<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Opposition Party Leader &#8211; Peepal Media</title>
	<atom:link href="https://peepalmedia.com/tag/opposition-party-leader/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 19 Dec 2023 08:18:41 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Opposition Party Leader &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಂಸತ್‌ ಮೇಲೆ ʼನಿರುದ್ಯೋಗದʼ ಹೊಗೆ!</title>
		<link>https://peepalmedia.com/unemployment-debate-in-india/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 19 Dec 2023 08:18:41 +0000</pubDate>
				<category><![CDATA[ಅಂಕಣ]]></category>
		<category><![CDATA[attack]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[dehali]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mallikarjun karge]]></category>
		<category><![CDATA[narendra modi]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[opposition]]></category>
		<category><![CDATA[Opposition Party Leader]]></category>
		<category><![CDATA[parlimement]]></category>
		<category><![CDATA[parliment attack]]></category>
		<category><![CDATA[parlimentary sessions]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[rahul gandi]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33866</guid>

					<description><![CDATA[ಡಿಸೆಂಬರ್‌ 13, ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ನುಗ್ಗಿ, ಹಳದಿ ಬಣ್ಣದ ಹೊಗೆಯನ್ನು ಹಾರಿಸಿ ʼಸರ್ವಾಧಿಕಾರʼದ ವಿರುದ್ದ ಘೋಷಣೆಗಳನ್ನು ಕೂಗಿದರು. ಸಂಸತ್‌ ದಾಳಿ ಎಂಬಂತೆ ಬಿಂಬಿಸಲ್ಪಟ್ಟ ಆರು ಮಂದಿ ಯುವಕರ ಈ ನಾಟಕೀಯ ಸಂಭವ ದೇಶದಾದ್ಯಂತ ನಿರುದ್ಯೋಗದ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು. ಉದ್ಯೋಗ ಸಿಗದೆ ಈ ʼಪ್ರತಿಭಟನಾಕಾರರುʼ ಹತಾಶರಾಗಿ ಹೋಗಿದ್ದರು. ಹರಿಯಾಣ ಮೂಲದ ನೀಲಂ ಆಜಾದ್ ಎಂಬ ಮಹಿಳೆ ಉನ್ನತ ಸ್ನಾತಕೋತ್ತರ ಪದವಿಯನ್ನು ಪಡೆದೂ ನಿರುದ್ಯೋಗಿಯಾಗಿದ್ದರು.. ಇವರೆಲ್ಲಾ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಭಿಮಾನಿಗಳಾಗಿದ್ದರೆಂದೂ, 1929 [&#8230;]]]></description>
										<content:encoded><![CDATA[
<p class="has-regular-font-size"><strong>ಡಿಸೆಂಬರ್‌ 13</strong>, ಬುಧವಾರ ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ನುಗ್ಗಿ, ಹಳದಿ ಬಣ್ಣದ ಹೊಗೆಯನ್ನು ಹಾರಿಸಿ ʼಸರ್ವಾಧಿಕಾರʼದ ವಿರುದ್ದ ಘೋಷಣೆಗಳನ್ನು ಕೂಗಿದರು. ಸಂಸತ್‌ ದಾಳಿ ಎಂಬಂತೆ ಬಿಂಬಿಸಲ್ಪಟ್ಟ ಆರು ಮಂದಿ ಯುವಕರ ಈ ನಾಟಕೀಯ ಸಂಭವ ದೇಶದಾದ್ಯಂತ ನಿರುದ್ಯೋಗದ ವಿರುದ್ಧದ ಪ್ರತಿಭಟನೆಯಾಗಿ ಬದಲಾಯಿತು.</p>



<p>ಉದ್ಯೋಗ ಸಿಗದೆ ಈ ʼಪ್ರತಿಭಟನಾಕಾರರುʼ ಹತಾಶರಾಗಿ ಹೋಗಿದ್ದರು. ಹರಿಯಾಣ ಮೂಲದ ನೀಲಂ ಆಜಾದ್ ಎಂಬ ಮಹಿಳೆ ಉನ್ನತ ಸ್ನಾತಕೋತ್ತರ ಪದವಿಯನ್ನು ಪಡೆದೂ ನಿರುದ್ಯೋಗಿಯಾಗಿದ್ದರು.. ಇವರೆಲ್ಲಾ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅಭಿಮಾನಿಗಳಾಗಿದ್ದರೆಂದೂ, 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ಸ್ಫೋಟಿಸಿದಂತೆ ಇದನ್ನೂ ಮಾಡಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕಾಂಗ್ರೇಸ್‌ ನಾಯಕ ರಾಹುಲ್‌ ಗಾಂಧಿಯವರೂ ಈ ಘಟನೆಯ ಹಿಂದೆ ʼನಿರುದ್ಯೋಗʼದ ಕಾರಣವನ್ನು ಕಂಡಿದ್ದಾರೆ.</p>



<p>ಮೋದಿ ಸರ್ಕಾರವು ಆರೋಪಿಗಳನ್ನು ಭಯೋತ್ಪಾದನೆಯ ಆರೋಪದಡಿಯಲ್ಲಿ ಬಂಧಿಸಿದರೂ ಎಷ್ಟೇ ನಾಟಕೀಯವಾಗಿದ್ದರೂ, ಇದು ಹೇಗೆ ಭಯೋತ್ಪಾದಕ ಕೃತ್ಯವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಈ ಮೂಲಕ ಇಡೀ ಕೃತ್ಯ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ನಿರುದ್ಯೋಗದ ಬಗೆಗಿನ ಚರ್ಚೆಗೆ ಕಾರಣವಾಗಿದೆ.</p>



<p style="font-size:20px"><strong>ನಿರುದ್ಯೋಗ ಎಂಬ ಮಹಾಮಾರಿ!</strong></p>



<p>ಈ ಘಟನೆಯ ಹೊರತಾಗಿಯೂ ದೇಶದಾದ್ಯಂತ ನಿರುದ್ಯೋಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ವರದಿಗಳು ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನು ನಮ್ಮ ಮುಂದೆ ಇಟ್ಟಿವೆ. <a href="https://indianexpress.com/article/explained/explained-economics/explainspeaking-india-young-workforce-8903202/" data-type="link" data-id="https://indianexpress.com/article/explained/explained-economics/explainspeaking-india-young-workforce-8903202/">ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ</a>ಯ ಅಂಕಿಅಂಶಗಳು, ಔದ್ಯೋಗಿಕ ವಲಯದಲ್ಲಿ 15-29 ವರ್ಷ ವಯಸ್ಸಿನ ಯುವಕರ ಪ್ರಮಾಣ 2016-17 ರಲ್ಲಿ 25% ಇದ್ದದ್ದು, 2022-23 ರಲ್ಲಿ 17% ಕ್ಕೆ ಗಂಭೀರವಾಗಿ ಕುಸಿದಿರುವುದನ್ನು ತೋರಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ, 45 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣ 37% ರಿಂದ 49% ಕ್ಕೆ ಏರಿದೆ.</p>



