<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>nirmala sitaraman &#8211; Peepal Media</title>
	<atom:link href="https://peepalmedia.com/tag/nirmala-sitaraman/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 03 Feb 2025 07:19:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>nirmala sitaraman &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅಂಕಿಅಂಶಗಳು ಹೇಳುವ ಕತೆ: ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳಿಗೆ ಕಳಪೆ ಅನುದಾನ</title>
		<link>https://peepalmedia.com/the-statistics-tell-a-story-poor-funding-for-public-health-and-education-systems/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 03 Feb 2025 07:19:53 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[budget-2025-26]]></category>
		<category><![CDATA[central budget]]></category>
		<category><![CDATA[education]]></category>
		<category><![CDATA[Health sector]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[nirmala sitaraman]]></category>
		<guid isPermaLink="false">https://peepalmedia.com/?p=53273</guid>

					<description><![CDATA[ಮುಖ್ಯವಾಹಿನಿಯ ಸುದ್ದಿ ಮುಖ್ಯಾಂಶಗಳ ಆಚೆಗೆ, ಬಜೆಟ್ ಅಂಕಿಅಂಶಗಳನ್ನು ಕೂಲಂಕೂಶವಾಗಿ ನೋಡುವುದು ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಭಾರತದ ರಕ್ಷಣಾ ಬಜೆಟ್ ಕಳೆದ ದಶಕದಲ್ಲಿಯೇ ದ್ವಿಗುಣಗೊಂಡಿದೆ,&#160;ಇತ್ತೀಚೆಗೆ ಘೋಷಿಸಲಾದ ಬಜೆಟ್‌ನಲ್ಲಿ&#160;&#160;6.8 ಲಕ್ಷ&#160;ಕೋಟಿ&#160;ರುಪಾಯಿಯಾಗಿದೆ. ಆದರೂ, ಈ ದಿಗ್ಭ್ರಮೆಗೊಳಿಸುವ ಅಂಕಿ ಅಂಶದ ಹೊರತಾಗಿಯೂ, ಸಶಸ್ತ್ರ ಪಡೆಗಳಿಗೆ ತೃಪ್ತಿಯಾಗಿಲ್ಲ. ಖರೀದಿಸಿದ ಸೇನಾ ಆಯುಧಗಳು ತಡವಾಗಿ ಬರುತ್ತವೆ, ನಿರ್ಣಾಯಕ ಆಧುನೀಕರಣ ಯೋಜನೆಗಳು ವರ್ಷಗಳಿಂದ ಜಾರಿಯಾಗಿಲ್ಲ, ಬಜೆಟ್‌ನ ಸುಮಾರು ಕಾಲು ಭಾಗವನ್ನು ಪಿಂಚಣಿಗಳೇ ನುಂಗುತ್ತವೆ. ದಾಖಲೆಯ ಹೆಚ್ಚಿನ ಖರ್ಚು ಮಾಡಿದರೂ ಸಹ, ಮಿಲಿಟರಿ ಇನ್ನೂ ಫೈರ್‌ಪವರ್ ಅನ್ನು ಹೊಂದಿಲ್ಲ. [&#8230;]]]></description>
										<content:encoded><![CDATA[
<pre class="wp-block-code"><code><strong>ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ. </strong></code></pre>



<pre class="wp-block-code"><code><em><strong>ದೀಪಾಂಶು ಮೋಹನ್ </strong></em>ಮತ್ತು <em><strong>ಅಂಕುರ್ ಸಿಂಗ್ </strong></em>ಅವರ ಈ ಲೇಖನ ಮಿಲಿಟರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಿರುವ ಬಗ್ಗೆ ಆತಂಕಕಾರಿ ಒಳನೋಟಗಳನ್ನು ನೀಡುತ್ತದೆ.</code></pre>



<p>ಮುಖ್ಯವಾಹಿನಿಯ ಸುದ್ದಿ ಮುಖ್ಯಾಂಶಗಳ ಆಚೆಗೆ, ಬಜೆಟ್ ಅಂಕಿಅಂಶಗಳನ್ನು ಕೂಲಂಕೂಶವಾಗಿ ನೋಡುವುದು ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಭಾರತದ ರಕ್ಷಣಾ ಬಜೆಟ್ ಕಳೆದ ದಶಕದಲ್ಲಿಯೇ ದ್ವಿಗುಣಗೊಂಡಿದೆ,&nbsp;ಇತ್ತೀಚೆಗೆ ಘೋಷಿಸಲಾದ ಬಜೆಟ್‌ನಲ್ಲಿ&nbsp;&nbsp;<a href="https://thewire.in/economy/defence-ministry-gets-largest-chunk-of-union-budget">6.8 ಲಕ್ಷ&nbsp;ಕೋಟಿ&nbsp;ರುಪಾಯಿಯಾಗಿದೆ.</a></p>



<p>ಆದರೂ, ಈ ದಿಗ್ಭ್ರಮೆಗೊಳಿಸುವ ಅಂಕಿ ಅಂಶದ ಹೊರತಾಗಿಯೂ, ಸಶಸ್ತ್ರ ಪಡೆಗಳಿಗೆ ತೃಪ್ತಿಯಾಗಿಲ್ಲ. ಖರೀದಿಸಿದ ಸೇನಾ ಆಯುಧಗಳು ತಡವಾಗಿ ಬರುತ್ತವೆ, ನಿರ್ಣಾಯಕ ಆಧುನೀಕರಣ ಯೋಜನೆಗಳು ವರ್ಷಗಳಿಂದ ಜಾರಿಯಾಗಿಲ್ಲ, ಬಜೆಟ್‌ನ ಸುಮಾರು ಕಾಲು ಭಾಗವನ್ನು ಪಿಂಚಣಿಗಳೇ ನುಂಗುತ್ತವೆ. ದಾಖಲೆಯ ಹೆಚ್ಚಿನ ಖರ್ಚು ಮಾಡಿದರೂ ಸಹ, ಮಿಲಿಟರಿ ಇನ್ನೂ ಫೈರ್‌ಪವರ್ ಅನ್ನು ಹೊಂದಿಲ್ಲ.</p>



<p>ಇದೆಲ್ಲವೂ ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮಾಡಬೇಕಾದ ವೆಚ್ಚದ ಮೇಲೆ ಪರಿಣಾಮ ಬೀರುತ್ತಿವೆ, ಆ ಕ್ಷೇತ್ರಗಳು ಹಿಂದುಳಿಯುತ್ತಲೇ ಇವೆ. </p>



<p>ದೇಶಾದ್ಯಂತ ಶಾಲೆಗಳಿಗೆ ಕಡಿಮೆ ಅನುದಾನ ಸಿಗುತ್ತಿವೆ, ಅನೇಕ ಮೂಲಭೂತ ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿವೆ. ಬಿಕ್ಕಟ್ಟು ಎಷ್ಟು ತೀವ್ರವಾಗಿದೆ ಎಂದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಈಗ ರೈತರನ್ನು ಮೀರಿಸಿದೆ, ಇದು ಶಿಕ್ಷಣ ವಲಯದಲ್ಲಿರುವ ಒತ್ತಡ ಮತ್ತು ನಿರ್ಲಕ್ಷ್ಯವನ್ನು ಇದು ಕಠೋರವಾಗಿ ಪ್ರತಿಬಿಂಬಿಸುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಷ್ಟೇ ಭೀಕರ ಸ್ಥಿತಿಯಲ್ಲಿದೆ. ಭಾರತದ&nbsp;<a href="https://thesouthfirst.com/health/india-has-only-0-79-beds-per-1000-population-in-government-hospitals-short-by-2-4-million-hospital-beds/">24 ಲಕ್ಷ ಆಸ್ಪತೆಗಳಲ್ಲಿ ಹಾಸಿಗೆಗಳ ಕೊರತೆ ಇದೆ</a>, ಲಕ್ಷಾಂತರ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. </p>



