<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>pm modi &#8211; Peepal Media</title>
	<atom:link href="https://peepalmedia.com/tag/pm-modi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 12 Aug 2024 11:14:15 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>pm modi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ʼಓಲಂಪಿಕ್‌ʼನಲ್ಲಿ ಗೋಲ್ಡ್‌ ಮೇಡಲ್‌ ಗೆದ್ದ ʼನಮೋ&#8217;! (ಕಠಾರಿಯವರ ವಿಡಂಬನಾ ಬರಹ)</title>
		<link>https://peepalmedia.com/%ca%bcnamo-winning-gold-medal-in-chaddi-olympics-satire-by-kathari/</link>
		
		<dc:creator><![CDATA[Peepal Media]]></dc:creator>
		<pubDate>Mon, 12 Aug 2024 09:46:27 +0000</pubDate>
				<category><![CDATA[ಅಂಕಣ]]></category>
		<category><![CDATA[ದೇಶ]]></category>
		<category><![CDATA[ವಿಡಂಬನೆ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[modijí]]></category>
		<category><![CDATA[Narendra modhi road show]]></category>
		<category><![CDATA[olampic]]></category>
		<category><![CDATA[olempic]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm]]></category>
		<category><![CDATA[pm modi]]></category>
		<category><![CDATA[pm narendra modi]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Vinesh pogat]]></category>
		<category><![CDATA[vineshpogat]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43704</guid>

					<description><![CDATA[ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು. ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ [&#8230;]]]></description>
										<content:encoded><![CDATA[
<p>ಸದಾ ಚಪ್ಪಾಳೆ, ಹೊಗಳಿಕೆಯನ್ನು ಆನಂದಿಸುತ್ತ ಆತ್ಮರತಿಯಲ್ಲಿ ಸುಖಿಸುವ ಸಾಮ್ರಾಟ ನಮೋಗೆ ಬಹುಮತವಿಲ್ಲದ ಅಧಿಕಾರ ಹಿಡಿದಂದಿನಿಂದ ಖಿನ್ನತೆ ಆವರಿಸಿತ್ತು. ವಿಜ್ಞಾನ, ಗಣಿತ ಜ್ಞಾನವನ್ನೆಲ್ಲ ಅರೆದು ಕುಡಿದವನಂತೆ ಬೂಸಿ ಬಿಟ್ಟರೂ ಲೈಕ್ ಒತ್ತಿ, ಫಾರ್ವಡ್ ಮಾಡಿ ಹಾಡಿ ಹೊಗಳುತ್ತಿದ್ದ ಭಕ್ತರೇ ಹಾದಿಬೀದಿಯಲ್ಲಿ ನಿಂತು ಫೇಕು ಮಾಸ್ಟರ್, ಕಿಂಗ್ ಆಫ್ ಕರಪ್ಷನ್ ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಿರುವ ರೀಲ್ಸ್ ಗಳು ನಮೋವನ್ನು ಕಂಗೆಡಿಸಿತ್ತು.</p>



<p>ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ಮಾಡಿ ಲೈಮ್ ಲೈಟಿನಲ್ಲಿರೋಣವೆಂದರೆ – ತಾನೇ ಉದ್ಘಾಟಿಸಿದ, ಪಾರ್ಟಿಯ ಖಜಾನೆ ತುಂಬಿಸಿದ ಏರ್ ಪೋರ್ಟಿನ ಚಾವಣಿಗಳು ಆಕಾಶಕ್ಕೆ ಹಾರಿ ಹೋಗುತ್ತಿದ್ದರೆ, ಹೈವೇಗಳು ಒಂದೇ ಮಳೆಗೆ ಬಿರುಕು ಬಿಟ್ಟು ಬಾಯ್ತೆರೆದಿದ್ದವು. ಒಂದು ವರ್ಷವೂ ತುಂಬಿರದ ಹೊಸ, ನಿರ್ಮಾಣ ಹಂತದ ಸೇತುವೆಗಳು ಸ್ಪರ್ಧೆಗೆ ಬಿದ್ದಂತೆ ಸಾಲುಸಾಲಾಗಿ ಧರೆಗುರುಳುತ್ತಿದ್ದವು. ಇನ್ನು ಪರೀಕ್ಷೆ ಹೊತ್ತಲ್ಲಿ ವಿದ್ಯಾರ್ಥಿಗಳನ್ನು ಗುಡ್ಡೆ ಹಾಕಿ ʼಎಕ್ಸಾಮ್ ಪೇ ಚರ್ಚಾʼ ಮಾಡಿ ಪುಕ್ಕಟೆ ಸಲಹೆ ಕೊಡೋಣವೆಂದರೆ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ವಿದ್ಯಾರ್ಥಿಗಳು ರೊಚ್ಚಿಗೆದ್ದು ಬೀದೀಲಿ ಗಲಾಟೆ ಮಾಡುತ್ತಿದ್ದರು. ಮನೆಯಿಂದ ಹೊರ ಹೋಗುವ ಹಾಗೆ ಇರಲಿಲ್ಲ.</p>



