<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>rohith agasara halli &#8211; Peepal Media</title>
	<atom:link href="https://peepalmedia.com/tag/rohith-agasara-halli/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 28 Dec 2022 12:32:31 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>rohith agasara halli &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತಿರುಗಾಡಿ ಬಂದೊ-10</title>
		<link>https://peepalmedia.com/tirugaadi-bando-10/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 28 Dec 2022 12:32:30 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tirugaadi bando]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18731</guid>

					<description><![CDATA[ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಮೂಡಿ ಬರುತ್ತಿದ್ದ ತಿರುಗಾಡಿ ಬಂದೋ ಅಂಕಣ ತನ್ನ ಕೊನೆಯ ಅಂಕಕ್ಕೆ ತಲುಪಿದೆ. ತಮ್ಮೆಲ್ಲ ಕೆಲಸಗಳ ನಡುವೆಯೂ ನಮಗಾಗಿ ವಾರ-ವಾರವೂ ತಪ್ಪದೆ ಲೇಖನ ಬರೆದುಕೊಟ್ಟ ರೋಹಿತ್‌ ಅಗಸರಹಳ್ಳಿಯವರಿಗೆ ಪೀಪಲ್‌ ಮೀಡಿಯಾ ಕೃತಜ್ಞ. ಇನ್ನಷ್ಟು ಪ್ರವಾಸ ಕಥನಗಳಿಗಾಗಿ ನಮ್ಮ ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ. ಈ ಬಾರಿಯ ತಮ್ಮ ಅಂಕಣದಲ್ಲಿ ರೋಹಿತ್‌ ನಮ್ಮೆಲ್ಲರನ್ನು ಪುಷ್ಕರ್‌ ಮತ್ತು ಆಜ್ಮೈರ್‌ಗಳಿಗೆ ಕರೆದೊಯ್ಯಲಿದ್ದಾರೆ. ಬನ್ನಿ ತಿರುಗಾಡಿ ಬರೋಣ ನಮ್ಮ ಪ್ರವಾಸದ ಕಡೇ ದಿನ ಅಜ್ಮೇರ್ [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ಕಳೆದ ಹತ್ತು ವಾರಗಳಿಂದ ನಿರಂತರವಾಗಿ ಮೂಡಿ ಬರುತ್ತಿದ್ದ ತಿರುಗಾಡಿ ಬಂದೋ ಅಂಕಣ ತನ್ನ ಕೊನೆಯ ಅಂಕಕ್ಕೆ ತಲುಪಿದೆ. ತಮ್ಮೆಲ್ಲ ಕೆಲಸಗಳ ನಡುವೆಯೂ ನಮಗಾಗಿ ವಾರ-ವಾರವೂ ತಪ್ಪದೆ ಲೇಖನ ಬರೆದುಕೊಟ್ಟ ರೋಹಿತ್‌ ಅಗಸರಹಳ್ಳಿಯವರಿಗೆ ಪೀಪಲ್‌ ಮೀಡಿಯಾ ಕೃತಜ್ಞ. ಇನ್ನಷ್ಟು ಪ್ರವಾಸ ಕಥನಗಳಿಗಾಗಿ ನಮ್ಮ ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ. ಈ ಬಾರಿಯ ತಮ್ಮ ಅಂಕಣದಲ್ಲಿ ರೋಹಿತ್‌ ನಮ್ಮೆಲ್ಲರನ್ನು ಪುಷ್ಕರ್‌ ಮತ್ತು ಆಜ್ಮೈರ್‌ಗಳಿಗೆ ಕರೆದೊಯ್ಯಲಿದ್ದಾರೆ. ಬನ್ನಿ ತಿರುಗಾಡಿ ಬರೋಣ</strong></h5>



<p>ನಮ್ಮ ಪ್ರವಾಸದ ಕಡೇ ದಿನ ಅಜ್ಮೇರ್ ಮತ್ತು ಪುಷ್ಕರ್ ನೋಡುವುದಾಗಿತ್ತು. ವಾಸ್ತವದಲ್ಲಿ ಪ್ರವಾಸ ಹೊರಡೋ ಮುನ್ನ ಅಜ್ಮೇರ್ ಬದಲಿಗೆ ಉದಯಪುರ ಮತ್ತು ಜೈಸಲ್ಮೇರ್ ಗಳು ಚರ್ಚೆಗೆ ಬಂದವು; ಆದರೆ ಅವೆರಡೂ ಜೈಪುರದಿಂದ ದೂರ ಎಂಬ ಕಾರಣಕ್ಕೆ ಡ್ರಾಪ್ ಮಾಡಿದ್ದೆವು. ಅಜ್ಮೇರ್ ಪಟ್ಟಿಗೆ ಸೇರಿದ್ದಷ್ಟೇ ಅಲ್ಲ, ಅಲ್ಲಿಯೇ ಎರಡು ದಿನ ಉಳಿದು ಸುತ್ತಾಡಬೇಕೆಂದು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಊರಿಗೆ ವಾಪಾಸು ಬಂದಮೇಲೆ ಗೊತ್ತಾದ ಸಂಗತಿ ಎಂದರೆ ನಮ್ಮ ಅರಸೀಕೆರೆಯಿಂದ (ಮಾರ್ಗ) ಅಜ್ಮೇರ್ ಗೆ ನೇರ ಟ್ರೈನ್ ಇದೆಯಂತೆ.</p>



<p>ಹಿಂದಿನ ದಿನವೇ ತೀರ್ಮಾನಿಸಿದ್ದಂತೆ ಡ್ರೈವರ್ ಗೆ ಮುಂಜಾನೆ ಆರಕ್ಕೆ ಬರಲು ಹೇಳಿದ್ದೆವು. ಆತ ಬಂದ ಕೂಡ. ಹೊರಡುತ್ತಲೇ ಅವನಿಗೇ ಕೇಳಿದೆವು ಪುಷ್ಕರ್ ಮತ್ತು ಅಜ್ಮೇರ್ ಎರಡರಲ್ಲಿ ಮೊದಲು ಎಲ್ಲಿಗೆ ಹೋಗುವುದೆಂದು. ವಾತಾವರಣ ಹಿಂದಿನ ದಿನದಂತೇ ತಂಪಾಗಿತ್ತು, ತುಂತುರು ಮಳೆಯೊಂದಿಗೆ. ಆತ ಹೇಳಿದ ಮೊದಲು ಪುಷ್ಕರ್ ಗೆ ಹೋಗಿ ಬಂದುಬಿಡಬಹುದು, ಆಮೇಲೆ ದರ್ಗಾ ನೋಡಿ ಹೊರಡಬಹುದು ಎಂದು. ಜೈ ಎಂದೆವು. ದಿನೇಶ್ ಜೈಸಲ್ಮೇರ್ ಗೆ ಹೋಗಿ ಥಾರ್ ಮರುಭೂಮಿಯಲ್ಲಿ ಬೆಳದಿಂಗಳ ರಾತ್ರಿಯೊಂದನ್ನು ಆಕಾಶ ನೋಡುತ್ತ ಕಳೆಯಬೇಕು ಎಂದು ಹೇಳುತ್ತಿದ್ದರೂ ಅದು ಸಾಧ್ಯವಾಗದ ಕಾರಣ, ಪುಷ್ಕರಿನಲ್ಲಿ ಒಂಟೆ ಸವಾರಿ ಮಾಡಿ ಜೈಸಲ್ಮೇರ್ ಕೊರತೆಯನ್ನು ತುಂಬಿಸಿಕೊಳ್ಳುವ ಹವಣಿಕೆಯಲ್ಲಿದ್ದರು.</p>



<p>ಪುಷ್ಕರ್ ಅಜ್ಮೇರ್ ಗೆ ಹೊಂದಿಕೊಂಡಂತೇ ಇರುವ ಊರು. ಪುಷ್ಕರ್ ಎಂಬ ಹೆಸರೇ ಸರೋವರದ ಕಾರಣಕ್ಕಾಗಿ ಬಂದಿರಬಹುದು. ಪುಷ್ಕರಿಣಿ ಎಂದರೆ ಕೊಳ ಅಲ್ಲವೆ? ಸರೋವರದ ಬಳಿ ಗುಡ್ಡದಂಥಾ ಜಾಗದಲ್ಲಿ ಬಿಳಿ ಅಮೃತ ಶಿಲೆಯಿಂದ ನಿರ್ಮಿಸಿದ ದೇವಾಲಯವಿದೆ. ಅದು ಬ್ರಹ್ಮ ದೇವಾಲಯ. ಪುರಾಣದ ಕತೆಯೊಂದರ ಪ್ರಕಾರ ಶಿವ ಬ್ರಹ್ಮನಿಗೆ ಎಂದೋ ಶಾಪ ಕೊಟ್ಟನಂತೆ, ನಿನ್ನನ್ನು ಭೂಲೋಕದಲ್ಲಿ ಜನ ಗುಡಿ ಕಟ್ಟಿ ಪೂಜಿಸದಿರಲೆಂದು. ಹಾಗಾಗಿ ತ್ರಿಮೂರ್ತಿಗಳಲ್ಲಿ ಒಬ್ಬನೂ, ಚತುರ್ಮುಖನೂ ಆದ ಬ್ರಹ್ಮನಿಗೆ ಭೂಲೋಕದಲ್ಲಿ ಎಲ್ಲೂ ದೇವಾಲಯಗಳು ಇಲ್ಲವಂತೆ. ಎಲ್ಲೆಲ್ಲಿ ಬ್ರಹ್ಮ ದೇವಾಲಯಗಳು ಇವೆಯೋ ಅಲ್ಲೆಲ್ಲಾ ಈ ಕತೆಯೂ ಇದೆ. ನಾನು ಕೊಡಗಿನಲ್ಲಿ ಇದ್ದಾಗ ಅಲ್ಲಿ ನೋಡಿದ ಬ್ರಹ್ಮ ದೇವಾಲಯದಲ್ಲಿ ಕೂಡ ಈ ಕತೆಯನ್ನು ಕೇಳಿದ್ದೆ. ಹಾಗೆಯೇ ಕೊಡಗಿನಲ್ಲಿ ನಮ್ಮ ಪ್ರಿನ್ಸಿಪಾಲರಾಗಿದ್ದ ಕೆಂಚಪ್ಪ ಅವರು ಪ್ರತೀ ವರ್ಷ ಟೂರ್ ಮಾಡೊವ್ರು. ಅವರೇ ಒಮ್ಮೆ ಅಜ್ಮೇರ್ ದರ್ಗಾ ಬಗ್ಗೆ ಹೇಳಿದ್ದರು. ಭಾರೀ ನೂಕುನುಗ್ಗಲು ಅಲ್ಲಿ ಎಂದಿದ್ದರು.</p>


<div class="wp-block-image">
<figure class="aligncenter size-large is-resized"><img fetchpriority="high" decoding="async" src="https://peepalmedia.com/wp-content/uploads/2022/12/image-46-1024x760.png" alt="" class="wp-image-18733" width="463" height="343" srcset="https://peepalmedia.com/wp-content/uploads/2022/12/image-46-1024x760.png 1024w, https://peepalmedia.com/wp-content/uploads/2022/12/image-46-300x223.png 300w, https://peepalmedia.com/wp-content/uploads/2022/12/image-46-768x570.png 768w, https://peepalmedia.com/wp-content/uploads/2022/12/image-46-150x111.png 150w, https://peepalmedia.com/wp-content/uploads/2022/12/image-46-485x360.png 485w, https://peepalmedia.com/wp-content/uploads/2022/12/image-46-696x517.png 696w, https://peepalmedia.com/wp-content/uploads/2022/12/image-46.png 1056w" sizes="(max-width: 463px) 100vw, 463px" /></figure></div>


<p>ಬಹುತೇಕ ದೇವಾಲಯಗಳಂತೆ ಇಲ್ಲೂ ಚಪ್ಪಲಿ ಸ್ಟ್ಯಾಂಡು, ಪೂಜೆಯ ಬುಟ್ಟಿ ಬಾಡಿಗೆ ಕೊಡುವವರ ನಡುವೆ ಸ್ಪರ್ಧೆ ನಡೆಯುತ್ತಿದ್ದವು.‌ ಒಂದೆಡೆ ಚಪ್ಪಲಿ ಕಳಚಿಟ್ಟು ಬುಟ್ಟಿ ಪಡೆಯದೆ ಹೊರಡಲನುವಾದ ಕಾರಣ ಚಪ್ಪಲಿ ಕಾಯಲು ನಿರಾಕರಿಸಿದ. ಆಮೇಲೆ ಸುಮ್ಮನೆ ಖಾಲಿ ಜಾಗದಲ್ಲಿ ರಾಶಿ ಚಪ್ಪಲಿಗಳ ನಡುವೆ ಬಿಟ್ಟು ಮುಂದೆ ಹೋದೆವು. ದೇವಾಲಯ ನಮ್ಮನ್ನೇನೂ ಹೆಚ್ಚು ಹೊತ್ತು ಹಿಡಿದಿಡಲಿಲ್ಲ. ಅಲ್ಲಿಂದ ಇಳಿದುಬಂದು ಪುಷ್ಕರ್ ಸರೋವರ ನೋಡಲು ತೆರಳಿದೆವು. ನಮ್ಮ ಮೇಲುಕೋಟೆಯ ಪುಷ್ಕರಿಣಿಗಿಂತ ಕೊಂಚ ದೊಡ್ಡದಾದ ಸರೋವರ. ಮೂರು ಕಡೆ ವಿಸ್ತಾರವಾದ ಮೆಟ್ಟಿಲು ಇದ್ದವು.ನಮ್ಮ ಜನ ಪವಿತ್ರವೆಂದು ಭಾವಿಸಿದ ಮೇಲೆ ಎಷ್ಟು ಗಲೀಜಿರಬೇಕಿತ್ತೊ ಅಷ್ಟೂ ಇತ್ತು.‌ ಮರಳುಗಾಡಿಗೆ ಹೊಂದಿಕೊಂಡಂತೆ ಇದ್ದ ಕಾರಣ ಬೇರೇನೂ ನೀರಿನ ಮೂಲಗಳು ಆ ಪ್ರದೇಶದಲ್ಲಿ ಇದ್ದಿರಲಾರದು ಎಂದುಕೊಂಡೆ.&nbsp; ಓಡಾಡಿ ಸುಸ್ತಾಗಿದ್ದ ಸುಜಾತ ಲಸ್ಸಿ ಕೊಡಿಸುತ್ತೇನೆಂದು ನಿಲ್ಲಿಸಿದಳು. ಅಜ್ಮೇರಲ್ಲಿ ಎಲ್ಲ ಕಡೆ ಲಸ್ಸಿ ಫೇಮಸ್ಸು. ಅಲ್ಲಿಯ ಹವಾಮಾನದ ಪ್ರಕಾರ ವರ್ಷದ 12 ತಿಂಗಳು ಮಾತ್ರವೇ ಬಿಸಿಲಂತೆ! ಮಳೆಯಂತೂ ವರ್ಷಕ್ಕೆ ಬರೋಬ್ಬರಿ 20 ಇಂಚಂತೆ. ನಾವೆಷ್ಟು ಅದೃಷ್ಟವಂತರೆಂದರೆ ಅಲ್ಲಿ ಉರಿಯೋದೇವರ (ಸೂರ್ಯ) ಮುಖ‌ ನೋಡಿದ್ದು ಅಪರೂಪವೆ. ಅಲ್ಲಿ ಲಸ್ಸಿ ಎಂದರೆ ಬರೇ ಮೊಸರು ಸಕ್ಕರೆ ಮಿಶ್ರಣವಾಗಿರಲಿಲ್ಲ, ಜೊತೆಗೆ ಗುಲ್ಕಂದ್( ಗುಲ್ಕನ್) ಕೂಡ ಬೆರೆಸಿದ್ದರು. ಬಹಳ ರುಚಿಯಾಗಿತ್ತು.</p>



<p><strong>ಒಂಟೆ ಸವಾರಿ&#8230;.</strong></p>



<p>ಮಕ್ಕಳಿಬ್ಬರಿಗೂ ಕಳೆದೊಂದು ವಾರದಿಂದ ಹೇಳಿ ಹೇಳಿ ನಿರೀಕ್ಷೆ ಹೆಚ್ಚಿಸಿದ್ದ ಒಂಟೆ ಸವಾರಿ ಬಂದೇ ಬಿಟ್ಟಿತು.‌ ಒಂಟೆ ಸ್ಟ್ಯಾಂಡಿಗೆ ನಮ್ಮ ಕಾರು ನಿಲ್ಲುವ ಹೊತ್ತಿಗೆ ಯಾವ ಪ್ರವಾಸಿ ತಂಡಗಳೂ ಅಲ್ಲಿರಲಿಲ್ಲ. ಇದ್ದಿದ್ದರೆ‌ ನಮ್ಮ ಒಂದೆರಡು ಸಾವಿರ ರೊಕ್ಕ ಉಳಿದಿರುತ್ತಿತ್ತೇನೊ. ನಾವು ವಿಶಾಲ ಮರಳುಗಾಡನ್ನು ನಿರೀಕ್ಷಿಸಿದ್ದೆವು ಆದರದು ಅರೆಮರಳುಗಾಡು ಪ್ರದೇಶವಾಗಿತ್ತು. ಅಲ್ಲಲ್ಲೇ ಗಿಡಮರಗಳೂ, ಕುರುಚಲು ಕಾಡೂ, ಊರೂ, ಬೆಟ್ಟಸಾಲೂ (ಅರಾವಳಿ ರೇಂಜ್) ಎಲ್ಲವೂ ಕಾಣುತ್ತಿದ್ದವು. ಓಡಾಟಕ್ಕೆ ಎರಡು ಮೋಡುಗಳಿವೆಯೆಂದೂ, ಒಂದು ಒಂಟೆ ಎಳೆಯುವ ಗಾಡಿ. ಓಡಾಟದ ದೂರ ಐದು ಕಿ.ಮೀ., ಮತ್ತೊಂದು ಓಪನ್ ಜೀಪಿನಲ್ಲಿ ಇಪ್ಪತ್ತೈದು ಕಿ.ಮೀ. ಓಡಾಟಕ್ಕೆ ಅಂದಾಜು ಐದು ಸಾವಿರವೆಂದೂ ಹೇಳಿದರು. ಎಲ್ಲರಿಗೂ ರಾಜಸ್ತಾನಿ ಪಟ್ಗಾ (ರುಮಾಲಿನಿಂದ ಮಾಡಿದ ಪೇಟ) ಕೂಡ ನೀಡಿದರು. ಕೆಲವೇ ಹೊತ್ತಿನಲ್ಲಿ ನಮಗೆ ಟೋಪಿ ಹಾಕಿದ್ದಾರೆನ್ನುವುದು ಗೊತ್ತಾಯ್ತು!</p>



<p>ನಿಧಾನ ಗತಿಯ ಒಂಟೆ ಬಿಟ್ಟು ವೇಗದ ಜೀಪನ್ನೇ ಆಯ್ಕೆ ಮಾಡಿಕೊಂಡೆವು. ಜೀಪ್ ಓಡಿಸುವ ಅಣ್ಣ ಎಲ್ಲರೂ ಬಿಗಿಯಾಗಿ ಜೀಪಿನ ಕಂಬಿಗಳನ್ನು ಹಿಡಿದು ಕೂರಲು ಹೇಳಿ ಸಾಹಸಕ್ರೀಡೆಗೆ ಮುಂದಾದ. ಮುಂಜಾನೆ ಜೈಪುರ- ಅಜ್ಮೇರ್ ದಾರಿಯಲ್ಲಿ ತಿಂದಿದ್ದ ಬತ್ತೂರ- ಬಟಾಣಿ ಜೀರ್ಣವಾಗಿದ್ದ ಕಾರಣಕ್ಕೆ ಅವನ ಜೀಪು ಸ್ವಚ್ಛವಾಗುಳಿಯಿತು; ಇಲ್ಲದಿದ್ದರೆ‌ ಅಲ್ಲೊಂದು ಸ್ವಚ್ಛ ಭಾರತ್ ಅಭಿಯಾನವೇ ಜರುಗಬೇಕಿತ್ತು. ಮಕ್ಕಳು ಹೋ ಎಂದು ಕೂಗಿ ಜೀಪಿನ ವೇಗದ ಏರಿಳಿತವನ್ನು ಎಂಜಾಯ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಿಗುತ್ತಿದ್ದ ಮರಳ ಗುಡ್ಡಗಳನ್ನು ಏರಿಸಿ ರೊಯ್ಯನೆ ಇಳಿಸುತ್ತಿದ್ದ. ಕುಂತ ನಮಗೆ ಬಿದ್ದೇ ಬಿಡುತ್ತೇವೇನೊ ಎನಿಸುತ್ತಿತ್ತು. ಮುಂದೆ ಡ್ರೈವರ್ ಸೀಟ್ ಪಕ್ಕ ಸೇಫ್ ಜಾಗದಲ್ಲಿ ಕುಳಿತಿದ್ದ ಸುಜಾತಾಳ ಗಲಾಟೆಯೇ ಅಧಿಕ! ತಾನು ಇಳಿದೇ ಬಿಡುವುದಾಗಿ ಧಮ್ಕಿ ಕೊಡುತ್ತಿದ್ದಳು; ಆದರೆ ಯಾರೂ ಕ್ಯಾರೇ ಅನ್ನದ ಕಾರಣ ಸುಮ್ಮನಾದಳು. ಒಂದೈದಾರು ಕಿ.ಮೀ. ಹೀಗೆ ಗುಡ್ಡ ಏರಿಸಿ ಇಳಿಸಿ ಒಂದೆಡೆ ನಿಲ್ಲಿಸಿದ‌. ಅಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮತ್ತು ಒಂದು ಸಣ್ಣ ರೌಂಡು ಬರಲು ಒಂಟೆ ಬಾಡಿಗೆಗೆ ದೊರೆಯುತ್ತವೆ. ಈಗಾಗಲೆ ಜೀಪಿನ ವಿಷಯದಲ್ಲಿ ಟೋಪಿ ಇಕ್ಕಿಸಿಕೊಂಡಿದ್ದ ನಾವು ಒಂಟೆ ಸವಾರಿ ವಿಷಯದಲ್ಲಿ ಜಾಗರೂಕರಾದೆವು. 1600 ಹೇಳಿ ಕಡೆಗೆ ಇನ್ನೋರೋ ಮುನ್ನೂರೋ ಕೊಡಿ ಎಂದರು. ಶಾಲೆಗೆ ಹೋಗುವ ಚಿಕ್ಕ ವಯಸ್ಸಿನ ಮಕ್ಕಳು ರಾಜಾಸ್ತಾನಿ ಟೋಪಿ ಬಾಡಿಗೆಗೆ ಕೊಡುವ ಕೆಲಸ ಮಾಡುತ್ತಿದ್ದವು.</p>


<div class="wp-block-image">
<figure class="aligncenter size-large is-resized"><img decoding="async" src="https://peepalmedia.com/wp-content/uploads/2022/12/image-47-1024x678.png" alt="" class="wp-image-18737" width="423" height="279" srcset="https://peepalmedia.com/wp-content/uploads/2022/12/image-47-1024x678.png 1024w, https://peepalmedia.com/wp-content/uploads/2022/12/image-47-300x199.png 300w, https://peepalmedia.com/wp-content/uploads/2022/12/image-47-768x508.png 768w, https://peepalmedia.com/wp-content/uploads/2022/12/image-47-1536x1017.png 1536w, https://peepalmedia.com/wp-content/uploads/2022/12/image-47-150x99.png 150w, https://peepalmedia.com/wp-content/uploads/2022/12/image-47-696x461.png 696w, https://peepalmedia.com/wp-content/uploads/2022/12/image-47-1068x707.png 1068w, https://peepalmedia.com/wp-content/uploads/2022/12/image-47.png 1600w" sizes="(max-width: 423px) 100vw, 423px" /></figure></div>


<p>ಒಂಟೆಯನ್ನು ಬಹುತೇಕ ಟಿ.ವಿ. , ಸಿನೆಮಾದಲ್ಲಿ ಮಾತ್ರವೇ ನೋಡಿದ್ದ ನಮಗೆ‌ ಹತ್ತಿರದಿಂದ ನೋಡುವ ಸವಾರಿ ಮಾಡುವ ಅವಕಾಶ ಸಿಕ್ಕಿತ್ತು. ಅದರ ಬೆನ್ನೇರಿದ ಮೇಲೆ ಅನಿಸಿದ್ದು ತಾವೆಲ್ಲೋ ಫರ್ಸ್ಟ್ ಫ್ಲೋರಿನಲ್ಲಿ ಇದ್ದೇವೆಂಬ ಭಾವನೆ. ಒಂಟೆ ಏರೋದು ಸುಲಭ, ಇಳಿಯೋದು ಕೊಂಚ ಕಷ್ಟ. ಮೊದಲು ತನ್ನ ಮುಂದಿನೆರಡು ಕಾಳುಗಳ ಮಡಚಿ‌ ಅದು ಕೆಳ ಕೂರುವುದರಿಂದ ಒಮ್ಮಲೇ ಐದಾರು ಅಡಿ ಕುಸಿದಂತಾಗಿ‌ ಬ್ಯಾಲೆನ್ಸ್ ಸಿಕ್ಕದು. ಕೊಂಚ ಹಿಂದಕ್ಕೆ ಒರಗಿದಂತೆ‌ ಕೂರಬೇಕು.</p>



<p>ಒಂದಷ್ಟು ಫೋಟೋ ಕ್ಲಿಕ್ಕಿಸಿ ಫೋಟೋಗ್ರಾಫರನೊಂದಿಗೆ ಚೌಕಾಶಿ ಮುಗಿಸುವ ಹೊತ್ತಿಗೆ, ಮತ್ತೆ ಶುರುವಾಯ್ತು ಜೀಪ್ ಸವಾರಿ. ಈಗ ಕೊಂಚ ಮಟ್ಟಸವಾದ ದಾರಿ. ಒಂದೆರಡು ಹಳ್ಳಿ, ಒಂದಷ್ಟು ನೇರಳೆ ಮತ್ತು ನೆಲ್ಲಿಕಾಯಿ‌ ತೋಟಗಳನ್ನು ತೋರಿಸಿದ. ಆ ಪ್ರದೇಶದ ನೇರಳೆ ಫೇಮಸ್ಸಂತೆ. ಪುಟ್ಟಂಪೂರ ಮರಳುಗಾಡು ಎಂದು ಭಾವಿಸಿಕೊಂಡಿದ್ದ ನಮಗೆ ಆ ಸಮೃದ್ಧ ತೋಟಗಳನ್ನು ನೋಡಿ ಅಚ್ಚರಿಯಾಯ್ತು. ಸುಜಾತ ಮುಂದೆ ಕೂತು ಡ್ರೈವರಣ್ಣಂಗೆ ಏನೇನೊ‌ ಕೇಳುತ್ತಿದ್ದಳು. ಅದರ ಸಾರಾಂಶದಂತೆ ನಡುವೆ ಸಿಕ್ಕ ಹಳ್ಳಿಯ ಜನ ಮೊದಲು ಉಪ್ಪು ತಯಾರಿಸುತ್ತಿದ್ದರಂತೆ (ನಮ್ಮ ಉಪ್ಪಾರರಂತೆ) ಈಗ ಪ್ಯಾಕೆಟ್ ಉಪ್ಪಿನ ಕಾರಣಕ್ಕೆ ಅವರೆಲ್ಲ ಉದ್ಯೋಗವಿಲ್ಲದೆ ಬೇರೆ ಏನೇನೊ ವೃತ್ತಿಗಳನ್ನು ಮಾಡುತ್ತಿರುವರಂತೆ. ನೇರಳೆ ತೋಟಗಳನ್ನು ಹಾಯ್ದು ಮೇನ್ ರೋಡಿಗೆ ಬರೋ ಹೊತ್ತಿಗೆ ಡ್ರೈವರ್ ಗೆ ನಾಕಾರು ಫೋನು ಬಂದವು. ನಮ್ಮ ಬಳಿ ಕೊಂಚ ಹೆಚ್ಚೇ ಕಾಸು ಪಡೆದಿದ್ದ ಅಪರಾಧಿ ಭಾವಕ್ಕೋ ಏನೊ ನಿಧಾನವಾಗಿ‌ ಅಲ್ಲಿನ ಕೃಷಿ, ಜನಜೀವನ, ಭಾಷೆ, ಸಂಸ್ಕೃತಿ ಬಗ್ಗೆ ವಿಸ್ತಾರ ವಿವರಣೆ ನೀಡುತ್ತಿದ್ದ.</p>


<div class="wp-block-image">
<figure class="aligncenter size-full is-resized"><img decoding="async" src="https://peepalmedia.com/wp-content/uploads/2022/12/image-48.png" alt="" class="wp-image-18738" width="383" height="288" srcset="https://peepalmedia.com/wp-content/uploads/2022/12/image-48.png 213w, https://peepalmedia.com/wp-content/uploads/2022/12/image-48-150x113.png 150w" sizes="(max-width: 383px) 100vw, 383px" /></figure></div>


<p><strong>ಅಜ್ಮೇರ್ ದರ್ಗಾ&#8230;.</strong></p>



<p>ಅಜ್ಮೇರ್ ಪ್ರವಾಸ ಹೋಗುವವರ ಮೊದಲ ಆಕರ್ಷಣೆ ಅಜ್ಮೇರ್ ದರ್ಗಾವೇ ಆಗಿರುತ್ತದೆ. ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಸಮಾಧಿಯೇ ಈ ಅಜ್ಮೇರ್ ದರ್ಗಾ. ಇಸ್ಲಾಮಿನ ನಂಬಿಕೆ ಪ್ರಕಾರ ಜೀವಂತ ಮನುಷ್ಯರಾಗಲಿ, ಸಮಾಧಿಗಳಾಗಲಿ ಪೂಜನೀಯರಲ್ಲವಂತೆ; ಆದರೆ ಸೂಫಿಗಳ ದರ್ಗಾಗಳು ಎಲ್ಲ ಧರ್ಮೀಯರು ಹೋಗಬಹುದಾದ, ಪ್ರಾರ್ಥಿಸಬಹುದಾದ ಸ್ಥಳಗಳು. ಹದಿಮೂರನೇ ಶತಮಾನದ ಈ ಸಂತನ ದರ್ಗಾ ದಿನಕ್ಕೆ ಲಕ್ಷಾಂತರ ಜನರನ್ನು ಆಕರ್ಷಿಸುತ್ತದೆ. ನಮ್ಮ ಉತ್ತರ ಕರ್ನಾಟಕದ ಬಹುತೇಕ ಊರುಗಳಲ್ಲಿ ದರ್ಗಾಗಳಲ್ಲಿ ಸಕ್ಕರೆ ಓದಿಸುವ ಇಸ್ಲಾಮೇತರರ ಶ್ರದ್ಧೆ ರೂಢಿಯಲ್ಲಿದೆ. ಕೆಲವು ದರ್ಗಾಗಳಲ್ಲಿ&nbsp; ಮಹಿಳೆಯರಿಗೆ ಪ್ರವೇಶವಿಲ್ಲ; ಆದರೆ ಅಜ್ಮೇರ್ ದರ್ಗಾದಲ್ಲಿ ಈ ಷರತ್ತಿಲ್ಲ. 13 ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಹಲವು ದೊರೆಗಳ ಕಾಲಘಟ್ಟಗಳಲ್ಲಿ ಈ ದರ್ಗಾ, ಮಸೀದಿ ಇತ್ಯಾದಿಗಳ ಕಟ್ಟೋಣಿಕೆ ನಡೆದಿದೆ. ದೆಹಲಿ ಸುಲ್ತಾನೇಟಿನ ಇಲ್ತಮಶ್ ಕಾಲದಲ್ಲಿ ಮೊದಲ ನಿರ್ಮಾಣ ಜರುಗಿತಂತೆ. ನಂತರ ಅಕ್ಬರ್, ಜಹಾಂಗೀರ್, ಷಹಜಹಾನ್ ಮತ್ತು ರಜಪೂತ ದೊರೆಗಳು ಕೈಜೋಡಿಸಿದ್ದಾರೆ. ಅಕ್ಬರ್ ತನ್ನ ಆಳ್ವಿಕೆಯ ಕಾಲದಲ್ಲಿ ಸುಮಾರು 14 ಸಾರ್ತಿ ಆಗ್ರಾದಿಂದ ಆಜ್ಮೇರ್ ಗೆ ಬರಿಗಾಲಲ್ಲಿ ನಡೆದು ಬಂದು ಪ್ರಾರ್ಥಿಸಿದ್ದನಂತೆ. ಆಗ ದೊರೆಯ ಬರವಿಗೆಂದೇ ದಾರಿಯುದ್ದಕ್ಕೂ ತಂಗುದಾಣಗಳನ್ನು ನಿರ್ಮಿಸಲಾಗಿತ್ತಂತೆ. ಅಕ್ಬರ್ ಕಾಲದಲ್ಲಿ ದರ್ಗಾಗೆ ಕೊಡುಗೆಯಾಗಿ ನೀಡಲ್ಪಟ್ಟ ದೊಡ್ಡ ಬೋಗುಣಿಗಳಿವೆ. ಅದರಲ್ಲಿ ಒಂದಂತೂ ಇಪ್ಪತ್ತು ಅಡಿ ಸುತ್ತಳತೆ ಮತ್ತು ಸುಮಾರು ಹದಿನೈದು ಅಡಿ ಆಳವಿದೆ. ಈ ಬೋಗುಣಿಯ ಬಳಿ ನಿಂತು ನಾನು- ದಿನೇಶ್ ಚರ್ಚಿಸುವಾಗ ಕನ್ನಡದ ದನಿಯೊಂದು ಕಿವಿಗೆ ಬಿತ್ತು. ಇವತ್ತು ಹಬ್ಬ ಸಾರ್.. ಅಂತ. ಆತ ಬೆಂಗಳೂರಿನಿಂದ ಅಂದಿನ ವಿಶೇಷ ಪ್ರಾರ್ಥನೆಗೆ ಬಂದ ಹುಡುಗ. ನಾವಿಬ್ಬರೂ ಕನ್ನಡದಲ್ಲಿ ಮಾತನಾಡುತ್ತಿದ್ದುದು ಕೇಳಿ ಅವನೂ ಮಾತಿಗೆ ಸೇರಿದ್ದ. ಅಂದು ಮಳೆ ಸುರಿಯುತ್ತಲೇ ಇತ್ತು. ಜನ ತುಂಬಿ ಕೋಡಿ ಬಿದ್ದಿತ್ತು. ದರ್ಗಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಮಸೀದಿ ತುಂಬಿ ತುಳುಕುತ್ತಿತ್ತು. ಆಗ ಮದ್ಯಾಹ್ನದ ವಿಶೇಷ ನಮಾಝ್ ಅಂತೆ. ಅದೂ ಅಲ್ಲದೆ ಅಂದು ಪೈಗಂಬರರ ಜನ್ಮದಿನವೂ ಅಂತೆ. ಇವೆಲ್ಲವುಗಳ ಜತೆಗೆ ಬೆಟ್ಟದ ತಪ್ಪಲಲ್ಲಿರುವ ಆ ದರ್ಗಾಗೆ ಮಾಡಿದ ರಸ್ತೆಗಳೆಲ್ಲ ಐದು ಶತಮಾನ ಹಿಂದಿನವು. ಅವೆಲ್ಲ ಈಗ ಕಿಷ್ಕಿಂದೆಯಾಗಿವೆ.</p>



<p>ಅಜ್ಮೇರ್ ತಲುಪುತ್ತಿದಂತೆಯೇ ನಮ್ಮ ಡ್ರೈವರಣ್ಣ ಹೇಳಿಬಿಟ್ಟ‌. ಇಂದು ಪೂರ ರಶ್ಯು, ಇಲ್ಲಿಂದ ಒಂದು ಆಟೋ ಹಿಡಿದರೆ ಸೀದ ದರ್ಗಾ ಹತ್ತಿರ ಒಯ್ಯುತ್ತಾನೆ. ನಡೆದೇ ಹೋದರೆ ತಡವಾಗಬಹುದು ಎಂದು.ಹಾಗೇ ಮಾಡಿದೆವು. ಆಟೋವಾಲ ನಾವು ಇಳಿಯೋಹೊತ್ತಿಗೆ ಹತ್ತು ಸಾರ್ತಿ ಹೇಳಿದ ಪರ್ಸು ಹುಷಾರು ಎಂದು. ಅಲ್ಲಿ ಕಾಲಿಡಲೂ ತೆರಪಿಲ್ಲದಂತೆ ಜನವಿದ್ದುದೇನೊ ನಿಜವೇ ಆಗಿತ್ತು. ದರ್ಗಾದ ಎದುರು ರಸ್ತೆಯಲ್ಲಿ ಹಲವು ಅಂಗವಿಕಲರು ಭಕ್ತಾದಿಗಳಲ್ಲಿ ಕರುಣೆ ಹುಟ್ಟಿಸಿ ಭಿಕ್ಷೆ ಪಡೆಯಲು ಆ ಮಳೆಯಲ್ಲೇ ಹೊರಳುತ್ತಿದ್ದುದು ಸೋನೆಮಳೆಯ ಗಲೀಜೂ ಸೇರಿ ರೇಜಿಗೆ ಹುಟ್ಟಿಸುತ್ತಿತ್ತು. ಅಕ್ಬರ್ ಕೊಡುಗೆಯಾಗಿ ನೀಡಿರುವ ಬೋಗುಣಿ‌ ಏಳು ಲೋಹಗಳಿಂದ ಮಾಡಿದ್ದಂತೆ. ಅದರಲ್ಲಿ ಕನಿಷ್ಟ ಐವತ್ತು ಸಾವಿರ ಜನರಿಗೆ ನೀಡಬಹುದಾದಷ್ಟು ಪ್ರಸಾದವನ್ನು ಒಮ್ಮೆಲೇ ತಯಾರಿಸುವರಂತೆ. ಕಳೆದ ಐನೂರು ವರ್ಷಗಳಿಂದ ಇರುವ ಅದಿನ್ನೂ ವರ್ಕಿಂಗ್ ಕಂಡೀಷನ್ನಿನಲ್ಲಿದೆ. ಅದನ್ನು ಶ್ರೀಲಂಕಾದಿಂದ ಮೂರು ತುಂಡುಗಳಂತೆ ಪ್ರತ್ಯೇಕವಾಗಿ ತರಿಸಿ, ಬೆಸೆಯಲಾಯ್ತೆಂದು ಹೇಳಲಾಗುತ್ತದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/12/image-49.png" alt="" class="wp-image-18739" width="362" height="483" srcset="https://peepalmedia.com/wp-content/uploads/2022/12/image-49.png 300w, https://peepalmedia.com/wp-content/uploads/2022/12/image-49-225x300.png 225w, https://peepalmedia.com/wp-content/uploads/2022/12/image-49-150x200.png 150w" sizes="auto, (max-width: 362px) 100vw, 362px" /></figure></div>