<p>ಭಾರತವು ತನ್ನ ಗಡಿಗಳನ್ನು ಬಲಪಡಿಸಲು ಸರ್ಕಸ್‌ ಮಾಡುತ್ತಿದ್ದರೆ, ಇನ್ನೊಂದು ಕಡೆ ತನ್ನ ಅತ್ಯಮೂಲ್ಯ ಆಸ್ತಿಯಾದ ಜನರನ್ನು ಕಡೆಗಣಿಸುತ್ತಿದೆ.&nbsp;</p>



<p><strong>ಭಾರತದ ಶಿಕ್ಷಣ ಬಿಕ್ಕಟ್ಟು: ತುರ್ತು ಸುಧಾರಣೆಯ ಅಗತ್ಯ</strong></p>



<p>ಶಿಕ್ಷಣವು ಭಾರತದ ಭವಿಷ್ಯದ ಅಡಿಪಾಯ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ, ಆದರೆ ಬಜೆಟ್ ಹಂಚಿಕೆಗಳು ಮತ್ತು ಅಸಮರ್ಥತೆಗಳು ಬೇರೆಯೇ ಕಥೆಯನ್ನು ಹೇಳುತ್ತವೆ. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವು&nbsp;<a href="https://timesofindia.indiatimes.com/business/budget/interim-union-budget-202425-the-need-for-6-of-gdp-in-the-indian-education-sector-major-roadblocks-and-more/articleshow/107233546.cms">ಜಿಡಿಪಿಯ (2024) 2.9%</a>&nbsp;ರಷ್ಟು ಮಾತ್ರ ಇದೆ, ಇದು ಕೊಟ್ಟಾರಿ ಆಯೋಗವು ಶಿಫಾರಸು ಮಾಡಿದ 6% ಗುರಿಗಿಂತ ಕಡಿಮೆಯಾಗಿದೆ. 2015-16 ರಿಂದ ಫಂಡ್ ಹೆಚ್ಚಿದ್ದರೂ, ಕ್ಷೇತ್ರವು ತೀವ್ರ ಮೂಲಸೌಕರ್ಯ ಮತ್ತು ಮಾನವಶಕ್ತಿ ಕೊರತೆಯೊಂದಿಗೆ ಬಳಲುತ್ತಿದೆ.</p>



<p>ಅರ್ಹ ಶಿಕ್ಷಕರ ತೀವ್ರ ಕೊರತೆಯು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.&nbsp;<a href="https://educationforallinindia.com/quality-of-education-in-india-addressing-the-challenges-november-2023/">12 ಲಕ್ಷ ಶಿಕ್ಷಕರ</a>&nbsp;ಹುದ್ದೆಗಳು ರಾಷ್ಟ್ರವ್ಯಾಪಿ ಖಾಲಿ ಬಿದ್ದಿವೆ, ಇದು ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 50:1 ಕ್ಕಿಂತ ಹೆಚ್ಚಾಗಿ, ತರಗತಿಗಳು ಮಕ್ಕಳೇ ಹೆಚ್ಚಾಗಿ ಶಿಕ್ಷಕರಿಲ್ಲದೆ ಕಂಗೆಟ್ಟಿವೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎಂದರೆ, ಸುಮಾರು 40% ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿಗೆ ಸರಿಯಾದ ಅರ್ಹತೆಗಳಿಲ್ಲ, ಇದು ಕಲಿಕೆಯ ಫಲಿತಾಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆಗಳು ಮಾತ್ರವಲ್ಲದೆ, ಕಳಪೆ ಮೂಲಸೌಕರ್ಯ, ಔಟ್‌ಡೇಟೆಡ್ ಪಠ್ಯಕ್ರಮ ಮತ್ತು ಡಿಜಿಟಲ್ ವಿಭಜನೆಯಿಂದ‌ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಇದು ಲಕ್ಷಾಂತರ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗದಂತೆ ಮಾಡುತ್ತಿದೆ.  </p>



<p>ವ್ಯವಸ್ಥೆಯಲ್ಲಿನ ಬಿರುಕುಗಳು ದುರಂತದ ರೀತಿಯಲ್ಲಿ ಕಾಣಿಸುತ್ತವೆ. 2020 ರಲ್ಲಿ ಪ್ರತಿ 42 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯ ಆತ್ಮಹತ್ಯೆ ಪ್ರಮಾಣವನ್ನು ತೋರಿಸಿದೆ. ಅಂಕಿಅಂಶಗಳು ಕಠೋರ ಚಿತ್ರಣವನ್ನು ನಮ್ಮ ಮುಂದೆ ಇಡುತ್ತವೆ. ಅದೇ ವರ್ಷ&nbsp;<a href="https://www.dw.com/en/india-exam-pressure-fuels-spike-in-student-suicides/a-66938137">11,396 ವಿದ್ಯಾರ್ಥಿಗಳ ಆತ್ಮಹತ್ಯೆಗಳು</a>&nbsp;ದಾಖಲಾಗಿವೆ. ಹೆಚ್ಚಿನವು ಶೈಕ್ಷಣಿಕ ಒತ್ತಡ, ಪೋಷಕರ ನಿರೀಕ್ಷೆಗಳು ಮತ್ತು ಆತಂಕ ಇದಕ್ಕೆ ಕಾರಣವಾಗಿದೆ. ಆದರೂ, ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಬಗ್ಗೆ ಯಾವುದೇ ಅರಿವು ಇಲ್ಲ. </p>



<p>ಇತ್ತೀಚಿನ ಬಜೆಟ್‌ನೊಂದಿಗೆ ಸರ್ಕಾರವು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಡಿಜಿಟಲ್ ಸಂಪರ್ಕ ಕಾರ್ಯಕ್ರಮಗಳಂತಹ ಉಪಕ್ರಮಗಳನ್ನು ಹೆಚ್ಚಿಸಲು ಪ್ರಯತ್ನಿಸಿದೆ.  ಹೂಡಿಕೆಯ ಕೊರತೆ, ಅಸಮರ್ಪಕ ಶಿಕ್ಷಕರ ತರಬೇತಿ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯದ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೆಯೇ ಇರುವಾಗ ಶಿಕ್ಷಣವನ್ನು ಆಧುನೀಕರಿಸುವ ಈ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ.  </p>



<p>ಬಜೆಟ್ ಹಂಚಿಕೆಯಲ್ಲಿನ ಅಸಮಾನತೆಯು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ, ಈ ಸರ್ಕಾರಕ್ಕೆ ಶಿಕ್ಷಣವು ದೊಡ್ಡ ಸಂಗತಿಯೇ ಅಲ್ಲ. ವರ್ಷದಿಂದ ವರ್ಷಕ್ಕೆ, ರಕ್ಷಣಾ ವ್ಯವಸ್ಥೆಯ ಮೇಲಿನ ವೆಚ್ಚವು ಸ್ಥಿರವಾದ ಹೆಚ್ಚಳವನ್ನು ಕಂಡರೆ, ಶಿಕ್ಷಣ ವ್ಯವಸ್ಥೆ ಹಿಂದುಳಿಯುತ್ತಲೇ ಇದೆ.  ಕೆಳಗಿನ ಗ್ರಾಫ್ ಈ ಕಟುವಾದ ವಾಸ್ತವತೆಯನ್ನು ತೋರಿಸುತ್ತದೆ:</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="695" height="540" src="https://peepalmedia.com/wp-content/uploads/2025/02/image-1.png" alt="" class="wp-image-53274" style="width:517px;height:auto" srcset="https://peepalmedia.com/wp-content/uploads/2025/02/image-1.png 695w, https://peepalmedia.com/wp-content/uploads/2025/02/image-1-300x233.png 300w, https://peepalmedia.com/wp-content/uploads/2025/02/image-1-150x117.png 150w" sizes="(max-width: 695px) 100vw, 695px" /><figcaption class="wp-element-caption">ಕೃಪೆ: ಬಜೆಟ್ 2025-26</figcaption></figure></div>