<p>ರೂಮಲ್ಲೇ ಕೂತು &#8211; ಕಾಂತಿಯಿಂದ ಹೊಳೆಯುತ್ತಿದ್ದ ಮುಖಾರವಿಂದವು ಕಪ್ಪುಗಟ್ಟಿ, ಕನ್ನಡಿಯಲ್ಲಿನ ಪ್ರತಿಬಿಂಬ ನಮೋನನ್ನು ʼಗೆದ್ದು ಸೋತ ಸಾಮ್ರಾಟʼ ಎಂದು ಅಣಕಿಸುತ್ತಿತ್ತು. ಕಾರಿನಲ್ಲಿ ಮುಂದೆ ಆಸೀನವಾದರೆ ಪ್ರಭಾವಳಿಯಾಗಿದ್ದ ಚಾವಣಿ ಲೈಟನ್ನು ತೆಗೆಸಿ, ಜನರಿಗೆ ಹ್ಯಾಪು ಮೋರೆ ತೋರಿಸಲಾಗದೆ ಹಿಂಬದಿಗೆ ಕೂರುವ ದುರ್ದೆಶೆಯನ್ನು ಶಪಿಸುವುದು ಬಿಟ್ಟು ನಮೋಗೆ ಬೇರೆ ಪರಿಹಾರ ಕಾಣಲಿಲ್ಲ.</p>



<p>ಮನೆಯಲ್ಲೇ ಕೂತರೆ ಹುಚ್ಚು ಹಿಡಿಯುತ್ತದೆಂದು ಫಾರಿನ್ ಟೂರ್ ಹೊರಟರೆ ಅಲ್ಲೂ ನಿರಾಶೆ. ಏರ್ ಪೋರ್ಟಲ್ಲಿ ಸ್ವಾಗತ ಕೋರಲು ವಿದೇಶದಲ್ಲಿ ಗಣ್ಯರು ನಾಪತ್ತೆ. ಇನ್ನು ಸ್ವದೇಶಕ್ಕೆ ಮರಳಿದರೆ ತನ್ನ ಪಾರ್ಟಿಯ ಕಮಲಿಗಳೇ ಬೊಕ್ಕೆ ಹಿಡಿದು ನಿಲ್ಲಲು ಅಸಡ್ಡೆ ತೋರಿ ನೊಣ ಹೊಡೆಯುವುದಕ್ಕೂ ಯಾರೂ ಇರುತ್ತಿರಲಿಲ್ಲ.</p>



<p>ಯಾವುದಾದರೂ ಸನ್ನಿವೇಶವನ್ನು ಸೃಷ್ಟಿಸಿ ನಂದಿ ಹೋಗಿದ್ದ ಲೈಮ್ ಲೈಟನ್ನು ಹೇಗೆ ಹೊತ್ತಿಸುವುದೆಂಬ ದೇಶೋದ್ಧಾರದ ಚಿಂತನೆಯಲ್ಲಿ ಮುಳುಗಿದ್ದ ನಮೋಗೆ ಯಾರೋ ಕೂಗಿದಂತಾಯಿತು. “ವಿಶ್ವಗುರು ಚಿರಾಯುವಾಗಲಿ” ಎಂದು ಮುಖ್ಯ ಆಪ್ತಕಾರ್ಯದರ್ಶಿ ಸಂಘೀ ಸಲಾಮು ಮಾಡುತ್ತ ಎದುರಿಗೆ ನಿಂತಿದ್ದ.</p>



<p>“ಮಹಾಸ್ವಾಮಿಗಳೇ…ತಮಗೆ ಸಂತೋಷ ಸುದ್ದಿ. ಲೈಮ್ ಲೈಟಿಗೆ ಮತ್ತೆ ಬರಲು ಸುವರ್ಣಾವಕಾಶ!”</p>



<p>ತನ್ನ ಮನದ ತಳಮಳ ತಿಳಿದದ್ದು ಹೇಗೆ ಎಂದು ಅಚ್ಚರಿಗೊಂಡರೂ “ಲೈಮ್ ಲೈಟಲ್ಲಿ ಇರೋದೆ ನಂಗೆ ಕೆಲ್ಸನಾ? ಜನರೋದ್ಧಾರದ ವಿಚಾರಗಳು ಇಲ್ವಾ? ಅಧಿಕಪ್ರಸಂಗಿ…ಸರಿ…ಏನದು ಸಮಾಚಾರ?” ಎಂದು ಹುಸಿ ಕೋಪ ಪ್ರದರ್ಶಿಸಿದ.</p>



<p>“ಸ್ವಾಮಿಗಳೇ…ಒಲಂಪಿಕ್ ಗೇಮ್ಸ್ ಶೂಟಿಂಗಲ್ಲಿ ನಮಗೆ ಬ್ರಾಂಜ್ ಮೆಡಲ್ ಬಂದಿದೆ!”</p>



<p>“ಓಹ್…ಹೌದಾ! ಒಳ್ಳೆಯ ಸುದ್ದಿ ತಂದಿದ್ದೀಯ. ಇಷ್ಟು ವರ್ಷ ನಾನು ಕಷ್ಟಪಟ್ಟಿದ್ದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ತಗೋ…” ಎಂದು ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ಅವನತ್ತ ಒಗೆದು “ಬೇಗ ಕ್ಯಾಮೆರಾಮೆನ್ನ ಕರೆಸು. ಹಾಗೆ ಆ ಸ್ಪರ್ಧಿಗೆ ಫೋನು ಮಾಡು”</p>



