<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Prajwal Revanna &#8211; Peepal Media</title>
	<atom:link href="https://peepalmedia.com/tag/prajwal-revanna/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 03 Jan 2025 11:29:28 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Prajwal Revanna &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಘನತೆಗೆ ತಕ್ಕಂತೆ ನಡೆದುಕೊಳ್ಳಲಿ, ಸಣ್ಣತನ ಬೇಡ: ಸೂರಜ್ ರೇವಣ್ಣ ಶ್ರೇಯಸ್ ಪಟೇಲ್ ತಿರುಗೇಟು</title>
		<link>https://peepalmedia.com/lets-act-with-dignity-not-pettiness-suraj-revanna-shreyas-patel-hits-back/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 03 Jan 2025 11:29:28 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[bengaluru]]]></category>
		<category><![CDATA[JDS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Prajwal Revanna]]></category>
		<category><![CDATA[shreyas patel]]></category>
		<category><![CDATA[suraj revanna]]></category>
		<guid isPermaLink="false">https://peepalmedia.com/?p=51563</guid>

					<description><![CDATA[ಹಾಸನ : &#8220;ಅಸೂಯೆಯಿಂದ ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ,&#8221; ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು. ನಗರದ ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, &#8220;ಸೂರಜ್ ರೇವಣ್ಣ ಅವರದ್ದು ಬಾಲೀಷವಾದ ಹೇಳಿಕೆ [&#8230;]]]></description>
										<content:encoded><![CDATA[
<p><strong>ಹಾಸನ :</strong> &#8220;ಅಸೂಯೆಯಿಂದ ಈ ರೀತಿ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನು ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ,&#8221; ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್ ಎಂ. ಪಟೇಲ್ ತಿರುಗೇಟು ನೀಡಿದರು.</p>



<p>ನಗರದ ಪತ್ರಕರ್ತರ ಭವನದ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, &#8220;ಸೂರಜ್ ರೇವಣ್ಣ ಅವರದ್ದು ಬಾಲೀಷವಾದ ಹೇಳಿಕೆ ನೀಡಿರುವುದು ಅವರ ವ್ಯಕ್ತಿತ್ವ, ನಡತೆಯನ್ನು ತೋರಿಸುತ್ತದೆ. ಎರಡು ಮೂರು ಬಾರಿ ಸಚಿವರು, ಐದಾರು ಬಾರಿ ಶಾಸಕರಾಗಿರುವವರ ತರಹ ಮಾತನಾಡಿದ್ದಾರೆ. ಜೊತೆಗೆ  ವಾಗ್ಮಿ, ದೊಡ್ಡ ಮೇದಾವಿಗಳ ತರ ಮಾತನಾಡಿದ್ದಾರೆ. ಅವರಿನ್ನು ಒಂದು ಬಾರಿ ಎಂಎಲ್‌ಸಿ ಆಗಿದ್ದಾರೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ತಳಮಟ್ಟದಿಂದ ಬೆಳೆದಿದ್ದೇನೆ. ಏಕಾಏಕಿ ಅವರ ಕುಟುಂಬದಿಂದ ಅಚಾನಕ್ಕಾಗಿ ಎಂಎಲ್‌ಸಿ ಆಗಿರುವವರು ಅವರು. ಉದ್ಭವಮೂರ್ತಿ ತರಹ ಎದ್ದು ಬಂದವರು. ಎಂಎಲ್‌ಸಿ ಆದಮೇಲೆ ಏಳು ಕ್ಷೇತ್ರದಲ್ಲಿ ಒಂದು ಗ್ರಾ.ಪಂ.ಗೆ ಹೋಗಿ ಸಭೆ ಮಾಡಿದ್ದಾರಾ! ಎಂದು ವ್ಯಂಗ್ಯವಾಡಿದರು. ಅವರ ಹೇಳಿಕೆ ನನಗೆ ವೈಯುಕ್ತಿಕವಾಗಿ ಬೇಜಾರಾಗಿದೆ. ರಾಜಕೀಯವಾಗಿ ನಾವು ಅವರು ಎದುರಾಳಿ. ಯಾವುದೇ ವಿಚಾರದಲ್ಲಿ ನಾನು ಬಗ್ಗುವವನಲ್ಲ. ನಾನು ನಮ್ಮ ತಾತನ ಹೆಸರು ಹೇಳಿಕೊಂಡು ಬಂದವನಲ್ಲ. ಹೋರಾಟ ಮನೋಭಾವ, ತಳಮಟ್ಟದಿಂದ ಬಂದಿರುವವನು ನಾನು. ಅವರ ಹೇಳಿಕೆ ಬೇಜಾರು ತರಿಸಿದೆ. ಬದುಕಿದ್ದವರ ಬಗ್ಗೆ ಮಾತನಾಡಲಿ,&#8221; ಎಂದು ಹೇಳಿದ್ದಾರೆ.</p>



<p>&#8220;ನಾವು ದೇವೇಗೌಡರ ಬಗ್ಗೆ ಯಾವತ್ತಾದರೂ ಮಾತನಾಡಿದ್ದೇವಾ! ಇವತ್ತು ಅವರ ಮೇಲೆ ಗೌರವವಿದೆ. ದೇವೇಗೌಡರು, ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಅವರ ಬಗ್ಗೆ ಮಾತನಾಡಲು ನಮಗೆ ಯಾರಿಗೂ ಅರ್ಹತೆ ಇಲ್ಲ, ಯೋಗ್ಯತೆ ಇಲ್ಲ. ಯಾವುದೇ ಪುರಾವೆ ಇಲ್ಲದೆ ನಮ್ಮ ತಾತನ ಹೆಸರು ತೆಗೆದುಕೊಂಡಿದ್ದಾರೆ. ಆ ಘಟನೆಯಾದಾಗ ಸೂರಜ್ ಅವರ ವಯಸ್ಸು ಎಷ್ಟಿತ್ತು, ಮಾಹಿತಿ ಇತ್ತಾ! ಅವರ ತಂದೆ ರೇವಣ್ಣ ಅವರೇ ಏಕೆ ಇಷ್ಟು ದಿನ ಮಾತನಾಡಲಿಲ್ಲ. ಅವರ ಕುಟುಂಬದವರು ಯಾರು ಮಾತನಾಡಿಲ್ಲ. ಮೈಕ್ ಸಿಕ್ಕಿದೆ ಜನ ಶಿಳ್ಳೆ ಹೊಡಿತಾರೆ ಅಂಥ ಮಾತನಾಡಿದ್ದಾರಾ,&#8221; ಎಂದು ಎಂ.ಎಲ್.ಸಿ. ಸೂರಜ್ ರೇವಣ್ಣ ಹೇಳಿಕೆಗೆ ತಿರುಗೇಟು ನೀಡಿದರು.<br><br>&#8220;ಪೆನ್‌ಡ್ರೈವ್ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಎಷ್ಟೋ ಹೆಣ್ಣುಮಕ್ಕಳ ಜೀವನ ಹಾಳಾಗಿದೆ, ಬಲಿಪಶುಯಾಗಿದ್ದಾರೆ. ಅದಕ್ಕೆ ಕಾರಣ ಯಾರು? ಪೆನ್‌ಡ್ರೈವ್ ಒಳಗೆ ಇದ್ದ ವಿಡಿಯೋ ಮಾಡಿದ್ದು ಯಾರು? ಮೊದಲು ಅದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಇವರ ತಾತನ ಹೆಸರಿನಿಂದ ಗೆದ್ದಿದ್ದಾರೆ. ಎಂಎಲ್‌ಸಿ ಅವರ ಸಾಧನೆ ಪಟ್ಟಿ ಮೊದಲು ಬಿಡುಗಡೆ ಮಾಡಲಿ. ದೇವೇಗೌಡರು, ರೇವಣ್ಣ ಅವರದ್ದನ್ನು ಬಿಡಿ. ಎಂಎಲ್‌ಸಿ ಸಾಧನೆ ಏನು ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ,&#8221; ಎಂದು ಸವಾಲು ಎಸೆದರು.</p>



<p>&#8220;ಹತಾಶೆ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಾಗ ಈ ರೀತಿ ಮಾತು ಬರುತ್ತದೆ. ಜನ ಎಲ್ಲವನ್ನು ನೋಡುತ್ತಿದ್ದಾರೆ. ಇಡೀ ಜಿಲ್ಲೆಗೆ ಬೆಂಕಿ ಹಚ್ಚಿಸುತ್ತಾರೆ, ಎಲ್ಲೇ ಹೋದರೂ ಕಿತಾಪತಿ ಮಾಡಿ ಬರ್ತಾರೆ.&#8221;</p>



<p>&#8220;ಯಾವ ಊರಿಗೆ ಹೋದರು ಕಿತಾಪತಿ ಮಾಡಿ ಬರ್ತಾರೆ, ಅದೇ ಅವರ ಕೆಲಸ. ಅವರ ಕಾರ್ಯಕರ್ತರ ಮೇಲೆ ಕೇಸ್ ಹಾಕ್ಸಿದ್ರೆ ದಾಖಲೆ ಕೊಡಲಿ. ನಮ್ಮ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದವರ ಮೇಲೆಲ್ಲಾ ಕೇಸ್ ಆಗಿದೆ. ಇನ್ನೂ ಅವರ ಕಾರ್ಯಕರ್ತರ ಮೇಲೆ ಕೇಸ್ ಏಕೆ ಹಾಕ್ತಾರೆ! ಅಸೂಯೆಯಿಂದ ಈ ರೀತಿ ಮಾತನಾಡಿದ್ದಾರೆ. ದೇವೇಗೌಡರ ಕುಟುಂಬದಿಂದ ಬಂದವರು ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅವರು ವೈದ್ಯರಾಗಿದ್ದವರು, ಇಷ್ಟು ಸಣ್ಣತನದ ರಾಜಕಾರಣ ಮಾಡುತ್ತಿದ್ದಾರೆ. ಈಗಾಗಲೇ ಜನ ಬುದ್ದಿ ಕಲಿಸಿದ್ದು, ಮುಂದಿನ ದಿನಗಳಲ್ಲಿ ಅತಿ ದೊಡ್ಡದಾಗಿ ಬುದ್ದಿ ಕಲಿಸುತ್ತಾರೆ ಎಂದು ಕಿಡಿಕಾರಿದರು. ೨೦೨೮ರ ಚುನಾವಣೆಯಲ್ಲಿ ಯಾರ? ಯಾರು ಏನಾಗುತ್ತಾರೆ ಗೊತಾಗುತ್ತದೆ. ಜನ ಇವರ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು. ಇನ್ನು ಮುಂದಾದರೂ ಅಭಿವೃದ್ಧಿ ಕೆಲಸಕ್ಕೆ ಬೆಂಬಲ ಕೊಡಲಿ, ಇಲ್ಲಾ ಸುಮ್ಮನೆ ಇರಲಿ,&#8221; ಎಂದು ಸಲಹೆ ನೀಡಿದರು.</p>



<p>&#8220;ಸಾರಿಗೆ ಬಸ್ ದರ ಏರಿಕೆ ಕುರಿತು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಇಂಧನ ದರ ಹೆಚ್ಚಾಗಿದ್ದು, ೭ನೇ ವೇತನ ಆಯೋಗ ಜಾರಿ ಆಗುತ್ತಿದೆ. ಸಾರಿಗೆ ಇಲಾಖೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕೊಟ್ಟಿದ್ದೇವೆ. ಬೆಲೆ ಏರಿಕೆ ಸರ್ವೆ ಸಾಮಾನ್ಯ, ಎಲ್ಲಾ ಆಡಳಿತದಲ್ಲೂ ಬಸ್ ದರ ಏರಿಕೆ ಮಾಡಲಾಗಿದೆ ಎಂದರು. ಆಗುತ್ತಿದೆ. ಹಾಲು, ಬಸ್ ದರ ಏರಿಕೆ ನಾವಷ್ಟೇ ಮಾಡಿಲ್ಲ. ಎಲ್ಲ ಸರ್ಕಾರಗಳು ಮಾಡಿವೆ. ರಾಜ್ಯದ ಜನ ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರು ಶಾಶ್ವತ ಗ್ಯಾರಂಟಿ ನೀಡಿದ್ದು, ಮುಂದೆಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಈ ಗ್ಯಾರಂಟಿ ಕೂಡ ಮುಂದುವರೆಯಲಿದೆ,&#8221; ಎಂದು ಭವಿಷ್ಯ ನುಡಿದರು.</p>
]]></content:encoded>
					
		
		
			</item>
		<item>
		<title>ಇಂದು ಪ್ರಜ್ವಲ್‌ ರೇವಣ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಎಸ್‌ಐಟಿ</title>
		<link>https://peepalmedia.com/sit-to-produce-prajwal-revanna-in-court-today/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 18 Jun 2024 06:44:19 +0000</pubDate>
				<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[devegowada]]></category>
		<category><![CDATA[HDK]]></category>
		<category><![CDATA[hdrevanna]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=40902</guid>

					<description><![CDATA[ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಎಸ್‌ಐಟಿ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿದ್ದು, ಎಸ್‌ಐಟಿ ಅಧಿಕಾರಿಗಳು ಇಂದು ಮಂಗಳವಾರ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಕೋರ್ಟ್‌ ಗೆ ಹಾಜರುಪಡಿಸಲಿದ್ದಾರೆ. ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣ, ಅತ್ಯಾಚಾರ ಪ್ರಕರಣ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಎಸ್ಐಟಿ ತನಿಖೆ ಮುಗಿದ ಹಿನ್ನೆಲೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ [&#8230;]]]></description>
										<content:encoded><![CDATA[
<p> ಹಾಸನ: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಎಸ್‌ಐಟಿ ಕಸ್ಟಡಿ ಸೋಮವಾರಕ್ಕೆ ಅಂತ್ಯವಾಗಿದ್ದು, ಎಸ್‌ಐಟಿ ಅಧಿಕಾರಿಗಳು ಇಂದು ಮಂಗಳವಾರ ಮತ್ತೊಮ್ಮೆ ಪ್ರಜ್ವಲ್ ರೇವಣ್ಣ ಕೋರ್ಟ್‌ ಗೆ ಹಾಜರುಪಡಿಸಲಿದ್ದಾರೆ.</p>