<p>ನಾವು ಭಾರತದ ರಕ್ಷಣಾ ಬಜೆಟ್ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕಳೆದ ದಶಕದಲ್ಲಿ ಅದು ಹೇಗೆ 152% ಏರಿಕೆಯಾಗಿದೆ ಎಂಬುದನ್ನು ನಾವು ಕಾಣಬಹುದು. 2015-16 ರಲ್ಲಿ ಇದ್ದ&nbsp;<a href="https://www.oneindia.com/business/budget-2025india-defence-budget-allocations-under-modi-2014-2025-impact-modernisation-defense-forces-4056635.html">2.46 ಲಕ್ಷ ಕೋಟಿ ರುಪಾಯಿಗಳ ರಕ್ಷಣಾ ಬಜೆಟ್</a>&nbsp;2025-26 ರಲ್ಲಿ 6.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ತೀಕ್ಷ್ಣವಾದ ಏರಿಕೆಯು ಭಾರತದ ವಿಕಸನಗೊಳ್ಳುತ್ತಿರುವ ಭದ್ರತಾ ಕಾಳಜಿಗಳು, ಆಧುನೀಕರಣದ ಪ್ರಯತ್ನಗಳು ಮತ್ತು ಸೇನೆಯ ಆರ್ಥಿಕ ಒತ್ತಡವನ್ನು ತೋರಿಸುತ್ತದೆ.</p>



<p>ಹಾಗಿದ್ದೂ, ಅಂಕಿ ಅಂಶಗಳು ರಚನಾತ್ಮಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 2020-21 ರಲ್ಲಿ, ರಕ್ಷಣೆಗಾಗಿ ಮೀಸಲಿಟ್ಟ 3.37 ಲಕ್ಷ ಕೋಟಿ ರುಪಾಯಿಗಳಲ್ಲಿ ಸುಮಾರು&nbsp;<a href="https://www.thehindu.com/business/budget/337-lakh-crore-allocated-for-defence-budget/article61637185.ece">1.34 ಲಕ್ಷ ಕೋಟಿ</a>&nbsp;(29%) ಬರೀ ನಿವೃತ್ತರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಇದರರ್ಥ ಬಜೆಟ್‌ನ ಗಮನಾರ್ಹ ಭಾಗವು ಆಧುನೀಕರಣ ಅಥವಾ ಮೂಲಸೌಕರ್ಯಕ್ಕೆ ಹೆಚ್ಚು ಬಳಕೆಯಾಗುತ್ತಿಲ್ಲ. </p>



<p>ಈ ಎಲ್ಲಾ ಪರಿಸ್ಥಿತಿಗಳನ್ನು ನೋಡುವಾಗ ಹೆಲ್ತ್‌ಕೇರ್ ಹೆಚ್ಚು ಬಾಧಿತವಾದಂತೆ ಕಾಣುತ್ತಿಲ್ಲ. ಮೊದಲ ನೋಟಕ್ಕೆ ಭಾರತದ ಆರೋಗ್ಯ ವ್ಯವಸ್ಥೆಯ ಮೇಲಿನ ಬಜೆಟ್ ಸುಧಾರಿಸುತ್ತಿರುವಂತೆ ತೋರುತ್ತಿದೆ ಮತ್ತು ಇದು ಭಾಗಶಃ ನಿಜವಾಗಿದ್ದರೂ, ಹಂಚಿಕೆಯು&nbsp;2015-16 ರಲ್ಲಿ&nbsp;<a href="https://economictimes.indiatimes.com/industry/healthcare/biotech/healthcare/budget-2015-disappointed-healthcare-sector/articleshow/46572657.cms?from=mdr"> 33,152 ಕೋಟಿಗಳಿಂದ 2025-26 ರಲ್ಲಿ&nbsp;</a><a href="https://www.businesstoday.in/union-budget/story/indias-health-budget-sees-108-hike-as-govt-focuses-on-infrastructure-and-medical-education-463108-2025-02-02">ರೂ 95,957 ಕೋಟಿಗಳಿಗೆ</a>&nbsp;ಏರಿಕೆಯಾಗಿದೆ, ಇದು 100% ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ. </p>



<p>ಈ ಹೆಚ್ಚಳದ ಹೊರತಾಗಿಯೂ, ಭಾರತದ ಆಸ್ಪತ್ರೆಯ ಹಾಸಿಗೆಯ ಲಭ್ಯತೆಯು ಕಡಿಮೆಯಾಗಿದೆ. ಭಾರತದ ಆಸ್ಪತ್ರೆಗಳಲ್ಲಿ ಪ್ರತಿ 1,000 ಜನರಿಗೆ ಕೇವಲ 1.4 ಹಾಸಿಗೆಗಳು ಲಭ್ಯ ಇವೆ. ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ 1,000 ಗೆ 3.5 ರಷ್ಟು ಹಾಸಿಗೆ ಇರಬೇಕು ಎಂಬುದಕ್ಕಿಂತ ಕಡಿಮೆಯಾಗಿದೆ. ಇದಕ್ಕಿಂತ ಕೆಟ್ಟದಾಗಿ, ಸರ್ಕಾರಿ ಆಸ್ಪತ್ರೆಗಳು ಇನ್ನೂ ಹೆಚ್ಚು ಆತಂಕಕಾರಿ ಅನುಪಾತವನ್ನು ಹೊಂದಿವೆ &#8211; 1,000 ಜನರಿಗೆ ಕೇವಲ 0.79 ಹಾಸಿಗೆಗಳು, ಅಂದರೆ ದೇಶದಲ್ಲಿ 24 ಲಕ್ಷ ಹಾಸಿಗೆಗಳ ಕೊರತೆ ಇದೆ. ವೈದ್ಯರ ಮತ್ತು&nbsp;<a href="https://www.indiatoday.in/health/story/j-p-nadda-takes-charge-of-health-ministry-six-challenges-ahead-modi-3-2552685-2024-06-13">ರೋಗಿಗಳ ಅನುಪಾತವು</a>&nbsp;1:1511 ರಷ್ಟಿದೆ, WHO-ಶಿಫಾರಸು ಮಾಡಿದ 1:1,000 ಅನುಪಾತವನ್ನು ಸಾಧಿಸಲು ಭಾರತ ವಿಫಲವಾಗಿದೆ.</p>



<p>ಗ್ರಾಮೀಣ-ನಗರದ ಮಧ್ಯೆ ಇರುವ ವಿಭಜನೆಯು ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ; 70% ಭಾರತೀಯರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆದರೆ ಕೇವಲ 40% ಆಸ್ಪತ್ರೆಯ ಹಾಸಿಗೆಗಳು ಮಾತ್ರ ಅವರಿಗೆ ಲಭ್ಯವಿವೆ. ನರ್ಸ್-ಟು-ರೋಗಿಯ ಅನುಪಾತಗಳು 1:670 ನಲ್ಲಿ ನಿಂತಿವೆ. ಇದು ಶಿಫಾರಸು ಮಾಡಿದ 1:300 ಕ್ಕಿಂತ ಕಳಪೆ. ಸಾರ್ವಜನಿಕ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ವ್ವವಸ್ಥೆ ಸರಿ ಮಾಡಲು ಸರಿಯಾದ ಹಣ ಇಲ್ಲ. ಅವುಗಳ ಮಿತಿಯನ್ನು ಮೀರಿ ವಿಸ್ತರಿಸಲಾಗಿದೆ, ಆದರೆ ಖಾಸಗಿ ಆಸ್ಪತ್ರೆಗಳು ಉತ್ತಮ ಸುಸಜ್ಜಿತವಾಗಿದ್ದರೂ, ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಲಕ್ಷಾಂತರ ಜನರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. </p>