<p>“ಹಲೋ…”</p>



<p>“ಹಲೋ…ಯಾರು?”</p>



<p>“ನಾನಮ್ಮ…ವಿಶ್ವಗುರು…ಭರತಖಂಡದಿಂದ”</p>



<p>“ಹ!…ಖಂಡ?…ಯಾವ ಆಶ್ರಮಕ್ಕೂ ನಾನು ಭಕ್ತೆಯಾಗಿಲ್ಲ….ರಾಂಗ್ ನಂಬರ್”</p>



<p>ಆ ಕಡೆಯಿಂದ ಫೋನ್ ಕಟ್ ಮಾಡಿದ್ದು ನಮೋಗೆ ಕಪಾಳಮೋಕ್ಷ ಆದಂತಾಯಿತು.</p>



<p>“ಮೇಡಮ್…ಪ್ರಧಾನಿ ನಮೋ ಮಾತಾಡ್ತಿರೋದು. ನಿಮ್ಗೆ ಕಂಗ್ರಾಟ್ಸ್ ಹೇಳೋಕೆ” ಮತ್ತೆ ಆಪ್ತಕಾರ್ಯದರ್ಶಿ ಕರೆ ಮಾಡಿದ.</p>



<p>“ಓಹ್…ಸಾರಿ ಸರ್, ಗೊತ್ತಾಗ್ಲಿಲ್ಲ. ಥ್ಯಾಂಕ್ಯು ಸರ್”</p>



<p>“ಪರವಾಗಿಲ್ಲ. ಶೂಟಿಂಗ್ ಅಂದ್ರೆ…ರೀಲ್ಸ… ಶಾರ್ಟ್ ಫಿಲ್ಮಾ ಅಥ್ವಾ ಫೂಚರ್ ಫಿಲ್ಮಾ?”</p>



<p>“ಇಲ್ಲಾ ಸಾರ್…ಅದು ಪಿಸ್ತೂಲ್ ಶೂಟಿಂಗ್….ಟೆನ್ ಮೀಟರ್ ರೇಂಜು”</p>



<p>“ಗನ್ ಶೂಟಿಂಗಾ…ಒಳ್ಳೇದು. ನಮ್ಮ ದೇಶಕ್ಕೆ ಮೆಡಲ್ ತಂದು ವರ್ಲ್ಡ್ ಫೇಮಸ್ ಮಾಡಿದ್ದೀಯ…ಬದಾಯಿ”</p>



<p>“ಥ್ಯಾಂಕ್ಯು ವೆರಿ ಮಚ್…ಸರ್”</p>



<p>“ಬೇಟಿ ಪಡಾವ್…ಬೇಟಿ ಬಚಾವ್…ನನ್ನ ಸ್ಲೋಗನ್ ಸಾರ್ಥಕ ಆಯ್ತು ನೋಡು, ವೆಲ್ ಡನ್…ಹ…ಒಂದ್ ವಿಷ್ಯ ನಿಂಗೆ ಗೊತ್ತಾ? ನಾನೂ ಒಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲ್ ವಿನ್ನರ್!”</p>



<p>“ಗ್ರೇಟ್ ಸರ್…ಗೊತ್ತೇ ಇರಲಿಲ್ಲ!”</p>



<p>“ಹಳೇ ಮಾತು…ಯಂಗ್ ಆಗಿದ್ದಾಗ, ನನ್ನ ಪೂರ್ವಾಶ್ರಮ ಮಾ.ಕೃಪಾಕಟಾಕ್ಷ ಕುಟೀರದ ಅಂತರರಾಷ್ಟ್ರೀಯ ಚಡ್ಡಿ ಒಲಂಪಿಕ್ಸ್ ಕ್ರೀಡಾಸ್ಪರ್ಧೆಯಲ್ಲಿ ನಮ್ಮ ತಾಲ್ಲೂಕಿಗೆ ನಾನೇ ಮೂರು ಬಾರಿ ಗೋಲ್ಡ್ ಮೆಡಲ್ ಗೆದ್ದಿದ್ದೆ”</p>



<p>“ಸೂಪರ್…ಯಾವ ಗೇಮಲ್ಲಿ ಸರ್”</p>



<p>“ಬಹಳ ಟಫ್ ಗೇಮ್…ಹಳಿ ಇಲ್ಲದೆ ಬುಲೆಟ್ ಟ್ರೈನ್ ಬಿಡೋದು…”</p>



<p>ಬುರುಡೆ ಬಿಡುತ್ತಿದ್ದ ನಮೋನ ನಾನ್ ಸ್ಟಾಪ್ ಮಾತಿಗೆ ಆ ತುದಿಯಿಂದ ಪ್ರತಿಕ್ರಿಯೆ ಬರುವುದು ನಿಂತಾಗ, ಸಾಕಷ್ಟು ರೀಲು ಸುತ್ತಿಕೊಂಡ ಡೈರೆಕ್ಟರ್ ಕೊನೆಗೆ ʼಕಟ್…ಕಟ್ʼ ಎಂದಾಗಲೇ ನಮೋ ಮಾತು ನಿಲ್ಲಿಸಿದ.</p>



