<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>operation kamala &#8211; Peepal Media</title>
	<atom:link href="https://peepalmedia.com/tag/operation-kamala/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 08 Dec 2022 06:43:11 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>operation kamala &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹಿಮಾಚಲ ಪ್ರದೇಶ : ಫಲಿತಾಂಶಕ್ಕಿಂತ ಮುನ್ನವೇ ಬಿಜೆಪಿ ಕುದುರೆ ವ್ಯಾಪಾರ!</title>
		<link>https://peepalmedia.com/himachal-pradesh-bjp-horse-trading-before-the-results/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 08 Dec 2022 06:41:50 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Election Commission of India]]></category>
		<category><![CDATA[himachal pradesh election]]></category>
		<category><![CDATA[india]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17912</guid>

					<description><![CDATA[ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು 35 ಸ್ಥಾನಗಳ ಅವಶ್ಯಕತೆ ಇದ್ದು ಕಾಂಗ್ರೆಸ್ ಅಲ್ಪ ಸ್ಥಾನಗಳ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ಅಲ್ಲಿ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಶಾಸಕರ ಕಳ್ಳತನಕ್ಕೆ ಎಲ್ಲಾ ರೀತಿಯ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಪಕ್ಷದ ಆಪರೇಷನ್ ಕಮಲದ ಮುನ್ಸೂಚನೆ ಅರಿತ ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು ಆಮಿಷಕ್ಕೆ ಒಳಗಾಗ ಬಹುದು ಎನ್ನುವ ಭೀತಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಛತ್ತೀಸಗಢದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ [&#8230;]]]></description>
										<content:encoded><![CDATA[
<p style="font-size:20px">ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಹಿಡಿಯಲು 35 ಸ್ಥಾನಗಳ ಅವಶ್ಯಕತೆ ಇದ್ದು ಕಾಂಗ್ರೆಸ್ ಅಲ್ಪ ಸ್ಥಾನಗಳ ಮುನ್ನಡೆ ಕಾಯ್ದುಕೊಂಡಿದೆ. ಈ ನಡುವೆ ಅಲ್ಲಿ ಚುನಾವಣಾ ಫಲಿತಾಂಶ ಸಂಪೂರ್ಣವಾಗಿ ಹೊರಬೀಳುವ ಮುನ್ನವೇ ಶಾಸಕರ ಕಳ್ಳತನಕ್ಕೆ ಎಲ್ಲಾ ರೀತಿಯ ತಯಾರಿಯನ್ನು ಬಿಜೆಪಿ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>



<p style="font-size:20px">ಬಿಜೆಪಿ ಪಕ್ಷದ ಆಪರೇಷನ್ ಕಮಲದ ಮುನ್ಸೂಚನೆ ಅರಿತ ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು ಆಮಿಷಕ್ಕೆ ಒಳಗಾಗ ಬಹುದು ಎನ್ನುವ ಭೀತಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಛತ್ತೀಸಗಢದ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಕಡೆಯಿಂದ ಹೊರಬಿದ್ದಿದೆ. </p>



<p style="font-size:20px">ಹಿಮಾಚಲ ಪ್ರದೇಶದ ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಶಾಸಕರ ಕಳ್ಳತನದ ಭೀತಿಯಲ್ಲಿದ್ದರು. &#8220;ಹಿ.ಪ್ರದೇಶದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅಥವಾ ಅಲ್ಪ ಸ್ಥಾನಗಳ ಮುನ್ನಡೆ ಕಾಯ್ದುಕೊಂಡರೆ, ಬಿಜೆಪಿಯು ಕೇಂದ್ರೀಯ ತನಿಖಾ ಸಂಸ್ಥೆಯಾದ ಇಡಿ ಮತ್ತು ಸಿಬಿಐ ಅನ್ನು ಬಳಸಿಕೊಂಡು ಕುದುರೆ ವ್ಯಾಪಾರ ನಡೆಸಬಹುದು&#8221; ಎಂದು ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಮುನ್ಸೂಚನೆ ನೀಡಿದ್ದರು.</p>



<p style="font-size:20px">ಸಧ್ಯದ ಪರಿಸ್ಥಿತಿಯಲ್ಲಿ ಹಿಮಾಚಲ ಪ್ರದೇಶದಲ್ಲಿ ಯಾವುದೇ ಪಕ್ಷಕ್ಕೂ ಅಧಿಕಾರ ಹಿಡಿಯಲು ಇತರ ಪಕ್ಷ ಅಥವಾ ಪಕ್ಷೇತರರ ಬೆಂಬಲ ಬೇಕಿದೆ.</p>



<p style="font-size:20px">ಈ ನಡುವೆ ಕಾಂಗ್ರೆಸ್ ಗೆ ಆಪರೇಷನ್ ಕಮಲದ ಎಲ್ಲಾ ಮುನ್ಸೂಚನೆ ಸಿಕ್ಕಿರುವ ಕಾರಣ, ತನಗೆ ಬೆಂಬಲ ನೀಡುವ ಪಕ್ಷೇತರರ ಜೊತೆಗೆ ತನ್ನದೇ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳುವುದು ದೊಡ್ಡ ತಲೆನೋವಾಗಿದೆ.</p>
]]></content:encoded>
					
