<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>reservation &#8211; Peepal Media</title>
	<atom:link href="https://peepalmedia.com/tag/reservation/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 06 Mar 2025 08:49:04 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>reservation &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಳಮೀಸಲಾತಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಹೆಚ್.ಸಿ. ಮಹದೇವಪ್ಪ ಅವರನ್ನು ಒತ್ತಾಯಿಸಿದ ಹೋರಾಟಗಾರರು</title>
		<link>https://peepalmedia.com/activists-urged-h-c-mahadevappa-to-discuss-internal-reservation-in-the-session/</link>
		
		<dc:creator><![CDATA[Peepal Media]]></dc:creator>
		<pubDate>Thu, 06 Mar 2025 08:49:04 +0000</pubDate>
				<category><![CDATA[ರಾಜ್ಯ]]></category>
		<category><![CDATA[congrees]]></category>
		<category><![CDATA[dalit activists]]></category>
		<category><![CDATA[HC Mahadevappa]]></category>
		<category><![CDATA[internal reservation]]></category>
		<category><![CDATA[karnartaka]]></category>
		<category><![CDATA[reservation]]></category>
		<guid isPermaLink="false">https://peepalmedia.com/?p=54871</guid>

					<description><![CDATA[ಒಳಮೀಸಲಾತಿ ಕುರಿತಂತೆ ಹೋರಾಟಗಾರರು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಡಾ. ಹೆಚ್. ಸಿ ಮಹದೇವಪ್ಪರನ್ನು ಭೇಟಿ‌ ಮಾಡಿ ಒಳಮೀಸಲಾತಿ ಕುರಿತು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯಿಸಿದರು.&#160; ಆಗಸ್ಟ್ 1 ರಂದು ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾದ ತೀರ್ಪು ನೀಡಿ, ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು.&#160; ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ‌ಮಾಡುವಂತೆ ಕರ್ನಾಟಕ ಸರ್ಕಾರವನ್ನು ಒಳಮೀಸಲಾತಿ ಹೋರಾಟಗಾರರು ನಿರಂತರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಾನ್ಯ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರ ಏಕ‌ ಸದಸ್ಯ ಆಯೋಗವನ್ನು [&#8230;]]]></description>
										<content:encoded><![CDATA[
<p>ಒಳಮೀಸಲಾತಿ ಕುರಿತಂತೆ ಹೋರಾಟಗಾರರು ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಡಾ. ಹೆಚ್. ಸಿ ಮಹದೇವಪ್ಪರನ್ನು ಭೇಟಿ‌ ಮಾಡಿ ಒಳಮೀಸಲಾತಿ ಕುರಿತು ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯಿಸಿದರು.&nbsp;</p>



<p>ಆಗಸ್ಟ್ 1 ರಂದು ಮಾನ್ಯ ಸುಪ್ರೀಂ ಕೋರ್ಟ್ ಒಳಮೀಸಲಾತಿ ಪರವಾದ ತೀರ್ಪು ನೀಡಿ, ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು.&nbsp;</p>



<p>ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ‌ಮಾಡುವಂತೆ ಕರ್ನಾಟಕ ಸರ್ಕಾರವನ್ನು ಒಳಮೀಸಲಾತಿ ಹೋರಾಟಗಾರರು ನಿರಂತರವಾಗಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಾನ್ಯ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ರವರ ಏಕ‌ ಸದಸ್ಯ ಆಯೋಗವನ್ನು ರಚಿಸಿ 3 ತಿಂಗಳ ಕಾಲಾವಕಾಶ ನೀಡಿತ್ತು.&nbsp;</p>



<p>ಇದೀಗ ಆಯೋಗದ ಅವಧಿ ಮುಗಿಯುತ್ತಿರುವ‌ ಹಿನ್ನೆಲೆಯಲ್ಲಿ ಆಯೋಗದಿಂದ ಮಧ್ಯಂತರ ವರದಿಯನ್ನು ಸರ್ಕಾರ ಪಡೆದುಕೊಳ್ಳಬೇಕು, ಪ್ರಸ್ತುತ ಲಭ್ಯವಿರುವ ದತ್ತಾಂಶಗಳ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವನ್ನು ಮಾಡಬೇಕು ಹಾಗೂ ಶಾಶ್ವತ ಜಾರಿಗಾಗಿ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗಬೇಕೆಂದು ಸಚಿವರನ್ನು ಒತ್ತಾಯಿಸಿದರು.&nbsp;</p>



<p>ಇದೇ ಸಂದರ್ಭದಲ್ಲಿ ಬ್ಯಾಕ್ ಲಾಗ್ ಹುದ್ದೆಗಳನ್ನು ಒಳಮೀಸಲಾತಿ ಜಾರಿಯಾಗುವವರೆಗೂ ಯಾವ ಕಾರಣಕ್ಕೂ ಭರ್ತಿ‌ಮಾಡಲು ಮುಂದಾಗಬಾರದೆಂದು ಮನವಿ ಮಾಡಿಕೊಂಡರು.&nbsp;</p>



<p>ಇದಕ್ಕೆ ಸ್ಫಂದಿಸಿದ ಸಚಿವರು ಒಳಮೀಸಲಾತಿ ಜಾರಿಯಾಗುವವರೆಗೂ ಬ್ಯಾಕ್ ಹುದ್ದೆಗಳು ಸೇರಿದಂತೆ, ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು, ಅಲ್ಲದೆ&nbsp; ಒಳಮೀಸಲಾತಿ‌ ಕುರಿತಂತೆ ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಚರ್ಚಿಸುವುದಾಗಿ ತಿಳಿಸಿದರು.</p>



<p>ಈ ವೇಳೆ ಒಳಮೀಸಲಾತಿ ಪರ ಹೋರಾಟಗಾರರಾದ ಬಸವರಾಜ್ ಕೌತಾಳ್, ಚಂದ್ರು ತರಹುಣಿಸೆ, ರಘು ಕಾಮಾಕ್ಷಿಪಾಳ್ಯ, ಮಂಜುನಾಥ್ ಮತ್ತಿತರರು ಹಾಜರಿದ್ದರು.</p>
]]></content:encoded>
					
		
		
			</item>
		<item>
		<title>ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ</title>
		<link>https://peepalmedia.com/women-reservation-bill-2023-history-of-female-representation/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 20 Sep 2023 12:07:01 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[bharat]]></category>
		<category><![CDATA[bharata]]></category>
		<category><![CDATA[BJP ADVERTISMENT]]></category>
		<category><![CDATA[congress]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[parliment]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Rahul Gandhi]]></category>
		<category><![CDATA[rajyasabha]]></category>
		<category><![CDATA[reservation]]></category>
		<category><![CDATA[state politics]]></category>
		<category><![CDATA[vidhana parishat]]></category>
		<category><![CDATA[vidhanasabha]]></category>
		<category><![CDATA[women]]></category>
		<category><![CDATA[women empowerment]]></category>
		<category><![CDATA[women reservation bill]]></category>
		<category><![CDATA[writing]]></category>
		<guid isPermaLink="false">https://peepalmedia.com/?p=28152</guid>

					<description><![CDATA[ಕಳೆದ ಒಂದು ದಶಕದಿಂದಲೂ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಇದೀಗ ಮತ್ತೆ ಜೀವ ಬಂದಿದೆ. ಸಪ್ಟೆಂಬರ್‌ 18, 2023 ಮಂಗಳವಾರ, ಲೋಕಸಭೆಯಲ್ಲಿ 128ನೇ ತಿದ್ದುಪಡಿ ತಂದು ಸಂವಿಧಾನ ಮಸೂದೆ ಮಹಿಳಾ ಮೀಸಲಾತಿ ವಿಧೆಯಕ ಮಂಡನೆಯಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಮಸೂದೆ ದೊಡ್ಡ ಸದ್ದು ಮಾಡುತ್ತಾ ಸಂಸತ್ತಿನಲ್ಲಿ ಮಂಡನೆಯಾಗುವುದು ಇದೇನೂ ಮೊದಲಲ್ಲ. ಈಗಲೂ ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿ ರಾಷ್ಟ್ರಪತಿಯವರ ಅಂಕಿತ ಬಿದ್ದೇ ಬೀಳುತ್ತದೆ ಎಂದು ನಂಬಿ ಕೂರುವ ಸ್ಥಿತಿಯೂ ಇಲ್ಲ. ಆದರೆ ಈಗ ಕೇಂದ್ರದಲ್ಲಿ ನರೇಂದ್ರ [&#8230;]]]></description>
										<content:encoded><![CDATA[
<p class="has-text-align-left">ಕಳೆದ ಒಂದು ದಶಕದಿಂದಲೂ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಇದೀಗ ಮತ್ತೆ ಜೀವ ಬಂದಿದೆ. ಸಪ್ಟೆಂಬರ್‌ 18, 2023 ಮಂಗಳವಾರ, ಲೋಕಸಭೆಯಲ್ಲಿ 128ನೇ ತಿದ್ದುಪಡಿ ತಂದು ಸಂವಿಧಾನ ಮಸೂದೆ ಮಹಿಳಾ ಮೀಸಲಾತಿ ವಿಧೆಯಕ ಮಂಡನೆಯಾಗಿದೆ. ಈ ರೀತಿ ಮಹಿಳಾ ಮೀಸಲಾತಿ ಮಸೂದೆ ದೊಡ್ಡ ಸದ್ದು ಮಾಡುತ್ತಾ ಸಂಸತ್ತಿನಲ್ಲಿ ಮಂಡನೆಯಾಗುವುದು ಇದೇನೂ ಮೊದಲಲ್ಲ. ಈಗಲೂ ಎರಡೂ ಸದನಗಳಲ್ಲಿ ಒಪ್ಪಿಗೆಯಾಗಿ ರಾಷ್ಟ್ರಪತಿಯವರ ಅಂಕಿತ ಬಿದ್ದೇ ಬೀಳುತ್ತದೆ ಎಂದು ನಂಬಿ ಕೂರುವ ಸ್ಥಿತಿಯೂ ಇಲ್ಲ. ಆದರೆ ಈಗ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಇರುವುದರಿಂದ ಮಸೂದೆ ಜಾರಿಯೇ ಆಯ್ತೇನೋ ಎನ್ನುವಂತ ಪ್ರಚಾರ ಮಾತ್ರ ಹೊರಗಡೆ ಜೋರಾಗಿದೆ.&nbsp;</p>



<p>ಮತ್ತೊಮ್ಮೆ ಮಸೂದೆಯನ್ನು ಮಂಡಿಸಿರುವುದಕ್ಕೆ ಇಡೀ ದೇಶದಲ್ಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿ&nbsp; ʼನಾರಿ ಶಕ್ತಿ ವಂದನ್ ಅಧಿನಿಯಮ&#8217; ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಯಿತು. ಆದರೆ ಬಹುಮತವಿಲ್ಲದೆ ಆಂಗೀಕಾರವಾಗಲಿಲ್ಲ. ಈಗ ನನಗೆ ಈ ಮಸೂದೆ ಜಾರಿಗೆ ತರಲು ದೇವರು ಅವಕಾಶ ನೀಡಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.</p>



<p>ಈ ನಡುವೆ, ಕಾಂಗ್ರೇಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಿಳಾ ಮೀಸಲಾತಿ ಮಸೂದೆಯನ್ನು 2010 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿಯೇ ತರಲಾಗಿತ್ತು, ಇದರ ಕ್ರೆಡಿಟ್‌ ಕಾಂಗ್ರೇಸ್‌ಗೆ ಕೊಡಬೇಕು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. 2010 ರಲ್ಲಿ ಯುಪಿಎ ಸರ್ಕಾರ ಮಂಡಿಸಿದ ಮಸೂದೆಯು ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿಯನ್ನು ನೀಡಿತ್ತು. ಅದರಲ್ಲಿ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗೆ ಮೀಸಲಿಡಲಾಗಿತ್ತು. 2010ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾದರೂ ಲೋಕಸಭೆಯಲ್ಲಿ ಅಂಗೀಕಾರವಾಗಿರಲಿಲ್ಲ. ಆಗ ಹಿಂದುಳಿದ ವರ್ಗಗಳ ಮಹಿಳಾ ಮೀಸಲಾತಿಯಲ್ಲಿ ಒಳಮೀಸಲಾತಿಗೆ ಆಗ್ರಹಪಡಿಸಿದ್ದ ಕಾರಣ ಮಸೂದೆ ನೆನೆಗುದಿಗೆ ಬಿದ್ದಿತ್ತು.  ಈಗ ಮಂಡಿಸಿರುವ ಮಸೂದೆಯಲ್ಲೂ ಒಬಿಸಿ ಮಹಿಳೆಯರಿಗೆ ಒಳ ಮೀಸಲಾತಿ ಕಲ್ಪಿಸಲಾಗಿಲ್ಲ.</p>