<p>ದರ್ಗಾ ಒಳಗೆ ಹೋಗಿ ಬರುವ ಶಾಸ್ತ್ರ ಮಾಡಿದೆವಾದರೂ ರಾಕ್ ಸ್ಟಾರ್ ಸಿನೆಮಾದಲ್ಲಿ ತೋರಿಸಿದಷ್ಟು ಆಕರ್ಷಕವಾಗಿ ಆ ಜಾಗ ಗೋಚರಿಸಲಿಲ್ಲ‌. ಇನ್ನೊಮ್ಮೆ ಎಂದಾದರೂ ಜನಬಾಹುಳ್ಯ ಕಡಮೆ ಇದ್ದಾಗ ನೋಡಬೇಕು ಎಂದುಕೊಂಡು ಹೊರಬಂದು ಕಾರು ಹೊಕ್ಕೆವು.</p>



<p><strong>ಅಕ್ಬರ್ ಸೆಕ್ಯುಲರ್ರೇ ಮತ್ತು ಡ್ರೈವರಣ್ಣಂಗೆ ಭಾಷಾ ವಿಜ್ಞಾನದ ಪಾಠ!</strong></p>



<p>ನಾವು ತಿರುಗಾಡಿದ ಏಳೆಂಟು ದಿನಗಳು ಬಹುತೇಕ ಉತ್ತರ ಭಾರತದ ದಿಲ್ಲಿ ಸುಲ್ತಾನರ ಮತ್ತು ಮುಘಲ್ ದೊರೆಗಳ ಆಳ್ವಿಕೆಯ ಪ್ರದೇಶ ಮತ್ತು ಸ್ಥಳ, ಕೋಟೆ, ಅರಮನೆ, ಗೋರಿ ಇತ್ಯಾದಿಗಳೇ ಆಗಿದ್ದರಿಂದ ಮತ್ತೆ ಮತ್ತೆ ಚರಿತ್ರೆಯ ವಿಚಾರಗಳು ನನ್ನ ಮತ್ತು ದಿನೇಶ್ ಅವರ ಮಾತುಕತೆಯಲ್ಲಿ ಪ್ರಸ್ತಾಪವಾಗುತ್ತಲೇ ಇದ್ದವು.</p>



<p>ಅಂದು ಅಜ್ಮೇರಿನಿಂದ ಜೈಪುರಕ್ಕೆ ಹೊರಟ ಮೂರು- ಮೂರೂವರೆ ತಾಸು ಚರ್ಚೆಗೀಡಾದ ಸಂಗತಿ ಅಕ್ಬರ್ನ ಸೆಕ್ಯುಲರಿಸಂ ಮತ್ತು ಔರಂಗಝೇಬನ ಕಮ್ಯೂನಲಿಸಂ. ದಿನೇಶ್ ಹಲವು ಸಾರ್ತಿ ಮಾತಿನ ನಡುವೆ ಅಕ್ಬರ್ ಸೆಕ್ಯುಲರ್ ಆದರೆ ಔರಂಗಝೇಬ್ ಕಮ್ಯೂನಲ್ ಎಂದು ಹೇಳುತ್ತಲೇ ಇದ್ದರು. ಈಗ ಸಮಯ ಸಿಕ್ಕ ಕಾರಣಕ್ಕೋ ಏನೊ ಮೊದಲ ಬಾರಿ ಪ್ರತಿಕ್ರಿಯಿಸಿದೆ. ಚರಿತ್ರಕಾರರ ಪ್ರಕಾರ ಅಕ್ಬರ್ ಸೆಕ್ಯುಲರ್ರೂ ಅಲ್ಲ ಔರಂಗಝೇಬ ಕಮ್ಯೂನಲ್ಲೂ ಅಲ್ಲ; ಅವರಿಬ್ಬರೂ ಭಾರತದ ಮಧ್ಯಕಾಲೀನ ದೊರೆಗಳಷ್ಟೇ.</p>



<p>ಈ ಸೆಕ್ಯುಲರ್ ಕಮ್ಯೂನಲ್ ಚರ್ಚೆ ಭಾರತದ ಚರಿತ್ರೆಯಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಾ ಬಂದಿದೆ.&nbsp; ಅದೂ ಅಲ್ಲದೆ ಈ &#8216;ಭೂತ&#8217; ವರ್ತಮಾನವನ್ನೂ ನಿರ್ದೇಶಿಸುತ್ತಿದೆ. ಅಂದರೆ ಕೆಲವು ಭೂತ ಕಾಲದ ದೊರೆಗಳ ಆಳ್ವಿಕೆಯನ್ನು ಅಥವಾ ಹಳವಂಡಗಳನ್ನು ಇಂದಿನ ಅದೇ ಧರ್ಮಶ್ರದ್ಧೆಯ ಜನರ ಮೇಲೆ ಹೇರಲಾಗುತ್ತಿದೆ. ಎಲ್ಲಿಯವರೆಗೆಂದರೆ ಯಾರೊ ನಟಿ ತನ್ನ ಮಗನಿಗೆ ತೈಮೂರ ಎಂದು ಹೆಸರಿಟ್ಟರೆ, ಅದೇ ಹೆಸರಿನ ಒಬ್ಬ ಹಿಂದೆ ಭಾರತದ ಮೇಲೆ ಧಾಳಿ ಮಾಡಿದ್ದ ಎಂದು ಹೇಳುವಷ್ಟರ ಮಟ್ಟಿಗೆ. ರೊಮಿಲಾ ಥಾಪರ್ ಅವರು ತಮ್ಮ ಲೇಖನವೊಂದರಲ್ಲಿ ಈ ಇತಿಹಾಸ ರಚನಾಕ್ರಮದ ವೈಚಿತ್ರ್ಯವನ್ನು ಕುರಿತು ಚರ್ಚಿಸಿದ್ದಾರೆ. ಅವರು ಹೇಳುವುದಿಷ್ಟು. ಅಕ್ಬರನನ್ನು ಉದಾರವಾದಿ ಎಂದು ಚಿತ್ರಿಸಿದಷ್ಟೂ ಔರಂಗಝೇಬನನ್ನು ಅನುದಾರವಾದಿ ಅಥವಾ ಕಟ್ಟರ್ ಎಂದು ಚಿತ್ರಿಸಲು ಇಂಬು ದೊರೆಯುತ್ತದೆ ಎಂಬುದು. ಅಷ್ಟಕ್ಕೂ ಕಳೆದ ಸಾವಿರ ವರ್ಷಗಳಿಂದ ಇಲ್ಲಿನ ಬಹುತೇಕ ಪ್ರದೇಶವನ್ನು ಆಳ್ವಿಕೆ ಮಾಡಿದವರು ಎಂದೂ ಬಹುಸಂಖ್ಯಾತರಾಗಿರಲಿಲ್ಲ‌. ತನ್ನ ಧಾರ್ಮಿಕ ಶ್ರದ್ಧೆಯ ವಿಚಾರವನ್ನು ಉಳಿದೆಲ್ಲರ ಮೇಲೆ ಹೇರುವುದು ಅಷ್ಟು ಸರಳವಾಗಿರಲಿಲ್ಲ. ಸಾಧ್ಯವೂ ಇರಲಿಲ್ಲ. ಇದಕ್ಕೆ ಅವರು ದೆಹಲಿ ಸುಲ್ತಾನನೊಬ್ಬನ ಹೇಳಿಕೆಯನ್ನು ಉಲ್ಲೇಖಿಸುತ್ತಾರೆ. ನನ್ನ ಕಣ್ಣ ಮುಂದೆಯೇ ತನ್ನ ಶ್ರದ್ಧೆಗೆ ವಿರುದ್ಧವಾದ ಆಚರಣೆಗಳನ್ನು ಮಾಡುವುದನ್ನು ತಾನು ತಡೆಯಲಾರದವನಾಗಿರುವೆ‌ ಎಂಬ ಅರ್ಥದ್ದು. ಅದಕ್ಕೆ ಕಾರಣ ಸರಳ. ಆಡಳಿತದ ನೂರಾರು ಹಂತ, ವಿಭಾಗ, ಪ್ರಜೆಗಳಲ್ಲಿ ಇದ್ದವರೆಲ್ಲ ಬಹುತೇಕ ದೊರೆ ಪ್ರತಿನಿಧಿಸುತ್ತಿದ್ದ ಸಾಂಸ್ಥಿಕ ಧರ್ಮಕ್ಕೆ ಸೇರಿದವರಾಗಿರಲಿಲ್ಲ. ಆದರೆ ಅವರೆಲ್ಲದ ಸಹಕಾರವಿಲ್ಲದೆ ದೊರೆ ಉಸಿರಾಡಲೂ ಸಾಧ್ಯವಿರಲಿಲ್ಲ. ಈ ಲೆಕ್ಖದಲ್ಲಿ ಅಕ್ಬರ್ ನ ಕೆಲವು ನೀತಿಗಳು ಉದಾರವಾಗಿ ಗೋಚರಿಸುತ್ತವೆ. ಔರಂಗಜೇಬ್ ನ ನೀತಿಗಳು ಕಟುವಾಗಿ ಗೋಚರಿಸುತ್ತವೆ. ಈತ ಹಲವು ಹಿಂದೂ ಮಂದಿರಗಳನ್ನು ನಾಶ ಮಾಡಿದನೆಂದು ಹೇಳುವ ವಿಚಾರದ ಕುರಿತು ಪುಸ್ತಕವೊಂದಿದೆ( ಔರಂಗಝೇಬನ ಆದೇಶಗಳು ಮತ್ತು ಹಿಂದೂ ಮಂದಿರಗಳು ಎಂದೇನೊ ಅದರ ಶೀರ್ಷಿಕೆ. ಲೋಹಿಯಾ ಪ್ರಕಾಶನ ,ಬಳ್ಳಾರಿ) ಅದರ ಪ್ರಕಾರ ಆತ ಸಾವಿರಾರು ಸಂಖ್ಯೆಯ ಪ್ರಾರ್ಥನಾಲಯಗಳನ್ನು ಒಡೆಸಿಹಾಕಿದ ಎಂದು ಹೇಳುವುದು ನಿಜವಂತೆ; ಆದರೆ ಹಾಗೆ ಒಡೆಸಿ ಹಾಕಿದವಲ್ಲಿ ಅನಧಿಕೃತ ಎಂದು ಪರಿಗಣಿಸಲ್ಪಟ್ಟ ಮಸೀದಿ, ದರ್ಗಾ, ಬಸದಿ, ಮಂದಿರ ಎಲ್ಲವೂ ಇದ್ದವಂತೆ. ಅಂದರೆ ಈ ಮಂದಿರ ನಾಶದ ಥಿಯರಿ ಆಡಳಿತಾತ್ಮಕ ಸಂಗತಿಯೇ ಹೊರತು ಆತನ ಧಾರ್ಮಿಕ ನೀತಿಯ ಭಾಗವಲ್ಲ. ಹೀಗೆ ಸಾಗುತ್ತಿದ್ದ ಚರ್ಚೆ ಒಂದೇ ಏಟಿಗೆ ಅಜ್ಮೇರಿನಿಂದ ಬಿಜಾಪುರಕ್ಕೆ ಶಿಫ್ಟ್ ಆಗಿಬಿಡಬೇಕೆ!</p>



<p>ದಿನೇಶ್ ಈ ವಿಚಾರ ಹಿಡಿದು ಧರ್ಮಗಳಿಗೂ ರಾಜಪ್ರಭುತ್ವಗಳ ನಡುವಿನ ಯುದ್ಧಗಳಿಗೂ ಸಂಬಂಧವಿಲ್ಲವೆ ಎಂದು ರಕ್ಕಸ ತಂಗಡಗಿಗೆ ಜಂಪ್ ಮಾಡಿದರು. ಖಂಡಿತ ಸಂಬಂಧವಿದೆ; ಆದರೆ ರಕ್ಕಸ ತಂಗಡಗಿ ಯುದ್ಧಕ್ಕೆ ಧರ್ಮ ಅನ್ನೋದು ಪ್ರಾಥಮಿಕ ಕಾರಣವಾಗಿರಲಿಲ್ಲ ಎಂದೆ. ಹೇಗೆಂದರೆ ಚರಿತ್ರೆಯ ಪ್ರಕಾರ ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳೆರಡೂ ಹದಿನಾಲ್ಕನೇ ಶತಮಾನದಲ್ಲಿ ರೂಪುಗೊಂಡವು. ಈ ಎರಡೂ ಸಾಮ್ರಾಜ್ಯಗಳ‌ ನಡುವೆ ಹಲವು ಯುದ್ಧಗಳು ಸಂಭವಿಸಿವೆ, ಅದು ಸಹಜ ಕೂಡ. ಆ ಎಲ್ಲ ಸಂಘರ್ಷಕ್ಕೆ ಯಾವುದೇ ಎರಡು ಸಾಮ್ರಾಜ್ಯಗಳ ನಡುವಿನ ವಿಸ್ತರಣೆಯ ಉದ್ದೇಶವಿದೆಯೇ ಹೊರತು ಧರ್ಮ ಕಾರಣವಾಗಿರಲಿಲ್ಲ ಎಂಬುದಕ್ಕೆ ಸಾವಿರ ಸಾಕ್ಷಿಗಳಿವೆ. ಆಗ ವಿಜಯನಗರದಲ್ಲಿ ಮುಸ್ಲಿಂ, ಸೈನಿಕರು, ಪ್ರಜೆಗಳೂ, ಮಂತ್ರಿಗಳೂ , ಸೇನಾಪತಿಗಳೂ ಇದ್ದಹಾಗೆ ಬಹಮನಿ ಶಾಹಿ ರಾಜ್ಯಗಳಲ್ಲಿಯೂ ಮುಸ್ಲಿಮೇತರ (ಆಗ ಹಿಂದೂ ಟರ್ಮ್ ಬಳಕೆಯಲ್ಲಿರಲಿಲ್ಲ) ಪ್ರಜೆಗಳು, ಸೈನಿಕರು, ಮಂತ್ರಿ, ಸೇನಾಪತಿಗಳೂ ಇದ್ದರು.‌</p>



<p>ಅಳಿಯ ರಾಮರಾಯನ ಕಾಲಕ್ಕೆ ಐದು ಶಾಹಿ ರಾಜ್ಯಗಳೊಂದಿಗೆ ಪ್ರತ್ಯೇಕ ವಾಗಿ ಹಲವು ಯುದ್ಧಗಳನ್ನು ಮಾಡಿದ್ದ ರಾಮರಾಯ ಪ್ರತೀ ಬಾರಿಯೂ ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟಿ ವಿಭಜಿಸಿ ಆಳುವ ನೀತಿ ಅನುಸರಿಸಿದ್ದ. ಇದನ್ನು ಒಂದು ಹಂತದಲ್ಲಿ ಅರ್ಥೈಸಿಕೊಂಡ ಐದೂ ಶಾಹಿ ರಾಜ್ಯಗಳ ದೊರೆಗಳೂ ಒಟ್ಟಾಗಿ ವಿಜಯನಗರದ ಎದುರು ಸೆಣಸಿದರು. ಅದರ ಪರಿಣಾಮವೇ ವಿಜಯನಗರದ ಪತನ‌. ಈ ಯುದ್ಧದಲ್ಲಿ ವಿಜಯನಗರದ ಕೆಲವು ಸೇನಾಪತಿಗಳು ತಮ್ಮ ಮಾತೃಸೈನ್ಯಕ್ಕೆ ದ್ರೋಹವೆಸಗಿದ್ದಕ್ಕೆ ದಾಖಲೆ ಸಿಗುತ್ತದೆ ಅದೂ ಕೂಡ ಅಂದಿನ ಕಾಲದ ಒಂದು ಫೆನೋಮೆನಾವೇ ಹೊರತು ಧರ್ಮ ಅದಕ್ಕೆ ಕಾರಣವಲ್ಲ. ಹೀಗಾಗಿ ಚರಿತ್ರೆಯ ಸಂಗತಿಗಳನ್ನು ಇಂದಿನ ರಾಜನೀತಿಯ ಹಿನ್ನೆಲೆಯಲ್ಲಿ ನೋಡಹೋಗುವುದು ಸಮಸ್ಯಾತ್ಮಕ ಎಂದೂ ಥಾಪರ್ ಅವರ ಪುಸ್ತಕ ಹುಡುಕಿ ಕೊಡುವೆ, ಓದಿನೋಡಿ ಎಂದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/12/image-50-1024x678.png" alt="" class="wp-image-18740" width="540" height="357" srcset="https://peepalmedia.com/wp-content/uploads/2022/12/image-50-1024x678.png 1024w, https://peepalmedia.com/wp-content/uploads/2022/12/image-50-300x199.png 300w, https://peepalmedia.com/wp-content/uploads/2022/12/image-50-768x509.png 768w, https://peepalmedia.com/wp-content/uploads/2022/12/image-50-150x99.png 150w, https://peepalmedia.com/wp-content/uploads/2022/12/image-50-696x461.png 696w, https://peepalmedia.com/wp-content/uploads/2022/12/image-50-1068x707.png 1068w, https://peepalmedia.com/wp-content/uploads/2022/12/image-50.png 1232w" sizes="auto, (max-width: 540px) 100vw, 540px" /></figure></div>


<p>&#8220;ಅಪ್ಪ ರೆಸ್ಟ್ ಗೆ ಹೋಗ್ಬೇಕು&#8221; ಎಂದ ಪ್ರಣತಿಯ ಡೈಲಾಗ್ ಬಹುಶಃ ನಮ್ಮ ಈ ಚರ್ಚೆಗೆ ಬ್ರೇಕು ಹಾಕಿರಬೇಕು. ಸುಜಾತ ಮತ್ತು ರೋಹಿಣಿ ಮೇಡಂ ಇಬ್ಬರಿಗೂ ಈ ಚರ್ಚೆ ಬೇಡವಾಗಿತ್ತು. ಕಾರಿನಲ್ಲಿ ಮೊದಲ ಸೀಟಲ್ಲಿ ದಿನೇಶೂ, ಕಡೇ ಸೀಟಲ್ಲಿ ನಾನೂ ಇದ್ದ ಕಾರಣ ನಮ್ಮೀ ಚರ್ಚೆಯ ಧಾಳಿಯಿಂದ ಯಾರೂ ತಪ್ಪಿಸಿಕೊಳ್ಳುವಂತಿರಲಿಲ್ಲ!</p>



<p>ಇಷ್ಟೇಲ್ಲಾ ಆಗುವ ಹೊತ್ತಿಗೆ ಡ್ರೈವರ್ ಕಡೆ ತಿರುಗಿ ನಮ್ಮ ಮಾತುಗಳು ನಿಮಗೆ ಅರ್ಥವಾದುವ ಎಂದು ಕೇಳಿದೆವು. ಅದಕ್ಕೆ ಅವನೆಂದಾ, ಸಾರ್ ದೇಶದ ನಾನಾ ಕಡೆಯಿಂದ ಬಂದ ಜನರ ಮಾತುಗಳನ್ನ ಕೇಳಿದೀನಿ. ನಿಮ್ಮ ಮಾತು ಚೂರೂ ಅರ್ಥವಾಗಲ್ದು ಎಂದ. ಆಗ ನಾನು ದಿನೇಶ್ ಇಬ್ರೂ ಸೇರಿ ಇಂಡೋ ಆರ್ಯನ್, ದ್ರಾವಿಡ ಭಾಷೆಗಳ‌ ವ್ಯತ್ಯಾಸ ಮತ್ತು ಹಿಂದಿ, ಉರ್ದು ,ರಾಜಸ್ತಾನಿ ಭಾಷೆಗಳನ್ನು ಬಲ್ಲ ನಿಮಗೆ ಉತ್ತರ ಭಾರತದ ಭಾಷೆಗಳು ಏಕೆ ಅರ್ಥವಾಗುತ್ತವೆ ಮತ್ತು ದಕ್ಷಿಣದ ಭಾಷೆಗಳು ಏಕೆ ಅರ್ಥವಾಗುವುದಿಲ್ಲ ಎಂಬುದನ್ನೆಲ್ಲಾ ಕೊರೆದೆವು.</p>



<p>ಹಾಗೇ ನಾವು ತ್ರಿಭಾಷಾ ಸೂತ್ರದ ಪ್ರಕಾರ ಮೂರು ಭಾಷೆ ಕಲಿತರೆ ನೀವು‌ ಮತ್ತು ನಿಮ್ಮ ಮಕ್ಕಳು ಹಿಂದಿ &#8211; ಇಂಗ್ಲಿಷ್ ಎರಡೇ‌ ಕಲಿತೀರಿ ಅದಕ್ಕೆ ನಮ್ಮ ಭಾಷೆ ನಿಮಗೆ ಅರ್ಥವಾಗದಿದ್ದರೂ, ನಿಮ್ಮ ಮಾತು ನಮಗೆ ಸುಲಭವಾಗಿ‌ ಅರ್ಥವಾಗುತ್ತದೆ‌ ಎಂದೆವು. ಇವೆಲ್ಲ ಅವನಿಗೆ ಅಷ್ಟು ಅರ್ಥವಾಯ್ತೋ ಇಲ್ಲವೇ &#8216;ಅರ್ಥ&#8217; ಮುಖ್ಯ ಎಂದು ಸುಮ್ಮನೇ ಹ್ಞೂಂಗುಟ್ಟಿದನೋ ಕಾಣೆ. ಅಂತೂ ಮೇಷ್ಟ್ರು ಗಳೆಂದರೆ ಆಲ್ವೇಸ್ ಮೇಷ್ಟ್ರು ಗಳೇ ಸಿಕ್ಕೋರಿಗೆಲ್ಲ ಪಾಠವೇ&#8230;</p>



<p>ಕ್ಷೇಮವಾಗಿ ಹೋಟೆಲ್ ರೂಮು ತಲುಪಿಸಿದ ಅವನಿಗೆ ಶುಕ್ರಿಯಾ ಹೇಳಿ, ಮಾರನೇ ಮುಂಜಾನೆ ವಾಪಾಸು ಹೊರಡೋಕೆ ಸಣ್ಣ ಡ್ರಾಪ್ ಕೊಡಲು ಫಿಕ್ಸ್ ಮಾಡಿ ವಿದಾಯ ಹೇಳಿದೆವು. ಅಂದು ಸಂಡೇ. ನಿನ್ನೆ ಮಳೆಯ ಕಾರಣಕ್ಕೆ ಮೊಟಕುಗೊಳಿಸಿದ್ದ ಶಾಪಿಂಗನ್ನ ರೋಹಿಣಿ ಮೇಡಂ ಮತ್ತು ದಿನೇಶ್ ತಾರ್ಕಿಕ ಅಂತ್ಯ ಮುಟ್ಟಿಸಿದರು ಎಂದು ಅವರು ರಾತ್ರಿ ಬಿರಿಯಾನಿ ಪಾರ್ಸೆಲ್ ಹಿಡಿದು ಬಂದಾಗ ತಿಳಿಯಿತು.&nbsp; ಅಂತೂ ಇಂತೂ ಬೆಂಗಳೂರಿಗೆ ದಿನೇಶ್ ತಮ್ಮ ಕಾರು ಬರುವಂತೆ ವ್ಯವಸ್ಥೆ ಮಾಡಿ, ನಮ್ಮನ್ನು ಮನೆ ಬಾಗಿಲಿಗೆ ತಲುಪಿಸೋ ಹೊತ್ತಿಗೆ ನಾವು ಮನೆ ಬಿಟ್ಟು ಬರೋಬ್ಬರಿ ಹತ್ತು ದಿನಗಳಾಗಿತ್ತು.</p>



<p>(ಮುಕ್ತಾಯ)</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong><br>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</p>
]]></content:encoded>
					
		
		
			</item>
		<item>
		<title>ಆ ಕಾಲದ ಹೀರೊ ರಾಜೇಶ್‌ ಖನ್ನಾ ರಾಜಸ್ಥಾನದಲ್ಲಿ ಸಿಕ್ಕಾಗ &#8211; ತಿರುಗಾಡಿ ಬಂದೊ-8</title>
		<link>https://peepalmedia.com/tirugadi-bando-8/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 14 Dec 2022 08:17:07 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tirugaadi bando]]></category>
		<category><![CDATA[Travelogue]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18422</guid>

					<description><![CDATA[ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ [&#8230;]]]></description>
										<content:encoded><![CDATA[
<p class="has-text-align-center has-very-light-gray-to-cyan-bluish-gray-gradient-background has-background dropcapp1"><strong>ದೆಹಲಿ ಅಗ್ರಾ ಪ್ರಯಾಣದ ನಂತರ ಈ ಬಾರಿ ರೋಹಿತ್‌ ರಾಜಸ್ಥಾನದ ಜೈಪುರದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ದೇಶದ ಅತಿ ವಿಸ್ತಾರವುಳ್ಳ ರಾಜ್ಯದ ಕುರಿತಾದ ಪ್ರವಾಸಿ ಅನುಭವಗಳನ್ನು ಈ ಬಾರಿಯ ತಿರುಗಾಡಿ ಬಂದೋ ಅಂಕಣದಲ್ಲಿ ಓದಿ</strong></p>



<p></p>



<p>ನಮ್ಮ ಪಯಣ ಕಡೆಯ ಹಂತಕ್ಕೆ ಬಂದಿತ್ತು. ಕಡೆಯ ಊರುಗಳಲ್ಲೊಂದು ಜೈಪುರ. ವಾಸ್ತವದಲ್ಲಿ ಡೆಲ್ಲಿಯಿಂದಲೇ ನೇರ ಅಜ್ಮೇರ್ ಹೋಗಿ ಅಲ್ಲಿಯೇ ತಂಗಿ, ಪುಷ್ಕರ್ ಇತ್ಯಾದಿ ಓಡಿಯಾಡಿ ನಂತರ ಜೈಪುರಕ್ಕೆ ಬರುವ ಆಲೋಚನೆ ಇತ್ತು ಅಷ್ಟೇ ಅಲ್ಲ, ಟ್ರೇನ್ ಮತ್ತು ಗೆಸ್ಟ್ ಹೌಸ್ ಕೂಡ ಬುಕ್ ಮಾಡಿದ್ದೆವು. ಕಾರಣಾಂತರಗಳಿಂದ ಅವೆಲ್ಲ ರದ್ದಾಗಿ ಸದರಿ ಆಗ್ರಾ- ಜೈಪುರ್ ಯಾತ್ರೆ ಜೀವಪಡೆದಿತ್ತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-30-1024x576.png" alt="" class="wp-image-18424" srcset="https://peepalmedia.com/wp-content/uploads/2022/12/image-30-1024x576.png 1024w, https://peepalmedia.com/wp-content/uploads/2022/12/image-30-300x169.png 300w, https://peepalmedia.com/wp-content/uploads/2022/12/image-30-768x432.png 768w, https://peepalmedia.com/wp-content/uploads/2022/12/image-30-1536x864.png 1536w, https://peepalmedia.com/wp-content/uploads/2022/12/image-30-150x84.png 150w, https://peepalmedia.com/wp-content/uploads/2022/12/image-30-696x392.png 696w, https://peepalmedia.com/wp-content/uploads/2022/12/image-30-1068x601.png 1068w, https://peepalmedia.com/wp-content/uploads/2022/12/image-30.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-31-1024x576.png" alt="" class="wp-image-18425" srcset="https://peepalmedia.com/wp-content/uploads/2022/12/image-31-1024x576.png 1024w, https://peepalmedia.com/wp-content/uploads/2022/12/image-31-300x169.png 300w, https://peepalmedia.com/wp-content/uploads/2022/12/image-31-768x432.png 768w, https://peepalmedia.com/wp-content/uploads/2022/12/image-31-1536x864.png 1536w, https://peepalmedia.com/wp-content/uploads/2022/12/image-31-150x84.png 150w, https://peepalmedia.com/wp-content/uploads/2022/12/image-31-696x392.png 696w, https://peepalmedia.com/wp-content/uploads/2022/12/image-31-1068x601.png 1068w, https://peepalmedia.com/wp-content/uploads/2022/12/image-31.png 1600w" sizes="auto, (max-width: 1024px) 100vw, 1024px" /></figure>
</div>
</div>



<p>ಟ್ರೇನು ಆಗ್ರಾ ಬಿಟ್ಟಾಗ ಇನ್ನೂ ಬೆಳಕಿತ್ತು. ಬಹುಶಃ ತಾಸರ್ಧ ತಾಸಿನಲ್ಲಿ ಯೂಪಿ ದಾಟಿ ರಾಜಸ್ತಾನ್ ಪ್ರವೇಶ ಮಾಡಿದ್ದೆವು. ನೀರ ಪಸೆ ಆರಿ ಒಣ ಭೂಮಿಯೇ ಕಣ್ಣು ಹಾಯಿಸುವಷ್ಟು ದೂರವೂ ಕಾಣುತ್ತಿತ್ತು. ಅಲ್ಲಲ್ಲೇ ಊರುಗಳು. ಎಲ್ಲ ಊರುಗಳ ಬಳಿಯೂ ಯಾವುದೋ ಬೆಳೆ ಬೆಳೆಯಲು ಉತ್ತು ಬಿತ್ತನೆಗೆ ರೆಡಿಯಾದಂತಿದ್ದ ಚೊಕ್ಕ ಹೊಲಗಳು. ಜೋಳ, ಬಾರ್ಲಿ, ಗೋಧಿ ಹೆಚ್ಚು ಬೆಳೆಯಲಾಗುತ್ತದೆ ಎಂದು ಗೂಗಲ್ ಹೇಳಿತು.</p>



<p></p>



<p>ವರ್ಷಗಳ ಹಿಂದೆ ಓದಿದ್ದ ಇಂದಿರಾ ಕೆನಾಲ್ ನೆನಪಾಯ್ತು. ಪಂಜಾಬಿನ ಬಾಕ್ರಾನಂಗಲ್ ಡ್ಯಾಮಿನಿಂದ 1600 ಕಿ.ಮೀ. ಕೆನಾಲ್ ಅಗೆದು ರಾಜಸ್ತಾನಕ್ಕೆ ನೀರು ತರಲಾಗಿದೆ. ಇದು ಜಗತ್ತಿನ ಅತಿ ಉದ್ದದ ಮಾನವನಿರ್ಮಿತ ಕಾಲುವೆಗಳಲ್ಲಿ ಒಂದಂತೆ. ಅದು ಜೈಪುರದಿಂದ ದೂರವಂತೆ.</p>



<p></p>



<p>ಯೂಪಿ ಮತ್ತು ರಾಜಸ್ತಾನ್ ಎರಡೂ ದೇಶದಲ್ಲಿ ನಂಬರ್ ಒನ್ ರಾಜ್ಯಗಳು. ಒಂದು ಜನಸಂಖ್ಯೆಯಲ್ಲಿ ಮತ್ತೊಂದು ಭೂಪ್ರದೇಶದಲ್ಲಿ. ಯೂಪಿ ಬರೋಬ್ಬರಿ 23 ಕೋಟಿ ಜನರಿಂದ ತುಂಬಿತುಳುಕಿದರೆ, ರಾಜಸ್ತಾನ ಮೂರೂವರೆ ಲಕ್ಷ ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಕರ್ನಾಟಕದ ಒಂದೂಮುಕ್ಕಾಲು ಪಟ್ಟು. ದೇಶದ ಶೇಕಡ 10ರಷ್ಟು ಭೂಪ್ರದೇಶ ಈ ರಾಜ್ಯದ್ದು. ಅದರಲ್ಲಿ ದೇಶದ ಏಕೈಕ ನಿಸರ್ಗ ನಿರ್ಮಿತ ಮರುಭೂಮಿಯೂ ಸೇರಿದೆ ಎನ್ನಿ. (ಮಾನವ ನಿರ್ಮಿತ ಮರುಭೂಮಿ‌ ಕರ್ನಾಟಕದಲ್ಲಿಯೇ ಇದೆಯಂತೆ. ಅಂತರ್ಜಲ ಕಮ್ಮಿಯಾಗಿ, ನೀರ ಬಳಕೆ ಹೆಚ್ಚಾಗಿ ಬೆಳೆ ಬೆಳೆಯಲು ಬಾರದ ಬಂಜರು ನೆಲ ಸೃಷ್ಟಿಯಾಗಿರುವುದು)</p>



<p></p>



<p>ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಇಳಿದಾಗ ಸುಮಾರು ಎಂಟುಗಂಟೆ. ವಸತಿ ವಿಚಾರದಲ್ಲಿ ಬಹಳಷ್ಟು ಆನ್ಲೈನ್ ಸಂಶೋಧನೆ ಟ್ರೇನಿನಲ್ಲೇ ನಡೆಸಿದ್ದರೂ‌ ಬುಕ್ ಮಾಡಿರಲಿಲ್ಲ. ಚಿತ್ರಕಥಾ ಎಂಬ ವಿಚಿತ್ರ ಹೆಸರಿನ ಹೊಟೆಲೊಂದರ ರಿವ್ಯೂಗಳು ಗಮನ ಸೆಳೆಯುವಂತಿದ್ದವು. ಗೆಳೆಯ ಚಿದಂಬರ ಹೋಟೆಲೊಂದರ ಹೆಸರು ಸೂಚಿಸಿದ್ದರೂ‌ ಅದರ ಆನ್ಲೈನ್ ಬುಕಿಂಗ್ ಸಿಗದ ಕಾರಣ ಕೈಬಿಟ್ಟೆವು. ಲಗ್ಗೇಜ್ ಇದ್ದ ಕಾರಣ ಎರಡು ಆಟೋ ಹಿಡಿದು ಹೊರಟೆವು. ಜೈಪುರ ರಾಜ್ಯವೊಂದರ ರಾಜಧಾನಿಯಾದರೂ ಅಷ್ಟೇನೂ ಜನಸಂದಣಿ ನಿಲ್ದಾಣದಲ್ಲಿ ಇರಲಿಲ್ಲ. ಹೊರಗೆ ಕೂಡ. ನನಗೆ ತ್ರಿವೇಂಡ್ರಂ ನೆನಪಾಯ್ತು. ಅದೂ ಕೂಡ ಕೇರಳದ ರಾಜಧಾನಿಯಾಗಿದ್ದರೂ ಅದೇ ರಾಜ್ಯದ ಇತರ ನಗರಗಳಿಗಿಂತ ವಿರಳ ಜನಸಂಖ್ಯೆಯ ನಗರ. ಆಟೋದವರು ಚಿತ್ರಕಥಾಗೆ ಕರೆದೊಯ್ಯುವಾಗ ಅವರ ಬ್ರೋಕರ್ ಗಿರಿಯಿಂದ ಬಚಾವಾಗಲು ಈಗಾಗಲೇ ನಮಗೆ ಹೋಟೆಲ್ ಬುಕಿಂಗ್ ಆಗಿದೆ ಎಂದೆವು. ಎಷ್ಟಕ್ಕೆಂದಾಗ ಆನ್ಲೈನ್ ರೇಟನ್ನೇ ಅರುಹಿದೆವು, ಅದಕ್ಕವರು ಅಷ್ಟೇಕೆ ಕೊಟ್ಟಿರಿ; ಅದಕ್ಕಿಂತ ಕಡಮೆಗೆ ಅದೇ ಹೋಟೆಲ್ ಕೊಡಿಸುತ್ತಿದ್ದೆವು ಎಂದರು! ಅವರಿಗೆ ಮನದಲ್ಲೇ ಥ್ಯಾಂಕ್ಸ್ ಹೇಳಿ ಅದನ್ನೇ ಹಿಡಿದು ದಿನೇಶ್ ಚೌಕಾಸಿ ಮಾಡಿ ಒಂದಷ್ಟು ಉಳಿಸಿದರು. ಮೂರು ದಿನಕ್ಕೆ ಎರಡು ರೂಮು ಹಿಡಿದು ಫ್ರೆಶ್ ಆಗಿ ಊಟಕ್ಕೆ ಹೊರಡೋ ಹೊತ್ತಿಗೆ ಹೊಟೆಲಿನವ ತಮ್ಮದೆ ರೆಸ್ಟುರಾ‌ ಟೆರೇಸಿನಲ್ಲಿರುವುದಾಗಿಯೂ, ಅಲ್ಲಿ ಮೇಕೆ ಬಿರಿಯಾನಿ ಫೇಮಸ್ಸೆಂದು ಆಸೆ ಹುಟ್ಟಿಸಿದ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="760" src="https://peepalmedia.com/wp-content/uploads/2022/12/image-34-1024x760.png" alt="" class="wp-image-18428" srcset="https://peepalmedia.com/wp-content/uploads/2022/12/image-34-1024x760.png 1024w, https://peepalmedia.com/wp-content/uploads/2022/12/image-34-300x223.png 300w, https://peepalmedia.com/wp-content/uploads/2022/12/image-34-768x570.png 768w, https://peepalmedia.com/wp-content/uploads/2022/12/image-34-1536x1140.png 1536w, https://peepalmedia.com/wp-content/uploads/2022/12/image-34-150x111.png 150w, https://peepalmedia.com/wp-content/uploads/2022/12/image-34-485x360.png 485w, https://peepalmedia.com/wp-content/uploads/2022/12/image-34-696x517.png 696w, https://peepalmedia.com/wp-content/uploads/2022/12/image-34-1068x793.png 1068w, https://peepalmedia.com/wp-content/uploads/2022/12/image-34.png 1599w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-33-1024x576.png" alt="" class="wp-image-18427" srcset="https://peepalmedia.com/wp-content/uploads/2022/12/image-33-1024x576.png 1024w, https://peepalmedia.com/wp-content/uploads/2022/12/image-33-300x169.png 300w, https://peepalmedia.com/wp-content/uploads/2022/12/image-33-768x432.png 768w, https://peepalmedia.com/wp-content/uploads/2022/12/image-33-1536x864.png 1536w, https://peepalmedia.com/wp-content/uploads/2022/12/image-33-150x84.png 150w, https://peepalmedia.com/wp-content/uploads/2022/12/image-33-696x392.png 696w, https://peepalmedia.com/wp-content/uploads/2022/12/image-33-1068x601.png 1068w, https://peepalmedia.com/wp-content/uploads/2022/12/image-33.png 1600w" sizes="auto, (max-width: 1024px) 100vw, 1024px" /></figure>
</div>
</div>