<p>ಬೆಳೆಯುತ್ತಿರುವ ಆರ್ಥಿಕತೆಯಾಗಿ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಅತ್ಯಂತ ತೀವ್ರವಾಗಿ ಹೆಚ್ಚಾಗಿದೆ. ಪಕ್ಕದ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾ ತಮ್ಮ ದೇಶದ ಯುವಕ-ಯುವತಿಯರಿಗೆ ಉದ್ಯೋಗ ನೀಡುವಲ್ಲಿ ಉತ್ತಮ ಕೆಲಸವನ್ನು ಮಾಡಿದೆ ಎಂದು <a href="https://qz.com/nearly-25-young-indians-jobless-worse-than-indonesia-1850513670" data-type="link" data-id="https://qz.com/nearly-25-young-indians-jobless-worse-than-indonesia-1850513670">ವಿಶ್ವ ಬ್ಯಾಂಕ್‌ನ ಡೇಟಾ</a> ತೋರಿಸುತ್ತದೆ. ಭಾರತ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ಬದಲು ಜನಸಂಖ್ಯೆಯ ಬೆಳವಣಿಗೆಯನ್ನು ಮುಂದುವರಿಸಿದೆ. HSBC ಯ ಭಾರತೀಯ <a href="https://www.reuters.com/world/india/despite-world-beating-growth-indias-lack-jobs-threatens-its-young-2023-05-30/" data-type="link" data-id="https://www.reuters.com/world/india/despite-world-beating-growth-indias-lack-jobs-threatens-its-young-2023-05-30/">ಅರ್ಥಶಾಸ್ತ್ರಜ್ಞ ಪ್ರಾಂಜುಲ್ ಭಂಡಾರಿ</a>, ಮುಂದಿನ ಒಂದು ದಶಕದಲ್ಲಿ ಭಾರತವು 70 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬೇಕಿದೆ. ಆದರೆ, ಅದು ಕೇವಲ 24 ಮಿಲಿಯನ್‌ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.</p>



<p>ಉದ್ಯೋಗ ಮತ್ತು ಶಿಕ್ಷಣ ಪರಸ್ಪರ ವಿರುದ್ಧ ಸಂಬಂಧವನ್ನು ಹೊಂದಿರುವಂತೆ ಕಾಣುತ್ತಿದೆ ಎಂದರೆ ದುರಾದೃಷ್ಟ. ಒಂದು ಹೆಚ್ಚಾದರೆ ಇನ್ನೊಂದು ಕಡಿಮೆಯಾಗುತ್ತದೆ. ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023 ರ ಪ್ರಕಾರ ಭಾರತದ ನಿರುದ್ಯೋಗ ಮಟ್ಟ ಯುವ ಪದವೀಧರರಲ್ಲಿಯೇ ಹೆಚ್ಚು, ಅಂದರೆ 42%. ಸಂಸತ್ತಿನಮೇಲೆ ದಾಳಿ ಮಾಡಿದ ಯುವಕರು ಭಾರತದಲ್ಲಿ ವಿದ್ಯಾವಂತ ಯುವಕ ಜನತೆ ಭಾರತದ ಜಾಬ್‌ ಮಾರ್ಕೆಟ್‌ನ ಮೇಲೆ ಅತ್ಯಂತ ಕಳಪೆ ನಿರೀಕ್ಷೆಗಳನ್ನು ಹೊಂದಿರುವುದನ್ನು ತೋರಿಸುತ್ತದೆ.</p>



<p>ಈ ಎಲ್ಲಾ ಪರಿಸ್ಥಿತಿಗಳನ್ನು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜನತೆ ನಿರುದ್ಯೋಗವನ್ನು ಅತ್ಯಂತ ಕರಾಳ ಸಮಸ್ಯೆಯೆಂಬಂತೆ ನೋಡುತ್ತಿರುವುದು ಅತಿಶಯೋಕ್ತಿಯಲ್ಲ. ದೆಹಲಿ ಮೂಲದ <a href="https://twitter.com/sanjaycsds/status/1735539618769154502?t=Utu3OpBI4abxmEu8mW8wRQ&amp;s=08" data-type="link" data-id="https://twitter.com/sanjaycsds/status/1735539618769154502?t=Utu3OpBI4abxmEu8mW8wRQ&amp;s=08">ಥಿಂಕ್ ಟ್ಯಾಂಕ್ ಲೋಕ್‌ನೀತಿ</a> ಗುಜರಾತ್‌ನ 88% ಜನರು ನಿರುದ್ಯೋಗವನ್ನು &#8220;ದೊಡ್ಡ ಸಮಸ್ಯೆ&#8221; ಎಂದು ಪರಿಗಣಿಸಿದ್ದಾರೆ ಎಂದು ಹೇಳಿದೆ. ಇತರ ರಾಜ್ಯಗಳ ಜನರೂ ಇದೇ ರೀತಿಯ ಅಭಿಪ್ರಾಯವನ್ನು ಹೊಂದಿದ್ದಾರೆ.</p>



<p style="font-size:20px"><strong>ರಾಜಕೀಯವಾಗಿ ಸೋತಿದೆಯೇ ದೇಶ?</strong></p>



<p>ನಿರುದ್ಯೋಗದ ಸಮಸ್ಯೆ ದೇಶದ ರಾಜಕೀಯ ವೈಫಲ್ಯ ಎಂಬಂತೆ ಯಾಕೆ ಪರಿಗಣಿಸಲ್ಪಟ್ಟಿಲ್ಲ ಎಂಬುದೇ ಅಚ್ಚರಿ. ಅದೊಂದು ರಾಜಕೀಯ ಚರ್ಚೆಯ ವಿಷಯವಾಗಿ ಯಾಕೆ ಬದಲಾಗಿಲ್ಲ? ಹಾಗೊಂದು ವೇಳೆ ಜನರು ನಿರುದ್ಯೋಗವನ್ನು ರಾಜಕೀಯ ಸಮಸ್ಯ ಎಂಬಂತೆ ಪರಿಗಣಿಸಿದರೂ, ಅದು ರಾಜ್ಯ ಮಟ್ಟದಲ್ಲಿ ಮಾತ್ರ. ಇದು ತೆಲಂಗಾಣದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿತ್ತು. ಭಾರತ್ ರಾಷ್ಟ್ರ ಸಮಿತಿಯು ಅಧಿಕಾರವನ್ನು ಕಳೆದುಕೊಳ್ಳಲು ಮತ್ತು ಮತದಾರರು ಕಾಂಗ್ರೆಸ್ ಸರ್ಕಾರವನ್ನು ರಾಜ್ಯಕ್ಕೆ ತರಲು ಮುಖ್ಯ ಕಾರಣವೇ ನಿರುದೈೋಗ ಸಮಸ್ಯೆ. ಪಶ್ಚಿಮ ಬಂಗಾಳದ ಎಸ್‌ಎಸ್‌ಸಿ ಹಗರಣ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣದಂತಹ ಸರ್ಕಾರಿ ನೇಮಕಾತಿಯಲ್ಲಿನ ಭ್ರಷ್ಟಾಚಾರಗಳು ರಾಜ್ಯ ಸರ್ಕಾರಗಳ ವಿರುದ್ಧ ಜನಾಕ್ರೋಶಕ್ಕೆ ಕಾರಣವಾಗಿವೆ. ʼಕೆಲಸ ಕೊಡದೆ ವಂಚಿಸಿದ್ದಾರೆʼ ಎಂಬುದೇ ಉದ್ಯೋಗ ಇಲ್ಲದ ವಿದ್ಯಾವಂತ ಯುವಕರ ಕೋಪ!</p>



