<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Pratap Simha &#8211; Peepal Media</title>
	<atom:link href="https://peepalmedia.com/tag/pratap-simha/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 14 Dec 2023 10:03:38 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Pratap Simha &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭದ್ರತಾ ನಿಯಮ ಉಲ್ಲಂಘನೆ : ಮೊಹುವಾ ಮೋಯಿತ್ರಾ ಉಚ್ಚಾಟನೆ, ಪ್ರತಾಪ್ ಸಿಂಹಗೆ ಯಾಕಿಲ್ಲ? ಜಾಲತಾಣಗಳಲ್ಲಿ ಹೆಚ್ಚಿದ ಪ್ರಶ್ನೆ</title>
		<link>https://peepalmedia.com/violation-of-security-rules-increased-question-on-websites/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 14 Dec 2023 10:02:36 +0000</pubDate>
				<category><![CDATA[ಮೀಡಿಯಾ]]></category>
		<category><![CDATA[kannada]]></category>
		<category><![CDATA[mahua moitra]]></category>
		<category><![CDATA[Parliament attack]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Pratap Simha]]></category>
		<guid isPermaLink="false">https://peepalmedia.com/?p=33613</guid>

					<description><![CDATA[ಈಗ ಕೆಲವೇ ದಿನಗಳ ಹಿಂದೆ ಭದ್ರತಾ ನಿಯಮ ಉಲ್ಲಂಘನೆ ಹಾಗೂ ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಅವರನ್ನು ಲೋಕಸಭೆ ನೈತಿಕ ಸಮಿತಿ ವರದಿ ಅನ್ವಯ ಸಂಸತ್ ಸ್ಥಾನದಿಂದ ವಜಾಗೊಳಿಸಲಾಗಿದೆ. ಆದರೆ ಇದೇ ಭದ್ರತಾ ನಿಯಮ ಉಲ್ಲಂಘನೆ ಪ್ರಕರಣ ಪ್ರತಾಪ್ ಸಿಂಹ ಮೇಲೆ ಯಾಕೆ ಅನ್ವಯಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದೆ. ಬುಧವಾರದ ದಿನ ಲೋಕಸಭೆಯ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ [&#8230;]]]></description>
										<content:encoded><![CDATA[
<p>ಈಗ ಕೆಲವೇ ದಿನಗಳ ಹಿಂದೆ ಭದ್ರತಾ ನಿಯಮ ಉಲ್ಲಂಘನೆ ಹಾಗೂ ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಅವರನ್ನು ಲೋಕಸಭೆ ನೈತಿಕ ಸಮಿತಿ ವರದಿ ಅನ್ವಯ ಸಂಸತ್ ಸ್ಥಾನದಿಂದ ವಜಾಗೊಳಿಸಲಾಗಿದೆ. ಆದರೆ ಇದೇ ಭದ್ರತಾ ನಿಯಮ ಉಲ್ಲಂಘನೆ ಪ್ರಕರಣ ಪ್ರತಾಪ್ ಸಿಂಹ ಮೇಲೆ ಯಾಕೆ ಅನ್ವಯಿಸುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಎದ್ದಿದೆ.</p>



<p>ಬುಧವಾರದ ದಿನ ಲೋಕಸಭೆಯ ಸದನ ನಡೆಯುತ್ತಿರುವ ಸಂದರ್ಭದಲ್ಲಿ ಅಪರಿಚಿತ ಸಂದರ್ಶಕರೊಬ್ಬರು ಭದ್ರತೆಯನ್ನು ಉಲ್ಲಂಘಿಸಿ ಗ್ಯಾಲರಿಯಿಂದ ಕೊಠಡಿಗೆ ಹಾರಿದ ಕಾರಣ ಲೋಕಸಭೆಯಲ್ಲಿ ಗೊಂದಲ ಉಂಟಾಗಿತ್ತು. ಅದರಲ್ಲೂ ಸಂಸತ್ ಮೇಲಿನ ದಾಳಿಗೆ 22 ವರ್ಷ ಪೂರೈಸಿದ ದಿನವೇ ಈ ಒಂದು ಘಟನೆ ನಡೆದದ್ದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.</p>



<p>ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳಿಗೆ ಪಾಸ್ ವಿತರಣೆ ಬಗ್ಗೆ ಈಗ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಅಷ್ಟೆ ಅಲ್ಲದೆ ಪ್ರತಾಪ್ ಸಿಂಹ ಅಮಾನತಿಗೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.</p>