		
		
			</item>
		<item>
		<title>ಶಾಸಕರ ಕಳ್ಳತನದ ಆರೋಪ ; ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್!</title>
		<link>https://peepalmedia.com/allegation-of-mla-theft-attend-bl-santosh-notice-again/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 23 Nov 2022 17:22:09 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[BL Santosh]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[telangana]]></category>
		<category><![CDATA[TRS]]></category>
		<guid isPermaLink="false">https://peepalmedia.com/?p=16334</guid>

					<description><![CDATA[ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ. ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ.&#160;ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ [&#8230;]]]></description>
										<content:encoded><![CDATA[
<p style="font-size:20px">ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಬಿ.ಎಲ್.ಸಂತೋಷ್ ಗೆ ಮತ್ತೊಮ್ಮೆ ನೋಟೀಸ್ ನೀಡುವಂತೆ ತೆಲಂಗಾಣ ಹೈಕೋರ್ಟ್ SIT ಗೆ ಸೂಚಿಸಿದೆ. ಬಿ.ಎಲ್.ಸಂತೋಷ್ SIT ನೀಡಿದ ನೋಟೀಸ್ ಹಿನ್ನೆಲೆಯಲ್ಲಿ ತನಿಖೆಗೆ ಹಾಜರಾಗದೇ ಇರುವುದಕ್ಕೆ SIT ಗರಂ ಆಗಿದೆ.</p>



<p style="font-size:20px">ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಗೆ ಈಗಾಗಲೇ ನೋಟಿಸ್ ನೀಡಲಾಗಿದೆ.&nbsp;ನೋಟೀಸ್ ನ ಅಡಿಯಲ್ಲಿ ನವೆಂಬರ್ 21 ರಂದು ಎಸ್‌ಐಟಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬಿ.ಎಲ್.ಸಂತೋಷ್ ವಿಚಾರಣೆ ಎದುರಿಸಲು ಆಗದೇ SIT ನೋಟಿಸ್ ನ್ನು ನಿರ್ಲಕ್ಷಿಸಿ ದೂರವೇ ಉಳಿದಿದ್ದರು.</p>



<p style="font-size:20px">ಈ ಹಿನ್ನೆಲೆಯಲ್ಲಿ SIT ನ್ಯಾಯಾಲಯದ ಮೊರೆ ಹೋಗಿದ್ದು, ಬಿ.ಎಲ್.ಸಂತೋಷ್ ಅವರನ್ನು ಬಂಧಿಸಲು ಅವಕಾಶ ನೀಡುವಂತೆ ಮನವಿ ಮಾಡಿತ್ತು. ಈಗಾಗಲೇ ಬಿ.ಎಲ್.ಸಂತೋಷ್ ಬಂಧನದಿಂದ ತಪ್ಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಾನೂನಾತ್ಮಕವಾಗಿ ತನಗೆ ಏನು ಸೂಕ್ತ ಭದ್ರತೆ ಬೇಕೋ ಅದನ್ನು ಮಾಡಿಕೊಂಡಿದ್ದರಿಂದ ಬಂಧಿಸುವ ಪ್ರಕ್ರಿಯೆಯಿಂದ ದೂರ ಇರುವಂತೆ SIT ಅಧಿಕಾರಿಗಳಿಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ.</p>



<p style="font-size:20px">ಕ್ರಿಮಿನಲ್ ಕಾಯ್ದೆ ಸಂಹಿತೆಯ ಸೆಕ್ಷನ್ 41 A ಅಡಿಯಲ್ಲಿ ಎಸ್‌ಐಟಿ ಈಗಾಗಲೇ ನೋಟಿಸ್ ಜಾರಿ ಮಾಡಿರುವುದರಿಂದ ಬಿ.ಎಲ್.ಸಂತೋಷ್ ರನ್ನು ಬಂಧಿಸಬಾರದು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.&nbsp;ಸಂತೋಷ್ ಬಂಧನಕ್ಕೆ ಒಳಗಾಗಬಾರದು ಎಂದು ಹೇಳಿದ ನ್ಯಾಯಾಧೀಶರು, ಎಸ್‌ಐಟಿ ನೋಟಿಸ್‌ನಲ್ಲಿ ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದರು.</p>



<p style="font-size:20px">ಕಳೆದ ತಿಂಗಳು ಟಿಆರ್‌ಎಸ್‌ ಪಕ್ಷದ ಫೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರನ್ನು ಭಾರಿ ಹಣದ ಆಮಿಷವೊಡ್ಡಿ ಬಿಜೆಪಿಗೆ ಸೆಳೆಯಲು ಯತ್ನಿಸುತ್ತಿದ್ದಾಗ ಸಾಕ್ಷ್ಯ ಸಮೇತ ಮೂವರು ಬಿಜೆಪಿ ಏಜೆಂಟ್ ಗಳನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಮೂವರು ಬಿಜೆಪಿ ಏಜೆಂಟ್‌ಗಳ ನಡುವಿನ ಸಂಭಾಷಣೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಪ್ರಮುಖವಾಗಿ ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕರ ಕಳ್ಳತನದ ಪ್ರಮುಖ ಆರೋಪದ ಅಡಿಯಲ್ಲಿ ತೆಲಂಗಾಣ SIT ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.</p>