<p>ಟೆರೇಸ್ ರೆಸ್ಟುರಾ ನಿಜವಾಗಿಯೂ ಚೆಂದವಿತ್ತು. ಹೊಟೆಲ್ ಕಟ್ಟಡ ಹಳತಾದರೂ ಚೆನ್ನಾಗಿ ಅಲಂಕರಿಸಿ ನೀಟಾಗಿ ಇಟ್ಟಿದ್ದರು. ಎರಡೂ ರೂಮುಗಳಿಗೂ ಪುಟ್ಟ ಬಾಲ್ಕನಿ ಕೂಡ ಇತ್ತು; ಆದರೆ ಎಸಿಗಳು ಪುರಾತನ ಕಾಲದವು. ಬಳಸದೆ ವಿಧಿ ಇರಲಿಲ್ಲ. ಪ್ರತೀ ಫ್ಲೋರಿನ ಗೋಡೆಗಳು ಮತ್ತು ರೂಮಿನ ಒಳಾವರಣ ಕೂಡ ಸುಂದರ ಚಿತ್ರಗಳು ಇಲ್ಲವೇ ಪೇಂಟಿಂಗ್‌ಗಳಿಂದ ಅಲಂಕೃತಗೊಂಡಿದ್ದವು.</p>



<p></p>



<p>ಮೆನು ಪಡೆದು ಬೆಲೆ ನೋಡಿ ಯಾಕೋ ಎಡವಟ್ಟೆನ್ನಿಸಿತು. ಮೂರು ಪೀಸ್ ಚಿಕನ್ ಇರುವ ಬಿರಿಯಾನಿಗೆ ಕೇವಲ 650!. ಕಾಸು ಉಳಿಸಲು ಒಂದು ಬೇಯಿಸಿದ ಮೊಟ್ಟೆ ಹೇಳಿದರೆ ಅದಕ್ಕೆ ಎಂಬತ್ತಂತೆ. ಬೇರೆಲ್ಲೋ ಹೋಗಿ‌ ಹುಡುಕಿ ತಿನ್ನುವಷ್ಟು ತಾಳ್ಮೆ ಇಲ್ಲದ ಕಾರಣ ಏನೋ ಒಂದಷ್ಟು ತಿಂದು ದಿನ ಮುಗಿಸಿದೆವು. ಮದ್ಯಾಹ್ನ ಆಗ್ರಾ ಬಿಡುವಾಗ ಬೇರೆ ಊಟಕ್ಕೆ&nbsp; ಅವಕಾಶವಾಗಿರಲಿಲ್ಲ.</p>



<p></p>



<p>ಮಾರನೇ ದಿನ ಎಲ್ಲಿಗೆಲ್ಲ ಹೋಗುವುದು ಎಂಬ ಚರ್ಚೆ ಊಟದ ಟೇಬಲ್ಲಿನಲ್ಲೇ ನಡೆಯಲಾಗಿ, ಎರಡೂ ಕುಟುಂಬಗಳು ತಮತಮಗೆ ತೋಚಿದಂತೆ ತೋಚಿದ ರೂಪದಲ್ಲಿ ಸುತ್ತುವುದು ಎಂದು ಅಖೈರು ಮಾಡಿ ವಿಶ್ರಮಿಸಿದೆವು. ಮುಂಜಾನೆ ಹೊತ್ತಿಗೆ ಮತ್ತೆ ಎಲ್ಲರೂ ಕಲೆತೇ ದಿನ ಆರಂಭಿಸಿದೆವೆನ್ನಿ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-35-1024x576.png" alt="" class="wp-image-18429" srcset="https://peepalmedia.com/wp-content/uploads/2022/12/image-35-1024x576.png 1024w, https://peepalmedia.com/wp-content/uploads/2022/12/image-35-300x169.png 300w, https://peepalmedia.com/wp-content/uploads/2022/12/image-35-768x432.png 768w, https://peepalmedia.com/wp-content/uploads/2022/12/image-35-1536x864.png 1536w, https://peepalmedia.com/wp-content/uploads/2022/12/image-35-150x84.png 150w, https://peepalmedia.com/wp-content/uploads/2022/12/image-35-696x392.png 696w, https://peepalmedia.com/wp-content/uploads/2022/12/image-35-1068x601.png 1068w, https://peepalmedia.com/wp-content/uploads/2022/12/image-35.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/12/image-37-576x1024.png" alt="" class="wp-image-18431" srcset="https://peepalmedia.com/wp-content/uploads/2022/12/image-37-576x1024.png 576w, https://peepalmedia.com/wp-content/uploads/2022/12/image-37-169x300.png 169w, https://peepalmedia.com/wp-content/uploads/2022/12/image-37-768x1365.png 768w, https://peepalmedia.com/wp-content/uploads/2022/12/image-37-864x1536.png 864w, https://peepalmedia.com/wp-content/uploads/2022/12/image-37-150x267.png 150w, https://peepalmedia.com/wp-content/uploads/2022/12/image-37-300x533.png 300w, https://peepalmedia.com/wp-content/uploads/2022/12/image-37-696x1237.png 696w, https://peepalmedia.com/wp-content/uploads/2022/12/image-37.png 900w" sizes="auto, (max-width: 576px) 100vw, 576px" /></figure>
</div>
</div>



<p><strong>ಈ ನಡುವೆ ನಂಗೆ ಅಂದಕಾಲತ್ತಿಲ್ ಹೀರೋ ರಾಜೇಶ್ ಖನ್ನ ದರ್ಶನವಾಯ್ತು ಸಲೂನೊಂದರಲ್ಲಿ.</strong></p>



<p></p>



<p>ರಾತ್ರಿ ಊಟ ಮುಗಿಸಿ ನಾನು ಎಟಿಮ್ ಹುಡುಕಿ, ದಿನೇಶ್ ಅವರ ಶ್ರೀಮತಿಯವರಿಗೆ ಮಾತ್ರೆ ಹುಡುಕಿ ಹೊರಬಿದ್ದೆವು. ನಂಗೆ ಎಟಿಎಮ್ ಸಿಗದಿದ್ದರೂ ಸಲೂನೊಂದು ಕಣ್ಣಿಗೆ ಬಿತ್ತು. ಇರೋ ಲಗ್ಗೇಜಿಗೆ ಹಡಪದ ಪೆಟ್ಟಿಗೆ ಕೂಡ ಏಕೆ ಸೇರಬೇಕು ಎಲ್ಲ ಊರಲ್ಲೂ ಸಲೂನು ಇರುತ್ತವೆಂದು ಹಾಗೇ ಬಂದಿದ್ದೆ. ಆಗ್ರಾದಲ್ಲಿ ಸಲೂನ್ ಸಂಶೋಧನೆ ಮಾಡಿ ಗೆಲ್ಲಲಾರದೆ ಕೈಚೆಲ್ಲಿದ್ದೆ. ಇಲ್ಲಿ ಸಲೂನು ಸಿಕ್ಕಿತು ಆದರೆ ಪರ್ಸಿನಲ್ಲಿ ನಯಾಪೈಸೆ ಕ್ಯಾಶ್ ಇಲ್ಲ. ಸಲೂನ್ ಅಜ್ಜನಿಗೆ ಕ್ಯಾಶ್ ಇಲ್ಲ ಫೋನ್ ಮೂಲಕ ಪೇ ಮಾಡುವೆ ಆಗಬಹುದೆ ಎಂದೆ. ಆಗಲಿ ಅನ್ತು. ಇನ್ಯಾರೋ ಗಿರಾಕಿ ಇದ್ದರು. ಅದೊಂದು ಹಳೇ ಕಟ್ಟಡ, ಅದರಲ್ಲೂ ಮೂಲೆ ಅರ್ಧಚಂದ್ರಾಕೃತಿಯ ಒಂದೇ ಸೀಟಿನ ಇಕ್ಕಟ್ಟಿನ ಸ್ಥಳ. ಗೋಡೆಯ ಮೇಲೆ ಹಳೇ ಕಾಲದ ಸಿನೆಮಾ ಹೀರೋ ಅವತಾರದ ಸ್ಮಾರ್ಟ್ ಹುಡುಗನ ಹಳೆಯ ಫೋಟೋ ಫ್ರೇಮುಗಳು. ಮತ್ತೆ ಮತ್ತೆ ನೋಡಿದ ಮೇಲೆ ಗುರುತಾಯ್ತು. ಅವೆಲ್ಲ ಅದೇ ತಾತನ ಯೌವನದ ಫೋಟೋಗಳು. ಅವಕ್ಕೆ ಕನಿಷ್ಟ ಅರ್ಧ ಶತಮಾನ ವಯಸ್ಸಾಗಿತ್ತು. ತಾತ ಏನೇನೊ ಹೇಳಲು ಯತ್ನಿಸಿದರೂ ನಾನು ಅರ್ಥ ಮಾಡಿಕೊಂಡು ಹ್ಞೂಂಗುಡುತ್ತಿದ್ದೆ. ಆಮೇಲೆ ಮಾತಿನ ನಡುವೆ ನಾನು ಕರ್ನಾಟಕದಿಂದ ಪ್ರವಾಸಕ್ಕೆ ಬಂದವನೆಂದು ಹೇಳಿದ ಮೇಲೆ ಇವನೊಂದಿಗೆ ಮಾತಾಡಿ ಪ್ರಯೋಜನವಿಲ್ಲವೆನಿಸಿ ಮಾತು ನಿಲುಗಡೆಗೆ ಬಂದವು ಅಷ್ಟು ಹೊತ್ತಿಗೆ ದಾಡಿ ಕೆಲಸವೂ ಪೂರೈಸಿತ್ತು. ಪೇಮೆಂಟ್ ಪಡೆಯಲು ತಾತ ಪಕ್ಕದ ಅಂಗಡಿಯವನಿಗೆ ಕೇಳಿದರೆ ಅವನು ಕೈಜಾಡಿಸಿಬಿಟ್ಟ. ಆಮೇಲೆ ಅಲ್ಲೇ ಪಾನೀಪೂರಿ ಮಾರುತ್ತಿದ್ದವ ಒಪ್ಪಿ ಹಣ ಪಡೆದ.</p>



<p></p>



<p>ಬೆಳಗ್ಗೆ ಹೊತ್ತಿಗೆ ಎರಡೂ ಕುಟುಂಬದವರೂ ತಾವು ನೋಡಬೇಕು ಎಂದುಕೊಂಡಿದ್ದ, ನೋಡಬಹುದಾದ ಸ್ಥಳಗಳ ಪಟ್ಟಿ ಮಾಡಿಕೊಂಡಿದ್ದೆವು; ಎರಡೂ ಸೇಮ್ ಟು ಸೇಮ್! ಒಟ್ಟಿಗೇ ತಿಂಡಿ ತಿಂದು ಅಲ್ಲಿಂದ ಆರಂಭಿಸುವುದೆಂದು ತೀರ್ಮಾನಿಸಿ ಸೌತ್ ರೆಸ್ಟುರಾವೊಂದಕ್ಕೆ ತಲುಪಿದೆವು. ದಿನೇಶ್ ಮಾತ್ರ ತಾವು ಲೋಕಲ್ ಫುಡ್&nbsp; ಸವಿಯುವುದಾಗಿ‌ ಹೋದರು, ಉಳಿದೈವರು ಸೌತ್ ಪ್ರೀತಿಯ ಭಾರವನ್ನು ಹೊರಲಾರದೆ ಹೊತ್ತೆವು. ನಮ್ಮ ಯೋಜನೆ ಪ್ರಕಾರ ಮೊದಲು ಅಂಬರ್ (ಅಮೆರ್) ಫೋರ್ಟ್ ನಂತರ ಉಳಿದವೆಲ್ಲ. ಆನ್ಲೈನಲ್ಲಿ ಎರಡೆರಡು ಸಾರ್ತಿ ಟ್ಯಾಕ್ಸಿ ಬುಕ್ ಮಾಡಿದರೂ ಬರಲು ನಿರಾಕರಿಸಿದರು; ಕಾರಣ ನಾವು ಡ್ರಾಪ್‌ ಮಾತ್ರ ಬೇಕೆಂದು‌ ಕೇಳಿದೆವು. ಕೇವಲ ಡ್ರಾಪಿಗೆ ಬಂದರೆ ಲಾಸ್ ಆಗುವುದೆಂಬುದು ಅವರ‌ ದೂರು. ವಾತಾವರಣ ಹಿತವಾಗಿತ್ತು, ಮಳೆ ಮೋಡವಿದ್ದರೂ ಮಳೆ ಇಲ್ಲ, ಬಿಸಿಲಿನ ಹವಾ ಕೂಡ ಇಲ್ಲ. ಬಿಸಿಲ ನಾಡಿನಲ್ಲಿ ಗಿರಿಧಾಮದ ಅನುಭವ ಯಾರಿಗುಂಟು ಯಾರಿಗಿಲ್ಲ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-32-1024x576.png" alt="" class="wp-image-18426" srcset="https://peepalmedia.com/wp-content/uploads/2022/12/image-32-1024x576.png 1024w, https://peepalmedia.com/wp-content/uploads/2022/12/image-32-300x169.png 300w, https://peepalmedia.com/wp-content/uploads/2022/12/image-32-768x432.png 768w, https://peepalmedia.com/wp-content/uploads/2022/12/image-32-1536x864.png 1536w, https://peepalmedia.com/wp-content/uploads/2022/12/image-32-150x84.png 150w, https://peepalmedia.com/wp-content/uploads/2022/12/image-32-696x392.png 696w, https://peepalmedia.com/wp-content/uploads/2022/12/image-32-1068x601.png 1068w, https://peepalmedia.com/wp-content/uploads/2022/12/image-32.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="768" height="1024" src="https://peepalmedia.com/wp-content/uploads/2022/12/image-39-768x1024.png" alt="" class="wp-image-18433" srcset="https://peepalmedia.com/wp-content/uploads/2022/12/image-39-768x1024.png 768w, https://peepalmedia.com/wp-content/uploads/2022/12/image-39-225x300.png 225w, https://peepalmedia.com/wp-content/uploads/2022/12/image-39-1152x1536.png 1152w, https://peepalmedia.com/wp-content/uploads/2022/12/image-39-150x200.png 150w, https://peepalmedia.com/wp-content/uploads/2022/12/image-39-300x400.png 300w, https://peepalmedia.com/wp-content/uploads/2022/12/image-39-696x928.png 696w, https://peepalmedia.com/wp-content/uploads/2022/12/image-39-1068x1424.png 1068w, https://peepalmedia.com/wp-content/uploads/2022/12/image-39.png 1200w" sizes="auto, (max-width: 768px) 100vw, 768px" /></figure>
</div>
</div>



<p>ಅರ್ಧ ತಾಸು ಸಮಯ ವ್ಯರ್ಥ ಮಾಡುವ ಹೊತ್ತಿಗೆ ನಮಗೆ ಅರ್ಥವಾದ ಸಂಗತಿ‌, ದಿನದ ಲೆಕ್ಕದ ಟ್ಯಾಕ್ಸಿ ಹಿಡಿದರಷ್ಟೇ ನಾವು ಅಂಬರ್ ಫೋರ್ಟ್ ತನಕ ಹೋಗಲು ಸಾಧ್ಯವೆಂಬುದು. ಕಡೆಗೆ ಒಬ್ಬ ಆಟೋವಾಲಾ ಟ್ರಾವೆಲ್ ಏಜೆಂಟನ ಬಳಿ ಕರೆದೊಯ್ದ. ಅಲ್ಲಿ ಒಂದು ಇನ್ನೋವಾವನ್ನು ದಿನದ ಓಡಾಟಕ್ಕೆ ಬುಕ್ ಮಾಡಿದೆವು. ಅವನೊಂದು ಬ್ರೋಷರ್ ಕೊಟ್ಟ. ಅದರಲ್ಲಿ ಎಂಟು ಜಾಗ ಗುರುತು‌ ಮಾಡಿದ್ದ. ವರ್ತ್ ಅನ್ನಿಸಿತು. ಈ ಎಂಟರ ಬಂಡವಾಳ&nbsp; ಮದ್ಯಾಹ್ನದ ಹೊತ್ರಿಗೆ‌ ಅರ್ಥವಾಯ್ತು. ಡ್ರೈವರ್ ಹೊಂಟವನೇ ಅಲ್ಲಿ ಬೇಡ ಇಲ್ಲಿ ಹೋಗೋಣ ಎಂದು ಕ್ಯಾತೆ ಶುರು ಮಾಡಿದ; ನಾನು ನಂಗೆ ಗೊತ್ತಿರುವ ಸಮಸ್ತ ಹಿಂದಿಯನ್ನೂ ಬಳಸಿ &#8220;ನೋಡಣ್ಣ ನಾವು ಹೇಳಿದಲ್ಲಿ ಕರೆದೊಯ್ಯಿ, ಇಲ್ಲವೇ ಈಗಲೇ ಇಳಿಸಿಬಿಡು ಒಪ್ಪಂದ ರದ್ದು ಮಾಡುವ&#8221; ಎಂದೆ. ಅದೇ‌ ಕೊನೆ. ಮುಂದಿನ ಮೂರು ದಿನ ಅವ ನಮ್ಮೊಂದಿಗೇ ಅಂಟಿಕೊಂಡು ಕಳೆದ ದೂಸರಾ ಮಾತನಾಡದೆ.</p>



<p></p>



<p>ದಾರಿಯಲ್ಲೇ ಹವಾಮಹಲ್ ನೋಡಿಕೊಂಡುಬಿಡಿ ಎಂದ, ನಿರಾಕರಿಸಿ ಅಂಬರ್ ಕೋಟೆಗೆ ದೌಡಾಯಿಸಲು ಹೇಳಿದೆವು. ನಡುವೆ ಜಲ್ ಮಹಲ್ ಸಿಕ್ಕರೂ‌ ನಿಲ್ಲಲಿಲ್ಲ. ಅಂಬರ್ ಕೋಟೆ ಬೆಟ್ಟದ ಮೇಲಿದೆ. ಜೈಪುರ್ ದಾಟುತ್ತಿದ್ದಂತೇ ಬೆಟ್ಟ ಸಾಲಿನ ಕಡೆ ಪಯಣ. ಆಗ ಶುರುವಾದ ಮಳೆ ಅಂದು ಇಡೀ ದಿನ ಬಿಡದೆ ತೊಟ್ಟಿಕ್ಕುತ್ತಲೇ ಇತ್ತು. ಆ ಮಳೆಯ ರೌದ್ರಾವತಾರ ನೋಡಿ , ಟುಕ್ ಟುಕ್ (ಅಲ್ಲಿ ಆಟೋಗಳಿಗೆ ಹಾಗಂತಾರೆ) ಹಿಡಿದು ಎಲ್ಲ ಎಕ್ಸ್‌ಪ್ಲೋರ್‌ಮಾಡುವ ಉತ್ಸಾಹದಲ್ಲಿದ್ದ ದಿನೇಶ್ ಇದೇ ಸರಿಹೋಯ್ತು. ಹಾಗೆ ಬಂದಿದ್ದರೆ ಮಳೆ ಹೊಡೆತಕ್ಕೆ ಸಿದ್ಧತೆ ಇಲ್ಲದ ನಾವು ತೋಯ್ದು ತೊಪ್ಪೆಯಾಗಬೇಕಿತ್ತು‌ ಅಂದರು.</p>



<p></p>



<p>ಅಂಬರ್ ಕೋಟೆಯ ಕೆಳಗೇ ಒಂದು ಸರೋವರವಿದೆ. ಮೆಟ್ಟಿಲ ದಾರಿ ದೂರವಿಲ್ಲದಿದ್ದರೂ ಮೇಲೆ ಕೋಟೆಯ ಬಳಿ ಪಾರ್ಕಿಂಗ್ ಜಾಗಕ್ಕೆ ಹೋಗಲು ಮುಂದೆ ಹೋಗಿ ಸುತ್ತಿ ಬರಬೇಕು. ಕಲ್ಲುಗಳನ್ನು ನೆಲಕ್ಕೆ ಸಮನಾಗಿ ಹೂತು ಮಾಡಿದ ಅಚ್ಚುಕಟ್ಟಾದ ರಸ್ತೆ. ಮಳೆ‌ನೀರು ಇಡಿ ರಸ್ತೆ ತುಂಬ ಹರಿಯುತ್ತಿತ್ತು. ತುದಿ ಮುಟ್ಟುವ ಹೊತ್ತಿಗೆ ಮಳೆ ಕೊಂಚ ನಿಲುಗಡೆಗೆ ಬಂದಂತೆ‌ ಕಂಡಿತು.</p>



<p>ಜೈಪುರದ ಸ್ಮಾರಕಗಳ ಟಿಕೆಟ್ ಬಿಡಿಬಿಡಿಯಾಗಿ ಕೊಂಡರೆ ಕೊಂಚ ಜೇಬಿಗೆ ಭಾರ ಎನಿಸಿದರೂ ಕಾಂಬೊ ಟಿಕೆಟ್ ಲಭ್ಯವಿವೆ. ಅದರಂತೆ ನಾವು ಐದಾರು ಸ್ಥಳಗಳ ಪ್ರವೇಶಕ್ಕೆ ಒಮ್ಮೆಗೇ ಮತ್ತು ಒಂದೇ ಟಿಕೆಟ್ ಖರೀದಿಸಿದ್ದೆವು. ಗಣೇಶ ಗೇಟ್ ಮೂಲಕ ಪ್ರವೇಶ ಪಡೆದು ಒಳಹೊಕ್ಕೆವು. ನಿರ್ವಹಣೆ ಚೆನ್ನಾಗಿದೆ. ಅಮೆರ್ ಊರ ಬಳಿ ಇರುವ ಕಾರಣ ಅದೇ ಹೆಸರಿನಿಂದಲೂ ಅಂಬಾ (ದುರ್ಗಾ) ದೇವಿಯ ಕಾರಣಕ್ಕೆ ಅಂಬರ್ ಎಂತಲೂ ಕರೆಯಲಾಗುವುದಂತೆ. ಮೂಟ ಸರೋವರ ಒಂದೆಡೆಗಿದೆ. ಆ ಸರೋವರ ಅರಮನೆ ಬಳಿಯ ಬಾಲ್ಕನಿಯಿಂದ ಸುಂದರವಾಗಿ ಕಾಣುತ್ತದೆ. ಸರೋವರದ ನಡುವಿನ ತೋಟದ ಪ್ರಯೋಗ ಮುಘಲ್ ಹೂದೋಟದ ನಕಲೆಂದೂ, ಅಯಶಸ್ವಿಯೆಂದೂ ಗೈಡ್ ಒಬ್ಬ ಯಾರಿಗೊ ಹೇಳುತ್ತಿದ್ದುದು ಆಯಾಚಿತವಾಗಿ ಕಿವಿಗೆ ಬಿತ್ತು. ಅದೇ ಬಾಲ್ಕನಿಯಲ್ಲಿ ಇಣುಕಿ ಕೋಟೆಯ ಕೆಳಗಿನ ದಾರಿ ನೋಡುವಾಗ ಸಾಲಾಗಿ ಆನೆಗಳು ತೆರಳುತ್ತಿದ್ದುದು ಕಂಡಿತು. ಪ್ರವಾಸೋದ್ಯಮ ರಾಜಸ್ತಾನದ ಆದಾಯದ ಮುಖ್ಯ ಮೂಲಗಳಲ್ಲೊಂದು ಎಂದು ಕಾಣುತ್ತದೆ. ಆನೆ ಸವಾರಿ ಮತ್ತು ಅವುಗಳ ಸಾಕಾಣಿಕೆಯ ಏರುಪೇರಿನ ಬಗ್ಗೆ ಹಲವು ದೂರುಗಳಿವೆಯಂತೆ.‌ ಮಳೆಯ ಕಾರಣ ಅರಮನೆ ಅಷ್ಟೇನೂ ಝಗಮಗಿಸಿದಂತೆ ಕಾಣುತ್ತಿರಲಿಲ್ಲ. ಬಿಸಿಲಲ್ಲೇ ಹೆಚ್ಚು ಹೊಳಪೆಂದು ಕಾಣುತ್ತದೆ. ಅರಮನೆ ಒಳಹೊಕ್ಕರೆ ಎಡಕ್ಕೆ ಶೀಶ್ ಮಹಲ್ ಇದೆ. ಬಹುತೇಕ ಗಾಜಿನ ಚೂರು (ಕನ್ನಡಿ)ಗಳಿಂದ ಅಲಂಕೃತವಾದ ಅದು ಆಕರ್ಷಕವಾಗಿದೆ. ಗಾಜಿನ ಚೂರುಗಳಲ್ಲಿ ಕಾಣುವ ತಮ್ಮ ಸೆಲ್ಫಿ ಬಿಂಬವನ್ನು ಹಲವು ಪ್ರವಾಸಿಗರು ಸೆರೆಹಿಡಿದುಕೊಳ್ಳುತ್ತಿದ್ದರು.</p>



<p>ಇಲ್ಲಿನ ಬಹುತೇಕ ರಚನೆಗಳ ಮೇಲೆ ಮುಘಲ್ ವಾಸ್ತುಶಿಲ್ಪದ ಪ್ರಭಾವವಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅದೂ ಅಲ್ಲದೆ ಇಲ್ಲಿನ ದಿವಾನ್ ಇ ಆಮ್ ಮತ್ತು ದಿವಾನ್ ಇ ಖಾಸ್ ಕೂಡ ಇದನ್ನೇ ಪುಷ್ಠೀಕರಿಸುತ್ತವೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/12/image-40-768x1024.png" alt="" class="wp-image-18434" width="366" height="488" srcset="https://peepalmedia.com/wp-content/uploads/2022/12/image-40-768x1024.png 768w, https://peepalmedia.com/wp-content/uploads/2022/12/image-40-225x300.png 225w, https://peepalmedia.com/wp-content/uploads/2022/12/image-40-1152x1536.png 1152w, https://peepalmedia.com/wp-content/uploads/2022/12/image-40-150x200.png 150w, https://peepalmedia.com/wp-content/uploads/2022/12/image-40-300x400.png 300w, https://peepalmedia.com/wp-content/uploads/2022/12/image-40-696x928.png 696w, https://peepalmedia.com/wp-content/uploads/2022/12/image-40-1068x1424.png 1068w, https://peepalmedia.com/wp-content/uploads/2022/12/image-40.png 1200w" sizes="auto, (max-width: 366px) 100vw, 366px" /></figure></div>


<p>ಜೈಗಡ್ ಕೋಟೆ ಕೂಡ ಇದೇ ಕೋಟೆಗೆ ಹೊಂದಿಕೊಂಡಂತಿದೆ. ಎರಡೂ ಸೇರಿ ಕಿ.ಮೀ. ಗಟ್ಟಲೆ ಕೋಟೆ ಅರಾವಳಿ ಬೆಟ್ಟಸಾಲನ್ನು ಅಲಂಕರಿಸಿವೆ. ಜೈಗಡ್ ಕೋಟೆಯನ್ನು ಒಂದುವೇಳೆ ಶತ್ರುಗಳಿಂದ ರಾಜಪರಿವಾರ ಪಾರಾಗುವ ಸಂದರ್ಭಕ್ಕೆಂದು ಇದಕ್ಕೆ ಸೇರಿಸಲಾಗಿತ್ತು ಎನ್ನಲಾಗುತ್ತದೆ. 1727ರಲ್ಲಿ ಎರಡನೇ ಸವಾಯಿ ಜೈಸಿಂಗ್ ರಾಜಧಾನಿಯನ್ನು ಜೈಪುರಕ್ಕೆ ವರ್ಗಾಯಿಸುವವರೆಗೆ ಇದುವೇ ರಾಜಧಾನಿಯಂತೆ. ಕೋಟೆ ಮೊದಲು ನಿರ್ಮಾಣವಾದ್ದು ರಾಜಾ ಮಾನ್ ಸಿಂಗ್ ಕಾಲದಲ್ಲಂತೆ. ಸುಖ್ ನಿವಾಸ್ ಎಂಬ ಮತ್ತೊಂದು ರಚನೆ ಇದ್ದು ಅಲ್ಲಿ ಬಿರುಬಿಸಿಲಲ್ಲೂ ತಂಪಾದ ಗಾಳಿ ಬೀಸುವ ವ್ಯವಸ್ಥೆ ಮಾಡಿದ್ದರಂತೆ. ಎಲ್ಲವನ್ನೂ ಸುತ್ತಾಡಿ ಒಂದೆರಡು ಟನೆಲ್ ಮಾದರಿಯ ದಾರಿಗಳಲ್ಲಿ ಕೂಡ ಸಾಗಿ‌ ಬರುವ ದಾರಿಯಲ್ಲಿ ಪ್ರವಾಸೋದ್ಯಮ ಇಲಾಖೆಯ ಒಂದಷ್ಟು ಅಂಗಡಿಗಳೂ ಸಿಕ್ಕವು.</p>



<p></p>



<p>ರಾಜಸ್ತಾನದ ಎಲ್ಲ ಕಡೆಯೂ ಕಾಣುವ ಒಂದು ಸಾಮನ್ಯ ಸಂಗತಿ ಸಂಗೀತ‌,ನೃತ್ಯ ಮತ್ತು ಬೊಂಬೆ ನಾಟಕ ಕಲೆಗಳದ್ದು. ಅಂಬರ್ ಕೋಟೆಯ ಹೊರಬರುವ ಮೆಟ್ಟಿಲ ಮೇಲೆ ಜೋರು ಮಳೆಯ ನಡುವೆಯೂ ಹಲವು‌ ಕಲಾವಿದರು ತಮ್ಮ ಪಾಡಿಗೆ ತನ್ಮಯರಾಗಿ ತಮ್ಮ ಸಂಗೀತ ವಾದ್ಯ ನುಡಿಸುತ್ತಿದ್ದರು. ಇಂಥದೇ ದೃಶ್ಯವನ್ನು ಇನ್ನೂ ಹಲವೆಡೆ ಕಂಡೆವು.</p>



<p></p>



<p><strong>ಮಿಸ್ ಆದ ಪನ್ನಾ ಮೀನಾ ಕ ಕುಂಡ್.</strong></p>



<p></p>



<p>ಜೋರು ಮಳೆಯ ಅವಸರದಲ್ಲಿ ಪನ್ನಾ ಮೀನಾ ಕಾ ಕುಂಡ್ ಬಳಿಯೇ ಮುಂದೆ ಹೋದೆವು. ನಂತರ ಡ್ರೈವರಣ್ಣ ಈಗ ಅಲ್ಲಿಗೆ ಹೋಗಬೇಕೆಂದರೆ ಮತ್ತೆ ಹತ್ತನ್ನೆರಡು ಕಿ.ಮೀ. ಹಿಂದೆ ಹೋಗಬೇಕು ಎಂದ. ನಮಗೆ ಒಂದೇ ದಿನದಲ್ಲಿ ಜೈಪುರದ ಇನ್ನೂ ಹಲವು ಜಾಗಗಳ ದರ್ಶನ ಆಗಬೇಕಿದ್ದರಿಂದ ಒತ್ತಾಯಿಸದೆ ಸುಮ್ಮನಾದೆವು. ಈ ಕುಂಡ ನಮ್ಮ ಹಂಪಿಯ ಕಲ್ಲು ಬಾವಿಯಂತಿದೆ (ಗೂಗಲಲ್ಲಿ ಕಂಡದ್ದು)</p>



<p></p>



<p>ಅಂಬರ್ ಕೋಟೆಯಿಂದ ತಿರುಗಿ ಬರುವ ದಾರಿಯಲ್ಲಿ ಜಲ್ ಮಹಲ್ ಬಳಿ ನಿಂತೆವು. ಆ ಹೊತ್ತಿಗೆ ಮಳೆಯೂ ನಿಲುಗಡೆಗೆ ಬಂದಿತ್ತು. ಮನ್ ಸಾಗರ್ ಸರೋವರದ ನಡುವೆ ತೇಲುತ್ತಿರುವಂತೆ ಕಾಣುವ ಇದು ನಿರ್ಮಾಣವಾದ್ದು 1699ರಲ್ಲಿಯಂತೆ. ನಂತರ ಹಲವು ಸಾರ್ತಿ ಪುನರುಜ್ಜೀವನಗೊಂಡಿದೆಯಂತೆ. ಒಟ್ಟು ಐದು ಮಹಡಿಗಳ ಕಟ್ಟಡದಲ್ಲಿ ಸಧ್ಯ ಕಾಣುವುದು ಒಂದು/ ಇಲ್ಲವೆ ಎರಡು ಮಹಡಿಗಳು ಮಾತ್ರ. ಇದರ ಒಳಾಂಗಣ ಮತ್ತು ಸಮೀಪ ದರ್ಶನಕ್ಕೆ ದೋಣಿ ವ್ಯವಸ್ಥೆ ಇದೆಯಂತೆ. ಸಧ್ಯ ನಾವು ಹೋದಾಗ ಅಂತ ವ್ಯವಸ್ಥೆ‌ ಇದ್ದಂತೇನೂ ಕಾಣಲಿಲ್ಲ‌. ಜಲ್ ಮಹಲ್ ನ ಒಳಂಗಣ‌‌ ಮತ್ತು ಮೇಲ್ಚಾವಣಿಯ ತೋಟದ ಇಮೇಜುಗಳು ಅಂತರ್ಜಾಲದಲ್ಲಿ ಕಾಣಸಿಗುತ್ತವೆ.</p>



<p></p>



<p>ಜಲ್ ಮಹಲ್ ಅನ್ನು ಹಿನ್ನೆಲೆಯಾಗಿರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಅಭಿಮಾನಿಗಳ ನೂಕುನುಗ್ಗಲೇ ಇತ್ತು‌. ಜೊತೆಗೆ ಸಾಂಪ್ರದಾಯಿಕ ರಾಜಸ್ಥಾನಿ ವೇಷಭೂಷಣ ಬೇರೆ ಬಾಡಿಗೆಗೆ ಲಭ್ಯ. ಅಂತೂ ಇಲ್ಲಿ ನಮ್ಮ ತಂಡದ ಭಾರೀ ಫೋಟೋ ಸೆಷನ್ ಜರುಗಿತು.</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p>ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</p>
]]></content:encoded>
					
		
		
			</item>
		<item>
		<title>ಬಿಟ್ಟೆನೆಂದರೂ ಬಿಡದ ತಾಜ್ &#8211; ತಿರುಗಾಡಿ ಬಂದೊ &#8211; 7‌ </title>
		<link>https://peepalmedia.com/tirugadi-bando-rohith-agasarahalli-column-7/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 07 Dec 2022 12:56:57 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<guid isPermaLink="false">https://peepalmedia.com/?p=17845</guid>

