<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>protest &#8211; Peepal Media</title>
	<atom:link href="https://peepalmedia.com/tag/protest/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 26 Jun 2025 10:53:03 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>protest &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಧರಣಿ ಘೋಷಣೆ.</title>
		<link>https://peepalmedia.com/an-indefinite-day-night-sit-in-has-been-announced-at-freedom-park-in-bengaluru-to-protest-against-the-devanahalli-land-acquisition/</link>
		
		<dc:creator><![CDATA[ಮಂಜುಳ ಹುಲಿಕುಂಟೆ]]></dc:creator>
		<pubDate>Thu, 26 Jun 2025 10:53:02 +0000</pubDate>
				<category><![CDATA[ರಾಜ್ಯ]]></category>
		<category><![CDATA[CM siddaramaiah]]></category>
		<category><![CDATA[devanahalli]]></category>
		<category><![CDATA[Government]]></category>
		<category><![CDATA[karnataka]]></category>
		<category><![CDATA[peepalmedia]]></category>
		<category><![CDATA[prakash raj]]></category>
		<category><![CDATA[protest]]></category>
		<category><![CDATA[raitara horata]]></category>
		<guid isPermaLink="false">https://peepalmedia.com/?p=61603</guid>

					<description><![CDATA[ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಹೋಬಳಿಯ ಹದಿಮೂರು ಹಳ್ಳಿಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.&#160; ಈ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ, 2025 ಜೂನ್ 26ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.&#160; ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೂನ್ [&#8230;]]]></description>
										<content:encoded><![CDATA[
<p>ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಹೋಬಳಿಯ ಹದಿಮೂರು ಹಳ್ಳಿಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.&nbsp;</p>



<p>ಈ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ, 2025 ಜೂನ್ 26ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.&nbsp;</p>



<p>ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೂನ್ 25, ಬುಧವಾರ ‘ದೇವನಹಳ್ಳಿ ಚಲೋ’ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದರು.</p>



<figure class="wp-block-image size-large"><img fetchpriority="high" decoding="async" width="1024" height="471" src="https://peepalmedia.com/wp-content/uploads/2025/06/raita-horata-press-meet-1024x471.jpeg" alt="" class="wp-image-61605" srcset="https://peepalmedia.com/wp-content/uploads/2025/06/raita-horata-press-meet-1024x471.jpeg 1024w, https://peepalmedia.com/wp-content/uploads/2025/06/raita-horata-press-meet-300x138.jpeg 300w, https://peepalmedia.com/wp-content/uploads/2025/06/raita-horata-press-meet-768x353.jpeg 768w, https://peepalmedia.com/wp-content/uploads/2025/06/raita-horata-press-meet-1536x707.jpeg 1536w, https://peepalmedia.com/wp-content/uploads/2025/06/raita-horata-press-meet-2048x942.jpeg 2048w, https://peepalmedia.com/wp-content/uploads/2025/06/raita-horata-press-meet-150x69.jpeg 150w, https://peepalmedia.com/wp-content/uploads/2025/06/raita-horata-press-meet-696x320.jpeg 696w, https://peepalmedia.com/wp-content/uploads/2025/06/raita-horata-press-meet-1068x491.jpeg 1068w, https://peepalmedia.com/wp-content/uploads/2025/06/raita-horata-press-meet-1920x883.jpeg 1920w" sizes="(max-width: 1024px) 100vw, 1024px" /></figure>



<p>ಗುರುವಾರ ನಟ ಪ್ರಕಾಶ್ ರಾಜ್, ಹಿರಿಯ ಪತ್ರಕರ್ತೆ ವಿಜಯಾ, ಕೆ. ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ತೆರಳಿದ್ದರು, ಈ ವೇಳೆ ಮೊದಲು ಅವರನ್ನು ಪೊಲೀಸರು ತಡೆದಿದ್ದು, ಆನಂತರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆೆ ಅವಕಾಶ ಮಾಡಿಕೊಟ್ಟಿದ್ದಾರೆ.&nbsp;&nbsp;</p>



<p>ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.&nbsp;</p>



<p>ಈ ವೇಳೆ ಮುಖ್ಯಮಂತ್ರಿಗಳು ಸಭೆ ನಡೆಸಿ, ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ, ಫ್ರೀಡಂ ಪಾರ್ಕಿನಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.&nbsp;</p>



<p>ಜೂನ್ 26 ಮಧ್ಯಾಹ್ನ 1:30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕ ಅನಿರ್ದಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.</p>
]]></content:encoded>
					
		
		
			</item>
		<item>
		<title>ಯಾದಗಿರಿ ಅತ್ಯಾಚಾರ ಪ್ರಕರಣ&#124; ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ: ಜಿ. ರಾಮಕೃಷ್ಣ</title>
		<link>https://peepalmedia.com/one-justice-for-the-poor-another-for-the-rich-in-rape-cases-gramakrishna/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 26 Feb 2025 05:34:58 +0000</pubDate>
				<category><![CDATA[ಯಾದಗಿರಿ]]></category>
		<category><![CDATA[ರಾಜ್ಯ]]></category>
		<category><![CDATA[CM]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[protest]]></category>
		<category><![CDATA[rape case]]></category>
		<category><![CDATA[Siddaramaiah]]></category>
		<category><![CDATA[yadagiri]]></category>
		<guid isPermaLink="false">https://peepalmedia.com/?p=54483</guid>

					<description><![CDATA[ಯಾದಗಿರಿ ಜಿಲ್ಲೆಯಲ್ಲಿ ಚಿಂದಿ ಆಯಲು ತೆರಳಿದ್ದ ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆಬ್ರವರಿ 25, ಮಂಗಳವಾರ ಸಂಜೆ 5ಗಂಟೆಗೆ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.&#160; ಹಿರಿಯ ಚಿಂತಕ ಜಿ ರಾಮಕೃಷ್ಣ ಅವರು ಮಾತನಾಡಿ, “ಈ ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರ ಗಮನಿಸಿದರೆ ನಾವು ಮನುಷ್ಯರಾಗಿ ಬದುಕುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ. ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳು [&#8230;]]]></description>
										<content:encoded><![CDATA[
<p>ಯಾದಗಿರಿ ಜಿಲ್ಲೆಯಲ್ಲಿ ಚಿಂದಿ ಆಯಲು ತೆರಳಿದ್ದ ಬುಡ್ಗ ಜಂಗಮ ಅಲೆಮಾರಿ ಸಮುದಾಯದ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆಬ್ರವರಿ 25, ಮಂಗಳವಾರ ಸಂಜೆ 5ಗಂಟೆಗೆ ವಿವಿಧ ಜನಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.&nbsp;</p>



<p>ಹಿರಿಯ ಚಿಂತಕ ಜಿ ರಾಮಕೃಷ್ಣ ಅವರು ಮಾತನಾಡಿ, “ಈ ದೇಶದಲ್ಲಿ ನಡೆಯುತ್ತಿರುವ ಅನಾಚಾರ, ಅತ್ಯಾಚಾರ ಗಮನಿಸಿದರೆ ನಾವು ಮನುಷ್ಯರಾಗಿ ಬದುಕುತ್ತಿದ್ದೇವಾ ಎಂಬ ಅನುಮಾನ ಮೂಡುತ್ತಿದೆ. </p>



<p>ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣು ಮಗಳು ನದಿಯಲ್ಲಿ ಸ್ನಾನ ಮಾಡಲು ಇಳಿದಳೆಂದು ಕ್ರೂರಿಗಳು ಆಕೆಯನ್ನು ಬಡಿಗೆಗಳಿಂದ ಹೊಡೆದು ಸಾಯಿಸಿದ್ದರು. ಇಂಥವರಿಗೆ ರಕ್ಷಣೆ ಕೊಡುವ ಸಂಸ್ಕೃತಿ ನಮ್ಮ ದೇಶದಲ್ಲಿ ಇದೆ. ಇಂತಹ ಸಮಾಜದಲ್ಲಿ ನಾವಿನ್ನೂ ಫ್ಯಾಸಿಸ್ಟ್‌ ಆಗಿದ್ದೀವಾ, ಅರೆ ಫ್ಯಾಸಿಸ್ಟ್ ಆಗಿದ್ದೀವಾ, ಸೆಮಿ ಫ್ಯಾಸಿಸ್ಟ್ ಆಗಿದ್ದೀವಾ ಎಂದು ಚರ್ಚೆ ಮಾಡುತ್ತಿದ್ದೇವೆ. </p>



<p>ದೇಶದೆಲ್ಲೆಡೆ ಈಗ ಪುನೀತರಾದ ಜನರೇ ಇರುವುದು. ಗಂಗೆಯಲ್ಲಿ ಸ್ನಾನ ಮಾಡಿ ಬಂದಿದ್ದಾರೆ. ಐವತ್ತು ಕೋಟಿ ಜನರಲ್ಲಿ ನಲುವತ್ತು ಕೋಟಿ ಜನರಿಗೆ ಒಂದು ತರಹದ ನೀರು, ಇನ್ನು ಹತ್ತು ಕೋಟಿ ಜನರಿಗೆ ಒಂದು ತರಹದ ನೀರು. ನಾರಾಯಣ ಮೂರ್ತಿ, ಸುಧಾಮೂರ್ತಿ ತರದವರಿಗೆ ಬೇಲಿ ಕಟ್ಟಿ ಚೆನ್ನಾಗಿ ನೀರು ಹರಿಯುವ ಜಾಗ, ಸಾಮಾನ್ಯ ಜನರಿಗೆ ಚರಂಡಿ ನೀರು ಸೇರುವ ಜಾಗ.                                                  </p>



<p>ಇದೇ ರೀತಿ ಈ ಅತ್ಯಾಚಾರ ವಿಚಾರದಲ್ಲೂ ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಯಾದಗಿರಿಯೇನು ಬೆಂಗಳೂರಲ್ಲ, ಪುಟ್ಟ ಹಳ್ಳಿ. ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟೇವೇನು ಕಷ್ಟ ಅಲ್ಲ. ಆದರೆ, ಇದು ಅಧಿಕಾರಿಗಳಿಗೆ ಬಡವರ ಮೇಲೆ ಇರುವ ಅಸಡ್ಡೆ ತೋರಿಸುತ್ತದೆ” ಎಂದು ಹೇಳಿದರು.&nbsp;</p>



<figure class="wp-block-image size-large"><img decoding="async" width="1024" height="460" src="https://peepalmedia.com/wp-content/uploads/2025/02/alemarisamudaya-1024x460.jpeg" alt="" class="wp-image-54488" srcset="https://peepalmedia.com/wp-content/uploads/2025/02/alemarisamudaya-1024x460.jpeg 1024w, https://peepalmedia.com/wp-content/uploads/2025/02/alemarisamudaya-300x135.jpeg 300w, https://peepalmedia.com/wp-content/uploads/2025/02/alemarisamudaya-768x345.jpeg 768w, https://peepalmedia.com/wp-content/uploads/2025/02/alemarisamudaya-1536x689.jpeg 1536w, https://peepalmedia.com/wp-content/uploads/2025/02/alemarisamudaya-150x67.jpeg 150w, https://peepalmedia.com/wp-content/uploads/2025/02/alemarisamudaya-696x312.jpeg 696w, https://peepalmedia.com/wp-content/uploads/2025/02/alemarisamudaya-1068x479.jpeg 1068w, https://peepalmedia.com/wp-content/uploads/2025/02/alemarisamudaya.jpeg 1600w" sizes="(max-width: 1024px) 100vw, 1024px" /></figure>



<p>ಇದೇ ವೇಳೆ ಮಾತನಾಡಿದ ದಲಿತ ಮುಖಂಡ ವಡ್ಡಗೆರೆ ನಾಗರಾಜಯ್ಯ, “ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆ ನಡೆದು ಹತ್ತು ದಿನಗಳಾಗಿವೆ. ಆದರೆ, ಈವರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ, ಇದು ಹಲವು ಅನುಮಾನಗಳಿವೆ ಎಡೆ ಮಾಡಿಕೊಟ್ಟಿದೆ. </p>



<p>ಕರ್ನಾಟಕ ಎಂದಲ್ಲ, ಇಡೀ ದೇಶದಲ್ಲಿ ಪ್ರಸ್ತುತ ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಆದರೆ, ಸರ್ಕಾರಗಳು, ಪೊಲೀಸರು ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಗಳ ಪರ ನಿಲ್ಲಬೇಕು. ಅತ್ಯಾಚಾರವೆಸಗಿ, ಕೊಲೆಗೈದವರನ್ನು ತಕ್ಷಣ ಬಂಧಿಸಬೇಕು” ಎಂದು ಒತ್ತಾಯಿಸಿದರು.</p>



<p>ಬರಹಗಾರ, ದಲಿತ ಮುಖಂಡ ಹುಲಿಕುಂಟೆ ಮೂರ್ತಿ ಮಾತನಾಡಿ, “ಆರೋಪಿಗಳು ಸಂತ್ರಸ್ತರ ಮನೆಗಳ ಬಳಿ ಹೋಗಿ ಧಮ್ಕಿ ಹಾಕಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಆರೋಪಿಗಳು ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಮಗೆ ಬಾಬಾ ಸಾಹೇಬರ ಮೇಲೆ ನಿಜಕ್ಕೂ ಗೌರವ ಇದ್ದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಮನವಿ ಮಾಡಿದರು.</p>



<p>“ಇಡೀ ದೇಶದಲ್ಲಿ ಯಾವುದೇ ಸರ್ಕಾರ, ಅಲೆಮಾರಿಗಳಿಗೆ ಇದುವರೆಗೆ ಯಾವುದೇ ರೀತಿಯಲ್ಲಿ ರಕ್ಷಣೆ ಕೊಟ್ಟಿಲ್ಲ, ಮನೆ ಕೊಟ್ಟಿಲ್ಲ. ಯಾಕೆ ಅಲೆಮಾರಿಗಳಾಗಿದ್ದಾರೆ ಎಂಬ ಮೂಲ ಪ್ರಶ್ನೆ ಕೇಳಬೇಕಾಗಿದೆ. ಯಾರೂ ಸರ್ಕಾರಗಳ ಮೇಲೆ ಒತ್ತಡ ಹಾಕುತ್ತಿಲ್ಲ. </p>



<p>ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ನಾವು ಯಾಕೆ ಹೀಗಿದ್ದೇವೆ? ನಾವೀಗ ಒಟ್ಟಾಗಿ ಅಲೆಮಾರಿಗಳಿಗೆ ಭೂಮಿ ಕೊಡಿ ನೌಕರಿ ಕೊಡಿ ಎಂದು ಕೇಳಬೇಕಿದೆ. ಯಾದಗಿರಿಯ ಅತ್ಯಾಚಾರ ಪ್ರಕರಣದಲ್ಲಿ ಅರೋಪಿಗಳ ಬಂಧನ ಸರ್ಕಾರದ ಕೈಯಲ್ಲಿ ಆಗಲ್ಲ ಅಂತಲ್ಲ, ಪೊಲೀಸರು ಮನಸ್ಸು ಮಾಡಿದರೆ ಆರೋಪಿಗಳನ್ನು ಬಂಧಿಸುವುದು ಕಷ್ಟವೇನಲ್ಲ. ಹಾಗಾಗಿ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಅಲೆಮಾರಿ ಸಮುದಾಯಗಳ ಹೋರಾಟಗಾರರು ಎಚ್ಚರಿಸಿದರು.</p>



<p>ಜೊತೆಗೆ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶದೆಲ್ಲೆಡೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದ ಆಕ್ರೋಶ ಮತ್ತು ಅದಕ್ಕೆ ಸರ್ಕಾರ ಸ್ಪಂದಿಸಿ ರೀತಿಯಲ್ಲಿ ಬಡ, ದಲಿತ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಕೊಲೆ ನಡೆದಾಗ ಸ್ಪಂದಿಸದಿರುವುದು ದುರದೃಷ್ಟಕರ ಎಂದು ವಿವಿಧ ಸಂಘಟನೆಗಳ ಮುಖಂಡರು ವಿಷಾಧ ವ್ಯಕ್ತಪಡಿಸಿದರು.</p>
]]></content:encoded>
					
		
		