<figure class="wp-block-image size-large"><img fetchpriority="high" decoding="async" width="1006" height="1024" src="https://peepalmedia.com/wp-content/uploads/2022/11/IMG_20221119_122717-1-1006x1024.jpg" alt="" class="wp-image-16335" srcset="https://peepalmedia.com/wp-content/uploads/2022/11/IMG_20221119_122717-1-1006x1024.jpg 1006w, https://peepalmedia.com/wp-content/uploads/2022/11/IMG_20221119_122717-1-295x300.jpg 295w, https://peepalmedia.com/wp-content/uploads/2022/11/IMG_20221119_122717-1-768x782.jpg 768w, https://peepalmedia.com/wp-content/uploads/2022/11/IMG_20221119_122717-1-150x153.jpg 150w, https://peepalmedia.com/wp-content/uploads/2022/11/IMG_20221119_122717-1-300x305.jpg 300w, https://peepalmedia.com/wp-content/uploads/2022/11/IMG_20221119_122717-1-696x708.jpg 696w, https://peepalmedia.com/wp-content/uploads/2022/11/IMG_20221119_122717-1-1068x1087.jpg 1068w, https://peepalmedia.com/wp-content/uploads/2022/11/IMG_20221119_122717-1.jpg 1080w" sizes="(max-width: 1006px) 100vw, 1006px" /></figure>



<p style="font-size:20px">ಬುಧವಾರ ಎಸ್‌ಐಟಿ ಅಧಿಕಾರಿಗಳು ಮತ್ತಿಬ್ಬರಿಗೆ ನೋಟಿಸ್ ನೀಡಿದೆ.&nbsp;ಹೈದರಾಬಾದ್‌ನ ಅಂಬರ್‌ಪೇಟ್ ಪ್ರದೇಶದ ವಕೀಲ ಪ್ರತಾಪ್ ಗೌಡ್ ಮತ್ತು ಪ್ರಕರಣದಲ್ಲಿ ಶಾಸಕರನ್ನು ಕುದುರಿಸಲು ಬಂದಿದ್ದ ಆರೋಪಿಗಳಲ್ಲಿ ಒಬ್ಬರಾದ ನಂದಕುಮಾರ್ ಅವರ ಪತ್ನಿ ಚಿತ್ರಲೇಖಾ ಅವರನ್ನು ವಿಚಾರಣೆಗೆ ಕರೆಯಲಾಗಿದೆ.</p>



<p style="font-size:20px">TRS ಶಾಸಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಖದೀಮರ ಬಂಧನವಾಗಿದೆ. ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ ಬಂಧಿಸಿ ವಿಚಾರಣೆ ನಡೆಸಲಾಗಿದೆ.</p>



<p style="font-size:20px">ಮೂಲಗಳ ಪ್ರಕಾರ ಸುಮಾರು 1 ಲಕ್ಷ ಪುಟಗಳ ಸಾಕ್ಷ್ಯವನ್ನು SIT ಅಧಿಕಾರಿಗಳು ಸಿದ್ದಪಡಿಸಿದ್ದು, ಬಿ.ಎಲ್.ಸಂತೋಷ್ ರನ್ನು ವಿಚಾರಣೆ ನಂತರ ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಈ ಹಿಂದೆ ವಿವಿಧ ರಾಜ್ಯಗಳಲ್ಲಿ ಆದ ಶಾಸಕರ ಕಳ್ಳತನದ ಆರೋಪ ಕೂಡಾ ಸಂತೋಷ್ ಮೇಲೆ ಕೇಳಿ ಬರುತ್ತಿದೆ. ಅಂತೆಯೇ ತೆಲಂಗಾಣದಲ್ಲಿ ಶಾಸಕರ ಕಳ್ಳತನ ಮಾಡಲು ಹೋಗಿದ್ದ ವ್ಯಕ್ತಿಗಳೇ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಕುದುರಿಸಲು ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.</p>



<p style="font-size:20px">ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯಲ್ಲೂ ಬಿ.ಎಲ್.ಸಂತೋಷ್ ಗೆ ಬಂಧನ ಸಾಧ್ಯತೆ ದಟ್ಟವಾಗಿದೆ.</p>



<p style="font-size:20px">ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ಹಲವಷ್ಟು ಶಾಸಕರ ಕಳ್ಳತನದ ಪ್ರಕರಣದಲ್ಲಿ ಬಿ.ಎಲ್.ಸಂತೋಷ್ ಹೆಸರು ಮುಂಚೂಣಿಯಲ್ಲಿ ಇದ್ದರೂ ಸಾಕ್ಷ್ಯದ ಕೊರತೆ ಇತ್ತು. ಆದರೆ ಇಲ್ಲಿ ತೆಲಂಗಾಣ ಸರ್ಕಾರ ಆರೋಪಿಗಳ ಬಂಧನಕ್ಕೂ ಮೊದಲೇ ಎಲ್ಲಾ ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದೆ. ಹಾಗಾಗಿ ಬಿಎಲ್ ಸಂತೋಷ್ ರನ್ನು ವಿಚಾರಣೆ ನಂತರವೇ ಬಂಧಿಸುವ ಬಗ್ಗೆಯೂ ತೆಲಂಗಾಣ SIT ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.</p>
]]></content:encoded>
					
