<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Niranjanaradhya.V.P. &#8211; Peepal Media</title>
	<atom:link href="https://peepalmedia.com/tag/niranjanaradhya-v-p/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 22 Jul 2023 11:51:06 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Niranjanaradhya.V.P. &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಪಠ್ಯಕ್ರಮದಲ್ಲಿ ಸಂಸ್ಕೃತ-ಅರೇಬಿಕ್: ಬಹಿರಂಗ ಪತ್ರದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಕಳವಳ</title>
		<link>https://peepalmedia.com/sanskrit-arabic-in-the-syllabus/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 22 Jul 2023 11:47:51 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[madhu bangarappa]]></category>
		<category><![CDATA[Niranjanaradhya.V.P.]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=24195</guid>

					<description><![CDATA[&#8220;ಜಾತ್ಯತೀತ ಮತ್ತು ಧರ್ಮನಿರಪೇಕ್ಷ ಕೇಂದ್ರಗಳಾದ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅವಶ್ಯಕತೆ ಮತ್ತು ಔಚಿತ್ಯವಾದರೂ ಏನು!&#8221; ಎನ್ನುವ ಮೂಲಕ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ಅವರು ಪ್ರಸ್ತುತ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರಂಜನಾರಾಧ್ಯ ಅವರು ಸರ್ಕಾರಿ ಶಾಲೆಗಳ ಶಾಲಾ ಪಠ್ಯಕ್ರಮ ಮತ್ತು ಶಾಲೆಗಳಲ್ಲಿನ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಬರೆದ ಬಹಿರಂಗ ಪತ್ರದಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. [&#8230;]]]></description>
										<content:encoded><![CDATA[
<p>&#8220;ಜಾತ್ಯತೀತ ಮತ್ತು ಧರ್ಮನಿರಪೇಕ್ಷ ಕೇಂದ್ರಗಳಾದ ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅವಶ್ಯಕತೆ ಮತ್ತು ಔಚಿತ್ಯವಾದರೂ ಏನು!&#8221; ಎನ್ನುವ ಮೂಲಕ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ಅವರು ಪ್ರಸ್ತುತ ಕರ್ನಾಟಕದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ನಿರಂಜನಾರಾಧ್ಯ ಅವರು ಸರ್ಕಾರಿ ಶಾಲೆಗಳ ಶಾಲಾ ಪಠ್ಯಕ್ರಮ ಮತ್ತು ಶಾಲೆಗಳಲ್ಲಿನ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರಿಗೆ ಬರೆದ ಬಹಿರಂಗ ಪತ್ರದಲ್ಲಿ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ.</p>



<figure class="wp-block-image size-full"><img fetchpriority="high" decoding="async" width="700" height="394" src="https://peepalmedia.com/wp-content/uploads/2023/07/images-2023-07-22T171505.217.jpeg" alt="" class="wp-image-24197" srcset="https://peepalmedia.com/wp-content/uploads/2023/07/images-2023-07-22T171505.217.jpeg 700w, https://peepalmedia.com/wp-content/uploads/2023/07/images-2023-07-22T171505.217-300x169.jpeg 300w, https://peepalmedia.com/wp-content/uploads/2023/07/images-2023-07-22T171505.217-150x84.jpeg 150w, https://peepalmedia.com/wp-content/uploads/2023/07/images-2023-07-22T171505.217-696x392.jpeg 696w" sizes="(max-width: 700px) 100vw, 700px" /></figure>



