<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>pakisthan &#8211; Peepal Media</title>
	<atom:link href="https://peepalmedia.com/tag/pakisthan/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 07 Nov 2022 11:07:40 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>pakisthan &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಟಿ-20 ವಿಶ್ವಕಪ್ 2022ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ ICC</title>
		<link>https://peepalmedia.com/icc-named-eight-best-matches-of-super-12-stage-of-t20-world-cup-2022/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 07 Nov 2022 11:02:22 +0000</pubDate>
				<category><![CDATA[ಆಟೋಟ]]></category>
		<category><![CDATA[ದೇಶ]]></category>
		<category><![CDATA[australia]]></category>
		<category><![CDATA[eight best matches]]></category>
		<category><![CDATA[ENGLAND]]></category>
		<category><![CDATA[ICC]]></category>
		<category><![CDATA[india]]></category>
		<category><![CDATA[netherlands]]></category>
		<category><![CDATA[NEWZELAND]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[south africa]]></category>
		<category><![CDATA[sports news]]></category>
		<category><![CDATA[T 20 Super 12 stage]]></category>
		<category><![CDATA[Zimbabwe]]></category>
		<guid isPermaLink="false">https://peepalmedia.com/?p=14600</guid>

					<description><![CDATA[ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ್ದು, ಪಂದ್ಯಗಳಲ್ಲಿ ರೋಚಕ ಕ್ಷಣ, ಸೋಲು, ಗೆಲುವು ಮತ್ತು ದಾಖಲೆ ಸೃಷ್ಟಿಸಿದನ್ನು ಸಹ ಪಟ್ಟಿಯಲ್ಲಿ ಕಾಣಬಹುದಾಗಿದೆ. ಪಟ್ಟಿಯಲ್ಲಿರುವ ಆ ಎಂಟು ಪಂದ್ಯಗಳಲ್ಲಿ, ಪ್ರಮುಖವಾಗಿ ಬಲಿಷ್ಟ ಕ್ರಿಕೆಟ್‌ ತಂಡ ಎಂದೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್‌ ಜಯಗಳಿಸಿದ್ದು. ಈ [&#8230;]]]></description>
										<content:encoded><![CDATA[
<p>ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದೆ.</p>



<p>ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ T20 ವಿಶ್ವಕಪ್ 2022 ರ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳನ್ನು ಹೆಸರಿಸಿದ್ದು, ಪಂದ್ಯಗಳಲ್ಲಿ ರೋಚಕ ಕ್ಷಣ, ಸೋಲು, ಗೆಲುವು ಮತ್ತು ದಾಖಲೆ ಸೃಷ್ಟಿಸಿದನ್ನು ಸಹ ಪಟ್ಟಿಯಲ್ಲಿ ಕಾಣಬಹುದಾಗಿದೆ.</p>



<p>ಪಟ್ಟಿಯಲ್ಲಿರುವ ಆ ಎಂಟು ಪಂದ್ಯಗಳಲ್ಲಿ, ಪ್ರಮುಖವಾಗಿ ಬಲಿಷ್ಟ ಕ್ರಿಕೆಟ್‌ ತಂಡ ಎಂದೆನಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ಲೆಂಡ್‌ ಜಯಗಳಿಸಿದ್ದು. ಈ ಪಂದ್ಯದಲ್ಲಿ ನೆದರ್ಲೆಂಡ್‌ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತು. ಈ ಗೆಲುವು ನೆದರ್ಲೆಂಡ್‌ ತಂಡದಿಂದ ದಾಖಲೆ ಸೃಷ್ಟಿಸಲು ಕಾರಣವಾಯಿತು.</p>



<p>ಇನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯವೆಂದರೆ ಕುತೂಹಲ, ಅದರಲ್ಲೂ ಪಾಕಿಸ್ತಾನ ವಿರುದ್ಧದ ಕೊನೆಯ ಎಸೆತದಲ್ಲಿ ಭಾರತದ ಗೆಲುವು, ಕ್ರಿಕೆಟ್‌ ನೋಡುಗರಿಗೆ ಕುತೂಹಲದ ಮೇಲೆ ಕುತೂಹಲ ಸೃಷ್ಟಿಸಿತ್ತು. ಕೊನೆಯ ಎರೆಡು ಎಸೆತಗಳಲ್ಲಿ ಭಾರತ ತಂಡಕ್ಕೆ ಎರೆಡು ರನ್‌ ಬೇಕಾಗಿದ್ದಾಗ, ದಿನೇಶ್‌ ಕಾರ್ತಿಕ್‌ ಬೌಂಡರಿ ಹೊಡೆಯಲು ಹೋಗಿ ಸ್ಟಂಪ್‌ ಔಟ್‌ ಆಗಿದ್ದರು. ನಂತರ ಸ್ಕ್ರೀಜ್‌ಗೆ ಬಂದ ರವಿಚಂದ್ರನ್‌ ಅಶ್ವಿನ್‌ ಮೇಲೆ ಪಂದ್ಯದ ಗೆಲುವು ನಿರ್ಧಾರವಾಗಿತ್ತು. ಈ ವೇಳೆ ಒತ್ತಡಕ್ಕೆ ಸಿಲುಕಿದ್ದ ಪಾಕಿಸ್ತಾನಿ ಬೌಲರ್‌ ಮೊಹಮದ್‌ ನವಾಜ್‌ ಒಂದು ವೈಡ್‌ ಎಸೆದರು. ಆಗ ಪಂದ್ಯ ಇನ್ನು ಕುತೂಹಲಕ್ಕೆ ಕಾರಣವಾಯಿತು. ನಂತರದ ಎಸೆತ ಏನಾಗುತ್ತದೆ? ಭಾರತ ಗೆಲ್ಲುತ್ತಾ, ಅಥವಾ ಪಂದ್ಯ ಸಮಬಲವಾಗುತ್ತಾ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡುವಂತೆ ಮಾಡಿತ್ತು. ಕೊನೆಗೂ ಅಶ್ವಿನ್‌ ಕೊನೆಯ ಎಸೆತದಲ್ಲಿ ಒಂದು ರನ್‌ ಗಳಿಸುವ ಮೂಲಕ ಭಾರತ ತಂಡ ಗೆಲುವು ಸಾಧಿಸಿತು. ನಂತರ ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಸೋಲು ಕೂಡ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.</p>



