<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>sagara &#8211; Peepal Media</title>
	<atom:link href="https://peepalmedia.com/tag/sagara/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 24 Jun 2023 03:49:41 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>sagara &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಶಾಲಾ ಬಾಲಕಿಯ ಅನುಮಾನಾಸ್ಪದ ಸಾವಿನ ಪ್ರಕರಣ ; ಮುಖ್ಯ ಆರೋಪಿ ವನಶ್ರೀ ಮಂಜಪ್ಪನಿಗೆ ಜಾಮೀನು ಮಂಜೂರು</title>
		<link>https://peepalmedia.com/case-of-suspicious-death-of-school-girl-the-main-accused-vanashree-manjappa-was-granted-bail/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 24 Jun 2023 03:45:55 +0000</pubDate>
				<category><![CDATA[ಶಿವಮೊಗ್ಗ]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[POCSO act]]></category>
		<category><![CDATA[sagara]]></category>
		<category><![CDATA[Vanashree Manjappa]]></category>
		<guid isPermaLink="false">https://peepalmedia.com/?p=22661</guid>

					<description><![CDATA[ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಹತ್ವದ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ವನಶ್ರೀ ವಸತಿ ಶಾಲೆ ಸಂಸ್ಥಾಪಕ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಅವರನ್ನು ಬಿಡುಗಡೆಗೆ [&#8230;]]]></description>
										<content:encoded><![CDATA[
<figure class="wp-block-image size-large"><img fetchpriority="high" decoding="async" width="1024" height="576" src="https://peepalmedia.com/wp-content/uploads/2023/06/FB_IMG_1686398317652-1024x576.jpg" alt="" class="wp-image-22664" srcset="https://peepalmedia.com/wp-content/uploads/2023/06/FB_IMG_1686398317652-1024x576.jpg 1024w, https://peepalmedia.com/wp-content/uploads/2023/06/FB_IMG_1686398317652-300x169.jpg 300w, https://peepalmedia.com/wp-content/uploads/2023/06/FB_IMG_1686398317652-768x432.jpg 768w, https://peepalmedia.com/wp-content/uploads/2023/06/FB_IMG_1686398317652-150x84.jpg 150w, https://peepalmedia.com/wp-content/uploads/2023/06/FB_IMG_1686398317652-696x392.jpg 696w, https://peepalmedia.com/wp-content/uploads/2023/06/FB_IMG_1686398317652-1068x601.jpg 1068w, https://peepalmedia.com/wp-content/uploads/2023/06/FB_IMG_1686398317652.jpg 1080w" sizes="(max-width: 1024px) 100vw, 1024px" /></figure>



<p>ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ವನಶ್ರೀ ವಸತಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.</p>



<p>ಶುಕ್ರವಾರ ನಡೆದ ವಿಚಾರಣೆಯಲ್ಲಿ ಮಹತ್ವದ ಸಾಕ್ಷಾಧಾರಗಳ ಕೊರತೆಯ ಕಾರಣಕ್ಕೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ ಎಂದು ತಿಳಿದು ಬಂದಿದೆ. ವನಶ್ರೀ ವಸತಿ ಶಾಲೆ ಸಂಸ್ಥಾಪಕ ಮುಖ್ಯಸ್ಥ ವನಶ್ರೀ ಮಂಜಪ್ಪಗೆ ನ್ಯಾಯಾಧೀಶೆ ಲತಾರವರು 1 ಲಕ್ಷ ರೂ. ಬಾಂಡ್ ಹಾಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಅವರನ್ನು ಬಿಡುಗಡೆಗೆ ಆದೇಶಿಸಿದ್ದಾರೆ.</p>



<p>ಮೃತ ವಿದ್ಯಾರ್ಥಿನಿ ತನ್ನ ಮೇಲೆ ದೌರ್ಜನ್ಯ ನಡೆದಿದೆ ಎಂದು ತನ್ನ ಸಹಪಾಠಿ ವಿದ್ಯಾರ್ಥಿಗಳಿಗೆ, ಶಾಲೆಯ ಬೇರಾವುದೇ ಸಿಬ್ಬಂದಿಗಳಿಗೆ ಯಾವುದೇ ವಿಚಾರವನ್ನೂ ಹೇಳಿಲ್ಲ, ಉಳಿದ ಮಕ್ಕಳು ಮೃತರ ತಾಯಿಗೆ ಹೇಳಿದ್ದು ಬಿಟ್ಟರೆ ಬೇರಾವ ಸಾಕ್ಷ್ಯಗಳೂ ಇಲ್ಲ.</p>