<p>&#8220;ಅವೈಜ್ಞಾನಿಕ ನೆಲೆಯಲ್ಲಿ ಧರ್ಮ ಹಾಗು ಕೋಮುವಾದದ ಮೂಲಕ ಜಾತ್ಯತೀತ ಸಂಸ್ಥೆಗಳಾದ ಸರಕಾರಿ ಶಾಲೆಗಳನ್ನು ಧಾರ್ಮಿಕ ಪಠಣ ಕೇಂದ್ರಗಳನ್ನಾಗಿಸಲು ಪ್ರಯತ್ನಿಸಿದ್ದ ಕೋಮುವಾದಿ ಸರ್ಕಾರವನ್ನು ಕರ್ನಾಟಕದ ಜನತೆ ತಿರಸ್ಕರಿಸಿ ಒಂದು ಜಾತ್ಯತೀತ ಪ್ರಜಾಪ್ರಭುತ್ವ ಸಂವಿಧಾನಬದ್ಧ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ, ತಮ್ಮ ಸಾರಥ್ಯದ ಶಿಕ್ಷಣ ಇಲಾಖೆ, ಹಿಂದಿನ ಕೋಮುವಾದಿ ಸರಕಾರ ರೂಪಿಸಿದ್ದ ಅವೈಜ್ಞಾನಿಕ ಕೋಮುವಾದಿ ನೀತಿಗಳನ್ನೇ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಸು ತ್ತಿರುವುದು ಆತಂಕ ಹುಟ್ಟಿಸುತ್ತದೆ&#8221; ಎಂದಿದ್ದಾರೆ.</p>



<p>ಅಷ್ಟೆ ಅಲ್ಲದೆ ಅಲ್ಪಸಂಖ್ಯಾತ ಇಲಾಖೆಯ ನಿರ್ದೇಶಕರು ರಾಜ್ಯ ಮಟ್ಟದಲ್ಲಿ ಜೂನ್ 19 ರಲ್ಲಿ ಹೊರಡಿಸಿದ ಆದೇಶದ ಬಗ್ಗೆ ಪ್ರಸ್ತಾಪಿಸಿ, ದಿನಾಂಕ ೧೭.೦೭.೨೦೨೩ ರಂದು ಹೊರಡಿಸಿರುವ ಜ್ಞಾಪನ ಪತ್ರದಲ್ಲಿ ಧಾರ್ಮಿಕ ಪಠಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಿದ ಬಗ್ಗೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಧಾರ್ಮಿಕ ಪಠಣದ ಅಗತ್ಯತೆ ಇದೆಯೇ ಎಂಬುದನ್ನು ಪ್ರಸ್ತಾಪಿಸಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.</p>



<p>ಹಾಗೆಯೇ &#8220;ಸಂಸ್ಕೃತ ಅಥವಾ ಅರೇಬಿಕ್ ಭಾಷೆಯನ್ನೇ ತಿಳಿಯದ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ, ಸಂಸ್ಕೃತ ಅಥವಾ ಅರೇಬಿಕ್ ಭಾಷೆಗಳಲ್ಲಿ ಭಗವದ್ಗೀತೆ ಹಾಗು ಸೂರ್ -ಎ- ಫತೇಹನ್ನು ಮಕ್ಕಳು ಏಕೆ ಪಠಣ ಮಾಡಬೇಕು? ಹಾಗೂ ಒಂದರಿಂದ ಐದನೇ ತರಗತಿ ಜೊತೆಗೆ ಆರರಿಂದ ಏಳನೆ ತರಗತಿ ಮಕ್ಕಳಿಗೆ ಭಗವದ್ಗೀತೆಯ ನಿಗದಿತ ಅಧ್ಯಾಯವನ್ನ ಸಂಸ್ಕೃತದಲ್ಲಿ ಹಾಗೂ ಸೂರ್ ಎ ಪಾತೆಹವನ್ನು ಅರೇಬಿಕ್ ಭಾಷೆಯಲ್ಲಿ ಸ್ಪರ್ಧಿಸಲು ಸೂಚಿಸಿರುವುದು, ಸಂಸ್ಕೃತ ಭಾಷೆಯನ್ನು ಮತ್ತು ಧಾರ್ಮಿಕ ಬೋಧನೆಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ಕೋಮುವಾದಿ ನೀತಿಯಲ್ಲವೇ! ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.</p>



