<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>peepal &#8211; Peepal Media</title>
	<atom:link href="https://peepalmedia.com/tag/peepal/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 24 Oct 2025 13:37:43 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>peepal &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸೋಲಿನ ಭೀತಿ ಮೆಟ್ಟಿ ನಿಂತು ವಿಶ್ವಕಪ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತದ ವನತೆಯರು</title>
		<link>https://peepalmedia.com/indias-vanateyas-overcome-the-fear-of-defeat-and-reach/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Fri, 24 Oct 2025 13:37:43 +0000</pubDate>
				<category><![CDATA[ಅಂಕಣ]]></category>
		<category><![CDATA[ಕ್ರೀಡೆ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68270</guid>

					<description><![CDATA[ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್‌ಗಳ ಬದಲು 49 ಓವರ್‌ಗಳಿಗೆ ಇಳಿಸಲಾಯಿತು. ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್‌ಗೆ 44 ಓವರ್‌ಗಳಲ್ಲಿ ಗೆಲ್ಲಲು 325 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 8 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿ ಸೋಲು ಅನುಭವಿಸಿತು. ನ್ಯೂಜಿಲ್ಯಾಂಡ್ ಗೆ ಆರಂಭಿಕ [&#8230;]]]></description>
										<content:encoded><![CDATA[
<p>ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್‌ಗಳ ಬದಲು 49 ಓವರ್‌ಗಳಿಗೆ ಇಳಿಸಲಾಯಿತು. ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್‌ಗೆ 44 ಓವರ್‌ಗಳಲ್ಲಿ ಗೆಲ್ಲಲು 325 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 8 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿ ಸೋಲು ಅನುಭವಿಸಿತು.</p>



<p>ನ್ಯೂಜಿಲ್ಯಾಂಡ್ ಗೆ ಆರಂಭಿಕ ಆಘಾತ ಎದುರಾಯಿತು. ಸೂಜಿ ಬೇಟ್ಸ್ 1 ರನ್ ಗಳಿಸಿ ಔಟಾದರು. ಜಾರ್ಜಿಯಾ ಪ್ಲಿಮ್ಮರ್ 30, ಅಮೆಲಿಯಾ ಕೆರ್ 45, ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 81, ಮ್ಯಾಡಿ ಗ್ರೀನ್ 18 ರನ್ ಗಳಿಸಿ ಔಟಾದರು.</p>



<p>ಇಸಾಬೆಲ್ಲಾ ಗೇಜ್ ಅಜೇಯ 65 ರನ್ ಗಳಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ರೇಣುಕಾಸಿಂಗ್, ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದರೇ ನೇಹಾ ರಾಣಾ, ಚರಣಿ, ಪ್ರತೀಕಾ ರಾವಲ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 53 ರನ್ ಗಳಿಂದ ಸೋಲು ಅನುಭವಿಸಿತು. ಸೋಲಿನ ಭೀತಿ ಮೆಟ್ಟಿ ನಿಂತು ಮಹಿಳಾ ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸುವ ಮೂಲಕ ಅಮೋಘ ಸಾಧನೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧ ನಿನ್ನೆ ನಡೆದ ಪಂದ್ಯವು ಭಾರತಕ್ಕೆ &#8216;ಮಾಡು ಇಲ್ಲವೇ ಮಡಿ&#8217;ಯಂತಿತ್ತು; ಒಂದು ವೇಳೆ ಈ ಪಂದ್ಯದಲ್ಲಿ ಸೋತಿದ್ದರೆ, ಬಹುತೇಕ ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇತ್ತು. ಆದರೆ, ಈ ಮಹತ್ವವನ್ನು ಅರಿತುಕೊಂಡ ಭಾರತೀಯ ವನಿತೆಯರು ಒತ್ತಡವನ್ನು ಮೆಟ್ಟಿನಿಂತು ಆಡಿದ ರೀತಿ ನಿಜಕ್ಕೂ ಸ್ಫೂರ್ತಿದಾಯಕವಾಗಿತ್ತು. ಗೆಲುವಿನ ನಿರ್ಧಾರದೊಂದಿಗೆ ಕಣಕ್ಕಿಳಿದ ಭಾರತ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಸಾಧ್ಯವೆನಿಸುವ ಸಮಬಲದ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಂಡು, ಅಂತಿಮವಾಗಿ 53 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.</p>



<h1 class="wp-block-heading"><em>ಐತಿಹಾಸಿಕ</em> ಜೊತೆಯಾಟ</h1>



<p>ಸ್ಮೃತಿ ಮಂಧಾನ 95 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 109 ರನ್ ಗಳಿಸಿದರು. ಇದು ಮಂಧಾನ ಅವರ 14ನೇ ಏಕದಿನ ಶತಕ ಮತ್ತು ಈ ವರ್ಷ ಅವರ 5ನೇ ಶತಕವಾಗಿದೆ. ಪ್ರತಿಕಾ ರಾವಲ್ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದರು. ಈ ಎರಡರ ಜೊತೆಗೆ, ಜೆಮಿಮಾ ರೊಡ್ರಿಗಸ್ 55 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿದರು. ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 340 ರನ್ ಗಳಿಸಿತು.</p>



<p>ಅಂಕಪಟ್ಟಿಯಲ್ಲಿ ಭಾರತ 6 ಪಂದ್ಯಗಳಲ್ಲಿ 3 ಪಂದ್ಯಗಳ ಗೆಲುವಿನ ಮೂಲಕ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ ಒಂದು ಪಂದ್ಯದ ಗೆಲುವಿನೊಂದಿಗೆ ನಾಲ್ಕು ಅಂಕಗಳನ್ನು ಪಡೆದು ಐದನೇ ಸ್ಥಾನದಲ್ಲಿದೆ. ಈ ಐತಿಹಾಸಿಕ ಗೆಲುವಿಗೆ ಪ್ರಮುಖ ಕಾರಣವಾದದ್ದು ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ಮತ್ತು ಮಂದಾನಾ ಅವರ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ. ಈ ಇಬ್ಬರು ಆಟಗಾರ್ತಿಯರು 212 ರನ್‌ಗಳ ದಾಖಲೆಯ ಜೊತೆಯಾಟವಾಡಿ, ಎದುರಾಳಿ ಬೌಲರ್‌ಗಳನ್ನು ಸಂಪೂರ್ಣವಾಗಿ ಕಂಗೆಡಿಸಿದರು. ಅವರ ಸಮಯೋಚಿತ ಮತ್ತು ಆಕ್ರಮಣಕಾರಿ ಇನ್ನಿಂಗ್ಸ್‌ಗಳು ಭಾರತದ ಇನ್ನಿಂಗ್ಸ್‌ಗೆ ಬೃಹತ್ ಮೊತ್ತದ ಬಲ ನೀಡಿ, ಎದುರಾಳಿಗೆ ಕಠಿಣ ಸವಾಲನ್ನು ಒಡ್ಡಿದವು.</p>



<p><strong>ಬೌಲರ್‌ಗಳ ಸಂಘಟಿತ ಪ್ರದರ್ಶನವೇ ನಿರ್ಣಾಯಕ</strong><br>ಬೃಹತ್ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ಗೆ ಭಾರತದ ಬೌಲಿಂಗ್ ವಿಭಾಗವು ಪ್ರಬಲ ಪ್ರತಿರೋಧವನ್ನು ಒಡ್ಡಿತು. ಯುವ ವೇಗಿ ರೇಣುಕಾ ಅವರ ಸಂಘಟಿತ ದಾಳಿ, ಹಾಗೂ ಕ್ರಾಂತಿ ಮತ್ತು ಚಾರಣಿ ಅವರ ಪರಿಣಾಮಕಾರಿ ಬೌಲಿಂಗ್ ಪಂದ್ಯದ ಗೆಲುವಿಗೆ ನಿರ್ಣಾಯಕವಾಯಿತು. ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಬಳಿಸಿದ ಈ ಬೌಲರ್‌ಗಳ ಕರಾರುವಕ್ಕಾದ ಪ್ರದರ್ಶನದಿಂದಾಗಿ, ನ್ಯೂಜಿಲೆಂಡ್ ತಂಡವು ಗುರಿ ತಲುಪಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ, ಸೋಲಿನ ಭೀತಿಯಿದ್ದಾಗಲೂ, ಸಂಪೂರ್ಣ ತಂಡದ ಮನೋಬಲ ಮತ್ತು ವೈಯಕ್ತಿಕ ಪ್ರದರ್ಶನಗಳ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಭಾರತದ ಈ ಗೆಲುವು, ಕ್ರಿಕೆಟ್ ಜಗತ್ತಿಗೆ ಸ್ಫೂರ್ತಿಯ ಸಂದೇಶ ನೀಡಿದೆ. ಮುಂದಿನ ಸುತ್ತಿನಲ್ಲಿಯೂ ಇದೇ ಲಯವನ್ನು ಕಾಯ್ದುಕೊಂಡು ಪ್ರಶಸ್ತಿಯತ್ತ ಮುನ್ನುಗ್ಗಲು ತಂಡ ಸಜ್ಜಾಗಿದೆ.ಕೊನೆಗೂ ಒತ್ತಡದ ಪರಿಸ್ಥಿತಿಯಲ್ಲಿ ಒತ್ತಡವನ್ನು ಮೆಟ್ಟಿ ನಿಂತ ನಮ್ಮ ವೀರ ವನಿತೆಯರಿಗೆ ಮುಂದಿನ ಪಂದ್ಯ ಗಳಲ್ಲಿ ಗೆಲುವು ತಮ್ಮದಾಗಲಿ ಎಂದು ಆಶಿಸುತ್ತೇನೆ.</p>



<p>ಆನಂದ್‌ ಮುಳಬಾಗಲಿ</p>



<h1 class="wp-block-heading"></h1>
]]></content:encoded>
					
		
		