<p></p>



<p>ಕೇವಲ ವಿಪಕ್ಷ ನಾಯಕರಲ್ಲದೇ ಈಗ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಂಸದ ಪ್ರತಾಪ್ ಸಿಂಹರನ್ನು ಉಚ್ಚಾಟನೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಮೈಸೂರು ಮೂಲದ ಮನೋರಂಜನ್ ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ ಶರ್ಮಾ ಅವರಿಗೆ ಲೋಕಸಭೆ ಸದನ ವೀಕ್ಷಣೆ ಪಾಸ್ ನೀಡಿರುವ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಹೆಚ್ಚಿದೆ.</p>



<figure class="wp-block-image size-full"><img fetchpriority="high" decoding="async" width="363" height="203" src="https://peepalmedia.com/wp-content/uploads/2023/12/images-2023-12-14T152811.713-1.jpeg" alt="" class="wp-image-33616" srcset="https://peepalmedia.com/wp-content/uploads/2023/12/images-2023-12-14T152811.713-1.jpeg 363w, https://peepalmedia.com/wp-content/uploads/2023/12/images-2023-12-14T152811.713-1-300x168.jpeg 300w, https://peepalmedia.com/wp-content/uploads/2023/12/images-2023-12-14T152811.713-1-150x84.jpeg 150w" sizes="(max-width: 363px) 100vw, 363px" /></figure>



<p>ಬುಧವಾರದ ದಾಳಿಗೆ ಸಂಸತ್ ನ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಗುರುವಾರ ತೀವ್ರ ಚರ್ಚೆ ಗ್ರಾಸವಾಗಿದೆ. ಈ ನಡುವೆ ಪ್ರತಾಪ್ ಸಿಂಹ ಅವರು, &#8216;ವೀಕ್ಷಕರ ಪಾಸ್ ನ್ನು ಒತ್ತಾಯಪೂರ್ವಕವಾಗಿ ಪಡೆದುಕೊಂಡಿದ್ದರು&#8217; ಎನ್ನುವ ಉಡಾಫೆ ಉತ್ತರಕ್ಕೆ ವಿರೋಧ ಪಕ್ಷದ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಹಾಗೂ ಯಾವ ಆಧಾರದಲ್ಲಿ ಪಾಸ್ ನೀಡಲಾಗಿದೆ ಎಂಬುದಕ್ಕೆ ಪ್ರತಾಪ್ ಸಿಂಹ ವಿವರಣೆ ನೀಡಬೇಕು ಹಾಗೂ ಇದರ ತನಿಖೆ ಪೂರ್ಣಗೊಳ್ಳುವ ವರೆಗೂ ಪ್ರತಾಪ್ ಸಿಂಹ ಅವರನ್ನು ಅಮಾನತಿನಲ್ಲಿ ಇಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಲಾಗಿದೆ.</p>



<p>ಈ ನಡುವೆ ಟಿಎಂಸಿ ಸಂಸದೆ ಮೋಹುವಾ ಮೋಯಿತ್ರಾ ಅವರನ್ನು ಯಾವ ಮಾನದಂಡಗಳ ಅಡಿಯಲ್ಲಿ ಸಂಸತ್ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆಯೋ ಅದನ್ನು ಈ ಪ್ರಕರಣಕ್ಕೆ ಯಾಕೆ ಅನ್ವಯಿಸಿಲ್ಲ.. ಮೊಹುವಾ ಮೋಯಿತ್ರಾ ಪ್ರಕರಣಕ್ಕಿಂತ ಗಂಭೀರವಾದ ಪ್ರಕರಣ ಇದಾಗಿದೆ. ಅಕಸ್ಮಾತ್ ಟಿಯರ್ ಗ್ಯಾಸ್ ಬದಲು ಬಂದೂಕುಗಳೇ ಬಂದಿದ್ದರೆ ಎಂತಹ ಪ್ರಮಾದವನ್ನು ದೇಶ ಎದುರು ನೋಡುತ್ತಿತ್ತು ಎಂಬ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ಅಡಿಯಲ್ಲಿ ಟೀಕೆಗಳು ವ್ಯಕ್ತವಾಗಿವೆ.</p>
]]></content:encoded>
					
		
		
