<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>pinarayi vijayan &#8211; Peepal Media</title>
	<atom:link href="https://peepalmedia.com/tag/pinarayi-vijayan/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 22 Mar 2025 09:20:33 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>pinarayi vijayan &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>‘ಬಿಜೆಪಿ ಯಾವಾಗಲೂ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವುದನ್ನೇ ಬಯಸುತ್ತದೆ’: ಎಂ.ಕೆ. ಸ್ಟಾಲಿನ್</title>
		<link>https://peepalmedia.com/bjp-always-wants-to-take-away-the-rights-of-states-m-k-s-talin/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 22 Mar 2025 09:20:31 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[Constituency redistribution]]></category>
		<category><![CDATA[dk shivakuma]]></category>
		<category><![CDATA[karnataka]]></category>
		<category><![CDATA[Manipur violence]]></category>
		<category><![CDATA[MK Stalin]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[revanth reddy]]></category>
		<category><![CDATA[South Zone]]></category>
		<guid isPermaLink="false">https://peepalmedia.com/?p=55584</guid>

					<description><![CDATA[ಚೆನ್ನೈ: ಈಗಿನ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ&#160; ಪುನರ್ ವಿಂಗಡನೆ ಮಾಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.&#160; 2025 ಮಾರ್ಚ್ 22ರಂದು ಚೆನ್ನೈನಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಿಂದ ಪ್ರಭಾವಕ್ಕೊಳಗಾಗುವ ರಾಜ್ಯಗಳ ರಾಜಕೀಯ ನಾಯಕರ ಮೊದಲ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರುವಿಂಗಡನೆ ಈಗಿನ ಜನಸಂಖ್ಯೆಯನ್ನು ಆಧರಿಸಿ ಮಾಡಬಾರದು. ನಾವು ಒಟ್ಟಾಗಿ ಅದನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.&#160;&#160; ಕ್ಷೇತ್ರ ಪುನರ್ ವಿಂಗಡನೆಯಿಂದಾಗಿ [&#8230;]]]></description>
										<content:encoded><![CDATA[
<p>ಚೆನ್ನೈ: ಈಗಿನ ಜನಸಂಖ್ಯೆಯ ಆಧಾರದಲ್ಲಿ ಕ್ಷೇತ್ರ&nbsp; ಪುನರ್ ವಿಂಗಡನೆ ಮಾಡುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದರು.&nbsp;</p>



<p>2025 ಮಾರ್ಚ್ 22ರಂದು ಚೆನ್ನೈನಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಿಂದ ಪ್ರಭಾವಕ್ಕೊಳಗಾಗುವ ರಾಜ್ಯಗಳ ರಾಜಕೀಯ ನಾಯಕರ ಮೊದಲ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಹಾಗೂ ಲೋಕಸಭೆ ಕ್ಷೇತ್ರಗಳ ಮರುವಿಂಗಡನೆ ಈಗಿನ ಜನಸಂಖ್ಯೆಯನ್ನು ಆಧರಿಸಿ ಮಾಡಬಾರದು. ನಾವು ಒಟ್ಟಾಗಿ ಅದನ್ನು ವಿರೋಧಿಸಬೇಕು ಎಂದು ಕರೆ ನೀಡಿದರು.&nbsp;&nbsp;</p>



<p>ಕ್ಷೇತ್ರ ಪುನರ್ ವಿಂಗಡನೆಯಿಂದಾಗಿ ನಮ್ಮ ಪ್ರಾತಿನಿಧ್ಯ ಕಡಿಮೆಯಾಗುವುದರಿಂದ ರಾಜ್ಯಗಳು ಕೇಂದ್ರದಿಂದ ಬರಬೇಕಾದ ಹಣ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಅನಗತ್ಯ ಕಾನೂನುಗಳನ್ನು ಜಾರಿಗೆ ತರುತ್ತವೆ, ನಮ್ಮ ಜನರ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಮಹಿಳಾ ಸಬಲೀಕರಣಕ್ಕೆ ಹಿನ್ನಡೆಯಾಗುತ್ತದೆ, ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ರೈತರಿಗೆ ಬೆಂಬಲ ಸಿಗಲ್ಲ. ನಮ್ಮ ಸಂಸ್ಕೃತಿ, ಐಡೆಂಟಿಟಿ, ಪ್ರಗತಿ ಮೇಲೆ ಹೊಡೆತ ಬೀಳಲಿದೆ. ಸಾಮಾಜಿಕ ನ್ಯಾಯ ಸಿಗಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತವೆ ಎಂದರು.</p>



<p>ಕ್ಷೇತ್ರ ಪುನರ್ ವಿಂಗಡಣೆಯಿಂದಾಗಿ ದೇಶದಲ್ಲಿ ರಾಜಕೀಯವಾಗಿ ನಾವು ದುರ್ಬಲರಾಗುತ್ತೇವೆ. ಇದು ಭಾರತದ ಒಕ್ಕೂಟವನ್ನು ರಕ್ಷಿಸುವ ಮಹತ್ವದ ದಿನವಾಗಿ ಇತಿಹಾಸದ ಪುಟ ಸೇರಲಿದೆ ಎಂದು ಪುನರುಚ್ಚರಿಸಿದ ಸ್ಟಾಲಿನ್, ಬಿಜೆಪಿ ಯಾವಾಗಲೂ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವುದನ್ನೇ ಬಯಸುತ್ತದೆ. ಈ ಬೆದರಿಕೆಯನ್ನು ಅರ್ಥ ಮಾಡಿಕೊಂಡು ತಮಿಳುನಾಡು ಅದರ ವಿರುದ್ಧ ಅಭೂತಪೂರ್ವವಾಗಿ ಒಗ್ಗೂಡಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ರಕ್ಷಿಸಲು ಇದೇ ರೀತಿಯಲ್ಲಿ ಒಗ್ಗೂಡಬೇಕಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರ ಬಳಿ ಮನವಿ ಮಾಡಿದರು.&nbsp;&nbsp;</p>



<p>ಈ ವಿಚಾರದಲ್ಲಿ ರಾಜಕೀಯ ಮತ್ತು ಕಾನೂನು ಕ್ರಮದ ಹೋರಾಟಕ್ಕೆ &#8216;ತಜ್ಞರಸಮಿತಿ&#8217;ಯನ್ನು ಪ್ರಸ್ತಾಪಿಸಿದರು. &#8220;ಜನಸಂಖ್ಯೆ ಆಧಾರಿತ ಡಿಲಿಮಿಟೇಶನ್‌ಗೆ ಅವಕಾಶ ನೀಡಬಾರದು ಎಂದು ನಾವೆಲ್ಲರೂ ನಿರ್ಧರಿಸಬೇಕು. ಹೆಚ್ಚಿನ ಜನ ಸಂಖ್ಯೆ ಹೊಂದಿರುವ ರಾಜ್ಯಗಳನ್ನು ಶಿಕ್ಷಿಸಲು ಬಿಡಬಾರದು ಎಂದು ಅವರು ಹೇಳಿದರು. ಈ ಹೋರಾಟ ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಅಲ್ಲ. ಆದರೆ ನ್ಯಾಯಯುತವಾಗಿ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದು ರಾಜ್ಯಗಳ ಸೀಟುಗಳಿಗೆ ಸಂಬಂಧಿಸಿಲ್ಲ. ಇದು ನಮ್ಮ ಹಕ್ಕು, ಭವಿಷ್ಯವಾಗಿದ್ದು, ರಾಜ್ಯಗಳ ಸ್ವಾಯತ್ತತೆಯನ್ನು ಖಾತ್ರಿಪಡಿಸಿದರೆ ಮಾತ್ರ, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಮೇಲುಗೈ ಸಾಧಿಸುತ್ತದೆ ಎಂದರು.</p>



<p>ಈ ವೇಳೆ ಮಣಿಪುರದ ಹಿಂಸಾಚಾರವನ್ನು ಉಲ್ಲೇಖಿಸಿದ ಸ್ಟಾಲಿನ್ ‘ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರದ ಮೌನವು ಸಾಕಷ್ಟು ರಾಜಕೀಯ ಬಲವಿಲ್ಲದ ರಾಜ್ಯಗಳಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಉದಾಹರಣೆಯಾಗಿದೆ’ ಎಂದರು.&nbsp;</p>