<p>ಹಾಗೆಯೇ ಮುಂದುವರಿದು, &#8220;ಕನ್ನಡ ಮಾಧ್ಯಮದ ಗ್ರಾಮೀಣ ಪ್ರಾಥಮಿಕ ಹಾಗೂ ಆಡಳಿತ ಕನ್ನಡ ಜಾರಿ ಇರುವ ನಮ್ಮ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರತಿಭೆಯನ್ನು ಪರೀಕ್ಷಿಸಲು ಸಂಸ್ಕೃತ ಹಾಗೂ ಅರೇಬಿಕ್ ಭಾಷೆಯಲ್ಲಿ ಧಾರ್ಮಿಕ ಪಠಣ ಸ್ಪರ್ಧೆ ಏರ್ಪಡಿಸುವ ಉದ್ದೇಶವಾದರೂ ಏನು! ಶಾಲಾ ಹಂತದಲ್ಲಿ ಮಕ್ಕಳ ಧಾರ್ಮಿಕ ಪಠಣ ಸಾಮರ್ಥ್ಯವನ್ನು ಬೆಳೆಸುವ ಪಠ್ಯವಸ್ತುವಿಗೆ ಅವಕಾಶ ಇರದಿದ್ದರೂ ಪಠ್ಯ ಮತ್ತು ಪಠ್ಯೇತರ ಪ್ರತಿಭೆಯ ಸಂಕೇತವಾದ ಪ್ರತಿಭಾಕಾರಂಜಿಯಂತಹ ಸಂದರ್ಭದಲ್ಲಿ ಏಕೆ ಇದನ್ನು ಅಳವಡಿಸಲಾಗಿದೆ. ನಮ್ಮ ಅಧಿಕಾರಿಗಳಿಗೆ ವೈಜ್ಞಾನಿಕ ಹಾಗು ಜಾತ್ಯತೀತ ಶಿಕ್ಷಣ ವ್ಯವಸ್ಥೆಯ ಮೂಲ ತತ್ವಗಳ ಪರಿಚಯವಿದೆಯೇ ಅಥವಾ ಕುರುಡಾಗಿ ನೀತಿಗಳನ್ನು ಮಕ್ಕಳ ಮೇಲೆ ಹೇರುತ್ತಾರೆಯೇ!&#8221; ಎನ್ನುವ ಮೂಲಕ ಶಿಕ್ಷಣ ಇಲಾಖೆಯಲ್ಲಿ ವೈಜ್ಞಾನಿಕ ಮತ್ತು ಜಾತ್ಯತೀತ ಮೌಲ್ಯ ಅರಿಯದ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.</p>



<p>&#8220;ಪ್ರತಿಭಾ ಕಾರಂಜಿಯಲ್ಲಿ ಸಂಸ್ಕೃತ ಮತ್ತು ಅರೇಬಿಕ್ ಧಾರ್ಮಿಕ ಪಠಣ ಸ್ಪರ್ಧೆಯಿಂದ ಕನ್ನಡ ಮಾಧ್ಯಮದ ಕನ್ನಡದ ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಸಂಸ್ಕೃತದ ಗಂಧಗಾಳಿ ಇಲ್ಲದ ಕೆಳಸ್ತರದ ವರ್ಗದ ಮಕ್ಕಳು ಪ್ರತಿಭಾಕಾರಂಜಿಯಲ್ಲಿ ಭಾಗವಹಿಸುವ ಹಕ್ಕಿನ ಅವಕಾಶ ವಂಚನೆಯಲ್ಲವೇ!?&#8221; ಎಂದು ಸಚಿವರ ಗಮನ ಸೆಳೆದಿದ್ದಾರೆ.</p>



