<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>political &#8211; Peepal Media</title>
	<atom:link href="https://peepalmedia.com/tag/political/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 06 Sep 2024 11:53:11 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>political &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಚುನಾಯಿತ ಪ್ರತಿನಿಧಿಗಳ ವಿದ್ಯಾರ್ಹತೆಯ ಸುತ್ತಮುತ್ತ..</title>
		<link>https://peepalmedia.com/around-the-qualification-of-elected-representatives/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 06 Sep 2024 11:53:07 +0000</pubDate>
				<category><![CDATA[ಅಂಕಣ]]></category>
		<category><![CDATA[Adjustment Politics]]></category>
		<category><![CDATA[bengalure]]></category>
		<category><![CDATA[education]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[political]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=45031</guid>

					<description><![CDATA[ಎನ್‍ಡಿಎ ಸರ್ಕಾರದ ಹೊಸ ಮಂತ್ರಿಮಂಡಲದಲ್ಲಿ ಸಾವಿತ್ರಿ ಠಾಕೂರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದೇ ಜೂನ್ 18ರಂದು, ‘ಸ್ಕೂಲ್ ಚಲೋ ಅಭಿಯಾನ್’ ಅಂಗವಾಗಿ ಅವರು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಒಂದು ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಅಂಗವಾಗಿ ಅವರು ಒಂದು ಫಲಕದ ಮೇಲೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆಯಾದ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಅನ್ನು ಹಿಂದಿ ಭಾಷೆಯಲ್ಲಿ ಬರೆಯಬೇಕಾಗಿತ್ತು. ಆದರೆ, ಅದನ್ನು ಅವರು ತಪ್ಪುತಪ್ಪಾಗಿ ಬರೆದು&#160;ಅಪಹಾಸ್ಯಕ್ಕೆ ಈಡಾದರು. ಸಂಸದರಾಗಿ [&#8230;]]]></description>
										<content:encoded><![CDATA[
<ul class="wp-block-list">
<li><strong>ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ</strong></li>
</ul>



<p>ಎನ್‍ಡಿಎ ಸರ್ಕಾರದ ಹೊಸ ಮಂತ್ರಿಮಂಡಲದಲ್ಲಿ ಸಾವಿತ್ರಿ ಠಾಕೂರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದೇ ಜೂನ್ 18ರಂದು, ‘ಸ್ಕೂಲ್ ಚಲೋ ಅಭಿಯಾನ್’ ಅಂಗವಾಗಿ ಅವರು ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ಒಂದು ಸರ್ಕಾರಿ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರ ಅಂಗವಾಗಿ ಅವರು ಒಂದು ಫಲಕದ ಮೇಲೆ ಕೇಂದ್ರ ಸರ್ಕಾರದ ಮಹತ್ವದ ಘೋಷಣೆಯಾದ, ‘ಬೇಟಿ ಬಚಾವೋ, ಬೇಟಿ ಪಢಾವೋ’ ಅನ್ನು ಹಿಂದಿ ಭಾಷೆಯಲ್ಲಿ ಬರೆಯಬೇಕಾಗಿತ್ತು. ಆದರೆ, ಅದನ್ನು ಅವರು ತಪ್ಪುತಪ್ಪಾಗಿ ಬರೆದು&nbsp;ಅಪಹಾಸ್ಯಕ್ಕೆ ಈಡಾದರು.</p>



<p>ಸಂಸದರಾಗಿ ಆಯ್ಕೆಯಾಗುವವರಲ್ಲಿ ಸಾಕ್ಷರತೆ ಇರಲೇಬೇಕೇ? ಇಲ್ಲ. ಸಂವಿಧಾನದ 84ನೇ ವಿಧಿ ಪ್ರಕಾರ, ಸಂಸದರಾಗಲು ಅಗತ್ಯವಾದ ಅರ್ಹತೆ ಎಂದರೆ ಭಾರತೀಯ ನಾಗರಿಕರಾಗಿರಬೇಕು, ವಯಸ್ಸು ಕನಿಷ್ಠ 25 ವರ್ಷ ಆಗಿರಬೇಕು, ಘೋಷಿತ ಕ್ರಿಮಿನಲ್ ಆಗಿರಬಾರದು ಎಂದಿದೆ. ಇಲ್ಲಿ&nbsp;ಶಿಕ್ಷಿತರಾಗಿರಬೇಕು ಎಂದೇನೂ ಇಲ್ಲ. ಎಂದರೆ, ಅವರಿಗೆ ಸರಿಯಾಗಿ ಬರೆಯಲು ಬಾರದೇ ಇದ್ದರೂ ಸಾವಿತ್ರಿ ಠಾಕೂರ್ ಅವರಿಗೆ ಸಂಸದೆ, ಸಚಿವೆ ಆಗುವ ಎಲ್ಲಾ&nbsp;ಹಕ್ಕಿದೆ ಎಂದಾಯಿತು. ಆದರೆ, ಈ ವಿಧಿಯನ್ನು ರೂಪಿಸಿದ್ದು ಸಂವಿಧಾನದ ಜಾರಿಯ ಆರಂಭದಲ್ಲಿ. ಆಗ ದೇಶವು ಅದೇ ತಾನೆ ವಸಾಹತುಶಾಹಿಯಿಂದ ಮುಕ್ತಿ ಪಡೆದಿತ್ತು.</p>