<p>ಎಂ.ಕೆ. ಸ್ಟಾಲಿನ್ ನೇತೃತ್ವದಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡಣೆಯಿಂದ ಪ್ರಭಾವಕ್ಕೊಳಗಾಗುವ ರಾಜ್ಯಗಳ ರಾಜಕೀಯ ನಾಯಕರ ಮೊದಲ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್, ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಕೇರಳ ಸಿಎಂ ಪುತ್ರಿಯ ವಿರುದ್ಧ ಪ್ರಕರಣ ದಾಖಲಿಸಿದ ಇಡಿ</title>
		<link>https://peepalmedia.com/ed-files-case-against-kerala-cms-daughter/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 29 Mar 2024 02:13:19 +0000</pubDate>
				<category><![CDATA[ದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[KERALA CM]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37668</guid>

					<description><![CDATA[ಖಾಸಗಿ ಖನಿಜ ಸಂಸ್ಥೆಯಾದ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ ಅಕ್ರಮವಾಗಿ ಪಾವತಿ ಮಾಡಿರುವ ಪ್ರಕರಣದ ತನಿಖೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್, ಅವರ ಐಟಿ ಕಂಪನಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಆಕೆಗೆ ಮತ್ತು ಕಂಪನಿಗೆ, ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಸಮನ್ಸ್ ನೀಡುವ [&#8230;]]]></description>
										<content:encoded><![CDATA[
<p>ಖಾಸಗಿ ಖನಿಜ ಸಂಸ್ಥೆಯಾದ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ ಅಕ್ರಮವಾಗಿ ಪಾವತಿ ಮಾಡಿರುವ ಪ್ರಕರಣದ ತನಿಖೆಗಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್, ಅವರ ಐಟಿ ಕಂಪನಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆ. ಆಕೆಗೆ ಮತ್ತು ಕಂಪನಿಗೆ, ಮೂಲಗಳು ತಿಳಿಸಿವೆ.</p>



<p>ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ಸಂಸ್ಥೆ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.</p>



<p>ಕಂಪನಿಯು ಖನಿಜ ಸಂಸ್ಥೆಗೆ ಯಾವುದೇ ಸೇವೆಯನ್ನು ಒದಗಿಸದಿದ್ದರೂ ಸಹ, 2018 ಮತ್ತು 2019ರ ನಡುವೆ ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ ಎಕ್ಸಾಲಾಜಿಕ್ ಸೊಲ್ಯೂಷನ್ಸ್‌ಗೆ 1.72 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಪಾವತಿಸಿದೆ ಎಂದು ಆರೋಪಿಸಲಾದ ಆದಾಯ ತೆರಿಗೆ ಇಲಾಖೆಯ ತನಿಖೆಯ ಫಲಿತಾಂಶವಾಗಿ ಈ ಪ್ರಕರಣವು ಹೊರಹೊಮ್ಮಿದೆ.</p>
]]></content:encoded>
					
		
		
			</item>
		<item>
		<title>ರಾಷ್ಟ್ರಪತಿ ಮುರ್ಮು ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋದ ಕೇರಳ ಸರ್ಕಾರ</title>
		<link>https://peepalmedia.com/kerala-moves-sc-against-president-murmu/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 25 Mar 2024 08:40:02 +0000</pubDate>
				<category><![CDATA[ರಾಜಕೀಯ]]></category>
		<category><![CDATA[Draupadi Murmu]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[Mohammed Arif Khan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37465</guid>

					<description><![CDATA[ಮಾರ್ಚ್ 23 ರಂದು ಕೇರಳ ರಾಜ್ಯ ವಿಧಾನಸಭೆ ಅಂಗೀಕರಿಸಿದ ಏಳು ಮಸೂದೆಗಳ ಪೈಕಿ ನಾಲ್ಕು ಮಸೂದೆಗಳಿಗೆ ನೀಡಬೇಕಾದ ಒಪ್ಪಿಗೆಯನ್ನು ತಡೆಹಿಡಿದಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಕೇರಳ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು Bar And Bench ವರದಿ ಮಾಡಿದೆ . ತಿಂಗಳಿಂದ ಏಳರಿಂದ 24 ತಿಂಗಳವರೆಗೆ ಬಾಕಿ ಉಳಿದಿರುವ ಬಿಲ್‌ಗಳಿಗೆ ತಮ್ಮ ಒಪ್ಪಿಗೆಯನ್ನು &#160;ನೀಡದೆ, ಅಗತ್ಯವಿಲ್ಲದಿದ್ದರೂ ರಾಷ್ಟ್ರಪತಿಗಳ ಮುಂದಿಟ್ಟಿರುವ ಕೇರಳ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ವಿರುದ್ಧ ಕೂಡ ಕೇರಳ ಸರ್ಕಾರ ನ್ಯಾಯಾಲಯದ ಮೊರೆ [&#8230;]]]></description>
										<content:encoded><![CDATA[
<p>ಮಾರ್ಚ್ 23 ರಂದು ಕೇರಳ ರಾಜ್ಯ ವಿಧಾನಸಭೆ ಅಂಗೀಕರಿಸಿದ ಏಳು ಮಸೂದೆಗಳ ಪೈಕಿ ನಾಲ್ಕು ಮಸೂದೆಗಳಿಗೆ ನೀಡಬೇಕಾದ ಒಪ್ಪಿಗೆಯನ್ನು ತಡೆಹಿಡಿದಿದ್ದಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಕೇರಳ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು Bar And Bench ವರದಿ ಮಾಡಿದೆ .</p>



<p>ತಿಂಗಳಿಂದ ಏಳರಿಂದ 24 ತಿಂಗಳವರೆಗೆ ಬಾಕಿ ಉಳಿದಿರುವ ಬಿಲ್‌ಗಳಿಗೆ ತಮ್ಮ ಒಪ್ಪಿಗೆಯನ್ನು &nbsp;ನೀಡದೆ, ಅಗತ್ಯವಿಲ್ಲದಿದ್ದರೂ ರಾಷ್ಟ್ರಪತಿಗಳ ಮುಂದಿಟ್ಟಿರುವ ಕೇರಳ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ವಿರುದ್ಧ ಕೂಡ ಕೇರಳ ಸರ್ಕಾರ ನ್ಯಾಯಾಲಯದ ಮೊರೆ ಹೋಗಿದೆ.</p>



<p><strong>ಏಳರಲ್ಲಿ ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ</strong></p>



<p>ಕಳೆದ ವರ್ಷ, ಕೇರಳ ರಾಜ್ಯ ಅಸೆಂಬ್ಲಿಯು ಹಲವಾರು ಮಸೂದೆಗಳನ್ನು ಅಂಗೀಕರಿಸಿತು. ಅವುಗಳಲ್ಲಿ ಕೆಲವು ಸಾರ್ವಜನಿಕ ಹಿತಾಸಕ್ತಿಗಳೂ ಸೇರಿದ್ದವು. ಅವುಗಳಲ್ಲಿ &nbsp;ಏಳು ಮಸೂದೆಗಳಲ್ಲಿ ನಾಲ್ಕಕ್ಕೆ ಒಪ್ಪಿಗೆಯನ್ನು ತಡೆಹಿಡಿದಿರುವ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಈ ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯಲು ರಾಷ್ಟ್ರಪತಿಗಳು ಯಾವುದೇ ಕಾರಣವನ್ನು ನೀಡಿಲ್ಲ ಎಂದು ಕೇರಳ ಹೇಳಿದೆ.</p>



<p>ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವುದು ಭಾರತೀಯ ಸಂವಿಧಾನದ ಫೆಡರಲ್ ಸಂರಚನೆಯನ್ನು ದುರ್ಬಲಗೊಳಿಸುತ್ತದೆ ಎಂದು ಕೇರಳ ಸರ್ಕಾರ ವಾದಿಸಿರುವುದು ಎಂದು ಬಾರ್‌ ಆಂಡ್‌ ಬೆಂಚ್‌ನಲ್ಲಿ ವರದಿಯಾಗಿದೆ.</p>



<p>ಏಳು ಮಸೂದೆಗಳು ವಿಶ್ವವಿದ್ಯಾಲಯದ ಕಾನೂನುಗಳಿಗೆ (2021 ಮತ್ತು 2022) ತಿದ್ದುಪಡಿ, ಕೇರಳ ಲೋಕಾಯುಕ್ತ ತಿದ್ದುಪಡಿ ಮಸೂದೆ ಮತ್ತು 2022 ರ ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆಗೆ ರಾಜ್ಯದ ತಿದ್ದುಪಡಿಗಳನ್ನು ಒಳಗೊಂಡಿವೆ.</p>



