<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Prasad Raxidi &#8211; Peepal Media</title>
	<atom:link href="https://peepalmedia.com/tag/prasad-raxidi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 13 Dec 2024 13:00:18 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Prasad Raxidi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಾಹಿತ್ಯ ಮತ್ತು ಭಾಷೆ ಜನರ ಬದುಕುಗಳನ್ನು ಬದಲಿಸಬೇಕು:  ಪ್ರಸಾದ್ ರಕ್ಷಿದಿ</title>
		<link>https://peepalmedia.com/literature-and-language-should-change-peoples-lives-prasad-raxidi/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 13 Dec 2024 13:00:18 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada saahithya parishatthu]]></category>
		<category><![CDATA[kannada sahithya academy]]></category>
		<category><![CDATA[kannada sahithya sammelana]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prasad Raxidi]]></category>
		<category><![CDATA[sakaleshapura]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=50686</guid>

					<description><![CDATA[ಹಾಸನ: ಹಿಂದಿ ಬಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ ಇದೆ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡ ಬೇಕಿದೆ. ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರು ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ,&#8221; ಎಂದು ಡಿಸೆಂಬರ್‌ 13, 2024 ಶುಕ್ರವಾರದಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಾಲ್ಕನೆ ತಾಲೂಕು ಕನ್ನಡ [&#8230;]]]></description>
										<content:encoded><![CDATA[
<p><strong>ಹಾಸನ:</strong> ಹಿಂದಿ ಬಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ ಇದೆ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡ ಬೇಕಿದೆ. ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರು ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ,&#8221; ಎಂದು ಡಿಸೆಂಬರ್‌ 13, 2024 ಶುಕ್ರವಾರದಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಾಲ್ಕನೆ ತಾಲೂಕು ಕನ್ನಡ ಸಮ್ಮೇಳನದಲ್ಲಿ ರಂಗಕರ್ಮಿ, ಸಾಹಿತಿ ಪ್ರಸಾದ್‌ ರಕ್ಷಿದಿಯವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.  </p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="575" src="https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1024x575.jpeg" alt="" class="wp-image-50689" style="width:626px;height:auto" srcset="https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1024x575.jpeg 1024w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-300x169.jpeg 300w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-768x431.jpeg 768w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-150x84.jpeg 150w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-696x391.jpeg 696w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1068x600.jpeg 1068w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM.jpeg 1280w" sizes="(max-width: 1024px) 100vw, 1024px" /></figure></div>


<p>&#8220;ಇದರ ಪರಿಣಾಮ ಧಾನಿಗಳ ವಂಶಸ್ಥರು ಶಾಲೆಗಳ ಜಾಗವನ್ನು ವಶಕ್ಕೆಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಮುಚ್ಚಲು ಕಾರಣರಾಗುತ್ತಿದ್ದಾರೆ. ಆದ್ದರಿಂದ ಶಾಲೆಗಳಿರುವ ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ನೋಂದಾಯಿಸಿಕೊಳ್ಳುವ ಕೆಲಸ ವಾಗಬೇಕಿದೆ. ಪ್ರಾಥಮಿಕ ಶಾಲೆಗಳಿಗೆ ೪೫ ಸಾವಿರ ಶಿಕ್ಷಕರ ಕೊರತೆ ಇದೆ ೨೦೨೫ ಕ್ಕೆ ಮತ್ತೆ ೩೫ ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಕೊಡಲೇ ೭೫ ಸಾವಿರ ಶಿಕ್ಷಕರ ನೇಮಕ ಮಾಡದಿದ್ದರೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಬಡ ಮಕ್ಕಳಿಗೆ ದುಬಾರಿಯಾಗಲಿದೆ. ಕರ್ನಾಟಕ ದಲ್ಲಿ ೨೧೯ ಬಾಷೆಗಳಿವೆ. ಬಾಷೆಗಳೆಂಬುದು ಬಣ್ಣದ ರಂಗೋಲಿ. ಹೆಚ್ಚು ಬಾಷೆಗಳಿದ್ದಷ್ಟು ದೇಶದ ಪರಂಪರೆ ಚನ್ನಾಗಿರಲಿದೆ. ೨೦೦೧ ರಲ್ಲಿ ಕೊಡುವ ಬಾಷೆ ಮಾತನಾಡುವವರ ಸಂಖ್ಯೆ ೧.೫ ಲಕ್ಷ. ಆದರೆ, ೨೦೧೧ ರ ವೇಳೆಗೆ ಈ ಬಾಷೆ ಮಾತನಾಡುವವರ ಸಂಖ್ಯೆ ೧ ಲಕ್ಷಕ್ಕೆ ಕುಸಿದಿದೆ ಬಾಷೆಯ ಬಗ್ಗೆ ಅಧಮ್ಯ ಪ್ರೀತಿ ಇಲ್ಲದ ಕಾರಣ . ಈಗಾಗಲೇ ಹಲವು ಸಣ್ಣಪುಟ್ಟ ಬಾಷೆಗಳು ನಾಶವಾಗಿವೆ. ಇದು ಆತಂಕಕಾರಿ ಬೆಳವಣಿಗೆ. ಇದೆ ಹಾದಿಯನ್ನು ಕನ್ನಡಬಾಷೆ ಸಹ ಅನುಭವಿಸುತ್ತಿದೆ. ಹಿಂದಿ ಸೇರಿದಂತೆ ಉತ್ತರ ಭಾರತದ ಬಾಷೆಗಳು ಮಾತ್ರ ವೇಗವಾಗಿ ಬೆಳೆಯುತ್ತಿದೆ.&#8221;</p>



