<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>pramod madhwaraj &#8211; Peepal Media</title>
	<atom:link href="https://peepalmedia.com/tag/pramod-madhwaraj/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 05 Aug 2023 06:35:36 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>pramod madhwaraj &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಾನು ಬಿಜೆಪಿಯ ಪ್ರಬಲ ಲೋಕಸಭಾ ಟಿಕೆಟ್ ಆಕಾಂಕ್ಷಿ &#8211; ಪ್ರಮೋದ್ ಮಧ್ವರಾಜ್</title>
		<link>https://peepalmedia.com/i-am-bjp-tickets-strongest-aspirant-pramod/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Aug 2023 06:35:35 +0000</pubDate>
				<category><![CDATA[ಉಡುಪಿ]]></category>
		<category><![CDATA[ರಾಜ್ಯ]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pramod madhwaraj]]></category>
		<category><![CDATA[state politics]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=24951</guid>

					<description><![CDATA[ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಮಾಜಿಕ ನ್ಯಾಯದಡಿ ನಾನು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಆಗಸ್ಟ್ 4ರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. &#8220;ನಾನು ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎನ್ನುವ ಅನೇಕ ವದಂತಿಗಳು ಹರಡುತ್ತಿವೆ ಆದರೆ ನಾನು ಒಂದೋ ರಾಜಕೀಯದಿಂದ ನಿವೃತ್ತನಾಗುತ್ತೇನೆ ಅಥವಾ ನನ್ನ ಜೀವನದ ಕೊನೆಯವರೆಗೂ ಬಿಜೆಪಿ ಕಾರ್ಯಕರ್ತನಾಗಿ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಬಿಜೆಪಿಯಲ್ಲೇ ಇರುತ್ತೇನೆ” ಎಂದು ಮಧ್ವರಾಜ್ [&#8230;]]]></description>
										<content:encoded><![CDATA[
<p><strong>ಉಡುಪಿ:</strong> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಾಮಾಜಿಕ ನ್ಯಾಯದಡಿ ನಾನು ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅವರು ಆಗಸ್ಟ್ 4ರ ಸಂಜೆ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.</p>



<p>&#8220;ನಾನು ಬಿಜೆಪಿಯನ್ನು ತೊರೆಯುತ್ತಿದ್ದೇನೆ ಎನ್ನುವ ಅನೇಕ ವದಂತಿಗಳು ಹರಡುತ್ತಿವೆ ಆದರೆ ನಾನು ಒಂದೋ ರಾಜಕೀಯದಿಂದ ನಿವೃತ್ತನಾಗುತ್ತೇನೆ ಅಥವಾ ನನ್ನ ಜೀವನದ ಕೊನೆಯವರೆಗೂ ಬಿಜೆಪಿ ಕಾರ್ಯಕರ್ತನಾಗಿ ಉಳಿಯುತ್ತೇನೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಯಾವಾಗಲೂ ಬಿಜೆಪಿಯಲ್ಲೇ ಇರುತ್ತೇನೆ” ಎಂದು ಮಧ್ವರಾಜ್ ಹೇಳಿದ್ದಾರೆ.</p>



<p>ಈ ಬಗ್ಗೆ ಮಾತನಾಡಿದ ಮಧ್ವರಾಜ್, &#8220;ನನ್ನನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ನಂಬಿಕೆ ನನಗಿದೆ. ಆದರೆ ನಾನು ಅಭ್ಯರ್ಥಿ ಎಂಬುದು ಸ್ಪಷ್ಟವಾಗಿಲ್ಲ. ಪಕ್ಷ ಟಿಕೆಟ್ ನೀಡಿದರೆ ಮತದಾರರ ಸಹಕಾರ ಪಡೆದು ಎಲ್ಲ ಹಿರಿಯ ನಾಯಕರ ಆಶೀರ್ವಾದ ಪಡೆದು ಸ್ಪರ್ಧಿಸಲು ಸಿದ್ಧನಿದ್ದೇನೆ. ಟಿಕೆಟ್ ನೀಡದಿದ್ದರೆ ಬಿಜೆಪಿಯಿಂದ ಯಾರು ನಿಂತರೂ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.</p>



<p>&#8220;ಇದುವರೆಗೆ ಯಾವುದೇ ಪಕ್ಷವು ನನಗೆ ಯಾವುದೇ ಪ್ರಮುಖ ಜವಾಬ್ದಾರಿಯನ್ನು ನೀಡಿಲ್ಲ. ಆದಾಗ್ಯೂ, ಪಕ್ಷವು ಕಾಲಕಾಲಕ್ಕೆ ಕೆಲವು ಜವಾಬ್ದಾರಿಗಳನ್ನು ನೀಡಿದೆ. ಕಾರವಾರ, ಭಟ್ಕಳ, ಹಾನಗಲ್, ಮಧುಗಿರಿ, ಶೃಂಗೇರಿ, ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸಲು ನಾನು ಸಿದ್ಧನಿದ್ದೇನೆ. ಆದ್ದರಿಂದ, ನಾನು ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಮತ್ತು ಪಕ್ಷವು ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ಸ್ವೀಕರಿಸಲಿದ್ದೇನೆ. ಶಾಸಕನಾಗಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇನೆ.” ಎಂದು ಅವರ ಹೇಳಿದ್ದಾರೆ.</p>



<p>ಈ ನಡುವೆ ಉಡುಪಿ ಲೋಕಸಭಾ ಟಿಕೆಟ್ಟಿನ ಆಕಾಂಕ್ಷಿಗಳ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಕಾರಣ ಪ್ರಮೋದ್‌ ಡಿಫೆನ್ಸ್‌ ಆಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಾರಿಯ ಲೋಕಸಭಾ ಟಿಕೆಟ್‌ ಸಿಗದಿದ್ದರೆ ಅವರು ಪಕ್ಷವನ್ನು ಬಿಡುವ ಸಾಧ್ಯತೆ ಹೆಚ್ಚಿದೆಯೆಂದು ಮೂಲಗಳು ಹೇಳುತ್ತಿವೆ. ಇತ್ತ ಜಯಪ್ರಕಾಶ್‌ ಹೆಗ್ಡೆ ಕೂಡಾ ತಮ್ಮ ಒಂದು ಕಾಲನ್ನು ಈಗಾಗಲೇ ಕಾಂಗ್ರೆಸ್ಸಿನಲ್ಲಿಟ್ಟಿದ್ದು ಅವರು ಉಡುಪಿ-ಚಿಕ್ಕಮಗಳೂರು ಟಿಕೆಟ್‌ ಆಕಾಂಕ್ಷಿ ಎನ್ನಲಾಗುತ್ತಿದೆ. ಹೀಗಾಗಿ ಪ್ರಮೋದ್‌ ಮದ್ವರಾಜ್‌ ಕಾಂಗ್ರೆಸ್ಸಿಗೆ ಬಂದರೂ ಟಿಕೆಟ್‌ ದುರ್ಲಭ ಎನ್ನಲಾಗುತ್ತಿದೆ.</p>



<p>ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಬಣದಿಂದ ಟಿಕೆಟ್‌ ಕಳೆದುಕೊಳ್ಳಲಿರುವವರಲ್ಲಿ ಶೋಭಾ ಕರಂದ್ಲಾಜೆ ಒಬ್ಬರು ಎನ್ನಲಾಗುತ್ತಿದ್ದು. ಇದರಿಂದಾಗಿ ಉಡುಪಿ ರಾಜಕೀಯ ರಂಗಕ್ಕೆ ರಂಗೇರಿದೆ.</p>
]]></content:encoded>
					
		
		
			</item>
	</channel>
</rss>