<p>ಬದಾಯಿ ಹೇಳಿದ ನಮೋನ ರೀಲ್ಸ್ ಸಿಕ್ಕಿದ್ದೇ ತಡ ವೈರಲ್ ಮಾಡಲು ಅಮಿತ ಮನೆಹಾಳ, ರಾಗಾನ ಸಂಸತ್ತು ಭಾಷಣ ನೋಡುವುದರಲ್ಲಿ ಮಗ್ನರಾಗಿದ್ದ ಕೇಸರಿ ಐಟಿ ಸೆಲ್ಲಿನ ಟು ರುಪೀಸ್ ಕೂಲಿಗಳನ್ನು ಕೆಲಸಕ್ಕೆ ಹಚ್ಚಿದ.</p>



<p>ಕನ್ನಡಿ ಮುಂದೆ ನಿಂತಾಗ ಮೈಮೇಲೆ ಮಂದ ಬೆಳಕು ಚೆಲ್ಲಿದ್ದನ್ನು ಕಂಡು ಮುಖವರಳಿಸಿ ʼಬ್ಯಾಕ್ ಟು ಲೈಮ್ ಲೈಟುʼ ಎಂದು ನಮೋ ಗಡ್ಡ ನೀವಿಕೊಳ್ಳುವ ಹೊತ್ತಿಗೆ, ಆಪ್ತಕಾರ್ಯದರ್ಶಿ “ಸ್ವಾಮಿಗಳೇ…. ಮತ್ತೊಂದು ಶುಭ ಸಮಾಚಾರ. ಕುಸ್ತಿಯಲ್ಲಿ ಗೋಲ್ಡ್ ಮೆಡಲ್ ಮಿಸ್ಸಾದರೆ….ಸಿಲ್ವರ್ ಮೆಡಲ್ ಅಂತೂ ಗ್ಯಾರಂಟಿ” ಅಂದ.</p>



<p>“ಕುಸ್ತಿ!” ಶಬ್ಧ ಕಿವಿಗೆ ಬಿದ್ದದ್ದೇ ಅರಳಿದ ನಮೋ ಮುಖ ಕಿವುಚಿದ ಹುಣಸೇ ಹಣ್ಣಾಯಿತು. ಕೈ ಸನ್ನೆ ಮಾಡಿ ಹೊರಡು ಎಂದದ್ದು ಆಪ್ತಕಾರ್ಯದರ್ಶಿಗೆ ʼತೊಲಗಾಚೆ!ʼ ಎನ್ನುವಂತಿತ್ತು.</p>



<p>ತನ್ನ ಬಲಗೈಬಂಟ, ಕುಖ್ಯಾತ ಕಚ್ಚೆಹರುಕ &#8211; ತ್ಯಾಜ್ಯ ಅವಲಕ್ಷಣ್ ವಿರುದ್ಧ ಮಹಿಳಾ ಲೈಂಗಿಕ ಶೋಷಣೆ ಆರೋಪ ಮಾಡಿದ್ದೇ ಅಲ್ಲದೇ ರಾಜಧಾನಿಯ ಮೈನ್ ರೋಡಲ್ಲಿ ಟೆಂಟಾಕಿ “ರೇಪಿಸ್ಟ್ ಅನ್ನು ಫೆಡರೇಷನ್ ನಿಂದ ಹೊರ ಹಾಕಿ, ಬೇಟಿ ಬಚಾವ್ ಮಾತನ್ನು ಉಳಿಸಿಕೊಳ್ಳಿ. ಇಲ್ಲಾ ಒಲಂಪಿಕ್ಸ್ ನಲ್ಲಿ ಗೆದ್ದು ನಿಮ್ಮ ಹಿಪಾಕ್ರಸಿಯನ್ನು, ದುರಹಂಕಾರವನ್ನು ಸೋಲಿಸಿಯೇ ಸೋಲಿಸುತ್ತೇನೆ” ಎಂದು ತನಗೆ ಸವಾಲು ಹಾಕಿದ ಮಹಿಳಾ ಪೈಲ್ವಾನರ ಪ್ರತಿಭಟನೆ ನಮೋನ ಕಣ್ಮುಂದೆ ಹಾದು ಹೋಗಿ, ದೇಹ ಬೆಂಕಿಯಾಗಿ, ಉರಿ ಅಸಹನೀಯವಾಯಿತು.</p>



<p>“ನನ್ನನ್ನು ಬೆದರಿಸುವಷ್ಟು ಧೈರ್ಯದ ವೈರಿಗೆ ಪದಕ ಸನ್ಮಾನವೇ? ಅದನ್ನು ತಡೆಯುವುದು ಹೇಗೆ? ಇಲ್ಲಿಯೇ ಆಗಿದ್ದರೆ ಕುತಂತ್ರಿಗೆ ಹೇಳಿ ಇಡಿ, ಐಟಿ, ಸಿಬಿಐಯನ್ನು ಛೂ ಬಿಡಬಹುದಿತ್ತು. ಆ ದೇಶದ ಪ್ರಧಾನಿಗೆ ಹೇಳಿದರೆ ಹೇಗೆ?” ಮುಷ್ಟಿ ಹಿಡಿದು ಯೋಚಿಸುತ್ತ ನಮೋ ಶತಪಥ ಹಾಕಿದ.</p>



