<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Rahul Gandhi &#8211; Peepal Media</title>
	<atom:link href="https://peepalmedia.com/tag/rahul-gandhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 19 Aug 2025 06:44:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Rahul Gandhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಂದು ಮನೆ ವಿಳಾಸದಲ್ಲಿ ಬೇರೆ ಬೇರೆ ಸಮುದಾಯಗಳ 24 ಮತದಾರರು! &#8211; ತಂಡಗಳಿಂದ ಬಿಹಾರದ ಮತದಾರರ ಪಟ್ಟಿ ಪರಿಶೀಲನೆ</title>
		<link>https://peepalmedia.com/24-voters-from-different-communities-at-one-home-address-teams-verify-bihars-voter-list/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 Aug 2025 06:27:22 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[jharkhand]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64362</guid>

					<description><![CDATA[ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ [&#8230;]]]></description>
										<content:encoded><![CDATA[
<pre class="wp-block-code"><code>‌<em>ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ ತಂಡವು ಒಂದೇ ವಿಳಾಸದಲ್ಲಿ 24 ಮತದಾರರನ್ನು ನೋಂದಾಯಿಸಿರುವುದನ್ನು ಕಂಡುಹಿಡಿದಿದೆ, ಮತ್ತೊಂದು ಪ್ರಕರಣದಲ್ಲಿ, ತಂದೆಯ ವಯಸ್ಸು ಮಗಳ ವಯಸ್ಸುಗಿಂತ ಕಡಿಮೆಯಿದೆ. ಹಾಗಿದ್ದೂ, ಈ ಅನುಮಾನಗಳನ್ನು ಪರಿಶೀಲಿಸುವುದು ಒಂದು ಸವಾಲಿನ ಸಂಗತಿ</em> - 
ತುಷಾರ್ ಧಾರಾ</code></pre>



<p>ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಲಿಬರೇಶನ್‌ನ ಕಾರ್ಯಕರ್ತರಾಗಿದ್ದರು.</p>



<p>ಲಿಬರೇಶನ್‌ನ ಬಿಹಾರ ರಾಜ್ಯ ಸಮಿತಿಯ ಸದಸ್ಯರಾದ ಖುಯಾಮುದ್ದೀನ್ ಅನ್ಸಾರಿ, ಮತದಾರರ ಪಟ್ಟಿಯಲ್ಲಿ ಆಗಿರುವ ಮೋಸವನ್ನು ಪತ್ತೆಹಚ್ಚಲು, ಕಾಣೆಯಾಗಿರುವ ಹೆಸರುಗಳು ಅಥವಾ ಡಿಲಿಟ್‌ ಮಾಡಲಾಗಿರುವ ಹೆಸರುಗಳನ್ನು ಗುರುತಿಸಲು ಮತ್ತು ಕರಡು ಪಟ್ಟಿಯಲ್ಲಿರುವ ಮತದಾರರ ಮನೆ-ಮನೆ ಪರಿಶೀಲನೆಯನ್ನು ನಡೆಸಲು ರೂಪಿಸಲಾಗಿರುವ ತಂಡವೊಂದನ್ನು  ಮುನ್ನಡೆಸುತ್ತಿದ್ದರು. ಹಾಗಿದ್ದೂ, ಮಳೆಗಾಲದ ಕಾರಣ, ಇಡೀ ನೆರೆಹೊರೆಯ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು, ಮುಖತಃ ಹೋಗಿ ಭೇಟಿ ಮಾಡುವುದು ಸವಾಲಿನ ಸಂಗತಿಯಾಗಿತ್ತು.</p>



<p>ಖ್ವಾಮುದ್ದೀನ್ ಮತ್ತು ವಿಶ್ವಕರ್ಮ ಪಾಸ್ವಾನ್ ಮತ್ತು ಹಿಮ್ಮತ್ ಯಾದವ್ ಅವರನ್ನು ಒಳಗೊಂಡಿರುವ ಅವರ ತಂಡ ಈ ವಂಚನೆಯ ಪ್ರಕರಣಗಳನ್ನು ಗುರುತಿಸಲು ಪ್ರಯತ್ನಿಸುತ್ತಾ, ಕರಡು ಮತದಾರರ ಪಟ್ಟಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಒಂದು ನಿದರ್ಶನದಲ್ಲೇ, ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ 10 ಎಂಬ ಒಂದೇ ವಿಳಾಸದಲ್ಲಿ 24 ಮತದಾರರು ನೋಂದಾಯಿಸಲ್ಪಟ್ಟಿರುವುದನ್ನು ಅವರು ಕಂಡುಹಿಡಿದರು ಮತ್ತು ಇದನ್ನು ವಂಚನೆಯೆಂದು ಕರೆದರು. </p>



<p>ಪಟ್ಟಿಯಲ್ಲಿ ಠಾಕೂರರು, ಬ್ರಾಹ್ಮಣರು ಮತ್ತು ಬನಿಯಾ ಹೆಸರುಗಳು ಇದ್ದುದರಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಬಿಹಾರದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ನೋಡಿದರೆ ಇದೊಂದು ವಿಚಿತ್ರವೆಂಬಂತೆ ಅವರಿಗೆ ಅನ್ನಿಸಿತ್ತು. ಅಲ್ಲದಿದ್ದರೆ ಬೇರೆ ಬೇರೆ ಜಾತಿಯ ಜನರು ಒಂದೇ ಮನೆಯ ಸದಸ್ಯರಂತೆ ಒಂದು ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ?  </p>



<p>ಆಪಾದಿತ ದುಷ್ಕೃತ್ಯದ ಮತ್ತೊಂದು ಉದಾಹರಣೆಯೆಂದರೆ ತಂದೆ-ಮಗಳನ್ನು ದಂಪತಿಯೆಂಬಂತೆ ಮತದಾರರ ಹೆಸರಿನಲ್ಲಿ ಪಟ್ಟಿ ಮಾಡಿರುವುದು! ಅದೂ ತಂದೆಯ ವಯಸ್ಸು 28 ಮತ್ತು ಮಗಳ ವಯಸ್ಸು 29 ಎಂದು ಉಲ್ಲೇಖಿಸಲಾಗಿದೆ!</p>



<p>&#8220;ಮನೆ ಮನೆ ಭೇಟಿಗಳಿಂದ ಈ ವಂಚನೆಯನ್ನು ದೃಢೀಕರಿಸಲು ಸಾಧ್ಯವಿಲ್ಲ, ಮತದಾರರ ಪಟ್ಟಿಯ ವಿಸ್ತೃತ ಅಧ್ಯಯನದಿಂದ ಮಾತ್ರ ಅದನ್ನು ಬಯಲಿಗೆಳೆಯಬಹುದು&#8221; ಎಂದು ಖುಯಮ್ಮುದ್ದೀನ್ ಹೇಳುತ್ತಾರೆ. ತಮ್ಮ ಹೆಸರುಗಳನ್ನು ತಪ್ಪಾಗಿ ಅಳಿಸಲಾಗಿದೆ ಎಂದು ಆರೋಪಿಸುತ್ತಿರುವ ನೂರಾರು ಜನರ ಸಾಕ್ಷ್ಯಗಳನ್ನು ಅವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಇಟ್ಟಿದ್ದಾರೆ.</p>



<p><em>ಅನುಮಾನಾಸ್ಪದ ವಿಳಾಸದ ಮೊದಲ ನಿದರ್ಶನವನ್ನು ದಿ ವೈರ್</em>&nbsp;ಎರಡು ಕಾರಣಗಳಿಗಾಗಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ: ಮೊದಲನೆಯದಾಗಿ, ಈ ನಿರ್ದಿಷ್ಟ ಮನೆ ಇರುವ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ, ಆದ್ದರಿಂದ ಭೇಟಿ ನೀಡುವುದು ಕಷ್ಟಕರವಾಗಿದೆ. ಎರಡನೆಯದಾಗಿ, ಮತದಾರರ ಪಟ್ಟಿಯಲ್ಲಿ ಅನುಗುಣವಾದ ವಿಳಾಸವನ್ನು ನೀಡದೆ ಮನೆ ಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ, ಇದರಿಂದಾಗಿ ಆ ಪ್ರದೇಶದ ಪರಿಚಯವಿಲ್ಲದವರನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.&nbsp;</p>



<p>ಈ ಎರಡೂ ಪ್ರಕರಣಗಳು ಚುನಾವಣಾ ವಂಚನೆಗೆ ದೊಡ್ಡ ನಿದರ್ಶನಗಳಾಗಿವೆ ಎಂದು ಲಿಬರೇಶನ್ ತಂಡಕ್ಕೆ ಮನವರಿಕೆಯಾಗಿದೆಯಾದರೂ, ವಿಷಯವು ಅಷ್ಟು ಸ್ಪಷ್ಟವಾಗಿಲ್ಲ. ಅಲ್ಲದೇ, ಇದು ಪ್ರತಿಕೂಲ ಹವಾಮಾನ ಇರುವಾಗ ಕಡಿಮೆ ಅವಧಿಯಲ್ಲಿ ಮತದಾರರ ಪಟ್ಟಿಗಳನ್ನು ಪರಿಶೀಲಿಸುವಲ್ಲಿನ ತೊಂದರೆಗಳನ್ನು ಎತ್ತಿ ತೋರಿಸುತ್ತದೆ. </p>



<p>ಮತದಾರರು ವಿಳಾಸ ಕಾಲಮ್ ಅನ್ನು ಖಾಲಿ ಬಿಡುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಚುನಾವಣಾ ಆಯೋಗವು ಕಾಲ್ಪನಿಕ ಮನೆ ಸಂಖ್ಯೆಗಳನ್ನು ಬಳಸುತ್ತದೆ. <a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em></a><a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"> ವರದಿ ಮಾಡಿದಂತೆ</a> ಚುನಾವಣಾ ಸಂಸ್ಥೆಯು ರೋಲ್‌ಗಳನ್ನು ಗಣಕೀಕರಿಸಲು ಪ್ರಾರಂಭಿಸಿದಾಗ ಇದು ಪ್ರಾರಂಭವಾಯಿತು ಮತ್ತು ಡಿಜಿಟಲೀಕರಣಕ್ಕೆ ಬದಲಾವಣೆಯ ಸಮಯದಲ್ಲಿ ಕಾಲ್ಪನಿಕ ವಿಳಾಸಗಳನ್ನು ಬಳಸುವುದು ಪ್ರಮಾಣಿಕೃತವಾಯಿತು.  </p>



<p>ಆಗಸ್ಟ್ 7 ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು &#8220;ಕಳ್ಳತನ&#8221;ವಾಗಿದ್ದು, ಅವುಗಳಲ್ಲಿ ಅರ್ಧದಷ್ಟು ವಿಳಾಸ ಅಕ್ರಮಗಳಾಗಿವೆ ಎಂದು ಹೇಳಿದಾಗ ಈ ವಿಚಾರ ಮುನ್ನಲೆಗೆ ಬಂತು.</p>



<p>&#8220;ಮತದಾರರ ಪಟ್ಟಿಯಲ್ಲಿ ವಿಳಾಸ ಅಕ್ರಮಗಳ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ ಮತ್ತು ಪರಿಶೀಲಿಸಲು ಏಕೈಕ ಮಾರ್ಗವೆಂದರೆ ಮನೆಗೆ ಭೇಟಿ ನೀಡುವುದು&#8221; ಎಂದು&nbsp; ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಸ್ಥಾಪಕ ಸದಸ್ಯ ಜಗದೀಪ್ ಛೋಕರ್,&nbsp;<em>ದಿ ವೈರ್</em>&nbsp;ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಹೇಳಿದರು.</p>



<p>&#8220;ನೀವು ರಾಜಕೀಯ ಪಕ್ಷಗಳನ್ನು ಅವಲಂಬಿಸಿದರೆ, ಅವರು ನಿಮಗೆ ಏನು ತೋರಿಸಬೇಕೆಂದು ಬಯಸುತ್ತಾರೋ ಅದನ್ನೇ ತೋರಿಸುತ್ತಾರೆ&#8221; ಎಂದು ಅವರು ಹೇಳಿದರು. ತಂದೆ-ಮಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಜಗದೀಪ್ ಛೋಕರ್, ಇವುಗಳು ಸ್ಥೂಲ ದೋಷಗಳಾಗಿರಬಹುದು ಎಂದು ಹೇಳಿದರು. &#8220;ಸಣ್ಣ ಸಣ್ಣ ವೈಯಕ್ತಿಕ ದೋಷಗಳ ಬದಲು ವ್ಯವಸ್ಥಿತ ವಂಚನೆಯನ್ನು ಹುಡುಕಿ ಬಯಲಿಗೆಳೆಯಬೇಕು.&#8221; </p>



<p>ಬಿಹಾರದಲ್ಲಿ ನಡೆಸಿದ ವಿಶೇಷ ತೀವ್ರ ಪರಿಶೀಲನೆಯನ್ನು (Special Intensive Review) ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕೂಡ ಒಂದು. ಆದರೆ ಹಲವಾರು ಕಾರಣಗಳಿಂದಾಗಿ, ಇದನ್ನು ಹೇಳುವುದು ಸುಲಭ, ಆದರೆ ಅನೇಕ ಕಾರಣಗಳಿಂದಾಗಿ ಮಾಡುವುದು ಅಷ್ಟು ಸುಲಭದಲ್ಲ.. </p>



<p>ಆಗಸ್ಟ್ 9 ರಂದು, ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ದಿಲಿಟ್‌ ಮಾಡಿ, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರ ಮೆಷಿನ್‌ ರೀಡಿಂಗ್‌ ಮಾಡುವುದು ಕಷ್ಟದ ಕೆಲಸ, ಇದರಿಂದಾಗಿ ದೊಡ್ಡ ಪ್ರಮಾಣದ ಅಕ್ರಮಗಳನ್ನು ಪತ್ತೆಹಚ್ಚಲಾಯಿತು ಎಂದು <a href="https://scroll.in/latest/1085399/election-commission-removes-digital-draft-voter-lists-in-bihar" target="_blank" rel="noreferrer noopener"><em>ಸ್ಕ್ರೋಲ್</em> ವರದಿ ಮಾಡಿದೆ</a>. </p>



<p>ಎರಡನೆಯದಾಗಿ, ಚುನಾವಣಾ ಸಂಸ್ಥೆಯು SIR ಮತದಾರರ ಪಟ್ಟಿಯಿಂದ ಅಳಿಸಲಾದವರ ಪಟ್ಟಿಯನ್ನು (ಇಲ್ಲಿಯವರೆಗೆ 65 ಲಕ್ಷ) ನೀಡಿದ್ದರೂ, ಯಾಕೆ ಅಳಿಸಲಾಗಿದೆ ಎಂಬ ಕಾರಣಗಳ ವಿವರವನ್ನು ನೀಡಿಲ್ಲ. ಎಷ್ಟು ಹೆಸರುಗಳು ಸ್ಥಳಾಂತರಗೊಂಡಿವೆ, ಎಷ್ಟು ಜನ ಸತ್ತಿದ್ದಾರೆ ಅಥವಾ ನಕಲಿ ನಮೂದುಗಳಾಗಿದ್ದವು ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಈ ಮಾಹಿತಿಯಿಲ್ಲದೆ, ನೆಲಮಟ್ಟದಲ್ಲಿ ಪರಿಶೀಲನೆ ನಡೆಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. </p>



<p>ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಅಳಿಸುವಿಕೆಗೆ ಕಾರಣಗಳ ಜೊತೆಗೆ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ದೇಶನ ನೀಡಿದ್ದರೂ, ಕಡಿಮೆ ಅವಧಿ ಮತ್ತು ಮಳೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಅಕ್ರಮಗಳನ್ನು ಪತ್ತೆಹಚ್ಚಲು ತಂಡಗಳು ಓಡುತ್ತಿವೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 1 ರಂದು ಪ್ರಕಟಿಸಲಾಗುವುದು. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="989" src="https://peepalmedia.com/wp-content/uploads/2025/08/image-1.png" alt="" class="wp-image-64371" style="width:450px;height:auto" srcset="https://peepalmedia.com/wp-content/uploads/2025/08/image-1.png 1024w, https://peepalmedia.com/wp-content/uploads/2025/08/image-1-300x290.png 300w, https://peepalmedia.com/wp-content/uploads/2025/08/image-1-768x742.png 768w, https://peepalmedia.com/wp-content/uploads/2025/08/image-1-150x145.png 150w, https://peepalmedia.com/wp-content/uploads/2025/08/image-1-696x672.png 696w" sizes="(max-width: 1024px) 100vw, 1024px" /><figcaption class="wp-element-caption">ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ &#8216;ಮೃತ&#8217; ಎಂದು ಘೋಷಿಸಲ್ಪಟ್ಟಿರುವ ಮಿಂಟು ಪಾಸ್ವಾನ್. ಫೋಟೋ: ದಿ ವೈರ್ </figcaption></figure></div>


<p><a href="https://thewire.in/government/declared-dead-in-draft-electoral-roll-bihar-voter-appears-in-supreme-court" target="_blank" rel="noreferrer noopener">ಗೌಸ್‌ಗಂಜ್‌ನಲ್ಲಿ ಕೆಲಸ ಮಾಡುತ್ತಿರುವ ಲಿಬರೇಶನ್ ತಂಡವು ಮಿಂಟು ಪಾಸ್ವಾನ್ ಪ್ರಕರಣವನ್ನು ಪತ್ತೆಹಚ್ಚಿತು</a>. ಮಿಂಟು ಜೀವಂತವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಅವರನ್ನು &#8216;ಸತ್ತಿದ್ದಾರೆ&#8217; ಎಂದು ಘೋಷಿಸಲಾಗಿದೆ. ನಿಜವೇನೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಹಾಜರಾಗಲು, ಎಸ್‌ಐಆರ್ ನಿಜವಾದ ಮತದಾರರನ್ನು ಪಟ್ಟಿಯಿಂದ ಹೇಗೆ ಅಳಿಸುತ್ತಿದೆ ಎಂಬುದನ್ನು ತೋರಿಸಲು ಮಿಂಟು ನವದೆಹಲಿಗೆ ಹೋಗಿದ್ದಾರೆ.</p>