			</item>
		<item>
		<title>ಚಿತ್ತಾಪುರದಲ್ಲಿ RSS ಪಥ ಸಂಚಲನ ಅಕ್ಟೋಬರ್ 28ಕ್ಕೆ ಶಾಂತಿ ಸಭೆ &#8211; ಹೈಕೋರ್ಟ್</title>
		<link>https://peepalmedia.com/rss-roadshow-in-chittapur-to-be-held-on-october-28/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Fri, 24 Oct 2025 13:23:12 +0000</pubDate>
				<category><![CDATA[ಕಲ್ಬುರ್ಗಿ]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68264</guid>

					<description><![CDATA[ಕಲಬುರಗಿ  : ಚಿತ್ತಾಪುರದಲ್ಲಿ ನವಂಬರ್ 2 ರಂದು ಆರ್‌ಎಸ್ಎಸ್ (RSS) ಪಥ ಸಂಚಲನ ನಡೆಸೋ ವಿಚಾರ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದೇ ದಿನ ಇನ್ನೂ (Kalburgi) ಐದಾರು ಸಂಘಟನೆಗಳು ಜಾಥಾ, ಮೆರವಣಿಗೆಗೆ ಅನುಮತಿ ಕೊಡಿ ಎಂದಿವೆ. ಹೀಗಾಗಿ ಅಕ್ಟೋಬರ್‌ 28ರವರೆಗೆ ಶಾಂತಿ ಸಭೆ ನಡೆಸಲು ಹೈಕೋರ್ಟ್ (High Court) ಸೂಚಿಸಿದೆ. ವಿಶೇಷ ಪೀಠವು ಭಾನುವಾರ ವಿಚಾರಣೆ ನಡೆಸಿ, ನವೆಂಬರ್‌ 2 ಕ್ಕೆ ಪಥಸಂಚಲನ ನಡೆಸಲು ಸೂಚಿಸಿತ್ತು. ಅಲ್ಲದೇ ಜಿಲ್ಲಾಧಿಕಾರಿಗೆ ಮನವಿ ನೀಡಲು ಸೂಚಿಸಿತ್ತು. ಅದರಂತೆ ಮನವಿ ನೀಡಿದ್ದೇವೆ. [&#8230;]]]></description>
										<content:encoded><![CDATA[
<p><strong>ಕಲಬುರಗಿ  : </strong>ಚಿತ್ತಾಪುರದಲ್ಲಿ ನವಂಬರ್ 2 ರಂದು ಆರ್‌ಎಸ್ಎಸ್ (RSS) ಪಥ ಸಂಚಲನ ನಡೆಸೋ ವಿಚಾರ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಅದೇ ದಿನ ಇನ್ನೂ (Kalburgi) ಐದಾರು ಸಂಘಟನೆಗಳು ಜಾಥಾ, ಮೆರವಣಿಗೆಗೆ ಅನುಮತಿ ಕೊಡಿ ಎಂದಿವೆ. ಹೀಗಾಗಿ ಅಕ್ಟೋಬರ್‌ 28ರವರೆಗೆ ಶಾಂತಿ ಸಭೆ ನಡೆಸಲು ಹೈಕೋರ್ಟ್ (High Court) ಸೂಚಿಸಿದೆ.</p>



<p>ವಿಶೇಷ ಪೀಠವು ಭಾನುವಾರ ವಿಚಾರಣೆ ನಡೆಸಿ, ನವೆಂಬರ್‌ 2 ಕ್ಕೆ ಪಥಸಂಚಲನ ನಡೆಸಲು ಸೂಚಿಸಿತ್ತು. ಅಲ್ಲದೇ ಜಿಲ್ಲಾಧಿಕಾರಿಗೆ ಮನವಿ ನೀಡಲು ಸೂಚಿಸಿತ್ತು. ಅದರಂತೆ ಮನವಿ ನೀಡಿದ್ದೇವೆ. ಎಲ್ಲಾ ಸಿದ್ಧತೆಗಳು ಆಗಿವೆ. ರೂಟ್‌ ಮ್ಯಾಪ್‌ ಸಹ ನೀಡಿದ್ದೇವೆ ಎಂದು RSS ಪರ  ವಕೀಲ ಎಂ ಅರುಣ್‌ ಶ್ಯಾಮ್‌ ಹೇಳಿದರು. ಬಳಿಕ ಜಿಲ್ಲಾಧಿಕಾರಿ ಸಲ್ಲಿಸಿರುವ ವರದಿ ಓದಿದ ಅಡ್ವೊಕೇಟ್‌ ಜನರಲ್‌. ಇದು ಹೆಚ್ಚು ಜನಸಂದಣಿ ಇರುವ ಪ್ರದೇಶ ಎಂದು ಹೇಳಲಾಗಿದೆ. ಇಲ್ಲಿ ಮೆರವಣಿಗೆ, ಸಭೆ ನಡೆಸಲು ಅನುಮತಿಸಲಾಗದು ಎಂದು ವರದಿಯಲ್ಲಿ ಹೇಳಲಾಗಿದೆ. ಜನಸಂದಣಿ ಉಂಟಾಗಲಿದೆ ಎಂದೂ ವರದಿಯಾಗಲಿದೆ ಎಂದರು.ಯಾವುದೇ ರೀತಿ ಸಭೆ, ಸಮಾರಂಭ, ಪಥಸಂಚಲನಕ್ಕೆ ಅನುಮತಿಸಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಎಜಿ ಹೇಳಿದ್ರೆ, ಅದರ ಅರ್ಥ ಏನು? ಎಂದು ಪೀಠ ಪ್ರಶ್ನಿಸ್ತು. ಪರಿಸ್ಥಿತಿ ಸದ್ಯ ಸಮಸ್ಯಾತ್ಮಕವಾಗಿದೆ. ಪರಿಸ್ಥಿತಿ ತಿಳಿಯಾದ ಮೇಲೆ ಅರ್ಜಿದಾರರ ಮನವಿ ಪರಿಗಣಿಸುತ್ತೇವೆ. ಹಲವು ಸಂಘಟನೆಗಳು ಅನುಮತಿ ಕೋರಿವೆ. ಇದು ಸಮಸ್ಯೆಯಾಗಿದೆ ಎಂದು ಎಜಿ ಹೇಳಿದರು.</p>



<p>ಆರ್‌ಎಸ್‌ಎಸ್ ಪಥ ಸಂಚಲನದ ಬಗ್ಗೆ ಕಲಬುರಗಿ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ನಾವು ಯಾವುದೇ ಕಾರಣಕ್ಕೂ ಯಾವುದೇ ಅರ್ಜಿಗಳನ್ನ ತಿರಸ್ಕರಿಸಿಲ್ಲ. ಬಹಳಷ್ಟು ಸಂಘಟನೆಗಳು  ನವೆಂಬರ್ 2 ರಂದೇ ಪಥ ಸಂಚಲನಕ್ಕೆ ಮತ್ತು ಪ್ರತಿಭಟನೆಗೆ ಅರ್ಜಿ ಸಲ್ಲಿಸಿವೆ. ಎಲ್ಲ ಸಂಘಟನೆಗಳನ್ನ ಕರೆದು ಜಿಲ್ಲಾಡಳಿತ ಶಾಂತಿಸಭೆ ನಡೆಸಿದೆ.  ರಾಜ್ಯದಲ್ಲಿ  ಎಲ್ಲಿಯೂ ಸಮಸ್ಯೆ ಆಗಿಲ್ಲ, ಆದರೆ ಕಲಬುರಗಿಯಲ್ಲಿ ಸಮಸ್ಯೆ ಆಗಿದೆ. ಬಂದೋಬಸ್ತ್‌ಗಾಗಿ ಎರಡು ವಾರಗಳ ಕಾಲ ಸಮಯಾವಕಾಶ ನೀಡಬೇಕೆಂದು ಸರ್ಕಾರದ ಪರ ವಕೀಲರು ಹೈಕೋರ್ಟ್​ಗೆ ಮನವಿ ಮಾಡಿಕೊಂಡರು. ಯಾವಾಗ ಅನುಮತಿ ಮಾಡಿಕೊಡುತ್ತೀರಿ? ಎಂದು ಪೀಠ ಪ್ರಶ್ನೆ ಮಾಡಿತು. ಹತ್ತು ದಿನ ಅಥವಾ ಎರಡು ವಾರದ ನಂತರ ಅರ್ಜಿ ವಿಚಾರಣೆ ನಡೆಸಿ. ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಎಜಿ ಹೇಳಿದ್ರು. ಎಲ್ಲರಿಗೂ ಸರ್ಕಾರ ಅನುಕೂಲ ಮಾಡಿಕೊಡಬೇಕು. ಎಲ್ಲರಿಗೂ ಗೆಲುವು ಧಕ್ಕುವಂತಾಗಬೇಕು ಎಂದು ಪೀಠ ಹೇಳಿತು.</p>
]]></content:encoded>
					
		
		
			</item>
		<item>
		<title>ಗುಮ್ಮಡಿ ನರಸಯ್ಯ ಬಯೋಪಿಕ್‌ನಲ್ಲಿ ಶಿವಣ್ಣ – ಫಸ್ಟ್‌ ಲುಕ್‌ ಬಿಡುಗಡೆ</title>
		<link>https://peepalmedia.com/shivanna-in-gummadi-narasaiah-biopic-first-look-released/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Wed, 22 Oct 2025 18:21:05 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68174</guid>

					<description><![CDATA[ಬೆಂಗಳೂರು: ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ (Century story) ಶಿವರಾಜ್ ಕುಮಾರ್ (Shivaraj kumar) ಈಗಾಗಲೇ ನೂರಾರು ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಹಲವು ನಿಜ ಜೀವನದ ಪಾತ್ರಗಳ ಕತೆಗಳನ್ನು (Biopic) ತೆರೆಗೆ ತಂದಿದ್ದಾರೆ. ಇದೀಗ ಅದೇ ರೀತಿಯ ಮತ್ತೊಂದು ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗಿದೆ. ಹೌದು, ತೆಲುಗು ನೆಲದ ಪ್ರಬುದ್ಧ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸುತ್ತಿದ್ದು ಶಿವಣ್ಣನ ಅಭಿನಯದ ಮತ್ತೊಂದು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಕರುನಾಡ ಚಕ್ರವರ್ತಿ, ಸೆಂಚುರಿ ಸ್ಟಾರ್ (Century story) ಶಿವರಾಜ್ ಕುಮಾರ್ (Shivaraj kumar) ಈಗಾಗಲೇ ನೂರಾರು ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈ ಪೈಕಿ ಹಲವು ನಿಜ ಜೀವನದ ಪಾತ್ರಗಳ ಕತೆಗಳನ್ನು (Biopic) ತೆರೆಗೆ ತಂದಿದ್ದಾರೆ. ಇದೀಗ ಅದೇ ರೀತಿಯ ಮತ್ತೊಂದು ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದು ಸಿನಿಮಾ ಮೇಲಿನ ಕುತೂಹಲ ಹೆಚ್ಚಾಗಿದೆ.</p>