<p>ಹಾಗೆಯೇ ವನಶ್ರೀ ಮಂಜಪ್ಪ ಮೃತ ವಿದ್ಯಾರ್ಥಿನಿಯ ಕೈ-ಕಾಲಿಗೆ ಮುಲಾಮು ಹಚ್ಚಿದ್ದರ ಕುರಿತು ಆಕೆಯ ಸಹಪಾಠಿಗಳಿಗೆ ಹೇಳಿದ ಯಾವುದೇ ದಾಖಲೆಗಳಿಲ್ಲ ಎಂದೂ ಆರೋಪಿ ಪರ ವಕೀಲರಾದ ಅಶೋಕ್ ಭಟ್ ತಮ್ಮ ವಾದ ಮಂಡಿಸಿದ್ದಾರೆ.</p>



<p>ಇನ್ನು ಮೃತ ವಿದ್ಯಾರ್ಥಿನಿ ಮತ್ತು ಇನ್ನೋರ್ವ ವಿಧ್ಯಾರ್ಥಿನಿಗೆ ಲೀಟರುಗಟ್ಟಲೆ ನೀರು ಕುಡಿಸಿದ ವಿಚಾರವಾಗಿ, ಆಸ್ಪತ್ರೆಗೆ ಸಾಗಿಸುವಾಗ ನಡೆದ ಶಾಲಾ ಮುಖ್ಯಸ್ಥರ ಅಜಾಗರೂಕತೆ ವಿಚಾರವಾಗಿ ಅಷ್ಟು ಬಲವಾದ ವಾದ ನಡೆಯಲಿಲ್ಲ ಎಂದು ತಿಳಿದು ಬಂದಿದೆ.</p>



<p>ಮೃತ ಬಾಲಕಿಯ ತಾಯಿಯ ದೂರಿನನ್ವಯ ವಸತಿ ಶಾಲಾ ಮುಖ್ಯಸ್ಥರ ವಿರುದ್ಧ ಪೋಕ್ಸೋ ಸೆಕ್ಷನ್ 8, 12, ಅಟ್ರಾಸಿಟಿ ಸೆಕ್ಷನ್ 3, ಐಪಿಸಿ ಸೆಕ್ಷನ್ 504, 506ರ ಅಡಿಯಲ್ಲಿ ದೂರು ದಾಖಲಾಗಿತ್ತು. ಸಧ್ಯ ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ವನಶ್ರೀ ಮಂಜಪ್ಪನಿಗೆ ಶಿವಮೊಗ್ಗ ಫಾಸ್ಟ್ ಟ್ರಾಕ್ ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.</p>
]]></content:encoded>
					
		
		
			</item>
		<item>
		<title>ವನಶ್ರೀ ಮಂಜಪ್ಪನ ವಿರುದ್ಧ ಎಫ್‌ ಐ ಆರ್‌ ನಲ್ಲಿ ಏನೇನಿದೆ?</title>
		<link>https://peepalmedia.com/what-is-in-the-fir-against-vanashree-manjappa/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 13 Jun 2023 11:35:49 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[Death case]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[Sexual Harassment]]></category>
		<category><![CDATA[SHIVAMOGGA POLICE]]></category>
		<category><![CDATA[Vanashree Manjappa]]></category>
		<guid isPermaLink="false">https://peepalmedia.com/?p=22350</guid>

					<description><![CDATA[ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ. ತನ್ನ ವಸತಿ ನಿಲಯಕ್ಕೆ [&#8230;]]]></description>
										<content:encoded><![CDATA[
<p>ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ.</p>



<p>ತನ್ನ ವಸತಿ ನಿಲಯಕ್ಕೆ ಸೇರಿದ ಕೂಡಲೇ ಏನೂ ತಿಳಿಯದ ಈ ಪರಿಶಿಷ್ಟ ಅಲೆಮಾರಿ ಸಮುದಾಯದ ವಿದ್ಯಾರ್ಥಿನಿಗೆ ಯೋಗಾಭ್ಯಾಸದ ಹೆಸರಿನಲ್ಲಿ ವಿಪರೀತ ದೇಹ ದಂಡಿಸಿದ್ದ ಮಂಜಪ್ಪ ನಂತರದಲ್ಲಿ ಅತಿರೇಕದ ಕೃತ್ಯಗಳನ್ನು ನಡೆಸಿ ಬಾಲಕಿಯ ದುರ್ಮರಣಕ್ಕೆ ಕಾರಣವಾಗಿರುವ ಕುರಿತು ಎಲ್ಲವನ್ನೂ ಖುದ್ದಾಗಿ ನೋಡಿರುವ ಬಾಲಕಿಯರು ದೂರಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು 12.06.2023ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ನೇತೃತ್ವದ ತಂಡ ವಸತಿ ನಿಲಯಕ್ಕೆ ಭೇಟಿ ನೀಡಿ ಸಂತ್ರಸ್ತ ಬಾಲಕಿಯರ ಮಾತುಗಳನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿದೆ. ಜೊತೆಯಲ್ಲಿ ಪಂಚನಾಮೆ ಪ್ರಕ್ರಿಯೆ ಸಹ ನಡೆಸಲಾಗಿದೆ.</p>