<p>ಅರ್ರಾಹ್‌ನ ಇನ್ನೊಂದು ಭಾಗದಲ್ಲಿ, ಸುಧೀರ್ ಕುಮಾರ್ ತಮ್ಮ ಕಚೇರಿಯಲ್ಲಿ ಕಾಗದಗಳು ಮತ್ತು ನೋಟ್‌ಬುಕ್‌ಗಳ ಜೊತೆಗೆ ಕುಳಿತಿದ್ದಾರೆ. ಕುಮಾರ್ ಲಿಬರೇಶನ್‌ನ ಸದಸ್ಯರಾಗಿದ್ದಾರೆ ಮತ್ತು ಅರ್ರಾಹ್‌ನ ಪಟ್ಟಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಜಿನ ಮೇಲೆ ಅರ್ರಾಹ್ ಪಟ್ಟಣದ ಮತದಾರರ ಅಳಿಸುವಿಕೆಗಳನ್ನು ಒಳಗೊಂಡಿರುವ A4 ಹಾಳೆಗಳ ದಾಖಲೆಯಿದೆ, ಜೊತೆಗೆ ಪಕ್ಷವು ಆಡಳಿತದಲ್ಲಿನ ವಿಸ್ಲ್‌ಬ್ಲೋವರ್‌ಗಳ ಸಹಾಯದಿಂದ ಸಂಗ್ರಹಿಸಿರುವ ಕಾರಣಗಳನ್ನು ಸಹ ಹೊಂದಿದೆ. ಲಿಬರೇಶನ್ ತಕ್ಷಣವೇ ಅರ್ರಾಹ್ ಪಟ್ಟಣದಾದ್ಯಂತ ಹೋಗಿ ಮತದಾರರ ಪಟ್ಟಿಗಳನ್ನು ಭೌತಿಕ ಪರಿಶೀಲನೆ ನಡೆಸುವುದರೊಂದಿಗೆ ಅನೇಕ ತಂಡಗಳನ್ನು ರಚಿಸಿತು.</p>



<p>ಇದು ಕಷ್ಟದ ಕೆಲಸ. ಅರಾಹ್ ವಿಧಾನಸಭಾ ಕ್ಷೇತ್ರವು 45 ವಾರ್ಡ್‌ಗಳು ಮತ್ತು 242 ಬೂತ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, 12 ಗ್ರಾಮ ಪಂಚಾಯತ್‌ಗಳಿವೆ. ಇಲ್ಲಿಯವರೆಗೆ, 16 ಪ್ರಕರಣಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ: ಪಟ್ಟಿಯಲ್ಲಿ &#8216;ಸ್ಥಳಾಂತರಗೊಂಡ&#8217; ಎಂದು ಪಟ್ಟಿ ಮಾಡಲಾದ ಆರು ಪ್ರಕರಣಗಳು ಅರ್ರಾಹ್‌ನಲ್ಲಿವೆ, ಮತ್ತು &#8216;ಸತ್ತ&#8217; ಎಂದು ಘೋಷಿಸಲ್ಪಟ್ಟ 10 ಪ್ರಕರಣಗಳು ಇನ್ನೂ ಜೀವಂತವಾಗಿವೆ. ಆ 10 ಜನರಲ್ಲಿ ಏಳು ಜನರನ್ನು ಪಕ್ಷದ ಕಾರ್ಯಕರ್ತರು ಭೇಟಿ ಮಾಡಿದ್ದಾರೆ, ಮೂವರ ಬಗ್ಗೆ ಇನ್ನೂ ದೃಢೀಕರಿಸಬೇಕಾಗಿದೆ. </p>



<p>ಕುಮಾರ್ ಮತ್ತು ಅವರ ಉಪನಾಯಕ ರಣಧೀರ್ ರಾಣಾ ಅವರು &#8216;ಸತ್ತವರ&#8217; ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ ಮತ್ತು ಅದನ್ನು ಬೂತ್‌ವಾರು ಅಳಿಸಿದವರ ಪಟ್ಟಿಯೊಂದಿಗೆ ಹೋಲಿಸುತ್ತಾರೆ. ಹೆಸರುಗಳು ಹೊಂದಿಕೆಯಾದರೆ, ಆ ಮತದಾರರ ಸ್ಥಿತಿಗತಿಯನ್ನು ಪರಿಶೀಲಿಸಲು ಪಕ್ಷದ ಕಾರ್ಯಕರ್ತರನ್ನು ಬೂತ್‌ಗೆ ಕಳುಹಿಸಲಾಗುತ್ತದೆ, ಇದನ್ನು ಅವರು ನೆರೆಹೊರೆಯವರೊಂದಿಗೆ ಮಾತನಾಡುವುದು, ವಿಳಾಸವನ್ನು ಪಡೆಯುವುದು ಮತ್ತು ಭೇಟಿ ಮಾಡುವುದು ಮತ್ತು EC ಯ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಬಳಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಮಾಡುತ್ತಾರೆ.</p>



<p>SIR ಗೆ ಸಮಾನಾಂತರವಾಗಿ, ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ವಿಭಜಿಸಿರುವುದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ನಿಜವಾಗಿ, ಪ್ರತಿ ಬೂತ್‌ಗೆ 1,200 ಕ್ಕಿಂತ ಹೆಚ್ಚು ಮತದಾರರು ಇರಬಾರದು, ಅದಕ್ಕೂ ಹೆಚ್ಚು ಮತದಾರರು ಇದ್ದರೆ ಹೊಸ ಬೂತ್ ಅನ್ನು ರಚಿಸಲಾಗುತ್ತದೆ ಅಥವಾ ಹೆಚ್ಚುವರಿ ಮತದಾರರನ್ನು ಮತ್ತೊಂದು ಬೂತ್‌ಗೆ ಸ್ಥಳಾಂತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೂತ್ ಸಂಖ್ಯೆಗಳು ಬದಲಾಗುತ್ತವೆ, ಇದು ಗೊಂದಲವನ್ನು ಹೆಚ್ಚಿಸುತ್ತದೆ. </p>



<p>ಉದಾಹರಣೆಗೆ, ಆಗಸ್ಟ್ 11 ರಂದು, &#8216;ಸತ್ತವರು&#8217; ಎಂದು ಪಟ್ಟಿ ಮಾಡಲಾದ ನಾಲ್ವರು ಜನರು ಜೀವಂತವಾಗಿರುವುದು ಕಂಡುಬಂದಿತು, ಅದರಲ್ಲಿ ಮೂರು ಹೆಸರುಗಳು ಹತ್ತಿರದ ಮತಗಟ್ಟೆಯಲ್ಲಿ ಕಂಡುಬಂದವು. ಹೆಚ್ಚುವರಿಯಾಗಿ, ಕರಡು ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ದಾಖಲೆಗಳನ್ನು ಸಂಗ್ರಹಿಸುವ ಮತ್ತು ಮತದಾರರನ್ನು ಸೇರಿಸುವ ಹೆಚ್ಚಿನ ಕೆಲಸವನ್ನು ಮಾಡಿದ ಬ್ಲಾಕ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಹಾಯವನ್ನು ನೀಡಲಿಲ್ಲ.&nbsp;</p>



<p>ಅವರಲ್ಲಿ ಹೆಚ್ಚಿನವರಿಗೆ ಸಾಕು ಸಾಕಾಗಿ ಹೋಗಿದೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ, ಕರೆಗಳನ್ನು ಸ್ವೀಕರಿಸುತ್ತಿಲ್ಲ. </p>



<p>&#8220;ಮುಂದಿನ 15 ದಿನಗಳಲ್ಲಿ ನಾವು ಎಷ್ಟು ಅಕ್ರಮಗಳನ್ನು ಕಂಡುಹಿಡಿಯಬಹುದು?&#8221; ಎಂದು ಕುಮಾರ್ ಕೇಳುತ್ತಾರೆ. ಬಿಹಾರದ ಹೆಚ್ಚಿನ ಜನರು ಇನ್ನೂ SIR ಮತ್ತು ಪೌರತ್ವದ ನಡುವಿನ ಸಂಬಂಧವನ್ನು ಕಂಡುಕೊಂಡಿಲ್ಲ ಮತ್ತು ವಿರೋಧ ಪಕ್ಷಗಳಿಗೆ ಇದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. </p>



<p>ಬಿಹಾರದಲ್ಲಿ ಲಿಬರೇಶನ್‌ನ ಪ್ರಮುಖ ಮತದಾರರು ದಲಿತರ ಮತ್ತು ಇಬಿಸಿ ಸಮುದಾಯಗಳಲ್ಲಿದ್ದಾರೆ. ಲಿಬರೇಶನ್ ಪಕ್ಷದ ಪ್ರಕಾರ, ಅಳಿಸಲಾಗಿರುವ ಗರಿಷ್ಠ ಮತದಾರರು ಈ ವರ್ಗಗಳಿಗೆ ಸೇರಿದವರು.  ಛತ್ತೀಸ್‌ಗಢದಲ್ಲಿ ಮಾವೋವಾದಿಗಳನ್ನು &#8220;ಮುಗಿಸಿದಂತೆ&#8221; ತಮ್ಮ ಮತದಾರರನ್ನು ನಿರ್ಮೂಲನೆ ಮಾಡುವ ಮೂಲಕ ಬಿಹಾರದಲ್ಲಿ ವಿಮೋಚನೆಯನ್ನು ಪೂರ್ಣಗೊಳಿಸಲು ಬಿಜೆಪಿ ಬಯಸುತ್ತಿದೆ ಎಂದು ಕುಮಾರ್ ಹೇಳುತ್ತಾರೆ. ‌ </p>



<p>“ಹಿಂದೆಲ್ಲಾ, ನೇರವಾಗಿ ಬೂತ್‌ಗಳನ್ನು ಕಬಳಿಸಲಾಗುತ್ತಿತ್ತು, ಈಗ ಪರೋಕ್ಷವಾಗಿ ಕಬಳಿಸಲಾಗುತ್ತಿದೆ,” ಎಂದು ಅವರು ಹೇಳುತ್ತಾರೆ.</p>



<p><em>ಇದು ದಿ ವೈರ್‌ ಪ್ರಕಟಿಸಿದ ತುಷಾರ್ ಧಾರಾ</em> ಅವರ<em> &#8216;<a href="https://thewire.in/rights/bihar-sir-voter-roll-scrutiny-teams-examining-election-commission-eletoral-rolls-24-voters-in-address">24 Voters in an Address&#8217;, Floods and a Ticking Clock: What Teams Examining Bihar&#8217;s Voter Rolls Encounter</a> ನ ಕನ್ನಡಾನುವಾದ</em></p>



<p></p>



<p></p>
]]></content:encoded>
					
		
		
			</item>
		<item>
		<title>ಅಫಿಡವಿಟ್‌ನಲ್ಲಿ ಪಕ್ಷಪಾತ, ಅಕ್ರಮ ವಲಸಿಗರ ಬಗ್ಗೆ ಮೌನ: ಚುನಾವಣಾ ಆಯೋಗದ ಬಳಿ ಈ ಏಳು ಪ್ರಶ್ನೆಗಳಿಗೆ ಉತ್ತರವಿಲ್ಲ!</title>
		<link>https://peepalmedia.com/silence-on-illegal-immigrants-no-answers-from-the-election-commission/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 18 Aug 2025 07:18:00 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64321</guid>

					<description><![CDATA[&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ [&#8230;]]]></description>
										<content:encoded><![CDATA[
<pre class="wp-block-code"><code><em>ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2003 ರಲ್ಲಿ ಬಿಹಾರ ಎಸ್ಐಆರ್ ಅನ್ನು ಜುಲೈನಲ್ಲಿ ನಡೆಸಲಾಯಿತು ಎಂದು ಹೇಳಿದರೆ. ಆದರೆ ಆ ವರ್ಷ ಯಾವುದೇ ಚುನಾವಣೆಗಳು ನಡೆದಿಲ್ಲ ಎಂಬುದನ್ನು ಉಲ್ಲೇಖಿಸಲಿಲ್ಲ. ರಾಹುಲ್ ಗಾಂಧಿಯವರು 7 ದಿನಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಹೆಸರುಗಳು ಬಂದಿದ್ದರೆ, ಅದು ಮತ ಕಳ್ಳತನವನ್ನು ತೋರಿಸುವುದಿಲ್ಲ ಎಂದು ಹೇಳಿದರು</em> - ಶ್ರಾವಸ್ತಿ ದಾಸಗುಪ್ತ, ದಿ ವೈರ್</code></pre>



<p>&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು.</p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಪ್ರಮಾಣವಚನದಡಿಯಲ್ಲಿ (oath) ಅಫಿಡವಿಟ್ ಕೇಳುತ್ತಿದೆಯೇ ಎಂಬ ಪ್ರಶ್ನೆಗೆ ಇಡೀ ಪತ್ರಿಕಾಗೋಷ್ಠಿಯಲ್ಲಿ ಜ್ಞಾನೇಶ್‌ ಕುಮಾರ್ ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಮತ್ತು ಕನ್ನೌಜ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದಾಗ, ಅವರಿಂದ ಚುನಾವಣಾ ಆಯೋಗ ಯಾವುದೇ ಅಫಿಡವಿಟ್ ಕೇಳಿರಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು ಲೋಕಸಭಾ ಸಂಸದ <a href="https://thewire.in/politics/elections-choreographed-huge-criminal-fraud-by-election-commission-rahul-gandhi">ಸ್ಥಾನಕ್ಕೆ</a> ರಾಜೀನಾಮೆ ನೀಡಬೇಕೆಂದು ಅನುರಾಗ್‌ ಠಾಕೂರ್ ಒತ್ತಾಯಿಸಿದರು.‌</p>



<p>ಬಿಹಾರದಲ್ಲಿ ಎಷ್ಟು ಗಣತಿ ನಮೂನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗಿದೆ ಮತ್ತು ಎಸ್‌ಐಆರ್ ಸಮಯದಲ್ಲಿ ಎಷ್ಟು ವಿದೇಶಿ ದಾಖಲೆರಹಿತ ವಲಸಿಗರು ಕಂಡುಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬ ಆರೋಪಗಳಿಗೆ ಕೂಡ ಜ್ಞಾನೇಶ್ ಕುಮಾರ್ ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p>ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿರುವಾಗ ಮತ್ತು ಅದು ಕೂಡ ಪ್ರವಾಹದ ಸಮಯದಲ್ಲಿ ಎಸ್‌ಐಆರ್ ಅನ್ನು ಏಕೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗೆ ಕುಮಾರ್ ಉತ್ತರಿಸುತ್ತಾ, 2003 ರಲ್ಲಿ ನಡೆದ ಕೊನೆಯ ಪುನರಾವರ್ತನೆಯು (Iteration) ಜುಲೈನಲ್ಲಿ ನಡೆಯಿತು ಎಂದು ಹೇಳಿದರು, ಆದರೆ ವಿಧಾನಸಭಾ ಚುನಾವಣೆಗಳು ಅಕ್ಟೋಬರ್ 2005 ರವರೆಗೆ ಇರಲಿಲ್ಲ ಎಂದು ಉಲ್ಲೇಖಿಸುವುದನ್ನು ಮರೆತಂತಿತ್ತು.</p>



<p>ಬದಲಾಗಿ, ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ‌ ಬಹಳ ಅಳೆದು ತೂಗಿ ತಮ್ಮ ಉತ್ತರಗಳನ್ನು ನೀಡುತ್ತಿದ್ದರು. ಮನೆ ಸಂಖ್ಯೆಗಳನ್ನು 0 (ಸೊನ್ನೆ) ಎಂದು ಉಲ್ಲೇಖಿಸಲಾಗಿರುವ ಮತದಾರರ ಹೆಸರುಗಳನ್ನು  ಬಡವರ ಬಗ್ಗೆ ಮಾಡುವ ತಮಾಷೆ ಎಂದು ಬಿಂಬಿಸಲುಪ್ರಯತ್ನಿಸಿದರು ಮತ್ತು ಮತದಾರರ ಹೆಸರು ಹಲವು ಬಾರಿ ಕಾಣಿಸಿಕೊಳ್ಳುವುದು ಮತ ಕಳ್ಳತನವನ್ನು ತೋರಿಸುವುದಿಲ್ಲ ಅಥವಾ ಅವರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ ಎಂದು ಅರ್ಥವಲ್ಲ ಎಂದು ವಾದಿಸಿದರು. </p>



<p>ಜ್ಞಾನೇಶ್‌ ಕುಮಾರ್‌ ರಾಹುಲ್ ಗಾಂಧಿಯವರಿಗೆ ಒಂದು ಅಲ್ಟಿಮೇಟಮ್ ಸಹ ಹೊರಡಿಸಿದರು, ಏಳು ದಿನಗಳಲ್ಲಿ ಪ್ರಮಾಣವಚನದಡಿ ಅಫಿಡವಿಟ್‌ ಸಲ್ಲಿಸಬೇಕು ಅಥವಾ ರಾಷ್ಟ್ರದ ಕ್ಷಮೆಯಾಚಿಸಿ ಎಂದು ಹೇಳಿದರು.</p>



<p><em>ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸದ ಏಳು ಅಂಶಗಳ ಬಗ್ಗೆ ಒಂದು ಒಳನೋಟವನ್ನು ಇಲ್ಲಿ ನೀಡಲಾಗಿದೆ. </em></p>



<p>‌ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಂದ ಅಫಿಡವಿಟ್ ಕೇಳಿದೆಯೇ ಹೊರತು, ಅಂತಹದೇ ಆರೋಪಗಳನ್ನು ಮಾಡಿರುವ ಬಿಜೆಪಿಯಿಂದ ಕೇಳಿಲ್ಲ.</p>



<p><em>ಜ್ಞಾನೇಶ್‌ ಕುಮಾರ್ ತಮ್ಮ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಲೇ, ಚುನಾವಣಾ ಆಯೋಗಕ್ಕೆ &#8220;ಪಕ್ಷ</em> ಅಥವಾ <em>ವಿಪಕ್ಷ</em> &#8221; (ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ) ಎಂಬುದು ಇಲ್ಲ ಎಂದು ಹೇಳಿದರು.</p>



<p>&#8220;ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷಗಳು ಅಥವಾ ವಿರೋಧ ಪಕ್ಷಗಳು ಇಲ್ಲ; ಎಲ್ಲರೂ ಸಮಾನರು. ಯಾವುದೇ ರಾಜಕೀಯ ಪಕ್ಷದಿಂದ ಯಾರೇ ಬಂದರೂ, ಆಯೋಗ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಮಾಡದೇ ಇರುವುದಿಲ್ಲ&#8221; ಎಂದು ಅವರು ಹೇಳಿದರು.</p>



<p><a href="https://thewire.in/government/election-commission-opposition-creating-confusion-bihar-sir">ಹಾಗಿದ್ದೂ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳು &#8220;ಆಧಾರರಹಿತ&#8221;</a> ಎಂದು ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿ‌, ಅವರಿಂದ ಅಫಿಡವಿಟ್ ಕೂಡ ಕೇಳಿದರು.</p>



<p>&#8220;ಒಬ್ಬ ಮತದಾರನ ವಿರುದ್ಧ ದೂರು ಬಂದರೆ, ಚುನಾವಣಾ ಆಯೋಗ ಅದನ್ನು ಪರಿಶೀಲಿಸುತ್ತದೆ. ಆದರೆ ಸುಮಾರು 1.5 ಲಕ್ಷ ಮತದಾರರ ಬಗ್ಗೆ ಮೇಲೆ ಆರೋಪಗಳು ಬಂದಿವೆ, ಯಾವುದೇ ಪುರಾವೆ ಅಥವಾ ಅಫಿಡವಿಟ್ ಇಲ್ಲದೆ 1.5 ಲಕ್ಷ ಮತದಾರರಿಗೆ ನಾವು ನೋಟಿಸ್ ಕಳುಹಿಸಬೇಕೇ? ಇದು ಕಾನೂನುಬದ್ಧವಾಗುತ್ತದೆಯೇ? ಕಾನೂನಿನಲ್ಲಿ ಅಥವಾ ಅಫಿಡವಿಟ್‌ನಲ್ಲಿ ಯಾವುದೇ ಪುರಾವೆಗಳಿಲ್ಲ. ನಾವು 1.5 ಲಕ್ಷ ಮತದಾರರನ್ನು ಎಸ್‌ಡಿಎಂ [ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್] ಕಚೇರಿಗೆ ಕರೆದು ಅವರು ನಕಲಿ ಮತದಾರರು ಎಂದು ಹೇಳಬೇಕೇ? ಮತದಾರರು ಪುರಾವೆ ಕೇಳುವುದಿಲ್ಲವೇ? ಯಾವುದೇ ಪುರಾವೆ ಇಲ್ಲದೆ, ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ,&#8221; ಎಂದು ಕುಮಾರ್ ಹೇಳಿದರು.</p>