<p>ಇದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತಿರುವ ರಾಜ್ಯ ಸರ್ಕಾರಗಳು ಈಗ ಅನೇಕ ನೀತಿಗಳನ್ನು ಜಾರಿಗೆ ತರುತ್ತಿವೆ. ನಿಮಗೆ ಗೊತ್ತಿರುವಂತೆ ಬಿಹಾರ ಜಾತಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಜಾತಿ ಆಧಾರಿತ ಕೋಟಾಗಳನ್ನು 50% ರಿಂದ 65% ಕ್ಕೆ ವಿಸ್ತರಿಸಿದೆ. ಇದು ಇತರ ಹಿಂದುಳಿದ ವರ್ಗಗಳ ವಿದ್ಯಾವಂತ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಉತ್ತಮ ಅವಕಾಶವನ್ನು ನೀಡಬಹುದು.</p>



<p>ಆದರೆ ಸರ್ಕಾರಿ ಉದ್ಯೋಗಗಳ ಸಂಖ್ಯೆ ತೀರಾ ಕಡಿಮೆ. ಹಾಗಾಗಿ, ಸರ್ಕಾರಗಳು ತಳಮಟ್ಟದ ಯುವಕನ್ನು ತಲುಪಲು ನಗದು ವರ್ಗಾವಣೆಯಂತಹ ಕ್ರಮಗಳ ಕಡೆಗೆ ಗಮನ ಹರಿಸಿವೆ. ಕರ್ನಾಟಕದಲ್ಲಿ ಕಾಂಗ್ರೇಸ್‌ ಮಾಡಿದ್ದೂ ಇದನ್ನೇ. ಮಿರುದ್ಯೋಗಿ ಯುವಕರಿಗೆ ಉದ್ಯೋಗ ಕಂಡುಕೊಳ್ಳುವ ಅವಧಿಯ ವರೆಗೆ ಆರ್ಥಿಕ ನೆರವು ನೀಡುವುದು. ಸಹಜವಾಗಿಯೇ ಇದು ನಿರುದ್ಯೋಗಿಗಳಿಗೆ ಒಂದು ಮಟ್ಟದ ವರೆಗೆ ಆರ್ಥಿಕ ಬೆಂಬಲವಾಗುತ್ತದೆ.</p>



<p>ಸಾಂವಿಧಾನಿಕವಾಗಿ ಆರ್ಥಿಕ, ಹಣಕಾಸು ಮತ್ತು ವಾಣಿಜ್ಯದಂತಹ ಬಹುತೇಕ ಅಧಿಕಾರಗಳು ಕೇಂದ್ರಕ್ಕೆ ಸೇರಿದ್ದು. ಉದ್ಯೋಗಗಳನ್ನು ಸೃಷ್ಟಿಸುವುದು ಮುಖ್ಯವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿ. ವಿಪರ್ಯಾಸವೆಂದರೆ, ಜನರ ನಿರುದ್ಯೋಗ ಪ್ರೇರಿತ ಕೋಪ ಕೇಂದ್ರದ ಕಡೆಗೆ ತುಂಬಾ ತುಂಬಾ ಕಡಿಮೆ. ಇದರ ಹಿಂದೆ ಕೆಲಸ ಮಾಡಿರುವುದು ನರೇಂದ್ರ ಮೋದಿ ಹಾಗೂ ಬಿಜೆಪಿಯ ಜನಪ್ರಿಯತೆ. ಉದ್ಯೋಗ ಕೇಳಬೇಕಾದ ಯುವಕರಿಗೆ ಚರ್ಚಿಸಲು ಹಾಗೂ ಯೋಚಿಸಲು, ಅವರನ್ನು ಉದ್ಯೋಗದ ಬಗ್ಗೆ ಯೋಚಿಸದಂತೆ ಮಾಡಲು ಬಿಜೆಪಿಯ ನರೇಟಿವ್‌ಗಳು ಪ್ರಖರವಾಗಿ ಕೆಲಸ ಮಾಡಿವೆ. ನಿರುದ್ಯೋಗಿ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಲು ಬೇಕಾದ ಅಗತ್ಯಗಳ ಬಗ್ಗೆ ಯೋಚನೆ ಮಾಡದಂತೆ ಬಿಜೆಪಿ ಮಾಡಿದೆ. ಕೊನೆಯಲ್ಲಿ, ʼಉದ್ಯೋಗ ಇಲ್ಲದಿದ್ದರೂ ಏನಂತೆ, ಮೋದಿ ಇರಬೇಕು!ʼ ಎಂಬ ಯೋಚನೆಗಳನ್ನು ಬಿತ್ತಲಾಗಿದೆ.</p>



<p style="font-size:20px"><strong>ದೆಹಲಿಯ ಕಡೆಗಿಲ್ಲ ಜನಾಕ್ರೋಶ!</strong></p>



<p>ಉದ್ಯೋಗ ನೀಡುವುದು ಕೇಂದ್ರದ ಜವಬ್ದಾರಿ. ಜನತೆ ಕೇಂದ್ರದ ಮೇಲೆ ತಮ್ಮ ಆಕ್ರೋಶವನ್ನು ತೋರಿಸಬೇಕು. ಆದರೆ, ನಿರುದ್ಯೋಗದ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕಾದ ಮುಖ್ಯವಾಹಿನಿಗಳ ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಮರೆತಿವೆ. ಅವುಗಳು ಅನಧಿಕೃತವಾಗಿ ಬಿಜೆಪಿಯ ಐಟಿ ಸೆಲ್‌ಗಳಾಗಿ ಬದಲಾಗಿವೆ.</p>



<p>ಮೇಲ್ವರ್ಗಗಳ ಜನರು ತಾವು ವೈಯಕ್ತಿಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದರೂ, ಕೇಸರಿ ಪಕ್ಷದ ಮೇಲೆ ತಮ್ಮ ಕೋಪವನ್ನು ತೋರಿಸುತ್ತಿಲ್ಲ. ಇಲ್ಲಿ ನಿರುದ್ಯೋಗ ಎಂಬುದು ಚರ್ಚೆಯ ವಿಷಯವೇ ಅಲ್ಲ. ದೇವಾಲಯ, ರಾಷ್ಟ್ರೀಯ ಭದ್ರತೆ ಅಪಾಯದಲ್ಲಿದೆ, ಧರ್ಮ ಅಪಾಯದಲ್ಲಿದೆ ಎಂಬ ನರೇಟಿವ್‌ಗಳು 2014 ರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಿ ಕೆಲಸ ಮಾಡಿವೆಯೋ, ಇವತ್ತಿಗೂ ಹಾಗೆಯೇ ಚರ್ಚಿಸಬೇಕಾದ ಅಗತ್ಯ ವಿಷಯಗಳಿಂದ ಜನರನ್ನು ಹಾದಿತಪ್ಪಿಸುತ್ತಿವೆ. ಒಂದು ಲೆಕ್ಕದಲ್ಲಿ ನೋಡಿದರೆ, ಈ ನರೇಟಿವ್‌ಗಳ ಪ್ರಭಾವ ಈಗ ಹೆಚ್ಚೇ ಇದೆ.</p>