<p><strong>ಪೀಪಲ್‌ ಮೀಡಿಯಾ</strong>ಕ್ಕೆ ಲಭ್ಯವಾಗಿರುವ ಎಫ್‌ ಐ ಆರ್‌ (ಪ್ರಥಮ ವರ್ತಮಾನ ವರದಿ) ಪ್ರತಿಯಲ್ಲಿ ಉಲ್ಲೇಖವಾಗಿರುವಂತೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 10-06-2023ರಂದು ದೂರು ದಾಖಲಾಗಿದೆ.</p>



<p><strong>FIRನಲ್ಲಿ ಏನಿದೆ?</strong><br>ವನಶ್ರೀ ಮಂಜಪ್ಪ ನಡೆಸುವ ವಸತಿ ಶಾಲೆಗೆ ಸೇರಿದ್ದ ವಿದ್ಯಾರ್ಥಿನಿಯ ತಾಯಿಯು ನೀಡಿರುವ ದೂರಿನಲ್ಲಿ ಆಘಾತಕಾರಿ ಅಂಶಗಳಿವೆ. ದಿನಾಂಕ 04-06-23ರಂದು ಮೃತ ವಿದ್ಯಾರ್ಥಿನಿಯೂ ಸೇರಿದಂತೆ ಐದು ಮಂದಿ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ದಾಖಲಾಗಿದ್ದರು. ʼ07-06-23ರಂದು ಮದ್ಯಾಹ್ನ ಎರಡು ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಇದನ್ನು ಮಂಜಪ್ಪ ಅವರ ಗಮನಕ್ಕೆ ತಂದಾಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ತಮಗೆ ತಿಳಿದ ಮಾತ್ರೆ ಹಾಗೂ ಕಷಾಯ ಕುಡಿಸಿದ್ದಾರೆ. ನಂತರ ಆಕೆ ಕಾಲು ನೋವು ಹಾಗೂ ತೊಡೆ ನೋವು ಎಂದು ತಮ್ಮ ಜೊತೆಯಲ್ಲಿದ್ದವರಿಗೆ ತಿಳಿಸಿದ್ದಳು. ಇದನ್ನು ಅವರು ಮಂಜಪ್ಪ ಅವರಿಗೆ ತಿಳಿಸಿದಾಗ ಮಂಜಪ್ಪ ಅವರು ಬಾಧಿತ ಬಾಲಕಿಯನ್ನು ಪ್ರತ್ಯೇಕವಾಗಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಮೊಣಕಾಲು, ತೊಡೆ ಹಾಗೂ ಇತರ ಕಡೆ ಮುಲಾಮು ಹಚ್ಚಿ ಹೊರ ಬಂದು ಉಳಿದವರಿಗೆ ಅವಳು ಹುಷಾರಾಗುತ್ತಾಳೆ, ನೀವು ಹೋಗಿ ಎಂದು ಹೇಳಿರುತ್ತಾರೆ. ಯಾವುದೇ ಆಸ್ಪತ್ರೆಗೆ ದಾಖಲಿಸಿರುವುದಿಲ್ಲ. ಮಾತ್ರವಲ್ಲದೇ ಮಕ್ಕಳಿಗೆ ಆ ವಿದ್ಯಾರ್ಥಿನಿಗೆ ಹುಷಾರಿಲ್ಲದ ವಿಷಯ ಯಾರಿಗೂ ಹೇಳಕೂಡದು ಎಂದು ಗದರಿಸಿದ್ದಾನೆ.</p>



<p>ಮರುದಿನ ಅಂದರೆ ʼ08-06-23ರಂದು ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿರುವಾಗ ಮಂಜಪ್ಪ ಬಲವಂತವಾಗಿ ತುಂಬಾ ನೀರು ಕುಡಿಸಿ ಆಕೆ ಸುಸ್ತಾಗಿ ಮಲಗಿದ್ದಳು. ನಂತರ ಆಕೆಯನ್ನು ಮಕ್ಕಳು ಮಾತಾಡಿಸಲು ಹೋದಾಗ ಅವಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಮಕ್ಕಳನ್ನು ಹೊರಕ್ಕೆ ಕಳಿಸಿ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡಿದಾಗ ಆಕೆ ನಾಲಿಗೆ ಕಚ್ಚಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದಂತಾಗಿದ್ದಳು. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಗಲೂ ಸಹ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿರುವುದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಮಕ್ಕಳು ಅಪರಿಚಿತರ ಸಾಯದಿಂದ ಪೋಷಕರಿಗೆ ವಿಷಯ ತಿಳಿಸಿರುತ್ತಾರೆ.</p>