<p>ಹೌದು, ತೆಲುಗು ನೆಲದ ಪ್ರಬುದ್ಧ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸುತ್ತಿದ್ದು ಶಿವಣ್ಣನ ಅಭಿನಯದ ಮತ್ತೊಂದು ಮಜಲು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ಎಂದು ಪೋಸ್ಟರ್ ಹಂಚಿಕೊಂಡಿರುವ ಶಿವರಾಜ್ ಕುಮಾರ್ ಯುವಸೇನೆ ಸಂತಸ ವ್ಯಕ್ತಪಡಿಸಿದೆ. ಗುಮ್ಮಡಿ ನರಸಯ್ಯ ಅವರು ರಾಜಕಾರಣಿಯಾಗಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ನ್ಯೂ ಡೆಮಾಕ್ರಸಿ (CPI) ಪ್ರಮುಖ ಸದಸ್ಯರಾಗಿದ್ದರು. ಅವರು 1983–1994 ಮತ್ತು 1999–2009ರ ನಡುವೆ ಯೆಲ್ಲಾಂಡುವಿನ ತೆಲಂಗಾಣ ವಿಧಾನಸಭೆಯ ಸದಸ್ಯರಾಗಿದ್ದರು, ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಜನಪರ ವ್ಯಕ್ತಿಯಾಗಿ ಖ್ಯಾತಿಯನ್ನು ಗಳಿಸಿದ್ದಾರೆ. ಇವರ ಬಯೋಪಿಕ್ ಸಿನಿಮಾದಲ್ಲಿ ಶಿವಣ್ಣ ಬಣ್ಣ ಹಚ್ಚಲಿದ್ದಾರೆ.</p>
]]></content:encoded>
					
		
		
			</item>
		<item>
		<title>ಪಿಎಸ್‌ಐ ಸ್ಕ್ಯಾಂ ಬಿಜೆಪಿ ಕಾರ್ಯಕರ್ತೆ ದಿವ್ಯಾ ಮನೆಯಲ್ಲಿ ಸಿಕ್ಕಿಬಿದ್ದ ಜೂಜುಕೋರರು</title>
		<link>https://peepalmedia.com/psi-scam-gamblers-caught-at-bjp-worker-divyas-house/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Wed, 22 Oct 2025 18:05:43 +0000</pubDate>
				<category><![CDATA[ಕಲ್ಬುರ್ಗಿ]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68168</guid>

					<description><![CDATA[ಕಲಬುರಗಿ : ಪಿಎಸ್​ಐ ಹಗರಣದಲ್ಲಿ (PSI Scam) ಸಿಲುಕಿದ್ದ ಬಿಜೆಪಿ ಕಾರ್ಯಕರ್ತೆ (BJP) ದಿವ್ಯಾ ಹಾಗರಗಿ (Divya Hagaragi) ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. PSI ಪರೀಕ್ಷೆ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿದೆ. ಮನೆಯಲ್ಲಿ ಇಸ್ಪೀಟ್ ಆಡುತ್ತಿದ್ದಾಗ CCB ದಾಳಿ ಮಾಡಿ ಶಾಕ್ ಕೊಟ್ಟಿದೆ. ದಿವ್ಯಾ ಹಾಗರಗಿ ಮನೆಯಲ್ಲಿ ಗುಂಪು ಕಟ್ಟಿ ಜೂಜಾಟ ಆಡಲಾಗುತ್ತಿತ್ತು. ಸಿಸಿಬಿ ದಾಳಿ ವೇಳೆ 42 ಸಾವಿರ ನಗದು ಜಪ್ತಿ ಮಾಡಲಾಗಿದ್ದು, 6 ಜನರನ್ನು ವಶಕ್ಕೆ [&#8230;]]]></description>
										<content:encoded><![CDATA[
<p><strong>ಕಲಬುರಗಿ :</strong> ಪಿಎಸ್​ಐ ಹಗರಣದಲ್ಲಿ (PSI Scam) ಸಿಲುಕಿದ್ದ ಬಿಜೆಪಿ ಕಾರ್ಯಕರ್ತೆ (BJP) ದಿವ್ಯಾ ಹಾಗರಗಿ (Divya Hagaragi) ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. PSI ಪರೀಕ್ಷೆ ಅಕ್ರಮದ ಆರೋಪಿ ದಿವ್ಯಾ ಹಾಗರಗಿ ಮನೆ ಮೇಲೆ ಸಿಸಿಬಿ ದಾಳಿ ಮಾಡಿದೆ. ಮನೆಯಲ್ಲಿ ಇಸ್ಪೀಟ್ ಆಡುತ್ತಿದ್ದಾಗ CCB ದಾಳಿ ಮಾಡಿ ಶಾಕ್ ಕೊಟ್ಟಿದೆ. ದಿವ್ಯಾ ಹಾಗರಗಿ ಮನೆಯಲ್ಲಿ ಗುಂಪು ಕಟ್ಟಿ ಜೂಜಾಟ ಆಡಲಾಗುತ್ತಿತ್ತು. ಸಿಸಿಬಿ ದಾಳಿ ವೇಳೆ 42 ಸಾವಿರ ನಗದು ಜಪ್ತಿ ಮಾಡಲಾಗಿದ್ದು, 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರೋ ದಿವ್ಯ ಹಾಗರಗಿ ಮನೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ರು. ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜು ಲೆಂಗಟಿ, ರವಿ ಮಾನಕರ್, ಭಗವಾನ್, ಸಂಗಮೇಶ ನಾಗನಹಳ್ಳಿ, ಶಿವಶರಣಪ್ಪ, ಮಲ್ಲಿನಾಥ್ ಮಂಗಲಗಿ ಖಾಕಿ ಬಲೆಗೆ ಬಿದ್ದಿದ್ದಾರೆ.</p>



<p><strong>ದಿವ್ಯಾ ಹಾಗರಗಿ – ಯಾರೀಕೆ?</strong></p>



<p>2020ರಲ್ಲಿ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ಒಟ್ಟು 545 ಅಭ್ಯರ್ಥಿಗಳ ಪೈಕಿ ಕಲಬುರಗಿ ಜಿಲ್ಲೆಯಿಂದಲೇ 92 ಅಭ್ಯರ್ಥಿಗಳು ಆಯ್ಕೆಯಾಗಿದ್ರು. ಆದ್ರೆ ಇವರಲ್ಲಿ ಅಕ್ರಮವಾಗಿ ಪಾಸ್ ಆದವರು ಎಷ್ಟು ಮಂದಿ ಎಂಬುದರ ಕುರಿತಾಗಿಯೂ ತನಿಖೆ ನಡೆದಿತ್ತು.</p>



<p>ಕಲಬುರಗಿ ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದ ಬರೋಬ್ಬರಿ 11 ಅಭ್ಯರ್ಥಿಗಳು ಪಾಸ್ ಆಗಿದ್ದರು. ಇವರೆಲ್ಲರೂ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಇದೇ ದಿವ್ಯಾ ಹಾಗರಗಿ ಭಾಗಿಯಾಗಿದ್ದರು ಎಂದು ಹೇಳಲಾಗಿತ್ತು.</p>



<p><strong>16 ಪಿಎಸ್​ಐಗಳ ನೇಮಕಕ್ಕೆ ದಿವ್ಯಾ ಕಾರಣ?</strong></p>



<p>2016-17ರ ಬ್ಯಾಚ್ ನೇಮಕಾತಿಯಲ್ಲೂ ಅಕ್ರಮವೆಸಗಿರುವ ಆರೋಪ ಕೇಳಿ ಬಂದಿತ್ತು. ಇದೇ ದಿವ್ಯಾ ಹಾಗರಗಿ ಮತ್ತು R.D. ಪಾಟೀಲ್​ ಅವರು ಅಕ್ರಮವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಯಾದಗಿರಿಯ ಶ್ರೀನಿವಾಸ್ ಕಟ್ಟಿ ಅನ್ನೋರು 16 ಅಭ್ಯರ್ಥಿಗಳು ಹಣ ಕಟ್ಟಿ‌ ನೇಮಕವಾಗಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದ್ರು. ಆ 16 PSIಗಳ ಹೆಸರು, ಮೊಬೈಲ್ ಸಂಖ್ಯೆ ಸಮೇತ ದೂರಿನ ಪತ್ರ ಸಲ್ಲಿಸಿದ್ರು. 2016-17 ಪಿಎಸ್ಐ ಬ್ಯಾಚ್ ನಲ್ಲಿಯೂ ಬ್ಲೂಟೂತ್ ಡಿವೈಸ್ ಮತ್ತು ಪತ್ರಿಕೆ ಸೋರಿಕೆ ಮಾಡಿ ಅಕ್ರಮ ಮಾಡಿದ್ದಾರೆ. ಆಯ್ಕೆ ಡೀಲ್ ಗೆ 16 ಅಭ್ಯರ್ಥಿಗಳು ತಲಾ 40 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಸ್ವತಃ ನೊಂದ ಅಭ್ಯರ್ಥಿ ಎಂದು ಕರೆದುಕೊಂಡಿದ್ದ ಯಾದಗಿರಿಯ ಶ್ರೀನಿವಾಸ ಕಟ್ಟಿ ಸಿಎಂಗೆ ದೂರು ನೀಡಿದ್ದರು.<br>ಇಷ್ಟೆಲ್ಲಾ ಅಕ್ರಮ ಎಸಗಿದ ಆರೋಪ ಹೊತ್ತಿದ್ದ ದಿವ್ಯಾ ಹಾಗರಗಿ ಇದೀಗ ಇಸ್ಪೀಟ್ ಆಡಿಸ್ತಿದ್ರಂತೆ. ಅದರಲ್ಲೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷನೂ ಇಸ್ಪೀಟ್ ಆಡ್ತಾ ಇದ್ದ ಅನ್ನೋದು ದುರಂತ.</p>
]]></content:encoded>
					