<p>&#8220;ಆದ್ದರಿಂದ ಕನ್ನಡ ಬಾಷೆ ಉಳಿಸಿ ಬೆಳಸುವ ಬಗ್ಗೆ ದೀರ್ಘ ಚರ್ಚೆ ನಡೆಯ ಬೇಕಿದೆ ಎಂದರು.. ಜನಸಂಖ್ಯೆ ಏರಿಕೆ ಸಹ ಬಾಷೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಮದಗತಿಯಲ್ಲಿದ್ದು ಶೇ ೯ ರಷ್ಟಿದ್ದರೆ. ಉತ್ತರ ಭಾರತದ ಜನಸಂಖ್ಯೆ ಬೆಳವಣಿಗೆ ಶೇ ೬೬ ರಷ್ಟಿದೆ ಇದು ಸಹ ಬಾಷ ಬೆಳವಣಿಗೆಗೆ ತೊಡಕಾಗಿದೆ. ನಿಧಾನಗತಿಯಲ್ಲಿ ದೊಡ್ಡಬಾಷೆಗಳು ಸಣ್ಣ ಬಾಷೆಗಳನ್ನು ಅಪೋಷನ ತೆಗೆದುಕೊಳ್ಳುತ್ತಿವೆ.. ಆದ್ದರಿಂದ, ಸಮಸ್ಯೆ ಮೂಲಕ್ಕೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಕನ್ನಡ ಉಳಿಯುವುದು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ಮಾದರಿಯ ಹೋರಾಟ ಅಗತ್ಯವಿದೆ,&#8221; ಎಂದು ಸಮ್ಮೇಳನಾಧ್ಯಕ್ಷ ಪ್ರಸಾದ್‌ ರಕ್ಷಿದಿ ಹೇಳಿದರು. </p>



<p>&#8220;ತಾಲೂಕಿನ ಪರಿಸರ ರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವಾಗ ಬೇಕಿದೆ. ಸಣ್ಣ ಪ್ರಮಾಣದಲ್ಲಿನ ನಮ್ಮ ವಿರೋಧವನ್ನು ಸರ್ಕಾರ ಗಣನೇಗೆ ತೆಗೆದುಕೊಳ್ಳುತ್ತಿಲ್ಲ ಪರಿಣಾಮ ತಾಲೂಕಿನಲ್ಲಿ ದೊಡ್ಡದೊಡ್ಡ ಯೋಜನೆಗಳು ತಲೆ ಎತ್ತಲು ಸಾದ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ತಲೆ ಎತ್ತಲು ಅವಕಾಶ ನೀಡಬಾರದು. ಎಂದರು.ಸಂವೇದನೆ ಇಲ್ಲದೆ ಮನುಷ್ಯ ಬಧುಕಿರುವುದು ದಂಡ. ನೆರೆಮನೆಯ ಕಷ್ಟ ಕಂಡು ಕರಗದಿರುವುದು ಮನುಷ್ಯತ್ವದ ಸರ್ವ ಪತನದ ಸಂಕೇತ. ತಾಲೂಕಿನಲ್ಲಿ ಶಾಲೆಗಳ ಸಂಖ್ಯೆ ಕುಸಿತ ಆತಂಕಕಾರಿ ಬಡವರು ಮಕ್ಕಳ ಮಾತ್ರ ಸರ್ಕಾರಿ ಶಾಲೆಗೆ ಸೇರುತ್ತಾರೆ ಎಂಬ ಮನಸ್ಥಿತಿ ಜನರಲ್ಲಿ ನೆಲಸಿರುವುದೆ ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ತಾಲೂಕು ಕನ್ನಡ ಸಾಹಿತಿಗಳ ತವರಾಗಿದ್ದು ನೂರಕ್ಕೂ ಅಧಿಕ ಸಾಹಿತಿಗಳನ್ನು ನಮ್ಮ ನೆಲದಿಂದ ಹುಟ್ಟಿಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸಲು ಮಲೆನಾಡಿನಲ್ಲಿ ಸಾಕಷ್ಟು ವಿಷಯಗಳಿದ್ದು ಸೂಕ್ಷ್ಮ ಮನಸ್ಥಿತಿ ಸಾಹಿತ್ಯಕ್ಕೆ ಅಗತ್ಯವಿದೆ,&#8221; ಎಂದರು.</p>