			</item>
		<item>
		<title>ಬಿಪಿಸಿಎಸ್ ಪ್ರತಿಭಟನೆ: ಐದನೇ ದಿನದ ಉಪವಾಸ ಹೋರಾಟದಂದು ಪ್ರಶಾಂತ್‌ ಕಿಶೋರ್‌ ಬಂಧನ</title>
		<link>https://peepalmedia.com/bpcs-protests-prashant-kishor-arrested-on-fifth-day-of-fast/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 06 Jan 2025 06:02:08 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[BPSC]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Prashant Kishor]]></category>
		<category><![CDATA[protest]]></category>
		<guid isPermaLink="false">https://peepalmedia.com/?p=51718</guid>

					<description><![CDATA[ಹೊಸದಿಲ್ಲಿ:&#160;ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರ ಪಾಟ್ನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ. ಜನ್ ಸೂರಾಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಏಮ್ಸ್‌ಗೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಗಾಂಧಿ ಮೈದಾನದಲ್ಲಿ ಕಿಶೋರ್ ಅವರ ಧರಣಿ &#8220;ಕಾನೂನುಬಾಹಿರ&#8221; ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong>&nbsp;ಬಿಹಾರದ ಲೋಕಸೇವಾ ಆಯೋಗದ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕಳೆದ ವಾರ ಪಾಟ್ನಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಇಂದು ಮುಂಜಾನೆ ಬಂಧಿಸಲಾಗಿದೆ.</p>



<p>ಜನ್ ಸೂರಾಜ್ ಎಂಬ ಸಂಘಟನೆಯನ್ನು ಸ್ಥಾಪಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್  ಕಿಶೋರ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ಏಮ್ಸ್‌ಗೆ ಪೊಲೀಸರು ಕರೆದೊಯ್ದಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.</p>



<p>ಗಾಂಧಿ ಮೈದಾನದಲ್ಲಿ ಕಿಶೋರ್ ಅವರ ಧರಣಿ &#8220;ಕಾನೂನುಬಾಹಿರ&#8221; ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಮೈದಾನ ಪ್ರತಿಭಟನೆ ಮಾಡಲು ನಿರ್ಬಂಧಿತವಾಗಿದೆ ಎಂದು ಸಿಂಗ್ ಅವರು ಅನೇಕ ಸುದ್ದಿ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | BPSC protest | Bihar: Patna Police detains Jan Suraaj chief Prashant Kishor who was sitting on an indefinite hunger strike at Gandhi Maidan <a href="https://t.co/cOnoM7EGW1">pic.twitter.com/cOnoM7EGW1</a></p>&mdash; ANI (@ANI) <a href="https://twitter.com/ANI/status/1876037772609454397?ref_src=twsrc%5Etfw">January 5, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಪೊಲೀಸರು ಸ್ಥಳ ತೆರವು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮೈದಾನದಲ್ಲಿನ ಪೊಲೀಸ್ ಕ್ರಮದ ಕೆಲವು ವೀಡಿಯೊಗಳು ಪ್ರತಿಭಟನಾಕಾರರ ವಿರುದ್ಧ ಬಲ ಪ್ರಯೋಗ ಮಾಡಿರುವುದನ್ನು ತೋರಿಸುತ್ತವೆ. ಕಿಶೋರ್‌ಗೆ ಪೊಲೀಸರು ಕಪಾಳಕ್ಕೆ ಹೊಡೆದಿದ್ದಾರೆ ಎಂದು ದಿ <a href="https://www.thehindu.com/news/national/bihar/bpsc-protest-patna-police-detains-prashant-kishor-vacates-gandhi-maidan/article69066715.ece"><em>ಹಿಂದೂ ವರದಿ ಮಾಡಿದೆ.</em></a></p>



<p>ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಪರೀಕ್ಷೆಯನ್ನು ರದ್ದುಗೊಳಿಸಲು &#8220;48 ಗಂಟೆಗಳ ಅಲ್ಟಿಮೇಟಮ್&#8221; ನೀಡಿದ ಮೂರು ದಿನಗಳ ನಂತರ ಕಿಶೋರ್ ಜನವರಿ 2 ರಂದು ತನ್ನ ಉಪವಾಸವನ್ನು ಪ್ರಾರಂಭಿಸಿದರು.</p>



<p>ಪೇಪರ್ ಸೋರಿಕೆಯ ಆರೋಪಗಳು ಕೇಳಿಬಂದ ನಂತರ BPSC ಯ 70 ನೇ ಸಂಯೋಜಿತ ಪ್ರಾಥಮಿಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಬಿಹಾರದಾದ್ಯಂತ ಪ್ರತಿಭಟನೆ ನಡೆಯಿತು.</p>



<p>“ನನ್ನ ಪ್ರಾಥಮಿಕ ಬೇಡಿಕೆ, ಸಹಜವಾಗಿ, ಡಿಸೆಂಬರ್ 13 ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸುವುದು ಮತ್ತು ಹೊಸ ಪರೀಕ್ಷೆಯನ್ನು ನಡೆಸುವುದು. ಪರೀಕ್ಷೆಯ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ವಾಸ್ತವಿಕವಾಗಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಂತಹ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ನ್ಯಾಯಾಂಗದ ಮುಂದೆ ತರಬೇಕು,” ಎಂದು ಕಿಶೋರ್ ಅವರು ತಮ್ಮ ಉಪವಾಸವನ್ನು ಆರಂಭಿಸುವಾಗ ಹೇಳಿರುವುದನ್ನು ಪಿಟಿಐ ವರದಿ ಮಾಡಿದೆ.</p>
]]></content:encoded>
					
		
		
			</item>
		<item>
		<title>ವಿಡಿಯೋ: ನಾಲ್ಕು ವರ್ಷಗಳಿಂದ ಉಮರ್‌ ಖಾಲಿದ್‌ ಜೈಲಿನಲ್ಲಿ..! </title>
		<link>https://peepalmedia.com/umar-khalid-in-jail-for-four-years/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 14 Sep 2024 12:07:44 +0000</pubDate>
				<category><![CDATA[ಅಂಕಣ]]></category>
		<category><![CDATA[CAA]]></category>
		<category><![CDATA[CAA NRC]]></category>
		<category><![CDATA[CAA protest]]></category>
		<category><![CDATA[citizenship amendment bill]]></category>
		<category><![CDATA[Delhi riots]]></category>
		<category><![CDATA[NRC]]></category>
		<category><![CDATA[protest]]></category>
		<category><![CDATA[Sedition case]]></category>
		<category><![CDATA[UAPA]]></category>
		<category><![CDATA[Umar Khalid]]></category>
		<guid isPermaLink="false">https://peepalmedia.com/?p=45510</guid>

					<description><![CDATA[ಸೆಪ್ಟೆಂಬರ್ 13, 2024, ಉಮರ್‌ ಖಾಲಿದ್‌ ಜೈಲಿನಲ್ಲಿ ಬಂಧಿಯಾಗಿ 4 ವರ್ಷಗಳು ಕಳೆದಿವೆ. ಫೆಬ್ರವರಿ 2020 ರಂದು ಭುಗಿಲೆದ್ದ ದೆಹಲಿ ಗಲಭೆಯಲ್ಲಿ ಉಮರ್‌ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಸಿಎಎ ವಿರುದ್ಧದ ಹೋರಾಟದಲ್ಲಿ ರಾಜಕೀಯ ಪ್ರೇರಿತವಾಗಿ ಉಮ್ಮರ್‌ ವಿರುದ್ಧ ಈ ಪ್ರಕರಣವನ್ನು ದಾಖಲಿಸಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಯಾದ ವಿಚಾರ. ಜವಾಬ್ದಾರಿಯುತವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವವಾದಿ ದೇಶದ ಅವಿಭಾಜ್ಯ ಅಂಗವಾಗಿರುವಾಗ ಉಮ್ಮರ್‌ ವಿರುದ್ಧ ದಾಖಲಾಗಿರುವ, ನಾಲಕು ವರ್ಷಗಳಿಂದ ಜೈಲಿನಲ್ಲಿ ಇಡಲಾಗಿರುವ ಈ ಪ್ರಕರಣ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ [&#8230;]]]></description>
										<content:encoded><![CDATA[
<p>ಸೆಪ್ಟೆಂಬರ್ 13, 2024, ಉಮರ್‌ ಖಾಲಿದ್‌ ಜೈಲಿನಲ್ಲಿ ಬಂಧಿಯಾಗಿ 4 ವರ್ಷಗಳು ಕಳೆದಿವೆ. ಫೆಬ್ರವರಿ 2020 ರಂದು ಭುಗಿಲೆದ್ದ ದೆಹಲಿ ಗಲಭೆಯಲ್ಲಿ ಉಮರ್‌ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿದೆ. ಸಿಎಎ ವಿರುದ್ಧದ ಹೋರಾಟದಲ್ಲಿ ರಾಜಕೀಯ ಪ್ರೇರಿತವಾಗಿ ಉಮ್ಮರ್‌ ವಿರುದ್ಧ ಈ ಪ್ರಕರಣವನ್ನು ದಾಖಲಿಸಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಯಾದ ವಿಚಾರ. ಜವಾಬ್ದಾರಿಯುತವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಪ್ರಜಾಪ್ರಭುತ್ವವಾದಿ ದೇಶದ ಅವಿಭಾಜ್ಯ ಅಂಗವಾಗಿರುವಾಗ ಉಮ್ಮರ್‌ ವಿರುದ್ಧ ದಾಖಲಾಗಿರುವ, ನಾಲಕು ವರ್ಷಗಳಿಂದ ಜೈಲಿನಲ್ಲಿ ಇಡಲಾಗಿರುವ ಈ ಪ್ರಕರಣ ದೇಶದ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಒಂದು ಕಪ್ಪು ಚುಕ್ಕೆ.</p>



<p>ನೀವು ಪ್ರತಿಭಟನೆಗೆ ಇಳಿದಿದ್ದೀರಿ. ಅದು ನಿಮ್ಮ ಹಕ್ಕು ಎಂದು ನೀವು ಭಾವಿಸುತ್ತೀರಿ. ನಿಮ್ಮ ನಿರೀಕ್ಷೆಗೆ ಮೀರಿ ಆ ಪ್ರತಿಭಟನೆ ಗಲಾಟೆಗೆ ಬದಲಾದರೆ, ಮಾರನೇ ದಿನ ನಿಮ್ಮ ಮನೆಯ ಬಾಗಿಲು ತಟ್ಟುತ್ತಾರೆ ತನಿಖಾ ಸಂಸ್ಥೆಗಳ ಅಧಿಕಾರಿಗಳು. ನೀವೊಬ್ಬ ಭಯೋತ್ಪಾದಕ ಎಂದು ಘೋಷಿಸುತ್ತಾರೆ. ದೇಶದ ಮಾಧ್ಯಮಗಳೂ ನಿಮ್ಮನ್ನು ಭಯೋತ್ಪಾದಕ ಎಂದೇ ಕರೆಯುತ್ತವೆ. ನಿಮ್ಮನ್ನು ಜೈಲಿಗೆ ಹಾಕಲಾಗುತ್ತದೆ. ನಿಮ್ಮ ಬೈಲ್‌ ಅಪ್ಲಿಕೇಷನ್‌ಗಳನ್ನು ನ್ಯಾಯಾಲಯಗಳು ತಿರಸ್ಕರಿಸುತ್ತವೆ. ವರ್ಷಗಳು ಕಳೆದಂತೆ ನಿಮ್ಮ ಪ್ರಕರಣದ ವಿಚಾರಣೆಯೂ ಕಡಿಮೆಯಾಗುತ್ತಾ ಹೋಗುತ್ತದೆ. ನೀವಿನ್ನೂ ಜೈಲಿನಲ್ಲಿಯೇ ಇರುತ್ತೀರಿ.</p>



<p>ಇದು ಒಂದು ಕಾಲ್ಪನಿಕ ಸನ್ನಿವೇಷವಾದರೆ, ಉಮ್ಮರ್‌ ಖಾಲಿದ್‌ ಬದುಕಿನಲ್ಲಿ ಇದೇ ಸತ್ಯ!</p>



<p>ಡಿಸೆಂಬರ್ 2019 ರಿಂದ ಪ್ರಧಾನಿ ನರೇಂದ್ರ ಮೋದಿಯವರ ಕರಿಛಾಯೆಯ ಕನಸಾದ ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎಯನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಆರಂಭವಾದವು. ದೆಹಲಿಯಲ್ಲಿ, 2020 ರ ಫೆಬ್ರವರಿ ತಿಂಗಳ ಮಧ್ಯದದಲ್ಲಿ ಅನೇಕ ಸಿಎಎ ಪರ ಮೋದಿ ಸರ್ಕಾರದ ಬೆಂಬಲಿಗರು, ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಿದರು. ಫೆಬ್ರವರಿ 23 ರ ಹೊತ್ತಿಗೆ, ನಗರದಲ್ಲಿ ಮುಸ್ಲಿಮರ ವಿರುದ್ಧ ದುರುದ್ದೇಶಿತ ಮತ್ತು ಸಂಘಟಿತ ಹಿಂಸಾಚಾರ ಆರಂಭವಾಯಿತು, ಇದು ಮೂರು ದಿನಗಳವರೆಗೆ ಮುಂದುವರೆಯಿತು.</p>



<p><strong>ವಿಡಿಯೋ ನೋಡಿ:</strong></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="iRcMIYmP-Xw"><iframe title="ನಾಲ್ಕು ವರ್ಷಗಳಿಂದ ಉಮರ್‌ ಖಾಲಿದ್‌ ಜೈಲಿನಲ್ಲಿ..! | Umar Khalid | PEEPAL MEDIA" width="696" height="392" src="https://www.youtube.com/embed/iRcMIYmP-Xw?start=11&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe></div>
</div></figure>



<p>ಕಪಿಲ್ ಮಿಶ್ರಾ ಅವರಂತಹ ಕೆಲವು ಬಿಜೆಪಿ ನಾಯಕರು ಗಲಭೆಗೆ ಪ್ರಚೋದನೆ ನೀಡಿದ್ದರು. ಈ ಮಾರಣಾಂತಿಕ ಗಲಭೆಗಳಲ್ಲಿ 53 ಜನರು ಸಾವನ್ನಪ್ಪಿದರು. ಅವರಲ್ಲಿ ಮುಕ್ಕಾಲು ಭಾಗ ಮುಸ್ಲಿಮರು. ಹತ್ತಕ್ಕೂ ಹೆಚ್ಚು-ಹಿಂದೂಗಳು ಮೃತರಾದರು. 700 ಮಂದಿ ಗಾಯಗೊಂಡಿದ್ದರು. ಶವಗಳು ರಸ್ತೆ, ಚರಂಡಿಗಳಲ್ಲಿ ಬಿದ್ದಿದ್ದವು, ಅನೇಕ ಮುಸ್ಲಿಮರು ನಾಪತ್ತೆಯಾಗಿದ್ದಾರೆ. ಹಲವಾರು ಮಸೀದಿಗಳಿಗೆ ಬೆಂಕಿ ಹಚ್ಚಿ ನೆಲಸಮಗೊಳಿಸಲಾಯಿತು. ಅನೇಕ ಮುಸ್ಲಿಂ ಕುಟುಂಬಗಳು ಈ ಪ್ರದೇಶವನ್ನು ತೊರೆದರು, ಮತ್ತೆ ತಮ್ಮ ಮನೆಗಳಿಗೆ ಹಿಂತಿರುಗಲಿಲ್ಲ. ಆ ಮೂರು ದಿನಗಳ ರಕ್ತಪಾತದಲ್ಲಿ ಅನೇಕರ ಬದುಕು ಕಂಗೆಟ್ಟುಹೋಯಿತು.</p>



<p>2024 ರ ಫೆಬ್ರವರಿಯಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದಂತೆ ದೆಹಲಿ ಪೊಲೀಸರು ಗಲಭೆಗೆ ಸಂಬಂಧಿಸಿದಂತೆ 2,619 ಜನರನ್ನು ಬಂಧಿಸಿದ್ದಾರೆ. ಗಲಭೆಗೆ ಪ್ರಚೋದನೆ ನೀಡಲು 21 ಮಂದಿ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್ ಆರೋಪಿಸಿದೆ. ಈ ಆರೋಪಿಗಳಲ್ಲಿ ಉಮರ್ ಖಾಲಿದ್ , ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್ ಮತ್ತು ಗುಲ್ಫಿಶನ್ ಫಾತಿಮಾ , ಸಲೀಂ ಮಲಿಕ್ ಮತ್ತು ದೇವಾಂಗನಾ ಕಲಿತಾ ಮುಂತಾದವರು ಸೇರಿದ್ದಾರೆ.</p>