<p>ಬಿಜೆಪಿಯ ರಾಜಕೀಯ ತಂತ್ರಗಾರಿಕೆಗಳ ಹೊರತಾಗಿಯೂ, ನಿರುದ್ಯೋಗ ಎಂಬ ʼರಾಜಕೀಯವಲ್ಲದೇ ಹೋಗಿರುವʼ ಸಮಸ್ಯೆ ಆಗಾಗ ಹೆಡೆ ಎತ್ತಿ ಬುಸುಗುಡುತ್ತಾ, ಇದ್ದಕ್ಕಿದ್ದಂತೆ ವಿಷಗಾಳಿ ಬಿಡುತ್ತದೆ. ಆಗ ಸಂಸತ್‌ ಮೇಲೆ ನಡೆಸಿದ ಹಳದಿ ಹೊಗೆ ದಾಳಿಯಂತಹ ಘಟನೆಗಳು ನಡೆಯುತ್ತವೆ. 1980 ರ ದಶಕದ ಉತ್ತರಾರ್ಧದಿಂದ ಭಾರತವು ಆರ್ಥಿಕವಾಗಿ ಸಮರ್ಪಕವಾಗಿ ಬೆಳೆಯುತ್ತಿದ್ದರೂ, ನಿರುದ್ಯೋಗ, ಅದರಲ್ಲೂ ಕಾರ್ಮಿಕ ಶಕ್ತಿಯನ್ನು ಕಡಿಮೆ ಬಳಸಿಕೊಳ್ಳುತ್ತಿರುವ ಕ್ಷೇತ್ರಗಳಲ್ಲಿ ಬೆಳೆಯುತ್ತಲೇ ಇದೆ. ಅಂದರೆ, ಆರ್ಥಿಕವಾಗಿ ಬೆಳೆಯುವುದು ಮತ್ತು ಉದ್ಯೋಗ ಹೆಚ್ಚಳದ ಮಧ್ಯೆ ಸಂಬಂಧವೇ ಇಲ್ಲ.</p>



<p><a href="https://cse.azimpremjiuniversity.edu.in/wp-content/uploads/2023/11/SWI-2023-Executive-summary_ebook_revised-.pdf" data-type="link" data-id="https://cse.azimpremjiuniversity.edu.in/wp-content/uploads/2023/11/SWI-2023-Executive-summary_ebook_revised-.pdf">ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ ವರದಿ 2023</a> ರ ವರದಿಯೂ ಇದನ್ನೇ ಹೇಳುತ್ತದೆ. ಇದರ ಪ್ರಕಾರವೂ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗದ ಬೆಳವಣಿಗೆಯ ನಡುವೆ ಯಾವುದೇ ಸಂಬಂಧವಿಲ್ಲ . ಇದಲ್ಲದೆ, ಭಾರತದ ನಿರುದ್ಯೋಗ ಸಮಸ್ಯೆಯ ಇನ್ನೊಂದು ಕರಾಳ ಆಧ್ಯಾಯವೆಂದರೆ, ಮಹಿಳರೂ ಸಂಬಳದ ಕೆಲಸವನ್ನು ಅತೀ ಕಡಿಮೆ ಮಾಡುತ್ತಿದ್ದಾರೆ. ಭಾರತದ ಮಹಿಳಾ ಕಾರ್ಮಿಕ ಬಲ ವಿಶ್ವದಲ್ಲೇ ಅತ್ಯಂತ ಕೆಟ್ಟದಾಗಿದೆ.</p>



<p>ನಿರುದ್ಯೋಗದ ಸಮಸ್ಯೆಯನ್ನು ಸುಧಾರಿಸಲು ಬೃಹತ್ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯೊಂದರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ತುಂಬಾ ಸಮಯ ಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಮತದಾರರು, ಉದ್ಯೋಗ ಸಮಸ್ಯೆಯನ್ನು ಸರ್ಕಾರ ನಿವಾರಿಸಬಹುದು ಎಂದು ಯೋಚಿಸುವುದೂ ಅಸಂಭನೀಯ. ಇದು ನನ್ನ ವೈಯಕ್ತಿಕ ನಿರಾಶವಾದವಾಗಿದ್ದರೆ ಸಾಕು! ಹಿಂದುತ್ವದಂತಹ ಐಡೆಂಟಿಟಿ ಪಾಲಿಟಿಕ್ಸ್ ಆಡವಾಡುವ ವರೆಗೆ ಇದು ಸಾದ್ಯವಾಗುತ್ತದೆಯೋ ಇಲ್ಲವೋ.</p>
]]></content:encoded>
					
		
		
			</item>
		<item>
		<title>ಭದ್ರತಾ ಲೋಪ ಎಂದು ಕೈ ತೊಳೆದುಕೊಳ್ಳುತ್ತಿದೆ ಕೇಂದ್ರ: ರಾಜ್ಯ ಕಾಂಗ್ರೆಸ್</title>
		<link>https://peepalmedia.com/centre-is-escaping-from-security-breach-issue/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 15 Dec 2023 11:00:44 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[attack]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[dehali]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mallikarjun karge]]></category>
		<category><![CDATA[narendra modi]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[opposition]]></category>
		<category><![CDATA[Opposition Party Leader]]></category>
		<category><![CDATA[parlimement]]></category>
		<category><![CDATA[parliment attack]]></category>
		<category><![CDATA[parlimentary sessions]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33752</guid>

					<description><![CDATA[ಬೆಂಗಳೂರು: ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ, ಆದರೂ ಕ ಭದ್ರತಾ ಲೋಪ ಎಂದು ಬಿಂಬಿಸಿ ಸಂಸತ್ ಮೇಲಿನ ದಾಳಿಯನ್ನ ಮರೆಸುವ ಹುನ್ನಾರ ನೆಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ದೂರಿದೆ. ಈ ಹಿನ್ನಲೆಯಲ್ಲಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ ಎಂದು ತಿಳಿಸುವ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ, ಆದರೂ ಕ ಭದ್ರತಾ ಲೋಪ ಎಂದು ಬಿಂಬಿಸಿ ಸಂಸತ್ ಮೇಲಿನ ದಾಳಿಯನ್ನ ಮರೆಸುವ ಹುನ್ನಾರ ನೆಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ದೂರಿದೆ.</p>