<p>&#8220;ಪ್ರತಿಯೊಬ್ಬ ಮತದಾರರೊಂದಿಗೆ ಚುನಾವಣಾ ಆಯೋಗವು ಗುರಾಣಿಯಂತೆ ನಿಂತಿದೆ. ತಪ್ಪು ವಿಶ್ಲೇಷಣೆ ಮತ್ತು ಅಂಕಿ-ಅಂಶಗಳೊಂದಿಗೆ ಪಿಪಿಟಿ ನೀಡುವ ಮೂಲಕ ಮತ್ತು &#8216;ಈ ಮಹಿಳೆ ಎರಡು ಬಾರಿ ಮತ ಚಲಾಯಿಸಿದ್ದಾರೆ&#8217; ಎಂದು ಹೇಳುವ ಮೂಲಕ ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಯಾರಾದರೂ ಭಾವಿಸಿದರೆ, ಇಂತಹ ಗಂಭೀರ ಆರೋಪಗಳ ವಿಷಯದಲ್ಲಿ ಅಫಿಡವಿಟ್ ಇಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಅದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುತ್ತದೆ,&#8221; ಎಂದು ಆಯುಕ್ತರು ಹೇಳಿದರು.</p>



<p>ಆಗಸ್ಟ್ 7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ <a href="https://thewire.in/politics/elections-choreographed-huge-criminal-fraud-by-election-commission-rahul-gandhi">&#8220;ಒಂದು ಸಂಬಂಧವಿದೆ&#8221; ಇದೆ</a> ಎಂದು ಆರೋಪಿಸಿದ್ದರು ಮತ್ತು ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಹೇಳಲು ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ಪುರಾವೆಯಾಗಿ ತೋರಿಸಿದ್ದರು.</p>



<p>ಲೋಕಸಭಾ ಸದಸ್ಯರಾದ ಗಾಂಧಿ (ರಾಯ್ ಬರೇಲಿ), ವಾದ್ರಾ (ವಯನಾಡು), ಯಾದವ್ (ಕನ್ನೌಜ್) ಮತ್ತು ಬ್ಯಾನರ್ಜಿ (ಡೈಮಂಡ್ ಹಾರ್ಬರ್) ವಿರುದ್ಧದ ಬಿಜೆಪಿ ಸಂಸದ ಠಾಕೂರ್ ಅರೋಪಗಳನ್ನು ಮಾಡಿದ್ದರು, ಆದರೆ ಅವರಿಂದ ಚುನಾವಣಾ ಆಯೋಗ ಏಕೆ ಅಫಿಡವಿಟ್ ಕೇಳುತ್ತಿಲ್ಲ ಎಂದು ವರದಿಗಾರರು ಕುಮಾರ್ ಅವರನ್ನು ಕೇಳಿದರು.</p>



<p><strong>ನಿಯಮ 20(3)(b) ರ ಉಲ್ಲೇಖ</strong></p>



<p>ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ, ಅವರಿಂದ ಅಫಿಡವಿಟ್ ಕೋರುವಾಗ,‌ ಜ್ಞಾನೇಶ್ ಕುಮಾರ್, 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಮೇಲೆ‌ ತಮ್ಮ ವಾದವನ್ನು ಕೇಂದ್ರೀಕರಿಸಿದರು.</p>



<p>&#8220;ನೀವು ಆ ಕ್ಷೇತ್ರದ ಮತದಾರರಾಗಿದ್ದರೆ, ನೀವು ನಿಗದಿತ ಸಮಯದೊಳಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಫಾರ್ಮ್ 6, 7 ಮತ್ತು 8 ಅನ್ನು ಭರ್ತಿ ಮಾಡಬಹುದು. ಆದರೆ ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ಕಾನೂನಿನಡಿಯಲ್ಲಿ ನಿಮಗೆ ಒಂದೇ ಒಂದು ಪರಿಹಾರವಿದೆ, ಅದು ನಿಯಮ 20(3)(b).&#8221;</p>



<p>&#8220;ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ನೀವು ಸಾಕ್ಷಿಯಾಗಿ ನಿಮ್ಮ ದೂರನ್ನು ಸಲ್ಲಿಸಬಹುದು ಎಂಬುದು ಇದರ ಅರ್ಥ. ನೀವು ಚುನಾವಣಾ ನೋಂದಣಿ ಅಧಿಕಾರಿಗೆ ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ನೀವು ದೂರು ನೀಡಿದ ವ್ಯಕ್ತಿಯ ಮುಂದೆ ಆ ಪ್ರಮಾಣ ವಚನ ಸ್ವೀಕರಿಸಬೇಕು.&#8221;</p>



<p>ಚುನಾವಣಾ ಆಯೋಗದ ಪರಿಷ್ಕರಣಾ ಪ್ರಕ್ರಿಯೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(ಬಿ) ಅನ್ವಯಿಸುತ್ತದೆ ಎಂದು <em>ದಿ ವೈರ್</em> ಈ ಹಿಂದೆ <a href="https://thewire.in/government/can-the-election-commission-demand-an-oath-from-rahul-gandhi-to-probe-vote-theft-allegations">ವರದಿ ಮಾಡಿತ್ತು .</a></p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ನಿಯಮ 20(3)(b) ದ ವ್ಯಾಪ್ತಿಗೆ ಬರುವುದಿಲ್ಲ, ಏಕೆಂದರೆ ಚುನಾವಣೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ ಎಂದು ತಜ್ಞರು ಹೇಳಿದ್ದಾರೆ.</p>



<p>ಪರಿಷ್ಕರಣೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(b) ಅನ್ವಯಿಸುತ್ತದೆ ಎಂದು ಕುಮಾರ್ ಉಲ್ಲೇಖಿಸಲಿಲ್ಲ. ಬದಲಾಗಿ, ರಾಹುಲ್ ಗಾಂಧಿಯವರ ಆರೋಪಗಳನ್ನು ಉಲ್ಲೇಖಿಸಿ 45 ದಿನಗಳಲ್ಲಿ ತಾವು ಕಂಡಿರುವ ದೋಷಗಳನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಅದು &#8220;ಸಾರ್ವಜನಿಕರ ಹಾದಿ ತಪ್ಪಿಸಿದಂತೆ&#8221; ಎಂದು ಅವರು ಹೇಳಿದರು.</p>



<p>&#8220;ನೀವು ನಿಗದಿತ 45 ದಿನಗಳ ಒಳಗೆ ಮತದಾರರ ಪಟ್ಟಿಯಲ್ಲಿರುವ ದೋಷಗಳ ವಿರುದ್ಧ ದೂರು ನೀಡದಿದ್ದರೆ, ಮತ್ತು ನಂತರ ʼಓಟ್ <em>ಚೋರಿ</em> [ಮತ ಕಳ್ಳತನ]ʼ ನಂತಹ ತಪ್ಪು ಪದಗಳನ್ನು ಬಳಸಿದರೆ <em>,</em> ಅದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಒಂದು ಮಾರ್ಗವಲ್ಲವೇ? ಇದು ಭಾರತದ ಸಂವಿಧಾನದ ಬಗ್ಗೆ ಅಗೌರವವನ್ನು ತೋರಿಸುತ್ತದೆ. ಅಲ್ಲದಿದ್ದರೆ ಮತ್ತೆ ಏನು?&#8221; ಅವರು ಹೇಳಿದರು.</p>



<p>ಜ್ಞಾನೇಶ್ ಕುಮಾರ್ ಏಳು ದಿನಗಳಲ್ಲಿ ಗಾಂಧಿಯವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.</p>



<p>&#8220;ದೇಶಕ್ಕೆ ಪ್ರಮಾಣ ವಚನ ನೀಡಿ ಅಥವಾ ಕ್ಷಮೆಯಾಚಿಸಿ. ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ನಮಗೆ‌ ಅವರಿಂದ ಅಫಿಡವಿಟ್ ಸಿಗದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಮತ್ತು &#8216;ನಮ್ಮ ಮತದಾರರು ವಂಚಕರು&#8217; ಎಂದು ಹೇಳುತ್ತಿರುವ ಆ ವ್ಯಕ್ತಿ ಕ್ಷಮೆಯಾಚಿಸಬೇಕು ಎಂದರ್ಥ.&#8221;</p>



<p>ಚುನಾವಣೆಗೆ ತುಂಬಾ ಹತ್ತಿರವಿರುವಾಗ ಮತ್ತು ಬಿಹಾರವು ಮಾನ್ಸೂನ್ ಪ್ರೇರಿತ ಪ್ರವಾಹವನ್ನು ಕಾಣುವ ಸಮಯದಲ್ಲಿ &#8211; ಬಿಹಾರದಲ್ಲಿ ಎಸ್‌ಐಆರ್‌ನ ಸಮಯದ ಕುರಿತು ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯನ್ನು ಕೊನೆಯ ಬಾರಿಗೆ 2003 ರ ಜುಲೈನಲ್ಲಿ ನಡೆಸಲಾಗಿತ್ತು ಎಂದು ಹೇಳಿದರು.</p>



<p>&#8220;ಹವಾಮಾನ ಚೆನ್ನಾಗಿಲ್ಲದಿದ್ದಾಗ ಜುಲೈನಲ್ಲಿ ಏಕೆ ಮಾಡಬೇಕು ಎಂಬ ಪ್ರಶ್ನೆ ಬಂದಿದೆ. ಬಿಹಾರದಲ್ಲಿ 2003 ರಲ್ಲಿ ಎಸ್‌ಐಆರ್ ನಡೆಸಿದಾಗ, ಅದನ್ನು ಜುಲೈ 14 ರಿಂದ ಆಗಸ್ಟ್ 14 ರವರೆಗೆ ಮಾಡಲಾಗಿತ್ತು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಹಾಗಿದ್ದೂ ಇದನ್ನು ಯಶಸ್ವಿಯಾಗಿ ಮಾಡಲಾಯಿತು, ಈಗ ಕೂಡ ಎಲ್ಲಾ ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ, ”ಎಂದು ಕುಮಾರ್ ಹೇಳಿದರು.</p>



<p>ಹಾಗಿದ್ದೂ, ಬಿಹಾರದಲ್ಲಿ 2003 ರಲ್ಲಿ ಯಾವುದೇ ವಿಧಾನಸಭಾ ಚುನಾವಣೆಗಳು ನಡೆದಿರಲಿಲ್ಲ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ .</p>



<p>ಮಾರ್ಚ್ 2000 ರಲ್ಲಿ, ಜನತಾದಳ (ಸಂಯುಕ್ತ)ದ ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಒಂದು ದಿನ ಮೊದಲು&nbsp;<a href="https://www.deccanherald.com/india/march-2000-when-nitish-quit-as-cm-before-floor-test-779422.html">ರಾಜೀನಾಮೆ ನೀಡಿದರು</a>&nbsp;ಮತ್ತು ರಾಷ್ಟ್ರೀಯ ಜನತಾದಳದ ರಾಬ್ರಿ ದೇವಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 2005 ರಲ್ಲಿ ನಡೆದ ವಿಧಾನಸಭಾ ಚುನಾವಣೆಯವರೆಗೂ ಅಧಿಕಾರದಲ್ಲಿ ಮುಂದುವರೆದರು.</p>



<p>2003 ರ SIR ನಡೆಸಲು ನೀಡಿದ ಆದೇಶವು ಇನ್ನೂ ಲಭ್ಯವಿಲ್ಲ ಮತ್ತು ಆ ವರ್ಷದ ಸಂಪೂರ್ಣ ಅವಧಿಯ ಉಲ್ಲೇಖಕ್ಕಾಗಿ ಅದನ್ನು ಪರಿಶೀಲಿಸಲಾಗುವುದಿಲ್ಲ ಎಂದು <em>ದಿ ವೈರ್ </em><a href="https://thewire.in/government/bihar-sir-why-has-no-one-seen-2003-revision-order">ವರದಿ ಮಾಡಿದೆ</a> , ಆದರೆ 2005 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಕ್ಕೆ ಬಹಳ ಹಿಂದೆಯೇ SIR ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.<a href="https://thewire.in/government/bihar-sir-why-has-no-one-seen-2003-revision-order"></a></p>



<p>2004 ರಲ್ಲಿ ಹೊರಡಿಸಲಾದ ತೀವ್ರ ಪರಿಷ್ಕರಣಾ ಆದೇಶದ ಕುರಿತಾದ ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲಿಲ್ಲ, ಆ ಆದೇಶದಲ್ಲಿ ಚುನಾವಣಾ ಆಯೋಗವು ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಮತ್ತು ಆದ್ದರಿಂದ ಈ ರಾಜ್ಯಗಳಲ್ಲಿ ಚುನಾವಣೆಯ ನಂತರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿತ್ತು. ಆ ಆದೇಶದ ಪ್ರತಿಯನ್ನು <em>ದಿ ವೈರ್ ಪರಿಶೀಲಿಸಿದೆ.</em></p>



<p>ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕಾನೂನು ಹೇಳುತ್ತದೆ ಎಂದು ಚುನಾವಣಾ ಮುಖ್ಯಸ್ಥರು ಹೇಳಿದರು. ಈ ವರ್ಷದ ಜನವರಿಯಲ್ಲಿ ಬಿಹಾರದಲ್ಲಿ ಸಾರಾಂಶ ಪರಿಷ್ಕರಣೆಯನ್ನು ನಡೆಸಲಾಗಿದ್ದರೂ, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಳಿಗೆ ಅದು ಸಾಕಾಗುವುದಿಲ್ಲ, ಆದ್ದರಿಂದ ಜುಲೈ ಅನ್ನು ಅರ್ಹತಾ ದಿನಾಂಕವೆಂದು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.</p>



<p><strong>ಅಕ್ರಮ ವಲಸಿಗರ ಬಗ್ಗೆ ಯಾವುದೇ ಉತ್ತರಗಳಿಲ್ಲ</strong></p>



<p><a href="https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FzIv7%2FZQ09etPKoyJV5h%2FcTqdXj7y4XEu54AgUpFYqlgb%2F9owy3xJkkWNyeb7x3GfQsXQUwCbGU493NshNTgs7UQ%3D%3D">ಜೂನ್ 24 ರಂದು ಬಿಹಾರದಲ್ಲಿ SIR ಅನ್ನು ಘೋಷಿಸುವಾಗ</a>, ಚುನಾವಣಾ ಆಯೋಗವು ವಿವಿಧ ಕಾರಣಗಳಿಗಾಗಿ ಇದನ್ನು ನಡೆಸುವುದು ಅಗತ್ಯ ಎಂದು ಹೇಳಿದೆ, ಅವುಗಳಲ್ಲಿ &#8220;ವಿದೇಶಿ ಅಕ್ರಮ ವಲಸಿಗರೂ&#8221; ಮತದಾರರ ಪಟ್ಟಿಯಲ್ಲಿ ಸೇರಿರುವುದು ಸೇರಿದೆ.</p>



<p>ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಬಂದ ಅನಿರ್ದಿಷ್ಟ ಸಂಖ್ಯೆಯ ಅಕ್ರಮ ವಲಸಿಗರು ಪಟ್ಟಿಯಲ್ಲಿ ಕಂಡುಬಂದಿದ್ದಾರೆ ಎಂದು ಚುನಾವಣಾ ಆಯೋಗವು ಈ ಹಿಂದೆ&nbsp;<a href="https://thewire.in/politics/election-commission-addresses-bihar-sir-criticism-through-selectively-made-available-whatsapp-texts">ಕೆಲವು ಮಾಧ್ಯಮಗಳಿಗೆ &#8220;ಮೂಲಗಳ&#8221;</a>&nbsp;ಮೂಲಕ ತಿಳಿಸಿತ್ತು .</p>



<p>ಪತ್ರಿಕಾಗೋಷ್ಠಿಯಲ್ಲಿ ದಾಖಲೆರಹಿತ ವಲಸಿಗರ ಸಂಖ್ಯೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಜ್ಞಾನೇಶ್ ಕುಮಾರ್ ಯಾವುದೇ ಅಂಕಿ ಅಂಶವನ್ನು ಒದಗಿಸಲಿಲ್ಲ.</p>



<p>&#8220;ಭಾರತದ ಸಂವಿಧಾನದ ಪ್ರಕಾರ, ಭಾರತೀಯ ನಾಗರಿಕರು ಮಾತ್ರ ಸಂಸದರು ಮತ್ತು ಶಾಸಕರ ಚುನಾವಣೆಗಳಿಗೆ ಮತ ಚಲಾಯಿಸಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇತರ ದೇಶಗಳ ಜನರಿಗೆ ಆ ಹಕ್ಕಿಲ್ಲ. ಅಂತಹ ಜನರು ಗಣತಿ ನಮೂನೆಯನ್ನು ಭರ್ತಿ ಮಾಡಿದ್ದರೆ, SIR ಪ್ರಕ್ರಿಯೆಯ ಸಮಯದಲ್ಲಿ ಅವರು ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಬೇಕಾಗುತ್ತದೆ, ಇವುಗಳನ್ನು ಸೆಪ್ಟೆಂಬರ್ 30 ರವರೆಗೆ ಪರಿಶೀಲಿಸಲಾಗುತ್ತಿದೆ. ಭಾರತೀಯ ನಾಗರಿಕರಲ್ಲದವರನ್ನು ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಮತದಾರರಾಗಿ ಸೇರಿಸಲಾಗುವುದಿಲ್ಲ,”‌ ಎಂದು ಅವರು ಹೇಳಿದರು.</p>



<p>ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು SIR ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬುದಕ್ಕೆ ಅವರು ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p><strong>ಪರಿಶೀಲನಾ ದಾಖಲೆಗಳೊಂದಿಗೆ ಸ್ವೀಕರಿಸಲಾದ ಗಣತಿ ನಮೂನೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಉತ್ತರವಿಲ್ಲ</strong></p>



<p>ಜುಲೈ 25 ರಂದು ಗಣತಿ ನಮೂನೆಗಳನ್ನು ಸಂಗ್ರಹಿಸಲು ಮೀಸಲಾಗಿರುವ SIR ಹಂತದ ಕೊನೆಯಲ್ಲಿ, 99.8% ನಮೂನೆಗಳನ್ನು ಮತದಾರರಿಂದ ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.</p>