					<description><![CDATA[ಆಗ್ರಾದಲ್ಲಿ ಸಹ ಮೂರು ನಿಲ್ದಾಣಗಳಿವೆ. ಮೇನ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಮತ್ತು ಫೋರ್ಟ್ ಸ್ಟೇಷನ್. ನಮ್ಮ ರಿಸರ್ವೇಷನ್ ಇದ್ದುದು ಫೋರ್ಟ್ ಸ್ಟೇಷನ್; ಆದರೆ ನಾವು ಹೊರಟಿದ್ದು ಕಂಟೋನ್ಮೆಂಟ್ ಸ್ಟೇಷನ್ ಕಡೆಗೆ! ಟ್ಯಾಕ್ಸಿ ರೇಲ್ವೇ ಸ್ಟೇಶನ್‌ ನಿಂದ ತುಂಬಾ ದೂರದಲ್ಲಿತ್ತು. ಮುಂದೇನಾಯ್ತು ಓದಿ..ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣದ&#160; ಏಳನೆಯ ಕಂತು ತಾಜ್ ಮಹಲ್ ಆವರಣ ಹೊಕ್ಕರೆ ಹೊರಬಾರಲು ಮನಸ್ಸೇ ಬಾರದು. ಎಷ್ಟು ಕಂಡರೂ ತಣಿಯದ ಸೊಬಗು. ಮಕ್ಕಳು ಮರಿ, ಹಸಿವುಗಳು ಅರ್ಧ ಹಗಲು ಮುಗಿಯೋ ಹೊತ್ತಿಗೆ ಹೊರಗೆಳೆತಂದವು. [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ಆಗ್ರಾದಲ್ಲಿ ಸಹ ಮೂರು ನಿಲ್ದಾಣಗಳಿವೆ. ಮೇನ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಮತ್ತು ಫೋರ್ಟ್ ಸ್ಟೇಷನ್. ನಮ್ಮ ರಿಸರ್ವೇಷನ್ ಇದ್ದುದು ಫೋರ್ಟ್ ಸ್ಟೇಷನ್; ಆದರೆ ನಾವು ಹೊರಟಿದ್ದು ಕಂಟೋನ್ಮೆಂಟ್ ಸ್ಟೇಷನ್ ಕಡೆಗೆ! ಟ್ಯಾಕ್ಸಿ ರೇಲ್ವೇ ಸ್ಟೇಶನ್‌ ನಿಂದ ತುಂಬಾ ದೂರದಲ್ಲಿತ್ತು. ಮುಂದೇನಾಯ್ತು ಓದಿ..ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣದ&nbsp; ಏಳನೆಯ ಕಂತು</strong></h5>



<p>ತಾಜ್ ಮಹಲ್ ಆವರಣ ಹೊಕ್ಕರೆ ಹೊರಬಾರಲು ಮನಸ್ಸೇ ಬಾರದು. ಎಷ್ಟು ಕಂಡರೂ ತಣಿಯದ ಸೊಬಗು. ಮಕ್ಕಳು ಮರಿ, ಹಸಿವುಗಳು ಅರ್ಧ ಹಗಲು ಮುಗಿಯೋ ಹೊತ್ತಿಗೆ ಹೊರಗೆಳೆತಂದವು. ಬೆಳಗಿನ ಉಪಹಾರದ ಸೌತ್ ಇಂಡಿಯನ್ ಪ್ರಯೋಗ ಕೈಕೊಟ್ಟಿದ್ದರಿಂದ ಈಗ ಆಗ್ರಾ ಬಿರಿಯಾನಿ ತಲಾಶಿಗಿಳಿದೆವು. ಹೊರಬಂದು ಒಂದು ಮಟ್ಕಾ ಚಾ ಕುಡಿಯೋ ಹೊತ್ತಿಗೆ ಆಟೋದ ಸಲ್ಮಾನ್ ನಮಗಾಗಿ ಕಾಯುತ್ತಿದ್ದ. (ಉತ್ತರ ಪ್ರದೇಶ ರಾಜಸ್ತಾನಗಳಲ್ಲಿ ಮಣ್ಣಿನ ಲೋಟದ ಮಟ್ಕಾ ಟೀ ಭಾರೀ ಜನಪ್ರಿಯವಿದ್ದಿರಬೇಕು.‌ ರಾಜಸ್ತಾನದಲ್ಲಂತೂ ಹಿತ್ತಾಳೆ ಪಾತ್ರೆಯಲ್ಲಿ ತಯಾರಿಸುವ ಚಾ ಕುಡಿದೇ ರುಚಿಯನ್ನು ಅನುಭವಿಸಬೇಕು)</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-25-1024x576.png" alt="" class="wp-image-17859" srcset="https://peepalmedia.com/wp-content/uploads/2022/12/image-25-1024x576.png 1024w, https://peepalmedia.com/wp-content/uploads/2022/12/image-25-300x169.png 300w, https://peepalmedia.com/wp-content/uploads/2022/12/image-25-768x432.png 768w, https://peepalmedia.com/wp-content/uploads/2022/12/image-25-1536x864.png 1536w, https://peepalmedia.com/wp-content/uploads/2022/12/image-25-150x84.png 150w, https://peepalmedia.com/wp-content/uploads/2022/12/image-25-696x392.png 696w, https://peepalmedia.com/wp-content/uploads/2022/12/image-25-1068x601.png 1068w, https://peepalmedia.com/wp-content/uploads/2022/12/image-25.png 1600w" sizes="auto, (max-width: 1024px) 100vw, 1024px" /></figure>



<p>ಒಳ್ಳೆಯ ಬಿರಿಯಾನಿ ಹೋಟೆಲಿಗೆ ಒಯ್ಯಲು ಸಲ್ಮಾನ್‌ಗೆ ಹೇಳಿದೆವು. ಆತ ಎಲ್ಲಿಗೋ ಒಯ್ಯುತ್ತಿದ್ದವನು ಮಾತು ಮುಂದುವರೆಸುತ್ತಾ‌ ಹಾದಿ ಬದಲಿಸಿ ಒಂದು ಕಡೆ ಒಯ್ಯುವೆ, ಆ ಏರಿಯಾ ಅಷ್ಟು ಚೆನ್ನಾಗಿಲ್ಲ, ಆದರೆ ಹೋಟೆಲಿಗೆ ಒಳ್ಳೇ ಹೆಸರಿದೆ ಅಂದ. ಅವನು ಹೇಳಿದಂತೇ‌ ಇತ್ತು ಪರಿಸ್ಥಿತಿ. ಮಟನ್ ಬಿರಿಯಾನಿ ಭಾಳ ವಿಶೇಷದ್ದೇನೂ ಅಲ್ಲದಿದ್ದರೂ ಪರವಾಗಿಲ್ಲ, ತೃಪ್ತಿಕರ. ಊಟ ಮುಗಿಸಿದವರೇ ಆಗ್ರಾ ಕೋಟೆ ಕಡೆಗೆ ದಂಡೆತ್ತಿ ಹೋದೆವು. ಅದೂ ಮುಗಿದರೆ ಇಂದೇ ಇತ್ಮದ್ ಉದ್ ದೌಲ ಕೂಡ ನೋಡಿ ಮುಗಿಸುವ ಇರಾದೆಯಿತ್ತು. ಆಗ್ರಾ ಕೋಟೆ ಮುಟ್ಟೋ ಹೊತ್ತಿಗೆ ಮಳೆ ಮರೆಯಾಗಿ ಬಿಸಿಲು ಕಾಯುತ್ತಿತ್ತು. ಟಿಕೆಟ್ ಕೌಂಟರಿನಲ್ಲಿ ಎರಡೆರಡು ಟಿಕೆಟ್ ಖರೀದಿಸ ಬೇಕಿತ್ತು. ಒಂದು ಆರ್ಕಿಯಾಲಜಿ ಇಲಾಖೆಯದು, ಮತ್ತೊಂದು ಆಗ್ರಾ ಡೆವಲಪ್‌ಮೆಂಟ್ ಅಥಾರಿಟಿಯದು. ನಮ್ಮ ಅಧಿಕಾರಶಾಹಿಯ ಅಧಿಕ ಪ್ರಸಂಗತನ ಹೀಗೇ ಇರೋದು. ಎರಡೂ ಸೇರಿಸಿ ಒಟ್ಟಿಗೇ ಕೊಟ್ಟು ಬಂದ ಹಣ ಹಂಚಿಕೊಳ್ಳುವುದ ಬಿಟ್ಟು ಬರೋ ಪ್ರವಾಸಿಗಳ ತಲೆ ತಿನ್ನೋ ಆಲೋಚನೆ ಇದು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-vertically-aligned-bottom is-layout-flow wp-block-column-is-layout-flow" style="flex-basis:33.33%">
<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/12/image-12-1024x576.png" alt="" class="wp-image-17846" width="247" height="138" srcset="https://peepalmedia.com/wp-content/uploads/2022/12/image-12-1024x576.png 1024w, https://peepalmedia.com/wp-content/uploads/2022/12/image-12-300x169.png 300w, https://peepalmedia.com/wp-content/uploads/2022/12/image-12-768x432.png 768w, https://peepalmedia.com/wp-content/uploads/2022/12/image-12-1536x864.png 1536w, https://peepalmedia.com/wp-content/uploads/2022/12/image-12-150x84.png 150w, https://peepalmedia.com/wp-content/uploads/2022/12/image-12-696x392.png 696w, https://peepalmedia.com/wp-content/uploads/2022/12/image-12-1068x601.png 1068w, https://peepalmedia.com/wp-content/uploads/2022/12/image-12.png 1600w" sizes="auto, (max-width: 247px) 100vw, 247px" /></figure>
</div>



<div class="wp-block-column is-layout-flow wp-block-column-is-layout-flow" style="flex-basis:66.66%">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-13-1024x576.png" alt="" class="wp-image-17847" srcset="https://peepalmedia.com/wp-content/uploads/2022/12/image-13-1024x576.png 1024w, https://peepalmedia.com/wp-content/uploads/2022/12/image-13-300x169.png 300w, https://peepalmedia.com/wp-content/uploads/2022/12/image-13-768x432.png 768w, https://peepalmedia.com/wp-content/uploads/2022/12/image-13-1536x864.png 1536w, https://peepalmedia.com/wp-content/uploads/2022/12/image-13-150x84.png 150w, https://peepalmedia.com/wp-content/uploads/2022/12/image-13-696x392.png 696w, https://peepalmedia.com/wp-content/uploads/2022/12/image-13-1068x601.png 1068w, https://peepalmedia.com/wp-content/uploads/2022/12/image-13.png 1600w" sizes="auto, (max-width: 1024px) 100vw, 1024px" /></figure>
</div>
</div>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow"><div class="wp-block-image">
<figure class="aligncenter size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/12/image-14-576x1024.png" alt="" class="wp-image-17848" srcset="https://peepalmedia.com/wp-content/uploads/2022/12/image-14-576x1024.png 576w, https://peepalmedia.com/wp-content/uploads/2022/12/image-14-169x300.png 169w, https://peepalmedia.com/wp-content/uploads/2022/12/image-14-768x1365.png 768w, https://peepalmedia.com/wp-content/uploads/2022/12/image-14-864x1536.png 864w, https://peepalmedia.com/wp-content/uploads/2022/12/image-14-150x267.png 150w, https://peepalmedia.com/wp-content/uploads/2022/12/image-14-300x533.png 300w, https://peepalmedia.com/wp-content/uploads/2022/12/image-14-696x1237.png 696w, https://peepalmedia.com/wp-content/uploads/2022/12/image-14.png 900w" sizes="auto, (max-width: 576px) 100vw, 576px" /></figure></div></div>



<div class="wp-block-column is-layout-flow wp-block-column-is-layout-flow">
<figure class="wp-block-image alignfull size-large"><img loading="lazy" decoding="async" width="1024" height="760" src="https://peepalmedia.com/wp-content/uploads/2022/12/image-15-1024x760.png" alt="" class="wp-image-17849" srcset="https://peepalmedia.com/wp-content/uploads/2022/12/image-15-1024x760.png 1024w, https://peepalmedia.com/wp-content/uploads/2022/12/image-15-300x223.png 300w, https://peepalmedia.com/wp-content/uploads/2022/12/image-15-768x570.png 768w, https://peepalmedia.com/wp-content/uploads/2022/12/image-15-1536x1140.png 1536w, https://peepalmedia.com/wp-content/uploads/2022/12/image-15-150x111.png 150w, https://peepalmedia.com/wp-content/uploads/2022/12/image-15-485x360.png 485w, https://peepalmedia.com/wp-content/uploads/2022/12/image-15-696x517.png 696w, https://peepalmedia.com/wp-content/uploads/2022/12/image-15-1068x793.png 1068w, https://peepalmedia.com/wp-content/uploads/2022/12/image-15.png 1599w" sizes="auto, (max-width: 1024px) 100vw, 1024px" /></figure>
</div>
</div>



<p>ಆಗ್ರಾ ಒಂದು ಕಾಲದಲ್ಲಿ ಮುಘಲರ ರಾಜಧಾನಿ‌ ಕೂಡ. ಈಗಿರುವ ಕೋಟೆಯನ್ನು ಕಟ್ಟಿಸಿದಾತ ಅಕ್ಬರನಂತೆ. ಅಕ್ಬರನ ಕಾಲದ ಕಟ್ಟೊಣಿಕೆಗಳಲ್ಲಿ ಇದು ಮಹತ್ವದ್ದು. ದೆಹಲಿಯ ಕೆಂಪುಕೋಟೆಗಿಂತ ವಿಸ್ತಾರವಾಗಿಯೂ ಸುಂದರವಾಗಿಯೂ, ಅಚ್ಚುಕಟ್ಟಾಗಿಯೂ ಇರುವ ಕೋಟೆ ಆಗ್ರಾದ ಈ ಕೆಂಪುಕೋಟೆ. ಪ್ರವೇಶ ದ್ವಾರದ ಪಕ್ಕದ ಕಂದಕದ ಆಳ ನೆಲ ಕೂಡ ಸ್ವಚ್ಛವಾಗಿತ್ತು. ಹಾಗೇ ತಾಜ್ ಆವರಣ ಕೂಡ. ಈ ತಾರೀಫು ಪುರಾತತ್ವ ಇಲಾಖೆಯ ಸುಪರ್ದಿಯ ಸ್ಮಾರಕಗಳಿಗೆ ಅನ್ವಯಿಸುತ್ತಿತ್ತೇ ಹೊರತು ಆಗ್ರಾ ನಗರಕ್ಕಲ್ಲ. ಊರ ತುಂಬಾ ಎಲ್ಲಿ ನೋಡಿದರೂ ಗಲೀಜು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಣ್ಣ ಟಿಪ್ಪಣಿ ಹಾಕಿದ್ದಕ್ಕೆ ಗೆಳೆಯನೊಬ್ಬ ಇದರಲ್ಲೂ ರಾಜಕೀಯ ಕಂಡುಹಿಡಿದು ವಾಟ್ಸಾಪಿನಲ್ಲಿ ಜಗಳಕ್ಕೆ ಬಂದಿದ್ದ!</p>



<p>ಕೋಟೆಯ ಹೊರಗಿನ ವೃತ್ತದಲ್ಲಿ ಶಿವಾಜಿಯ ಪುತ್ಥಳಿಯೊಂದಿದೆ. ಈ ಕೋಟೆಯಲ್ಲಿಯೇ ಔರಂಗಝೇಬ ಶಿವಾಜಿಯನ್ನು ಬಂಧಿಸಿಟ್ಟಿದ್ದಂತೆ.‌ ಕೋಟೆಯೊಳಗೆ ಸುಮಾರು ಇನ್ನೂರು ವರ್ಷಗಳ ಅವಧಿಯ ರಚನೆಗಳು ಹರಡಿ ಕೊಂಡಿವೆ. ಕೋಟೆ ಬಹಳ ಆಕರ್ಷಕವಾಗಿದೆ. ಒಳಹೊಕ್ಕು ಬೆಟ್ಟದಂತಿರುವ ಜಾಗಕ್ಕೆ ಏರಿ ಹೋದರೆ ಒಂದೊಂದೇ ಸ್ಮಾರಕಗಳು ತಮ್ಮ ಕಥೆ ಹೇಳುತ್ತವೆ. ಆರಂಭದಲ್ಲಿಯೇ ಅಕ್ಬರನ ಈಗಿಲ್ಲದ ಅರಮನೆಯೊಂದಿದೆ. ಸುಮಾರು ೧೫೬೫ ರ ಹೊತ್ತಿಗೆ ನಿರ್ಮಾಣವಾದ (ಬಹುಶಃ ಮರು ನಿರ್ಮಾಣ) ಕೋಟೆಯಿದು. ಅದೇ ಹೊತ್ತಿಗೆ ಅಥವಾ ಹಿಂಚುಮುಂಚಿನ ಅವಧಿಯಲ್ಲಿಯೇ ಅಕ್ಬರನ ವಿಸ್ತಾರವಾದ ಅರಮನೆ ಇತ್ತಂತೆ. ಈಗ ಅದರ ಅವಶೇಷಗಳು ಮಾತ್ರ ಇವೆ. ಅಲ್ಲೊಂದು ಬಾವಿ ಇದೆ. ಸದ್ಯ ಗ್ರಿಲ್&nbsp; ಬಳಸಿ ಮುಚ್ಚಿದ್ದಾರೆ. ಅ ಬಾವಿಯು ಸಮೀಪದಲ್ಲೇ ಇರುವ ಯಮುನಾ ನದಿಗಿಂತ ಬಹಳ ಎತ್ತರದಲ್ಲಿದೆ. ಕೋಟೆಯ ವಿಸ್ತಾರ‌ 94 ಎಕರೆಗಳಂತೆ. ಬಹಳ ವಿಸ್ತಾರವಾಗಿದೆ. ಸುಜಾತ‌ ಜಹಾಂಗೀರನ ಅರಮನೆ ಮುಂಭಾಗದಲ್ಲಿ ವಿರಮಿಸಿದಳು. ಹೀಗಾಗಿ ನಾನು ಪ್ರಣತಿ ಮತ್ತು ರಿಶಿ ಒಂದು ಗುಂಪಾಗಿ‌ ಮುಂದುವರಿದೆವು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-vertically-aligned-center is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-16-1024x576.png" alt="" class="wp-image-17850" srcset="https://peepalmedia.com/wp-content/uploads/2022/12/image-16-1024x576.png 1024w, https://peepalmedia.com/wp-content/uploads/2022/12/image-16-300x169.png 300w, https://peepalmedia.com/wp-content/uploads/2022/12/image-16-768x432.png 768w, https://peepalmedia.com/wp-content/uploads/2022/12/image-16-1536x864.png 1536w, https://peepalmedia.com/wp-content/uploads/2022/12/image-16-150x84.png 150w, https://peepalmedia.com/wp-content/uploads/2022/12/image-16-696x392.png 696w, https://peepalmedia.com/wp-content/uploads/2022/12/image-16-1068x601.png 1068w, https://peepalmedia.com/wp-content/uploads/2022/12/image-16.png 1600w" sizes="auto, (max-width: 1024px) 100vw, 1024px" /></figure>
</div>
</div>



<p>&nbsp;ಆಗ್ರಾ ಕೋಟೆಯ ಒಂದು ಪಾರ್ಶ್ವದಲ್ಲಿ ತಾಜ್‌ಮಹಲ್ ಕಾಣುತ್ತದೆ. ಈ ಪಾರ್ಶ್ವ ಮಾತ್ರವೇ ಪ್ರವಾಸಿಗರಿಗೆ ಲಭ್ಯ. ಹೀಗಾಗಿ ಅಲ್ಲಿ ಆಗ್ರಾ‌ ಸ್ಮಾರಕಗಳಿಗಿಂತ ಹೆಚ್ಚು ಸೆಳೆಯುವುದು ದೂರದಲ್ಲಿದ್ದರೂ ತಾಜ್ ಮಹಲೇ. ಪ್ರತೀ ಕಟ್ಟಡದ ಬಾಲ್ಕನಿ ಸಿಕ್ಕಾಗಲೂ ಇಲ್ಲಿಂದ ತಾಜ್ ಹೇಗೆ ಕಾಣುತ್ತದೆ‌ ಎಂಬುದೇ ಕುತೂಹಲ. ಕಡೆಕಡೆಗೆ ಷಹಜಹಾನ್ ನ ಅಂತಃಪುರವೂ ಅಲ್ಲಿ ತಾಜಮಹಲು ಸ್ಪಷ್ಟವಾಗಿ‌ ಕಾಣುವುದೂ,‌ ಕುಳಿತು ಅದನ್ನು ನೋಡಲೆಂದೇ ಪೀಠವೂ ಇರುವುದು ಕಾಣುತ್ತದೆ. ಇದೇ ಅಂತಃಪುರದಲ್ಲಿ ತನ್ನ ಗತಿಸಿದ ಪತ್ನಿಯ ನೆನಪಲ್ಲಿ ಷಹಜಹಾನ್ ಹಲವು ವರ್ಷಗಳನ್ನು ತಾಜಮಹಲ್ ನೋಡುತ್ತಲೇ ಕಳೆದನಂತೆ.</p>



<p>ಉಳಿದಂತೆ ದಿವಾನಿ ಇ ಆಮ್, ದಿವಾನ್ ಇ ಖಾಸ್, ಮತ್ತೆರಡು ಸುಂದರವಾದ ಅಮೃತಶಿಲೆಯಿಂದ ನಿರ್ಮಿತವಾದ ಮಸ್ಜಿದ್ ಗಳು ಇವೆ. ಅವುಗಳಲ್ಲಿ ಒಂದು ರಾಜನದಂತೆ, ಮತ್ತೊಂದು ರಾಣಿವಾಸದವರಿಗಂತೆ. ಜಹಾಂಗೀರನ ಅರಮನೆ ಮುಂದೆ ಆತ ನಹಾನಕ್ಕೆ ಬಳಸುತ್ತಿದ್ದ ಕಲ್ಲು ತೊಟ್ಟಿಯೊಂದಿದೆ. ಸುಮಾರು ಐದು ಅಡಿ ಎತ್ತರದ ಮತ್ತು ಎಂಟು ಅಡಿ ವ್ಯಾಸದ, ಅದಕ್ಕೆ ಏರಿಹೋಗುವ ಮೆಟ್ಟಿಲುಗಳೂ ಇವೆ. ಈ ಆವರಣ ಸುತ್ತಾಡುವಾಗ ಹಲವು ಗುಹೆ ಮಾದರಿಯ ದಾರಿಯಲ್ಲಿ ಕರೆದೊಯ್ಯುತ್ತಾರೆ. ಆಲ್ಲೆಲ್ಲ ಪಕ್ಷಿಗಳ ಹಿಕ್ಕೆಯದೋ, ಮೂತ್ರದ್ದೋ ಇಲ್ಲವೇ ಗಾಳಿಯಾಡದ ಉಸಿರು ಕಟ್ಟಿಸುವಂಥ ಎಂಥದೋ ಕಮಟು ವಾಸನೆ. ಈ ಬದ್ಬೂಗೆ ಕಾರಣ ಕಲ್ಲ ಕಟ್ಟಡವೂ ಇರಬಹುದು. ಬಹುಶಃ ಅದಕ್ಕೇ ಅಂದಿನ ರಾಜರು ಕೂಡ ತಮ್ಮ ಅರಮನೆಗಳನ್ನು ವಾತಾನುಕೂಲಿಯಾಗಿ ಕಟ್ಟಿಗೆ ಇಲ್ಲವೇ ಮಣ್ಣಿನಿಂದ‌ ನಿರ್ಮಿಸಿಕೊಳ್ಳುತ್ತಿದ್ದರೆಂದು‌ ಕಾಣುತ್ತದೆ. ಅಕ್ಬರನೇ ಕಟ್ಟಿಸಿದ ಕೆಂಪು ಕಲ್ಲಿನ ಈ ಕೋಟೆ ಭದ್ರವಾಗಿದ್ದರೂ; ಅವನ ಅರಮನೆ ಇಲ್ಲದಿರಲು ಇದೂ ಕಾರಣವಿದ್ದೀತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-vertically-aligned-bottom is-layout-flow wp-block-column-is-layout-flow">
<figure class="wp-block-image alignfull size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-17-1024x576.png" alt="" class="wp-image-17851" srcset="https://peepalmedia.com/wp-content/uploads/2022/12/image-17-1024x576.png 1024w, https://peepalmedia.com/wp-content/uploads/2022/12/image-17-300x169.png 300w, https://peepalmedia.com/wp-content/uploads/2022/12/image-17-768x432.png 768w, https://peepalmedia.com/wp-content/uploads/2022/12/image-17-1536x864.png 1536w, https://peepalmedia.com/wp-content/uploads/2022/12/image-17-150x84.png 150w, https://peepalmedia.com/wp-content/uploads/2022/12/image-17-696x392.png 696w, https://peepalmedia.com/wp-content/uploads/2022/12/image-17-1068x601.png 1068w, https://peepalmedia.com/wp-content/uploads/2022/12/image-17.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/12/image-18-576x1024.png" alt="" class="wp-image-17852" srcset="https://peepalmedia.com/wp-content/uploads/2022/12/image-18-576x1024.png 576w, https://peepalmedia.com/wp-content/uploads/2022/12/image-18-169x300.png 169w, https://peepalmedia.com/wp-content/uploads/2022/12/image-18-768x1365.png 768w, https://peepalmedia.com/wp-content/uploads/2022/12/image-18-864x1536.png 864w, https://peepalmedia.com/wp-content/uploads/2022/12/image-18-150x267.png 150w, https://peepalmedia.com/wp-content/uploads/2022/12/image-18-300x533.png 300w, https://peepalmedia.com/wp-content/uploads/2022/12/image-18-696x1237.png 696w, https://peepalmedia.com/wp-content/uploads/2022/12/image-18.png 900w" sizes="auto, (max-width: 576px) 100vw, 576px" /></figure>
</div>
</div>



<p>ಶೀಷ್ ಮಹಲ್ ನಮಗೆ ಮಿಸ್ ಆಯ್ತು, ಅವಸರವೋ ಇಲ್ಲವೇ ಗೈಡ್ ಇಲ್ಲದ ಕಾರಣಕ್ಕೋ‌ ಕಾಣೆ; ಆದರೆ ಇಲ್ಲಿ ಮಿಸ್ ಆದುದು ರಾಜಸ್ತಾನದಲ್ಲಿ ಕಾಣ&nbsp; ದೊರೆಯಿತು. ಕೋಟೆಯಿಂದ ಹೊರ ಬರುವಾಗ ಬಹುಶಃ ದಿವಾನ್ ಇ ಆಮ್ ಎದುರೆಂದು‌‌ ಕಾಣುತ್ತದೆ ಒಂದು ಸುಂದರ ಗೋರಿ ಕಂಡುಬಂತು. ಬಹಳ ಕಲಾತ್ಮಕವಾಗಿರುವ ಅದು ಒಬ್ಬ ಬ್ರಿಟಿಷ್ ಅಧಿಕಾರಿಯದೆಂದು ಅಲ್ಲಿನ ಕಲ್ಲ ಮೇಲಿನ ಬರೆಹ ಅರುಹುತ್ತಿತ್ತು.</p>



<p>ಕೋಟೆಯಿಂದ ಹೊರಬಂದದ್ದೇ ನನ್ನ ಸಹಧರ್ಮಿಣಿ ರೂಮು ಸೇರಿ ರೆಸ್ಟ್ ಮಾಡುವ ಇರಾದೆ ವ್ಯಕ್ತಮಾಡಿದಳು. ದಿನೇಶ್ ಇಷ್ಟು ದೂರ ಬಂದು ಮಥುರಾ ನೋಡದೆ ಹೋಗೋದು ಹ್ಯಾಗೆ ಎಂದು ಏನೋ ಸ್ಕೆಚ್ ಹಾಕುತ್ತಿದ್ದರು. ಹಲವು ನನ್ನ ಪರಿಚಿತರು ಮಥುರಾದಲ್ಲಿ ಹಾಗೆ ನೋಡಲೇ ಬೇಕಾದ್ದು ಏನೂ ಇಲ್ಲ ಎಂಬಂತ‌‌ ಚಿತ್ರಣ ನೀಡಿದ್ದರಿಂದ ನಮಗೆ‌ ಕುತೂಹಲವೇನೂ ಇರಲಿಲ್ಲ. ಸಲ್ಮಾನ್ ಆಟೋದಲ್ಲಿ ನಾವು ಹೋಟೆಲ್ ಕಡೆ ಹೊರಟರೆ, ದಿನೇಶ್ ಕುಟುಂಬ ಮತ್ತೊಂದು ದಾರಿ ಹಿಡಿಯಿತು.‌ ವಾಸ್ತವದಲ್ಲಿ ಇತ್ಮದ್ ಉದ್ ದೌಲವನ್ನು ಅಂದೇ ನೋಡುವ ಯೋಚನೆ ಇತ್ತಾದರೂ ಸಲ್ಮಾನ್ ಅಲ್ಲೇನೊ ಉತ್ಸವ ನಡೆಯುತ್ತಿರುವುದಾಗಿಯೂ, ಅಲ್ಲಿ ಈಗ ಹೋದರೆ ಟ್ರಾಫಿಕಿನಲ್ಲಿ ಸಿಕ್ಕಿ ಬೀಳಬಹುದು ಎಂದ. ಅವನನ್ನು ನಂಬದಿರಲು ಹೆಚ್ಚೇನೂ ಕಾರಣವಿಲ್ಲದ್ದರಿಂದ ಅದರ ವಿಸಿಟನ್ನು ಮಾರನೇ ದಿನಕ್ಕೆ ಮುಂದೂಡಿಕೊಂಡೆವು.</p>



<p>&nbsp;ಮಥುರಾಗೆ ಹೋಗುವ ಯೋಜನೆ‌ ಕೈಬಿಟ್ಟ ದಿನೇಶ್ ಅವರ ತಂಡ ಬರ್ತ್ ಡೇ ಕೇಕಿನೊಂದಿಗೆ ಹೊಟೆಲ್ ರೂಮಿಗೆ ವಾಪಾಸು ಬಂತು. ಸಂಜೆ ರಿಶಿ ತನ್ನ ಬರ್ತ್ ಡೇಯನ್ನು ಆಗ್ರಾದಲ್ಲಿಯೇ ಆಚರಿಸಿಕೊಂಡ. ಅವನಿಗೆ ಅದು ಬಹಳ ವರ್ಷ ನೆನಪಲ್ಲಿ ಉಳಿಯಬಹುದು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-19-1024x576.png" alt="" class="wp-image-17853" srcset="https://peepalmedia.com/wp-content/uploads/2022/12/image-19-1024x576.png 1024w, https://peepalmedia.com/wp-content/uploads/2022/12/image-19-300x169.png 300w, https://peepalmedia.com/wp-content/uploads/2022/12/image-19-768x432.png 768w, https://peepalmedia.com/wp-content/uploads/2022/12/image-19-1536x864.png 1536w, https://peepalmedia.com/wp-content/uploads/2022/12/image-19-150x84.png 150w, https://peepalmedia.com/wp-content/uploads/2022/12/image-19-696x392.png 696w, https://peepalmedia.com/wp-content/uploads/2022/12/image-19-1068x601.png 1068w, https://peepalmedia.com/wp-content/uploads/2022/12/image-19.png 1600w" sizes="auto, (max-width: 1024px) 100vw, 1024px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-20-1024x576.png" alt="" class="wp-image-17854" srcset="https://peepalmedia.com/wp-content/uploads/2022/12/image-20-1024x576.png 1024w, https://peepalmedia.com/wp-content/uploads/2022/12/image-20-300x169.png 300w, https://peepalmedia.com/wp-content/uploads/2022/12/image-20-768x432.png 768w, https://peepalmedia.com/wp-content/uploads/2022/12/image-20-1536x864.png 1536w, https://peepalmedia.com/wp-content/uploads/2022/12/image-20-150x84.png 150w, https://peepalmedia.com/wp-content/uploads/2022/12/image-20-696x392.png 696w, https://peepalmedia.com/wp-content/uploads/2022/12/image-20-1068x601.png 1068w, https://peepalmedia.com/wp-content/uploads/2022/12/image-20.png 1600w" sizes="auto, (max-width: 1024px) 100vw, 1024px" /></figure>
</div>
</div>



<p><strong>ನಹೀ ಚಾಹಿಯೇ!</strong></p>



<p>ಇದು ನಾವು ಅಷ್ಟು ದಿನಗಳ ಪ್ರವಾಸದಲ್ಲಿ ಅತಿ ಹೆಚ್ಚು ಬಳಕೆ‌ ಮಾಡಿದ ಹಿಂದಿ ಪದ ಪುಂಜ. ಪ್ರವಾಸಿ ಸ್ಥಳ ಅಂದ‌ಮೇಲೆ ಆಟೋದವರಿಂದ, ವ್ಯಾಪಾರದವರಿಂದ, ಗೈಡುಗಳು ಮತ್ತು ಕೆಮೆರಾ‌ಮೆನ್ ಗಳಿಂದ ಬಚಾವಾಗಲು ನಾವು ಕಂಡು ಕೊಂಡಿದ್ದ ಸುಲಭ ದಾರಿ. ಅವರು ಬಾಯಿ‌ ಬಿಡುವ ಮುನ್ನವೇ ನಾವು ನಹೀ ಚಾಹಿಯೇ ಭಯ್ಯಾ ಎಂದು ಪಠಿಸುತ್ತಿದ್ದೆವು. ಆರುಷನ ಬರ್ತ್ ಡೇ ಸೆಲಬ್ರೇಟ್‌ ಮುಗಿದ ಮೇಲೆ ಚಹಾ ಕುಡಿಯಲೆಂದು ಹೋಟೆಲಿಂದ ಹೊರಬಿದ್ದೆವು. ಆಟೋವೊಂದು ಸಮೀಪ ಬಂತು. ನಾನು ತಿರುಗಿ ಕೂಡ ನೋಡದೆ ನಹೀ ಚಾಹಿಯೇ ಭಯ್ಯಾ ಎಂದೆ. ಆಟೋದವ ನಕ್ಕ, ಯಾರೆಂದು ತಿರುಗಿ ನೋಡಿದರೆ ಸಲ್ಮಾನ್. ಅಷ್ಟು ಹೊತ್ತಿಗೆ ಜೊತೆಗಿದ್ದ ಮಕ್ಕಳಿಬ್ಬರೂ ಸಲ್ಮಾನ್ ಭಯ್ಯಾನ ಜೊತೆ ಮಾತಿಗೆ ತೊಡಗಿದ್ದರು. ಪಕ್ಕದ ಸೌತ್ ಮೀಲ್ ಬೋರ್ಡ್ ನೇತು ಹಾಕಿದ್ದ ಹೋಟೆಲೊಂದಕ್ಕೆ ಡ್ರಾಪಿಸಿದ. ತಕ್ಕಮಟ್ಟಿಗೆ ಪರವಾಗಿಲ್ಲ ಎನಿಸುವ ದೋಸೆ ಕೊಟ್ಟ ಆತ. ಅಲ್ಲಿಯೇ ಊಟದ ಶಾಸ್ತ್ರವನ್ನು ಮುಗಿಸುವ ಎಂಬ ದಿನೇಶ್ ಮಾತು ಕೇಳಿದ್ದರೆ ಚೆನ್ನಿತ್ತು‌ ಎಂದೆನಿಸಿದ್ದು ಅಂದು ರಾತ್ರಿ ಉಡುಪಿ ಹೋಟೆಲು ಎಂಬ ಬೋರ್ಡು ತಗುಲಿಸಿ ಕೊಂಡಿದ್ದ ಕಟ್ಟಡದಲ್ಲಿ ಶತಮಾನದ ಅಪಾಯಕಾರಿ ಊಟ ತಿಂದಾಗ!</p>



<p>ಮಾರನೇ ದಿನಕ್ಕೆ ಸಲ್ಮಾನ್ ತಾನೇ ಆಟೋದಲ್ಲಿ ಫತೇಪುರ್ ಗೆ ಕರೆದೊಯ್ಯುವುದಾಗಿ ಹೇಳಿದರೂ ಆ ದೂರಕ್ಕೆ ಆಟೋದಲ್ಲಿ ಹೋಗುವುದು ಸಾಧುವಾಗಲಾರದು ಎನಿಸಿ ಬೇರೊಂದು ಟ್ಯಾಕ್ಸಿ ಬುಕ್‌ ಮಾಡಿಕೊಂಡೆವು. ಬ್ಯಾಗೇಜು ಸಮೇತ ಹೊರಟು ಇತ್ಮದ್ ಉದ್ದೌಲ ಮತ್ತು ಫತೇಪುರ್ ಸಿಕ್ರಿ ಕಂಡು ಮುಗಿಸಿ ಜೈಪುರದ ಟ್ರೇನು ಹಿಡಿಯಬೇಕಿತ್ತು. ಎಂದಿನಂತೆ ಸೀಟು ಕಾಯ್ದಿರಿಸಿದ್ದೆವು. ಸಿಕಂದ್ರಾದಲ್ಲಿರುವ ಅಕ್ಬರ್ ಟಾಂಬ್ ನೋಡುವ ಕುತೂಹಲ ಇದ್ದರೂ ಅದು ಫತೇಪುರ್ ಗೆ ವಿರುದ್ಧ ದಿಕ್ಕಿನ ಊರಾಗಿತ್ತು ಹಾಗಾಗಿ‌ ಅದನ್ನು ಕೈಬಿಟ್ಟೆವು. ಈ ನಡುವೆ ಭಾರೀ ಅಲ್ಲದಿದ್ದರೂ ಸಣ್ಣ‌‌ ಶಾಪಿಂಗ್ ಆಯ್ತು. ಆಗ್ರಾದಲ್ಲಿ ಚರ್ಮದ ಉದ್ಯಮಗಳು ಬಹಳೇ ಇರುವುದರಿಂದ ಇತರೆಡೆಗೆ ಹೋಲಿಸಿದರೆ ಚರ್ಮದ ವಸ್ತುಗಳು ಕೊಂಚ ಸಸ್ತಾ. ಆದರೆ ಹುಷಾರಾಗಿ ವ್ಯಾಪಾರ ಮಾಡಬೇಕು. ಸಲ್ಮಾನ್ ಹಲವು ಸರ್ತಿ ಮಾರ್ಕೆಟ್ ವಿಷಯ ಎತ್ತಿದರೂ ಅದನ್ನು ನಾವು ಅಷ್ಟು ಪ್ರೋತ್ಸಾಹಿಸಲಿಲ್ಲ; ಆತ ಕೂಡ ನಮಗೆ ಕಿರಿಕಿರಿ ಮಾಡದೆ ಹೇಳಿ ಸುಮ್ಮನಾದ.</p>