<p><strong>ವಿಡಿಯೋ:<a href="https://fb.watch/naEQm3QVU9/" data-type="link" data-id="https://fb.watch/naEQm3QVU9/"> ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!</a></strong></p>



<p>ಈಗ ಮಂಡಿಸಲಾಗಿರುವ ಮಸೂದೆ ಅಂಗೀಕಾರಕೊಂಡು ಕಾಯ್ದೆಯಾದರೂ ಅದು ಸಧ್ಯದಲ್ಲೇನು ಜಾರಿಯಾಗುವುದಿಲ್ಲ. ಅದು ಜಾರಿಯಾಗುವುದು 2029ಕ್ಕೆ! ಯಾಕೇಂದರೆ, ಈ ಮೀಸಲಾತಿ 2026 ರಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಮುಗಿದ ನಂತರವೇ ಜಾರಿಗೊಳಿಸುವ ಸಾಧ್ಯತೆಯಿದೆ. ಈ ಮಹಿಳಾ ಮೀಸಲಾತಿಯು ಲೋಕಸಭಾ&nbsp; ಮತ್ತು ರಾಜ್ಯ ವಿಧಾನಸಭಾ ಸ್ಥಾನಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗೆ ಅನ್ವಯಿಸುವುದಿಲ್ಲ ಎಂದೂ ಮಸೂದೆಯಲ್ಲಿ ಹೇಳಲಾಗಿದೆ. ಈಗ ಮೋದಿ ಸರ್ಕಾರ ಮಂಡಿಸಿರುವ ಮಹಿಳಾ ಮೀಸಲಾತಿ ಮಸೂದೆ 2010ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಮಂಡಿಸಿದ್ದ ಮಸೂದೆಯ ತದ್ರೂಪವೇ ಆಗಿದೆ. </p>



<p>ಇದರಲ್ಲಿ ಸೇರಿರುವ ಎರಡು ಸಣ್ಣ ಹೊಸ ಅಂಶಗಳು ಏನೆಂದರೆ ಈ</p>



<p>•&nbsp;ಕಾಯ್ದೆ ಜಾರಿಯಾದ 15 ವರ್ಷಗಳವರೆಗೆ ಇರಲಿದ್ದು, ಆನಂತರವೂ&nbsp; ಅವಧಿಯನ್ನು ವಿಸ್ತರಿಸಬಹುದು.</p>



<p>•&nbsp;ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮೀಸಲಾತಿಯನ್ನು ಒಳಗೊಂಡಿರುವ ಎರಡು ಆರ್ಟಿಕಲ್‌ಗಳಿಗೆ ತಿದ್ದುಪಡಿಯನ್ನು ಮೋದಿ ಸರ್ಕಾರದ ಮಸೂದೆಯಲ್ಲಿ ಕೈಬಿಡಲಾಗಿದೆ.</p>



<figure class="wp-block-image size-large"><img fetchpriority="high" decoding="async" width="1024" height="669" src="https://peepalmedia.com/wp-content/uploads/2023/09/೫೬೫೭೬೮೮೬-1024x669.jpg" alt="" class="wp-image-28175" srcset="https://peepalmedia.com/wp-content/uploads/2023/09/೫೬೫೭೬೮೮೬-1024x669.jpg 1024w, https://peepalmedia.com/wp-content/uploads/2023/09/೫೬೫೭೬೮೮೬-300x196.jpg 300w, https://peepalmedia.com/wp-content/uploads/2023/09/೫೬೫೭೬೮೮೬-768x501.jpg 768w, https://peepalmedia.com/wp-content/uploads/2023/09/೫೬೫೭೬೮೮೬-150x98.jpg 150w, https://peepalmedia.com/wp-content/uploads/2023/09/೫೬೫೭೬೮೮೬-696x454.jpg 696w, https://peepalmedia.com/wp-content/uploads/2023/09/೫೬೫೭೬೮೮೬-1068x697.jpg 1068w, https://peepalmedia.com/wp-content/uploads/2023/09/೫೬೫೭೬೮೮೬.jpg 1340w" sizes="(max-width: 1024px) 100vw, 1024px" /></figure>



<figure class="wp-block-image size-large"><img decoding="async" width="1024" height="485" src="https://peepalmedia.com/wp-content/uploads/2023/09/೬೬೬೬೬-1024x485.jpg" alt="" class="wp-image-28176" srcset="https://peepalmedia.com/wp-content/uploads/2023/09/೬೬೬೬೬-1024x485.jpg 1024w, https://peepalmedia.com/wp-content/uploads/2023/09/೬೬೬೬೬-300x142.jpg 300w, https://peepalmedia.com/wp-content/uploads/2023/09/೬೬೬೬೬-768x364.jpg 768w, https://peepalmedia.com/wp-content/uploads/2023/09/೬೬೬೬೬-150x71.jpg 150w, https://peepalmedia.com/wp-content/uploads/2023/09/೬೬೬೬೬-696x330.jpg 696w, https://peepalmedia.com/wp-content/uploads/2023/09/೬೬೬೬೬-1068x506.jpg 1068w, https://peepalmedia.com/wp-content/uploads/2023/09/೬೬೬೬೬.jpg 1320w" sizes="(max-width: 1024px) 100vw, 1024px" /></figure>



<p>ದೇಶದಲ್ಲಿ ಇಂದು ಪಂಚಾಯತ್‌ ರಾಜ್‌ ಸಂಸ್ಥೆಗಳಲ್ಲಿ ಶೇಕಡಾ 50ರ ವರೆಗೂ ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಆದರೆ ಪಾರ್ಲಿಮೆಂಟು ಮತ್ತು ವಿಧಾನಸಭೆ ವಿಧಾನ ಪರಿಷತ್ತುಗಳಿಗೂ 33% ಮೀಸಲಾತಿ ಕಲ್ಪಿಸಬೇಕು ಎಂಬ ಒತ್ತಾಯದ ಹೋರಾಟಕ್ಕೆ ಬರೋಬ್ಬರಿ ಮೂರು ದಶಕಗಳ ಇತಿಹಾಸವೇ ಇದೆ.&nbsp;</p>



<p style="font-size:19px"><strong>ಮಹಿಳಾ ಪ್ರಾತಿನಿಧ್ಯದ ಇತಿಹಾಸ:</strong></p>



<p>ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ 1970 ರ ದಶಕದವರೆಗೆ 5% ರಷ್ಟಿತ್ತು.&nbsp; ಅದು ಎರಡಂಕಿಗೆ ಏರಿದ್ದೇ 2009 ರಲ್ಲಿ. ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಲೋಕಸಭೆಗಿಂತ ಕಡಿಮೆಯಾಗಿದೆ. 1951 ರಿಂದ ಇದು ಒಟ್ಟು ಸದಸ್ಯತ್ವದ 13% ನ್ನೂ ದಾಟಿಲ್ಲ. ಅಂದರೆ 545 ರಷ್ಟು ಸಂಸದ ಬಲ ಇರುವ ಲೋಕಸಭೆಯಲ್ಲಿ 50 ಜನ ಮಹಿಳೆಯರೂ ಇಲ್ಲ ಎಂದರೆ ಎಂತಹ ವಿಪರ್ಯಾಸ ನೋಡಿ.</p>



<p>ಇಡೀ ದೇಶದಲ್ಲಿ ಸ್ಥಳೀಯ ಸಂಸ್ಥೆಗಳನ್ನು ಜಾರಿಗೊಳಿಸಿದ್ದು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದು ನಮಗೆ ಹೆಮ್ಮೆಯ ಸಂಗತಿ. 1983ರಲ್ಲಿ ಜನತಾದಳ ಸರ್ಕಾರ ರಾಜ್ಯದಲ್ಲಿ ಪಂಚಾಯ್ತಿಗಳಲ್ಲಿ 25% ಮೀಸಲಾತಿ ನೀಡುವ ಮೂಲಕ ಇತಿಹಾಸ ಬರೆದಿತ್ತು.</p>



<p>1988ರಲ್ಲಿ ರಚನೆಯಾದ ನ್ಯಾಶನಲ್‌ ವಿಶನ್‌ ಪ್ರೋಗ್ರಾಮ್‌ನಲ್ಲಿ ಪಂಚಾಯ್ತಿಯಿಂದ ಲೋಕಸಭೆಯ ವರೆಗೆ ಮೂರನೇ ಒಂದರಷ್ಟು ಮಹಿಳಾ ಮೀಸಲಾತಿ ನೀಡುವ ಕಾರ್ಯಕ್ರಮ ರೂಪಿಸಲಾಯಿತು. ಇದರಂತೆ ಮರು ವರ್ಷ ಅಂದರೆ, 1989ರಲ್ಲಿ ಅಂದಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಮೇ ತಿಂಗಳಿನಲ್ಲಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ಒದಗಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಮಹಿಳಾ ಮೀಸಲಾತಿ ನೀಡುವ ಮೊದಲ ಪ್ರಯತ್ನ ನಡೆಸಿದರು. ಆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾದರೂ ರಾಜ್ಯಸಭೆಯಲ್ಲಿ ಅಂಗೀಕಾರವಾಗಲಿಲ್ಲ. ಹೀಗಾಗಿ ರಾಜೀವ್‌ ಗಾಂಧಿಯವರ ಪ್ರಯತ್ನಕ್ಕೆ ಹಿನ್ನಡೆಯಾಯ್ತು.</p>



<p>ಮುಂದೆ 1992 ಮತ್ತು 1993ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪಂಚಾಯತ್‌ ರಾಜ್‌ಗೆ 72 ಮತ್ತು 73ನೇ ತಿದ್ದುಪಡಿ ತಂದಿತು. ದೇಶದಾದ್ಯಂತ ಕರ್ನಾಟಕ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಆರಂಭವಾಗುವ ಜೊತೆಯಲ್ಲಿ ಮಹಿಳಾ ಮೀಸಲಾತಿಯೂ ಜಾರಿಗೊಂಡಿತು.&nbsp; ಇಂದು ಎಲ್ಲಾ ಮೂರು ಹಂತದ ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಎಲ್ಲಾ ಸ್ಥಾನಗಳಲ್ಲಿ ಮತ್ತು ಅಧ್ಯಕ್ಷ ಸ್ಥಾನಗಳಲ್ಲಿ ಮೂರನೇ ಒಂದು ಭಾಗ ಅಂದರೆ (33%) ಸ್ಥಾನಗಳನ್ನು ಮೀಸಲಿಡಲಾಗಿದೆ. ಮಸೂದೆಗಳು ಉಭಯ ಸದನಗಳಿಂದ ಅಂಗೀಕಾರವಾಯಿತು. ಆದರೆ ಸಮಾಜದಲ್ಲಿ ಅರ್ಧದಷ್ಟು ಮಹಿಳೆಯರು ಇರುವುದರಿಂದ ಅಷ್ಟೇ ಪ್ರಮಾಣದ ಮೀಸಲಾತಿ ಇರಬೇಕು ಎಂದು ಪ್ರತಿಪಾದಿಸಿದ ಹಲವು ರಾಜ್ಯಗಳಲ್ಲಿ ಇಂದು ಶೇಕಡಾ 50 ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ ಕರ್ನಾಟಕವೇ ಮುಂದು. ಹೀಗೆ 1988-89 ರಿಂದ 1992-93 ರ ನಡುವೆ ಆದಂತಹ ಒಂದೇ ಒಂದು ಸಂವಿಧಾನ ತಿದ್ದುಪಡಿಯ ಫಲವಾಗಿ ಈಗ ದೇಶಾದ್ಯಂತ ಪಂಚಾಯತ್ ಮತ್ತು ನಗರಪಾಲಿಕೆಗಳಲ್ಲಿ ಸುಮಾರು 15 ಲಕ್ಷ ಚುನಾಯಿತ ಮಹಿಳಾ ಪ್ರತಿನಿಧಿಗಳಿದ್ದಾರೆ.</p>



<p>ಆದರೆ, ಈ ಸನ್ನಿವೇಶ ವಿಧಾನ ಸಭೆ ಲೋಕಗಭೆಗಳಲ್ಲೂ ಆಗಬೇಕೆಂಬ ಪ್ರಯತ್ನವೂ ನಿರಂತರವಾಗಿದೆ.</p>



<p>ಸೆಪ್ಟೆಂಬರ್ 12, 1996 ರಂದು, ನಮ್ಮ ದೇವೇಗೌಡರು ಪ್ರಧಾನಿಯಾಗಿದ್ದ ಸಂಯುಕ್ತ ರಂಗ ಸರ್ಕಾರವು ಮೊದಲ ಬಾರಿಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗಾಗಿ ಲೋಕಸಭೆಯಲ್ಲಿ 81 ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಆದರೆ ಲೋಕಸಭೆಯಲ್ಲಿ ಅನುಮೋದನೆ ಸಿಗಲಿಲ್ಲ. ನಂತರ ಇದನ್ನು  ಕಮ್ಯುನಿಷ್ಟ್‌ ನಾಯಕಿ ಗೀತಾ ಮುಖರ್ಜಿ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು.  ಡಿಸೆಂಬರ್ 1996 ರಂದು ಈ ಸಮಿತಿ ತನ್ನ ವರದಿಯನ್ನು ಮಂಡಿಸಿದರೂ, ಲೋಕಸಭೆಯಲ್ಲಿ ಮಸೂದೆಯು ಬಿದ್ದುಹೋಯಿತು.</p>