			</item>
		<item>
		<title>ಮೈಸೂರು ಬಸ್ ನಿಲ್ದಾಣ ವಿವಾದ ; ಗೆದ್ದದ್ಯಾರು, ಸೋತಿದ್ಯಾರು</title>
		<link>https://peepalmedia.com/mysore-bus-stand-controversy-who-won-who-lost/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 27 Nov 2022 08:13:43 +0000</pubDate>
				<category><![CDATA[ರಾಜಕೀಯ]]></category>
		<category><![CDATA[BJP leader]]></category>
		<category><![CDATA[Bus stand]]></category>
		<category><![CDATA[Gumbaj]]></category>
		<category><![CDATA[kannada]]></category>
		<category><![CDATA[mysore]]></category>
		<category><![CDATA[peepalmedia]]></category>
		<category><![CDATA[Pratap Simha]]></category>
		<category><![CDATA[Ramadas]]></category>
		<guid isPermaLink="false">https://peepalmedia.com/?p=16736</guid>

					<description><![CDATA[ಮೈಸೂರು: ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ ಸಿಂಹ ಇಬ್ಬರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಸ್‌ಸ್ಟ್ಯಾಂಡ್ ತನ್ನ ಎರಡು ಗೋಪುರಗಳನ್ನು ಕಳೆದುಕೊಳ್ಳುವುದರೊಂದಿಗೆ ವಿವಾದಕ್ಕೆ ಒಂದು ಹಂತದ ಪರಿಹಾರ ಸಿಕ್ಕಂತಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ ಸಿಂಹ &#8220;ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ [&#8230;]]]></description>
										<content:encoded><![CDATA[
<p style="font-size:20px"><strong>ಮೈಸೂರು</strong>: ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ ಸಿಂಹ ಇಬ್ಬರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಸ್‌ಸ್ಟ್ಯಾಂಡ್ ತನ್ನ ಎರಡು ಗೋಪುರಗಳನ್ನು ಕಳೆದುಕೊಳ್ಳುವುದರೊಂದಿಗೆ ವಿವಾದಕ್ಕೆ ಒಂದು ಹಂತದ ಪರಿಹಾರ ಸಿಕ್ಕಂತಾಗಿದೆ.</p>



<p style="font-size:20px">ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ ಸಿಂಹ &#8220;ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು.&#8221; ಎಂದು ಟ್ವೀಟ್ ಮಾಡಿದ್ದಾರೆ.</p>



<p style="font-size:20px">ಆದರೆ ಈ ನಡೆ ಬಿಜೆಪಿ ಹಿರಿಯ ರಾಜಕಾರಣಿ ರಾಮದಾಸ್ ಅವರಿಗೆ ಆದ ಅವಮಾನವೆಂದೇ ಅವರ ಅಭಿಮಾನಿಗಳು ಅಭಿಪ್ರಾಯಪಡುತ್ತಾರೆ. ಆ ರೀತಿಯ ಗೋಪುರಗಳಿರುವ ರಚನೆ ಮೈಸೂರು ಸೇರಿದಂತೆ ಕರ್ನಾಟಕದ ಎಲ್ಲೆಡೆ ಇದ್ದರೂ ಇದನ್ನೇ ಟಾರ್ಗೆಟ್ ಮಾಡಿರುವುದು ಪ್ರತಾಪ ಸಿಂಹ ಅವರ ದ್ವೇಷದ ರಾಜಕಾರಣದ ಮುಂದುವರೆದ ಭಾಗ ಎನ್ನುತ್ತಿದ್ದಾರೆ.</p>



<p style="font-size:20px">ಇದರಿಂದ ಮೈಸೂರು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ. ಬಸ್ ನಿಲ್ದಾಣದ ಗುಂಬಜ್ ಬಗ್ಗೆ ಸ್ವತಃ ಶಾಸಕ ರಾಮದಾಸ್ ನಾನಾ ರೀತಿಯಲ್ಲೂ ಸಮರ್ಥನೆ ಕೊಟ್ಟರೂ ಅವರ ಹಿರಿತನಕ್ಕೂ ಬೆಲೆ ಕೊಡದೇ ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದು ಕೂತಿದ್ದರು.</p>