<p>ಈ ಹಿನ್ನಲೆಯಲ್ಲಿ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ ಎಂದು ತಿಳಿಸುವ ಮೂಲಕ, ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಸಂಬಂಧವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಸಂಸತ್ ದಾಳಿಕೋರರಿಗೆ ಸಂಸದ ಪ್ರತಾಪ್ ಸಿಂಹ ಮೂರು ಬಾರಿ ಸಂಸತ್ ಪಾಸ್ ನೀಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.<br><br>ಪರಿಚಯ, ಆತ್ಮೀಯ ಒಡನಾಟ ಇಲ್ಲದೆ ಇದ್ದರೆ ಮೂರು ಬಾರಿ ಪಾಸ್ ವಿತರಿಸಲು ಸಾಧ್ಯವೇ ಇಲ್ಲ.<a href="https://twitter.com/mepratap?ref_src=twsrc%5Etfw">@mepratap</a> ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?<br>ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ?…</p>&mdash; Karnataka Congress (@INCKarnataka) <a href="https://twitter.com/INCKarnataka/status/1735580001247142148?ref_src=twsrc%5Etfw">December 15, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪ್ರತಾಪ್ ಸಿಂಹ ಅವರಿಗೂ ದಾಳಿಕೋರರಿಗೂ ಇರುವ ನಿಗೂಢ ಸಂಬಂಧದ ಬಗ್ಗೆ ತನಿಖೆ ಮಾಡದಿರುವುದೇಕೆ?<br>ಪ್ರತಾಪ್ ಸಿಂಹ ಅಡಗಿ ಕುಳಿತಿರುವುದೇಕೆ? ದಾಳಿಕೋರರ ಮೇಲೆ UAPAಯಂತಹ ಗಂಭೀರ ಪ್ರಕರಣ ದಾಖಲಿಸಲಾಗಿದೆ, ಅಪರಾಧಕ್ಕೆ ಸಹಕಾರ ನೀಡಿದವರನ್ನೂ ತನಿಖೆಗೆ ಒಳಪಡಿಸುವುದು ಸಹಜ ಕಾನೂನು ಪ್ರಕ್ರಿಯೆ.ಇಂತಹ ಸಹಜ ಕಾನೂನು ಪ್ರಕ್ರಿಯೆಯನ್ನೂ ಮಾಡದೆ ಪ್ರತಾಪ್ ಸಿಂಹರವರ ರಕ್ಷಣೆಗೆ ನಿಂತಿರುವುದೇಕೆ?ಕೇಂದ್ರ ಸರ್ಕಾರ ಕೇವಲ ಭದ್ರತಾ ಲೋಪ ಎನ್ನುವುದನ್ನು ಬಿಂಬಿಸಿ ಕೈ ತೊಳೆದುಕೊಳ್ಳಲು ಹೊರಟಿರುವುದೇಕೆ? ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರೆಶ್ನೆಗಳ ಸುರಿಮಳೆ ಸುರಿಸಿದೆ.</p>
]]></content:encoded>
					
		
		
			</item>
		<item>
		<title>ಪ್ರಧಾನಿಗಳನ್ನೇ ರಕ್ಷಿಸಲು ಬಿಜೆಪಿಗೆ ಸಾಧ್ಯವಿಲ್ಲ! ಮುಂದುವರಿದ ವಿಪಕ್ಷಗಳ ಧರಣಿ</title>
		<link>https://peepalmedia.com/opposition-demands-for-clarity-over-parliament-security-breach/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 15 Dec 2023 09:06:33 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[attack]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[dehali]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mallikarjun karge]]></category>
		<category><![CDATA[narendra modi]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[opposition]]></category>
		<category><![CDATA[Opposition Party Leader]]></category>
		<category><![CDATA[parlimement]]></category>
		<category><![CDATA[parliment attack]]></category>
		<category><![CDATA[parlimentary sessions]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33735</guid>

					<description><![CDATA[ನವದೆಹಲಿ: ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ನಡೆಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮುಂದೂಡಲಾಗಿದೆ. ಸತತ ಎರಡು ದಿನಗಳ ಕಾಲ ಸಂಸತ್ತಿನಲ್ಲಿ ಅಸ್ತವ್ಯಸ್ತ ಉಂಟಾಗಿದೆ. ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್‌ಕರ್‌ ಅವರು ಈ ವಿಷಯದ ಬಗ್ಗೆ ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರಿಂದ ಹಲವಾರು ನೋಟಿಸ್‌ಗಳನ್ನು ಸ್ವೀಕರಿಸಿದರೂ, ಈ ವಿನಂತಿಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು. [&#8230;]]]></description>
										<content:encoded><![CDATA[
<p><strong>ನವದೆಹಲಿ:</strong> ಲೋಕಸಭೆಯಲ್ಲಿ ಭದ್ರತಾ ಲೋಪದ ಬಗ್ಗೆ ಚರ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳು ಪ್ರತಿಭಟನೆಗೆ ನಡೆಸಿದ ಕಾರಣ ಸಂಸತ್ತಿನ ಉಭಯ ಸದನಗಳನ್ನು ಇಂದು ಮುಂದೂಡಲಾಗಿದೆ. ಸತತ ಎರಡು ದಿನಗಳ ಕಾಲ ಸಂಸತ್ತಿನಲ್ಲಿ ಅಸ್ತವ್ಯಸ್ತ ಉಂಟಾಗಿದೆ.</p>



<p>ರಾಜ್ಯಸಭೆಯಲ್ಲಿ ಸಭಾಪತಿ ಜಗದೀಪ್ ಧನ್‌ಕರ್‌ ಅವರು ಈ ವಿಷಯದ ಬಗ್ಗೆ ಚರ್ಚೆಗಾಗಿ ವಿರೋಧ ಪಕ್ಷದ ಸದಸ್ಯರಿಂದ ಹಲವಾರು ನೋಟಿಸ್‌ಗಳನ್ನು ಸ್ವೀಕರಿಸಿದರೂ, ಈ ವಿನಂತಿಗಳಿಗೆ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ನಿನ್ನೆಯಷ್ಟೇ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮುಂದೂಡಲಾಗಿತ್ತು. ಲೋಕಸಭೆಯಲ್ಲೂ ಪರಿಸ್ಥತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.</p>



<p>ಸಂಸತ್ತಿನ ಹೊರಗೆ ಮಕರ ದ್ವಾರದ ಮೆಟ್ಟಿಲುಗಳು ಹೊಸ ಪ್ರತಿಭಟನೆಯ ಪಾಯಿಂಟ್ ಆಗಿ ಬದಲಾಗಿದ್ದು, ಅಮಾನತುಗೊಂಡ ಸಂಸದರು ಭಿತ್ತಿಪತ್ರಗಳೊಂದಿಗೆ ಸರ್ಕಾರ ಹಠಮಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಅಮಾನತುಗೊಂಡ ಸಂಸದರ ಜೊತೆ ಸೇರಿಕೊಂಡಿದ್ದಾರೆ. </p>