<p>ಸೆಪ್ಟೆಂಬರ್ 2020 ರಿಂದ ಪೊಲೀಸರು ಇದುವರೆಗೆ ಒಟ್ಟು 25,000 ಪುಟಗಳ ಐದು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. 21 ಮಂದಿಯ ವಿರುದ್ಧ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ನಡೆಸಿ ರಸ್ತೆ ತಡೆ, ಕೋಮುಗಲಭೆ ಮಾಡಿದ್ದಾರೆ, ಮತ್ತು 2020ರ ಫೆಬ್ರವರಿ 22-23 ರಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತದ ಮಾನ ಹರಾಜು ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ.</p>



<p>ಮತ್ತೊಂದೆಡೆ, ಅನೇಕ ಆರೋಪಿಗಳು ತಾವು ಯಾವುದೇ ಪ್ರಚೋದನಕಾರಿ ಭಾಷಣಗಳನ್ನು ಮಾಡಿಲ್ಲ, ನಡೆದ ಗಲಭೆಗೆ ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ತಮ್ಮ ಮೂಲಭೂತ ಹಕ್ಕಾಗಿ ಶಾಂತಿಯುತ ಪ್ರತಿಭಟನೆಗಳನ್ನು ಮಾತ್ರ ನಡೆಸಿದ್ದೇವೆ ಎಂದಿದ್ದಾರೆ. ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ 21 ಆರೋಪಿಗಳ ಪೈಕಿ 9 ಮಂದಿಗೆ ಮಾತ್ರ ಜಾಮೀನು ಸಿಕ್ಕಿದೆ.</p>



<p>ಉಳಿದವರು, ಪ್ರಮುಖವಾಗಿ ಉಮರ್ ಖಾಲಿದ್ ಸೇರಿದಂತೆ ಮುಸ್ಲಿಂ ಆರೋಪಿಗಳು ಜಾಮೀನಿಗಾಗಿ ನ್ಯಾಯಾಲಯಗಳ ಮೊರೆ ಹೋದರೂ ನ್ಯಾಯಾಲಯಗಳು ಸುಮ್ಮನೆ ಇವೆ. ಅವರೆಲ್ಲರಿಗೂ ಕೆಳಹಂತದ ನ್ಯಾಯಾಲಯಗಳಿಂದ ಜಾಮೀನು ನಿರಾಕರಿಸಲಾಗಿದೆ ಮತ್ತು ಕೆಲವರಿಗೆ ದೆಹಲಿ ಹೈಕೋರ್ಟ್‌ನಿಂದ ಜಾಮೀನು ನಿರಾಕರಿಸಲಾಗಿದೆ.</p>



<p>ಈಗಾಗಲೇ ಅವರು 3-4 ವರ್ಷಗಳಿಗಿಂತ ಜೈಲಿನಲ್ಲಿಯೇ ಇದ್ದಾರೆ. ಆದರೆ ಜಾಮೀನು ನೀಡಲು ನ್ಯಾಯಾಲಯಗಳು ಹಿಂದೇಟು ಹಾಕುತ್ತಿರುವುದು ಏಕೆ?</p>



<p>ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ವಿರುದ್ಧ ವ್ಯಾಪಕ ದುರ್ಬಳಕೆಗಾಗಿ ಮಾಡಲಾಗಿರುವ ಕುಖ್ಯಾತ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪೊಲೀಸರು ಈ 21 ಮಂದಿಯ ವಿರುದ್ಧ ಆರೋಪ ಹೊರಿಸಿದ್ದಾರೆ. ಇದಲ್ಲದೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) 25 ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ 2 ಸೆಕ್ಷನ್‌ಗಳು ಮತ್ತು ಶಸ್ತ್ರಾಸ್ತ್ರ ಕಾಯ್ದೆಯ 2 ಸೆಕ್ಷನ್‌ಗಳನ್ನೂ ಹಾಕಲಾಗಿದೆ.</p>



<p>ಯುಎಪಿಎ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯಗಳಿಂದ ಯಾವುದೇ ಬದಲಾವಣೆ ಸಾಧ್ಯ ಇಲ್ಲವೇ? ನ್ಯಾಯಾಲಯ ಈ 21 ಮಂದಿಯ ವಿಚಾರದಲ್ಲಿ ಯಾವುದೇ ಸಮರ್ಪಕ ತೀರ್ಪನ್ನು ನೀಡಲು ಸಾಧ್ಯ ಇಲ್ಲವೇ?</p>



<p>ದೆಹಲಿ ಹೈಕೋರ್ಟ್‌ನ ಜಸ್ಟಿಸ್ ಸಿದ್ಧಾರ್ಥ್ ಮೃದುಲ್ ಮತ್ತು ಜಸ್ಟಿಸ್ ಅನುಪ್ ಜೈರಾಮ್ ಭಂಭಾನಿ ಅವರ ಇಬ್ಬರು ನ್ಯಾಯಾಧೀಶರ ಪೀಠವು ಈ 21 ಆರೋಪಿಗಳ ಪೈಕಿ &#8211; ದೇವಾಂಗನಾ ಕಲಿತಾ , ನತಾಶಾ ನರ್ವಾಲ್ ಮತ್ತು ಆಸಿಫ್ ಇಕ್ಬಾಲ್ ತನ್ಹಾ – ಈ ಮೂವರಿಗೆ ಜಾಮೀನು ನೀಡಿದೆ.</p>



<p>ಇದೊಂದು ಮಹತ್ವದ ತೀರ್ಪು. ಸರ್ಕಾರ ಯುಎಪಿಎ ಬಳಸಿ ನಡೆಸುವ ಅನ್ಯಾಯದ ವಿರುದ್ಧ ರಕ್ಷಣೆಯಾಗಿ ಈ ತೀರ್ಪು ನಿಲ್ಲುತ್ತದೆ. ಪ್ರತಿಭಟನೆ ನಡೆಸುವ ಸಾಂವಿಧಾನಿಕ ಹಕ್ಕು ಮತ್ತು ಭಯೋತ್ಪಾದನೆಯ ನಡುವೆ ಒಂದು ಗೆರೆ ಇದೆ. ಎರಡೂ ಬೇರೆ ಬೇರೆ. ಆದರೆ ಸರ್ಕಾರದ ಕಣ್ಣಿಗೆ ಈ ಗೆರೆ ಮಬ್ಬ ಮಬ್ಬಾಗಿ ಕಾಣುತ್ತಿದೆ ಎಂದು ಈ ದ್ವಿಸದಸ್ಯ ಪೀಠ ತೀರ್ಪಿನಲ್ಲಿ ಹೇಳಿತ್ತು. . ಗಲಭೆಯಲ್ಲಿ ಈ ಮೂವರ ಆಪಾದಿತ ಪಾತ್ರಗಳ ಕುರಿತು ನ್ಯಾಯಾಲಯವು ಅವರದ್ದು &#8216;ಭಯೋತ್ಪಾದಕ ಕೃತ್ಯ&#8217; ಅಥವಾ &#8216;ಪಿತೂರಿ&#8217; ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿ, ಮೂವರನ್ನೂ ಬಿಡುಗಡೆ ಮಾಡಿತು.</p>



<p>ಈ ತೀರ್ಪು ಯುಎಪಿಎ ದುರ್ಬಳಕೆಯ ಮೇಲೆ ದೊಡ್ಡ ತಡೆಯನ್ನು ತರುತ್ತದೆ. ಆದರೆ ದೆಹಲಿ ಪೊಲೀಸರು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಿಂದ ತಡೆಯನ್ನು ತಂದರು. ಮೂವರು ಆರೋಪಿಗಳಿಗೆ ಜಾಮೀನಿನ ಮೇಲೆ ಹೊರಗೆ ಉಳಿಯಲು ಅವಕಾಶ ನೀಡಿದ್ದರೂ, ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ರಾಮಸುಬ್ರಮಣ್ಯಂ ಅವರ ಪೀಠವು ಇತರ ಪ್ರಕರಣಗಳಿಗೆ ದೆಹಲಿ ಹೈಕೋರ್ಟ್‌ನ ಈ ತೀರ್ಪನ್ನು ಅವಲಂಬಿಸದಂತೆ ನ್ಯಾಯಾಲಯಗಳಿಗೆ ಹೇಳಿದೆ. ಇದರಿಂದಾಗಿ, ದೆಹಲಿ ಹೈಕೋರ್ಟ್‌ನ ಒಂದು ಪ್ರಗತಿಪರ ತೀರ್ಪು ಯಾವುದೇ ಉಪಯೋಗಕ್ಕೆ ಬಾರದೆ ಹೋಯ್ತು. ಉಮರ್‌ ಖಾಲಿದ್‌ ಜಾಮೀನಿಗಾಗಿ ಕೋರ್ಟ್‌ ಅಲೆಯಬೇಕಾಗಿ ಬಂತು.</p>



<p>ಆದರೂ ನ್ಯಾಯಾಲಯಗಳ ಮೇಲೆ ಬರವಸೆಯನ್ನು ಕಳೆದುಕೊಳ್ಳಬೇಕೇ? ಯುಎಪಿಎಯಲ್ಲಿ ತೀರ್ಪು ಸಂಪೂರ್ಣವಾಗಿ ರಾಜ್ಯದ ಪರವಾಗಿ ಬಂದರೂ ಉನ್ನತ ನ್ಯಾಯಾಲಯಗಳು ತನಿಖಾ ಸಂಸ್ಥೆಗಳು ಸಲ್ಲಿಸಿದ ಮೆಟೀರಿಯಲ್‌ಗಳ ಆಧಾರದ ಮೇಲೆ ಅವು &#8220;ಭಯೋತ್ಪಾದಕ ಕೃತ್ಯಗಳು&#8221; ಅಲ್ಲ ಎಂದು ಹೇಳಿ, ಅಂತಹ ಪ್ರಕರಣಗಳಲ್ಲಿ ಕಟ್ಟುನಿಟ್ಟಾದ ಜಾಮೀನು ಷರತ್ತು ಅನ್ವಯಿಸುವುದಿಲ್ಲ ಎಂದು ತೀರ್ಮಾನಿಸಿವೆ. ಕಟ್ಟುನಿಟ್ಟಾದ ಜಾಮೀನು ಷರತ್ತು &#8220;ಭಯೋತ್ಪಾದಕ ಕೃತ್ಯಗಳಿಗೆ&#8221; ಮಾತ್ರ ಅನ್ವಯಿಸುತ್ತದೆ ಎಂದಿವೆ. ಆರೋಪಿಗಳ ವಿರುದ್ಧದ ಆರೋಪಗಳು &#8220;ಭಯೋತ್ಪಾದಕ ಕೃತ್ಯಗಳು&#8221; ಅಲ್ಲ ಎಂದು ನ್ಯಾಯಾಲಯ ಹೇಳಿದರೆ, ಕಠಿಣ ಜಾಮೀನು ಷರತ್ತು ಸ್ವಾಭಾವಿಕವಾಗಿ ಅನ್ವಯಿಸುವುದಿಲ್ಲ. ಇದರ ಪರಿಣಾಮವಾಗಿ ಅವರು ಕೆಲವು ಯುಎಪಿಎ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಉದಾಹರಣೆಗೆ, ಭೀಮಾ ಕೋರೆಗಾಂವ್ ಪ್ರಕರಣದ ಆನಂದ್ ತೇಲ್ತುಂಬ್ಡೆ , ವೆರ್ನಾನ್ ಗೊನ್ಸಾಲ್ವೆಸ್ , ಅರುಣ್ ಫೆರೇರಾ , ಶೋಮಾ ಸೇನ್ ಮತ್ತು ಇತರರು. ಆದರೆ ಅವರೆಲ್ಲರೂ ಈಗಾಗಲೇ 4 ಅಥವಾ 5 ವರ್ಷಗಳ ಸುದೀರ್ಘ ಜೈಲುವಾಸವನ್ನು ಅನುಭವಿಸಿದ್ದರು.</p>



<p>ಆದರೂ ಇವರು ಕಳೆದಿರುವ ಇಷ್ಟು ವರ್ಷಗಳನ್ನು ಮರಳಿ ಇವರಿಗೆ ನೀಡಲು ಸಾಧ್ಯವೇ? ಇನ್ನೂ ಜೈಲಿನಲ್ಲಿ ಇರುವ ಉಮ್ಮರ್‌ ಖಾಲಿದ್‌ ಅವರ ಕಥೆ ಏನು? ಅವರಿಗೆ ಜಾಮೀನು ನೀಡಲು ಅವರ ವಿಚಾರಣೆಗಳನ್ನೂ ವರ್ಷಗಳಾದಂತೆ ತಿಂಗಳು ತಿಂಗಳು ಮುಂದೂಡಲಾಗುತ್ತಿದೆ. ನ್ಯಾಯಾಧೀಶರೂ ಬದಲಾಗುತ್ತಲೇ ಇದ್ದಾರೆ.</p>



<p>ಒಮರ್ ಖಾಲಿದ್‌ ಅವರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಬಾಕಿ ಇತ್ತು. ಸುಮಾರು 9 ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಇದನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಿಂದಿರುಗಿಸಿತು. ಪೊಲೀಸರು ಒಮ್ಮೆ ಜಾಮೀನು ನೀಡಲು ಹಿಂದೇಟು ಹಾಕುತ್ತಾರೆ. ಭಯೋತ್ಪಾದನೆ ಆರೋಪಗಳ ಮೇಲೆ ಅವರ ಜಾಮೀನುನನ್ನು 2024 ರ ಮೇ ತಿಂಗಳಲ್ಲಿ ಜಿಲ್ಲಾ ನ್ಯಾಯಾಲಯ ಎರಡನೇ ಬಾರಿಗೆ ತಿರಸ್ಕರಿಸಿತು. ಉಮರ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರುಸತತವಾಗಿ ಅವರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.<br>ದೆಹಲಿ ಹೈಕೋರ್ಟಿನ ನ್ಯಾಯಾಧೀಶರು ಮೂವರಿಗೆ ಜಾಮೀನು ನೀಡಿದರು. ಆದರೆ ಉಳಿದ ಆರೋಪಿಗಳಿಗೆ ಯಾವುದೇ ಪ್ರಾಮುಖ್ಯತೆಯನ್ನು ನೀಡಲಿಲ್ಲ.</p>



<p>ಸರ್ಕಾರವನ್ನು ಪ್ರಶ್ನಿಸಿದರೆ ಏನಾಗುತ್ತದೆ ಎಂಬುದನ್ನು ತೋರಿಸಲು ಕೇಂದ್ರ ನಡೆದ ಈ ಅಸಂವಿಧಾನಿಕ ನಡೆಯಿಂದಾಗಿ ದೇಶವೇ ತಲೆತಗ್ಗಿಸುವಂತಾಗಿದೆ. ಪ್ರಪಂಚ ಇದನ್ನು ಗಮನಿಸುತ್ತಿದೆ. ಇತಿಹಾಸ ಇದನ್ನು ದಾಖಲಿಸಿಕೊಳ್ಳುತ್ತದೆ. ಮನುಷ್ಯನ ಸಾಂವಿಧಾನಿಕ ಹಾಗೂ ನೈಸರ್ಗಿಕ ಹಕ್ಕನ್ನು ನಾಶ ಮಾಡುವ ಜೊತೆಗೆ, ಅವನ ಸಾಮಾಜಿಕ ಘನತೆಯ ಬದುಕಿಗೆ ಕುಂದನ್ನು ತರುವ ಸರ್ವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಉಮ್ಮರ್‌ನ ಈ ಪರಿಸ್ಥಿತಿಯನ್ನು ಇಂದು ಅನೇಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಇದು ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉಮ್ಮರ್‌ನ ಕಥೆ ಮಾತ್ರವಲ್ಲ, ಇದು ಮುಂದೆ ನಾವೆಲ್ಲರೂ ಸಾಕ್ಷಿಯಾಗಬಲ್ಲ ದುರಂತಗಳಿಗೆ ಮುನ್ನುಡಿ.</p>
]]></content:encoded>
					
		
		
			</item>
		<item>
		<title>ಸಿಎಎ: ಕೇಂದ್ರ ಹೇಳಿದ ಎಂಟು ಅಪ್ಪಟ ಸುಳ್ಳುಗಳು!</title>
		<link>https://peepalmedia.com/positive-narrative-on-caa-2019-and-centres-8-lie/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 13 Mar 2024 11:24:49 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[CAA]]></category>
		<category><![CDATA[CAA NRC]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[NRC]]></category>
		<category><![CDATA[peepal]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36965</guid>