<p style="font-size:20px">ಇದರ ನಡುವೆ ಬಸ್ ನಿಲ್ದಾಣದ ಗುತ್ತಿಗೆದಾರ ಮುಸ್ಲಿಂ ಎಂಬ ಬಗ್ಗೆಯೂ ಪ್ರತಾಪ್ ಸಿಂಹ ಗುಂಪು ಇನ್ನೊಂದು ರೀತಿಯಲ್ಲಿ ವಾದ ಹರಿಬಿಟ್ಟಿತ್ತು. ಅಲ್ಲೂ ಸಹ ಶಾಸಕ ರಾಮದಾಸ್ ಗುತ್ತಿಗೆದಾರನ ಹೆಸರನ್ನು ಬಹಿರಂಗಪಡಿಸಿದ್ದರು. ಜೊತೆಗೆ ಅನವಶ್ಯಕವಾಗಿ ಬಸ್ ನಿಲ್ದಾಣದ ವಿವಾದಕ್ಕೆ ಧರ್ಮದ ಲೇಪನ ಕೊಟ್ಟ ಪ್ರತಾಪ್ ಸಿಂಹ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಅಷ್ಟೆ ಅಲ್ಲ, ನನ್ನ ಕ್ಷೇತ್ರದಲ್ಲಿ ಮುಕ್ತವಾಗಿ ನನಗೆ ಜನಸೇವೆ ಮಾಡಲು ಆಗುತ್ತಿಲ್ಲ ಎಂದೂ ಸಹ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಇವೆಲ್ಲದರಿಂದ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿತ್ತು.</p>



<p style="font-size:20px">ಈ ಹಿಂದೆ ಮೈಸೂರಿನ ರಿಂಗ್ ರೋಡ್ ವಿಷಯದಲ್ಲೂ ಸಂಸದ ಮತ್ತು ಶಾಸಕರ ನಡುವೆ ವಿವಾದವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.</p>



<p style="font-size:20px">ಇದರ ಮುಂದುವರೆದ ಭಾಗವೇ ಈ ಬಸ್‌ಸ್ಟ್ಯಾಂಡ್ ವಿವಾದವಾಗಿದ್ದು ಇಬ್ಬರು ರಾಜಕಾರಣಿಗಳ ನಡುವಿನ ಪ್ರತಿಷ್ಟೆಯ ಜಗಳಕ್ಕೆ ನಷ್ಟವಾಗಿದ್ದು ಜನರ ತೆರಿಗೆಯ ಹಣವೆನ್ನುವುದು ವಿಪರ್ಯಾಸ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.</p>
]]></content:encoded>
					
		
		
			</item>
		<item>
		<title>ಬಿಜೆಪಿ ನಾಯಕರಿಬ್ಬರ ಪ್ರತಿಷ್ಠೆಯ ಕಣವಾದ ಗುಂಬಜ್ ಗುದ್ದಾಟ ; ನಿಲ್ದಾಣ ತೆರವಿಗೆ ಪ್ರತಾಪ್ ಕೊಟ್ಟ ಗಡುವು ಇಂದು ಅಂತ್ಯ</title>
		<link>https://peepalmedia.com/gumbaj-fight-pratap-simha-ramdas-mysore/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 17 Nov 2022 06:43:02 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Bus Shelter]]></category>
		<category><![CDATA[Gumbaj]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mysore]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Pratap Simha]]></category>
		<category><![CDATA[Ramadas]]></category>
		<guid isPermaLink="false">https://peepalmedia.com/?p=15736</guid>

