<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Retired Justice Gopala Gowda &#8211; Peepal Media</title>
	<atom:link href="https://peepalmedia.com/tag/retired-justice-gopala-gowda/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 17 Jul 2025 18:10:48 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Retired Justice Gopala Gowda &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಧರ್ಮಸ್ಥಳ ಪ್ರಕರಣಗಳನ್ನು ಎಸ್‌ಐಟಿ ರಚಿಸಿ &#8211; ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ</title>
		<link>https://peepalmedia.com/form-an-sit-for-dharmasthala-cases-retired-justice-gopala-gowda/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Thu, 17 Jul 2025 18:09:57 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[Retired Justice Gopala Gowda]]></category>
		<guid isPermaLink="false">https://peepalmedia.com/?p=62766</guid>

					<description><![CDATA[ಬೆಂಗಳೂರು : ರಾಜ್ಯದ ಬಹಳ ಮುಖ್ಯವಾದ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳ (Dharmasthala) ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅನೇಕ ಅತ್ಯಾಚಾರ (Rape) ಹಾಗೂ ಕೊಲೆ (Murder) ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನ ಎಸ್‌ಐಟಿಗೆ (SIT) ವಹಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ (Gopal Gowda) ಒತ್ತಾಯಸಿದ್ದಾರೆ. &#160;ಸಾಕ್ಷಿಗೆ ಭದ್ರತೆ ಒದಗಿಸಬೇಕುಧರ್ಮಸ್ಥಳದಲ್ಲಿ ಅನೇಕ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಅದರ ಹೆಣಗಳನ್ನ ಹೂಳಿರುವುದಾಗಿಯೂ ಹಾಗೂ ಅವುಗಳನ್ನ ತೆಗೆದುಕೊಡುವುದಾಗಿ ಹೇಳುತ್ತಿರುವ ಸಾಕ್ಷಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು ಎಂದು ಅವರು [&#8230;]]]></description>
										<content:encoded><![CDATA[
<p><strong>ಬೆಂಗಳೂರು :</strong> ರಾಜ್ಯದ ಬಹಳ ಮುಖ್ಯವಾದ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳ (Dharmasthala) ಕ್ಷೇತ್ರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅನೇಕ ಅತ್ಯಾಚಾರ (Rape) ಹಾಗೂ ಕೊಲೆ (Murder) ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕರಣವನ್ನ ಎಸ್‌ಐಟಿಗೆ (SIT) ವಹಿಸಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ (Gopal Gowda) ಒತ್ತಾಯಸಿದ್ದಾರೆ.</p>



<p><strong>&nbsp;ಸಾಕ್ಷಿಗೆ ಭದ್ರತೆ ಒದಗಿಸಬೇಕು<br></strong>ಧರ್ಮಸ್ಥಳದಲ್ಲಿ ಅನೇಕ ಕೊಲೆ ಹಾಗೂ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಅದರ ಹೆಣಗಳನ್ನ ಹೂಳಿರುವುದಾಗಿಯೂ ಹಾಗೂ ಅವುಗಳನ್ನ ತೆಗೆದುಕೊಡುವುದಾಗಿ ಹೇಳುತ್ತಿರುವ ಸಾಕ್ಷಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದ್ದು, ತಕ್ಷಣವೇ ಈ ಆರೋಪಗಳ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಕೇಳಿಕೊಂಡಿದ್ದಾರೆ.</p>



<p>ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಆ ವ್ಯಕ್ತಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ಈ ವಿಚಾರವಾಗಿ ಯಾವುದೇ ತನಿಖೆ ಆಗಿಲ್ಲ. ಶವಗಳನ್ನ ಹೂಳಿರುವುದು ನಾನೇ ಎಂದು ಆ ವ್ಯಕ್ತಿ ಹೇಳಿಕೆ ನೀಡಿದ್ದಾನೆ. ಆದರೆ ಅವುಗಳನ್ನ ತೆಗೆಯುವ ಬದಲು ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಒತ್ತಡ ಹೇರುತ್ತಿದ್ದಾರೆ. ಅಲ್ಲದೇ, ಆತ ಕೋರ್ಟ್‌ನಲ್ಲಿ ಕೊಡುತ್ತಿರುವ ಪ್ರತಿ ಹೇಳಿಕೆಯೂ ಸೋರಿಕೆ ಆಗುತ್ತಿರುವುದು ಕಳವಳದ ವಿಚಾರ ಎಂದಿದ್ದಾರೆ.</p>