<p>&nbsp;ಮಾರನೇ ದಿನ ಲಗ್ಗೇಜ್ ಸಮೇತ ತಯಾರಾಗಿ ನಿಂತರೂ ಡ್ರೈವರ್ ಬಂದದ್ದು ಕೊಂಚ ತಡವಾಯ್ತು. ಮತ್ತೇನೊ ಗಡಿಬಿಡಿಯಲ್ಲಿ ಬ್ರೇಕ್ ಫಾಸ್ಟ್ ಮುಗಿಸಿ ಅವನಿಗೆ ಮೊದಲೇ ಹೇಳಿದ್ದಂತೆ‌ ಮೊದಲಿಗೆ ಇತ್ಮದ್ ಉದ್ ದೌಲ ಗೆ ದೌಡಾಯಿಸಲು ಹೇಳಿದೆವು. ಆತ ಕಣಿ ಹಾಕ್ಕಂಡು ಮೊದಲು ಸಿಕ್ರಿ ಮುಗಿಸಿ ಬಂದು ಬಿಡೋಣ, ನಂತರ‌ ಅವಕಾಶವಾದರೆ ಇತ್ಮದ್ ಉದ್ ದೌಲ ನೋಡೋಣ ಎಂದ. ಅದೂ ಅಲ್ಲದೆ ತಾಜ್ ಮಹಲ್ ನೋಡಿದ ಮೇಲೆ ಅಲ್ಲಿ ಹೋಗಿ ನೋಡೋವಂಥದ್ದೇನೂ ಇಲ್ಲ ಎಂದ. ನಾನು ಕಳೆದ ಬಾರಿ ಬಂದಾಗಲೂ ಟ್ಯಾಕ್ಸಿಯವನ‌ ಮಾರ್ಕೆಟ್ ಕಮಿಷನ್ ಕಾರಣದಿಂದ ಈ ಸ್ಮಾರಕ ನೋಡುವುದು ತಪ್ಪಿಸಿಕೊಂಡಿದ್ದೆವು; ಈ ಬಾರಿ ಹಾಗಾಗಬಾರದೆಂದು ಹಟಕ್ಕೆ ಬಿದ್ದು ಹೋದೆವು. ವ್ಯರ್ಥವೆನಿಸಲಿಲ್ಲ.</p>



<p>ಇದು ಜಹಾಂಗೀರ್ ನ ಪತ್ನಿ‌ ನೂರಜಹಾನಳ ತಂದೆ ಮಿರ್ಝಾ ಘಿಯಾಸ್ ಬೇಗ್‌ ಮತ್ತವನ ಪತ್ನಿಯ ಸಮಾಧಿ. 1622 ರಲ್ಲಿ ನಿರ್ಮಾಣವಾಗಿರುವ ಕಟ್ಟಡ. ಪುಟ್ಟದಾದರೂ ಗಮನ ಸೆಳೆಯುವಂತಿದೆ. ಇದು ಮತ್ತು ಸಿಕಂದ್ರಾದ‌ ಅಕ್ಬರ್ ಟಾಂಬ್ ಎರಡೂ ತಾಜ್ ಮಹಲ್ ನಿರ್ಮಾಣಕ್ಕೆ‌‌ ಸ್ಫೂರ್ತಿ ಎಂದು ಹೇಳಲಾಗುತ್ತದೆ. ಅಷ್ಟೇನೂ ಎತ್ತರವಲ್ಲದ‌ ಜಗತಿಯ ಮೇಲೆ ನಿರ್ಮಿತವಾಗಿದೆ. ನಾಲ್ಕು ಕಡೆಯೂ ನೀರ ದಾರಿಗಳಿವೆ. ಸದ್ಯ ನೀರಿಲ್ಲ, ಯೂಟ್ಯೂಬಿನಲ್ಲಿ ನೀರು ಹರಿಯುತ್ತಿರುವ ವಿಡಿಯೋ ಲಭ್ಯವಿದೆ. ನದಿಯ ಮಗ್ಗುಲಿಗೇ ಇದೆ. ಮೇಂಟೆನೆನ್ಸ್ ಕೂಡ ಚೆನ್ನಾಗಿದೆ. ದಿನೇಶ್ ಅವರು ಹೇಳಿದಂತೆ, ತಾಜ್‌ಮಹಲ್ ನೋಡಿದ‌ ಮೇಲೆ ಉಳಿದೆಲ್ಲವೂ ಸಪ್ಪೆ‌ ಎನಿಸುವುದು ಸಹಜವೇ; ಆದರೆ‌ ಪ್ರತೀ ಸ್ಮಾರಕಕ್ಕೂ ಚರಿತ್ರೆಯಲ್ಲಿ ತನ್ನದೇ ಮಹತ್ವ ಇರುತ್ತದೆ.</p>



<p>ಫತೇಪುರ್ ಸಿಕ್ರಿ ಆಗ್ರಾದಿಂದ ಕೇವಲ 38 ಕಿ.ಮೀ. ದೂರದಲ್ಲಿದ್ದರೂ ಬಹಳ ಸಮಯವೇ ಹಿಡಿಯಿತು. ಆಗ್ರಾ ನಗರದಿಂದ ಹೊರಬಂದು ಫತೇಪುರ್‌‌ ರಸ್ತೆ‌ ತಲುಪೋ ಹೊತ್ತಿಗೆ ಡ್ರೈವರಣ್ಣ ಯಾಕೆ‌ ಅವಸರ ಮಾಡಿದ ಅಂತ ಅರ್ಥವಾಯ್ತು. ಯಾವುದೊ ಮಾರ್ಕೆಟ್ ರಸ್ತೆ ಹಾಯ್ದು ಊರು ದಾಟಲೇ ಅರ್ಧ ತಾಸು ಹಿಡೀತು. ಆಗ್ರಾ ಸಣ್ಣ ಊರೇನಲ್ಲ. ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರೋ ಊರು. ಈಗಾಗಲೇ ಮೆಟ್ರೋ ಕಾಮಗಾರಿ ಆರಂಭವಾಗಿದೆ. ಇಡಿಯಾಗಿ ಯುಪಿಯಲ್ಲಿಯೇ ರಸ್ತೆ ಸರಿ‌ ಇಲ್ಲವೋ, ಇಲ್ಲವೇ ನಾವು ಓಡಾಡಿದ ಪ್ರದೇಶದಲ್ಲಿ ಮಾತ್ರವೋ ಕಾಣೆ ಫತೇಪುರ್ ಸಿಕ್ರಿ ರಸ್ತೆಯಂತೂ ಅಧ್ವಾನ. ನಮ್ಮ ಡ್ರೈವರಣ್ಣ ಬೇರೆ ಅವಸರದ ಆಸಾಮಿ. ಒಂದು‌ ಕಡೆ ಗುಂಡಿ ಅವಾಯ್ಡ್ ಮಾಡದೆ ಇಳಿಸಿಯೇ ಬಿಟ್ಟ. ಅರ್ಧ ಅಡಿಗೂ ಮೀರಿದ ಆಳದ ಗುಂಡಿ‌ ನೀರು ತುಂಬಿದ್ದರಿಂದ ಅಂದಾಜಾಗಲಿಲ್ಲವೋ ಏನೊ. ಗಾಡಿಯ ಕೆಳಗಿದ್ದ ಸ್ಟೆಪ್ನಿ‌ ಕಳಚಿ ಕೆಳಬಿತ್ತು. ಅದನ್ನು ಸರಿ ಮಾಡಲು ಮತ್ತರ್ಧ ತಾಸು ಹಿಡೀತು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/12/image-21-576x1024.png" alt="" class="wp-image-17855" srcset="https://peepalmedia.com/wp-content/uploads/2022/12/image-21-576x1024.png 576w, https://peepalmedia.com/wp-content/uploads/2022/12/image-21-169x300.png 169w, https://peepalmedia.com/wp-content/uploads/2022/12/image-21-768x1365.png 768w, https://peepalmedia.com/wp-content/uploads/2022/12/image-21-864x1536.png 864w, https://peepalmedia.com/wp-content/uploads/2022/12/image-21-150x267.png 150w, https://peepalmedia.com/wp-content/uploads/2022/12/image-21-300x533.png 300w, https://peepalmedia.com/wp-content/uploads/2022/12/image-21-696x1237.png 696w, https://peepalmedia.com/wp-content/uploads/2022/12/image-21.png 900w" sizes="auto, (max-width: 576px) 100vw, 576px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="1024" height="760" src="https://peepalmedia.com/wp-content/uploads/2022/12/image-23-1024x760.png" alt="" class="wp-image-17857" srcset="https://peepalmedia.com/wp-content/uploads/2022/12/image-23-1024x760.png 1024w, https://peepalmedia.com/wp-content/uploads/2022/12/image-23-300x223.png 300w, https://peepalmedia.com/wp-content/uploads/2022/12/image-23-768x570.png 768w, https://peepalmedia.com/wp-content/uploads/2022/12/image-23-1536x1140.png 1536w, https://peepalmedia.com/wp-content/uploads/2022/12/image-23-150x111.png 150w, https://peepalmedia.com/wp-content/uploads/2022/12/image-23-485x360.png 485w, https://peepalmedia.com/wp-content/uploads/2022/12/image-23-696x517.png 696w, https://peepalmedia.com/wp-content/uploads/2022/12/image-23-1068x793.png 1068w, https://peepalmedia.com/wp-content/uploads/2022/12/image-23.png 1599w" sizes="auto, (max-width: 1024px) 100vw, 1024px" /></figure>
</div>
</div>



<p>ಹಾಗೇ ಮಾತಿಗೆಳೆಯುತ್ತಿದ್ದಂತೆ ಅಲ್ಲಿನ ಸರ್ಕಾರವನ್ನು ವಾಚಾಮಗೋಚರ‌ ಬೈದ. ಗೋಹತ್ಯೆ ಕಾನೂನು ತಂದು ರೈತರು ಬೆಳೆ‌ ಕಾಪಾಡಿ ಕೊಳ್ಳೋದೆ ಕಷ್ಟವಾಗಿದೆ ಎಂದ. ಎಜುಕೇಶನ್ ಸಿಸ್ಟಂ ಸರಿ‌ ಇಲ್ಲ ಎಂದ. ಆಗ್ರಾದಂಥ ನಗರದಲ್ಲಿ ಕೂಡ ಜಾನುವಾರುಗಳ ಕಾರಣಕ್ಕೆ‌ ವಾಹನ ಸವಾರರು ಕಷ್ಟ ಪಡೋದು ಕಣ್ಣಿಗೆ ರಾಚುತ್ತಿತ್ತು. ಕಾರು ಅವನದೇ ಸ್ವಂತದ್ದಂತೆ. ರಸ್ತೆ ‌ವಿಚಾರದಲ್ಲಿ ಅವನ ದೂರು ಸಾಧುವೇ ಆಗಿತ್ತು. ಹಾಗೇ ಮಾತಾಡ್ತಾ ತಾನು ಒಂದು ಪಕ್ಷದವನೆಂದೂ ಹೇಳಿಕೊಂಡ. ಅದೀಗ‌ ಅಲ್ಲಿ ವಿರೋಧ ಪಕ್ಷ.</p>



<p>ಫತೇಪುರ ತಲುಪಿದಾಗ ಅಲ್ಲೇನೊ ಪಾರ್ಕಿಂಗ್ ಲಾಬಿಯ ಕಾರಣದಿಂದ ನಾವು ಕಿಲೋಮೀಟರ್ ದೂರದಲ್ಲಿಯೇ ಇಳಕೊಳ್ಳಬೇಕಾಯ್ತು. ಮತ್ತೆ ಅಲ್ಲಿಂದ ಐದಾರು ನೂರು ಮೀಟರಿಗೆ ಆಟೊ. ಅದೇ ಹೊತ್ತಿಗೆ ತುಂತುರು ಮಳೆ. ಫತೇಪುರ್ ಸಿಕ್ರಿ ಅಕ್ಬರನ ಕನಸಿನ ಊರು. ಆತ ಹೊಸತಾಗಿ‌ ಕಟ್ಟಿಸಿದ ರಾಜಧಾನಿ. ಗುಜರಾತ್ ದಿಗ್ವಿಜಯವೂ ಇದಕ್ಕೆ ಕಾರಣವಂತೆ. ಇಡಿ ಊರು ಆವರಣ ಒಂದು ಬೆಟ್ಟದ ಮೇಲಿದೆ. ಕೆಳಗಿನಿಂದ ರಸ್ತೆ ಮೂಲಕ ಏರಿ ಹೋದರೆ‌ ಬುಲಂದ್ ದರ್ವಾಜ ಕಾಣುತ್ತದೆ. ಅಲ್ಲಿಗೆ ತಲುಪಲು ಸುಮಾರು ಎಪ್ಪತ್ತೆಂಬತ್ತು ಕಡಿದಾದ ಮೆಟ್ಟಿಲುಗಳಿವೆ. ದಿಲ್ಲಿಯ ಅಲಾಯಿ‌ ದರ್ವಾಝ ಸುಂದರವೆಂದು ಹೆಸರಾದರೆ‌ ಇದು ಅತಿ ಎತ್ತರದ್ದು ಎಂದು ಜನಪ್ರಿಯ. ಪ್ರವೇಶ ದ್ವಾರಕ್ಕೆ ಹೋದಾಗ ಸಮಸ್ಯೆಯೊಂದು ಎದುರಾಯ್ತು. ಕೋಟೆಯ ಒಳಾವರಣದಲ್ಲಿ ಶೇಖ್ ಸಲೀಂ ಚಿಸ್ತಿ ಅವರ ದರ್ಗಾ ಇರುವ ಕಾರಣಕ್ಕೆ ಬೆತ್ತಲೆ ಕಾಲುಗಳಿಗೆ ಪ್ರವೇಶವಿಲ್ಲ. ನಮ್ಮ ದಿನೇಶ್ ಅಂದು ಶಾರ್ಟ್ಸ್ ತೊಟ್ಟು‌ ಬಂದಿದ್ದರು.‌ ಅಲ್ಲೇ ಒಂದು ಕೌಂಟರಿನಲ್ಲಿ ಪರಿಹಾರ ರೂಪದ ಲುಂಗಿಯೂ ಲಭ್ಯವಿದ್ದವು. ಅವುಗಳ ಬಣ್ಣವೊ ಕಣ್ಣಿಗೆ ಚುಚ್ಚುವಂತಿತ್ತು. ಅದನ್ನು‌ ಸುತ್ತಿಕೊಂಡ ದಿನೇಶ್ ಅವರಿಗೆ ಮಂಗಳೂರು ಮೀನನಾಥನಂತೆ ಕಾಣುತ್ತಿದ್ದೀರಿ ಎಂದು ರೇಗಿಸಿದೆವು.</p>



<p>ಮಳೆ ಜೋರಾಗದಿದ್ದರೂ ಎಡೆಬಿಡದೆ ಹನಿ ಹಾಕುತ್ತಲೇ ಇತ್ತು. ಅಕ್ಬರ್ ಅತ್ಯುತ್ಸಾಹದಲ್ಲಿ ಕಟ್ಟಿದ ಈ ಊರು ನಂತರ ಅನಾಥವಾಗಲು ಚರಿತ್ರೆ ಎರಡು ಕಾರಣಗಳನ್ನು ಗುರ್ತಿಸುತ್ತದೆ. ಕೊಂಚ ಬರಪೀಡಿತ ಪ್ರದೇಶವಾದ ಅದು ನೀರಿನ ಕೊರತೆಯಿಂದ ಅನಾಥವಾಯ್ತು‌ ಎಂದು ಕೆಲವರೂ; ಅಕ್ಬರ್ ಆಸಕ್ತಿಯಿಂದಲೇ, ವಿಶೇಷ ಮುತುವರ್ಜಿಯಿಂದಲೇ ನಿರ್ಮಿಸಿದರೂ ಆತನ ದಿನ್ ಇಲಾಹಿ ಕಲ್ಪನೆಗೆ ಆದ ಗತಿಯೇ ಇದಕ್ಕೂ ಆಯ್ತಂತೆ. ಬುಲಂದ್ ದರ್ವಾಜ ದಾಟಿ‌ ಇರುವ ಮಸ್ಜಿದ್‌ನ ಬಲ ಭಾಗದಿಂದ ಹೊರ ಹೋದರೆ ಜೋದಾಬಾಯಿಯ ಅರಮನೆ ಸಿಗುತ್ತದೆ. ಅಲ್ಲಿಗೆ&nbsp; ಕಳೆದ ಸರ್ತಿ ಹೋಗಲಾಗಿರಲಿಲ್ಲ. ಈ ಬಾರಿ ಹೋದ ಶಾಸ್ತ್ರವನ್ನು ಮುಗಿಸಿದೆವು. ಅದೆ ಕೆಂಪು ಕಲ್ಲಿನ ಎರಡಂತಸ್ತಿನ ಕಟ್ಟಡ. ಆಗ್ರಾದ ಕೋಟೆಯೊಳಗಿದ್ದ ಜಹಾಂಗೀರ್ ಅರಮನೆಯಂಥದೇ ಇದೂ ಕೂಡ. ನಡುವಿನ ಆವಾರದಲ್ಲಿ ತುಳಸಿಕಟ್ಟೆಯಂಥದೊಂದು ಏನೊ‌ ಇತ್ತು. ಅಕ್ಬರನ ರಜಪೂತ ಪತ್ನಿ ಜೋದಾಬಾಯಿ‌ ಗುಜರಾತ್ ಮೂಲದವಳಂತೆ. ಹೀಗಾಗಿ‌ಯೋ ಇಲ್ಲ ಅಕ್ಬರ್ ಕಂಡ ಗುಜರಾತಿನ ಆಕರ್ಷಣೆಯೋ ಫತೇಪುರ್ ಸಿಕ್ರಿ ಯ ವಾಸ್ತುಶಿಲ್ಪದ ಮೇಲೆ ಗುಜರಾತಿ ವಾಸ್ತುಶಿಲ್ಪದ ಪ್ರಭಾವ ಢಾಳಾಗಿದೆ‌ ಎನ್ನುತ್ತಾರೆ. ಅಂದ ಹಾಗೆ ಫತೇಪುರ‌ಸಿಕ್ರಿ ಎಂದರೆ ವಿಜಯದ ನಗರ ಎಂದರ್ಥವಂತೆ.</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/12/image-24-1024x576.png" alt="" class="wp-image-17858" srcset="https://peepalmedia.com/wp-content/uploads/2022/12/image-24-1024x576.png 1024w, https://peepalmedia.com/wp-content/uploads/2022/12/image-24-300x169.png 300w, https://peepalmedia.com/wp-content/uploads/2022/12/image-24-768x432.png 768w, https://peepalmedia.com/wp-content/uploads/2022/12/image-24-1536x864.png 1536w, https://peepalmedia.com/wp-content/uploads/2022/12/image-24-150x84.png 150w, https://peepalmedia.com/wp-content/uploads/2022/12/image-24-696x392.png 696w, https://peepalmedia.com/wp-content/uploads/2022/12/image-24-1068x601.png 1068w, https://peepalmedia.com/wp-content/uploads/2022/12/image-24.png 1600w" sizes="auto, (max-width: 1024px) 100vw, 1024px" /></figure>



<p>ಒಂದಷ್ಟು ಅರಮನೆಗಳ ಅವಶೇಷಗಳು, ಬೀರಬಲ್ಲನ ಅರಮನೆ ಇತ್ಯಾದಿ ನೋಡಿ ಬೆಟ್ಟವಿಳಿದು ಬರುವ ಹೊತ್ತಿಗೆ ಡ್ರೈವರಣ್ಣ ಅಲ್ಲಿಗೇ ಗಾಡಿಯೊಂದಿಗೆ ಹಾಜರಾಗಿದ್ದ. ಆಗ್ರಾದಿಂದ ಜೈಪುರಕ್ಕೆ ಹೊರಡಲು ಇನ್ನೂ ಸಮಯವಿತ್ತು. ಎಲ್ಲೊ ಒಂದೆಡೆ ಟೋಲಿನಲ್ಲಿ ಒಂದಷ್ಟು ಸಮಯ ವ್ಯರ್ಥವಾಗಿ ಸತ್ತಿತು. ಆಗ್ರಾ ಹತ್ತಿರ ಬರುತ್ತಲೂ ದಿನೇಶ್&nbsp; ಆಘಾತದ ಸುದ್ದಿ ಕೊಟ್ಟರು. ನಮ್ಮ ಟ್ಯಾಕ್ಸಿ ರೈಲ್ವೇ ಸ್ಟೇಷನ್ ಗೆ ಐದು ಕಿ.ಮೀ. ದೂರವಿದೆ ಎಂದು ಎಣಿಸಿದ್ದರೆ‌ ವಾಸ್ತವ ಬೇರೆಯೇ ಇತ್ತು. ಉತ್ತರ ಭಾರತದ ರಾಜ್ಯಗಳಲ್ಲಿ ಒಂದೊಂದೇ ಊರುಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ರೇಲ್ವೇ ನಿಲ್ದಾಣಗಳಿವೆ. ಆಗ್ರಾದಲ್ಲಿ ಸಹ ಮೂರು ನಿಲ್ದಾಣಗಳಿವೆ. ಮೇನ್ ಸ್ಟೇಷನ್, ಕಂಟೋನ್ಮೆಂಟ್ ಸ್ಟೇಷನ್ ಮತ್ತು ಫೋರ್ಟ್ ಸ್ಟೇಷನ್. ನಮ್ಮ ರಿಸರ್ವೇಷನ್ ಇದ್ದುದು ಫೋರ್ಟ್ ಸ್ಟೇಷನ್; ಆದರೆ ನಾವು ಹೊರಟಿದ್ದು ಕಂಟೋನ್ಮೆಂಟ್ ಸ್ಟೇಷನ್ ಕಡೆಗೆ. ಕಡೇ ಗಳಿಗೆಯಲ್ಲಿ ಈ ವಿಷಯ ಡ್ರೈವರಿಗೆ ಹೇಳಿದೆವು. ಮತ್ತೆ ಟ್ರೈನ್ ತಪ್ಪಬಹುದು ಎಂಬ ಆತಂಕವಿದ್ದರೂ ಹಾಗೇನೂ ಆಗಲಿಲ್ಲ. ಟ್ರೈನು ಹೊರಡುವ ಮೂರು ನಿಮಿಷಕ್ಕೆ ಮೊದಲು ಸೀಟು ಹಿಡಿದು ಕುಳಿತೆವು. ಊಟಕ್ಕೆ ಸಮಯ ಸಿಗಲಿಲ್ಲ. ಟ್ರೇನಿನಲ್ಲಿ ಮಾರಾಟಕ್ಕೆ ಬಂದ ಹಲವು‌ ತಿಂಡಿಗಳ ರುಚಿ ನೋಡಿದೆವು. ಅಂತೂ ಉತ್ತರಪ್ರದೇಶದಿಂದ ರಾಜಸ್ತಾನದ ಕಡೆ ರೈಲು ಹೊಂಟಿತು..</p>



<figure class="wp-block-image size-full"><img loading="lazy" decoding="async" width="640" height="480" src="https://peepalmedia.com/wp-content/uploads/2022/12/image-22.png" alt="" class="wp-image-17856" srcset="https://peepalmedia.com/wp-content/uploads/2022/12/image-22.png 640w, https://peepalmedia.com/wp-content/uploads/2022/12/image-22-300x225.png 300w, https://peepalmedia.com/wp-content/uploads/2022/12/image-22-150x113.png 150w" sizes="auto, (max-width: 640px) 100vw, 640px" /></figure>



<p></p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong><strong><em></em></strong></p>



<p>ಹಾಸನದ ನಿವಾಸಿಯಾದ ಇವರು ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</p>
]]></content:encoded>
					
		
		
			</item>
		<item>
		<title>ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ: ತಿರುಗಾಡಿ ಬಂದೊ-6</title>
		<link>https://peepalmedia.com/tirugaadi-bando-travelogue-by-rohith-agasara-halli/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 30 Nov 2022 08:35:47 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tirugaadi bando]]></category>
		<category><![CDATA[tirugadi bando]]></category>
		<guid isPermaLink="false">https://peepalmedia.com/?p=17023</guid>

					<description><![CDATA[ಕುತುಬ್‌ ಮಿನಾರ್ ನೋಡಿ ಮುಗಿಸಿದ ತಂಡವು ತಾಜ್‌ ಮಹಲ್‌ ನೋಡಲು ಹೊರಟು ನಿಂತಿತು. ಆದರೆ ದಾರಿಯುದ್ದಕ್ಕೂ ವಿಘ್ನದ ಮೇಲೆ ವಿಘ್ನ! ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ! ಅನ್ನೋದು ಹಿರಿಯರ ಗಾದೆ ಮಾತು. ದೆಹಲಿಯಿಂದ ಆಗ್ರಾಕ್ಕೆ ಹೊರಟ ನಮಗೂ ಅದೇ ಅನುಭವವಾಯಿತು ಎನ್ನುತ್ತಾರೆ ರೋಹಿತ್‌ ತಮ್ಮ ಈ ಬಾರಿಯ ತಿರುಗಾಡಿ ಬಂದೋ ಆರನೇ ಕಂತಿನಲ್ಲಿ. ಈ ಪ್ರವಾಸ ಕಥನ ಸರಣಿಯ ಉಳಿದ ಭಾಗಗಳನ್ನು ನೀವು ಇಲ್ಲಿ ಓದಬಹುದು ಕುತುಬ್ ಮಿನಾರ್ ನೋಡಿ ವಾಪಾಸು ಹೊರಡೋ ದಾರಿಯಲ್ಲಿ [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading" style="font-style:normal;font-weight:400"><strong>ಕುತುಬ್‌ ಮಿನಾರ್ ನೋಡಿ ಮುಗಿಸಿದ ತಂಡವು ತಾಜ್‌ ಮಹಲ್‌ ನೋಡಲು ಹೊರಟು ನಿಂತಿತು. ಆದರೆ ದಾರಿಯುದ್ದಕ್ಕೂ ವಿಘ್ನದ ಮೇಲೆ ವಿಘ್ನ! ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ! ಅನ್ನೋದು ಹಿರಿಯರ ಗಾದೆ ಮಾತು. ದೆಹಲಿಯಿಂದ ಆಗ್ರಾಕ್ಕೆ ಹೊರಟ ನಮಗೂ ಅದೇ ಅನುಭವವಾಯಿತು ಎನ್ನುತ್ತಾರೆ ರೋಹಿತ್‌ ತಮ್ಮ ಈ ಬಾರಿಯ ತಿರುಗಾಡಿ ಬಂದೋ ಆರನೇ ಕಂತಿನಲ್ಲಿ. ಈ ಪ್ರವಾಸ ಕಥನ ಸರಣಿಯ ಉಳಿದ ಭಾಗಗಳನ್ನು ನೀವು <a href="https://peepalmedia.com/category/more/travel/">ಇಲ್ಲಿ</a> ಓದಬಹುದು</strong></h5>



<p class="dropcapp1">ಕುತುಬ್  ಮಿನಾರ್ ನೋಡಿ ವಾಪಾಸು ಹೊರಡೋ ದಾರಿಯಲ್ಲಿ ಊಟ ಮುಗಿಸಿ ಹೋದರಾಯ್ತೆಂದು ದಿಲ್ಲಿ ಹೃದಯಭಾಗದ ಮೆಟ್ರೋ ಸ್ಟೇಷನ್ನಿನಲ್ಲಿ ಇಳಿದುಕೊಂಡೆವು. ಊರು ಬಿಟ್ಟು ಐದು ದಿನವಾಗಿದ್ದರೂ ಒಂದು ಬಿಡಿಗಾಸಿನ ಶಾಪಿಂಗ್ ಕೂಡ ಮಾಡಲಾರದೆ ನಮ್ಮ ತಂಡದ ಪ್ರಮೀಳೆಯರ ಕೈ ಕಡಿಯುತ್ತಿತ್ತೆಂದು ಕಾಣುತ್ತದೆ. ಪಾಲಿಕಾ ಬಝಾರ್ ಬಳಿ ಹೋದರೆ ಅದು ಕ್ಲೋಸ್ ಆಗಿ ಬಹಳ ದಿನ ಆಯ್ತು ಎಂದರು. ಅಂದೇ ಸಂಜೆ ಆಗ್ರಾಗೆ ಟ್ರೇನ್ ಬುಕ್ ಆಗಿತ್ತು. ಯೂಪಿ ರಾಜಸ್ತಾನಗಳಲ್ಲಿ ಸೌತ್ ಇಂಡಿಯನ್ ಊಟ ಸಿಕ್ತದೋ ಇಲ್ಲೋ ಎಂದು ಸರವಣ ಹೋಟೆಲ್ ಹುಡುಕಿ ಹೋದರೆ ಅಲ್ಲೋ ಅಣ್ಣೋರ್ ಪಿಚ್ಚರ್ ಟಿಕೆಟ್ಗೆ ಮೊದಲ ದಿನದ ಕ್ಯೂನಂತೆ ಜನ ತುಂಬಿದ್ದರು. ಕಾಯುವ ತಾಳ್ಮೆ, ಸಮಯ ಎರಡೂ ಇಲ್ಲದ ನಾವು ಪಕ್ಕದಲ್ಲಿಯೇ ಇದ್ದ ಮದ್ರಾಸ್ ಕೆಫೆಗೆ ನುಗ್ಗಿದೆವು. ದಕ್ಷಿಣದ ಚೂರು ಘಮಲು ದಕ್ಕಿದಂತಾಯ್ತು.( ಇದೇ ಹೆಸರಿನ ಹಿಂದಿ ಸಿನೆಮಾ ಒಂದನ್ನು ಕಂಡಿದ್ದ ನೆನಪಾಯ್ತು. ರಾಜೀವ್ ಹತ್ಯೆಗೆ ಸಂಬಂಧಿಸಿದ್ದು) ಊಟ ಮುಗಿಸಿ ಮತ್ತೆ ಎರಡು ತಂಡವಾಗಿ ಶಾಪಿಂಗಿಗೆ ತಾವು ಹುಡುಕಿದೆವು. ನಾವು ಪಕ್ಕದಲ್ಲೇ ಇದ್ದ ಖಾದಿ ಭಂಡಾರ ಹೊಕ್ಕರೆ, ದಿನೇಶ್ ಕುಟುಂಬ ಕೊಂಚ ದೂರಕ್ಕೆ ಪಾಲಿಕಾ ಬಝಾರಿನ ಅಂಗಡಿಗಳು ಶಿಫ್ಟ್ ಆಗಿವೆ ಎಂದು ಯಾರೋ ಹೇಳಿದ ಕಡೆ ಹೋದರು. ಎರಡೂ ಕಡೆ ಅಂತ ವ್ಯಾಪಾರವೇನೂ ಕುದುರಿದಂತೆ‌ ಕಾಣಲಿಲ್ಲ. ಮತ್ತೆ ಎಲ್ಲರೂ ಬೇಗ ಗೆಸ್ಟ್ ಹೌಸ್ ಸೇರಿ ಲಗ್ಗೇಜ್ ಪ್ಯಾಕ್ ಮಾಡಿ ಚೆಕ್ ಔಟ್ ಮಾಡಲು ತಯಾರಾದೆವು.</p>



<p>ಚೆಕ್ ಔಟ್ ಮುಗಿಸಿ ಲಗ್ಗೇಜ್ ಸಮೇತ ಹೊರಬಂದಾಗ ನಾವು ಏರಬೇಕಿದ್ದ ರೈಲು ಗಾಡಿ ಹೊರಡೋಕೆ ಇನ್ನೂ ಒಂದೂವರೆ ತಾಸಿತ್ತು. ರಸ್ತೆಯಿಂದ ಮುನ್ನೂರು ಮೀಟರ್ ದೂರದವರೆಗೆ ಏಕೆ ಮಣಭಾರದ ಲಗ್ಗೇಜ್ ಎಳೆಯಬೇಕೆಂದು  ಅಲ್ಲಿಂದಲೇ ಒಂದು ಟ್ಯಾಕ್ಸಿ ನಾನೇ ಬುಕ್ ಮಾಡಿದೆ. ಡ್ರೈವರ್ ಫೋನ್ ಕೂಡ ಮಾಡಿದ, ಆದರೆ ಬರಲೇ ಇಲ್ಲ. ಹೆಚ್ಚು ಹೊತ್ತು ಕಾಯುವುದು ಅಪಾಯ ಎನಿಸಿ ಗೇಟ್ ಬಳಿ ಹೋದರೂ ಆತ ಪತ್ತೆ ಇಲ್ಲ. ಬುಕಿಂಗ್ ಕ್ಯಾನ್ಸೆಲ್ ಮಾಡಿ ಪರ್ಯಾಯ ಬುಕಿಂಗಿಗೆ ಟ್ರೈ ಮಾಡುತ್ತಿರುವ ಹೊತ್ತಿಗೆ ಆತ ಬಂದ. ನಮ್ಮ ದುರಾದೃಷ್ಟಕ್ಕೆ ಜಿಪಿಎಸ್ ಮೋಸ ಮಾಡಿತ್ತು. ನಾವಿದ್ದ ಗೆಸ್ಟ್ ಹೌಸ್ ಮೇನ್ ರೋಡಿನಿಂದ ಒಳಗಾದಂತೆ‌ ಇದ್ದುದು‌ ಮಾತ್ರವಲ್ಲ, ಅಲ್ಲಿ ಕಾಂಪೌಂಡ್ ದಾಟಿದರೆ ಹಿಂದೊಂದು ರಸ್ತೆಯಂತೆ.‌ನಮ್ಮ ಲೊಕೇಶನ್ ಆತನಿಗೆ ಆ ರಸ್ತೆಗೆ ಸಮೀಪ ತೋರಿಸಿ ಆತ ಅಲ್ಲೆಲ್ಲಾ ಅಲೆದಾಡಿದ್ದ. ಈಗ ಅವನನ್ನೇ ಆನ್ಲೈನ್ ಬೇಡ ನೀನೇ ಬಾರಪ್ಪ ಅಂದರೆ ಒಂದಕ್ಕೆರಡರಷ್ಟು ಬಾಡಿಗೆ ಕೇಳಿದ. ದಿನೇಶ್ ಗೆ ಈ ವಿಳಂಬ ತಮಗೆ ತೊಡಕಾಗಬಹುದು ಎನಿಸಿತೇನೊ, ಹೋಗಿಬಿಡೋಣ ಸಾರ್ ಅಂದ್ರು. ನಾನು ಅಪರೂಪಕ್ಕೆ ದುಡ್ಡು ಉಳಿಸೋ ಹುಕಿಗೆ ಬಿದ್ದು &#8216; ಇರಿ ಸಾರ್ ಇವನಲ್ಲಾಂದ್ರೆ ಇಂತೋರು ಹತ್ತು ಮಂದಿ ಸಿಕ್ತಾರೆ&#8217; ಅಂದು ಪರ್ಯಾಯ ಹುಡುಕತೊಡಗಿದೆ. ಕೆಲವೇ ನಿಮಿಷಗಳಲ್ಲಿ ನಮಗೆ ಅವನಲ್ಲದೇ ಬೇರೆ ಗತಿ‌ ಇಲ್ಲ ಎನಿಸಿ ಕೇಳಿದರೆ‌ ಆಸಾಮಿ ಈಗ ನಾ ಬರಲ್ಲ ಎಂದ! ಅವನ ಪ್ರಕಾರ ಇದು ಟ್ರಾಫಿಕ್ ಪೀಕ್ ಟೈಮು. ನೀವು ಹೇಳೋ ರೇಲ್ವೇ ನಿಲ್ದಾಣಕ್ಕೆ ಇಷ್ಟು ಸಮಯದಲ್ಲಿ ಹೋಗೋದು ಸಾಧ್ಯವಿಲ್ಲ ಎಂದ. ಆಮೇಲೆ ನಮ್ಮ ಒದ್ದಾಟ ನೋಡಿ ಏನೆನ್ನಿಸಿತೋ ಏನೋ, ಬನ್ನಿ ಎಂದ. ದಿಲ್ಲಿಯಲ್ಲಿ ಬಹುಶಃ ಐದಾರು ರೈಲ್ವೇ ನಿಲ್ದಾಣಗಳಿವೆ. ನಮ್ಮ ಬುಕಿಂಗ್ ಇದ್ದುದು ದಿಲ್ಲಿ ಕ್ಯಾಪಿಟಲ್ ಸ್ಟೇಷನ್ನಿಂದ‌.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/image-51-1024x576.png" alt="" class="wp-image-17056" srcset="https://peepalmedia.com/wp-content/uploads/2022/11/image-51-1024x576.png 1024w, https://peepalmedia.com/wp-content/uploads/2022/11/image-51-300x169.png 300w, https://peepalmedia.com/wp-content/uploads/2022/11/image-51-768x432.png 768w, https://peepalmedia.com/wp-content/uploads/2022/11/image-51-1536x864.png 1536w, https://peepalmedia.com/wp-content/uploads/2022/11/image-51-150x84.png 150w, https://peepalmedia.com/wp-content/uploads/2022/11/image-51-696x392.png 696w, https://peepalmedia.com/wp-content/uploads/2022/11/image-51-1068x601.png 1068w, https://peepalmedia.com/wp-content/uploads/2022/11/image-51.png 1600w" sizes="auto, (max-width: 1024px) 100vw, 1024px" /></figure></div>