		
		
			</item>
		<item>
		<title>ಬಿ.ಎಲ್ ಸಂತೋಷ್ ಗೆ ಬಂಧನದ ಭೀತಿ; ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ SIT ಕಡೆಯಿಂದ ಸಮನ್ಸ್ ಜಾರಿ</title>
		<link>https://peepalmedia.com/b-l-santosh-is-threatened-with-arrest-summons-issued-by-telangana-sit-for-attendance/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 19 Nov 2022 07:00:48 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[BJP leader]]></category>
		<category><![CDATA[BL Santosh]]></category>
		<category><![CDATA[karnataka]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[telangana]]></category>
		<guid isPermaLink="false">https://peepalmedia.com/?p=15884</guid>

					<description><![CDATA[ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು. ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) [&#8230;]]]></description>
										<content:encoded><![CDATA[
<p style="font-size:20px">ಹೈದರಾಬಾದ್ ನಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಪಕ್ಷದ ಶಾಸಕರ ಖರೀದಿಗೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಘ ಪರಿವಾರ ಹಿನ್ನೆಲೆಯ ಬಿ.ಎಲ್.ಸಂತೋಷ್ ಗೆ ತೆಲಂಗಾಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಈಗಾಗಲೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದ್ದ ಮಂದಿ ಬಿ.ಎಲ್.ಸಂತೋಷ್ ನೇತೃತ್ವದಲ್ಲೇ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಿದ ವಿಡಿಯೋ ಸಾಕ್ಷಿಯನ್ನು TRS ನಾಯಕರು ಬಿಡುಗಡೆ ಮಾಡಿದ್ದರು.</p>



<p style="font-size:20px">ಸದ್ಯ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ಸರ್ಕಾರವು ನೇಮಿಸಿದ್ದ ವಿಶೇಷ ತನಿಖಾ ತಂಡ (SIT) ಬಿ.ಎಲ್.ಸಂತೋಷ್ ಗೆ ಸಮನ್ಸ್ ನೀಡಿದೆ. ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ನೇತೃತ್ವದ ವಿಶೇಷ ತನಿಖಾ ತಂಡ ಮತ್ತು ನ್ಯಾಯಾಧೀಶರ ಮೇಲ್ವಿಚಾರಣೆ ನಂತರ ಈ ಬಗ್ಗೆ ಹೈಕೋರ್ಟಿಗೆ ವರದಿ ಸಲ್ಲಿಸಿದೆ. ಅದರಂತೆ ನವೆಂಬರ್ 29 ರ ಒಳಗೆ ತನಿಖೆಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ಮಾತ್ರ ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.</p>



<p style="font-size:20px">ಈ ಹಿಂದೆಯೇ ವರದಿಯಾದಂತೆ ಟಿಆರ್ಎಸ್ ಶಾಸಕರ ಖರೀದಿಗೆ ಇಳಿದಿದ್ದ ಮೂವರು ಆರೋಪಿಗಳಾದ ಸತೀಶ್ ಶರ್ಮಾ, ನಂದಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬುವವರನ್ನು ಅಕ್ಟೋಬರ್ 26 ರಂದು ಹೈದರಾಬಾದ್ ರೆಸಾರ್ಟ್ ಒಂದರಲ್ಲಿ ಬಂಧಿಸಲಾಗಿತ್ತು. ಇದಕ್ಕೂ ಮುನ್ನ ತಮ್ಮ ಪಕ್ಷದ ಶಾಸಕರನ್ನು ಹಣದ ಮೂಲಕ ಬಿಜೆಪಿ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆಡಳಿತ ಪಕ್ಷ TRS ಆರೋಪಿಸುತ್ತಲೇ ಬಂದಿತ್ತು, ಆದರೆ ಯಾವುದೇ ಗಟ್ಟಿಯಾದ ಸಾಕ್ಷ್ಯಗಳು ಇರಲಿಲ್ಲ.</p>



<p style="font-size:20px">ಆ ನಂತರ ಆದ ಮೂವರು ಖದೀಮರ ಬಂಧನದ ನಂತರ ವಿಡಿಯೋ, ಆಡಿಯೋ ಮತ್ತು ಮುಂಗಡ ವ್ಯಾಪಾರಕ್ಕೆ ತಂದಿದ್ದರು ಎನ್ನಲಾದ 15 ಕೋಟಿ ರೂ. ಹಣದ ಸಮೇತ ಭದ್ರ ಸಾಕ್ಷ್ಯಗಳ ಮೂಲಕ BJP ಹಿನ್ನೆಲೆಯ ವ್ಯಕ್ತಿಗಳನ್ನು ಹಿಡಿಯಲು TRS ಯಶಸ್ವಿಯಾಗಿತ್ತು.</p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/11/IMG_20221119_122717-1006x1024.jpg" alt="" class="wp-image-15886" width="383" height="389" srcset="https://peepalmedia.com/wp-content/uploads/2022/11/IMG_20221119_122717-1006x1024.jpg 1006w, https://peepalmedia.com/wp-content/uploads/2022/11/IMG_20221119_122717-295x300.jpg 295w, https://peepalmedia.com/wp-content/uploads/2022/11/IMG_20221119_122717-768x782.jpg 768w, https://peepalmedia.com/wp-content/uploads/2022/11/IMG_20221119_122717-150x153.jpg 150w, https://peepalmedia.com/wp-content/uploads/2022/11/IMG_20221119_122717-300x305.jpg 300w, https://peepalmedia.com/wp-content/uploads/2022/11/IMG_20221119_122717-696x708.jpg 696w, https://peepalmedia.com/wp-content/uploads/2022/11/IMG_20221119_122717-1068x1087.jpg 1068w, https://peepalmedia.com/wp-content/uploads/2022/11/IMG_20221119_122717.jpg 1080w" sizes="(max-width: 383px) 100vw, 383px" /></figure>