<p>ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೋ ಮಲ್ಲೇಶ್ಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್ಕುಮಾರ್,ಉಪಾಧ್ಯಕ್ಷೆ ಝರೀನಾ,ಸಾಹಿತಿ ಸುಬ್ಬುಹೊಲೇಯರ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಮುಂತಾದವರಿದ್ದರು.</p>



<p>ಸಕಲೇಶಪುರ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉಪವಿಭಾಗಾಧಿಕಾರಿ ಡಾ. ಎಂ.ಕೆ ಶೃತಿಯವರು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜದ ಆರೋಹಣ ಮಾಡಿದರೆ, ತಹಸೀಲ್ಧಾರ್ ಮೇಘನಾ ಕನ್ನಡ ಧ್ವಜದ ಅರೋಹಣವನ್ನು ನೇರವೆರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಧ್ವಜದ ಆರೋಹಣವನ್ನು ಮಾಡಿದರು. </p>



<p>10 ಗಂಟೆಗೆ ಸರಿಯಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಸಮ್ಮೇಳನಾಧ್ಯಕ್ಷ ಪ್ರಸಾದ್ ರಕ್ಷಿಧಿ ದಂಪತಿಗಳ ಮೆರವಣಿಗೆಯಲ್ಲಿ ವೀರಗಾಸೆ,ಕಂಸಾಳೆ,ಮಲೆನಾಡು ಸುಗ್ಗಿಕುಣಿತ ಗಮನಸೇಳೆದರೆ, ನಾಸಿಕ್ ವಾಧ್ಯಕ್ಕೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜೊತೆಗೆ ಶಾಸಕ ಸೀಮೆಂಟ್ ಮಂಜು ಕುಣಿದರು. ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯ ನಂತರ ಕಾಡಾನೆಗಳನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟ ಆನೆ ಅರ್ಜುನನ ನೆನಪಿಗಾಗಿ ನಿರ್ಮಿಸಿದ್ದ ಧ್ವಾರದ ಮೂಲಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. </p>



<p>ಅಭಿವೃದ್ದಿ ಹರಿಕಾರ ಎಂದು ಗುರುತಿಸಿಕೊಂಡಿದ್ದ ಬೈಕೆರೆ ನಾಗೇಶ್ ವೇದಿಕೆಯಲ್ಲಿ ಆರಂಭವಾದ ಕಾರ್ಯಕ್ರಮವದಲ್ಲಿ ಬಾಗೆ ಜೆ.ಎಸ್.ಎಸ್ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಸಮ್ಮೇಳನವನ್ನು ಕನ್ನಡ ಪ್ರಾಧಿಕಾರದ ಅದ್ಯಕ್ಷ ಪ್ರೋ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ವೇದಿಕೆಯ ಮೇಲೆ ಶಾಸಕ ಸೀಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಸಾಹಿತಿ ಸುಬ್ಬು ಹೊಲೆಯಾರ್, ಸಯ್ಯದ್ ಮುಪೀಜ್, ಹಸೆನಾರ್ ಆನೆಮಹಾಲ್, ಕಾಡಪ್ಪ, ಹೆತ್ತೂರು ನಾಗರಾಜ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>



<p>ಮಧ್ಯಾಹ್ನದ ನಂತರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 13 ಸಾಹಿತಿಗಳನ್ನು ಒಳಗೊಂಡ ಕವಿಗೋಷ್ಠಿ ನಡೆಯಿತು. ಆ ನಂತರ ಮಲೆನಾಡ ಜನಜೀವನ ಹಾಗೂ ಸದ್ಯದ ಸವಾಲುಗಳ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು. ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಸಮರೋಪ ನಡೆಯಿತು. </p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ನದಿ ಹರಿಯಲಿ ಎದೆ ಬಯಲಲಿ..</title>
		<link>https://peepalmedia.com/nadi-hariyali-ede-bayalali/</link>
		
		<dc:creator><![CDATA[Prasad Raxid]]></dc:creator>
		<pubDate>Mon, 26 Sep 2022 03:12:03 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Prasad Raxidi]]></category>
		<category><![CDATA[River pollution]]></category>
		<category><![CDATA[River pollution day]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=7139</guid>

					<description><![CDATA[ವಿಶ್ವ ನದಿ ದಿನ ವಿಶೇಷ ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಹಾಗೆಯೇ ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ. ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ ಎನ್ನುತ್ತಾರೆ ಕೃಷಿಕ, ರಂಗಕರ್ಮಿ ಪ್ರಸಾದ ರಕ್ಷಿದಿ. &#160; &#160;ಭೂಮಿ, ನಮ್ಮ ಇದುವರೆಗಿನ ಜ್ಞಾನದ ಪ್ರಕಾರ ಜಗತ್ತಿನ ಏಕೈಕ ಜೀವಂತ ಗ್ರಹ. ವಿಶ್ವದಲ್ಲಿ ಬೇರೆ ಕಡೆಗಳಲ್ಲಿ ಜೀವಸಂಕುಲ ಇರಬಹುದು ಎನ್ನುವುದು ಸಕಾರಣವಾದ ಊಹೆ, ಅಭಿಪ್ರಾಯ ಎಲ್ಲವೂ. ನಮ್ಮ ಭೂಮಿಯಲ್ಲಿ ಜೀವಸಂಕುಲ ಬೆಳೆಯಲು [&#8230;]]]></description>
										<content:encoded><![CDATA[
<h2 class="wp-block-heading" style="font-size:20px"><strong>ವಿಶ್ವ ನದಿ ದಿನ ವಿಶೇಷ</strong></h2>