<p>ಈ ಪ್ರಕ್ರಿಯೆಯಲ್ಲಿ ಪ್ರಮುಖ ವಿವಾದಾತ್ಮಕ ಅಂಶವೆಂದರೆ ಆಯೋಗವು ಮತದಾರರಿಂದ ಅವರ ಅರ್ಹತೆಯ ಪುರಾವೆಯಾಗಿ ಕೇಳುತ್ತಿರುವ 11 ದಾಖಲೆಗಳ ಪಟ್ಟಿ. ಅರ್ಹ ದಾಖಲೆಗಳೊಂದಿಗೆ ಎಷ್ಟು ಫಾರ್ಮ್‌ಗಳನ್ನು ಸ್ವೀಕರಿಸಲಾಗಿದೆ ಅಥವಾ ಬೂತ್ ಮಟ್ಟದ ಅಧಿಕಾರಿಗಳು &#8216;ಶಿಫಾರಸು ಮಾಡಿದ್ದಾರೆ&#8217; ಮತ್ತು &#8216;ಶಿಫಾರಸು ಮಾಡಿಲ್ಲ&#8217; ಎಂಬ ಮತದಾರರ ನಡುವೆ ಈಗ ವ್ಯತ್ಯಾಸ ಏಕೆ ಇದೆ ಎಂಬುದರ ಕುರಿತು ಕುಮಾರ್ ಯಾವುದೇ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ.</p>



<p>&#8220;ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ, ಎಷ್ಟು ಜನರನ್ನು ಸ್ವೀಕರಿಸಲಾಗಿದೆ, ಎಷ್ಟು ಜನರನ್ನು ಶಿಫಾರಸು ಮಾಡಲಾಗಿದೆ ಮತ್ತು ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿ ಏನು ಶಿಫಾರಸು ಮಾಡಿದ್ದಾರೆ ಎಂಬುದರ ದಾಖಲೆಗಳು &#8211; ಈ ಡೇಟಾವನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವು ಬಹು ಹಂತದಲ್ಲಿ ಈ ಕೆಲಸ ಮಾಡುತ್ತಿದೆ&#8221; ಎಂದು ಕುಮಾರ್ ಹೇಳಿದರು.</p>



<p>&#8220;ಮೊದಲು ಬೂತ್ ಮಟ್ಟದ ಅಧಿಕಾರಿ, ನಂತರ ಬೂತ್ ಮಟ್ಟದ ಮೇಲ್ವಿಚಾರಕ, ನಂತರ SDM, ನಂತರ DM ಮತ್ತು ನಂತರ ಮುಖ್ಯ ಚುನಾವಣಾ ಅಧಿಕಾರಿ ಇರುತ್ತಾರೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಚುನಾವಣಾ ಆಯೋಗ ಅಥವಾ ಬೇರೆ ಯಾರೂ ಯಾವುದೇ ಮತವನ್ನು ಸೇರಿಸಲು ಸಾಧ್ಯವಿಲ್ಲ. ಈ ವಿಕೇಂದ್ರೀಕೃತ ರಚನೆಯ ಅಡಿಯಲ್ಲಿ, ಎಷ್ಟು ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆಯೋ ಇಲ್ಲವೋ, ಇನ್ನೂ SDM ಮಟ್ಟದಲ್ಲಿ ನಡೆಯುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಇನ್ನೂ ಹೊರಬರಬೇಕಿದೆ, ಅದಕ್ಕೂ ಮುಂಚಿತವಾಗಿ ಏನನ್ನೂ ಹೇಳುವುದು ಸರಿಯಲ್ಲ,&#8221; ಎಂದು ಅವರು ಹೇಳಿದರು.</p>



<p><strong>ಮನೆ ನಂಬರ್‌ &#8211; 0 </strong></p>



<p>ಬಿಹಾರದ ಮತದಾರರ ಪಟ್ಟಿಯಲ್ಲಿ ಹಲವಾರು ಮತದಾರರ <a href="https://www.thenewsminute.com/news/exclusive-bihar-sir-rolls-reveal-292048-voters-with-house-number-0">ಮನೆ ಸಂಖ್ಯೆಗಳು 0 ಎಂದು ದಾಖಲಾಗಿವೆ</a> ಎಂದು ವರದಿಗಳು ಹೊರಬಿದ್ದಿವೆ, ಆದರೆ ಅದನ್ನು ಪ್ರಶ್ನಿಸುವುದು ಬಡ ಮತದಾರರನ್ನು ತಮಾಷೆ ಮಾಡಿದಂತೆ ಎಂದು ಜ್ಞಾನೇಶ್ ಕುಮಾರ್ ಹೇಳಿದರು.</p>



<p>&#8220;ಹಲವರಿಗೆ ಮನೆ ಇಲ್ಲ‌, ಆದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳಿವೆ. ಹಾಗಾದರೆ ಅವರ ವಿಳಾಸ ಏನು? ಅವರು ರಾತ್ರಿ ಮಲಗಲು ಹೋಗುವ ಸ್ಥಳವೇ ವಿಳಾಸ; ಕೆಲವೊಮ್ಮೆ ರಸ್ತೆಯ ಬದಿಯಲ್ಲಿ, ಕೆಲವೊಮ್ಮೆ ಸೇತುವೆಯ ಕೆಳಗೆ, ಕೆಲವೊಮ್ಮೆ ದೀಪದ ಕಂಬದ ಪಕ್ಕದಲ್ಲಿ. ಅವರನ್ನು ನಕಲಿ ಮತದಾರರು ಎಂದು ಹೇಳಿದರೆ, ಅದು ನಮ್ಮ ಬಡ ಮತದಾರರು, ಸಹೋದರಿಯರು, ಸಹೋದರರು ಮತ್ತು ಹಿರಿಯರ ಬಗ್ಗೆ ದೊಡ್ಡ ವ್ಯಂಗ್ಯ ಮಾಡಿದಂತೆ,&#8221; ಎಂದು ಅವರು ಹೇಳಿದರು.</p>



<p>ಕೋಟ್ಯಂತರ&#8221; ಜನರ ವಿಳಾಸಗಳ ಮನೆ ನಂಬರ್‌ 0, ಏಕೆಂದರೆ ಅವರ ಪಂಚಾಯತ್‌ಗಳು ಅಥವಾ ಪುರಸಭೆಗಳು ಅವರ ಮನೆಗಳಿಗೆ ಸಂಖ್ಯೆಗಳನ್ನು ನೀಡಿಲ್ಲ ಎಂದು ಕುಮಾರ್ ಹೇಳಿದರು, ಚುನಾವಣಾ ಆಯೋಗವು ಅಂತಹ ಮತದಾರರಿಗೆ &#8220;ಕಾಲ್ಪನಿಕ ಸಂಖ್ಯೆಗಳನ್ನು&#8221; ಒದಗಿಸುತ್ತದೆ, ಅದನ್ನು &#8220;ಕಂಪ್ಯೂಟರ್‌ನಲ್ಲಿ ಶೂನ್ಯವಾಗಿ ತೋರಿಸಲಾಗುತ್ತದೆ ಎಂದು ಅವರು ಹೇಳಿದರು. &#8220;ಇದರರ್ಥ ಅವರು ಮತದಾರರಲ್ಲ ಎಂದು ಅರ್ಥವಲ್ಲ,&#8221; ಎಂದು ಜ್ಞಾನೇಶ್‌ ಹೇಳಿದರು.</p>



<p><strong>ಮತದಾರರ ಪಟ್ಟಿಯಲ್ಲಿ ಅನೇಕ ಬಾರಿ ಮತದಾರನ ಹೆಸರು</strong></p>



<p>ಒಂದೇ ಮತದಾರನನ್ನು ಹಲವಾರು ಮತಗಟ್ಟೆಗಳಲ್ಲಿ ನೋಂದಾಯಿಸಿರುವ ನಿದರ್ಶನಗಳಿವೆ ಎಂದು ಗಾಂಧಿ ಆರೋಪಿಸಿದ್ದರೆ, ಒಬ್ಬ ಮತದಾರನ ಹೆಸರು ಹಲವು ಬಾರಿ ಇದ್ದರೂ ಒಮ್ಮೆ ಮಾತ್ರ ಮತ ಚಲಾಯಿಸಬಹುದು ಎಂದು ಕುಮಾರ್ ಹೇಳಿದರು.</p>



<p>ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರರ ಹೆಸರು ಹಲವು ಬಾರಿ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ.</p>



<p>ಆಗಸ್ಟ್ 7 ರ ಪತ್ರಿಕಾಗೋಷ್ಠಿಯಲ್ಲಿ ಗಾಂಧಿಯವರು ವಿವಿಧ ಬೂತ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿ ಮತದಾರರು ಹಲವು ಬಾರಿ ಕಾಣಿಸಿಕೊಂಡಿರುವ ವಿವಿಧ ಉದಾಹರಣೆಗಳನ್ನು ತೋರಿಸಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">New Voter List Irregularities<br><br>Significant irregularities have also been observed in the new voter list.<br><br>For instance, a woman named &#39;Shakun Rani&#39; was registered twice within two months. This was done so cleverly that in one instance, her full name was entered as &#39;Shakun Rani&#39;… <a href="https://t.co/EOZWWTIyZA">pic.twitter.com/EOZWWTIyZA</a></p>&mdash; Congress (@INCIndia) <a href="https://twitter.com/INCIndia/status/1953419885108773194?ref_src=twsrc%5Etfw">August 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಒಬ್ಬ ಮತದಾರ &#8220;ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಎರಡು ಬಾರಿ ಇದ್ದರೆ ಅದು ಹೇಗೆ ಮತ ಕಳ್ಳತನವಾಗುತ್ತದೆ? ಅದು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರರು ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಅದಕ್ಕಾಗಿಯೇ ಚುನಾವಣಾ ಆಯೋಗದ ಡೇಟಾವನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ ಮತ್ತು ಮತದಾರರ ಪಟ್ಟಿಗಳು ತಪ್ಪು ಮತ್ತು ಆದ್ದರಿಂದ ಮತದಾನ ತಪ್ಪು ಎಂದು ಹೇಳಲಾಗಿದೆ ಎಂದು ನಾವು ಹೇಳಿದ್ದೇವೆ &#8211; ಚುನಾವಣಾ ಪಟ್ಟಿಗಳು ಮತ್ತು ಮತದಾನ ಬೇರೆ ಬೇರೆ&#8221; ಎಂದು ಕುಮಾರ್ ಹೇಳಿದರು.‌</p>



<p>(ಇದು ದಿ ವೈರ್‌ ಪ್ರಕಟಿಸಿದ <a href="https://thewire.in/government/chief-election-commissioner-gyanesh-kumar-presser-seven-non-answers"><strong>Oath Politics, Silence on Forms Received and Number of &#8216;Illegal&#8217; Immigrants: EC&#8217;s Seven Non-Answers</strong></a> ಕನ್ನಡಾನುವಾದ)</p>



<p></p>
]]></content:encoded>
					
		
		
			</item>
		<item>
		<title>ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ ಚುನಾವಣಾ ಆಯೋಗ!</title>
		<link>https://peepalmedia.com/the-election-commission-targeted-rahul-gandhi-to-cover-up-its-failure/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 11 Aug 2025 06:30:25 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Election Commission of India]]></category>
		<category><![CDATA[mahadevapura]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=63987</guid>

					<description><![CDATA[ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು. ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ. ಮಹದೇವಪುರದಲ್ಲಿ, [&#8230;]]]></description>
										<content:encoded><![CDATA[
<p>ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) <a href="https://x.com/INCIndia/status/1953419885108773194">ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ</a>ಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ <a href="https://x.com/ECISVEEP/status/1953419769564254699">ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ</a>, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು.</p>



<p>ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ.</p>



<p>ಮಹದೇವಪುರದಲ್ಲಿ, ಚುನಾವಣಾ ಆಯೋಗವು ವರ್ಷಗಳಿಂದ ತನ್ನದೇ ಆದ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿದೆ, ಆದರೂ ಕ್ಷೇತ್ರದ ಮತದಾರರ ಪಟ್ಟಿಯು ಅಸಾಮಾನ್ಯ ಮತ್ತು ಅಸಂಭವ ದರದಲ್ಲಿ ಬೆಳೆಯುತ್ತಿತ್ತು. ಆಯೋಗದ ದತ್ತಾಂಶ, ಸುದ್ದಿ ವರದಿಗಳು ಮತ್ತು ಹಿಂದಿನ ಹಗರಣಗಳು, ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸುವ ಏಕೈಕ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ಬಿಕ್ಕಟ್ಟನ್ನು ಬೆಳೆಯಲು ಅವಕಾಶ ನೀಡಿತ್ತು ಮತ್ತು ಈಗ ಅದನ್ನು ಬಹಿರಂಗವಾಗಿ ನಿರಾಕರಿಸುತ್ತಿದೆ. </p>



<p>ಮಹದೇವಪುರದ ಕಥೆ ಚುನಾವಣಾ ಆಯೋಗದ ಸ್ವಂತ<a href="https://www.eci.gov.in/Documents/Final-ER-FAQ.pdf"> ಕೈಪಿಡಿಯಿಂದ</a> ಆರಂಭವಾಗುತ್ತದೆ. ಈ ಕೈಪಿಡಿ ಒಂದು ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯ ಶೇ.4ಕ್ಕಿಂತ ಹೆಚ್ಚು ನಿವ್ವಳ ಸೇರ್ಪಡೆಯಾದರೆ &#8220;ಹೆಚ್ಚುವರಿ ಹಂತಗಳ ದೃಢೀಕರಣವನ್ನು&#8221; ಮಾಡಬೇಕೆಂದು ಹೇಳುತ್ತದೆ.  ಈ ಶೇ.4 ರ ಗಡಿಯು ಸಿಂಗಲ್‌ ರಿವಿಷನ್‌ ಸೈಕಲ್‌ಗೆ ಆಯೋಗದ ಎಚ್ಚರಿಕೆಯ ಗಂಟೆಯಾಗಿದೆ.</p>



<p>ಮಹದೇವಪುರದಲ್ಲಿ, ದತ್ತಾಂಶವು ಈ ಎಚ್ಚರಿಕೆಯ ಗಂಟೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಬಡಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಅಧಿಕೃತ ಮತದಾರ ದತ್ತಾಂಶವು ತೀವ್ರವಾದ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ. ಆಯೋಗವು ಸ್ವಂತ ಮಾನದಂಡದ ಅಡಿಯಲ್ಲಿ ನಿರಂತರ ವಿಶೇಷ ಪರಿಶೀಲನೆಯನ್ನು ಮಾಡಬೇಕಿತ್ತು. </p>



<h4 class="wp-block-heading">ವಿವರಣೆ:</h4>



<figure class="wp-block-image size-large"><img decoding="async" width="1024" height="366" src="https://peepalmedia.com/wp-content/uploads/2025/08/image-1024x366.png" alt="" class="wp-image-63988" srcset="https://peepalmedia.com/wp-content/uploads/2025/08/image-1024x366.png 1024w, https://peepalmedia.com/wp-content/uploads/2025/08/image-300x107.png 300w, https://peepalmedia.com/wp-content/uploads/2025/08/image-768x274.png 768w, https://peepalmedia.com/wp-content/uploads/2025/08/image-1536x549.png 1536w, https://peepalmedia.com/wp-content/uploads/2025/08/image-150x54.png 150w, https://peepalmedia.com/wp-content/uploads/2025/08/image-696x249.png 696w, https://peepalmedia.com/wp-content/uploads/2025/08/image-1068x381.png 1068w, https://peepalmedia.com/wp-content/uploads/2025/08/image.png 1596w" sizes="(max-width: 1024px) 100vw, 1024px" /></figure>



<ul class="wp-block-list">
<li>ಪ್ರತಿ ಐದು ವರ್ಷಗಳ ಗುಂಪಿನಲ್ಲಿ, ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ.5.5 ರಿಂದ ಶೇ.6.8 ರವರೆಗೆ ಇತ್ತು, ಇದರಿಂದ ಆಯೋಗದ ಶೇ.4 ರ ಗಡಿಯನ್ನು ಹಲವಾರು ಬಾರಿ ಉಲ್ಲಂಘಿಸಲಾಗಿದೆ ಎಂಬುದು ಖಚಿತವಾಗಿದೆ.</li>



<li>ಒಂದು ವರ್ಷದಲ್ಲಿ, ಮತದಾರರ ಸಂಖ್ಯೆ ಶೇ.8.54 ರಷ್ಟು ಏರಿಕೆಯಾಗಿದೆ. 2023 ರ ರಾಜ್ಯ ಚುನಾವಣೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ನಡುವೆ, ಮತದಾರರ ಸಂಖ್ಯೆ ಶೇ.8.54 ರಷ್ಟು ಗಣನೀಯವಾಗಿ ಬೆಳೆಯಿತು. ಈ ಸಿಂಗಲ್‌ ರಿವಿಷನ್‌ ಸೈಕಲ್‌ ಆಯೋಗದ ಶೇ.4 ರ ಕೆಂಪು ಗೆರೆಯನ್ನು ಎರಡು ಪಟ್ಟು ಮೀರಿತು. ಆಯೋಗ ಸ್ವಯಂಚಾಲಿತ ಪರಿಶೀಲನೆಯನ್ನು ಆರಂಭಿಸಬೇಕಿತ್ತು.</li>
</ul>



<p>ಇದು ನಗರವ್ಯಾಪಿ ಪ್ರವೃತ್ತಿಯಾಗಿರಲಿಲ್ಲ. 2008 ರಿಂದ 2024 ರವರೆಗೆ ಮಹದೇವಪುರದ ಶೇ.140 ರ ಬೆಳವಣಿಗೆಯು, ಅದೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಇತರ ಏಳು ವಿಧಾನಸಭಾ ಭಾಗಗಳ ಬೆಳವಣಿಗೆಯನ್ನು ಕುಗ್ಗಿಸಿತು. <a href="https://archive.ph/JYREo"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ</a>ಯಂತೆ, ಎರಡನೇ ವೇಗವಾಗಿ ಬೆಳೆಯುತ್ತಿರುವ ಭಾಗವಾದ ಸರ್ವಜ್ಞನಗರವು ಇದೇ ಅವಧಿಯಲ್ಲಿ ಕೇವಲ ಶೇ.26.5 ರಷ್ಟು ಬೆಳೆಯಿತು. ಉಳಿದ ಆರು ಭಾಗಗಳ ಬೆಳವಣಿಗೆ ಇದಕ್ಕಿಂತಲೂ ಕಡಿಮೆಯಾಗಿತ್ತು.</p>



<p>ಮಹದೇವಪುರದಲ್ಲಿ ಐಟಿ ಕಾರಿಡಾರ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಇಂತಹ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗದ ನಿಯಮಗಳನ್ನು ರೂಪಿಸಲಾಗಿದೆ. ಅಸಾಧಾರಣ ಬೆಳವಣಿಗೆಯು ಅಧಿಕಾರಿಗಳನ್ನು ತಮ್ಮ ಕರ್ತವ್ಯ ಮಾಡುವುದರಿಂದ ವಿನಾಯಿತಿ ನೀಡುವುದಿಲ್ಲ; ಇದಕ್ಕೆ ವಿರುದ್ಧವಾಗಿ, ಇದು &#8220;additional layers of cross-verification&#8221; ಮಾಡಬೇಕೆಂದು ಒತ್ತಾಯಿಸುತ್ತದೆ, ಆದರೆ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೋರುತ್ತದೆ.</p>