					<description><![CDATA[ಕಳೆದ ಮೂರು ದಿನಗಳಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಸ್ ನಿಲ್ದಾಣ ಕಟ್ಟಡದ ಮಾದರಿ ಇಡೀ ರಾಜ್ಯದ ಗಮನ ಸೆಳೆದಿದೆ. ಈ ವಿವಾದ ಬಿಜೆಪಿ ಪಕ್ಷದ ನಾಯಕರಿಬ್ಬರ ಪ್ರತಿಷ್ಠೆಗೆ ಕಾರಣವಾಗುವತ್ತ ಸಾಗಿ ಪ್ರತಾಪ್ ಸಿಂಹ v/s ರಾಮದಾಸ್ ಎಂಬಲ್ಲಿಗೆ ಬಂದು ನಿಂತಿದೆ. ಅಂದಹಾಗೆ ಬಸ್ ನಿಲ್ದಾಣ ತೆರವಿಗೆ ಪ್ರತಾಪ್ ಸಿಂಹ ಕೊಟ್ಟ ಗಡುವು ಇಂದು ಅಂತ್ಯವಾಗಲಿದೆ. ಪ್ರತಾಪ್ ಸಿಂಹ ಗಡುವಿನಂತೆ ಇಂದು ಬಸ್ ನಿಲ್ದಾಣವನ್ನು ತೆರವುಗೊಳಿಸುವರೇ ಎಂಬುದು ಸಧ್ಯದ ಕುತೂಹಲವಾಗಿದೆ. ಕಳೆದ ಮೂರು ದಿನಗಳ ಹಿಂದೆ ಮೈಸೂರಿನ ಬಸ್ [&#8230;]]]></description>
										<content:encoded><![CDATA[
<p style="font-size:20px">ಕಳೆದ ಮೂರು ದಿನಗಳಿಂದ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಬಸ್ ನಿಲ್ದಾಣ ಕಟ್ಟಡದ ಮಾದರಿ ಇಡೀ ರಾಜ್ಯದ ಗಮನ ಸೆಳೆದಿದೆ. ಈ ವಿವಾದ ಬಿಜೆಪಿ ಪಕ್ಷದ ನಾಯಕರಿಬ್ಬರ ಪ್ರತಿಷ್ಠೆಗೆ ಕಾರಣವಾಗುವತ್ತ ಸಾಗಿ ಪ್ರತಾಪ್ ಸಿಂಹ v/s ರಾಮದಾಸ್ ಎಂಬಲ್ಲಿಗೆ ಬಂದು ನಿಂತಿದೆ. ಅಂದಹಾಗೆ ಬಸ್ ನಿಲ್ದಾಣ ತೆರವಿಗೆ ಪ್ರತಾಪ್ ಸಿಂಹ ಕೊಟ್ಟ ಗಡುವು ಇಂದು ಅಂತ್ಯವಾಗಲಿದೆ. ಪ್ರತಾಪ್ ಸಿಂಹ ಗಡುವಿನಂತೆ ಇಂದು ಬಸ್ ನಿಲ್ದಾಣವನ್ನು ತೆರವುಗೊಳಿಸುವರೇ ಎಂಬುದು ಸಧ್ಯದ ಕುತೂಹಲವಾಗಿದೆ.</p>



<p style="font-size:20px">ಕಳೆದ ಮೂರು ದಿನಗಳ ಹಿಂದೆ ಮೈಸೂರಿನ ಬಸ್ ನಿಲ್ದಾಣವನ್ನು ಗುಂಬಜ್ ಮಾದರಿಯಲ್ಲಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಹೀಗೇ ಬಿಟ್ಟರೆ ಕರ್ನಾಟಕವನ್ನು ಪಾಕಿಸ್ತಾನ ಮಾಡಬಹುದು ಎಂಬ ರೀತಿಯಲ್ಲಿ ಪ್ರತಾಪ್ ಸಿಂಹ ಮಾಧ್ಯಮಗಳ ಎದುರು ಪರೋಕ್ಷವಾಗಿ ಸ್ಥಳೀಯ ಬಿಜೆಪಿ ಶಾಸಕ ರಾಮದಾಸ್ ಮೇಲೆ ಗುಡುಗಿದ್ದರು.</p>



<p style="font-size:20px">ಇದರ ನಡುವೆ &#8220;ಬಸ್ ನಿಲ್ದಾಣದ ಗುತ್ತಿಗೆಯನ್ನು ಮುಸ್ಲಿಂ ಒಬ್ಬರಿಗೆ ನೀಡಲಾಗಿದೆ. ಹಾಗಾಗಿ ಬಸ್ ನಿಲ್ದಾಣವನ್ನು ಗುಂಬಜ್ ಮಾದರಿಯಲ್ಲಿ ಕಟ್ಟಲಾಗಿದೆ, ಮೈಸೂರಿನ ಉಳಿದ ಬಸ್ ನಿಲ್ದಾಣವನ್ನು ಹೀಗೆ ಕಟ್ಟಲು ನಾವು ಬಿಡುವುದಿಲ್ಲ&#8221; ಎನ್ನುವ ಮೂಲಕ ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಆದರೆ ಸ್ಥಳೀಯ ಬಿಜೆಪಿ ಶಾಸಕ ರಾಮದಾಸ್ ಈ ಎಲ್ಲಾ ವಿವಾದಕ್ಕೆ ತೆರೆ ಎಳೆಯುವಂತೆ ಉತ್ತರಿಸಿದ್ದರು.</p>



