<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>railway department &#8211; Peepal Media</title>
	<atom:link href="https://peepalmedia.com/tag/railway-department/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 31 Dec 2024 11:50:15 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>railway department &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಆಲೂರಿನಲ್ಲಿ ತಾತ್ಕಲಿಕ ಮೂರು ತಿಂಗಳು ರೈಲು ನಿಲುಗಡೆಗೆ ಸಮ್ಮತಿ &#8211; -ಹೇಮಂತ್ ಕುಮಾರ್</title>
		<link>https://peepalmedia.com/hemant-kumar-agrees-to-stop-train-for-three-months-in-alur/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Tue, 31 Dec 2024 11:47:13 +0000</pubDate>
				<category><![CDATA[ಹಾಸನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepalmedia]]></category>
		<category><![CDATA[railway department]]></category>
		<guid isPermaLink="false">https://peepalmedia.com/?p=51407</guid>

					<description><![CDATA[ಹಾಸನ: ಆಲೂರು ರೈಲ್ವೆ ನಿಲ್ದಾಣಕ್ಕೆ ಮತ್ತೊಮ್ಮೆ ನಿಲುಗಡೆಗೆ ಆದೇಶವನ್ನು ತಾತ್ಕಾಲಿಕವಾಗಿ ಮೂರು ತಿಂಗಳುಗಳ ಕಾಲ ಸಮ್ಮತ್ತಿಸಿದೆ ಎಂದು ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರೈಲ್ವೆ ಇಲಾಖೆಯು ಕೇಂದ್ರದ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವರಿಗೆ ನಾವು ಸಲ್ಲಿಸಿದ ಮನವಿ ಆಧಾರದ ಮೇಲೆ ಆಲೂರು ರೈಲ್ವೆ ನಿಲ್ದಾಣಕ್ಕೆ ೨೦೨೪ ಫೆಬ್ರವರಿ ೭ ರಂದು ಪ್ರಾಯೋಗಿಕವಾಗಿ ಆರು ತಿಂಗಳವರೆಗೆ ನಿಲುಗಡೆ ಆದೇಶವನ್ನು ಹೊರಡಿಸಿತ್ತು. ತದನಂತರ ನಾವು ಮತ್ತೊಮ್ಮೆ ಈಗಿನ ರೈಲ್ವೆ ರಾಜ್ಯ ಸಚಿವರಾದ ವಿ. [&#8230;]]]></description>
										<content:encoded><![CDATA[
<p><br><strong>ಹಾಸನ: </strong>ಆಲೂರು ರೈಲ್ವೆ ನಿಲ್ದಾಣಕ್ಕೆ ಮತ್ತೊಮ್ಮೆ ನಿಲುಗಡೆಗೆ ಆದೇಶವನ್ನು ತಾತ್ಕಾಲಿಕವಾಗಿ ಮೂರು ತಿಂಗಳುಗಳ ಕಾಲ ಸಮ್ಮತ್ತಿಸಿದೆ ಎಂದು ಜನಸ್ಪಂದನಾ ವೇದಿಕೆ ಸಂಸ್ಥಾಪಕ ಹೇಮಂತ್ ಕುಮಾರ್ ತಿಳಿಸಿದರು.</p>