<p>ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ ಪ್ರಕರಣ, ಅತ್ಯಾಚಾರ ಪ್ರಕರಣ ಹಾಗೂ ಸಿಐಡಿಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದ ತನಿಖೆ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಎಸ್ಐಟಿ ತನಿಖೆ ಮುಗಿದ ಹಿನ್ನೆಲೆ ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.</p>



<p>ಸಿಐಡಿಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣ‌ದ ಹೆಚ್ಚಿನ ತನಿಖೆಗಾಗಿ ಪ್ರಜ್ವಲ್ ರೇವಣ್ಣನನ್ನು ಮತ್ತೆ ಎಸ್‌ಐಟಿ ಕಸ್ಟಡಿಗೆ ಪಡೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಕೋರ್ಟ್ ನಲ್ಲಿ ಸಿದ್ಧತೆ ನಡೆಸಿದೆ.</p>



<p>ಎರಡೆರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರೂ ಪೊಲೀಸರಿಗೆ ತಲೆ ಬಿಸಿ ತಪ್ಪಿಲ್ಲ. ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಬಲ ಸಾಕ್ಷಿಗಳ ಸಂಗ್ರಹಕ್ಕೆ ಎಸ್‌ಐಟಿ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಈವರೆಗೆ ಆರೋಪಿ ವಿರುದ್ಧದ ಎರಡು ಪ್ರಕರಣಗಳ ತನಿಖೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ.</p>



<p>ಒಂದು ಪ್ರಕರಣ ಮುಗಿದ ಬೆನ್ನಲ್ಲೇ ಮತ್ತೊಂದು ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರತಿಯೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ಪ್ರತ್ಯೇಕವಾಗಿ ತನಿಖೆ ನಡೆಸಲಾಗುವುದು. ಇದೀಗ ಮತ್ತೊಂದು ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಎಸ್‌ಐಟಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. </p>
]]></content:encoded>
					
		
		
			</item>
		<item>
		<title>ಮಗನ ಬಂಧನ ಬೆನ್ನಲ್ಲೆ ತಾಯಿಗೂ ನೋಟಿಸ್‌: ನಾಳೆ ವಿಚಾರಣೆಗೆ ಹಾಜರಾಗಲು ಭವಾನಿಗೆ SIT ಸೂಚನೆ</title>
		<link>https://peepalmedia.com/notice-to-mother-after-sons-arrest-bhavani-instructed-to-attend-hearing-tomorrow/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 31 May 2024 06:58:44 +0000</pubDate>
				<category><![CDATA[ಹಾಸನ]]></category>
		<category><![CDATA[#Kumaraswamy #JDS #ramanagara #mysore #kodagu #kannadaexpress9 #prathapsimha #Simha #SaRaMahesh #GTDevegowda #DeveGowda #HDK H D Kumaraswamy]]></category>
		<category><![CDATA[bengalure]]></category>
		<category><![CDATA[bhavani revanna]]></category>
		<category><![CDATA[h d revanna]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=40158</guid>

					<description><![CDATA[ಹಾಸನ: ಇಂದು ಬೆಳಗಿ ಜಾವ ಜರ್ಮನಿಯಿಂದ ಆಗಮಿಸಿದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಂಧನದ ಬೆನ್ನಲ್ಲೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ತಂಡ ಮತ್ತೊಂದು ನೋಟೀಸ್‌ ನೀಡಿದೆ. ಕೆ.ಆರ್‌. ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಸ್‌ಐಟಿ ತಂಡ, ಭವಾನಿ ಅವರಿಗೆ ನೋಟಿಸ್‌ ಜಾರಿಗೆ ಮಾಡಿದೆ. ಮೊದಲು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ಅವರು ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಭವಾನಿ ತಿಳಿಸಿದ್ದರು. [&#8230;]]]></description>
										<content:encoded><![CDATA[
<p>ಹಾಸನ: ಇಂದು ಬೆಳಗಿ ಜಾವ ಜರ್ಮನಿಯಿಂದ ಆಗಮಿಸಿದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಂಧನದ ಬೆನ್ನಲ್ಲೆ ಅವರ ತಾಯಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ತಂಡ ಮತ್ತೊಂದು ನೋಟೀಸ್‌ ನೀಡಿದೆ. </p>



<p> ಕೆ.ಆರ್‌. ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಎಸ್‌ಐಟಿ ತಂಡ, ಭವಾನಿ ಅವರಿಗೆ ನೋಟಿಸ್‌ ಜಾರಿಗೆ ಮಾಡಿದೆ. ಮೊದಲು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ  ಅವರು ತನಿಖೆಗೆ ಅವಶ್ಯವಿದ್ದರೆ ಹೊಳೆನರಸೀಪುರದ ಚೆನ್ನಾಂಬಿಕಾ ನಿವಾಸದಲ್ಲಿ ಇರುವುದಾಗಿ ಭವಾನಿ ತಿಳಿಸಿದ್ದರು. ಆ</p>



<p>‘ಮಹಿಳಾ ಅಧಿಕಾರಿಗಳೊಂದಿಗೆ ಜೂನ್ 1 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ಒಳೆಗೆ ವಿಚಾರಣೆಗೆ ಬರುತ್ತೇವೆ. ಆ ಸಂದರ್ಭದಲ್ಲಿ ಮನೆಯಲ್ಲಿ ಖುದ್ದು ಹಾಜರಿರಬೇಕು’ ಎಂದು ಎಸ್ಐಟಿ ಇನ್‌ಸ್ಪೆಕ್ಟರ್ ಹೇಮಂತ್ ಕುಮಾರ್ ನೀಡಿರುವ ನೋಟಿಸ್‌ನಲ್ಲಿ ಸೂಚನೆ ನೀಡಿದ್ದಾರೆ. </p>



<p>ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಭವಾನಿ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.  ಶುಕ್ರವಾರ ವಿಚಾರಣೆ ನಡೆಯಲಿದೆ. ಈ ಮಧ್ಯೆ ಎಸ್‌ಐಟಿ ಖುದ್ದು ಹಾಜರಿರುವಂತೆ ನೋಟಿಸ್‌ ನೀಡಿದ್ದು, ನಿರೀಕ್ಷಣಾ ಜಾಮೀನು ಸಿಗದಿದ್ದರೆ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. </p>
]]></content:encoded>
					
		
		
			</item>
		<item>
		<title>ಅಶ್ಲೀಲ ಪೆನ್ ಡ್ರೈವ್ ಪ್ರಕರಣ: ಎಸ್ಐಟಿ ತನಿಖೆಯ ದಾರಿ ತಪ್ಪಿಸುತ್ತಿರುವ ಅಪಾಯಕಾರಿ ಮಾಧ್ಯಮಗಳು</title>
		<link>https://peepalmedia.com/dangerous-media-that-is-misleading-the-sit-investigation/</link>
		
		<dc:creator><![CDATA[Pragath K R]]></dc:creator>
		<pubDate>Thu, 30 May 2024 06:45:56 +0000</pubDate>
				<category><![CDATA[ಮೀಡಿಯಾ]]></category>
		<category><![CDATA[ರಾಜಕೀಯ]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=40081</guid>

					<description><![CDATA[ಎರಡು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣನ ಹೇಳಿಕೆಯ ವಿಡಿಯೋ ಬಂದ ಜಾಡನ್ನು ಹುಡುಕುವಾಗ ಹುಟ್ಟಿದ ಅನೇಕ ಪ್ರಶ್ನೆಗಳ ಹಿಂದೆ ನ್ಯೂಸ್ ರೂಂಗಳು ಇಂತಹ ಒಂದು ಗಂಭೀರ ಪ್ರಕರಣದ ದಾರಿ ತಪ್ಪಿಸುತ್ತಿರುವ ಸ್ಪಷ್ಟತೆ ಹೊರಬಿದ್ದಿದೆ. ಅಷ್ಟಕ್ಕೂ ಎಲ್ಲಿಯೂ ಸಿಗದ ವಿಡಿಯೋ ಮತ್ತು ಆಡಿಯೋಗಳನ್ನು ಚಾನಲ್ ವರೆಗೂ ತಲುಪಿಸಿದ್ದು ಯಾರು? ಗೊತ್ತಾ? Exclusive ಮಾಹಿತಿ.. ತಪ್ಪದೇ ಓದಿ ಪ್ರಜ್ವಲ್ ರೇವಣ್ಣ ಎಂಬ ವಿಕೃತ ಮನಸ್ಸಿನ ಸ್ತ್ರೀ ಪೀಡಕನ ಬಂಧನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅಧಿಕಾರ, ಅಂತಸ್ತು, ಕುಟುಂಬದ [&#8230;]]]></description>
										<content:encoded><![CDATA[
<p></p>



<blockquote class="wp-block-quote is-layout-flow wp-block-quote-is-layout-flow">
<p>ಎರಡು ದಿನಗಳ ಹಿಂದೆ ಪ್ರಜ್ವಲ್ ರೇವಣ್ಣನ ಹೇಳಿಕೆಯ ವಿಡಿಯೋ ಬಂದ ಜಾಡನ್ನು ಹುಡುಕುವಾಗ ಹುಟ್ಟಿದ ಅನೇಕ ಪ್ರಶ್ನೆಗಳ ಹಿಂದೆ ನ್ಯೂಸ್ ರೂಂಗಳು ಇಂತಹ ಒಂದು ಗಂಭೀರ ಪ್ರಕರಣದ ದಾರಿ ತಪ್ಪಿಸುತ್ತಿರುವ ಸ್ಪಷ್ಟತೆ ಹೊರಬಿದ್ದಿದೆ. ಅಷ್ಟಕ್ಕೂ ಎಲ್ಲಿಯೂ ಸಿಗದ ವಿಡಿಯೋ ಮತ್ತು ಆಡಿಯೋಗಳನ್ನು ಚಾನಲ್ ವರೆಗೂ ತಲುಪಿಸಿದ್ದು ಯಾರು? ಗೊತ್ತಾ? Exclusive ಮಾಹಿತಿ.. ತಪ್ಪದೇ ಓದಿ</p>
</blockquote>



<p>ಪ್ರಜ್ವಲ್ ರೇವಣ್ಣ ಎಂಬ ವಿಕೃತ ಮನಸ್ಸಿನ ಸ್ತ್ರೀ ಪೀಡಕನ ಬಂಧನಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದೆ. ಅಧಿಕಾರ, ಅಂತಸ್ತು, ಕುಟುಂಬದ ಹಿನ್ನೆಲೆಯ ಅಹಮ್ಮಿಕೆಯಡಿಯಲ್ಲಿ ಅಸಂಖ್ಯಾತ ಹೆಣ್ಣು ಮಕ್ಕಳನ್ನು ವಿಡಿಯೋ ಮೂಲಕ ಮಾನಹರಣ ಮಾಡಿದ ಫ್ಯೂಡಲ್ ಮನಸ್ಥಿತಿಯ, ಗೌಡಿಕೆಯ ಸೊಕ್ಕಿನ ಮೂಟೆ, ಹೊರ ಪ್ರಪಂಚಕ್ಕೆ ತನ್ನ ಬೆತ್ತಲು ಹೊರ ಬಿದ್ದ ತಕ್ಷಣವೇ ದೇಶ ಬಿಟ್ಟು ಓಡಿ ಹೋಗಿ ಇಡೀ ದೇಶ, ರಾಜ್ಯ, ಹಾಸನ ಜಿಲ್ಲೆಯೇ ತಲೆ ತಗ್ಗಿಸುವಂತೆ ಮಾಡಿದ್ದು ಇನ್ನು ಶತಮಾನಗಳು ಉರುಳಿದರೂ ಇಲ್ಲಿನ ಜನ ಮರೆಯಲಾರರು.</p>



<p>ನಾಗರೀಕರು ಮಾತನಾಡಲೂ ಮುಜುಗರಕ್ಕೆ ಬೀಳುವ ಇಂತಹ ಅನಿಷ್ಠ ಕಾರ್ಯ ಯಾರೂ ಸಹ ಊಹಿಸಿರಲಾರರು. ಏನೋ ಹನಿಟ್ರಾಪ್ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ಬಂದು ಹೋದರೂ ಅದು ಕೆಲವು ತಿಂಗಳಲ್ಲಿ ಜನರ ಬಾಯಿಂದ ಮರೆಯಾಗಿ ಹೋಗುವಂತದ್ದು. ಅದು ಜಸ್ಟ್ ಹನಿಟ್ರಾಪ್ ಅಷ್ಟೆ. ಆದರೆ ಪಕ್ಷದ ಮಹಿಳಾ ಮುಖಂಡರು, ಮಹಿಳಾ ಕಾರ್ಯಕರ್ತರು, ಸರ್ಕಾರಿ ಮಹಿಳಾ ಅಧಿಕಾರಿಗಳು, ಕಷ್ಟ ಹೇಳಿಕೊಂಡು ಬಂದ ಜನಸಾಮಾನ್ಯ ಹೆಣ್ಣು ಮಕ್ಕಳು, ಕೊನೆ ಕೊನೆಗೆ ಕೈ ಮುಗಿದು ಬೇಡಿಕೊಂಡ ಮನೆ ಕೆಲಸದಾಕೆಯನ್ನೂ ಬಿಡದೇ ಪೀಡಿಸಿದ, ತನ್ನ ಲೈಂಗಿಕ ತೃಷೆಗೆ ವಿಡಿಯೋ ಮೂಲಕ ಬೆತ್ತಲಾಗಿಸಿದ್ದು ಸೆಲ್ಫ್ ಟ್ರಾಪ್ ಅಲ್ಲದೇ ಬೇರಿನ್ನೇನು?</p>



