<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Pakistan &#8211; Peepal Media</title>
	<atom:link href="https://peepalmedia.com/tag/pakistan/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 30 Jun 2025 06:03:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Pakistan &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>&#8220;ರಾಜಕೀಯ ನಾಯಕತ್ವದ ನಿರ್ಬಂಧಗಳಿಂದಾಗಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿತು&#8221;- ಭಾರತೀಯ ರಕ್ಷಣಾ ಅಧಿಕಾರಿ</title>
		<link>https://peepalmedia.com/india-lost-fighter-jets-due-to-political-leadership-constraints/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Jun 2025 05:57:52 +0000</pubDate>
				<category><![CDATA[ದೇಶ]]></category>
		<category><![CDATA[indian army]]></category>
		<category><![CDATA[indo-pakistan war]]></category>
		<category><![CDATA[operation sindhur]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=61774</guid>

					<description><![CDATA[ಮೇ 7 ರ ರಾತ್ರಿ ಪಾಕಿಸ್ತಾನದ ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆಯು ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತವು ತನ್ನ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಭಾರತದ ರಕ್ಷಣಾ ಅಧಿಕಾರಿ ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಶಿವಕುಮಾರ್ ಜೂನ್ 10, 2025 ರಂದು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ&#160;ಹೇಳಿದ್ದರು. &#8220;ರಾಜಕೀಯ ನಾಯಕತ್ವವು ಮಿಲಿಟರಿ ಸ್ಥಾಪನೆ ಅಥವಾ ಅವರ ವಾಯು ರಕ್ಷಣೆಯ ಮೇಲೆ ದಾಳಿ ಮಾಡದಂತೆ ನೀಡಿದ್ದ ನಿರ್ಬಂಧದಿಂದಾಗಿ,&#8221; ಹೀಗಾಗಿದೆ ಎಂದು ಶಿವಕುಮಾರ್‌ ಹೇಳಿರುವುದನ್ನು&#160;ದಿ ವೈರ್ ವರದಿ ಮಾಡಿತ್ತು. [&#8230;]]]></description>
										<content:encoded><![CDATA[
<p>ಮೇ 7 ರ ರಾತ್ರಿ ಪಾಕಿಸ್ತಾನದ ಭಯೋತ್ಪಾದನಾ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆಯು ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತವು ತನ್ನ ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಭಾರತದ ರಕ್ಷಣಾ ಅಧಿಕಾರಿ ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಶಿವಕುಮಾರ್ ಜೂನ್ 10, 2025  ರಂದು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ&nbsp;ಹೇಳಿದ್ದರು. &#8220;ರಾಜಕೀಯ ನಾಯಕತ್ವವು ಮಿಲಿಟರಿ ಸ್ಥಾಪನೆ ಅಥವಾ ಅವರ ವಾಯು ರಕ್ಷಣೆಯ ಮೇಲೆ ದಾಳಿ ಮಾಡದಂತೆ ನೀಡಿದ್ದ ನಿರ್ಬಂಧದಿಂದಾಗಿ,&#8221; ಹೀಗಾಗಿದೆ ಎಂದು ಶಿವಕುಮಾರ್‌ ಹೇಳಿರುವುದನ್ನು&nbsp;<a href="https://thewire.in/security/iaf-lost-fighter-jets-to-pak-because-of-political-leaderships-constraints-indian-defence-attache">ದಿ ವೈರ್ ವರದಿ </a>ಮಾಡಿತ್ತು. ಇದಾದ&nbsp;ಒಂದು ದಿನದ ನಂತರ, ವಿರೋಧ ಪಕ್ಷ ಕಾಂಗ್ರೆಸ್ ಈ ವಿಚಾರದ ಬಗ್ಗೆ ಸ್ಪಷ್ಟತೆಯನ್ನು ಕೇಳಿತ್ತು.</p>



<p>ತಮ್ಮ ಭಾಷಣದಲ್ಲಿ ಭಾರತವು ಹಲವು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂದು ಶಿವಕುಮಾರ್‌ ಒಪ್ಪಿಕೊಂಡಿದ್ದರು.</p>



<p>ಇಂಡೋನೇಷ್ಯಾದ ಜಕಾರ್ತದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಕ್ಯಾಪ್ಟನ್ ಕುಮಾರ್ ಅವರ ಹೇಳಿಕೆಗಳನ್ನು &#8221; ಸಂದರ್ಭೋಚಿತವಲ್ಲದ (out of context)&#8221; ಎಂದು ಹೇಳಿಕೆ ನೀಡಿದ್ದರೂ, ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾತು ಹೊರಬಂದಿಲ್ಲ.</p>



<p>ನಿಜವಾದ ಸಮಸ್ಯೆ ಎಷ್ಟು ಜೆಟ್‌ ವಿಮಾನಗಳನ್ನು ಕಳೆದುಕೊಂಡಿದ್ದೇವೆ ಎಂಬುದಲ್ಲ, ಯಾಕೆ ಕಳೆದುಕೊಂಡಿದ್ದೇವೆ ಎಂಬುದು ಎಂದು&nbsp;ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್&nbsp;<a href="https://thewire.in/south-asia/cds-accepts-loss-of-iaf-fighter-jets-interview">ಈ ಹಿಂದೆ ಹೇಳಿದ್ದರು.</a></p>



<p>ಆಪರೇಷನ್ ಸಿಂಧೂರ್ ಬಗ್ಗೆ ಸರ್ಕಾರವು ಆರಂಭದಿಂದಲೂ ಗೌಪ್ಯತೆಯನ್ನು ಕಾಯ್ದುಕೊಂಡು ದೇಶವನ್ನು ದಾರಿ ತಪ್ಪಿಸಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ X ನಲ್ಲಿ ಹೇಳಿದ್ದರು:</p>



<pre class="wp-block-code"><code>"<strong>ಆಪರೇಷನ್ ಸಿಂಧೂರ್ ಸಮಯದಲ್ಲಿ ವಿಮಾನ ನಷ್ಟವನ್ನು ಬಹಿರಂಗಪಡಿಸುವಲ್ಲಿ ವಿಫಲವಾದ ಮೋದಿ ಸರ್ಕಾರ ಆರಂಭದಿಂದಲೂ ರಾಷ್ಟ್ರವನ್ನು ದಾರಿ ತಪ್ಪಿಸಿದೆ.
ಮೇ 6/7 ರಂದು ನಡೆದ ವಾಯು ಸಂಘರ್ಷದಲ್ಲಿನ ನಷ್ಟಗಳ ಬಗ್ಗೆ ಪರೋಕ್ಷ ಉಲ್ಲೇಖಗಳಿದ್ದವು, ಡಿಜಿ ಏರ್ ಆಪ್ಸ್ (ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ) ಅವರು "ನಾವು ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ ಮತ್ತು ನಷ್ಟಗಳು ಯುದ್ಧದ ಒಂದು ಭಾಗವಾಗಿದೆ" ಎಂದು ಹೇಳಿದರು.
ನಂತರ, ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದ ಸಂದರ್ಭದಲ್ಲಿ ಬ್ಲೂಮ್‌ಬರ್ಗ್ ಟಿವಿಯೊಂದಿಗೆ ಮಾತನಾಡುತ್ತಾ, ನಮ್ಮ ಹಠಾತ್ ದಾಳಿಯ ಮೊದಲ ಅಧಿಕೃತ ಪ್ರವೇಶವನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅವರಿಗೆ ಬಿಡಲಾಯಿತು ಎಂದು ಹೇಳಿದ್ದರು.
ಈಗ, ಕ್ಯಾಪ್ಟನ್ ಶಿವಕುಮಾರ್ ಅವರ ಮತ್ತೊಂದು ಆಘಾತಕಾರಿ ಹೇಳಿಕೆಯಲ್ಲಿ, "ರಾಜಕೀಯ ನಾಯಕತ್ವ ನೀಡಿದ ನಿರ್ಬಂಧದಿಂದಾಗಿ" ಪಾಕಿಸ್ತಾನದ ಭಯೋತ್ಪಾದನೆಗೆ ಸಂಬಂಧಿಸಿದ ತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ವಾಯುಪಡೆಯು ಮೇ 7, 2025 ರ ರಾತ್ರಿ ಪಾಕಿಸ್ತಾನಕ್ಕೆ ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿತು ಎಂದು ಬಹಿರಂಗಗೊಂಡಿದೆ.
ಇದು ಮೋದಿ ಸರ್ಕಾರದ, ವಿಶೇಷವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೇಲೆ ಮಾಡಲಾದ ನೇರ ಆರೋಪ. ಅವರು ಪ್ಲೇಗ್‌ನಂತೆ ಸಂಸತ್ತಿನ ವಿಶೇಷ ಅಧಿವೇಶನದ ನಮ್ಮ ಬೇಡಿಕೆಯನ್ನು ನಿರ್ಲಕ್ಷಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಅವರು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ಕಾಂಗ್ರೆಸ್ ಪಕ್ಷವು ಭಾರತದ ಜನರ ಮುಂದೆ ಏನನ್ನು ಬಹಿರಂಗಪಡಿಸಲಿದೆ ಎಂಬ ಬಗ್ಗೆ ಅವರಿಗೆ ಭಯವಿದೆ.</strong>"</code></pre>



<p>ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್:</p>



<pre class="wp-block-code"><code>"<strong>ಮೊದಲು ರಕ್ಷಣಾ ಮುಖ್ಯಸ್ಥರು ಸಿಂಗಾಪುರದಲ್ಲಿ ಪ್ರಮುಖ ವಿಚಾರವನ್ನು ಬಹಿರಂಗಪಡಿಸುತ್ತಾರೆ. ನಂತರ ಇಂಡೋನೇಷ್ಯಾದಲ್ಲಿ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಅದಕ್ಕೆ ಪೂರಕವಾಗಿ ಹೇಳಿಕೆ ನೀಡಿತ್ತಾರೆ. 
ಆದರೆ ಪ್ರಧಾನಿಯವರು ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲು ಮತ್ತು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಏಕೆ ನಿರಾಕರಿಸುತ್ತಿದ್ದಾರೆ? ಸಂಸತ್ತಿನ ವಿಶೇಷ ಅಧಿವೇಶನದ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಗಿದೆ?</strong>"</code></pre>



<p>ಪಕ್ಷದ ಯುವ ನಾಯಕ ಶ್ರೀನಿವಾಸ್ ಬಿ.ವಿ ಮೋದಿಯವರು &#8220;ಗಂಭೀರ ಪ್ರಶ್ನೆಗಳಿಗೆ&#8221; ಉತ್ತರಿಸಬೇಕು ಎಂದು ಬರೆದಿದ್ದಾರೆ:</p>



<pre class="wp-block-code"><code><strong>"ರಾಜಕೀಯ ನಾಯಕತ್ವ ನೀಡಿದ ನಿರ್ಬಂಧಗಳಿಂದಾಗಿ", ಪಾಕಿಸ್ತಾನದ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಭಾರತೀಯ ವಾಯುಪಡೆಯು ಮೇ 7, 2025 ರ ರಾತ್ರಿ ಯುದ್ಧ ವಿಮಾನಗಳನ್ನು ಕಳೆದುಕೊಂಡಿತು.
ಕಳೆದ ತಿಂಗಳು ಇಂಡೋನೇಷ್ಯಾದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾರತದ ಯುದ್ಧ ವಿಮಾನಗಳ ನಷ್ಟವನ್ನು ಒಪ್ಪಿಕೊಂಡ ಇಂಡೋನೇಷ್ಯಾದ ಭಾರತದ ರಕ್ಷಣಾ ಅಟ್ಯಾಚ್ ಕ್ಯಾಪ್ಟನ್ (ಭಾರತೀಯ ನೌಕಾಪಡೆ) ಶಿವಕುಮಾರ್ ಅವರ ಮಾತುಗಳಿವು.
ಇದಕ್ಕೂ ಮೊದಲು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಕೂಡ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಯುದ್ಧ ವಿಮಾನಗಳ ನಷ್ಟವನ್ನು ಒಪ್ಪಿಕೊಂಡಿದ್ದರು.</strong>"</code></pre>



<p>ಅಕಾಲಿಕ ಕದನ ವಿರಾಮಕ್ಕೆ ಸಂಬಂಧಿಸಿದಂತೆ ಹಲವಾರು ಉತ್ತರಿಸಲಾಗದ ಪ್ರಶ್ನೆಗಳಿವೆ. ಪ್ರಧಾನಿ ಮೋದಿ ಈ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಶ್ರೀನಿವಾಸ್‌ ಬಿವಿಯವರು ಪ್ರಶ್ನೆಗಳ ಪಟ್ಟಿಯನ್ನು ನೀಡಿದ್ದಾರೆ.</p>



<ul class="wp-block-list">
<li>👉ವಿಪಕ್ಷಗಳ ಮುಂದೆ ಸತ್ಯವನ್ನು ಹೇಳಲು ಪ್ರಧಾನಿಯವರು ತಮ್ಮ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲು ಏಕೆ ನಿರಾಕರಿಸುತ್ತಿದ್ದಾರೆ?</li>



<li>👉ಈ ವಿಷಯದ ಬಗ್ಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂಬ ಬೇಡಿಕೆಯನ್ನು ಏಕೆ ತಿರಸ್ಕರಿಸಲಾಯಿತು?</li>



<li>👉ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜೈಶಂಕರ್ ಅವರು ದೇಶದಿಂದ ಏನನ್ನು ಮುಚ್ಚಿಡುತ್ತಿದ್ದಾರೆ?</li>
</ul>
]]></content:encoded>
					
		
		
			</item>
		<item>
		<title>&#8216;ಯಾರ ಮಧ್ಯಸ್ಥಿಕೆಯೂ ನಮಗೆ ಬೇಕಿಲ್ಲ&#8217;:  ಫೋನ್‌ ಕರೆಯಲ್ಲಿ ಟ್ರಂಪ್‌ಗೆ ಮೋದಿ ತಿರುಗೇಟು</title>
		<link>https://peepalmedia.com/we-dont-need-anyones-intervention-modi-trump/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Jun 2025 11:17:41 +0000</pubDate>
				<category><![CDATA[ವಿದೇಶ]]></category>
		<category><![CDATA[canada]]></category>
		<category><![CDATA[Donald Trump]]></category>
		<category><![CDATA[Dr.S. Jaishankar]]></category>
		<category><![CDATA[G7 summit]]></category>
		<category><![CDATA[India-US Trade]]></category>
		<category><![CDATA[indo-pakistan war]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[Pakistan]]></category>
		<category><![CDATA[united states of america]]></category>
		<category><![CDATA[usa]]></category>
		<guid isPermaLink="false">https://peepalmedia.com/?p=61185</guid>

					<description><![CDATA[ಐದು ವರ್ಷಗಳ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಶ್ವೇತಭವನಕ್ಕೆ ಕರೆದು ಆತಿಥಿ ಸತ್ಕಾರ ನೀಡಿದ್ದಾರೆ. ಇದಕ್ಕಿಂತ ಹಿಂದಿನ ದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಯಾವುದೇ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಪೋನ್‌ ಮಾತುಕತೆಯಲ್ಲಿ ಹೇಳಿದ್ದಾರೆ. ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ [&#8230;]]]></description>
										<content:encoded><![CDATA[
<p>ಐದು ವರ್ಷಗಳ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಶ್ವೇತಭವನಕ್ಕೆ ಕರೆದು ಆತಿಥಿ ಸತ್ಕಾರ ನೀಡಿದ್ದಾರೆ. ಇದಕ್ಕಿಂತ ಹಿಂದಿನ ದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಯಾವುದೇ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಪೋನ್‌ ಮಾತುಕತೆಯಲ್ಲಿ ಹೇಳಿದ್ದಾರೆ.</p>



<p>ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸಭೆಯನ್ನು ರದ್ದುಗೊಳಿಸಿದ ಟ್ರಂಪ್ ವಾಷಿಂಗ್ಟನ್‌ಗೆ ಬೇಗನೆ ಹಿಂದಿರುಗಿದ ಕಾರಣ, ಅವರ ಜೊತೆಗಿಮ 35 ನಿಮಿಷಗಳ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.</p>



<p>ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಟ್ರಂಪ್ ಇಂದು ಬುಧವಾರ (ಜೂನ್ 18) ಮಧ್ಯಾಹ್ನ ಶ್ವೇತಭವನದಲ್ಲಿ ಊಟಕ್ಕೆ ಕರೆದಿದ್ದಾರೆ. ಇದಕ್ಕೆ ಮುನ್ನಾದಿನದಂದು ಟ್ರಂಪ್‌ ಅವರಿಂದ ಮೋದಿಯವರಿಗೆ ಈ ಕರೆ ಬಂದಿತು.</p>



<p><a href="https://www.aninews.in/news/world/us/trump-meets-pak-army-chief-bajwa20190723024852">ಪಾಕಿಸ್ತಾನಿ ಸೇನಾ ಮುಖ್ಯಸ್ಥ</a> ಜನರಲ್ ಕಮರ್ ಜಾವೇದ್ ಬಜ್ವಾ&nbsp;ಜುಲೈ 2019 ರಲ್ಲಿ&nbsp;ಶ್ವೇತಭವನಕ್ಕೆ ಅತಿಥಿಯಾಗಿ ಹೋಗಿದ್ದರು. ಇವರು ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಬೇಟಿ ಮಾಡಿದ್ದರು. </p>



<p><strong>ಜನತೆಯ ಟೀಕೆ ಮತ್ತು ವಿರೋಧ ಪಕ್ಷಗಳ ಪ್ರಶ್ನೆಗಳ ನಡುವೆಯೇ ಮೋದಿ-ಟ್ರಂಪ್ ಫೋನ್ ಮಾತುಕತೆ</strong></p>