<p>ಕೆಳಗಿನ ಗ್ರಾಫ್ ಒಂದು ಸಮಸ್ಯೆಗಳ ಕಥೆಯನ್ನು ಹೇಳುತ್ತದೆ, ಆರೋಗ್ಯ ಕ್ಷೇತ್ರವು ಕಡಿಮೆ ಅನುದಾನವನ್ನು ಹೊಂದಿದೆ, ಅಲ್ಲದೆ ಸರ್ಕಾರವು ತಾನು ನಿಗದಿಪಡಿಸಿದ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಿಲ್ಲ. ಗ್ರಾಫ್‌ನಲ್ಲಿ ತೋರಿಸಿದಂತೆ, ವಾಸ್ತವಿಕ ವೆಚ್ಚವು ಸಾಮಾನ್ಯವಾಗಿ ಬಜೆಟ್ ಅಂದಾಜುಗಳಿಗಿಂತ ಕಡಿಮೆಯಿರುತ್ತದೆ, ಇದು ವ್ಯವಸ್ಥೆಯೊಳಗೆ ಆಳವಾದ ರಚನಾತ್ಮಕ ಅಂತರವನ್ನು ಎತ್ತಿ ತೋರಿಸುತ್ತದೆ. ಅಧಿಕಾರಶಾಹಿಯ ಅಸಮರ್ಥತೆಗಳು, ಯೋಜನೆಯ ಅನುಷ್ಠಾನದಲ್ಲಿನ ವಿಳಂಬಗಳು ಅಥವಾ ದೀರ್ಘಾವಧಿಯ ಯೋಜನೆಯ ಕೊರತೆಯಿಂದಾಗಿ, ಖರ್ಚು ಮಾಡದ ನಿಧಿಗಳು ನೀತಿ ಮತ್ತು ಅನುಷ್ಠಾನದ ನಡುವೆ ವ್ಯಾಪಕವಾದ ಸಂಪರ್ಕ ಕಡಿತವನ್ನು ಉಂಟುಮಾಡಿದೆ. ಇದರ ಅರ್ಥ, ಕಾಗದದ ಮೇಲೆ ಹಣವನ್ನು ಹಂಚಿಕೆ ಮಾಡುವುದು- ನಿಜವಾದ ಸುಧಾರಣೆಗಳಲ್ಲಿ ವಿಫಲವಾಗುವುದು. ಈ ಸ್ಥಿರವಾದ ಕೊರತೆಯು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.&nbsp;</p>


<div class="wp-block-image">
<figure class="aligncenter size-full"><img decoding="async" width="758" height="569" src="https://peepalmedia.com/wp-content/uploads/2025/02/image-2.png" alt="" class="wp-image-53275" srcset="https://peepalmedia.com/wp-content/uploads/2025/02/image-2.png 758w, https://peepalmedia.com/wp-content/uploads/2025/02/image-2-300x225.png 300w, https://peepalmedia.com/wp-content/uploads/2025/02/image-2-150x113.png 150w, https://peepalmedia.com/wp-content/uploads/2025/02/image-2-696x522.png 696w" sizes="(max-width: 758px) 100vw, 758px" /><figcaption class="wp-element-caption">ಕೃಪೆ: ಬಜೆಟ್ 2025-26</figcaption></figure></div>


<p>ಬಹುಶಃ ಅತ್ಯಂತ ವಿನಾಶಕಾರಿ ಅಂಕಿಅಂಶ ಇದು: <a href="https://pmc.ncbi.nlm.nih.gov/articles/PMC10041239/">ಭಾರತದ</a> ಒಟ್ಟು ಆರೋಗ್ಯ ವೆಚ್ಚದ 62.6% ಅನ್ನು ಜನರು ತಮ್ಮ ಜೇಬಿನಿಂದ ಪಾವತಿಸುತ್ತಾರೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ವೈದ್ಯಕೀಯ ಬಿಲ್‌ಗಳು ಭಾರತದಲ್ಲಿ ಬಡತನಕ್ಕೆ ಪ್ರಮುಖ ಕಾರಣವಾಗಿವೆ, ಆದರೂ ಸರ್ಕಾರವು ಈ ಹೊರೆಯನ್ನು ಕಡಿಮೆ ಮಾಡಲು ಏನೇನೂ ಮಾಡಿಲ್ಲ.</p>



<p>2025-26ರಲ್ಲಿ ಕೇವಲ&nbsp;<a href="https://pib.gov.in/PressReleasePage.aspx?PRID=2098485">1.80 ಲಕ್ಷ ಕೋಟಿ ರುಪಾಯಿಗಳನ್ನು</a>&nbsp;ಬಂಡವಾಳ ವಿನಿಯೋಗಕ್ಕಾಗಿ ಮೀಸಲಿಡುವುದರೊಂದಿಗೆ ರಕ್ಷಣಾ ಬಜೆಟ್ ಸ್ಥಿರವಾದ ಏರಿಕೆಯನ್ನು ಕಂಡಿದೆ, ಆರೋಗ್ಯ ವ್ಯವಸ್ಥೆಯು ದೀರ್ಘಕಾಲಿಕವಾಗಿ ಕಡಿಮೆ ಅನುದಾನವನ್ನು ಹೊಂದಿದೆ.&nbsp;ಮಿಲಿಟರಿಯಲ್ಲಿ ಆಧುನೀಕರಣವು ಅಗತ್ಯ, ಆದರೆ ಆಸ್ಪತ್ರೆಗಳ ಆಧುನೀಕರಣ ಬಗ್ಗೆ ಯಾವಾಗ ಮಾಡುವುದು? ಹೊಸ ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸುವುದು ಯಾವಾಗ?</p>



<p><strong>ಬಲಿಷ್ಠ ಮತ್ತು ಸಮೃದ್ಧ ಭಾರತದ ಕೀಲಿಕೈ</strong></p>



<p>ಮಧ್ಯಮ-ಆದಾಯದ ಬಲೆಯಿಂದ ಅಕಾಲಿಕ ಕೈಗಾರಿಕೀಕರಣದ ಅಪಾಯದವರೆಗೆ ಅಥವಾ ನಿರುದ್ಯೋಗ ಬೆಳವಣಿಗೆಯಿಂದ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಹೇಳುವ &#8220;<a href="https://watson.brown.edu/southasia/news/2021/subramanian-foreign-affiars-indias-stalled-rise">ಸ್ಥಗಿತ ಆರ್ಥಿಕತ</a>&#8221; ಆಗುವ ಅಪಾಯದವರೆಗೆ ನಮ್ಮ ಭವಿಷ್ಯ ಸಿಕ್ಕಿಹಾಕಿಕೊಳ್ಳುವ ಬಲೆಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ನಾವು ಸಮಸ್ಯೆಗಳನ್ನು ಗುರುತಿಸಬೇಕು. ಒಂದು ದೇಶದ ಶಕ್ತಿಯನ್ನು ಕೇವಲ ರಕ್ಷಣಾ ಬಜೆಟ್ ಮತ್ತು ಜಿಡಿಪಿ ಅಂಕಿಅಂಶಗಳಲ್ಲಿ ಅಳೆಯಲಾಗುವುದಿಲ್ಲ. ಅದನ್ನು ಅದರ ಜನರ ಸಾಮರ್ಥ್ಯಗಳಲ್ಲಿ ಅಳೆಯಲಾಗುತ್ತದೆ.</p>