<p>&#8220;ಎಲ್ಲ ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಸಮಾನವಾಗಿ ಸ್ಪರ್ಧಿಸಲು ಅವಕಾಶ ಒದಗಿಸಬೇಕು. ಶಾಲಾ ಹಂತದ ಈ ಚಟುವಟಿಕೆಗಳಲ್ಲಿ, ಪರೋಕ್ಷವಾಗಿ ಧಾರ್ಮಿಕ ಅಜಂಡಗಳನ್ನ ಹೇರುವುದಕ್ಕಿಂತ ವೈಚಾರಿಕ ನಿಲುವು ಮತ್ತು ಜಾತ್ಯತೀತ ಮೌಲ್ಯಗಳತ್ತ ಸಾಗುವಂತೆ ಪ್ರತಿಭಾ ಕಾರಂಜಿಯಲ್ಲಿ ಹೆಚ್ಚೆಹೆಚ್ಚು ಸ್ಪರ್ಧೆಗಳನ್ನು ಆಯೋಜಿಸುವುದು ಇಂದಿನ ತುರ್ತು ಅಗತ್ಯವಲ್ಲವೇ? ಅತ್ಯಂತ ದುರದೃಷ್ಟವೆಂದರೆ, ಅಂತಹ ಮೌಲ್ಯಗಳಿರುವ ದಾಸರ ಮತ್ತು ಶರಣರ ಕೃತಿಗಳಿಂದ ಹಾಡುವುದನ್ನು ಜ್ಞಾಪನ ಹೊರತುಪಡಿಸಿದೆ. ಇದರ ಉದ್ದೇಶವೇನು&#8221; ಎಂದು ಶಿಕ್ಷಣ ಸಚಿವರಿಗೆ ಪ್ರಶ್ನೆ ಹಾಕಿದ್ದಾರೆ.</p>



<p>ಕೊನೆಯದಾಗಿ &#8220;ತಾವು,(ಮಧು ಬಂಗಾರಪ್ಪ) ದಯವಿಟ್ಟು ಇದನ್ನು ಪರಿಶೀಲಿಸಿ ತಕ್ಷಣ ಅಗತ್ಯ ಕ್ರಮ ವಹಿಸಬೇಕೆಂದು ಒತ್ತಾಯಿಸುತ್ತೇನೆ.&#8221; ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.</p>



<p>ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದ ಅನೇಕ ನಿಯಮಗಳು ಇಂದಿಗೂ ಸಹ ಮುಂದುವರೆಯುತ್ತಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಇಂತಹವುಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಜಾತ್ಯತೀತ ನೆಲೆಗಟ್ಟಿನಲ್ಲಿ ರೂಪುಗೊಳ್ಳಬೇಕಾದ ಶಿಕ್ಷಣ ವ್ಯವಸ್ಥೆ ಕೋಮುಕೇಂದ್ರಿತ ವ್ಯವಸ್ಥೆ ಆಗಿರುವ ಬಗ್ಗೆ ಹೊಸ ಸರ್ಕಾರ ರಚನೆ ಆದ ದಿನದಿಂದಲೂ ಅನೇಕ ಶಿಕ್ಷಣ ತಜ್ಞರು ಸರ್ಕಾರವನ್ನು ಎಚ್ಚರಿಸಿಕೊಂಡು ಬಂದಿದ್ದಾರೆ. ಅನೇಕ ಸಂದರ್ಭದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರೂ ಸಹ ಪಠ್ಯಕ್ರಮ ಬದಲಾವಣೆಯ ತುರ್ತಿನ ಬಗ್ಗೆಯೂ ನಿರಂತರವಾಗಿ ಪ್ರಸ್ತಾಪಿಸುತ್ತಲಿದ್ದು, ಸರ್ಕಾರ ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಎಷ್ಟರಮಟ್ಟಿಗೆ ಕಾರ್ಯಗತಗೊಳಿಸಲಿದ್ದಾರೆ ಎಂಬುದು ಕುತೂಹಲಕಾರಿ ವಿಚಾರವಾಗಿದೆ.</p>
]]></content:encoded>
					
		
		
			</item>
		<item>
		<title>ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಸಂಕುಚಿತವಾಗಿದೆ : ಶಿಕ್ಷಣ ತಜ್ಞ ನಿರಂಜನಾರಾಧ್ಯ ಅಸಮಾಧಾನ</title>
		<link>https://peepalmedia.com/kannada-language-comprehensive-development-bill-2022-narrowed-down-to-comprehensive-niranjanaradhya-v-p/</link>
		