<p style="font-size:20px">ಇನ್ನು ಈ ನಡುವೆ ತೆಲಂಗಾಣದ TRS ಶಾಸಕರ ಖರೀದಿಗೆ ಇರಿಸಿಕೊಂಡಿದ್ದರು ಎನ್ನಲಾದ 250 ಕೋಟಿ ರೂ. ಮೊತ್ತದ ಹಣವನ್ನು ಹುಡುಕಿಕೊಂಡು ತೆಲಂಗಾಣ ಪೊಲೀಸರು ಕರ್ನಾಟಕಕ್ಕೆ ಬಂದಿದ್ದಾರೆ. ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಶೋಧ ಕಾರ್ಯ ನಡೆಸಿದ್ದೂ ಸಹ ವರದಿಯಾಗಿದೆ. ಈಗಾಗಲೇ ತೆಲಂಗಾಣ ಪೊಲೀಸರ ಆತಿಥ್ಯದಲ್ಲಿ ಇರುವ ಮೂವರು ಆರೋಪಿಗಳ ಹೇಳಿಕೆಯ ಅಡಿಯಲ್ಲಿ ತೆಲಂಗಾಣ ಪೊಲೀಸರು ಪುತ್ತೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.</p>



<p style="font-size:20px">ಸದ್ಯ ಬಿ.ಎಲ್.ಸಂತೋಷ್ ಕೂಡಾ ಕರ್ನಾಟಕ ಅದರಲ್ಲೂ ದಕ್ಷಿಣ ಕನ್ನಡ ಮೂಲದವರಾಗಿರುವ ಕಾರಣ ಶಾಸಕರ ಖರೀದಿ ಕಾರಣಕ್ಕೆ ಇರಿಸಿಕೊಂಡಿದ್ದರು ಎನ್ನಲಾದ ಹಣ ಮತ್ತು ಇನ್ನುಳಿದ ಆರೋಪಿಗಳ ಶೋಧಕ್ಕೆ ತೀವ್ರ ತಪಾಸಣೆಗೆ ತೆಲಂಗಾಣ ಪೊಲೀಸರು ಇಳಿದಿದ್ದಾರೆ.</p>



<p style="font-size:20px">ಬಿ.ಎಲ್.ಸಂತೋಷ್ ಗೆ ಈ ಪ್ರಕರಣದ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಾಗಿದ್ದು, ನವೆಂಬರ್ 21 ರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಸಮನ್ಸ್ ನಲ್ಲಿ ಸೂಚಿಸಲಾಗಿದೆ. ತೆಲಂಗಾಣ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಅಷ್ಟು ಸುಲಭವಾಗಿ ಬಿಡುವ ಪ್ರಶ್ನೆಯೇ ಇಲ್ಲ ಎಂಬ ಮಾಹಿತಿಯನ್ನು ಟಿಆರ್ಎಸ್ ಮುಖ್ಯಸ್ಥರು ತಿಳಿಸಿದ್ದಾರೆ.</p>



<figure class="wp-block-image size-full"><img decoding="async" width="678" height="452" src="https://peepalmedia.com/wp-content/uploads/2022/11/images-2022-11-19T122118.297.jpeg" alt="" class="wp-image-15885" srcset="https://peepalmedia.com/wp-content/uploads/2022/11/images-2022-11-19T122118.297.jpeg 678w, https://peepalmedia.com/wp-content/uploads/2022/11/images-2022-11-19T122118.297-300x200.jpeg 300w, https://peepalmedia.com/wp-content/uploads/2022/11/images-2022-11-19T122118.297-150x100.jpeg 150w" sizes="(max-width: 678px) 100vw, 678px" /></figure>



<p style="font-size:20px">ಈ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ್ ಬಂಧನವಾದರೆ ಇದು ಮುಂಬರುವ ಕರ್ನಾಟಕ ಚುನಾವಣೆ ಮೇಲೂ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ. ತೆಲಂಗಾಣದಲ್ಲಿ ಸಿಕ್ಕಿಬಿದ್ದ ಮೂವರು ಆರೋಪಿಗಳು ಸೂಚಿಸಿದ ಪ್ರಮುಖ ಹೆಸರುಗಳಲ್ಲಿ ಬಿ.ಎಲ್.ಸಂತೋಷ್ ಮೊದಲಿಗರಾಗಿ ನಂತರ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೆಸರು ಮುಂಚೂಣಿಯಲ್ಲಿದೆ.</p>
]]></content:encoded>
					