<p><strong>ವಿಡಿಯೋ ನೋಡಿ: <a href="https://www.youtube.com/watch?v=s4YZr3z98mg&amp;t=11s" data-type="link" data-id="https://www.youtube.com/watch?v=s4YZr3z98mg&amp;t=11s">ಮಹಿಳಾ ಮೀಸಲಾತಿ ಮಸೂದೆ: ನಾಲ್ಕು ದಶಕದ ಇತಿಹಾಸ!</a></strong></p>



<p>ಎರಡು ವರ್ಷಗಳ ನಂತರ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ NDA ಸರ್ಕಾರವು 1998 ರಲ್ಲಿ 12 ನೇ ಲೋಕಸಭೆಯಲ್ಲಿ WRB ಮಸೂದೆಯನ್ನು ಮಂಡಿಸಿತು. ಆದರೆ ಆಗಲೂ ವಿಫಲವಾಯಿತು. ವಾಜಪೇಯಿ ಸರ್ಕಾರ 1999, 2002 ಮತ್ತು 2003 ರಲ್ಲಿ ಮತ್ತೆ ಮಂಡಿಸಿದರೂ ಯಶಸ್ವಿಯಾಗಲಿಲ್ಲ.</p>



<p>1996 ರ ಮಹಿಳಾ ಮೀಸಲಾತಿ ಮಸೂದೆ ವರದಿ OBC ಮಹಿಳೆಯರಿಗೆ ಒಳಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡುತ್ತದೆ. ಅಲ್ಲದೇ, ರಾಜ್ಯಸಭೆ ಮತ್ತು ವಿಧಾನ ಪರಿಷತ್ತುಗಳಿಗೂ ಮೀಸಲಾತಿಯನ್ನು ವಿಸ್ತರಿಸುವಂತೆ ಹೇಳುತ್ತದೆ. ಆದರೆ ಎರಡೂ ಶಿಫಾರಸುಗಳನ್ನು 2008ರ&nbsp; ಮಸೂದೆಯಲ್ಲಿ ಅಳವಡಿಸಿರಲಿಲ್ಲ. ಹೀಗಾಗಿ ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಬಹುಜನ ಸಮಾಜ ಪಕ್ಷಗಳು ಈ ಮಸೂದೆಗೆ ಪ್ರಬಲ ವಿರೋಧ ವ್ಯಕ್ತಪಡಿಸಿದವು.</p>



<p>ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-1 ರ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತೆ ಚರ್ಚೆಗೆ ಬಂತು. 2004 ರಲ್ಲಿ ಸರ್ಕಾರ ಅದನ್ನು ತನ್ನ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ (Common Minimum Programme)&nbsp;&nbsp; ಸೇರಿಸಿತು. ಅದನ್ನು 108ನೇ ಸಾಂವಿಧಾನಿಕ ತಿದ್ದುಪಡಿಯನ್ನು ತಂದು 6 ಮೇ 2008 ರಂದು ಮಂಡಿಸಲಾಯಿತು. 1996 ರ ಗೀತಾ ಮುಖರ್ಜಿ ಸಮಿತಿಯು ಮಾಡಿದ ಏಳು ಶಿಫಾರಸುಗಳಲ್ಲಿ ಐದನ್ನು ಈ ಮಸೂದೆಯಲ್ಲಿ ಸೇರಿಸಲಾಯಿತು. ಮಸೂದೆಯನ್ನು ಮೇ 9, 2008 ರಂದು ಸ್ಥಾಯಿ ಸಮಿತಿಗೆ ಕಳುಹಿಸಲಾಯಿತು. ಸ್ಥಾಯಿ ಸಮಿತಿ ಡಿಸೆಂಬರ್ 17, 2009 ರಂದು ತನ್ನ ವರದಿಯನ್ನು ಮಂಡಿಸಿತು. ಇದು ಫೆಬ್ರವರಿ 2010 ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆಯನ್ನೂ ಪಡೆಯಿತು. ಅಂತಿಮವಾಗಿ ಮಸೂದೆ ರಾಜ್ಯಸಭೆಯಲ್ಲಿ ಮಾರ್ಚ್ 8ರ ಮಹಿಳಾ ದಿನದಂದು ಮಂಡನೆಗೊಂಡು, ಮಾರ್ಚ್‌ 9, 2010 ರಂದು 186 ಮತಗಳೊಂದಿಗೆ ಸರ್ವಾನುಮತದಿಂದ ಅಂಗೀಕಾರವಾಯಿತು. ಇದು ದೇಶದ ಮಹಿಳಾ ಮೀಸಲಾತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ ಎಂದರೂ ತಪ್ಪಿಲ್ಲ.</p>


<div class="wp-block-image">
<figure class="aligncenter size-large"><img decoding="async" width="1024" height="671" src="https://peepalmedia.com/wp-content/uploads/2023/09/೧೧-1024x671.jpg" alt="" class="wp-image-28173" srcset="https://peepalmedia.com/wp-content/uploads/2023/09/೧೧-1024x671.jpg 1024w, https://peepalmedia.com/wp-content/uploads/2023/09/೧೧-300x196.jpg 300w, https://peepalmedia.com/wp-content/uploads/2023/09/೧೧-768x503.jpg 768w, https://peepalmedia.com/wp-content/uploads/2023/09/೧೧-150x98.jpg 150w, https://peepalmedia.com/wp-content/uploads/2023/09/೧೧-696x456.jpg 696w, https://peepalmedia.com/wp-content/uploads/2023/09/೧೧-1068x700.jpg 1068w, https://peepalmedia.com/wp-content/uploads/2023/09/೧೧.jpg 1368w" sizes="(max-width: 1024px) 100vw, 1024px" /></figure></div>

<div class="wp-block-image">
<figure class="aligncenter size-large"><img loading="lazy" decoding="async" width="1024" height="771" src="https://peepalmedia.com/wp-content/uploads/2023/09/೩೩-1024x771.jpg" alt="" class="wp-image-28174" srcset="https://peepalmedia.com/wp-content/uploads/2023/09/೩೩-1024x771.jpg 1024w, https://peepalmedia.com/wp-content/uploads/2023/09/೩೩-300x226.jpg 300w, https://peepalmedia.com/wp-content/uploads/2023/09/೩೩-768x578.jpg 768w, https://peepalmedia.com/wp-content/uploads/2023/09/೩೩-150x113.jpg 150w, https://peepalmedia.com/wp-content/uploads/2023/09/೩೩-696x524.jpg 696w, https://peepalmedia.com/wp-content/uploads/2023/09/೩೩-1068x804.jpg 1068w, https://peepalmedia.com/wp-content/uploads/2023/09/೩೩.jpg 1162w" sizes="auto, (max-width: 1024px) 100vw, 1024px" /></figure></div>


<p>ಆದರೂ ಈ ಮಸೂದೆ ಲೋಕಸಭೆಯಲ್ಲಿ ಮಾತ್ರ ಅಂಗೀಕಾರವಾಗಲೇ ಇಲ್ಲ, 2014 ರಲ್ಲಿ ಲೋಕಸಭೆಯ ವಿಸರ್ಜನೆಯೊಂದಿಗೆ ಬಿಲ್ ಲ್ಯಾಪ್ಸ್ ಆಯಿತು. ರಾಜ್ಯಸಭೆಯಲ್ಲಿ ಮಂಡಿಸಿದ/ಅನುಮೋದಿತವಾದ ಮಸೂದೆಗಳು ಅನೂರ್ಜಿತಗೊಳ್ಳುವುದಿಲ್ಲ, ಆದ್ದರಿಂದ ಮಹಿಳಾ ಮೀಸಲಾತಿ ಮಸೂದೆಯು ಇನ್ನೂ ಹೆಚ್ಚು ಸಕ್ರಿಯವಾಗಿದೆ.</p>



<p>2019 ರ ಚುನಾವಣೆಯಲ್ಲಿ ಲೋಕಸಭೆಗೆ ಆಯ್ಕೆಯಾದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹಿಂದಿಗಿಂತ ಹೆಚ್ಚಿದ್ದರೂ, ಅವರ ಪ್ರಮಾಣವು ಒಟ್ಟು ಸದಸ್ಯತ್ವದ ಶೇಕಡಾ 15 ರಷ್ಟು ಮಾತ್ರ ಇದೆ. 2014ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಶೇಕಡಾ 12.7 ರಷ್ಟಿತ್ತು.</p>



<p style="font-size:21px"><strong>ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ:</strong></p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2023/09/Womens-Representation-in-the-Lok-Sabha-1-945x1024.jpg" alt="" class="wp-image-28167" style="width:533px;height:578px" width="533" height="578" srcset="https://peepalmedia.com/wp-content/uploads/2023/09/Womens-Representation-in-the-Lok-Sabha-1-945x1024.jpg 945w, https://peepalmedia.com/wp-content/uploads/2023/09/Womens-Representation-in-the-Lok-Sabha-1-277x300.jpg 277w, https://peepalmedia.com/wp-content/uploads/2023/09/Womens-Representation-in-the-Lok-Sabha-1-768x832.jpg 768w, https://peepalmedia.com/wp-content/uploads/2023/09/Womens-Representation-in-the-Lok-Sabha-1-150x163.jpg 150w, https://peepalmedia.com/wp-content/uploads/2023/09/Womens-Representation-in-the-Lok-Sabha-1-300x325.jpg 300w, https://peepalmedia.com/wp-content/uploads/2023/09/Womens-Representation-in-the-Lok-Sabha-1-696x754.jpg 696w, https://peepalmedia.com/wp-content/uploads/2023/09/Womens-Representation-in-the-Lok-Sabha-1-1068x1157.jpg 1068w, https://peepalmedia.com/wp-content/uploads/2023/09/Womens-Representation-in-the-Lok-Sabha-1.jpg 1188w" sizes="auto, (max-width: 533px) 100vw, 533px" /><figcaption class="wp-element-caption">ಕೃಪೆ: ಭಾರತೀಯ ಚುನಾವಣಾ ಆಯೋಗ</figcaption></figure></div>


<p style="font-size:21px">ರಾಜ್ಯಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯತೆ</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2023/09/Womens-Representation-in-the-Rajya-Sabha-1-2-630x1024.jpg" alt="" class="wp-image-28168" style="width:552px;height:897px" width="552" height="897" srcset="https://peepalmedia.com/wp-content/uploads/2023/09/Womens-Representation-in-the-Rajya-Sabha-1-2-630x1024.jpg 630w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-185x300.jpg 185w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-768x1247.jpg 768w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-946x1536.jpg 946w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-150x244.jpg 150w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-300x487.jpg 300w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-696x1130.jpg 696w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2-1068x1735.jpg 1068w, https://peepalmedia.com/wp-content/uploads/2023/09/Womens-Representation-in-the-Rajya-Sabha-1-2.jpg 1203w" sizes="auto, (max-width: 552px) 100vw, 552px" /><figcaption class="wp-element-caption">ಕೃಪೆ: ಭಾರತೀಯ ಚುನಾವಣಾ ಆಯೋಗ</figcaption></figure></div>


<p style="font-size:21px"><strong>ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳ ಸಂಖ್ಯೆ (1957-2019)</strong></p>


<div class="wp-block-image">
<figure class="aligncenter size-full is-resized"><a href="https://www.statista.com/statistics/1010882/women-candidates-lok-sabha-elections-india/"><img loading="lazy" decoding="async" src="https://peepalmedia.com/wp-content/uploads/2023/09/Number-of-Women-Candidates.jpg" alt="" class="wp-image-28177" style="width:520px;height:350px" width="520" height="350" srcset="https://peepalmedia.com/wp-content/uploads/2023/09/Number-of-Women-Candidates.jpg 660w, https://peepalmedia.com/wp-content/uploads/2023/09/Number-of-Women-Candidates-300x202.jpg 300w, https://peepalmedia.com/wp-content/uploads/2023/09/Number-of-Women-Candidates-150x101.jpg 150w" sizes="auto, (max-width: 520px) 100vw, 520px" /></a><figcaption class="wp-element-caption">ಕೃಪೆ:  <a href="https://www.statista.com/statistics/1010882/women-candidates-lok-sabha-elections-india/" data-type="link" data-id="https://www.statista.com/statistics/1010882/women-candidates-lok-sabha-elections-india/">Statista</a></figcaption></figure></div>