<p>1947ರಲ್ಲಿ ದೇಶದ ಸಾಕ್ಷರತಾ ಪ್ರಮಾಣ ಬರೀ ಶೇಕಡ 12ರಷ್ಟು ಇತ್ತು. ಮಹಿಳಾ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ, ಸುಮಾರು ಶೇ 9ರಷ್ಟು ಇತ್ತು. ಇನ್ನು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳಲ್ಲಿ ಅನಕ್ಷರರ ಪ್ರಮಾಣವೇ ಹೆಚ್ಚಾಗಿತ್ತು. ಹೀಗಾಗಿ, ಶಾಸಕರು, ಸಂಸದರಾಗಿ ಆಯ್ಕೆಯಾಗುವುದಕ್ಕೆ ಶಿಕ್ಷಣದ ಮಟ್ಟವನ್ನು ನಿಗದಿ ಮಾಡಿಬಿಟ್ಟರೆ, ದೇಶದ ಬಹುತೇಕ ಜನರನ್ನು ಇದರಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ. ಎಲ್ಲರನ್ನೊಳಗೊಳ್ಳುವ ಜನತಂತ್ರದ ಆಶಯಕ್ಕೆ ಧಕ್ಕೆ ಬರುತ್ತದೆ ಎಂಬುದು ಸಂವಿಧಾನ ರಚನೆಕಾರರ ಕಳವಳವಾಗಿತ್ತು.</p>



<p>ಆ ಹೊತ್ತಿಗೆ ಇದು ಅತ್ಯಂತ ಸಮಂಜಸವಾದ ತೀರ್ಮಾನವಾಗಿತ್ತು. ಆದರೆ, ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳಲ್ಲಿ ಒಟ್ಟಾರೆ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ಸಾಕ್ಷರತೆ, ವಯಸ್ಕರ ಶಿಕ್ಷಣ, ತೆರೆದ ಶಾಲೆಗಳು ಇತ್ಯಾದಿ ಯೋಜನೆಗಳ ಫಲವಾಗಿ ಸಾಕ್ಷರತೆ ಪ್ರಮಾಣವು ಕ್ರಮೇಣ ಏರುತ್ತಾ ಬಂತು. ಈಗ ಸಾಕ್ಷರತೆ ಪ್ರಮಾಣವು ಪುರುಷರಲ್ಲಿ ಶೇ 85ರಷ್ಟು ಇದೆ, ಮಹಿಳೆಯರಲ್ಲಿ ಶೇ 72ಕ್ಕೆ ತಲುಪಿದೆ. ಈಗಲೂ ಜನಪ್ರತಿನಿಧಿಗಳಿಗೆ ಸಾಕ್ಷರತೆ, ಶಿಕ್ಷಣ ಇಲ್ಲದಿದ್ದರೂ ನಡೆಯುತ್ತದೆ ಎಂದು ಹೇಳುವುದು ಸರಿಯೇ? ಹಾಗೆ ನೋಡಿದರೆ, 46 ವರ್ಷದ, ಧಾರ್‌ನಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಸಾವಿತ್ರಿ ಠಾಕೂರ್ ಅವರು 2024ರ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವಾಗ ತಾವು, 2018ರಲ್ಲಿ ಉರ್ದು ಎಜುಕೇಷನ್ ಬೋರ್ಡಿನ 12ನೇ ತರಗತಿಯನ್ನು ಪಾಸು ಮಾಡಿರುವುದಾಗಿ ದಾಖಲಿಸಿದ್ದಾರೆ. ನಮ್ಮಲ್ಲಿ ಕೆಲವು ಪ್ರಮುಖ ಸಚಿವರನ್ನೂ ಒಳಗೊಂಡ ಹಾಗೆ ಹಲವು ಜನಪ್ರತಿನಿಧಿಗಳು ತಾವು ಹೊಂದಿರುವುದಾಗಿ ಹೇಳಿಕೊಂಡಿರುವ ಶೈಕ್ಷಣಿಕ ಅರ್ಹತೆಗಳು ಅನೇಕ ವಿವಾದಗಳನ್ನು ಹುಟ್ಟುಹಾಕಿರುವುದೂ ಇದೆ.</p>