<p>ಭಾರತದಲ್ಲಿ ಮೋದಿಯವರಿಗೆ ಟೀಕೆಗಳು ಹೆಚ್ಚುತ್ತಿದ್ದ ನಡುವೆಯೇ ಈ ಫೋನ್ ಕರೆ ಕೂಡ ಬಂದಿದೆ. ಕೆಲವು ದಿನಗಳ ಹಿಂದೆ, ಟ್ರಂಪ್ ಸಾರ್ವಜನಿಕ ವೇದಿಕೆಗಳಲ್ಲಿ ಕನಿಷ್ಠ 13 ಬಾರಿ &#8220;ತಾನೇ ಭಾರತ &#8211; ಪಾಕ್‌ ಯುದ್ಧ ನಿಲ್ಲಿಸಿದ್ದು, ವ್ಯಾಪಾರ ಮಾಡಬೇಕೆಂದರೆ ಯುದ್ಧ ನಿಲ್ಲಿಸಿ,&#8221; ಎಂಬಂತ ಹೇಳಿಕೆಗಳನ್ನು ನೀಡುವಾಗ ಮೋದಿಯವರು ವಹಿಸಿದ್ದ &#8220;ಮೌನ&#8221;ವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿತ್ತು. </p>



<p>ಇತ್ತೀಚೆಗೆ, ಜೂನ್ 15 ರಂದು, ಟ್ರಂಪ್ ಮತ್ತೊಮ್ಮೆ ಈ ಹಿಂದಿನ ಹೇಳಿಕೆಗಳನ್ನೇ ಉಲ್ಲೇಖಿಸಿ, &#8220;ಅಮೆರಿಕದೊಂದಿಗಿನ ಟ್ರೇಡ್ ಅನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗಳಲ್ಲಿ ಒಗ್ಗಟ್ಟು ಮತ್ತು ವಿವೇಕವನ್ನು ತರುವ ಮೂಲಕ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ನಿಲ್ಲಿಸಲು ಸಾಧ್ಯವಾಯಿತು. ಇಸ್ರೇಲ್ ಮತ್ತು ಇರಾನ್ ನಡುವೆ ಶಾಂತಿಯನ್ನು ಸುಲಭವಾಗಿ ತರಲು ಮಧ್ಯಸ್ಥಿಕೆ ಕೆಲಸ ಮಾಡಬಹುದು,&#8221; ಎಂದು ಟ್ರಂಪ್ ಹೇಳಿದರು.</p>



<p>ಟ್ರಂಪ್ ಸರ್ಕಾರವು&nbsp;<a href="https://www.thehindu.com/news/international/israel-iran-conflict-us-president-trump-says-both-countries-will-have-peace-soon/article69698425.ece">ಈ ಹೇಳಿಕೆಯನ್ನು ಕಾನೂನು ದಾಖಲೆಯಲ್ಲಿ ಔಪಚಾರಿಕಗೊಳಿಸಿತ್ತು</a>. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಡಬ್ಲ್ಯೂ. ಲುಟ್ನಿಕ್ ಅವರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ, ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ &#8220;ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಲು&#8221; ಪ್ರೋತ್ಸಾಹಕವಾಗಿ ವ್ಯಾಪಾರವನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.</p>



<p>ಭಾರತದ&nbsp;<a href="https://www.thehindu.com/news/national/india-virtually-rejects-washingtons-claim-of-offering-trade-to-halt-indo-pak-conflict/article69636309.ece" data-type="link" data-id="https://www.thehindu.com/news/national/india-virtually-rejects-washingtons-claim-of-offering-trade-to-halt-indo-pak-conflict/article69636309.ece">ವಿದೇಶಾಂಗ ಸಚಿವಾಲಯ</a>&nbsp;ಮತ್ತು&nbsp;<a href="https://www.indiatoday.in/world/story/us-was-in-united-states-s-jaishankar-on-trumps-credit-claim-on-india-pak-truce-2728679-2025-05-22" data-type="link" data-id="https://www.indiatoday.in/world/story/us-was-in-united-states-s-jaishankar-on-trumps-credit-claim-on-india-pak-truce-2728679-2025-05-22">ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು</a>&nbsp;ಟ್ರಂಪ್ ಅವರ ನಿರೂಪಣೆಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು, ಆದರೆ ಟ್ರಂಪ್‌ ಮಾತ್ರ &#8220;ಯುದ್ಧ ನಿಲ್ಲಿಸಿದೆ,&#8221; ಎಂಬ ಜಪವನ್ನು ನಿಲ್ಲಿಸಲಿಲ್ಲ. ಭಾರತವು ಇದನ್ನು ವಿರೋಧಿಸಿ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂಬುದು ಇಂದಿನ ವರೆಗೆ ತಿಳಿದು ಬಂದಿಲ್ಲ.</p>



<p>ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಂಡ ನಂತರ, ಟ್ರಂಪ್ ಅವರೊಂದಿಗಿನ ಮೋದಿಯವರ ಮೊದಲ ಬಾರಿಗೆ ಫೋನ್ ಮಾತುಕತೆ ನಡೆಸಿದ್ದಾರೆ.</p>



<p>&#8220;ಈ ಸಂಪೂರ್ಣ ಘಟನಾವಳಿಗಳ ಸರಣಿಯ ಯಾವುದೇ ಹಂತದಲ್ಲಿ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಅಥವಾ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆಗೆ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು&#8221; ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>



<p>ಶ್ವೇತಭವನದಿಂದ ಬಂದ ಕರೆಗೆ ಪ್ರತ್ಯೇಕ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ.</p>



<p>ಎರಡೂ ದೇಶಗಳ ಸೇನೆಗಳ ನಡುವಿನ ಮಾತುಕತೆಯ ನಂತರ ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ ಎಂದು ಮೋದಿ ಪುನರುಚ್ಚರಿಸಿದರು &#8211; &#8220;ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಯಿತು,&#8221; ಎಂದು ಮಿಸ್ರಿ ಹೇಳಿದರು.</p>



<p>&#8220;ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ದೃಢವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ,&#8221; ಎಂದು ಅವರು ಹೇಳಿದರು.</p>



<p>ಭಯೋತ್ಪಾದಕ ಶಿಬಿರಗಳ ಮೇಲೆ ಮೇ 6-7 ರಂದು ನಡೆದ ವೈಮಾನಿಕ ದಾಳಿಗಳನ್ನು &#8220;ಬಹಳ ಲೆಕ್ಕಾಚಾರ ಹಾಕಿ, ನಿಖರವಾದ ಮತ್ತು ಉಲ್ಬಣಗೊಳ್ಳದ&#8221; ದಾಳಿ ಎಂದು ಪ್ರಧಾನಿ ಬಣ್ಣಿಸಿದರು.</p>



<p><em>ಪಾಕಿಸ್ತಾನದಿಂದ ಬರುವ ಯಾವುದೇ ಗುಂಡನ್ನು</em>  ಪ್ರತಿಯಾಗಿ <em>ಗೋಲಾ</em> (ಚಿಪ್ಪು)  ಮೂಲಕ ಎದುರಿಸಲಾಗುವುದು  ಎಂಬ ಭಾರತದ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು.</p>



<p>ಮೋದಿ ಅವರ ಹೇಳಿಕೆಯ ಪ್ರಕಾರ, ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು &#8220;ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು&#8221; ಎಂದು ಎಚ್ಚರಿಸಿದ್ದರು ಎಂಬುದು ತಿಳಿದುಬಂದಿದೆ.</p>



<p>ಮೇ 9 ರಂದು ಭಾರತವು &#8220;ಬಹಳ ಬಲವಾದ ಪ್ರತಿಕ್ರಿಯೆ&#8221; ನೀಡಿ ಪಾಕಿಸ್ತಾನದ ವಾಯುನೆಲೆಗಳನ್ನು &#8220;ನಿಷ್ಕ್ರಿಯ&#8221;ಗೊಳಿಸಿದ ನಂತರವೇ, ಪಾಕ್‌ ಭಾರತದ ಬಳಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ವಿನಂತಿಸಿತು.</p>



<p>&#8220;ಪ್ರಧಾನಿಯವರು ತಿಳಿಸಿದ ಅಂಶಗಳನ್ನು ಟ್ರಂಪ್ ಎಚ್ಚರಿಕೆಯಿಂದ ಆಲಿಸಿದರು ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು&#8221; ಎಂದು ಮಿಸ್ರಿ ಹೇಳಿದರು. &#8220;ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವೆಂದು ನೋಡುವುದಿಲ್ಲ, ಬದಲಿಗೆ ಯುದ್ಧವೆಂದೇ ಪರಿಗಣಿಸುತ್ತದೆ. ಭಾರತದ ಆಪರೇಷನ್&nbsp;<em>ಸಿಂಧೂರ್</em>&nbsp;ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ&#8221; ಎಂದು ಅವರು ಹೇಳಿದರು.</p>



<p>ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕದಲ್ಲಿ ತಂಗಬಹುದೇ ಎಂದು ಟ್ರಂಪ್ ವಿಚಾರಿಸಿದರು. &#8220;ಇತರ ಕಮಿಟ್‌ಮೆಂಟ್‌ಗಳ ಕಾರಣಕ್ಕಾಗಿ, ಪ್ರಧಾನಿ ಮೋದಿ ಹಾಗೆ ಮಾಡಲು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದರು&#8221; ಎಂದು ಮಿಶ್ರಿ ಹೇಳಿದರು. ಹಾಗಿದ್ದೂ, ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ಭೇಟಿಯಾಗಲು ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡರು.</p>



<p>ಇಬ್ಬರೂ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚಿಸಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ ನೇರ ಸಂವಾದ ಅತ್ಯಗತ್ಯ ಎಂದು ಒಪ್ಪಿಕೊಂಡರು.</p>



<p><strong>ಪಾಕಿಸ್ತಾನದ ಮುನೀರ್‌ಗೆ ಟ್ರಂಪ್‌ನಿಂದ ಪಾರ್ಟಿ! </strong></p>



<p>ಇಂಡೋ-ಪೆಸಿಫಿಕ್ ಕುರಿತು, ಮೋದಿ ಮತ್ತು ಟ್ರಂಪ್‌ ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಕ್ವಾಡ್ ಪಾತ್ರಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು. ಮುಂದಿನ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಟ್ರಂಪ್ ಅವರಿಗೆ ಆಹ್ವಾನ ನೀಡಿದರು, ಅದನ್ನು ಟ್ರಂಪ್ ಸ್ವೀಕರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.</p>



<p><a href="https://www.mea.gov.in/response-to-queries.htm?dtl/39510/Official+Spokespersons+response+to+media+queries+on+allegations+by+Pakistan">ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಭಾರತ ಹೇಳಿದ್ದರೂ, ಪಾಕಿಸ್ತಾನವನ್ನು &#8220;ಭಯೋತ್ಪಾದನೆಯ ಜಾಗತಿಕ ಕೇಂದ್ರ</a>&nbsp;&#8221; ಎಂಬ ಭಾರತದ ನಿಲುವನ್ನು ಟ್ರಂಪ್ ಸರ್ಕಾರ ಬೆಂಬಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ&nbsp;.</p>



<p>ಬದಲಾಗಿ, ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಪಾಕಿಸ್ತಾನವನ್ನು ವೇದಿಕೆಯಾಗಿ ರೂಪಿಸಿಕೊಂಡಿದೆ. ಅಮೇರಿಕಾ ಪಾಕಿಸ್ತಾನವನ್ನು <a href="https://www.thehindu.com/news/international/us-has-to-have-relationship-with-pakistan-india-american-general/article69684018.ece">ಭಯೋತ್ಪಾದನಾ ನಿಗ್ರಹದ ಪ್ರಮುಖ ಪಾಲುದಾರ</a> ಎಂದು ಪರಿಗಣಿಸಿದೆ.</p>



<p>ಈ ಕಾರಣಕ್ಕಾಗಿ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸುವ ಟ್ರಂಪ್ ನಿರ್ಧಾರವು ಮಹತ್ವದ್ದಾಗಿದೆ. ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಮುನೀರ್ ಅವರ ಖ್ಯಾತಿಯನ್ನು ಹೆಚ್ಚಿತು. ಈ ಹಿಂದೆ ಮಿಲಿಟರಿ ಸ್ಥಾಪನೆಯನ್ನು ಟೀಕಿಸಿದ್ದ ವಿರೋಧ ಪಕ್ಷ ಪಿಟಿಐ ಸೇರಿದಂತೆ ಪಾಕಿಸ್ತಾನದಾದ್ಯಂತ ಅವರಿಗೆ ಬೆಂಬಲವನ್ನು ವ್ಯಕ್ತವಾಗಿತ್ತು. </p>



<p>ಕಾಂಗ್ರೆಸ್ಸನಲ್‌ ಹಿಯರಿಂಗ್‌ನಲ್ಲಿ <a href="https://www.thehindu.com/news/international/us-has-to-have-relationship-with-pakistan-india-american-general/article69684018.ece" data-type="link" data-id="https://www.thehindu.com/news/international/us-has-to-have-relationship-with-pakistan-india-american-general/article69684018.ece"> ಇಸ್ಲಾಮಿಕ್ ಸ್ಟೇಟ್-ಖೋರಾಸನ್ ವಿರುದ್ಧ ಹೋರಾಡಲು <a href="https://thewire.in/diplomacy/pakistan-a-phenomenal-partner-in-counterterrorism-centcom-chief-ties-india">ಪಾಕಿಸ್ತಾನವು</a> &#8220;ಅದ್ಭುತ ಪಾಲುದಾರ&#8221; ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾ ಹೊಗಳಿದ</a> ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಊಟಕ್ಕೆ ಕರೆಯಲಾಗಿದೆ. (ಖೋರಾಸನ್ ಎಂದರೆ ಇಂದಿನ ಇರಾನ್, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಕೆಲವು ಭಾಗಗಳನ್ನು ಒಳಗೊಂಡ ಐತಿಹಾಸಿಕ ಭೂ ಪ್ರದೇಶ)</p>



<p>ಈ ವರ್ಷದ ಆರಂಭದಲ್ಲಿ, ಅಂದರೆ&nbsp;ಫೆಬ್ರವರಿಯಲ್ಲಿ ಅಮೇರಿಕನ್ ಕಾಂಗ್ರೆಸ್‌ಗೆ ನೀಡಿದ ಮೊದಲ ಭಾಷಣದಲ್ಲಿ ಟ್ರಂಪ್, 13 ಅಮೆರಿಕನ್ ಸೈನಿಕರನ್ನು ಕೊಂದ <a href="https://www.dawn.com/news/1642871">ಕಾಬೂಲ್‌ನಲ್ಲಿ ನಡೆದ ಅಬ್ಬೆ ಗೇಟ್ ಬಾಂಬ್ ಸ್ಫೋಟದ</a> ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಮೊಹಮ್ಮದ್ ಶರೀಫುಲ್ಲಾನನ್ನು ಬಂಧಿಸಿ ಹಸ್ತಾಂತರಿಸಿದ್ದಕ್ಕಾಗಿ&nbsp;<a href="https://thewire.in/south-asia/trump-praise-is-militant-capture-relief-pakistan/?mid_related_new">ಪಾಕಿಸ್ತಾನವನ್ನು ಹೊಗಳಿದ್ದರು.</a></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">We thank US President Donald Trump for acknowledging and appreciating Pakistan&#39;s role and support in counter terrorism efforts across the region, in the context of Pakistan Security Forces’ recent apprehension of ISKP’s top tier operational commander Shareefullah, who is an…</p>&mdash; Shehbaz Sharif (@CMShehbaz) <a href="https://twitter.com/CMShehbaz/status/1897174186851733915?ref_src=twsrc%5Etfw">March 5, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಟ್ರಂಪ್ ಭಾರತದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದರೂ, ಪಾಕಿಸ್ತಾನವನ್ನು ಸ್ಪಷ್ಟ ಮತ್ತು ನಿಷ್ಠುರವಾಗಿ ಖಂಡಿಸಲಿಲ್ಲ. <a href="https://thewire.in/diplomacy/eight-times-trump-made-claims-that-undermined-india-but-wasnt-officially-rebutted-by-new-delhi">ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಸಮಾನಾಗಿ ನೋಡಿ ಹೇಳಿಕೆಗಳನ್ನು</a> ನೀಡುತ್ತಾ ಬಂದರು, ಮತ್ತು ಪಾಕಿಸ್ತಾನ &#8220;<a href="https://www.financialexpress.com/world-news/pakistan-has-strong-leadership-says-trump-claiming-some-people-may-not-agree-with-him/3872402/">ಬಹಳ ಬಲವಾದ ನಾಯಕತ್ವ</a>&nbsp;&#8221; ಹೊಂದಿದೆ ಎಂದು ಹೊಗಳಿದ್ದರು. </p>



<p></p>
]]></content:encoded>
					
		
		
			</item>
		<item>
		<title>ತಾಲಿಬಾನ್ ಸಚಿವನೊಂದಿಗೆ ಜೈಶಂಕರ್ ಮಾತುಕತೆ: ಪಾಕ್‌ ಹೇಳಿಕೆಯನ್ನು ತಿರಸ್ಕರಿಸಿದ ತಾಲಿಬಾನ್‌ಗೆ ಜೈಶಂಕರ್‌ ಅಭಿನಂದನೆ</title>
		<link>https://peepalmedia.com/jaishankar-talks-with-taliban-minister/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 16 May 2025 06:46:41 +0000</pubDate>
				<category><![CDATA[ವಿದೇಶ]]></category>
		<category><![CDATA[Afghanistan]]></category>
		<category><![CDATA[Amir Khan Muttaqi]]></category>
		<category><![CDATA[Dr.S. Jaishankar]]></category>
		<category><![CDATA[Pahalgam]]></category>
		<category><![CDATA[Pahalgam terrorist attack]]></category>
		<category><![CDATA[Pakistan]]></category>
		<category><![CDATA[taliban]]></category>
		<category><![CDATA[terrorist attack]]></category>
		<guid isPermaLink="false">https://peepalmedia.com/?p=59117</guid>