<p>ಯುವ ಜನಸಂಖ್ಯೆಯೊಂದಿಗೆ, ದೊಡ್ಡ ಜನಸಂಖ್ಯೆ ಲಾಭಾಂಶದ ಪ್ರಯೋಜನಗಳನ್ನು ಪಡೆದುಕೊಳ್ಳಲು ಕಡಿಮೆ ಅವಕಾಶಗಳನ್ನು ಹೊಂದಿದ್ದಾರೆ. ಆದರೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ದೃಢವಾದ ಹೂಡಿಕೆಗಳಿಲ್ಲದೆ, ಆ ಪ್ರಯೋಜನವು ಸುಲಭವಾಗಿ ಸಿಗದೆ ಡೆಮೋಗ್ರಾಫಿಕ್‌ ಡಿಸಾಸ್ಟರ್‌ ಆಗಿ ಬದಲಾಗಬಹುದು. ಭಾರತವು &#8220;ಶ್ರೀಮಂತವಾಗುವಾಗ ಮುದುಕನಾಗುವ ಅಪಾಯ&#8221;ದಲ್ಲಿದೆ ಎಂದು  <a href="https://www.mckinsey.com/mgi/our-research/dependency-and-depopulation-confronting-the-consequences-of-a-new-demographic-reality">ಮೆಕಿನ್ಸೆ ವರದಿಯು</a> ಎಚ್ಚರಿಸಿದೆ, ಏಕೆಂದರೆ ಅಸಮರ್ಪಕ ಮಾನವ ಬಂಡವಾಳ ಹೂಡಿಕೆಗಳು ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ಮೊದಲು ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸಬಹುದು.</p>



<p>ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ. ರಾಷ್ಟ್ರೀಯ ಬಲವನ್ನು ಉಳಿಸಿಕೊಳ್ಳುವ ಅಡಿಪಾಯವನ್ನು ನಿರ್ಲಕ್ಷಿಸುವಾಗ ನಾವು ಸಂಪನ್ಮೂಲಗಳನ್ನು ಮಿಲಿಟರಿ ವಿಸ್ತರಣೆಗೆ ಸುರಿಯುತ್ತಾರೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಜವಾದ ಸುರಕ್ಷಿತ ಭಾರತ, ಅಲ್ಲಿ ಯಾವುದೇ ಕುಟುಂಬವು ವೈದ್ಯಕೀಯ ಸಮಸ್ಯೆ ಎದುರಾದಾಗ ದಿವಾಳಿಯಾಗುತ್ತೇವೆ ಎಂದು ಹೆದರುವುದಿಲ್ಲ. ಈ ಭಾರತದಲ್ಲಿ ಮಿಲಿಟರಿ ಶಕ್ತಿ ಮಾತ್ರವಲ್ಲ, ಮಾನವ ಸಾಮರ್ಥ್ಯವೂ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತದೆ.</p>



<p><em>ಈ ಲೇಖನವು ದಿ ವೇರ್‌ನಲ್ಲಿ ಪ್ರಕಟವಾಗಿರುವ <a href="https://thewire.in/economy/data-story-the-unseen-costs-of-underfunding-education-and-healthcare">Data Story: The Unseen Costs of Underfunding Education and Healthcare</a></em> ಯ ಕನ್ನಡ ಭಾವಾನುವಾದವಾಗಿದೆ.</p>



<p> ಈ<em> ಸಂಶೋಧನೆಗೆ ಅನನಿಯಾ ಸಿಂಘಾಲ್ ಕೂಡ ಕೊಡುಗೆ ನೀಡಿದ್ದಾರೆ. </em></p>



<p><em><strong>ದೀಪಾಂಶು ಮೋಹನ್ </strong>ಅವರು <em>IDEAS</em></em>ನ<em> ಅರ್ಥಶಾಸ್ತ್ರದ ಪ್ರೊಫೆಸರ್, ಡೀನ್ ಮತ್ತು ಸೆಂಟರ್‌ ಫಾರ್‌ ನ್ಯೂ ಎಕನಾಮಿಕ್‌ ಸ್ಟಡೀಸ್‌ನ ನಿರ್ದೇಶಕರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ AMES ಗೆ ಶೈಕ್ಷಣಿಕ ಸಂದರ್ಶಕ ಫೆಲೋ ಆಗಿದ್ದಾರೆ.</em></p>



<p><em><strong>ಅಂಕುರ್ ಸಿಂಗ್ </strong>ಅವರು ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್ (CNES) ನ ಸಂಶೋಧನಾ ಸಹಾಯಕರಾಗಿದ್ದು, ಅದರ ಇನ್ಫೋಸ್ಪಿಯರ್ ಉಪಕ್ರಮದ ತಂಡದ ಸದಸ್ಯರಾಗಿದ್ದಾರೆ.</em></p>
]]></content:encoded>
					
		
		
			</item>
		<item>
		<title>ಚುನಾವಣಾ ಬಾಂಡ್ ಮತ್ತೆ ಜಾರಿ ; ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಕಿಡಿ</title>
		<link>https://peepalmedia.com/electoral-bond-reissued-nirmala-sitharaman/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 21 Apr 2024 09:26:02 +0000</pubDate>
				<category><![CDATA[ದೇಶ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bjp]]></category>
		<category><![CDATA[bjp dirty politics]]></category>
		<category><![CDATA[congress]]></category>
		<category><![CDATA[karnataka]]></category>
		<category><![CDATA[nirmala sitaraman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38564</guid>

					<description><![CDATA[ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಬಾಂಡ್ ಗಳು ಮತ್ತೆ ಜಾರಿಗೆ ಬರಬಹುದು ಎಂಬ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ಕೂಡಾ ಇದೊಂದು ಕಾನೂನು ಬಾಹಿರ ಯೋಜನೆ ಎಂಬ ಅಭಿಪ್ರಾಯ ನೀಡಿ, ಚುನಾವಣಾ ಬಾಂಡ್ ರದ್ದು ಮಾಡಿದ್ದರೂ ಬಿಜೆಪಿ ಮತ್ತೆ ಅದನ್ನು ಜಾರಿಗೆ ತರುವ ಅಭಿಪ್ರಾಯ ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೃ ಭ್ರಷ್ಟಾಚಾರವನ್ನು ಮತ್ತೊಮ್ಮೆ ಕಾನೂನುಬದ್ಧಗೊಳಿಸಲು ಮುಂದಾಗಲಿದೆ. [&#8230;]]]></description>
										<content:encoded><![CDATA[
<p>ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚುನಾವಣಾ ಬಾಂಡ್ ಗಳು ಮತ್ತೆ ಜಾರಿಗೆ ಬರಬಹುದು ಎಂಬ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ಕೂಡಾ ಇದೊಂದು ಕಾನೂನು ಬಾಹಿರ ಯೋಜನೆ ಎಂಬ ಅಭಿಪ್ರಾಯ ನೀಡಿ, ಚುನಾವಣಾ ಬಾಂಡ್ ರದ್ದು ಮಾಡಿದ್ದರೂ ಬಿಜೆಪಿ ಮತ್ತೆ ಅದನ್ನು ಜಾರಿಗೆ ತರುವ ಅಭಿಪ್ರಾಯ ಹೊಂದಿದೆ ಎಂಬುದು ಸ್ಪಷ್ಟವಾಗಿದೆ.</p>