<p>ಇಂತಹದ್ದೊಂದು ಅತಿ ದೊಡ್ಡ ದೌರ್ಜನ್ಯದ ಕರ್ಮಕಾಂಡ ಹೊರ ಬಿದ್ದರೂ ಒಬ್ಬ ನೈಜ ಅಪರಾಧಿಯನ್ನ, ಫ್ಯೂಡಲ್ ಕುಟುಂಬವನ್ನು ಹೊರ ಪ್ರಪಂಚಕ್ಕೆ ಅಮಾಯಕರಂತೆ, ಇವರೇ ನೈಜ ಸಂತ್ರಸ್ತರಂತೆ ತೋರಿಸುತ್ತಿರುವುದರಲ್ಲಿ ನಾಡಿನ ಅಪಾಯಕಾರಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದಿದೆ. ಪ್ರಜ್ವಲ್ ರೇವಣ್ಣನ ವಿಕೃತಿಯ ಬಗ್ಗೆ ಇಡೀ ಕುಟುಂಬಕ್ಕೇ ಗೊತ್ತಿದ್ದರೂ ಅದನ್ನು ಕಿಂಚಿತ್ ವಿರೋಧಿಸದೇ ಪೋಷಿಸಿಕೊಂಡು ಬಂದ ಕುಟುಂಬವೊಂದು ಮುಂದೆ ಇಂತಹದ್ದೊಂದು ಅನಾಹುತ ಘಟಿಸಬಹುದೆಂದು ಊಹಿಸಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಗೊತ್ತಿದ್ದೂ ಆದ ತಪ್ಪಿಗೆ ಕುಟುಂಬವೂ ಹೊಣೆ ಆಗಬೇಕು. ಹೀಗಿರುವಾಗ ಮಾಧ್ಯಮಗಳು ಮಾತ್ರ ಬಹು ದೊಡ್ಡ ಗೇಮ್ ಪ್ಲಾನ್ ನ್ನು ಇಲ್ಲಿ ನಡೆಸುತ್ತಿವೆ ಎಂಬುದು ಸ್ಪಷ್ಟ.</p>



<p>ಕಳೆದೆರಡು ದಿನಗಳ ಹಿಂದೆ 30 ದಿನಗಳಿಂದ ತಲೆಮರೆಸಿಕೊಂಡಿದ್ದ ವಿಕೃತ ಕಾಮಿ ಪ್ರಜ್ವಲ್ ರೇವಣ್ಣನ ವಿಡಿಯೋ ಒಂದು ಮಾಧ್ಯಮಗಳ ಮೂಲಕ ಹೊರ ಬಿದ್ದಿತ್ತು. ಇದನ್ನು ಮೊಟ್ಟ ಮೊದಲು &#8220;ಬ್ರೇಕ್&#8221; ಮಾಡಿದ್ದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಒಡೆತನದ ಏಷಿಯಾನೆಟ್ ಸುವರ್ಣ ನ್ಯೂಸ್. ಸತತ 40 ನಿಮಿಷಗಳ ಕಾಲ ಈ ವಿಡಿಯೋ ಇಟ್ಟು ಬ್ರೇಕಿಂಗ್ ಹೊಡೆದ ನಂತರ, ಮೀಡಿಯಾ ಗ್ರೂಪ್ ಗಳಲ್ಲಿ ಈ ವಿಡಿಯೋ ಓಡಾಡಿ ಉಳಿದೆಲ್ಲಾ ಚಾನಲ್ ಗಳ ಕೈ ಸೇರಿದೆ. ಆ ನಲವತ್ತು ನಿಮಿಷಗಳ ಕಾಲ ಎಲ್ಲಾ ಚಾನಲ್ ಗಳ ನ್ಯೂಸ್ ರೂಂ ಗಳು ಇರೋ ಬರೋ ಸೋಷಿಯಲ್ ಮೀಡಿಯಾವನ್ನು ತಡಕಾಡಿದ್ದೇ ಬಂತು.</p>



<p>ಆದರೆ ಮೊಟ್ಟ ಮೊದಲು ಸುವರ್ಣ ನ್ಯೂಸ್ ಗೆ ಈ ವಿಡಿಯೋ ಕ್ಲಿಪ್ಸ್ ತಲುಪಿಸಿದ ಮಹಾನುಭಾವ ಯಾರು ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ಪ್ರಕರಣದ ತನಿಖೆ ವಹಿಸಿಕೊಂಡಿರುವ ಎಸ್‌ಐಟಿ ಕೂಡ ವಿಡಿಯೋ ಮೂಲದ ಜಾಲ ಜಾಲಾಡಲು ಪ್ರಯತ್ನಿಸಿದರೂ ಸುವರ್ಣ ನ್ಯೂಸ್ ತನ್ನ ಸೋರ್ಸ್ ಬಿಟ್ಟು ಕೊಡದಿರುವುದು ಮೊಟ್ಟ ಮೊದಲು ಮಾಧ್ಯಮಗಳು ಈ ಪ್ರಕರಣವನ್ನು ಸಂಪೂರ್ಣ ಹಿಡಿತಕ್ಕೆ ತಡೆದುಕೊಳ್ಳುವ ಹಂತಕ್ಕೆ ಬಂದದ್ದು ಸ್ಪಷ್ಟವಾಗಿದೆ.</p>



<p>ಈಗಾಗಲೇ ಎಸ್ಐಟಿ ಇದರ ಜಾಡನ್ನು ಬೆನ್ನತ್ತಿದರೂ ಸುವರ್ಣ ನ್ಯೂಸ್ ನಮ್ಮ ಸೋರ್ಸ್ ಬಿಟ್ಟು ಕೊಡುವುದಿಲ್ಲ ಎಂದು ಎಸ್‌ಐಟಿ ಗೆ ನೇರವಾಗಿ ಹೇಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಈಗ ಸುವರ್ಣ ನ್ಯೂಸ್ ಗೆ ನೋಟೀಸ್ ಜಾರಿ ಮಾಡಿದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.</p>



<p>ಇದು ಒಂದು ಅಂಶವಾದರೆ ಕೆಲವು ದಿನಗಳ ಹಿಂದೆ ಲೈಂಗಿಕ ದೌರ್ಜನ್ಯದ ಸಂತ್ರಸ್ತೆ ಎಂದು ಗುರುತಿಸಿದ ಮಹಿಳೆಯೊಬ್ಬರು ವಿಡಿಯೋ ಮುಂದೆ ಮಾತನಾಡಿದ್ದು ವೈರಲ್ ಆಗಿತ್ತು. ಮಾಧ್ಯಮಗಳನ್ನು ಹೊರತುಪಡಿಸಿ ಸಂತ್ರಸ್ತೆ ಮಾತನಾಡಿದ ವಿಡಿಯೋ ಆಕೆಯ ಮುಖ ಕೂಡ ಬ್ಲರ್ ಮಾಡದೇ ವಾಟ್ಸಪ್ ಮೂಲಕ ಓಡಾಡಿತ್ತು. ಮಾಧ್ಯಮಗಳೇನೋ ಮುಖ ಬ್ಲರ್ ಮಾಡಿ ವಿಡಿಯೋ ಹಾಕಿದ್ದಾರೆ. ಆಕೆಯೂ ಅದೇನೇ ಮಾತನಾಡಿರಬಹುದು, ಅದಿಲ್ಲಿ ಅಸಂಬದ್ಧ. ಆದರೆ ಆ ವಿಡಿಯೋ ನ್ಯೂಸ್ ಚಾನಲ್ ವರೆಗೂ ತಲುಪಿಸಿದ ಸೋರ್ಸ್ ಯಾವುದು?</p>



<p>ಸಂತ್ರಸ್ತೆ ಮಾತನಾಡಿದ ವಿಡಿಯೋ ಮೊದಲು ಓಡಾಡಿದ್ದು ಕನ್ನಡದ &#8216;ವಿಸ್ತಾರ&#8217; ಸುದ್ದಿ ವಾಹಿನಿಯಲ್ಲಿ. ಅಲ್ಲೂ ಸಹ ಈ ವಿಡಿಯೋ ತಲುಪಿಸಿದ ಮೂಲ ಕೆದಕಿದಾಗ ಎಸ್‌ಐಟಿಗೆ ಸಿಕ್ಕ ಮಾಹಿತಿ ಕೇವಲ ಶೂನ್ಯ. ಅಂದ್ರೆ ಎಸ್ಐಟಿಗೂ ಸಿಗದ ಮಾಹಿತಿಗಳು ನ್ಯೂಸ್ ರೂಂ ಗಳನ್ನು ತಲುಪುತ್ತಿರುವ ಬಗೆ ಹೇಗೆ.? ಎಸ್ಐಟಿ ಕೂಡ ಇದರ ಮೂಲ ಜಾಡನ್ನು ಹುಡುಕುವ ಬಗೆಯಲ್ಲಿ ತಲೆ ಕೆಡಿಸಿಕೊಂಡಿದೆ. ಯಾರ ಮೂಲಕ ಈ ವಿಡಿಯೋ ತಲುಪಿದೆ, ವಾಟ್ಸಪ್ ಮೂಲಕವೋ? ವಾಟ್ಸಪ್ ಮೂಲ ಎಂಬುದನ್ನು ತನಿಖೆಗೆ ಬಿಟ್ಟರೆ ಪ್ರಕರಣದ ಅಸಲಿ ಕಿಂಗ್ ಪಿನ್ ಹೊರ ಬರುತ್ತಾನೆ. ಆದರೆ ಮಾಧ್ಯಮಗಳು ತನಿಖಾ ತಂಡಕ್ಕೆ ಸಹಕರಿಸುತ್ತಿಲ್ಲ ಎಂಬುದು ಎಸ್‌ಐಟಿ ಮೂಲಗಳಿಂದ ತಿಳಿದು ಬಂದಿದೆ.</p>



<p>ಇಷ್ಟೆಲ್ಲ ಹೇಳಿದ ಮೇಲೆ ಈ ಪ್ರಕರಣದಲ್ಲಿ ಬಹು ದೊಡ್ಡ ಪಾತ್ರವಾಗಿ ಮುಂಚಿನಿಂದಲೂ ತೋರಿಸಿಕೊಂಡು ಬಂದ &#8216;ಪವರ್ ಟಿವಿ&#8217; ಕೂಡ ಹಲವು ಮಾಹಿತಿಗಳನ್ನು ಗೌಪ್ಯವಾಗಿಯೇ ಮುನ್ನಡೆಸಿಕೊಂಡು ಬಂದಿದೆ. ಪ್ರಕರಣದ ಶುರುವಿನಿಂದಲೂ ಅನೇಕ ಮಾಹಿತಿಗಳನ್ನು &#8216;ಬ್ರೇಕ್&#8217; ಮಾಡಿದ &#8216;ಪವರ್ ಟಿವಿ&#8217;ಗೆ ಸಿಕ್ಕ ಹಲವಷ್ಟು ಮಾಹಿತಿಗಳ ಬಗ್ಗೆ ಇನ್ನೂ ಸಹ ಎಸ್‌ಐಟಿ ಮುಂದೆ ಬಾಯಿ ಬಿಟ್ಟಿಲ್ಲ. ಅದು ವಕೀಲ ದೇವರಾಜೇ ಗೌಡನ ಅಶ್ಲೀಲ ವಿಡಿಯೋ ಫೋನ್ ಟ್ರಾಪ್ ವಿಚಾರ ಆಗಿರಬಹುದು, ಪ್ರಜ್ವಲ್ ರೇವಣ್ಣನ ಬಗೆಗಿನ ಪ್ರಮುಖ &#8216;ಬ್ರೇಕಿಂಗ್&#8217; ಗಳ ಬಗ್ಗೆಯಾಗಿರಬಹುದು. ಈವರೆಗೂ ಸುದ್ದಿ ಮಾಧ್ಯಮಗಳು ತಮಗೆ ಸಿಕ್ಕ ಮಾಹಿತಿಯ ಬಗ್ಗೆ ಎಸ್ಐಟಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.</p>



<p>ಇದೇ ಕಾರಣಕ್ಕೆ ಈಗ ಎಸ್‌ಐಟಿ ಅಧಿಕಾರಿಗಳು ಪವರ್ ಟಿವಿ, ಸುವರ್ಣ ನ್ಯೂಸ್ ಮತ್ತು ವಿಸ್ತಾರ ನ್ಯೂಸ್ ಗೆ ಪ್ರಮುಖ ಸಾಕ್ಷ್ಯಗಳಾಗಿ ನೋಟೀಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಬೇರೆಲ್ಲಾ ಸಾಕ್ಷ್ಯಗಳಿಗಿಂತ ಅತಿ ದೊಡ್ಡ ದೊಡ್ಡ ಸಾಕ್ಷ್ಯಗಳನ್ನು ಇಟ್ಟುಕೊಂಡಿರುವ ಮಾಧ್ಯಮಗಳೇ ತನಿಖೆಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನುವುದಾದರೆ ತನಿಖೆ ಒಂದು ತಾರ್ಕಿಕ ಅಂತ್ಯ ತಲುಪುವುದಾದರೂ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.</p>



<p>ಈ ನಡುವೆ ಮಾಧ್ಯಮಗಳು ಮತ್ತು ಜೆಡಿಎಸ್ ಪಕ್ಷ ಎರಡೂ ಸೇರಿಕೊಂಡು, ಆರೋಪಿ ಕುಟುಂಬವೊಂದನ್ನು, ಸಂತ್ರಸ್ತ ಕುಟುಂಬವಾಗಿ, ಸರ್ಕಾರವನ್ನೇ ಅಪರಾಧಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಹೀಗಾದರೆ ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎನ್ನಲಾದೀತೇ?</p>