<h2 class="wp-block-heading" style="font-size:20px"><strong>ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಹಾಗೆಯೇ ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ. ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ ಎನ್ನುತ್ತಾರೆ ಕೃಷಿಕ, ರಂಗಕರ್ಮಿ ಪ್ರಸಾದ ರಕ್ಷಿದಿ. &nbsp;</strong></h2>



<p style="font-size:20px">&nbsp;ಭೂಮಿ, ನಮ್ಮ ಇದುವರೆಗಿನ ಜ್ಞಾನದ ಪ್ರಕಾರ ಜಗತ್ತಿನ ಏಕೈಕ ಜೀವಂತ ಗ್ರಹ. ವಿಶ್ವದಲ್ಲಿ ಬೇರೆ ಕಡೆಗಳಲ್ಲಿ ಜೀವಸಂಕುಲ ಇರಬಹುದು ಎನ್ನುವುದು ಸಕಾರಣವಾದ ಊಹೆ, ಅಭಿಪ್ರಾಯ ಎಲ್ಲವೂ. ನಮ್ಮ ಭೂಮಿಯಲ್ಲಿ ಜೀವಸಂಕುಲ ಬೆಳೆಯಲು ಉಳಿಯಲು ಖಗೋಳದಲ್ಲಿನ ಅನೇಕ ಸಂಗತಿಗಳು ಮತ್ತು ಈ ಗ್ರಹದ ಹಲವಾರು ವೈಶಿಷ್ಟ್ಯಗಳು ಕಾರಣವಾಗಿವೆ.. ವೈಜ್ಞಾನಿಕ ಅಧ್ಯಯನಗಳು ಮುಂದುವರೆದಂತೆ ಇದಕ್ಕೆ ಇನ್ನೂ ಹಲವಾರು ಸಂಗತಿಗಳು ಸೇರಬಹುದು.</p>



<p style="font-size:20px">ಭೂಮಿಯಲ್ಲಿನ ಜೀವಸಂಕುಲದ ಇರುವಿಕೆಗೆ ಅತ್ಯಂತ ‌ಮುಖ್ಯ ಕಾರಣಗಳೆಂದರೆ ಇಲ್ಲಿರುವ ಗಾಳಿ ಮತ್ತು ನೀರು. ಮತ್ತೆ</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/09/WhatsApp-Image-2022-09-25-at-10.25.31-PM.jpeg" alt="" class="wp-image-7141" width="778" height="443"/></figure>



<p style="font-size:20px">ಇವೆರಡರಲ್ಲಿ ನೀರು ಮತ್ತು ನೀರಿನ ಪರಿವರ್ತನಾ ಚಕ್ರದ ಒಂದು ಭಾಗವೇ ಭೂಮಿಯ ಪಾಲಿಗೆ ರಕ್ತ ನಾಳಗಳಂತಿರುವ ನದಿಗಳು. ಪ್ರಾಣಿಗಳಲ್ಲಿ ಜೀವ ಉಳಿಯಲು ರಕ್ತ ಪರಿಚಲನೆ ಎಷ್ಟು ಮುಖ್ಯವೋ ಭೂಮಿಯಲ್ಲಿ ಜೀವಸಂಕುಲ ಉಳಿಯಲು ನದೀಜಾಲ ಅಷ್ಟೇ ಮುಖ್ಯವಾದುದು.</p>



<p style="font-size:20px">ಸೂರ್ಯನ ಶಕ್ತಿಯಿಂದ ಆವಿಯಾಗುವ ಸಮುದ್ರದ ಮತ್ತು ಭೂಮಿಯ ಮೇಲಿರುವ ನೀರು‌ ಮಂಜಾಗಿಯೋ ಮಳೆಯಾಗಿಯೋ ಸುರಿದು ನದಿಗಳಾಗುವುದು ಎಲ್ಲರಿಗೂ ಗೊತ್ತು. ಇವುಗಳು ನೆಲದ ಮೇಲೆ ಬಿದ್ದು ಸಾಕಷ್ಟು ಪ್ರಮಾಣದಲ್ಲಿ ಇಂಗುತ್ತದೆ. ಭೂಮಿಯ ರಚನೆ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ, ಅದರಂತೆ ಇಂಗುವ ಪ್ರಮಾಣ ವ್ಯತ್ಯಾಸವಾಗುತ್ತದೆ. ಅದರೂ ಒಟ್ಟೂ ಭೂಮಂಡಲದಲ್ಲಿ ನೆಲಕ್ಕೆ ಬಿದ್ದ ನೀರಿನ ಮೂರನೇ ಎರಡು ಪಾಲು ಭೂಮಿಯಲ್ಲಿ ಇಂಗಿ ಅಂತರ್ಜಲವಾಗುತ್ತದೆ. ಇದರಲ್ಲಿ ಕೆಲವು ಭಾಗ ನಂತರದ ದಿನಗಳಲ್ಲಿ ನಿರಂತರವಾಗಿ&nbsp; ನದಿಯ ಹರಿವಿಗೆ ಮತ್ತು ಸಸ್ಯಗಳ ಉಳಿವಿಗೆ ಕಾರಣವಾಗುತ್ತದೆ.</p>