<p><br>ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ರೈಲ್ವೆ ಇಲಾಖೆಯು ಕೇಂದ್ರದ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವರಿಗೆ ನಾವು ಸಲ್ಲಿಸಿದ ಮನವಿ ಆಧಾರದ ಮೇಲೆ ಆಲೂರು ರೈಲ್ವೆ ನಿಲ್ದಾಣಕ್ಕೆ ೨೦೨೪ ಫೆಬ್ರವರಿ ೭ ರಂದು ಪ್ರಾಯೋಗಿಕವಾಗಿ ಆರು ತಿಂಗಳವರೆಗೆ ನಿಲುಗಡೆ ಆದೇಶವನ್ನು ಹೊರಡಿಸಿತ್ತು. ತದನಂತರ ನಾವು ಮತ್ತೊಮ್ಮೆ ಈಗಿನ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಿ ಮೂರು ತಿಂಗಳವರೆಗೆ ವಿಸ್ತರಿಸಿದೆ. ಆದರೆ ಈ ಡಿಸೆಂಬರ್ ೪ ರಿಂದ ರೈಲ್ವೆ ನಿಲ್ಗಡೆ ಸಾಧ್ಯವಿಲ್ಲ ಎಂದು ಆದೇಶ ಹೊರಡಿಸಿದೆ. ರಾಧಮ್ಮ ಜನ ಸ್ಪಂದನ ಸಂಸ್ಥೆಯಿAದ ಖುದ್ದಾಗಿ ಹುಬ್ಬಳಿಯ ನೈರುತ್ಯ ಇಲಾಖೆ ಸಂಪರ್ಕಿಸಿದಾಗ ಅಲ್ಲಿನ ಸೆಕ್ರೆಟರಿ ಸುನಿಲ್ ಆಲೂರು ರೈಲ್ವೆ ನಿಲ್ಯಾಣದಲ್ಲಿ ರೈಲ್ವೆ ಆದಾಯವು ಪ್ರತಿ ತಿಂಗಳು ಅಂದರೆ ಕಳೆದ ನವಂಬರ್ ತಿಂಗಳಲ್ಲಿ ೧೧,೩೦೦ ಮತ್ತು ಅಕ್ಟೋಬರ್ ನಲ್ಲಿ ೯೮೦೦ ರೂಪಾಯಿಗಳು ಸಂಗ್ರಹವಾಗಿದೆ ಎಂದರು. ನವಂಬರ್ ನಲ್ಲಿ ೧೯೨ ಜನ ಆಲೂರು ನಿಲ್ದಾಣದಲ್ಲಿ ಟಿಕೆಟ್ ತೆಗೆದುಕೊಂಡಿದ್ದಾರೆ. ಆದರೆ ರೈಲ್ವೆ ಇಲಾಖೆಯು ಯಶವಂತಪುರದಿAದ ಆಲೂರಿಗೆ ಬರುವ ಪ್ರಯಾಣಿಕರ ಟಿಕೆಟ್ ಆದಾಯವನ್ನು ಪರಿಗಣಿಸದೆ ಅಲ್ಲಿನ ಆದಾಯವನ್ನು ಯಶವಂತಪುರಕ್ಕೆ ಮಾತ್ರ ಸೀಮಿತಾ ಎಂದು ಪರಿಗಣಿಸಿದೆ ರೈಲ್ವೆ ನಿಯಮದ ಪ್ರಕಾರ ತಿಂಗಳಿಗೆ ಕನಿಷ್ಠ ೩೦೦೦೦ ಆದಾಯ ಬಂದಿದ್ದರೆ ರೈಲ್ವೆ ಕಮರ್ಷಿಯಲ್ ಇಲಾಖೆ ನಿಲುಗಡೆ ಆದೇಶವನ್ನು ರದ್ದು ಪಡಿಸುತ್ತಿರಲಿಲ್ಲ. ನಿಗದಿತ ಪ್ರಮಾಣದಲ್ಲಿ ಆಲೂರು ನಿಲ್ದಾಣದಲ್ಲಿ ಆದಾಯ ಬಂದಿರುವುದಿಲ್ಲ ಎಂದು ನಮಗೆ ತಿಳಿಸಿರುತ್ತಾರೆ. ನಾವು ಸಮಗ್ರವಾಗಿ ಅಧ್ಯಯನವನ್ನು ಮಾಡಿ ರೈಲ್ವೆ ಇಲಾಖೆಗೆ ಮತ್ತೊಮ್ಮೆ ಪುನರ್ ಪರಿಶೀಲಿಸಿ ಎಂದು ಕೆಲವೊಂದು ಅಂಕಿ ಅಂಶಗಳ ಸಮೇತ ಗಮನ ಸೆಳೆದಿರುತ್ತೇವೆ. ದೇಶದ ಎಷ್ಟೋ ರೈಲು ನಿಲ್ದಾಣಗಳಲ್ಲಿ ೬,೦೦೦ ಕ್ಕಿಂತ ಕಡಿಮೆ ಆದಾಯವಿದ್ದರೂ ಶಾಶ್ವತ ನಿಲುಗಡೆಯನ್ನು ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ನಿಂಬಾಳ್ ನಿಲ್ದಾಣದಲ್ಲಿ ಕಳೆದ ವರುಷ ಸಂಸದರು ರಮೇಶ್ ಜಿಗುಣಗಿ ಸಹ ಶಾಶ್ವತ ನಿಲುಗಡೆಯನ್ನು ಕಡಿಮೆಯಾಗದೆ ಇದ್ದರೂ ಸಹ ಮಾಡಿಸಿಕೊಟ್ಟಿದ್ದಾರೆ. ಇದೇ ಮಾದರಿಯಲ್ಲಿ ನಮ್ಮ ಕ್ಷೇತ್ರದ ಸಂಸದರು ಕೂಡ ರೈಲ್ವೆ ಕೆಲಸ ಮಂತ್ರಿಗಳಾದ ಅಶ್ವಿನಿ ವೈಷ್ಣವ ಬಳಿ ವಿಶೇಷ ಮನವಿಯನ್ನ ಸಲ್ಲಿಸಿ ಶಾಶ್ವತ ನಿಲುಗಡೆಯನ್ನ ಮಾಡಿಸಿಕೊಡುತ್ತೇನೆ ಎಂದು ನಮಗೆ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು. ಅವರಿಗೆ ವಿಶೇಷವಾಗಿ ಸಮಸ್ತ ತಾಲೂಕಿನ ನಾಗರಿಕರ ಪರವಾಗಿ ಧನ್ಯವಾದಗಳು ತಿಳಿಸುತ್ತಿದ್ದೇನೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿ ೩೦ ಡಿಸೆಂಬರ್ ಸೋಮವಾರ ಮೈಸೂರಿನ ಡಿ ಆರ್ ಎಂ ಶಿಲ್ಪಿ ಅಗರ್ವಾಲ್ ಅವರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಮೂರು ತಿಂಗಳ ನಿಲುಗಡೆಯನ್ನು ಮಾಡಿಕೊಡಿ ಎಂದು ಸೂಚನೆ ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಆಲೂರು ತಾಲೂಕಿಗೆ ಮತ್ತೊಮ್ಮೆ ರೈಲ್ವೆ ಮೂರು ತಿಂಗಳ ತಾತ್ಕಾಲಿಕ ನಿಲುಗಡೆ ಬರುತ್ತದೆ ಎಂದು ಮಾಧ್ಯಮದ ಮುಖಾಂತರ ತಾಲೂಕಿನ ಸಮಸ್ತ ಜನರಿಗೆ ಬೆಳಕಿಗೆ ತರುತ್ತಿದ್ದೇವೆ ಎಂದರು.<br>ಪತ್ರಿಕಾಗೋಷ್ಠಿಯಲ್ಲಿ ವಿನಯ್, ಸೋಮಶೇಖರ್ ಇತರರು ಉಪಸ್ಥಿತರಿದ್ದರು.</p>