		
		
			</item>
		<item>
		<title>ಮನಬಂದಂತೆ ವಿದ್ಯಾರ್ಥಿಗೆ ಥಳಿಸಿದ ವೀಡಿಯೋ ವೈರಲ್‌ &#8211; ರಾಕ್ಷಸ ಟೀಚರ್ ಅರೆಸ್ಟ್</title>
		<link>https://peepalmedia.com/video-of-teacher-beating-student-without-permission-goes-viral/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Tue, 21 Oct 2025 14:47:10 +0000</pubDate>
				<category><![CDATA[ಚಿತ್ರದುರ್ಗ]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68146</guid>

					<description><![CDATA[ಚಿತ್ರದುರ್ಗ : ವಿದ್ಯಾರ್ಥಿಯನ್ನು (Student) ಮನಸ್ಸೋ ಇಚ್ಛೆ ಥಳಿಸಿದ ಶಿಕ್ಷಕನನ್ನು (Teacher) ಇದೀಗ ಪೊಲೀಸರು ಬಂಧಿಸಿದ್ದಾರೆ (Arrest). ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಶಿಕ್ಷಕ ವಿದ್ಯಾರ್ಥಿಗೆ ಹಲ್ಲೆಗೈಯುವ ವೀಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದವರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಂಧಿತ ಶಿಕ್ಷಕನನ್ನು ವೀರೇಶ್ ಹಿರೇಮಠ್ ಎಂದು ಗುರುತಿಸಲಾಗಿದೆ. ಈತ 9 ವರ್ಷದ ವಿದ್ಯಾರ್ಥಿ ಮೇಲೆ ಮನಬಂದಂತೆ [&#8230;]]]></description>
										<content:encoded><![CDATA[
<p><strong>ಚಿತ್ರದುರ್ಗ : </strong>ವಿದ್ಯಾರ್ಥಿಯನ್ನು (Student) ಮನಸ್ಸೋ ಇಚ್ಛೆ ಥಳಿಸಿದ ಶಿಕ್ಷಕನನ್ನು (Teacher) ಇದೀಗ ಪೊಲೀಸರು ಬಂಧಿಸಿದ್ದಾರೆ (Arrest).</p>



<p>ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿತ್ತು. ಶಿಕ್ಷಕ ವಿದ್ಯಾರ್ಥಿಗೆ ಹಲ್ಲೆಗೈಯುವ ವೀಡಿಯೋ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದವರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಂಧಿತ ಶಿಕ್ಷಕನನ್ನು ವೀರೇಶ್ ಹಿರೇಮಠ್ ಎಂದು ಗುರುತಿಸಲಾಗಿದೆ. ಈತ 9 ವರ್ಷದ ವಿದ್ಯಾರ್ಥಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪೋಷಕರಿಗೆ ಫೋನ್ ಮಾಡಿದ್ದ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯನ್ನು ಶಿಕ್ಷಕ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.</p>



<p>ಮೂರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯನ್ನು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದನು. ತಪ್ಪಾಯಿತು ಬಿಟ್ಟು ಬಿಡಿ ಎಂದು ಕೈ ಮುಗಿದರೂ ಕೂಡ ಬಿಡದ ಶಿಕ್ಷಕ ಕಾಲಿನಿಂದ ಒದ್ದು ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ. ನಾಯಕನ ಹಟ್ಟಿ ಗುರು ತಿಪ್ಪೇರುದ್ರ ಸ್ವಾಮಿ ದೇವಾಲಯದ ಸುಪರ್ಧಿಯ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವ ವಿರುದ್ಧ ವಿದ್ಯಾರ್ಥಿಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.ಸದ್ಯ ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ದೃಶ್ಯ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲಾಗಿದ್ದು, ವಿದ್ಯಾರ್ಥಿಯ ಮೇಲಿನ ಹಲ್ಲೆಗೆ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿದ್ದು, ಮುಖ್ಯ ಶಿಕ್ಷಕ ವೀರೇಶ್ ಹಿರೇಮರ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ. ಈ ಸಂಬಂಧ ಶಿಕ್ಷಕನ ವಿರುದ್ಧ ಮಠದ ಇಓ ಗಂಗಾಧರಪ್ಪ ನೀಡಿದ ದೂರು ನೀಡಿದ್ದರು. ಈ ಹಿನ್ನೆಲೆ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದು, ಈ ಸಂಬಂಧ ವಿರೇಶ್ ಹಿರೇಮಠ್ ಬಂಧಿಸಲಾಗಿದೆ.ಮೂಲಗಳ ಪ್ರಕಾರ, ಇದು ಒಂದು ವರ್ಷದ ಹಿಂದಿನ ವಿಡಿಯೋ ಎನ್ನಲಾಗಿದ್ದು, ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸಂಸ್ಕೃತ ಶಿಕ್ಷಕನ ಕ್ರೌರ್ಯಕ್ಕೆ ಬೇಸತ್ತು‌ ವಿದ್ಯಾರ್ಥಿ ಕಳೆದ ವರ್ಷವೇ ಶಾಲೆ ಬಿಟ್ಟಿದ್ದಾನೆ. ಟಿಸಿ ಪಡೆದು ತೆರಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.</p>



<p><strong>ಬಾಲಕನಿಗೆ ಮೈತುಂಬಾ ಬಾಸುಂಡೆ ಬರುವಂತೆ ಹಲ್ಲೆ: </strong>ಬೆಂಗಳೂರಿನ ಸುಂಕದಕಟ್ಟೆಯ ಖಾಸಗಿ ಶಾಲೆಯೊಂದಲ್ಲಿ 9 ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಶಿಕ್ಷಕರ ವಿರುದ್ದ ಪೋಷಕರು ಆಕ್ರೋಶ ಹಾಕಿದ್ದಾರೆ. ಎರಡು ದಿನ ಸ್ಕೂಲ್ ಗೆ ಬಂದಿಲ್ಲ ಎಂಬ ಕಾರಣಕ್ಕೆ ಪಿವಿಸಿ ಪೈಪ್ ನಿಂದ ವಿದ್ಯಾರ್ಥಿಯ ಪ್ರಿನ್ಸಿಪಾಲ್ ಹಲ್ಲೆ ನಡೆಸಿದ್ದು, ಕೂಲ್ ನ ಡಾರ್ಕ್ ರೂಂ ನಲ್ಲಿಟ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ತಿಂಗಳ 14 ರಂದು ಈ ಘಟನೆ ನಡೆದಿದ್ದು, ಎರಡು ದಿನ ರಜೆ ಹಾಕಿದ್ದಕ್ಕೆ ಬಾಲಕನಿಗೆ ಬಾಸುಂಡೆ ಬರುವಂತೆ ಪ್ರಿನ್ಸಿಪಾಲ್ ಮತ್ತು ಟೀಚರ್ ಹೊಡೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಹಾಸನಾಂಬ ಉತ್ಸವ : 23 ಲಕ್ಷಕ್ಕೂ ಹೆಚ್ಚು ಭಕ್ತರು 20 ಕೋಟಿ ಆದಾಯ</title>
		<link>https://peepalmedia.com/hassanamba-festival-over-23-lakh-devotees-20-crores-in-revenue/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Tue, 21 Oct 2025 14:18:03 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಹಾಸನ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68130</guid>

					<description><![CDATA[ಹಾಸನ: ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ. ಇದುವರೆಗೆ 23 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ₹1000 ಹಾಗೂ ₹300 ರೂ. ವಿಶೇಷ ಟಿಕೆಟ್‌ಗಳು ಮತ್ತು ಲಾಡು ಪ್ರಸಾದ ಮಾರಾಟದ ಮೂಲಕ ಸುಮಾರು ₹20 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.ಇಂದು ಬೆಳಿಗ್ಗೆಯಿಂದ ಭಕ್ತರ ಸಂಖ್ಯೆ ತೀರಾ ಕಡಿಮೆ ಆಗಿದ್ದು, ಇಲ್ಲಿಯವರೆಗೂ 68 ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದರು.ಭಕ್ತರ ಅತಿಯಾದ [&#8230;]]]></description>
										<content:encoded><![CDATA[
<p><strong>ಹಾಸನ</strong>: ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.</p>



<p>ಇದುವರೆಗೆ 23 ಲಕ್ಷಕ್ಕೂ ಹೆಚ್ಚು ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ₹1000 ಹಾಗೂ ₹300 ರೂ. ವಿಶೇಷ ಟಿಕೆಟ್‌ಗಳು ಮತ್ತು ಲಾಡು ಪ್ರಸಾದ ಮಾರಾಟದ ಮೂಲಕ ಸುಮಾರು ₹20 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.ಇಂದು ಬೆಳಿಗ್ಗೆಯಿಂದ ಭಕ್ತರ ಸಂಖ್ಯೆ ತೀರಾ ಕಡಿಮೆ ಆಗಿದ್ದು, ಇಲ್ಲಿಯವರೆಗೂ 68 ಸಾವಿರಕ್ಕೂ ಹೆಚ್ಚು ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದರು.ಭಕ್ತರ ಅತಿಯಾದ ಸಂಖ್ಯೆ ಹಿನ್ನೆಲೆಯಲ್ಲಿ ನಿನ್ನೆ ಪ್ರೋಟೋಕಾಲ್ ಬಂದ್ ಮಾಡಲಾಗಿತ್ತು ಎಂಬುದನ್ನು ಲತಾ ಕುಮಾರಿ ಸ್ಪಷ್ಟಪಡಿಸಿದರು.ಇಂದು ಮತ್ತು ನಾಳೆ ಭಕ್ತರ ಸಂಖ್ಯೆ ಕಡಿಮೆ ಇರುವುದರಿಂದ ಪ್ರೋಟೋಕಾಲ್ ವ್ಯವಸ್ಥೆ ಮುಂದುವರಿಸಿದ್ದರೆ ಭಕ್ತರಿಗೆ ತೊಂದರೆ ಆಗುತ್ತಿರಲಿಲ್ಲ ಎಂದರು.</p>