<p style="font-size:20px">ಒಟ್ಟು ನೆಲಕ್ಕೆ ಬೀಳುವ ನೀರಿನ ಮೂರನೇ ಒಂದು ಭಾಗ ಮಾತ್ರ &nbsp;ನಾನಾ ವಿಧದಲ್ಲಿ ಹರಿದು ಕಾಲುವೆ, ಹಳ್ಳ ತೊರೆಗಳಾಗಿ ಒಗ್ಗೂಡಿ ನದಿಗಳಾಗಿ ಗಾತ್ರವನ್ನೂ ಬಲವನ್ನೂ ಹೆಚ್ಚಿಸಿಕೊಂಡು ತಗ್ಗಿನಲ್ಲಿ ಹರಿದು ಸಮುದ್ರದ ಕಡೆಗೆ ಸಾಗುತ್ತವೆ.. ಇವೇ ನಮ್ಮ ಜೀವ ಸಂಕುಲದ ಮುಖ್ಯ ರಕ್ತನಾಳಗಳು.</p>



<p style="font-size:20px">ನೆಲದ ರಚನೆ ಈ ನೀರಿನ ಹರಿವಿಗೆ ಎಷ್ಟು ಕಾರಣವೋ ಹಾಗೆ ನೆಲದ ರಚನೆಯನ್ನು ಬದಲಾಯಿಸುವುದರಲ್ಲಿ ಈ ನದಿಗಳು ಅಂದರೆ ನೀರಿನ ಹರಿವು ಕಾರಣವಾಗುತ್ತದೆ. ಒಂದು ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾಣ ಮತ್ತು ಮಾದರಿ ಅಲ್ಲಿ ಹರಿಯುವ ನದಿಗಳ ಗುಣ ಲಕ್ಷಣಗಳನ್ನು ಹೇಗೆ ನಿರ್ಧರಿಸುತ್ತದೋ ಹಾಗೆ ಅಲ್ಲಿ ಹರಿಯುವ ನದಿಗಳು ಅಲ್ಲಿನ ಸಸ್ಯ ಮತ್ತು ಪ್ರಾಣಿ ಸಂಕುಲವನ್ನು ಮತ್ತು ಅವುಗಳ ಬದುಕನ್ನು ನಿರ್ಧರಿಸುತ್ತದೆ.</p>



<p style="font-size:20px">ಮಳೆ ಬಿದ್ದು ಅಥವಾ ಹಿಮ ಕರಗಿ ನದಿಗಳಾಗಿ ಹರಿಯುವ ಜಾಡಿನಲ್ಲಿ ಭೂ ಸವಕಳಿ ಉಂಟಾಗುತ್ತದೆ. ಪ್ರತಿವರ್ಷ ಲಕ್ಷಾಂತರ ಟನ್ ಗಳಷ್ಟು ಮಣ್ಣು ಈ ಮೂಲಕ ಸಮುದ್ರ ಸೇರುತ್ತದೆ. ಸಹಜವಾಗಿಯೇ ನಡೆಯುವ ಈ ಭೂ ಸವಕಳಿ ನಿರಂತರವಾಗಿ ನಡೆಯುತ್ತಿದ್ದು ಒಂದು ಅಧ್ಯಯನದ ಪ್ರಕಾರ ಈ ರೀತಿಯ ಭೂ ಸವಕಳಿಯಿಂದ ಬೆಟ್ಟ ಗುಡ್ಡ, ಎತ್ತರ ತಗ್ಗುಗಳಿಂದ ಕೂಡಿದ ನೆಲ ಮಟ್ಟಸವಾಗುತ್ತ ಹೋಗುತ್ತದೆ. ಸುಮಾರು ಎರಡೂವರೆ ಕೋಟಿ ವರ್ಷಗಳಲ್ಲಿ ಇಡೀ ಭೂಮಿಯ ನೆಲ ಸಮುದ್ರ ಮಟ್ಟಕ್ಕೆ ಬರುತ್ತದೆ! ಅಂದರೆ ಭೂಮಿ ಒಂದು ಉರುಟಾದ ಚೆಂಡಿನಂತಾಗಬಹುದು. ಅಥವಾ ಮತ್ತೆ ಭೂ ಖಂಡದ ಚಲನೆಗಳಿಂದ ಒತ್ತಡವುಂಟಾಗಿ ಬೆಟ್ಟ ಗುಡ್ಡಗಳು ಮತ್ತೆ ಮೇಲೇಳಬಹುದು. ಇವೆಲ್ಲ ವೈಜ್ಞಾನಿಕ ಅಧ್ಯಯನದ ವಿಷಯಗಳು.</p>