<p>ಭಾರತ ಪಾಕಿಸ್ತಾನ ಪಂದ್ಯದಂತೆ, ಪಾಕಿಸ್ತಾನ ವಿರುದ್ಧ ಜಿಂಬಾಬ್ವೆಯ ಒಂದು ರನ್ ಗೆಲುವು ಕೂಡ &nbsp;ಎಲ್ಲರಲ್ಲೂ ಕುತೂಹಲ ಮೂಡಿದ್ದು, ಜಿಂಬಾಬ್ವೆ ತಂಡ ಗೆಲುವು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಈ ಹಿನ್ನೆಯಲ್ಲಿ ಈ ಪಂದ್ಯವು ಕೂಡ ಪಟ್ಟಿಯಲ್ಲಿ ಸೇರಿದೆ.</p>



<p><strong>ICC ಹೊರಡಿಸಿರುವ ಪಟ್ಟಿಯಲ್ಲಿರುವ ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳು</strong></p>



<p>ಮೊದಲನೆಯದಾಗಿ ನೆದರ್ಲಾಂಡ್‌ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 13 ರನ್‌ಗಳ ಗೆಲುವು ಸಾದಿಸಿದ್ದು, ಎರಡನೆಯದಾಗಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ್ದು. ಪಟ್ಟಿಯ ಮೂರನೆ ಸ್ಥಾನದಲ್ಲಿ ಐರ್ಲ್ಯಾಂಡ್‌ ತಂಡವು ಇಂಗ್ಲೇಂಡ್‌ ತಂಡದ ವಿರುದ್ಧ ಡಿಎಲ್‌ಎಸ್‌ ನಿಯಮದ ಪ್ರಕಾರ 5ರನ್‌ ಗಳಿಂದ ಗೆಲುವು ಸಾದಿಸಿದ್ದು. ಇನ್ನು ನಾಲ್ಕನೆ ಸ್ಥಾನದಲ್ಲಿ ಜಿಂಬಾಬ್ವೆ ತಂಡವು ಪಾಕಿಸ್ತಾನದ ವಿರುದ್ಧ ಒಂದು ರನ್‌ಗಳ ಜಯ. 5ನೇಯದಾಗಿ ಬಾಂಗ್ಲಾದೇಶ, ಜಿಂಬಾಬ್ವೆ ವಿರುದ್ಧ 3 ರನ್‌ಗಳಿಂದ ಜಯಗಳಿಸಿದ್ದು. ಇನ್ನೂ 6 ನೇ ಸ್ಥಾನದಲ್ಲಿ ಆಷ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನದ ವಿರುದ್ಧ ರನ್‌ಗಳಿಂದ ಜಯ. ಏಳನೆಯದಾಗಿ ದಕ್ಷಿಣ ಆಫ್ರಿಕಾ ತಂಡವು ಭಾರತದ ವಿರುದ್ಧ ಐದು ವಿಕೆಟ್‌ಗಳಿಂದ ಗೆಲುವು ಪಡೆದುಕೊಂಡಿದ್ದು. ಕೊನೆಯದಾಗಿ ನ್ಯೂಜಿಲ್ಯಾಂಡ್‌ ತಂಡ ಆಷ್ಟ್ರೇಲಿಯಾ ವಿರುದ್ಧ 89 ರನ್‌ಗಳ ಜಯ.</p>



<p><strong>ICC ಹೊರಡಿಸಿರುವ ಪಟ್ಟಿಯಲ್ಲಿರು ಸೂಪರ್ 12 ಹಂತದ ಎಂಟು ಅತ್ಯುತ್ತಮ ಪಂದ್ಯಗಳ ಪಟ್ಟಿ</strong></p>


<div class="wp-block-image">
<figure class="aligncenter size-full"><img fetchpriority="high" decoding="async" width="318" height="247" src="https://peepalmedia.com/wp-content/uploads/2022/11/ICC-1.jpg" alt="" class="wp-image-14606" srcset="https://peepalmedia.com/wp-content/uploads/2022/11/ICC-1.jpg 318w, https://peepalmedia.com/wp-content/uploads/2022/11/ICC-1-300x233.jpg 300w, https://peepalmedia.com/wp-content/uploads/2022/11/ICC-1-150x117.jpg 150w" sizes="(max-width: 318px) 100vw, 318px" /></figure></div>]]></content:encoded>
					
		
		
			</item>
		<item>
		<title>ಟಿ-20 ವಿಶ್ವಕಪ್‌: ಪಾಕಿಸ್ತಾನಕ್ಕೆ 128 ರನ್‌ ಗುರಿ ನೀಡಿದ ಬಾಂಗ್ಲಾದೇಶ</title>
		<link>https://peepalmedia.com/t-20-bangladesh-set-a-target-of-18-runs-to-pakistan/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 06 Nov 2022 06:03:08 +0000</pubDate>
				<category><![CDATA[ಆಟೋಟ]]></category>
		<category><![CDATA[bangladesh]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[T-20 WORLD CUP]]></category>
		<guid isPermaLink="false">https://peepalmedia.com/?p=14376</guid>