<p style="font-size:21px"><strong>ಭೌಗೋಳಿಕತೆಯ ಆಧಾರದಲ್ಲಿ ಮಹಿಳೆಯರ ಸಂಸದೀಯ ಪ್ರಾತಿನಿಧ್ಯ:</strong></p>



<figure class="wp-block-image size-large"><img loading="lazy" decoding="async" width="1024" height="353" src="https://peepalmedia.com/wp-content/uploads/2023/09/gtjkghhk-1-1024x353.jpg" alt="" class="wp-image-28182" srcset="https://peepalmedia.com/wp-content/uploads/2023/09/gtjkghhk-1-1024x353.jpg 1024w, https://peepalmedia.com/wp-content/uploads/2023/09/gtjkghhk-1-300x103.jpg 300w, https://peepalmedia.com/wp-content/uploads/2023/09/gtjkghhk-1-768x265.jpg 768w, https://peepalmedia.com/wp-content/uploads/2023/09/gtjkghhk-1-150x52.jpg 150w, https://peepalmedia.com/wp-content/uploads/2023/09/gtjkghhk-1-696x240.jpg 696w, https://peepalmedia.com/wp-content/uploads/2023/09/gtjkghhk-1-1068x368.jpg 1068w, https://peepalmedia.com/wp-content/uploads/2023/09/gtjkghhk-1.jpg 1454w" sizes="auto, (max-width: 1024px) 100vw, 1024px" /><figcaption class="wp-element-caption">ಕೃಪೆ: &nbsp;<a rel="noreferrer noopener" href="https://data.ipu.org/women-averages?month=5&amp;year=2022&amp;op=Show+averages&amp;form_build_id=form-8t9vx839F4GPWWbSuGDMqsgQed3R3GlWQbSgtwIS96M&amp;form_id=ipu__women_averages_filter_form" target="_blank"><em>IPU Parline: Global Data on National Parliament</em></a><em>&nbsp;(as of May 2022)</em><strong>&nbsp;</strong></figcaption></figure>



<p>ಇದೀಗ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದು 5 ವರ್ಷಗಳ ಅವಧಿಯಲ್ಲಿ ಈ ಕುರಿತು ಚಕಾರವೆತ್ತಲಿಲ್ಲ, ಮತ್ತೆ 2019ರಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳ ಕಾಲವೂ ಈ ಬಗ್ಗೆ ಉಸಿರೇ ಬಿಡಲಿಲ್ಲ. ಇದೀಗ ಇನ್ನೇನು ಚುನಾವಣೆ ಬಂತೆನ್ನುವ ಸಮಯದಲ್ಲಿ ಭಾರೀ ಪ್ರಚಾರದೊಂದಿಗೆ ಮಹಿಳಾ ಮಸೂದೆ ಮಂಡಿಸಲಾಗಿದೆ. </p>



<p>2019ರಲ್ಲಿ ಮೋದಿ ಸರ್ಕಾರ ಮೇಲ್ಜಾತಿಗಳಿಗೆ ಸಂವಿಧಾನಬಾಹಿರವಾಗಿ 10% ಮೀಸಲಾತಿ ನೀಡುವ ಮಸೂದೆ ಮಂಡಿಸಿ ಮೂರೇ ದಿನದಲ್ಲಿ ರಾಷ್ಟ್ಟಪತಿ ಸಹಿಯೂ ಬಿದ್ದು ಕಾಯ್ದೆಯಾಗಿ ಜಾರಿಯೂ ಅಗಿಬಿಟ್ಟಿತು. ಆಗಲೂ ಮಹಿಳಾ ಮೀಸಲಾತಿಯನ್ನು ಮಾತ್ರ ಕಡೆಗಣಿಸಲಾಗಿತ್ತು.</p>



<p>ಕನಿಷ್ಟ ಈಗಲಾದರೂ ಚುನಾವಣಾ ದೃಷ್ಟಿಯಿಂದಲಾದರೂ ಮತ್ತೆ ಇದು ಮುನ್ನೆಲೆಗೆ ಬಂದಿದೆ. ಆದರೆ ಇದರಲ್ಲಿ ಒಬಿಸಿ ಒಳಮೀಸಲಾತಿ ಇಲ್ಲದಿರುವುದು ಮತ್ತು ಇದು ಜಾರಿಯಾಗುವುದೇ 2029ಕ್ಕೆ ಎಂಬುದು ಸಮಸ್ಯಾತ್ಮಕವಾಗಿದೆ.</p>



<p>ಒಳಮೀಸಲಾತಿಯೊಂದಿಗೆ, ತಕ್ಷಣದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.</p>



<p><strong>ಲೇಖನ:</strong> ಚರಣ್‌ ಐವರ್ನಾಡು, ಬೆಂಗಳೂರು</p>
]]></content:encoded>
					
		
		
			</item>
		<item>
		<title>ಸಿದ್ದರಾಮಯ್ಯ ಪರಿಶಿಷ್ಟ ಸಮುದಾಯಗಳತ್ತ ತಿರುಗಿಯೂ ನೋಡಿಲ್ಲ: ಸಿಎಂ ಬೊಮ್ಮಾಯಿ</title>
		<link>https://peepalmedia.com/siddaramaiah-has-not-even-looked-at-scheduled-communities-cm-bommai/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Dec 2022 09:21:45 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[cm bhommai]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[siddaramayya]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18495</guid>

					<description><![CDATA[ಬೆಂಗಳೂರು: ಪರಿಶಿಷ್ಟ ಸಮುದಾಯಗಳತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣ್ಣೊರೆಸುವುದಿರಲಿ ಐದು ವರ್ಷಗಳ ಕಾಲ ಅವರ ಕಡೆ ತಿರುಗಿಯೂ ನೋಡಿರಲಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಬುಧವಾರದಂದು ರೇಸ್ ಕೋರ್ಸ್ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ʼ ಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು&#160; ಈ ಕುರಿತ ವರದಿಯನ್ನು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಪರಿಶಿಷ್ಟ ಸಮುದಾಯಗಳತ್ತ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಣ್ಣೊರೆಸುವುದಿರಲಿ ಐದು ವರ್ಷಗಳ ಕಾಲ ಅವರ ಕಡೆ ತಿರುಗಿಯೂ ನೋಡಿರಲಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.</p>



<p>ಅವರು ಬುಧವಾರದಂದು ರೇಸ್ ಕೋರ್ಸ್ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ʼ ಒಳಮೀಸಲಾತಿಗೆ ಸಚಿವ ಸಂಪುಟ ಉಪಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.</p>



<p>ಸಿದ್ದರಾಮಯ್ಯ ಅವರು&nbsp; ಈ ಕುರಿತ ವರದಿಯನ್ನು ತೆಗೆದು ನೋಡುವ ಧೈರ್ಯ ಇರಲಿಲ್ಲ. ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಬರೀ ದೀಪ ಹಚ್ಚಿ ಮಾತನಾಡದೆ ಬಂದರು. ಇಂಥವರಿಂದ&nbsp; ನಾವು ಪಾಠ ಕಲಿಯಬೇಕಿಲ್ಲ. ನಮ್ಮ ಬದ್ಧತೆ ಏನೆಂದು ಎಲ್ಲಾ ಸಮುದಾಯಗಳಿಗೆ ತಿಳಿದಿದೆ. ಕಾನೂನು ಸ್ಥಾನಮಾನವೂ ನಮಗೆ ತಿಳಿದಿದೆ. ಇಂಥ ಪ್ರಮುಖ ವಿಚಾರಗಳಲ್ಲಿ ನಿರ್ಣಯ ಕೈಗೊಳ್ಳುವ ದಿಟ್ಟತನ ಸರ್ಕಾರಕ್ಕಿದೆ ಎಂದು ತೋರಿಸಿದ್ದೇವೆ.&nbsp; ಇನ್ನೊಬ್ಬರ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯ ಹಿಂತಿರುಗಿ ನೋಡಿದರೆ ಉತ್ತಮ ಎಂದು ಬೊಮ್ಮಾಯಿ ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರ ಬಂಧನ: ಸಿದ್ದರಾಮಯ್ಯ ಖಂಡನೆ</title>
		<link>https://peepalmedia.com/arrest-of-internal-reservation-enforcement-struggle-committee-leaders-siddaramaiah-condemned/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 11 Dec 2022 15:14:35 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ARREST]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[siddaramayya]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18251</guid>

					<description><![CDATA[ಬೆಂಗಳೂರು: ಒಳಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಸಿಎಂ ಮನೆಯೆಡೆಗೆ ಪಾದಯಾತ್ರೆ ಹೊರಟಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯ ಹಲವು ಮುಖಂಡರನ್ನು ಬಂಧಿಸಿದ್ದು, ಸರ್ಕಾರದ ಈ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಒಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರನ್ನು ರಾಜ್ಯ ಬಿಜೆಪಿ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಒಳಮೀಸಲಾತಿ ಜಾರಿಗೆ ತರುವಂತೆ ಒತ್ತಾಯಿಸಿ ಸಿಎಂ ಮನೆಯೆಡೆಗೆ ಪಾದಯಾತ್ರೆ ಹೊರಟಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ’ಯ ಹಲವು ಮುಖಂಡರನ್ನು ಬಂಧಿಸಿದ್ದು, ಸರ್ಕಾರದ ಈ ವರ್ತನೆಯನ್ನು  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ.</p>



<p>ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಒಳ ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವವರನ್ನು ರಾಜ್ಯ ಬಿಜೆಪಿ ಸರ್ಕಾರ ಬಂಧಿಸಿರುವುದು ಅತ್ಯಂತ ಖಂಡನೀಯವಾಗಿದೆ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.</p>



<p>ರಾಜ್ಯ ಬಿಜೆಪಿ ಸರ್ಕಾರ ಒಂದೋ ಹೋರಾಟಗಾರರ ನ್ಯಾಯಬದ್ಧ ಬೇಡಿಕೆಯನ್ನು ಈಡೇರಿಸಬೇಕು, ಇಲ್ಲವಾದರೆ ಕನಿಷ್ಠ ಅವರನ್ನು ಮಾತುಕತೆಗಾದರೂ ಆಹ್ವಾನಿಸಬೇಕಾಗಿತ್ತು. ಇದ್ಯಾವುದನ್ನು ಮಾಡದೆ ಹೋರಾಟಗಾರರನ್ನು ಪೊಲೀಸರ ಮೂಲಕ ಹಣಿಯಲು ನಡೆಸಿದ ಪ್ರಯತ್ನ ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಕಿಡಿಕಾರಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ. 4/4<a href="https://twitter.com/hashtag/SocialJustice?src=hash&amp;ref_src=twsrc%5Etfw">#SocialJustice</a></p>&mdash; Siddaramaiah (@siddaramaiah) <a href="https://twitter.com/siddaramaiah/status/1601953048926253057?ref_src=twsrc%5Etfw">December 11, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಒಳಮೀಸಲಾತಿ ಜಾರಿಗೆ ಶಿಫಾರಸು ಮಾಡಿರುವ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರ ಈಗ ಹೋರಾಟಗಾರರನ್ನೇ ಬಂಧಿಸಲು ಹೊರಟಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p>



<p>ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇವೆ ಎಂದು ಟ್ವೀಟ್‌ ಮಾಡುವ ಮುಖಾಂತರ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ʼಹಂಚಿ ತಿನ್ನುವುದು ಅಂಬೇಡ್ಕರ್‌ ವಾದʼ : ಕೇಂದ್ರದ ಜೊತೆ ಹೋರಾಟಗಾರರ ವಾದ</title>
		<link>https://peepalmedia.com/ambedkar-argument-of-sharing-and-eating-struggle-with-the-center/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 11 Dec 2022 13:08:04 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[Ambedkar]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18233</guid>

					<description><![CDATA[ಬೆಂಗಳೂರು: ನೊಂದ ಜನರು ಮೂರು ದಶಕಗಳಿಂದ ಒಳಮೀಸಲಾಗಿ ಹೋರಾಟ ನಡೆಸುತ್ತಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಹಂಚಿ ತಿನ್ನುವುದು ಅಂಬೇಡ್ಕರ್‌ ವಾದ &#8211; ಕಿತ್ತು ತಿನ್ನುವುದು ಮನುವಾದ, ಜೈ ಮಾದಿಗ ಎಂಬ ಘೋಷಣೆಗಳೊಂದಿಗೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭೀಮಸಾಗರ ಹರಿದು ಬಂದಿತ್ತು. ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಬಳಿ ʼಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಟ ಸಮಿತಿʼ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶಕ್ಕೆ ಸಾವಿರಾರು ಜನರ ಸಾಗರ ಹರಿದು ಬಂದಿದ್ದು, ಈ ಚಂಡಮಾರುತದ ಕೊರಿವ ಚಳಿ, [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ನೊಂದ ಜನರು ಮೂರು ದಶಕಗಳಿಂದ ಒಳಮೀಸಲಾಗಿ ಹೋರಾಟ ನಡೆಸುತ್ತಿದ್ದು, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು, ಹಂಚಿ ತಿನ್ನುವುದು ಅಂಬೇಡ್ಕರ್‌ ವಾದ &#8211; ಕಿತ್ತು ತಿನ್ನುವುದು ಮನುವಾದ, ಜೈ ಮಾದಿಗ ಎಂಬ ಘೋಷಣೆಗಳೊಂದಿಗೆ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭೀಮಸಾಗರ ಹರಿದು ಬಂದಿತ್ತು.</p>



<p>ಭಾನುವಾರದಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ಬಳಿ ʼಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಟ ಸಮಿತಿʼ ಹಮ್ಮಿಕೊಂಡಿದ್ದ ಬೃಹತ್‌ ಸಮಾವೇಶಕ್ಕೆ ಸಾವಿರಾರು ಜನರ ಸಾಗರ ಹರಿದು ಬಂದಿದ್ದು, ಈ ಚಂಡಮಾರುತದ ಕೊರಿವ ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಕ್ತವನ್ನು ಚೆಲ್ಲುತ್ತೇವೆ-ಒಳಮೀಸಲಾತಿ ಪಡೆಯುತ್ತೇವೆ ಎಂದು ಘೋಷಣೆಗಳನ್ನು ಕೂಗಿದ್ದಾರೆ.</p>



<p>ಹಿರಿಯ ಹೋರಾಟಗಾರ ಅಂಬಣ್ಣ ಅರೋಲಿಕರ್‌ರವರ ನೇತೃತ್ವದಲ್ಲಿ ಏರ್ಪಡಿಸಿದ್ದ ಪಾದಯಾತ್ರೆಯು ನವೆಂಬರ್‌ 28ರಿಂದ ಶುರುವಾಗಿದ್ದು, ಹರಿಹರದಲ್ಲಿರುವ ದಸಸಂ ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರ ಚೈತ್ಯ ಭೂಮಿಯಿಂದ ಹೊರಟಿದ್ದ ನೂರಕ್ಕೂ ಹೆಚ್ಚು ಪಾದಯಾತ್ರಿಗಳು ಇಂದಿನ ಸಮಾವೇಶಕ್ಕೆಂದು ಸಮಾವೇಶ ಶುರುವಾಗುವುದಕ್ಕೂ ಮುನ್ನ ಕ್ರಾಂತಿವೀರ ಸಂಗೊಳ್ಳಿ ರೈಲು ನಿಲ್ದಾಣದಿಂದ ಹೊರಟ ಮೆರವಣಿಯಲ್ಲಿ ಸೇರಿಕೊಂಡಿದ್ದಾರೆ.</p>



<p>ಈ ಕಾರ್ಯಕ್ರಮದ ಕುರಿತು ಮಾತನಾಡಿದ ಅಂಬಣ್ಣ ಅರೋಲಿಕರ್‌ ಅವರು, ʼನೊಂದ ಜನರು ಮೂರು ದಶಕದಿಂದ ಒಳಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ ಮೂರೂ ಪಕ್ಷಗಳು ಕೇವಲ ಈ ಬಗ್ಗೆ ಆಶ್ವಾಸನೆ &nbsp;ಮಾತ್ರ ನೀಡಿದೆ ಹೊರತೂ ಈವರೆಗೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ನಂತರ ಕೇಂದ್ರ ಸರ್ಕಾರ ಸಂವಿಧಾನ ಅನುಚ್ಛೇದ 341(3)ಗೆ ತಿದ್ದುಪಡಿ ಮಾಡಬೇಕು. ಈ ಬಗ್ಗೆ ನಿಮ್ಮ ಸುಳ್ಳು ಭರವಸೆಗಳು ಸಾಕು , ಚುನಾವಣೆ ಹತ್ತಿರ ಬರುತ್ತಿದೆ . ಈಗ ನಾವು ಚುನಾವಣೆಯಲ್ಲಿ ನಾವು ಯಾರಿಗೆ ಮತ ಹಾಕಬೇಕೆಂದು ನಿರ್ಧಾರ ಮಾಡುವ ಸಮಯ. ಭರವಸೆಗಳು ಕಾರ್ಯರೂಪಕ್ಕೆ ಬರದಿದ್ದರೆ ಚುನಾವಣೆಯಲ್ಲಿ ನೋಟಾ ಒತ್ತಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.</p>



<p>ಕೊನೆಗೆ ಮುಖ್ಯಮಂತ್ರಿ ಬೊಮ್ಮಾಯಿಯವರು ನಮ್ಮ ಹಕ್ಕೊತ್ತಾಯಗಳನ್ನು ಕೇಳುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಈ ತಿಂಗಳಿಡೀ ಹೋರಾಟ ನಡೆಸುತ್ತೇವೆ ಎಂದು ಕಿಡಿಕಾರಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಪಾದಯಾತ್ರೆ : ಡಿ.11 ಕ್ಕೆ ಬೃಹತ್‌ ಸಮಾವೇಶ</title>
		<link>https://peepalmedia.com/internal-reservation-march-for-social-justice-mass-convention-on-december-11/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Dec 2022 06:16:50 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[freedom park]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[protest]]></category>
		<category><![CDATA[reservation]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18017</guid>

					<description><![CDATA[ಬೆಂಗಳೂರು : ಮಾದಿಗರು ಬಿಜೆಜೆ ಪಕ್ಷದ ವೋಟ್‌ ಬ್ಯಾಂಕ್‌ಗಳಲ್ಲ. ಒಳ ಮೀಸಲಾತಿ ಬಿಕ್ಷೆಯಲ್ಲ ಇದನ್ನು ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರದಿಂದ ಅನುಮೋದನರ ಪಡೆಯಬೇಕು ಎಂದು ಪರಿಶಿಷ್ಟ ಜಾತಿಯ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಅಂಬಣ್ಣ ಅರೋಲಿಕರ್‌ ಹೇಳಿದ್ದಾರೆ. ಮಾದಿಗ ಸಮುದಾಯದ ಸಂವಿಧಾನಬದ್ಧ ಸಾಮಾಜಿಕ ನ್ಯಾಯಕ್ಕಾಗಿ ನವೆಂಬರ್‌ 28ರಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಆಗ್ರಿಹಿಸಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯು ದಸಂಸ ಸಂಸ್ಥಾಪಕರಾದ ಪ್ರೊಫೆಸರ್‌ ಬಿ.ಕೃಷ್ಣಪ್ಪರವರ ಚೈತನ್ಯ ಭೂಮಿಯಿಂದ ಪ್ರಾರಂಭವಾಗಿ ತುಮಕೂರಿನ ಟೌನ್‌ ಹಾಲ್‌ ಬಾಲಗಂಗಾಧರನಾಥ [&#8230;]]]></description>
										<content:encoded><![CDATA[
<p><strong>ಬೆಂಗಳೂರು :</strong> ಮಾದಿಗರು ಬಿಜೆಜೆ ಪಕ್ಷದ ವೋಟ್‌ ಬ್ಯಾಂಕ್‌ಗಳಲ್ಲ. ಒಳ ಮೀಸಲಾತಿ ಬಿಕ್ಷೆಯಲ್ಲ ಇದನ್ನು ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರದಿಂದ ಅನುಮೋದನರ ಪಡೆಯಬೇಕು ಎಂದು ಪರಿಶಿಷ್ಟ ಜಾತಿಯ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡರಾದ ಅಂಬಣ್ಣ ಅರೋಲಿಕರ್‌ ಹೇಳಿದ್ದಾರೆ.</p>



<p>ಮಾದಿಗ ಸಮುದಾಯದ ಸಂವಿಧಾನಬದ್ಧ ಸಾಮಾಜಿಕ ನ್ಯಾಯಕ್ಕಾಗಿ ನವೆಂಬರ್‌ 28ರಿಂದ ಪರಿಶಿಷ್ಟ ಜಾತಿಯ ಒಳಮೀಸಲಾತಿಗಾಗಿ ಆಗ್ರಿಹಿಸಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಪಾದಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಯಾತ್ರೆಯು ದಸಂಸ ಸಂಸ್ಥಾಪಕರಾದ ಪ್ರೊಫೆಸರ್‌ ಬಿ.ಕೃಷ್ಣಪ್ಪರವರ ಚೈತನ್ಯ ಭೂಮಿಯಿಂದ ಪ್ರಾರಂಭವಾಗಿ ತುಮಕೂರಿನ ಟೌನ್‌ ಹಾಲ್‌ ಬಾಲಗಂಗಾಧರನಾಥ ಸ್ವಾಮಿ ಸರ್ಕಲ್‌ ನಲ್ಲಿ ಗುರುವಾರದಂದು ಸ್ವಾಗತಿಸಲಾಗಿದೆ.</p>



<p>ಈ ಯಾತ್ರೆಯ ಉದ್ಧೇಶಿಸಿ ಮಾತನಾಡಿದ ಅಂಬಣ್ಣ ಅರೋಲಿಕರ್‌, ʼತುಮಕೂರಿನ ನಗರದಲ್ಲಿ ದಲಿತ ಸಂಘಟನೆಗಳು, ಮಾದಿಗ ಸಂಘಟನೆಗಳ ಮುಖಂಡರು ಮತ್ತು ಸ್ಲಂ ಜನಾಂದೋಲನ ಕಾರ್ಯಕರ್ತರು ಪಾದಾಯಾತ್ರೆಯನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ ಎಂದು ಹೇಳಿದ್ದಾರೆ.</p>



<p>ಹರಿಹರದಿಂದ ಕಳೆದ 11 ದಿನಗಳಿಂದ ಯಾತ್ರೆಯಲ್ಲಿ 280 ಕಿ.ಲೋ ಮೀಟರ್ ನಡೆದಿದ್ದು, 2 ಕೋಟಿ 64 ಲಕ್ಷದ 28 ಸಾವಿರ ಹೆಜ್ಜೆಗಳನ್ನು ಹಾಕಲಾಗಿದೆ. ರಾಜ್ಯದ ಮಾದಿಗ ಮತ್ತು ಹೊಲಯ ಸಂಬಂಧಿ ಜಾತಿಯ ಜನರು, ಡಿಸೆಂಬರ್‌ 11ರಂದು ಫ್ರೀಡಂ ಪಾರ್ಕ್‌ನಲ್ಲಿ ಸೇರಿ ಈ ಬಗ್ಗೆ ಚರ್ಚಿಸಿ, ಎ.ಜೆ ಸದಾಶಿವ ಆಯೋಗದ ವರದಿಯನ್ನು ಡಿಸೆಂಬರ್‌ 19ರಂದು ಬೆಳಗಾಂನಲ್ಲಿ ಪ್ರಾರಂಭವಾಗುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದು ಅದನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು.</p>



<p>ಈ ಕುರಿತು ವಿಧಾನಸಭೆಯಲ್ಲಿ ಮಂಡಿಸಿ 2023ರ ಚುನಾವಣೆಗೆ ಬಂಡವಾಳ ಮಾಡಿಕೊಂಡಲ್ಲಿ, ಮಾದಿಗರು ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಬುದ್ದಿ ಕಲಿಸಿದಂತೆ ಈ ಬಾರಿ ಬಿಜೆಪಿ ಸರ್ಕಾರವನ್ನು ಮನೆಗೆ ಕಳುಹಿಸಬೇಕಾಗುತ್ತದೆ. ರಾಜ್ಯದ ಮಾದಿಗರು ಬಿಜೆಪಿಯ ವೋಟ್‌ ಬ್ಯಾಂಕ್‌ಗಳಲ್ಲ ಎಂಬುದನ್ನು ನೆನಪಿರಲಿ. ನಮ್ಮ ಈ ಎಚ್ಚರಿಕೆಯನ್ನು ಮುಖ್ಯಮಂತ್ರಿ ಬೊಮ್ಮಾಯಿಯವರು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ ಎಚ್ಚರಿಕೆ ನೀಡಿದ್ದಾರೆ.</p>



<p>2011ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ಡಿಸೆಂಬರ್ 11 ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಮಾದಿಗ ದಂಡೋರದ ಸಾವಿರಾರು ಕಾರ್ಯಕರ್ತರ ಮೇಲೆ ಲಾಟಿ ಚಾರ್ಜ್ ಮಾಡಿಸಿದರು. ನಂತರ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ 8 ಮಾದಿಗ ಕಾರ್ಯಕರ್ತರು ಪ್ರಾಣ ತ್ಯಾಗ ಮಾಡಿದರು ಒಳಮೀಸಲಾತಿ ಜಾರಿಗೊಂಡಿರುವುದಿಲ್ಲ. ಸಂವಿಧಾನಬದ್ದ ಒಳಮೀಸಲಾತಿ ಬಿಕ್ಷೆಯಲ್ಲ ಸಮಾನತೆಯನ್ನು ಸಾಧಿಸುವುದಕ್ಕೆ ಒಳಮೀಸಲಾತಿ ಜಾರಿಯಾಗುವುದು ಅನಿವಾರ್ಯವಾಗಿದೆ ಆದ್ದರಿಂದ ಡಿಸೆಂಬರ್ 11 ರಂದು&nbsp; ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.</p>



