಚರಂಡಿ ಸ್ವಚ್ಛಗೊಳಿಸುವುದು ನಿಲ್ಲಲಿ (ಮ್ಯಾನುಯಲ್ ಸ್ಕ್ಯಾವೆಂಜಿಂಗ್)</strong></p>



<p>2023ರ ಅಕ್ಟೋಬರ್‌ನಲ್ಲಿ, ಕೇಂದ್ರ ಮತ್ತು ರಾಜ್ಯಗಳು &#8220;ಕೈಯಿಂದ ಕಸ ಎತ್ತುವುದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದನ್ನು ಖಚಿತಪಡಿಸಿಕೊಂಡು ಕರ್ತವ್ಯಕ್ಕೆ ಬದ್ಧವಾಗು”ವಂತೆ &nbsp;<a href="https://scourtapp.nic.in/supremecourt/2020/4072/4072_2020_8_1502_47917_Judgement_20-Oct-2023.pdf" data-type="link" data-id="https://scourtapp.nic.in/supremecourt/2020/4072/4072_2020_8_1502_47917_Judgement_20-Oct-2023.pdf">ಸುಪ್ರೀಂ ಕೋರ್ಟ್ ತಿಳಿಸಿದೆ.</a></p>



<p>&#8220;ನಾವು ಎಲ್ಲರೂ ಈ ಸಮುದಾಯಕ್ಕೆ ಋಣಿಯಾಗಿದ್ದೇವೆ. ಅವರು ಯಾರಿಗೂ ಕಾಣದಂತೆ, ಅವರ ದನಿ ಯಾರಿಗೂ ಕೇಳದಂತೆ, ಮೌನವಾಗಿ, ಬಂಧನದಲ್ಲಿ, ವ್ಯವಸ್ಥಿತವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಸಿಲುಕಿದ್ದಾರೆ,&#8221; ಎಂದು ಹೇಳಿರುವ ಸುಪ್ರೀಂ ಕೋರ್ಟ್‌ ಹಲವಾರು ನಿರ್ದೇಶನಗಳನ್ನು ನೀಡಿದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="774" src="https://peepalmedia.com/wp-content/uploads/2024/01/r-1024x774.png" alt="" class="wp-image-34312" style="width:449px;height:auto" srcset="https://peepalmedia.com/wp-content/uploads/2024/01/r-1024x774.png 1024w, https://peepalmedia.com/wp-content/uploads/2024/01/r-300x227.png 300w, https://peepalmedia.com/wp-content/uploads/2024/01/r-768x581.png 768w, https://peepalmedia.com/wp-content/uploads/2024/01/r-150x113.png 150w, https://peepalmedia.com/wp-content/uploads/2024/01/r-696x526.png 696w, https://peepalmedia.com/wp-content/uploads/2024/01/r-1068x808.png 1068w, https://peepalmedia.com/wp-content/uploads/2024/01/r.png 1145w" sizes="auto, (max-width: 1024px) 100vw, 1024px" /></figure></div>


<p>ಒಳಚರಂಡಿ ಶುಚಿಗೊಳಿಸುವಾಗ ಸಾಯುವವರಿಗೆ ನೀಡುವ ಪರಿಹಾರವನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲು, ಅಂಗವೈಕಲ್ಯದಿಂದ ಬಳಲುತ್ತಿರುವ ಒಳಚರಂಡಿ ಸಂತ್ರಸ್ತರಿಗೆ ಕನಿಷ್ಠ ಪರಿಹಾರವನ್ನು 10 ಲಕ್ಷ ರುಪಾಯಿಗೆ ಹೆಚ್ಚಿಸಲು ಆದೇಶ ನೀಡಿದೆ. &nbsp;ಕೈಯಿಂದ ಒಳಚರಂಡಿ ಸ್ವಚ್ಚಗೊಳಿಸುವುದನ್ನು ಹಂತಹಂತವಾಗಿ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.</p>
]]></content:encoded>
					
		
		
			</item>
	</channel>
</rss>