					<description><![CDATA[ಭಾರತ ಮತ್ತು ತಾಲಿಬಾನ್ ಸರ್ಕಾರದ ನಡುವಿನ ಮೊದಲ ಸಚಿವ ಮಟ್ಟದ ಮಾತುಕತೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿದರು ಮತ್ತು ಭಾರತವು ಅಫ್ಘಾನ್ ಭೂಪ್ರದೇಶದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಕಾಬೂಲ್ ತಳ್ಳಿಹಾಕಿದ್ದಕ್ಕಾಗಿ ಶ್ಲಾಘಿಸಿದರು. ಆಗಸ್ಟ್ 2021 ರಲ್ಲಿ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಮಿಲಿಟರಿ ವಿಜಯದ ಮೂಲಕ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಇದು ಮೊದಲ ಸಚಿವ ಮಟ್ಟದ [&#8230;]]]></description>
										<content:encoded><![CDATA[
<p>ಭಾರತ ಮತ್ತು ತಾಲಿಬಾನ್ ಸರ್ಕಾರದ ನಡುವಿನ ಮೊದಲ ಸಚಿವ ಮಟ್ಟದ ಮಾತುಕತೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿದರು ಮತ್ತು ಭಾರತವು ಅಫ್ಘಾನ್ ಭೂಪ್ರದೇಶದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಕಾಬೂಲ್ ತಳ್ಳಿಹಾಕಿದ್ದಕ್ಕಾಗಿ ಶ್ಲಾಘಿಸಿದರು.</p>



<p>ಆಗಸ್ಟ್ 2021 ರಲ್ಲಿ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಮಿಲಿಟರಿ ವಿಜಯದ ಮೂಲಕ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಇದು ಮೊದಲ ಸಚಿವ ಮಟ್ಟದ ಫೋನ್ ಕರೆಯಾಗಿದೆ.</p>



<p>ಮೇ 10 ರಂದು ಎರಡೂ ಕಡೆಯವರು ಗುಂಡಿನ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಕೊನೆಗೊಂಡ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ.</p>



<p><a href="https://x.com/DrSJaishankar/status/1923036293656871262">ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ</a> ಜೈಶಂಕರ್, ಗುರುವಾರ (ಮೇ 15) ಸಂಜೆ ಮುತ್ತಕಿ ಅವರೊಂದಿಗೆ &#8220;ಉತ್ತಮ ಸಂಭಾಷಣೆ&#8221; ನಡೆಸಿದರು ಎಂದು ಹೇಳಿದ್ದಾರೆ ಮತ್ತು &#8220;ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದಕ್ಕೆ ತುಂಬಾ ಧನ್ಯವಾದಗಳು&#8221; ಎಂದು ಹೇಳಿದ್ದಾರೆ.<br></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Good conversation with Acting Afghan Foreign Minister Mawlawi Amir Khan Muttaqi this evening. <br><br>Deeply appreciate his condemnation of the Pahalgam terrorist attack. <br><br>Welcomed his firm rejection of recent attempts to create distrust between India and Afghanistan through false and…</p>&mdash; Dr. S. Jaishankar (@DrSJaishankar) <a href="https://twitter.com/DrSJaishankar/status/1923036293656871262?ref_src=twsrc%5Etfw">May 15, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>&#8220;ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಇತ್ತೀಚಿನ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸಿದ್ದನ್ನು ಭಾರತ ಸ್ವಾಗತಿಸುತ್ತದೆ&#8221; ಎಂದು ಅವರು ಹೇಳಿದರು.</p>



<p>ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಶನಿವಾರ ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಭಾರತವು &#8220;ಅಫ್ಘಾನ್ ಮಣ್ಣಿನಲ್ಲಿ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು ಅಫ್ಘಾನಿಸ್ತಾನದೊಳಗೆ ಡ್ರೋನ್ ದಾಳಿಗಳನ್ನು ನಡೆಸಿದೆ&#8221; ಎಂದು ಆರೋಪಿಸಿದ್ದರು.</p>



<p>ಆ ದಿನದ ನಂತರ, ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಾಜ್ಮಿ&nbsp;<a href="https://x.com/HurriyatPa/status/1921117194085109952">ಈ ಆರೋಪವನ್ನು ತಿರಸ್ಕರಿಸಿದರು</a>&nbsp;, ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="ps" dir="rtl">د افغانستان دفاع وزارت ویاند عنایت الله خوارزمي حریت راډیو سره خبرو کې د افغانستان په خاوره د هند توغندیز برید په اړه د پاکستان ادعا په کلکه رد کړه.<br><br>ښاغلي خوارزمي ویلي، داسې کوم څه حقیقت نه لري.<br><br>تر دې وړاندې د پاکستان پوځي چارواکو ادعا وکړه، چې پر پاکستان د هند توغندیز بریدونو… <a href="https://t.co/rNOq5LF6aY">pic.twitter.com/rNOq5LF6aY</a></p>&mdash; Hurriyat Radio Pashto (@HurriyatPa) <a href="https://twitter.com/HurriyatPa/status/1921117194085109952?ref_src=twsrc%5Etfw">May 10, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಏಪ್ರಿಲ್ 22 ರಂದು 26 ನಾಗರಿಕರನ್ನು ಕೊಂದ ಭಯೋತ್ಪಾದಕ ದಾಳಿಯ ನಂತರ, ತಾಲಿಬಾನ್ ಸರ್ಕಾರವು ಘಟನೆಯನ್ನು ಖಂಡಿಸಿತು, &#8220;ಇಂತಹ ದಾಳಿಗಳು&nbsp;<a href="https://x.com/QaharBalkhi/status/1914994396367393161">ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು</a>&nbsp;ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಹಾಳುಮಾಡುತ್ತವೆ &#8221; ಎಂದು ಹೇಳಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Remarks regarding recent attack on tourists in Pahalgam, Jammu and Kashmir <a href="https://t.co/aXAvl8Re4f">pic.twitter.com/aXAvl8Re4f</a></p>&mdash; Abdul Qahar Balkhi (@QaharBalkhi) <a href="https://twitter.com/QaharBalkhi/status/1914994396367393161?ref_src=twsrc%5Etfw">April 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಭಾರತವು ಮೇ 7 ರಂದು ಪಾಕಿಸ್ತಾನದ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಮೂಲಕ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ, ಅಫ್ಘಾನಿಸ್ತಾನವು ಎರಡೂ ದೇಶಗಳು&nbsp;ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು&nbsp;<a href="https://x.com/QaharBalkhi/status/1914994396367393161">ಕರೆ ನೀಡಿತ್ತು .</a></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Remarks regarding recent attack on tourists in Pahalgam, Jammu and Kashmir <a href="https://t.co/aXAvl8Re4f">pic.twitter.com/aXAvl8Re4f</a></p>&mdash; Abdul Qahar Balkhi (@QaharBalkhi) <a href="https://twitter.com/QaharBalkhi/status/1914994396367393161?ref_src=twsrc%5Etfw">April 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಭಾರತದ ಸಚಿವರು ಅಫಘಾನ್ ಜನರೊಂದಿಗಿನ ಭಾರತದ &#8220;ಸಾಂಪ್ರದಾಯಿಕ ಸ್ನೇಹ&#8221; ಮತ್ತು &#8220;ಅವರ ಅಭಿವೃದ್ಧಿ ಅಗತ್ಯಗಳಿಗೆ ಅದರ ನಿರಂತರ ಬೆಂಬಲ&#8221;ದ ಬಗ್ಗೆಯೂ ಮಾತನಾಡಿದರು.</p>



<p>&#8220;ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆಯೂ ಅವರು ಚರ್ಚಿಸಿದರು&#8221; ಎಂದು ಜೈಶಂಕರ್ ಬರೆದಿದ್ದಾರೆ.</p>



<p>ಅಫ್ಘಾನ್ ವಿದೇಶಾಂಗ ಸಚಿವಾಲಯದ ವರದಿಯು ಪಹಲ್ಗಾಮ್ ಭಯೋತ್ಪಾದಕ ದಾಳಿ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷದ ಬಗ್ಗೆ ಉಲ್ಲೇಖಿಸಲಿಲ್ಲ.</p>



<p>ಅಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರ ಪ್ರಕಾರ, ಮುತಾಕಿ ಭಾರತವನ್ನು &#8220;ಪ್ರಮುಖ ಪ್ರಾದೇಶಿಕ ದೇಶ&#8221; ಎಂದು ಬಣ್ಣಿಸಿದರು ಮತ್ತು ಅಫ್ಘಾನಿಸ್ತಾನ-ಭಾರತ ಸಂಬಂಧಗಳ ಐತಿಹಾಸಿಕ ಸ್ವರೂಪವನ್ನು ಒತ್ತಿ ಹೇಳಿದರು, ಸಂಬಂಧವು ಬಲಗೊಳ್ಳುವುದನ್ನು ಮುಂದುವರಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="ps" dir="rtl">د ا.ا.ا. د بهرنیو چارو وزیر محترم مولوي امیر خان متقي او د هند جمهوریت د بهرنیو چارو وزیر ښاغلي جې شنکر ټيلیفوني خبرې وکړې.<br>په دې مکالمه کې د دوو اړخیزو اړیکو پر پیاوړتیا، تجارت او د دیپلوماتیکو اړیکو د کچې پر لوړولو خبرې وشوې. <a href="https://t.co/weErRrvARu">pic.twitter.com/weErRrvARu</a></p>&mdash; Hafiz Zia Ahmad (@HafizZiaAhmad) <a href="https://twitter.com/HafizZiaAhmad/status/1923048327450329188?ref_src=twsrc%5Etfw">May 15, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಅವರು &#8220;ಸಮತೋಲಿತ ವಿದೇಶಾಂಗ ನೀತಿ ಮತ್ತು ಎಲ್ಲಾ ರಾಷ್ಟ್ರಗಳೊಂದಿಗೆ ರಚನಾತ್ಮಕ ಸಂಬಂಧಗಳನ್ನು ಅನುಸರಿಸುವುದಕ್ಕೆ ಅಫ್ಘಾನಿಸ್ತಾನದ ಬದ್ಧತೆಯನ್ನು ಪುನರುಚ್ಚರಿಸಿದರು.&#8221;</p>



<p>ಅಫಘಾನ್ ವ್ಯಾಪಾರಿಗಳು ಮತ್ತು ರೋಗಿಗಳಿಗೆ ವೀಸಾ ಪ್ರವೇಶವನ್ನು ವಿಸ್ತರಿಸುವ ವಿಷಯವನ್ನು ಮುಟ್ಟಾಕಿ ಎತ್ತಿದರು ಮತ್ತು ಪ್ರಸ್ತುತ ಭಾರತದಲ್ಲಿ ಜೈಲಿನಲ್ಲಿರುವ ಅಫಘಾನ್ ಪ್ರಜೆಗಳನ್ನು ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸಬೇಕೆಂದು ಕರೆ ನೀಡಿದರು.</p>



<p>ಇದಕ್ಕೆ ಪ್ರತಿಕ್ರಿಯೆಯಾಗಿ, ಜೈಶಂಕರ್ ಅವರು ಅಫಘಾನ್ ಕೈದಿಗಳ ವಿಷಯಕ್ಕೆ ತಕ್ಷಣ ಗಮನ ನೀಡಲಾಗುವುದು ಎಂದು ಮುತ್ತಕಿ ಅವರಿಗೆ &#8220;ಭರವಸೆ&#8221; ನೀಡಿದರು ಮತ್ತು ವೀಸಾ ಪ್ರಕ್ರಿಯೆಯನ್ನು ಸರಾಗಗೊಳಿಸುವ ಭರವಸೆ ನೀಡಿದರು ಎಂದು ಅಫಘಾನ್ ಹೇಳಿಕೆ ತಿಳಿಸಿದೆ.</p>



<p>ಇರಾನ್‌ನ&nbsp;<a href="https://thewire.in/diplomacy/washington-chabahar-threat-indian-afghan-envoys/?mid_related_new">ಚಾಬಹಾರ್ ಬಂದರನ್ನು</a>&nbsp;ಮತ್ತಷ್ಟು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು .</p>



<p>ಕಾಕತಾಳೀಯವಾಗಿ, ಭಾರತದ ಕ್ಷಿಪಣಿ ದಾಳಿಯ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ಅಫ್ಘಾನಿಸ್ತಾನ ದೃಢವಾಗಿ ತಿರಸ್ಕರಿಸಿದ ಅದೇ ದಿನ, ಮುತಾಕಿ ಅವರು&nbsp;ಅಫ್ಘಾನಿಸ್ತಾನದ ಪಾಕಿಸ್ತಾನದ ವಿಶೇಷ ರಾಯಭಾರಿ ಮೊಹಮ್ಮದ್ ಸಾದಿಕ್ ಖಾನ್ ಮತ್ತು ಚೀನಾದ ವಿಶೇಷ ಪ್ರತಿನಿಧಿ ಯುಯೆ ಕ್ಸಿಯಾಯೋಂಗ್ ಅವರೊಂದಿಗೆ&nbsp;<a href="https://x.com/HafizZiaAhmad/status/1921160133075222757">ತ್ರಿಪಕ್ಷೀಯ ಸಭೆ ನಡೆಸಿದರು .</a></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="ps" dir="rtl">د ا.ا.ا. د بهرنیو چارو وزیر محترم مولوي امیر خان متقي سره په کابل کې د چین ځانگړي استازي ښاغلي یوی شیایونگ او د پاکستان ځانگړي استازي ښاغلي محمد صادق او ورسره پلاویو وکتل. <br>په دې ناسته کې د افغانستان &#8211; چین &#8211; پاکستان د بهرنيو چارو وزيرانو د ډيالوگ د پنځمې ناستې د موضوعاتو&#8230; <a href="https://t.co/b8IDt3l8z3">pic.twitter.com/b8IDt3l8z3</a></p>&mdash; Hafiz Zia Ahmad (@HafizZiaAhmad) <a href="https://twitter.com/HafizZiaAhmad/status/1921160133075222757?ref_src=twsrc%5Etfw">May 10, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಭಾರತ, ತಾಲಿಬಾನ್ ಸರ್ಕಾರವನ್ನು ಔಪಚಾರಿಕವಾಗಿ ಗುರುತಿಸದಿದ್ದರೂ, ಅದರೊಂದಿಗಿನ ಅದರ ಸಂಬಂಧವು ಸ್ಥಿರವಾಗಿ ಬೆಳೆದಿದೆ, ವಿಶೇಷವಾಗಿ ಇಸ್ಲಾಮಾಬಾದ್‌ನೊಂದಿಗಿನ ಕಾಬೂಲ್‌ನ ಸಂಬಂಧಗಳು ಹದಗೆಟ್ಟಿರುವುದರಿಂದ.</p>



<p>ಭಾರತೀಯ ಅಧಿಕಾರಿಗಳು ಕಾಬೂಲ್‌ಗೆ ಭೇಟಿ ನೀಡಿ ಪ್ರಾದೇಶಿಕ ಶೃಂಗಸಭೆಯ ಹೊರತಾಗಿ ಸಭೆಗಳನ್ನು ನಡೆಸಿದ್ದರು, ಆದರೆ ಅಫ್ಘಾನ್ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ತಾಲಿಬಾನ್-ಒಪ್ಪಂದಿತ ರಾಜತಾಂತ್ರಿಕರು ನಿರ್ವಹಿಸಲು ಅನುಮತಿಸಲಾಗಿತ್ತು.</p>



<p>ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಉನ್ನತ ಮಟ್ಟದ ಸಭೆ&nbsp;2025 ರ ಜನವರಿಯಲ್ಲಿ ದೋಹಾದಲ್ಲಿ ತಾಲಿಬಾನ್ ಹಂಗಾಮಿ ವಿದೇಶಾಂಗ ಸಚಿವರನ್ನು&nbsp;<a href="https://thewire.in/diplomacy/vikram-misri-taliban-acting-foreign-minister-highest-level-bilateral">ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭೇಟಿಯಾದಾಗ ನಡೆಯಿತು.</a></p>



<p>ಪಾಕಿಸ್ತಾನವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದ ಎರಡು ವಾರಗಳ ನಂತರ ಇದು ನಡೆದಿದೆ.</p>



<p></p>
]]></content:encoded>
					
		
		
			</item>
		<item>
		<title>ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ನಡೆಸಿದ ಫಿರಂಗಿ ದಾಳಿಯಿಂದ ಹಲವರು ಸಾವನ್ನಪ್ಪಿರುವ ಶಂಕೆ</title>
		<link>https://peepalmedia.com/case-and-death-to-overnight-artillery-shelling-by-pakistan-in-kashmir/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 10 May 2025 09:17:57 +0000</pubDate>
				<category><![CDATA[ದೇಶ]]></category>
		<category><![CDATA[indo-pakistan war]]></category>
		<category><![CDATA[Jammu & Kashmir]]></category>
		<category><![CDATA[pak]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=58682</guid>

					<description><![CDATA[ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ. ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ [&#8230;]]]></description>
										<content:encoded><![CDATA[
<pre class="wp-block-code"><code><strong>ವರದಿಗಳ ಪ್ರಕಾರ, ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಸತತ ಎರಡನೇ ದಿನವೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ವಾಯು ನೆಲೆಗಳ ಒಳ ನುಸುಳಿವೆ. ಒಂದು ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್‌ ದಾಳಿಗೊಳಗಾದವು. ದಾಳಿಯಲ್ಲಿ ನಾಗರೀಕರ ಮನೆಗಳು ಹಾನಿಗೊಳಗಾಗಿವೆ</strong></code></pre>