					<description><![CDATA[ಅಡಿಲೇಡ್ ಓವಲ್ (ಆಸ್ಟ್ರೇಲಿಯಾ): ಇಂದು ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶವು 20 ಓವರ್‌ಗಳಲ್ಲಿ 127 ರನ್‌ಗಳಿಸಿ, ಪಾಕಿಸ್ತಾನ ತಂಡಕ್ಕೆ 128ರನ್‌ ಗುರಿ ನೀಡಿದೆ. ಟಾಸ್‌ ಗೆದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಲಿಟ್ಟನ್ ದಾಸ್, ಮೊದ-ಮೊದಲು ಪಾಕಿಸ್ತಾನಿ ಬೌಲರ್‌ ದಾಳಿಗೆ ರನ್‌ ಗಳಿಸಲು ಪರದಾಡಿದರು. ಪವರ್‌ ಪ್ಲೇನಲ್ಲಿ ರನ್‌ ಬಾರದಿರುವ ಕಾರಣ, ಲಿಟ್ಟನ್ ದಾಸ್, ಶಾಹೀನ್ ಅಫ್ರಿದಿ ಬೌಲಿಂಗ್‌ ವೇಳೆ ರನ್‌ ಗಳಿಸುವ ಬರದಲ್ಲಿ ಕ್ಯಾಚ್‌ ನೀಡಿ [&#8230;]]]></description>
										<content:encoded><![CDATA[
<p style="font-size:20px"><strong>ಅಡಿಲೇಡ್ ಓವಲ್ (ಆಸ್ಟ್ರೇಲಿಯಾ):</strong> ಇಂದು ಟಿ-20 ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶವು 20 ಓವರ್‌ಗಳಲ್ಲಿ 127 ರನ್‌ಗಳಿಸಿ, ಪಾಕಿಸ್ತಾನ ತಂಡಕ್ಕೆ 128ರನ್‌ ಗುರಿ ನೀಡಿದೆ.</p>



<p style="font-size:20px">ಟಾಸ್‌ ಗೆದ್ದ ಬಾಂಗ್ಲಾದೇಶವು ಮೊದಲು ಬ್ಯಾಟಿಂಗ್‌ ಆಯ್ಕೆಮಾಡಿಕೊಂಡಿತು. ನಂತರ ಬ್ಯಾಟಿಂಗ್‌ಗೆ ಇಳಿದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಲಿಟ್ಟನ್ ದಾಸ್, ಮೊದ-ಮೊದಲು ಪಾಕಿಸ್ತಾನಿ ಬೌಲರ್‌ ದಾಳಿಗೆ ರನ್‌ ಗಳಿಸಲು ಪರದಾಡಿದರು. ಪವರ್‌ ಪ್ಲೇನಲ್ಲಿ ರನ್‌ ಬಾರದಿರುವ ಕಾರಣ, ಲಿಟ್ಟನ್ ದಾಸ್, ಶಾಹೀನ್ ಅಫ್ರಿದಿ ಬೌಲಿಂಗ್‌ ವೇಳೆ ರನ್‌ ಗಳಿಸುವ ಬರದಲ್ಲಿ ಕ್ಯಾಚ್‌ ನೀಡಿ 8 ರನ್‌ಗಳಿಸಿ ಪೆಲಿವಿಯನ್‌ ಸೇರಿದರು.</p>



<p style="font-size:20px">ನಂತರ ಬಂದ ಸೌಮ್ಯ ಸರ್ಕಾರ್, ನಿಧಾನಗತಿಯಲ್ಲಿ ರನ್‌ ಗಳಿಸುತ್ತಾ ಸಾಗಿದರು. ಹೀಗಾಗಿ ಹೆಚ್ಚು ರನ್‌ ಗಳಿಸದೆ ಹೋದರು ವಿಕೆಟ್‌ ಕಾಪಾಡಿಕೊಂಡು ಬಂದ ಸೌಮ್ಯ ಸರ್ಕಾರ್‌ ಮತ್ತು ನಜ್ಮುಲ್ ಹೊಸೈನ್ ಶಾಂತೋ ಜೊತೆಯಾಟ ತಂಡಕ್ಕೆ ಮುಂದಿನ ಓವರ್‌ಗಳಲ್ಲಿ ರನ್‌ ಗಳಿಸುವ ಭರವಸೆ ಹುಟ್ಟಿಸಿತು. ಆದರೆ 11ನೇ ಓವರ್‌ ನಲ್ಲಿ ಸೌಮ್ಯ ಸರ್ಕಾರ್‌ ಕೂಡ ಕ್ಯಾಚ್‌ ನೀಡಿ 17 ಎಸೆತಗಳಲ್ಲಿ 20 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಈ ವೇಳೆ ಬಾಂಗ್ಲಾದೇಶ 73 ರನ್‌ ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು.</p>



<p style="font-size:20px">ಉತ್ತಮ ಪ್ರದರ್ಶನ ನೀಡುತ್ತಿದ್ದ, ನಜ್ಮುಲ್ ಹೊಸೈನ್ ಶಾಂತೋ ಅರ್ಧಶತಕಗಳಿಸಿ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದರು. ಆದರೆ ಅವರು ಕೂಡ 14ನೇ ಓವರ್‌ನಲ್ಲಿ ಇಫ್ತಿಕರ್ ಅಹಮದ್ ಬೌಲಿಂಗ್‌ ವೇಳೆ ಬೌಲ್ಡ್ ಆದರು. ನಂತರ ಬಂದ ಯಾವೊಬ್ಬ ಆಟಗಾರನು ಕೂಡ ರನ್‌ಗಳಿಸಲು ಪರದಾಡಿದ್ದು, ಉತ್ತಮ ಪ್ರದರ್ಶನ ನೀಡದೆ ಪೆವಿಲಿಯನ್‌ ಸೇರಿದರು. ಈಗಾಗಿ ಬಾಂಗ್ಲಾ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ ನೀಡಿ 127 ರನ್‌ ಗಳಿಸಿತು.</p>