<p></p>
]]></content:encoded>
					
		
		
			</item>
		<item>
		<title>ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಲು ಎಎಪಿ ಆಗ್ರಹ</title>
		<link>https://peepalmedia.com/aap-demands-to-conduct-all-examinations-of-railway-department-in-kannada-too/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 05 Nov 2022 06:06:53 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[Aam Aadmi Party]]></category>
		<category><![CDATA[bengaluru]]></category>
		<category><![CDATA[examinations]]></category>
		<category><![CDATA[india]]></category>
		<category><![CDATA[Jagadish v. Sadam]]></category>
		<category><![CDATA[kannada]]></category>
		<category><![CDATA[Kannada Language]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[railway department]]></category>
		<guid isPermaLink="false">https://peepalmedia.com/?p=14229</guid>

					<description><![CDATA[ಬೆಂಗಳೂರು: ರೈಲ್ವೆ ಇಲಾಖೆಯ ಉನ್ನತ ದರ್ಜೆಯ ಹುದ್ದೆಗಳಿಗೆ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡದಲ್ಲಿ ಕೂಡ ಪರೀಕ್ಷೆ ನಡೆಸಬೇಕು ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್‌ ವಿ ಸದಂ ಅವರು “ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ನಡೆಸಲಾಗುತ್ತಿತ್ತು. ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಸಿ ಹಾಗೂ ಡಿ ದರ್ಜೆ [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು:</strong> ರೈಲ್ವೆ ಇಲಾಖೆಯ ಉನ್ನತ ದರ್ಜೆಯ ಹುದ್ದೆಗಳಿಗೆ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿರುವುದಕ್ಕೆ ಆಮ್‌ ಆದ್ಮಿ ಪಾರ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡದಲ್ಲಿ ಕೂಡ ಪರೀಕ್ಷೆ ನಡೆಸಬೇಕು ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದರು.</p>