<figure class="wp-block-image size-large"><img decoding="async" width="1024" height="768" src="https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-1024x768.jpeg" alt="" class="wp-image-7143" srcset="https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-1024x768.jpeg 1024w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-300x225.jpeg 300w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-768x576.jpeg 768w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-150x113.jpeg 150w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-696x522.jpeg 696w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM-1068x801.jpeg 1068w, https://peepalmedia.com/wp-content/uploads/2022/09/WhatsApp-Image-2022-09-25-at-10.26.25-PM.jpeg 1200w" sizes="(max-width: 1024px) 100vw, 1024px" /></figure>



<p style="font-size:20px">ನೀರಿನಿಂದ ನಡೆಯುವ ಭೂ ಸವಕಳಿಯನ್ನು ತಡೆಯುವುದು ಮತ್ತು ನಿಧಾನಗೊಳಿಸುವುದು ಸಸ್ಯ ಸಂಕುಲ ಮಾತ್ರವೇ. ಪ್ರಕೃತಿ ಅಂತಹ ಸಸ್ಯಗಳನ್ನು ತಾನೇ ಸೃಷ್ಟಿಸಿಕೊಂಡಿದೆ. ಇವೆಲ್ಲ ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ವಿದ್ಯಮಾನಗಳಾದವು. ಆದರೆ ಈ ಭೂಮಿಯಲ್ಲಿ ಮನುಷ್ಯನೆಂಬ ಜೀವಿ ಹುಟ್ಟಿ ಬುದ್ಧಿವಂತ ಎನಿಸಿಕೊಂಡ ನಂತರ ಇವೆಲ್ಲ ಬದಲಾಗುತ್ತ ಬಂದಿವೆ.</p>



<p style="font-size:20px">ಮನುಷ್ಯನ ಸಮೂಹ ಜೀವನ ಪದ್ಧತಿಯಿಂದಾಗಿ ಜನರು ಒಂದೆಡೆಯಲ್ಲಿ ನೆಲೆಸಲು ಪ್ರಾರಂಭಿಸಿದ್ದರಿಂದ ನಾಗರಿಕತೆ ಹುಟ್ಟಿತು.. ಇದು ಮೊದಲು ಅವತರಿಸಿದ್ದೇ ನದಿಗಳ ದಡದಲ್ಲಿ ಎಂದು ಇತಿಹಾಸ ತಿಳಿಸುತ್ತದೆ. ಪ್ರತಿಯೊಂದು ನದಿಯನ್ನೂ ಒಂದೊಂದು ಸಂಸ್ಕೃತಿಯ ತಾಣ ಎನ್ನುತ್ತೇವೆ. ಪ್ರತಿಯೊಂದು ಸಂಸ್ಕೃತಿಯೂ ನದಿಯನ್ನು ತಾಯಿಯೆಂದೋ, ದೇವತೆಯೆಂದೋ ಭಾವಿಸಿದೆ. ಪವಿತ್ರವೆಂದು ಪರಿಗಣಿಸಿದೆ. ನದೀ ತಟದಲ್ಲಿ ಹಲವಾರು ಧೀಮಂತರು ವಿಜ್ಞಾನಿಗಳು ಹುಟ್ಟಿದ್ದಾರೆ. ಗ್ರಂಥಗಳು ರಚನೆಯಾಗಿವೆ.&nbsp; ನಮ್ಮ ಮಹಾಕಾವ್ಯಗಳು ನದಿಗಳಂತೆಯೇ ಜನ ಮಾನಸದಲ್ಲಿ ಹರಿದಿವೆ.</p>



<p style="font-size:20px">ನಮ್ಮ ಕೃಷಿ, ಪಶುಪಾಲನೆ, ರಾಜ್ಯಗಳ ಸ್ಥಾಪನೆ ಎಲ್ಲವೂ ನದಿಗಳ ಪಕ್ಕಗಳಲ್ಲಿಯೇ ಪ್ರಾರಂಭವಾದದ್ದು. ಅಷ್ಟೇ ಯಾಕೆ ಅನೇಕ ಯುದ್ಧಗಳೂ ಸಂಭವಿಸಿದ್ದು ಕೂಡಾ ನದಿಗಳ ದಡದಲ್ಲಿ ಮತ್ತು ಹಲವು ಸಲ ನದಿಗಳಿಗಾಗಿಯೇ.</p>