		
		
			</item>
		<item>
		<title>&#8220;ಆಪರೇಷನ್ ಕಮಲ&#8221;ದಲ್ಲಿ ಬಿ.ಎಲ್.ಸಂತೋಷ್ ಹೆಸರು ; KCR ಬಿಡುಗಡೆ ಮಾಡಿದ ಸಾಕ್ಷ್ಯದಲ್ಲಿ ಏನೇನಿದೆ?</title>
		<link>https://peepalmedia.com/bl-santosh-name-in-operation-kamala-what-is-in-the-evidence-released-by-kcr/</link>
		
		<dc:creator><![CDATA[Pragath K R]]></dc:creator>
		<pubDate>Fri, 04 Nov 2022 09:00:15 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[amith shah]]></category>
		<category><![CDATA[bjp]]></category>
		<category><![CDATA[KCR]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=14125</guid>

					<description><![CDATA[ತೆಲಂಗಾಣದಲ್ಲಿ ಕಾನೂನು ಬಾಹಿರ &#8220;ಆಪರೇಷನ್ ಕಮಲ&#8221;ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ &#8220;ಆಪರೇಷನ್ ಕಮಲ&#8221; ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ. ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ &#8220;ಆಪರೇಷನ್ ಕಮಲ&#8221;ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, &#8216;ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು [&#8230;]]]></description>
										<content:encoded><![CDATA[
<p style="font-size:20px">ತೆಲಂಗಾಣದಲ್ಲಿ ಕಾನೂನು ಬಾಹಿರ &#8220;ಆಪರೇಷನ್ ಕಮಲ&#8221;ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ &#8220;ಆಪರೇಷನ್ ಕಮಲ&#8221; ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/11/images-2022-11-04T142652.798.jpeg" alt="" class="wp-image-14142" width="379" height="238"/></figure>



<p style="font-size:20px">ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ &#8220;ಆಪರೇಷನ್ ಕಮಲ&#8221;ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, &#8216;ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು ನಮ್ಮ ಪಕ್ಷದ ರಾಷ್ಟ್ರ ಮಟ್ಟದ ತಂಡ ನಿರ್ವಹಿಸುತ್ತಿದ್ದು, ಇದರಲ್ಲಿ ಪಕ್ಷದ ರಾಜ್ಯ ಮುಖಂಡರ ಯಾವ ಪಾತ್ರವೂ ಇಲ್ಲ&#8217; ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಇದರ ಜೊತೆಗೆ &#8216;ಮೂರು ಪ್ರಮುಖ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಇದ್ದು ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಡೆಯಲಿದೆ. ಶಾಸಕರ ಯೋಗ್ಯತೆ ನೋಡಿ ಅವರ ಬೆಲೆ ನಿಗದಿ ಮಾಡಲಾಗುತ್ತದೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಟ 50 ಕೋಟಿಯಿಂದ 100 ಕೋಟಿ ವರೆಗೂ ನಿಗದಿ ಮಾಡಲಾಗಿದೆ. ಆ ಮೂರು ಪ್ರಮುಖ ವ್ಯಕ್ತಿಗಳೆಂದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ&#8217; ಎಂದು ಹೇಳಿದ ಸ್ಪೋಟಕ ಮಾಹಿತಿ ಹೊರಬಿದ್ದಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">‘We are ready to spend ₹50 Crores on each MLA. <a href="https://twitter.com/blsanthosh?ref_src=twsrc%5Etfw">@blsanthosh</a> will confirm &amp; arrange a meeting with <a href="https://twitter.com/AmitShah?ref_src=twsrc%5Etfw">@AmitShah</a>’ 👇 <a href="https://twitter.com/hashtag/LotusLeaks?src=hash&amp;ref_src=twsrc%5Etfw">#LotusLeaks</a> <a href="https://t.co/2hoKBP1Fr7">pic.twitter.com/2hoKBP1Fr7</a></p>&mdash; YSR (@ysathishreddy) <a href="https://twitter.com/ysathishreddy/status/1588364357301592070?ref_src=twsrc%5Etfw">November 4, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px">ತೆಲಂಗಾಣ ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ <a href="https://peepalmedia.com/operation-kamala-in-telangana-than-desperate-bjp-trapped-bjp-leaders/">ಆರೋಪಿಗಳಾದ</a> ಬಿಜೆಪಿ ಹಿನ್ನೆಲೆಯವರು ಎಂದು ಹೇಳಲಾದ ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳು ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಪಕ್ಷದ ಶಾಸಕ ರೋಹಿತ್ ರೆಡ್ಡಿ ಜೊತೆಗೆ ನಡೆಸಿದ ಸಂಭಾಷಣೆ ಇದಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಡೆಸುತ್ತಿರುವ &#8220;ಆಪರೇಷನ್ ಕಮಲ&#8221;ದ ಮಾದರಿ ಹೇಗೆ ಇರಲಿದೆ ಎಂಬುದನ್ನು ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.</p>