		<dc:creator><![CDATA[Peepal Media]]></dc:creator>
		<pubDate>Sat, 01 Oct 2022 08:19:43 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[ನಾಡು-ನುಡಿ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Kannada Language]]></category>
		<category><![CDATA[Kannada Language Comprehensive Development Bill 2022]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[Niranjanaradhya.V.P.]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=8346</guid>

					<description><![CDATA[ಬೆಂಗಳೂರು: ಕಳೆದ ವಾರ ವಿಧಾನ ಸಭೆಯಲ್ಲಿ ಮಂಡನೆಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಹೇಳಿದ್ದಾರೆ. ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಪೂರ್ಣ ಅಭಿವೃದ್ಧಿ ವಿಧೇಯಕದಲ್ಲಿ ಕಾಣುತ್ತಿಲ್ಲ. ನಿಜಕ್ಕೂ ಸಮಗ್ರವಾಗಿದ್ದರೆ , ವಿಧೇಯಕವು&#160; ಕನ್ನಡ, ಕನ್ನಡಿಗ&#160;ಹಾಗು&#160;ಕರ್ನಾಟಕದ ಸಮಗ್ರ&#160;ಅಭಿವೃದ್ಧಿಯ ವಿಧೇಯಕವಾಗಬೇಕಿತ್ತು. ವಿಧೇಯಕ, ಕರ್ನಾಟಕದಲ್ಲಿನ ಕನ್ನಡಿಗರ ಹಿತ ಕಾಪಾಡುವ ಜೊತೆಗೆ, ಹೊರನಾಡು ಮತ್ತು ಹೊರ ದೇಶದಲ್ಲಿರು&#160; ಕನ್ನಡಿಗರ ಹಿತ ಕಾಪಾಡಲು ಸಹ ಚಿಂತಿಸಬೇಕಿತ್ತು ಎಂದು ಹೇಳಿದ್ದಾರೆ. [&#8230;]]]></description>
										<content:encoded><![CDATA[
<p style="font-size:20px"><strong><u>ಬೆಂಗಳೂರು</u></strong>: ಕಳೆದ ವಾರ ವಿಧಾನ ಸಭೆಯಲ್ಲಿ ಮಂಡನೆಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಸಮಗ್ರ ಎನ್ನುತ್ತಲೇ ಸಂಕುಚಿತವಾಗಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಹೇಳಿದ್ದಾರೆ.</p>



<p style="font-size:20px">ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಪೂರ್ಣ ಅಭಿವೃದ್ಧಿ ವಿಧೇಯಕದಲ್ಲಿ ಕಾಣುತ್ತಿಲ್ಲ. ನಿಜಕ್ಕೂ ಸಮಗ್ರವಾಗಿದ್ದರೆ , ವಿಧೇಯಕವು&nbsp; ಕನ್ನಡ, ಕನ್ನಡಿಗ&nbsp;ಹಾಗು&nbsp;ಕರ್ನಾಟಕದ ಸಮಗ್ರ&nbsp;ಅಭಿವೃದ್ಧಿಯ ವಿಧೇಯಕವಾಗಬೇಕಿತ್ತು. ವಿಧೇಯಕ, ಕರ್ನಾಟಕದಲ್ಲಿನ ಕನ್ನಡಿಗರ ಹಿತ ಕಾಪಾಡುವ ಜೊತೆಗೆ, ಹೊರನಾಡು ಮತ್ತು ಹೊರ ದೇಶದಲ್ಲಿರು&nbsp; ಕನ್ನಡಿಗರ ಹಿತ ಕಾಪಾಡಲು ಸಹ ಚಿಂತಿಸಬೇಕಿತ್ತು ಎಂದು ಹೇಳಿದ್ದಾರೆ.</p>