<p>ದತ್ತಾಂಶವು ಎರಡು ವಿಷಯಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ, ಮಹದೇವಪುರವು ಒಂದು ತೀವ್ರವಾದ ವಿಚಲನವಾಗಿತ್ತು. ಎರಡನೆಯದಾಗಿ, ಚುನಾವಣಾ ಆಯೋಗವು ತನ್ನದೇ ಆದ ನಿಯಮಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ತನಿಖೆ ನಡೆಸಬೇಕಿತ್ತು, ಆದರೂ ಅದು ಮತದಾರರ ಪಟ್ಟಿಯನ್ನು ಹತ್ತಿರದಲ್ಲೇ ಇದ್ದ ಮುಂದಿನ ದೊಡ್ಡ ಕ್ಷೇತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಲು ಅವಕಾಶ ನೀಡಿತು.</p>



<p><strong>ಸಾರ್ವಜನಿಕ ಎಚ್ಚರಿಕೆಗಳು ಮತ್ತು ದಾಖಲಿತ ಹಗರಣಗಳು</strong></p>



<p>ಎಚ್ಚರಿಕೆಗಳು ಕೇವಲ ದತ್ತಾಂಶದಲ್ಲಿ ಮಾತ್ರ ಇರಲಿಲ್ಲ. ಬೆಂಗಳೂರಿನ ನಾಗರಿಕರು ಮತ್ತು ಕಾರ್ಯಕರ್ತರು ವರ್ಷಗಳಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು, ಆದರೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು. </p>



<p>2017 ರಲ್ಲಿ, ವೈಟ್‌ಫೀಲ್ಡ್‌ನಲ್ಲಿ &#8220;ಮಿಲಿಯನ್ ವೋಟರ್ಸ್ ರೈಸಿಂಗ್&#8221; ಎಂಬ ನಾಗರಿಕರ ಸಂಘಟನೆಯೊಂದು ಆಳವಾದ ಸಮಸ್ಯೆಗಳನ್ನು ಕಂಡುಕೊಂಡಿತು. <a href="https://www.thehindu.com/news/national/karnataka/mahadevapura-has-seen-allegations-over-electoral-roll-manipulation-earlier-too/article69909837.ece"><em>ದಿ ಹಿಂದೂ</em> </a>ವರದಿಯಂತೆ, ಶೇ.66 ರಷ್ಟು ಮತದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು. ಸಾರ್ವಜನಿಕರು ಆಕ್ರೋಶಿತರಾದರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಫಾರ್ಮ್‌ಗಳ ಮರುಪರಿಶೀಲನೆಗೆ ಆದೇಶಿಸಲು ಒತ್ತಾಯಿಸಿದರು. ಆದರೂ ಇದರಿಂದ ತೃಪ್ತರಾಗದ ನಾಗರಿಕರು ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬಾಗಿಲಿಗೆ ತಂದರು. </p>



<p>ನಂತರ, 2022 ರಲ್ಲಿ, ಚಿಲುಮೆ ವಿವಾದವು ಮತದಾರರ ಪಟ್ಟಿಯ ದುರ್ಬಳಕೆಯ ಒಂದು ಭಯಾನಕತೆಯನ್ನು ನಮ್ಮ ಮುಂದೆ ಇಟ್ಟಿತು. <em><a href="https://www.thenewsminute.com/karnataka/probe-finds-chilume-collected-bengaluru-voter-data-illegally-and-stored-foreign-servers">ದಿ ನ್ಯೂಸ್‌ಮಿನಿಟ್</a></em> ಮತ್ತು ಪ್ರತಿಧ್ವನಿ ನಡೆಸಿದ ತನಿಖಾ ವರದಿಯಲ್ಲಿ, ನಗರರಾಡಳಿತದಿಂದ &#8216;ಮತದಾರರ ಜಾಗೃತಿಯನ್ನು ಹೆಚ್ಚಿಸಲು&#8217; ಅಧಿಕಾರ ಪಡೆದ ಚಿಲುಮೆ ಟ್ರಸ್ಟ್ ಎಂಬ ಎನ್‌ಜಿಒ ಮೇಲೆ, ಮತದಾರರ ವೈಯಕ್ತಿಕ ದತ್ತಾಂಶವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಮಾಡಲಾಗಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು, ಈ ಸಂಸ್ಥೆಯು ಈ ದತ್ತಾಂಶವನ್ನು ರಾಜಕೀಯ ಕ್ಲೈಂಟ್‌ಗಳಿಗಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಲು ಬಳಸಿದೆ ಎಂದು ಆರೋಪಿಸಿತು.</p>



<p>ಸರ್ಕಾರಿ ತನಿಖೆಯು ನಂತರ ಚಿಲುಮೆ &#8220;ಕಾನೂನುಬಾಹಿರವಾಗಿ&#8221; ಮತದಾರರ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿತು ಎಂದು ಒಪ್ಪಿಕೊಂಡಿತು, ಆದರೂ &#8220;ದುರ್ಬಳಕೆಯಾಗಿದೆ&#8221; ಎಂದು ತನಿಖೆ ಕಂಡುಹಿಡಿಯಲಿಲ್ಲ. ಮತದಾರರ ಜಾಗೃತಿಯ ಹೆಸರಿನಲ್ಲಿ ಅಧಿಕೃತ ಪ್ರಕ್ರಿಯೆಯನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಉಲ್ಲಂಘಿಸಲಾಗಿತ್ತು. ಮಹದೇವಪುರವು ಚಿಲುಮೆ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಒಂದಾಗಿತ್ತು.</p>



<p><strong>ಪ್ರಮಾಣ ಎಂಬ ವಿಡಂಬನೆ</strong></p>



<p>ಇದು ಆಗಸ್ಟ್ 7, 2025 ರಂದು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯ ಹಿನ್ನೆಲೆಯಾಗಿತ್ತು. ಅವರ 1,00,250 &#8220;ಕದ್ದ ಮತಗಳ&#8221; ಆರೋಪಕ್ಕೆ ವರ್ಷಗಳಿಂದ ಏರಿಳಿಯುತ್ತಿರುವ ಮತದಾರರ ಸಂಖ್ಯೆಗಳು, ನಿರ್ಲಕ್ಷಿತ ದೂರುಗಳು ಮತ್ತು ಸಾರ್ವಜನಿಕ ಹಗರಣಗಳು ಆಧಾರಿತವಾಗಿದ್ದವು.</p>



<p>ಚುನಾವಣಾ ಆಯೋಗದ ಪ್ರತಿಕ್ರಿಯೆ, ಆರೋಪವನ್ನು ಅಧಿಕೃತವಾಗಿ ಸಲ್ಲಿಸಲು ಒತ್ತಾಯಿಸುವುದು ವಿಡಂಬನೆಯಾಗಿದೆ. ವಿವರವಾದ ಆರೋಪಗಳನ್ನು ತನಿಖೆ ಮಾಡುವ ಬದಲು, ಆಯೋಗವು ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾನೂನು ತಜ್ಞ ಅಭಿಷೇಕ್ ಮನು ಸಿಂಗ್ವಿ <a href="https://www.thehindu.com/news/national/eci-is-shooting-the-messenger-and-ignoring-the-message-says-congresss-abhishek-singhvi/article69916195.ece"><em>ದಿ ಹಿಂದೂ</em>ಗೆ </a>ತಿಳಿಸಿದಂತೆ, ಆಯೋಗವು ತಕ್ಷಣವೇ &#8220;ಸಂದೇಶವಾಹಕನನ್ನು ಗುರಿಯಾಗಿಸಿ ಸಂದೇಶವನ್ನು ನಿರ್ಲಕ್ಷಿಸಿತು &#8211; shooting the messenger and ignoring the message.&#8221;</p>



<p>ಆರೋಪವನ್ನು ಪ್ರಮಾಣೀಕರಿಸಲು ಒತ್ತಾಯಿಸುವುದು ಒಂದು ತಂತ್ರವಾಗಿದೆ. ಇದು ಆಯೋಗದ ಜವಾಬ್ದಾರಿಯಾದ ವ್ಯವಸ್ಥಿತ ಸಮಸ್ಯೆಯನ್ನು, ರಾಜಕಾರಣಿಯ ವೈಯಕ್ತಿಕ ವಿಶ್ವಾಸಾರ್ಹತೆಯ ಸಮಸ್ಯೆಯಾಗಿ ಬದಲಾಯಿಸುತ್ತದೆ. ಸಿಂಗ್ವಿ ಕಾನೂನು ದೋಷವನ್ನು ಎತ್ತಿ ತೋರಿಸಿದರು, ಈ ನಿಯಮವನ್ನು &#8220;ಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ&#8221; ಎಂದು ಕರೆದರು. ಪ್ರಮಾಣವು ನಿರ್ದಿಷ್ಟ, ವೈಯಕ್ತಿಕ ಚುನಾವಣಾ ವಿವಾದಗಳಿಗಾಗಿ ರೂಪಿಸಲಾಗಿದೆ ಮತ್ತು &#8220;ಒಂದು ಸಂಪೂರ್ಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್‌ ವಂಚನೆಯ ಆರೋಪಕ್ಕೆ ಯಾವುದೇ ಸಂಬಂಧವಿಲ್ಲ&#8221; ಎಂದು ಅವರು ವಾದಿಸಿದರು.</p>



<p>ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನ ಮೇಲೆ ಒಂದು ಲಕ್ಷಕ್ಕಿಂತ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಸ್ವತಃ ದೃಢೀಕರಿಸುವ ಅಸಾಧ್ಯ ಕಾನೂನು ಭಾರವನ್ನು ಹೇರಲು ಹೊರಟಿದೆ. ಆಯೋಗ ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟು ದೊಡ್ಡದಾಗಿ ಈ ಸಂಖ್ಯೆ ಬೆಳೆದಿದೆ.  ಸಿಂಗ್ವಿ ಈ ಪರಿಸ್ಥಿತಿಯನ್ನು ಒಬ್ಬ ನಾಗರಿಕನು ಕಳ್ಳತನವನ್ನು ವರದಿ ಮಾಡಿದಾಗ, ಪೊಲೀಸರು ಕಳ್ಳರನ್ನು ನಿರ್ಲಕ್ಷಿಸಿ, ದೂರುದಾರನಿಗೆ ಪ್ರಮಾಣದ ಮೇಲೆ ಹೇಳಿಕೆಯನ್ನು ನೀಡಲು ಒತ್ತಾಯಿಸುವಂತೆ ಆಗಿದೆ ಎಂದು ಹೋಲಿಸಿದರು.</p>



<p><strong>ಕೇಂದ್ರ ವಿಷಯ</strong></p>



<p>ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಲು ಸಂವಿಧಾನದಿಂದ ಬದ್ಧರಾದವರು ಚುನಾವಣಾ ಆಯೋಗದ ಅಧಿಕಾರಿಗಳೇ. ಮಹದೇವಪುರದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮದೇ ಆದ ದತ್ತಾಂಶ ಮತ್ತು ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಅವರು ವಿಫಲರಾದರು ಎಂಬುದಕ್ಕೆ ಸಾಕ್ಷಿಯಿದೆ. ಈಗ, ಅದೇ ಸಂಸ್ಥೆಯು ಒಂದು ಬೇರೆ ನಿಯಮವನ್ನು ಆಯುಧವಾಗಿ ಬಳಸಿಕೊಂಡು, ಸಮಸ್ಯೆಯನ್ನು ಮುನ್ನಲೆಗೆ ತಂದ ವ್ಯಕ್ತಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗ್ವಿ ಕೇಳಿದಂತೆ, &#8220;ಸಂವಿಧಾನಿಕ ಕಾವಲುಗಾರರು ತಮ್ಮ ಜವಾಬ್ದಾರಿಗಳನ್ನು ತ್ಯಜಿಸಿದಾಗ&#8230; ವಿರೋಧ ಪಕ್ಷವು ಕಾವಲುಗಾರರನ್ನು ಕಾಯದಿರೆ ಬೇರೆ ಯಾರುಕಾಯುತ್ತಾರೆ &#8211; When constitutional custodians… abdicate their responsibilities… Who will guard the guardians if not the opposition?&#8221;</p>



<p>ಮಹದೇವಪುರದ ಕಥೆಯು ಈಗ ಒಂದು ಕ್ಷೇತ್ರಕ್ಕೆ ಅಥವಾ ಒಬ್ಬ ರಾಜಕಾರಣಿಯ ಮೇಲಿನ ಆರೋಪಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಥಿಕ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ, ಇದು ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.</p>
]]></content:encoded>
					
		
		
			</item>
		<item>
		<title>ನ್ಯಾಷನಲ್ ಹೆರಾಲ್ಡ್ ಪ್ರಕರಣ: 661 ಕೋಟಿಯ ಆಸ್ತಿಯನ್ನು ವಶಕ್ಕೆ ಪಡೆಯಲು ನೋಟಿಸ್ ಜಾರಿ ಮಾಡಿದ ಇಡಿ</title>
		<link>https://peepalmedia.com/national-herald-case-ed-issues-notice-to-attach-assets-worth-rs-661-crore/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 14 Apr 2025 05:45:54 +0000</pubDate>
				<category><![CDATA[ದೇಶ]]></category>
		<category><![CDATA[ED]]></category>
		<category><![CDATA[Enforcement Directorate]]></category>
		<category><![CDATA[jawaharalal nehru]]></category>
		<category><![CDATA[National Herald case]]></category>
		<category><![CDATA[Prevention of Money Laundering Act]]></category>
		<category><![CDATA[Rahul Gandhi]]></category>
		<category><![CDATA[Sonia Gandhi]]></category>
		<guid isPermaLink="false">https://peepalmedia.com/?p=57177</guid>

					<description><![CDATA[ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮುಟ್ಟುಗೋಲು ಹಾಕಿಕೊಂಡಿದ್ದ 661 ಕೋಟಿ ರುಪಾಯಿ ಮೌಲ್ಯದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ನೋಟಿಸ್ ಜಾರಿ ಮಾಡಿದೆ ಎಂದು ತಿಳಿಸಿದೆ. ಈ ಆಸ್ತಿಗಳು ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿವೆ. ಕೇಂದ್ರ ತನಿಖಾ ಸಂಸ್ಥೆಯು ನವೆಂಬರ್ 2023 ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ನೀಡಲಾದ ತಾತ್ಕಾಲಿಕ ಜಪ್ತಿ ಆದೇಶದ ಮೂಲಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಪತ್ರಿಕೆಯ ಪ್ರಕಾಶಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ಅದರ ಹೋಲ್ಡಿಂಗ್ ಕಂಪನಿ ಯಂಗ್ ಇಂಡಿಯನ್ [&#8230;]]]></description>
										<content:encoded><![CDATA[
<p><em>ನ್ಯಾಷನಲ್ ಹೆರಾಲ್ಡ್</em> ಪತ್ರಿಕೆ ವಿರುದ್ಧದ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಮುಟ್ಟುಗೋಲು ಹಾಕಿಕೊಂಡಿದ್ದ 661 ಕೋಟಿ ರುಪಾಯಿ ಮೌಲ್ಯದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ <a href="https://enforcementdirectorate.gov.in/sites/default/files/latestnews/Press%20Release-%20AJL-%2012.04.25.pdf">ನೋಟಿಸ್ ಜಾರಿ ಮಾಡಿದೆ ಎಂದು </a>ತಿಳಿಸಿದೆ. ಈ ಆಸ್ತಿಗಳು ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿವೆ.</p>



<p>ಕೇಂದ್ರ ತನಿಖಾ ಸಂಸ್ಥೆಯು ನವೆಂಬರ್ 2023 ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ನೀಡಲಾದ ತಾತ್ಕಾಲಿಕ ಜಪ್ತಿ ಆದೇಶದ ಮೂಲಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಪತ್ರಿಕೆಯ ಪ್ರಕಾಶಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಮತ್ತು ಅದರ ಹೋಲ್ಡಿಂಗ್ ಕಂಪನಿ ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.</p>



<p>ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ತಲಾ 38% ಷೇರುಗಳನ್ನು ಹೊಂದಿದ್ದಾರೆ.</p>



<p>ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯ ಭಾಗವಾಗಿ ಏಪ್ರಿಲ್ 11 ರಂದು ಜಾರಿ ನಿರ್ದೇಶನಾಲಯವು ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ ಆಸ್ತಿ ನೋಂದಣಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿತು. &#8220;ವ್ಯಾಪಕ ತನಿಖೆಯ ನಂತರ&#8230; 988 ಕೋಟಿ ರೂಪಾಯಿಗಳ ಅಪರಾಧದ ಆದಾಯದ ಮಹತ್ವ ಉತ್ಪಾದನೆ, ಸ್ವಾಧೀನ ಮತ್ತು ಬಳಕೆ ಬಹಿರಂಗಗೊಂಡ ನಂತರ&#8221; ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.</p>



<p>&#8220;ಅಪರಾಧದ ಆದಾಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಆರೋಪಿಗಳು ಅದನ್ನು ವ್ಯರ್ಥ ಮಾಡುವುದನ್ನು ತಡೆಯಲು&#8221; ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.</p>



<p>ಇದಕ್ಕೆ ಪ್ರತಿಕ್ರಿಯೆಯಾಗಿ, ಕಾಂಗ್ರೆಸ್ ಸಂಸದ&nbsp;<a href="https://indianexpress.com/article/india/ed-issues-notice-possession-assets-cong-linked-ajl-case-9940494/" rel="noreferrer noopener" target="_blank">ಅಭಿಷೇಕ್ ಮನು ಸಿಂಘ್ವಿ,</a>&nbsp;ಸಂಸ್ಥೆಯ ಕ್ರಮದ ವಿರುದ್ಧ &#8220;ನ್ಯಾಯಾಲಯಗಳಲ್ಲಿ ಸರಿಯಾದ ಪರಿಹಾರ ಕ್ರಮ&#8221; ಕೈಗೊಳ್ಳಲಾಗುವುದು ಎಂದು ಹೇಳಿದರು ಎಂದು&nbsp;<em>ದಿ ಇಂಡಿಯನ್ ಎಕ್ಸ್‌ಪ್ರೆಸ್</em>&nbsp;ವರದಿ ಮಾಡಿದೆ.</p>



<p>&#8220;ಇದು&#8230; ಹಣ ವರ್ಗಾವಣೆ ಆರೋಪದ ಪ್ರಕ್ರಿಯೆಯ ಮುಂದುವರಿಕೆಯಾಗಿದ್ದು, ಯಾವುದೇ ಹಣ ಸಾಗಣೆ ಇಲ್ಲ, ವರ್ಗಾವಣೆ ಇಲ್ಲ ಮತ್ತು ಷೇರುಗಳ ವರ್ಗಾವಣೆಯನ್ನು ಕೇವಲ ಹಣ ವರ್ಗಾವಣೆ ಎಂದು ತಪ್ಪಾಗಿ ಪರಿಗಣಿಸಲಾಗಿದೆ. ಇದು ಹಿಂದಿನ ಆದೇಶಗಳನ್ನು ಆಧರಿಸಿದ ಪರಿಣಾಮದ ಆದೇಶವಾಗಿದೆ ಮತ್ತು ಸರ್ಕಾರವು ತನ್ನ ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡುವ ಪ್ರಯತ್ನಿಸುತ್ತಿದೆ,&#8221; <strong>ಎಂದು ಸಿಂಘ್ವಿ ಹೇಳಿದರು. </strong></p>