<p>ಪ್ರೋಟೋಕಾಲ್ ಮುಗಿದ ಮೇಲೂ ಕೆಲವು ಗಣ್ಯರು ಹಾಗೂ ಸ್ವಾಮೀಜಿಗಳು ಪಾಸ್ ಅಥವಾ ₹1000 ರೂ. ಟಿಕೆಟ್ ಮೂಲಕ ದರ್ಶನ ಪಡೆಯುತ್ತಿದ್ದಾರೆ.ಇಂದು ರಾತ್ರಿ 9 ಗಂಟೆಗೆ ಗರ್ಭಗುಡಿ ಬಾಗಿಲು ಪೂಜೆಗಾಗಿ ಮುಚ್ಚಲಾಗುತ್ತದೆ. ನಾಳೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಾರ್ವಜನಿಕ ದರ್ಶನ ಇರುತ್ತದೆ. ನಂತರ, ರಾತ್ರಿ 7ರಿಂದ ಮಧ್ಯರಾತ್ರಿ 12ರವರೆಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.ನಾಳೆ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ, ಕೆಂಡೋತ್ಸವ ಹಾಗೂ ರಥೋತ್ಸವ ನಡೆಯಲಿದೆ. ನಾಳೆ ರಾತ್ರಿ 12ರಿಂದ ಗುರುವಾರ ಬೆಳಿಗ್ಗೆ 5ರವರೆಗೆ ಸಾರ್ವಜನಿಕರಿಗೆ ಹಾಗೂ ದೇವಸ್ಥಾನದ ಸುತ್ತಮುತ್ತಲಿನವರಿಗೆ ದರ್ಶನ ವ್ಯವಸ್ಥೆ ಇರುತ್ತದೆ.ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಸಾರ್ವಜನಿಕ ದರ್ಶನ ಇರುವುದಿಲ್ಲ, ನಂತರ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.</p>
]]></content:encoded>
					
		
		
			</item>
		<item>
		<title>ಮನೆಯ ರೀತಿಯಲ್ಲಿ ಸ್ಥಳೀಯ ಶಾಸಕ ಕೆಲಸ ಮಾಡಬೇಕು ಜೆಡಿಎಸ್ ಪ್ರತಿಭಟನೆಗೆ ನೈತಿಕತೆ ಇಲ್ಲ- ಪ್ರೀತಂ ಗೌಡ ಕಿಡಿ</title>
		<link>https://peepalmedia.com/local-mla-should-work-like-a-family-jds-protest/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sun, 19 Oct 2025 18:46:38 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಹಾಸನ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68084</guid>

					<description><![CDATA[ಹಾಸನ : ಹಾಸನಾಂಬ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ. ನಗರದಲ್ಲಿ ಖಾಗೀ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬ ಉತ್ಸವದ ಪೂರ್ವಭಾವಿ ಸಭೆಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಅವರು ಭಾಗವಹಿಸದೇ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಸ್ಥಳೀಯ ಶಾಸಕನಾಗಿ ಉತ್ಸವವನ್ನು [&#8230;]]]></description>
										<content:encoded><![CDATA[
<p><strong>ಹಾಸನ : </strong>ಹಾಸನಾಂಬ ಉತ್ಸವದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪದ ಮೇಲೆ ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅವರು ತೀವ್ರ ಟೀಕೆ ಮಾಡಿದ್ದಾರೆ.</p>



<p>ನಗರದಲ್ಲಿ ಖಾಗೀ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬ ಉತ್ಸವದ ಪೂರ್ವಭಾವಿ ಸಭೆಗಳಿಗೆ ಶಾಸಕ ಸ್ವರೂಪ್ ಪ್ರಕಾಶ್ ಅವರು ಭಾಗವಹಿಸದೇ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಸ್ಥಳೀಯ ಶಾಸಕನಾಗಿ ಉತ್ಸವವನ್ನು ತಮ್ಮ ವೈಯಕ್ತಿಕ ಕಾರ್ಯಕ್ರಮದಂತೆ ನೋಡಿಕೊಳ್ಳಬೇಕಾದವರು ವಿದೇಶಿ ಪ್ರವಾಸ ಮುಗಿಸಿ ಉತ್ಸವದ ಹಿಂದಿನ ದಿನ ಮಾತ್ರ ಹಾಜರಾದರು. ಈಗ ತಮ್ಮನ್ನ ಕಡೆಗಣಿಸಲಾಗಿದೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದರು. ಉತ್ಸವದ ವೇಳೆ ಬೇಕಾದಷ್ಟು ಪಾಸ್‌ಗಳನ್ನು ಪಡೆದು ತಮ್ಮ ಕಾರ್ಯಕರ್ತರಿಗೆ ಹಂಚಿದಾಗ ಜಿಲ್ಲಾಡಳಿತ ಸರಿಯಾಗಿತ್ತು. ಈಗ ಮಾತ್ರ ಅದೇ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸುವುದು ಯಾವ ನೈತಿಕತೆಯಾಗಿದೆ? ಜನರ ಮುಂದೆ ಶಾಸಕರು ಈ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತ ಅಪಮಾನ ಮಾಡಿಲ್ಲ. </p>



<p>ನಿಜವಾದ ಅಪಮಾನ ಶಾಸಕರಿಂದಲೇ ಆಗಿದೆ. ಸ್ಥಳೀಯ ಶಾಸಕನಾಗಿ ಅವರು ಮೊದಲೇ ಆಗಮಿಸಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಅತಿಥಿಯಂತೆ ಬಂದು ಪಾಲ್ಗೊಂಡರು. ಇದು ಅವರ ಕರ್ತವ್ಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇನ್ನು ಹಾಸನಾಂಬೆ ದೇವಿ ಬಾಗಿಲು ತೆಗೆಯುವ ಮೊದಲು ಸಭೆ ನಡೆಸಿದಾಗ ಪಾಲ್ಗೊಳ್ಳಬೇಕಾಗಿತ್ತು. ಆದರೇ ವಿದೇಶ ಪ್ರವಾಸ ಮಾಡಿ ಗೆಸ್ಟ್ ರೀತಿಯಲ್ಲಿ ಬಾಗಿಲು ತೆಗೆಯುವ ದಿವಸದಂದು ಬಂದು ಹಾಸನಾಂಬ ಉತ್ಸವದಲ್ಲಿ ಪಾಲ್ಗೊಂಡು ನಂತರ ೧೦ ದಿನವಾದ ಮೇಲೆ ಭಾನುವಾರದಂದು ಬಂದು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ, ರಾತ್ರೋರಾತ್ರಿ ಮನಸ್ಸಿಗೆ ಅನ್ನಿಸಿರುವುದಕ್ಕೆ ಹಾಸನದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ! ಜಿಲ್ಲಾಧಿಕಾರಿಗಳನ್ನ ಮತ್ತು ಉಸ್ತುವಾರಿ ಸಚಿವರನ್ನು ದೂರುವುದು ಸುಲಭ, ಇವರನ್ನು ಆಗಾಗ್ಗ ಬದಲಾವಣೆ ಬೇರೆಡೆಗೆ ಆಗುತ್ತಿರುತ್ತಾರೆ. ಆದರೇ ಐದು ವರ್ಷಕ್ಕೆ ಒಬ್ಬ ಶಾಸಕನನ್ನು ಆಯ್ಕೆ ಮಾಡುತ್ತಾರೆ. ಗೌರವವನ್ನು ಕೇಳಿ ಪಡೆಯುವಂತದಲ್ಲ, ದುಡಿಮೆ ಮಾಡಿ ಪಡೆಯಬೇಕು. ಹಾಸನಾಂಬೆ ಬಗ್ಗೆ ಮಾಹಿತಿ ಪಡೆಯಲು ಎಷ್ಟು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನ ಭೇಟಿ ಮಾಡಿದ್ದೀರಿ!, ಏನು ಮನವಿ ಮಾಡಿದ್ದೀರಿ, ಡಿಸಿ ಜೊತೆ ಚರ್ಚಿಸಿದ್ದೀರಿ ಹೇಳಿ ಮೊದಲು. ಆಮೇಲೆ ಸ್ಪಂದಿಸಿಲ್ಲ ಗೌರವ ಕೊಟ್ಟಿಲ್ಲ ಎಂದರೇ ಪಕ್ಷತೀತವಾಗಿ ಇಡೀ ಹಾಸನದ ಜನ ನಿಮ್ಮ ಜೊತೆ ನಿಲ್ಲುತ್ತಾರೆ. ನಿಮ್ಮ ಕೆಲಸ ಆಗಬೇಕು ಎಂದಾಗ ಸರಕಾರದ ಎಲ್ಲಾ ಮಂತ್ರಿಗಳ ಬಳಿ ಹೋಗುತ್ತೀರಿ, ಸಂಜೀವಿನಿ ಬ್ಯಾಂಕಿನ, ಆಸ್ಪತ್ರೆಯ, ಸೌಹಾರ್ಧ ಬ್ಯಾಂಕಿನ ಸಮಸ್ಯೆ ಆದರೇ ಉಸ್ತುವಾರಿ ಸಚಿವರಗಳ ಮನೆಗೆ ಹೋಗಿ ನಿಮ್ಮ ವಯಕ್ತಿಕ ಕೆಲಸ ಎಲ್ಲಾ ಮಾಡಿಕೊಳ್ಳುತ್ತೀರಿ, ಹಾಸನಾಂಬ ಜಾತ್ರಾ ಮಹೋತ್ಸವ ಎಂದರೇ ಎಲ್ಲಾ ಮಾಡುತ್ತಾರೆ ನಾನು ಹೋಗಿ ಉದ್ಘಾಟನೆಗೆ ಮುಂದೆ ನಿಲ್ಲುವುದು ಬೇಜವಬ್ಧಾರಿತನ ತೋರಿಸುತ್ತದೆ. ಈಗಾಗಲೇ ನಿಮಗೆ ಮೂರನೇ ಜಾತ್ರಾ ಮಹೋತ್ಸವ. ನೀವು ಜವಬ್ಧಾರಿ ಅರಿಯದೇ ಈಗ ಗೆಸ್ಟ್ ರೀತಿ ನಡೆದುಕೊಂಡು ಗೌರವ ಕೊಡುತ್ತಿಲ್ಲ ಎಂದರೇ ಹಿರಿಯ ಸಚಿವರು ಅವರು ಬೆಳಿಗ್ಗೆ ೪ ಗಂಟೆಗೆ ಬಂದು ಹೋಗುತ್ತಿದ್ದಾರೆ. ನಮಗೆ ಕಾಂಗ್ರೆಸ್ ಎಂದರೇ ವಿರೋಧ ಪಕ್ಷ ಆದರೇ ಒಳ್ಳೆ ಕೆಲಸಕ್ಕೆ ನಾವು ಹೇಳುತ್ತಿದ್ದೇವೆ. ದರ್ಶನಕ್ಕೆ ಉತ್ತಮವಾಗಿ ಅವಕಾಶ ಮಾಡಿಕೊಡಲಾಗಿದ್ದರೂ ಆದರೇ ಇನ್ನು ಕೂಡ ದೇವಾಲಯದಲ್ಲಿ ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.ಪ್ರೀತಂ ಗೌಡ ಅವರ ಈ ತೀವ್ರ ಹೇಳಿಕೆಯಿಂದ ಹಾಸನ ರಾಜಕೀಯದಲ್ಲಿ ಹೊಸ ಚರ್ಚೆ ಆರಂಭವಾಗಿದ್ದು, ಹಾಸನಾಂಬ ಉತ್ಸವದ ಹಿನ್ನೆಲೆ ರಾಜಕೀಯ ಪೈಪೋಟಿ ಮತ್ತಷ್ಟು ತೀವ್ರಗೊಂಡಿದೆ.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.</p>