<p>ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇನ್ನಿಲ್ಲದಂತೆ ಗೇಮ್ ಪ್ಲಾನ್ ರೂಪಿಸಿದಂತಿದೆ. ದಿನಕ್ಕೊಂದರಂತೆ ಸರಣಿ ಪತ್ರಿಕಾಗೋಷ್ಠಿ ನಡೆಸಿ ತನಿಖೆಯ ದಿಕ್ಕು ತಪ್ಪಿಸುತ್ತಿರುವ ಬಗ್ಗೆಯೂ ಅನುಮಾನ ಹುಟ್ಟಿಕೊಂಡಿದೆ. ಒಂದು ಪ್ರಭಾವಿ ಕುಟುಂಬದ ಮಗನಾಗಿ, ಮಾಜಿ ಪ್ರಧಾನಿ, ಮಾಜಿ ಸಿಎಂ, ಹಾಲಿ ಶಾಸಕರು, ಹಾಲಿ ಪರಿಷತ್ ಸದಸ್ಯರಿರುವ ಕುಟುಂಬ ಹಿನ್ನೆಲೆಯ ವ್ಯಕ್ತಿ 30 ದಿನಗಳ ಕಾಲ ತನ್ನ ಕುಟುಂಬದ ಸಂಪರ್ಕವೇ ಇಲ್ಲದಿರಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಎಸ್‌ಐಟಿ ತನಿಖೆಗೆ ಒಡ್ಡಿಕೊಳ್ಳಲಿಲ್ಲವೋ ಅಥವಾ ಆ ಒಂದು ಕುಟುಂಬ ಅಥವಾ ಕಾಣದ ಕೈಗಳು ತನಿಖಾ ತಂಡ ಎಸ್‌ಐಟಿಯನ್ನು ನಿಯಂತ್ರಿಸುತ್ತಿವೆಯೋ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.</p>



<p>ಇನ್ನೊಂದು ಕಡೆ ಯಾರಿಗೂ ಸಿಗದ ಮಹತ್ವದ ದಾಖಲೆಗಳು ಮಾಧ್ಯಮಗಳ ಕೈ ಸೇರುವ ಮೂಲ ಯಾವುದು.? ಎಲ್ಲಿಂದ ಈ ವಿಡಿಯೋಗಳು ಹೊರಬರುತ್ತಿವೆ? ಸಿಕ್ಕ ದಾಖಲೆಗಳ್ಯಾವವೂ ನಿರ್ಲಕ್ಷಿಸುವಂತದ್ದು ಅಲ್ಲವೇ ಅಲ್ಲ. ಎಲ್ಲೋ ಜರ್ಮನಿಯ ಮೂಲೆಯಲ್ಲಿ ಕೂತ ಪ್ರಜ್ವಲ್ ರೇವಣ್ಣ ಮಾಡಿ ಕಳಿಸಿದ ವಿಡಿಯೋ, ಸಂತ್ರಸ್ತೆಯೊಬ್ಬಳು ಅಪರಾಧಿ ಕುಟುಂಬವೊಂದನ್ನು ಅಮಾಯಕರು ಎಂದು ಹೇಳುವ ವಿಡಿಯೋ ಮಾಡಿಸಿದವರು, ತಲುಪಿಸಿದವರ ಜಾಡು ಹಿಡಿದರೆ ನೂರಕ್ಕೆ ನೂರರಷ್ಟು ತನಿಖೆ ಸರಿಯಾದ ದಿಕ್ಕಿನಲ್ಲಿದೆ ಎಂದು ಹೇಳಬಹುದು. ಅಥವಾ ಎಸ್‌ಐಟಿ ಮೇಲೆ ನಂಬಿಕೆಯೂ ಮಾಡಬಹುದು.</p>



<p>ಬಹುತೇಕ ವಿಚಾರ ಗೊತ್ತಿರುವ ಮಾಧ್ಯಮಗಳೇ ಮುಂದೆ ಪ್ರಜ್ವಲ್ ರೇವಣ್ಣನಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ಅಮಾಯಕ, ಸಂತ್ರಸ್ತನನ್ನಾಗಿ ಬಿಂಬಿಸುವ ಕಾಲವೂ ದೂರವಿಲ್ಲ. ನಾಗರೀಕ ಸಮಾಜ ಮಾಧ್ಯಮಗಳಲ್ಲಿ ಬಂದದ್ದನ್ನೇ ಸತ್ಯ ಎಂದು ನೋಡದೇ, ಅವರನ್ನೇ ಸಾಕ್ಷ್ಯಗಳನ್ನಾಗಿ ನೋಡಬೇಕಿದೆ. ಈಗಾಗಲೇ ಎಸ್ಐಟಿ, ಮೇಲೆ ಉಲ್ಲೇಖಿಸಿದ ಮೂರೂ ಮಾಧ್ಯಮ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದೆ. ಸಾಕ್ಷ್ಯ ಅಂದಮೇಲೆ ಅವರನ್ನು ಬಂಧಿಸುವಂತಿಲ್ಲ. ಆದರೆ ಸಾಕ್ಷ್ಯ ಇಟ್ಟುಕೊಂಡಿರುವ ಮಾಧ್ಯಮಗಳು ತನಿಖೆಗೆ ಸ್ಪಂದಿಸಬೇಕಷ್ಟೆ.</p>
]]></content:encoded>
					
		
		
			</item>
		<item>
		<title>ಅದರಲ್ಲಿ ನನ್ನದೂ ಸಹ ವಿಡಿಯೋ ಇತ್ತು: ಸಂತ್ರಸ್ತೆಯೊಬ್ಬಳ ನಿವೇದನೆ (ಕಾಲ್ಪನಿಕ)</title>
		<link>https://peepalmedia.com/there-was-also-a-video-of-me-a-victims-statement-fictional/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 25 May 2024 06:26:52 +0000</pubDate>
				<category><![CDATA[Featured]]></category>
		<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[HD Revanna]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[prajwa; revannaq]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39890</guid>

					<description><![CDATA[ಪ್ರಿಯ ಗೆಳತಿ&#8230; ನಾನಿನ್ನು ಹೊರಡುತ್ತೇನೆ. ಹೊರಡಬೇಕೆಂದು ನಿರ್ಧರಿಸಿದ್ದೇನೆ. ಇನ್ನು ಯಾವುದೇ ಆತಂಕವಿಲ್ಲದೇ ನಿನ್ನ ಮನೆ ಬಾಗಿಲನ್ನು ತೆರದಿಡು.! ಮಕ್ಕಳು ಇನ್ನೆಂದೂ ಬಂದು &#8216;ದೊಡ್ಡಮ್ಮ ಬಾಗಿಲ ತಗೆ&#8217; ಎಂದು ಹಿಂಸಿಸುವುದಿಲ್ಲ.! ಈ ಪತ್ರ ನಿನ್ನ ಕೈ ಸೇರುವುದರೊಳಗೆ ನಿನ್ನನ್ನು ಈಗಾಗಲೇ ಹಲವಾರು ಮಂದಿ ಬಂದು ಕೇಳಿರಬಹುದು. &#8216;ಎಲ್ಲಿ ಹೋದಳು ಎಳೆ ಮಕ್ಕಳೊಂದಿಗೆ&#8217; ಎಂದು. &#8216;ಜನುಮದ ಜೋಡಿಗಳಿದ್ದಂಗೆ ಇದ್ದವರು ನೀವು , ನಿನಗೆ ಹೇಳದೆ ಹೋಗಿರುತ್ತಾಳೆಯೇ? ಎಂದು ಕೊಂಕೂ ಆಡಿರಬಹುದು. ನೀನು ಉತ್ತರಕ್ಕಾಗಿ ತಡಕಾಡುತ್ತಿರುವೆ ಅಲ್ಲವೇ ಗೆಳತಿ. ಅದಕ್ಕಾಗೆ ಈ [&#8230;]]]></description>
										<content:encoded><![CDATA[
<p> ಪ್ರಿಯ ಗೆಳತಿ&#8230;</p>



<p>ನಾನಿನ್ನು ಹೊರಡುತ್ತೇನೆ. ಹೊರಡಬೇಕೆಂದು ನಿರ್ಧರಿಸಿದ್ದೇನೆ. ಇನ್ನು ಯಾವುದೇ ಆತಂಕವಿಲ್ಲದೇ ನಿನ್ನ ಮನೆ ಬಾಗಿಲನ್ನು ತೆರದಿಡು.! ಮಕ್ಕಳು ಇನ್ನೆಂದೂ ಬಂದು &#8216;ದೊಡ್ಡಮ್ಮ ಬಾಗಿಲ ತಗೆ&#8217; ಎಂದು ಹಿಂಸಿಸುವುದಿಲ್ಲ.! ಈ ಪತ್ರ ನಿನ್ನ ಕೈ ಸೇರುವುದರೊಳಗೆ ನಿನ್ನನ್ನು ಈಗಾಗಲೇ ಹಲವಾರು ಮಂದಿ ಬಂದು ಕೇಳಿರಬಹುದು. &#8216;ಎಲ್ಲಿ ಹೋದಳು ಎಳೆ ಮಕ್ಕಳೊಂದಿಗೆ&#8217; ಎಂದು. &#8216;ಜನುಮದ ಜೋಡಿಗಳಿದ್ದಂಗೆ ಇದ್ದವರು ನೀವು , ನಿನಗೆ ಹೇಳದೆ ಹೋಗಿರುತ್ತಾಳೆಯೇ? ಎಂದು ಕೊಂಕೂ ಆಡಿರಬಹುದು. ನೀನು ಉತ್ತರಕ್ಕಾಗಿ ತಡಕಾಡುತ್ತಿರುವೆ ಅಲ್ಲವೇ ಗೆಳತಿ. ಅದಕ್ಕಾಗೆ ಈ ಪತ್ರ‌.</p>



<p>ಒಂದು ವಾರದಿಂದ ನಿನ್ನಿಂದ ಒಂದೂ ಮಾತಿಲ್ಲ.‌ ನೀನು ಪಕ್ಕದ ಮನೆಯಲ್ಲೇ ಇದ್ದರೂ, ನಾನೆಲ್ಲೋ ದೇಶದ ಗಡಿಯಾಚೆ ಇರುವಂತಿದೆ.. ಮಕ್ಕಳಿಬ್ಬರೂ ಅದೆಷ್ಟು ಬಾರಿ ಕೇಳಿದರೋ, ದೊಡ್ಡಮ್ಮ ಏಕೆ ಮಾತಾಡುತ್ತಿಲ್ಲ, ಬಾಗಿಲೇಕೆ ತೆಗೆಯುತ್ತಿಲ್ಲವೆಂದು. ದೊಡ್ಡವಳಿಗೆ ಏನೋ ಹೇಳಿ ಸಮಾಧಾನ ಮಾಡುತ್ತಿದ್ದೆ. ಆದರೆ ಚಿಕ್ಕವನಿಗೆ ಹೇಳಲು ನನ್ನಿಂದ ಸಾಧ್ಯವಾಗದೆ ಹೊಯಿತು…. ನಿನಗೇ ಗೊತ್ತಿದೆ , ನಿನ್ನನ್ನು ಅವನು ಎಷ್ಟು ಹಚ್ಚಿಕೊಂಡಿದ್ದನೆಂದು. ನೆಲಕ್ಕೆ ಬಿದ್ದು ಒದ್ದಾಡಿ ರಂಪ ಮಾಡುತ್ತಿದ್ದ. . &#8216;ದೊಡ್ಡು… ದೊಡ್ಡಮ್ಮ&#8217;ಎಂಬ ಅವನ ತೊದಲು ನುಡಿಯ ಅಲೆಗಳು ನೀನು ಮುಚ್ಚಿದ ಎಲ್ಲಾ ಕಿಟಕಿ ಬಾಗಿಲುಗಳನ್ನು ಭೇದಿಸಿ ನಿನ್ನ ಕಿವಿಗಳನ್ನೂ ಅಪ್ಪಳಿಸಿರುತ್ತವೆ.‌..ಇಲ್ಲವೆನ್ನಬೇಡ.!</p>



<p>ನೆನಪಿದೆಯಾ ಗೆಳತಿ, ಅಂದು ಇಂದಿನಂತೆ ಗಾಡ ಕತ್ತಲು ನನ್ನ ಸುತ್ತ. ನಾನು ಕತ್ತಲಾಗಿ ಕುಳಿತ್ತಿದ್ದೆ.‌‌ ಮಡಿಲಲ್ಲಿ ವರುಷದ ಕೂಸು. ಪುಟ್ಟಿಗೆ ಮೂರು ವರ್ಷ. ಕೋವಿಡ್ ಮಹಾಮಾರಿ ಗಂಡನನ್ನು ಬಲಿ ತೆಗೆದುಕೊಂಡಿತ್ತು.. ಆ ಕತ್ತಲಲ್ಲಿ ಕೋಲ್ಮಿಂಚಂತೆ ಬಂದೆ ನೀನು. ನಿನ್ನ ಕಣ್ಣುಗಳಲ್ಲಿದ್ದ ಆ ಪ್ರೀತಿ, ವಾತ್ಸಲ್ಯ, ಆತ್ಮೀಯ ಭಾವ ಇನ್ನೂ ಅಚ್ಚಳಿಯದೆ ನನ್ನ ಕಣ್ಣಕಟ್ಟಿವೆ. ನೀನು ಚಾಚಿದ ಆ ಸ್ನೇಹದ ಹಸ್ತ , ನನ್ನೆಲ್ಲಾ ರಕ್ತ ಸಂಬಂಧವನ್ನು ನಾಚಿಸಿದ್ದವು. &#8216;ಮುಳುಗಿದ ಸೂರ್ಯ ನಾಳೆ ಬಂದೆ ಬರುತ್ತಾನೆ. ನೆನ್ನೆಯ ಬಿಟ್ಟು, ಮುಂಬರುವ ನಾಳೆಗಳ ನೋಡೆಂದೆ.&#8217; ಅದೆಂತ ಜೀವನದ ಚೈತನ್ಯವನ್ನು ತುಂಬಿದವು ನಿನ್ನ ಮಾತುಗಳು ನನಗೆ. ಅಂದು ಮಾತ್ರವಲ್ಲ ಇಂದು ಸಹ… ಕಗ್ಗತ್ತಲೆಯ ದಾರಿಯಲ್ಲಿ ದೀಪಗಳಾಗಿವೆ ..</p>