<p>ಹಿಂದುಳಿದ ವರ್ಗಗಳಿಗೆ, ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎನ್ನುವುದನ್ನು ಒಪ್ಪುವುದಾದರೂ ಅವರು ವಹಿಸಬೇಕಾಗಿರುವ ಜವಾಬ್ದಾರಿಯ ಕುರಿತೂ ಲಕ್ಷ್ಯ ಇರಬೇಕಾಗುತ್ತದೆ. ಸಾವಿತ್ರಿ ಠಾಕೂರ್‌&nbsp;ಅವರು ಒಂದು ಉದಾಹರಣೆಯಷ್ಟೆ. ಈಗ ಇವರು ತಮ್ಮ ಸಚಿವೆ ಸ್ಥಾನದಿಂದ ಸುಮಾರು ₹36 ಸಾವಿರ ಕೋಟಿ ಮೊತ್ತದ ಬಜೆಟ್ಟನ್ನು ನಿರ್ವಹಿಸಬೇಕಾಗುತ್ತದೆ. ನಿತ್ಯ ಹತ್ತಾರು ಕಡತಗಳನ್ನು ಓದಿ, ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಘಟಾನುಘಟಿ ಐಎಎಸ್ ಅಧಿಕಾರಿಗಳನ್ನು ನಿಭಾಯಿಸಬೇಕಾಗುತ್ತದೆ. ದೇಶದ ಕೋಟ್ಯಂತರ ಮಕ್ಕಳ ಮತ್ತು ಮಹಿಳೆಯರ, ಶೋಷಿತರ, ಹಿಂದುಳಿದವರ ಧ್ವನಿಯಾಗಬೇಕಾಗುತ್ತದೆ. ಇಂಥ ಒಬ್ಬ ವ್ಯಕ್ತಿ ತಮ್ಮ ಖಾತೆಯ ವ್ಯಾಪ್ತಿಗೊಳಪಡುವ ಅದರಲ್ಲೂ ಭಾರಿ ಪ್ರಚಾರ ಪಡೆದಿರುವ ಒಂದು ಘೋಷಣೆಯನ್ನೂ ಸರಿಯಾಗಿ ಬರೆಯಲು ಸಾಧ್ಯವಾಗದಿದ್ದರೆ ಹೇಗೆ ಎಂದು ವಿರೋಧ ಪಕ್ಷಗಳ ಪ್ರತಿನಿಧಿಗಳು ತೀವ್ರವಾಗಿ ಟೀಕಿಸಿದ್ದಾರೆ.</p>