<p style="font-size:20px">ವಿಧೇಯಕದ ಮೂಲ ಸ್ವರೂಪದಲ್ಲಿಯೇ ದೋಷವಿದ್ದಂತೆ ಕಾಣುತ್ತದೆ. ಸಮಗ್ರ ಅಭಿವೃದ್ಧಿಯನ್ನು ಎಲ್ಲಾ ಮೂರು ಮುಖ್ಯ ನೆಲೆಗಳಿಂದ, ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ನೆಲೆಯಿಂದ ನೋಡುವ ಸಮಗ್ರ ವಿಧೇಯಕಾವಾಗಬೇಕಿತ್ತು. ಪ್ರತಿಯೊಂದಕ್ಕು ಒಂದು ವಿಶೇಷ ಅಧ್ಯಾಯವಿರಬೇಕಿತ್ತು. ಉದಾಹರಣಗೆ, ಭಾಷೆಯನ್ನು ತೆಗೆದುಕೊಂಡರೆ, ಶಿಕ್ಷಣದಲ್ಲಿ ಮಾಧ್ಯಮ, ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆ, ಶಾಸಕಾಂಗ, ಕಾರ್ಯಾಂಗ ಹಾಗು ನ್ಯಾಯಾಂಗದಲ್ಲಿ ಕನ್ನಡ ಭಾಷೆಯ ಜಾರಿ ಹಾಗು ಉಪಯೋಗ, ರಾಜ್ಯದಲ್ಲಿರುವ ಕೇಂದ್ರ ಹಾಗು ರಾಜ್ಯಗಳ ಕಛೇರಿ–ಸಂಸ್ಥೆಗಳಲ್ಲಿ ಕನ್ನಡ ಬಳಕೆ ಹಾಗು ಉಪಯೋಗ, ರಾಜ್ಯದಲ್ಲಿ ನೆಲೆಸಿರುವ ಕನ್ನಡೇತರರ ಕನ್ನಡ ಕಲಿಕೆ, ಸರ್ಕಾರೇತರ ವಲಯದಲ್ಲಿ ಕನ್ನಡ ಭಾಷಾ ಬಳಕೆ, ಸಿನಿಮಾ, ಮನರಂಜನೆ, ಸಂಸ್ಕೃತಿ, ಪ್ರವಾಸೋದ್ಯಮ, ಇತ್ಯಾದಿ ನೆಲೆಯಿಂದ ಸಮಗ್ರವಾಗಿ ಜಾರಿಗೊಳಿಸುವ ಆಶಯ ವಿಧೇಯಕದಲ್ಲಿ ಇರಬೇಕಿತ್ತು ಎಂದು ತಿಳಿಸಿದ್ದಾರೆ.</p>



<p style="font-size:20px">ಇದೇ ಮಾದರಿಯಲ್ಲಿ, ಸರ್ಕಾರಿ, ಅರೆಸರ್ಕಾರಿ, ಸರಕಾರಿ ಬೆಂಬಲಿತ ಸಂಸ್ಥೆಗಳು ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗನ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಒಂದು ಸಮಗ್ರ ಅಧ್ಯಾಯವಿರಬೇಕಿತ್ತು.&nbsp; ಇದಾವುದು ವಿಧೇಯಕದಲ್ಲಿ ಕಾಣುತ್ತಿಲ್ಲ ಎಂದು ನಿರಂಜನಾರಾಧ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>