<p>ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ.<br><br>ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ ಬಾಲಕಿ ಮತ್ತು ಓರ್ವ 35 ವರ್ಷದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.<br><br>ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭಾರೀ ಫಿರಂಗಿ ದಾಳಿಯಲ್ಲಿ, ಪೂಂಚ್‌ನ ಮೆಂಧರ್ ಪ್ರಾಂತ್ಯದ ʼರಶೀದಾ ಬಾನೋʼ ಮತ್ತು ಜಮ್ಮುವಿನ ಆರ್‌ಎಸ್ ಪುರ ನಿವಾಸಿಯಾದ ʼಅಶೋಕ್ ಕುಮಾರ್ʼ ಎಂದು ಗುರುತಿಸಲಾದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.<br><br>ಜಮ್ಮು ಮತ್ತು ಶ್ರೀನಗರದ ನಾಗರಿಕ ವಿಮಾನ ನಿಲ್ದಾಣಗಳು, ಉಧಮ್‌ಪುರ ವಾಯುನೆಲೆ, ಅವಂತಿಪೋರಾ ವಾಯುನೆಲೆ ಮತ್ತು ಕೆಲವು ವಸತಿ ಪ್ರದೇಶಗಳು ಸೇರಿದಂತೆ ʼಎಲ್‌ಒಸಿʼ ಹಾಗೂ ʼಐಬಿʼಯ ಉದ್ದಕ್ಕೂ ರಾತ್ರಿಯಿಡೀ ಮತ್ತು ಶನಿವಾರ ಬೆಳಿಗ್ಗೆ ಅಲ್ಲಿನ ನಿವಾಸಿಗಳು ಹಲವಾರು ಬಾಂಬ್‌ ಸ್ಫೋಟದ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.</p>



<p><strong>ದಾಳಿಯಿಂದ ಹಾನಿಗೊಳಗಾದ ಜಮ್ಮುವಿನ ಕೆಲವು ಭಾಗಗಳು</strong><br>ಜಮ್ಮು ಮತ್ತು ಕಾಶ್ಮೀರದ ವಾಯು ನೆಲೆಗಳಿಗೆ ಸತತ ಎರಡನೇ ದಿನವೂ ಪಾಕಿಸ್ತಾನದ್ದೆಂದು ಶಂಕಿಸಲಾದ ಡ್ರೋನ್‌ಗಳು ನುಸುಳಿವೆ ಎಂದು ವರದಿಗಳು ತಿಳಿಸಿವೆ. ಚಳಿಗಾಲದ ರಾಜಧಾನಿಯಾದ ಜಮ್ಮುವಿನಲ್ಲಿ ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್ ದಾಳಿಗೆ ಒಳಗಾದವು. ಇದು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="683" src="https://peepalmedia.com/wp-content/uploads/2025/05/image-2.png" alt="" class="wp-image-58683" style="width:556px;height:auto" srcset="https://peepalmedia.com/wp-content/uploads/2025/05/image-2.png 1024w, https://peepalmedia.com/wp-content/uploads/2025/05/image-2-300x200.png 300w, https://peepalmedia.com/wp-content/uploads/2025/05/image-2-768x512.png 768w, https://peepalmedia.com/wp-content/uploads/2025/05/image-2-150x100.png 150w, https://peepalmedia.com/wp-content/uploads/2025/05/image-2-696x464.png 696w" sizes="(max-width: 1024px) 100vw, 1024px" /><figcaption class="wp-element-caption"><strong>ಜಮ್ಮು: ಮೇ 10, 2025 ರ ಶನಿವಾರ ಜಮ್ಮುವಿನ ವಸತಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರು ಜಮಾಯಿಸಿರುವುದು. ಚಿತ್ರ: ಪಿಟಿಐ</strong></figcaption></figure></div>


<p>ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಿಂದ ಶನಿವಾರ ಸ್ಪೋಟಕಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ಧಿ ಮೂಲವೊಂದರ ಮೂಲಕ ತಿಳಿದು ಬಂದಿದೆ. ಆದರೆ ಅವಶೇಷಗಳು ಕಂಡುಬಂದ ಸ್ಥಳಗಳ ವಿವರಗಳನ್ನು ಅವರು ಸ್ಪಷ್ಟಪಡಿಸಿಲ್ಲ.<br><br>ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ಮೇ 7 ರಂದು ಭಾರತ ಸರ್ಕಾರ ನಿಖರವಾದ ಕ್ಷಿಪಣಿ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಶ್ರೀನಗರದ ಏಕೈಕ ನಾಗರಿಕ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭಯಭೀತ ನಿವಾಸಿಗಳು ಹಲವಾರು ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.<br>“ಬೆಳಗಾದ ಸ್ವಲ್ಪ ಹೊತ್ತಿನಲ್ಲೇ, ವಿಮಾನ ನಿಲ್ದಾಣದ ಕಡೆಯಿಂದ ಕನಿಷ್ಠ ಐದರಿಂದ ಆರು ದೊಡ್ಡ ಸ್ಫೋಟಗಳು ಸಂಭವಿಸಿದವು. ಮನೆ ನಡುಗಿತು ಮತ್ತು ಮಕ್ಕಳು ನಿದ್ರೆಯಿಂದ ಎದ್ದು ಬೆಚ್ಚಿಬಿದ್ದರು&#8221; ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಶ್ರೀನಗರದ ಹುಮ್ಹಾಮಾ ಪ್ರದೇಶದ ನಿವಾಸಿಯೊಬ್ಬರು ಹೇಳಿದರು.<br><br>ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿಯ ರಕ್ಷಣಾ ವಾಯುನೆಲೆಯ ಸುತ್ತಮುತ್ತಲಿನ ನಿವಾಸಿಗಳು ಶುಕ್ರವಾರ ರಾತ್ರಿ ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ. ಸ್ಫೋಟಗಳಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ಆದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ವರದಿಗಳು ಬಂದಿಲ್ಲ.<br><br>ಜಮ್ಮುವಿನ ಮೇಲೆ ಹಾರುತ್ತಿರುವ ಜೆಟ್‌ಗಳು ಜಮ್ಮು ವಿಮಾನ ನಿಲ್ದಾಣದ ಬಳಿ, ರಕ್ಷಣಾ ವಾಯುನೆಲೆಯ ಬಳಿ ಮತ್ತು ಉಧಂಪುರ್‌ನ ಗ್ಯಾರಿಸನ್ ಪಟ್ಟಣದ ವಾಯುನೆಲೆಯ ಬಳಿ ವಾಯುದಾಳಿಯ ಸೈರನ್‌ಗಳ ನಡುವೆ ಹಲವಾರು ಸ್ಫೋಟಗಳ ಭೀಕರ ಶಬ್ಧಗಳ ನಡುವೆ ಚಳಿಗಾಲದ ರಾಜಧಾನಿ ಜಮ್ಮುವಿನ ನಿವಾಸಿಗಳು ಎಚ್ಚರಗೊಂಡರು.<br>&#8220;ಜೆಟ್‌ಗಳು ಆಕಾಶದಲ್ಲಿ ಹಾರಾಡುತ್ತಿವೆ ಮತ್ತು ಆವಾಗಾವಾಗ ಬಾಂಬಿನ ಶಬ್ದಗಳು ಕೇಳಿಬರುತ್ತಿವೆ.ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಂದ ನನಗೆ ಉದ್ರಿಕ್ತ ಕರೆಗಳು ಬರುತ್ತಿವೆ&#8221; ಎಂದು ಶನಿವಾರ ಬೆಳಿಗ್ಗೆ ಹೆಸರು ಹೇಳಲು ಇಚ್ಛಿಸದ ಜಮ್ಮು ನಿವಾಸಿಯೊಬ್ಬರು ತಿಳಿಸಿದರು.<br><br>ಶುಕ್ರವಾರ ರಾತ್ರಿ 9 ಗಂಟೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br><br>&#8220;ಬಿಎಸ್‌ಎಫ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ರೇಂಜರ್‌ಗಳ ಪೋಸ್ಟ್‌ಗಳು ಮತ್ತು ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಕಂಕಣಬದ್ಧರಾಗಿದ್ದೇವೆ&#8221; ಎಂದು ಜಮ್ಮುವಿನ ಬಿಎಸ್‌ಎಫ್ ವಕ್ತಾರರು ʼಎಕ್ಸ್‌ʼನಲ್ಲಿ ತಿಳಿಸಿದ್ದಾರೆ.<br>ಜಮ್ಮು ಕಾಶ್ಮೀರದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕೆಲವು ವಸತಿ ಪ್ರದೇಶಗಳ ಮೇಲೆ ಗಡಿಯಾಚೆಯಿಂದ ಸಿಡಿಸಲಾದ ಸ್ಪೋಟಕಗಳು ಬಿದ್ದಿರುವುದನ್ನು ತೋರಿಸಿವೆ. ದೃಶ್ಯವೊಂದರಲ್ಲಿ, ಹಿಂದೂಗಳ ಪ್ರಮುಖ ಧಾರ್ಮಿಕ ತಾಣವಾದ ʼಆಪ್ ಶಂಬುʼ ದೇವಾಲಯದಿಂದ ಸುಮಾರು 80 ಮೀಟರ್ ದೂರದಲ್ಲಿ ಸ್ಫೋಟಗೊಂಡ ಸ್ಪೋಟಕದ ಅವಶೇಷಗಳನ್ನು ಪೊಲೀಸ್ ತಂಡ ಪರಿಶೀಲಿಸುತ್ತಿರುವುದು ಕಂಡುಬಂದಿದೆ.<br><br>ವರದಿಗಳ ಪ್ರಕಾರ ರೆಹರಿ, ರೂಪ್ ನಗರ, ಜಾನಿಪುರ, ನಾಗಬಾನಿ ಮತ್ತು ಮುಥಿ ಸೇರಿದಂತೆ ಜಮ್ಮುವಿನ ಕೆಲವು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಮೇಲಿನಿಂದ ಬೀಳುವ ಸ್ಪೋಟಕಗಳ ಅವಶೇಷಗಳಿಂದಾಗಿ ವಸತಿ ನಿವಾಸಗಳು ಹಾನಿಗೊಳಗಾಗಿವೆ. ಆದಾಗ್ಯೂ, ನಾಗರಿಕರಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿಯೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.</p>


<div class="wp-block-image">
<figure class="aligncenter size-full is-resized"><img decoding="async" width="1024" height="683" src="https://peepalmedia.com/wp-content/uploads/2025/05/image-3.png" alt="" class="wp-image-58684" style="width:570px;height:auto" srcset="https://peepalmedia.com/wp-content/uploads/2025/05/image-3.png 1024w, https://peepalmedia.com/wp-content/uploads/2025/05/image-3-300x200.png 300w, https://peepalmedia.com/wp-content/uploads/2025/05/image-3-768x512.png 768w, https://peepalmedia.com/wp-content/uploads/2025/05/image-3-150x100.png 150w, https://peepalmedia.com/wp-content/uploads/2025/05/image-3-696x464.png 696w" sizes="(max-width: 1024px) 100vw, 1024px" /><figcaption class="wp-element-caption"><strong><em>ಜಮ್ಮು: ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ ಜಮಾಯಿಸಿರುವ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು, ಶನಿವಾರ, ಮೇ 10, 2025. ಚಿತ್ರ: ಪಿಟಿಐ.</em></strong></figcaption></figure></div>


<p><br><br>ಕೇಂದ್ರಾಡಳಿತ ಪ್ರದೇಶದಲ್ಲಿ ಸತತ ಮೂರನೇ ದಿನವೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಆದ ಕಾರಣ, ಜಮ್ಮು ವಿಶ್ವವಿದ್ಯಾಲಯ ಮತ್ತು ಅಲ್ಲಿನ ಕೆಲವು ಕಾಲೇಜುಗಳಲ್ಲಿ ಓದುತ್ತಿರುವ ರಾಜೌರಿಯ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆ ಜಮ್ಮು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಹಾಯಕ್ಕಾಗಿ ಕಾಯುತ್ತಿದ್ದರು.<br><br>ಸಾರ್ವಜನಿಕ ಸಾರಿಗೆ ವಾಹನಗಳು ನಮ್ಮನ್ನು ನಮ್ಮ ಊರಿಗೆ ಹಿಂತಿರುಗಲು ನಿರಾಕರಿಸುತ್ತಿವೆ ಎಂದು ಜಮ್ಮು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಫಾರೂಕ್ &#8216;ದಿ ವೈರ್&#8217;ಗೆ ತಿಳಿಸಿದ್ದಾರೆ. ಅಲ್ಲಿ ನಿನ್ನೆ ರಾತ್ರಿ ಪಾಕಿಸ್ತಾನದಿಂದ ಭಾರೀ ಫಿರಂಗಿ ದಾಳಿ ನಡೆದು, ಜಮ್ಮು-ಕಾಶ್ಮೀರದ ಒಬ್ಬ ಹಿರಿಯ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.&#8221;ನಾವು ಕೆಲವು ಖಾಸಗಿ ಪ್ರಯಾಣಿಕರ ಕ್ಯಾಬ್‌ಗಳ ಪ್ರಯಾಣಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕೇಳಿಕೊಂಡೆವು, ಆದರೆ ಅವರು ಸಹ ನಮಗೆ ಮನೆಗೆ ಹಿಂತಿರುಗಲು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ&#8221; ಎಂದು ಅವರು ಹೇಳಿದರು.<br><br><strong>ಹಾನಿಗೊಳಗಾದ ಜೀವಗಳು</strong><br>ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ, ರಾಜೌರಿ ಮತ್ತು ಪೂಂಚ್‌ಗಳಲ್ಲಿನ ʼಎಲ್‌ಒಸಿʼ ಉದ್ದಕ್ಕೂ ಪಾಕಿಸ್ತಾನ ರಾತ್ರೋರಾತ್ರಿ ಭಾರೀ ಫಿರಂಗಿ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ ನಾಲ್ಕು ನಾಗರಿಕರು ಮತ್ತು ರಾಜೌರಿಯ ಹೆಚ್ಚುವರಿ ಉಪ ಆಯುಕ್ತ ʼರಾಜ್‌ಕುಮಾರ್ ಥಪ್ಪಾʼ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br><br>&#8220;ರಾಜೌರಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಜಮ್ಮು-ಕಾಶ್ಮೀರದ ರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಆಡಳಿತ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು&#8221; ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ. &#8220;ಈ ಭಯಾನಕ ಸಾವಿನಿಂದ ನನಗೆ ಉಂಟಾದ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ&#8221; ಎಂದು ಪೋಸ್ಟ್‌ನಲ್ಲಿ ಸೇರಿಸಲಾಗಿದೆ.<br><br>ʼಎಲ್‌ಒಸಿʼಯಾದ್ಯಂತ ಸಿಡಿಸಿದ ಮಾರ್ಟರ್ ಶೆಲ್, ರಾಜೌರಿಯಲ್ಲಿರುವ ʼಥಾಪಾʼ ಅವರ ನಿವಾಸಕ್ಕೆ ಬಡಿದು ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸಿಬ್ಬಂದಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.<br><br>ಭಾರೀ ಫಿರಂಗಿ ಶೆಲ್ ದಾಳಿಯ ಕಾರಣದಿಂದಾಗಿ ʼಎಲ್‌ಒಸಿʼ ಗಡಿಯ ಉದ್ದಕ್ಕೂ ಇರುವ ಅನೇಕ ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು, ಇದೇ ಸಮಯದಲ್ಲಿ, ಈ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ.<br><br><strong>ವರದಿ:</strong> ಜಹಾಂಗೀರ್ ಅಲಿ, ದಿ ವೈರ್<br><strong>ಅನುವಾದ: </strong>ಗುರು ಸುಳ್ಯ</p>
]]></content:encoded>
					
		
		
			</item>
		<item>
		<title>ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ</title>
		<link>https://peepalmedia.com/pib-warns-pakistani-social-media-platforms-spreading-fake-news/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 May 2025 07:26:52 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[factcheck]]></category>
		<category><![CDATA[Fake news]]></category>
		<category><![CDATA[india]]></category>
		<category><![CDATA[news]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[peepalmedia]]></category>
		<category><![CDATA[PIB warns]]></category>
		<category><![CDATA[social media]]></category>
		<category><![CDATA[War]]></category>
		<guid isPermaLink="false">https://peepalmedia.com/?p=58580</guid>

					<description><![CDATA[ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&#160; ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&#160; ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ [&#8230;]]]></description>
										<content:encoded><![CDATA[
<p>ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&nbsp;</p>



<p>ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&nbsp;</p>



<p>ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.</p>



<p>ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ&nbsp; ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.</p>



<p>ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email: <strong> <a href="mailto:factcheck@pib.gov.in">factcheck@pib.gov.in</a> </strong>ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.</p>



<p></p>
]]></content:encoded>
					
		
		
			</item>
		<item>
		<title>ಆಪರೇಷನ್‌ ಸಿಂಧೂರ್: ಪಾಕಿಸ್ತಾನದ ಸುಳ್ಳು ಸುದ್ದಿಗಳನ್ನು ರಾತ್ರೋ ರಾತ್ರಿ ಬಯಲಿಗೆಳೆದ ಮೊಹಮ್ಮದ್ ಜುಬೈರ್</title>
		<link>https://peepalmedia.com/operation-sindoora-mohammad-zubair-exposed-pakistans-fake-news-overnight/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 07 May 2025 10:25:16 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[airforce]]></category>
		<category><![CDATA[alt news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[indian army]]></category>
		<category><![CDATA[Mohammed Zubair]]></category>
		<category><![CDATA[operation sindhur]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=58437</guid>

					<description><![CDATA[ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ. ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌ ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ [&#8230;]]]></description>
										<content:encoded><![CDATA[
<p>ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.  </p>



<p>ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌  ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ.  ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.</p>