<p>ದುಡಿಮೆಗಾಗಿ ಮನೆಕೆಲಸದ ದಾರಿ ತೋರಿಸಿದೆ.. ವರುಷಗಳು ಉರಳಿದವು.‌ ನೀನು ಹೇಳಿದಂತೆ ಕತ್ತಲು ಕ್ರಮೇಣ ಸರಿಯಿತು. ಮಕ್ಕಳು ದೊಡ್ಡದಾದವು. ಮನೆಯ ಖರ್ಚು ದೊಡ್ಡದಾಯಿತು. ಆಗಲೇ ಅದ್ಯಾರಿಂದಲೊ ಗೊತ್ತಾಯಿತು ದೊಡ್ಡಮನೆಯಲ್ಲಿ ಮನೆಗೆಲಸಕ್ಕೆ ಹೆಣ್ಣಾಳು ಬೇಕಿದ್ದಾರೆ ಎಂದು. ನಿನ್ನ ಬಳಿ ಹೇಳಿದೆ. ನನ್ನ ಮಾತಿನ್ನೂ ಮುಗಿದೆ ಇರಲಿಲ್ಲಾ,… ನೀನು ಮಾತು ಮುಂದುವರಿಸಿದೆ, &#8216;ಒಪ್ಪಿಕೋ. ಇನ್ನೇನು ಯೋಚಿಸುತ್ತಿರುವೆ. ಒಂದೆರಡು ಕಾಸು ಉಳಿಸು. ಪಾಪು ಹಾಗೂ ಪುಟ್ಟಿಯ ಚಿಂತೆಯನ್ನು ಬಿಡು. ಪುಟ್ಟಿ ಶಾಲೆಯಿಂದ ನೇರ ಬಂದು ನಮ್ಮ ಮನೆಯಲ್ಲಿರುತ್ತಾಳೆ. ನನ್ನ ಗಂಡ ಬರುವುದು ಸಂಜೆಯ ಮೇಲೆ. ಅಲ್ಲಿಯವರೆಗೂ ಮನೆಯಲ್ಲಿ ನಾನು ಒಂಟಿ ಪಿಶಾಚಿಯೇ. ಮಕ್ಕಳಿಬ್ಬರು ಅಂಗಳದಲ್ಲಿ ಆಡಿಕೊಂಡಿರಲಿ ಬಿಡುಎಂದೇ… ನಾನು ಏನು ಹೇಳದೇ ಹೋದರು ಅಂದು ನೀನು ಎಲ್ಲವನ್ನು ಅರ್ಥಮಾಡಿಕೊಂಡು ಆಡಿದ ಮಾತುಗಳು‌ ನನ್ನೆಲ್ಲಾ ಆತಂಕವನ್ನು ದೂರ ಮಾಡಿದವು. ನಿಶ್ಚಿಂತೆಯಿಂದ ನಿಟ್ಟುಸಿರು ಬಿಟ್ಟೆ.</p>



<p>ದೊಡ್ಡ ಮನೆಯ ಕೆಲಸ ದಿನ ಕಳೆದಂತೆ ಉಸಿರುಗಟ್ಟಿಸಿತು. ದಿನಪೂರ ಮಾಡಿದರೂ ಮುಗಿಯಲಾರದ ಕೆಲಸ. ಮಕ್ಕಳ ಭವಿಷ್ಯಕ್ಕೆಂದು ಎಲ್ಲವನ್ನು ಸಹಿಸಿಕೊಂಡೆ. ಅದೊಂದು ದಿನ ಮನೆಯ ಮಾಲಿಕನ ಕಾಮದ ಕೂಪದ ಬಾಯಿಗೆ ಆಹಾರವಾಗಿ ನಾನು ಬಲಿಯಾದೆ. ಪ್ರತಿಭಟಿಸಿದ್ದೆ ಗೆಳೆತಿ. ನನ್ನ ಪ್ರತಿಭಟನೆಯ ಧ್ವನಿಯನ್ನು ಮುಗಿಲೆತ್ತರದ ಮನೆಯ ನಾಲ್ಕು ಗೋಡೆಗಳು ಹೊಸಕಿ ಹಾಕಿದವು.. ಪ್ರತಿಭಟಿಸಿದ್ದ ಫಲವಾಗಿ ಮೈತುಂಬ ಗಾಯಗಳಾದವು. ಮಕ್ಕಳು ಕೇಳಿದವು. ಅದೇಗಾಯಿತು ಇದೇಗಾಯ್ತು ಎಂದು. ಹೇಳಿದೆ ಮೊದಲ ಬಾರಿ ಪುಂಕಾನು ಪುಂಕ ಸುಳ್ಳುಗಳ. ಅಲ್ಲಿ ಬಿದ್ದೆ, ಇಲ್ಲಿ ಬಿದ್ದೆ ಎಂದು.‌ ಮಕ್ಕಳು ನಂಬಿದವು. ಅದೆಷ್ಟು ಬಲವಾದ ನಂಬಿಕೆ ಅಲ್ಲವೇ ಮಕ್ಕಳಿಗೆ ತಾಯಿಯ ಮೇಲೆ.! ಆ ನಂಬಿಕೆಯನ್ನು ಯಾವ ತಾಯಿ ತಾನೇ ಕಳೆದುಕೊಳ್ಳಲು ಇಚ್ಚಿಸುತ್ತಾಳೆ. ಮರುದಿನ ನಿನ್ನ ಬಳಿಯು ಮಕ್ಕಳಿಗೆ ಕೊಟ್ಟ ಉತ್ತರವನ್ನೇ ಕೊಟ್ಟೆ. ಅದೇಕೋ ಧೈರ್ಯವೇ ಬರಲಿಲ್ಲ ಗೆಳತಿ ನಿನ್ನ ಬಳಿಯೂ ಸಹ. ಅದ್ಯಾವ ಭಯ ನನ್ನ ಬಾಯಿ ಕಟ್ಟಿಹಾಕಿತ್ತೊ ಗೊತ್ತಿಲ್ಲ .. ಇನ್ನೂ ಹುಡುಕುತ್ತಿರುವೇ.‌</p>



<p>ಕೆಲಸವನ್ನು ಬಿಡುತ್ತೇನೆ ಎಂದೆ. ನೀನು ಕಾರಣವನ್ನು ಕೇಳಿದೆ, ನಾನು ತುಂಬ ಕೆಲಸವೆಂದು ಮಾತ್ರ ಉತ್ತರಿಸಿದೆ. ಬಿಡುವುದಾದರೆ ಮತ್ತೊಂದು ಕೆಲಸವನ್ನು ಕೈಯಲ್ಲಿ ಹಿಡಿದುಕೊಂಡು ಬಿಡು ಇಲ್ಲದಿದ್ದರೆ ಮಕ್ಕಳ‌ ಕಥೆ ಏನು? ಎಂದು ಎಚ್ಚರಿಸಿದೆ. ಮಕ್ಕಳ ಹಸಿವು ನೆನಪಾಯಿತು. ಮತ್ತೆ ಹೋದೆ ಆ ಮನೆಯ ಅಂಗಳಕ್ಕೆ. ಬೆಂಕಿಯನ್ನು ಸೆರಗಲ್ಲೇ ಕಟ್ಟಿಕೊಂಡಂತೆ, ಜೀವವಿಡಿದೆ ಕೆಲಸ ಮಾಡಿದೆ. ಅದೆಷ್ಟುಸಲ ನಿದ್ದೆಯಲ್ಲಿ ಬೆಚ್ಚಿಬಿದ್ದಿದ್ದೇನೋ… ಮಕ್ಕಳು ಸಹ ಎಚ್ಚರಗೊಳ್ಳುತ್ತಿದ್ದವು.. ತಡೆಯಲಾರದೆ ಹೋದೆ ಆ ಉಸಿರು ಗಟ್ಟಿಸಿದ ಮನೆಯ.. ನಿರ್ಧರಿಸಿಬಿಟ್ಟೆ. ನಾಳೆಯಿಂದ ನಾನು ಹೋಗುವುದಿಲ್ಲವೆಂದು. ಬಿಟ್ಟೆ ಕೆಲಸವನ್ನು. ಸ್ವಲ್ಪ ದಿನಗಳು ಕಷ್ಟವಾದವು. ಆಗಲೂ ನೆರವಾದದ್ದು ನಿನ್ನ ಕೈಗಳೇ. ಅದೇಗೋ ಮತ್ತೆ ಮೂರು ಮನೆಗಳಲ್ಲಿ ಚಿಕ್ಕ ಪುಟ್ಟ ಕೆಲಸ ಗಿಟ್ಟಿಸಿಕೊಂಡೆ.</p>



<p>ಎಲ್ಲವು ಸರಿ ಹೋಗುತ್ತಿದೆ ಎನ್ನುವಷ್ಟರಲ್ಲೇ, ನನ್ನನ್ನು ಅದ್ಯಾರೋ ಬೆಂಕಿಯ ಕೆನ್ನಾಲಿಗೆಗೆ ದಬ್ಬಿದಂತೆ ಅನ್ನಿಸಿತು ಗೆಳತಿ. ಅಂದು ಸಂಜೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಳ್ಳಲು ಅಂಗಡಿಗೆ ಹೋದಾಗ, ನನ್ನ ನೋಡಿ ಅಲ್ಲಿದ್ದವರಲ್ಲಿ ಅದೇನೋ ಗುಸು ಗುಸು. &#8216;ಇವಳೇ ಇವಳೇ&#8217; ಎಂಬ ಶಬ್ದ ಮಾತ್ರ ಸ್ಪಷ್ಟವಾಗಿ ಕೇಳಿಸಿತು. ಮತ್ತೆಲ್ಲವು ಗುಸುಗುಸು. ದಾರಿ ಉದ್ದಕ್ಕೂ ಅದೆಂಥಾ ಮುಜುಗರ.! ಎಲ್ಲರ ಕಂಗಳು ನನ್ನ ಮೈಮೇಲೆ , ಹರಿದಾಡಿದಂತಾಯಿತು.! ನನ್ನ ಬಟ್ಟೆ ಎಲ್ಲಾದರೂ ಹರಿದಿದೆಯೋ ಎಂದು ನೋಡಿಕೊಂಡೆ. ಕೈಗಳನ್ನು ಬೆನ್ನ ಮೇಲೆ ಹಾಯಿಸಿದೆ.‌ ಎಲ್ಲವೂ ಸರಿಯಿತ್ತು. ಆದರೂ ಜನರ ವಿಚಿತ್ರ ನೋಟ ನನ್ನೆಡೆಗೆ!. ದಾರಿ ಉದ್ದಕ್ಕೂ ಅದೇ ನೋಟ, ಬಿಡಲಾರದ ನೋಟ.!</p>



<p>ಅಲ್ಲಿಂದ ಕಾಲ್ ಕಿತ್ತವಳಂತೆ ನೇರ ನಿನ್ನ ಮನೆಗೆ ಬಂದೆ. ನಿನ್ನ ಬಳಿ ಏನೋ ಹೇಳಲಿದ್ದೇ ಅಷ್ಟರಲ್ಲಿ ನೀನು &#8216;ನಿನ್ನಂತ ನೀತಿಗೆಟ್ಟವಳಿಗೆ ನನ್ನ ಮನೆಯಲ್ಲಿ ಪ್ರವೇಶವಿಲ್ಲವೆಂದೆ.&#8217; ಅದೆಷ್ಟು ಹರಿತವಾಗಿದ್ದವು ಆ ಮಾತುಗಳು. ಮನಸ್ಸು ಬಾಣಕ್ಕೆ ಸಿಕ್ಕ ಬೇಟೆಯು ವಿಲವಿಲನೆ ಒದ್ದಾಡುವಂತೆ ಆಡಿತು. ಏನಾಯಿತು ಎನ್ನುವಷ್ಟರಲ್ಲೇ &#8216;ಹೊರಡು ಇಲ್ಲಿಂದ, ನನ್ನ ಗಂಡ ಬರುವ ಸಮಯವಾಯಿತೆಂದೆ.&#8217; ಬೆಚ್ಚಿದೆ ಒಮ್ಮೆ ನಿನ್ನ ಕೋಪಕ್ಕೆ. ದುಃಖ, ಕೋಪ ಒಟ್ಟೊಟ್ಟಿಗೆ ಬಂದವು.‌ ಬರಲಾರದ ಮಕ್ಕಳನ್ನು ಅಂಗಳದಿಂದ ಎಳೆದುಕೊಂಡು ಮನೆಗೆ ಬಂದೆ.</p>



<p>ಮಕ್ಕಳ ಮುಂದೆ ಎಂದು ಅಳಲಾರದವಳು ಅಂದು ಸಹಿಸಲಾರದೇ ಹೋದೆ. ನನ್ನ ಕಣ್ಣೀರ ಕಟ್ಟೆ ಒಡೆಯಿತು. ನನ್ನ ನೋಡಿ ಮಕ್ಕಳು ಅಳಲಾರಂಭಿಸಿದವು.‌ ಮಕ್ಕಳಿಗಾಗಿ ಕಣ್ಣಿರ ಮರೆಮಾಚಿದೆ. ಏನಾಗಿದೆ ಎಂದು ತಿಳಿಯಲು ಹರಸಾಹಸ ಮಾಡಿದೆ. ಎಲ್ಲವೂ ಕಗ್ಗಂಟಾಗಿತ್ತು. ರಾತ್ರಿ ಪೂರ ನಿದ್ದೆ ಇಲ್ಲದೆ ಒದ್ದಾಡಿದೆ..</p>