<p>ಸದನದ ಹೊರಗಿರುವ ಗಾಂಧಿ ಪ್ರತಿಮೆ ಎದುರು ಇತರ ಸಂಸದರೊಂದಿಗೆ ಪ್ರತಿಭಟನೆ ನಡೆಸಿದ ಡಿಎಂಕೆ ಸಂಸದೆ ಕನಿಮೊಳಿ, &#8216;ಈ ದೇಶವನ್ನು ರಕ್ಷಿಸುವವರು ತಮ್ಮಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಪದೇ ಪದೇ ಹೇಳುತ್ತಿದೆ. ಅವರಿಗೆ ಸಂಸತ್ತಿನ ರಕ್ಷಣೆಯನ್ನೇ ಮಾಡಲಾಗಿಲ್ಲ. ಪ್ರಧಾನಿಯವರು ಅಲ್ಲಿದ್ದರೆ, ಅವರನ್ನೂ  ರಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಯಾವುದೇ ಭದ್ರತೆಯ ಉಲ್ಲಂಘನೆಗೆ ದೇಶ ಮತ್ತು ಸರ್ಕಾರ ಹೊಣೆಯಾಗಬೇಕು. ಪ್ರಧಾನಿ ಮತ್ತು ಗೃಹಮಂತ್ರಿ ಸಂಸತ್ತಿಗೆ ಬಂದು ಏನಾಯಿತು ಎಂದು ನಮಗೆ ತಿಳಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಆದರೆ ಅವರು ಅದನ್ನೂ ಮಾಡಲಿಲ್ಲ,&#8221; ಎಂದು ಟೀಕಿಸಿದ್ದಾರೆ.</p>



<p>ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಕ್ಕಟ್ಟಿಗೆ ಕೇಂದ್ರ ಗೃಹ ಸರ್ಕಾರವನ್ನು ದೂಷಿಸಿ, ಇದನ್ನು ತಡೆಯಲು ಏನೂ ಮಾಡಿಲ್ಲ  ಎಂದು ಆರೋಪಿಸಿದ್ದಾರೆ.</p>



<p>“ಗೃಹ ಸಚಿವರು ದೆಹಲಿ ಪೊಲೀಸ್ ಮತ್ತು ದೇಶದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರು ಹೊರಗೆ ಮಾಧ್ಯಮದ ವಾಹಿನಿಗಳೊಂದಿಗೆ ಮಾತನಾಡುತ್ತಿದ್ದಾರೆ, ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ, ಸಂಸತ್ತಿನ ಅಧಿವೇಶನದಲ್ಲಿ ಸದಸ್ಯರಾಗಿರುವ ಅವರು ತಮ್ಮ ಹೊಣೆಗಾರಿಕೆಯಂತೆ ಸಂಸತ್ತಿನ ಸದನದಲ್ಲಿ ಇರಬೇಕು. ಅವರು ಸಂಸದರೊಂದಿಗೆ ಮಾತನಾಡಲು ಇಲ್ಲಿಗೆ ಬರಬೇಕು,&#8221; ಎಂದು ತರೂರ್‌ ಹೇಳಿದ್ದಾರೆ.</p>



<p>ಸಂಸತ್ತಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಪರಿಸ್ಥಿತಿಯನ್ನು ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಾ, “ಸಭಾಧ್ಯಕ್ಷರು ಈಗಾಗಲೇ ಸರ್ವಪಕ್ಷ ಸಭೆಯಲ್ಲಿ ಸದಸ್ಯರೊಂದಿಗೆ [ಭದ್ರತಾ ಉಲ್ಲಂಘನೆ ಬಗ್ಗೆ] ಚರ್ಚಿಸಿದ್ದಾರೆ. ಸಂಸತ್ತಿನ ಉಭಯ ಸದನಗಳ ಜವಾಬ್ದಾರಿ ಅವರ ಮೇಲಿದೆ ಎಂದು ಅವರು ಈಗಾಗಲೇ ಹೇಳಿದ್ದಾರೆ ಮತ್ತು ನಾವು ಅನುಸರಿಸಬೇಕಾದ ನಿರ್ದೇಶನಗಳನ್ನು ಅವರು ನೀಡಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಇದೆಲ್ಲದರ ಮಧ್ಯೆ ಸದನ ನಡೆಸಲು ಬಿಡುವುದಿಲ್ಲ ಎಂಬ ಪ್ರತಿಪಕ್ಷಗಳ ಹೇಳಿಕೆಗಳು ಅವರಿಗೆ ತಕ್ಕುದಲ್ಲ. ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು,&#8221; ಎಂದು ಹೇಳಿದ್ದಾರೆ.</p>



<figure class="wp-block-image size-full"><img fetchpriority="high" decoding="async" width="990" height="504" src="https://peepalmedia.com/wp-content/uploads/2023/12/image-4.png" alt="" class="wp-image-33736" srcset="https://peepalmedia.com/wp-content/uploads/2023/12/image-4.png 990w, https://peepalmedia.com/wp-content/uploads/2023/12/image-4-300x153.png 300w, https://peepalmedia.com/wp-content/uploads/2023/12/image-4-768x391.png 768w, https://peepalmedia.com/wp-content/uploads/2023/12/image-4-150x76.png 150w, https://peepalmedia.com/wp-content/uploads/2023/12/image-4-696x354.png 696w" sizes="(max-width: 990px) 100vw, 990px" /><figcaption class="wp-element-caption">ಖರ್ಗೆ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ, ಕೃಪೆ:X/@kharge</figcaption></figure>



<p>ಸಂಸತ್ತು ಪ್ರಾರಂಭವಾಗುವ ಮೊದಲು, ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯು ಕಾರ್ಯತಂತ್ರವನ್ನು ರೂಪಿಸಲು, ಇಡೀ ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟನ್ನು ಪ್ರದರ್ಶಿಸಲು ಮುಂದಾಗಿದ್ದಾರೆ. </p>
]]></content:encoded>
					
		
		
			</item>
		<item>
		<title>ಬಿಜೆಪಿ ಒಳಗಿನ ಬಣ ರಾಜಕೀಯದಲ್ಲಿ ಯಾರಾಗ್ತಾರೆ ಪ್ರತಿಪಕ್ಷ ನಾಯಕ?</title>
		<link>https://peepalmedia.com/who-is-the-leader-of-the-opposition/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 17 Nov 2023 03:57:57 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Opposition Party Leader]]></category>
		<category><![CDATA[Opposition party meet]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=32389</guid>