<p><strong>ಆರೋಪಗಳು</strong></p>



<p>ಏಪ್ರಿಲ್ 2008 ರಲ್ಲಿ, ಜವಾಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿಯಾಗುವ ಮೊದಲು ಸ್ಥಾಪಿಸಿ ಸಂಪಾದಿಸಿದ್ದ <em>ನ್ಯಾಷನಲ್ ಹೆರಾಲ್ಡ್</em> , 90 ಕೋಟಿ ರುಪಾಯಿಗಳಿಗೂ ಹೆಚ್ಚು ಸಾಲವನ್ನು ಹೊಂದಿದ್ದ ಕಾರಣ <a href="https://www.business-standard.com/about/what-is-national-herald-case" target="_blank" rel="noreferrer noopener">ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.</a></p>



<p>ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಕ್ಷದಿಂದ ಬಂದ ಹಣವನ್ನು ಬಳಸಿಕೊಂಡು ಸಾಲವನ್ನು ಖರೀದಿಸಲು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ 2012 ರಲ್ಲಿ ಪತ್ರಿಕೆಯ ವಿರುದ್ಧ ದೂರು ದಾಖಲಿಸಿದ್ದರು.</p>



<p>ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಕಾಂಗ್ರೆಸ್‌ಗೆ ನೀಡಬೇಕಿದ್ದ 90.25 ಕೋಟಿ ರುಪಾಯಿಗಳನ್ನು ವಸೂಲಿ ಮಾಡುವ ಹಕ್ಕನ್ನು ಪಡೆಯಲು ಯಂಗ್ ಇಂಡಿಯನ್ ಕೇವಲ 50 ಲಕ್ಷ ರುಪಾಯಿಗಳನ್ನು ಪಾವತಿಸಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ.</p>



<p>ಕಾಂಗ್ರೆಸ್ ಪಕ್ಷವು ಯಾವುದೇ ಹಣ ವಿನಿಮಯ ನಡೆದಿಲ್ಲ ಮತ್ತು ಸಂಬಳದಂತಹ ಬಾಕಿಗಳನ್ನು ಪಾವತಿಸಲು ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವುದು ಮಾತ್ರ ನಡೆದಿದೆ ಎಂದು ಹೇಳಿಕೊಂಡಿದೆ.</p>



<p></p>
]]></content:encoded>
					
		
		
			</item>
		<item>
		<title>ಸಾವರ್ಕರ್ ಮಾನನಷ್ಟ ಪ್ರಕರಣ: ದಾಖಲೆಗಳಲ್ಲಿ ಐತಿಹಾಸಿಕ ಸಾಕ್ಷ್ಯಗಳನ್ನು ನೀಡಲು ರಾಹುಲ್ ಗಾಂಧಿಗೆ ಪುಣೆ ನ್ಯಾಯಾಲಯ ಅನುಮತಿ</title>
		<link>https://peepalmedia.com/savarkar-defamation-case-pune-court-allows-rahul-gandhi-to-file-historical-evidence/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 08 Apr 2025 06:57:46 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[congress]]></category>
		<category><![CDATA[hindutva]]></category>
		<category><![CDATA[Rahul Gandhi]]></category>
		<category><![CDATA[Savarkar defamation case]]></category>
		<category><![CDATA[VD Savarkar]]></category>
		<category><![CDATA[Vinayak Damodar Savarkar]]></category>
		<guid isPermaLink="false">https://peepalmedia.com/?p=56852</guid>

					<description><![CDATA[ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಆರೋಪ ಹೊತ್ತಿರುವ ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ಸೋಮವಾರ ಪುರಸ್ಕರಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ. ಇದು‌ ರಾಹುಲ್ ಗಾಂಧಿಯವರು ಈ ವಿಚಾರದಲ್ಲಿ ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ನ್ಯಾಯಾಲಯದಲ್ಲಿ ಐತಿಹಾಸಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುತ್ತದೆ. ಈ ಪ್ರಕರಣವು ಏಪ್ರಿಲ್ 2023 ರಲ್ಲಿ ವಿ.ಡಿ. ಸಾವರ್ಕರ್ ಅವರ ಸೋದರಳಿಯ ಸಾತ್ಯಕಿ ಸಾವರ್ಕರ್ ಅವರು ಗಾಂಧಿಯವರ [&#8230;]]]></description>
										<content:encoded><![CDATA[
<p>ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರನ್ನು ಮಾನಹಾನಿ ಮಾಡಿದ ಆರೋಪ ಹೊತ್ತಿರುವ ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ನ್ಯಾಯಾಲಯ ಸೋಮವಾರ <a href="https://www.barandbench.com/news/savarkar-defamation-case-pune-court-allows-plea-rahul-gandhi-bring-historical-evidence-on-record" target="_blank" rel="noreferrer noopener">ಪುರಸ್ಕರಿಸಿದೆ ಎಂದು </a><em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>ಇದು‌ ರಾಹುಲ್ ಗಾಂಧಿಯವರು ಈ ವಿಚಾರದಲ್ಲಿ ತಮ್ಮ ಹೇಳಿಕೆಗಳನ್ನು ಬೆಂಬಲಿಸಲು ನ್ಯಾಯಾಲಯದಲ್ಲಿ ಐತಿಹಾಸಿಕ ದಾಖಲೆಗಳನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಡುತ್ತದೆ.</p>



<p>ಈ ಪ್ರಕರಣವು ಏಪ್ರಿಲ್ 2023 ರಲ್ಲಿ ವಿ.ಡಿ. ಸಾವರ್ಕರ್ ಅವರ ಸೋದರಳಿಯ ಸಾತ್ಯಕಿ ಸಾವರ್ಕರ್ ಅವರು ಗಾಂಧಿಯವರ ವಿರುದ್ಧ ಸಲ್ಲಿಸಿದ ದೂರಿಗೆ ಸಂಬಂಧಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಸಾವರ್ಕರ್‌ ಬಗ್ಗೆ ಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.</p>



<p>&#8220;ಆರೋಪಗಳು ಸುಳ್ಳು ಎಂದು ತಿಳಿದೂ, ಸಾವರ್ಕರ್ ಅವರ ಖ್ಯಾತಿಗೆ ಹಾನಿ ಮಾಡುವ ಮತ್ತು ಅವರ ಉಪನಾಮವನ್ನು ಕೆಣಕುವ ನಿರ್ದಿಷ್ಟ ಉದ್ದೇಶದಿಂದ ಗಾಂಧಿಯವರು ಈ ಹೇಳಿಕೆಗಳನ್ನು ನೀಡಿದ್ದಾರೆ&#8230;&#8221; ಎಂದು ಸಾತ್ಯಕಿ ಸಾವರ್ಕರ್ ಆರೋಪಿಸಿದ್ದಾರೆ.</p>



<p>ಫೆಬ್ರವರಿ 18 ರಂದು, ಪ್ರಕರಣದ ವಿಚಾರಣೆಯ ಸ್ವರೂಪವನ್ನು ಸಾರಾಂಶ ವಿಚಾರಣೆಯಿಂದ ಸಮನ್ಸ್ ವಿಚಾರಣೆಗೆ ಪರಿವರ್ತಿಸಲು ಗಾಂಧಿಯವರು ಪುಣೆಯ ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.</p>



<p>ಸಮನ್ಸ್ ವಿಚಾರಣೆಯು ವಿವರವಾದ ಪಾಟೀಸವಾಲನ್ನು ಒಳಗೊಂಡಿರುತ್ತದೆ ಮತ್ತು ಸಾರಾಂಶ ವಿಚಾರಣೆಗೆ ಹೋಲಿಸಿದರೆ ಇದು ದೀರ್ಘವಾದ ಕಾನೂನು ಪ್ರಕ್ರಿಯೆಯಾಗಿದೆ.</p>



<p>ಸೋಮವಾರ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮೋಲ್ ಶ್ರೀರಾಮ್ ಶಿಂಧೆ, ಗಾಂಧಿಯವರು ತಮ್ಮ ಹೇಳಿಕೆಗಳು ಐತಿಹಾಸಿಕ ಸಂಗತಿಗಳನ್ನು ಆಧರಿಸಿವೆ ಎಂದು ಹೇಳಿಕೊಂಡಿದ್ದಾರೆ ಎಂದು <em>ಬಾರ್ ಆಂಡ್ ಬೆಂಚ್</em> ವರದಿ ಮಾಡಿದೆ.</p>



<p>&#8220;ಆದ್ದರಿಂದ, ನನ್ನ ಅಭಿಪ್ರಾಯದಲ್ಲಿ ಈ ಪ್ರಕರಣವನ್ನು ಸಾರಾಂಶ ವಿಚಾರಣೆಯಾಗಿ ಪ್ರಯತ್ನಿಸುವುದು ಅನಪೇಕ್ಷಿತ.‌ ಏಕೆಂದರೆ ಸಾರಾಂಶ ವಿಚಾರಣೆಯಲ್ಲಿ ವಿವರವಾದ ಸಾಕ್ಷ್ಯ ಮತ್ತು ಅಡ್ಡ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುವುದಿಲ್ಲ. ಈ ಪ್ರಕರಣದಲ್ಲಿ, ಆರೋಪಿಯು ವಿವರವಾದ ಸಾಕ್ಷ್ಯವನ್ನು ಮುನ್ನಡೆಸಬೇಕು ಮತ್ತು ದೂರುದಾರರ ಸಾಕ್ಷಿಗಳನ್ನು ಸಂಪೂರ್ಣವಾಗಿ ಅಡ್ಡ ಪರೀಕ್ಷೆ ಮಾಡಬೇಕು,&#8221; ಎಂದು ಶಿಂಧೆ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು <em>ಬಾರ್ ಆಂಡ್ ಬೆಂಚ್</em> ಉಲ್ಲೇಖಿಸಿದೆ. </p>



<p>ಗಾಂಧಿಯವರ ಅರ್ಜಿಯನ್ನು ಪುರಸ್ಕರಿಸಿದ ಶಿಂಧೆ, ಈ ವಿಷಯದಲ್ಲಿ ಆಪಾದಿತ ಅಪರಾಧವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿದೆ ಎಂದು ಹೇಳಿದರು, ಇದು ಕ್ರಿಮಿನಲ್ ಮಾನನಷ್ಟಕ್ಕಾಗಿ ಇರುವ ದಂಡದ ಜೊತೆಗೆ ಎರಡು ವರ್ಷಗಳವರೆಗೆ ಸರಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ.</p>



<p>ಆದ್ದರಿಂದ, ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 2(w) ಮತ್ತು 2(x) ಆಧರಿಸಿದ ವರ್ಗೀಕರಣವನ್ನು ಗಣನೆಗೆ ತೆಗೆದುಕೊಂಡು, ಮೇಲ್ನೋಟಕ್ಕೆ ಪ್ರಕರಣವು ಸಮನ್ಸ್ ಪ್ರಕರಣದ ವರ್ಗದಲ್ಲಿದೆ ಎಂದು ನ್ಯಾಯಾಧೀಶರು ಹೇಳಿದರು.</p>



<p>ಸಂಹಿತೆಯ ಸೆಕ್ಷನ್ 2(w) &#8220;ಸಮನ್ಸ್ ಕೇಸ್&#8221; ಅನ್ನು &#8220;ವಾರೆಂಟ್-ಕೇಸ್&#8221; ಅಲ್ಲದ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ಎಂದು ವ್ಯಾಖ್ಯಾನಿಸುತ್ತದೆ. ಸೆಕ್ಷನ್ 2(x) &#8220;ವಾರೆಂಟ್-ಕೇಸ್&#8221; ಅನ್ನು ಮರಣದಂಡನೆ, ಜೀವಾವಧಿ ಶಿಕ್ಷೆ ಅಥವಾ ಎರಡು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಒಳಪಡುವ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣ ಎಂದು ವ್ಯಾಖ್ಯಾನಿಸುತ್ತದೆ.</p>



<p>&#8220;ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 260(2), ವಿಚಾರಣೆಯ ಸಮಯದಲ್ಲಿ ಸಂಕ್ಷಿಪ್ತವಾಗಿ ವಿಚಾರಣೆ ನಡೆಸುವುದು ಅನಪೇಕ್ಷಿತವೆಂದು ಕಂಡುಬಂದರೂ, ಮ್ಯಾಜಿಸ್ಟ್ರೇಟ್ ಪ್ರಕರಣವನ್ನು ಮರು ವಿಚಾರಣೆ ಮಾಡಬಹುದು ಎಂದು ನ್ಯಾಯಾಲಯಕ್ಕೆ ಒದಗಿಸುತ್ತದೆ ಮತ್ತು ಸುಗಮಗೊಳಿಸುತ್ತದೆ. ಆದ್ದರಿಂದ, ನ್ಯಾಯದ ಹಿತದೃಷ್ಟಿಯಿಂದ, ಈ ವಿಷಯವನ್ನು ಸಮನ್ಸ್ ಪ್ರಕರಣವಾಗಿ ವಿಚಾರಣೆ ನಡೆಸುವುದು ಕಡ್ಡಾಯವಾಗಿದೆ,&#8221; ಎಂದು <em>ಬಾರ್ ಆಂಡ್ ಬೆಂಚ್</em> ಆದೇಶವನ್ನು ಉಲ್ಲೇಖಿಸಿದೆ.</p>



<p>&#8220;ಪ್ರಸ್ತುತ ಪ್ರಕರಣವನ್ನು ಸಮನ್ಸ್ ಪ್ರಕರಣವಾಗಿ ವಿಚಾರಣೆ ನಡೆಸಿದರೆ ಯಾವುದೇ ಪಕ್ಷಕ್ಕೆ ಯಾವುದೇ ಪೂರ್ವಾಗ್ರಹ ಉಂಟಾಗುವುದಿಲ್ಲ,&#8221; ಎಂದು ಶಿಂಧೆ ಹೇಳಿದರು.</p>



<p>ಹಿಂದಿನ ವಿಚಾರಣೆಯಲ್ಲಿ, ಸಾತ್ಯಕಿ ಸಾವರ್ಕರ್ ಅವರು ವಿಚಾರಣೆಯ ಸ್ವರೂಪವನ್ನು ಪರಿವರ್ತಿಸುವ ಗಾಂಧಿಯವರ ಅರ್ಜಿಯನ್ನು ವಿರೋಧಿಸಿದ್ದರು ಮತ್ತು ಕಾಂಗ್ರೆಸ್ ನಾಯಕರು &#8220;ಭಾರತೀಯ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ವೀರ್ ಸಾವರ್ಕರ್ ಅವರ ಕೊಡುಗೆಗಳ ಬಗ್ಗೆ ಅಪ್ರಸ್ತುತ ವಾದಗಳನ್ನು ಎತ್ತುವ ಮೂಲಕ ವಿಷಯವನ್ನು ಬೇರೆಡೆಗೆ ತಿರುಗಿಸಲು,&#8221; ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.</p>



<p>ಜನವರಿ 10 ರಂದು ನ್ಯಾಯಾಲಯವು ಈ ಪ್ರಕರಣದಲ್ಲಿ ಗಾಂಧಿಯವರಿಗೆ 25,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಜಾಮೀನು ನೀಡಿತು. ಫೆಬ್ರವರಿ 18 ರಂದು, ರಾಹುಲ್‌ಗೆ ಕೋರ್ಟ್‌ಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಲಾಯಿತು.</p>
]]></content:encoded>
					
		
		
			</item>
		<item>
		<title>ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ರಾಹುಲ್ ಗಾಂಧಿಗೆ ಸಮನ್ಸ್ ನೀಡಿದ ಲಕ್ನೋ ನ್ಯಾಯಾಲಯ</title>
		<link>https://peepalmedia.com/lucknow-court-summons-rahul-gandhi-for-alleged-derogatory-remarks-against-army/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 12 Feb 2025 10:15:44 +0000</pubDate>
				<category><![CDATA[ದೇಶ]]></category>
		<category><![CDATA[AICC]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bharat jodo yatra]]></category>
		<category><![CDATA[congress]]></category>
		<category><![CDATA[indian army]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Lucknow]]></category>
		<category><![CDATA[Military]]></category>
		<category><![CDATA[Rahul Gandhi]]></category>
		<guid isPermaLink="false">https://peepalmedia.com/?p=53792</guid>

					<description><![CDATA[2022 ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ&#160;ರಾಹುಲ್ ಗಾಂಧಿ ಅವರಿಗೆ&#160;ಲಕ್ನೋ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಮಾರ್ಚ್ 24 ರಂದು ನಡೆಯುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ನಿರ್ದೇಶನ ನೀಡಿದರು. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು [&#8230;]]]></description>
										<content:encoded><![CDATA[
<p>2022 ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸೇನೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ&nbsp;<a href="https://www.thehindu.com/news/national/rahul-gandhi-summoned-by-lucknow-court-on-march-24-over-2022-remarks-against-army/article69209549.ece" rel="noreferrer noopener" target="_blank">ರಾಹುಲ್ ಗಾಂಧಿ ಅವರಿಗೆ</a>&nbsp;ಲಕ್ನೋ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ.</p>



<p>ಮಾರ್ಚ್ 24 ರಂದು ನಡೆಯುವ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಲೋಕ್ ವರ್ಮಾ ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ನಿರ್ದೇಶನ ನೀಡಿದರು.</p>



<p>ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾದ ಸೇನೆಗಳ ನಡುವಿನ ಘರ್ಷಣೆಯ ಕುರಿತು ಡಿಸೆಂಬರ್ 16, 2022 ರಂದು ಗಾಂಧಿಯವರು ಈ ಹೇಳಿಕೆಗಳನ್ನು ನೀಡಿದರು. ಡಿಸೆಂಬರ್ 9, 2022 ರಂದು ಎರಡೂ ಕಡೆಯವರು ಪರಸ್ಪರ ಶಸ್ತ್ರಾಸ್ತ್ರಗಳೊಂದಿಗೆ ಮುಖಾಮುಖಿಯಾದರು, ಇದರಿಂದಾಗಿ ಎರಡೂ ಶಿಬಿರಗಳ ಸೈನಿಕರಿಗೆ ಗಾಯಗಳಾಗಿವೆ.</p>



<p>ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿಭಜಕ ನೀತಿಗಳ ವಿರುದ್ಧ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕಾಂಗ್ರೆಸ್ ನಡೆಸಿದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಗಾಂಧಿಯವರು ಹಿಂಸಾಚಾರದ ಬಗ್ಗೆ ಈ ಹೇಳಿಕೆಗಳನ್ನು ನೀಡಿದ್ದರು.</p>