					<description><![CDATA[ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ. ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ [&#8230;]]]></description>
										<content:encoded><![CDATA[
<p>ನಿನ್ನೆ, ಮಾರ್ಚ್‌ 12, 2024 ಮಂಗಳವಾರ ಕೇಂದ್ರ ಗೃಹ ಸಚಿವಾಲಯ ಪೌರತ್ವ (ತಿದ್ದುಪಡಿ) ಕಾಯ್ದೆ-2019 ರ ಬಗ್ಗೆ ಎರಡು ಪುಟಗಳ ಒಂದು ಸಕಾರಾತ್ಮಕ ನಿರೂಪಣೆಯೊಂದನ್ನು ಪ್ರಕಟ ಮಾಡಿತ್ತು. ಇದರಲ್ಲಿ ಸಿಎಎ ಬಗ್ಗೆ ಅನೇಕ ಸುಳ್ಳು ಮತ್ತು ಅರ್ಧ ಸತ್ಯಗಳನ್ನು ಹೇಳಲಾಗಿದ್ದು, ಅತ್ಯಂತ ಕಳಪೆಯಾಗಿ ಇದ್ದನ್ನು ಡ್ರಾಫ್ಟ್‌ ಮಾಡಲಾಗಿದೆ.</p>



<p>ಇದನ್ನು ತನ್ನ ಪ್ರೆಸ್‌ ಇನ್‌ಫರ್ಮೇಷನ್‌ ಬ್ಯೂರೋ (Press Information Bureau – PIB) ವೆಬ್‌ಸೈಟಿನಲ್ಲಿ ಪ್ರಕಟ ಮಾಡಿತ್ತು, ಅದರ X ನಲ್ಲಿಯೂ ಪ್ರಕಟ ಮಾಡಲಾಗಿತ್ತು. ಆದರೆ ಈಗ ಇದರ ಅಧಿಕೃತ ಪ್ರತಿಗಳನ್ನು ಅಲ್ಲಿಂದ ಡಿಲಿಟ್‌ ಮಾಡಲಾಗಿದ್ದು, ಎಲ್ಲಿಯೂ ಲಭ್ಯವಿಲ್ಲ!</p>



<p>ಇದನ್ನು ಮಂಗಳವಾರ ಸಂಜೆ 6:43 ಕ್ಕೆ ಪಿಐಬಿ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿ, ಆ ನಂತರ ಡಿಲಿಟ್‌ ಮಾಡಲಾಗಿದೆ. ತನ್ನ X ಖಾತೆಯಲ್ಲಿ CAA Myth Busters ಎಂದು ಪೋಸ್ಟ್‌ ಮಾಡಿತ್ತು, ಅಲ್ಲಿಂದಲೂ ಅದು ಕಾಣೆಯಾಗಿದೆ. Positive Narrative on Citizenship Amendment Act-2019 ಎಂಬ ಈ ಪ್ರಕಟಣೆಯನ್ನು ಯಾಕೆ ಎಲ್ಲಾ ಕಡೆಗಳಿಂದಲೂ ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.</p>



<p>ಈ ಎರಡು ಪುಟಗಳ ಪ್ರಕಟಣೆಯಲ್ಲಿ ಒಟ್ಟು ಎಂಟು ಪ್ರಶ್ನೆಗಳನ್ನು ಹಾಕಿ, ಅವುಗಳಿಗೆ ಉತ್ತರವನ್ನು ನೀಡಲಾಗಿದೆ. ಇದರ ತುಂಬಾ ಮೋದಿಯವರು ತಮ್ಮ ʼಮೇರೆ ಪ್ಯಾರೆ ದೇಶವಾಸಿಯೋ ..ʼಗಳ ತಲೆಗೆ ಸುಳ್ಳುಗಳನ್ನು ತುಂಬಲು ಯತ್ನಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರ ಹಸಿ ಹಸಿ ಸುಳ್ಳುಗಳನ್ನೂ, ಅರ್ಧ ಸತ್ಯಗಳನ್ನೂ ಹೇಳಿದೆ. ಒಟ್ಟಾರೆ ಸಿಎಎ ಬಗ್ಗೆ ಪಾಸಿಟಿವ್‌ ಎಂದು ಕಳಪೆ ನಿರೂಪಣೆಗಳನ್ನು ನೀಡಲಾಗಿದೆ.</p>



<p>ಇಲ್ಲಿ, ಗೃಹ ಸಚಿವಾಲಯದ ಈ ಸುಳ್ಳು ಪ್ರಶ್ನೋತ್ತರಗಳನ್ನು ಭಾಷಾಂತರ ಮಾಡಿ, ವಿಶ್ಲೇಷಣೆ ನಡೆಸಲಾಗಿದ್ದು, ಒಂದೊಂದು ಪ್ರಶ್ನೆಗಳನ್ನೂ ʼಪ್ರಶ್ನಿಸಲಾಗಿದೆʼ. ಈ ಪ್ರಕಟಣೆಯ ಪಿಡಿಎಫ್‌ ಸಂಗ್ರಹಿಸಲಾಗಿದ್ದು ಇಲ್ಲಿ ಓದಿ: <a href="https://www.scribd.com/document/712812911/Positive-narrative-on-Citizenship-Amendment-Act-2019" data-type="link" data-id="https://www.scribd.com/document/712812911/Positive-narrative-on-Citizenship-Amendment-Act-2019">Positive Narrative on Citizenship Amendment Act-2019</a></p>


<div class="wp-block-image">
<figure class="aligncenter size-full is-resized"><img loading="lazy" decoding="async" width="560" height="799" src="https://peepalmedia.com/wp-content/uploads/2024/03/image-5.png" alt="" class="wp-image-36971" style="width:332px;height:auto" srcset="https://peepalmedia.com/wp-content/uploads/2024/03/image-5.png 560w, https://peepalmedia.com/wp-content/uploads/2024/03/image-5-210x300.png 210w, https://peepalmedia.com/wp-content/uploads/2024/03/image-5-150x214.png 150w, https://peepalmedia.com/wp-content/uploads/2024/03/image-5-300x428.png 300w" sizes="auto, (max-width: 560px) 100vw, 560px" /></figure></div>

<div class="wp-block-image">
<figure class="aligncenter size-full is-resized"><img loading="lazy" decoding="async" width="544" height="452" src="https://peepalmedia.com/wp-content/uploads/2024/03/image-6.png" alt="" class="wp-image-36972" style="width:314px;height:auto" srcset="https://peepalmedia.com/wp-content/uploads/2024/03/image-6.png 544w, https://peepalmedia.com/wp-content/uploads/2024/03/image-6-300x249.png 300w, https://peepalmedia.com/wp-content/uploads/2024/03/image-6-150x125.png 150w" sizes="auto, (max-width: 544px) 100vw, 544px" /></figure></div>


<p class="has-text-align-center" style="font-size:20px"><strong><span style="text-decoration: underline;">ಸಿಎಎ-2019 ರ ಬಗ್ಗೆ ಧನಾತ್ಮಕ ನಿರೂಪಣೆ</span></strong></p>



<p class="has-text-align-center">ಪ್ರಕಟಣೆ: 12&nbsp; ಮಾರ್ಚ್‌ 2024 6:43PM, ಪಿಐಬಿ ದೆಹಲಿ</p>



<p>ಸ್ವತಂತ್ರ ನಂತರ ಇತರ ಧರ್ಮದ ಭಾರತೀಯ ನಾಗರಿಕರಂತೆ ತಮ್ಮ ಆಚರಣೆಗಳನ್ನು ನಡೆಸುತ್ತಾ, ಆನಂದದಿಂದ ಬದುಕುತ್ತಿರುವ ಭಾರತೀಯ ಮುಸ್ಲೀಮರು ತಮ್ಮ ಹಕ್ಕುಗಳನ್ನು ಸಂಭ್ರಮಿಸಲು ಅವರ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸದೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾಗಿ ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತವನ್ನು ಪ್ರವೇಶಿಸಿದ ಫಲಾನುಭವಿಗಳಿಗಾಗಿ, ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ CAA (ಪೌರತ್ವ ತಿದ್ದುಪಡಿ ಕಾಯ್ದೆ) 2019 ರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತಾ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಕಡಿಮೆ ಮಾಡಲಾಗಿದೆ.</p>



<p><strong>ಸತ್ಯ ಏನು? </strong>ಇಲ್ಲಿ ಉಲ್ಲೇಖ ಮಾಡಲಾಗಿರುವ &nbsp;“compensation for appeasing their persecution &#8211; ಅವರಿಗಾದ ಕಿರುಕುಳವನ್ನು ಸಮಾಧಾನಪಡಿಸಲು ಪರಿಹಾರವಾಗಿ ” ಎಂದರೆ ಎನು ಎಂಬುದು ಸ್ಪಷ್ಟವಾಗಿಲ್ಲ. ಈ ಹೇಳಿಕೆಯೇ ಆಪ್ರಾಮಾಣಿಕತೆಯಿಂದ ಕೂಡಿದೆ. ಈ ಮೂರು ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರಿಗೆ ಪರಿಹಾರ ನೀಡುತ್ತೇವೆ, “generous treatment – ಉದಾರತೆಯಿಂದ ನಡೆಸಿಕೊಳ್ಳುತ್ತೇವೆ” ಎಂದು ಹೇಳುವ ಕೇಂದ್ರದ ಮುಂದೆ ಕೆಲವು ಪ್ರಶ್ನೆಗಳಿವೆ:</p>



<ol class="wp-block-list">
<li>ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ- ಈ ಮೂರು ದೇಶಗಳಿಂದ ಬಂದವರಿಗೆ ಮಾತ್ರ ಯಾಕೆ ಈ ಸೌಲಭ್ಯ?</li>



<li>ಧಾರ್ಮಿಕ ಕಿರುಕುಳ ಮಾತ್ರ ಯಾಕೆ? ಲಿಂಗಾಧಾರಿತ ಕಿರುಕುಳ, ಜನಾಂಗೀಯ ಕಿರುಕುಳ ಅಥವಾ ರಾಜಕೀಯ ಕಿರುಕುಳ, ವರ್ಣಬೇಧದ ಕಿರುಕುಳ, ಇತ್ಯಾದಿ ಕಿರುಕುಳದಿಂದ ಆ ದೇಶಗಳನ್ನು ಬಿಟ್ಟು ಬಂದವರನ್ನು ಯಾಕೆ ಪರಿಗಣಿಸಿಲ್ಲ?</li>



<li>ಈ ದೇಶಗಳಲ್ಲಿ ಮುಸ್ಲೀಂ ಸಮುದಾಯಕ್ಕೆ ಸೇರಿದ ಕೆಲ ಪಂಗಡಗಳೂ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿವೆ. ಅವುಗಳನ್ನು ಯಾಕೆ ಇಲ್ಲಿ ಸೇರಿಸಿಲ್ಲ?</li>



<li>ಡಿಸೆಂಬರ್ 31, 2014ರಂದು ಮತ್ತು ಅದಕ್ಕೆ ಮೊದಲು ಬಂದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಸ್ಲೀಮರು ಬಿಡಿ, ಆಮೇಲೆ ಸಕಾರಣಗಳನ್ನು ಇಟ್ಟುಕೊಂಡು ಭಾರತಕ್ಕೆ ಬಂದಿರುವ ʼಮುಸ್ಲೀಮೇತರರʼ ಕಥೆ ಏನು? ಅವರನ್ನು ಏನು ಮಾಡುತ್ತೀರಿ? ಮತ್ತು ಅದೇ ದಿನಾಂಕವನ್ನು ಯಾಕೆ ಪರಿಗಣಿಸಲಾಗಿದೆ?</li>
</ol>



<p>ಕೇಂದ್ರದ ಬಳಿ ಈ ಪ್ರಶ್ನೆಗಳಿಗೆ ಉತ್ತರವಿಲ್ಲ!</p>



<p></p>



<p class="has-text-align-center"><strong>***************</strong></p>



<p style="font-size:18px"><strong>ಪ್ರಶ್ನೋತ್ತರಗಳ ವಿಶ್ಲೇಷಣೆ:</strong></p>



<p style="font-size:16px">1. <strong>ಪ್ರಶ್ನೆ: ಭಾರತೀಯ ಮುಸ್ಲಿಮರ ಮೇಲೆ ಕಾಯಿದೆ ಬೀರುವ ಪರಿಣಾಮಗಳೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ: </strong>ಭಾರತೀಯ ಮುಸ್ಲಿಮರು ಈ ಬಗ್ಗೆ ಚಿಂತೆ ಮಾಡಬೇಕಿಲ್ಲ, ಏಕೆಂದರೆ ಸಿಎಎ ಅವರ ಪೌರತ್ವದ ಮೇಲೆ ಪರಿಣಾಮ ಬೀರಬಲ್ಲ ಯಾವುದೇ ನಿಬಂಧನೆಯನ್ನು ಹೊಂದಿಲ್ಲ ಮತ್ತು ಇದು ಪ್ರಸ್ತುತ ದೇಶದಲ್ಲಿರುವ 18 ಕೋಟಿ ಮುಸ್ಲಿಮರಿಗೆ ಯಾವುದೇ ರೀತಿಯಲ್ಲೂ ಸಂಬಂಧ ಪಟ್ಟಿಲ್ಲ. ಅವರು ತಮ್ಮ ಹಿಂದೂ ಸಹ-ನಾಗರಿಕರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಈ ಕಾಯಿದೆ ಯಾವುದೇ ಭಾರತೀಯ ನಾಗರಿಕನೂ ತನ್ನ ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಯನ್ನು ನೀಡಬೇಕೆಂದು ಹೇಳುವುದಿಲ್ಲ.</p>



<p><strong>ನಿಜ ಏನು? </strong>ನಿರಾಶ್ರಿತರು ಮತ್ತು ನುಸುಳುಕೋರರ ಬಗೆಗಿನ ಮೋದಿ ಸರ್ಕಾರದ ನೀತಿಗಳ ವಿಚಾರದಲ್ಲಿ ಒಂದು ‘ಕ್ರೊನೋಲಜಿʼ  ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವ ಅಮಿತ್ ಶಾ ಈ ಹಿಂದೆ ಅನೇಕ ಬಾರಿ ಹೇಳಿದ್ದರು. 2019ರ ಎಪ್ರಿಲ್‌ನಲ್ಲಿ, “ಮೊದಲು ನಾವು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ತರುತ್ತೇವೆ, ಪ್ರತಿಯೊಬ್ಬ ನಿರಾಶ್ರಿತರಿಗೂ ಪೌರತ್ವ ಸಿಗುತ್ತದೆ ಮತ್ತು ಅದರ ನಂತರ ನಾವು ನಾಗರಿಕರ ರಾಷ್ಟ್ರೀಯ ನೋಂದಣಿಯನ್ನು ತರುತ್ತೇವೆ. ಆದ್ದರಿಂದ ನಿರಾಶ್ರಿತರು ಚಿಂತಿಸಲು ಯಾವುದೇ ಕಾರಣವಿಲ್ಲ. ಆದರೆ ನುಸುಳುಕೋರರು ಖಂಡಿತವಾಗಿಯೂ ಚಿಂತೆಯಾಬೇಕು, ಅವರಲ್ಲಿ ಒಂದು ಕಾರಣವಿದೆ. ಆದ್ದರಿಂದ ಕ್ರೊನೋಲಜಿಯನ್ನು ಅರ್ಥಮಾಡಿಕೊಳ್ಳಿ,” ಎಂದು ಹೇಳಿದ್ದರು. “ಕ್ರೊನೋಲಜಿ ಸಮಜಿಯೇ” ಎಂಬ ಶಾ ಭಾಷಣದ ಈ ವಿಡಿಯೋ ತುಂಬಾ ವೈರಲ್‌ ಆಗಿತ್ತು. &#8220;ಎನ್‌ಆರ್‌ಸಿ ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಇರುತ್ತದೆ, ಏಕೆಂದರೆ &#8220;ಎಲ್ಲೆಡೆ ನುಸುಳುಕೋರರು ತುಂಬಿದ್ದಾರೆ,&#8221; ಎಂದು ಅವರು ಹೇಳಿದ್ದರು. ಡಿಸೆಂಬರ್ 10, 2019 ರಂದು ಸಂಸತ್ತಿನಲ್ಲಿ NRC ಖಂಡಿತವಾಗಿಯೂ ಬರಲಿದೆ ಮತ್ತು ಅದನ್ನು ಜಾರಿಗೆ ತಂದಾಗ &#8220;ಒಬ್ಬ ನುಸುಳುಕೋರನಿಗೂ ಉಳಿಗಾಲವಿಲ್ಲ,” ಎಂದು ಅಮಿತ್‌ ಶಾ ಹೇಳಿದ್ದರು.</p>