<p>ಟ್ಯಾಕ್ಸಿ ಹೊರಟಲ್ಲಿಂದ  ರೈಲ್ವೇ ನಿಲ್ದಾಣ ಮುಟ್ಟೋವರೆಗೂ ತಲುಪುತ್ತೀವೋ ಇಲ್ಲವೋ ಎನ್ನುವ ಆತಂಕದಲ್ಲಿ ಎಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲಿ ಐಆರ್‌ಸಿಟಿಸಿ, ವ್ಹೇರ್ ಈಸ್ ಮೈ ಟ್ರೈನ್ ಆ್ಯಪುಗಳ ಕಡೆ ದಿಟ್ಟಿ ನೆಟ್ಟು ನೋಡಿದ್ದೇ ಬಂತು. ಎಲ್ಲೆಲ್ಲೋ ಸುತ್ತಾಡಿಸಿ ತನ್ನ ಪಾಲು ಪಡೆದು ಡ್ರೈವರಣ್ಣ ಗಾಡಿ ಬಿಟ್ಟ. ಆದರೆ ನಮ್ಮ ಟ್ರೈನು ಹೋಗಿ ಕೆಲ ನಿಮಿಷಗಳಾಗಿತ್ತು. ಇದಕ್ಕೆ ಮುಂಚೆ ನಾವು ಹಲವು ಸಾರ್ತಿ ಬೇರೆ ಬೇರೆ ಕಾರಣಗಳಿಂದ ರಿಸರ್ವೇಶನ್ ಕ್ಯಾನ್ಸೆಲ್ ಮಾಡಿದ್ದೇ ಸುಮಾರು ರೊಕ್ಕ ನೀರಲ್ಲಿ ಹುಣಸೇ ಹಣ್ಣು ತೊಳೆದಂತಾಗಿತ್ತು. ಅದಕ್ಕೇ ಇದೊಂದು ಸೇರ್ಪಡೆ! ಏನು ಮಾಡುವುದು ದಾರಿ ಸಾಗುವುದೆಂತೊ ನೋಡಬೇಕಿತ್ತು. ದಿಲ್ಲಿಯಿಂದ ಆಗ್ರಾ ಕಡೆಗೆ ಮನಾಮನಿ ಟ್ರೈನ್ ಇವೆ. ಅದೂ ಪ್ರತೀ ಹತ್ತದಿನೈದು ನಿಮಿಷಕ್ಕೊಂದರಂತೆ.‌ಬಹಳ ಹೊತ್ತು ಕಾಯದೆ ನಂತರ ಬಂದ ಟ್ರೈನಿನ ಜೆನರಲ್ ಬೋಗಿಗೆ ಹತ್ತಿ ಕುಳಿತೆವು. ಒಂದೇ ಕಡೆ ಎಲ್ಲರಿಗೂ ಸೀಟು ಸಿಗಲಿಲ್ಲ. ನಾನು, ಪ್ರಣತಿ ಒಂದೆಡೆ, ಉಳಿದ ನಾಲ್ವರು ಒಂದೆಡೆ ಜಾಗ ಹಿಡಿದರು. ಜೆನರಲ್ ಬೋಗಿಯಾದರೂ ರಶ್ಶೇನೂ ಇರಲಿಲ್ಲ.</p>



<p>ಟಿಕೆಟ್ ದರ ಕೂಡ ಹೆಚ್ಚಿಲ್ಲ‌. ಪ್ಲಾಟ್ ಫಾರ್ಮ್ ನಂಬರ್ ಐದಾದ್ದರಿಂದ ಆನ್ಲೈನ್ ಟಿಕೇಟೇ ಖರೀದಿಸಬೇಕಿತ್ತು. ನಿಂತಿದ್ದ ಟ್ರೈನು ಸೀಟಿ ಊದೋದಕ್ಕೂ ದಿನೇಶ್ ಅವರು ಪಕ್ಕದ ಸೀಟಿಂದ &#8216; ಸಾರ್ ಆನ್ಲೈನ್ ಟಿಕೆಟ್ ಆಗ್ತಿಲ್ಲ. ಟ್ರೈನಿನಿಂದ ಐವತ್ತು ಮೀಟರ್ ಮಿನಿಮಮ್ ದೂರ ಇರಬೇಕಂತೆ ಅಂದ್ರು&#8217;! ಅವರು ಈ ಬ್ರೇಕಿಂಗ್ ನ್ಯೂಸ್ ಕೊಡೋ ಹೊತ್ತಿಗೆ ಗಾಡಿ ಹೊರಟೇ ಬಿಟ್ಟಿತು. ನಾವು ನಮ್ಮ ಲಗ್ಗೇಜು, ಮಕ್ಕಳನ್ನ ಇಳಿಸಿಕೊಳ್ಳೋಕು ಸಮಯವಿರಲಿಲ್ಲ.</p>



<p>2010ರಲ್ಲಿ ಕೂಡ ಇದೇ ರೂಟಲ್ಲಿ ನಾನು- ಸುಜಾತ ಜೆನರಲ್ ಬೋಗಿಯಲ್ಲಿ ಪಯಣಿಸಿದ್ದೆವು. ಅದು ಆಗ್ರಾ ಟು ದಿಲ್ಲಿ. ಆ ದಿನ ಏನೋ ಭಾರೀ ಜನಸಂದಣಿ. ಲಗ್ಗೇಜ್ ಇಡುವ ಜಾಗದಲ್ಲಿ ಎಡೆ ಹಿಡಿದು ಎರಡು ತಾಸಿನ ದಾರಿಯನ್ನು ನಾಕು ತಾಸು ಸವೆಸಿದ್ದೆವು. ಅದನ್ನೇ ನೆನೆಯೋ ಹೊತ್ತಿಗೆ ದಿನೇಶ್ ಈ ಶಾಕಿಂಗ್ ನ್ಯೂಸ್ ಬ್ರೇಕ್ ಮಾಡಿದ್ದರು. ಅಂತೂ ಅನುದ್ದೇಶಪೂರ್ವಕವಾಗಿ ಟಿಕೆಟ್ ರಹಿತ ಪಯಣಿಗರಾಗಿದ್ದೆವು. ತಕ್ಷಣ ಏನೇನೊ ಬುದ್ಧಿ ಉಪಯೋಗಿಸಿ ಟಿಕೆಟ್ ಗಿಟ್ಟಿಸಲು ಯತ್ನಿಸಿದೆವು. ನಾನು ಕೂಡಲೆ ಮೈಸೂರಿನ ಗೆಳೆಯ ಗಣೇಶನಿಗೆ ಫೋನ್ ಮಾಡಿ ಹೀಗಾಗಿದೆ,ನೀನು ಈ ಕೂಡಲೆ ದಿಲ್ಲಿ ಟು ಆಗ್ರಾಗೆ ಆರು ಟಿಕೆಟ್ ಖರೀದಿಸಿ ಡೀಟೇಲ್ಸ್ ಫೋನ್ ಮೂಲಕ ಕಳಿಸು ಎಂದು ರೈಲಿನ ಮತ್ತು ನಮ್ಮೆಲ್ಲರ ಮಾಹಿತಿ ಹಂಚಿಕೊಂಡೆ. ಐದು ನಿಮಿಷ ಬಿಟ್ಟು ಕೇಳಿದರೆ ಆತ ನೆಟ್ವರ್ಕ್ ಪ್ರಾಬ್ಲೆಮಿನ ಕಾರಣದಿಂದ ಆಗುತ್ತಿಲ್ಲ ಎಂದ‌. ಆ ಹೊತ್ತಿಗೆ ದಿನೇಶ್ ಮತ್ಯಾವುದೋ ಆ್ಯಪಿನಲ್ಲಿ ಟ್ರೈ ಮಾಡಿದರೆ, ಟ್ರೈನು ಹೊರಟಾಗಿದೆ ಟಿಕೆಟ್ ಲಭ್ಯವಿಲ್ಲ ಎಂದು ತೋರಿಸುತ್ತಿದ್ದಾರೆ ಎಂದರು. ಆಗ ನಂಗೆ ಬೆಂಗಳೂರಿನ ಗೆಳೆಯ ರವಿ ನೆನಪಾಗಿ ಅವರಿಗೆ ಫೋನು ಹಚ್ಚಿದೆ‌. ಅವರು ಫ್ರೀಕ್ವೆಂಟಾಗಿ ರೈಲು ಪಯಣ ಮಾಡುತ್ತಾರೆಂದು. ಅವರಿಗೆ ದಿಲ್ಲಿ ಬದಲಿಗೆ ಮುಂದೆ ಈ ರೈಲು ನಿಲ್ಲುವ ನಿಲ್ದಾಣದಿಂದ ಬುಕ್ ಮಾಡಲು ಹೇಳಿದೆವು. ಅವರು ಕೂಡ ರೈಲು ಸ್ಟೇಷನ್ ಬಿಟ್ಟಿದೆ ಎಂದು ತೋರಿಸ್ತಿದೆ  ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ನಮಗಿನ್ನುಳಿದದ್ದು ಎರಡೇ ದಾರಿಗಳು. ಒಂದು ನಡುವೆ ಎಲ್ಲಿಯಾದರೂ ರೈಲು ನಿಂತ ಎರಡು ನಿಮಿಷದಲ್ಲಿ ಓಡಿಹೋಗಿ ಟಿಕೆಟ್ ತರುವುದು, ಮತ್ತೊಂದು ತಪ್ದಂಡ!</p>


<div class="wp-block-image">
<figure class="aligncenter size-full"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/image-50.png" alt="" class="wp-image-17055" srcset="https://peepalmedia.com/wp-content/uploads/2022/11/image-50.png 1024w, https://peepalmedia.com/wp-content/uploads/2022/11/image-50-300x169.png 300w, https://peepalmedia.com/wp-content/uploads/2022/11/image-50-768x432.png 768w, https://peepalmedia.com/wp-content/uploads/2022/11/image-50-150x84.png 150w, https://peepalmedia.com/wp-content/uploads/2022/11/image-50-696x392.png 696w" sizes="auto, (max-width: 1024px) 100vw, 1024px" /></figure></div>


<p>ಅದೊಂದು ಎಕ್ಸಪ್ರೆಸ್ ಟ್ರೇನ್ ಆದ ಕಾರಣಕ್ಕೋ ಏನೋ ನಿಲುಗಡೆಯೇ ಕಡಮೆ, ಅದೂ ಅಲ್ಲದೆ ನಿಂತಿದ್ದೆಲ್ಲಾ ಮೂರು ನಾಕನೇ ಪ್ಲಾಟ್ಫಾರ್ಮೇ. ಕಡೆಗುಳಿದದ್ದು ಒಂದೇ ದಾರಿ&#8230;ಉಪ್ಪಾ ತಿಂದಾ ಮ್ಯಾಲೆ ನೀರಾ ಕುಡಿಯಲೆಬೇಕು.. ತಪ್ಪಾ ಮಾಡಿದ ಮ್ಯಾಲೆ ಶಿಕ್ಷೆ ಅನುಭವಿಸಲೆಬೇಕು..( ಬಿಜಿಎಲ್ ಸ್ವಾಮಿ ಅವರ ಕಾಲೇಜು ರಂಗ ಸಿನೆಮಾದ ಹಾಡು. ಪುಟ್ಟಣ್ಣ ಡೈರೆಕ್ಟ್ರು)</p>



<p>ನಾನು ಮೆಲ್ಲಗೆ ಗೂಗಲಿಸಿ ನೋಡಿದೆ ಸಿಗೇಬಿದ್ದರೆ ದಂಡ ಎಷ್ಟೆಂದು! ದಂಡದ ಮೊತ್ತ ಹಾಗೆ ಕಮ್ಮಿಯೇನೂ ಇರಲಿಲ್ಲ‌. ಒಂದರ್ಧ ತಾಸು ಮನಸಿಗೆ ಕಸಿವಿಸಿ ಎನಿಸಿದರೂ ಆಮೇಲೆ ಸಹಜ ಸ್ಥಿತಿಗೆ ಬಂದೆವು. ನಮಗೆ ಒಂದು ಧೈರ್ಯವಿತ್ತು. ಟಿಕೆಟ್‌ ಕೇಳಲು ಯಾರೂ ಬರಲಾರರೆಂದು.&nbsp; ಹಿಂದೊಮ್ಮೆ ಹೀಗೆ ಜೆನರಲ್ ಬೋಗಿಯಲ್ಲಿ ಪಯಣಿಸಿದಾಗ ಯಾವ ಟಿ.ಸಿ. ಯೂ ಬಂದು ಟಿಕೆಟ್ ಕೇಳಿರಲಿಲ್ಲ. ಅಷ್ಟೇ ಯಾಕೆ ಬೆಂಗಳೂರಿನಿಂದ ದಿಲ್ಲಿಗೆ ಬರುವಾಗ ಕೂಡ ಎಷ್ಟು ಮಂದಿ ಇದೀರಿ ಹೆಸರೇನು ಎಂದು ಟಿ.ಸಿ.ಕೇಳಿದ್ದನೇ ಹೊರತು, ಆಧಾರ್ ಇತ್ಯಾದಿ ದಾಖಲೆ ಕೇಳಿರಲಿಲ್ಲ‌. ಅಷ್ಟೂ ಆಗಿ ಬಂದರೆ ಹಿಂದಿನ ಟ್ರೈನಿನ ಎಸಿ ಚೇರ್ ಕಾರ್ ಬುಕಿಂಗ್ ಟಿಕೆಟ್ ತೋರಿಸಿ ಅವನಿಗೆ ಕರುಣೆ ಹುಟ್ಟುವಂತೆ ನಮ್ಮ ಕಷ್ಟ ಹೇಳಿಕೊಳ್ಳುವುದು ಎಂದುಕೊಂಡೆವು. ಆದರೆ ಇದ್ದ ಆರು ಮಂದಿಯಲ್ಲಿ ಯಾರಿಗೂ ಹಿಂದಿ ಭಾಷೆಯಲ್ಲಿ ಕರುಳು ಕಿತ್ತು ಬರುವಂತೆ ಕತೆ ಹೊಸೆದು ಹೇಳುವಷ್ಟು ಭಾಷೆ ಗೊತ್ತಿರಲಿಲ್ಲ!</p>



<p>&nbsp;ಒಂದೊಂದೇ ಸ್ಟೇಷನ್ ದಾಟಿ ಮಥುರಾ ದಾಟಿ ಆಗ್ರಾ ಸ್ಟೇಷನ್ ಕೂಡ ಬಂತು. ಬಚಾವಾದೆವು. ಇಳಿದ ಮೇಲೆ ಪ್ಲಾಟ್ ಫಾರ್ಮಿನಲ್ಲಿ ಕೇಳಿದರೆ ತೋರಿಸಲು ಬೇರೆ ಟಿಕೆಟ್ ಹೇಗೂ ಇದ್ದವು. ಹೀಗೆ ನೈತಿಕ ಸಮರ್ಥನೆ ಇದ್ದರೂ, ಟೆಕ್ನಿಕಲಿ ಇಲ್ಲೀಗಲ್ ಪಯಣವೊಂದು ಸುಖಾಂತವಾಗಿ ಮುಗಿದಿತ್ತು.</p>



<p>ಗ್ರಾಚಾರ ನೆಟ್ಟಗಿಲ್ಲ ಅಂದ್ರೆ ಕಷ್ಟದ ಮ್ಯಾಲೆ ಕಷ್ಟವಂತೆ. ಆಗ್ರಾ ತಲುಪಿದಾಗ ರಾತ್ರಿ ಹತ್ತು ಮೀರಿತ್ತು. ಊಟದ್ದೇ ಭಯ. ವಸತಿಗೆ ಹೋಟೆಲ್ ಬುಕ್ ಆಗಿತ್ತು. ರೈಲ್ವೇ ಪ್ಲಾಟ್ ಫಾರ್ಮಿನಲ್ಲೇ ಇದ್ದ ಹೋಟೆಲಿನಲ್ಲಿ ನಾನು ಪಾರ್ಸೆಲ್ ತರಲು ಹೋದೆ, ದಿನೇಶ್ ಟ್ಯಾಕ್ಸಿ ಸ್ಟ್ಯಾಂಡ್ ಕಡೆ ತಿರುಗಿದರು. ಎರಡು ಪಾರ್ಸೆಲ್ ಮಾಡೋ ಹೊತ್ತಿಗೆ ದಿನೇಶ್ ಫೊನ್ ಮಾಡಿ ಪಾರ್ಸೆಲ್ ಬೇಡ ಒಳ್ಳೆ ಟ್ಯಾಕ್ಸಿವಾಲ ಸಿಕ್ಕಿದಾನೆ ಬನ್ನಿ ಅಂದ್ರು. ಆಗಲೇ ಕಟ್ಟಿಯಾಗಿದೆ ಇಷ್ಟು ಮಾತ್ರ ತರದೇ ಇರಲಾಗದೆಂದು ಎರಡು ಪ್ಲೇಟ್ ಬಿರಿಯಾನಿ‌ ಮಾತ್ರ&nbsp; ತಂದೆ‌. ಡ್ರೈವರಣ್ಣ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುತ್ತಿದ್ದ‌. ನಾಳೆ ತಾಜ್ ಮಹಲ್ ಬಳಿ ಸೂರ್ಯೋದಯ ತೋರಿಸುವೆ ಬೇಗ ತಯಾರಾಗಿ ಬಿಡಿ ಎಂದ. ರೋಹಿಣಿ ಮೇಡಂ ಅವರಿಗೆ ಕೊಂಚ ಗಂಟಲು ಸಮಸ್ಯೆ ಆಗಿದ್ದರಿಂದ ಮೆಡಿಕಲ್ ಸ್ಟೋರ್ ಹುಡುಕಿ ಮದ್ದು ಕೂಡ ತಂದಾಯ್ತು. ಊಟದ ವಿಚಾರ ಬರುತ್ತಿದ್ದಂತೇ ಅವನು ಇಲ್ಲೆಲ್ಲ ಏಕೆ ಸಾರ್ ನೀವು ಹೋಗುತ್ತಿರುವ ಸ್ಟಾರ್ ಹೋಟೆಲಿನಲ್ಲೇ ಒಳ್ಳೆ ಊಟ ಸಿಗ್ತದೆ ಎಂದ. ನಾವು ಒಂದು ಕ್ಷಣ ಅವಾಕ್ಕಾದೆವು. ಹೋಟೆಲ್ ಬುಕ್ಕಿಂಗ್ ದಿನೇಶ್ ಮಾಡಿದ್ದರು. ಅವನಿಗೆ ಹೋಟೆಲ್ ವಿಳಾಸ ಹೇಳುವಾಗ ಲ್ಯಾಂಡ್ ಮಾರ್ಕಿಗೆಂದು ಹೇಳಿದ್ದು ಒಂದು ಸ್ಟಾರ್ ಹೋಟೆಲಿನ ಹೆಸರಾಗಿತ್ತು. ಹೀಗಾಗಿ ಅವನು‌ ಭರ್ಜರಿ ಬೇಟೆಯ ಹುರುಪಿನಲ್ಲಿ ನಮ್ಮನ್ನು ನಾಳಿನ ಸೈಟ್ ಸೀಯಿಂಗ್&nbsp; ಬುಕಿಂಗ್ ಗೆ ಕಟ್ಟಿಹಾಕಲು ಪ್ರಯತ್ನಿಸುತ್ತಿದ್ದ. ಯಾವಾಗ ನಾವು ಹೋಗುತ್ತಿರುವ ಹೋಟೆಲಿನ ಚುಕ್ಕಿಗಳ ಸಂಖ್ಯೆ ಕುಸಿಯಿತೋ ಅವನು ಕೊಡುತ್ತಿದ್ದ ಹುಸಿಗೌರವವೂ ಕುಸಿಯಿತು. ನಾವು ಹೇಳಿದ್ದ ಜಾಗದಲ್ಲಿ ಲಗ್ಗೇಜು ಇಳಿಸೋದೆ ತಡ ಕ್ಷಣವೂ ನಿಲ್ಲದೆ ಹೇಳಿದ್ದಕ್ಕಿಂತ ನೂರು ಹೆಚ್ಚೇ ವಸೂಲಿ ಮಾಡಿ ದುರ್ದಾನ ತೆಗೆದುಕೊಂಡವನಂತೆ&nbsp; ಅಲ್ಲಿಂದ ಎಸ್ಕೇಪಾದ‌. ಆಗ ಸಮಯ ನಡುರಾತ್ರಿಗೆ ತಾಸೊಂದು ಬಾಕಿ.</p>



<p>ಭರ್ಜರಿಯಾಗಿಯೇ ಇದ್ದ ಹೋಟೆಲ್ ರಿಸೆಪ್ಶನ್ ಹೊಕ್ಕರೆ ರೂಮು ಕೊಡಲಾಗದು ಎಂದು ಕೈಎತ್ತಿಬಿಡಬೇಕೆ. ಅಡ್ವಾನ್ಸ್ ಆಗಿ ಆನ್ಲೈನ್ ಮೂಲಕ ಬುಕ್ ಆಗಿದ್ದ ರೂಮುಗಳವು. ನಮಗೋ ಅವನೊಂದಿಗೆ ಜಗಳವಾಡುವಷ್ಟು ವಕ್ಯಾಬುಲರಿ ಇಲ್ಲ‌. ಆತನ ಮಾತಿನ ಸಾರಾಂಶ ಇಷ್ಟೇ ಮೊಬೈಲ್ ಆ್ಯಪಿನವರು ಫಾಲ್ಸ್ ರೇಟಿಗೆ ಬುಕಿಂಗ್ ಕೊಟ್ಟಿದಾರೆ. ಅವರೊಂದಿಗೆ ನಮಗೆ ಇಷ್ಯೂ ಇವೆ. ಹಾಗಾಗಿ ರೂಮು ಕೊಡೆವು. ರೀಫಂಡ್ ಕೂಡ ಪೂರ ಆಗಲಿಲ್ಲ. ಆಗ ಎದುರೇ ಕಾಣುತ್ತಿದ್ದ ಅಷ್ಟೇ ಭರ್ಜರಿ ಹೋಟೆಲಿನಲ್ಲಿ ಒಂದಕ್ಕೆರಡು ರೇಟು ಕೊಟ್ಟು ರೂಮು ಪಡೆದೆವು. ಒಳ್ಳೆ ನಿದ್ದೆಯೂ ಮಾಡಿದೆವು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow"><div class="wp-block-image">
<figure class="aligncenter size-large is-resized"><img loading="lazy" decoding="async" src="https://peepalmedia.com/wp-content/uploads/2022/11/image-49-760x1024.png" alt="" class="wp-image-17054" width="471" height="630"/></figure></div></div>
</div>



<p>ಹಿಂದಿನ ದಿನದ ಹಳವಂಡಗಳನ್ನು ಮೀರಿಸುವಷ್ಟಿತ್ತು ನಮ್ಮ ತಾಜ್ ಮಹಲ್ ನೋಡುವ ಉತ್ಸಾಹ. ದಿನೇಶ್ ಅವರ ಗ್ಯಾಂಗಂತೂ ತಾಜ್ ನೋಡುವ ದಿನ (ಅಂದು ಆರುಷನ ಬರ್ತ್ ಡೇ ಕೂಡ ಆಗಿತ್ತು)ಕ್ಕೆಂದೇ ಹೊಸ ಡ್ರೆಸ್ ರೆಡಿ ಮಾಡಿಕೊಂಡೇ ಬಂದಿತ್ತು. ನಾನು ಕೂಡ ದಿಲ್ಲಿಯ ಖಾದಿ ಬಂಡಾರದಲ್ಲಿ ಕೊಂಡಿದ್ದ ಕುರ್ತಾದ ಆರಂಭೋತ್ಸದ ಅಂದೇ ಇಟ್ಟುಕೊಂಡೆ. ಎಂದಿನಂತೆ ಬೆಳಗ್ಗೆದ್ದು ಸೌತ್ ಇಂಡಿಯನ್ ತಿಂಡಿಗೆ ಹುಡುಕಾಟ ಶುರು. ಆಗ ನಮಗೆ ಸಿಕ್ಕವ ಆಟೋ ಡ್ರೈವರ್ ಸಲ್ಮಾನ್. ಅತ ತಾನು ಸೌತ್ ರೆಸ್ಟೋರೆಂಟ್ ತೋರಿಸುವುದಾಗಿ ಆಸೆ ಹುಟ್ಟಿಸಿದ. ಒಯ್ದ ಕೂಡ. ಆದರೆ ಅಲ್ಲಿನ ಇಡ್ಲಿ ಬಾಯಿಗೆ ಹೇಗೆ ಇಡ್ಲಿ ಎಂಬಂತೆಯೂ, ದೋಸೆ ಆಸೆ ತೋರಿಸಿ ಮೋಸ ಮಾಡಿದಂತೆಯೂ ಇದ್ದವು. ಇಡ್ಲಿಗೆ ಸಾಸಿವೆ ಎಣ್ಣೆ, ಚಟ್ನಿಗೆ ಕೊಬ್ಬರಿ ಎಣ್ಣೆ ಬಳಸಿದ್ದರು. ಅಲ್ಲಿದ್ದ ಏಳು ಜನರಲ್ಲಿ ನಾವೇ ಅರು ಮಂದಿ, ಇನ್ನೊಬ್ಬ ಗಲ್ಲಾ ಪೆಟ್ಟಿಗೆ ಯಜಮಾನ. ನಮಗೆ ಪಾಪ ಎನಿಸಿದ್ದು ಸಲ್ಮಾನನ ಪಾಡು. ಈ ಭಯಾನಕ ತಿಂಡಿ‌‌ ತಿನ್ನಲು ಮುಕ್ಕಾಲು ಗಂಟೆ ಹಿಡಿಯಿತು. ನಾವು ಮಾತಾಡಿದ್ದ ಬರೀ ಐವತ್ತಕ್ಕೆ ಆತ ಮುಕ್ಕಾಲು ಗಂಟೆ ಕಾಯ್ತಿದ್ದ. ಪಾಪ ಅನ್ನಿಸಿ ಐವತ್ತರ ಬದಲು ನೂರು ಕೊಟ್ಟು ಚಿಲ್ಲರೆ ಅವನಿಗೇ ಬಿಟ್ಟೆವು. ನಾವು ಆಗ್ರಾ ಬಿಡೋವರೆಗೂ ಎಲ್ಲಿ ಹೋದರೂ ಅವನೇ ನಮ್ಮ ಸಾರಥಿ! ಇಷ್ಟಾಗಿದ್ದೇ ತನ್ನ ನಂಬರ್ ಕೊಟ್ಟು, ಹೊರಬಂದ ಕೂಡಲೆ ಫೋನ್ ಮಾಡಿ ಎಲ್ಲಿದ್ದರೂ ಬರುವೆ ಎಂದ. ನಾವು ಹಿಂದೊಮ್ಮೆ ಆಗ್ರಾ ನೋಡಿದ್ದರಿಂದ ಭಯಂಕರ ಜನ ಇರ್ತಾರೆ ಆರಕ್ಕೇ ಹೋಗಿ ಕ್ಯೂ ನಿಲ್ಲೋಣ ಎಂದೆಲ್ಲ ಮಾತಾಡಿಕೊಂಡಿದ್ದರೂ ಹಿಂದನ ದಿನದ ಹಳವಂಡಗಳ ಕಾರಣಕ್ಕೆ ಹೊರಟಿದ್ದು ತಡವೇ ಆಗಿತ್ತು. ಅಂದು ಬಿಸಿಲಿನ ಬದಲಿಗೆ ತಂಪೆರೆಯೋ ಮಳೆ. ಬಿರುಬಿಸಿಲಿನ ಆಗ್ರಾ ತಂಪನೆಯ ಊಟಿಯಂತಮಹಲಿಗೆ</p>



<p>ತಾಜ ಮಹಲಿಗೆ ಪ್ರವೇಷಕ್ಕೆ ಮೂರು ಗೇಟುಗಳಿವೆ. ಎರಡು ವಿಸ್ತಾರ ಸ್ಥಳಾವಕಾಶ ಇರುವ ಗೇಟುಗಳು, ಮತ್ತೊಂದು ನೇರ ಮಾರುಕಟ್ಟೆ ಕಡೆಯಿಂದ ಬರುವ ಕಿರಿದಾದ ಗೇಟು.&nbsp; ಆದರಿದು ಹೆಬ್ಬಾಗಿಲಿನ ನೇರಕ್ಕಿದೆ. ಗೇಟು ಪ್ರವೇಷಕ್ಕೆ ಮುನ್ನ ಅಂಗಡಿಯೊಂದರ ಬಳಿ ಹೋದಾಗ ಆತ ಛತ್ರಿ ತೆಗೆದುಕೊಳ್ಳಿ ಎಂದ. ಬೇಡವೆಂದಾಗ ಮಳೆ ಜೋರು ಬಂದರೆ ಕಷ್ಟವೆಂದ, ಆಗಲೂ ನಿರಾಕರಿಸಿದಾಗ ಕೊಳ್ಳಲಲ್ಲ, ಬಾಡಿಗೆಗೆ ಲಭ್ಯ ಎಂದ. ಒಟ್ಟು ಗುಂಪಿಗೆ ಎರಡು ಛತ್ರಿ ಬಾಡಿಗೆ ಪಡೆದು ಹೊರಟೆವು. ಪ್ರವೇಷದ ದಾರಿಯಲ್ಲಿ ತಾಜಮಹಲ್ ಮತ್ತದರ ಆವರಣವನ್ನು ರೀಸ್ಟೋರ್ ಮಾಡುವಾಗಿನ ಹಳೆಯ ಫೋಟೋಗಳನ್ನು ಪ್ರದರ್ಶಿಸಿದ್ದರು.</p>



<p>ಅದಾಗಿ ಮುಂದೆ ಹೋದಾಗ ವಿಶಾಲವಾದ ಹೆಬ್ಬಾಗಿಲು ಅಥವಾ ದರ್ವಾಜಾ ಕಣ್ಣಿಗೆ ಬಿತ್ತು. ಅದನ್ನು ದಾಟಿದ ಮೇಲಷ್ಟೇ ತಾಜ್ ಕಣ್ಣಿಗೆ ಬೀಳೋದು. ಮಳೆ ತುಂತುರಾಗಿ ಹನಿಯುತ್ತಿತ್ತು.</p>



<p>ಜನ ಆಗಲೇ ಗಿಜಿಗುಡುತ್ತಿತ್ತು. ಹೊರಗೆ ಟಿಕೆಟ್ ಕೌಂಟರಿನ ಆಸುಪಾಸಿನಲ್ಲಿ ಬಳಸಿ ಬಿಸಾಡುವ ಕಾಲುಚೀಲ ಮಾರುತ್ತಿದ್ದರು. ಮೇಲೆ ಹೋಗಲು ಇವು ಕಡ್ಡಾಯವೆಂದೂ ಹೇಳಿದರು. ಆದರೆ ನಾವು ಕೊಳ್ಳಲು ನಿರಾಕರಿಸಿ ಮುಂದೆ ಹೋದೆವು. ಹಿಂದೆ ಬಂದಿದ್ದಾಗ ಇದ್ದ ಹತ್ತು ರೂಪಾಯಿ‌ ಈಗ ನಲವತ್ತಕ್ಕೇರಿತ್ತು. ಇಷ್ಟೇನಾ ಎಂದುಕೊಂಡು ಟಿಕೆಟ್ ಕೊಂಡು ಒಳಹೋದ ಮೇಲೆ ಅಲ್ಲಿದ್ದ ಹಕೀಕತ್ ಅರ್ಥವಾಯ್ತು.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/image-44-1024x576.png" alt="" class="wp-image-17045" srcset="https://peepalmedia.com/wp-content/uploads/2022/11/image-44-1024x576.png 1024w, https://peepalmedia.com/wp-content/uploads/2022/11/image-44-300x169.png 300w, https://peepalmedia.com/wp-content/uploads/2022/11/image-44-768x432.png 768w, https://peepalmedia.com/wp-content/uploads/2022/11/image-44-1536x864.png 1536w, https://peepalmedia.com/wp-content/uploads/2022/11/image-44-150x84.png 150w, https://peepalmedia.com/wp-content/uploads/2022/11/image-44-696x392.png 696w, https://peepalmedia.com/wp-content/uploads/2022/11/image-44-1068x601.png 1068w, https://peepalmedia.com/wp-content/uploads/2022/11/image-44.png 1600w" sizes="auto, (max-width: 1024px) 100vw, 1024px" /></figure></div>


<p><strong>ವಾವ್ ತಾಜ್&#8230;.</strong></p>



<p>ಕೆಂಪು ಮರಳುಶಿಲೆ ಮತ್ತು ಬಿಳಿ ಅಮೃತಶಿಲೆಗಳನ್ನು ಬಳಸಿ ಕಲಾತ್ಮಕವಾಗಿ ನಿರ್ಮಿಸಲಾದ ದರ್ವಾಜ ದಾಟಿದ ಕೂಡಲೆ ತಾಜ್ ಕಣ್ಣಿಗೆ ಬಿತ್ತು. ವಾವ್ ತಾಜ್. ಆ ಹೊತ್ತಿಗೆ ಮಳೆ ಕೊಂಚ ಬಿರುಸಾಯ್ತು. ಜನ ಅಲ್ಲಿ ತಲುಪಿದ ಕೂಡಲೆ ತಮ್ಮ ಕೆಮೆರಾ ಮತ್ತು ಮೊಬೈಲ್ ಓಪನ್ ಮಾಡಿಕೊಂಡೇ , ಕೆಲವರಂತೂ ಶಿಳ್ಳೆ ಹಾಕುತ್ತಾ ತಾಜಮಹಲನ್ನು ದೂರದಿಂದಲೇ ಕಣ್ತುಂಬಿಕೊಳ್ಳುತ್ತಿದ್ದರು. ತಾಜ್ ಮಹಲ್ ಅಗ್ರಾ, ಉತ್ತರಪ್ರದೇಶಕ್ಕೆ ಮಾತ್ರವಲ್ಲ ದೇಶದ ಹೆಮ್ಮೆ. ಜಗತ್ತಿನ ಈಗಿನ ಅದ್ಭುತಗಳಲ್ಲಿ ಒಂದು‌. ಷಹಜಹಾನ್ ಆಳ್ವಿಕೆಯ ಮೂವತ್ತು ವರ್ಷಗಳು ರಾಜಕೀಯವಾಗಿ ಮುಘಲರ ಕಾಲದಲ್ಲಿ ಯಶಸ್ವಿಯೋ, ಅಯಶಸ್ವಿಯೋ ಕಾಣೆ, ಆದರೆ ವಾಸ್ತುಶಿಲ್ಪದ ವಿಷಯದಲ್ಲಿ ಸುವರ್ಣಯುಗವೇ ಸರಿ.&nbsp; ತಾಜಮಹಲನ್ನು ಸೂರ್ಯೋದಯದಿಂದ ಹಿಡಿದು ಬಿಸಿಲೇರಿ, ಮತ್ತೆ ಸೂರ್ಯಾಸ್ತದವರೆಗೆ ನೋಡಬೇಕು. ಒಂದೊಂದು ಹೊತ್ತಿನ ಬಿಸಿಲು/ ಬೆಳಕಿಗೂ ಒಂದೊಂದು ರೀತಿ ಕಾಣುತ್ತದೆ. ಆದರೆ ಆಂದು ಮಳೆ ಇದ್ದ ಕಾರಣ ಆ ವೇರಿಯೇಶನ್ಸ್ ನಮಗೆ‌ ಲಭ್ಯವಾಗಲಿಲ್ಲ; ಆದರೆ ತುಂತುರು ಮಳೆಯಲ್ಲಿ ತಾಜ್ ನೋಡುವ ಭಾಗ್ಯ ನಮ್ಮದಾಗಿತ್ತು.</p>