<p>ಏಳು ಮಸೂದೆಗಳಲ್ಲಿ ಯಾವುದೂ ಕೇಂದ್ರ-ರಾಜ್ಯದ ನಡುವಿನ ಸಂಬಂಧಗಳಿಗೆ ಸಂಬಂಧಿಸಿಲ್ಲ ಮತ್ತು ಆದ್ದರಿಂದ ರಾಷ್ಟ್ರಪತಿಗಳ ಒಪ್ಪಿಗೆ ಅಗತ್ಯವಿಲ್ಲ ಎಂದು ಕೇರಳ ತನ್ನ ವಾದವನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದೆ.</p>



<p><strong>ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ ಕೇರಳ</strong></p>



<p>ಏಳು ಮಸೂದೆಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಿಟ್ಟಿದ್ದಕ್ಕಾಗಿ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ವಿರುದ್ಧ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.</p>



<p>ರಾಜ್ಯವು ತನ್ನ ಅರ್ಜಿಯಲ್ಲಿ ಏಳು ಮಸೂದೆಗಳಲ್ಲಿ ಎರಡು ರಾಜ್ಯಪಾಲರ ಬಳಿ ಸುಮಾರು 24 ತಿಂಗಳುಗಳ ಕಾಲ ಉಳಿಯಿತು ಎಂದು ವಾದಿಸಿದೆ, ಅವರು ಅದನ್ನು ರಾಷ್ಟ್ರಪತಿಗಳಿಗೆ ಒಪ್ಪಿಗೆಗಾಗಿ ಅಂಗೀಕರಿಸಿದರು; ಉಳಿದ ಐದನ್ನು ಏಳರಿಂದ 16 ತಿಂಗಳುಗಳ ಕಾಲ ರಾಜ್ಯಪಾಲರ ಬಳಿಯೇ ಉಳಿಸಿಕೊಳ್ಳಲಾಗಿತ್ತು.</p>



<p>ಮಸೂದೆಗಳಿಗೆ ಸಂಬಂಧಿಸಿದಂತೆ ಖಾನ್ ಅವರ ನಿಷ್ಕ್ರಿಯತೆಯು &#8220;ರಾಜ್ಯದ ಶಾಸಕಾಂಗದ ಕಾರ್ಯಚಟುವಟಿಕೆಯನ್ನು ಅಸ್ತವ್ಯಸ್ತಗೊಳಿಸಿದೆ ಮತ್ತು ಅದರ ಅಸ್ತಿತ್ವವನ್ನು ನಿಷ್ಪರಿಣಾಮಕಾರಿ ಮತ್ತು ಒಟಿಯೋಸ್ ಆಗಿ ಮಾಡಿದೆ&#8221; ಎಂದು ಬಾರ್‌ ಆಂಡ್‌ ಬೆಂಚ್ ವರದಿ ಮಾಡಿದೆ.</p>



<p>ಇಷ್ಟು ತಿಂಗಳ ಕಾಲ ಮಸೂದೆಗಳು ತಮ್ಮ ಬಳಿ ಉಳಿಸಿಕೊಂಡು, ಒಪ್ಪಿಗೆ ನೀಡದ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕೂಡ ಮಾಹಿತಿ ನೀಡಿಲ್ಲ ಎಂದು ಕೇರಳ ಆರೋಪಿಸಿದೆ. ಇದು ಭಾರತೀಯ ಸಂವಿಧಾನದ 200 ನೇ ವಿಧಿಯ ಉಲ್ಲಂಘನೆಯಾಗಿದೆ, ಅದರ ಪ್ರಕಾರ ರಾಜ್ಯಪಾಲರು ಅಂತಹ ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಆದಷ್ಟು ಬೇಗ ಕಳುಹಿಸಬೇಕು.</p>



<p>ಕೇರಳವನ್ನು ಹೊರತುಪಡಿಸಿ, ಪಂಜಾಬ್, ತಮಿಳುನಾಡು ಮತ್ತು ತೆಲಂಗಾಣದಂತಹ ರಾಜ್ಯಗಳು ತಮ್ಮ ರಾಜ್ಯಪಾಲರ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸಿವೆ.Bottom of Form</p>
]]></content:encoded>
					
		
		
			</item>
		<item>
		<title>ಕೇರಳ ಸರ್ಕಾರದಿಂದ ದೇಶದಲ್ಲೇ ಮೊದಲ ಸರ್ಕಾರಿ ಓಟಿಟಿ ʼಸಿಸ್ಪೇಸ್‌ʼ ಆರಂಭ</title>
		<link>https://peepalmedia.com/ott-cspace-from-kerala-government/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 07 Mar 2024 09:27:44 +0000</pubDate>
				<category><![CDATA[ಸಿನಿಮಾ]]></category>
		<category><![CDATA[amazon prime]]></category>
		<category><![CDATA[Bangalore]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[CSpace]]></category>
		<category><![CDATA[hotstar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[netflix]]></category>
		<category><![CDATA[news]]></category>
		<category><![CDATA[ott]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<category><![CDATA[Zee cenema]]></category>
		<guid isPermaLink="false">https://peepalmedia.com/?p=36750</guid>

					<description><![CDATA[ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾರ್ಚ್ 7, ಗುರುವಾರದಂದು ಕೈರಾಲಿ ಥಿಯೇಟರ್‌ನಲ್ಲಿ ರಾಜ್ಯ ಸರ್ಕಾರದ್ದೇ ಆದ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಉದ್ಘಾಟಿಸಿದರು. CSpace ಎಂದು ಕರೆಯಲ್ಪಡುವ ಪ್ಲಾಟ್‌ಫಾರ್ಮ್ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಓಟಿಟಿ ಪ್ಲಾಟ್‌ಫಾರ್ಮ್ ಆಗಿದೆ. OTT ವಲಯದಲ್ಲಿನ ಸವಾಲುಗಳು ಮತ್ತು ಹೆಚ್ಚುತ್ತಿರುವ ಅಸಮತೋಲನಗಳನ್ನು ಪರಿಹರಿಸಲು CSpace ಅನ್ನು ಪ್ರಾರಂಭಿಸಲಾಗಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (KSFDC) ಅಧ್ಯಕ್ಷರಾದ ಶಾಜಿ ಎನ್. ಕರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ [&#8230;]]]></description>
										<content:encoded><![CDATA[
<p>ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮಾರ್ಚ್ 7, ಗುರುವಾರದಂದು ಕೈರಾಲಿ ಥಿಯೇಟರ್‌ನಲ್ಲಿ ರಾಜ್ಯ ಸರ್ಕಾರದ್ದೇ ಆದ ಓವರ್-ದಿ-ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್ ಉದ್ಘಾಟಿಸಿದರು.</p>



<p>CSpace ಎಂದು ಕರೆಯಲ್ಪಡುವ ಪ್ಲಾಟ್‌ಫಾರ್ಮ್ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಓಟಿಟಿ ಪ್ಲಾಟ್‌ಫಾರ್ಮ್ ಆಗಿದೆ. OTT ವಲಯದಲ್ಲಿನ ಸವಾಲುಗಳು ಮತ್ತು ಹೆಚ್ಚುತ್ತಿರುವ ಅಸಮತೋಲನಗಳನ್ನು ಪರಿಹರಿಸಲು CSpace ಅನ್ನು ಪ್ರಾರಂಭಿಸಲಾಗಿದೆ.</p>



<p>ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ (KSFDC) ಅಧ್ಯಕ್ಷರಾದ ಶಾಜಿ ಎನ್. ಕರುಣ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಸವಾಲುಗಳನ್ನು ಎದುರಿಸುವಲ್ಲಿ ಪ್ಲಾಟ್‌ಫಾರ್ಮ್‌ ಪಾತ್ರವನ್ನು ಒತ್ತಿ ಹೇಳಿದರು.</p>