<p>ಈ ಬಗ್ಗೆ ಕಾಂಗ್ರೆಸ್ ಪಕ್ಷ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೃ ಭ್ರಷ್ಟಾಚಾರವನ್ನು ಮತ್ತೊಮ್ಮೆ ಕಾನೂನುಬದ್ಧಗೊಳಿಸಲು ಮುಂದಾಗಲಿದೆ. ಈಗಾಗಲೇ ಸುಪ್ರೀಂಕೋರ್ಟ್ ಈ ಯೋಜನೆ ರದ್ದು ಮಾಡಿದ್ದರೂ ಮತ್ತೆ ಅದನ್ನೇ ಜಾರಿಗೊಳಿಸುವ ಹಿಂದೆ ಬಿಜೆಪಿ ಲಜ್ಜೆ ಬಿಟ್ಟು ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.</p>



<p>ನಿರ್ಮಲಾ ಸೀತಾರಾಮನ್ ಅವರ ಸಂದರ್ಶನದ ವರದಿಯನ್ನು ಪೋಸ್ಟ್​ ಮಾಡಿರುವ ಕಾಂಗ್ರೆಸ್​ ನಾಯಕ ಜೈರಾಮ್ ರಮೇಶ್​, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದು ಚುನಾವಣಾ ಬಾಂಡ್​ಗಳನ್ನು ಮರಳಿ ತರುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್​ ಘೋಷಿಸಿದೆ, ಅವುಗಳನ್ನು ಅಸಂವಿಧಾನಿಕ ಎಂದು ಕರೆಯಲಾಗುತ್ತಿದೆ.</p>



<p>ಪೇಪಿಎಂ ಹಗರಣದಲ್ಲಿ ಬಿಜೆಪಿ ಸಾರ್ವಜನಿಕರಿಂದ ಸುಮಾರು 4 ಲಕ್ಷ ಕೋಟಿ ರೂ. ಹಣವನ್ನು ಬಿಜೆಪಿ ಲೂಟಿ ಮಾಡಿರುವುದು ನಮಗೆ ತಿಳಿದಿದೆ. ಈಗ ಮತ್ತೆ ಲೂಟಿ ಮುಂದುವರೆಸಲು ಬಿಜೆಪಿ ಬಯಸುತ್ತಿದೆ ಎಂದು ಜೈರಾಮ್ ರಮೇಶ್​ ಹೇಳಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿ ಚುನಾವಣಾ ಬಾಂಡ್​ಗಳನ್ನು ಮರಳಿ ತರಲು ಬಿಜೆಪಿ ಉದ್ದೇಶಿಸಿದೆ ಎಂದು ಸೀತಾರಾಮನ್​ ಖಾಸಗಿ ಸುದ್ದಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.</p>
]]></content:encoded>
					
		
		
			</item>
		<item>
		<title>ಕರ್ನಾಟಕಕ್ಕೆ ಜಿಎಸ್ಟಿ ಮೋಸ : ನಿರ್ಮಲಾ ಸೀತಾರಾಮನ್ ಅವರಿಗೆ ಸಚಿವ ಕೃಷ್ಣ ಬೈರೇಗೌಡ ಸವಾಲ್..!</title>
		<link>https://peepalmedia.com/minister-krishna-byre-gowda-challenge-to-nirmala-sitharaman/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 26 Mar 2024 05:17:22 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[gst]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Krishna Byregowda]]></category>
		<category><![CDATA[nirmala sitaraman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=37511</guid>

					<description><![CDATA[* ರಾಜ್ಯಕ್ಕೆ ಒಟ್ಟಾರೆ ರೂ.11,495 ಕೋಟಿ ಹಣ ಕೇಂದ್ರದಿಂದ ಬಾಕಿ* ಹಣಕಾಸು ಆಯೋಗದ ಶಿಫಾರಸು ಹಿಂಪಡೆಯುವಂತೆ ಕೋರಿದ ಸೀತಾರಾಮನ್* ಓಟು ಒತ್ತೋಕೆ ಕರ್ನಾಟಕ ಬೇಕು, ನಮ್ಮ ಪಾಲಿನ ಹಣ ಕೇಳಿದರೆ ಮಾತ್ರ ಮೋಸವಾ?* ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಬಿಡಿಗಾಸೂ ಬೇಕಾಗಿಲ್ಲ: ಕೃಷ್ಣ ಬೈರೇಗೌಡ ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು [&#8230;]]]></description>
										<content:encoded><![CDATA[
<p>* ರಾಜ್ಯಕ್ಕೆ ಒಟ್ಟಾರೆ ರೂ.11,495 ಕೋಟಿ ಹಣ ಕೇಂದ್ರದಿಂದ ಬಾಕಿ<br>* ಹಣಕಾಸು ಆಯೋಗದ ಶಿಫಾರಸು ಹಿಂಪಡೆಯುವಂತೆ ಕೋರಿದ ಸೀತಾರಾಮನ್<br>* ಓಟು ಒತ್ತೋಕೆ ಕರ್ನಾಟಕ ಬೇಕು, ನಮ್ಮ ಪಾಲಿನ ಹಣ ಕೇಳಿದರೆ ಮಾತ್ರ ಮೋಸವಾ?<br>* ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದಿಂದ ಬಿಡಿಗಾಸೂ ಬೇಕಾಗಿಲ್ಲ: ಕೃಷ್ಣ ಬೈರೇಗೌಡ</p>



<p>ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದಾರ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸವಾಲೆಸೆದಿದ್ದಾರೆ.</p>



<p>ರಾಜ್ಯಕ್ಕೆ ಜಿಎಸ್ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, “ ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ” ಎಂದು ಹೇಳಿದ್ದರು. ಇದರ ಬೆನ್ನಿಗೆ ಸೋಮವಾರ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು.</p>



<p>ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. ಹಣಕಾಸು ಆಯೋಗದವರು 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21 ರಲ್ಲಿ ರೂ. 5495 ಕೋಟಿ ಹಣ ಕಡಿಮೆಯಾಗಿತ್ತು. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸ್ಸು ಮಾಡಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದದ್ದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.</p>



<p>ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021 ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಹಣಕಾಸು ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆಯಲ್ಲ ಇದೇನು? ಎಂದು ಅವರು ಕುಟುಕಿದರು.</p>



<p>2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಕೇವಲ ರೂ.31180 ಕೋಟಿಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ ನಷ್ಟ ರೂ. 5495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 2021-26ನೇ ಸಾಲಿನಲ್ಲಿ ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಒಟ್ಟಾರೆ, ರೂ.11495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ.</p>



<p>ಈ ಬಗ್ಗೆ ಪ್ರಶ್ನೆ ಮಾಡಿದರೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ. ಅಸಲಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 17 2020ರಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಕೋರಿದ್ದರು. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸೀತಾರಾಮನ್ ಅವರಿಗೆ ಪತ್ರ ಬೆರೆದಿದ್ದರು. ಈ ಎಲ್ಲಾ ವಿಚಾರಗಳೂ ದಿನಪತ್ರಿಕೆಗಳಲ್ಲೂ ಸಹ ವರದಿಯಾಗಿತ್ತು. ಹಾಗಾದರೆ&nbsp; ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರೂ ಸಹ ಸುಳ್ಳು ಹೇಳಿದ್ದರಾ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾತಿನಲ್ಲೇ ತಿವಿದರು.</p>