<p>ಭಾರತಕ್ಕೆ ಭೇಟಿ ನೀಡುವ ಬಹುತೇಕ ವಿದೇಶೀಯರು ತಾಜ್ ನೋಟವನ್ನು ಮಿಸ್ ಮಾಡಲಾರರು. ನಾವು ಚದುರಿ ದೂರದೂರದಿಂದ ನಮನಮಗೆ ದಕ್ಕುತ್ತಿದ್ದ ತಾಜನ್ನು ಅನುಭವಿಸುವಾಗ ವಿದೇಶೀ ಮಹಿಳೆಯೊಟ್ಟಿಗೆ ಸುಜಾತ ಮಾತನಾಡುತ್ತಿದ್ದುದ ಕಂಡೆ. ಏನೆಂದು ಕೇಳಿದೆ. ವಿದೇಶೀ ಹೆಣ್ಣು ಮಗಳು  ತಾನು ಹಿಡಿದಿದ್ದ  ನೀರಿನ ಬಾಟಲೊಂದನ್ನು ಈಕೆಯ ಕೈಗೆ  ಕೊಟ್ಟು ತನಗೆ ಬೇಡ, ನೀವು ಬಳಸಬಹುದು ಎಂದಳಂತೆ. ಈಕೆಗೆ ಅದು ವಿಚಿತ್ರವೆನ್ನಿಸಿ ತನಗೂ ಬೇಡ ನೀವೇ ಇಟ್ಟುಕೊಳ್ಳಿ ಎಂದು ವಾಪಾಸು ಮಾಡಿದಳಂತೆ. ಬಹುಶಃ ಆಗಿದ್ದಿಷ್ಟು.  ಅಕ್ಟೋಬರಿನಲ್ಲಿ ಆಗ್ರಾದಲ್ಲಿ ಬಿಸಿಲು ಚುರುಗುಡುವಂತಿರುತ್ತದೆ.ಅಂದು ಮಳೆ ಇದ್ದ ಕಾರಣ, ನೀರಿನ ಬಾಟಲು ಹಿಡಿದು ಓಡಾಡುವುದು ಆ ವಿಲಾಯ್ತಿ ಅಕ್ಕಂಗೆ ತ್ರಾಸಾಗಿರಬೇಕು. ನೋಡಿದ ಕೂಡಲೆ ಭಾರತೀಯ ಹೆಣ್ಣು ಮಗಳು ಎಂದು ಗುರುತಾಗುವ ಈಕೆಗೆ ಬಾಟಲು ನೀರು ಕೊಳ್ಳುವ ಶಕ್ತಿ ಇರಲಿಕ್ಕಿಲ್ಲ ಎಂಬ ಅರೆ ತಿಳುವಳಿಕೆಯ ಕಾರಣದಿಂದಲೂ ಹಾಗೆ ಮಾಡಿದ್ದಿರಬಹುದು. ನಮ್ಮ ದೇಶಕ್ಕೆ ಪ್ರವಾಸಕ್ಕೆ ಬರುವ ವಿದೇಶೀಯರು ತಮ್ಮದೇ ಆದ ರೀತಿಯ ಹೋಂ ವರ್ಕ್ ಮಾಡಿಕೊಂಡು ಬಂದಿರುತ್ತಾರೆ. ಮೌಢ್ಯಗಳಿಂದ ತುಂಬಿದ ಬಡ ದೇಶ ಎಂಬುದಕ್ಕೆ ಬಾಹ್ಯ ಸಾಕ್ಷ್ಯಗಳೂ ಅವರ ಕಣ್ಣಿಗೆ ಬೀಳುವುದರಿಂದ ಇಂಥ ಟೇಕನ್ ಫಾರ್ ಗ್ರಾಂಟೆಡ್ ಥರಹದ ವರ್ತನೆಗಳು ಹುಟ್ಟುತ್ತವೆ ಎಂದು ಕಾಣುತ್ತದೆ.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/image-45-1024x576.png" alt="" class="wp-image-17047" srcset="https://peepalmedia.com/wp-content/uploads/2022/11/image-45-1024x576.png 1024w, https://peepalmedia.com/wp-content/uploads/2022/11/image-45-300x169.png 300w, https://peepalmedia.com/wp-content/uploads/2022/11/image-45-768x432.png 768w, https://peepalmedia.com/wp-content/uploads/2022/11/image-45-1536x864.png 1536w, https://peepalmedia.com/wp-content/uploads/2022/11/image-45-150x84.png 150w, https://peepalmedia.com/wp-content/uploads/2022/11/image-45-696x392.png 696w, https://peepalmedia.com/wp-content/uploads/2022/11/image-45-1068x601.png 1068w, https://peepalmedia.com/wp-content/uploads/2022/11/image-45.png 1600w" sizes="auto, (max-width: 1024px) 100vw, 1024px" /></figure></div>


<p>ತಾಜಮಹಲಿನ ವಾಸ್ತುಶಿಲ್ಪಿ ದಿಲ್ಲಿಯ ಕೆಂಪು ಕೋಟೆಯ ಡಿಸೈನರ್&nbsp; ಉಸ್ತಾದ್ ಅಹ್ಮದ್ ಲಹೋರಿ. ಅವನ ಸಹಾಯಕ್ಕಿದ್ದ ಕುಶಲಕರ್ಮಿಗಳ ಸಂಖ್ಯೆ ಬರೋಬ್ಬರಿ 20 ಸಾವಿರ. 1643ರಲ್ಲಿ ಆರಂಭವಾಗಿ 1653ರಲ್ಲಿ ಮುಕ್ತಾಯವಾಗುತ್ತದೆ. ತಾಜಮಹಲಿಗೆ ಸ್ಫೂರ್ತಿಯಾಗಿ ಇರೋ ಎರಡು ಕಟ್ಟಡಗಳೆಂದು ಆಗ್ರಾದಲ್ಲಿಯೇ ಇರುವ ಇತ್ಮತ್ ಉದ್ ದೌಲ ಮತ್ತು ದಿಲ್ಲಿಯ ಹುಮಾಯೂನ್ ಟಾಂಬ್. ಹುಮಾಯೂನ್ ಟಾಂಬ್ ಗಿಂತ ಎತ್ತರ ವಿಸ್ತಾರ ಮತ್ತು ನಾಕು ಮೀನಾರುಗಳನ್ನು ಹೊರತುಪಡಿಸಿದರೆ ಹಲವು ಸಾಮ್ಯಗಳಿವೆ. ಹುಮಾಯೂನ್ ಟಾಂಬ್ ಮತ್ತು ತಾಜ್ ಎರಡೂ ಎತ್ತರದ ಚಚ್ಚೌಕ ಜಗಲಿಯ ಮೇಲಿವೆ. ಜಗಲಿ ಮೇಲಕ್ಕೆ ಮೆಟ್ಟಿಲು ಹು.ಟಾಂಬಿನಲ್ಲಿ ನಾಲ್ಕೂ ಕಡೆ ಇದ್ದರೆ, ತಾಜಿನಲ್ಲಿ ಎಡ ಮತ್ತು ಬಲಬದಿಯಲ್ಲಿವೆ. ತಾಜಮಹಲಿನ ಮತ್ತೊಂದು ಬದಿಯಲ್ಲಿ ಯಮುನಾ ನದಿ ಇರೋದರಿಂದ ಈ ಏರ್ಪಾಟಿರಬಹುದು. ಇನ್ನು ಇತ್ಮತ್ ಉದ್ ದೌಲ ಆಗ್ರಾದಲ್ಲಿಯೇ ಯಮುನಾ ನದಿ ತೀರದಲ್ಲಿಯೇ ಇರೋ ಗಾತ್ರದಲ್ಲಿ ಚಿಕ್ಕದಾದರೂ ಸುಂದರವಾದ್ದು. ಇದನ್ನು ಬೇಬಿ ತಾಜ್ ಎಂದೂ ಕರೆಯಲಾಗುತ್ತದಂತೆ.</p>



<p>ಕಾರಂಜಿ ಎಲ್ಲ ದಾಟಿ ತಾಜ್ ಬುಡಕ್ಕೆ ಹೋದಾಗ ಅನಿರೀಕ್ಷಿತವೊಂದು ಕಾದಿತ್ತು. ನಾವು ಕೊಂಡಿದ್ದ ಟಿಕೇಟು ಅಲ್ಲಿಗೇ ಮುಕ್ತಾಯ. ಜಗತಿಯ ಮೇಲೆ ಹತ್ತಿ ತಾಜ್ ಗೋಡೆ- ಮೀನಾರುಗಳನ್ನು ಸಮೀಪದಿಂದ ನೋಡಲು 200 ರ ಪ್ರತ್ಯೇಕ ಟಿಕೇಟು ಮಾಡಿದ್ದಾರೆ. ಈ ಟಿಕೇಟಿಗೆ ಕನೆಕ್ಟ್ ಆಗಿಯೇ ಹೊರಗೆ ಕಾಲುಚೀಲ ಮಾರುತ್ತಿದ್ದುದು. ಈ ಪದ್ಧತಿ ಹಿಂದೆ ವಿದೇಶೀಯರಿಗೆ ಮಾತ್ರ ಅನ್ವಯಿಸುತ್ತಿತ್ತು. ಈಗ ಎಲ್ಲರಿಗೂ ಅನ್ವಯ. ಇದಕ್ಕೆ ಕಾರಣವೂ ಇದೆ. ನಾವು ಹಿಂದೊಮ್ಮೆ ತಾಜ್ ನೋಡಲು ಹೋದಾಗಲೇ ಅದರ ಪ್ರವೇಶಕ್ಕಿರುವ ಅಮೃತ ಶಿಲೆಯ ಮೆಟ್ಟಿಲುಗಳು ದಿನದಿನವೂ ಲಕ್ಷಾಂತರ ಜನರ ತುಳಿತಕ್ಕೆ ಸಿಕ್ಕಿ ಅಕ್ಷರಶಃ ಸವೆದೇ ಹೋಗಿವೆ. ಆ ಸವೆತ ತಡೆಯಲಾರದ ASI ಮರದ ಹಲಗೆಗಳನ್ನು ಮೆಟ್ಟಿಲುಗಳ ಮೇಲೆ ಮುಚ್ಚಿ ಸವಕಳಿ ತಡೆಯುವ ವ್ಯರ್ಥ ಪ್ರಯತ್ನ ಮಾಡಿತ್ತು. ಅದನ್ನು ಕಂಡಾಗಲೇ ಇನ್ನು ಬಹಳ ವರ್ಷಗಳ‌ಕಾಲ ತಾಜಮಹಲಿನ ಒಳಗೆ ಪ್ರವಾಸಿಗರಿಗೆ ಒಳಹೋಗಲು ಪ್ರವೇಶ ಸಿಗಲಾರದು ಎಂದುಕೊಳ್ಳುತ್ತಿದ್ದೆ. ಅದೀಗಾಗಲೇ ಒಂದಷ್ಟು ಜಾರಿ ಆಗಿಯೇಬಿಟ್ಟಿದೆ. ತಾಜ್ ಸಂರಕ್ಷಣೆಗೆ ಇರುವ ಉಪಾಯಗಳಲ್ಲಿ ಅದನ್ನು ದೂರದಿಂದಲೇ ಮಾತ್ರ ನೋಡುವುದೂ ಒಂದು ಎಂದು ನಿಪುಣರು ವರದಿ ನೀಡಿರುವರು ಎಂದು ಪತ್ರಿಕೆಯಲ್ಲಿ ಓದಿನ ನೆನಪು. ತನ್ನ ಪತ್ನಿ ಮುಮ್ತಾಜ ಮಹಲಳ ನೆನಪಿಗೆ ಷಹಜಹಾನನು ಕಟ್ಟಿಸಿದ ಈ ಕಟ್ಟಡದ ತಾಜ್ ಎಂದರೆ ಕಿರೀಟವಂತೆ. ತಾಜ್ ನಿಜವಾಗಿಯೂ ಭಾರತೀಯ ವಾಸ್ತುಶಿಲ್ಪದ ಕಿರೀಟವೇ ಸರಿ.</p>



<p>ಇತ್ತೀಚೆಗೆ ತಾಜ್ ಮಹಲ್ ಷಹಜಹಾನ್ ಕಟ್ಟಿಸಿದ್ದೇ ಅಲ್ಲ, 13 ನೇ ಶತಮಾನದ ಶಿವ ದೇವಾಲಯ ಎಂದು ಹೇಳುವ ತಮಾಷೆಯ ಸಂಗತಿಗಳಿಗೂ ಬಹಳ‌ ಮೈಲೇಜ್ ಇತ್ತೀಚೆಗೆ ಸಿಗುತ್ತಿದೆ. ಪಿ.ಎನ್. ಓಕ್ ಥರಹದವರ ಬರವಣಿಗೆ ಇದಕ್ಕೆ ಇಂಬುನೀಡಿದ್ದೂ ಸುಳ್ಳಲ್ಲ. ಭಾರತೀಯ ಇಂಡೋ ಇಸ್ಲಾಮಿಕ್ ವಾಸ್ತುಶೈಲಿಯ ಪ್ರಾಥಮಿತ ತಿಳುವಳಿಕೆ ಇರುವ ಯಾವ ಮೂರ್ಖನಿಗೂ ಇದೊಂದು ಇಸ್ಲಾಮೇತರ ಧಾರ್ಮಿಕ ಕಟ್ಟಡ ಎಂಬ ಊಹೆ ಬರಲಾರದು. ನಾವು ಈಗಾಗಲೇ ತಾಜ ಮಹಲಿನ ಒಳಾಂಗಣವನ್ನು ಓಡಾಡಿ ನೋಡಿದ್ದರಿಂದ ಮತ್ತೊಮ್ಮೆ ಜಗತಿಯ ಮೇಲೆ ಹೋಗಿ ನೋಡುವ ಹುಕಿ ಇರಲಿಲ್ಲ, ದಿನೇಶ್ ಕೂಡ ದೂರದಿಂದಲೇ ಮತ್ತೆ ಮತ್ತೆ ನೋಡಿ‌ ಅದ್ಭುತ‌ ಎಂಬ ಉದ್ಘಾರ ತೆಗೆಯುತ್ತಾ‌ ಜಗತಿಯ ಮೇಲೆ ಏರುವ ಉತ್ಸಾಹ ತೋರಲಿಲ್ಲ. ಅಂತೂ ತಾಜ್ ಆವರಣ ಪ್ರವೇಷ ಮಾಡಿ ಮದ್ಯಾಹ್ನ ಹೊರಹೋಗುವ ಹೊತ್ತಿಗೆ ನಾವು ನಮ್ಮ ಮೊಬೈಲುಗಳಲ್ಲಿ ಒಬ್ಬೊಬ್ಬರೂ ನೂರಕ್ಕೂ ಮೀರಿದ ಫೋಟೋಗಳನ್ನು ಸೆರೆಹಿಡಿದಿದ್ದೆವು. ಚುರುಗುಟ್ಟುತ್ತಿದ್ದ ಹೊಟ್ಟೆ ನಮ್ಮನ್ನು ತಾಜ್ ಆವರಣದಿಂದ ಹೊರಗೊಯ್ದಿತು.</p>



<p><strong>ಇವನ್ನೂ ಓದಿ</strong></p>



<p><a href="https://peepalmedia.com/qutub-minar-a-glory-of-india/"><strong>ತಿರುಗಾಡಿ ಬಂದೊ ಐದನೇ ಕಂತು</strong>– <strong>ಕುತುಬ್‌ ಮಿನಾರ್‌ ಎಂಬ ಭಾರತ ವೈಭವ</strong></a></p>



<p><a href="https://peepalmedia.com/tirugadi-bando-by-rohith-agasarahalli-redport/" target="_blank" rel="noreferrer noopener"><strong>ತಿರುಗಾಡಿ ಬಂದೊ ನಾಲ್ಕನೇ ಕಂತು</strong>–&nbsp;<strong>ಕೆಂಪು ಕೋಟೆಗೊಂದು ಸುಸ್ತಿನ ಸುತ್ತು</strong></a></p>



<p><a href="https://peepalmedia.com/tirugadi-bando-rohitg-agasarahalli-article-3/" target="_blank" rel="noreferrer noopener"><strong>ತಿರುಗಾಡಿ ಬಂದೊ ಮೂರನೇ ಕಂತು</strong>–&nbsp;<strong>ದೆಹಲಿಯಲ್ಲಿ ಸಿಕ್ಕ&nbsp;ʼಅಕ್ಕಲಕೋಟೆ ಸ್ವಾಮಿಗಳುʼ</strong></a></p>



<p><a href="https://peepalmedia.com/travel-story-by-rohith-agasara-halli-2/" target="_blank" rel="noreferrer noopener">ತಿರುಗಾಡಿ ಬಂದೊ ಎರಡನೇ ಕಂತು-&nbsp;<strong>ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್….</strong></a></p>



<p><a rel="noreferrer noopener" href="https://peepalmedia.com/lekkachara-tappaytu/" target="_blank"><strong>ತಿರುಗಾಡಿ ಬಂದೊ ಒಂದನೇ ಕಂತು- ಲೆಕ್ಕಾಚಾರ ತಪ್ಪೋಯ್ತು..</strong></a></p>


]]></content:encoded>
					
		
		
			</item>
		<item>
		<title>ಕೆಂಪು ಕೋಟೆಗೊಂದು ಸುಸ್ತಿನ ಸುತ್ತು</title>
		<link>https://peepalmedia.com/tirugadi-bando-by-rohith-agasarahalli-redport/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 16 Nov 2022 09:16:01 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[Delhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[redfort]]></category>
		<category><![CDATA[rohith agasara halli]]></category>
		<category><![CDATA[travel]]></category>
		<category><![CDATA[Travelogue]]></category>
		<guid isPermaLink="false">https://peepalmedia.com/?p=15659</guid>

					<description><![CDATA[ʼನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟʼ ಎಂದು ಹೇಳಿದ ಟ್ಯಾಕ್ಸಿವಾಲಾ ಪರಿಹಾರವನ್ನೂ ಅವನೇ ಸೂಚಿಸಿದ. ಆ ಪರಿಹಾರ ಏನಾಗಿತ್ತು? ಓದಿ.. ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣ-೪ ಅಕ್ಷರಧಾಮದ ನಿರಾಶೆಯನ್ನು ಇಲ್ಲವಾಗಿಸಲು ಕೆಂಪು ಕೋಟೆ ಕಡೆಗೆ ಧಾಳಿ ಮಾಡಿದೆವು. ಅದು ಸಂಜೆ ಟ್ರಾಫಿಕಿನ ಪೀಕ್ ಸಮಯ. ಟ್ಯಾಕ್ಸಿವಾಲಾ ಮೊದಲೇ ಹೇಳಿಬಿಟ್ಟ. ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ ಎಂದು. ಪರಿಹಾರವನ್ನೂ ಅವನೇ ಸೂಚಿಸಿದ. [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ʼ</strong><strong>ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ</strong><strong>ʼ</strong><strong> ಎಂದು ಹೇಳಿದ ಟ್ಯಾಕ್ಸಿವಾಲಾ ಪರಿಹಾರವನ್ನೂ ಅವನೇ ಸೂಚಿಸಿದ. ಆ ಪರಿಹಾರ ಏನಾಗಿತ್ತು? ಓದಿ.. ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣ-೪</strong></h5>



<p>ಅಕ್ಷರಧಾಮದ ನಿರಾಶೆಯನ್ನು ಇಲ್ಲವಾಗಿಸಲು ಕೆಂಪು ಕೋಟೆ ಕಡೆಗೆ ಧಾಳಿ ಮಾಡಿದೆವು. ಅದು ಸಂಜೆ ಟ್ರಾಫಿಕಿನ ಪೀಕ್ ಸಮಯ. ಟ್ಯಾಕ್ಸಿವಾಲಾ ಮೊದಲೇ ಹೇಳಿಬಿಟ್ಟ. ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ ಎಂದು. ಪರಿಹಾರವನ್ನೂ ಅವನೇ ಸೂಚಿಸಿದ. ಕೆಂಪು ಕೋಟೆಯ ಗೇಟಿನ ಬಳಿ ಬಿಡ್ತೀನಿ, ಅದರ ಎದುರೇ ಚಾಂದಿನಿ ಚೌಕ್ ಮತ್ತು ಜಾಮಾ ಮಸ್ಜಿದ್ ಎಂದು ಟಿಕೆಟ್ ಕೌಂಟರೊಂದರ ಬಳಿ ವಿಲೇವಾರಿ ಮಾಡಿ ಪರಾರಿಯಾದ. ಕೋಟೆ ಪ್ರವೇಶದ ಟಿಕೇಟ್ ಖರೀದಿಸಿ ಪ್ರವೇಶಕ್ಕೆ ಜಾಗ ಹುಡುಕಿದಾಗ ತಿಳಿಯಿತು ಅವನ ಚಾಲಾಕಿತನ. ಬೃಹತ್ ವ್ಯಾಪ್ತಿಯ ಆ ಕೋಟೆಗೆ ಒಂದಕ್ಕಿಂತ ಹೆಚ್ಚು ಕೌಂಟರುಗಳಿದ್ದರೂ ಪ್ರವೇಶ ಒಂದೇ ಇದ್ದಂಗಿತ್ತು. ನಾವು ಟಿಕೆಟ್ ಖರೀದಿಸಿದ‌ ಜಾಗದಿಂದ ಕಿ.ಮಿ. ದೂರದಲ್ಲಿತ್ತು ಎಂಟ್ರಿ ಗೇಟು. ಅದೂ ಕ್ಲೋಸಿಂಗ್ ಸಮಯ ಬೇರೆ. ಆರು ಮಂದಿ ಮೂರು ಗುಂಪಾಗಿ‌ ನಡೆದು ಒಳಹೋಗುವ ಹೊತ್ತಿಗೆ ಸೂರ್ಯ ಬಾಯ್ ಹೇಳಿ ಚಂದ್ರನಿಗೆ ಚಾರ್ಜು ಕೊಡುವ ಹೊತ್ತಾಗಿತ್ತು.</p>



<p><br>ಈ ಹಿಂದೆ ದೆಹಲಿಗೆ ಬಂದಿದ್ದರೂ ಕೆಂಪು ಕೋಟೆ ನೋಡಿರಲಿಲ್ಲ. ಬಹುಶಃ ಟಿವಿಯಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೇ ಕೆಂಪು ಕೋಟೆ ನೋಡಿದ್ದು ದೇವೇಗೌಡರು ಅಲ್ಲಿಂದ ಒಮ್ಮೆ ಸ್ವಾತಂತ್ರ್ಯೊತ್ಸವದ ಭಾಷಣ ಮಾಡಿದಾಗ ಅಂತ ಕಾಣ್ತದೆ. ಆಗಿನ್ನೂ ಖಾಸಗಿ ಚಾನೆಲುಗಳ ಭರಾಟೆ ಕೂಡ ಅಷ್ಟಿರಲಿಲ್ಲ. ಇದ್ದವೆರಡೇ ಚಾನೆಲು. ಡಿಡಿ -೧ ಮತ್ತು ಡಿ.ಡಿ.-೯. ಇತ್ತೀಚೆಗೆ ಪಂಜಾಬ್ ರೈತ‌ಹೋರಾಟದ ಸಂದರ್ಭದಲ್ಲಿ ಕೂಡ ಕೆಂಪುಕೋಟೆ ಬಹಳ ಸದ್ದು ಮಾಡಿತ್ತು. ಅಲ್ಲಿದ್ದ ರಾಷ್ಟ್ರಧ್ವಜದ ಪಕ್ಕದಲ್ಲಿ ಮತ್ಯಾರೊ ಜೆಂಡಾ ಏರಿಸಿದ್ದರೆಂದು.</p>


<div class="wp-block-image">
<figure class="aligncenter size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tirugadi-2-576x1024.webp" alt="" class="wp-image-15662" srcset="https://peepalmedia.com/wp-content/uploads/2022/11/tirugadi-2-576x1024.webp 576w, https://peepalmedia.com/wp-content/uploads/2022/11/tirugadi-2-169x300.webp 169w, https://peepalmedia.com/wp-content/uploads/2022/11/tirugadi-2-150x267.webp 150w, https://peepalmedia.com/wp-content/uploads/2022/11/tirugadi-2-300x533.webp 300w, https://peepalmedia.com/wp-content/uploads/2022/11/tirugadi-2-696x1237.webp 696w, https://peepalmedia.com/wp-content/uploads/2022/11/tirugadi-2.webp 720w" sizes="auto, (max-width: 576px) 100vw, 576px" /></figure></div>


<p>ದಿಲ್ಲಿ ಕೋಟೆಯ ನಮ್ಮ ಭೆಟ್ಟಿ ತೀರ ಅವಸರದ್ದಾಗಿತ್ತು. ಅದೂ ಅಲ್ಲದೆ ಮುಂಜಾನೆಯಿಂದ ಸುತ್ತಾಡಿ ಏನನ್ನಾದರೂ ಕುತೂಹಲದಿಂದ ನೋಡಿ ತಣಿಯುವ ತಾಳ್ಮೆಯೂ ಉಳಿದಿರಲಿಲ್ಲ. ಆದರೂ ನಾನು, ದಿನೇಶ್, ರೋಹಿಣಿ ಮೇಡಂ ಮತ್ತು ಆರುಷ ಒಂದು ಸುತ್ತು ಬಂದೆವು; ಸುಜಾತಾ‌ ಮತ್ತು ಪ್ರಣತಿ ಒಳಾವರಣದ ಪಾರ್ಕಿನಲ್ಲಿ ನಮಗಾಗಿ ಕಾಯುತ್ತಿದ್ದರು.</p>



<p><br>ದಿಲ್ಲಿ ಕೆಂಪು ಕೋಟೆಯ ಚರಿತ್ರೆಯೇ ರೋಚಕ. ಷಹಜಹಾನ್ ಆಗ್ರಾದಿಂದ ದಿಲ್ಲಿಗೆ ತನ್ನ ರಾಜಧಾನಿ ವರ್ಗಾಯಿಸಿದಾಗ ಕಟ್ಟಿಸಿದ್ದೇ ಈ ಕೋಟೆ. ಶಿಲ್ಪಿ ತಾಜ್ ಮಹಲ್ ನಿರ್ಮಿಸಿದ್ದ ಉಸ್ತಾದ್ ಅಹಮದ್ ಲಾಹೋರಿ. ಕೋಟೆ ನಿರ್ಮಾಣವಾದಾಗ ಪೂರ್ಣ ಕಂದಕದಲ್ಲಿ ಯಮುನಾ ನದಿ ನೀರು ಹರಿಯುವಂತೆ ನಿರ್ಮಿಸಲಾಗಿತ್ತಂತೆ. ಆಗಿನ ಷಹಜಹಾನಾಬಾದ್‌ನಲ್ಲಿ ಅಂದರೆ ಇಂದಿನ ಪುರಾನಿ ದಿಲ್ಲಿಯಲ್ಲಿ ಕಟ್ಟಲ್ಪಟ್ಟ ಮುಘಲ್ ಕಾಲದ ಅತ್ಯುಚ್ಚ ಕಟ್ಟೋಣಿಕೆ ಇದು. ೧೬೩೮ ರಲ್ಲಿ ಆರಂಭವಾಗಿ ೧೬೪೮ ರಲ್ಲಿ ಮುಗಿಯಿತು. ಮೋತಿ ಮಸೀದಿ ಔರಂಗಝೇಬ್ ನ ಕಾಲದಲ್ಲಿ ಸೇರ್ಪಡೆಯಾಯ್ತು. ಔರಂಗಝೇಬ್ ನಂತರ ದಿಲ್ಲಿ ಮತ್ತು ಕೋಟೆ ಎರಡೂ ಪತನದತ್ತ ಸಾಗಿದವು.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/tirugadi-3-1024x576.webp" alt="" class="wp-image-15663" srcset="https://peepalmedia.com/wp-content/uploads/2022/11/tirugadi-3-1024x576.webp 1024w, https://peepalmedia.com/wp-content/uploads/2022/11/tirugadi-3-300x169.webp 300w, https://peepalmedia.com/wp-content/uploads/2022/11/tirugadi-3-768x432.webp 768w, https://peepalmedia.com/wp-content/uploads/2022/11/tirugadi-3-150x84.webp 150w, https://peepalmedia.com/wp-content/uploads/2022/11/tirugadi-3-696x392.webp 696w, https://peepalmedia.com/wp-content/uploads/2022/11/tirugadi-3-1068x601.webp 1068w, https://peepalmedia.com/wp-content/uploads/2022/11/tirugadi-3.webp 1280w" sizes="auto, (max-width: 1024px) 100vw, 1024px" /></figure></div>


<p>ಫರುಕ್ಷಿಯಾರ್ ಕಾಲದಲ್ಲಿ ಧಾಳಿ ಮಾಡಿದ ನಾದಿರ್ ಶಾ ಸುಲಭಕ್ಕೆ ದಿಲ್ಲಿಯನ್ನು ಗೆದ್ದು ಲೂಟಿ ಮಾಡಿದ್ದೂ ಅಲ್ಲದೆ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ. (ನಾದಿರ್ ಶಾ ನ ವಿಕ್ಷಿಪ್ತ ವ್ಯಕ್ತಿತ್ವದ ಬಗ್ಗೆ ನಮ್ಮ ಲಂಕೇಶ್ ಅವರು ಗುಣಮುಖ ಎಂಬ ಅದ್ಭುತ ನಾಟಕ ಬರೆದಿದ್ದಾರೆ. ನಾಟಕ ಚರಿತ್ರೆಯ ಯಾಂತ್ರಿಕ ವಿವರಗಳಿಗೆ ಮಾತ್ರ ಕಟ್ಟುಬೀಳದೆ ಹಲವು ಸಂಕೀರ್ಣ ಸಂಗತಿಗಳನ್ನು ಅಭಿವ್ಯಕ್ತಿಸುತ್ತದೆ ಎನ್ನುವುದು ಬೇರೆ ಮಾತು; ಆದರೆ ನಾಟಕದಲ್ಲಿ ದುರ್ಬಲ ಮುಘಲ್ ದೊರೆಯ ಚಿತ್ರಣ ಸಮರ್ಥವಾಗಿ ಬಂದಿದೆ)</p>



<p><br> ೧೭೫೨ ರ ರಾಜಕೀಯ ಬೆಳವಣಿಗೆಗಳಂತೆ ಮರಾಠರು ದೆಹಲಿ ಸಿಂಹಾಸನದ ರಕ್ಷಣೆಗೆ ನಿಂತರು. ೧೭೬೦ ರಲ್ಲಿ ಕೆಂಪುಕೋಟೆಯೊಳಗಿನ ದಿವಾನ್ ಇ ಖಾಸ್ ( ಮಂತ್ರಿ ಪರಿಷತ್ ಸಭೆ ಸೇರುತ್ತಿದ್ದ ಸ್ಥಳವಂತೆ) ಮೇಲ್ಛಾವಣಿಗೆ ಹೊದಿಸಿದ್ದ ಬೆಳ್ಳಿಯನ್ನು ದುರ್ರಾನಿಯಿಂದ ದಿಲ್ಲಿ ಉಳಿಸಲು ಖರ್ಚಿಗೆ ಕಾಸಿಲ್ಲದೆ ಕರಗಿಸಿದರಂತೆ. ಆದರೆ ದುರ್ರಾನಿ ಎದುರಿನ ಮೂರನೇ ಪಾಣಿಪಟ್ ಯುದ್ಧದಲ್ಲಿ ಮರಾಠರಿಗೆ ಸೋಲಾಯ್ತು. ಮತ್ತೆ ಷಾ ಆಲಂ ಕಾಲಕ್ಕೆ ಮಹದಾಜಿ‌ ಸಿಂಧ್ಯ ದಿಲ್ಲಿಯ ಸಿಂಹಾಸನಕ್ಕೆ ಬೆಂಬಲವಾಗಿ ನಿಂತ.<br> ೧೭೬೦ ರಲ್ಲಿ ಜಾಟ್ ದೊರೆ ಜವಾಹರ್ ಸಿಂಗ್ ದೆಹಲಿ ಮೇಲೆ ಧಾಳಿ ಮಾಡಿ ಕೆಂಪು ಕೋಟೆ ಹಿಡಿದನಂತೆ. ನಂತರದ ಎರಡೇ ದಿನಗಳಲ್ಲಿ  ಕೋಟೆ ಬಾಗಿಲುಗಳನ್ನು ಕಿತ್ತು ಅವನು ತನ್ನ ಗೆಲುವಿನ ಗೌರವಾರ್ಥ ಭರತ್ಪುರದ ಲೋಹಗಡ ಕೋಟೆಗೆ ಹೊತ್ತೊಯ್ದ. (ಅವು ಈಗಲೂ ಅಲ್ಲಿಯೇ ಇವೆಯಂತೆ)</p>



<p>ನಂತರದ ಧಾಳಿಯ ಸರದಿ ಸಿಕ್ಖ್ ಅರಸರದು. ೧೭೮೩ ರ ಈ ದಾಳಿಯ ಗುರಿ ಕೂಡ ದಿಲ್ಲಿ ಹಾಗು ಕೆಂಪುಕೋಟೆ. ಈ ಲೂಟಿ ಆವಧ್ ನಿಂದ ಜೋಧಪುರದ ವರೆಗೆ ವಿಸ್ತರಿಸಿತ್ತಂತೆ. ದಿಲ್ಲಿಯಲ್ಲಿ ಏಳು ಗುರುದ್ವಾರಗಳನ್ನು ಸ್ಥಾಪಿಸುವ ಒಪ್ಪಂದದೊಂದಿಗೆ ಮತ್ತೆ ದಿಲ್ಲಿಗೆ ಮುಕ್ತಿ. ಅವುಗಳಲ್ಲಿ ಒಂದು ಕೆಂಪು ಕೋಟೆ ಎದುರಿನ ಚಾಂದನಿ ಚೌಕದಲ್ಲಿದೆ. ೧೭೮೮ ರಲ್ಲಿ ಮತ್ತೆ ಮರಾಠರ ಹಿಡಿತಕ್ಕೆ ಬಂದ ಕೋಟೆ ಅಂತಿಮವಾಗಿ ೧೮೦೩ ಎರಡನೇ ಆಂಗ್ಲೋ ಮರಾಠ ಯುದ್ಧದ ಸೋಲಿನಿಂದ ಈಸ್ಟ್ ಇಂಡಿಯಾ ಕಂಪೆನಿಯ ಹಿಡಿತಕ್ಕೆ ಬಂತು. ಇದರ ಬಳಿಕ ಕೆಂಪುಕೋಟೆ ಬ್ರಿಟಿಷರ ಕೈತಪ್ಪಿದ್ದು ೧೮೫೭ ರ ದಂಗೆಯ ಸಂದರ್ಭದಲ್ಲಿ ಮುಘಲ್ ವಂಶದ ಕಡೆಯ ಕುಡಿ ಬಹುದ್ದೂರ್ ಶಾ ಜಫರ್ ನ ಕಾರಣದಿಂದ ಮಾತ್ರ. ದಂಗೆಯನ್ನು ಅಡಗಿಸಿದ ನಂತರ ಪ್ರತಿರೋಧದ ರೂಪಕದಂತಿದ್ದ ದಿಲ್ಲಿಯ ಕೆಂಪು ಕೋಟೆಯನ್ನು ಬ್ರಿಟಿಷರು ಯೋಜನಾ ಬದ್ಧವಾಗಿ ಹಾಳುಗೆಡವಿದರು. ಆಗ ಕೋಟೆಯ ಒಳಾವರಣದ ಶೇಕಡ ೮೦ ರಷ್ಟು ರಚನೆಗಳನ್ನು ಕೆಡವಿ ಹಾಕಲಾಯ್ತಂತೆ. ಈಗ ಉಳಿದಿರುವುದು ಕೋಟೆಯ ಸುತ್ತಿನ ಕೇವಲ ಅಸ್ಥಿಪಂಜರದಂಥ ರಚನೆ ಮಾತ್ರ. ನಂತರ ಕರ್ಜನ್ನನ ಅವಧಿಯಲ್ಲಿ ಒಂದಷ್ಟು ಪುನರುಜ್ಜೀವನ ನಡೆಯಿತಂತೆ.</p>



<p><br> ಕೆಂಪುಕೋಟೆಯಲ್ಲಿದ್ದ ಮಹತ್ವದ ವಸ್ತುಗಳಲ್ಲಿ ಹಲವು ೧೭೪೭ ರಲ್ಲಿ ನಾದಿರ್ ಶಾ ನೊಂದಿಗೆ ಪರ್ಶಿಯಾಗೆ ಪಯಣಿಸಿದರೆ; ಉಳಿದವು ೧೮೫೭ ರಲ್ಲಿ ಬ್ರಿಟಿಷರಿಂದ ಇಂಗ್ಲೆಂಡಿಗೆ ಮತ್ತು ಖಾಸಗಿ ಮ್ಯೂಸಿಯಂಗಳಿಗೆ ಬಿಕರಿಯಾದವಂತೆ. ೧೯೧೧ ರಲ್ಲಿ ಇಂಗ್ಲೆಂಡಿನ ರಾಜ-ರಾಣಿಯರ ಭೇಟಿಯ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವ ಕಾರಣಕ್ಕೆ ಕೋಟೆಯೊಳಗಿನ ಕೆಲ ರಚನೆಗಳನ್ನು ಪುನ ಸ್ಥಾಪಿಸಲಾಯ್ತೆಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-large"><img loading="lazy" decoding="async" width="1024" height="576" src="https://peepalmedia.com/wp-content/uploads/2022/11/tirugadi-4-1-1024x576.webp" alt="" class="wp-image-15664" srcset="https://peepalmedia.com/wp-content/uploads/2022/11/tirugadi-4-1-1024x576.webp 1024w, https://peepalmedia.com/wp-content/uploads/2022/11/tirugadi-4-1-300x169.webp 300w, https://peepalmedia.com/wp-content/uploads/2022/11/tirugadi-4-1-768x432.webp 768w, https://peepalmedia.com/wp-content/uploads/2022/11/tirugadi-4-1-150x84.webp 150w, https://peepalmedia.com/wp-content/uploads/2022/11/tirugadi-4-1-696x392.webp 696w, https://peepalmedia.com/wp-content/uploads/2022/11/tirugadi-4-1-1068x601.webp 1068w, https://peepalmedia.com/wp-content/uploads/2022/11/tirugadi-4-1.webp 1280w" sizes="auto, (max-width: 1024px) 100vw, 1024px" /></figure></div>