<p>OTT ಪ್ಲಾಟ್‌ಫಾರ್ಮ್ ಅನ್ನು KSFDC ನಿರ್ವಹಿಸುತ್ತದೆ, ಇದು ಮಲಯಾಳಂ ಸಿನಿಮಾದ ಪ್ರಚಾರವನ್ನು ವಹಿಸಿಕೊಡುವ ಸರ್ಕಾರಿ ಸ್ವಾಮ್ಯದ ಘಟಕವಾಗಿದೆ. ಕೇರಳ ಸರ್ಕಾರದ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಿಎಸ್‌ಸ್ಪೇಸ್ ರಾಜ್ಯದ ಖ್ಯಾತ ಸಾಂಸ್ಕೃತಿಕ ವ್ಯಕ್ತಿಗಳು ಸೇರಿದಂತೆ 60 ಸದಸ್ಯರನ್ನು ಒಳಗೊಂಡ ಕ್ಯುರೇಟರ್ ಪ್ಯಾನೆಲ್ ಅನ್ನು ಸ್ಥಾಪಿಸಿದೆ.</p>



<p>ಸಾಂಸ್ಕೃತಿಕ ವ್ಯಕ್ತಿಗಳಾದ ಬೆನ್ಯಾಮಿನ್, ಒ.ವಿ. ಉಷಾ, ಸಂತೋಷ್ ಶಿವನ್, ಶ್ಯಾಮಪ್ರಸಾದ್, ಸನ್ನಿ ಜೋಸೆಫ್ ಮತ್ತು ಜಿಯೋ ಬೇಬಿ ಕ್ಯುರೇಟರ್ ಪ್ಯಾನೆಲ್‌ನ ಭಾಗವಾಗಿದ್ದಾರೆ. ಪ್ಲಾಟ್‌ಫಾರ್ಮ್‌ಗೆ ಸಲ್ಲಿಸಲಾಗುವ ಪ್ರತೀ ಕಂಟೆಂಟ್ ಈ ಪ್ಯಾನೆಲ್‌ನ ಮೂರು ಕ್ಯುರೇಟರ್‌ಗಳಿಂದ ಮೌಲ್ಯಮಾಪನಕ್ಕೆ ಒಳಗಾಗುತ್ತದೆ, ಅದರ ಕಲಾತ್ಮಕ, ಸಾಂಸ್ಕೃತಿಕ ಮತ್ತು ಇನ್ಫೋಟೈನ್‌ಮೆಂಟ್ ಅರ್ಹತೆಯನ್ನು ನಿರ್ಣಯಿಸುತ್ತದೆ.</p>



<p>ವೇದಿಕೆಯು ಪ್ರಸ್ತುತ 35 ಚಲನಚಿತ್ರಗಳು, ಆರು ಸಾಕ್ಷ್ಯಚಿತ್ರಗಳು ಮತ್ತು ಒಂದು ಕಿರುಚಿತ್ರ ಸೇರಿದಂತೆ 42 ಚಲನಚಿತ್ರಗಳನ್ನು ಹೊಂದಿದೆ ಮತ್ತು Android ಮತ್ತು iOS ಸಾಧನಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಪ್ಲಾಟ್‌ಫಾರ್ಮ್‌ನ ಪೇ-ಪರ್-ವ್ಯೂ ಮಾದರಿಯ ಭಾಗವಾಗಿ ಬಳಕೆದಾರರು ಪ್ರತಿ ಚಲನಚಿತ್ರಕ್ಕೆ ರೂ 75 ಪಾವತಿಸಬೇಕಾಗುತ್ತದೆ.</p>
]]></content:encoded>
					
		
		
			</item>
		<item>
		<title>ಪ್ರತಿಭಟನೆಗಳನ್ನು ವರದಿ ಮಾಡುವುದು ಅಪರಾಧವಲ್ಲ: ಪಿಣರಾಯಿ ಸರ್ಕಾರಕ್ಕೆ ಎಡಿಟರ್ಸ್ ಗಿಲ್ಡ್</title>
		<link>https://peepalmedia.com/editors-guild-condemns-fir-against-journalist-in-kerala/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 30 Dec 2023 10:42:03 +0000</pubDate>
				<category><![CDATA[Uncategorized]]></category>
		<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[Kerala Police]]></category>
		<category><![CDATA[malayalam]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34252</guid>

					<description><![CDATA[ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕಾಗಿ ಕೇರಳದ ಪತ್ರಕರ್ತರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು &#8220;ತೀವ್ರ ನೋವುಂಟು ಮಾಡಿದೆ&#8221; ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ. ಸುದ್ದಿ ವಾಹಿನಿ 24 ನ್ಯೂಸ್‌ನ ಪತ್ರಕರ್ತೆ ವಿಜಿ ವಿನೀತಾ ಅವರು ಡಿಸೆಂಬರ್ 10 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಿಣರಾಯಿ ವಾಹನದ ಮೇಲೆ ಶೂಗಳನ್ನು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಂಘಟನೆಯ [&#8230;]]]></description>
										<content:encoded><![CDATA[
<p>ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವರದಿ ಮಾಡಿದ್ದಕ್ಕಾಗಿ ಕೇರಳದ ಪತ್ರಕರ್ತರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು &#8220;ತೀವ್ರ ನೋವುಂಟು ಮಾಡಿದೆ&#8221; ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.</p>



<p>ಸುದ್ದಿ ವಾಹಿನಿ 24 ನ್ಯೂಸ್‌ನ ಪತ್ರಕರ್ತೆ ವಿಜಿ ವಿನೀತಾ ಅವರು ಡಿಸೆಂಬರ್ 10 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ನಡೆದ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಿಣರಾಯಿ ವಾಹನದ ಮೇಲೆ ಶೂಗಳನ್ನು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.</p>



<figure class="wp-block-image size-large"><img fetchpriority="high" decoding="async" width="1024" height="584" src="https://peepalmedia.com/wp-content/uploads/2023/12/Screenshot-2023-12-30-144516-1024x584.png" alt="" class="wp-image-34255" srcset="https://peepalmedia.com/wp-content/uploads/2023/12/Screenshot-2023-12-30-144516-1024x584.png 1024w, https://peepalmedia.com/wp-content/uploads/2023/12/Screenshot-2023-12-30-144516-300x171.png 300w, https://peepalmedia.com/wp-content/uploads/2023/12/Screenshot-2023-12-30-144516-768x438.png 768w, https://peepalmedia.com/wp-content/uploads/2023/12/Screenshot-2023-12-30-144516-150x86.png 150w, https://peepalmedia.com/wp-content/uploads/2023/12/Screenshot-2023-12-30-144516-696x397.png 696w, https://peepalmedia.com/wp-content/uploads/2023/12/Screenshot-2023-12-30-144516-1068x609.png 1068w, https://peepalmedia.com/wp-content/uploads/2023/12/Screenshot-2023-12-30-144516.png 1178w" sizes="(max-width: 1024px) 100vw, 1024px" /></figure>



<p>ಸಂಘಟನೆಯ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕುರುಪ್ಪಂಪಾಡಿ ಪೊಲೀಸರು, ಪತ್ರಕರ್ತೆ ವಿನೀತಾ ಅವರನ್ನು ಐದನೇ ಆರೋಪಿ ಎಂದು ಕರೆದಿದ್ದಾರೆ. ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. &nbsp;&#8220;ವಿನೀತಾ ಕೆಲವು ಕೆಎಸ್‌ಯು ಕಾರ್ಯಕರ್ತರೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದರು,” ಪೊಲೀಸ್ ಮೂಲಗಳು ಆರೋಪಿಸಿ, ಈ ಯೋಜಿತ ಪ್ರತಿಭಟನೆಯ ಬಗ್ಗೆ ಅವರಿಗೆ ತಿಳಿದಿತ್ತು ಎಂದು ಹೇಳಿವೆ. &nbsp;ಅವರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಹೊರಿಸಲಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">EGI is deeply disturbed by the registration of an FIR by the Kerala police against a news reporter in connection with her coverage of a students&#39; protest on Dec 10. Guild urges the Govt of Kerala to desist from punishing the reporter for discharging her professional duty. <a href="https://t.co/1hIo8rjcXt">pic.twitter.com/1hIo8rjcXt</a></p>&mdash; Editors Guild of India (@IndEditorsGuild) <a href="https://twitter.com/IndEditorsGuild/status/1740729799520506280?ref_src=twsrc%5Etfw">December 29, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಈ ಪಿತೂರಿ ಏನೂ ಇಲ್ಲ ಎಂಬುದನ್ನು ಸಾಬೀತು ಪಡಿಸುವಂತೆ ವಿಜಯನ್‌ ಮಾಧ್ಯಮಕ್ಕೆ ತಿಳಿಸಿರುವುದಾಗಿ <a href="https://www.thenewsminute.com/kerala/kerala-reporter-who-covered-protest-against-cm-pinarayi-booked-sparks-outrage" data-type="link" data-id="https://www.thenewsminute.com/kerala/kerala-reporter-who-covered-protest-against-cm-pinarayi-booked-sparks-outrage">ದಿ ನ್ಯೂಸ್‌ ಮಿನಿಟ್‌</a> ವರದಿ ಮಾಡಿದೆ.</p>