<p>ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.  </p>



<p>X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ <a href="https://x.com/zoo_bear/status/1919930898159698383">ಹಂಚಿಕೊಂಡಿದ್ದಾರೆ</a> . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ,  &#8220;ಭಾರತ ನನ್ನ ರಕ್ತದಲ್ಲಿದೆ&#8221; ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.  </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Beware! These are Pakistani propaganda accounts pretending to be Indian Army Personals. <br>Don&#39;t amplify their tweets. <a href="https://t.co/uhoYFDvbUM">pic.twitter.com/uhoYFDvbUM</a></p>&mdash; Mohammed Zubair (@zoo_bear) <a href="https://twitter.com/zoo_bear/status/1919930898159698383?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು &#8220;ಕಾಂಗ್ರೆಸ್ ಬೆಂಬಲಿಗ&#8221; ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು <a href="https://x.com/zoo_bear/status/1919933118104117597/photo/1">ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್‌ ಮಾಡಿದ್ದರು</a>.</p>



<p>&#8220;ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು&#8221; ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಅನ್ನು ಹಮೀದ್‌ ಮೀರ್‌ ರಿಟ್ವೀಟ್‌ ಮಾಡಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">So Pak Senior Journalist <a href="https://twitter.com/HamidMirPAK?ref_src=twsrc%5Etfw">@HamidMirPAK</a> is amplifying tweets by <a href="https://twitter.com/Tiju0Prakash?ref_src=twsrc%5Etfw">@Tiju0Prakash</a> whose earlier I&#39;d was @tiju786 ( A Pakistan propaganda account pretending to be Congress Supporter). 😏 <a href="https://t.co/pUJPlafWq6">pic.twitter.com/pUJPlafWq6</a></p>&mdash; Mohammed Zubair (@zoo_bear) <a href="https://twitter.com/zoo_bear/status/1919933118104117597?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್‌ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್‌ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.</p>



<p>ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ. </p>



<p>&#8220;ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ&#8221; ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ. </p>



<p>ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.</p>



<p>&#8220;ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,&#8221; ಎಂದು ಜುಬೈರ್ ಹೇಳಿದರು. </p>



<p>ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.</p>



<p>ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು.  ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್‌ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ. </p>



<p>ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್‌ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">boss Zubair -my deep respects 🙏🙏🙏<br><br>fills my heart with pain to realize that your own countrymen give you gaalis daily. daily non-stop. call you anti-national, pakistani etc etc and feel proud to do this. <br><br>yet you soldier on. without getting any pat on the back. i admire Modi…</p>&mdash; Puneet Sharma (@PuneetSharmaX) <a href="https://twitter.com/PuneetSharmaX/status/1919965351351042210?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಭಯೋತ್ಪಾದಕ ದಾಳಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಬಿಜೆಪಿಗೆ ಹೊಸದೇನಲ್ಲ!</title>
		<link>https://peepalmedia.com/using-terrorist-attacks-for-election-campaigning-is-nothing-new-for-the-bjp/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 24 Apr 2025 12:19:23 +0000</pubDate>
				<category><![CDATA[ಅಂಕಣ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=57827</guid>

					<description><![CDATA[ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ [&#8230;]]]></description>
										<content:encoded><![CDATA[
<pre class="wp-block-code"><code><strong>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು. ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು</strong></code></pre>



<p>ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ.</p>



<p>ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್&nbsp;ಇಂಡಿಯಾ ರೇಡಿಯೋ&nbsp;<a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು.</a></p>



<p>ಒಂದು ಕಡೆ ಇಂತಹ ನೋವಿನ ಸಂದರ್ಭದಲ್ಲಿ ಕಾನ್ಪುರಕ್ಕೆ ಹೋಗುವುದು ಸರಿಯಲ್ಲ ಎಂದು ನಿರ್ಧರಿಸಿದ ಮೋದಿಯವರು ಬಿಹಾರದ ಮಧುಬನಿಗೆ ಹೋಗಿದ್ದಾರೆ. ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಇವತ್ತು ಸರ್ವಪಕ್ಷಗಳ ಸಭೆ ಕೂಡ ನಡೆಯಲಿದೆ. ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ. ಎಲ್ಲಾ ಪಕ್ಷಗಳ ಒಬ್ಬೊಬ್ಬ ಸದಸ್ಯನನ್ನು ಕರೆದು ಅಭಿಪ್ರಾಯ ಕೇಳಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸುವ ಸಾಧ್ಯತೆ ಇಲ್ಲ, ಅವರು ಬಿಹಾರದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.  ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಬೇಕು ಅಂತ ಕಾಂಗ್ರೆಸ್ ಒತ್ತಾಯ ಮಾಡಿದರೂ ಬಿಹಾರ ಹೋಗಿದ್ದಾರೆ. <br><br>ನೇರ ಸೌದಿಯಿಂದ ಬಂದು, ತಮ್ಮ ಸಂತಾಪದ ಭಾಗವಾಗಿ ಕಾನ್ಪುರದ ಬೇಟಿಯನ್ನು ಮೊಟುಕುಗೊಳಿಸಿ, ಸರ್ವಪಕ್ಷಗಳ ಸಭೆಯನ್ನೂ ನಿರ್ಲಕ್ಷಿಸಿ, ಬಿಹಾರಕ್ಕೆ ಹೋದ ಮೋದಿಯವರು ಸೌದಿಯಿಂದ ಬಂದಿದ್ದಾದರು ಯಾಕೆ?</p>



<p>ಬಿಜೆಪಿ ಮತ್ತು ಪ್ರಧಾನಿ ಪಹಲ್ಗಾಮ್ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ? ಈ ಪ್ರಶ್ನೆಯನ್ನು ಅನೇಕ ಜನರು ಕೇಳುತ್ತಿದ್ದಾರೆ. ಆದರೆ, ಜನರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ವಾತಾವರಣವನ್ನು ಸೃಷ್ಟಿ ಮಾಡಿ, ಹೊಣೆಗಾರ ಸರಕಾರ ತನ್ನ ಹಾಸಿಗೆಯ ಮೇಲೆ ಭದ್ರವಾಗಿ ಕೂರುತ್ತದೆ. ಈ ಹಿನ್ನಲೆಯಲ್ಲಿ 2008 ರ ಮುಂಬೈ ದಾಳಿಯ ಸಂದರ್ಭದಲ್ಲಿ, ಇಡೀ ದಾಳಿಯನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡ ರೀತಿಯನ್ನು ನಾವು ನೆನಪಿಸಿಕೊಳ್ಳಬೇಕು.</p>


<div class="wp-block-image">
<figure class="aligncenter size-full"><img decoding="async" width="489" height="768" src="https://peepalmedia.com/wp-content/uploads/2025/04/unnamed-1.webp" alt="" class="wp-image-57829" srcset="https://peepalmedia.com/wp-content/uploads/2025/04/unnamed-1.webp 489w, https://peepalmedia.com/wp-content/uploads/2025/04/unnamed-1-191x300.webp 191w, https://peepalmedia.com/wp-content/uploads/2025/04/unnamed-1-150x236.webp 150w, https://peepalmedia.com/wp-content/uploads/2025/04/unnamed-1-300x471.webp 300w" sizes="(max-width: 489px) 100vw, 489px" /><figcaption class="wp-element-caption"><strong><em>ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು. </em></strong></figcaption></figure></div>


<p>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ <a href="https://www.hindustantimes.com/delhi/as-forces-fight-terrorists-bjp-is-busy-seeking-votes/story-SAtEaWSWdin2C8ii8uhwPK.html">ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು</a>. ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು.<strong><em> </em></strong>ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು.</p>



<p>ನವೆಂಬರ್ 28 ರಂದು, ಮುಂಬೈ ದಾಳಿಯ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿತ್ತು. ದೇಶವೇ ಯುಪಿಎ ಸರ್ಕಾರದ ವಿರುದ್ಧ ಕೋಪವನ್ನು ತೋರಿಸುತ್ತಿತ್ತು. ಜನರು ಭದ್ರತಾ ವೈಫಲ್ಯವನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಬಿಜೆಪಿ ತನ್ನ ಜವಬ್ದಾರಿಯಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಬದಲು ʼನಮಗೆ ಓಟ್‌ ಹಾಕಿʼ ಎಂದು ಅಮಾಯಕರ ರಕ್ತದ ಮಡುವಿನಲ್ಲಿಯೇ ಚುನಾವಣಾ ಪ್ರಚಾರವನ್ನು ಆರಂಭಿಸಿತು. &nbsp;</p>



<p>ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ದಾಳಿಯ ಸ್ಥಳಗಳಲ್ಲಿ ಒಂದಾದ ಒಬೆರಾಯ್ ಟ್ರೈಡೆಂಟ್ ಹೋಟೆಲ್‌ನ ಹೊರಗಿನಿಂದ&nbsp;<a href="https://www.youtube.com/watch?v=92LD42AKgV0">ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು</a>&nbsp;ಮುಂಬೈಗೆ ಬಂದರು. ಎಂತಾ ದುರ್ದೈವ ನೋಡಿ, ತನ್ನ ಆಡಳಿತದಲ್ಲಿ ಪಹಲ್ಗಾಮ್&nbsp;ನಂತಹ ಒಂದು ಭೀಕರ ದಾಳಿಯಾದಾಗಲೂ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಟಿ ನಡೆಸಲಿಲ್ಲ!</p>



<p>ಮುಂಬೈ ದಾಳಿ ನಡೆದು ಮೂರೇ ದಿನದಲ್ಲಿ, ಅಂದರೆ ನವೆಂಬರ್ 29 ಮತ್ತು ಡಿಸೆಂಬರ್ 4 ರಂದು ಕ್ರಮವಾಗಿ ಚುನಾವಣೆಗೆ ಸಜ್ಜಾಗುತ್ತಿದ್ದ ದೆಹಲಿ ಮತ್ತು ರಾಜಸ್ಥಾನಕ್ಕೆ ಭಾಷಣ ಮಾಡಲು ಹೋದರು. ಅದೇ ದಿನ ಬಿಜೆಪಿ &nbsp;ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮುಂಬೈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವ ಜಾಹೀರಾತುಗಳನ್ನು ಬಿಡುಗಡೆ ಮಾಡಿತು.</p>



<p>ಕಪ್ಪು ಹಿನ್ನಲೆಯ ಮೇಲೆ, ಮುಂಬೈ ರಕ್ತಪಾತವನ್ನು ಸೂಚಿಸುವ ರಕ್ತದ ಕೆಂಬಣ್ಣವನ್ನು ಹರಡಿಸಿ, ಅದರ ಮೇಲೆ “Brutal Terror Strikes at Will, Weak Government, Unwilling and Incapable, ಭಯೋತ್ಪಾದನೆಯ ವಿರುದ್ಧ ಹೋರಾಡಿ. ಬಿಜೆಪಿಗೆ ಮತ ಹಾಕಿ” ಎಂದು ಆ ಜಾಹೀರಾತು ನೀಡಿತು.</p>



<p>ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಈ ಪತ್ರಿಕಾ ಜಾಹೀರಾತು ನೀಡಿದಕ್ಕಾಗಿ ಚುನಾವಣಾ <a href="https://www.indiatoday.in/latest-headlines/story/election-commission-pulls-up-bjp-for-campaign-ads-34796-2008-12-08">ಆಯೋಗ ಛೀಮಾರಿ ಹಾಕಿತು</a>, ಇವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಹೇಳಿತು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಪ್ರಚಾರ ಜಾಹೀರಾತುಗಳಲ್ಲಿನ ಕೆಲವು ಹೇಳಿಕೆಗಳು ಮಾದರಿ ಚುನಾವಣಾ ನೀತಿ ಸಂಹಿತೆಯ ಅಕ್ಷರ ಮತ್ತು ಆಶಯವನ್ನು ಉಲ್ಲಂಘಿಸುತ್ತವೆ ಎಂದು ಆಯೋಗ ತಿಳಿಸಿತ್ತು.</p>



<p>ಪುಲ್ವಾಮ ಮತ್ತು ಈಗ ನಡೆದಿರುವ ಪಹಲ್ಗಾಮ್&nbsp; ಉಗ್ರರ ದಾಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಗೋದಿ ಮೀಡಿಯಾಗಳು ಸೇರಿದಂತೆ, ಈ ಸಂದರ್ಭದಲ್ಲೂ ದೇಶದ ರಕ್ಷಣೆಯ ಬದಲಾಗಿ ಬಿಜೆಪಿಯ ಗುರಾಣಿಯಂತೆ ಕೆಲಸ ಮಾಡುವ ಅವರ ಬೆಂಬಲಿಗರು ಒಂದು ಘಟನೆಯನ್ನು ನೆನಪಿಡಬೇಕು<strong>.</strong></p>



<p>ಮುಂಬೈ ದಾಳಿಯ ಮಾರನೇ ದಿನ, ಅಂದರೆ<strong> </strong>2008 ರ ನವೆಂಬರ್ 27 ರಂದು ಇದೇ ಮೋದಿ ಭಯೋತ್ಪಾದಕ ದಾಲಿಯ ವಿಚಾರವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಿಂಗ್ ಎಲ್ಲಾ ಮುಖ್ಯಮಂತ್ರಿಗಳ, ವಿಶೇಷವಾಗಿ ಕರಾವಳಿ ಮತ್ತು ಗಡಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಅವರು ಸೂಚಿಸಿದರು. ಭಾರತದ ದುರ್ಬಲ ಸಮುದ್ರ ಭದ್ರತೆಯ ಬಗ್ಗೆಯೂ ಅವರು ಮಾತನಾಡಿದರು.</p>



<p>ಈ ಪತ್ರ ಒಂದು ದಿನದಲ್ಲಿ ಬಹಿರಂಗವಾಯಿತು. ಈ ಪತ್ರ ಬರೆಯುತ್ತಿದ್ದ ಸಂದರ್ಭದಲ್ಲಿ ಮೋದಿಜಿ ಯುಪಿಎ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾ, ಆ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಲ್ಲುವ ಯೋಚನೆಯಲ್ಲಿದ್ದರು. ಆ ದಿನ, ಆಗ ವಿರೋಧ ಪಕ್ಷದ ನಾಯಕ ಮತ್ತು 2009 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಅಡ್ವಾಣಿ&nbsp;<a href="https://www.hindustantimes.com/delhi-news/bjp-backs-govt-in-hour-of-crisis/story-GgCJGVvaQwvP4dOX5O9gcK.html">ಮಾಧ್ಯಮಗಳ ಮುಂದೆ</a> ಬಂದು&nbsp;, &#8220;ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ ಮತ್ತು ದೇಶಭಕ್ತಿಯ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು&#8221; ಎಂದು ಹೇಳಿದರು.<strong></strong></p>



<p>ಆದರೆ ಮರುದಿನವೇ ಕತೆ ಉಲ್ಟಾ ಹೊಡೆದಿತ್ತು. ಬಿಜೆಪಿ ಲಜ್ಜೆಗೆಟ್ಟು ಇಂತಹ ಒಂದು ಜಾಹೀರಾತುಗಳನ್ನು ಬಿಡುಗಡೆ ಮಾಡಿತು. ಪಕ್ಷವು ತನ್ನ ಹಿಂದಿ ಜಾಹೀರಾತಿನಲ್ಲಿ, &#8220;ಹುತಾತ್ಮರ ತ್ಯಾಗಗಳನ್ನು ನೆನಪಿಸಿಕೊಳ್ಳಿ&#8221; ಎಂದೂ, ಮತ್ತೊಂದು ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಮತ್ತು ಬಿಜೆಪಿಯ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರ ಮುಕ್ತ ಪತ್ರವನ್ನೂ ಪ್ರಕಟಿಸಿತ್ತು. ಅದರಲ್ಲಿ &#8220;ಭಯೋತ್ಪಾದನೆ ಎಸೆದ ಸವಾಲನ್ನು ಒಟ್ಟಾಗಿ ಎದುರಿಸಬೇಕು. &#8220;ಸಾಂಪ್ರದಾಯಿಕ ಸಹೋದರತ್ವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುತ್ತಾ, ಭಯೋತ್ಪಾದನೆಯ ವಿರುದ್ಧ ಹೋರಾಡಬಲ್ಲ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು,&#8221; ಎಂದು ವಾಜಪೇಯಿ ಬರೆದಿದ್ದರು.<br><br>ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಇದ್ದಂತ ಜನಾಕ್ರೋಶವನ್ನು ಕಂಡು, ಸರ್ಕಾರದ ವೈಫಲ್ಯಗಳ ವಿರುದ್ಧ ಅಭಿಯಾನ ನಡೆಸಲು ಬಿಜೆಪಿಗೆ ಒಂದು ಮುಖ ಬೇಕಾಗಿತ್ತು. ಅದುವೇ ನರೇಂದ್ರ ಮೋದಿ. ಹೀಗಾಗಿ, ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದ ಮೋದಿ ನವೆಂಬರ್ 28 ರಂದು ಗುಜರಾತ್‌ನಿಂದ ಮುಂಬೈಗೆ ಬಂದು ಒಬೆರಾಯ್ ಟ್ರೈಡೆಂಟ್‌ನಲ್ಲಿ ಮಾಡಿದ ಭಾಷಣ ಮಾಡಿದರು. ಸಿಂಗ್‌ ಅವರು ದಾಳಿಯ ನಂತರ ಉದ್ದೇಶಿಸಿ ಮಾಡಿದ ಭಾಷಣ &nbsp;&#8220;ನಿರಾಶಾದಾಯಕ&#8221; ಎಂದು ಪತ್ರಕರ್ತರಿಗೆ ಮೋದಿ ತಿಳಿಸಿದರು. ಸಿಂಗ್‌ಗೆ ಬರೆದ ಪತ್ರದ ಬಗ್ಗೆಯೂ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು ಮತ್ತು ಭಾರತದ ಸಮುದ್ರ ಭದ್ರತೆಗೆ ಸಂಬಂಧಿಸಿದ ಪತ್ರದಲ್ಲಿದ್ದ ಮಾಹಿತಿಗಳನ್ನು ಮತ್ತೆ ಹೇಳಿದರು. &nbsp;</p>