<p></p>
]]></content:encoded>
					
		
		
			</item>
		<item>
		<title>ಹಾಸನಾಂಬ ಜಾತ್ರೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ, ಗೋಲ್ಡನ್ ಪಾಸ್ ಅವ್ಯವಹಾರ  -ಜಿ. ದೇವರಾಜೇಗೌಡ</title>
		<link>https://peepalmedia.com/protocol-violation-at-hassanamba-fair-golden-pass-irregularities/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sun, 19 Oct 2025 18:35:50 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಹಾಸನ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68078</guid>

					<description><![CDATA[ಹಾಸನ : ಹಾಸನಾಂಬ ಉತ್ಸವದ ವೇಳೆ ನಡೆದಿರುವ ಪ್ರೋಟೋಕಾಲ್ ಉಲ್ಲಂಘನೆ ಹಾಗೂ ಗೋಲ್ಡನ್ ಪಾಸ್ ಅವ್ಯವಹಾರದ ವಿರುದ್ಧ ತಾವು ಕಾನೂನು ಹೋರಾಟ ಆರಂಭಿಸುವುದಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ಸವದ ಸಮಯದಲ್ಲಿ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಪ್ರಥಮ್ ಗೆ ಜಿಲ್ಲಾಡಳಿತದಿಂದ ಗೌರವ ಕೊಡುತ್ತಾರೆ. ಆದರೇ ನಿನ್ನೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೇವಾಲಯಕ್ಕೆ ಬಂದಾಗ ಅವರಿಗೆ ಅಪಮಾನಕಾರಿ ವರ್ತನೆ ನಡೆದಿದೆ. ಜಿಲ್ಲಾಡಳಿತದಿಂದ ಸ್ಪಷ್ಟವಾದ ಪ್ರೋಟೋಕಾಲ್ ಲೋಪಗಳು ನಡೆದಿವೆ. ಇದರ [&#8230;]]]></description>
										<content:encoded><![CDATA[
<p><strong>ಹಾಸನ : </strong>ಹಾಸನಾಂಬ ಉತ್ಸವದ ವೇಳೆ ನಡೆದಿರುವ ಪ್ರೋಟೋಕಾಲ್ ಉಲ್ಲಂಘನೆ ಹಾಗೂ ಗೋಲ್ಡನ್ ಪಾಸ್ ಅವ್ಯವಹಾರದ ವಿರುದ್ಧ ತಾವು ಕಾನೂನು ಹೋರಾಟ ಆರಂಭಿಸುವುದಾಗಿ ಬಿಜೆಪಿ ಮುಖಂಡ ದೇವರಾಜೇಗೌಡ ಎಚ್ಚರಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ಸವದ ಸಮಯದಲ್ಲಿ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಪ್ರಥಮ್ ಗೆ ಜಿಲ್ಲಾಡಳಿತದಿಂದ ಗೌರವ ಕೊಡುತ್ತಾರೆ. ಆದರೇ ನಿನ್ನೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೇವಾಲಯಕ್ಕೆ ಬಂದಾಗ ಅವರಿಗೆ ಅಪಮಾನಕಾರಿ ವರ್ತನೆ ನಡೆದಿದೆ. ಜಿಲ್ಲಾಡಳಿತದಿಂದ ಸ್ಪಷ್ಟವಾದ ಪ್ರೋಟೋಕಾಲ್ ಲೋಪಗಳು ನಡೆದಿವೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ ಎಂದರು. ಗೋಲ್ಡನ್ ಪಾಸ್ ಹಂಚಿಕೆ ವಿಚಾರದಲ್ಲಿಯೂ ಅಧಿಕಾರಿಗಳು ತಮ್ಮ ಇಷ್ಟದ ಜನರಿಗೆ ಪಾಸ್‌ಗಳನ್ನು ನೀಡಿರುವ ಕುರಿತು ಕೆಳಮಟ್ಟದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ದೇವರಾಜೇಗೌಡ ಆರೋಪಿಸಿದರು. ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಮಗೆ ಬೇಕಾದವರಿಗೆ ಪಾಸ್ ನೀಡಲು ಸೂಚನೆ ನೀಡಿದ್ದಾರೆ ಎಂದು ದೂರಿದರು. ಇದೇ ವೇಳೆ ಅಧಿಕಾರಿಗಳು ಹಾಸನಾಂಬ ಉತ್ಸವವನ್ನು ವೈಯಕ್ತಿಕ ಪ್ರಚಾರದ ವೇದಿಕೆಯಾಗಿ ಬಳಸುತ್ತಿರುವುದಾಗಿ ದೇವರಾಜೇಗೌಡ ಟೀಕಿಸಿದರು. “ಮಹತ್ವದ ಮಾಧ್ಯಮಗಳನ್ನು ಕಡೆಗಣಿಸಿ ತಮ್ಮದೇ ಸೋಶಿಯಲ್ ಮೀಡಿಯಾದಲ್ಲಿ ವೈಭವದ ಪ್ರಚಾರ ನಡೆಸುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುತ್ತಾ ಅನಗತ್ಯ ಖರ್ಚುಗಳನ್ನು ಮಾಡಿದ್ದಾರೆ,” ಎಂದರು. ಸರ್ಕಾರದ ಹಣ ಹಾಗೂ ದೇವಾಲಯದ ನಿಧಿಯ ದುರುಪಯೋಗ, ಪ್ರೋಟೋಕಾಲ್ ಉಲ್ಲಂಘನೆ, ರಾಜಕೀಯ ಪಕ್ಷದ ನಾಯಕರ ಕಡೆಗಣನೆ ಇವೆಲ್ಲಕ್ಕೂ ಕಾನೂನಿನ ಹಾದಿಯಲ್ಲಿ ಉತ್ತರ ನೀಡುವೆ ಎಂದು ಎಚ್ಚರಿಕೆ ನೀಡಿದರು. ಇನ್ನು ಸಾಲು ಮರದ ತಿಮ್ಮಕ್ಕ ಅವರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ದೇವಾಲಯಕ್ಕೆ ಬಂದಾಗ ಎರಡು ಗಂಟೆಗಳ ಕಾಲ ಹೊರಗೆ ನಿಲ್ಲಿಸಿದ್ದಾರೆ. ಕೆಳ ಮಟ್ಟದ ರಾಜಕೀಯ ಮಾಡಿದ್ದು, ಕೃಷ್ಣಬೈರೇಗೌಡರು ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಿರುವುದನ್ನು ಹೊಡೆದು ಹಾಕಿದ್ದೀರಿ! ನೀವು ಪ್ರಚಾರಕ್ಕಾಗಿ ಮಾಡಿದ ದುರಂತ ಭಕ್ತಾಧಿಗಳು ೮ ರಿಂದ ೧೦ ಕಿ.ಮಿ ನಿಲ್ಲಬೇಕಾಯಿತು ಎಂದು ಬೇಸರವ್ಯಕ್ತಪಡಿಸಿದರು.</p>
]]></content:encoded>
					
		
		
			</item>
		<item>
		<title>ನ.13 ರಿಂದ 15ರ ವರೆಗೂ ಸಿಐಟಿಯುನ 16ನೇ ರಾಜ್ಯ ಸಮ್ಮೇಳನ &#8211; ಮೀನಾಕ್ಷಿ ಸುಂದರಂ</title>
		<link>https://peepalmedia.com/citus-16th-state-conference-from-november-13-to-15-meenakshi/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sun, 19 Oct 2025 10:36:20 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68068</guid>