<p>ಭಾರತದ ಸುಧೀರ್ಘ ಹೋರಾಟದ ಇತಿಹಾಸ ಒಳಮೀಸಲಾತಿ ಹೋರಾಟ -ಕೆ.ದೊರೈರಾಜ್</p>



<p>ಇತ್ತೀಚೆಗೆ ದೇಶದಲ್ಲಿ ನಡೆದ ರೈತರ ಹೋರಾಟ ಒಂದು ವರ್ಷಗಳ ಇತಿಹಾಸ ಹೊಂದಿದ್ದರೆ ಒಳಮೀಸಲಾತಿಯ ಹೋರಾಟ ಭಾರತದ ಇತಿಹಾಸದಲ್ಲಿ 3 ದಶಕಗಳನ್ನು ಒಳಗೊಂಡಿದೆ. ಹಾಗಾಗಿ ಭಾರತದ ಸುದೀರ್ಘ ಹೋರಾಟದ ಇತಿಹಾಸವನ್ನು ಒಳಮೀಸಲಾತಿ ಹೋರಾಟ ಹೊಂದಿದೆ ಎಂದು ದಸಂಸದ ಹಿರಿಯರಾದ ಪ್ರೋ.ಕೆ ದೊರೈರಾಜ್ ಹೇಳಿದ್ದಾರೆ.</p>



<p>ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ಅಂಬೇಡ್ಕರ್ ದೃಷ್ಠಿಯಲ್ಲಿ ನೋಡಬೇಕು, ಒಳಮೀಸಲಾತಿ ಹೋರಾಟ ಬರೀ ಮಾದಿಗ ಸಮುದಾಯದ ಹೋರಾಟವಲ್ಲ. ಎಲ್ಲಾ ಅಸ್ಪೃಶ್ಯ ಜಾತಿಗಳ ಹೋರಾಟವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೆ ಒಳಮೀಸಲಾತಿ ಎನ್ನುವುದು ಚುನಾವಣೆಯ ಸರಕಾಗಿದೆ ಆದ್ದರಿಂದ ಹೋರಾಟಗಾರರು ಎಚ್ಚರವಹಿಸಿ ಹೆಜ್ಜೆ ಇಡಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ನ ಸಂವಿಧಾನಿಕ ಪೀಠದಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಪಿಯುಸಿಎಲ್ ಸಹಕಾರದಿಂದ ಕಾನೂನು ಹೋರಾಟ ಮಾಡಲಾಗುತ್ತಿದೆ ಎಂದರು.</p>



<p>ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ 4% ಇರುವ ಸಮುದಾಯಕ್ಕೆ 10ರಷ್ಟು ಮೀಸಲಾತಿಯನ್ನು ಮೂರೇ ದಿನದಲ್ಲಿ ಜಾರಿಮಾಡಿದ್ದು, 30 ವರ್ಷ ಕಳೆದರು ಒಳಮೀಸಲಾತಿ ಜಾರಿಗೊಳಿಸುತ್ತಿಲ್ಲವೇಕೆ ಇಂತಹ ವಚನ ಭ್ರಷ್ಟ ಸರ್ಕಾರಗಳ&nbsp; ಬಗ್ಗೆ ಎಚ್ಚರವಹಿಸಬೇಕು ಎಂದರು.</p>



<p>ಮುಖಂಡರಾದ ಕೊಟ್ಟಶಂಕರ್ ಪಾದಯಾತ್ರಿಗಳಾದ ಕರಿಯಪ್ಪಗುಡಿಮನಿ, ಎಂ,ಆರ್ ಬೇರಿ, ಮಧುಗಿರಿ ರಂಗಯ್ಯ ಮತ್ತು ಭೀಮಾ ಸೈನಿಕರಿಗೆ ಸ್ವಾಗತಿಸಿದರು. ಮಾದಿಗ ಸಮುದಾಯದ ಮುಖಂಡರಾದ ವಾಲೇಚಂದ್ರಯ್ಯ, ಪಾವಗಡ ಶ್ರೀರಾಮ್, ನರಸಿಂಹಯ್ಯ, ಜಿ.ವಿ ವೆಂಕಟೇಶ್, ಲಕ್ಷ್ಮೀದೇವಮ್ಮ, ಮರಳೂರು ಕೃಷ್ಣ, ಆಟೋ ಶಿವರಾಜು, ಡಾ.ಮುರುಳೀಧರ್, ಕೇಬಲ್‌ ರಘು, ಕೊಡಿಯಲಾ ಮಹಾದೇವ, ಎಂ.ವಿ ರಾಘವೇಂದ್ರ, ಪಿ.ಎನ್ ರಾಮಯ್ಯ, ಜೆಸಿಬಿ ವೆಂಕಟೇಶ್, ರಂಗಧಾಮಯ್ಯ, ಬಂಡೇಕುಮಾರ್, ಟಿ,ಸಿ ರಾಮಯ್ಯ, ಎ.ನಾಗೇಶ್, ಗಾಂಧಿರಾಜ್ ಮತ್ತು ಕೊಳಗೇರಿ ಸಮಿತಿಯ ಅರುಣ್, ಶಂಕರಯ್ಯ, ತಿರುಮಲಯ್ಯ, ಕೆಂಪರಾಜು, ನಿರ್ಮಲ,ಹನುಮಕ್ಕ, ಧನಂಜಯ್, ರಂಗನಾಥ್ ನೇತೃತ್ವ ವಹಿಸಿದ್ದರು. ನೂರಾರು ಕಾರ್ಯಕರ್ತರು ಟೌನ್‌ಹಾಲ್‌ನಿಂದ ನಂದಿಹಳ್ಳಿ ಗೇಟ್‌ವರೆಗೂ ಪಾದಯಾತ್ರೆಯಲ್ಲಿ &nbsp;ತೆರಳಿ ಬೀಳ್ಕೊಟ್ಟರು.</p>
]]></content:encoded>
					
		
		
			</item>
		<item>
		<title>ಮೀಸಲಾತಿಗೆ ಒತ್ತಾಯ: ಸರ್ಕಾರದ ಕುತ್ತಿಗೆ ಹಿಸುಕುತ್ತಿರುವ ಎರಡು ಸಮುದಾಯಗಳು</title>
		<link>https://peepalmedia.com/demand-for-reservation-two-communities-strangling-the-government/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 28 Nov 2022 14:19:05 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[panchamasaali]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[state politics]]></category>
		<category><![CDATA[vokkaliga]]></category>
		<category><![CDATA[writing]]></category>
		<guid isPermaLink="false">https://peepalmedia.com/?p=16840</guid>

					<description><![CDATA[ಬೆಂಗಳೂರು: ಕರ್ನಾಟಕ ಎರಡು ಸಮೂದಾಯಗಳು ಮೀಸಲಾತಿ ಬೇಡಿಕೆಯೊಂದಿಗೆ ರಾಜ್ಯ ಸರ್ಕಾರದ ಕುತ್ತಿಗೆ ಮೇಲೆ ಕೂತಿದ್ದು, ಪಂಚಮಸಾಲಿಗಳು ತಮ್ಮ ಕೋಟಾವನ್ನು 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಹಿಸುತ್ತಿದ್ದರೆ, ಮತ್ತೊಂದೆಡೆ ಒಕ್ಕಲಿಗರಯ ತಮ್ಮ ಕೋಟಾವನ್ನು ಶೇ.4ರಿಂದ 12ಕ್ಕೆ ಹೆಚ್ಚಿಸಬೇಕೆಂದು ಕೇಳುವುದಲ್ಲದೆ, ತಮ್ಮ ಸಮುದಾಯಗಳನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟದಲ್ಲೂ ಪಾಲು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಕ್ಟೋಬರ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ, ಪಂಚಮಸಾಲಿ ಮತ್ತು ಒಕ್ಕಲಿಗ ಈ ಎರಡೂ ಸಮುದಾಯಗಳೂ ಸರ್ಕಾರಕ್ಕೆ ಬೆನ್ನುಬಿದ್ದಿವೆ. ರಾಜ್ಯ &#160;ಒಕ್ಕಲಿಗರ ಸಂಘವು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಕರ್ನಾಟಕ ಎರಡು ಸಮೂದಾಯಗಳು ಮೀಸಲಾತಿ ಬೇಡಿಕೆಯೊಂದಿಗೆ ರಾಜ್ಯ ಸರ್ಕಾರದ ಕುತ್ತಿಗೆ ಮೇಲೆ ಕೂತಿದ್ದು, ಪಂಚಮಸಾಲಿಗಳು ತಮ್ಮ ಕೋಟಾವನ್ನು 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಹಿಸುತ್ತಿದ್ದರೆ, ಮತ್ತೊಂದೆಡೆ ಒಕ್ಕಲಿಗರಯ ತಮ್ಮ ಕೋಟಾವನ್ನು ಶೇ.4ರಿಂದ 12ಕ್ಕೆ ಹೆಚ್ಚಿಸಬೇಕೆಂದು ಕೇಳುವುದಲ್ಲದೆ, ತಮ್ಮ ಸಮುದಾಯಗಳನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ ಕೋಟದಲ್ಲೂ ಪಾಲು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>



<p>ಅಕ್ಟೋಬರ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ, ಪಂಚಮಸಾಲಿ ಮತ್ತು ಒಕ್ಕಲಿಗ ಈ ಎರಡೂ ಸಮುದಾಯಗಳೂ ಸರ್ಕಾರಕ್ಕೆ ಬೆನ್ನುಬಿದ್ದಿವೆ. ರಾಜ್ಯ &nbsp;ಒಕ್ಕಲಿಗರ ಸಂಘವು ಅವರ ಮೀಸಲಾತಿಯನ್ನು ಹೆಚ್ಚಿಸಲು ಜನವರಿ 23ರ ವರೆಗೆ ಅಂತಿಮ ಗಡುವು ನೀಡಿದ್ದು, ಸಮುದಾಯದ ಮೀಸಲಾತಿಯನ್ನು ಹೆಚ್ಚಳ ಮಾಡುವವರೆಗೆ, ಇಡಬ್ಲ್ಯೂಎಸ್‌ ಕೋಟಾವನ್ನು ಜಾರಿಗೊಳಿಸದಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.</p>



<p>ಸಂವಿಧಾನದ ಅನುಸೂಚಿ 9ರ ತಿದ್ದುಪಡಿಗಳು ಇನ್ನೂ ಬಾಕಿಯಿದ್ದು, ರಾಜ್ಯದಲ್ಲಿ ಮೀಸಲಾತಿ ಪ್ರಮಾಣ ಶೇ.56ರಷ್ಟಿದ್ದು, ಅದರಲ್ಲಿ ಇತರ ಹಿಂದುಳಿದ ವರ್ಗಗಳು(ಒಬಿಸಿ) ಶೇ.32 ರಷ್ಟು ಅದರ ಪಾಲನ್ನು ಹೊಂದಿದ್ದು, ಈ&nbsp; ಕುರಿತು ಸರ್ಕಾರವು ಎರಡೂ ಸಮುದಾಯಗಳಿಗೆ ಅವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.</p>



<p>ಒಕ್ಕಲಿಗ ಸಮುದಾಯದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಿಂಗಾಯುತ ಮಠಾಧೀಶರಾದ ನಂಜಾವಧೂತ ಸ್ವಾಮೀಜಿ ಮಾತನಾಡಿದ್ದು, ʼನಾವು ರಾಜ್ಯದ ಜನಸಂಖ್ಯೆಯಲ್ಲಿ 16-19 ಪ್ರತಿಶತದಷ್ಟಿದ್ದೇವೆ. ಆದ್ದರಿಂದ ನಮಗೆ ಶೇಕಡಾ 12-15 ರಷ್ಟು ಮೀಸಲಾತಿ ಬೇಕಾಗಿದೆʼ ಎಂದು ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದಲ್ಲದೇ ಬಡತನ ರೇಖೆಯ ಅಡಿಯಲ್ಲಿ ಬರುವ ನಗರ ಪ್ರದೇಶಗಳಲ್ಲಿನ ಸಮುದಾಯ ಸದಸ್ಯರನ್ನು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.</p>



<p>2ಎ ಮೀಸಲಾತಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿರುವ ಪಂಚಮಸಾಲಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೆಳಗಾವಿಯಲ್ಲಿ ನಿಗದಿಯಾಗಿರುವ ವಿಧಾನಮಂಡಲ ಅಧಿವೇಶನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ.</p>