<p>ಕೇರಳ ಸರ್ಕಾರ ನಡೆಯನ್ನು ಖಂಡಿಸಿ ಎಡಿಟರ್ಸ್‌ ಗಿಲ್ಡ್ &#8220;ಪ್ರತಿಭಟನೆಗಳನ್ನು ವರದಿ ಮಾಡುವುದು ಮಾಧ್ಯಮದ ಜವಾಬ್ದಾರಿ, ಅದು ಅಪರಾಧವಲ್ಲ. ಪ್ರತಿಭಟನಾ ಸ್ಥಳದಲ್ಲಿ ವರದಿಗಾರನ ಉಪಸ್ಥಿತಿಯು ನಡೆಯಬಹುದಾದ ಯಾವುದೇ ಅಹಿತಕರ ಘಟನೆಗೆ ಅವನು/ಅವಳಿಗೆ ಸಂಬಂಧ ಇರುವುದಿಲ್ಲ,” ಅವನು ಅಥವಾ ಅವಳ ಸಹಭಾಗಿಯಾಗುವುದಿಲ್ಲ.&#8221; ಎಂದು ಹೇಳಿಕೆ ನೀಡಿದೆ.</p>



<p><strong><em>ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ:</em></strong> <a href="https://chat.whatsapp.com/BoGCVVQyXYVE5m7RhIQRWv">ಪೀಪಲ್‌ ಮೀಡಿಯಾ</a></p>



<p>ತನ್ನ ಪ್ರಕಟಣೆಯಲ್ಲಿ ಎಡಿಟರ್ಸ್‌ ಗಿಲ್ಡ್‌&nbsp; &#8220;ವರದಿಗಾರನನ್ನು ಶಿಕ್ಷಿಸುವುದನ್ನು ನಿಲ್ಲಿಸಬೇಕು&#8221; ಎಂದು ಕೇರಳ ಸರ್ಕಾರವನ್ನು ಒತ್ತಾಯಿಸಿದೆ. ವರದಿಗಾರನ ವಿರುದ್ಧ ಇರುವ ಆರೋಪಗಳನ್ನು ಹಿಂಪಡೆದು, ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಪೊಲೀಸರಿಗೆ ಸೂಚನೆ ನೀಡಿದೆ.</p>



<p>ಕೇರಳದ <a href="https://www.thehindu.com/news/national/kerala/kuwj-condemn-police-action-against-journalist/article67667093.ece" data-type="link" data-id="https://www.thehindu.com/news/national/kerala/kuwj-condemn-police-action-against-journalist/article67667093.ece">ಕಾರ್ಯನಿರತ ಪತ್ರಕರ್ತರ ಒಕ್ಕೂಟ</a>ವೂ ಪೊಲೀಸರು ಈ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದು, ಇದು &#8220;ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಆಕ್ರಮಣ ಮತ್ತು ನ್ಯಾಚುರಲ್ ಜಸ್ಟೀಸ್‌ಗೆ ವಿರುದ್ಧ&#8221; ಎಂದು ಕರೆದಿದೆ.</p>
]]></content:encoded>
					
		
		
			</item>
		<item>
		<title>ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಕೇರಳ ಪೊಲೀಸ್‌ FIR</title>
		<link>https://peepalmedia.com/fir-against-union-minister-rajeev-chandrasekhar/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 31 Oct 2023 09:24:00 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Bharatiya Janata Party]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[Ernakulam]]></category>
		<category><![CDATA[Ernakulam District]]></category>
		<category><![CDATA[gaza]]></category>
		<category><![CDATA[Hamas]]></category>
		<category><![CDATA[india]]></category>
		<category><![CDATA[israeli–palestinian conflict]]></category>
		<category><![CDATA[isreal]]></category>
		<category><![CDATA[Isreal attack]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Kerala Police]]></category>
		<category><![CDATA[Kochi blasts]]></category>
		<category><![CDATA[kochin]]></category>
		<category><![CDATA[news]]></category>
		<category><![CDATA[palestinian]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[Rajeev Chandrasekhar]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[Union minister]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30877</guid>

					<description><![CDATA[ಬೆಂಗಳೂರು,ಅಕ್ಟೋಬರ್.‌31: ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌31:</strong> ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.</p>



<p>ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.</p>



<p>ಭಾನುವಾರ, ಕಲಮಸ್ಸೆರಿ ಪುರಸಭೆಯ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಕೂಟದಲ್ಲಿ ಎರಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2,500 ಯೆಹೋವನ ಸಾಕ್ಷಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸ್ಫೋಟಗಳು ಸಂಭವಿಸಿದವು.</p>



<p>ಇದರ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದಂತೆ, ಚಂದ್ರಶೇಖರ್<a href="https://x.com/Rajeev_GoI/status/1718561932066836946?s=20" data-type="link" data-id="https://x.com/Rajeev_GoI/status/1718561932066836946?s=20"> X ಪೋಸ್ಟ್‌ನಲ್ಲಿ</a>, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವದೆಹಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, &#8220;ಜಿಹಾದ್‌ಗಾಗಿ ಭಯೋತ್ಪಾದಕ ಹಮಾಸ್‌ನ ನೀಡಿದ ಕರೆ ಮುಗ್ಧ ಕ್ರಿಶ್ಚಿಯನ್ನರ ಮೇಲಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿದೆ&#8221; ಎಂದು ಟ್ವೀಟ್‌ ಮಾಡಿದ್ದರು.</p>


<div class="wp-block-image">
<figure class="aligncenter size-full is-resized"><img decoding="async" width="778" height="854" src="https://peepalmedia.com/wp-content/uploads/2023/10/image-58.png" alt="" class="wp-image-30880" style="aspect-ratio:0.9110070257611241;width:349px;height:auto" srcset="https://peepalmedia.com/wp-content/uploads/2023/10/image-58.png 778w, https://peepalmedia.com/wp-content/uploads/2023/10/image-58-273x300.png 273w, https://peepalmedia.com/wp-content/uploads/2023/10/image-58-768x843.png 768w, https://peepalmedia.com/wp-content/uploads/2023/10/image-58-150x165.png 150w, https://peepalmedia.com/wp-content/uploads/2023/10/image-58-300x329.png 300w, https://peepalmedia.com/wp-content/uploads/2023/10/image-58-696x764.png 696w" sizes="(max-width: 778px) 100vw, 778px" /></figure></div>


<p>ಈ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೋರಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>



<p>ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಚಂದ್ರಶೇಖರ್, &#8220;ಕೊಳಕು, ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ&#8221; ಪಿಣರಾಯ್‌ ವಿಜಯನ್ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನ್ ಮೂಲಭೂತವಾದಿಗಳ ವಿರುದ್ಧ ಸಹಿಷ್ಣುತೆ ತೋರಿದ್ದಾರೆ ಎಂದು ಕಿಡಿಕಾರಿದ್ದರು.</p>



<p>ಅಕ್ಟೋಬರ್ 27 ರಂದು ಮಲಪುರಂನಲ್ಲಿ ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಪ್ಯಾಲಿಸ್ತೇನ್ ಪರ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು ವರದಿಯಾಗಿತ್ತು.</p>



<p>ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಲ್ಲಿ ಒಂದಾದ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ಯಾಲೇಸ್ಟಿನಿಯನ್ ಹೋರಾಟಗಾರರನ್ನು ಪ್ರಪಂಚದಾದ್ಯಂತದ ಜನರು ಬೆಂಬಲಿಸಬೇಕು ಎಂದು ಮಶಾಲ್ ಭಾಷಣದಲ್ಲಿ ಹೇಳಿದ್ದರು.</p>