<p style="font-size:20px">ಈ ಪಂದ್ಯದಲ್ಲಿ ಶಾಹೀನ್ ಅಫ್ರಿದಿ 4 ಓವರ್‌ಗಳಲ್ಲಿ 22 ಕೊಟ್ಟು 4 ವಿಕೆಟ್‌ ಕಬಳಿಸಿದರು, ಹಾಗೆಯೇ ಶಾದಾಬ್ ಖಾನ್ 4 ಓವರ್ಗಳಲ್ಲಿ 30 ರನ್‌ ನೀಡಿ 2 ವಿಕೆಟ್‌ ಪಡೆದುಕೊಂಡರು. ಹಾರಿಸ್ ರೌಫ್, ಇಫ್ತಿಕರ್ ಅಹಮದ್, ತಲಾ ಒಂದೊಂದು ವಿಕೆಟ್‌ ಪಡೆಯುವ ಮೂಲಕ ಬಾಂಗ್ಲಾದೇಶವನ್ನು 127 ರನ್‌ಗಳಿಗೆ ಕಟ್ಟಿ ಹಾಕಿದರು.</p>
]]></content:encoded>
					
		
		
			</item>
		<item>
		<title>ಪಾಕಿಸ್ತಾನ: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು</title>
		<link>https://peepalmedia.com/pakistan-ex-prime-minister-imran-khan-shot-admitted-to-hospital/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 03 Nov 2022 12:54:10 +0000</pubDate>
				<category><![CDATA[ವಿದೇಶ]]></category>
		<category><![CDATA[imran khan]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Pakistan Tehreek-e-Insaf]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shooting attack]]></category>
		<guid isPermaLink="false">https://peepalmedia.com/?p=14045</guid>

					<description><![CDATA[ಇಸ್ಲಾಮಾಬಾದ್‌: ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿನ ರ್ಯಾಲಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಆಟಗಾರ ಹಾಗೂ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ &#8220;ಲಾಂಗ್ ಮಾರ್ಚ್&#8221;ಅನ್ನು ಉದ್ದೇಶಿಸಿ ಟ್ರಕ್‌ ಮೇಲೆ ನಿಂತು ಮಾತನಾಡುತ್ತಿರುವ ಸಂದರ್ಭದಲ್ಲಿ ಇಮ್ರಾನ್‌ ಖಾನ್‌ ಅವರ ಮೇಲೆ ದಾಳಿಕೋರನೊಬ್ಬ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಗುಂಡು ಇಮ್ರಾನ್‌ ಖಾನ್‌ ಅವರ ಕಾಲಿಗೆ ತಗುಲಿದ್ದು, ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು [&#8230;]]]></description>
										<content:encoded><![CDATA[
<p style="font-size:20px"><strong>ಇಸ್ಲಾಮಾಬಾದ್‌:</strong> ಪಾಕಿಸ್ತಾನದ ಗುಜ್ರಾನ್‌ವಾಲಾದಲ್ಲಿನ ರ್ಯಾಲಿಯಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟ್‌ ಆಟಗಾರ ಹಾಗೂ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.</p>



<p style="font-size:20px">ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ &#8220;ಲಾಂಗ್ ಮಾರ್ಚ್&#8221;ಅನ್ನು ಉದ್ದೇಶಿಸಿ ಟ್ರಕ್‌ ಮೇಲೆ ನಿಂತು ಮಾತನಾಡುತ್ತಿರುವ ಸಂದರ್ಭದಲ್ಲಿ ಇಮ್ರಾನ್‌ ಖಾನ್‌ ಅವರ ಮೇಲೆ ದಾಳಿಕೋರನೊಬ್ಬ ಗುಂಡು ಹಾರಿಸಿದ್ದಾನೆ. ದಾಳಿಯಲ್ಲಿ ಗುಂಡು ಇಮ್ರಾನ್‌ ಖಾನ್‌ ಅವರ ಕಾಲಿಗೆ ತಗುಲಿದ್ದು, ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಎನ್‌ಡಿಟಿವಿ ವರದಿಯಿಂದ ತಿಳಿದುಬಂದಿದೆ.</p>



<p style="font-size:20px">ಈ ಘಟನೆಯು 2007 ರಲ್ಲಿ ನಡೆದ ಘಟನೆಯನ್ನು ಮರುಕಳಿಸುವಂತೆ ಮಾಡಿದ್ದು, ಆ ಸಂದರ್ಭದಲ್ಲಿದ್ದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರನ್ನು ಕೂಡ ಇಂತಹದ್ದೇ ರ್ಯಾಲಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಆದರೆ ಇಮ್ರಾನ್‌ ಖಾನ್‌ ಅವರು ಸಾವಿನ ದವಡೆಯಿಂದ ಪಾರಾಗಿರುವುದು ಅವರ ಅದೃಷ್ಟವೇ ಸರಿ.</p>



<p style="font-size:20px">ಈ ಕುರಿತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ಪಕ್ಷ ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">This coward Attack on chairman <a href="https://twitter.com/ImranKhanPTI?ref_src=twsrc%5Etfw">@ImranKhanPTI</a> is strongly condemnable. May Allah safe him from evil eyes. AMEEN.<br>Khan sahab is safe.<a href="https://twitter.com/hashtag/%D8%B9%D9%85%D8%B1%D8%A7%D9%86_%D8%AE%D8%A7%D9%86_%DB%81%D9%85%D8%A7%D8%B1%DB%8C_%D8%B1%DB%8C%DA%88_%D9%84%D8%A7%D8%A6%D9%86?src=hash&amp;ref_src=twsrc%5Etfw">#عمران_خان_ہماری_ریڈ_لائن</a> <a href="https://t.co/mcUPnADvpJ">pic.twitter.com/mcUPnADvpJ</a></p>&mdash; PTI Punjab (@PTIPunjabPK) <a href="https://twitter.com/PTIPunjabPK/status/1588136843270299650?ref_src=twsrc%5Etfw">November 3, 2022</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಟಿ 20 ಆವೃತ್ತಿಯಿಂದ ಕೊಹ್ಲಿ ನಿವೃತ್ತರಾಗಬೇಕು ; ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅಭಿಪ್ರಾಯ</title>
		<link>https://peepalmedia.com/kohli-should-retire-from-t20-edition-former-cricketer-shoaib-akhtars-opinion/</link>
		