<p>ಒಕ್ಕಲಿಗರ ಬೇಡಿಕೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ʼಮೀಸಲಾತಿಯಲ್ಲಿ ಯಾವುದೇ ಹೆಚ್ಚಳವನ್ನು ಸಂವಿಧಾನದ ಪರಿಮಿತಿಯೊಳಗೆ ಮಾಡಬೇಕು. ಈ ಬಗ್ಗೆ ವಿವಿಧ ಸಮುದಾಯಗಳ ಆಕಾಂಕ್ಷೆಗಳು ಸಹ ಹೆಚ್ಚಿವೆ. ನಾವು ಏನೇ ತೀರ್ಮಾನ ಮಾಡಿದರೂ ಅದನ್ನು ಕಾನೂನು ಮತ್ತು ಸಂವಿಧಾನದ ಪರಿಮಿತಿಯೊಳಗೆ ಮಾಡಬೇಕುʼ ಎಂದು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿ : ಸುಪ್ರೀಂ ಕೋರ್ಟ್‌</title>
		<link>https://peepalmedia.com/arthikavaagi-hindulida-vargagalige-10-meesalaathi-sc/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 07 Nov 2022 06:55:57 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[ews]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[state politics]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=14545</guid>

					<description><![CDATA[ಹೊಸದಿಲ್ಲಿ : ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಮೀಸಲಾತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಸುಪ್ರೀಂಕೋರ್ಟ್‌ ಇಂದು ತೀರ್ಪು ಹೊರಹಾಕಿದ್ದು, ನ್ಯಾಯಾಲಯದ ನಾಲ್ವರು ನ್ಯಾಯಾಮೂರ್ತಿಗಳು ಸೇರಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಎತ್ತಿ ಹಿಡಿದಿದ್ದಾರೆ. EWS ಮೀಸಲಾತಿಯು ಮೂಲಭೂತ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್‌ ಇಂದು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಹಿಡಿದಿದೆ. EWS ತಿದ್ದುಪಡಿ ಕುರಿತು ನಾಲ್ವರು ನ್ಯಾಯಮೂರ್ತಿಗಳಿಂದ ಪರವಾಗಿ ತೀರ್ಪು [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ </strong>: ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಮೀಸಲಾತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳಿಗೆ ಸುಪ್ರೀಂಕೋರ್ಟ್‌ ಇಂದು ತೀರ್ಪು ಹೊರಹಾಕಿದ್ದು, ನ್ಯಾಯಾಲಯದ ನಾಲ್ವರು ನ್ಯಾಯಾಮೂರ್ತಿಗಳು ಸೇರಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಎತ್ತಿ ಹಿಡಿದಿದ್ದಾರೆ.</p>



<p>EWS ಮೀಸಲಾತಿಯು ಮೂಲಭೂತ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್‌ ಇಂದು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ 10% ಮೀಸಲಾತಿಯನ್ನು ಹಿಡಿದಿದೆ. EWS ತಿದ್ದುಪಡಿ ಕುರಿತು ನಾಲ್ವರು ನ್ಯಾಯಮೂರ್ತಿಗಳಿಂದ ಪರವಾಗಿ ತೀರ್ಪು ನೀಡಿದ್ದು ಒಬ್ಬರು ವಿರುದ್ದವಾದ ತೀರ್ಪು ನೀಡಿದ್ದರು.</p>



<p>103 ನೇ ಸಾಂವಿಧಾನಿಕ ತಿದ್ದುಪಡಿಯು EWS ನ ಪ್ರತ್ಯೇಕ ವರ್ಗವನ್ನು ಸೃಷ್ಟಿಸುತ್ತದೆ. ಎಸ್‌ಇಬಿಸಿಗಳನ್ನು ಹೊರಗಿಡುವುದು ತಾರತಮ್ಯ ಅಥವಾ ಸಂವಿಧಾನ ಉಲ್ಲಂಘನೆ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾ.ತ್ರಿವೇದಿ ತೀರ್ಪಿನ ಸಮನದಲ್ಲಿ ಹೇಳಿದರು.</p>



<p>ನ್ಯಾ. ಪರ್ದಿವಾಲಾ, ʼಮೀಸಲಾತಿಯನ್ನು ಪಟ್ಟಭದ್ರ ಹಿತಾಸಕ್ತಿಯಾಗಲು ಬಿಡಬಾರದು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಕೊನೆಗೊಳಿಸಬೇಕಿದೆ. ಆಂದೋಲನ 7 ದಶಕಗಳ ಹಿಂದೆ ಪ್ರಾರಂಭವಾಗಿದ್ದು ಅಂತರವನ್ನು ಕಡಿಮೆ ಮಾಡಲು ದೀರ್ಘಕಾಲೀನ ಅಭಿವೃದ್ಧಿ ಮತ್ತು ಶಿಕ್ಷಣ ಸಹಾಯ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.</p>



<p>ಆದರೆ ಸುಪ್ರೀಂ ಕೋರ್ಟ್‌ ಇಂದು ನಾಲ್ವರ ಬಹುಮತದ ತೀರ್ಪಿನೊಂದಿಗೆ ಮೇಲ್ಜಾತಿಗೆ ಸೇರಿದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಶೇ.10% ಮೀಸಲಾತಿಯನ್ನು ನೀಡಬೇಕೆಂದು ಆದೇಶ ನೀಡಿದೆ.</p>
]]></content:encoded>
					
		
		
			</item>
		<item>
		<title>ನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ</title>
		<link>https://peepalmedia.com/nannannu-target-maadikondu-sullu-bhashana-madalu-bjp-yavarige-naachikeyagabeku-siddaramayya/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Nov 2022 10:55:05 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[siddaramayya]]></category>
		<category><![CDATA[speech]]></category>
		<category><![CDATA[state politics]]></category>
		<category><![CDATA[target]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13602</guid>

					<description><![CDATA[ಬೆಂಗಳೂರು: ಬಿಜೆಪಿಗರು ತಾವು ಮಾಡುವ ಪ್ರತೀ ಭಾಷಣದಲ್ಲೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡದೆ ಭಾಷಣ ಮುಗಿಯುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು, ʼನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ʼಕಲಬುರಗಿಯಲ್ಲಿ ಬಿಜೆಪಿ ಪಕ್ಷ ಹಿಂದುಳಿದ ಜಾತಿಗಳ ಸಮಾವೇಶವನ್ನು ಏರ್ಪಾಡು ಮಾಡಿ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಸೇರಿದ್ದು [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು:</strong> ಬಿಜೆಪಿಗರು ತಾವು ಮಾಡುವ ಪ್ರತೀ ಭಾಷಣದಲ್ಲೂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡದೆ ಭಾಷಣ ಮುಗಿಯುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದು, ʼನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕುʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p style="font-size:20px">ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,  ʼಕಲಬುರಗಿಯಲ್ಲಿ ಬಿಜೆಪಿ ಪಕ್ಷ ಹಿಂದುಳಿದ ಜಾತಿಗಳ ಸಮಾವೇಶವನ್ನು ಏರ್ಪಾಡು ಮಾಡಿ ಸುಮಾರು 5 ಲಕ್ಷ ಜನ ಸೇರಿಸುತ್ತೇವೆ ಎಂದು ಬೊಬ್ಬೆ ಹಾಕಿದ್ದರು. ಆದರೆ ಸೇರಿದ್ದು 40 ರಿಂದ 50 ಸಾವಿರ ಜನ ಮಾತ್ರ. ಈ ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಯಡಿಯೂರಪ್ಪ ಅವರು ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಭಾಗವಹಿಸಿದ್ದರು. ಅಲ್ಲಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಸಭೆಯಲ್ಲಿ ಮಾತನಾಡಿದ ಪ್ರತಿಯೊಬ್ಬರು ನನ್ನನ್ನು ಮತ್ತು ಮಲ್ಲಿಕಾರ್ಜುನ ಖರ್ಗೆಯವರನ್ನು ಗುರಿಯಾಗಿರಿಸಿಕೊಂಡು ಸುಳ್ಳುಗಳನ್ನು ಹೇಳಿ, ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆʼ ಎಂದು ಹೇಳಿದ್ದಾರೆ.</p>



<p style="font-size:20px">ʼಸಿದ್ದರಾಮಯ್ಯ ಅವರ ಸರ್ಕಾರ ಕುರುಬರನ್ನು ಸಚಿವರೇ ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ಹೆಚ್.ಎಂ ರೇವಣ್ಣ, ಹೆಚ್‌.ವೈ ಮೇಟಿ ಮಂತ್ರಿಯಾಗಿದ್ದದ್ದು ಯಾರ ಸರ್ಕಾರದಲ್ಲಿ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಂಟಿಬಿ ನಾಗರಾಜ ಮಂತ್ರಿಯಾಗಿರಲಿಲ್ವಾ? ಈ ತರ ಯಾಕೆ ಸುಳ್ಳು ಹೇಳಬೇಕಪ್ಪ? ಮರಾಠ ಜಾತಿಯ ಸಂತೋಷ್‌ ಲಾಡ್‌, ನೇಕಾರ ಜನಾಂಗದ ಉಮಾಶ್ರೀ, ಪ್ರಮೋದ್‌ ಮಧ್ವರಾಜ್‌, ವಿನಯ್‌ ಕುಮಾರ್‌ ಸೊರಕೆ, ಕಾಗೋಡು ತಿಮ್ಮಪ್ಪ, ಬಾಬುರಾವ್‌ ಚಿಂಚನಸೂರ್‌, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದ ಜಾತಿಗಳಿಗೆ ಸೇರಿದವರಲ್ವಾ? ಮುಖ್ಯಮಂತ್ರಿಯಾಗಿದ್ದ ನಾನು ಕುರುಬ ಜಾತಿಯವನಲ್ವಾ? ಆದರೂ ಬಿಜೆಪಿಯವರು ಕುರುಬರಿಗೆ ಕಾಂಗ್ರೆಸ್‌ ಪಕ್ಷ ಏನು ಮಾಡಿಲ್ಲ ಎನ್ನುತ್ತಾರೆ. ಕರ್ನಾಟಕದಲ್ಲಿ ಹಿಂದುಳಿದ ಜಾತಿಯವರು ಮುಖ್ಯಮಂತ್ರಿಯಾಗಿದ್ದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ. ಕುರುಬರ ಬಗ್ಗೆ ತುಂಬಾ ಪ್ರೀತಿ ಇದ್ದರೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ನೋಡೋಣ ಅಥವಾ ಇನ್ಯಾವುದಾರೂ ಹಿಂದುಳಿದ ಜಾತಿಗೆ ಸೇರಿದವರನ್ನು ಮುಖ್ಯಮಂತ್ರಿ ಮಾಡಿ ನೋಡೋಣʼ ಎಂದು ಬಸವರಾಜ ಬೊಮ್ಮಾಯಿಯವರಿಗೆ ಸವಾಲು ಹಾಕಿದ್ದಾರೆ.  </p>



<p style="font-size:20px">ʼಮಂಡಲ್‌ ಕಮಿಷನ್‌ ವರದಿ ಜಾರಿ ಮಾಡಿದಾಗ ವಿರೋಧ ಮಾಡಿದವರು ಯಾರು? ಬಿಜೆಪಿ ನಾಯಕ ಅಡ್ವಾಣಿ ಅವರು ರಥಯಾತ್ರೆ ಆರಂಭ ಮಾಡಿ, ಉತ್ತರ ಭಾರತದಲ್ಲಿ ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದರು. ಉನ್ನತ ಶಿಕ್ಷಣದಲ್ಲಿ ಮೊದಲು ಮೀಸಲಾತಿ ಇರಲಿಲ್ಲ. ಅರ್ಜುನ್‌ ಸಿಂಗ್‌ ಅವರು ಮಾನವಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗ ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದರು. ಅದನ್ನು ರಾಜ್ಯದಲ್ಲಿ ಇದೇ ಅನಂತಕುಮಾರ್‌, ಯಡಿಯೂರಪ್ಪ, ಈಶ್ವರಪ್ಪ ಅವರು ವಿರೋಧ ಮಾಡಿದ್ದರುʼ ಎಂದು ಸಿದ್ದರಾಮಯ್ಯ ಹೇಳಿದರು.</p>