<p>ಅಂದರೆ, ಶಾ ಹೇಳಿದ್ದು, ಎನ್‌ಆರ್‌ಸಿ ಒಂದು ಪ್ರಕ್ರಿಯೆ, &nbsp;ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪೌರತ್ವವನ್ನು ಅವರು ಒದಗಿಸುವ ದಾಖಲೆಗಳ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ. ಎನ್‌ಆರ್‌ಸಿಯನ್ನು ಮೊದಲು ಜಾರಿಗೆ ತಂದ ಅಸ್ಸಾಂನಲ್ಲಿ ಅದು ಉಂಟುಮಾಡಿದ ಅಪಾಯಗಳು ನಮ್ಮ ಕಣ್ಣ ಮುಂದೆ ಇವೆ. ಅಸ್ಸಾಮಿನಲ್ಲಿ ಸರಿಯಾದ ದಾಖಲೆಗಳನ್ನು ನೀಡಿ ಸಾಬೀತು ಮಾಡಲಾಗದ ಸುಮಾರು 19 ಲಕ್ಷ ಜನರನ್ನು ಭಾರತೀಯ ನಾಗರಿಕರೆಂದು ಪರಿಗಣಿಸದೆ ಹೊರಗಿಡಲಾಗಿದೆ. ಇವರಲ್ಲಿ ಬಹುತೇಕರು ಹಿಂದೂಗಳು.</p>



<p>ಸಿಎಎ ಹಿಂದಿನ ಉದ್ದೇಶವೆಂದರೆ, ಎನ್‌ಆರ್‌ಸಿಯಲ್ಲಿ ದಾಖಲೆ ನೀಡಲಾಗದೆ ಪೌರತ್ವದಿಂದ ಹೊರಗಿಡಲ್ಪಟ್ಟ ಹಿಂದೂಗಳಿಗೆ ಸಿಎಎ ಪೌರತ್ವ ನೀಡುತ್ತದೆ. ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ವಿಫಲರಾದ ಮುಸ್ಲಿಮರಿಗೆ ಯಾವುದೇ ಮಾರ್ಗವಿಲ್ಲ. ಅವರನ್ನು &#8216;ನುಸುಳುಕೋರರು&#8217; ಎಂದು ಬ್ರಾಂಡ್ ಮಾಡಿ ಹಿಂಸಿಸುವ ಸಾಧ್ಯತೆಗಳಿವೆ.</p>



<p>ಆದ್ದರಿಂದ ಸದ್ಯ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಈ ‌ʼಪಾಸಿಟಿವ್ ನರೇಟಿವ್‌ʼ ಪ್ರಕಟಣೆಯಲ್ಲಿ ಹೇಳಿರುವುದಕ್ಕೆ ಅರ್ಥವಿಲ್ಲ, ಅದೊಂದು ಸುಳ್ಳು. ಸದ್ಯ ಎನ್‌ಆರ್‌ಸಿಯನ್ನು ಜಾರಿಗೆ ತರುವ ತನ್ನ ಯೋಜನೆಗಳನ್ನು ಮೋದಿ ಸರ್ಕಾರ ಕೈಬಿಟ್ಟಿದ್ದರೂ, ಭಾರತೀಯ ಮುಸ್ಲಿಮರು ತಮ್ಮ ಪೌರತ್ವದ ಮೇಲೆ ಸಿಎಎ ಪರಿಣಾಮ ಬೀರುತ್ತದೆ ಎಂದು ಚಿಂತೆ ಮಾಡಬೇಡಿ ಎಂದಿರುವುದರಲ್ಲಿ ಸತ್ಯವೇ ಇಲ್ಲ.</p>



<p>ಈಗ, ಭಾರತದ ಮುಸ್ಲೀಂ ಮತ್ತು ಹಿಂದೂ ಮಹಿಳೆಯರಿಬ್ಬರು ದಾಖಲೆ ಇಲ್ಲದ ಎಂದೋ ಹಿಂದೆ ಬಾಂಗ್ಲಾದಿಂದ ಬಂದಿರುವ ಅವರದೇ ಧರ್ಮದ ಪುರುಷರನ್ನು ಮದುವೆ ಆಗಿತ್ತಾರೆ ಎಂದುಕೊಳ್ಳಿ. ತಿದ್ದುಪಡಿ ಮಾಡದ ಪೌರತ್ವ ಕಾಯ್ದೆಯಡಿಯಲ್ಲಿ ತಾಯಂದಿರು ಭಾರತೀಯರಾದರೂ ಅವರ ಮಕ್ಕಳನ್ನು &#8216;ಅಕ್ರಮ ವಲಸಿಗರು&#8217; ಎಂದು ಪರಿಗಣಿಸಲಾಗುತ್ತದೆ ಮತ್ತು ಮಕ್ಕಳನ್ನು ಅವರ ತಂದೆಯೊಂದಿಗೆ ಗಡೀಪಾರು ಮಾಡಬೇಕಾಗುತ್ತದೆ. ಒಂದು ವೇಳೆ CAA ಈ ಹಿಂದೂ ಕುಟುಂಬಕ್ಕೆ ಭಾರತದಲ್ಲಿ ಬದುಕಲು ಅವಕಾಶ ನೀಡಿದರೂ, ಮುಸ್ಲೀಂ ಮಹಿಳೆ ಮಾತ್ರ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಾಕ್ಕೆ ಕಳಿಸಬೇಕಾಗುತ್ತದೆ. ಆಕೆಗೆ ಇರುವ ಎರಡು ಅವಕಾಶಗಳೆಂದರೆ: ಒಂದೋ ತನ್ನ ಕುಟುಂಬದ ಜೊತೆಗೆ ಭಾರತವನ್ನು ಬಿಡಬೇಕು, ಇಲ್ಲವೇ ತನ್ನ ಪತಿ ಮತ್ತು ಮಕ್ಕಳನ್ನು ಬಾಂಗ್ಲಕ್ಕೆ ಕಳುಹಿಸಿ ಒಂಟಿಯಾಗಿ ಭಾರತದಲ್ಲೇ ಬದುಕಬೇಕು.</p>



<p style="font-size:16px"><strong>2. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಕ್ಕೆ ಈ ಅಕ್ರಮ ಮುಸ್ಲಿಂ ವಲಸಿಗರನ್ನು ವಾಪಸು ಕಳುಹಿಸಲು ಯಾವುದೇ ನಿಬಂಧನೆ ಅಥವಾ ಒಪ್ಪಂದವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಮುಸ್ಲೀಂ ವಲಸಿಗರನ್ನು ಈ ದೇಶಗಳಿಗೆ ಮರಳಿ ಕಳುಹಿಸಲು ಭಾರತ ಈ ದೇಶಗಳೊಂದಿಗೆ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಈ ಪೌರತ್ವ ಕಾಯ್ದೆಗೂ ಅಕ್ರಮ ವಲಸಿಗರ ಗಡೀಪಾರಿಗೂ ಯಾವುದೇ ಸಂಬಂಧ ಇಲ್ಲ. ಆದ್ದರಿಂದ ಸಿಎಎ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಹಾಗೂ ಒಂದು ವರ್ಗದ ಜನರ ವಾದಕ್ಕೆ ಅರ್ಥವಿಲ್ಲ. </p>



<p><strong>ನಿಜ ಏನು?</strong> ಇದೊಂದು ಭಯಂಕರ ಮೋಸ ಮತ್ತು ಹಸಿಹಸಿ ಸುಳ್ಳು. ಭಾರತದಲ್ಲಿ <a href="https://www.indiacode.nic.in/bitstream/123456789/2259/3/A1946-31.pdf" data-type="link" data-id="https://www.indiacode.nic.in/bitstream/123456789/2259/3/A1946-31.pdf">ವಿದೇಶಿಯರ ಕಾಯಿದೆ (ವಿಭಾಗ 3)</a> &#8211; Foreigners Act (Section 3) &nbsp;ಮತ್ತು <a href="https://www.mha.gov.in/PDF_Other/act1920_17042017.pdf" data-type="link" data-id="https://www.mha.gov.in/PDF_Other/act1920_17042017.pdf">ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ</a> (ವಿಭಾಗ 5) &#8211; Passport (Entry into India) Act (Section 5) ಎಂಬ ಎರಡು ಕಾಯಿದೆಗಳಿವೆ. ಇವು ಭಾರತದಲ್ಲಿ ಅಕ್ರಮವಾಗಿ ವಾಸಿಸುವವರನ್ನು ಗಡಿಪಾಡು ಮಾಡಲು ಸರ್ಕಾರಕ್ಕೆ ಅಧಿಕಾರವನ್ನು ನೀಡಿವೆ. ಈಗಾಗಲೇ ದೇಶದಲ್ಲಿ ಅಕ್ರಮವಾಗಿ ತಂಗಿದ್ದಾರೆ ಎಂದು ಕಂಡುಬಂದಿರುವ ವ್ಯಕ್ತಿಗಳನ್ನು ಗಡೀಪಾರು ಮಾಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.</p>



<p>ಆ ವ್ಯಕ್ತಿಯನ್ನು ಆತನ ದೇಶಕ್ಕೆ ಗಡಿಪಾರು ಮಾಡಲು ಯಾವುದೇ ಒಪ್ಪಂದಗಳು ಇಲ್ಲದೇ ಇದ್ದಾಗ, ಆತನಿಗೆ ಜೈಲು ಶಿಕ್ಷೆ ನೀಡಲಾಗುತ್ತದೆ ಅಥವಾ ಡಿಟೆನ್ಷನ್‌ ಕ್ಯಾಂಪ್‌ಗೆ ಹಾಕಲಾಗುತ್ತದೆ. ಈ ಎರಡು ಕಾಯಿದೆಗಳನ್ನು ಬಳಸುವುದಿಲ್ಲ ಎಂಬುದು ಯಾವ ಗ್ಯಾರಂಟಿ? ಒಂದು ವೇಳೆ ʼಅಕ್ರಮ ವಲಸಿಗ ಮುಸ್ಲೀಮರನ್ನುʼ ಜೈಲು ಅಥವಾ ಡಿಟೆನ್ಸಷನ್‌ ಕ್ಯಾಂಪಿಗೆ ಹಾಕದೇ ಇದ್ದರೂ, ಅವರ ಮತದಾನದ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ.</p>



<p style="font-size:16px"><strong>3. ಅಕ್ರಮ ವಲಸಿಗ ಎಂದರೆ ಯಾರು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಪೌರತ್ವ ಕಾಯ್ದೆ, 1955 ರಂತೆ, ಈ ಸಿಎಎ ಕೂಡ ಕಾನೂನುಬಾಹಿರ ವಲಸಿಗರನ್ನು ಮಾನ್ಯತೆ ಇರುವ ಯಾವುದೇ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿರುವ ವಿದೇಶಿ ಎಂದು ಪರಿಗಣಿಸುತ್ತದೆ.</p>



<p><strong>ನಿಜ ಏನು?</strong> 2003 ರಲ್ಲಿ <a href="https://www.refworld.org/legal/legislation/natlegbod/2004/en/14043" data-type="link" data-id="https://www.refworld.org/legal/legislation/natlegbod/2004/en/14043">ವಾಜಪೇಯಿ ಸರ್ಕಾರವು &#8216;ಅಕ್ರಮ ವಲಸಿಗರು&#8217; ನ್ಯಾಚುರಲೈಸೇಷನ್ </a>ಅಥವಾ ಮದುವೆಯ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಲು ಪೌರತ್ವ ಕಾಯ್ದೆಯಲ್ಲಿ ತಿದ್ದುಪಡಿ ತಂದಿತು . 2016 ರಲ್ಲಿ ಮೋದಿ ಸರ್ಕಾರವು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬಂದಿರುವ ಮುಸ್ಲಿಮೇತರ &#8216;ಅಕ್ರಮ ವಲಸಿಗರನ್ನು&#8217; ಈ ಕಾನೂನಿನಿಂದ ಹೊರಗಿಡಲು <a href="https://prsindia.org/billtrack/the-citizenship-amendment-bill-2016" data-type="link" data-id="https://prsindia.org/billtrack/the-citizenship-amendment-bill-2016">ಕಾಯಿದೆಯಲ್ಲಿ ತಿದ್ದುಪಡಿ</a>ಯನ್ನು ಮಾಡಿತು. ಇದು ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ʼಅಕ್ರಮ ವಲಸಿಗ ಹಿಂದೂಗಳಿಗೆʼ ವಿನಾಯಿತಿಯನ್ನು ನೀಡಿದೆ. CAA-2019 ಈಗ ಇದನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ಅವರ ಪೌರತ್ವದ ಟ್ರ್ಯಾಕಿಂಗ್ ಮಾಡುವ ಪ್ರಕ್ರಿಯೆಗೆ ವೇಗವನ್ನು ನೀಡಿದೆ. &nbsp;</p>



<p>ಸರಳವಾಗಿ ಹೇಳುವುದಾದರೆ, ಡಿಸೆಂಬರ್ 31, 2014 ರವರೆಗೆ ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತಕ್ಕೆ ಬಂದಿರುವ ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ಅಫ್ಘಾನಿಸ್ತಾನದ ಮುಸ್ಲೀಮರನ್ನು ಮಾತ್ರ ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುತ್ತದೆ, ಮುಸ್ಲೀಮೇತರರನ್ನು ಅಲ್ಲ! ಧರ್ಮದ ಆಧಾರದ ಮೇಲೆ ಮಾಡುವ ಈ ತಾರತಮ್ಯ ಭಾರತೀಯ ಸಂವಿಧಾನಕ್ಕೆ ವಿರುದ್ಧವಾಗಿದೆ. ಇದು ಸಂವಿಧಾನದ ಆರ್ಟಿಕಲ್‌ 26ವನ್ನು ಉಲ್ಲಂಘಿಸುತ್ತದೆ.</p>



<p style="font-size:16px"><strong>4. ಇಸ್ಲಾಂ ಮೇಲೆ ಈ ಕಾಯಿದೆ ಬೀರುವ ಪ್ರಭಾವವೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ: </strong>ಆ ಮೂರು ಮುಸ್ಲಿಂ ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ (ಮುಸ್ಲೀಮೇತರ) ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದಾಗಿ ಇಸ್ಲಾಂ ಧರ್ಮಕ್ಕೆ ಪ್ರಪಂಚದಾದ್ಯಂತ ಕೆಟ್ಟ ಕಳಂಕ ಬಂದಿದೆ. ಎಷ್ಟೇ ಆದರೂ ಇಸ್ಲಾಂ ಒಂದು ಶಾಂತಿಯುತ ಧರ್ಮ, ಧಾರ್ಮಿಕತೆಯ ಆಧಾರದಲ್ಲಿ ದ್ವೇಷ/ಹಿಂಸೆ/ ಕಿರುಕುಳ ನೀಡುವುದನ್ನು ಅದು ಎಂದಿಗೂ ಬೋಧಿಸುವುದಿಲ್ಲ. ಈ ಶೋಷಣೆಗೆ ಸಹಾನುಭೂತಿ ಮತ್ತು ಪರಿಹಾರವನ್ನು ನೀಡಲು ತಂದಿರುವ ಈ ಕಾಯಿದೆ ಇಸ್ಲಾಂ ಧರ್ಮವನ್ನು ಈ ಕಳಂಕದಿಂದ ರಕ್ಷಿಸುತ್ತದೆ. </p>