<p>ಈ ಹಿನ್ನೆಲೆಯಲ್ಲಿ ಸಂವಿಧಾನದ ವಿಧಿ 84ರ ತಿದ್ದುಪಡಿಯಾಗಬೇಕು, ಎಲ್ಲ ಹಂತಗಳಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕು ಎಂಬುದೂ ಕೆಲವರ ವಾದವಾಗಿದೆ. ಶಿಕ್ಷಣವು ಚುನಾಯಿತ ಪ್ರತಿನಿಧಿಗಳಲ್ಲಿ ನಿರ್ದಿಷ್ಟ ಮಟ್ಟದ ಸಾಮರ್ಥ್ಯ, ತಿಳಿವಳಿಕೆ ಮತ್ತು ವಿಶ್ಲೇಷಣೆಯ ಕೌಶಲವನ್ನು ನೀಡುತ್ತದೆ. ವಸ್ತುನಿಷ್ಠ ಮಾಹಿತಿಯನ್ನು ಆಧರಿಸಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಕ್ಷಮತೆಯು ದಕ್ಷ ಆಡಳಿತದಲ್ಲಿ ದೀರ್ಘಕಾಲೀನ&nbsp;ಪರಿಣಾಮಗಳನ್ನು ಬಿರುತ್ತದೆ ಎನ್ನುವುದು ಇದರ ಪ್ರತಿಪಾದಕರ ವಾದ. ಇವತ್ತಿನ ಶಿಕ್ಷಣದ ಸ್ಥಿತಿಗತಿಗಳನ್ನು ನೋಡಿದಾಗ, ಔಪಚಾರಿಕ ವ್ಯವಸ್ಥೆಯಲ್ಲಿ ಸಿಗುವ ಭಾಷೆ ಮತ್ತು ಸಂವಹನ ಕೌಶಲಗಳು, ಆಡಳಿತ, ನ್ಯಾಯಾಂಗ, ವಾಣಿಜ್ಯ, ವ್ಯವಹಾರ, ಮಾಧ್ಯಮ ಇತ್ಯಾದಿ ಯಾವುದೇ ಕ್ಷೇತ್ರಕ್ಕೆ ಅಗತ್ಯವಾದ ಸಾಮರ್ಥ್ಯವನ್ನು&nbsp;ನೀಡುವುದಿಲ್ಲ, ಜನತಂತ್ರದ ಜೀವಾಳವಾದ ವೈಚಾರಿಕತೆ, ವೈಜ್ಞಾನಿಕ ಮನೋವೃತ್ತಿ, ಪ್ರಶ್ನೆ ಕೇಳುವ ಸ್ವಭಾವ&#8230; ಇಂಥವುಗಳನ್ನು ಬೆಳೆಸುವುದಿಲ್ಲ. ಶಿಕ್ಷಣದ ಸುಧಾರಣೆಯಾಗಬೇಕು, ಅದು ಸಶಕ್ತ ನಾಗರಿಕರನ್ನು ಸೃಜಿಸುವಲ್ಲಿ ಸಫಲವಾಗಬೇಕು ಎನ್ನುವ ಮಾತನ್ನು ಒಪ್ಪಿಕೊಳ್ಳುತ್ತಲೇ, ಇರುವ ಹಾಗೆಯೇ ಶಿಕ್ಷಣವು ವ್ಯಕ್ತಿತ್ವದ ಒಂದು ಗುಣವಾಗಿದೆ. ಭಾರತದ 18ನೇ ಲೋಕಸಭೆ ಇದರ ಸಾಧಕಬಾಧಕಗಳನ್ನು ಚರ್ಚಿಸಲಿ.</p>
]]></content:encoded>
					
		
		
			</item>
		<item>
		<title>ಬಿಹಾರದ ರಾಜಕೀಯ ಬೆಳವಣಿಗೆಯಲ್ಲಿ ಪ್ರಕ್ಷುಬ್ಧತೆ</title>
		<link>https://peepalmedia.com/political-development-in-bihar/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jan 2024 05:19:14 +0000</pubDate>
				<category><![CDATA[ಮೀಡಿಯಾ]]></category>
		<category><![CDATA[Bangalore]]></category>
		<category><![CDATA[bharat]]></category>
		<category><![CDATA[bihar]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[INDIA Alliance]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news update]]></category>
		<category><![CDATA[nitish kumar]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[political]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35421</guid>

					<description><![CDATA[ಪಾಟ್ನಾ: ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ. ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ. ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ [&#8230;]]]></description>
										<content:encoded><![CDATA[
<pre class="wp-block-code"><code><strong>ಬಿಹಾರದ ರಾಜಕೀಯ ಬೆಳವಣಿಗೆಗಳು ಕ್ಷಣ ಕ್ಷಣಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ. ಅತ್ತ ಪಟ್ನಾದಲ್ಲಿ ಬಿಜೆಪಿ ಪಕ್ಷವು ತನ್ನ ಪಕ್ಷದ ಸಂಸದರು, ಶಾಸಕರ ಸಭೆಗೆ ಕರೆ ಕೊಟ್ಟಿದ್ದರೆ, ಮತ್ತೊಂದು ಕಡೆ, ಪುರ್ನಿಯಾದಲ್ಲಿ ಕಾಂಗ್ರೆಸ್ ಮುಖಂಡರ ಸಭೆಗೆ ಕರೆ ಕೊಟ್ಟಿರುವುದು ಜನರಲ್ಲಿ ಕುತೂಹಲದ ಜೊತೆ, ಹಲವಾರು ಪ್ರಶ್ನೆಗಳನ್ನೂ ಹುಟ್ಟುಹಾಕುತ್ತಿದೆ</strong></code></pre>