<p>ಓಡೋಡಿ ಬಂದ ಆಪ್ತಕಾರ್ಯದರ್ಶಿ “ಘಾತವಾಯಿತು ಮಹಾಸ್ವಾಮಿ…ಪೈಲ್ವಾನ್ ತೂಕ ನೂರೇ ಗ್ರಾಮ್ ಹೆಚ್ಚಾಗಿ ಅವಳನ್ನು ಡಿಸ್ ಕ್ವಾಲಿಫೈ ಮಾಡಿದ್ದಾರೆ!” ಎಂದಾಗ, ನಮೋಗೆ ಕುಣಿಯಬೇಕು ಅನ್ನಿಸಿದರೂ “ಅಯ್ಯೋ…ಎಂಥಾ ದುರ್ವಿಧಿ. ಅದೆಂಥ ರೂಲ್ಸುಗಳು! ಹೋಗಲಿ…ನಾವೇನು ಮಾಡುವಂತಿಲ್ಲ. ಒಂದು ಚೊಂಬು ತಣ್ಣಗಿನ ಹಾಲು ತಗೊಂಬಾ. ಹೊಟ್ಟೆಗೆ ಬೆಂಕಿ ಬಿದ್ದಿದೆ” ಎಂದು, ಹಾಲು ಕುಡಿದು ದೇಹದ ತಾಪಮಾನ ಇಳಿಸಿಕೊಂಡ.</p>



<p>“ಮಗಳೇ…ನೀನು ಚಾಂಪಿಯನ್ನರ ಚಾಂಪಿಯನ್, ನಮ್ಮ ದೇಶದ ಹೆಮ್ಮೆ. ಪದಕ ಕೈತಪ್ಪಿದ್ದಕ್ಕಾಗಿ ನಿನಗಿಂತ ನನಗೆ ಎಷ್ಟು ನೋವಾಗಿದೆ ಎಂದರೆ ಅದನ್ನು ಪದಗಳಲ್ಲಿ ಬರೆಯಲಾಗುತ್ತಿಲ್ಲ. ಧೃತಿಗೆಡಬೇಡ…ನಾವೆಲ್ಲ ನಿನ್ನೊಂದಿಗಿದ್ದೇವೆ” ಎಂದು ತೋರಿಕೆ ಸಂದೇಶ ಹಾಕಿ, ಅತ್ತ ಕ್ರೀಡಾ ಮಂತ್ರಿ ಅಮಾನುಷ್ ಮಂಡೂಕನಿಗೆ ಪೈಲ್ವಾನಳಿಗೆ ವ್ಯಯಿಸಿದ ಖರ್ಚುವೆಚ್ಚವನ್ನು ಪ್ರಕಟಿಸಲು ಚಿತಾವಣೆ ಮಾಡಿದ.</p>



<p>ಪೊಲೀಸರಿಂದ ರಸ್ತೆಲೀ ದರದರ ಎಳೆದಾಡಿಸಿಕೊಂಡು ಅವಮಾನಕ್ಕೆ ಈಡಾಗಿದ್ದ ಕುಸ್ತಿಪಟುವಿನ ಪ್ರತಿಭಟನೆ ಮರೆಯದ ದೇಶದ ವಿವೇಕವಂತರು &#8211; ಗೆದ್ದಾಗ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದಿಸುವಂತೆ ಕುಸ್ತಿಪಟುವಿಗೆ ಶುಭಾಶಯ ಹೇಳದೆ, ಅನರ್ಹಗೊಂಡಾಗ ಲೇವಡಿಸುವಂತೆ ಹಾಕಿದ ಮೊಸಳೆ ಕಣ್ಣೀರಿನ ಸಂದೇಶಕ್ಕೆ ನಮೋನ ಮೇಲೆ ಆಕ್ರೋಶಗೊಂಡರು. ಕ್ಷುಲ್ಲಕ ಕಾರಣಕ್ಕೆ ಪದಕ ಕೈತಪ್ಪಿದ್ದಕ್ಕಾಗಿ ಇಡೀ ದೇಶವೇ ನಿರಾಶಭಾವ ಹೊಂದಿರುವಾಗ, ಪೈಲ್ವಾನಳಿಗೆ ಸರ್ಕಾರ ವ್ಯಯಿಸಿದ್ದ ಹಣದ ಉಲ್ಲೇಖ ಮಾಡಿದ್ದು ನಮೋನ ಸೇಡಿನ ಕ್ರಮವೆಂದು ಖಂಡಿಸಿದರು.</p>



<p>“ಈ ನಮೋ ಒಬ್ಬ ಹೇಡಿ. ಅಸೂಕ್ಷ, ಕಿಡಿಗೇಡಿ. ಶೋಷಣೆಯ ವಿರುದ್ಧ ಸಿಡಿದೆದ್ದ ಕುಸ್ತಿಪಟುವಿಗೆ ಖರ್ಚು ಮಾಡಿರುವುದು ಜನರ ತೆರಿಗೆ ಹಣ. ಅದನ್ನು ಪ್ರಕಟಿಸಿದರೆ – ದಿನಕ್ಕೆ ಇಪ್ಪತ್ತು ಬಟ್ಟೆ ಬದಲಿಸಿ ಶೋಕಿ ಮಾಡುತ್ತ, ವಿಮಾನದಲ್ಲಿ ಫಾರಿನ್ ಸುತ್ತಿ ಮಜಾ ಮಾಡುವ ಖರ್ಚನ್ನು ಜನರ ಮುಂದಿಡಲಿ” ಎಂದು ಪ್ರಜ್ಞಾವಂತರು ನಮೋವನ್ನು ಛೇಡಿಸಿದರು.</p>