<p>&#8220;ಇಸ್ರೇಲ್ ನಮ್ಮ ನಿವಾಸಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಮನೆಗಳನ್ನು ಕೆಡವಲಾಗುತ್ತಿದೆ. ಅವರು ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನಾಶಪಡಿಸಿದ್ದಾರೆ. ಅವರು ಚರ್ಚುಗಳು, ದೇವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವಸಂಸ್ಥೆಯ ಕಟ್ಟಡಗಳನ್ನೂ ನಾಶಪಡಿಸುತ್ತಿದ್ದಾರೆ. ಈ ದಾಳಿಯ ಗಾಜಾವನ್ನು ಇಲ್ಲವಾಗಿಸುವುದೇ ಇದರ ಅರ್ಥ, ಮತ್ತು ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗಾಜಾದಲ್ಲಿನ ಹೋರಾಟಗಾರರು ಅವರನ್ನು ತಮ್ಮ ಮಿಲಿಟರಿಯಿಂದ ಸೋಲಿಸಿದ್ದಾರೆ,” ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.</p>



<p>ಪ್ಯಾಲಿಸ್ತೇನ್ ಹಿತಾಸಕ್ತಿಗಳನ್ನು ಸಮರ್ಥಿಸುವ ಸೋಗಿನಲ್ಲಿ ಸಂಘಟಕರು ಹಮಾಸನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತನಿಖೆಗೆ ಕರೆ ಆಗ್ರಹಿಸಿತ್ತು.</p>



<p>ಇದಾದ ನಂತರ, ಸೋಮವಾರ, ಪಿಣರಾಯ್‌ ವಿಜಯನ್ ಹಮಾಸ್ ನಾಯಕನ ಭಾಷಣವನ್ನು ಪೊಲೀಸರು ಪರಿಶೀಲಿಸುತ್ತಾರೆ ಮತ್ತು ರಾಜೀವ್‌ ಚಂದ್ರಶೇಖರ್ ಅವರನ್ನು &#8220;ಅತ್ಯಂತ ವಿಷಕಾರಿ&#8221; ಎಂದು ಟೀಕಿಸಿದ್ದು ಪಿಟಿಐಯಲ್ಲಿ ವರದಿಯಾಗಿತ್ತು.</p>
]]></content:encoded>
					
		
		
			</item>
		<item>
		<title>ಮುಖ್ಯಮಂತ್ರಿಗಳಿಗೆ ನಿಜವಾಗಿಯೂ ಕನ್ನಡ, ಕರ್ನಾಟಕದ ಮೇಲೆ ಕಾಳಜಿ ಇದೆಯೇ?</title>
		<link>https://peepalmedia.com/does-the-chief-minister-really-care-about-kannada-and-karnataka/</link>
		
		<dc:creator><![CDATA[Nagarjun]]></dc:creator>
		<pubDate>Thu, 03 Nov 2022 09:30:24 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[amith shah]]></category>
		<category><![CDATA[BASAVARAJ BOMMAYI]]></category>
		<category><![CDATA[india]]></category>
		<category><![CDATA[k t rama rao]]></category>
		<category><![CDATA[kannada]]></category>
		<category><![CDATA[Kannada Language]]></category>
		<category><![CDATA[karnataka]]></category>
		<category><![CDATA[karnataka govt]]></category>
		<category><![CDATA[M K STALIN]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<guid isPermaLink="false">https://peepalmedia.com/?p=13968</guid>

					<description><![CDATA[ಕನ್ನಡ ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ, ಕೋಟಿ ಕಂಠಗಾಯನ ಮತ್ತಿತರ ಕನ್ನಡಪರ ಕಾರ್ಯಕ್ರಮಗಳಿಗೆ ಚಾಲನೆ, ಬೆಂಬಲ, ಪ್ರೊತ್ಸಾಹ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ನಾಡು ನುಡಿಗಳ ಕುರಿತು ಎಷ್ಟರ ಮಟ್ಟಿಗೆ ಕಾಳಜಿ ಅಭಿಮಾನ ಹೊಂದಿದ್ದಾರೆ ಎಂಬ ಅನುಮಾನ ಕನ್ನಡಿಗರಲ್ಲಿ ಮೂಡಿದೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ಶಿಫಾರಸು ಮಾಡಿದೆ. [&#8230;]]]></description>
										<content:encoded><![CDATA[
<p style="font-size:20px">ಕನ್ನಡ ರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ, ಕೋಟಿ ಕಂಠಗಾಯನ ಮತ್ತಿತರ ಕನ್ನಡಪರ ಕಾರ್ಯಕ್ರಮಗಳಿಗೆ ಚಾಲನೆ, ಬೆಂಬಲ, ಪ್ರೊತ್ಸಾಹ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ನಾಡು ನುಡಿಗಳ ಕುರಿತು ಎಷ್ಟರ ಮಟ್ಟಿಗೆ ಕಾಳಜಿ ಅಭಿಮಾನ ಹೊಂದಿದ್ದಾರೆ ಎಂಬ ಅನುಮಾನ ಕನ್ನಡಿಗರಲ್ಲಿ ಮೂಡಿದೆ.</p>



<p style="font-size:20px">ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ಶಿಫಾರಸು ಮಾಡಿದೆ. ಇಂತಹ ಒಂದು ನಡೆ ದಕ್ಷಿಣ ರಾಜ್ಯಗಳ ದೃಷ್ಟಿಯಿಂದ ಬಹಳ ಅನಾಹುತಕಾರಿಯಾದದ್ದು. ಇದಕ್ಕೆ ನಮ್ಮ ನೆರೆ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತೀವ್ರ ಅಸಮಧಾನ ವ್ಯಕ್ತಪಡಿಸಿ, ಕೇಂದ್ರದ ನಡೆಯನ್ನು ವಿರೋಧಿಸಿ ಶಿಫಾರಸ್ಸನ್ನು ಹಿಂಪಡೆಯುವಂತೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಆದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಗ್ಗೆ ತುಟಿಕ್ ಪಿಟಿಕ್‌ ಎನ್ನದೆ ಮೌನವಹಿಸಿದ್ದಾರೆ. ಈ ಹಿಂದಿ ಹೇರಿಕೆಯ ನಡೆಗೆ ಯಾವುದೇ ಪ್ರತಿರೋಧ ಕರ್ನಾಟಕದ ಮುಖ್ಯಮಂತ್ರಿಗಳಿಂದ ವ್ಯಕ್ತವಾಗಿಲ್ಲ. ಹೀಗಾಗಿ ನಿಜವಾಗಿಯೂ ಕನ್ನಡ ನಾಡು, ಕನ್ನಡ ಭಾಷೆಯ ಬಗ್ಗೆ ಇವರಿಗೆ ನಿಜವಾಗಿ ಗೌರವ ಅಭಿಮಾನಗಳು ಇವೆಯೇ ಎಂಬ ಪ್ರಶ್ನೆ ಕಾಡುತ್ತದೆ.</p>



<p style="font-size:20px"><strong>ಕನ್ನಡಿಗರ ಪ್ರಶ್ನೆಗೆ ಕಾರಣವಾಗಿರುವ ಅಮಿತ್‌ ಶಾ ಶಿಫಾರಸ್ಸಿನಲ್ಲಿ ಏನಿದೆ?</strong></p>



<p style="font-size:20px">ಅಮಿತ್‌ ಶಾ ಅವರ ಸಮಿತಿ ಶಿಫಾರಸು ನೀಡುವ ಮುಂಚೆಯೇ, ಅಧಿಕೃತ ಭಾಷಾ ಸಂಸದೀಯ ಸಮಿತಿ 37 ನೇ ಸಭೆಯಲ್ಲಿ, ಶಾ ಅವರು &#8216; ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯ ಭಾಷೆಯಾಗಿ ಬಳಸಬೇಕೆ ಹೊರೆತು ಸ್ಥಳೀಯ ಭಾಷೆಗಳನ್ನಲ್ಲ ಎಂದು ಹೇಳಿದ್ದರು. ಹೀಗಾಗಿ ದೇಶದಲ್ಲೆಡೆ ಸಂಪರ್ಕ ಭಾಷೆಯಾಗಿ, ದೇಶಿಯ ಭಾಷೆ ಹಿಂದಿಯನ್ನು ಬಳಸಬೇಕು ಎಂದು ಸಭೆಯಲ್ಲಿ ಘೋಷಿಸಿದ್ದರು. ಇದಲ್ಲದೆ ಅಮಿತ್ ಶಾ ಅವರ ಅಧಿಕೃತ ಭಾಷಾ ಸಮಿತಿಗೆ ತನ್ನ ವರದಿಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಹಾಗೆ ಸಮಿತಿಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು.</p>