					<description><![CDATA[ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಶಾಸಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನವೆಂಬರ್ 17 ಕ್ಕೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಬಿಜೆಪಿ ಇಂದು ತನ್ನ ಪಕ್ಷದ ಶಾಸಕಾಂಗ ಸಭೆ ಕರೆದಿದೆ. ಬಹುತೇಕ ಇಂದು ಪ್ರತಿಪಕ್ಷ ನಾಯಕನ ಆಯ್ಕೆ ಕೂಡಾ ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಶುಕ್ರವಾರ ಸಂಜೆ 6 ಗಂಟೆಗೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಭಿನ್ನಾಭಿಪ್ರಾಯ ಶಮನದ [&#8230;]]]></description>
										<content:encoded><![CDATA[
<p>ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಶಾಸಕ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ನವೆಂಬರ್ 17 ಕ್ಕೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಬಿಜೆಪಿ ಇಂದು ತನ್ನ ಪಕ್ಷದ ಶಾಸಕಾಂಗ ಸಭೆ ಕರೆದಿದೆ. ಬಹುತೇಕ ಇಂದು ಪ್ರತಿಪಕ್ಷ ನಾಯಕನ ಆಯ್ಕೆ ಕೂಡಾ ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.</p>



<p>ಶುಕ್ರವಾರ ಸಂಜೆ 6 ಗಂಟೆಗೆ ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಲವು ಆಕಾಂಕ್ಷಿಗಳು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಭಿನ್ನಾಭಿಪ್ರಾಯ ಶಮನದ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಕಡೆಯಿಂದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಬರಲಿದ್ದಾರೆ ಎನ್ನಲಾಗಿದೆ.</p>



<p>ಮುಖ್ಯವಾಗಿ ಪ್ರತಿಪಕ್ಷ ನಾಯಕನ ರೇಸ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ಆರ್ ಅಶೋಕ್, ಅಶ್ವತ್ಥ್ ನಾರಾಯಣ್, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ ಇದ್ದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಆ ಜವಾಬ್ದಾರಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.</p>



<p>ಇನ್ನು ಹಿಂದುಳಿದ ವರ್ಗಗಳ ಸಾಲಿನಲ್ಲಿ ಸುನೀಲ್ ಕುಮಾರ್ ಸ್ಥಾನ ಸಿಕ್ಕಿದರೂ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಗೆ ಈ ಸ್ಥಾನ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೊಂದು ವೇಳೆ ಪ್ರತಿಪಕ್ಷ ನಾಯಕನ ಸ್ಥಾನ ಸುನೀಲ್ ಕುಮಾರ್ ಕೈತಪ್ಪಿದರೆ ಬಿಜೆಪಿಯ ಭದ್ರಕೋಟೆ ಎನ್ನಿಸಿಕೊಳ್ಳುವ ಕರಾವಳಿ ಭಾಗಕ್ಕೆ ಬಿಜೆಪಿ ಯಾವುದೇ ಪ್ರಾತಿನಿಧ್ಯ ಕೊಡದಂತಾಗಲಿದೆ. ಈ ಹಿನ್ನೆಲೆಯಲ್ಲಿ ಕೇವಲ ಮತ ಹಾಗೂ ರಾಜಕೀಯಕ್ಕಷ್ಟೆ ಕರಾವಳಿ ಭಾಗದವರನ್ನು ಪರಿಗಣನೆ ಮಾಡುತ್ತಿರುವ ಬಗ್ಗೆ ಸಣ್ಣ ಮಟ್ಟದ ವಿರೋಧದ ಕೂಗು ಕೇಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.</p>



<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-1024x576.jpg" alt="" class="wp-image-32390" srcset="https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-1024x576.jpg 1024w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-300x169.jpg 300w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-768x432.jpg 768w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-150x84.jpg 150w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-696x392.jpg 696w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490-1068x601.jpg 1068w, https://peepalmedia.com/wp-content/uploads/2023/11/prajavani_2023-06_139ff363-61f8-4b14-bad5-aa6b565e7004_sunil_kumar16481209261650030490.jpg 1200w" sizes="(max-width: 1024px) 100vw, 1024px" /></figure>



<p>ಇನ್ನು ಶಾಸಕ ಆರಗ ಜ್ಞಾನೇಂದ್ರ ಕೂಡಾ ಅಲ್ಲಲ್ಲಿ ತಾನೂ ಸಹ ಪ್ರತಿಪಕ್ಷ ನಾಯಕನ ಆಕಾಂಕ್ಷಿ, ಜವಾಬ್ದಾರಿ ಕೊಟ್ಟರೆ ಸಮರ್ಥವಾಗಿ ನಿಭಾಯಿಸಬಲ್ಲೆ ಎಂದು ಹೇಳಿಕೆ ನೀಡಿದ್ದರು. ಹಿಂದಿನ ಬಿಜೆಪಿ ಪಕ್ಷದ ಆಡಳಿತದಲ್ಲಿ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ತಮ್ಮ ಅಧಿಕಾರಾವಧಿಯ ಬಹುತೇಕ ದಿನಗಳಲ್ಲಿ ತಮ್ಮ ಸ್ವಕ್ಷೇತ್ರ ಬಿಟ್ಟು ಕದಲದ ಬಗ್ಗೆ ಗಂಭೀರ ಆರೋಪವಿದೆ. ರಾಜ್ಯದಲ್ಲಿ ಎಂತಹ ಅಪರಾಧ ಪ್ರಕರಣ, ಗಲಭೆಯಂತ ಸಂದರ್ಭದಲ್ಲಿ ತಮ್ಮ ಕ್ಷೇತ್ರ ತೀರ್ಥಹಳ್ಳಿಯಲ್ಲೇ ಇದ್ದುಕೊಂಡು ಆಡಳಿತ ನಡೆಸಿದ್ದರು. ಅಧಿವೇಶನದ ಸಮಯದಲ್ಲಷ್ಟೆ ಆರಗ ಜ್ಞಾನೇಂದ್ರ ಕ್ಷೇತ್ರ ಬಿಟ್ಟಿದ್ದರು ಎಂಬ ಆರೋಪವೂ ಆರಗ ಜ್ಞಾನೇಂದ್ರ ಮೇಲಿರುವುದರಿಂದ ಪಕ್ಷದ ವಲಯದಲ್ಲೇ ಜ್ಞಾನೇಂದ್ರ ಬಗ್ಗೆ ಅಪಸ್ವರವಿದೆ.</p>



<figure class="wp-block-image size-full"><img decoding="async" width="783" height="391" src="https://peepalmedia.com/wp-content/uploads/2023/11/images-2023-11-17T092252.024.jpeg" alt="" class="wp-image-32391" srcset="https://peepalmedia.com/wp-content/uploads/2023/11/images-2023-11-17T092252.024.jpeg 783w, https://peepalmedia.com/wp-content/uploads/2023/11/images-2023-11-17T092252.024-300x150.jpeg 300w, https://peepalmedia.com/wp-content/uploads/2023/11/images-2023-11-17T092252.024-768x384.jpeg 768w, https://peepalmedia.com/wp-content/uploads/2023/11/images-2023-11-17T092252.024-150x75.jpeg 150w, https://peepalmedia.com/wp-content/uploads/2023/11/images-2023-11-17T092252.024-696x348.jpeg 696w" sizes="(max-width: 783px) 100vw, 783px" /></figure>