<p>ಗಡಿ ರಸ್ತೆಗಳ ಸಂಸ್ಥೆಯ ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ತಮ್ಮ ವಕೀಲ ವಿವೇಕ್ ತಿವಾರಿ ಮೂಲಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಕಾಂಗ್ರೆಸ್ ನಾಯಕನ ಹೇಳಿಕೆಗಳು ಅವಹೇಳನಕಾರಿ ಮತ್ತು ಭಾರತೀಯ ಸೇನೆಯ ಮಾನಹಾನಿಕರವಾಗಿವೆ ಎಂದು ವಕೀಲರು ಹೇಳಿಕೊಂಡಿದ್ದಾರೆ.</p>



<p>ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಹೇಳಿಕೆಗಳ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಮಾರ್ಚ್ 2023 ರಲ್ಲಿ ರಾಹುಲ್ ಗಾಂಧಿಯವರಿಗೆ&nbsp;<a href="https://scroll.in/latest/1046119/rahul-gandhi-held-guilty-of-defamation-for-remarks-about-modi-surname">ಎರಡು ವರ್ಷಗಳ ಜೈಲು ಶಿಕ್ಷೆ</a>&nbsp;ವಿಧಿಸಿತ್ತು . ಶಿಕ್ಷೆ ವಿಧಿಸಿದ ಕಾರಣ, ಕಾಂಗ್ರೆಸ್ ನಾಯಕನನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.</p>



<p>ಆದಾಗ್ಯೂ, ಅದೇ ವರ್ಷದ ಆಗಸ್ಟ್‌ನಲ್ಲಿ,&nbsp;<a href="https://scroll.in/latest/1053795/modi-surname-case-rahul-gandhis-conviction-stayed-by-sc-his-lok-sabha-membership-to-be-restored">ಸುಪ್ರೀಂ ಕೋರ್ಟ್</a>&nbsp;ಶಿಕ್ಷೆಯನ್ನು ತಡೆಹಿಡಿಯಿತು, ಇದರಿಂದಾಗಿ ಗಾಂಧಿಯವರು ಸಂಸದರಾಗಿ ಮತ್ತೆ ನೇಮಕಗೊಂಡರು.</p>
]]></content:encoded>
					
		
		
			</item>
		<item>
		<title>ಮಣಿಪುರ: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಬಿರೇನ್ ಸಿಂಗ್ ರಾಜೀನಾಮೆ &#8216;ವಿಳಂಬವಾಯಿತು&#8217; ಎಂದ ಕಾಂಗ್ರೆಸ್</title>
		<link>https://peepalmedia.com/manipur-congress-says-biren-singhs-resignation-delayed-for-inciting-violence/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 10 Feb 2025 06:30:26 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mallikarjun Kharge]]></category>
		<category><![CDATA[manipur]]></category>
		<category><![CDATA[Manipur Government]]></category>
		<category><![CDATA[Manipur violence]]></category>
		<category><![CDATA[manipuri news]]></category>
		<category><![CDATA[modi]]></category>
		<category><![CDATA[N Biren Singh]]></category>
		<category><![CDATA[narendra modi]]></category>
		<category><![CDATA[Rahul Gandhi]]></category>
		<guid isPermaLink="false">https://peepalmedia.com/?p=53625</guid>

					<description><![CDATA[ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಡವಾಗಿ ರಾಜೀನಾಮೆ ನೀಡಿದ್ದು, &#8220;ಕುದುರೆ ಓಡಿ ಹೋದ ನಂತರ ಲಾಯದ ಬಾಗಿಲು ಮುಚ್ಚುವಂತಿದೆ,&#8221; ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ. &#8220;21 ತಿಂಗಳ ಕಾಲ ಭಾರತೀಯ ಜನತಾ ಪಕ್ಷವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರನ್ನು, ಎಲ್ಲಾ ಸಮುದಾಯಗಳನ್ನು ಅವರವರೇ ರಕ್ಷಿಸಿಕೊಳ್ಳುವಂತೆ ಬಿಟ್ಟಿರುವುದು,&#8221; ಎಂದು ಹೇಳುವುದು ನೋವಿನ ಸಂಗತಿ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು. &#8220;ಈ ತಿರಸ್ಕಾರ ಮತ್ತು ನಿರಾಸಕ್ತಿಗೆ ನಿಜವಾದ ಕಾರಣ ಪ್ರಧಾನಿ ನರೇಂದ್ರ ಮೋದಿ. ಮಣಿಪುರ ಭಾರತದ ಒಂದು [&#8230;]]]></description>
										<content:encoded><![CDATA[
<p><a href="https://x.com/kharge/status/1888603452441547015" target="_blank" rel="noreferrer noopener">ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಡವಾಗಿ ರಾಜೀನಾಮೆ ನೀಡಿದ್ದು, &#8220;ಕುದುರೆ ಓಡಿ ಹೋದ ನಂತರ</a> ಲಾಯದ ಬಾಗಿಲು ಮುಚ್ಚುವಂತಿದೆ,&#8221; ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.</p>



<p>&#8220;21 ತಿಂಗಳ ಕಾಲ ಭಾರತೀಯ ಜನತಾ ಪಕ್ಷವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಜನರನ್ನು, ಎಲ್ಲಾ ಸಮುದಾಯಗಳನ್ನು ಅವರವರೇ ರಕ್ಷಿಸಿಕೊಳ್ಳುವಂತೆ ಬಿಟ್ಟಿರುವುದು,&#8221; ಎಂದು ಹೇಳುವುದು ನೋವಿನ ಸಂಗತಿ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಹೇಳಿದರು.</p>



<p>&#8220;ಈ ತಿರಸ್ಕಾರ ಮತ್ತು ನಿರಾಸಕ್ತಿಗೆ ನಿಜವಾದ ಕಾರಣ ಪ್ರಧಾನಿ ನರೇಂದ್ರ ಮೋದಿ. ಮಣಿಪುರ ಭಾರತದ ಒಂದು ಭಾಗ ಎಂಬುದನ್ನು ಅವರು ಮರೆತಿದ್ದಾರೆ. ಅವರು ತಮ್ಮ ಸ್ಮರಣೆಯನ್ನು ಪುನರ್ನಿರ್ಮಿಸಿಕೊಂಡು ಭಾರತದ ನಕ್ಷೆಯಲ್ಲಿ ಮಣಿಪುರ ರಾಜ್ಯವನ್ನು ಗುರುತಿಸುವ ಸಮಯ ಬಂದಿದೆ!&#8221; ಎಂದು ಖರ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">The resignation of BJP’s Manipur CM is like ‘shutting the stable door after the horse has bolted’! <br><br>It is painful to say that for 21 months, the BJP ignited a fire in Manipur and left the people, across communities to fend for themselves. <br><br>Their rank incompetence and utter…</p>&mdash; Mallikarjun Kharge (@kharge) <a href="https://twitter.com/kharge/status/1888603452441547015?ref_src=twsrc%5Etfw">February 9, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರಕ್ಕೆ ಬಿರೇನ್ ಸಿಂಗ್ ಅವರ ಪ್ರತಿಕ್ರಿಯೆ ಪಕ್ಷಪಾತದಿಂದ ಕೂಡಿತ್ತು ಮತ್ತು ಅವರು ಬಹುಸಂಖ್ಯಾತವಾದವನ್ನು ಅವರು ಪ್ರಚೋದಿಸಿದರು ಎಂಬ ಕುಕಿ-ಜೋಮಿ-ಹ್ಮಾರ್ ಗುಂಪುಗಳ ಆರೋಪಗಳ ನಡುವೆ ಭಾನುವಾರ ಸಂಜೆ <u>ಬಿರೇನ್ ಸಿಂಗ್</u> ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.</p>



<p>ಮೇ 2023 ರಿಂದ ಮೈತೈ ಮತ್ತು ಕುಕಿ-ಜೋಮಿ-ಹ್ಮಾರ್ ಸಮುದಾಯಗಳ ನಡುವಿನ ಹಿಂಸಾಚಾರದಲ್ಲಿ ಕನಿಷ್ಠ 258 ಜನರು ಸಾವನ್ನಪ್ಪಿದ್ದಾರೆ ಮತ್ತು 59,000 ಕ್ಕೂ ಹೆಚ್ಚು ಜನರು ಮನೆಮಠ ಕಳೆದುಕೊಂಡಿದ್ದಾರೆ.</p>



<p>ರಾಜ್ಯದಲ್ಲಿ ಹಿಂಸಾಚಾರಕ್ಕೆ ಸಿಂಗ್ ಪ್ರಚೋದನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ <a href="https://x.com/RahulGandhi/status/1888596005433815336" target="_blank" rel="noreferrer noopener"><u>ರಾಹುಲ್ ಗಾಂಧಿ</u></a> ಆರೋಪಿಸಿ, &#8220;ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡ, ಸುಪ್ರೀಂ ಕೋರ್ಟ್ ತನಿಖೆ ಮತ್ತು ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ,&#8221; ದ ಪರಿಣಾಮವಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">For nearly two years, BJP&#39;s CM Biren Singh instigated division in Manipur. PM Modi allowed him to continue despite the violence, loss of life, and the destruction of the idea of India in Manipur. <br><br>The resignation of CM Biren Singh shows that mounting public pressure, the SC…</p>&mdash; Rahul Gandhi (@RahulGandhi) <a href="https://twitter.com/RahulGandhi/status/1888596005433815336?ref_src=twsrc%5Etfw">February 9, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮಣಿಪುರದಲ್ಲಿ ಶಾಂತಿ ಪುನಃಸ್ಥಾಪಿಸುವುದು ಆದ್ಯತೆಯಾಗಿರಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ ಅವರು, &#8220;ಸಾಮಾನ್ಯ ಸ್ಥಿತಿಗೆ ಮರಳಲು ತಮ್ಮ ಯೋಜನೆಯನ್ನು ವಿವರಿಸಲು&#8221; ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.</p>



<p>ಸೋಮವಾರ ಮಣಿಪುರ ವಿಧಾನಸಭೆಯಲ್ಲಿ ಸಿಂಗ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತಮ್ಮ ಪಕ್ಷ ಸಜ್ಜಾಗಿದೆ ಎಂದು ಕಾಂಗ್ರೆಸ್ ನಾಯಕ <a href="https://x.com/Jairam_Ramesh/status/1888584196714537032" target="_blank" rel="noreferrer noopener">ಜೈರಾಮ್ ರಮೇಶ್ ಹೇಳಿದ್ದಾರೆ. ಸಂಘರ್ಷ ಪೀಡಿತ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಬೇಕು ಎಂಬ ವಿರೋಧ ಪಕ್ಷದ ಬೇಡಿಕೆಯನ್ನು ರಮೇಶ್ ಪುನರುಚ್ಚರಿಸಿದರು.</a></p>



<p>&#8220;ಮುಖ್ಯಮಂತ್ರಿಗಳ ರಾಜೀನಾಮೆ ತಡವಾಯಿತು. ಮಣಿಪುರದ ಜನರು ಈಗ ಫ್ರಾನ್ಸ್ ಮತ್ತು ಯುಎಸ್ಎಗೆ ಆಗಾಗ ಹಾರುವ ನಮ್ಮ ಪ್ರಧಾನ ಮಂತ್ರಿಯ ಭೇಟಿಗಾಗಿ ಕಾಯುತ್ತಿದ್ದಾರೆ &#8211; ಮತ್ತು ಕಳೆದ ಇಪ್ಪತ್ತು ತಿಂಗಳುಗಳಿಂದ ಮಣಿಪುರಕ್ಕೆ ಹೋಗಲು ಅವರಿಗೆ ಸಮಯ ಅಥವಾ ಒಲವು ಸಿಗಲಿಲ್ಲ,&#8221; ಎಂದು <a href="https://x.com/Jairam_Ramesh/status/1888584196714537032" target="_blank" rel="noreferrer noopener">ರಮೇಶ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ</a>.</p>



<p>21 ತಿಂಗಳ ಹಿಂದೆ ಹಿಂಸಾಚಾರ ಆರಂಭವಾದಾಗಿನಿಂದ, ಕುಕಿ-ಜೋಮಿ-ಹ್ಮಾರ್ ಗುಂಪುಗಳು ಸಂಘರ್ಷಕ್ಕೆ ಪಕ್ಷಪಾತದ ಧೋರಣೆ ಮತ್ತು ಬಹುಸಂಖ್ಯಾತ ನೀತಿಗಳಿಗಾಗಿ ಸಿಂಗ್ ಅವರನ್ನು ಪದಚ್ಯುತಗೊಳಿಸಬೇಕೆಂದು ಒತ್ತಾಯಿಸುತ್ತಿವೆ.</p>



<p>ಫೆಬ್ರವರಿ 3 ರಂದು, ಸುಪ್ರೀಂ ಕೋರ್ಟ್ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಿಂಗ್ ಅವರನ್ನು ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಆಡಿಯೋ ತುಣುಕುಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಆದೇಶಿಸಿತು.</p>



<p>ಕುಕಿ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ ಟ್ರಸ್ಟ್ ಸಲ್ಲಿಸಿದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. &#8220;ಸಂಘರ್ಷ ಹೇಗೆ ಮತ್ತು ಏಕೆ ಪ್ರಾರಂಭವಾಯಿತು&#8221; ಎಂಬುದಕ್ಕೆ ಮುಖ್ಯಮಂತ್ರಿಗಳೇ ಕಾರಣ ಎಂದು ಧ್ವನಿಮುದ್ರಿಕೆಗಳು ಹೇಳುತ್ತಿವೆ ಎಂದು ಆರೋಪಿಸಿ ಸಂಘಟನೆಯು ಆಡಿಯೋ ರೆಕಾರ್ಡಿಂಗ್‌ಗಳ ಬಗ್ಗೆ ಸ್ವತಂತ್ರ ತನಿಖೆಯನ್ನು ನಡೆಸಲು ಕೋರಿದೆ.</p>



<p>ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸ್ವತಂತ್ರ ವಿಧಿವಿಜ್ಞಾನ ಪ್ರಯೋಗಾಲಯ ಟ್ರುತ್‌ ಲ್ಯಾಬ್ಸ್ ಟೇಪ್‌ಗಳನ್ನು ಪರಿಶೀಲಿಸಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಧ್ವನಿಮುದ್ರಣಗಳಲ್ಲಿ ಕೇಳಿಬಂದ ಧ್ವನಿ ಮುಖ್ಯಮಂತ್ರಿಯವರದ್ದೇ ಎಂದು ಪ್ರಯೋಗಾಲಯವು 93% ಖಚಿತತೆಯೊಂದಿಗೆ ದೃಢಪಡಿಸಿದೆ ಎಂದು ಭೂಷಣ್ ಹೇಳಿದರು.</p>



<p></p>
]]></content:encoded>
					
		
		
			</item>
		<item>
		<title>ಚೀನಾ ಭಾರತದೊಳಗೆ ಬಂದು ಕೂರಲು ಮೇಕ್ ಇನ್ ಇಂಡಿಯಾದ ವಿಫಲತೆ ಕಾರಣ: ರಾಹುಲ್ ಗಾಂಧಿ</title>
		<link>https://peepalmedia.com/chinas-entry-into-india-is-due-to-failure-of-make-in-india-rahul-gandhi/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 04 Feb 2025 07:15:11 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[china]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[make in india]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[NDA]]></category>
		<category><![CDATA[Rahul Gandhi]]></category>
		<category><![CDATA[UPA]]></category>
		<guid isPermaLink="false">https://peepalmedia.com/?p=53352</guid>

					<description><![CDATA[ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ವೈಫಲ್ಯದಿಂದಾಗಿ ಚೀನಾದ ಮಿಲಿಟರಿ ಭಾರತದ ಭೂಪ್ರದೇಶದಲ್ಲಿ ಅಸ್ತಿತ್ವ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. &#8220;ನಮ್ಮ ಸೇನಾ ಮುಖ್ಯಸ್ಥರು ಚೀನಿಯರು ನಮ್ಮ ಪ್ರದೇಶದೊಳಗೆ ಇದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ. ಚೀನಾ ನಮ್ಮ ಪ್ರದೇಶದೊಳಗೆ ಇರುವುದಕ್ಕೆ ಕಾರಣ ಮುಖ್ಯವಾಗಿದೆ,&#8221; ಎಂದು ಗಾಂಧಿಯವರು ಲೋಕಸಭೆಯಲ್ಲಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಎರಡೂ ಕಡೆಯ ನಡುವಿನ ಮಿಲಿಟರಿ ಬಿಕ್ಕಟ್ಟನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ ಹೇಳಿದರು. &#8220;ಜನರು ಯುದ್ಧಗಳು [&#8230;]]]></description>
										<content:encoded><![CDATA[
<p>ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ವೈಫಲ್ಯದಿಂದಾಗಿ ಚೀನಾದ ಮಿಲಿಟರಿ ಭಾರತದ ಭೂಪ್ರದೇಶದಲ್ಲಿ <a href="https://www.youtube.com/live/TvUzt-f7XDU?feature=shared&amp;t=1155" target="_blank" rel="noreferrer noopener"><u>ಅಸ್ತಿತ್ವ ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.</u></a></p>



<p>&#8220;ನಮ್ಮ ಸೇನಾ ಮುಖ್ಯಸ್ಥರು ಚೀನಿಯರು ನಮ್ಮ ಪ್ರದೇಶದೊಳಗೆ ಇದ್ದಾರೆ ಎಂದು ಹೇಳಿದ್ದಾರೆ. ಇದು ಸತ್ಯ. ಚೀನಾ ನಮ್ಮ ಪ್ರದೇಶದೊಳಗೆ ಇರುವುದಕ್ಕೆ ಕಾರಣ ಮುಖ್ಯವಾಗಿದೆ,&#8221; ಎಂದು ಗಾಂಧಿಯವರು ಲೋಕಸಭೆಯಲ್ಲಿ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಎರಡೂ ಕಡೆಯ ನಡುವಿನ ಮಿಲಿಟರಿ ಬಿಕ್ಕಟ್ಟನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತಾ ಹೇಳಿದರು.</p>



<p>&#8220;ಜನರು ಯುದ್ಧಗಳು ಸೈನ್ಯಗಳು ಮತ್ತು ಅವರ ಆಯುಧಗಳ ನಡುವೆ ನಡೆಯುತ್ತದೆ ಭಾವಿಸುತ್ತಾರೆ. ಆದರೆ ವಾಸ್ತವವೆಂದರೆ ಯುದ್ಧಗಳು ಕೈಗಾರಿಕಾ ವ್ಯವಸ್ಥೆಗಳಿಂದಲೇ ನಡೆಯುತ್ತವೆ. ಚೀನಾ ನಮ್ಮ ಕೈಗಾರಿಕಾ ವ್ಯವಸ್ಥೆಗಿಂತ ಹೆಚ್ಚು ಬಲಿಷ್ಠವಾದ, ದೊಡ್ಡದಾದ ಕೈಗಾರಿಕಾ ವ್ಯವಸ್ಥೆಯನ್ನು ಹೊಂದಿದೆ. ಅದಕ್ಕಾಗಿಯೇ ಅವರು ಈ ದೇಶದೊಳಗೆ ಬರಲು ಧೈರ್ಯ ಮಾಡುತ್ತಾರೆ. ಚೀನಾ ದೇಶದೊಳಗೆ ಕುಳಿತಿರುವುದಕ್ಕೆ ಕಾರಣ &#8216;ಮೇಕ್ ಇನ್ ಇಂಡಿಯಾ&#8217; ವೈಫಲ್ಯವಾಗಿದೆ,&#8221; ಎಂದು ಕೆಳಮನೆಯ ವಿರೋಧ ಪಕ್ಷದ ನಾಯಕ ಹೇಳಿದರು.</p>