					<description><![CDATA[ಹಾಸನ : ನಗರದ ಅಂಬೇಡ್ಕರ್ ಭವನದಲ್ಲಿ ನವೆಂಬರ್ 13 ರಿಂದ 15ರ ವರೆಗೆ ಸಿಐಟಿಯುವಿನ 16ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಾಪಾಡುವ ರೀತಿಯ ನೀತಿಗಳನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಕಾರ್ಮಿಕರ ಪ್ರಮಾಣ ಹೆಚ್ಚಳವಾಗುತ್ತಿದೆ. ಹೊರಗುತ್ತಿಗೆ ನೌಕರರು ಖಾಯಂ ಉದ್ಯೋಗವನ್ನು ಕೇಳುವ ಹಕ್ಕೇ ಇಲ್ಲ ಎಂಬ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರಗಳು [&#8230;]]]></description>
										<content:encoded><![CDATA[
<p><strong>ಹಾಸನ :</strong> ನಗರದ ಅಂಬೇಡ್ಕರ್ ಭವನದಲ್ಲಿ ನವೆಂಬರ್ 13 ರಿಂದ 15ರ ವರೆಗೆ ಸಿಐಟಿಯುವಿನ 16ನೇ ರಾಜ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ತಿಳಿಸಿದರು.</p>



<pre class="wp-block-code"><code>  ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಳೆದ 10 ವರ್ಷಗಳ ಅವಧಿಯಲ್ಲಿ ದೊಡ್ಡಪ್ರಮಾಣದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀಚಿನ ಬೆಳವಣಿಗೆಗಳಿಂದ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳುವ ಎಲ್ಲಾ ಸಾಧ್ಯತೆಗಳು ಎದುರಾಗುತ್ತಿವೆ. ಭಾರತ ಯಾರ ಜೊತೆಗೆ ವ್ಯಾಪಾರ ಮಾಡಬೇಕು ಎಂಬುದನ್ನು ಅಮೇರಿಕ ತೀರ್ಮಾನ ಮಾಡುವ ರಾಜಕೀಯ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರ ಪರಿಣಾಮವೇನೆಂದರೆ ಅಮೇರಿಕಾದ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಯಾವುದೇ ಸುಂಕವಿಲ್ಲದೆ ಕಳುಹಿಸಲು ಅಮೇರಿಕಾ ನಿರ್ಧರಿಸಿದೆ. ಇದರಿಂದಾಗಿ ಭಾರತದಲ್ಲಿ ಹೈನುಗಾರಿಕೆ ಸೇರಿದಂತೆ ಇತರೆ ಕೃಷಿ ಉತೊನ್ನಗಳ ಮೇಲೆ ತೀರ್ವತರವಾದ ದಾಳಿ ಆರಂಭವಾಗಿ, ಇವುಗಳ ಮೇಲೆ ಅವಲಂಭಿತವಾಗಿರುವ ಗ್ರಾಮೀಣ ಉದ್ಯೋಗ ಕುಸಿದು, ನಿರುದ್ಯೋಗ ಪ್ರಮಾಣ ತೀರ್ವವಾಗಿ ಹೆಚ್ಚಳವಾಗುತ್ತಿದೆ ಎಂದರು. ಈಗಾಗಲೇ ಭಾರತದ ಕೃಷಿ ಬಿಕ್ಕಟ್ಟಿಗೆ ಸಿಲುಕಿದ್ದು ಅವೈಜ್ಞಾನಿಕವಾದ ಭೂಸ್ವಾಧೀನದಿಂದಾಗಿ ಕೃಷಿಯನ್ನ ನಂಬಿರುವ ರೈತರು ಮತ್ತು ಕೃಷಿ ಕೂಲಿಕಾರರನ್ನು ಗ್ರಾಮೀಣ ಪ್ರದೇಶದಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ನಗರ ಪ್ರದೇಶಗಳಲ್ಲಿಯೂ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಸೃಷಿಯಾಗುತ್ತಿರುವ ಉದ್ಯೋಗಗಳನ್ನೂ ಉದ್ಯೋಗ ಎಂದು ಕರೆಯದಂತಾಗಿದೆ. ಕಳೆದ 10 ವರ್ಷಗಳಲ್ಲಿ ಖಾಯಂ ಉದ್ಯೋಗಗಳೇ ಸೃಷ್ಠಿಯಾಗುತ್ತಿಲ್ಲ ಎಂಬುದನ್ನು ಸರ್ಕಾರಿ ಅಂಕಿಅಂಶಗಳೇ ಸಾಬೀತುಪಡಿಸುತ್ತಿವೆ. ಇದೇ ಸಂದರ್ಭಲ್ಲಿ ಕಾರ್ಪೋರೇಟ್‌ಗಳ ಆಸ್ತಿಯ ಪ್ರಮಾಣದಲ್ಲಿ ತೀರ್ವ ಏರಿಕೆ ಕಂಡುಬಂದಿದೆ. ಭಾರತದಲ್ಲಿ ಐದು ಕಂಪನಿಗಳ ಹಣಕಾಸೇತರ ಆಸ್ತಿಯಲ್ಲಿ ದೇಶದ ಜಿಡಿಪಿಯ ಶೇಖಡ 20 ರಷ್ಟಿದೆ. ದೇಶದ ಆಸ್ತಿ ಕೆಲವೇ ಕೆಲವು ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿ ಶೇಖರಣೆಯಾಗುತ್ತಿರುವಾಗ ದುಡಿಯುವ ಕಾರ್ಮಿಕ ವರ್ಗದ ವೇತನದಲ್ಲಿ ತೀರ್ವ ಕಡಿತವಾಗುತ್ತಿದೆ. ಇದರಿಂದ ದೇಶದಲ್ಲಿ ಬಡತನ ಹೆಚ್ಚಳವಾಗುತ್ತಿದ್ದು ನಿರುದ್ಯೋಗ ಪ್ರಮಾಣವೂ ತೀರ್ವವಾಗುತ್ತಿದೆ ಎಂದು ಹೇಳಿದರು.</code></pre>



<p>ಕರ್ನಾಟಕ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯವನ್ನು ಕಾಪಾಡುವ ರೀತಿಯ ನೀತಿಗಳನ್ನು ಜಾರಿಗೆ ತರಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಎಲ್ಲಾ ಇಲಾಖೆಗಳಲ್ಲೂ ಗುತ್ತಿಗೆ ಕಾರ್ಮಿಕರ ಪ್ರಮಾಣ ಹೆಚ್ಚಳವಾಗುತ್ತಿದೆ. ಹೊರಗುತ್ತಿಗೆ ನೌಕರರು ಖಾಯಂ ಉದ್ಯೋಗವನ್ನು ಕೇಳುವ ಹಕ್ಕೇ ಇಲ್ಲ ಎಂಬ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಸರ್ಕಾರಗಳು ಸಾರ್ವಜನಿಕ ವಿತರಣಾವ್ಯವಸ್ಥೆ, ಶಿಕ್ಷಣ, ಆರೋಗ್ಯದಂತಹ ಸಾರ್ವಜನಿಕ ಕ್ಷೇತ್ರಗಳಿಗೆ ಹಣವನ್ನು ತೊಡಗಿಸದೆ ಜನರ ಸಂಕಷ್ಟಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ದುಡಿಯುವ ಜನರ ಕೊಂಡುಕೊಳ್ಳುವ ಶಕ್ತಿ ಕಡಿಮೆಯಾಗುತ್ತಿರುವಾಗ ಕಾರ್ಪೊರೇಟ್ ಕಂಪನಿಗಳ ಲಾಭ ಹೆಚ್ಚಾಗುತ್ತಿದೆ. ಇದರ ಆರ್ಥಿಕ ನೀತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಸರ್ಕಾರಿ ಖನಿಜ ಸಂಪತ್ತನ್ನ ಖಾಸಗೀಕರಣ ಮಾಡುವುದು, ಸರ್ಕಾರಿ ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಿಸುತ್ತಿದೆ ಎಂದು ದೂರಿದರು. ಬಂಡವಾಳದಾರರಿಗೆ ರಿಯಾಯಿತಿಗಳನ್ನು ಸರ್ಕಾರ ನೇರವಾಗಿ ಘೋಷಿಸುತ್ತಿದೆ. ಆಸ್ತಿಯ ಪ್ರಮಾಣ ಹೆಚ್ಚಿರುವವರ ಮೇಲೆ ತೆರಿಗೆಯನ್ನು ಹೆಚ್ಚಳ ಮಾಡಬೇಕು. ಖಾಯಂ ಉದ್ಯೋಗಗಳ ಪ್ರಮಾಣವನ್ನು ಹೆಚ್ಚಳಮಾಡಬೇಕು, ಕನಿಷ್ಟವೇತನವನ್ನು ವೈಜ್ಞಾನಿಕವಾಗಿ ನಿಗದಿ ಮಾಡಲು ಸಾಧ್ಯವಾಗಬೇಕು. ಸುಪ್ರೀಂ ಕೋರ್ಟ್ನ ತೀರ್ಪಿನಂತೆ ಅಕುಶಲ ಕಾರ್ಮಿಕರಿಗೆ ಕನಿಷ್ಟ ೩೧ ಸಾವಿರ ವೇತನವನ್ನು ನಿಗದಿ ಮಾಡಬೇಕು. ಇಂತಹ ಜನಪರ ನೀತಿಗಳನ್ನು ಜಾರಿಗೆ ತಂದರೆ ಕೈಗಾರಿಕಾ ಅಭಿವೃದ್ಧಿ ಸಾರ್ವತ್ರಿಕವಾಗಿ ನಡೆಯುತ್ತದೆ. ಜನರು ಇಂತಹ ಸಂಕಷ್ಟಗಳನ್ನು ಎದುರಿಸುತ್ತಿರುವಾಗ ದುಡಿಯುವ ವರ್ಗದ ಐಕ್ಯತೆಯನ್ನು ಒಡೆಯಲು ಧರ್ಮದ ಹೆಸರಿನಲ್ಲಿ ಕೋಮುದ್ವೇಷವನ್ನು ಬಿತ್ತುವ ಕೆಲಸಗಳು ಹೆಚ್ಚಾಗುತ್ತಿವೆ. ಸಂವಿಧಾನದ ಆಶಯದಂತೆ ವೈಜ್ಞಾನಿಕ ಮನೋಭಾವವನ್ನು ಬೆಳಸಬೇಕಾಗಿದ್ದ ಸರ್ಕಾರಗಳು ಮೌಡ್ಯವನ್ನು ಬಿತ್ತುವ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಸರ್ಕಾರಿ ಯಂತ್ರಗಳನ್ನು ಬಳಸಲಾಗುತ್ತಿದೆ. ಇದು ಸಂವಿಧಾನಕ್ಕೆ ಮಾಡುವ ಅವಮಾನ. ಕೂಡಲೇ ಸರ್ಕಾರಗಳು ಎಲ್ಲಾ ಧಾರ್ಮಿಕ ಚಟುವಟಿಕೆಗಳಿಂದ ದೂರವಿರಬೇಕು. ಜನರ ಸಂಕಷ್ಟಗಳನ್ನು ಪರಿಹರಿಸಲು ಆರ್ಥಿಕವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಬಗೆಹರಿಸಲು ಬೇಕಾದ ನೀತಿಗಳನ್ನು ಜಾರಿಗೊಳಿಸಬೇಕಾಗದ ಸರ್ಕಾರಗಳು ಜನರನ್ನು ದಿಕ್ಕುತಪ್ಪಿಸಲು ಜನರಲ್ಲಿ ಮೌಡ್ಯವನ್ನು ಬಿತ್ತಿ ದೇವಸ್ಥಾನಗಳ ಕಡೆ ಹೋಗುವಂತೆ ಪ್ರಚೋದಿಸುತ್ತಿವೆ. ಎಲ್ಲಿ ಸಂಕಷ್ಟ ಹೆಚ್ಚಾಗುತ್ತದೆಯೋ ಅಲ್ಲಿ ದೇವಸ್ಥಾನಗಳಿಗೆ ಜನ ಹೋಗುವುದು ಹೆಚ್ಚಾಗುತ್ತದೆ. ಇದನ್ನು ಸರ್ಕಾರಗಳು ಉಪಯೋಗ ಮಾಡಬಾರದು. ಭಕ್ತಿ ಮೌಡ್ಯವಾಗಬಾರದು, ಭಕ್ತಿ ಧರ್ಮ ದ್ವೇಶವಾಗಬಾರದು, ಭಕ್ತಿಯನ್ನ ರಾಜಕೀಯ ಲಾಭದ ಅಸ್ತ್ರವನ್ನಾಗಿ ಯಾವುದೇ ಸರ್ಕಾರಗಳು ಬಳಸಿಕೊಳ್ಳಬಾರದು ಎಂದರು.</p>