<p style="font-size:20px"><strong>ಖದೀಮರನ್ನು ಖೆಡ್ಡಾಗೆ ಉರುಳಿಸಿದ ಬಗೆ ಹೇಗಿತ್ತು? ಇದು &#8220;ಆಪರೇಷನ್ ನಾರಿಯಲ್ ಪಾನಿ&#8221;!</strong><br>ಅಂದಹಾಗೆ ರಾಷ್ಟ್ರಾದ್ಯಂತ ಬಿಜೆಪಿ ಪಕ್ಷ ಆಪರೇಷನ್ ಕಮಲದ ಮೂಲಕ ಹಿಂಬಾಗಿಲ ರಾಜಕಾರಣ ಮಾಡುತ್ತಾ ಬಂದಿದ್ದು ಎಲ್ಲೂ ಸಹ ಅಧಿಕೃತವಾಗಿ ಸಿಕ್ಕಿ ಬಿದ್ದಿರಲಿಲ್ಲ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲದ ಸೂಚನೆ ಸಿಕ್ಕ ತಕ್ಷಣವೇ ಟಿಆರ್ಎಸ್ ಪಕ್ಷದ ನಾಯಕರು ಜಾಗೃತಗೊಂಡಿದ್ದಾರೆ.</p>



<p style="font-size:20px">ತೆಲಂಗಾಣದ ಪೊಲೀಸರ ಸಹಕಾರ ಪಡೆದ ಟಿಆರ್ಎಸ್ ಪಕ್ಷದ ನಾಯಕರು ಮುಂಚಿತವಾಗಿಯೇ ವ್ಯವಸ್ಥೆಯಾಗಿದ್ದ ಶಾಸಕ ಪೈಲಟ್ ರೋಹಿತ್ ರೆಡ್ಡಿಯವರ ಫಾರಂ ಹೌಸ್ ನ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ನಂತರ ರೋಹಿತ್ ರೆಡ್ಡಿ ಜೇಬಿನಲ್ಲಿ ಆಡಿಯೋ ರೆಕಾರ್ಡರ್ ಅಳವಡಿಸಿದ್ದಾರೆ. ನಂತರ ಅತಿಥಿಗಳಂತೆ ಬಂದಿದ್ದ ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಆಪರೇಷನ್ ಕಮಲದ ಅಷ್ಟೂ ಪ್ರಕ್ರಿಯೆಯನ್ನು ಬಾಯಿ ಬಿಡಿಸಿದ್ದಾರೆ. ಪ್ರಮುಖವಾಗಿ ಆಪರೇಷನ್ ಕಮಲ ಹೇಗೆ ನಡೆಯಲಿದೆ, ಇದರ ರೂವಾರಿಗಳು ಯಾರು, ಒಬ್ಬೊಬ್ಬ ಶಾಸಕರನ್ನು ಎಷ್ಟು ಹಣ ಕೊಟ್ಟು ಕೊಂಡುಕೊಳ್ಳಲಾಗುತ್ತದೆ, ರಾಜೀನಾಮೆ ನಂತರ ಚುನಾವಣೆಗೆ ಬಿ.ಫಾರಂ ನೀಡುವ ಬಗ್ಗೆ, ಚುನಾವಣೆ ಗೆಲ್ಲಲು ಬೇಕಾದ ವ್ಯವಸ್ಥೆ ಬಗ್ಗೆ, ಹೀಗೆ ಎಲ್ಲಾ ವಿಚಾರಗಳು ಚರ್ಚೆಯಾಗಿವೆ.</p>



<p style="font-size:20px">ನಂತರ ಪೂರ್ವ ನಿಯೋಜನೆಯಂತೆ ಶಾಸಕ ರೋಹಿತ್ ರೆಡ್ಡಿ ಫಾರಂ ಹೌಸ್ ನ ಸಿಬ್ಬಂದಿಗೆ &#8220;ನಾರಿಯಲ್ ಪಾನಿ&#8221;(ಎಳನೀರು) ಕೊಡಲು ಹೇಳುತ್ತಾರೆ. ಆ &#8220;ನಾರಿಯಲ್ ಪಾನಿ&#8221;ಯೇ ಪೊಲೀಸರಿಗೆ ಸೂಚನೆ ಕೊಡುವ ಕೋಡ್ ವರ್ಡ್ ಆಗಿರುತ್ತದೆ. ನಂತರ ಪೊಲೀಸರು ಬಂದ ಖದೀಮರು ಮತ್ತು ಅವರ ಬಳಿಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಈ ಅಷ್ಟೂ ಪ್ರಕ್ರಿಯೆ ಸಿನಿಮೀಯ ರೀತಿಯಲ್ಲಿದ್ದು ಟಿಆರ್ಎಸ್ ಪಕ್ಷದ ಪ್ರಮುಖರು ಖದೀಮರನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>



<p style="font-size:20px">ಒಟ್ಟಾರೆ ಟಿಆರ್ಎಸ್ ಪಕ್ಷ ಆಪರೇಷನ್ ಕಮಲದ ರೂವಾರಿಗಳನ್ನು ಸಾಕ್ಷ್ಯ ಸಮೇತರಾಗಿ ಹಿಡಿದು ಹಾಕಿದ್ದು, ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.</p>
]]></content:encoded>
					
		
		