<p>ಮೂರು ಬಿಟ್ಟ ನಮೋಗೆ ಅದು ತಾಕುವುದೇ? ಉತ್ತರ ಸಿಗದೆ ಉಳಿವ ಪ್ರಶ್ನೆ.</p>



<p>ಚಂದ್ರಪ್ರಭ ಕಠಾರಿ<br>cpkatari@yahoo.com</p>
]]></content:encoded>
					
		
		
			</item>
		<item>
		<title>ನವೆಂಬರ್ 11ಕ್ಕೆ ಪ್ರಧಾನಿ ಭೇಟಿ: ಸಂಚಾರ ವ್ಯವಸ್ಥೆಗೆ ತೊಡಕಾಗದಂತೆ ಕ್ರಮಕ್ಕೆ ಸೂಚನೆ</title>
		<link>https://peepalmedia.com/prime-ministers-visit-on-november-11-notice-to-take-action-to-avoid-disruption-to-the-traffic-system/</link>
		
		<dc:creator><![CDATA[Peepal Media]]></dc:creator>
		<pubDate>Fri, 21 Oct 2022 10:09:49 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[cm bhommai]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Nada Prabhu Kempegowda]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm modi]]></category>
		<guid isPermaLink="false">https://peepalmedia.com/?p=12350</guid>

					<description><![CDATA[ಬೆಂಗಳೂರು: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ಹಾಗೂ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವಭಾವಿ ಸಭೆ ನಡೆಸಿದರು ಈ ಕಾರ್ಯಕ್ರಮದಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ತೊಡಕು ಆಗದಂತೆ ಕಾರ್ಯಕ್ರಮ ಆಯೋಜಿಸುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಉದ್ಘಾಟನೆ ಹಾಗೂ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಈ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರ್ವಭಾವಿ ಸಭೆ ನಡೆಸಿದರು</p>



<p>ಈ ಕಾರ್ಯಕ್ರಮದಿಂದ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಯಾವುದೇ ತೊಡಕು ಆಗದಂತೆ ಕಾರ್ಯಕ್ರಮ ಆಯೋಜಿಸುವಂತೆ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.</p>



<p>ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ಜಿಲ್ಲೆಗಳ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸುವ ‘ಬನ್ನಿ ನಾಡ ಕಟ್ಟೋಣ’ ಎಂಬ ಅಭಿಯಾನ ನಾಳೆಯಿಂದ ಪ್ರಾರಂಭವಾಗಲಿದೆ. </p>



<figure class="wp-block-image size-full"><img fetchpriority="high" decoding="async" width="672" height="345" src="https://peepalmedia.com/wp-content/uploads/2022/10/kempegauda-2.jpg" alt="" class="wp-image-11933" srcset="https://peepalmedia.com/wp-content/uploads/2022/10/kempegauda-2.jpg 672w, https://peepalmedia.com/wp-content/uploads/2022/10/kempegauda-2-300x154.jpg 300w, https://peepalmedia.com/wp-content/uploads/2022/10/kempegauda-2-150x77.jpg 150w" sizes="(max-width: 672px) 100vw, 672px" /></figure>



<p>ಈ ಅಭಿಯಾನ ಯಶಸ್ವಿಗೊಳಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಮತ್ತು ಪಿಡಿಓಗಳ ಸಹಕಾರ ಪಡೆಯುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.</p>



<p>ಮೃತ್ತಿಕೆ ಸಂಗ್ರಹಿಸಲು 20 ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದ್ದು 15 ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ, ಮೃತ್ತಿಕೆ ಸಂಗ್ರಹಿಸಲಾಗುವುದು ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾಹಿತಿ ನೀಡಿದರು.</p>



<p>ಮೃತ್ತಿಕೆ ಸಂಗ್ರಹ ಅಭಿಯಾನವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಈ ಸಭೆಯಲ್ಲಿ ಸಚಿವರಾದ ಆರ್. ಅಶೋಕ, ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ. ಕೆ. ಸುಧಾಕರ್, ಬಿ. ಎ. ಬಸವರಾಜ, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣ ಗೌಡ, ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಕೃಷ್ಣಪ್ಪ, ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದರು.</p>
]]></content:encoded>
					
		
		
			</item>
		<item>
		<title>ಪ್ರಧಾನಿ ಮೋದಿ ಇಂದ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳ ಲೋಕಾರ್ಪಣೆ</title>
		<link>https://peepalmedia.com/inauguration-of-75-digital-banking-units-by-pm-modi/</link>
		
		<dc:creator><![CDATA[Peepal Media]]></dc:creator>
		<pubDate>Sun, 16 Oct 2022 06:12:35 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[digital banking units]]></category>
		<category><![CDATA[Inauguration]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm modi]]></category>
		<category><![CDATA[politics]]></category>
		<guid isPermaLink="false">https://peepalmedia.com/?p=11042</guid>