<p>ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದೆಡೆ ಹಣಕಾಸು ಆಯೋಗದ ಒಂದೇ ಒಂದು ಶಿಫಾರಸ್ಸನ್ನು ಸಹ ನಾವು ತಿದ್ದಲು ಹೋಗುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನವನ್ನು ಹಿಂಪಡೆಯುವಂತೆ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಲೋಕಸಭೆಯಲ್ಲೇ ಉತ್ತರ ನೀಡುತ್ತಾರೆ. ಹಾಗಾದ್ರೆ ರಾಜ್ಯದ ಪಾಲಿನ ಹಣವನ್ನು ತಡೆಹಿಡಿಯಲು ಮಾತ್ರ ಇವರ ಕಾನೂನುಗಳು ಇರುವುದಾ? ಎಂದು ವಿಷಾದಿಸಿದರು.</p>



<p><strong>ನಾವು ಕೇಳುತ್ತಿರುವುದು ಭಿಕ್ಷೆಯಲ್ಲ..!</strong><br>ಹಣಕಾಸು ಆಯೋಗ ಶಿಫಾರಸು ಮಾಡಿದ ನಮ್ಮ ಅನುದಾನವನ್ನು ನಾವು ಸಂವಿಧಾನಾತ್ಮಕವಾಗಿಯೇ ಕೇಳುತ್ತಿದ್ದೇವೆಯೇ ವಿನಃ ನಾವೇನು ಭಿಕ್ಷೆ ಕೇಳುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರಹಾಕಿದರು.</p>



<p>ನಮ್ಮ ರಾಜ್ಯದ ಹಕ್ಕನ್ನು ಕೇಳಿದರೆ ಕೇಂದ್ರ ಸರ್ಕಾರ ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಆರೋಪ ಹೊರಿಸಿ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ. ಸ್ವತಃ ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಹೀಗೆ ರಾಜ್ಯದ ಹಿತದ ವಿಚಾರದಲ್ಲಿ ಸುಳ್ಳು ಹೇಳಿ ಜನರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಸರಿಯಲ್ಲ. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೈಸೂರಿನಲ್ಲಿ ಬಹಿರಂಗ ಚರ್ಚೆಯಾಗಲಿ. ಈ ಚರ್ಚೆಗೆ ನಾವು ಸಿದ್ದ ಮಾನ್ಯ ನಿರ್ಮಲಾ ಸೀತಾರಾಮನ್ ಅವರು ಸಿದ್ದವಿದ್ದಾರ? ಎಂದು ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.</p>



<p>ಅಲ್ಲದೆ, ಈ ವಿಚಾರದಲ್ಲಿ ಕೆಸರೆರಚಾಟ, ರಾಜಕೀಯ ತೆವಲಾಟ ಆಗಬಾರದು. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಿಗೆ ಮಲತಾಯಿ ಧೋರಣೆ ಅನ್ಯಾಯ ಮಾಡಬಾರದು ಎಂದು ಅವರು ಕೇಂದ್ರ ಸರ್ಕಾರವನ್ನು ವಿನಂತಿಸಿದರು.</p>



<p><strong>ಗ್ಯಾರಂಟಿಗೆ ಕೇಂದ್ರದಿಂದ ನಯಾಪೈಸೆಯೂ ಬೇಕಾಗಿಲ್ಲ:</strong><br>ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸಿಕೊಳ್ಳುತ್ತಿದ್ದೇವೆ.ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ ರೂ.11200 ಕೋಟಿ ಹಣವನ್ನೂ ಸಹ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 550 ಕೋಟಿ ಮಾತ್ರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.</p>



<p>ನಮ್ಮ ಗ್ಯಾರಂಟಿ ಯೋಜನೆಗಳಿಗೆ ಇವರಿಂದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ತೆರಿಗೆಯಿಂದ ನಮ್ಮ ನ್ಯಾಯಯುತ ಪಾಲನ್ನು ಕೊಟ್ಟರೆ ಸಾಕು. ನಮ್ಮ ರಾಜ್ಯಕ್ಕೆ ಬರಬೇಕಾದ ಬರಪರಿಹಾರವನ್ನು ಕೊಡಲಿ. ನಿಮ್ಮ ಉದಾರತನವೇನು ಬೇಕಾಗಿಲ್ಲ. ಕರ್ನಾಟಕದ ಜನ ಇರುವುದು ಕೇವಲ ಓಟು ಒತ್ತೋಕಷ್ಟೇ ಎಂಬ ಭಾವನೆಯಿಂದ ಕೇಂದ್ರ ಸರ್ಕಾರ ಹೊರಬರಲಿ. ನಮ್ಮನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದನ್ನು ಬಿಡಲಿ. ನಮ್ಮ ಹಕ್ಕನ್ನು ನಮಗೆ ಕೊಡಲಿ ಎಂದು ಅವರು ಒತ್ತಾಯಿಸಿದರು.</p>
]]></content:encoded>
					
		
		
			</item>
		<item>
		<title>ಕೇಂದ್ರ ಬಜೆಟ್‌ 2024ರ ಮುಖ್ಯಾಂಶ: ಬಡವ, ಮಹಿಳೆ, ಯುವಕ, ಅನ್ನದಾತರ ಉದ್ಧಾರವೇ ಕೇಂದ್ರದ ಗುರಿ!</title>
		<link>https://peepalmedia.com/major-highlights-of-central-budget-2024/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 01 Feb 2024 09:52:09 +0000</pubDate>
				<category><![CDATA[ದೇಶ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Budget]]></category>
		<category><![CDATA[budget 2024]]></category>
		<category><![CDATA[Election 2024]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[loksabha election]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[nirmala]]></category>
		<category><![CDATA[nirmala sitaraman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35557</guid>

					<description><![CDATA[ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಗುರುವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ. ಗರೀಬ್ (ಬಡವರು), ಮಹಿಳಾ (ಮಹಿಳೆಯರು), ಯುವ (ಯುವಕರು) ಮತ್ತು ಅನ್ನದಾತ (ರೈತರು) ಅವರ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಕಲ್ಯಾಣವು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ &#8220;ಮಹತ್ವದ ಆದ್ಯತೆ&#8221; ಎಂದು ಅವರು ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ಪ್ರಮಾಣ ವಚನ [&#8230;]]]></description>
										<content:encoded><![CDATA[
<p>ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರ ಗುರುವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸಿದ್ದಾರೆ. 2024ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರದ ಕೊನೆಯ ಬಜೆಟ್ ಇದಾಗಿದೆ.</p>



<pre class="wp-block-code"><code>"ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಆಳವಾದ ಧನಾತ್ಮಕ ರೂಪಾಂತರವನ್ನು ಕಂಡಿದೆ. ಭಾರತದ ಜನರು ಭರವಸೆ ಮತ್ತು ಆಶಾವಾದದಿಂದ ಭವಿಷ್ಯವನ್ನು ಎದುರು ನೋಡುತ್ತಿದ್ದಾರೆ" - <strong>ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್</strong></code></pre>



<p>ಗರೀಬ್ (ಬಡವರು), ಮಹಿಳಾ (ಮಹಿಳೆಯರು), ಯುವ (ಯುವಕರು) ಮತ್ತು ಅನ್ನದಾತ (ರೈತರು) ಅವರ ಅಗತ್ಯತೆಗಳು, ಆಕಾಂಕ್ಷೆಗಳು ಮತ್ತು ಕಲ್ಯಾಣವು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ &#8220;ಮಹತ್ವದ ಆದ್ಯತೆ&#8221; ಎಂದು ಅವರು ಹೇಳಿದ್ದಾರೆ.</p>