<p>೧೯೪೫ ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿದಾಗ ತಾತ್ವಿಕವಾಗಿ ಮಿತ್ರರಾಷ್ಟ್ರಗಳ ವಿರೋಧ ಪಾಳೆಯದಲ್ಲಿದ್ದ ಐ ಎನ್ ಎ ಸೈನಿಕರ ವಿಚಾರಣೆ ನಡೆಸುವ ಯತ್ನ ನಡೆದದ್ದು ಇದೇ ಕೆಂಪು ಕೋಟೆಯಲ್ಲಿ. ಆಗ ಐ ಎನ್ ಎ ಸೈನಿಕರ ಪರ ವಕಾಲತ್ತು ಹಾಕಿದ ವಕೀಲ ಪಂಡಿತ್ ನೆಹರೂ. ಹಾಗೇ ೧೯೪೭ ರಲ್ಲಿ ಇದೇ ‌ಕೋಟೆಯ ಮೇಲೆ ಮೊದಲ ಸ್ವತಂತ್ರ ‌ಭಾರತದ ಧ್ವಜ ಹಾರಿಸಿದ್ದೂ ಕೂಡ ಅದೇ ನೆಹರೂ. ಈ ಧ್ವಜಾರೋಹಣ ಸಂಪ್ರದಾಯ ಯಾಕೋ ರಾಜಪ್ರಭುತ್ವದ ಪಳೆಯುಳಿಕೆಯಂತೆ ಕಂಡರೂ ಅದಕ್ಕೊಂದು ಚಾರಿತ್ರಿಕ ಮಹತ್ವ ಪ್ರಾಪ್ತವಾಗಿಬಿಟ್ಟಿದೆ. ಕೋಟೆಯ ಶಿಲ್ಪಿ ಲಾಹೋರಿಯ ಹೆಸರನ್ನು ಈಗ ಒಂದು ಪ್ರವೇಶ ದ್ವಾರಕ್ಕೆ ಇರಿಸಲಾಗಿದೆ. ಬ್ರಿಟಿಷರು ಕೋಟೆಯೊಳಗಿನ ಮೂರನೇ ಎರಡರಷ್ಟು ರಚನೆಗಳನ್ನು ನೆಲಸಮ ಮಾಡಿದ ಮೇಲೆಯೂ ಈಗಲೂ ಕೂಡ ಚಚ್ಚಾ ಚೌಕ್, ನೌಬತ್ ಖಾನ, ದಿವಾನ್ ಇ ಖಾಸ್, ದಿವಾನ್ ಇ ಆಮ್, ಮುಮ್ತಾಜ್ ಮಹಲ್, ರಂಗ್ ಮಹಲ್, ಖಾಸ್ ಮಹಲ್, ಬಾವ್ಡಿ, ಮೋತಿ ಮಸೀದಿ, ಹೀರಾ‌ಮಹಲ್ ಉಳಿದಿವೆ. ಈ ಸ್ಮಾರಕಗಳ ಸಂರಕ್ಷಣೆ‌ ತಕ್ಕ ಮಟ್ಟಿಗೆ ನಡೆದಿದ್ದರೂ ಭೆಟ್ಟಿ ನೀಡುವ ಅಧಿಕ ಪ್ರವಾಸಿಗಳ ಕಾರಣಕ್ಕೋ, ಕೋಟೆಯ ಒಳಾವರಣವನ್ನೂ ಸಹ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಮುಕ್ತ ಮಾಡಿರುವ ಕಾರಣಕ್ಕೋ ಸ್ಮಾರಕಗಳ ಸಂರಕ್ಷಣೆ ಉಳಿದ ಹಲವೆಡೆಯಷ್ಟು ವ್ಯವಸ್ಥಿತವಾಗಿ ಇದ್ದಂತೆ ಎನಿಸಲಿಲ್ಲ. ಮೇಲೆ ಪಟ್ಟಿ ಮಾಡಿದವುಗಳಲ್ಲಿ ಮೂರ್ನಾಲ್ಕನ್ನು ಮಾತ್ರ ನಮಗೆ ಕ್ವಚಿತ್ತಾಗಿ ನೋಡಲು ಅವಕಾಶವಾಯ್ತು. ಉಳಿದವನ್ನು ಮುಂದೆಂದಾದರೂ ಮತ್ತೆ‌ ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗ ಸಾವಕಾಶವಾಗಿ ನೋಡಬೇಕಿದೆ.</p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p><strong><em>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</em></strong></p>
]]></content:encoded>
					
		
		
			</item>
		<item>
		<title>ದೆಹಲಿಯಲ್ಲಿ ಸಿಕ್ಕ ʼಅಕ್ಕಲಕೋಟೆ ಸ್ವಾಮಿಗಳುʼ</title>
		<link>https://peepalmedia.com/tirugadi-bando-rohitg-agasarahalli-article-3/</link>
		
		<dc:creator><![CDATA[Rohit Agasarahalli]]></dc:creator>
		<pubDate>Wed, 09 Nov 2022 10:51:13 +0000</pubDate>
				<category><![CDATA[ಪ್ರವಾಸ ಕಥನ]]></category>
		<category><![CDATA[hassan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[rohith agasara halli]]></category>
		<category><![CDATA[tour guide]]></category>
		<category><![CDATA[Travelogue]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14981</guid>

					<description><![CDATA[ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ ಅಂದ ಪರಿಚಯಸ್ಥರ ಸಲಹೆಯಂತೆ ಮಿಸ್‌ ಮಾಡದೆ ಅಲ್ಲಿಗೆ ಹೋದ ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ತಂಡ ಅಲ್ಲಿ ನೋಡಿದ್ದಾದರೂ ಏನನ್ನು? ಓದಿ&#8230; ಇಂಡಿಯಾ ಗೇಟ್ ಬಳಿ ತಿರುಗಾಡಿ ಮುಗಿಸೋ ಹೊತ್ತಿಗೆ ಬಿಸಿಲು‌ ನೆತ್ತಿಗೇರತೊಡಗಿತ್ತು; ಬೆನ್ನಿಗೆ ನಿನ್ನಿನ ಬಿಸಿಲ ಝಳದ ಹಳವಂಡದ ನೆನಪಿತ್ತು! ಹೀಗಾಗಿ ಉಳಿದೆರಡು ಮೂರು ಸ್ಥಳಗಳಲ್ಲಿ ಇನ್ ಡೋರ್ ಎಂಬ ಕಾರಣವೂ ಸೇರಿ NGMA ಆಯ್ಕೆ ಮಾಡಿದೆವು. ಹಿಂದಿನ ಸ್ವರೂಪದಲ್ಲಾಗಿದ್ದರೆ‌ ಇಂಡಿಯಾ ಗೇಟ್ ಹಾಯ್ದು ಬರುವ ರಸ್ತೆಯ ತುದಿಗೇ National [&#8230;]]]></description>
										<content:encoded><![CDATA[
<p class="has-text-align-center"><strong>ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ ಅಂದ ಪರಿಚಯಸ್ಥರ ಸಲಹೆಯಂತೆ ಮಿಸ್‌ ಮಾಡದೆ ಅಲ್ಲಿಗೆ ಹೋದ ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ತಂಡ ಅಲ್ಲಿ ನೋಡಿದ್ದಾದರೂ ಏನನ್ನು? ಓದಿ&#8230;</strong></p>



<p>ಇಂಡಿಯಾ ಗೇಟ್ ಬಳಿ ತಿರುಗಾಡಿ ಮುಗಿಸೋ ಹೊತ್ತಿಗೆ ಬಿಸಿಲು‌ ನೆತ್ತಿಗೇರತೊಡಗಿತ್ತು; ಬೆನ್ನಿಗೆ ನಿನ್ನಿನ ಬಿಸಿಲ ಝಳದ ಹಳವಂಡದ ನೆನಪಿತ್ತು! ಹೀಗಾಗಿ ಉಳಿದೆರಡು ಮೂರು ಸ್ಥಳಗಳಲ್ಲಿ ಇನ್ ಡೋರ್ ಎಂಬ ಕಾರಣವೂ ಸೇರಿ NGMA ಆಯ್ಕೆ ಮಾಡಿದೆವು. ಹಿಂದಿನ ಸ್ವರೂಪದಲ್ಲಾಗಿದ್ದರೆ‌ ಇಂಡಿಯಾ ಗೇಟ್ ಹಾಯ್ದು ಬರುವ ರಸ್ತೆಯ ತುದಿಗೇ National gallery of modern art ಇದೆ. ಆದರೀಗ ಹೆಸರು ಬದಲಿಸಿಕೊಂಡ ರಾಜಪಥದಿಂದ ಒಂದು ರೌಂಡು ಹೊಡಕೊಂಡು NGMA ತಲುಪಿದೆವು. ದಿನೇಶ್ ತಮ್ಮ ಫೋನಿನಲ್ಲಿ ಕೇವಲ ಆರ್ಟ್ ಗ್ಯಾಲರಿ ಎಂದು ಹುಡುಕಿದ್ದರಿಂದ ಬೇರೆಲ್ಲೋ ತೋರಿಸಿತಂತೆ, ನಂತರ ಸರಿಯಾದ ವಿಳಾಸಕ್ಕೆ ತಲುಪಿದರು.</p>



<p><br>ಈ ಆರ್ಟ್ ಗ್ಯಾಲರಿ ಜೈಪುರ್ ಹೌಸ್ ಎಂದು ಕರೆಯಲ್ಪಡುವ ಕಟ್ಟಡ ಸಂಕೀರ್ಣದಲ್ಲಿ ದೆಹಲಿಯ ಹೃದಯ ಭಾಗದಲ್ಲಿದೆ. ಹಿಂದಿನ ದಿನದ ಓಡಾಟದ ಹಾದಿಯಲ್ಲೇ ಕಣ್ಣಿಗೆ ಬಿದ್ದ ಕಾರಣಕ್ಕೆ ನಮ್ಮ ಆಯ್ಕೆ ಪಟ್ಟಿಗೆ ಇದು ಸೇರ್ಪಡೆಯಾಗಿತ್ತು. ಇದರ ಸ್ಥಾಪನೆಯ ಕತೆ ಕಳೆದ ಶತಮಾನದ ಮೂವತ್ತರ‌ ದಶಕದವರೆಗೆ ಚಾಚಿಕೊಳ್ಳುತ್ತದೆ. ೧೯೨೯ ರಲ್ಲಿ ಅಬನೀಂದ್ರನಾಥ ಟಾಕೂರ್ ಅವರ ಶಿಷ್ಯರಿಬ್ಬರಿಂದ ಬೇರೊಂದು ಹೆಸರಿನಿಂದ ಆರಂಭವಾದ ಆಧುನಿಕ ಕಲಾಕೃತಿಗಳ ಎಕ್ಸಿಬಿಷನ್  ಸಾಂಸ್ಥಿಕ ರೂಪ ಧರಿಸಿ ಅಂದಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರಿಂದ, ನೆಹರೂ ಅವರ ಸಾಕ್ಷ್ಯದೊಟ್ಟಿಗೆ ಉದ್ಘಾಟನೆಗೊಂಡದ್ದು ೧೯೫೪ ರಲ್ಲಿ. ದೇಶದಲ್ಲಿ ಇದರ ಇನ್ನೆರಡು ಬ್ರಾಂಚುಗಳಿವೆ. ಅವೆರಡರಲ್ಲಿ ಒಂದು ನಮ್ಮ ಬೆಂಗಳೂರಿನಲ್ಲಿದೆ. ವಿಧಾನಸೌಧ, ರೇಸ್ ಕೋರ್ಸಿನಿಂದ ಕೂಗಳತೆ ದೂರದಲ್ಲಿ ಕಾರ್ಮೆಲ್ ಕಾಲೇಜಿನ ಪಕ್ಕದಲ್ಲಿದೆ. ಬಹಳ ವರ್ಷಗಳ ಹಿಂದೆ ಬೆಂಗಳೂರಿನ NGMA ಒಮ್ಮೆ  ನೋಡಿದ್ದೆ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tirugadi1-576x1024.webp" alt="" class="wp-image-14990" srcset="https://peepalmedia.com/wp-content/uploads/2022/11/tirugadi1-576x1024.webp 576w, https://peepalmedia.com/wp-content/uploads/2022/11/tirugadi1-169x300.webp 169w, https://peepalmedia.com/wp-content/uploads/2022/11/tirugadi1-150x267.webp 150w, https://peepalmedia.com/wp-content/uploads/2022/11/tirugadi1-300x533.webp 300w, https://peepalmedia.com/wp-content/uploads/2022/11/tirugadi1-696x1237.webp 696w, https://peepalmedia.com/wp-content/uploads/2022/11/tirugadi1.webp 720w" sizes="auto, (max-width: 576px) 100vw, 576px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tg02-576x1024.webp" alt="" class="wp-image-14993" srcset="https://peepalmedia.com/wp-content/uploads/2022/11/tg02-576x1024.webp 576w, https://peepalmedia.com/wp-content/uploads/2022/11/tg02-169x300.webp 169w, https://peepalmedia.com/wp-content/uploads/2022/11/tg02-150x267.webp 150w, https://peepalmedia.com/wp-content/uploads/2022/11/tg02-300x533.webp 300w, https://peepalmedia.com/wp-content/uploads/2022/11/tg02-696x1237.webp 696w, https://peepalmedia.com/wp-content/uploads/2022/11/tg02.webp 720w" sizes="auto, (max-width: 576px) 100vw, 576px" /></figure>
</div>
</div>



<p><br>ಒಟ್ಟು ಇದರ ಸಂಕೀರ್ಣದಲ್ಲಿ ನಾಕಾರು ಕಟ್ಟಡಗಳಿದ್ದು ಪ್ರವೇಶ ದ್ವಾರದ ಹಿಂಭಾಗದಲ್ಲಿರುವ ನಾಕು ಅಂತಸ್ತಿನ ಕಟ್ಟಡದಲ್ಲಿ ಕಲಾಕೃತಿಗಳ ವ್ಯವಸ್ಥಿತ ಪ್ರದರ್ಶನ ಇದೆ. ಕಳೆದ ೧೫೦-೨೦೦ ವರ್ಷಗಳ ಹಿಂದಿನ ರಚನೆಗಳಿಂದ ನಿನ್ನೆ ಮೊನ್ನೆವರೆಗಿನ ಕಲಾಕೃತಿಗಳು, ಕಲಾವಿದರ ಮಾಹಿತಿ ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ಆರಂಭದಲ್ಲಿಯೇ ಮೈಸೂರು ಶೈಲಿಯ ಪೇಂಟಿಂಗ್ ಮತ್ತು ಟೀಪು ಸುಲ್ತಾನನ ಸುಂದರ ಚಿತ್ರ ಗಮನ ಸೆಳೆಯಿತು. ಯಾವುದೋ ಸ್ವಾಮಿಗಳೊಬ್ಬರ ಚಿತ್ರ ನೋಡಿ ನನ್ನಾಕೆ &#8220;ಓ ಅಕ್ಕಲಕೋಟೆ ಸ್ವಾಮಿಗಳು&#8221; ಅಂದಳು.‌ ಈ ಅಕ್ಕಲಕೋಟೆ, ಜತ್ತ, ಸೊಲ್ಲಾಪುರ ಎಲ್ಲವೂ ಅಚ್ಚಗನ್ನಡದ ಪ್ರದೇಶಗಳಾಗಿದ್ದರೂ ಮಹಾರಾಷ್ಟ್ರದಲ್ಲಿಯೇ ಉಳಿದುಬಿಟ್ಟ ಊರುಗಳಲ್ಲಿ ಕೆಲವು. ಉತ್ತರ ಕರ್ನಾಟಕದಲ್ಲಿ ಭಕ್ತಾದಿಗಳನ್ನು ಹೊಂದಿರುವ ಸ್ವಾಮಿ ಸಮರ್ಥರು ಉರುಫ್ ಅಕ್ಕಲಕೋಟೆ ಸ್ವಾಮಿಗಳ ಚಿತ್ರವೊಂದು (ಬಹುಶಃ ವಾಟರ್ ಕಲರ್) ಅಲ್ಲಿತ್ತು.</p>



<p><br> ಕಳೆದ ಒಂದೂವರೆ ಶತಮಾನದಲ್ಲಿ ಭಾರತೀಯ ವರ್ಣಚಿತ್ರಕಲಾ ಕ್ಷೇತ್ರದಲ್ಲಿ ನಡೆದಿರಬಹುದಾದ ಎಲ್ಲ ರೀತಿಯ ಪ್ರಯೋಗಗಳು, ದೇಶದ ಬೇರೆ ಬೇರೆ ಭಾಗಗಳಿಗೆ ಸೇರಿದ ಕಲಾವಿದರ ಪ್ರಾತಿನಿಧಿಕ ಕಲಾಕೃತಿಗಳ ಮೇಳವೇ ಅಲ್ಲಿತ್ತು. ಹೆಚ್ಚಿನ ಪಾಲು ಚಿತ್ರಗಳು. ಅಲ್ಲಲ್ಲಿ ಇತರೆ ಮಾದರಿಯ ಕಲಾಕೃತಿಗಳನ್ನೂ ಪ್ರದರ್ಶಿಸಿದ್ದರು. ಇಲ್ಲಿನ ಸಂಪೂರ್ಣ ಓಡಾಟದಲ್ಲಿ ನನ್ನ ಜತೆಗಿದ್ದವ ಗೆಳೆಯ ದಿನೇಶ್ ಅವರ ೧೨ ರ ಪೋರ ಆರುಷ. ಒಂದೊಂದೂ ಪೇಟಿಂಗ್ ನೋಡುತ್ತಾ ತನಗನಿಸಿದ್ದನ್ನು ಹೇಳುತ್ತಿದ್ದ‌. ಒಂದು ಕಡೆಯಂತೂ ಕೇವಲ ಗೆರೆಗಳನ್ನೇ ಬಳಸಿ ಏನೋ ಸಂಕೀರ್ಣ ಭಾವ ಹೊಮ್ಮಿಸಲು ಪ್ರಯತ್ನಿಸಿರಬಹುದಾದ ಚಿತ್ರವೊಂದನ್ನು ನೋಡಿ<br>&#8221; ಇದೇನಂಕಲ್ ಸಣ್ಣ ಮಕ್ಳು ಬರ್ದಿರೋಂಗಿದೆ ಇದು&#8221; ಅಂದ!  ಅವನಿಗೆ ಏನು ಸಮಜಾಯಿಷಿ ಕೊಟ್ಟೆನೊ ಕಾಣೆ; ಆದರೆ ಕೆಲವರ್ಷಗಳ ಹಿಂದೆ ಆಧುನಿಕ ಕಲಾಕೃತಿಗಳನ್ನು ಅರ್ಥೈಸುವುದರ ಕುರಿತು ಮಯೂರದಲ್ಲಿ  ಪ್ರಕಟವಾಗುತ್ತಿದ್ದ ಕಲಾವಿದ ರವಿಕುಮಾರ್ ಕಾಶಿ ಅವರ ಬರೆಹಗಳೂ ಮತ್ತು ಆಗಾಗ ಫೇಸ್ಬುಕ್ಕಿನ ತಮ್ಮ ಪೇಜಿನಲ್ಲಿ ರಾಜಾರಾಂ ತಲ್ಲೂರ್ ಅವರು ಛಾಪಿಸುವ ಅವರ ಸೋದರರ ಕಲಾಕೃತಿಗಳೆಲ್ಲ ಕಣ್ಮುಂದೆ ಸುಳಿದು ಹೋದವು.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/tg3-576x1024.webp" alt="" class="wp-image-14995" srcset="https://peepalmedia.com/wp-content/uploads/2022/11/tg3-576x1024.webp 576w, https://peepalmedia.com/wp-content/uploads/2022/11/tg3-169x300.webp 169w, https://peepalmedia.com/wp-content/uploads/2022/11/tg3-150x267.webp 150w, https://peepalmedia.com/wp-content/uploads/2022/11/tg3-300x533.webp 300w, https://peepalmedia.com/wp-content/uploads/2022/11/tg3-696x1237.webp 696w, https://peepalmedia.com/wp-content/uploads/2022/11/tg3.webp 720w" sizes="auto, (max-width: 576px) 100vw, 576px" /></figure>
</div>



<div class="wp-block-column is-layout-flow wp-block-column-is-layout-flow">
<figure class="wp-block-image size-large"><img loading="lazy" decoding="async" width="576" height="1024" src="https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-576x1024.jpeg" alt="" class="wp-image-14996" srcset="https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-576x1024.jpeg 576w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-169x300.jpeg 169w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-150x267.jpeg 150w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-300x533.jpeg 300w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM-696x1237.jpeg 696w, https://peepalmedia.com/wp-content/uploads/2022/11/WhatsApp-Image-2022-11-09-at-3.51.22-PM.jpeg 720w" sizes="auto, (max-width: 576px) 100vw, 576px" /></figure>
</div>
</div>



<p><br> ಒಬ್ಬ ಮುಸ್ಲಿಂ ಕಲಾವಿದ ಬರೆದ ರಾಧಾಕೃಷ್ಣರ ಅದ್ಭುತ‌ ರೇಖಾಚಿತ್ರವೂ, ಪ್ರವಾದಿಗಳ ಬಗ್ಗೆ ಮುಸ್ಲಿಮೇತರ ಕಲಾವಿದನೊಬ್ಬ ಚಿತ್ರಿಸಿದ ಸಂಕೀರ್ಣ ಮಾದರಿಯ ಉಬ್ಬುಚಿತ್ರವೂ ಗಮನ ಸೆಳೆದವು. ಆಗ ಕೂಡಲೆ ನೆನಪಾದದ್ದು ಕಡೆಗಾಲದಲ್ಲಿ ದೇಶಭ್ರಷ್ಟನಾಗಿ ಓಮನ್ ನಲ್ಲಿಯೋ, ಕತಾರ್ ನಲ್ಲಿಯೋ ಜೀವ ತೊರೆದ ಎಂ.ಎಫ್. ಹುಸೇನ್. ಎಂ.ಎಫ್. ಹುಸೇನ್ ಬಗ್ಗೆ ಅವರ ಜೀವನಪ್ರೀತಿ ಮತ್ತು ವಿಚಿತ್ರ ಪ್ರಯೋಗಶೀಲತೆ ಕುರಿತು ಕರ್ನಾಟಕದವರೊಬ್ಬರು ಪುಟ್ಟದಾದರೂ ಒಳ್ಳೆಯ ಕೃತಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ಹುಸೇನ್ ಅವರ ಬೆಂಗಳೂರಿನ / ಕನ್ನಡದ ನಂಟೂ ಇದೆ. ಅವರೊಮ್ಮೆ ಬೆಂಗಳೂರಿನಲ್ಲಿದ್ದಾಗ ರಚಿಸಿದ ತಮ್ಮ ಪೇಂಟಿಂಗಿಗೆ ಕನ್ನಡದಲ್ಲಿ ಸಹಿ ಮಾಡಿದ್ದಾರೆ. ಕಲಾವಿದನ ಮನೋಲೋಕವನ್ನು ಅವನ ಸೃಜನಶೀಲತೆಯ ಆಳ ಅಗಲಗಳನ್ನು ಕಲಾರಸಿಕರು ಜನ ಅರ್ಥ ಮಾಡಿಕೊಳ್ಳದೇ ಹೋದರೆ ಆತನನ್ನು ಲೌಕಿಕ ಜಾತಿ ಧರ್ಮಗಳ ಹುದಲಲ್ಲಿ ಸಿಕ್ಕಿಸಿ ನೋಡಲೆಳಸಿದರೆ ಅವನೆಂದಿಗೂ ನಿಜಾರ್ಥದಲ್ಲಿ ದಕ್ಕಲಾರ ಎಂದು ಯೋಚಿಸುವ ಹೊತ್ತಿಗೆ ಸಾಕ್ಷಾತ್ ಹುಸೇನರ ಚಿತ್ರಗಳೇ ನೋಡಲು ಸಿಕ್ಕವು.</p>



<p><br>ಅಚ್ಚಕನ್ನಡದ ಹೆಮ್ಮೆಯ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರ ಹಲವು ಪೇಂಟಿಂಗ್ ಗಳು ಗಮನ ಸೆಳೆದವು. ನಾನು ಪ್ರೈಮರಿ ಓದುವಾಗ ಕೆ.ಕೆ. ಹೆಬ್ಬಾರರ ಬಗ್ಗೆ ಪಾಠವಿತ್ತು. ಬಹುಶಃ ಆಗ ಅದು ಬೋರ್ ಹೊಡೆಸಿರಬಹುದು. ಈಗ ಸುಮ್ಮನೆ ಗೆರೆ ಎಳೆದಂತೆ‌ ಮೇಲ್ನೋಟಕ್ಕೆ ಕಾಣುವ ಹೆಬ್ಬಾರರ ಕಲಾಕೃತಿಗಳು ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. NGMA ದಲ್ಲಿ ಕಲಾಕೃತಿಗಳ ಫೋಟೋ ಸೆರೆಹಿಡಿಯಲು‌‌ ನಿರ್ಬಂಧವಿದೆ. ಆದರೂ ಒಂದು ನಾಕೈದು ಚಿತ್ರಗಳನ್ನು ಕದ್ದು ಮುಚ್ಚಿ ಮೊಬೈಲಲ್ಲಿ ಬಂಧಿಸಿದೆ.<br>ಎಂಟ್ರೀ ಪಾಯಿಂಟ್ ಪಕ್ಕದಲ್ಲಿಯೇ ವ್ಯವಸ್ಥಿತವಾದ ಪುಸ್ತಕದ‌ ಮಳಿಗೆ, ಕಲಾಕೃತಿಗಳ ಫೋಟೋ ಗ್ರೀಟಿಂಗ್ ಮಾರಾಟ ಎಲ್ಲವಕ್ಕೂ ಅವಕಾಶವಿತ್ತು. ಅಲ್ಲಿಯೂ ಒಂದು ಸುತ್ತು ಹಾಕಿ ಹೊರಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು.</p>


<div class="wp-block-image">
<figure class="aligncenter size-full"><img loading="lazy" decoding="async" width="850" height="586" src="https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM.jpeg" alt="" class="wp-image-14997" srcset="https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM.jpeg 850w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-300x207.jpeg 300w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-768x529.jpeg 768w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-150x103.jpeg 150w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-218x150.jpeg 218w, https://peepalmedia.com/wp-content/uploads/2022/11/WhatsApp-Image-2022-11-09-at-3.54.12-PM-696x480.jpeg 696w" sizes="auto, (max-width: 850px) 100vw, 850px" /></figure></div>


<p><br><strong>ಜೀವಂತಿಕೆ ಇಲ್ಲದ ಧಾಮದ ಹೆಸರಿನ ವ್ಯಾಪಾರ ಕೇಂದ್ರವೂ&#8230; ಯಾಂತ್ರಿಕ ವ್ಯಾಪಾರದ ಸುಲಿಗೆಯ ಹೋಟೆಲೂ&#8230;.<br></strong>ಕಲಾಗ್ಯಾಲರಿಯಿಂದ ಹೊರಬಂದವರೇ ಊಟ ಮತ್ತು ಮುಂದಿನ ಜಾಗ ಯಾವುದೆಂದು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಟ್ಯಾಕ್ಸಿ ಬುಕ್ ಮಾಡಿಕೊಂಡು ಅಕ್ಷರ‌ಧಾಮಕ್ಕೆ ಹೋಗುವ ದಾರಿಯಲ್ಲಿ ಎಲ್ಲಾದರೂ ಹೊಟ್ಟೆಪಾಡು ನೋಡಿಕೊಳ್ಳುವುದೆಂದು ಡ್ರೈವರಣ್ಣನಿಗೆ ಕೇಳಿದ್ದಕ್ಕೆ; ಅಕ್ಷರಧಾಮದ ಎಂಟ್ರೆನ್ಸ್ ಪಕ್ಕದಲ್ಲಿಯೇ ಹಳ್ದಿರಾಮ್ ಹೋಟೆಲ್ ಇದೆ ಎಂದು ಹೇಳಿದ. ಸರಿ ಎಂದು ಅಲ್ಲಿಗೆ ಡ್ರಾಪ್ ಪಡೆದೆವು. ಅಕ್ಷರಧಾಮ ಮೆಟ್ರೋ ಸ್ಟೇಷನ್ನಿನ ಕೆಳಗಿನ ಫ್ಲೋರೇ ಹಳ್ದೀ ರಾಮ್ ಹೋಟೆಲು. ನಿಮಿಷಕ್ಕೊಮ್ಮೆ ರೈಲಿನ ಜೂಂಯ್ ಶಬ್ದ ಕೇಳುತ್ತಿತ್ತು. ಅಲ್ಲೋ ವಿಚಿತ್ರ ವ್ಯಾಪಾರೀ ಪದ್ಧತಿ. ಪ್ರತೀ ಟೇಬಲಿನ ಮೂಲೆಯಲ್ಲಿ ಒಂದು ಕ್ಯೂ ಆರ್‌ ಕೋಡ್ ಅಂಟಿಸಿದ್ದಾರೆ. ಅದನ್ನು ನಮ್ಮ ನಮ್ಮ ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ಅಲ್ಲಿಯೇ ಮೆನು ತೆರೆದುಕೊಳ್ಳುತ್ತದೆ. ಅಲ್ಲಿಯೇ ಆರ್ಡರ್‌ ಮಾಡುವುದಂತೆ, ಅದೂ ಮೊದಲೇ ಹಣ ಪೀಕಿ. ಆಮೇಲೆ ಅವರು ಯಾವ ಕೌಂಟರಿನಲ್ಲಿ ನೀವು ಕೇಳಿದ್ದ ಐಟಮ್ ಲಭ್ಯವೆಂದು ವಾಟ್ಸಾಪ್‌ ಮೆಸೇಜು ಕಳಿಸುತ್ತಾನೆ. ಅದನ್ನು ಹುಡುಕಿ ಗ್ರಾಹಕರೇ ಭಿಕ್ಷುಕರಂತೆ ತಟ್ಟೆ ಹಿಡ್ಕಂಡು ಸಾಲಿನಲ್ಲಿ ನಿಂತು ಪಡೆದು ಬೇಕಿದ್ದರೆ ತಿನ್ನಬಹುದು, ಇಲ್ಲವೇ ಹಾಗೇ ಬಿಡಬಹುದು! ಇಂಥದೊಂದು ವಿಚಿತ್ರ ಪದ್ಧತಿಯನ್ನು ನಾವಂತೂ ಯಾರೂ ಎಲ್ಲೂ ಕಂಡಿರಲಿಲ್ಲ. ಏನೊ ಏನಾದರೂ ತಿಂದು ಬದುಕಬೇಕಿತ್ತು. ಅಷ್ಟು ಪೂರೈಸಿದೆವು. ಇರಲಿ, ನಾವಲ್ಲಿ ಹೋಗಿದ್ದು ಅಕ್ಷರ‌ಧಾಮ ನೋಡಲು. ಈ ಐಟಮ್ಮು ನಮ್ಮ ನೋಡುವ ಲಿಸ್ಟಿಗೆ ಸೇರ್ಪಡೆಯಾಗಿರಲಿಲ್ಲ.</p>



<p>ಹಾಸನದಿಂದ ನಾವು ಹೊರಡೋ ಹಿಂದಿನ ದಿನ ಶಿವಮೊಗ್ಗದ ಗೆಳೆಯರೊಬ್ಬರು ಫೋನು ಮಾಡಿ, ತಾವು ಮೈಸೂರು ಕಡೆ ಹೊರಟಿರುವುದಾಗಿಯೂ ರಸ್ತೆ ಚೆನ್ನಾಗಿಲ್ಲವಂತೆ ಏನು ಮಾಡುವುದು ಅಂದರು. ಬಾಣಾವರದಿಂದ ಹಳೇಬೀಡು ಹಾಸನ ಹೊಳೆನರಸೀಪುರ ಮಾರ್ಗವಾಗಿ ಹೋಗಿ ಚೆನ್ನಾಗಿದೆ ಎಂದು ಹೇಳಿ, ಹಾಗೇ ಬರೋ ದಾರಿಯಲ್ಲೇ ನಮ್ಮ ಮನೆ ಬನ್ನಿ ಎಂದೆ. ಗೆಳೆಯರು ಅವರ ಸ್ನೇಹಿತರೊಟ್ಟಿಗೆ ಬಂದರು. ನಾವೂ ಹೊರಡೋ ತಯಾರಿಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಲಿಲ್ಲ, ಚಾ, ಹಣ್ಣು ಕೊಟ್ಟು ಅಥಿತಿ ಸತ್ಕಾರವನ್ನು ಪೂರೈಸಿದೆವು. ನಮ್ಮ ಡೆಲ್ಲಿ ಟೂರಿನ ವಿಷಯ ಕೇಳಿ, ಹಾಗಿದ್ದರೆ ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ, ಅಲ್ಲಿ ಒಂದು ಲೇಸರ್ ಶೋ ಇರ್ತದೆ. ಮಕ್ಕಳು ಖುಶಿ ಪಡ್ತಾರೆ ಅಂದರು‌‌. ಅವರು ಬಹಳ ಗಂಭೀರವಾಗಿಯೇ ಈ ಸಲಹೆ ಇತ್ತ ಕಾರಣಕ್ಕೆ ನಾನೂ ದಿನೇಶ್ ಅವರಿಗೆ ಈ ಧಾಮವನ್ನು ನೆನಪಿಸುತ್ತಲೇ ಇದ್ದೆ. ಈಗ ಅದರ ಗೇಟಿಗೆ ಬಂದು ನಿಂತಿದ್ದೆವು. ಪರ್ಸು, ನೀರಿನ ಬಾಟಲು ಬಿಟ್ಟು ಏನೂ ಒಳ ಒಯ್ಯುವಂತಿಲ್ಲ. ಬೆಲ್ಟ್ ಕೂಡ ಬಿಚ್ಚಿ ಕೊಟ್ಟು ನಂತರ ಪಡೆಯೋ ಸೆಕ್ಯುರಿಟಿ ವ್ಯವಸ್ಥೆಯೇ ಕಿರಿಕಿರಿ ಎನಿಸಿತು. ಒಳ ಹೋದರೆ ಭವ್ಯವಾದ ಶಾಪಿಂಗ್ ಕಾಂಪ್ಲೆಕ್ಸ್ ಮಾದರಿಯ ಏನೇನೊ‌ ಕಟ್ಟಡಗಳು, ಕಾರಂಜಿಗಳು, ಕೌಂಟರುಗಳು, ಆದರೆ ನೋಡಬಹುದಾದುದು ಏನೂ ಇಲ್ಲ ಅಂತ ತಿಳಿಯಲು ಬಹಳ ಹೊತ್ತೇನೂ ಹಿಡಿಯಲಿಲ್ಲ. ಆದರೂ ನನಗೆ ಲೇಸರ್ ಶೋ ಆಕರ್ಷಣೆ. ಗುಂಪಿನ ಬಹುಮತ ಕೂಡಲೆ ಹೊರ ಹೊರಡುವುದರಲ್ಲಿತ್ತು. ವಾಪಾಸು ಹೊರಟೆವು. ಬರೋ ದಾರಿಯಲ್ಲಿ ಹೋಟೆಲು, ಶಾಪಿಂಗು, ಅಮ್ಯೂಸ್ ಮೆಂಟ್ ಪಾರ್ಕು, ಎಲ್ಲಕ್ಕೂ ಟಿಕೇಟು, ಲೇಸರ್ ಶೋದ ಕಂಟೆಂಟು ನೋಡಿದ ಮೇಲೆ ಅದನ್ನೂ ನೋಡಬೇಕು ಅನ್ನೋ ಕುತೂಹಲ ಉಳಿಯಲಿಲ್ಲ. ವಾಸ್ತವ ಎಂದರೆ ಅಕ್ಷರಧಾಮ ಎಂದರೆ ದೇವಾಲಯ ಅಂತ ನಮಗಾರಿಗೂ ಕಲ್ಪನೆ ಇರಲಿಲ್ಲ. ನಾನೆಲ್ಲೋ ಥೀಮ್ ಪಾರ್ಕ್ ಎಂದು ಓದಿದ್ದ ನೆನಪಿತ್ತು. ಅಕ್ಷರ ಧಾಮಕ್ಕೆ ಹೋಗೋ ದಾರಿಯಲ್ಲಿ ಜಮುನಾ ನದಿಯನ್ನು ಕಂಡು ಪುಣ್ಯ ಕಟ್ಟಿಕೊಂಡೆವು ಅಷ್ಟೇ. ಇದೆಲ್ಲ ಆದ ಮೇಲೆ ಇನ್ನು ಮನೆಗೆ ಬರುವ ಅತಿಥಿಗಳಿಗೆ ಸರಿಯಾದ ಸತ್ಕಾರ ಮಾಡದಿದ್ದರೆ ಹೀಗೂ ಸೇಡು ತೀರಿಸಿಕೊಳ್ಳುತ್ತಾರೆ! ಎಂದುಕೊಂಡೆ.</p>



<p></p>



<p></p>



<p><strong>ರೋಹಿತ್‌ ಅಗಸರಹಳ್ಳಿ</strong></p>



<p><em>ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.</em></p>
]]></content:encoded>
					
		
		
			</item>
	</channel>
</rss>