<p>ಮರುದಿನ ದೊಡ್ಡಮನೆಯಲ್ಲಿ ನನ್ನೊಟ್ಟಿಗೆ ಕೆಲಸ ಮಾಡುತ್ತಿದ್ದ ಒಬ್ಬಾಕೆ ಮನೆಗೆ ಬಂದಳು. ಅವಳ ಮೂಲಕವೇ ವಿಷಯ ಗೊತ್ತಾಯ್ತು. ದೊಡ್ಡಮನೆಯ ಕಾಮುಕನು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸದ ವಿಡಿಯೋಗಳು ಸಾವಿರಾರು ಸಂಖ್ಯೆಯ ಪೆನ್ ಡ್ರೈವ್ ಗಳ ಮೂಲಕ ಊರಿನ ಹಾದಿ ಬೀದಿಯಲ್ಲಿ ಬಹಿರಂಗವಾಗಿವೆ. ಈ ವಿಡಿಯೋಗಳನ್ನು ಸ್ವತಃ ಆ ಕಾಮುಕನೇ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದುಕೊಂಡಿದ್ದು, ಈ ಚುನಾವಣಾ ಸಮಯದಲ್ಲಿ ಅವು ಹೊರಬಿದ್ದಿವೆ. ಅದರಲ್ಲಿ ನನ್ನದೂ ಇದೆ ಎಂದು! ಕೇಳಿದೊಡನೆ, ಅದೇಕೋ ಮೈಮೇಲೆ ಮೈತುಂಬ ಬಟ್ಟೆ ಇದ್ದರು, ಒಮ್ಮೆಲೆ ಇಡೀ ಜಗತ್ತೆ ನನ್ನನು ನಗ್ನಗೊಳಿಸಿತು ಎಂದೆನಿಸಿತು. ನಿಂತಲ್ಲೇ ಕುಸಿದೆ. ಕುಸಿದಲ್ಲೇ ಮುದುಡಿದೆ…..!!</p>



<p>ನಿನ್ನ ಮೇಲೆ ಯಾವ ಬೇಸರವೂ ಇಲ್ಲ ಗೆಳತಿ. ನಿನ್ನ ಕೋಪ ಯಾರ ಮೇಲೆಂದು ತಿಳಿಯಲು ಅಸಮರ್ಥಳಾದೆ. ಅಷ್ಟೇ! ನನ್ನಿಂದಾಗಲಿ, ಮಕ್ಕಳಿಂದಾಗಲಿ ನೀನೆಂದು ಅವಮಾನಕ್ಕೊಳಗಾಗ ಬಾರದು. ಆದರಿಂದಲೇ ಹೊರಡುತ್ತಿದ್ದೇನೆ. ಊರ ತೊರೆದು. ಜೀವ ತೊರೆದಲ್ಲ.! ಮಕ್ಕಳಿಗೆ ಹೊಸ ಊರೆಂದು ಇನ್ನು ತಿಳಿದಿಲ್ಲ. ನನ್ನ ಕರುಳಿನ ಋಣಕ್ಕಿಂತ , ನಿನ್ನ ಮಡಿಲಲ್ಲಿ ಕುಳಿತು ತಿಂದ ಕೈತುತ್ತಿನ ಋಣ ಮಕ್ಕಳ ಮೇಲೆ ಹೆಚ್ಚಿದೆ. ಕೆಲ ಕಾಲ ಸಮಾಧಾನ ಮಾಡಲು ನನ್ನೊಬ್ಬಳಿಗೆ ಕಷ್ಟವಾಗಬಹುದು, ಹೊಂದಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ . ಯಾವುದೋ ಭಯ ಬಹುಕಾಲ ನನ್ನನ್ನು ಮೂಕಳಾಗಿಸಿದಂತೆ, ನಿನ್ನನ್ನು ಇಂದು ಬಂದಿಸಿಟ್ಟಿರಬಹುದು. ಚಿಂತೆಯಿಲ್ಲ. ನಿನ್ನಲ್ಲಿ ಒಂದೇ ಒಂದು ಮನವಿ , ಮುಂದೆ ಎಂದಾದರೂ ಎಲ್ಲಿಯಾದರೂ ನಾವು ನಿನಗೆ ಎದುರಾದರೇ ಒಮ್ಮೆ, ಒಮ್ಮೆ ನಕ್ಕು ಬಿಡು ಗೆಳತಿ, ನಮ್ಮೆಡೆಗೆ ಮೊದಲಿನಂತೆಯೇ,…ಸಾಕು. ನಿನ್ನ ಪ್ರೀತಿ ಕಂಗಳ ಮತ್ತೂಮ್ಮೆ ನೋಡುವ ಬಯಕೆ …… ಅಷ್ಟೇ . ಕಾಯುತ್ತಿರುತ್ತೇನೆ ಆ‌ ದಿನಕ್ಕಾಗಿ..</p>



<p>.‌..ಇಂತಿ<br>ಸಂತ್ರಸ್ತೆಯಲ್ಲೊಬ್ಬಳು.</p>



<p></p>



<ul class="wp-block-list">
<li><strong>ನಿರ್ಮಲಾ ಎಚ್. ಎಲ್.‌ </strong></li>
</ul>



<hr class="wp-block-separator has-alpha-channel-opacity"/>



<p>Written by-ನಿರ್ಮಲಾ ಎಚ್ ಎಲ್</p>
]]></content:encoded>
					
		
		
			</item>
		<item>
		<title>ದೊಡ್ಡಗೌಡ್ರಿಗೆ ಆತ್ಮಸಾಕ್ಷಿ ಅಂತ ಇದ್ದಿದ್ದರೆ ಅವರು ಹೀಗೆ ಪತ್ರ ಬರೆಯುತ್ತಿದ್ದರು (ಕಾಲ್ಪನಿಕ ಪತ್ರ)</title>
		<link>https://peepalmedia.com/had-dodgoudry-had-a-conscience-he-would-have-written-a-letter-like-this-fictional-letter/</link>
		
		<dc:creator><![CDATA[Hanumanth Halageri]]></dc:creator>
		<pubDate>Fri, 24 May 2024 08:13:58 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ವಿಡಂಬನೆ]]></category>
		<category><![CDATA[#Kumaraswamy #JDS #ramanagara #mysore #kodagu #kannadaexpress9 #prathapsimha #Simha #SaRaMahesh #GTDevegowda #DeveGowda #HDK H D Kumaraswamy]]></category>
		<category><![CDATA[bengalure]]></category>
		<category><![CDATA[devegowda]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pendrive]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39855</guid>

					<description><![CDATA[ಇಂದ ದೊಡ್ಡಗೌಡರು, ಬೆಂಗಳೂರು ಇವರಿಗೆ, ರಾಜ್ಯದ ಜನತೆಗೆ &#160;ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ &#160;ನಮ್ಮ ಪಕ್ಷದ &#160;ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ. [&#8230;]]]></description>
										<content:encoded><![CDATA[
<p><strong>ಇಂದ</strong></p>



<p><strong>ದೊಡ್ಡಗೌಡರು, ಬೆಂಗಳೂರು</strong></p>



<p><strong>ಇವರಿಗೆ</strong>,</p>



<p><strong>ರಾಜ್ಯದ ಜನತೆಗೆ</strong></p>



<p>&nbsp;ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ &nbsp;ನಮ್ಮ ಪಕ್ಷದ &nbsp;ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ.</p>



<p>ಕಳೆದೊಂದು ತಿಂಗಳಿನಿಂದ ನಾನು ಬಳಷ್ಟು ತೊಳಲಾಡಿದ್ದೇನೆ. ನಾವು ರಾಜಕಾರಣಿಗಳು. ನಮಗೂ ಒಂದು ಮನಸ್ಸಿರುತ್ತದೆ. ಆದರೆ, ನಮ್ಮ ಮನಸ್ಸಿನಲ್ಲಿ ಮೂಡುವ ಸತ್ಯವನ್ನು ನಮಗೆ ಹೇಳಲು ಸಾಧ್ಯವಾಗುದಿಲ್ಲ. ನಾವು ಏನಾದರೂ &nbsp;ನಮ್ಮೊಳಗೆ ಇರುವ ಸತ್ಯ ಹೇಳಿದರೆ ಅದ್ರಿಂದ ಪಕ್ಷದ ಕಾರ್ಯಕರ್ತರು ಮತದಾರರು ಏನೆಂದುಕೊಳ್ಳುತ್ತಾರೋ ಎಂದು ನಾವು ಅವರಿಗೆ ಬೇಕಾದಂತೆ ಸತ್ಯಕ್ಕೆ ತರಾವರಿ ಬಣ್ಣದ ಲೇಪ ಮಾಡಿಕೊಂಡೇ ಮಾತಾಡಬೇಕಾಗುತ್ತದೆ. ಆದರೆ, ಇವತ್ತು ತಡೆದುಕೊಳ್ಳಲಿಕ್ಕಾಗದೇ ಈ ಪತ್ರವನ್ನು ಬರೆಯುತ್ತಿದ್ದೇನೆ.</p>



<p>ನಾನು ಈ ದೇಶದ ಪ್ರಧಾನಿಯಾದುದು ನನ್ನ ಅದೃಷ್ಟ. ಇದ್ರಿಂದ ನನಗೆ ಮತ್ತು ನನ್ನ ಪಕ್ಷಕ್ಕೆ ಒಳ್ಳೆಯ ಹೆಸರು ಬಂತು. ಈ ನಾಡಿನ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳೆಲ್ಲ ನನ್ನ ಪಕ್ಷಕ್ಕೆ ಬಂದು ಸೇರಿಕೊಂಡರು. ದಕ್ಷಿಣ ಭಾರತದ ಹಿಂದಿವಾಲಾ ಪಕ್ಷಗಳ ವಿರುದ್ಧ ನಮ್ಮದೇ ನೆಲದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸೋಣ ಅವರ ಕನಸಾಗಿತ್ತು. ಆರಂಭದಲ್ಲಿಯೇ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ನನ್ನ ಪುತ್ರ ವಾತ್ಸಲ್ಯ ಮತ್ತು ಕುಟುಂಬ ಪ್ರೇಮ ನನ್ನನ್ನು ಕುರುಡನ್ನಾಗಿ ಮಾಡಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು.</p>



<p>ಇವನಿಗೆ ಸೀಟು ಕೊಟ್ಟರೆ ಅವನಿಗೆ ಸಿಟ್ಟು, ಅವನಿಗೆ ಕೊಟ್ರೆ ಇವನಿಗೆ ಸಿಟ್ಟು. ಹಾಗಾಗಿ ನಾನು ಬರಬರುತ್ತಾ ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ, ಅಳಿಯಂದಿರಿಗೆ, ಮೊಮ್ಮಕ್ಕಳಿಗೆ ಇದ್ದುಬಿದ್ದ ಸಂಬಂಧಿಕರಿಗೆಲ್ಲ ನನ್ನ ಪಕ್ಷದ ಟಿಕೇಟ್‌ಗಳನ್ನು ಹಂಚುತ್ತಾ ಹೋದೆ. ಪ್ರಾದೇಶಿಕ ಪಕ್ಷ ಅಂತ ಬಂದವರೆಲ್ಲ ಒಬ್ಬೊಬ್ಬರು ಪಕ್ಷ ಬಿಟ್ಟು ಹೋದರು. ನಮ್ಮ ಪಕ್ಷ ಅನ್ನುವುದು ನನ್ನ ಕುಟುಂಬದ ಪಕ್ಷವಾಗಿ ಮಾತ್ರ ಉಳಿಯಿತು. ಹಾಗೆ ನೋಡಿದರೆ ನಾನು ಪ್ರಜಾಪ್ರಬುತ್ವ ವ್ಯವಸ್ಥೆಯ ವಿರೋಧಿ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಪ್ರಜಾ ರಾಜಕಾರಣವನ್ನು ನಮ್ಮ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಸೀಮಿತ ಮಾಡಿದ ಕುಖ್ಯಾತಿ ನನ್ನದೇ ಎನ್ನಬಹುದು. ಇದಷ್ಟೇ ಅಲ್ಲ, ನನ್ನ ಕುಟುಂಬದವರೆಲ್ಲ ಅವರವರ &nbsp;ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು. ರಾಜರಂತೆ ವರ್ತಿಸುತ್ತಾ ರಾಜಸತ್ತೆ ಸ್ಥಾಪಿಸತೊಡಗಿದರು. ತಮ್ಮ ತಮ್ಮ ಕ್ಷೇತ್ರಗಳನ್ನು, ಕ್ಷೇತ್ರದ ಜನರನ್ನು, ಹೆಂಗಸರನ್ನು ಆಸ್ತಿಯಂತೆ ಬಳಸತೊಡಗಿದರು. ಇದಕ್ಕೆ ನನ್ನ ದೊಡ್ಡ ಮಗ ಒಂದು ಸಿಂಪಲ್‌ ಉದಾಹರಣೆ.</p>



<p>ಇನ್ನೊಂದು ನನ್ನ ಮುಖ್ಯವಾದ ೨ನೇ ತಪ್ಪೆಂದರೆ ಪ್ರಜ್ವಲ್‌ ರೇವಣ್ಣ ಪ್ರಕರಣ ಐದಾರು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದರೂ ನಾನು ನಿರ್ಲಕ್ಷ ಮಾಡಿದ್ದು. ಆಗ ನನ್ನ ಬುದ್ಧಿಗೆ ಮಂಕು ಕವಿದಿತ್ತು. ಪ್ರಜ್ವಲನ ಭಾಷಣ ಕೇಳುತ್ತಿದ್ದರೆ. ನಿಜ ಹೇಳಬೇಕೆಂದರೆ ಅವನ ಗತ್ತು ಗೈರತ್ತು ನೋಡುತ್ತಿದ್ದರೆ, ನನಗೆ ನನ್ನ ಕುಟುಂಬದ ಜೀನ್ಸ್‌ ಬಗ್ಗೆ ಬಹಳಷ್ಟು ಹೆಮ್ಮೆಯಾಗುತ್ತಿತ್ತು. ಈ ಪಜ್ವಲ ನಮ್ಮ ಪಕ್ಷವನ್ನು ಉಜ್ವಲಗೊಳಿಸುತ್ತಾನೆ ಎಂದೇ ನಾನು ನಂಬಿದ್ದೆ.</p>