		<dc:creator><![CDATA[Peepal Media]]></dc:creator>
		<pubDate>Wed, 26 Oct 2022 13:00:35 +0000</pubDate>
				<category><![CDATA[ಆಟೋಟ]]></category>
		<category><![CDATA[india]]></category>
		<category><![CDATA[india cricket team]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=13051</guid>

					<description><![CDATA[ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ, ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯವರನ್ನು ಹಾಡಿ ಹೊಗಳಿದ್ದಾರೆ. T20 ವಿಶ್ವಕಪ್ ನ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಜೊತೆಗಿನ ಪಂದ್ಯದ ಕೊನೆಯ ಘಟ್ಟದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದನ್ನು ಸ್ಮರಿಸಿ ಹೊಗಳಿದ್ದಾರೆ. ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, &#8216;ವಿರಾಟ್ ಕೊಹ್ಲಿಯವರು ತಮ್ಮ ಅಬ್ಬರದ ಆಟದಿಂದ ಮತ್ತೆ ತಾನು ಎಂತಹ ಪಂದ್ಯದಲ್ಲಿ ಆಡಲೂ ಶಕ್ತ ಎಂಬುದನ್ನ ತೋರಿಸಿದ್ದಾರೆ. ಆದರೆ [&#8230;]]]></description>
										<content:encoded><![CDATA[
<p style="font-size:20px">ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ, ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಭಾರತದ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯವರನ್ನು ಹಾಡಿ ಹೊಗಳಿದ್ದಾರೆ. T20 ವಿಶ್ವಕಪ್ ನ ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಜೊತೆಗಿನ ಪಂದ್ಯದ ಕೊನೆಯ ಘಟ್ಟದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿದ್ದನ್ನು ಸ್ಮರಿಸಿ ಹೊಗಳಿದ್ದಾರೆ.</p>



<p style="font-size:20px">ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, &#8216;ವಿರಾಟ್ ಕೊಹ್ಲಿಯವರು ತಮ್ಮ ಅಬ್ಬರದ ಆಟದಿಂದ ಮತ್ತೆ ತಾನು ಎಂತಹ ಪಂದ್ಯದಲ್ಲಿ ಆಡಲೂ ಶಕ್ತ ಎಂಬುದನ್ನ ತೋರಿಸಿದ್ದಾರೆ. ಆದರೆ ಆಟಗಾರನೊಬ್ಬ ರ್ಯಾಂಕಿಂಗ್ ಪಟ್ಟಿಯ ಉನ್ನತ ಶ್ರೇಣಿಯಲ್ಲಿ ಇದ್ದಾಗಲೇ ಆತ ಆ ಆವೃತ್ತಿಯಿಂದ ನಿವೃತ್ತರಾಗಬೇಕು&#8221; ಎಂದು ಸಲಹೆ ಕೂಡಾ ನೀಡಿದ್ದಾರೆ.</p>



<p style="font-size:20px">ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡುತ್ತಾ ಅನಿರೀಕ್ಷಿತವಾಗಿ ಕೊಹ್ಲಿ ಆಟದ ಬಗ್ಗೆ ಪ್ರಸ್ತಾಪಿಸಿ ಈ ಮಾತನ್ನು ಹೇಳಿದ್ದಾರೆ. &#8220;ಏಕೆಂದರೆ ವಿರಾಟ್ ಕೊಹ್ಲಿ ತನ್ನ ಸಂಪೂರ್ಣ ಶಕ್ತಿಯನ್ನು ಕೇವಲ T20 ಕ್ರಿಕೆಟ್‌ಗೆ ಹಾಕುವುದನ್ನು ನಾನು ಬಯಸುವುದಿಲ್ಲ. ಮೊನ್ನೆಯ ಪಂದ್ಯದಂತೆ ಇದೇ ರೀತಿಯ ಬದ್ಧತೆಯೊಂದಿಗೆ, ಅವರು ಏಕದಿನ ಸರಣಿಗಳಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದರೆ ತ್ರಿಶತಕಗಳನ್ನು ಗಳಿಸುವಷ್ಟು ಕೊಹ್ಲಿ ಸಮರ್ಥರಿದ್ದಾರೆ.&#8221; ಎಂದು ಅಖ್ತರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.</p>



<p style="font-size:20px">&#8220;ಒಬ್ಬ ವ್ಯಕ್ತಿ ಕೆಳಗೆ ಬಿದ್ದಾಗ ತನ್ನ ಆತ್ಮ ವಿಶ್ವಾಸದಿಂದ ಪುನರುಜ್ಜೀವನಗೊಳಿಸಬೇಕು. ಆ ಆತ್ಮವಿಶ್ವಾಸವನ್ನು ಕ್ರೋಢೀಕರಿಸಿದಾಗ ಅದು ಮುಂದುವರೆಯುತ್ತದೆ‌. ವಿರಾಟ್ ಕೊಹ್ಲಿ ಅದೇ ರೀತಿಯ ವ್ಯಕ್ತಿತ್ವದವರಾಗಿದ್ದಾರೆ.&#8221; ಎಂದು ಅಖ್ತರ್ ಹೇಳಿದ್ದಾರೆ. &#8220;ಭಾರತ ಪಾಕಿಸ್ತಾನದ ಪಂದ್ಯದಲ್ಲಿ ಅವರು ತಮ್ಮ ಜೀವನದ ದೊಡ್ಡ ಇನ್ನಿಂಗ್ಸ್ ಆಡಿದರು. ಅವರು ಇನ್ನು ಮುಂದೆಯೂ ಅಬ್ಬರದ ಬ್ಯಾಟಿಂಗ್ ಅನ್ನು ಆಡಬಹುದು. ಏಕೆಂದರೆ ಅವರು ಆತ್ಮ ವಿಶ್ವಾಸದ ವ್ಯಕ್ತಿತ್ವ ಹೊಂದಿದ್ದಾರೆ&#8221; ಎಂದು ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.</p>