<p style="font-size:20px">ಸಮಗ್ರ ಎನ್ನುತ್ತಲೇ ಸಂಕುಚಿತಗೊಳಿಸಿ ತಿಳಿಗೊಳಿಸುವ ಅನೇಕ ಉದಾಹರಣೆಗಳು ವಿಧೇಯಕದಲ್ಲಿ ಸಿಗುತ್ತವೆ. ಅವುಗಳಲ್ಲಿ, ಕೆಲವನ್ನು ಅವಲೋಕಿಸುವುದಾದರೆ, ಕನ್ನಡ ಭಾಷೆಯ ಬಳಕೆಗೆ ಸಂಬಂಧಿಸಿದಂತೆ ಪ್ರಕರಣ 4ರ ಅಡಿಯಲ್ಲಿ ಕಲ್ಪಿಸಿರುವ ಅವಕಾಶಗಳು, ಆಡಳಿತದಲ್ಲಿ ಕನ್ನಡ ಭಾಷೆಯ ಬಳಕೆಯನ್ನು ಮಿತಿಗೊಳಿಸಿವೆ. ಉದಾಹರಣೆಗೆ, 4(ಸಿ) ಅಡಿಯಲ್ಲಿ, ವಿಧೇಯಕ ಹೇಳುವಂತೆ, ಆಡಳಿತಾತ್ಮಕ ಕಾರಣಗಳಿಗಾಗಿ ಇಂಗ್ಲಿಷ್ ಭಾಷೆಯನ್ನು ಬಳಸುವುದು ಅನಿವಾರ್ಯವಾಗಿದ್ದಲ್ಲಿ ಅಥವಾ ವೈಜ್ಞಾನಿಕ ಹಾಗು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವಾಗ ಆಂಗ್ಲ ಭಾಷೆಯನ್ನು ಬಳಸಬಹುದು ಎನ್ನುತ್ತದೆ. ಈ ಅವಕಾಶವು ವಿಧೇಯಕದ ಮೂಲ ಪ್ರಕರಣ 3ರ ಆಶಯವನ್ನು ತಿಳಿಗೊಳಿಸಿ ಆಡಳಿತದಲ್ಲಿ ಮತ್ತೊಮ್ಮೆ ಆಂಗ್ಲ ಭಾಷೆ ರಾರಾಜಿಸಲು ರಹದಾರಿ ನೀಡಿದಂತಾಗಿದೆ ಎಂದು ತಿಳಿಸಿದ್ದಾರೆ.</p>



<p style="font-size:20px">&nbsp;ʼಅನಿವಾರ್ಯವಾಗಿದ್ದಲ್ಲಿʼ ಎಂಬ ಸವಕಲು ಪದ ಎಲ್ಲೆಡೆ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂದಲ್ಲಿ,&nbsp; ಆಂಗ್ಲ ಭಾಷೆಯನ್ನು ಬಳಸುವ ಅನಿವಾರ್ಯತೆ ಹಾಗು ಕಾನೂನಿನ ಅಡಿಯಲ್ಲಿಯೇ ರಕ್ಷಣೆ ಪಡೆಯಲು ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಭಾಷೆಯೊಂದು ಬೆಳೆಯಬೇಕಾದರೆ, ವೈಜ್ಞಾನಿಕ ಹಾಗು ತಾಂತ್ರಿಕ ವಿಷಯಗಳನ್ನು ನಮ್ಮ ತಾಯ್ನುಡಿನ&nbsp; ಭಾಷೆಯಲ್ಲಿ ಬಳಸುವಂತಾಗಬೇಕು. ಸರ್ಕಾರ ಅದಕ್ಕೆ ಸೂಕ್ತ ಭೂಮಿಕೆ ಒದಗಿಸಬೇಕು. ಅದು ವೈಜ್ಞಾನಿಕ ಹಾಗು ತಾಂತ್ರಿಕ ವಿಷಯ ವಾದ ಮಾತ್ರಕ್ಕೆ ಆಂಗ್ಲ ಭಾಷೆಗೆ ಮೊರೆ ಹೋಗುವುದಾದರೆ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಯ ಅರ್ಥವೇನು ಎಂಬ ಮೂಲ ಪ್ರಶ್ನೆ ಕನ್ನಡಿಗನಿಗೆ ಎದುರಾಗುತ್ತದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.</p>