<p>ಪಾಕಿಸ್ತಾನದ ದುಷ್ಟ ತಂತ್ರಗಳ ಎಚ್ಚರಿಕೆಯನ್ನು ಯುಪಿಎ ಸರ್ಕಾರ ನಿರ್ಲಕ್ಷಿಸಿದೆ ಎಂದು ಮೋದಿ ಆರೋಪಿಸಿದರು, ಪಾಕಿಸ್ತಾನಿ ನೌಕಾಪಡೆಗಳು ಗುಜರಾತಿ ಮೀನುಗಾರರನ್ನು ಬಂಧಿಸಿ, ಅವರನ್ನು ಬಿಡುಗಡೆ ಮಾಡಿದ ಮೇಲೂ ಅವರ ದೋಣಿಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂಬ ಬಗ್ಗೆ ಮೋದಿ ಮಾತನಾಡಿದರು. &#8220;ದೋಣಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನಾನು ಸರ್ಕಾರಕ್ಕೆ ಸೂಚಿಸಿದ್ದೆ&#8221; ಎಂದು ಮೋದಿ ಹೇಳಿದರು.</p>



<p>ಇಡೀ ಮುಂಬೈ ದಾಳಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿಯೇ ಈಗಿನ ದಾಳಿಯಲ್ಲಿ ತನ್ನನ್ನು ಯಾರೇ ಪ್ರಶ್ನಿಸಿದರೂ ದೇಶದ್ರೋಹಿಗಳು ಎಂದು ನಕಲಿ ದೇಶಪ್ರೇಮದ ಆಟವನ್ನು ಆಡುತ್ತಿದೆ.</p>



<p>ಮುಂಬೈ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಸಂಬಂಧಿಕರಿಗೆ ವಿತರಿಸಲು ಗುಜರಾತ್ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 1 ಕೋಟಿ ರುಪಾಯಿಗಳನ್ನು ದೇಣಿಗೆ ನೀಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಹುತಾತ್ಮರಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಕೂಡ ಒಬ್ಬರಾಗಿದ್ದರು.</p>



<p>ಕರ್ಕರೆಯವರ ಕುಟುಂಬ ಯಾರನ್ನೂ ಬೇಟಿ ಮಾಡಲು ಒಪ್ಪದಿದ್ದರೂ, ಮೋದಿ ಮಾತ್ರ ಅವರ ಮನೆಗೆ ಹೋಗಿ ಸಂತ್ವಾನ ಹೇಳಿ ಬಂದರು. &nbsp;ಆದರೆ ಕರ್ಕರೆ ಪತ್ನಿ ಕವಿತಾ ಕರ್ಕರೆಯವರು <a href="https://www.indiatoday.in/latest-headlines/story/hemant-karkares-wife-turns-down-modis-offer-34231-2008-11-29">ಮೋದಿಯವರ ಒಂದು ಕೋಟಿ</a> ರುಪಾಯಿಗಳ ಆಫರನ್ನು ನಿರಾಕರಿಸಿದರು.</p>



<p>ಇದಕ್ಕೆ ಕಾರಣವೆಂದರೆ, ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಕರ್ಕರೆ ಅವರು ಸೆಪ್ಟೆಂಬರ್ 2008 ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಾತ್ರವಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಆಗ ಬಿಜೆಪಿ ನಾಯಕರು ಯುಪಿಎ ಸರ್ಕಾರದ ಒತ್ತಡದಿಂದಾಗಿ ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ಕೊಟ್ಟರು. &nbsp;</p>



<p>ನವೆಂಬರ್ 28 ರಂದು,&nbsp;<a href="https://economictimes.indiatimes.com/news/politics-and-nation/advani-blames-intelligence-agencies-for-mumbai-terror-attacks/articleshow/3770137.cms">ಅಡ್ವಾಣಿ</a>&nbsp;ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ, &#8220;ಒಬ್ಬ ಭಯೋತ್ಪಾದಕನ ಮೊಬೈಲ್ ಫೋನ್ ಪಾಕಿಸ್ತಾನಿ ಮೂಲದದ್ದಾಗಿ ಈಗ ಕಂಡುಬರುತ್ತಿದೆ. ʼಹಿಂದೂ ಭಯೋತ್ಪಾದನೆʼಯ ಬಗ್ಗೆ ಗುಪ್ತಚರ ಸಂಸ್ಥೆಗಳು ಕಾಳಜಿ ವಹಿಸಿದ್ದರಿಂದ ಭಯೋತ್ಪಾದಕರ ಸಂಚು ಪತ್ತೆಯಾಗದೆ ಹೋಗಿದೆ ಎಂದು ದಾಳಿಗೆ ಗುಪ್ತಚರ ಸಂಸ್ಥೆಗಳನ್ನು ದೂಷಿಸಿದರು.</p>



<p>ಹಿಂದಿನ ದಿನ, ಸಿಂಗ್ ಅವರು ಅಡ್ವಾಣಿಯವರಿಗೆ ಆಹ್ವಾನ ನೀಡಿ, ಇಬ್ಬರೂ ಜಂಟಿಯಾಗಿ ಮುಂಬೈಗೆ ಭೇಟಿ ನೀಡಿ ಭಾರತೀಯ ರಾಜಕೀಯ ವರ್ಗದ ನಡುವಿನ ಐಕ್ಯತೆಯನ್ನು ಪ್ರದರ್ಶಿಸಲು ಆ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದ್ದರು. ಆದರೆ ಆ ಜಂಟಿ ಭೇಟಿ ಎಂದಿಗೂ ನಡೆಯಲಿಲ್ಲ.&nbsp;<a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಅಡ್ವಾಣಿ</a>&nbsp;ತಮ್ಮ ಹೇಳಿಕೆಯಲ್ಲಿ ವಿವರಿಸಿದರು, “ಪ್ರಧಾನಿಯವರು ನಾವು ಒಟ್ಟಿಗೆ ಮುಂಬೈಗೆ ಹೋಗಬೇಕೆಂದು ಸೂಚಿಸಿದ್ದರು. ನನ್ನ ಪ್ರಯಾಣ ಯೋಜನೆಗಳನ್ನು ಮುಂದೂಡುತ್ತಾ ನಾನು ತಕ್ಷಣ ಒಪ್ಪಿಕೊಂಡಿದ್ದೆ. ಆದರೆ ಮಧ್ಯಾಹ್ನ, ಕಮಾಂಡೋ ಕಾರ್ಯಾಚರಣೆಗಳು ಇನ್ನೂ ಮುಗಿದಿಲ್ಲದ ಕಾರಣ ಶುಕ್ರವಾರ [ನವೆಂಬರ್ 28] ಹೋಗುವುದು ಉತ್ತಮ ಎಂದು ನನಗೆ ತಿಳಿಸಲಾಯಿತು,” ಎಂದು ಹೇಳಿ ವಿಫಲವಾದ ಭೇಟಿಯ ಹೊಣೆಯನ್ನು ಸಿಂಗ್ ಮೇಲೆ ಹೊರಿಸಿದರು.</p>



<p>ಆದರೆ, ಇಡೀ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರವಾಗಿ ಬಿಜೆಪಿ ಬಳಸಿಕೊಂಡು, ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಿರುವಾಗ ಮನಮೋಹನ್‌ ಸಿಂಗ್‌ ಅಡ್ವಾಣಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೇಗೆ ಹೋಗಲು ಸಾಧ್ಯ?</p>



<p>ಮುಂಬೈ ದಾಳಿಯಾಗಿ ಹತ್ತು ವರ್ಷಗಳಾದ <a href="https://www.livemint.com/Politics/pGPABBw5DnDwPhuimtqmTL/Mumbai-terror-attacks-2611-anniversary-2008-mumbai-attacks.html">ಮೇಲೆ ಮಿಂಟ್‌ &#8211; ಮಾಧ್ಯಮ</a> ಒಂದು ವರದಿಯನ್ನು ಮಾಡಿತ್ತು. ಆಗ, ದಾಳಿಯ ಸಂದರ್ಭದಲ್ಲಿ ಬಿಜೆಪಿ ಯೂಟರ್ನ್‌ ಹೊಡೆದ ಬಗ್ಗೆ ಕೇಳಿದಾಗ ಬಿಜೆಪಿ ನಾಯಕರೊಬ್ಬರು &#8220;ಅಡ್ವಾಣಿಜೀ ಸೇರಿದಂತೆ ನಮ್ಮ ಯಾವುದೇ ಹಿರಿಯ ನಾಯಕರು ಇಷ್ಟು ಬೇಗ ಮುಂಬೈಗೆ ಬಂದು ಇಲ್ಲಿಯೇ ಸ್ಥಾನಮಾನ ಪಡೆಯಲು ಬಯಸಲಿಲ್ಲ. ಅವರು ಅದನ್ನು ದೆಹಲಿಯಲ್ಲಿ ಮಾಡಿದರು, ಆದರೆ ಮುಂಬೈನಲ್ಲಿ ಯಾರನ್ನಾದರೂ ನೋಡಬೇಕಾಗಿತ್ತು. ಹಾಗಾಗಿ ಗೋಪಿನಾಥ್ ಮುಂಡೆಯವರು ಮೋದಿಜಿಯನ್ನು ಸಂಪರ್ಕಿಸಿದರು, ಅವರು ಬರಲು ಒಪ್ಪಿದರು,” ಎಂದು ಹೇಳಿರುವುದು ವರದಿಯಾಗಿದೆ. 2008 ರ ದಾಳಿಯನ್ನು ಮೋದಿಜಿ ತಮ್ಮ ಪ್ರಧಾನಿಯಾಗುವ ಕನಸಿಗೆ ಒಂದು ಕ್ಯಟಲಿಸ್ಟ್‌ ಆಗಿ ಬಳಸಿಕೊಂಡರು. &nbsp;&nbsp;</p>



<p>ರಾಜಸ್ಥಾನದಲ್ಲಿ, ಬಿಜೆಪಿ ಮುಂಬೈ ದಾಳಿಯನ್ನು ಬಳಸಿಕೊಂಡು ಮತಗಳನ್ನು ಗಳಿಸಲು ಪ್ರಯತ್ನಿಸಿತು. ನವೆಂಬರ್ 29, 2008 ರಂದು ಪ್ರಕಟವಾದ&nbsp;<em><a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಇಂಡಿಯಾ ಟುಡೇಯಲ್ಲಿ ವರದಿಯಾದಂತೆ,</a></em>&nbsp;ಕೇಂದ್ರ ಸರ್ಕಾರದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಅಸಮರ್ಥತೆಯನ್ನು ಪ್ರತಿಭಟಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ &#8220;ಭಯೋತ್ಪಾದನೆಯ ಪ್ರತಿಕೃತಿಗಳನ್ನು&#8221; ಸುಡುವ ಪಕ್ಷದ ಯೋಜನೆಗಳನ್ನು ಬಿಜೆಪಿ ಹಾಕಿಕೊಂಡಿತು. ಭಯೋತ್ಪಾದಕ ದಾಳಿಗಳನ್ನು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪರವಾದ ನಿಲುವಿಗೆ ಜೋಡಿಸಲು ಸಂಘಟಿತ ಪ್ರಯತ್ನವೂ ನಡೆಯಿತು. ಉದಾಹರಣೆಗೆ, ನವೆಂಬರ್ 29 ರ&nbsp;<em>ಇಂಡಿಯಾ ಟುಡೇ</em>&nbsp;ವರದಿಯು ರಾಜ್ಯದ ಹಿರಿಯ ಬಿಜೆಪಿ ನಾಯಕ ರಾಮದಾಸ್ ಅಗರ್ವಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, &#8220;ಕಾಂಗ್ರೆಸ್‌ಗೆ ಓಲೈಸುವ ಇತಿಹಾಸವಿದೆ. ಅವರು ಭಯೋತ್ಪಾದನೆಯ ಮೇಲೆ ಮೃದುವಾಗಿ ವರ್ತಿಸುವ ಮೂಲಕ ದೇಶವನ್ನು ಹಾಳುಮಾಡುತ್ತಾರೆ,&#8221; ಎಂದು ವರದಿ ಮಾಡಿತ್ತು.</p>



<p>ಮುಂಬೈ ದಾಳಿಯ ದುರಂತವನ್ನು ಮತಗಳಾಗಿ ಪರಿವರ್ತಿಸಲು ಮೋದಿ, ಅಡ್ವಾಣಿ ಮತ್ತು ಬಿಜೆಪಿ ಪ್ರಯತ್ನಿಸಿದ ರೀತಿಗೆ ಹೋಲಿಸಿದರೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಹೆಚ್ಚಿನ ಮಟ್ಟದ ಒಗ್ಗಟ್ಟನ್ನು ಪ್ರದರ್ಶಿಸಿದ್ದವು.</p>



<p>ಆದರೆ, ಪಹಲ್ಗಾಮ್ ಉಗ್ರರ ದಾಳಿಯ ಸಂದರ್ಭದಲ್ಲಿ ಕಾನ್ಪುರ ಬೇಟಿಯನ್ನು ರದ್ದು ಮಾಡಿದ ನರೇಂದ್ರ ಮೋದಿಯವರು ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ದು, ಸಾರ್ವಜನಿಕ ರ್ಯಾಲಿ ಮಾಡಿದ್ದು ವಿಚಿತ್ರವಾಗಿದೆ. ಅದೂ ಕೂಡ ದಾಳಿಯ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾಗೋಷ್ಟಿಯನ್ನು ನಡೆಸದೆ!</p>
]]></content:encoded>
					
		
		
			</item>
		<item>
		<title>ಪಹಲ್ಗಾಮ್ ಉಗ್ರರ ದಾಳಿ: ಸಂತಾಪದ ಮಧ್ಯೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಮೋದಿ ಬೇಟಿ</title>
		<link>https://peepalmedia.com/pahalgam-terror-attack-modi-visits-bihar-which-is-gearing-up-for-elections-amid-mourning/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 10:03:29 +0000</pubDate>
				<category><![CDATA[ದೇಶ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[sindhu river]]></category>
		<guid isPermaLink="false">https://peepalmedia.com/?p=57809</guid>

					<description><![CDATA[26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ [&#8230;]]]></description>
										<content:encoded><![CDATA[
<p>26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. </p>



<p>&#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್ ಇಂಡಿಯಾ ರೇಡಿಯೋ <a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು .</a></p>



<p>ಆಕಾಶವಾಣಿಯ ಪ್ರಕಾರ ಕಾನ್ಪುರದಲ್ಲಿ ಅವುಗಳ ಮೌಲ್ಯ 20,000 ಕೋಟಿ ರುಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಬೇಕಿತ್ತು. </p>



<p>&#8220;ಗೌರವದ ಸಂಕೇತವಾಗಿ, ಈ ದುಃಖದ ಸಮಯದಲ್ಲಿ ಕಾನ್ಪುರದಲ್ಲಿ ಯಾವುದೇ ಆಚರಣೆ ಅಥವಾ ಔಪಚಾರಿಕ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದೂಡುವುದು ಸೂಕ್ತವೆಂದು ಪರಿಗಣಿಸಲಾಗಿದೆ&#8221; ಎಂದು ಪಿಎಂಒ ಉಲ್ಲೇಖಿಸಿ ವರದಿ ತಿಳಿಸಿದೆ.<br><br>ಆದರೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ಅವರು ಮಧುಬನಿಗೆ ಪ್ರಯಾಣಿಸಲಿದ್ದು, ಬೆಳಿಗ್ಗೆ 11:45 ರ ಸುಮಾರಿಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಿಐಬಿಯ ಪೋರ್ಟಲ್‌ನಲ್ಲಿ ಪಿಎಂಒ ಬಿಡುಗಡೆ ಮಾಡಿತು.</p>



<p>ಅವರು 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ,  ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಬಿಹಾರದ ಮಧುಬನಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ, &#8220;ನ್ಯಾಯ ದೊರಕುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು, ಇಡೀ ರಾಷ್ಟ್ರವು ದೃಢನಿಶ್ಚಯದಿಂದ ದೃಢವಾಗಿದೆ&#8221; ಎಂದು ಹೇಳಿದರು.</p>



<p>ಜಮ್ಮು ಮತ್ತು ಕಾಶ್ಮೀರ ದಾಳಿಯ ಬಗ್ಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಇದ್ದಕ್ಕಿದ್ದಂತೆ ಇಂಗ್ಲಿಷ್‌ಗೆ ಬದಲಾಯಿಸಿದರು ಮತ್ತು &#8220;ಇಂದು, ಬಿಹಾರದ ಮಣ್ಣಿನಿಂದ, ನಾನು ಇಡೀ ಜಗತ್ತಿಗೆ ಇದನ್ನು ಹೇಳುತ್ತೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ಎಲ್ಲೇ ಹೋದರೂ ಬೆನ್ನಟ್ಟುತ್ತೇವೆ&#8221; ಎಂದು ಹೇಳಿದರು.</p>



<p>&#8220;ಭಾರತದ ಚೈತನ್ಯವು ಭಯೋತ್ಪಾದನೆಯಿಂದ ಎಂದಿಗೂ ಮುರಿಯುವುದಿಲ್ಲ… ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ನ್ಯಾಯ ದೊರಕಿಸಿಕೊಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು&#8221; ಎಂದು ಪ್ರಧಾನಿ ಮೋದಿ ಜಗತ್ತಿಗೆ ತಿಳಿಸಿದರು &#8220;ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ&#8221; ಎಂದು ಅವರು ಹಿಂದಿ ಹೃದಯಭಾಗದಲ್ಲಿ ಹೇಳಿದರು.</p>