<p><strong>ಪಾಟ್ನಾ:</strong> ಬಿಹಾರದ ಆಡಳಿತ &#8216;ಮಹಾಘಟಬಂಧನ್&#8217; ನಲ್ಲಿನ ಗೊಂದಲದ ನಡುವೆಯೇ, ಮುಂಬರುವ ಲೋಕಸಭಾ ಚುನಾವಣೆಯ ಕುರಿತು ಚರ್ಚಿಸಲು ಪ್ರತಿಪಕ್ಷ ಬಿಜೆಪಿ ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಶನಿವಾರ ಕರೆದಿದೆ.</p>



<p>ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರ ಪ್ರಕಾರ, ಸಭೆಯಲ್ಲಿ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲಾಗುವುದು, ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ ಎಂಬ ಮಾಹಿತಿ ಇದೆ.</p>



<p>ಜೆಡಿಯು ನಿತೀಶ್ ಕುಮಾರ್ ಅವರರೊಂದಿಗೆ ಬಿಜೆಪಿ ಮತ್ತೊಂದು ಇನ್ನಿಂಗ್ಸ್‌ಗೆ ಸಜ್ಜಾಗಿದೆಯೇ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ ಚೌಧರಿ, &#8220;ನಮ್ಮ ಮಟ್ಟದಲ್ಲಿ ಅಂತಹ ಯಾವುದೇ ವಿಷಯ ಚರ್ಚಿಸಲಾಗಿಲ್ಲ&#8221; ಎಂದು ಹೇಳಿದರು. ಇದೇ ಸಮಯದಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ, “ರಾಜಕೀಯದಲ್ಲಿ ಯಾವುದೇ ಬಾಗಿಲು ಮುಚ್ಚಿಲ್ಲ, ಅಗತ್ಯ ಬಿದ್ದಾಗ ಬಾಗಿಲು ತೆರೆಯಬಹುದು” ಎಂದು ಹೇಳಿಕೆ ಕೊಡುವುದರ ಮೂಲಕ, ಪಕ್ಷದ ಹಿರಿಯ ನಾಯಕರೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಕೆಲವು ಸುಳಿವುಗಳನ್ನು ನೀಡಿದ್ದಾರೆ.</p>



<p>ಏತನ್ಮಧ್ಯೆ, ಬಿಹಾರ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪೂರ್ಣೆಯಾದಲ್ಲಿ, ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.</p>



<p>&#8220;ಎಲ್ಲಾ ಕಾಂಗ್ರೆಸ್ ಶಾಸಕರು (ಇಂದಿನ ಮತ್ತು ಮಾಜಿ) ಮತ್ತು ಪಕ್ಷದ ಹಿರಿಯ ನಾಯಕರು ನಾಳೆ ಪೂರ್ಣೆಯಾದಲ್ಲಿ ಸಭೆ ಸೇರಿ ರಾಹುಲ್ ಗಾಂಧಿಯವರ &#8216;ಭಾರತ್ ಜೋಡೋ ನ್ಯಾಯ್ ಯಾತ್ರೆ&#8217; ಜನವರಿ 29 ರಂದು ಬಿಹಾರಕ್ಕೆ ಪ್ರವೇಶಿಸಿದಾಗ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ ಈ ಸಭೆಗೂ ರಾಜ್ಯದ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ ಎಂಬ ವರದಿಗಳನ್ನೂ &#8221; ಎಂದು ಖಾನ್ ತಿಳಿಸಿದರು.</p>



<p>ಜನವರಿ 29ರಂದು ಯಾತ್ರೆ ರಾಜ್ಯ ಪ್ರವೇಶಿಸಲಿದ್ದು, ಅದೇ ದಿನ ಕಿಶನ್‌ಗಂಜ್‌ನಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ. ತದ ನಂತರ ಜನವರಿ 30 ಮತ್ತು 31 ರಂದು ಕ್ರಮವಾಗಿ ಪೂರ್ಣೆಯಾ ಮತ್ತು ಕತಿಹಾರ್‌ನಲ್ಲಿ ಎರಡು ರ್ಯಾಲಿಗಳು ನಡೆಯಲಿವೆ&#8221; ಎಂದು ಖಾನ್ ಮಾಧ್ಯಮಗಳಿಗೆ ತಿಳಿಸಿದರು.</p>



<p></p>
]]></content:encoded>
					
		
		
			</item>
	</channel>
</rss>