<p style="font-size:20px">ಈ ಸೂಚನೆ ಮೇರೆಗೆ ಸಮಿತಿ ಸಲ್ಲಿಸಿದ ಶಿಫಾರಸ್ಸಿನಲ್ಲಿ, ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಅದಲ್ಲದೇ ಐಐಟಿ, ಐಐಎಂ, ನವೋದಯ ಕೇಂದ್ರೀಯ ವಿವಿ ಇತ್ಯಾದಿಗಳಿಗೆ ಅನ್ವಯವಾಗುವಂತೆ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಬದಲು ಹಿಂದಿ ಮಾಧ್ಯಮ ಬರಬೇಕು. ಕೇಂದ್ರೀಯ ನೇಮಕಾತಿ ವೇಳೆ ಇಂಗ್ಲೀಷ್‌ ಬದಲು ಹಿಂದಿಯಲ್ಲಿ ಪ್ರಶ್ನೆಪತ್ರಿಕೆ ಇರಬೇಕು. ಕೇಂದ್ರೀಯ ಸರ್ಕಾರಿ ನೌಕರರ ನೇಮಕಾತಿ ವೇಳೆ ಹಿಂದಿ ಬಲ್ಲವರಿಗೆ ಆದ್ಯತೆ ನೀಡಬೇಕು. ಹಾಗೆಯೇ ಹಿಂದಿ ಬಳಸದ ನೌಕರರಿಗೆ ಎಚ್ಚರಿಕೆ ನೀಡಿ, ವಾರ್ಷಿಕ ವರದಿಯಲ್ಲಿ ನಮೂದಿಸಬೇಕು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿಯಲ್ಲೇ ಹೈಕೋರ್ಟ್‌ ಕಲಾಪಗಳನ್ನು ನಡೆಸಬೇಕು. ಕೇಂದ್ರ ಸರ್ಕಾರದ ಎಲ್ಲಾ ಪತ್ರ, ಇ-ಮೇಲ್‌ ವ್ಯವಹಾರ ಹಿಂದಿಯಲ್ಲೇ ನಡೆಯಬೇಕು. ಸರ್ಕಾರದ ಜಾಹೀರಾತಿನ ಹಣದಲ್ಲಿ ಶೇ.50 ರಷ್ಟು ಹಣವನ್ನು ಹಿಂದಿ ಜಾಹೀರಾತಿಗೆ ನೀಡಬೇಕು, ವಿಶ್ವ ಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆಯನ್ನು ಹಿಂದಿ ಎಂದು ಪರಿಗಣಿಸಬೇಕು ಎಂದು ತಿಳಿಸಲಾಗಿತ್ತು.</p>



<p style="font-size:20px"><strong>ಹೀಗಾದರೆ ಏನಾಗುತ್ತದೆ?</strong></p>



<p style="font-size:20px">ಶಿಫಾರಸ್ಸಿನಲ್ಲಿ ಇರುವಂತೆ ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗವಕಾಶಗಳನ್ನು ಕಳೆದುಕೊಳ್ಳುವಂತಾಗುತ್ತದೆ. ಹಿಂದಿ ಭಾಷೆ ಬಾರದ ಜನರು ಎರಡನೆ ದರ್ಜೆಯ ನಾಯಕರಾಗುತ್ತಾರೆ. ಪರ್ಯಾಯ ಭಾಷೆಯಾಗಿ ಹಿಂದಿ ಬಳಸುವುದರಿಂದ, ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಮಾನ್ಯತೆ ಇರುವುದಿಲ್ಲ. ಇದರಿಂದ, ಪ್ರಾದೇಶಿಕ ಭಾಷೆಯನ್ನಾಡುವ ಜನಸಮೂಹಕ್ಕೆ, ಶಿಕ್ಷಣ, ಉದ್ಯೋಗ, ಮತ್ತಿತರ ವಿಷಯಗಳಿಂದ ವಂಚಿತರಾಗಬೇಕಾಗುತ್ತದೆ.</p>



<p style="font-size:20px">ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲಾ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಬೋಧನಾ ಮಾಧ್ಯಮವನ್ನಾಗಿಸುವ ಕ್ರಮವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬಲವಾಗಿ ವಿರೋಧಿಸಿದ್ದು ಅಲ್ಲದೇ, ಕೇಂದ್ರದ ಶಿಫಾರಸ್ಸನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.</p>



<p style="font-size:20px">ಅ.10ರಂದು ಸ್ಟಾಲಿನ್‌ ತಾವು ಮಾಡಿದ್ದ ಸರಣಿ ಟ್ವೀಟ್‌ ನಲ್ಲಿ ಹಿಂದಿ ಹೇರಿಕೆ ಪ್ರಯತ್ನದ ವಿರುದ್ಧ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ತಮ್ಮ ಟ್ವೀಟ್‌ ನಲ್ಲಿ ʼಭಾರತದ ಭಾಷಾ ವೈವಿದ್ಯತೆಯನ್ನು ಕಡೆಗಣಿಸಿ ಹಿಂದಿ ಹೇರಿಕೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ತೀವ್ರ ರೀತಿಯಲ್ಲಿ ನಡೆಸುತ್ತಿರುವ ಪ್ರಯತ್ನ ಆತಂಕದ ಮಟ್ಟ ತಲುಪಿದೆ. ಅಧಿಕೃತ ಭಾಷೆ ಕುರಿತ ಸಂಸದೀಯ ಸಮಿತಿಯ ವರದಿಯ 11ನೆಯ ಸಂಪುಟದ ಪ್ರಸ್ತಾವಗಳು ಭಾರತದ ಆತ್ಮದ ಮೇಲೆ ನಡೆಸಿರುವ ನೇರವಾದ ಪ್ರಹಾರವಾಗಿʼ ಎಂದು ಬರೆದಿದ್ದರು. ಮುಂದುವರೆದು, ʼಹಿಂದಿ ಹೇರಿಕೆ ಮಾಡಿದ್ದೇ ಆದಲ್ಲಿ ಹಿಂದಿ ಮಾತನಾಡದ ವಿಶಾಲ ಜನಮೂಹವು ಎರಡನೆಯ ದರ್ಜೆಯ ನಾಗರಿಕರಾಗುತ್ತಾರೆ. ಹಿಂದಿ ಹೇರಿಕೆ ನಡೆಸುವುದು ಭಾರತದ ಸಮಗ್ರತೆಗೆ ವಿರುದ್ಧವಾದ ನಡೆ. ಆಳುವ ಬಿಜೆಪಿ ಸರ್ಕಾರವು ಹಿಂದೆ ನಡೆದ ಹಿಂದಿ ವಿರೋಧಿ ಚಳವಳಿಗಳಿಂದ ಪಾಠ ಕಲಿಯುವುದು ಒಳ್ಳೆಯದುʼ ಎಂದು ಸಹ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದ್ದರು.</p>



<p style="font-size:20px">ಅದೇ ರೀತಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಹ ಅ.12ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹಿಂದಿಯನ್ನು ಹೇರಲು ನಡೆಸುತ್ತಿರುವ ಪ್ರಯತ್ನಗಳನ್ನು ʼಒಪ್ಪಲಸಾಧ್ಯʼ ಎಂದಿದ್ದರು. ಕೇಂದ್ರ ಸರ್ಕಾರದ ಸೇವೆಗಳ ಪರೀಕ್ಷೆಗಳ ಮಾಧ್ಯಮವನ್ನು ಹಿಂದಿಯನ್ನಾಗಿಸುವ ಮತ್ತು ಐಐಟಿ, ಐಐಎಂಗಳಲ್ಲಿ ಅಧ್ಯಯನ ಭಾಷೆಯನ್ನು ಹಿಂದಿಯನ್ನಾಗಿಸುವ ಅಧಿಕೃತ ಭಾಷಾ ಸಂಸದೀಯ ಸಮಿತಿಯ ಪ್ರಸ್ತಾಪಗಳನ್ನು ಕೇರಳ ಸರ್ಕಾರ ಒಪ್ಪಲು ಸಾದ್ಯವೇ ಇಲ್ಲ ಎಂದು ತಿಳಿಸಿದ್ದರು.</p>