<p style="font-size:20px">ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್‌ ವಿ ಸದಂ ಅವರು “ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ನಡೆಸಲಾಗುತ್ತಿತ್ತು. ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಸಿ ಹಾಗೂ ಡಿ ದರ್ಜೆ ಹುದ್ದೆಗಳ ಪರೀಕ್ಷೆಗಳನ್ನು ಕನ್ನಡದಲ್ಲೂ ನಡೆಸಲಾಗುತ್ತಿದೆ. ಆದರೆ ಉನ್ನತ ದರ್ಜೆಗಳಾದ ಎ ಹಾಗೂ ಬಿ ದರ್ಜೆಗಳಿಗೆ ಈಗಲೂ ಕನ್ನಡದಲ್ಲಿ ಪರೀಕ್ಷೆಗಳು ನಡೆಯುತ್ತಿಲ್ಲ. ಇದಲ್ಲದೇ, ಸಿ ಹಾಗೂ ಡಿ ದರ್ಜೆಯ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕವಾಗಲೂ ಹಿಂದಿ ಬರಬೇಕೆಂಬ ನಿಯಮ ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ಕನ್ನಡಿಗ ಯುವಕರಿಗೆ ಭಾರೀ ಅನ್ಯಾಯ ಮಾಡುತ್ತಿದೆ” ಎಂದು ಹೇಳಿದರು.</p>



<p style="font-size:20px">“ಸಿ ಹಾಗೂ ಡಿ ದರ್ಜೆಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸುತ್ತಿದ್ದರೂ, ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟು ದೋಷವಿರುತ್ತದೆ. ಒಲ್ಲದ ಮನಸಿನಲ್ಲಿ ಕಾಟಾಚಾರಕ್ಕೆ ಕನ್ನಡ ಮಾಧ್ಯಮದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತಿದೆ. ಹಿಂದಿಯಲ್ಲಿ ತಯಾರಿಸಿದ ಪ್ರಶ್ನೆಪತ್ರಿಕೆಗಳನ್ನು ಗೂಗಲ್‌ ಟ್ಯಾನ್ಸ್‌ಲೇಟ್‌ ಬಳಸಿ ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಶ್ನೆಗಳು ಸರಿಯಾಗಿ ಅರ್ಥವಾಗದೇ ಕನ್ನಡದ ಯುವಕರು ರೈಲ್ವೆ ಇಲಾಖೆಯ ಹುದ್ದೆಗಳಿಗೆ ನೇಮಕವಾಗುತ್ತಿಲ್ಲ” ಎಂದು ಜಗದೀಶ್‌ ವಿ ಸದಂ ಬೇಸರ ವ್ಯಕ್ತಪಡಿಸಿದರು.</p>



<p style="font-size:20px">“ಕೇವಲ ಹಿಂದಿ ಭಾಷಿಗರಿಗೆ ಮಾತ್ರ ಹೆಚ್ಚಿನ ಉದ್ಯೋಗಗಳು ಸಿಗಬೇಕೆಂಬ ದುರುದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ಡಬಲ್‌ ಇಂಜಿನ್‌ ಸರ್ಕಾರಕ್ಕೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಸ್ವಲ್ಪವಾದರೂ ಕಾಳಜಿಯಿದ್ದರೆ, ರೈಲ್ವೆ ಇಲಾಖೆಯ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲಿ. ರಾಜ್ಯದ ಎಲ್ಲ ಬಿಜೆಪಿ ಶಾಸಕರು ಹಾಗೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಲಿ. ಕರ್ನಾಟಕದಲ್ಲಿನ ಎಲ್ಲ ರೈಲ್ವೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನಿಗದಿಪಡಿಸಲಿ. ಇಂತಹ ಕೆಲಸಗಳನ್ನು ಮಾಡದೇ ಕೇವಲ ಹಾಡು ಹೇಳಿಸುವ ಕಾರ್ಯಕ್ರಮ ಆಯೋಜಿಸುವುದರಿಂದ ಕನ್ನಡಿಗರಿಗೆ ಯಾವುದೇ ಲಾಭವಾಗದು” ಎಂದು ಜಗದೀಶ್‌ ವಿ ಸದಂ ಹೇಳಿದರು.</p>
]]></content:encoded>
					
		
		
			</item>
	</channel>
</rss>