<p style="font-size:20px">ಅಖ್ತರ್ ಅವರು ಪಾಕಿಸ್ತಾನ ತಂಡದ ಪ್ರದರ್ಶನವನ್ನು ಕೂಡ ಹೊಗಳಿ, ಪಾಕಿಸ್ತಾನ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. &#8220;ಪಾಕಿಸ್ತಾನ ಅದ್ಭುತವಾಗಿ ಉತ್ತಮ ಪ್ರದರ್ಶನ ನೀಡಿದೆ. ನಿರಾಶೆಗೊಳ್ಳಬೇಡಿ, ನೀವೆಲ್ಲರೂ ನಿಜವಾಗಿಯೂ ಚೆನ್ನಾಗಿ ಆಡಿದ್ದೀರಿ. ಭಾರತ ಕೂಡ ಉತ್ತಮ ಪ್ರದರ್ಶನ ನೀಡಿದೆ. ಕೊನೆಯ ಹಂತದಲ್ಲಿ ಅವರು ಇತಿಹಾಸದಲ್ಲಿ ಅತ್ಯುತ್ತಮ ಪಂದ್ಯಗಳಲ್ಲಿ ಒಂದನ್ನು ಗೆದ್ದರು. ಇದು ಪರಿಪೂರ್ಣವಾದ ಒಂದು ವಿಶ್ವಕಪ್ ಪಂದ್ಯವಾಗಿತ್ತು. ಅದು ಎಲ್ಲವನ್ನೂ ಹೊಂದಿತ್ತು‌. ಕ್ಯಾಚ್, ರನ್ ಔಟ್, ನೋ ಬಾಲ್, ವಿವಾದಗಳು, ಸ್ಟಂಪಿಂಗ್.. ಎಲ್ಲವೂ&#8221; ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.</p>



<p style="font-size:20px">&#8220;ವಿಶ್ವಕಪ್ ಕ್ರಿಕೆಟ್ ಈಗಷ್ಟೇ ಪ್ರಾರಂಭವಾಗಿದೆ, ಭಾರತ-ಪಾಕಿಸ್ತಾನ ಆಡಿದಾಗ ಮಾತ್ರ ನಮಗೆ ವಿಶ್ವಕಪ್ ಪ್ರಾರಂಭವಾಗಿದೆ ಎಂಬ ಅನುಭವ ಆಗುತ್ತದೆ. ಮತ್ತು ಎರಡು ತಂಡಗಳು ಮತ್ತೆ ಮುಖಾಮುಖಿಯಾಗುತ್ತವೆ. ಇದೊಂದು ನಿರಂತರ ಪ್ರಕ್ರಿಯೆ. ಇದು ಹೀಗೆಯೇ ಮುಂದುವರೆಯಲಿ. ಪ್ರತಿಯೊಬ್ಬರಲ್ಲೂ ಸ್ಪರ್ಧಾ ಮನೋಭಾವ ಮೂಡಲಿ&#8221; ಎಂದು ತಮ್ಮದೇ ಶೈಲಿಯಲ್ಲಿ ವಿಶ್ವಕಪ್ ಮತ್ತು ಭಾರತ ಪಾಕಿಸ್ತಾನ ತಂಡದ ಆಟವನ್ನು ಶ್ಲಾಘಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಪಾಕಿಸ್ತಾನ: ಮುಖ್ಯ ನ್ಯಾಯಮೂರ್ತಿಗೆ ಗುಂಡಿಟ್ಟು ಕೊಂದ ಉಗ್ರರು</title>
		<link>https://peepalmedia.com/pakistan-terrorists-shot-dead-the-chief-justice/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 16 Oct 2022 11:54:23 +0000</pubDate>
				<category><![CDATA[ವಿದೇಶ]]></category>
		<category><![CDATA[Balochistan Province High Court]]></category>
		<category><![CDATA[Chief Justice]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[terrorists]]></category>
		<guid isPermaLink="false">https://peepalmedia.com/?p=11185</guid>

					<description><![CDATA[ಪಾಕಿಸ್ತಾನದಲ್ಲಿನ ಬಲೂಚಿಸ್ಥಾನ ಪ್ರಾಂತ್ಯ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ನೂರ್ ಮೆಸ್ಕಂಜೈ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಮಾಹಿತಿ ಪ್ರಕಾರ, ಖರಾನ್ ಪ್ರದೇಶದ ಮಸೀದಿಯ ಹೊರಭಾಗದಲ್ಲಿ ಗುಂಡಿನ ದಾಳಿ ನಡೆದಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂರ್ಭದಲ್ಲಿ ಮಾರ್ಗದ ಮಧ್ಯೆ ನ್ಯಾಯಮೂರ್ತಿಗಳು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಲ್ಲಿ ಆಂತರಿಕ ಭದ್ರತಾ ವ್ಯವಸ್ಥೆ ಕುಸಿದಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯ ನ್ಯಾಯಮೂರ್ತಿಗಳ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಮಾಜಿ [&#8230;]]]></description>
										<content:encoded><![CDATA[
<p style="font-size:20px">ಪಾಕಿಸ್ತಾನದಲ್ಲಿನ ಬಲೂಚಿಸ್ಥಾನ ಪ್ರಾಂತ್ಯ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ನೂರ್ ಮೆಸ್ಕಂಜೈ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.</p>



<p style="font-size:20px">ಮಾಹಿತಿ ಪ್ರಕಾರ, ಖರಾನ್ ಪ್ರದೇಶದ ಮಸೀದಿಯ ಹೊರಭಾಗದಲ್ಲಿ ಗುಂಡಿನ ದಾಳಿ ನಡೆದಿದ್ದು, ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂರ್ಭದಲ್ಲಿ ಮಾರ್ಗದ ಮಧ್ಯೆ ನ್ಯಾಯಮೂರ್ತಿಗಳು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.</p>