<p>ರಾಜಕಾರಣಿಗಳ ಸುತ್ತಮುತ್ತಲೆಲ್ಲ ಸ್ವಜಾತಿಯ ಹೊಗಳುಭಟ್ಟ ವಂದಿ ಮಾಗದರೇ ತುಂಬಿಕೊಂಡಿರುತ್ತಾರೆ. ಅಂತ ವಂದಿಮಾಗದರು ಐದಾರು ವರ್ಷಗಳ ಹಿಂದೆಯೇ ಪ್ರಜ್ವಲನ ಕಾಮ ಕ್ರೀಡೋತ್ಸವಗಳನ್ನು ನನಗೆ ಹೇಳಿದ್ದರು. ಹೇಳಿದ ಮರುಗಳಿಗೆಯೇ ವಯಸ್ಸಿನ ಹುಡುಗ ಗೌಡ್ರೆ, ಅದರಲ್ಲೂ ನಮ್ಮಗೌಡ್ರ ಜಾತಿ ಹುಡುಗ, ಗಂಡು ಹುಡುಗ, ಇದೆಲ್ಲ ಕಾಮನ್ನು ಎಂದು ಅವರೇ ಸಮಾಧಾನ ಮಾಡಿದ್ದರು. ಸುಳ್ಳು ಯಾಕೆ ಹೇಳಲಿ ಆಗ ನನ್ನ ಸುತ್ತಲಿದ್ದವರ ಮಾತು ಕೇಳಿ ನನ್ನೊಳಗೂ ಗರ್ವ ತುಸು ಹೆಚ್ಚೇ ಇತ್ತು. &nbsp;ಅದು ನನ್ನನ್ನು ಮರುಳನನ್ನಾಗಿಸಿತು,</p>



<p>ಅವನ ಚಿಕ್ಕಪ್ಪ ಮಾಡಿದ ಪ್ರಕರಣ ಕಣ್ಮುಂದೆ ಇತ್ತಲ್ಲ. ಅವನ ಚಿಕ್ಕಪ್ಪನೂ ಹಾಗೆ ಒಂದಿಷ್ಟು ದಿನ ಹಾರಾಡಿ, ಊರೆಲ್ಲ ಸುತ್ತಾಡಿ ಆಮೇಲೆ ಮನೆಗೆ ಹತ್ತಿದವನು. ಇವನಿಗೂ ಮದುವೆ ಅನ್ನೋದೊಂದು ಮಾಡಿದ ಮೇಲೆ ಸರಿ ಹೋಗ್ತಾನೆ. ಅಲ್ಲಿಯವರೆಗೂ ಹಾರಾಡಿಕೊಂಡಿರಲಿ ಎಂದು ನಾನು ಸುಮ್ಮನಾಗಿದ್ದೆ.</p>



<p>ಬಹುಶಃ ಯಾರಿಗೆಲ್ಲ ಹಣ, ಅಧಿಕಾರ, ಕೀರ್ತಿ ಬರುತ್ತದೆಯೋ ಅವರೆಲ್ಲ ಹೀಗೆ ದಾರಿ ತಪ್ಪುತ್ತಾರೆ ಅನಿಸುತ್ತದೆ. &nbsp;ಈ ಕಾರಣಕ್ಕಾಗಿಯೇ ರಾಜರ ಅಂತಪುರಗಳಲ್ಲೆ ಎಲ್ಲ ಕಾಲದಲ್ಲೂ ತುಂಬಿ ತುಳುಕುತ್ತಿದ್ದವು. ಸಣ್ಣ ವಯಸ್ಸಿನ ಮಕ್ಕಳಿಗೆ ಅಧಿಕಾರ, ಸ್ಥಾನಮಾನ, ಟಿಕೇಟ್‌ ಕೊಡಲೇಬಾರದು ಎಂದು ಈಗನಿಸುತ್ತದೆ. ಇದು ನನ್ನ ಮೊಮ್ಮಕ್ಕಳದ್ದೇ ತಪ್ಪಲ್ಲ. ಎಲ್ಲೆಲ್ಲಿ ಕುಟುಂಬ ರಾಜಕಾರಣ ಇದೆಯO ಅಲ್ಲೆಲ್ಲ ಹಿರಿಯ ರಾಜಕಾರಣಿಗಳ ಮಕ್ಕಳು ಮೊಮ್ಮಕ್ಕಳು &nbsp;ಹಿಂಗೆ ಮೆರಿತಿದ್ದಾರೆ. ಆದರೆ, ಗುಂಡಿ ಒಳಗೆ ಬಿದ್ದೋನಿಗೆ ಆಳಿಗೊಂದು ಕಲ್ಲು.</p>



<p>ನನ್ನ ಸುತ್ತಲಿದ್ದ ಹೊಗಳುಭಟ್ಟರೆಲ್ಲ ನಮ್ಮನ್ನು ನೀವು ದೇಶ ಆಳಕ್ಕೆ ಬಂದವರು ಎಂದೆಲ್ಲ ಯಾವಾಗಲೂ ಹೇಳುತ್ತಲೇ ಇದ್ದರು. ನಾನು ನನ್ನ ಕುಟುಂಬದವರು ಕೂಡ ಅದನ್ನೆ ನಂಬಿ ಆಳುವುದಕ್ಕಾಗಿ ಹೋರಾಡುತ್ತಲೇ ಇದ್ದೇವು. ಆದರೆ, ದೇಶ ಆಳಕ್ಕೆ ಹೋಗಿ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕಡೆ ನಾವು ಗಮನ ಕೊಡಲೇ ಇಲ್ಲ. ಮಕ್ಕಳಿಗೆ ತುಸುವಾದರೂ ಸಂವೇದನೆ ಕಲಿಸಿದ್ದರೆ, ಸಮಾಜದ ಬಗ್ಗೆ ಅರ್ಥ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.</p>



<p>&nbsp;ಅದರ ಪ್ರತಿಫಲವೇ ಈಗ ಇಷ್ಟೆಲ್ಲ ಆಗಿದೆ. &nbsp;ನನ್ನ ಎರಡನೇ ಮಗ ಎರಡು ಸಂಸಾರ ಕಟ್ಟಿಕೊಂಡಾಗ, ನನ್ನ ದೊಡ್ಡಮಗ ಕೊರೊನಾ ಕಾಲದಲ್ಲಿ ಜನರಿಗೆ ಕಿಟ್‌ ಹಂಚುವಾಗ ಬೀಕ್ಷುಕರಿಗೆ ಎಸೆಯುವಂತೆ &nbsp;ಕಿಟ್‌ ಎಸೆದಾಗ, ನನ್ನ ಸೊಸೆ ಒಂದು ಯಕಶ್ಚಿತ್‌ ಕಾರು ಡ್ಯಾಮೇಜ್‌ ಆದಾಗ ಗೌಡ್ರಾಳ್ವಿಕೆಯ ಪೊಗರಿನ ಮಾತಾಡಿದಾಗ, ಪ್ರಜ್ವಲನ ಕಾಮಕ್ರೀಡೆಗಳ ವಿಚಾರ ಕಿವಿಗೆ ಬಿದ್ದಾಗ… ಹೀಗೆ ಆಗಲೇ ಎಚೆತ್ತುಕೊಂಡು ಬುದ್ಧಿ ಹೇಳಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ. ಈಗ ಕಾಲ ಮಿಂಚಿ ಹೋಗಿಬಿಟ್ಟಿದೆ. &nbsp;</p>



<p>ಇನ್ನು ನನ್ನ ಕಣ್ಣಾರೆ ಏನೇನೋ ನೋಡುವುದಿದೆಯೋ ಎಂದು ಅಲವತ್ತುಕೊಳ್ಳುತ್ತಾ ಕಾಲ ಕಳೆಯುವುದಷ್ಟೆ ಈಗ ನನಗೆ ಉಳಿದಿರುವುದು. ಇದನ್ನು ಕೂಡ ನೀವು ಸಹಾನುಭೂತಿ ಗಿಟ್ಟಿಸಿಕೊಳ್ಳಲು ದೊಡ್ಡಗೌಡರ ಗೋಳಾಟ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ. &nbsp;ನಿಮಗೆ ಮನವರಿಕೆ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ನನ್ನ ಆತ್ಮಸಾಕ್ಷಿಗೆ ಹೆದರುತ್ತೇನೆ, ದೇವರಲ್ಲಿ ನನಗೆ ನಂಬಿಕೆ</p>



<p> ಇಂತಿ ನಿಮ್ಮ ದೊಡ್ಡಗೌಡ್ರು</p>



<ul class="wp-block-list">
<li><strong>ಹನುಮಂತ ಹಾಲಿಗೇರಿ </strong></li>
</ul>
]]></content:encoded>
					
		
		
			</item>
		<item>
		<title>ಪ್ರಜ್ವಲ್ ಅವರನ್ನು ದೇಶಕ್ಕೆ ಕರೆತರಲು ಕೇಂದ್ರ ಸಿದ್ಧ, ಆದ್ರೆ ರಾಜ್ಯ ಸರ್ಕಾರ ಕತ್ತೆ ಕಾಯ್ತಿತ್ತಾ?: ಜೋಶಿ</title>
		<link>https://peepalmedia.com/center-is-ready-to-bring-prajwal-to-the-country-but-the-state-government-is-waiting-joshi/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 23 May 2024 12:28:15 +0000</pubDate>
				<category><![CDATA[ರಾಜಕೀಯ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[devegowda]]></category>
		<category><![CDATA[dks]]></category>
		<category><![CDATA[dkshi]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[siddramaiah]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39816</guid>

					<description><![CDATA[ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ದೇಶಕ್ಕೆ ವಾಪಸ್‌ ಕರೆತರುವುದಕ್ಕಾಗಿ ಕೇಂದ್ರ ಸಹಕಾರ ನೀಡಲಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು. [&#8230;]]]></description>
										<content:encoded><![CDATA[
<p>ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ದೇಶಕ್ಕೆ ವಾಪಸ್‌ ಕರೆತರುವುದಕ್ಕಾಗಿ ಕೇಂದ್ರ ಸಹಕಾರ ನೀಡಲಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ.</p>



<p>ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.</p>



<p>ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಪತ್ರ ಬರೆದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, “ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಇದೆ. ಇದುವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ದೂರಿದರು.</p>



<p>ಏಪ್ರಿಲ್ 21 ರಂದು ಪ್ರಜ್ವಲ್ ಇರುವಂಥ ಸ್ಪಷ್ಟ ಕ್ಲಿಪ್ಪಿಂಗ್ ಒಳಗೊಂಡ ಮೊದಲ ಪೆನ್ ಡ್ರೈವ್ ಹೊರಬಂದಿದೆ. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಏಳು ದಿನಗಳ ಕಾಲ ರಾಜ್ಯ ಸರ್ಕಾರದವರು ಕತ್ತೆಗಳನ್ನು ಕಾಯುತ್ತಿದ್ದರಾ?  ಏಕೆ ಎಫ್‌ಐಆರ್ ದಾಖಲಿಸಿ ಬಂಧಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದರು.</p>



<p>&nbsp;ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.</p>



<p>“ಆದರೆ, ನಾವು ಸಿಎಂ ಅಥವಾ ರಾಜ್ಯ ಸರ್ಕಾರ ಪತ್ರ ಬರೆದ ತಕ್ಷಣ ಈ ವಿಷಯ ಇತ್ಯರ್ಥ ಮಾಡಬೇಕೆಂಬುದು ಸರಿಯೇ? ರಾಜ್ಯ ಸರ್ಕಾರ ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಅಂದರೆ ಏಪ್ರಿಲ್ 26ರವರೆಗೆ ಸುಮ್ಮನಿತ್ತು. ಒಕ್ಕಲಿಗರ ಮತಗಳಿಗಾಗಿ ಸುಮ್ಮನಿತ್ತು. &nbsp;ಈಗ ಅವರು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ತನಿಖೆಗಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಂದು ಜೋಶಿ ಹೇಳಿದರು.</p>



<p>ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಮತ್ತು ಗೃಹ ಸಚಿವಾಲಯಗಳನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳು ಮೇ 1 ರಂದು ಮೋದಿ ಅವರಿಗೆ ಪತ್ರ ಬರೆದಿದ್ದರು.</p>
]]></content:encoded>
					
		
		
			</item>
		<item>
		<title>ಹೆಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ: ಮೇ.20ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್!</title>
		<link>https://peepalmedia.com/revannas-bail-application-review-on-may-20/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 17 May 2024 12:10:15 +0000</pubDate>
				<category><![CDATA[ಅಪರಾಧ]]></category>
		<category><![CDATA[HD Revanna]]></category>
		<category><![CDATA[Prajwal Revanna]]></category>
		<category><![CDATA[sex scandle]]></category>
		<guid isPermaLink="false">https://peepalmedia.com/?p=39607</guid>

					<description><![CDATA[ಇಂದು ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರೇವಣ್ಣ ಪರ ಹಿರಿಯ ವಕೀಲ ನಾಗೇಶ್ ಅವರ ವಾದವನ್ನು ಆಲಿಸಿದ ಬಳಿಕ ಇದೀಗ ಸೋಮವಾರದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿ, ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ. ಮಾಜಿ ಸಚಿವ ಎಚ್‌ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯಿತು. ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಜೆ ಪ್ರೀತ್‌ರಿಂದ ಅರ್ಜಿ ವಿಚಾರಣೆ ನಡೆಯಿತು. ರೇವಣ್ಣ ಪರವಾಗಿ ಹಿರಿಯ ವಕೀಲ [&#8230;]]]></description>
										<content:encoded><![CDATA[
<p>ಇಂದು ಎಚ್.ಡಿ. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರೇವಣ್ಣ ಪರ ಹಿರಿಯ ವಕೀಲ ನಾಗೇಶ್ ಅವರ ವಾದವನ್ನು ಆಲಿಸಿದ ಬಳಿಕ ಇದೀಗ ಸೋಮವಾರದವರೆಗೂ ಮಧ್ಯಂತರ ಜಾಮೀನು ಮುಂದುವರೆಯಲಿದೆ ಎಂದು ತಿಳಿಸಿ, ಮೇ.20ಕ್ಕೆ ಆದೇಶ ಕಾಯ್ದಿರಿಸಿದೆ.</p>



<p>ಮಾಜಿ ಸಚಿವ ಎಚ್‌ ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆ   ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ನಡೆಯಿತು. ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಜೆ ಪ್ರೀತ್‌ರಿಂದ ಅರ್ಜಿ ವಿಚಾರಣೆ ನಡೆಯಿತು.</p>