<p>ದೇಶದಲ್ಲಿ ಉತ್ಪಾದನೆಯಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ಉತ್ಪನ್ನಗಳನ್ನು ತಯಾರಿಸಲು ಕಂಪನಿಗಳನ್ನು ಪ್ರೋತ್ಸಾಹಿಸಲು ನರೇಂದ್ರ ಮೋದಿ ಸರ್ಕಾರವು ಸೆಪ್ಟೆಂಬರ್ 2014 ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿತು.</p>



<p>ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಈ ಹೇಳಿಕೆ ನೀಡಲಾಗಿದೆ.</p>



<p>ಭಾರತ ಉತ್ಪಾದಿಸಲು ನಿರಾಕರಿಸುತ್ತಿರುವುದರಿಂದ ಚೀನಾದ ಸೇನೆ &#8220;ಈ ದೇಶದೊಳಗೆ ಕುಳಿತಿದೆ&#8230;&#8221; ಎಂದು ರಾಹುಲ್ ಗಾಂಧಿ ಹೇಳಿದರು.</p>



<p>“…ಮತ್ತು ಭಾರತವು ಈ [ತಾಂತ್ರಿಕ ಮತ್ತು ಆರ್ಥಿಕ] ಕ್ರಾಂತಿಯನ್ನು ಮತ್ತೊಮ್ಮೆ ಚೀನೀಯರಿಗೆ ಬಿಟ್ಟುಕೊಡಲಿದೆ ಎಂದು ನನಗೆ ಚಿಂತೆಯಾಗಿದೆ&#8230;. ನಾವು ಚೀನಾದೊಂದಿಗೆ ಯುದ್ಧ ಮಾಡಿದರೆ, ನಾವು ಚೀನಾದ ವಿದ್ಯುತ್ ಮೋಟಾರ್‌ಗಳು, ಚೀನೀ ಬ್ಯಾಟರಿಗಳು ಮತ್ತು ಚೀನೀ ಆಪ್ಟಿಕ್ಸ್‌ಗಳೊಂದಿಗೆ ಹೋರಾಡುತ್ತೇವೆ ಮತ್ತು ಆದರೆ ನಾವು ಚೀನಾದ ಮೋಟಾರ್‌ಗಳು, ಚೀನೀ ಆಪ್ಟಿಕ್ಸ್ ಮತ್ತು ಚೀನೀ ಬ್ಯಾಟರಿಗಳನ್ನು ಖರೀದಿಸುತ್ತಿದ್ದೇವೆ,” ಎಂದು ಅವರು ಹೇಳಿದರು.</p>



<p>ಜೂನ್ 2020 ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಮುಖಾಮುಖಿ ನಡೆದಾಗ ಭಾರತ ಮತ್ತು ಚೀನಾ ನಡುವಿನ ಗಡಿ ಉದ್ವಿಗ್ನತೆ ಹೆಚ್ಚಾಯಿತು. ಇದರ ಪರಿಣಾಮವಾಗಿ 20 ಭಾರತೀಯ ಸೈನಿಕರು ಸಾವನ್ನಪ್ಪಿದರು. ಈ ಘರ್ಷಣೆಯಲ್ಲಿ ತನ್ನ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಚೀನಾ ಹೇಳಿದೆ.</p>



<p>ಇದರ ನಂತರ, ಎರಡೂ ದೇಶಗಳು ಈ ಪ್ರದೇಶದಲ್ಲಿ ಭಾರೀ ಫಿರಂಗಿದಳಗಳೊಂದಿಗೆ ಸಾವಿರಾರು ಸೈನಿಕರನ್ನು ನಿಯೋಜಿಸಿದವು.</p>



<p>ಗಾಲ್ವಾನ್ ಘರ್ಷಣೆಯ ನಂತರ, <u>ಚೀನಾ ಮತ್ತು ಭಾರತ</u> ತಮ್ಮ ಗಡಿ ಬಿಕ್ಕಟ್ಟನ್ನು <u>ಪರಿಹರಿಸಲು ಹಲವಾರು ಸುತ್ತಿನ</u> ಮಿಲಿಟರಿ <u>ಮತ್ತು</u> ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ. ಅಕ್ಟೋಬರ್‌ನಲ್ಲಿ, <u>ಎರಡೂ ದೇಶಗಳು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ತಿರುಗುವ ವ್ಯವಸ್ಥೆಯನ್ನು ತಲುಪಿರುವುದಾಗಿ ಘೋಷಿಸಿದವು</u> , ಇದು ಪೂರ್ವ ಲಡಾಖ್‌ನಲ್ಲಿ ಎರಡು ಮಿಲಿಟರಿಗಳ ಸಂಘರ್ಷಕ್ಕೆ ಕಾರಣವಾಯಿತು.</p>



<p>ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಲ್ಲಿ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಗಸ್ತು ತಿರುಗುವಿಕೆ ಪ್ರಾರಂಭವಾಗಿದೆ ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಜನವರಿ 13 ರಂದು ಹೇಳಿದರು.</p>



<p>ಅಮೆರಿಕದೊಂದಿಗಿನ ಭಾರತದ ಕಾರ್ಯತಂತ್ರದ ಪಾಲುದಾರಿಕೆಯನ್ನು ಉಲ್ಲೇಖಿಸಿದ ಗಾಂಧಿಯವರು, ದೆಹಲಿ ಮತ್ತು ವಾಷಿಂಗ್ಟನ್ ಡಿಸಿಗಳು ದೃಢವಾದ ಕೈಗಾರಿಕಾ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಸಹಕರಿಸಬೇಕೆಂದು ಒತ್ತಾಯಿಸಿದರು. ವೆಚ್ಚ-ಪರಿಣಾಮಕಾರಿ ಉತ್ಪಾದನಾ ಸಾಮರ್ಥ್ಯಗಳಿಂದಾಗಿ ಭಾರತವು ಜಾಗತಿಕ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಾಂಗ್ರೆಸ್ ಸಂಸದರು ಹೇಳಿದರು. &#8220;ಅಮೆರಿಕನ್ನರು ಎಂದಿಗೂ ಊಹಿಸದ ಸಂಗತಿಗಳನ್ನು ನಾವು ಮಾಡಬಹುದು,&#8221; ಎಂದು ಅವರು ಹೇಳಿದರು.</p>



<p>ಭಾರತವು ನಿರುದ್ಯೋಗ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗಿಲ್ಲ ಎಂದು ಗಾಂಧಿ ಹೇಳಿದರು. &#8220;ಯುಪಿಎ ಸರ್ಕಾರವಾಗಲಿ ಅಥವಾ ಇಂದಿನ ಎನ್‌ಡಿಎ ಸರ್ಕಾರವಾಗಲಿ ಭಾರತದ ಯುವಕರಿಗೆ ಉದ್ಯೋಗದ ಬಗ್ಗೆ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಈ ಕೋಣೆಯಲ್ಲಿರುವ ಯಾರೂ ಇದನ್ನು ಒಪ್ಪುವುದಿಲ್ಲ ಎಂದು ನಾನು ಭಾವಿಸುತ್ತೇನೆ,&#8221; ಎಂದು ರಾಹುಲ್ ಹೇಳಿದರು.</p>



<p><a href="https://www.youtube.com/live/TvUzt-f7XDU?feature=shared&amp;t=271" rel="noreferrer noopener" target="_blank"><u>ಪರಿಕಲ್ಪನೆಯ ದೃಷ್ಟಿಯಿಂದ ಮೇಕ್ ಇನ್ ಇಂಡಿಯಾ ಒಳ್ಳೆಯದಾಗಿದ್ದರೂ</u></a>&nbsp;, ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು&nbsp;ಹೇಳಿದ ಗಾಂಧಿ , 2014 ರಲ್ಲಿ ಒಟ್ಟು ದೇಶೀಯ ಉತ್ಪನ್ನದ 15.3% ರಷ್ಟಿದ್ದ ಉತ್ಪಾದನೆ ಇಂದು 12.6% ಕ್ಕೆ ಇಳಿದಿದೆ ಎಂದು ಹೇಳಿದರು.</p>



<p>ಭಾರತೀಯ ಜನತಾ ಪಕ್ಷವು ಗಾಂಧಿಯವರನ್ನು ಟೀಕಿಸಿತು, ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಗೆ ಕಾಂಗ್ರೆಸ್ ಕಾರಣ ಎಂದು ಹೇಳಿತು.</p>



<p>&#8220;ತಯಾರಿಕಾ ವಲಯವು ಚೀನಾದ ಹಿಂದೆ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ, ಆದರೆ ಇದಕ್ಕೆ ಯಾರು ಹೊಣೆ? 2004 ಮತ್ತು 2014 ರ ನಡುವೆ, ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತ ಮತ್ತು ಚೀನಾ ನಡುವೆ <a href="https://x.com/PTI_News/status/1886398253362794510" target="_blank" rel="noreferrer noopener"><u>25%, 25 ಪಟ್ಟು [sic] ವ್ಯಾಪಾರ ಕೊರತೆ ಇತ್ತು</u></a>&#8221; ಬಿಜೆಪಿ ಸಂಸದ ಸಂಬಿತ್ ಪಾತ್ರಾ ಅವರ ಹೇಳಿಕೆಯನ್ನು ಪಿಟಿಐ ಉಲ್ಲೇಖಿಸಿದೆ. </p>
]]></content:encoded>
					
		
		
			</item>
		<item>
		<title>ಸುವರ್ಣಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ</title>
		<link>https://peepalmedia.com/chief-minister-siddaramaiah-unveils-mahatma-gandhis-statue-at-suvarna-soudha/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 21 Jan 2025 08:35:59 +0000</pubDate>
				<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[fascism]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<guid isPermaLink="false">https://peepalmedia.com/?p=52640</guid>

					<description><![CDATA[ಬೆಳಗಾವಿ ಜ.21 : ರಾಮ ಭಕ್ತರಾಗಿ ಅತ್ಯುತ್ತಮ‌ ಹಿಂದೂ ಆಗಿದ್ದ ಮಹಾತ್ಮ ಗಾಂಧಿಯನ್ನು BJP ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು. ಸುವರ್ಣಸೌಧದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಗಾಂಧಿಯವರು ಹಿಂದೂತ್ವದ ದ್ವೇಷಿಯಾಗಿರುವ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ ಎಂದರು. ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು [&#8230;]]]></description>
										<content:encoded><![CDATA[
<ul class="wp-block-list">
<li>&#8220;ಮಹಾತ್ಮಗಾಂಧಿ ಅವರು ಕೊನೆ ಉಸಿರು ಇರುವವರೆಗೂ ಅವರ ಬಾಯಲ್ಲಿ ಹೇ ರಾಮ್ ಜಪಿಸುತ್ತಿದ್ದರು.&#8221;</li>



<li>&#8220;ಅತ್ಯುತ್ತಮ‌ ಹಿಂದೂ ಆಗಿದ್ದ ಗಾಂಧಿಯನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ.&#8221;</li>



<li>&#8220;ನಾವು ಮಹಾತ್ಮಗಾಂಧಿ ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ.&#8221; </li>



<li>&#8220;ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತವನ್ನು ಪಾಲಿಸುತ್ತಿದೆ.&#8221;</li>



<li>&#8220;ಗಾಂಧಿಯವರು ಹಿಂದೂತ್ವಕ್ಕೆ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ.&#8221;</li>
</ul>



<p><strong>ಬೆಳಗಾವಿ ಜ.21 : </strong>ರಾಮ ಭಕ್ತರಾಗಿ ಅತ್ಯುತ್ತಮ‌ ಹಿಂದೂ ಆಗಿದ್ದ ಮಹಾತ್ಮ ಗಾಂಧಿಯನ್ನು BJP ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.</p>



<p>ಸುವರ್ಣಸೌಧದಲ್ಲಿ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು.</p>



<p>ಗಾಂಧಿಯವರು ಹಿಂದೂತ್ವದ ದ್ವೇಷಿಯಾಗಿರುವ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ ಎಂದರು.</p>



<p>ನಾವು ಮಹಾತ್ಮಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಜೈ ಭಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನಯನ್ನು ಮುನ್ನಡೆಸುತ್ತೇವೆ ಎಂದರು.</p>



<p>ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮಗಾಂಧಿ. ಆ ದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನೆಲದಲ್ಲಿ ಹೆಚ್ಚಿಸಿದರು ಎಂದು ಸ್ಮರಿಸಿದರು.</p>



<p>ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂಸದೆ ಪ್ರಿಯಾಂಕ ಗಾಂಧಿ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಉಪ ಅಧ್ಯಕ್ಷ ಲಮಾಣಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಸಮಾಜಘಾತಕ ಶಕ್ತಿಗಳು ವಿರುದ್ಧ ಗಂಭೀರ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ</title>
		<link>https://peepalmedia.com/serious-action-against-anti-social-forces-chief-minister-siddaramaiah-warns/</link>
		
		<dc:creator><![CDATA[Peepal Media]]></dc:creator>
		<pubDate>Tue, 21 Jan 2025 08:29:52 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[fascism]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[Siddaramaiah]]></category>
		<guid isPermaLink="false">https://peepalmedia.com/?p=52636</guid>

					<description><![CDATA[ಬೆಳಗಾವಿ, ಜನವರಿ 21: ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು. ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಗಾಂಧೀಜಿಯವರ ತತ್ವಾದರ್ಶಗಳನ್ನು ಪುನಸ್ಥಾಪಿಸಲು ವರ್ಷವಿಡೀ ಅಭಿಯಾನ ಇಡೀ ವರ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನವನ್ನು ಮಾಡುತ್ತಿದ್ದೇವೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮತ್ತೆ ಪುನಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗು [&#8230;]]]></description>
										<content:encoded><![CDATA[
<pre class="wp-block-code"><code>* <strong>ಅನಾರೋಗ್ಯದ ಕಾರಣ ರಾಹುಲ್ ಗೈರು: </strong>
<strong>* ತಿರುಚಿ ಸುದ್ದಿ ಮಾಡಿದರೆ ಪತ್ರಿಕಾ ವೃತ್ತಿಯ ಬಗ್ಗೆ ಯಾವ ಸಂದೇಶ ಹೋಗುತ್ತದೆ: ಸಿ.ಎಂ ಪ್ರಶ್ನೆ</strong></code></pre>



<p><strong>ಬೆಳಗಾವಿ, ಜನವರಿ 21:</strong> ಮಹಿಳೆಯರಿಗೆ ರಕ್ಷಣೆ ದೊರಕಬೇಕು. ಬಲಾತ್ಕಾರದಂತಹ ಹೀನ ಕೃತ್ಯಗಳು ನಡೆಯಬಾರದು. ಸಮಾಜದಲ್ಲಿ ಸಮಾಜಘಾತಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಅವರ ವಿರುದ್ಧ ಗಂಭೀರ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದರು.</p>



<p>ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.</p>



<p><strong>ಗಾಂಧೀಜಿಯವರ ತತ್ವಾದರ್ಶಗಳನ್ನು ಪುನಸ್ಥಾಪಿಸಲು ವರ್ಷವಿಡೀ ಅಭಿಯಾನ</strong></p>



<p>ಇಡೀ ವರ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಅಭಿಯಾನವನ್ನು ಮಾಡುತ್ತಿದ್ದೇವೆ. ಗಾಂಧೀಜಿಯವರ ತತ್ವಾದರ್ಶಗಳನ್ನು ಮತ್ತೆ ಪುನಸ್ಥಾಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿ ಹಾಗು ಅವರ ವಿಚಾರಧಾರೆಗಳು ಇಡೀ ವಿಶ್ವಕ್ಕೆ ಇಂದಿಗೂ ಪ್ರಸ್ತುತ ಎಂದರು.</p>



<p>ಗಾಂಧೀಜಿ ಸೌಹಾರ್ದತೆ, ಸಮಾನತೆ ಬರಬೇಕು, ಅಸ್ಪೃಶ್ಯತೆ ಹೋಗಲಾಡಿಸಲು, ಮಹಿಳೆಯರಿಗೆ ಸ್ವಾತಂತ್ರ್ಯ ಅವರ ಹಕ್ಕುಗಳ ರಕ್ಷಣೆಯಾಗಬೇಕೆಂದು ಪ್ರತಿಪಾದಿಸಿದ್ದರು. ಗಾಂಧೀಜಿ, ಬಸವಣ್ಣ, ಕನಕದಾಸರ ವಿಚಾರಗಳು ಸಂವಿಧಾನದಲ್ಲಿ ಅಡಕವಾಗಿವೆ ಎಂದರು.</p>



<p>&#8220;<strong>ಕಾಂಗ್ರೆಸ್ ಸಂವಿಧಾನದ ಪರವಾಗಿದೆ</strong>&#8220;</p>



<p>ಗಾಂಧೀಜಿ, ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಅನಾಹುತಕಾರಿ ರಾಜಕಾರಣ ನಡೆಯುತ್ತಿದೆ. ಅದ್ದರಿಂದ ಇವುಗಳ ರಕ್ಷಣೆ ಮಾಡುವುದು ಕಾಂಗ್ರೆಸ್ ನ ಜವಾಬ್ದಾರಿ. ನಾವು ಸಂವಿಧಾನದ ಪರವಾಗಿದ್ದೇವೆ. ಅವರು ಮನುವಾದದ ಪರವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>



<p><strong>ಅನಾರೋಗ್ಯ ನಿಮಿತ್ತ ರಾಹುಲ್ ಗಾಂಧಿ ಗೈರು</strong></p>



<p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಹುಷಾರಿಲ್ಲದ ಕಾರಣ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅವರು ಸಮಾವೇಶದಿಂದ ದೂರ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ರೀತಿ ತಿರುಚಿ ಸುದ್ದಿ ಹಾಕಿದರೆ ಪತ್ರಿಕಾ ವೃತ್ತಿಯ ಘನತೆ ಉಳಿಯುತ್ತದೆಯೇ? ಇದರಿಂದ ಏನು ಸಂದೇಶ ಹೋಗುತ್ತದೆ ಎಂದು ಪ್ರಶ್ನಿಸಿದರು. ಸಂಸದೆ ಪ್ರಿಯಾಂಕ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾರ್ಯಕಾರಿ ಸಮಿತಿ ಸದಸ್ಯರು, ಕಾರ್ಯದರ್ಶಿಗಳು ಆಗಮಿಸಲಿದ್ದಾರೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು.</p>
]]></content:encoded>
					
		
		
			</item>
	</channel>
</rss>