<p style="font-size:20px">ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ, ಮಹಿಳೆಯರಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದವರು ರಾಜೀವ್‌ ಗಾಂಧಿ ಅವರು. ಇದನ್ನು ಜಾರಿ ಮಾಡಿದ್ದು ಪಿ.ವಿ ನರಸಿಂಹರಾವ್‌ ಅವರ ಸರ್ಕಾರ. ಕರ್ನಾಟಕದಲ್ಲಿ 1994-95ರಲ್ಲಿ ಇದು ಜಾರಿಗೆ ಬಂತು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳಿಗೆ 33% ಹಾಗೂ ಮಹಿಳೆಯರಿಗೆ 50% ಮೀಸಲಾತಿ ಸಿಕ್ಕಿತು. ಇದನ್ನು ಬಿಜೆಪಿಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ವಿರೋಧ ಮಾಡಿದ್ದರು. ಆಗ ಅವರು ಬಿಜೆಪಿಯ ಉಪಾಧ್ಯಕ್ಷ ಕೂಡ ಆಗಿದ್ದರು. ಹಿಂದುಳಿದ ಜಾತಿ, ಮಹಿಳೆಯರಿಗೆ, ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದನ್ನು ಅವರು ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನಿಸಿದರು. ಆಗ ಈಶ್ವರಪ್ಪ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅನಂತಕುಮಾರ್‌, ನಳಿನ್‌ ಕುಮಾರ್‌ ಕಟೀಲ್‌ ಅವರಾಗಲೀ ರಾಮಾ ಜೋಯಿಸ್‌ ಅವರನ್ನು ತಡೆದ್ರಾ? ಪಕ್ಷದ ಗಮನಕ್ಕೆ ತರದೆ ಈ ರೀತಿ ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನೆ ಮಾಡಲು ಸಾಧ್ಯವೇ? ಇದು ಪಕ್ಷದ ನಿರ್ಧಾರವೇ ಆಗಿತ್ತು. ಎಂದು ಮೀಸಲಾತಿ ಬಗ್ಗೆ ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>



<p style="font-size:20px">ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರಿಯಾಂಕ್‌ ಖರ್ಗೆ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಸಮಿತಿ ರಚನೆ ಮಾಡಲಾಗಿತ್ತು . ಈ ಸಮಿತಿ ವರದಿ ನೀಡಿದ್ದು 02-02-2020ರಲ್ಲಿ. ವರದಿ ಬಂದ ತಕ್ಷಣ 24 ಗಂಟೆಗಳಲ್ಲಿಈ ವರದಿ ಜಾರಿ ಮಾಡ್ತೀವಿ ಶ್ರೀರಾಮುಲು ಹೇಳಿದ್ದರು. ಆದರೆ ಎರಡು ವರ್ಷ ಮೂರು ತಿಂಗಳು ಸರ್ಕಾರ ಮತ್ತು ಶ್ರೀರಾಮುಲು ಸುಮ್ಮನಿದ್ದುದ್ದು ಯಾಕೆ? ಎಂದು ಪ್ರಶ್ನಿಸಿದರು.</p>



<p style="font-size:20px">ಮುಂದುವರೆದು ಮಾತನಾಡಿದ ಅವರು, ʼವಾಲ್ಮೀಕಿ ಸಮಾಜದ ಸ್ವಾಮೀಜಿ 257 ದಿನಗಳ ಕಾಲ ಧರಣಿ ಮಾಡಿದ್ರು, ಅವರು ಧರಣಿ ಆರಂಭ ಮಾಡಿದ ದಿನವೇ ವರದಿ ಜಾರಿ ಮಾಡಿದ್ರೆ ಸಮಸ್ಯೆ ಏನಾಗುತ್ತಿತ್ತು? ಅಂದು ಕೂಡ ನಾಗಮೋಹನ್‌ ದಾಸ್‌ ಅವರ ಸಮಿತಿ ವರದಿ ಇದೇ ಆಗಿತ್ತು ಅಲ್ವಾ? ನಿಜವಾಗಿ ಈ ಸರ್ಕಾರಕ್ಕೆ ಬದ್ಧತೆ ಇದ್ದಿದ್ದರೆ ಅಂದೇ ಮಾಡುತ್ತಿದ್ದರುʼ ಎಂದು ಕಿಡಿಕಾರಿದ್ದಾರೆ.</p>



<p style="font-size:20px">ಹಿಂದುಳಿದ ಜಾತಿಗಳ ಸಮಾವೇಶ ಮಾಡಿ, ನನ್ನನ್ನು ಟಾರ್ಗೆಟ್‌ ಮಾಡಿಕೊಂಡು ಸುಳ್ಳು ಭಾಷಣ ಮಾಡಲು ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿಗೆ ನನ್ನ ಕಂಡರೆ ಎಷ್ಟು ಭಯ ಎಂದರೆ ದೊಡ್ಡಬಳ್ಳಾಪುರ, ಕಲಬುರಗಿ ಎಲ್ಲಿ ಹೋದರೂ ನನ್ನ ಬಗ್ಗೆ ಮಾತು. ಇದೇ ಕಾರಣಕ್ಕೆ ನಾನು ಹೇಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವುದೇ ವೇದಿಕೆ ಮೇಲೆಯಾದರೂ ಸರಿ ತಮ್ಮ ಸರ್ಕಾರ ಹಿಂದುಳಿದ ಜಾತಿಗಳಿಗೆ ಏನು ಮಾಡಿದೆ ಹೇಳಲಿ ನಾನೂ ನಮ್ಮ ಸರ್ಕಾರ ಏನು ಮಾಡಿದೆ ಹೇಳುತ್ತೇನೆ. ಈ ಬಗ್ಗೆ ಬಹಿರಂಗ ಚರ್ಚೆ ಆಗಲಿ. ಹಾನಗಲ್‌ ಉಪಚುನಾವಣೆಯಲ್ಲೇ ಈ ಸವಾಲು ಹಾಕಿದ್ದೆ ಆದರೆ ಇವತ್ತಿನವರೆಗೆ ಅವರು ಬರಲು ತಯಾರಾಗಿಲ್ಲ. ರಾಜ್ಯ ಸರ್ಕಾರ ಜನಗಳಿಗೆ ಸುಳ್ಳು ಹೇಳುವುದನ್ನು ಬಿಡಬೇಕು.  ಪುನೀತ್‌ ರಾಜ್‌ ಕುಮಾರ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿದ್ದೀರ, ಇದನ್ನು ನಾನು ಕೂಡ ಸ್ವಾಗತಿಸುತ್ತೇನೆ, ಇಂಥದನ್ನು ಮಾಡಿದರೆ ನಮ್ಮ ತಕರಾರು ಇಲ್ಲ ಎಂದು ಹೇಳಿದ್ದಾರೆ. </p>
]]></content:encoded>
					
		
		
			</item>
		<item>
		<title>ಕಾಂಗ್ರೆಸ್‌ ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ : ಬಿಜೆಪಿ</title>
		<link>https://peepalmedia.com/congress-baba-sahebara-shava-samskarakku-jaaga-needalilla-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 22 Oct 2022 12:26:46 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[reservation]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=12587</guid>

					<description><![CDATA[ಬೆಂಗಳೂರು : ಮೀಸಲಾತಿ ಸಂಬಂಧಪಟ್ಟಂತೆ, ಬಿಜೆಪಿ  ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಿದೆ ಎಂದು ಬಿಜೆಪಿ ಬಿಜೆಪಿ ಸರಣಿ ಟ್ವೀಟ್‌ ಮಾಡಿದೆ. ಪ.ಜಾತಿ ಮತ್ತು ಪ.ವರ್ಗ ಜನಾಂಗದವರಿಗೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಉಭಯ ಸದನಗಳ ನಾಯಕರು ಸೇರಿ ಅಕ್ಟೋಬರ್‌ 7ರಂದು&#160;ನಡೆಸಿದ ಸರ್ವಪಕ್ಷ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಗಳನ್ನು ಆಧರಿಸಿ ಪ.ಜಾತಿ ಜನಾಂಗದವರ ಶೇ.15 ರಿಂದ ಶೇ 17 ಹಾಗೆಯೇ ಪ.ವರ್ಗ ದವರಿಗೆ ಶೇ.3 [&#8230;]]]></description>
										<content:encoded><![CDATA[
<p><strong>ಬೆಂಗಳೂರು :</strong> ಮೀಸಲಾತಿ ಸಂಬಂಧಪಟ್ಟಂತೆ, ಬಿಜೆಪಿ  ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಿದೆ ಎಂದು ಬಿಜೆಪಿ ಬಿಜೆಪಿ ಸರಣಿ ಟ್ವೀಟ್‌ ಮಾಡಿದೆ.</p>



<p>ಪ.ಜಾತಿ ಮತ್ತು ಪ.ವರ್ಗ ಜನಾಂಗದವರಿಗೆ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಉಭಯ ಸದನಗಳ ನಾಯಕರು ಸೇರಿ ಅಕ್ಟೋಬರ್‌ 7ರಂದು&nbsp;ನಡೆಸಿದ ಸರ್ವಪಕ್ಷ ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರ ವರದಿಗಳನ್ನು ಆಧರಿಸಿ ಪ.ಜಾತಿ ಜನಾಂಗದವರ ಶೇ.15 ರಿಂದ ಶೇ 17 ಹಾಗೆಯೇ ಪ.ವರ್ಗ ದವರಿಗೆ ಶೇ.3 ರಿಂದ ಶೇ 7 ಮೀಸಲಾತಿಯನ್ನು ಹೆಚ್ಚಿಸುವಂತೆ ಸುಗ್ರೀವಾಜ್ಞೆ ಹೊರಡಿಸಿದೆ.</p>



<p>ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕ, ʼಕಾಂಗ್ರೆಸ್‌ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ನೀಡಲು ಕಾಂಗ್ರೆಸ್‌ ಹಿಂದೆ ಮುಂದೆ ನೋಡಿತ್ತು, ಆದರೆ ಅದಾಗಲೇ ಇಂದಿರಾ ಗಾಂಧಿ ತಾನೇ ಭಾರತ ರತ್ನಕ್ಕೆ ಕೊರಳೊಡ್ಡಿದ್ದರು!. ಆದರೆ ಬಿಜೆಪಿ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಎಂಬ ಪರಮೋಚ್ಛ ಗೌರವ ಲಭಿಸಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ಬರಬೇಕಾಯಿತುʼ ಎಂದು ಹೇಳಿದೆ.</p>



<p>ಕಾಂಗ್ರೆಸ್‌ ಅನೇಕ ದಶಕಗಳ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳದ ಬೇಡಿಕೆಯನ್ನುಕಾಂಗ್ರೆಸ್ ಪಕ್ಷ ನಿರಾಕರಿಸುತ್ತಲೇ ಬಂದಿತ್ತು. &nbsp;ಆದರೆ ಬಿಜೆಪಿ &nbsp;ಅಧಿಕಾರ ಹಿಡಿದ ಕೇವಲ 3 ವರ್ಷದ ಒಳಗಾಗಿ ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕೆ ಸುಗ್ರಿವಾಜ್ಞೆ ಹೊರಡಿಸಿದೆ ಎಂದು&nbsp; ತಿಳಿಸಿದೆ.</p>



<p>ಕಾಂಗ್ರೆಸ್‌ ಬಾಬಾ ಸಾಹೇಬರನ್ನು ಚುನಾವಣೆಯಲ್ಲಿ ಕುತಂತ್ರದಿಂದ ಸೋಲಿಸಿತು. ಬಿಜೆಪಿ ಅತೀ ಹೆಚ್ಚು ದಲಿತರನ್ನು ಗೆಲ್ಲಿಸಿಕೊಂಡು ಕೇಂದ್ರ ಸಂಪುಟದಲ್ಲಿ ಸಚಿವರನ್ನಾಗಿಸಿತು ಕಾಂಗ್ರೆಸ್‌ ಅನ್ನು ದೂರಿದೆ.</p>



<p>ಕಾಂಗ್ರೆಸ್‌ ಬಾಬಾ ಸಾಹೇಬರ ಶವಸಂಸ್ಕಾರಕ್ಕೂ ಜಾಗ ನೀಡಲಿಲ್ಲ ಆದರೆ 52 ಎಕರೆಗೂ ಹೆಚ್ಚಿನ ಸ್ಥಳದಲ್ಲಿ ನೆಹರೂ ಸಮಾಧಿ ನಿರ್ಮಿಸಲಾಗಿದೆ! ಆದರೆ ಬಿಜೆಪಿ ಅಂಬೇಡ್ಕರ್‌ ಜನಿಸಿದ, ವಿದ್ಯಾಭ್ಯಾಸ ಮಾಡಿದ, ಗತಿಸಿದ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳನ್ನು ಮೋದಿ ಸರ್ಕಾರ ಪಂಚತೀರ್ಥ ಎಂಬ ಯೋಜನೆಯಡಿ ಅಭಿವೃದ್ಧಿಗೊಳಿಸಿದೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe loading="lazy" title="ರಾಘಣ್ಣನ ಮಾತುಗಳಿಗೆ ನಿಮ್ಮ ಮನಸ್ಸು ಮಿಡಿಯದೆ ಇರಲಾರದು || PUNEETHA PARVA |GANDADA GUDI| RAGHAVENDRA RAJKUMAR" width="696" height="392" src="https://www.youtube.com/embed/uJVaw7vR57s?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
	</channel>
</rss>