					<description><![CDATA[ಪ್ರಧಾನಿ ನರೇಂದ್ರ ಮೋದಿ ಅವರು ಇಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲೋಕಾರ್ಪಣೆ ಮಾಡಿ ಇದರ ಕುರಿತು ಮಾತನಾಡಿದ್ದಾರೆ.  2022-23ರ ಕೇಂದ್ರ ಬಜೆಟ್‌ನ ಭಾಗವಾಗಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದು ಸ್ವತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಭಾರವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದ್ದ ನೆನಪಿಗಾಗಿ ಮಾಡಲಾಗಿದೆ. ಡಿಜಿಟಲ್ ಬ್ಯಾಂಕಿಂಗ್‌ಗಳ (DBU) ಉದ್ದೇಶವೇನು? ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು [&#8230;]]]></description>
										<content:encoded><![CDATA[
<p>ಪ್ರಧಾನಿ ನರೇಂದ್ರ ಮೋದಿ ಅವರು ಇಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲೋಕಾರ್ಪಣೆ ಮಾಡಿ ಇದರ ಕುರಿತು ಮಾತನಾಡಿದ್ದಾರೆ. </p>



<p>2022-23ರ ಕೇಂದ್ರ ಬಜೆಟ್‌ನ ಭಾಗವಾಗಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು. ಇದು ಸ್ವತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ಭಾರವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಿದ್ದ ನೆನಪಿಗಾಗಿ ಮಾಡಲಾಗಿದೆ.</p>



<p><strong>ಡಿಜಿಟಲ್ ಬ್ಯಾಂಕಿಂಗ್‌ಗಳ (DBU) ಉದ್ದೇಶವೇನು?</strong></p>



<p>ಡಿಜಿಟಲ್ ಬ್ಯಾಂಕಿಂಗ್‌ನ ಪ್ರಯೋಜನಗಳು ದೇಶದ ಮೂಲೆ ಮೂಲೆಯನ್ನು ತಲುಪುವಂತೆ ಮಾಡಲು ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.&nbsp;ಡಿಬಿಯುಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಒಳಗೊಂಡಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.</p>



<p><strong><strong>ಡಿಜಿಟಲ್ ಬ್ಯಾಂಕಿಂಗ್‌ಗಳ</strong>ಲ್ಲಿ ಎಷ್ಟು ಬ್ಯಾಂಕ್‌ಗಳು ಭಾಗವಹಿಸುತ್ತಿವೆ?</strong></p>



<p>11 ಸಾರ್ವಜನಿಕ ವಲಯದ ಬ್ಯಾಂಕ್‌ಗಳು, <br>12 ಖಾಸಗಿ ಬ್ಯಾಂಕ್‌ಗಳು ಮತ್ತು <br>ಒಂದು ಸಣ್ಣ ಹಣಕಾಸು ಬ್ಯಾಂಕ್ ಈ ಪ್ರಯತ್ನದಲ್ಲಿ ಭಾಗವಹಿಸುತ್ತಿವೆ.</p>



<p><strong><strong>ಡಿಜಿಟಲ್ ಬ್ಯಾಂಕಿಂಗ್‌ಗಳ</strong> ಕಾರ್ಯಗಳು</strong></p>



<p>ಜನರಿಗೆ ಉಳಿತಾಯ ಖಾತೆ ತೆರೆಯುವುದು, ಬ್ಯಾಲೆನ್ಸ್-ಚೆಕ್, ಪ್ರಿಂಟ್ ಪಾಸ್‌ಬುಕ್, ಹಣ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ನೀಡಿದ ಚೆಕ್‌ಗಳಿಗೆ ಸ್ಟಾಪ್-ಪಾವತಿ ಸೂಚನೆಗಳಂತಹ ವಿವಿಧ ಸೌಲಭ್ಯಗಳನ್ನು ಡಿಜಿಟಲ್ ಬ್ಯಾಂಕಿಂಗ್‌ಗಳು ಒದಗಿಸುತ್ತದೆ. </p>



<p>&#8220;ಡಿಬಿಯುಗಳು ಗ್ರಾಹಕರು ವರ್ಷಪೂರ್ತಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ವೆಚ್ಚ ಪರಿಣಾಮಕಾರಿ, ಅನುಕೂಲಕರ ಮತ್ತು ವರ್ಧಿತ ಡಿಜಿಟಲ್ ಅನುಭವವನ್ನು ಹೊಂದಲು ಅನುವು ಮಾಡಿಕೊಡುತ್ತದೆ. </p>
]]></content:encoded>
					
		
		
			</item>
		<item>
		<title>ಟ್ರಾಕ್ಟರ್‌ ಟ್ರಾಲಿ ಉರುಳಿದ ಭೀಕರ ದುರಂತ: 22ಕ್ಕೇರಿದ ಮೃತರ ಸಂಖ್ಯೆ</title>
		<link>https://peepalmedia.com/tractor-trally-urulida-bheekara-durantha-22kkerida-mruthara-sankhye/</link>
		
		<dc:creator><![CDATA[Peepal Media]]></dc:creator>
		<pubDate>Sun, 02 Oct 2022 08:44:28 +0000</pubDate>
				<category><![CDATA[ರಾಜ್ಯ]]></category>
		<category><![CDATA[22 deaths]]></category>
		<category><![CDATA[accident]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pm modi]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[tractor trally]]></category>
		<category><![CDATA[utthara pradesh]]></category>
		<category><![CDATA[writing]]></category>
		<guid isPermaLink="false">https://peepalmedia.com/?p=8559</guid>