<p style="font-size:20px">ಅದರಂತೆ &#8220;ಯಾವ ಮುಸ್ಲಿಮರಿಗೂ ಬಸ್ ನಿಲ್ದಾಣದ ಕಾಮಗಾರಿ ಗುತ್ತಿಗೆ ನೀಡಿಲ್ಲ. ಬಸ್ ನಿಲ್ದಾಣದ ಗುತ್ತಿಗೆದಾರನ ಹೆಸರು ಮಹಾದೇವ ಎಂದು. ಜೊತೆಗೆ ಬಸ್ ನಿಲ್ದಾಣವನ್ನು ಅರಮನೆ ಮಾದರಿಯಲ್ಲಿ ಕಟ್ಟಲಾಗಿದೆ&#8221; ಎಂದು ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಈ ನಡುವೆ ಇದನ್ನು ಕೋಮು ಪ್ರಚೋದನೆಗೆ ಎಳೆಯುವ ಹಾದಿಗೆ ಶಾಸಕ ರಾಮದಾಸ್ ಬ್ರೇಕ್ ಹಾಕಿದ್ದಾರೆ.</p>



<p style="font-size:20px">ಇನ್ನು ಈ ವಿವಾದದಲ್ಲಿ ಮೈಸೂರು ಭಾಗದ ಬಹುತೇಕ ಹಿಂದೂಪರ ಮುಖಂಡರು ಶಾಸಕ ರಾಮದಾಸ್ ಬೆನ್ನಿಗೆ ನಿಂತಿದ್ದಾರೆ. ಎಲ್ಲಾ ವಿಚಾರದಲ್ಲೂ ನಾವು ಧರ್ಮವನ್ನು ಮುಂದೆ ತಂದರೆ ಜನರ ಕೆಂಗಣ್ಣಿಗೆ ಗುರಿಯಿಗುವ ಸಾಧ್ಯತೆ ಇದೆ. ಹಾಗಾಗಿ ಈ ವಿವಾದದಲ್ಲಿ ಪ್ರತಾಪ್ ಸಿಂಹ ಬೆನ್ನಿಗೆ ನಿಲ್ಲದಿರುವುದೇ ವಾಸಿ ಎಂದು ತೀರ್ಮಾನಿಸಿದ್ದಾರೆ. ಹಾಗಾಗಿ ಮೈಸೂರು ಭಾಗದ ಧಾರ್ಮಿಕ ಮತ್ತು ಸಂಘಟನೆ ಹಿನ್ನೆಲೆಯವರು ರಾಮದಾಸ್ ವಾದಕ್ಕೆ ಜೊತೆಯಾಗಿದ್ದಾರೆ.</p>



<p style="font-size:20px">ಈ ನಡುವೆ ಬಸ್ ನಿಲ್ದಾಣ ತೆರವಿಗೆ ಪ್ರತಾಪ್ ಸಿಂಹ ಕೊಟ್ಟಿರುವ ಗಡುವು ಮುಗಿಯುವುದರಿಂದ ಕಟ್ಟಡವನ್ನು ತೆರವುಗೊಳಿಸಲಿದ್ದಾರಾ ಅಥವಾ ಅದೇ ನಿಲ್ದಾಣವೇ ಮುಂದುವರೆಯಲಿದೆಯೇ ಎಂಬುದು ಕುತೂಹಲಕಾರಿ ವಿಚಾರವಾಗಿದೆ. ಈ ನಡುವೆ ಕಟ್ಟಡ ತೆರವುಗೊಳಿಸಲು ಪ್ರತಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದ್ದು ಇದು ಸರ್ಕಾರದ ಹಣ, ಅಂದರೆ ಸಾರ್ವಜನಿಕರ ಹಣ. ನೀವು ಬೇಕೆಂದಾಗ ಕಟ್ಟೋಕೆ ಬೇಡವೆಂದಾಗ ಬಿಡೋಕೆ ಇದು ನಿಮ್ಮ ಜೇಬಿನಿಂದ ಕೊಟ್ಟಿದ್ದಲ್ಲ&#8217; ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>



<p style="font-size:20px">ಇನ್ನು ಈಗಾಗಲೇ ರಾಜ್ಯದಾದ್ಯಂತ ಸುದ್ದಿಯಲ್ಲಿರುವ 40% ಕಮೀಷನ್ ಆರೋಪದ ಹಿನ್ನೆಲೆಯಲ್ಲಿ ಇದೊಂದು ಕಮೀಷನ್ ಗೊಂದಲ ಎಂದೂ ಸಹ ವಿರೋಧಿ ಗುಂಪು ಮಾತಾಡಿಕೊಳ್ಳುತ್ತಿದೆ. ಮುಖಂಡರಿಗೆ ಸಲ್ಲಬೇಕಾದ ಕಮೀಷನ್ ತಲುಪದ ಹಿನ್ನೆಲೆಯಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದೂ ಸಹ ಸ್ಥಳೀಯರು ಆರೋಪಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