<p style="font-size:20px">ಪಾಕಿಸ್ತಾನದಲ್ಲಿ ಆಂತರಿಕ ಭದ್ರತಾ ವ್ಯವಸ್ಥೆ ಕುಸಿದಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯ ನ್ಯಾಯಮೂರ್ತಿಗಳ ಕೊಲೆಯಾಗಿದೆ ಎಂದು ತಿಳಿದುಬಂದಿದೆ.</p>



<p style="font-size:20px">ಮಾಜಿ ಮುಖ್ಯ ನ್ಯಾಯಮೂರ್ತಿ ಹತ್ಯೆಗೆ ಬಲೂಚಿಸ್ತಾನ ಮುಖ್ಯ ನ್ಯಾಯಮೂರ್ತಿ ಮೀರ್ ಅಬ್ದುಲ್ ಖುದೂಸ್ ಬಿಂಜೆಂಜೋ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ, ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಭಾರತದಿಂದ ಪಾಕಿಸ್ತಾನಕ್ಕೆ 60 ಲಕ್ಷ ಸೊಳ್ಳೆ ಪರದೆಗಳು</title>
		<link>https://peepalmedia.com/bharathadinda-pakisthanakke-60-laksha-solle-paredegalu/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 12 Oct 2022 12:17:32 +0000</pubDate>
				<category><![CDATA[ವಿದೇಶ]]></category>
		<category><![CDATA[bengalure]]></category>
		<category><![CDATA[bharatha]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[maleria]]></category>
		<category><![CDATA[news]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[solle parede]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10325</guid>

					<description><![CDATA[ಇಸ್ಲಾಮಾಬಾದ್‌ : ಪ್ರವಾಹ ಬಿಕ್ಕಟ್ಟಿನ ನಂತರ ಪಾಕಿಸ್ತಾನಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳತ್ತಿವೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಭಾರತ ದೇಶದಿಂದ ಸುಮಾರು 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ನಿರ್ಧಾರ ಮಾಡಿದೆ. ಪಾಕಿಸ್ತಾನದಲ್ಲಿ ಆದ ಭಾರೀ ಮಳೆಯಿಂದ ಪ್ರವಾಹ ಸಂಕಷ್ಟ ಎದುರಾಗಿತ್ತು. ಪ್ರವಾಹದಿಂದ ಈಗಾಗಲೇ 1600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರವಾಹದ ಬಗ್ಗೆ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರವಾಹ ಪೀಡಿತ ಸುಮಾರು 32 ಜಿಲ್ಲೆಗಳಲ್ಲಿ ಸೊಳ್ಳೆಗಳು [&#8230;]]]></description>
										<content:encoded><![CDATA[
<p style="font-size:20px"><strong>ಇಸ್ಲಾಮಾಬಾದ್‌</strong> : ಪ್ರವಾಹ ಬಿಕ್ಕಟ್ಟಿನ ನಂತರ ಪಾಕಿಸ್ತಾನಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳತ್ತಿವೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಭಾರತ ದೇಶದಿಂದ ಸುಮಾರು 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸಲು ನಿರ್ಧಾರ ಮಾಡಿದೆ.</p>



<p style="font-size:20px">ಪಾಕಿಸ್ತಾನದಲ್ಲಿ ಆದ ಭಾರೀ ಮಳೆಯಿಂದ ಪ್ರವಾಹ ಸಂಕಷ್ಟ ಎದುರಾಗಿತ್ತು. ಪ್ರವಾಹದಿಂದ ಈಗಾಗಲೇ 1600 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರವಾಹದ ಬಗ್ಗೆ ಮಾಹಿತಿ ನೀಡಿತ್ತು. ಈ ಬೆನ್ನಲ್ಲೇ ಪಾಕಿಸ್ತಾನದ ಪ್ರವಾಹ ಪೀಡಿತ ಸುಮಾರು 32 ಜಿಲ್ಲೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿ ಸೃಷ್ಟಿಯಾಗಿದೆ. ದಿನದಿಂದ ದಿನಕ್ಕೆ ಮಲೇರಿಯಾ ರೋಗ ಹರಡುವಿಕೆಯ ಸಂಖ್ಯೆಯೂ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಆ ದೇಶದ ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾಕಿಸ್ತಾನ ಸರ್ಕಾರ ಭಾರತದಿಂದ 60 ಲಕ್ಷ ಸೊಳ್ಳೆ ಪರದೆಗಳನ್ನು ಖರೀದಿಸುವ ನಿರ್ಧಾರ ಕೈಗೊಂಡಿದೆ.</p>



<p style="font-size:20px">ಈ ಕುರಿತು ಮಾಹಿತಿ ನೀಡಿದ ಪಾಕಿಸ್ತಾನದ ಆರೋಗ್ಯ ಅಧಿಕಾರಿಗಳು ʼಸೊಳ್ಳೆ ಪರದೆಗಳು ನವೆಂಬರ್‌ ತಿಂಗಳೊಳಗೆ ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತಲುಪಲಿದೆ ಎಂದುʼ ಎಂದು ಹೇಳಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಶೆಟ್ಟೀಸ್‌ ಸ್ಪೆಷಲ್! ರಕ್ಷಿತ್‌, ರಾಜ್‌, ರಿಷಬ್‌ ಅವರ ಐದು ಬೆಸ್ಟ್‌ ಸಿನಿಮಾಗಳು!" width="696" height="392" src="https://www.youtube.com/embed/9AhplPICZFc?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
		<item>
		<title>ಪಾಕ್‌ನಲ್ಲಿ ವಿದೇಶದ ಚರ್ಚೆ: ಆಡಿಯೋ ಸೋರಿಕೆ ಪ್ರಕರಣದಲ್ಲಿ ಇಮ್ರಾನ್‌ ವಿರುದ್ದ ಕ್ರಮಕ್ಕೆ ಶಿಫಾರಸ್ಸು</title>
		<link>https://peepalmedia.com/paknalli-videshada-charche-audio-sorike-prakaranadalli-imran-virudda-krama-shipharassu/</link>
		