<p style="font-size:20px">ಇನ್ನೂ ತೆಲಂಗಾಣ ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಕೆ.ಟಿ.ರಾಮರಾವ್ ಅವರು ಕೂಡ ಹಿಂದಿ ಹೇರಿಕೆ ವಿರೋಧಿಸಿ ನರೇಂದ್ರ ಮೋದಿಯವರಿಗೆ ಪತ್ರ ಬೆರಿದಿದ್ದು, ಶಿಫಾರಸು ಸಂವಿಧಾನ ಬಾಹಿರವಾಗಿದ್ದು, ಕೂಡಲೇ ಹಿಂಪಡೆಯಬೇಕು ಎಂದು ರಾಮರಾವ್ ಒತ್ತಾಯಿಸಿದ್ದರು. ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ಪ್ರಸ್ತುತವಾಗಿ ಪರೋಕ್ಷವಾಗಿ ಹಿಂದಿ ಹೇರಿಕೆಯು ಕೋಟ್ಯಂತರ ಯುವಕರ ಜೀವನವನ್ನು ಹೇಗೆ ಹಾಳುಮಾಡುತ್ತಿದೆ ಎಂಬುದರ ಕುರಿತು ವಿವರಿಸಲಾಗಿದ್ದು, ಕೇಂದ್ರೀಯ ಉದ್ಯೋಗಗಳಿಗೆ ನೀಡುವ ಅರ್ಹತಾ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಶ್ನೆಗಳು ಇರುವುದರಿಂದ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಅಮಿತ್‌ ಶಾ ಸಮಿತಿ ನೀಡಿರುವ ಶಿಪಾರಸು ʼಪ್ರಸ್ತುತ ಮತ್ತು ಭವಿಷ್ಯದʼ ಪೀಳಿಗೆಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದರು.</p>



<p style="font-size:20px">ಕರ್ನಾಟಕಲ್ಲಿ ಇರುವ ಬಸವರಾಜ ಬೊಮ್ಮಾಯಿ ಸರ್ಕಾರ ಒಂದು ಜವಾಬ್ದಾರಿ ಸರ್ಕಾರವೇ ಆಗಿದ್ದಿದ್ದರೆ ಈ ವಿಷಯಗಳ ಕುರಿತು ತುಟಿ ಬಿಚ್ಚದೇ ಕುಳಿತುಕೊಳ್ಳಲು ಸಾಧ್ಯವಿತ್ತೆ? ಅಮಿತ್‌ಷಾ ನೀತಿ ಕನ್ನಡಿಗರಿಗೆ ಎಂತಹ ಮಾರಕ ನೀತಿ ಎಂಬುದು ತಿಳಿಯಲಾರದ ದಡ್ಡರೇ ನಮ್ಮ ಮುಖ್ಯಮಂತ್ರಿ?</p>



<p style="font-size:20px">ಹಿಂದಿಯ ಗುಲಾಮಗಿರಿಗೆ ತಳ್ಳುವ ಕೇಂದ್ರದ ಈ ನಡೆ ಕನ್ನಡಿಗರಿಗೆ ದೊಡ್ಡ ಅನ್ಯಾಯವಲ್ಲವೇ? ಲಕ್ಷಾಂತರ ಉದ್ಯೋಗಗಳಿಂದ ಕನ್ನಡಿಗರನ್ನು ಕೇವಲ ಭಾಷೆಯ ಕಾರಣಕ್ಕಾಗಿ ವಂಚಿಸುತ್ತಿರುವ ಇಂತಹ ಹುನ್ನಾರಗಳ ಬಗ್ಗೆ ಒಂದು ಸರ್ಕಾರವಾಗಿ ಯಾವುದೇ ನಿಲುವು ತಳೆಯದಿದ್ದರೆ ಅದಕ್ಕಿಂತ ಜನದ್ರೋಹ ಯಾವುದಿದೆ?</p>
]]></content:encoded>
					
		
		
			</item>
		<item>
		<title>ಹಿಂದಿ ಕಡ್ಡಾಯ ಶಿಫಾರಸು ವಿರೋಧಿಸಿ ಕೇರಳ ಸಿಎಂ ಮೋದಿಗೆ ಪತ್ರ</title>
		<link>https://peepalmedia.com/hindi-kaddaya-shipharasu-virodhisi-kerala-cm-modige-pathra/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 12 Oct 2022 05:53:19 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[hindi language]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[KERALA CM]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[pm narendra modi]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=10189</guid>

					<description><![CDATA[ಕೇರಳ : ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕೇಂದ್ರ ಸೇವೆಗಳಿಗೆ ಹಿಂದಿ ಪರೀಕ್ಷಾ ಮಾಧ್ಯಮವಾಗಬೇಕು ಎಂಬ ಸಂಸತ್ತಿನ ಶಿಫಾರಸಿಗೆ ವಿರೋಧಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಸಲ್ಲಿಸಿದೆ. ಇದನ್ನು ಒಪ್ಪದ [&#8230;]]]></description>
										<content:encoded><![CDATA[
<p style="font-size:20px"><strong>ಕೇರಳ </strong>: ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಕೇಂದ್ರ ಸೇವೆಗಳಿಗೆ ಹಿಂದಿ ಪರೀಕ್ಷಾ ಮಾಧ್ಯಮವಾಗಬೇಕು ಎಂಬ ಸಂಸತ್ತಿನ ಶಿಫಾರಸಿಗೆ ವಿರೋಧಿಸಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.</p>



<p style="font-size:20px">ಕೇಂದ್ರೀಯ ಶಿಕ್ಷಣ ಸಂಸ್ಥೆಗಳಿಂದ ಹಿಡಿದು ಉನ್ನತ ತಾಂತ್ರಿಕ ಸಂಸ್ಥೆಗಳವರೆಗೂ ಇಂಗ್ಲೀಷ್‌ ಬದಲು ಹಿಂದಿ ಮಾಧ್ಯಮದಲ್ಲಿಯೇ ಪಠ್ಯಬೋಧನೆಯನ್ನು ಮಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷರಾಗಿರುವ ಸಂಸತ್ತಿನ ಅಧಿಕೃತ ಭಾಷಾ ಸಮಿತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶಿಫಾರಸು ಸಲ್ಲಿಸಿದೆ. ಇದನ್ನು ಒಪ್ಪದ ಕೇರಳದ ಸಿಎಂ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ.</p>



<p style="font-size:20px">ಈ ಕುರಿತು ಪತ್ರ ಬರೆದ ಪಿಣರಾಯಿ ವಿಜಯನ್‌ “ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯನ್ನು ಅಂಗೀಕರಿಸುವ ʼವಿವಿಧತೆಯಲ್ಲಿ ಏಕತೆʼ ಎಂಬ ಪರಿಕಲ್ಪನೆಯಿಂದ ಭಾರತದ ಸಾರವನ್ನು ವ್ಯಾಖ್ಯಾನಿಸಲಾಗಿದೆ. ಯಾವುದೇ ಒಂದು ಭಾಷೆಯನ್ನು ಇತರರಿಗಿಂತ ಹೆಚ್ಚು ಪ್ರಚಾರ ಮಾಡುವುದು ಸಮಗ್ರತೆಯನ್ನು ನಾಶಪಡಿಸಲು ಕಾರಣವಾಗುತ್ತದೆ” ಎಂದು ಭಾಷೆಯ ಬಗ್ಗೆ ತಮ್ಮ ನಿಲುವುಗಳನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದರ ಮೂಲಕ ತಿಳಿಸಿದ್ದಾರೆ.</p>



<p></p>



<p style="font-size:20px"><strong>ಇದನ್ನೂ ನೋಡಿ : <mark class="has-inline-color has-vivid-red-color">ಎಂದಿನಂತೆ ಓಲಾ, ಉಬರ್‌, ರ‍್ಯಾಪಿಡೋಗಳ ಸಂಚಾರ</mark></strong>\</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="H36J4d1Wfv"><a href="https://peepalmedia.com/endinante-ola-uber-rapidogala-sanchara/">ಎಂದಿನಂತೆ ಓಲಾ, ಉಬರ್‌, ರ‍್ಯಾಪಿಡೋಗಳ ಸಂಚಾರ</a></blockquote><iframe class="wp-embedded-content" sandbox="allow-scripts" security="restricted"  title="&#8220;ಎಂದಿನಂತೆ ಓಲಾ, ಉಬರ್‌, ರ‍್ಯಾಪಿಡೋಗಳ ಸಂಚಾರ&#8221; &#8212; Peepal Media" src="https://peepalmedia.com/endinante-ola-uber-rapidogala-sanchara/embed/#?secret=ApXMoIjQKW#?secret=H36J4d1Wfv" data-secret="H36J4d1Wfv" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
	</channel>
</rss>