<p style="font-size:20px">ಮನುಷ್ಯ ನಗರಜೀವಿಯಾದ ನಂತರ ಎಲ್ಲವೂ ವೇಗ ಪಡೆದುಕೊಳ್ಳ ತೊಡಗಿತು. ಆತನ ಎಲ್ಲ ಚಟುವಟಿಕೆಗಳು, ಭಾಷೆ, ಉಪಕರಣಗಳ ಬಳಕೆ, ನಂತರ ಯಂತ್ರಗಳ ಆವಿಷ್ಕಾರ ಇತರ ಕಲಿಕೆಗಳು, ಆ ಮೂಲಕ ತನ್ನ ಶಕ್ತಿ ಹೆಚ್ಚಿಸಿಕೊಳ್ಳುವುದು ಮತ್ತು ವಿಸ್ತರಿಸಿಕೊಳ್ಳುವುದು ವೇಗ ಪಡೆದುಕೊಂಡಿತು. ಕಳೆದ ಐದು ಸಾವಿರ ವರ್ಷಗಳಲ್ಲಿ ಈ ಪಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪದ ವೇಗೋತ್ಕರ್ಷ ಹೇಗಿದೆಯೆಂದರೆ ಅದು ಭೂಮಿಗೆ ಬೀಳುತ್ತಿರುವ ಉಲ್ಕೆಯಂತೆ ವೇಗ ಹೆಚ್ಚಿಸಿಕೊಳ್ಳುತ್ತಿದೆ.</p>



<div class="wp-block-cover is-light" style="min-height:471px;aspect-ratio:unset;"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p style="font-size:20px">ಅಂತಾರಾಷ್ಟ್ರೀಯ ಖ್ಯಾತಿಯ ಜಲ ಸಂರಕ್ಷಣ ಹೋರಾಟಗಾರ ಮಾರ್ಕ್‌ ಏಂಜೆಲೊ ೧೯೮೦ರಲ್ಲಿ ಪಶ್ಚಿಮ ಕೆನಡಾದಲ್ಲಿ ಜಾಗತಿಕ ಮಟ್ಟದಲ್ಲಿ ನದಿಗಳ ದಿನಾಚರಣೆಯನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ನೀರಿನ ಮಹತ್ತ್ವವನ್ನು ಅರಿತ ವಿಶ್ವಸಂಸ್ಥೆಯು ಜಲಮೂಲಗಳನ್ನು ಸಂರಕ್ಷಿಸುವ ಉದ್ದೇಶದಿಂದ 2005 ರಲ್ಲಿ ʼವಾಟರ್ ಫಾರ್ ಲೈಫ್ʼ ಎಂಬ ಸಂದೇಶದೊಂದಿಗೆ ಸೆಪ್ಟೆಂಬರ್‌ ತಿಂಗಳ ಕೊನೆಯ ಭಾನುವಾರವನ್ನು ವಿಶ್ವ ನದಿಗಳ ದಿನ ಎಂದು ಘೋಷಿಸಿತು. ಅಂದಿನಿಂದ ಜಲ ಸಂಪನ್ಮೂಲಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಈ ದಿನವನ್ನು ಅಚರಿಸುತ್ತಿದ್ದು&nbsp; ಈ ಬಾರಿ ಸೆ. ೨೫ ವಿಶ್ವ ನದಿ ದಿನವಾಗಿರುತ್ತದೆ. ನದಿ ನಮ್ಮ ಜೀವನದುದ್ದಕ್ಕೂ ಹರಿದು ಬದುಕು ರೂಪಿಸಿಕೊಳ್ಳುವಲ್ಲಿ ಮೊದಲ ಸ್ಥಾನ ಅಲಂಕರಿಸುವ ಜೀವ ಜಲ. ಆದರೆ ಪ್ರತಿ ದೇಶವೂ ಇವುಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಸೋಲುತ್ತಲೇ ಇದೆ; ಓಂದಿಲ್ಲೊಂದು ನದಿ ಅಪಾಯದ ಸ್ಥಿತಿಯನ್ನು ತಲಪುತ್ತಲೇ ಇದೆ. ಜನರು ಎಚ್ಚೆತ್ತು ಕಾರ್ಯ ನಿರತರಾದರೆ ಮಾತ್ರ ನಮ್ಮ ಭವಿಷ್ಯದ ಪೀಳಿಗೆಗೆ ಸತ್ತ ನದಿಗಳನ್ನಷ್ಟೇ ಪರಿಚಯಿಸುವ ದಿನಗಳಿಂದ ಹೊರಗುಳಿಯಬಹುದು.</p>
</div></div>