<p><strong>ನಿಜ ಏನು?</strong> ಧಾರ್ಮಿಕತೆಯ ಕಾರಣಕ್ಕೆ ಕಿರುಕುಳಕ್ಕೆ ಒಳಗಾದವರನ್ನು ಮುಸ್ಲೀಂ ರಾಷ್ಟ್ರಗಳಿಂದ ಮಾತ್ರ ಯಾಕೆ ಎತ್ತಿಕೊಳ್ಳಲಾಗಿದೆ ಎಂಬುದು ಅರ್ಥವಾಗಿಲ್ಲ. ಇಲ್ಲಿ ಮುಸ್ಲಿಮೇತರ ನೆರೆಯ ರಾಷ್ಟ್ರಗಳಾದ ಮ್ಯಾನ್ಮಾರ್, ಚೀನಾ ಮತ್ತು ಶ್ರೀಲಂಕಾದಲ್ಲಿ ದೌರ್ಜನ್ಯಕ್ಕೆ ಒಳಗಾದ ಮುಸ್ಲೀಮೇತರರಿಗೆ ಅವಕಾಶ ಇಲ್ಲವೇ? ಮುಸ್ಲಿಂ ರಾಷ್ಟ್ರಗಳಲ್ಲಿ ನಡೆದ ಶೋಷಣೆಯಲ್ಲಿ ಮಾತ್ರ ಏನು ಸ್ಪೆಷಾಲಿಟಿ ಇದೆ ಎಂಬುದನ್ನು ಕೇಂದ್ರ ವಿವರಿಸಿಲ್ಲ. ಈಗ ಚೀನಾದಲ್ಲಿ ಓರ್ವ ಹಿಂದೂವಿನ ಮೇಲೆ ದೌರ್ಜನ್ಯವಾದರೆ ಆತ ಏನು ಮಾಡಬೇಕು? ಇದಕ್ಕಾಗಿ ಕೇಂದ್ರ ಬೇರೆಯದೇ ಕಾನೂನನ್ನು ತರುತ್ತದೆಯೇ? &nbsp;ತಾನು ಕಳಂಕದಿಂದ ರಕ್ಷಿಸಲು ಹೊರಟಿರುವ ʼಇಸ್ಲಾಂʼನಿಂದ ಮುಸ್ಲೀಮರನ್ನು ಬೇರೆಯಾಗಿ ಕೇಂದ್ರ ಹೇಗೆ ನೋಡುತ್ತದೆ? </p>



<p>ಸಿಎಎ ಇಸ್ಲಾಂ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಇಟ್ಟುಕೊಳ್ಳೋಣ, ಆದರೆ ಇದು ನಮ್ಮ ʼಐಡಿಯಾ ಆಫ್‌ ಇಂಡಿಯಾʼ, ಭಾರತದ ಎಲ್ಲರನ್ನೂ ಒಳಗೊಂಡು ಬೆಳೆಯುವ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ದವಾಗಿದೆ. ಭಾರತ ಮೂರು ಸಾವಿರ ವರ್ಷಗಳ ಹಿಂದಿನಿಂದಲೂ ಲೆಕ್ಕವಿಲ್ಲದಷ್ಟು ಜನಾಂಗಗಳಿಗೆ ನೆಲೆಯನ್ನು ನೀಡಿದೆ. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಮನುಷ್ಯನ ಪೌರತ್ವವನ್ನು, ಬದುಕುವ ಹಕ್ಕನ್ನು ಹತ್ತಿಕ್ಕಲು ಧರ್ಮವನ್ನು ಮಾನದಂಡವಾಗಿ ಬಳಸಿದೆ, ಇದು ಭಾರತದ ಸಂಸ್ಕೃತಿ, ಮೌಲ್ಯಗಳಿಗೆ ಬಗೆದ ದ್ರೋಹ.</p>



<p style="font-size:16px"><strong>5. ಭಾರತದ ಪೌರತ್ವ ಪಡೆಯಲು ಮುಸ್ಲಿಮರಿಗೆ ನಿರ್ಬಂಧವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಇಲ್ಲ, ಪೌರತ್ವ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ಭಾರತದ ಪೌರತ್ವವನ್ನು ಪಡೆಯಲು ಜಗತ್ತಿನ ಯಾವ ಮೂಲೆಯಿಂದಾದ ಮುಸ್ಲೀಮರು ಬಂದರೂ, ಅವರಿಗೆ ಯಾವುದೇ ನಿರ್ಬಂಧವಿಲ್ಲ, ಪೌರತ್ವವನ್ನು ನ್ಯಾಚುರಲೈಸೇಷನ್‌ ಆಧಾರದಲ್ಲಿ ನೀಡಲಾಗುತ್ತದೆ.</p>



<p><strong>ನಿಜ ಏನು?</strong> 2003 ರಿಂದ ಪೌರತ್ವ ಕಾಯಿದೆಯು ಅಕ್ರಮ ವಲಸಿಗರಾಗಿರುವ ಯಾರೇ ಆದರೂ ಭಾರತದ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿರ್ಬಂಧಿಸುತ್ತದೆ. ಆದರೆ, ಈ ಸಿಎಎ ಮಾತ್ರ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದಿರುವ ʼಮುಸ್ಲಿಮೇತರ ಅಕ್ರಮ ವಲಸಿಗರಿಗೆʼ ಮತ್ತು ಅವರಿಗೆ ಭಾರತದಲ್ಲಿ ಹುಟ್ಟಿದ ಅವರ ಮಕ್ಕಳಿಗೆ ಭಾರತದ ಪೌರತ್ವವನ್ನು ಪಡೆಯಲು ಅವಕಾಶ ನೀಡುತ್ತದೆ. ಆದರೆ ಅಕ್ರಮ ವಲಸಿಗರು ಮುಸ್ಲೀಮರಾದರೆ, ಅವರಿಗೆ ಇದು ಸಾಧ್ಯವಿಲ್ಲ. </p>



<p style="font-size:16px"><strong>6. ಈ ತಿದ್ದುಪಡಿಯ ಅಗತ್ಯವೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಆ ಮೂರು ದೇಶಗಳಲ್ಲಿ ಕಿರುಕುಳಕ್ಕೊಳಗಾಗಿರುವ (ಮುಸ್ಲೀಮೇತರ) ಅಲ್ಪಸಂಖ್ಯಾತರಿಗೆ ಕರುಣೆ ತೋರಿಸಲು, ಈ ಕಾಯಿದೆಯು ಭಾರತದ ಉದಾರ ಸಂಸ್ಕೃತಿಯ ಪ್ರಕಾರ ಅವರ ಸಂತೋಷ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತೀಯ ಪೌರತ್ವವನ್ನು ಪಡೆಯಲು ಅವರಿಗೆ ಅವಕಾಶವನ್ನು ನೀಡುತ್ತದೆ. ಪೌರತ್ವ ವ್ಯವಸ್ಥೆಯನ್ನು ಕಸ್ಟಮೈಸ್ ಮಾಡಲು ಮತ್ತು ಅಕ್ರಮ ವಲಸಿಗರನ್ನು ನಿಯಂತ್ರಿಸಲು ಈ ಕಾಯಿದೆಯ ಅಗತ್ಯವಿದೆ.</p>



<p><strong>ನಿಜ ಏನು?</strong> ಕಿರುಕುಳಕ್ಕೊಳಗಾದ ಜನರಿಗೆ ಈ ಮಟ್ಟಿಗೆ ಔದಾರ್ಯ ತೋರಿಸಲು ಧರ್ಮ ಆಧಾರಿತ ವಿನಾಯಿತಿಯನ್ನು ನೀಡುವ ಅಗತ್ಯವಿರಲಿಲ್ಲ. ತಮ್ಮ ಮೂಲದ ದೇಶದಲ್ಲಿ ಶೋಷಣೆಗೆ ಒಳಗಾಗುವ ಭಯವನ್ನು ಹೊಂದಿರುವ ಯಾವುದೇ ಅಕ್ರಮ ವಲಸಿಗರಿಗೆ ಭಾರತದಲ್ಲಿ ಅನಿರ್ದಿಷ್ಟಾವಧಿಯ ವರೆಗೆ ಉಳಿಯಲು ಅನುಮತಿ ನೀಡಲಾಗುವುದು ಮತ್ತು ಸರಿಯಾದ ಸಮಯ ಸಂದರ್ಭದಲ್ಲಿ ಅವರು ಭಾರತೀಯ ಪೌರತ್ವಕ್ಕೆ ಅರ್ಹರಾಗುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಬೇಕಾಗಿತ್ತು. ಈ ರೀತಿಯೇ ಬೇರೆಲ್ಲಾ ದೇಶಗಳು ತಮ್ಮಲ್ಲಿ ಇರುವ ನಿರಾಶ್ರಿತರನ್ನು ʼನ್ಯಾಚುರಲೈಸ್‌ʼ ಮಾಡುವುದು, ಇದಕ್ಕೆ ನಿರಾಶ್ರಿತನ ಧರ್ಮವನ್ನು ನೀಡುವ ಅಗತ್ಯವಿಲ್ಲ.</p>



<p style="font-size:16px"><strong>7. ಸರ್ಕಾರ ತೆಗೆದುಕೊಂಡಿರುವ ಹಿಂದಿನ ಕ್ರಮಗಳೇನು?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> 2016 ರಲ್ಲಿ ಕೇಂದ್ರ ಸರ್ಕಾರ ಆ ಮೂರು ದೇಶಗಳ ಅಲ್ಪಸಂಖ್ಯಾತರನ್ನು ಭಾರತದಲ್ಲಿ ಉಳಿಯಲು ಬೇಕಾದ ದೀರ್ಘಾವಧಿ ವೀಸಾವನ್ನು ಪಡೆಯಲು ಅರ್ಹರನ್ನಾಗಿ ಮಾಡಿದೆ.</p>



<p><strong>ಸತ್ಯ ಏನು? </strong>&nbsp;ಆದರೆ ಕೇಂದ್ರ ಕೆಲವು ವಿಚಾರಗಳನ್ನು ಮರೆತಂತಿದೆ. ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಆಡಳಿತದಿಂದ ಪಲಾಯನ ಮಾಡಿ ಭಾರತಕ್ಕೆ ಬರಲು ಬಯಸಿದ ಸಿಖ್‌ಗಳಿಗೆ ಭಾರತದ ವೀಸಾ ಸಿಗುವುದು ಸುಲಭವಿರಲಿಲ್ಲ. <a href="https://www.hindustantimes.com/world-news/hed-not-have-died-this-brutally-had-wife-of-sikh-man-killed-in-kabul-attack-101655656793779.html" data-type="link" data-id="https://www.hindustantimes.com/world-news/hed-not-have-died-this-brutally-had-wife-of-sikh-man-killed-in-kabul-attack-101655656793779.html">ಕಾಬೂಲ್‌ನಲ್ಲಿ ಭಯೋತ್ಪಾದಕರಿಂದ ಹತ್ಯೆಯಾದ ಸಿಖ್ ವ್ಯಕ್ತಿ</a>ಗೆ ಭಾರತ ವೀಸಾವನ್ನೇ ನೀಡಿರಲಿಲ್ಲ. 2021-22ರಲ್ಲಿ ಭಾರತದಲ್ಲಿ ಉಳಿಯಲು ಬಯಸಿದ <a href="https://timesofindia.indiatimes.com/city/jaipur/no-indian-citizenship-1500-pak-hindus-return-in-18-mths/articleshow/93699054.cms" data-type="link" data-id="https://timesofindia.indiatimes.com/city/jaipur/no-indian-citizenship-1500-pak-hindus-return-in-18-mths/articleshow/93699054.cms">1500 ಪಾಕಿಸ್ತಾನಿ ಹಿಂದೂಗಳು </a>ಭಾರತ ಸರ್ಕಾರ ಉಂಟು ಮಾಡಿದ ಒತ್ತಡ ಮತ್ತು ಅನೇಕ ಅಡೆತಡೆಗಳಿಂದಾಗಿ ಮರಳಿ ಪಾಕಿಸ್ತಾನಕ್ಕೆ ಹೋಗಬೇಕಾಯ್ತು. ಮ್ಯಾನ್ಮಾರ್‌ನಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಪಲಾಯನ ಮಾಡಿದ ರೋಹಿಂಗ್ಯಾಗಳನ್ನು ಭಾರತ ಸರ್ಕಾರ ಗಡಿಪಾರು ಮಾಡಿದೆ.</p>



<p style="font-size:16px"><strong>8. ಯಾವುದೇ ವಿದೇಶಿ ದೇಶದಿಂದ ಬರುವ ಮುಸ್ಲಿಂ ವಲಸಿಗರಿಗೆ ಯಾವುದಾದರೂ ನಿರ್ಬಂಧವಿದೆಯೇ?</strong></p>



<p><strong>ಗೃಹ ಸಚಿವಾಲಯದ ಉತ್ತರ:</strong> ಸಿಎಎ ನ್ಯಾಚುರಲೈಸೇಷನ್‌ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ, ಯಾವುದೇ&nbsp;ದೇಶದಿಂದ ವಲಸೆ ಬಂದಿರುವ ಮುಸಲ್ಮಾನ ಸೇರಿದಂತೆ ಯಾವುದೇ ವ್ಯಕ್ತಿ ಭಾರತೀಯ ಪ್ರಜೆಯಾಗಲು ಬಯಸಿದರೆ, ಆತ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಕಾಯಿದೆಯು ಆ ಮೂರು ಇಸ್ಲಾಮಿಕ್ ದೇಶಗಳಲ್ಲಿ ತಮ್ಮ ರೀತಿಯ ಇಸ್ಲಾಂ ಪದ್ದತಿಗಳನ್ನು ಅನುಸರಿಸಿದ ಕಾರಣಕ್ಕೆ ಕಿರುಕುಳಕ್ಕೊಳಗಾದ ಯಾವುದೇ ಮುಸಲ್ಮಾನನ್ನು ಸದ್ಯ ಇರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದನ್ನು ತಡೆಯುವುದಿಲ್ಲ. </p>



<p><strong>ನಿಜ ಏನು? &nbsp;</strong>ಈ ಉತ್ತರವನ್ನು ನೋಡಿ, ಕೇಂದ್ರಕ್ಕೆ ಒಂದು ವಿಚಾರ ಚೆನ್ನಾಗಿ ತಿಳಿದಂತಿದೆ: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಮುಸ್ಲಿಮರು ತಮ್ಮದೇ ಆದ ಭಿನ್ನ ಇಸ್ಲಾಂ ಸಂಸ್ಕೃತಿಯನ್ನು (ಡಿಫರೆಂಟ್‌ ವರ್ಷನ್‌ ಆಫ್‌ ಇಸ್ಲಾಂ) ಅನುಸರಿಸಿದ ಕಾರಣಕ್ಕೆ ಅಲ್ಲಿ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು. ಆದರೆ ಅವರು ಮಾನ್ಯತೆ ಇರುವ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದರೆ ಅಥವಾ ವೀಸಾದ ಅವಧಿಯನ್ನು ಮೀರಿದರೆ ಅವರು ಸಹಜವಾಗಿಯೇ &nbsp;ಅಕ್ರಮ ವಲಸಿಗರು ಎಂದು ಪರಿಗಣಿಸಲ್ಪಡುತ್ತಾರೆ.&nbsp;ಹೀಗಾಗಿ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅವರು ಅನರ್ಹರಾಗುತ್ತಾರೆ. ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅವರಿಗೆ ಸಾಧ್ಯವಿಲ್ಲ.</p>



<p>ಇವಿಷ್ಟು ಕೇಂದ್ರ ಸರ್ಕಾರದ ಅರೆಬೆಂದ ಸುಳ್ಳುಗಳಿಂದ ತುಂಬಿರುವ, ಜನರ ದಿಕ್ಕು ತಪ್ಪಿಸಲೆಂದೇ ಪ್ರಕಟ ಮಾಡಿರುವ ಸಿಎಎಯ ಬಗ್ಗೆ ಧನಾತ್ಮಕ ನಿರೂಪಣೆ. ಆದರೆ, ಇದನ್ನು ಪ್ರಕಟಿಸಿ ದಿನ ಒಂದು ಕಳೆಯುವ ಮೊದಲೇ ತೆಗೆದು ಹಾಕಿದ್ದಾರೆ. ಇದರಲ್ಲಿ ಇರುವ ಸುಳ್ಳು ಕೇಂದ್ರಕ್ಕೆ ಗೊತ್ತಿದೆ. ಜನ ಬುದ್ದಿವಂತರಾಗಿ, ಈ ಸುಳ್ಳು ಪ್ರಶ್ನೋತ್ತರಾವಳಿಯನ್ನು ವಿಶ್ಲೇಷಣೆ ಮಾಡಿದರೆ ಕೇಂದ್ರದ ಕಪಟ ತಂತ್ರ ಹೊರಗೆ ಬರುತ್ತದೆ ಎಂಬುದು ಅದಕ್ಕೆ ಗೊತ್ತಾಗಿದೆ, ಹಾಗಾಗಿ ಡಿಲಿಟ್‌ ಮಾಡಿದ್ದಾರೆ&#8230;ಅಷ್ಟೇ!</p>
]]></content:encoded>
					
		
		