<p>ಬೆಂಗಳೂರು ಕೇಂದ್ರತ ಅವೈಜ್ಞಾನಿಕ ಅಭಿವೃದ್ಧಿಯ ಕಲ್ಪನೆಯನ್ನು ಬಿಟ್ಟು ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸೂಕ್ತ ಗಮನವನ್ನು ಕೊಡಲು ಸರ್ಕಾರ ಮುಂದಾಗಬೇಕು. ಬೆಂಗಳೂರಿನ ಸುತ್ತಮುತ್ತಲು ನಡೆಸುತ್ತಿರುವ ವ್ಯಾಪಕ ಭೂಸ್ವಾಧೀನ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಇಲ್ಲದಂತೆ ಮಾಡುತ್ತದೆ. ಕೈಗಾರಿಕೆಗಳನ್ನು ಸ್ಥಾಪಿಸಲು ಕೃಷಿ ಯೋಗ್ಯ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು. ಈ ಎಲ್ಲಾ ನೀತಿಗಳ ಕುರಿತು ೨೦೨೫ ನವೆಂಬರ್ ೧೩ ರಿಂದ ೧೫ ವರೆಗೆ ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಿಐಟಿಯುವಿನ ೧೬ನೇ ರಾಜ್ಯ ಸಮ್ಮೇಳನದಲ್ಲಿ ಸುಧೀರ್ಘವಾಗಿ ಚರ್ಚಿಸಲಾಗುವುದು. ಈ ಸಮ್ಮೇಳನವನ್ನು ಸಿಐಟಿಯುನ ಅಖಿಲ ಭಾರತ ಅಧ್ಯಕ್ಷರಾದ ಡಾ.ಹೇಮಲತಾರವರು ಉಧ್ಘಾಟಿಸಲಿದ್ದಾರೆ. ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್ ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಆಯ್ಕ ೪೫೦ ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಹಾಸನ ಜಿಲ್ಲಾಧ್ಯಕ್ಷ ಧರ್ಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಉಪಾಧ್ಯಕ್ಷರಾದ ಜಿ.ಪಿ.ಸತ್ಯನಾರಾಯಣ, ಖಜಾಂಚಿ ಅರವಿಂದ್ ಇತರರು ಉಪಸ್ಥಿತರಿದ್ದರು.</p>



<p></p>
]]></content:encoded>
					
		
		
			</item>
		<item>
		<title>ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಭಾಷೆ ಬಳಕೆ  ಆರ್‌ಎಸ್‌ಎಸ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ</title>
		<link>https://peepalmedia.com/congress-protests-against-rss-for-using-derogatory-language-against/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 18 Oct 2025 06:45:39 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಹಾಸನ]]></category>
		<category><![CDATA[news]]></category>
		<category><![CDATA[peepal]]></category>
		<guid isPermaLink="false">https://peepalmedia.com/?p=68025</guid>

					<description><![CDATA[ಹಾಸನ: ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಮತ್ತು ಅವಮಾನಕಾರಿ ಭಾಷೆಯಲ್ಲಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ವತಿಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಹೇಶ್ ಮತ್ತು ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್ ಮಾತನಾಡಿ, ಕಾಂಗ್ರೆಸ್ ನಾಯಕರರು ಹಾಗೂ ಕಾರ್ಯಕರ್ತರು ಪ್ರಿಯಾಂಕ ಖರ್ಗೆ ಅವರು ರಾಜ್ಯದ ಯುವ ಶಕ್ತಿ, [&#8230;]]]></description>
										<content:encoded><![CDATA[
<p><strong>ಹಾಸನ:</strong> ಕಾಂಗ್ರೆಸ್ ಯುವ ನಾಯಕ ಪ್ರಿಯಾಂಕ ಖರ್ಗೆ ವಿರುದ್ಧ ಕೀಳು ಮತ್ತು ಅವಮಾನಕಾರಿ ಭಾಷೆಯಲ್ಲಿ ಮಾತನಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ವತಿಯಿಂದ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.</p>



<p>ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಹೇಶ್ ಮತ್ತು ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್ ಮಾತನಾಡಿ, ಕಾಂಗ್ರೆಸ್ ನಾಯಕರರು ಹಾಗೂ ಕಾರ್ಯಕರ್ತರು ಪ್ರಿಯಾಂಕ ಖರ್ಗೆ ಅವರು ರಾಜ್ಯದ ಯುವ ಶಕ್ತಿ, ಬುದ್ಧಿವಂತಿಕೆ ಮತ್ತು ಪ್ರಾಮಾಣಿಕ ರಾಜಕಾರಣದ ಸಂಕೇತ. ಅವರು ಈ ರಾಜ್ಯ ಕಂಡ ಅತ್ಯಂತ ಬುದ್ಧಿವಂತ ದಲಿತ ನಾಯಕನಾಗಿದ್ದು, ರಾಷ್ಟ್ರ ಮಟ್ಟದ ಕೃತಕ ಬುದ್ಧಿಮತ್ತೆ ಸಮೀಕ್ಷೆಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ. ಇಂತಹ ಪ್ರತಿಭಾನ್ವಿತ ಯುವ ರಾಜಕಾರಣಿಯ ವಿರುದ್ಧ ಅಸಭ್ಯ ಶಬ್ದಗಳಲ್ಲಿ ಮಾತನಾಡುವುದು ಕೇವಲ ಅವಮಾನಕರವಲ್ಲ, ಸಾಮಾಜಿಕ ಅನ್ಯಾಯದ ಉದಾಹರಣೆ ಕೂಡ ಹೌದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಿಯಾಂಕ ಖರ್ಗೆಯ ವೇಗದ ರಾಜಕೀಯ ಬೆಳವಣಿಗೆಯನ್ನು ಸಹಿಸಲಾಗದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರೊಂದು ವಿಭಾಗ ಅವರು ವಿರುದ್ಧ ಕೀಳು, ಅಸಹ್ಯ ಮತ್ತು ಅಮಾನವೀಯ ಹೇಳಿಕೆಗಳನ್ನು ನೀಡುತ್ತಿರುವುದು ಅತ್ಯಂತ ಖಂಡನೀಯ. ಇಂತಹವರ ವಿರುದ್ಧ ಪೊಲೀಸರು ತಕ್ಷಣವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ, ಅಸ್ಪೃಶ್ಯತೆಯ ವಿರುದ್ಧ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.</p>



<p>ಹಾಸನ ಜಿಲ್ಲಾ ಕಾಂಗ್ರೆಸ್ ಎಸ್‌ಸಿ/ಎಸ್‌ಟಿ ಘಟಕದ ನಾಯಕರು ಮತ್ತಷ್ಟು ತೀವ್ರ ಎಚ್ಚರಿಕೆ ನೀಡುತ್ತಾ, ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಇಡೀ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು. ಪ್ರಿಯಾಂಕ ಖರ್ಗೆಯ ಗೌರವವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಸಮಾಜದ ಎಲ್ಲ ವರ್ಗಗಳು ಈ ಹೋರಾಟದಲ್ಲಿ ನಮ್ಮೊಂದಿಗಿರಬೇಕು ಎಂದರು.</p>



<p>ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಂ.ಕೆ. ದೇವಪ್ಪ ಮಲ್ಲಿಗೆವಾಳ್, ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಡಿ.ಸಿ. ಸಣ್ಣಸ್ವಾಮಿ, ರಂಜಿತ್ ಗೊರೂರು, ವೆಂಕಟೇಶ್, ಅಶೋಕ್ ನಾಯಕರಹಳ್ಳಿ, ಪ್ರಸನ್ನ, ಹರೀಶ್, ಆರೀಫ್, ಪರಮೇಶ್ ಇತರರು ಉಪಸ್ಥಿತರಿದ್ದರು.</p>



<p></p>
]]></content:encoded>
					
		
		
			</item>
	</channel>
</rss>