<p></p>



<p style="font-size:20px">ನದಿ ದಡದಲ್ಲಿ ನೆಲೆನಿಂತ ಮನುಷ್ಯ ನದಿಯನ್ನು ತನ್ನ ಉಪಯೋಗಕ್ಕಾಗಿ ಬಳಸತೊಡಗಿದ. ಅದು ಸಂಚಾರಕ್ಕಿರಬಹುದು ಕೃಷಿಗೂ ಇರಬಹುದು. ನದಿಯ ಹರಿವಿನಲ್ಲಿ, ನದೀ ಪಾತ್ರಗಳಲ್ಲಿ ಹಲವಾರು ಬದಲಾವಣೆಗಳನ್ನು ಆತ ಮಾಡತೊಡಗಿದ. ನಂತರ ಇದು ಇತರ ಪ್ರಾಕೃತಿಕ ವಿಷಯಗಳತ್ತ ಹೊರಳಿತು. ಅರಣ್ಯಕ್ಕೆ ಲಗ್ಗೆಯಿಟ್ಟ.. ಖನಿಜ ಜ್ಞಾನ ಗಳಿಸಿದ ನಂತರ ಗುಡ್ಡ ಬೆಟ್ಟಗಳೂ ಅವನ ಸ್ವತ್ತಾದವು&#8230; ಇವೆಲ್ಲವೂ ನದಿಗಳಿಂದ ಸಹಜವಾಗಿ ನಡೆಯುತ್ತಿದ್ದ ಭೂ ಸವಕಳಿಯ ವೇಗವನ್ನು ಹಲವು ಪಟ್ಟು ಹೆಚ್ಚಿಸಿದವು.</p>



<p style="font-size:20px">&nbsp;ಇವೆಲ್ಲವೂ ಒಂದು ಹಂತವಾದರೆ, ಸದ್ಯದ ಒಂದು ಶತಮಾನ ಅಂದರೆ ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ನಡೆದು ಮನುಷ್ಯ ಆಧುನಿಕವೆನ್ನುವ ಈ ಕಾಲಕ್ಕೆ ಬಂದ ನಂತರ ನಡೆಯುತ್ತಿರುವ ವಿದ್ಯಮಾನಗಳು ಮತ್ತು ಅವುಗಳ ವೇಗ ಊಹೆಗೂ ಮೀರಿದ್ದು. ಮನುಷ್ಯನ ಉಪಭೋಗಗಳ ಹಸಿವು ಭೂತಾಕಾರವಾಯಿತು. ಇದರ ಮೊದಲ ಬಲಿಯೇ ನದಿಗಳು. ಕೈಗಾರಿಕೆಗಳು ನದಿಯ ದಡದಲ್ಲೇ ತಲೆಯೆತ್ತಿದವು, ನಗರಗಳು ಎಲ್ಲೆ ಮೀರಿ ಬೆಳೆದವು. ನೀರಿನ ಬಳಕೆ ನೂರಾರು ಪಟ್ಟು ಹೆಚ್ಚಿತು. ನೀರಿಗಾಗಿ ನದಿಗಳನ್ನು ದೋಚಿದೆವು, ಮರಳಿಗಾಗಿ ನದಿಗಳನ್ನು ಬಗೆದೆವು, ಎಲ್ಲ ಕಸ ಕಡ್ಡಿ, ತ್ಯಾಜ್ಯ, ವಿಷವಸ್ತುಗಳು ಎಲ್ಲವನ್ನೂ ನದಿಗೆ ಸುರಿದೆವು.. ಸುರಿಯುತ್ತಲೇ ಇದ್ದೇವೆ. ಇದೆಲ್ಲದರಿಂದಾಗಿ ವಾತಾವರಣದಲ್ಲಿ ಕೂಡಾ ಹಲವು ಬದಲಾವಣೆಗಳಾದವು. ಅವೆಲ್ಲದರ ಪರಿಣಾಮವನ್ನು ಈಗ ನಾವು ಅನುಭವಿಸುತ್ತಿದ್ದೇವೆ..</p>



<p style="font-size:20px">ಹಿಂದೆ ಕೂಡಾ ಕೆಲವು ನದಿಗಳು ಸಂಪೂರ್ಣವಾಗಿ ಬತ್ತಿ ಹೋಗಿ ಮಾಯವಾದ ಉದಾಹರಣೆಗಳಿವೆ.. ಈಗ ಅವುಗಳ ಸಾಧ್ಯತೆ ಹಲವಾರು ಪಟ್ಟು ಹೆಚ್ಚಾಗಿದೆ.</p>



<p style="font-size:20px">ನದಿಗಳಿಗಾಗಿ ಯುದ್ಧಗಳಾಗಿವೆ, ಆಗುತ್ತಿವೆ. ಮನುಷ್ಯ ನಾಗರಿಕತೆಯಲ್ಲಿ ಭಾಷೆಯನ್ನು ನದಿಗೆ ಹೋಲಿಸಲಾಗುತ್ತಿದೆ. ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ, ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/09/WhatsApp-Image-2022-09-25-at-10.27.01-PM.jpeg" alt="" class="wp-image-7140" width="167" height="216"/></figure>



<p style="font-size:20px"><strong>ಪ್ರಸಾದ್ ರಕ್ಷಿದಿ</strong><br>ರಂಗಕರ್ಮಿ, ಕೃಷಿಕ</p>
]]></content:encoded>
					
		
		
			</item>
	</channel>
</rss>