<p>ಸಾರ್ವತ್ರಿಕ ಚುನಾವಣೆಯ ನಂತರ ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ನಂತರ ಮುಂದಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಜುಲೈನಲ್ಲಿ ಮಂಡಿಸಲಾಗುವುದು ಎಂದು ಹೇಳಿರುವ ನಿರ್ಮಲಾ, ಸ್ಪಷ್ಟವಾಗಿ ಇದೊಂದು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಬಜೆಟ್‌ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.</p>



<p style="font-size:20px"><strong>2024-25ರ ಕೇಂದ್ರ ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:</strong></p>



<ul class="wp-block-list">
<li>ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ.</li>



<li>ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ.</li>



<li>ಪ್ರಧಾನ ಮಂತ್ರಿ ಆವಾಸ್ ಯೋಜನೆ &#8211; ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ಘೋಷಿಸಲಾಗಿದೆ.</li>



<li>ತಂತ್ರಜ್ಞಾನ ಪರಿಣಿತ ಯುವಕರಿಗೆ &#8216;ಸುವರ್ಣ ಯುಗ&#8217;: ಸನ್‌ರೈಸ್ ಡೊಮೇನ್‌ಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರವನ್ನು ಗಣನೀಯವಾಗಿ ಹೆಚ್ಚಿಸಲು ಖಾಸಗಿ ವಲಯವನ್ನು ಉತ್ತೇಜಿಸಲು 50 ವರ್ಷಗಳವರೆಗೆ ಬಡ್ಡಿ ರಹಿತ ಸಾಲದೊಂದಿಗೆ 1 ಲಕ್ಷ ಕೋಟಿ ರೂಪಾಯಿಗಳ ಕಾರ್ಪಸ್ ಅನ್ನು ಸ್ಥಾಪಿಸಲಾಗುವುದು.</li>



<li>ಮನೆಯ ಛಾವಣಿಗಳಿಗೆ ಸೋಲಾರ್‌ ಅಳವಡಿಸುವ ಮೂಲಕ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್. ಈ ಯೋಜನೆಯು ರಾಮಮಂದಿರ ಶಂಕುಸ್ಥಾಪನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಂಕಲ್ಪವಾಗಿದೆ.</li>



<li>ಪ್ರವಾಸೋದ್ಯಮ ಕ್ಷೇತ್ರಗಳ &#8216;ಸಮಗ್ರ&#8217; ಅಭಿವೃದ್ಧಿ: ದೇಶೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬಂದರು ಸಂಪರ್ಕ ಯೋಜನೆಗಳು, ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಕರ್ಯಗಳನ್ನು ಲಕ್ಷದ್ವೀಪ ಸೇರಿದಂತೆ ಭಾರತಕ್ಕೆ ಸೇರಿದ ದ್ವೀಪಗಳಿಗೆ ನೀಡುವುದು.</li>



<li>ಪ್ರಧಾನ ಮಂತ್ರಿ-ಜನ್ ಧನ್ ಖಾತೆಗಳನ್ನು ಬಳಸಿಕೊಂಡು ಸರ್ಕಾರದಿಂದ 34 ಲಕ್ಷ ಕೋಟಿ ರೂಪಾಯಿಗಳ ನೇರ ಲಾಭ ವರ್ಗಾವಣೆ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 2.7 ಲಕ್ಷ ಕೋಟಿ ರೂಪಾಯಿಗಳ ಉಳಿತಾಯವಾಗಿದೆ. ಪಿಎಂ-ಸ್ವನಿಧಿ PM-SVANidhi ಮೂಲಕ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು. ಆ ಒಟ್ಟು ಮೊತ್ತದಿಂದ 2.3 ಲಕ್ಷ ಮಂದಿ ಮೂರನೇ ಬಾರಿಗೆ ಸಾಲ ಪಡೆದ್ದಾರೆ.</li>



<li>ಪರಿಷ್ಕೃತ ವಿತ್ತೀಯ ಕೊರತೆ &#8211; ಸರ್ಕಾರದ ಆದಾಯ ಮತ್ತು ವೆಚ್ಚಗಳ ನಡುವಿನ ಅಂತರ &#8211; 2023-24ರ GDP ಯ 5.8% ದಷ್ಟಿದೆ. 2025-26ರಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 4.5 ಕ್ಕಿಂತ ಕಡಿಮೆಗೊಳಿಸುವುದು ಗುರಿಯಾಗಿದೆ.</li>



<li>ಬಂಡವಾಳ ವೆಚ್ಚವನ್ನು 11.11 ಲಕ್ಷ ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ: ಬಂಡವಾಳ ವೆಚ್ಚವನ್ನು 11.1% ರಿಂದ ರೂ 11.11 ಲಕ್ಷ ಕೋಟಿಗೆ &#8211; GDP ಯ 3.4 ಶೇಕಡಾಕ್ಕೆ ಹೆಚ್ಚಿಸಲು ಬಜೆಟ್ ಪ್ರಸ್ತಾಪಿಸಿದೆ.</li>



<li>ರಕ್ಷಣಾ ಉದ್ದೇಶಗಳಿಗಾಗಿ ಡೀಪ್-ಟೆಕ್ ತಂತ್ರಜ್ಞಾನಗಳು ಮತ್ತು &#8216;ಆತ್ಮನಿರ್ಭರ್ತ&#8217;ಯನ್ನು (ಸ್ವಾವಲಂಬನೆ) ಹೆಚ್ಚಿಸುವುದು.</li>
</ul>
]]></content:encoded>
					
		
		
			</item>
		<item>
		<title>ನವೋದ್ಯಮಿಗಳಿಗೆ ತೆರಿಗೆ ವಿನಾಯತಿ: ಹರ್ಷ ವ್ಯಕ್ತಪಡಿಸಿದ ಮೋದಿ</title>
		<link>https://peepalmedia.com/budget-2024-benefits-young-entrepreneurs/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 01 Feb 2024 09:45:35 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[budget 2024]]></category>
		<category><![CDATA[Election 2024]]></category>
		<category><![CDATA[entrepreneur]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[namo]]></category>
		<category><![CDATA[narendra modi]]></category>
		<category><![CDATA[news update]]></category>
		<category><![CDATA[nirmala sitaraman]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[viral trending news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35564</guid>

					<description><![CDATA[ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ [&#8230;]]]></description>
										<content:encoded><![CDATA[
<p>ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.<br>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ ಒದಗಿಸುತ್ತಿಲ್ಲ. ಅಗಣಿತ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ. ನವೋದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿರುವುದರಿಂದ ಭಾರತ ಹೊಸ ಹೆಜ್ಜೆ ಇಡಲಿದೆ ಎಂದಿದ್ದಾರೆ.<br>ಬಜೆಟ್ ಯುವ ಭಾರತವನ್ನು ಪ್ರತಿಫಲಿಸಿದೆ. ಯುವ ಭಾರತದಲ್ಲಿ ಉದ್ಯೋಗ ಮತ್ತು ಉದ್ದಿಮೆಗಳನ್ನು ಸ್ಥಾಪನೆಯ ಉದ್ದೇಶಕ್ಕಾಗಿ ಸಂಶೋಧನೆಗಾಗಿ ರೂ. ಒಂದು ಲಕ್ಷ ಕೋಟಿ ನಿಧಿಯನ್ನು ತೆಗೆದಿಟ್ಟಿರುವುದು ಮತ್ತು ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವುದು; ಈ ಎರಡು ಪ್ರಮುಖ ನಿರ್ಧಾರಗಳು ಭಾರತದ ದಿಕ್ಕನ್ನು ಬದಲಿಸಲಿವೆ ಎಂದಿದ್ದಾರೆ</p>
]]></content:encoded>
					
		
		
			</item>
	</channel>
</rss>