<p>ರೇವಣ್ಣ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಮತ್ತು  ಎಸ್‌ಐಟಿ ಪರವಾಗಿ ಹಿರಿಯ ವಕೀಲರಾದ ಅಶೋಕ್‌ ನಾಯ್ಕ್‌ ಮತ್ತು ಜಯ್ನಾ ಕೊಠಾರಿಯಿಂದ ವಾದ ಪ್ರತಿವಾದ ನಡೆಯಿತು.ರೇವಣ್ಣ ವಿರುದ್ಧವು ಅತ್ಯಾಚಾರದ ಆರೋಪ ಇದೆ. ಇದು ಜಾಮೀನು ರಹಿತ ಅಪರಾಧ ಎಂದು ವಾದಿಸುವ ಮೂಲಕ ಜಾಮೀನಿಗೆ ಎಸ್ಐಟಿ ಎಸ್ ಪಿ ಪಿ ಯಿಂದ ಪ್ರಬಲ ವಿರೋಧ ವ್ಯಕ್ತಪಡಿಸಿತು.</p>



<p>ರೇವಣ್ಢ ಪರ ವಕೀಲ ಸಿ ವಿ ನಾಗೇಶ್‌, ಪ್ರಕರಣದಲ್ಲಿ ದೂರನ್ನು ಹೇಗೆ ದಾಖಿಸಲಾಗಿದೆ ಎಂಬುದರ ವಿವರಣೆ ನೀಡಿ, ಇದೊಂದು ರೀತಿಯಲ್ಲಿ ಅರೇಬಿಯನ್‌ ನೈಟ್‌ ಕಥೆಯ ರೀತಿಯಲ್ಲಿದೆ, ಸಿಆರ್‌ಪಿಸಿ 154ರ ಅಡಿ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೊ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ 2013ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ. ಆದರೆ ಇಲ್ಲಿ ಪುರುಷ ಅಧಿಕಾರಿ ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ ಅನ್ನು ಕಾನೂನುಬಾಹಿರವಾಗಿ ದಾಖಲಿಸಲಾಗಿದೆ ಎಂದು ವಾದ ಮಂಡಿಸಿದರು.</p>



<p>&#8220;ಟೈಪ್‌ ಮಾಡಿರುವ ದೂರಿನ ಪ್ರತಿಗೆ ಸಂತ್ರಸ್ತೆ ಸಹಿ ಮಾಡಿ ನೀಡಿದ್ದಾರೆ. ಪ್ರಕರಣದಲ್ಲಿ ಐಪಿಸಿ 376 (ಅತ್ಯಾಚಾರ ಆರೋಪ) ಅನ್ವಯವಾಗುವುದಿಲ್ಲ. ಮೊದಲಿಗೆ ಜಾಮೀನುಸಹಿತ ಆರೋಪಗಳನ್ನು ಒಳಗೊಂಡ ಎಫ್‌ಐಆರ್‌ ದಾಖಲಿಸಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಮಾಡಲಾಗಿದೆ. ಲೋಕಸಭೆ ಎರಡನೇ ಹಂತದ ಮತದಾನ ಇರುವ ಸಂದರ್ಭದಲ್ಲಿ ಹೀಗೆಲ್ಲಾ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ.&#8221; ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿ ಮೇ 20ಕ್ಕೆ ಜಾಮೀನಿನ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು ಕೋರ್ಟ್ ತಿಳಿಸಿದೆ‌.</p>
]]></content:encoded>
					
		
		
			</item>
		<item>
		<title>ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ</title>
		<link>https://peepalmedia.com/central-government-is-protecting-prajwal-revanna-cm-siddaramaiah/</link>
		
		<dc:creator><![CDATA[Peepal Media]]></dc:creator>
		<pubDate>Fri, 03 May 2024 09:12:12 +0000</pubDate>
				<category><![CDATA[ರಾಜ್ಯ]]></category>
		<category><![CDATA[bjp]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prajwal Revanna]]></category>
		<category><![CDATA[Siddaramaiah]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=39097</guid>

					<description><![CDATA[ಮುಂಡಗೋಡು, ಮೇ 03; ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಯಾರಾದರೂ ಅಂತರರಾಷ್ಟ್ರೀಯ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದರು. ರೇವಣ್ಣ ದುಬೈಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು ಯಾವ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ [&#8230;]]]></description>
										<content:encoded><![CDATA[
<p><strong>ಮುಂಡಗೋಡು, ಮೇ 03</strong>; ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣ ಅವರನ್ನು ರಕ್ಷಣೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.</p>



<p>ಅವರು ಇಂದು ಬಾಗಲಕೋಟೆ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.</p>



<p>ಯಾರಾದರೂ ಅಂತರರಾಷ್ಟ್ರೀಯ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್, ವೀಸಾ ಚೆಕ್ ಆಗುತ್ತದೆ. ಕೇಂದ್ರ ಸರ್ಕಾರಕ್ಕೆ ತಿಳಿಯದಂತೆ ಯಾರೂ ದೇಶದ ಹೊರಗೆ ಹೋಗಲು ಸಾಧ್ಯವಿಲ್ಲ ಎಂದರು.</p>



<p>ರೇವಣ್ಣ ದುಬೈಗೆ ತೆರಳಿರುವ ಬಗ್ಗೆ ಮಾತನಾಡಿದ ಅವರು ಯಾವ ದೇಶದಲ್ಲಿದ್ದರೂ ಕರೆತರುತ್ತೇವೆ. ಅವರು ದೇಶಕ್ಕೆ ಬರಲೇಬೇಕು. ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ನ್ನು ರದ್ದು ಮಾಡಲು ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ ಎಂದರು.</p>



<p>ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮಾಡಿರುವ ಆರೋಪವಿದೆ</p>



<p>ಪ್ರಜ್ವಲ್ ರೇವಣ್ಣ ಅವರ ಮೇಲೆ ಬಲಾತ್ಕಾರ ಮತ್ತು ಲೈಂಗಿಕ ಶೋಷಣೆ ಮಾಡಿರುವ ಆರೋಪವಿದೆ. ಪ್ರಜ್ವಲ್ ರೇವಣ್ಣ ಅವರ ಬಗ್ಗೆ ತಿಳಿದೂ ಬಿಜೆಪಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದರು.</p>



<p>ಸಂತ್ರಸ್ತ ಮಹಿಳೆಗೆ ರಕ್ಷಣೆ</p>



<p>ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡಲು ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದರು.</p>



<p>ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಯಾಕೆ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಹೋದಾಗ ನಾನು ಬೇರೆಯಲ್ಲ, ಪ್ರಜ್ವಲ್ ರೇವಣ್ಣ ಬೇರೆಯಲ್ಲ ಎಂದಿದ್ದಾರೆ. ರಾಜಕೀಯ ಹಾಗು ಕೃತ್ಯಗಳನ್ನು ಒಟ್ಟಿಗೆ ಮಾಡುತ್ತಾರೆ ಎಂದರು.</p>



<p>ಅಮಿತ್ ಶಾ ರಾಜಕೀಯ ಹೇಳಿಕೆ</p>



<p>ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಲವ್ ಜಿಹಾದ್ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ ಅಮಿತ್ ಶಾ ಅವರು ರಾಜಕೀಯ ಹೇಳಿಕೆ ನೀಡಿದ್ದಾರೆ. ಆರೋಪಿಯನ್ನು ತಕ್ಷಣ ಬಂಧಿಸಲಾಗಿದೆ. ಪ್ರಕರಣವನ್ನು ಸಿಐಡಿ ಗೆ ವಹಿಸಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಿಸಲು ಪ್ರಯತ್ನಿಸಲಾಗಿದೆ ಎಂದರು.</p>



<p>ಸುಳ್ಳು ಸುಳ್ಳೇ ಲವ್ ಜಿಹಾದ್ ಎನ್ನುವ ಅಮಿತ್ ಶಾ ಮಣಿಪುರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ ಎಂದರು.</p>



<p>ಅಧಿಕಾರ ಉಳಿಸಿಕೊಳ್ಳಲು, ಬಿಜೆಪಿ ಮಾಡಬಾರದ್ದನ್ನು ಮಾಡುತ್ತಿದೆ</p>



<p>ಬಿಜೆಪಿಗೆ ಸಂವಿಧಾನ, ಪ್ರಜಾಪ್ರಭುತ್ವ, ಮೀಸಲಾತಿ, ಐಕ್ಯತೆ, ಸಮಾನತೆಯಲ್ಲಿ ನಂಬಿಕೆ ಇಲ್ಲ . ಅಮಾಯಕರ ಕಣ್ಣೀರು, ಅವರಿಗೆ ಕಿರುಕುಳ ಕೊಟ್ಟು ಸಮಾಜ ಒಡೆಯುವುದು ಬಿಜೆಪಿಗೆ ರೂಢಿಯಾಗಿದೆ ಎಂದರು.</p>
]]></content:encoded>
					
		
		
			</item>
		<item>
		<title>ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ: ಎಚ್‌ಡಿ ರೇವಣ್ಣನಿಂದ ಸಂತ್ರಸ್ತೆಯ ಅಪಹರಣ</title>
		<link>https://peepalmedia.com/kidnap-by-hd-revanna/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 03 May 2024 07:18:35 +0000</pubDate>
				<category><![CDATA[ಅಪರಾಧ]]></category>
		<category><![CDATA[Bangalore]]></category>
		<category><![CDATA[HD Revanna]]></category>
		<category><![CDATA[JDS]]></category>
		<category><![CDATA[karnataka]]></category>
		<category><![CDATA[pendrive]]></category>
		<category><![CDATA[prajwal]]></category>
		<category><![CDATA[Prajwal Revanna]]></category>
		<category><![CDATA[revanna]]></category>
		<category><![CDATA[sex scandle]]></category>
		<guid isPermaLink="false">https://peepalmedia.com/?p=39085</guid>

					<description><![CDATA[ಹಾಸನ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ಕೊಟ್ಟ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ಮಧ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಎಚ್‌ ಡಿ ರೇವಣ್ಣ ಹಾಗೂ ಸತೀಶ್‌ ಬಾಬಣ್ಣ ಮೇಲೆ ಸಂತ್ರಸ್ತೆಯನ್ನು ಅಪಹರಿಸಿದ ದೂರು ದಾಖಲಾಗಿದೆ. ಎಪ್ರಿಲ್‌ 29 ರಂದು ಈ ಕೃತ್ಯ ನಡೆದಿದ್ದು, ಕೆಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ [&#8230;]]]></description>
										<content:encoded><![CDATA[
<p>ಹಾಸನ ಅಶ್ಲೀಲ ವಿಡಿಯೋ ವೈರಲ್‌ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್‌ ಸಿಕ್ಕಿದೆ. ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ದೂರು ಕೊಟ್ಟ ಮೇಲೆ ಎಸ್‌ಐಟಿ ತನಿಖೆ ನಡೆಸುತ್ತಿದೆ.</p>



<p>ಈ ಮಧ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು, ಎಚ್‌ ಡಿ ರೇವಣ್ಣ ಹಾಗೂ ಸತೀಶ್‌ ಬಾಬಣ್ಣ ಮೇಲೆ ಸಂತ್ರಸ್ತೆಯನ್ನು ಅಪಹರಿಸಿದ ದೂರು ದಾಖಲಾಗಿದೆ. ಎಪ್ರಿಲ್‌ 29 ರಂದು ಈ ಕೃತ್ಯ ನಡೆದಿದ್ದು, ಕೆಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಕೆಆರ್‌ ನಗರದ ಹೆಬ್ಬಾಲುವಿನಲ್ಲಿ ಈ ಕೃತ್ಯ ನಡೆದಿದ್ದು, ರಾಜು ಎಂಬವರು ದೂರು ದಾಖಲಿಸಿದ್ದಾರೆ.</p>



<p>ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯನ್ನು ಅಪಹರಿಸಲಾಗಿದೆ. ಈ ಮೂಲಕ ಇಡೀ ಪ್ರಕರಣಕ್ಕೆ ಸಿನಿಮೀಯ ತಿರುವ ಸಿಕ್ಕಿದೆ.</p>



<figure class="wp-block-image size-full"><img fetchpriority="high" decoding="async" width="491" height="629" src="https://peepalmedia.com/wp-content/uploads/2024/05/441387353_333803866472684_1738616870453678453_n-1.jpg" alt="" class="wp-image-39087" srcset="https://peepalmedia.com/wp-content/uploads/2024/05/441387353_333803866472684_1738616870453678453_n-1.jpg 491w, https://peepalmedia.com/wp-content/uploads/2024/05/441387353_333803866472684_1738616870453678453_n-1-234x300.jpg 234w, https://peepalmedia.com/wp-content/uploads/2024/05/441387353_333803866472684_1738616870453678453_n-1-150x192.jpg 150w, https://peepalmedia.com/wp-content/uploads/2024/05/441387353_333803866472684_1738616870453678453_n-1-300x384.jpg 300w" sizes="(max-width: 491px) 100vw, 491px" /></figure>



<figure class="wp-block-image size-full"><img decoding="async" width="491" height="629" src="https://peepalmedia.com/wp-content/uploads/2024/05/441277605_333803909806013_2917589561439340021_n.jpg" alt="" class="wp-image-39088" srcset="https://peepalmedia.com/wp-content/uploads/2024/05/441277605_333803909806013_2917589561439340021_n.jpg 491w, https://peepalmedia.com/wp-content/uploads/2024/05/441277605_333803909806013_2917589561439340021_n-234x300.jpg 234w, https://peepalmedia.com/wp-content/uploads/2024/05/441277605_333803909806013_2917589561439340021_n-150x192.jpg 150w, https://peepalmedia.com/wp-content/uploads/2024/05/441277605_333803909806013_2917589561439340021_n-300x384.jpg 300w" sizes="(max-width: 491px) 100vw, 491px" /></figure>
]]></content:encoded>
					
		
		
			</item>
	</channel>
</rss>