<p>ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ ಪ್ರಧಾನಿ ಮೋದಿ, &#8220;ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ&#8221; ಎಂದು ಹೇಳಿದರು. ಇಂಗ್ಲಿಷ್‌ನಲ್ಲಿ ನಡೆದ ಅಪರೂಪದ ಭಾಷಣವು ಭಾರತೀಯರಿಗೆ ಅಲ್ಲ, ಜಗತ್ತಿಗೆ ಸ್ಪಷ್ಟವಾಗಿ ಸಂದೇಶವಾಗಿತ್ತು. &#8216;ನಮ್ಮೊಂದಿಗೆ ನಿಂತ ಜನರಿಗೆ, ದೇಶಗಳ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ&#8221; ಎಂದು ಪ್ರಧಾನಿ ಮಧುಬನಿಯಲ್ಲಿ ಹೇಳಿದರು.</p>



<p>ಇಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.</p>



<p>ದಾಳಿಯ ಸುದ್ದಿ ತಿಳಿದ ನಂತರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ನಿನ್ನೆ ಬೆಳಿಗ್ಗೆ ಭಾರತಕ್ಕೆ ಮರಳಿದರು. ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆಂದು ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದರೆ ಏನಾಗುತ್ತದೆ?</title>
		<link>https://peepalmedia.com/what-will-happen-if-india-stop-the-indus-river-water-treaty/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 09:47:53 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[sindhu river]]></category>
		<category><![CDATA[Udhampur]]></category>
		<guid isPermaLink="false">https://peepalmedia.com/?p=57803</guid>

					<description><![CDATA[26 ಮಂದಿ ಅಮಾಯಕರ ಸಾವಿಗೆ ಕಾರಣವಾ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು 1960 ರ ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಭಾರತವು IWT ಹೇಗೆ ಸ್ಥಗಿತಗೊಳಿಸಲಿದೆ? ಭಾರತದ ಬಳಿ ಎರಡು ಮಾರ್ಗಗಳಿವೆ. ಕ ಮೊದಲನೆಯದು ಪಶ್ಚಿಮ ನದಿಗಳಲ್ಲಿ (ಸಿಂಧೂ, ಝೀಲಂ ಮತ್ತು ಚೆನಾಬ್) ನಿಯಂತ್ರಿತ ನೀರಿನ ಹರಿವನ್ನು ನಿಲ್ಲಿಸುವುದು &#8211; ಈ ನದಿಗಳ ಮೇಲಿನ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದ ನೀರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದು. ಈ ನದಿಗಳ ಮೂಲಕ ನೈಸರ್ಗಿಕ [&#8230;]]]></description>
										<content:encoded><![CDATA[
<p>26 ಮಂದಿ ಅಮಾಯಕರ ಸಾವಿಗೆ ಕಾರಣವಾ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು 1960 ರ ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದಾಗಿ ಘೋಷಿಸಿತು.</p>



<p><strong>ಭಾರತವು IWT ಹೇಗೆ ಸ್ಥಗಿತಗೊಳಿಸಲಿದೆ?</strong></p>



<p>ಭಾರತದ ಬಳಿ ಎರಡು ಮಾರ್ಗಗಳಿವೆ. ಕ</p>



<p>ಮೊದಲನೆಯದು ಪಶ್ಚಿಮ ನದಿಗಳಲ್ಲಿ (ಸಿಂಧೂ, ಝೀಲಂ ಮತ್ತು ಚೆನಾಬ್) ನಿಯಂತ್ರಿತ ನೀರಿನ ಹರಿವನ್ನು ನಿಲ್ಲಿಸುವುದು &#8211; ಈ ನದಿಗಳ ಮೇಲಿನ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದ ನೀರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದು. ಈ ನದಿಗಳ ಮೂಲಕ ನೈಸರ್ಗಿಕ ಹರಿವು ಮುಂದುವರಿಯುತ್ತದೆ, ಆದರೆ ಪಾಕಿಸ್ತಾನದ ನೀರಾವರಿ ಮತ್ತು ಕುಡಿಯುವ ನೀರಿಗೆ ನಿರ್ಣಾಯಕವಾದ ನಿಯಂತ್ರಿತ ಬಿಡುಗಡೆಗಳು ನಿಲ್ಲಬಹುದು. ಉದಾಹರಣೆಗೆ, ಚೆನಾಬ್‌ನಲ್ಲಿರುವ ಬಾಗ್ಲಿಹಾರ್ ಅಣೆಕಟ್ಟು ನೀರನ್ನು ಉಳಿಸಿಕೊಳ್ಳಬಹುದು, ಇದು ಪಾಕಿಸ್ತಾನಕ್ಕೆ ಕೆಳಮುಖ ಹರಿವನ್ನು ಕಡಿಮೆ ಮಾಡುತ್ತದೆ.</p>



<p>ಎರಡನೆಯದು, ಭಾರತವು ಪಶ್ಚಿಮ ನದಿಗಳಲ್ಲಿ ಪಾಕಲ್ ದುಲ್ (1,000 ಮೆಗಾವ್ಯಾಟ್) ಮತ್ತು ಚೆನಾಬ್ ನದಿಯ ಸಾವಲ್ಕೋಟ್ (1,856 ಮೆಗಾವ್ಯಾಟ್) ಅಣೆಕಟ್ಟುಗಳಂತಹ ಸಂಗ್ರಹಣಾ ಯೋಜನೆಗಳನ್ನು ತ್ವರಿತವಾಗಿ ಪ್ರಾರಂಭಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಬಹುದು. ಇದು ಭವಿಷ್ಯದಲ್ಲಿ ಚೆನಾಬ್‌ನಲ್ಲಿ ನೀರಿನ ಹರಿವಿನ ಮೇಲಿನ ನಿಯಂತ್ರಣವನ್ನು ಹೆಚ್ಚಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.</p>



<p>ಇದರ ಜೊತೆಗೆ, IWT ಅಡಿಯಲ್ಲಿ ತಾಂತ್ರಿಕ ಸಭೆಗಳು, ದತ್ತಾಂಶ ಹಂಚಿಕೆ ಮತ್ತು ವಿವಾದ-ಪರಿಹಾರ ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಬಹುದು. ನೀರಿನ ಹರಿವಿನ ಬದಲಾವಣೆಗಳು ಅಥವಾ ಯೋಜನಾ ವಿನ್ಯಾಸಗಳ ಬಗ್ಗೆ ಭಾರತವು ಇನ್ನು ಮುಂದೆ ಪಾಕಿಸ್ತಾನಕ್ಕೆ ತಿಳಿಸಬೇಕಾಗಿಲ್ಲ.</p>



<p><strong>ನಿಯಂತ್ರಿತ ಮತ್ತು ನೈಸರ್ಗಿಕ ಹರಿವಿನ ನಡುವಿನ ವ್ಯತ್ಯಾಸವೇನು?</strong></p>



<p>IWT ಸಂದರ್ಭದಲ್ಲಿ ನೈಸರ್ಗಿಕ ಹರಿವು ಮತ್ತು ನಿಯಂತ್ರಿತ ಹರಿವಿನ ನಡುವಿನ ವ್ಯತ್ಯಾಸವೆಂದರೆ ನೀರಿನ ಚಲನೆಯು ಮಾನವ ಹಸ್ತಕ್ಷೇಪದಿಂದ ರೂಪುಗೊಳ್ಳುತ್ತದೆಯೇ ಅಥವಾ ಪ್ರಕೃತಿಯಿಂದ ನಿರ್ಧರಿಸಲ್ಪಟ್ಟಂತೆ ಅದರ ಮಾರ್ಗವನ್ನು ಅನುಸರಿಸಲು ಬಿಡಲಾಗುತ್ತದೆಯೇ ಎಂಬುದರಲ್ಲಿದೆ. ನದಿಗಳ ಮೇಲಿನ ಭಾರತದ ನಿಯಂತ್ರಣವು ಪಾಕಿಸ್ತಾನಕ್ಕೆ ನೈಸರ್ಗಿಕ ಹರಿವಿನ ಹಕ್ಕಿನ ಪಾಲನ್ನು ಕಸಿದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು IWT ಅನ್ನು ಮಾಡಲಾಗಿದೆ.</p>



<p>ನೈಸರ್ಗಿಕ ಹರಿವು ಎಂದರೆ, ನದಿಯ ಮೇಲೆ ಮಾನವ ನಿರ್ಮಿತ ತಿರುವುಗಳು, ತಡೆಗಳು ಅಥವಾ ನಿಯಂತ್ರಣಗಳು ಇಲ್ಲದಿದ್ದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ನದಿಯ ಮೂಲಕ ಹಾದುಹೋಗುವ ನೀರಿನ ಪ್ರಮಾಣ. ಇದು ಮಳೆ, ಹಿಮನದಿ ಕರಗುವಿಕೆ ಮತ್ತು ಅಂತರ್ಜಲ ಸೋರಿಕೆಯಿಂದ ಉಂಟಾಗುವ ನೇರ ಹರಿವನ್ನು ಒಳಗೊಂಡಿರುತ್ತದೆ, ಇದರ ಮೇಲೆ ಮಾನವ ನಿರ್ಮಿತ ಮೂಲಸೌಕರ್ಯ ಯೋಜನೆಗಳು ಇರುವುದಿಲ್ಲ. ಭಾರತವು ಅಣೆಕಟ್ಟುಗಳು, ಜಲಾಶಯಗಳನ್ನು ನಿರ್ಮಿಸದಿದ್ದರೆ ಅಥವಾ ನದಿಯ ಪಥ ಅಥವಾ ಪರಿಮಾಣವನ್ನು ಬದಲಾಯಿಸಲು ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಿದ್ದರೆ ಪಶ್ಚಿಮ ನದಿಗಳಿಂದ ಪಾಕಿಸ್ತಾನವನ್ನು ತಲುಪುವ ನೀರು ಇದು.</p>



<p>ನಿಯಂತ್ರಿತ ಹರಿವು ಎಂದರೆ ಅಣೆಕಟ್ಟುಗಳು, ಜಲಾಶಯಗಳು, ಅಣೆಕಟ್ಟುಗಳು ಮತ್ತು ದ್ವಾರಗಳಂತಹ ಮಾನವ ನಿರ್ಮಿತ ರಚನೆಗಳ ಮೂಲಕ ನಿಯಂತ್ರಿಸಲ್ಪಡುವ ಅಥವಾ ನಿರ್ವಹಿಸಲ್ಪಡುವ ನೀರಿನ ಚಲನೆ. ಇದು ಕವಾಟಗಳನ್ನು ತೆರೆಯುವುದು ಅಥವಾ ಮುಚ್ಚುವುದು, ಸ್ಪಿಲ್‌ವೇಗಳನ್ನು ಹೊಂದಿಸುವುದು ಅಥವಾ ನೀರಿನ ಕೆಳಭಾಗದ ಸಮಯ ಮತ್ತು ಪ್ರಮಾಣವನ್ನು ನಿಯಂತ್ರಿಸಲು ಸಂಗ್ರಹದಿಂದ ನೀರನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿರುತ್ತದೆ. IWT ಅಡಿಯಲ್ಲಿ, ಪಶ್ಚಿಮ ನದಿಗಳಲ್ಲಿ ಕೆಲವು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳನ್ನು ನಿರ್ಮಿಸಲು ಭಾರತಕ್ಕೆ ಅವಕಾಶವಿದೆ, ಆದರೆ ಇವು &#8220;ನದಿ ಹರಿಯುವ&#8221; ಯೋಜನೆಗಳಾಗಿರಬೇಕು. ಇದರರ್ಥ ಅವರು ತಾತ್ಕಾಲಿಕವಾಗಿ ವಿದ್ಯುತ್ ಉತ್ಪಾದನೆಗಾಗಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ತಿರುಗಿಸಬಹುದು ಆದರೆ ಪಾಕಿಸ್ತಾನವನ್ನು ತಲುಪುತ್ತಿರುವ ಒಟ್ಟು ಹರಿವನ್ನು ಗಮನಾರ್ಹವಾಗಿ ಬದಲಾಯಿಸಬಾರದು ಅಥವಾ ಕಡಿಮೆ ಮಾಡಬಾರದು.</p>



<p><strong>ಐಡಬ್ಲ್ಯೂಟಿ ಅಡಿಯಲ್ಲಿ ಪಾಕಿಸ್ತಾನಕ್ಕೆ ನೀರಿನ ಹಂಚಿಕೆ ಎಷ್ಟು?</strong></p>



<p>ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳಲ್ಲಿ, ವರ್ಷಕ್ಕೆ 135 ಸರಾಸರಿ ವಾರ್ಷಿಕ ಹರಿವು ಅಥವಾ MAF ಅನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿದೆ, ಆದರೆ ಭಾರತವು ಅವುಗಳನ್ನು ಬಗ್ಲಿಹಾರ್ ಅಣೆಕಟ್ಟಿನಂತಹ ಅನಿಯಮಿತ ರನ್-ಆಫ್-ದಿ-ನದಿ ಜಲವಿದ್ಯುತ್ ಯೋಜನೆಗಳಿಗೆ, 701,000 ಎಕರೆಗಳವರೆಗೆ ನೀರಾವರಿಗಾಗಿ ಮತ್ತು 3.6 MAF ಗೆ ಸೀಮಿತವಾದ ಸಂಗ್ರಹಣೆಗಾಗಿ ಬಳಸಬಹುದು. ಒಪ್ಪಂದವು ನೀರಿನ ಹರಿವಿನ ದತ್ತಾಂಶ ವಿನಿಮಯವನ್ನು ಕಡ್ಡಾಯಗೊಳಿಸುತ್ತದೆ, ಆದರೆ ಬಿತ್ತನೆ ಪೂರ್ವ ಋತುವಿನಂತಹ ನಿರ್ಣಾಯಕ ಅವಧಿಗಳಲ್ಲಿ ಭಾರತ ನೀರನ್ನು ತಡೆಹಿಡಿಯುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ.</p>



<p>ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ 13.4 ಲಕ್ಷ ಎಕರೆ ನೀರಾವರಿ ಅಭಿವೃದ್ಧಿಗಾಗಿ ಐಡಬ್ಲ್ಯೂಟಿ ಭಾರತಕ್ಕೆ ಅವಕಾಶ ನೀಡುತ್ತದೆ. ಆದಾಗ್ಯೂ, ಪ್ರಸ್ತುತ, ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ 6.42 ಲಕ್ಷ ಎಕರೆಗಳಿಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದಲ್ಲದೆ, ಭಾರತವು ಪೂರ್ವ ನದಿಗಳಿಂದ ಹಂಚಿಕೆಯಾದ 33 ಎಂಎಎಫ್‌ನಲ್ಲಿ 90% ಅನ್ನು ಮಾತ್ರ ಬಳಸುತ್ತದೆ. ಭಾರತದ ಕಡೆಯ ಅಪೂರ್ಣ ಮೂಲಸೌಕರ್ಯದಿಂದಾಗಿ ರಾವಿ ನದಿಯಿಂದ 2 ಎಂಎಎಫ್ ಮತ್ತು ಸಟ್ಲೆಜ್/ಬಿಯಾಸ್ ವ್ಯವಸ್ಥೆಗಳಿಂದ 5.5 ಎಂಎಎಫ್ ಬಳಕೆಯಾಗದ ಹರಿವು ಐತಿಹಾಸಿಕವಾಗಿ ಪಾಕಿಸ್ತಾನಕ್ಕೆ ಹರಿಯುತ್ತಿದೆ. </p>



<p><strong>IWT ರದ್ದು ಮಾಡಿದರೆ ಏನಾಗುತ್ತದೆ? </strong></p>



<p>ವಾರ್ಷಿಕ ಸರಾಸರಿ 135 MAF ನೀರಿನ ಹರಿವು ಹಿಮನದಿ ಕರಗುವಿಕೆ ಮತ್ತು ಮಾನ್ಸೂನ್ ಮಳೆಯಿಂದ ಹುಟ್ಟುತ್ತದೆ ಮತ್ತು ಒಪ್ಪಂದದ ಅಮಾನತು ಪರಿಣಾಮ ಬೀರುವುದಿಲ್ಲ. ಭಾರತದ ಅಣೆಕಟ್ಟುಗಳು ಮತ್ತು ಸುಮಾರು 3.6 MAF ನೀರಿನ ಸಂಗ್ರಹ ಸಾಮರ್ಥ್ಯದ ಬ್ಯಾರೇಜ್‌ಗಳಿಂದ ನಿಯಂತ್ರಿತ ಬಿಡುಗಡೆಗಳು ಶುಷ್ಕ ಋತುಗಳಲ್ಲಿ ನೈಸರ್ಗಿಕ ಹರಿವನ್ನು ಪೂರೈಸುತ್ತವೆ. ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ಭಾರತವು ಈ ನೀರಿನ ಬಿಡುಗಡೆಯನ್ನು ನಿಲ್ಲಿಸಲು ಅನುವು ಮಾಡಿಕೊಡುತ್ತದೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಅಂತಹ ನೀರಿನ ಸಂಗ್ರಹ ಮೂಲಸೌಕರ್ಯವು ಅಸ್ತಿತ್ವದಲ್ಲಿಲ್ಲ ಅಥವಾ ಭಾರತವು ಆ ನಿಯಂತ್ರಣವನ್ನು ಚಲಾಯಿಸಲು ಸಾಧ್ಯವಿಲ್ಲ.  ಬಾಗ್ಲಿಹಾರ್ ಅಣೆಕಟ್ಟಿನಲ್ಲಿ ಈ ಸಾಮರ್ಥ್ಯದ 1.5 MAF ಮಾತ್ರ ಅಸ್ತಿತ್ವದಲ್ಲಿರಬಹುದು. ಭಾರತವು ಪಶ್ಚಿಮ ನದಿಗಳಿಂದ ತನ್ನ ಅಭಿವೃದ್ಧಿ ಹೊಂದಿದ ಸಂಗ್ರಹ ಸಾಮರ್ಥ್ಯದವರೆಗೆ ಮಾತ್ರ ನೀರನ್ನು ತಡೆಹಿಡಿಯಬಹುದು. ಈ ನೀರನ್ನು ಕಡಿಮೆ ಋತುಗಳಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಬಹುದು ಆದರೆ ಅಂತಿಮವಾಗಿ ಕೆಳಮುಖವಾಗಿ ಬಿಡುಗಡೆ ಮಾಡಬೇಕು. ಹೆಚ್ಚುವರಿ ಸಂಗ್ರಹ ಮೂಲಸೌಕರ್ಯವಿಲ್ಲದೆ, ಭಾರತವು ಹೆಚ್ಚಿನ ನೀರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ತನ್ನ ಪೂರ್ಣ ಅನುಮತಿಸಲಾದ ಸಂಗ್ರಹವನ್ನು (3.6 MAF) ನಿರ್ಮಿಸಿದರೂ ಸಹ, ಅದು ಪಾಕಿಸ್ತಾನಕ್ಕೆ ಹರಿವನ್ನು ತಾತ್ಕಾಲಿಕವಾಗಿ ನಿಯಂತ್ರಿಸಬಹುದು ಮತ್ತು ವಿಳಂಬಗೊಳಿಸಬಹುದು, ವಿಶೇಷವಾಗಿ ನಿರ್ಣಾಯಕ ಕೃಷಿ ಅವಧಿಗಳಲ್ಲಿ, ಆದರೆ ಈ ನೀರನ್ನು ಶಾಶ್ವತವಾಗಿ ಬೇರೆಡೆಗೆ ತಿರುಗಿಸಲು ಅಥವಾ ಸೇವಿಸಲು ಸಾಧ್ಯವಿಲ್ಲ.</p>