<p>ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಇರುವ ಮತ್ತೊಬ್ಬ ಪ್ರಬಲ ಆಕಾಂಕ್ಷಿ, ಶಾಸಕ ಸುರೇಶ್ ಕುಮಾರ್. ಬಿಜೆಪಿ ಹಿಂದಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಬ್ರಾಹ್ಮಣರ ಹಿಡಿತದಲ್ಲೇ ಇದ್ದಂತಹ ಪಕ್ಷ. ಹಿಂದಿನ ಅಧಿಕಾರಾವಧಿಯಲ್ಲಿ ಬಹುತೇಕ ಬಿ.ಎಲ್.ಸಂತೋಷ್ ಆಡಳಿತದಲ್ಲಿ ಮೂಗು ತೂರಿಸಿದ ಸೂಪರ್ ಸಿಎಂ ಎಂಬ ಅಪಖ್ಯಾತಿ ಕೂಡಾ ಇದೆ. ಆದರೆ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ ನಲ್ಲಿ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯ ನಂತರ ಸಂಪೂರ್ಣ ಬ್ರಾಹ್ಮಣರ ಹಿಡಿತ ತಪ್ಪಿದಂತಾಗಿದೆ. ಆದರೆ ಯಾವೊಂದು ಬಣದಲ್ಲೂ ಅಷ್ಟಾಗಿ ಗುರುತಿಸಿಕೊಳ್ಳದ ಸುರೇಶ್ ಕುಮಾರ್ ಗೆ ಹೈಕಮಾಂಡ್ ಪ್ರತಿಪಕ್ಷ ನಾಯಕನ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸಬಹುದು ಎನ್ನಲಾಗಿದೆ.</p>



<figure class="wp-block-image size-full"><img loading="lazy" decoding="async" width="747" height="411" src="https://peepalmedia.com/wp-content/uploads/2023/11/images-2023-11-17T092354.402.jpeg" alt="" class="wp-image-32392" srcset="https://peepalmedia.com/wp-content/uploads/2023/11/images-2023-11-17T092354.402.jpeg 747w, https://peepalmedia.com/wp-content/uploads/2023/11/images-2023-11-17T092354.402-300x165.jpeg 300w, https://peepalmedia.com/wp-content/uploads/2023/11/images-2023-11-17T092354.402-150x83.jpeg 150w, https://peepalmedia.com/wp-content/uploads/2023/11/images-2023-11-17T092354.402-696x383.jpeg 696w" sizes="auto, (max-width: 747px) 100vw, 747px" /></figure>



<p>ರಾಜ್ಯಾಧ್ಯಕ್ಷ ಹುದ್ದೆಗೆ ಲಿಂಗಾಯತರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಒಕ್ಕಲಿಗ ಪ್ರಾತಿನಿಧ್ಯದ ಕೂಗು ಬಿಜೆಪಿ ಆಂತರಿಕ ಮಟ್ಟದಲ್ಲಿ ಕೇಳಿ ಬಂದಿದೆ. ಹಿರಿತನದ ಆಧಾರದಲ್ಲಿ ನೋಡುವುದಾದರೆ ಆರ್.ಅಶೋಕ್ ಗೆ ಹಾಗೂ ತಂತ್ರಗಾರಿಕೆ ಅಡಿಯಲ್ಲಿ ಅಶ್ವತ್ಥ್ ನಾರಾಯಣ್ ಇಬ್ಬರೂ ಸೂಕ್ತ ಎಂಬ ಮಾತು ಎಲ್ಲಾ ಕಡೆಯಿಂದಲೂ ಕೇಳಿ ಬರುತ್ತಿದೆ. ಈಗಾಗಲೇ ಆರ್.ಅಶೋಕ್ ತನ್ನದೇ ಸ್ಥಾನ ಭದ್ರ ಎಂಬ ಹುಮ್ಮಸ್ಸಿನಲ್ಲಿದ್ದರೆ ಅಶ್ವತ್ಥ್ ನಾರಾಯಣ್ ಅವರ ಆಯ್ಕೆಯನ್ನೂ ಇಲ್ಲಿ ತಳ್ಳಿ ಹಾಕುವಂತಿಲ್ಲ.</p>



<figure class="wp-block-image size-full"><img loading="lazy" decoding="async" width="783" height="391" src="https://peepalmedia.com/wp-content/uploads/2023/11/images-2023-11-17T092443.523.jpeg" alt="" class="wp-image-32393" srcset="https://peepalmedia.com/wp-content/uploads/2023/11/images-2023-11-17T092443.523.jpeg 783w, https://peepalmedia.com/wp-content/uploads/2023/11/images-2023-11-17T092443.523-300x150.jpeg 300w, https://peepalmedia.com/wp-content/uploads/2023/11/images-2023-11-17T092443.523-768x384.jpeg 768w, https://peepalmedia.com/wp-content/uploads/2023/11/images-2023-11-17T092443.523-150x75.jpeg 150w, https://peepalmedia.com/wp-content/uploads/2023/11/images-2023-11-17T092443.523-696x348.jpeg 696w" sizes="auto, (max-width: 783px) 100vw, 783px" /></figure>



<p>ಎಲ್ಲರೂ ತಿಳಿದಿರುವಂತೆ ಬಿಜೆಪಿ ಒಳಗಿನ ಬಣ ರಾಜಕೀಯ ಕೂಡ ಪ್ರತಿಪಕ್ಷ ನಾಯಕನ ಆಯ್ಕೆಯಲ್ಲಿ ಕೆಲಸ ಮಾಡಬಹುದು ಎನ್ನಲಾಗಿದೆ. ರಾಜ್ಯಾಧ್ಯಕ್ಷನ ಆಯ್ಕೆಯಲ್ಲಿ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದರೂ, ಬಿ.ಎಲ್.ಸಂತೋಷ್ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ತನ್ನದೇ ಅಭ್ಯರ್ಥಿ ಆಗಬೇಕು ಎಂಬ ಪಟ್ಟು ಹಿಡಿದಂತಿದೆ. ಈಗಿರುವಂತೆ ರೇಸ್ ನಲ್ಲಿ ಇರುವ ಸುರೇಶ್ ಕುಮಾರ್, ಅಶ್ವತ್ಥ್ ನಾರಾಯಣ್, ಆರ್.ಅಶೋಕ್ ಆರಗ ಜ್ಞಾನೇಂದ್ರ ಈ ನಾಲ್ಕು ಹೆಸರುಗಳು ಬಿಜೆಪಿ ಪಟ್ಟಿಯಲ್ಲಿ ಇರುವ ಪ್ರಮುಖ ಹೆಸರುಗಳು ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಆಗಬಹುದು ಎಂದರೂ ಅಥವಾ ಶಾಸಕರ ಒಮ್ಮತ ಕೂಡಾ ಅಷ್ಟೆ ಮುಖ್ಯ ಸ್ಥಾನ ಪಡೆಯಬಹುದು ಎನ್ನಲಾಗಿದೆ.</p>
]]></content:encoded>
					
		
		
			</item>
	</channel>
</rss>