			</item>
		<item>
		<title>ಆಪರೇಶನ್‌ ಕಮಲ : TRS ಶಾಸಕರನ್ನು ಖರೀದಿಸುವ ಯತ್ನ : ಮೂವರ ಬಂಧನ</title>
		<link>https://peepalmedia.com/operation-kamala-trs-shasakarannu-kharidisuva-yathna-moovara-bandhana/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 27 Oct 2022 10:10:13 +0000</pubDate>
				<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[TRS]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13112</guid>

					<description><![CDATA[ತೆಲಂಗಾಣ: ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ಖರೀದಿಸಲು ಆಪರೇಶನ್‌ ಕಮಲ ನಡೆಸುತ್ತಿರುವ ಆರೋಪದಡಿ ಹೈದರಾಬಾದ್‌ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಬಂಧಿಸುದ್ದಾರೆ. ಗುವಾಲ ಬಾಲರಾಜ್‌, ಭೀರಮ್‌ ಹರ್ಷವರ್ಧನ್‌ ರೆಡ್ಡಿ, ಪೈಲೆಟ್‌ ಹರ್ಷವರ್ಧನ್‌ ರೆಡ್ಡಿ ಮತ್ತು ರೇಗಾಕಾಂತ್‌ ರಾವ್‌ ಈ&#160; ನಾಲ್ವರನ್ನು ಬಿಜೆಪಿ ಪಕ್ಷ ಸೇರಿಕೊಳ್ಳುವ ನೂರು ಕೋಟಿ ಆಫರ್‌ ಕೊಟ್ಟು ಖರೀದಿಸುವ ಪ್ರಯತ್ನ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಪೊಲೀಸರು ನೇರದಾಳಿ ಮಾಡಿದ್ದಾರೆ. ಹರಿಯಾಣ, ತಿರುಪತಿ ಮೂಲದ ಸ್ವಾಮಿಗಳು ಮತ್ತು ಹೈದರಾಬಾದ್‌ ಮೂಲದ ಒಬ್ಬ ಹೋಟೆಲ್‌ನ [&#8230;]]]></description>
										<content:encoded><![CDATA[
<p style="font-size:20px"><strong>ತೆಲಂಗಾಣ</strong>: ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ಖರೀದಿಸಲು ಆಪರೇಶನ್‌ ಕಮಲ ನಡೆಸುತ್ತಿರುವ ಆರೋಪದಡಿ ಹೈದರಾಬಾದ್‌ ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮೂವರನ್ನು ಬಂಧಿಸುದ್ದಾರೆ.</p>



<p style="font-size:20px">ಗುವಾಲ ಬಾಲರಾಜ್‌, ಭೀರಮ್‌ ಹರ್ಷವರ್ಧನ್‌ ರೆಡ್ಡಿ, ಪೈಲೆಟ್‌ ಹರ್ಷವರ್ಧನ್‌ ರೆಡ್ಡಿ ಮತ್ತು ರೇಗಾಕಾಂತ್‌ ರಾವ್‌ ಈ&nbsp; ನಾಲ್ವರನ್ನು ಬಿಜೆಪಿ ಪಕ್ಷ ಸೇರಿಕೊಳ್ಳುವ ನೂರು ಕೋಟಿ ಆಫರ್‌ ಕೊಟ್ಟು ಖರೀದಿಸುವ ಪ್ರಯತ್ನ ಮಾಡುತ್ತಿರುವ ಆರೋಪ ಕೇಳಿಬಂದಿದ್ದು ಪೊಲೀಸರು ನೇರದಾಳಿ ಮಾಡಿದ್ದಾರೆ. ಹರಿಯಾಣ, ತಿರುಪತಿ ಮೂಲದ ಸ್ವಾಮಿಗಳು ಮತ್ತು ಹೈದರಾಬಾದ್‌ ಮೂಲದ ಒಬ್ಬ ಹೋಟೆಲ್‌ನ ಉದ್ಯಮಿ ಆಪರೇಶನ್‌ ಕಮಲ ನಡೆಸುತ್ತಿದ್ದು ದೆಹಲಿಯಿಂದ 15 ಕೋಟಿ ಹಣ ತಂದು ನಾಲ್ವರನ್ನು ಬಿಜೆಪಿಗೆ ಖರೀದಿಸುವ ಪ್ರಯತ್ನ ಮಾಡಿದ್ದಾರೆ.</p>



<p style="font-size:20px">ತೆಲಂಗಾಣದಲ್ಲಿ TRS ಶಾಸಕರನ್ನು ಬಿಜೆಪಿಯವರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಸಲುವಾಗಿ ಕುದುರೆ ವ್ಯಾಪಾರವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. &nbsp;ಪೋಲಿಸರು ಆಪರೇಶನ್‌ ಕಮಲ ಮಾತುಕತೆ ನಡೆಸುತ್ತಿರುವಾಗಲೇ ಪೊಲೀಸರು ಹೈದರಾಬಾದ್‌ ಫಾರ್ಮ್‌ಹೌಸ್‌ &nbsp;ನೇರ ದಾಳಿ ಮಾಡಿದ್ದು, ಮೂವರನ್ನು ಬಂಧಿಸಿ 15 ಕೋಟಿ ರೂಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.</p>
]]></content:encoded>
					
		
		
			</item>
	</channel>
</rss>