			</item>
		<item>
		<title>ಸಿಎಎ ಜಾರಿಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ: ಅಮಿತ್‌ ಶಾ</title>
		<link>https://peepalmedia.com/no-one-can-stop-implimenting-caa-amith-shah/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 27 Dec 2023 09:59:35 +0000</pubDate>
				<category><![CDATA[ದೇಶ]]></category>
		<category><![CDATA[ರಾಜಕೀಯ]]></category>
		<category><![CDATA[amit shah]]></category>
		<category><![CDATA[breaking news]]></category>
		<category><![CDATA[CAA]]></category>
		<category><![CDATA[CAA NRC]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mamta banarjee]]></category>
		<category><![CDATA[news]]></category>
		<category><![CDATA[NRC]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[priyank kharge]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=34112</guid>

					<description><![CDATA[ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ, 2019, ದೇಶದ ಕಾನೂನು ಮತ್ತು ಅದು ಜಾರಿಯಾಗುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ವಿಚಾರದಲ್ಲಿ ನಾಗರಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. &#8220;ಇದು ನಮ್ಮ ಪಕ್ಷದ ಬದ್ಧತೆ&#8221; ಎಂದು ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸದಸ್ಯರ ಸಭೆಯಲ್ಲಿ &#8220;ಜೈ ಸಿಯಾ ರಾಮ್&#8221; [&#8230;]]]></description>
										<content:encoded><![CDATA[
<p><strong>ನವದೆಹಲಿ: </strong>ಪೌರತ್ವ (ತಿದ್ದುಪಡಿ) ಕಾಯ್ದೆ, 2019, ದೇಶದ ಕಾನೂನು ಮತ್ತು ಅದು ಜಾರಿಯಾಗುವುದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ವಿಚಾರದಲ್ಲಿ ನಾಗರಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p>



<p>&#8220;ಇದು ನಮ್ಮ ಪಕ್ಷದ ಬದ್ಧತೆ&#8221; ಎಂದು ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸದಸ್ಯರ ಸಭೆಯಲ್ಲಿ &#8220;ಜೈ ಸಿಯಾ ರಾಮ್&#8221; ಎಂಬ ಘೋಷಣೆಗಳ ನಡುವೆ ಶಾ ಹೇಳಿದ್ದಾರೆ. &#8220;ನೆರೆಯ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಮತ್ತು ಧಾರ್ಮಿಕ ಮತಾಂತರದ ಬೆದರಿಕೆಗೆ ಒಳಗಾದ ಸಹೋದರರನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ,&#8221; ಎಂದು ಹೇಳಿದ್ದಾರೆ.</p>



<p>ಪೌರತ್ವ ತಿದ್ದುಪಡಿ ಕಾಯಿದೆ ಡಿಸೆಂಬರ್ 11, 2019 ರಂದು ಸಂಸತ್ತಿನಲ್ಲಿ ಅಂಗೀಕಾರವಾಗಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮುಸ್ಲಿಮರನ್ನು ಹೊರತುಪಡಿಸಿ ಆರು ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ನಿರಾಶ್ರಿತರಿಗೆ ಅವರು ಆರು ವರ್ಷಗಳ ಕಾಲ ಭಾರತದಲ್ಲಿ ವಾಸಿಸುವ ಮತ್ತು ಡಿಸೆಂಬರ್‌ 31, 2014 ಒಳಗೆ ದೇಶಕ್ಕೆ ಬಂದಿರುವವರಿಗೆ ಷರತ್ತಿನ ಮೇಲೆ ಪೌರತ್ವವನ್ನು ನೀಡುತ್ತದೆ..</p>



<p>ಮುಸ್ಲಿಮರನ್ನು ಹೊರಗಿಡುವ ಹಿನ್ನಲೆಯಿಂದ ಈ ಕಾಯ್ದೆಯ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿ, ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ರಾಷ್ಟ್ರೀಯ ನಾಗರಿಕರ ನೋಂದಣಿಯೊಂದಿಗೆ ಈ ಕಾನೂನನ್ನು ಬಳಸಿಕೊಂಡು ಕಿರುಕುಳ ನೀಡುವುದು, ಇಲ್ಲವೇ ತಮ್ಮ ಹಕ್ಕುಗಳನ್ನು ಹತ್ತಿಕ್ಕಬಹುದು ಎಂದು ಭಾರತದ ಮುಸಲ್ಮಾನ ಸಮುದಾಯ ಕಾಯಿದೆಯನ್ನು ವಿರೋಧಿಸಿತ್ತು. ರಾಷ್ಟ್ರೀಯ ನಾಗರಿಕರ ನೋಂದಣಿ ದಾಖಲೆರಹಿತ ವಲಸಿಗರನ್ನು ಪತ್ತೆ ಹಚ್ಚುವ ಉದ್ದೇಶವನ್ನು ಹೊಂದಿದೆ.&nbsp;&nbsp;</p>



<p>ಸಂಸತ್ತಿನ ಮಾರ್ಗಸೂಚಿಗಳು ಕಾಯ್ದೆ ಜಾರಿಗೆ ಬಂದ ಆರು ತಿಂಗಳೊಳಗೆ ಪ್ರಕಟಿಸಬೇಕು ಎಂದು ಹೇಳಿದ್ದರೂ ಪೌರತ್ವ ಕಾನೂನಿನ ನಿಯಮಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ.</p>



<p>ಕಾನೂನನ್ನು ಜಾರಿಗೊಳಿಸಿದಾಗಿನಿಂದ ನಿಯಮಗಳನ್ನು ರೂಪಿಸಲು ಕೇಂದ್ರ ಗೃಹ ಸಚಿವಾಲಯ ಕನಿಷ್ಠ ಎಂಟು ಬಾರಿ ವಿಸ್ತರಣೆಗಳನ್ನು ಕೋರಿದೆ. ಆರಂಭದಲ್ಲಿ ಈ ವಿಳಂಬಕ್ಕೆ ಕೋವಿಡ್‌ ಕಾರಣವನ್ನು ನೀಡಲಾಗಿತ್ತು.</p>



<p>ಶಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾ ಅವರನ್ನು &#8220;ಸ್ವತಂತ್ರ ಭಾರತದ ಅತ್ಯಂತ ಅಸಮರ್ಥ ಗೃಹ ಮಂತ್ರಿ&#8221; ಎಂದು ಕರೆದಿದ್ದಾರೆ..</p>



<p>&#8220;ಅವರಿಗೆ ಸಿಎಎ ಬಗ್ಗೆ ಪ್ರತಿಕ್ರಿಯಿಸಲು ಮತ್ತು ಅವರ ಮಗ [ಜಯ್ ಶಾ] ಜೊತೆಗೆ ಅಹಮದಾಬಾದ್‌ನಲ್ಲಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸಮಯವಿದೆ, ಆದರೆ ಮಣಿಪುರದ ಬಗ್ಗೆ ಪ್ರತಿಕ್ರಿಯಿಸಲು ಅಥವಾ ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸಮಯವಿಲ್ಲ?&#8221; ಎಂದು ಖರ್ಗೆ ಟೀಕಿಸಿದ್ದಾರೆ..</p>
]]></content:encoded>
					
		
		
			</item>
		<item>
		<title>ಮತ್ತೆ 49 ಪ್ರತಿಪಕ್ಷಗಳ ಸಂಸದರ ಅಮಾನತು, ಇದುವರೆಗೆ ಒಟ್ಟು 141!</title>
		<link>https://peepalmedia.com/49-opposition-mps-suspended-from-parliament-total-141/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 19 Dec 2023 10:38:18 +0000</pubDate>
				<category><![CDATA[ರಾಜಕೀಯ]]></category>
		<category><![CDATA[attack]]></category>
		<category><![CDATA[Bangalore]]></category>
		<category><![CDATA[braking]]></category>
		<category><![CDATA[breaking news]]></category>
		<category><![CDATA[Delhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[MPs suspended]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[Parliament attack]]></category>
		<category><![CDATA[parliament building]]></category>
		<category><![CDATA[parliment]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33886</guid>

					<description><![CDATA[ನವದೆಹಲಿ: ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಆಗ್ರಹಿಸಿ  ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಲವತ್ತೊಂಬತ್ತು ಜನ ಪ್ರತಿಪಕ್ಷ ಸಂಸದರನ್ನು ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಗಿದೆ. ಇದೇ ಕಾರಣಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಮಾರನೇ ದಿನ ಈ ಅಮಾನತು ನಡೆದಿದೆ. ಇದುವರೆಗೆ ಡಿಸೆಂಬರ್ 14 ರಿಂದ ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಲೋಕಸಭೆಯಲ್ಲಿ 141 &#8211; 95 ಮತ್ತು ರಾಜ್ಯಸಭೆಯಲ್ಲಿ 46. ಕಾಂಗ್ರೆಸ್ [&#8230;]]]></description>
										<content:encoded><![CDATA[
<p><strong>ನವದೆಹಲಿ: </strong>ಲೋಕಸಭೆಯಲ್ಲಿ ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಕುರಿತು ಚರ್ಚೆಗೆ ಆಗ್ರಹಿಸಿ  ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಲವತ್ತೊಂಬತ್ತು ಜನ ಪ್ರತಿಪಕ್ಷ ಸಂಸದರನ್ನು ಮಂಗಳವಾರ ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಭಾಗದಿಂದ ಅಮಾನತುಗೊಳಿಸಲಾಗಿದೆ.</p>



<p>ಇದೇ ಕಾರಣಕ್ಕಾಗಿ 78 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಿದ ಮಾರನೇ ದಿನ ಈ ಅಮಾನತು ನಡೆದಿದೆ. ಇದುವರೆಗೆ ಡಿಸೆಂಬರ್ 14 ರಿಂದ ಉಭಯ ಸದನಗಳಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆ ಲೋಕಸಭೆಯಲ್ಲಿ 141 &#8211; 95 ಮತ್ತು ರಾಜ್ಯಸಭೆಯಲ್ಲಿ 46.</p>



<p>ಕಾಂಗ್ರೆಸ್ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ <a href="https://scroll.in/latest/1060754/78-opposition-mps-suspended-from-parliament-for-demanding-discussion-on-security-breach">ಮಲ್ಲಿಕಾರ್ಜುನ ಖರ್ಗೆ</a> ಅವರು ಸೋಮವಾರ &#8211; ಪ್ರತಿಪಕ್ಷಗಳದ್ದು ಕೇವಲ ಎರಡು ಸರಳ ಬೇಡಿಕೆಗಳು- ಕೇಂದ್ರ ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಹೇಳಿಕೆ ನೀಡಿ ಚರ್ಚೆಗೆ ಬರಬೇಕು ಎಂಬುದು ಎಂದು ಹೇಳಿದ್ದಾರೆ.&nbsp;</p>



<p>ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಕಾರ್ತಿ ಚಿದಂಬರಂ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಸುಪ್ರಿಯಾ ಸುಳೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಅಮಾನತುಗೊಳಿಸಿದ್ದಾರೆ.</p>



<p>ಯಾವುದೇ ಅರ್ಥಪೂರ್ಣ ಚರ್ಚೆಯಿಲ್ಲದೆ ಕಠಿಣ ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ ಮತ್ತು ಡಿಸೆಂಬರ್ 13 ರಂದು ಲೋಕಸಭೆಗೆ ದಾಳಿಕೋರರ ಪ್ರವೇಶವನ್ನು ಸುಲಭಗೊಳಿಸಿದ ಬಿಜೆಪಿ ಸಂಸದ ಮಾತ್ರ ಯಾವ ಶಿಕ್ಷೆಯಿಲ್ಲದೆ ಸ್ವತಂತ್ರವಾಗಿದ್ದಾರೆ ಎಂದು ಹೇಳಿದ್ದಾರೆ.&nbsp;</p>



<p>&#8220;ಹೊಸ ಸಂಸತ್ತಿನಲ್ಲಿ ನ್ಯಾಮೋಕ್ರಸಿಯ ಎಲ್ಲಾ ದಬ್ಬಾಳಿಕೆಗಳು ಕಾಣುತ್ತಿವೆ,&#8221; ಎಂದು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Today at least 50 more INDIA MPs were suspended from the Lok Sabha alone! A complete purge is being executed so that draconian Bills are passed without any meaningful debate, and so that the BJP MP who facilitated entry of the two intruders into the Lok Sabha on December 13th…</p>&mdash; Jairam Ramesh (@Jairam_Ramesh) <a href="https://twitter.com/Jairam_Ramesh/status/1737011954118451320?ref_src=twsrc%5Etfw">December 19, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">For the first time in my parliamentary career of nearly 15 years, I too entered the well of the House holding a placard calling for a discussion on the recent security breach. I did so out of solidarity with my <a href="https://twitter.com/INCIndia?ref_src=twsrc%5Etfw">@INCIndia</a> colleagues, who have been unjustly suspended for demanding…</p>&mdash; Shashi Tharoor (@ShashiTharoor) <a href="https://twitter.com/ShashiTharoor/status/1737002695213642234?ref_src=twsrc%5Etfw">December 19, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>“ಆಂತರಿಕ ಭದ್ರತೆ ಮತ್ತು ಪೊಲೀಸರನ್ನು ಗೃಹ ಸಚಿವಾಲಯ ನಿಯಂತ್ರಿಸುವುದರಿಂದ ಪ್ರತಿಪಕ್ಷಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಾಗಿ ಒತ್ತಾಯಿಸುತ್ತಿವೆ. ಅವರು [ಶಾ] ಘಟನೆಯ ಬಗ್ಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರೆ ಏನಾಗುತ್ತಿತ್ತು,” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | Lok Sabha MP Farooq Abdullah suspended for the remainder of the Winter session of Parliament<br><br>&quot;Who does the Police come under? What would have happened if he (Union Home Minister) had made a statement in Parliament on the incident (security breach)?&quot; <a href="https://t.co/WDstvY2Lz1">pic.twitter.com/WDstvY2Lz1</a></p>&mdash; ANI (@ANI) <a href="https://twitter.com/ANI/status/1737011158438367468?ref_src=twsrc%5Etfw">December 19, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಸಂಸತ್ತಿನ ಈ ಪರಿಸ್ಥಿತಿಯನ್ನು ಉತ್ತರ ಕೊರಿಯಾಕ್ಕೆ ಹೋಲಿಸಿದ್ದಾರೆ. &#8220;ಇದು ಟೋಕನ್ ಹೌಸ್ ಆಗಲಿದೆ&#8221; ಎಂದು ಚಿದಂಬರಂ ಪಿಟಿಐಗೆ ತಿಳಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">VIDEO | &quot;This is going to resemble the North Korean Assembly. This is going to be a token house,&quot; says Congress MP <a href="https://twitter.com/KartiPC?ref_src=twsrc%5Etfw">@KartiPC</a> on suspension of 49 Lok Sabha MPs. <a href="https://t.co/mCt4JwUvC0">pic.twitter.com/mCt4JwUvC0</a></p>&mdash; Press Trust of India (@PTI_News) <a href="https://twitter.com/PTI_News/status/1737027551006978203?ref_src=twsrc%5Etfw">December 19, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p></p>
]]></content:encoded>
					
		
		
			</item>
		<item>
		<title>ʼಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ..!ʼ &#8211; ಬಿಜೆಪಿ ಪ್ರತಿಭಟನೆ</title>
		<link>https://peepalmedia.com/no-women-safety-in-karnataka-bjp-protest/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 16 Dec 2023 08:10:28 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[dv sadananda gowda]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka bjp]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[women]]></category>
		<category><![CDATA[women safey]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33799</guid>

					<description><![CDATA[ಬೆಂಗಳೂರು : ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಭ್ರೂಣಹತ್ಯೆ ತಡೆಗಟ್ಟುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದು ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟಣೆ ನಡೆಸಿದ್ದಾರೆ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರೆವಣಿಗೆ ಮಾಡಿಸಿದಾಗ ದೌರ್ಜನ್ಯ ಅನ್ನಿಸಿಲ್ಲದ್ದೆ ಸದ್ದು ಮಾಡದಿದ್ದ ಮೋರ್ಚಾಗಳು, ಕುಸ್ತಿಪಟುಗಳ ಮೇಲೆ ಬಿಜಿಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ಎಸಗಿದ್ದು ಮಹಿಳಾ ದೌರ್ಜನ್ಯ ಎಂದು ಪ್ರತಿಭಟನೆ ಮಾಡದ ಬಿಜೆಪಿ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು :</strong> ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಭ್ರೂಣಹತ್ಯೆ ತಡೆಗಟ್ಟುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲಗೊಂಡಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಇಂದು ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟಣೆ ನಡೆಸಿದ್ದಾರೆ.</p>