<p><strong>ಭದ್ರತೆ ಕೊಡಿ<br></strong>ವ್ಯಕ್ತಿಯು ತನ್ನ ವಕೀಲರೊಂದಿಗೆ ಒಂದು ಸ್ಥಳಕ್ಕೆ ತೆರಳಿ ಶವಗಳನ್ನ ತೆಗೆಯುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಹೇಳಿರುತ್ತಾರೆ. ಆದರೆ ಆ ಜಾಗಕ್ಕೆ ಪೊಲೀಸರು ಹೋಗಿಲ್ಲ. &nbsp;ಅದರ ಜೊತೆಗೆ ಪೊಲೀಸರ ಬದಲು ತನಿಖಾಧಿಕಾರಿ ಮಾತ್ರ ಅವರಿಗೆ ಕರೆ ಮಾಡಿ, ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಹಾಗಾಗಿ ತಕ್ಷಣ ತನಿಖಾ ತಂಡವನ್ನ ರಚನೆ ಮಾಡಬೇಕು ಎಂದಿದ್ದಾರೆ.</p>



<p>ಸಾಕ್ಷಿ ಹೇಳಲು ಬಂದಿರುವ ವ್ಯಕ್ತಿಗೆ ಹಾಗೂ ಆತನ ವಕೀಲರಿಗೆ ಜೀವ ಬೆದರಿಕೆ ಇದೆ. ಹಾಗಾಗಿ ಅವರಿಗೆ ಭದ್ರತೆ ಒದಗಿಸುವುದು ಬಹಳ ಅನಿವಾರ್ಯ. ಈ ಕೆಲಸವನ್ನ ಸರ್ಕಾರ ಈಗಲೇ ಮಾಡಬೇಕು. ಅವರಿಗೆ ಏನಾದರೂ ಆದರೆ &nbsp;ಗೃಹ ಸಚಿವರು ಹಾಗೂ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರೇ ಕಾರಣವಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.</p>



<p><strong>ಸಾಕ್ಷಿದಾರ ಎಲ್ಲಿದ್ದಾರೋ ಗೊತ್ತಿಲ್ಲ ಎಂದ ಎಸ್.ಪಿ<br></strong>ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿದಾರ ದೂರುದಾರನಿಗೆ ರಕ್ಷಣೆ ನೀಡಬೇಕಾದಲ್ಲಿ ಆತ ಎಲ್ಲಿದ್ದಾನೆ ಎಂಬುದು ತಿಳುಯಬೇಕು. ಆದ್ರೆ ಇದುವರೆಗೂ ನಮಗೆ ಆತ ಎಲ್ಲಿದ್ದಾನೆ ಎಂಬ ಮಾಹಿತಿಯಿಲ್ಲ ಎಂದಿದ್ದಾರೆ. ಸಾಕ್ಷಿದಾರರಿಗೆ ಅಗತ್ಯ ದೈಹಿಕ ರಕ್ಷಣೆ ಒದಗಿಸಬೇಕಾದಲ್ಲಿ ಅವರ ಒಪ್ಪಿಗೆ ಮತ್ತು ಸಹಕಾರ ಅಗತ್ಯ.ಆದ್ರೆ ಈ ಬಗ್ಗೆ ನಮಗೆ ಮಾಹಿತಿಯಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಹೇಳಿದ್ದಾರೆ.</p>



<p>ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಹಿರಿಯ ವಕೀಲರ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಹಿರಿಯ ವಕೀಲರಾದ ಬಾಲನ್, ಸಿ.ಎಸ್ ದ್ವಾರಕನಾಥ್ ಅವರ ನೇತೃತ್ವದ ವಕೀಲರ ನಿಯೋಗ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.</p>
]]></content:encoded>
					
		
		
			</item>
	</channel>
</rss>