<p style="font-size:20px">ಪ್ರಕರಣ 4ರಲ್ಲಿ ಪ್ರಸ್ತಾಪಿಸಿರುವ ರಾಜಭಾಷಾ ಆಯೋಗದ ಉದ್ದೇಶವಾದರು ಏನು ಎಂಬುದು ಯಕ್ಷ ಪ್ರಶ್ನೆಯಾಗುತ್ತದೆ. ಅಧ್ಯಕ್ಷರು ಹಾಗು ಸದಸ್ಯರ ನೇಮಕಾತಿಯ ವಿಧಾನ ನಿವೃತ್ತ ಅಧಿಕಾರಿಗಳಿಗೆ ಪುನರ್ವಸತಿ ಕಲ್ಪಿಸುವಂತಿದೆ. ಪ್ರಕರಣ ೭ ರಲ್ಲಿ ಭಾಷೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಚಿಸಲು ಪ್ರಸ್ತಾಪಿಸಿರುವ ರಾಜ್ಯಮಟ್ಟದ ಸಮಿತಿಯು ಅನುಷ್ಠಾನಕ್ಕೆ ಇರಬೇಕಾದ ಕನಿಷ್ಠ ರಾಜಕೀಯ ಇಚ್ಛಾಶಕ್ತಿಯನ್ನು ಅಭಿವ್ಯಕ್ತಗೊಳಿಸಬಹುದಾದ ಉನ್ನತ ಮಟ್ಟದ ಸಮಿತಿಯಾಗುವ ಬದಲು ಕೇವಲ ಕಾಟಾಚಾರದ ಸಮಿತಿಯಾದಂತಿದೆ ಎಂದಿದ್ದಾರೆ.</p>



<p style="font-size:20px">ಕನ್ನಡ ಅನುಷ್ಠಾನದ ರಾಜಕೀಯ ಕಾಯಕಲ್ಪ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಬೇಕೆ ಹೊರತು ಅದನ್ನು ತಿಳಿಗೊಳಿಸಬಾರದು. ಕನ್ನಡ ಅನುಷ್ಠಾನಕ್ಕಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಪರಿಷತ್ತಿನ ಅಧ್ಯಕ್ಷರು ಉಪಾಧ್ಯಕ್ಷರುಗಳಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸದಸ್ಯ ಸಂಚಾಲಕರಾದಾಗ ಮಾತ್ರ ಅನುಷ್ಠಾನಕ್ಕೆ ಅಗತ್ಯವಾದ&nbsp; ರಾಜಕೀಯ ಇಚ್ಚಾಶಕ್ತಿ ಅಭಿವ್ಯಕ್ತಗೊಳ್ಳುತ್ತದೆ. ಜೊತೆಗೆ, ಸರ್ಕಾರದ ಹಂಗಿಲ್ಲದೆ ಸ್ವತಂತ್ರವಾಗಿ ಭಾಷೆಯ ಅನುಷ್ಠಾನದ ಬಗ್ಗೆ ನಿರ್ಭಯವಾಗಿ ಮಾತನಾಡಬಲ್ಲ ಸರ್ಕಾರೇತರ ತಜ್ಞ ಸದಸ್ಯರು ಇರಬೇಕಾಗುತ್ತದೆ ಹಾಗೂ ಇದೇ ಬಗೆಯ ಇಚ್ಛಾಶಕ್ತಿ ವ್ಯಕ್ತವಾಗುವ ರೀತಿಯಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸಮಿತಿಗಳು ರಚನೆಯಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ.</p>



<p style="font-size:20px">ಒಟ್ಟಾರೆ, ಸಮಗ್ರ ಎನ್ನುತ್ತಲೇ ಕನ್ನಡ, ಕನ್ನಡಿಗ ಹಾಗು ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ಸಂಕುಚಿತ ಹಾಗು ತಿಳಿಗೊಳಿಸುವ ಈ ವಿಧೇಯಕವನ್ನು ಸಮಗ್ರವಾಗಿಯೇ ಪರಾಮರ್ಶಿಸಬೇಕಿದೆ ಎಂದು ನಿರಂಜನಾರಾಧ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