		<dc:creator><![CDATA[Peepal Media]]></dc:creator>
		<pubDate>Sun, 02 Oct 2022 13:45:31 +0000</pubDate>
				<category><![CDATA[ವಿದೇಶ]]></category>
		<category><![CDATA[bengalure]]></category>
		<category><![CDATA[imraqn khan]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[pakisthan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=8633</guid>

					<description><![CDATA[ಇಸ್ಲಾಮಾಬಾದ್‌ : ದೇಶದ ಸಚಿವರು ಮುಖ್ಯ ಕಾರ್ಯದರ್ಶಿ ವಿದೇಶದ ಪತ್ರವೊಂದರ ಬಗ್ಗೆ ಚರ್ಚಿಸುವುದರ ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ &#160;ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಲ್ಲಿನ ಸಚಿವ ಸಂಪುಟ ಇಂದು ಔಪಚಾರಿಕವಾಗಿ ಅನುಮೋದನೆ ನೀಡಿದೆ. ಈ ಹಿನ್ನಲೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಮಾಜಿ ಸಚಿವ ಅಸಾದ್‌ ಉಮರ್‌ ಮತ್ತು ಮುಖ್ಯ ಕಾರ್ಯದರ್ಶಿಯವರು&#160; ಮೂವರು ಸೇರಿ ಅಮೇರಿಕಾದ ಪತ್ರವೊಂದರ ಕುರಿತು ಚರ್ಚೆ ನಡೆಸಿದ್ದಾರೆ. ಚರ್ಚೆಗೆ ಸಂಬಂಧಿಸಿದ ಎರಡು ಆಡಿಯೋಗಳು ಸೋರಿಕೆಯಾಗಿವೆ. [&#8230;]]]></description>
										<content:encoded><![CDATA[
<p style="font-size:20px"><strong>ಇಸ್ಲಾಮಾಬಾದ್‌</strong> : ದೇಶದ ಸಚಿವರು ಮುಖ್ಯ ಕಾರ್ಯದರ್ಶಿ ವಿದೇಶದ ಪತ್ರವೊಂದರ ಬಗ್ಗೆ ಚರ್ಚಿಸುವುದರ ಆಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ &nbsp;ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಅಲ್ಲಿನ ಸಚಿವ ಸಂಪುಟ ಇಂದು ಔಪಚಾರಿಕವಾಗಿ ಅನುಮೋದನೆ ನೀಡಿದೆ.</p>



<p style="font-size:20px">ಈ ಹಿನ್ನಲೆ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಮಾಜಿ ಸಚಿವ ಅಸಾದ್‌ ಉಮರ್‌ ಮತ್ತು ಮುಖ್ಯ ಕಾರ್ಯದರ್ಶಿಯವರು&nbsp; ಮೂವರು ಸೇರಿ ಅಮೇರಿಕಾದ ಪತ್ರವೊಂದರ ಕುರಿತು ಚರ್ಚೆ ನಡೆಸಿದ್ದಾರೆ. ಚರ್ಚೆಗೆ ಸಂಬಂಧಿಸಿದ ಎರಡು ಆಡಿಯೋಗಳು ಸೋರಿಕೆಯಾಗಿವೆ. ಇದು ರಾಷ್ಟ್ರದ ಭದ್ರತೆಗೆ ಕುತ್ತು ತರುವ ವಿಚಾರವಾಗಿದ್ದು, ಇದಕ್ಕೆ ಸಂಬಂಧ ಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸಮಿತಿ ಹೇಳಿದೆ. </p>



<p style="font-size:20px">ಈ ಹಿಂದೆ ಆಡಿಯೋ ಸೋರಿಕೆ ಸಂಬಂಧ ಪಟ್ಟಂತೆ  ಪರಿಶೀಲನೆ ನಡೆಸಲು ತನಿಖಾ ಸಮಿತಿಯೊಂದನ್ನು ರಚಿಸಿಲಾಗಿತ್ತು. ಆ ಸಮಿತಿಯು ಇಮ್ರಾನ್‌ ನ ಕಡೆ ಬೆರಳು ತೋರಿಸಿದ್ದು ಅವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಚಿವ ಸಂಪುಟ ಶಿಫಾರಸ್ಸು ಮಾಡಿದೆ.</p>



<p></p>



<p></p>



<p></p>



<p style="font-size:20px"><strong>🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ</strong><br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a><br><br><strong><mark class="has-inline-color has-vivid-red-color">ಇದನ್ನೂ ಓದಿ </mark></strong>: ಮಹಾತ್ಮ ಗಾಂಧಿಯವರು ಕೇವಲ ಭಾರತೀಯರನ್ನು ಪ್ರಭಾವಿಸಲಿಲ್ಲ. ಇಡೀ ಜಗತ್ತಿನ ಮಹಾನಾಯಕರಿಗೆ ಪ್ರೇರಕಶಕ್ತಿಯಾದರು. ದಕ್ಷಿಣ ಆಫ್ರಿಕಾದ ಕರಿಯರ ಹೋರಾಟವನ್ನು ಗೆಲ್ಲಿಸಿದ ನೆಲ್ಸನ್ ಮಂಡೇಲಾ ಅವರಿಗೆ ಗಾಂಧಿ ಹೇಗೆ ಸ್ಫೂರ್ತಿಯಾಗಿದ್ದರು ಗೊತ್ತೆ? ಈ ವಿಡಿಯೋ ನೋಡಿ</p>



<figure class="wp-block-embed is-type-video is-provider-youtube wp-block-embed-youtube wp-embed-aspect-4-3 wp-has-aspect-ratio"><div class="wp-block-embed__wrapper">
<iframe title="ನೆಲ್ಸನ್ ಮಂಡೇಲಾ ಪ್ರಭಾವಿಸಿದ ಮಹಾತ್ಮಗಾಂಧಿ | Mahatma Gandhi | Nelson Mandela | Niketh Raj Mourya" width="696" height="522" src="https://www.youtube.com/embed/YmRLcMbpXzE?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
	</channel>
</rss>