					<description><![CDATA[ಉತ್ತರ ಪ್ರದೇಶ : ದೇವಸ್ಥಾನದಿಂದ &#160;ಮನೆಗೆ ತೆರಳುವಾಗ ಸುಮಾರು 50&#160; ಜನರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್‌ ಟ್ರಾಲಿ ಕೊಳಕ್ಕೆ ಉರುಳಿದ್ದು 22 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಶನಿವಾರದಂದು&#160;ಕಾನ್ಪುರ ಜಿಲ್ಲೆಯ ಕೊರ್ತಾ ಗ್ರಾಮದ ಸುಮಾರು 50 ಜನರು&#160;ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಮುಡಿ ಕೊಡುವ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ ಟ್ರಾಕ್ಟರ್‌ನಲ್ಲಿ ಮನೆಗೆ ತೆರಳುವಾಗ&#160;ಟ್ರಾಲಿಯು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ಮಗುಚಿ ಉರುಳಿ ಬಿದ್ದಿರುವ ಭೀಕರ ದುರಂತ ನಡೆದಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 22 ಜನರು ಮೃತಪಟ್ಟಿದ್ದು, [&#8230;]]]></description>
										<content:encoded><![CDATA[
<p style="font-size:20px"><strong>ಉತ್ತರ ಪ್ರದೇಶ</strong> : ದೇವಸ್ಥಾನದಿಂದ &nbsp;ಮನೆಗೆ ತೆರಳುವಾಗ ಸುಮಾರು 50&nbsp; ಜನರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್‌ ಟ್ರಾಲಿ ಕೊಳಕ್ಕೆ ಉರುಳಿದ್ದು 22 ಮಂದಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.</p>



<p style="font-size:20px">ಶನಿವಾರದಂದು&nbsp;ಕಾನ್ಪುರ ಜಿಲ್ಲೆಯ ಕೊರ್ತಾ ಗ್ರಾಮದ ಸುಮಾರು 50 ಜನರು&nbsp;ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಮುಡಿ ಕೊಡುವ ಕಾರ್ಯಕ್ರಮವನ್ನು ಮುಗಿಸಿ ರಾತ್ರಿ ಟ್ರಾಕ್ಟರ್‌ನಲ್ಲಿ ಮನೆಗೆ ತೆರಳುವಾಗ&nbsp;ಟ್ರಾಲಿಯು ರಸ್ತೆ ಬದಿಯಲ್ಲಿದ್ದ ಕೊಳಕ್ಕೆ ಮಗುಚಿ ಉರುಳಿ ಬಿದ್ದಿರುವ ಭೀಕರ ದುರಂತ ನಡೆದಿದೆ. ಈ ಘಟನೆಯಲ್ಲಿ ಇಲ್ಲಿಯವರೆಗೆ 22 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಪೋಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>



<p style="font-size:20px">ಈ ಭೀಕರ ದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಸಂತಾಪ ಸೂಚಿಸಿದ್ದಾರೆ. ಮೃತ ಪಟ್ಟ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿಯವರು ಪರಿಹಾರ ಧನ &nbsp;ಘೋಷಿಸಿದ್ದು,&nbsp; ಸಾವೀಗೀಡಾಗಿರುವ ವ್ಯಕ್ತಿಯ ಕುಟುಂಬಕ್ಕೆ ಎರಡು ಲಕ್ಷ ರೂ ಮತ್ತು ಗಾಯಾಗೊಂಡವರಿಗಾಗಿ 50000 ರೂ ನೆರವು ನೀಡುವುದಾಗಿ ಹೇಳಿದ್ದಾರೆ.</p>



<p style="font-size:20px">ಪರಿಹಾರಕ್ಕೆ ಸಂಬಂಧಪಟ್ಟಂತೆ ಮೇಲ್ವಿಚಾರಣಾ ಕಾರ್ಯಾಚರಣೆಗೆಂದು ಯೋಗಿ ಆದಿತ್ಯನಾಥ್‌ ಅವರು ಘಟನಾ ಸ್ಥಳಕ್ಕೆ ಅಲ್ಲಿನ ಸಚಿವರಾದ ರಾಕೇಶ್‌ ಸಾಚನ್‌ ಮತ್ತು ಅಜಿತ್‌ ಪಾಲ್‌ ಅವರನ್ನು ಕಳುಹಿಸಿದ್ದಾರೆ.</p>



<p style="font-size:20px"><strong>🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ</strong><br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p style="font-size:20px"><strong><mark class="has-inline-color has-vivid-red-color">ಇದನ್ನೂ ನೋಡಿ</mark></strong> : ಮಹಾತ್ಮ ಗಾಂಧೀಜಿ ರವರ ಜನ್ಮದಿನದ ಪ್ರಯುಕ್ತ ಅವರಿಗೊಂದು ಗೀತ ನಮನ</p>



<p style="font-size:20px">ರಚನೆ : ಗುರುರಾಜ ಬೆಣಕಲ್<br>ಗಾಯನ : ನವ್ಯಾಮೃತ ಶೆಟ್ಟಿ</p>



<p style="font-size:20px"><a href="https://fb.watch/fUWJVkbL5C/">https://fb.watch/fUWJVkbL5C/</a></p>



<p style="font-size:20px">peepal/ಪೀಪಲ್ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಲು ಮನವಿ</p>
]]></content:encoded>
					
		
		
			</item>
	</channel>
</rss>