<p>ಪಾಕಿಸ್ತಾನಕ್ಕೆ ಇರುವ ಸವಾಲು ಸೀಮಿತ ನೀರಿನ ಸಂಗ್ರಹ ಸಾಮರ್ಥ್ಯ. ಮಂಗ್ಲಾ ಮತ್ತು ತರ್ಬೆಲಾದಂತಹ ಪ್ರಮುಖ ಅಣೆಕಟ್ಟುಗಳು ಒಟ್ಟು 14.4 MAF ನಷ್ಟು ನೇರ ಸಂಗ್ರಹವನ್ನು ಹೊಂದಿವೆ, ಇದು IWT ಅಡಿಯಲ್ಲಿ ದೇಶದ ವಾರ್ಷಿಕ ಹಕ್ಕಿನ ಕೇವಲ 10% ರಷ್ಟಿದೆ. ಕಡಿಮೆಯಾದ ನೀರಿನ ಹರಿವು ಅಥವಾ ಕಾಲೋಚಿತ ವ್ಯತ್ಯಾಸದ ಸಮಯದಲ್ಲಿ, ಸಂಗ್ರಹಣೆಯಲ್ಲಿನ ಈ ಕೊರತೆಯು ಪಾಕಿಸ್ತಾನವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ.</p>



<p><strong>ಇದರಿಂದ ನಿಜವಾಗಿಯೂ ಪಾಕಿಸ್ತಾನಕ್ಕೆ ಹಾನಿ ಆಗಬಹುದೇ?</strong></p>



<p>ಪಶ್ಚಿಮ ನದಿಗಳು ತಮ್ಮ ಹರಿವಿನ 60-70% ರಷ್ಟು ಹಿಮನದಿ ಕರಗುವಿಕೆಯಿಂದ ಮತ್ತು 30-40% ರಷ್ಟು ಮಾನ್ಸೂನ್ ಮಳೆಯಿಂದ ಪಡೆಯುತ್ತವೆ, ಇದನ್ನು ಭಾರತ ನಿಯಂತ್ರಿಸಲು ಸಾಧ್ಯವಿಲ್ಲ. ಸಹಕಾರ ಸ್ಥಗಿತಗೊಂಡಿದ್ದರೂ ಸಹ, ವಾರ್ಷಿಕವಾಗಿ 131.4 MAF ನೈಸರ್ಗಿಕ ಹರಿವು ಪಾಕಿಸ್ತಾನವನ್ನು ತಲುಪುತ್ತಲೇ ಇರುತ್ತದೆ. ಮಾನ್ಸೂನ್ ಋತುವಿನಲ್ಲಿ (ಜುಲೈ-ಸೆಪ್ಟೆಂಬರ್), ಮೂರು ನದಿಗಳಲ್ಲಿನ ಹರಿವು 5,800 m³/s (ಪ್ರತಿ ಸೆಕೆಂಡಿಗೆ ಘನ ಮೀಟರ್) ಮೀರುತ್ತದೆ. ಹೀಗಾಗಿ ಒಪ್ಪಂದವನ್ನು ರದ್ದು ಮಾಡಿದರೆ ಹೇಳುವಂತ ಪರಿಣಾಮ ಏನೂ ಆಗದು. ಆದ್ದರಿಂದ ತಕ್ಷಣದ ಪರಿಣಾಮವನ್ನು ಹೇಳುವುದು ಕಷ್ಟ, ಆದರೆ  2025 ರ ಬೇಸಿಗೆಯು ಬೆಳೆ ಬೆಳೆಯುವ ಋತುಗಳಲ್ಲಿ ಕಡಿಮೆ ಹರಿವನ್ನು ನಿರ್ವಹಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ಪರೀಕ್ಷಿಸಬಹುದು.</p>



<p>ಭಾರತವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ದೀರ್ಘಾವಧಿಯಲ್ಲಿ ಪರಿಣಾಮಗಳು ಗೋಚರಿಸುತ್ತವೆ. ಸಂಗ್ರಹಣಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ, ಭಾರತವು ಪಶ್ಚಿಮ ನದಿಗಳ ಮೇಲೆ ಶಾಶ್ವತ ನಿಯಂತ್ರಣವನ್ನು ಪಡೆಯಬಹುದು, ಇದು ಪಾಕಿಸ್ತಾನದ ನೀರಿನ ಒತ್ತಡವನ್ನು ಹೆಚ್ಚಿಸುತ್ತದೆ.</p>



<p><strong>ಕೊನೆಯದಾಗಿ, ಇದೆಲ್ಲದರ ಅರ್ಥವೇನು?</strong></p>



<p>ಪಾಕಿಸ್ತಾನಕ್ಕೆ ನೀರನ್ನು ನಿರ್ಬಂಧಿಸುವ ಭಾರತದ ಸಾಮರ್ಥ್ಯವು ನೈಸರ್ಗಿಕ ಜಲವಿಜ್ಞಾನದ ಚಕ್ರಗಳು, ಮೂಲಸೌಕರ್ಯ ಅಂತರಗಳು ಮತ್ತು ಒಪ್ಪಂದ ವಿನ್ಯಾಸ ನಿಯಮಗಳಿಂದ ಸೀಮಿತವಾಗಿದೆ. ನೈಸರ್ಗಿಕ ಭೌಗೋಳಿಕತೆ ಮತ್ತು ಒಪ್ಪಂದದ ಮಿತಿಗಳಿಂದಾಗಿ ಸಿಂಧೂ ವ್ಯವಸ್ಥೆಯ ಬಹುಪಾಲು ನೀರು ಕಾಲೋಚಿತ ವ್ಯತ್ಯಾಸಗಳೊಂದಿಗೆ ಪಾಕಿಸ್ತಾನಕ್ಕೆ ಹರಿಯುತ್ತಲೇ ಇರುತ್ತದೆ.</p>



<p>ಪಶ್ಚಿಮ ನದಿಗಳಿಂದ, ನಿಯಂತ್ರಿತ ಹರಿವನ್ನು (3.6 MAF) ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು, ಆದರೆ ಪಾಕಿಸ್ತಾನಕ್ಕೆ ತಲುಪುವ ಹೆಚ್ಚಿನ ನೀರು (131.4 MAF) ಸ್ವಾಭಾವಿಕವಾಗಿ ಹರಿಯುತ್ತದೆ ಮತ್ತು ಭಾರತದ ನಿಯಂತ್ರಣವನ್ನು ಮೀರಿರುತ್ತದೆ. ಸಿಂಧುವಿನ ನೀರು ಪಾಕಿಸ್ತಾನಕ್ಕೆ ಹೋಗುವುದನ್ನು ಸಂಪೂರ್ಣವಾಗಿ ತಡೆಯಲು ಭಾರತ ಬೃಹತ್ ಮೂಲಸೌಕರ್ಯ ಹೂಡಿಕೆಯನ್ನು ಮಾಡಬೇಕಾದ ಅಗತ್ಯವಿರುತ್ತದೆ.</p>
]]></content:encoded>
					
		
		
			</item>
		<item>
		<title>ಕೆನಡಾ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವ &#8216;ಉದ್ದೇಶ, ಸಾಮರ್ಥ್ಯ&#8217; ಭಾರತಕ್ಕಿದೆ: ಕೆನಡಾ ಬೇಹುಗಾರಿಕೆ ಸಂಸ್ಥೆ</title>
		<link>https://peepalmedia.com/india-has-purpose-capability-to-interfere-in-canadian-elections-canadian-intelligence-agency/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 25 Mar 2025 07:00:58 +0000</pubDate>
				<category><![CDATA[ವಿದೇಶ]]></category>
		<category><![CDATA[canada]]></category>
		<category><![CDATA[china]]></category>
		<category><![CDATA[india]]></category>
		<category><![CDATA[Justin Trudeau]]></category>
		<category><![CDATA[Pakistan]]></category>
		<category><![CDATA[russia]]></category>
		<guid isPermaLink="false">https://peepalmedia.com/?p=55715</guid>

					<description><![CDATA[ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ, ಚೀನಾ, ರಷ್ಯಾ ಮತ್ತು ಪಾಕಿಸ್ತಾನಗಳು ಹಸ್ತಕ್ಷೇಪ ಮಾಡಲು ಪ್ರಯತ್ನಿಸಬಹುದು ಎಂದು ಕೆನಡಾದ ಭದ್ರತಾ ಗುಪ್ತಚರ ಸೇವೆ ಸೋಮವಾರ ಹೇಳಿದೆ. ಏಪ್ರಿಲ್ 28 ರಂದು ಸ್ನ್ಯಾಪ್ ಚುನಾವಣೆ ನಡೆಯಲಿದೆ. &#8220;ಭಾರತ ಸರ್ಕಾರವು ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಪ್ರತಿಪಾದಿಸಲು ಕೆನಡಾದ ಸಮುದಾಯಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ನೋಡಿದ್ದೇವೆ,&#8221; ಎಂದು ಬೇಹುಗಾರಿಕೆ ಸೇವೆಯ ಕಾರ್ಯಾಚರಣೆಯ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು . ಭಾರತ ಸರ್ಕಾರದ ವಿದೇಶಿ [&#8230;]]]></description>
										<content:encoded><![CDATA[
<p>ಕೆನಡಾದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ, ಚೀನಾ, ರಷ್ಯಾ ಮತ್ತು ಪಾಕಿಸ್ತಾನಗಳು <a href="https://www.youtube.com/live/82rr5H_m_lM?feature=shared&amp;t=933" target="_blank" rel="noreferrer noopener">ಹಸ್ತಕ್ಷೇಪ ಮಾಡಲು ಪ್ರಯತ್ನಿಸಬಹುದು ಎಂದು</a> ಕೆನಡಾದ ಭದ್ರತಾ ಗುಪ್ತಚರ ಸೇವೆ ಸೋಮವಾರ ಹೇಳಿದೆ.</p>



<p>ಏಪ್ರಿಲ್ 28 ರಂದು ಸ್ನ್ಯಾಪ್ ಚುನಾವಣೆ ನಡೆಯಲಿದೆ.</p>



<p>&#8220;ಭಾರತ ಸರ್ಕಾರವು ತನ್ನ ಭೌಗೋಳಿಕ ರಾಜಕೀಯ ಪ್ರಭಾವವನ್ನು ಪ್ರತಿಪಾದಿಸಲು ಕೆನಡಾದ ಸಮುದಾಯಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ನೋಡಿದ್ದೇವೆ,&#8221; ಎಂದು ಬೇಹುಗಾರಿಕೆ ಸೇವೆಯ ಕಾರ್ಯಾಚರಣೆಯ ಉಪ ನಿರ್ದೇಶಕಿ ವನೆಸ್ಸಾ ಲಾಯ್ಡ್ <a href="https://www.cbc.ca/player/play/video/9.6696596">ಪತ್ರಿಕಾಗೋಷ್ಠಿಯಲ್ಲಿ ಹೇಳಿದರು</a> <a href="https://www.cbc.ca/player/play/video/9.6696596" target="_blank" rel="noreferrer noopener"><u>.</u></a></p>



<p>ಭಾರತ ಸರ್ಕಾರದ ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳನ್ನು ನಡೆಸಲು ಕೆನಡಾ ಮತ್ತು ಕೆನಡಾ ಮೂಲದ ಪ್ರಾಕ್ಸಿಗಳು ಮತ್ತು ಅವರ ನೆಟ್‌ವರ್ಕ್‌ಗಳಲ್ಲಿನ ಸಂಪರ್ಕಗಳು ಹೆಚ್ಚಾಗಿ ಅವಲಂಬಿತವಾಗಿವೆ,&#8221; ಎಂದು ಲಾಯ್ಡ್ ಹೇಳಿದರು.</p>



<p>ಭಾರತದ ವಿದೇಶಾಂಗ ಸಚಿವಾಲಯವು ಈ ಆರೋಪಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. </p>



<p>ಸೆಪ್ಟೆಂಬರ್ 2023 ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಜಸ್ಟಿನ್ ಟ್ರುಡೊ, ಕೆನಡಾದ ಗುಪ್ತಚರ ಸಂಸ್ಥೆಗಳು ವ್ಯಾಂಕೋವರ್ ಬಳಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತ ಸರ್ಕಾರದ ಏಜೆಂಟ್‌ಗಳನ್ನು ಬಂಧಿಸುವ &#8220;ವಿಶ್ವಾಸಾರ್ಹ ಆರೋಪಗಳನ್ನು&#8221; ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ತಮ್ಮ ದೇಶದ ಸಂಸತ್ತಿಗೆ ತಿಳಿಸಿದಾಗಿನಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ.</p>



<p>ನಿಜ್ಜರ್ ಕೆಲವು ಗುಂಪುಗಳು ಬಯಸುವ ಸ್ವತಂತ್ರ ಸಿಖ್ ರಾಷ್ಟ್ರವಾದ ಖಾಲಿಸ್ತಾನದ ಬೆಂಬಲಿಗರಾಗಿದ್ದರು. ಅವರು ಭಾರತದಲ್ಲಿ ಭಯೋತ್ಪಾದಕ ಸಂಘಟನೆ ಎಂದು ಗೊತ್ತುಪಡಿಸಲಾದ ಖಾಲಿಸ್ತಾನ್ ಟೈಗರ್ ಫೋರ್ಸ್‌ನ ಮುಖ್ಯಸ್ಥರಾಗಿದ್ದರು. ಟ್ರೂಡೊ ಅವರ ಆರೋಪಗಳನ್ನು ಭಾರತ &#8221; <a href="https://x.com/MEAIndia/status/1703963275329974582?s=20" target="_blank" rel="noreferrer noopener">ಅಸಂಬದ್ಧ ಮತ್ತು ಪ್ರೇರಿತ</a> &#8221; ಎಂದು ತಿರಸ್ಕರಿಸಿತು.</p>



<p>ಕೆನಡಾದ ಅಧಿಕಾರಿ ಸೋಮವಾರ, ಚೀನಾ &#8220;ತನ್ನ ಕಾರ್ಯತಂತ್ರದ ಉದ್ದೇಶಗಳನ್ನು ಮುನ್ನಡೆಸಲು ಕೆನಡಾದ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ನಾಗರಿಕ ಸಮಾಜವನ್ನು ಗುರಿಯಾಗಿಸಿಕೊಳ್ಳುವುದನ್ನು ಮುಂದುವರಿಸುವ ಸಾಧ್ಯತೆಯಿದೆ,&#8221; ಎಂದು ಹೇಳಿದರು.</p>



<p>ಚೀನಾದ ಅಧಿಕಾರಿಗಳು ಮತ್ತು ಪ್ರಾಕ್ಸಿಗಳು ಬಹಿರಂಗ ಮತ್ತು ರಹಸ್ಯ ಕಾರ್ಯವಿಧಾನಗಳ ಸಂಕೀರ್ಣ ಶ್ರೇಣಿಯನ್ನು ಬಳಸಿಕೊಂಡು ವಿದೇಶಿ ಹಸ್ತಕ್ಷೇಪ ಚಟುವಟಿಕೆಗಳನ್ನು &#8220;ನಡೆಸುವ ಸಾಧ್ಯತೆಯಿದೆ,&#8221; ಎಂದು ಲಾಯ್ಡ್ ಹೇಳಿದರು. &#8220;ಪಿಆರ್‌ಸಿ [ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ] ಸಾಮಾಜಿಕ ಮಾಧ್ಯಮವನ್ನು ಬಳಸುವ ಸಾಧ್ಯತೆಯಿದೆ ಮತ್ತು ಕೆನಡಾದಲ್ಲಿ ಚೀನಾದ ಜನಾಂಗೀಯ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮುದಾಯಗಳನ್ನು ರಹಸ್ಯ ಮತ್ತು ಮೋಸದ ವಿಧಾನಗಳನ್ನು ಬಳಸಿಕೊಂಡು ನಿರ್ದಿಷ್ಟವಾಗಿ ಗುರಿಯಾಗಿಸುತ್ತದೆ,&#8221; ಎಂದು ಅವರು ಹೇಳಿದರು.</p>



<p>ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಬೀಜಿಂಗ್ ಕೃತಕ ಬುದ್ಧಿಮತ್ತೆ-ಸಕ್ರಿಯಗೊಳಿಸಿದ ಸಾಧನಗಳನ್ನು ಬಳಸುವ &#8220;ಹೆಚ್ಚಾಗಿ&#8221; ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.</p>



<p></p>
]]></content:encoded>
					
		
		
			</item>
	</channel>
</rss>