<p>ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರೆವಣಿಗೆ ಮಾಡಿಸಿದಾಗ ದೌರ್ಜನ್ಯ ಅನ್ನಿಸಿಲ್ಲದ್ದೆ ಸದ್ದು ಮಾಡದಿದ್ದ ಮೋರ್ಚಾಗಳು, ಕುಸ್ತಿಪಟುಗಳ ಮೇಲೆ ಬಿಜಿಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ಎಸಗಿದ್ದು ಮಹಿಳಾ ದೌರ್ಜನ್ಯ ಎಂದು ಪ್ರತಿಭಟನೆ ಮಾಡದ ಬಿಜೆಪಿ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಹಾಗೆಯೇ ಭ್ರೂಣಹತ್ಯೆ ತಡೆಗಟ್ಟುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಹಿಳಾ ಮೋರ್ಚಾ ವತಿಯಿಂದ ಕಾಂಗ್ರೆಸ್ನ ವಿರುದ್ದ ಪ್ರತಿಭಟನೆ ಮಾಡಿದ್ದಾರೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="683" src="https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-1024x683.jpeg" alt="" class="wp-image-33803" style="width:457px;height:auto" srcset="https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-1024x683.jpeg 1024w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-300x200.jpeg 300w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-768x512.jpeg 768w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-150x100.jpeg 150w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-696x464.jpeg 696w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2-1068x713.jpeg 1068w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-2.jpeg 1280w" sizes="auto, (max-width: 1024px) 100vw, 1024px" /></figure></div>

<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="683" src="https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-1024x683.jpeg" alt="" class="wp-image-33804" style="width:470px;height:auto" srcset="https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-1024x683.jpeg 1024w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-300x200.jpeg 300w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-768x512.jpeg 768w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-150x100.jpeg 150w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-696x464.jpeg 696w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM-1068x713.jpeg 1068w, https://peepalmedia.com/wp-content/uploads/2023/12/WhatsApp-Image-2023-12-16-at-1.03.50-PM.jpeg 1280w" sizes="auto, (max-width: 1024px) 100vw, 1024px" /></figure></div>

<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="683" src="https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-1024x683.jpeg" alt="" class="wp-image-33806" style="width:474px;height:auto" srcset="https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-1024x683.jpeg 1024w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-300x200.jpeg 300w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-768x512.jpeg 768w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-150x100.jpeg 150w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-696x464.jpeg 696w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1-1068x713.jpeg 1068w, https://peepalmedia.com/wp-content/uploads/2023/12/WhatsApp-Image-2023-12-16-at-1.03.49-PM-1.jpeg 1280w" sizes="auto, (max-width: 1024px) 100vw, 1024px" /></figure></div>


<p>ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸದಾನಂದಗೌಡರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷರಾದ ಗೀತಾ ವಿವೇಕಾನಂದ್ ಮತ್ತು ಪ್ರಮುಖ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.</p>
]]></content:encoded>
					
		
		
			</item>
		<item>
		<title>ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಕರವೇ ಪ್ರತಿಭಟನೆ: ಕಾರ್ಯಕರ್ತರ ಬಂಧನ</title>
		<link>https://peepalmedia.com/karave-protest-againts-cauvery-water-to-tamilnad/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 15 Sep 2023 08:35:46 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Cauvery water]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka rakshana vedike]]></category>
		<category><![CDATA[kaveri]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[state politics]]></category>
		<category><![CDATA[tamilnadu]]></category>
		<category><![CDATA[tamilnd]]></category>
		<category><![CDATA[writing]]></category>
		<category><![CDATA[ಕರವೇ]]></category>
		<guid isPermaLink="false">https://peepalmedia.com/?p=27859</guid>

					<description><![CDATA[ಬೆಂಗಳೂರು, ಸೆಪ್ಟೆಂಬರ್.‌15: ರಾಜ್ಯ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  ಈ ಪ್ರತಿಭಟನೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹಿಸಲಾಯಿತು. ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕಾರ್ಯಕರ್ತರನ್ನು ಬಂಧಸಲಾಯಿತು. ರಾಜ್ಯದಾದ್ಯಂತ ವಾಡಿಕೆಯ ಮಳೆಯಾಗದ ಕಾರಣ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ರಾಜ್ಯದ 192 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ತಮಿಳುನಾಡಿಗೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು, ಸೆಪ್ಟೆಂಬರ್.‌15</strong>: ರಾಜ್ಯ ಬರಗಾಲವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.  ಈ ಪ್ರತಿಭಟನೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಪ್ರತಿಕೃತಿ ದಹಿಸಲಾಯಿತು. ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಕಾರ್ಯಕರ್ತರನ್ನು ಬಂಧಸಲಾಯಿತು.</p>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-1024x683.jpeg" alt="" class="wp-image-27862" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-1.jpeg 1380w" sizes="auto, (max-width: 1024px) 100vw, 1024px" /></figure>



<p>ರಾಜ್ಯದಾದ್ಯಂತ ವಾಡಿಕೆಯ ಮಳೆಯಾಗದ ಕಾರಣ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ರಾಜ್ಯದ 192 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಈ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.</p>



<p>ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರವರು “ಕಾವೇರಿ ಬೇಸಿನ್‌ನಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿರುವುದರಿಂದ ಕೃಷ್ಣರಾಜಸಾಗರ ಜಲಾಶಯದಲ್ಲಿ ಕೇವಲ 20 ಟಿಎಂಸಿ ನೀರು. ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ನೀರು ಮಾತ್ರ. ಇಂಥ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು 7 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಘಾತಕಾರಿಯಾಗಿದೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.</p>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-1024x683.jpeg" alt="" class="wp-image-27863" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.21-PM-1.jpeg 1380w" sizes="auto, (max-width: 1024px) 100vw, 1024px" /></figure>



<p>ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯಲು ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರು ಹೊಲಗದ್ದೆಗಳಿಗೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಕೈಗಾರಿಕೆಗಳಿಗೆ ಕೊಡಬೇಕಾದ ನೀರು ಕೂಡಾ ಇಲ್ಲ. ಹೀಗಿರುವಾಗ ಏಳು ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ? ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು? ಬೆಂಗಳೂರಿನ ಒಂದೂವರೆ ಕೋಟಿ ಜನರು ಕುಡಿಯುವ ನೀರು ಇಲ್ಲದೆ ಸಾಯಬೇಕೆ? ಎಂದು ಟಿ ಎ ನಾರಾಯಣಗೌಡ ಪ್ರಶ್ನಿಸಿದ್ದಾರೆ.</p>



<p>ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಗಳಿಗಿಂತ ಯಾವುದೋ ಪ್ರಾಧಿಕಾರದ ಆದೇಶ ದೊಡ್ಡದಲ್ಲ. ಈ ಪ್ರಾಧಿಕಾರದ ಆದೇಶ ಪಾಲಿಸಿ ತಮಿಳುನಾಡು ಕೇಳಿದಷ್ಟು ನೀರನ್ನು ಇದುವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರ ಮಾಡಿದ ದೊಡ್ಡ ತಪ್ಪು. ರಾಜ್ಯ ಸರ್ಕಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುವುದನ್ನು &nbsp;ಬಿಟ್ಟು ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದೃಢ ಘೋಷಣೆಯನ್ನು ಮಾಡಬೇಕು. ರಾಜ್ಯದ ಎಲ್ಲ ಸಂಸದರೂ ದೆಹಲಿಯಲ್ಲಿ ಧರಣಿ ನಡೆಸಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಅವರು ಆಗ್ರಹಿಸಿದ್ದಾರೆ.</p>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-1024x683.jpeg" alt="" class="wp-image-27865" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.25-PM-2.jpeg 1380w" sizes="auto, (max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-1024x683.jpeg" alt="" class="wp-image-27867" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.24-PM.jpeg 1380w" sizes="auto, (max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-1024x683.jpeg" alt="" class="wp-image-27868" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.23-PM-1.jpeg 1380w" sizes="auto, (max-width: 1024px) 100vw, 1024px" /></figure>



<figure class="wp-block-image size-large"><img loading="lazy" decoding="async" width="1024" height="683" src="https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-1024x683.jpeg" alt="" class="wp-image-27870" srcset="https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-1024x683.jpeg 1024w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-300x200.jpeg 300w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-768x512.jpeg 768w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-150x100.jpeg 150w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-696x464.jpeg 696w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM-1068x712.jpeg 1068w, https://peepalmedia.com/wp-content/uploads/2023/09/WhatsApp-Image-2023-09-15-at-1.09.20-PM.jpeg 1380w" sizes="auto, (max-width: 1024px) 100vw, 1024px" /></figure>
]]></content:encoded>
					
		
		
			</item>
		<item>
		<title>NPS ವಿರೋಧಿ ಆಂದೋಲನ : ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಜಧಾನಿ ಪ್ರವೇಶಿಸಿದ ಸರ್ಕಾರಿ ನೌಕರರು!</title>
		<link>https://peepalmedia.com/anti-nps-movement-lakhs-of-government-employees-entered-the-capital/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 19 Dec 2022 07:31:32 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Government employees]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[NPS]]></category>
		<category><![CDATA[OPS]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[protest]]></category>
		<guid isPermaLink="false">https://peepalmedia.com/?p=18586</guid>

					<description><![CDATA[ಕೇಂದ್ರ ಸರ್ಕಾರದ NPS (ಹೊಸ ಪಿಂಚಣಿ ಯೋಜನೆ) ಯೋಜನೆಗೆ ಮೊದಲಿನಿಂದಲೂ ದೊಡ್ಡ ಮಟ್ಟದ ವಿರೋಧವಿದ್ದು, ಈಗ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವೇ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಲಕ್ಷೋಪಾದಿಯಲ್ಲಿ ಬಂದು ಸೇರಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿ ಆಗುವ ಸಮಸ್ಯೆಗಳನ್ನು ಮನಗಂಡು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವು ರಾಜ್ಯ ಸರ್ಕಾರಗಳು ಈ [&#8230;]]]></description>
										<content:encoded><![CDATA[
<p style="font-size:20px">ಕೇಂದ್ರ ಸರ್ಕಾರದ NPS (ಹೊಸ ಪಿಂಚಣಿ ಯೋಜನೆ) ಯೋಜನೆಗೆ ಮೊದಲಿನಿಂದಲೂ ದೊಡ್ಡ ಮಟ್ಟದ ವಿರೋಧವಿದ್ದು, ಈಗ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವೇ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಲಕ್ಷೋಪಾದಿಯಲ್ಲಿ ಬಂದು ಸೇರಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.</p>



<p style="font-size:20px">ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿ ಆಗುವ ಸಮಸ್ಯೆಗಳನ್ನು ಮನಗಂಡು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವು ರಾಜ್ಯ ಸರ್ಕಾರಗಳು ಈ ಯೋಜನೆಯನ್ನೇ ರದ್ದುಪಡಿಸಿವೆ. ಕಳೆದ ಕೆಲವೇ ದಿನಗಳ ಹಿಂದೆ ಸರ್ಕಾರ ರಚಿಸಿದ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಕೂಡಾ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸುವ ಆಶ್ವಾಸನೆ ಕೊಟ್ಟಿದ್ದು, ಹೊಸ ಸರ್ಕಾರ ರಚನೆಯ ತಕ್ಷಣವೇ ಕೊಟ್ಟ ಭರವಸೆಯಂತೆ ಯೋಜನೆ ರದ್ದುಪಡಿಸಿದೆ.</p>



<p style="font-size:20px">ಸಧ್ಯ ಕರ್ನಾಟಕದಲ್ಲೂ ಹಿಂದಿನಿಂದ ಇದಕ್ಕೆ ವಿರೋಧವಿದ್ದು ಇಲ್ಲಿಯವರೆಗೆ ಅಲ್ಲಲ್ಲಿ ಈ ಯೋಜನೆ ವಿರೋಧಿಸಿ, ಪ್ರತಿಭಟನೆ, ಧರಣಿ ನಡೆಯುತ್ತಲೇ ಇತ್ತು. ಆದರೆ ಈಗ ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ನೌಕರರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಪ್ರಮಾಣದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭವಾಗಿದೆ.</p>



<figure class="wp-block-image size-large"><img loading="lazy" decoding="async" width="1024" height="461" src="https://peepalmedia.com/wp-content/uploads/2022/12/FB_IMG_1671435058053-1024x461.jpg" alt="" class="wp-image-18588" srcset="https://peepalmedia.com/wp-content/uploads/2022/12/FB_IMG_1671435058053-1024x461.jpg 1024w, https://peepalmedia.com/wp-content/uploads/2022/12/FB_IMG_1671435058053-300x135.jpg 300w, https://peepalmedia.com/wp-content/uploads/2022/12/FB_IMG_1671435058053-768x346.jpg 768w, https://peepalmedia.com/wp-content/uploads/2022/12/FB_IMG_1671435058053-150x68.jpg 150w, https://peepalmedia.com/wp-content/uploads/2022/12/FB_IMG_1671435058053-696x313.jpg 696w, https://peepalmedia.com/wp-content/uploads/2022/12/FB_IMG_1671435058053-1068x481.jpg 1068w, https://peepalmedia.com/wp-content/uploads/2022/12/FB_IMG_1671435058053.jpg 1080w" sizes="auto, (max-width: 1024px) 100vw, 1024px" /></figure>



<p style="font-size:20px">ರಾಜ್ಯದ ನಾನಾ ಕಡೆಗಳಿಂದ ಸರ್ಕಾರಿ ನೌಕರರು ಫ್ರೀಡಂ ಪಾರ್ಕ್ ಬಳಿ ಸೇರಿದ್ದು ಸಧ್ಯ ಪ್ರೀಡಂ ಪಾರ್ಕ್ ನಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿದೆ. ಧರಣಿಯ ಹೆಚ್ಚಿನ ಕಡೆಗಳಲ್ಲಿ ಸರ್ಕಾರಕ್ಕೆ ನೌಕರರು ಎಚ್ಚರಿಕೆ ಕೊಡುತ್ತಿದ್ದು &#8220;ಹಿಮಾಚಲ ಪ್ರದೇಶದ ಫಲಿತಾಂಶ ಬೇಕೋ, ಗುಜರಾತ್ ಫಲಿತಾಂಶ ಬೇಕೋ ನೀವೇ ನಿರ್ಧರಿಸಿ&#8221; ಎಂಬಂತಹ ಘೋಷಣೆಗಳನ್ನು ಕೂಗುತ್ತಿದ್ದಾರೆ.</p>



<p style="font-size:20px">ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲಾ ಸರ್ಕಾರಿ ನೌಕರರು ನೀಲಿ ಟೀ ಶರ್ಟ್, ಗಾಂಧಿ ಟೋಪಿಯ ಸಮವಸ್ತ್ರ ಧರಿಸಿದ್ದು, ರಾಜ್ಯದ ಪ್ರತೀ ತಾಲ್ಲೂಕುಗಳಿಂದ ಫ್ರೀಡಂ ಪಾರ್ಕ್ ಗೆ ಬಂದಿಳಿದಿದ್ದಾರೆ. ಚನ್ನರಾಯಪಟ್ಟಣದಿಂದ ಸರ್ಕಾರಿ ನೌಕರರ ಒಂದು ದೊಡ್ಡ ಗುಂಪು ಸೈಕಲ್ ಜಾತಾ ಮೂಲಕ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಸರ್ಕಾರಿ ನೌಕರರೇ ತಿರುಗಿ ಬೀಳುವ ಎಲ್ಲಾ ಮುನ್ಸೂಚನೆ ನೀಡಿದ್ದಾರೆ.</p>



<p style="font-size:20px">ಈ ಸಂದರ್ಭದಲ್ಲಿ &#8220;ತೊಲಗಲಿ ತೊಲಗಲಿ NPS ತೊಲಗಲಿ, Vote for OPS&#8221; ಘೋಷಣೆಗಳು ಮುಗಿಲು ಮುಟ್ಡುತ್ತಿವೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನೇ ನೌಕರರು ಗುರಿಯಾಗಿಟ್ಟುಕೊಂಡು ಸರ್ಕಾರಕ್ಕೆ ಸರಿಯಾದ ಬಿಸಿ ಮುಟ್ಟಿಸಲು ಹೊರಟಿದ್ದಾರೆ.</p>
]]></content:encoded>
					
		
		
			</item>
	</channel>
</rss>