<p>ನಂತರ ಪೋಷಕರು ತಮ್ಮ ಮಗಳ ಜೊತೆಗಿದ್ದ ನಾಲ್ಕು ಜನ ಮಕ್ಕಳನ್ನು ವಿಚಾರಿಸಿದಾಗ ಮಂಜಪ್ಪನ ಅಶ್ಲೀಲ ವರ್ತನೆ ಬಗ್ಗೆ, ಅವನು ಖಾಸಗಿ ಭಾಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಅವಾಚ್ಯವಾಗಿ ಮಾತಾಡಿರುವ ಬಗ್ಗೆ ಮಾಹಿತಿ ನೀಡಿ ತಮಗಾದ ಅವಮಾನ ಹಿಂಸೆಯನ್ನು ಹೇಳಿಕೊಂಡು ಕಣ್ಣೀರು ಹಾಕಿರುತ್ತಾರೆ. ಇದೇ ರೀತಿಯ ಲೈಂಗಿಕ ದೌರ್ಜನ್ಯ ತಮ್ಮ ಮಗಳಿಗೂ ಆಗಿರಬಹುದುʼ ಎಂದು ಪೋಷಕರು ದೂರಿನಲ್ಲಿ ತಿಳಿಸಿರುತ್ತಾರೆ. ಮಂಜಪ್ಪನ ಈ ರೀತಿಯ ಲೈಂಗಿಕ ದೌರ್ಜನ್ಯದಿಂದ ತಮ್ಮ ಮಗಳು ಹೆದರಿಕೊಂಡು, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸಿ ಭಯ ಹಾಗೂ ಬೇಸರದಲ್ಲಿ ಮನಸ್ಸಿಗೆ ಹಚ್ಚಿಕೊಂಡು ಇದರಿಂದ ಜ್ವರ ಸುಸ್ತು ವಾಂತಿ ಪ್ರಾರಂಭವಾಗಿ ಎರಡು ದಿನ ನರಳಾಡಿದ್ದಾಳೆʼ ಎಂದು ದೂರಿದ್ದಾರೆ. ʼಮಂಜಪ್ಪನ ಭಯದಿಂದ ಹಾಗೂ ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಸಮಯ ವ್ಯರ್ಥಮಾಡಿ, ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸದೇ, ಪೋಷಕರಿಗೂ ವಿಷಯ ತಿಳಿಸದೇ ಹೋಗಿದ್ದರಿಂದ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿದ್ದರಂತಿ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.</p>



<p>ಈ ಎಲ್ಲಾ ವಿಚಾರಗಳು ಪಿರ್ಯಾದುದಾರರಿಗೆ ಮಂಜಪ್ಪನವರ ಮೇಲೆ ಬಲವಾದ ಅನುಮಾನಕ್ಕೆ ಕಾರಣವಾಗಿರುತ್ತವೆ ಹಾಗೂ ತಮ್ಮ ಮಗಳಿಗೆ ಅವಾಚ್ಯವಾಗಿ ನಿಂದಿಸಿರುವುದು, ಭಯ ಹುಟ್ಟಿಸಿರುವುದು, ತಾನು ಹೇಳಿದಂತೆ ಕೇಳದಿದ್ದರೆ ನಿಮ್ಮನ್ನು ನೋಡಿಕೊಳ್ಳುತ್ತೇನೆ, ಈ ವಿಚಾರವಾಗಿ ಯಾರಿಗೂ ಹೇಳಬಾರದು ಎಂದು ಎಚ್ಚರಿಕೆ ನೀಡಿದ್ದನ್ನು ಮಕ್ಕಳು ಮನೆಗೆ ಬಂದು ಹೇಳಿರುವ ಹಿನ್ನೆಲೆಯಲ್ಲಿ ಮಂಜಪ್ಪ ಅವರ ಮೇಲೆ ಎಸ್‌ ಸಿ ಎಸ್‌ ಟಿ ದೌರ್ಜನ್ಯ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು FIR ನಲ್ಲಿ ದಾಖಲಾಗಿರುತ್ತದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="UuYdq0sCyu4"><iframe title="ಪರಿಶಿಷ್ಟ ಅಲೆಮಾರಿ ಬಾಲಕಿ ತೇಜಸ್ವಿನಿಯ ಅನುಮಾನಾಸ್ಪದ ಸಾವು. ಆರ್ ಎಸ್ ಎಸ್ ವ್ಯಕ್ತಿ ವನಶ್ರೀ ಮಂಜಪ್ಪನೇ ತಪ್ಪಿತಸ್ಥನೆ?" width="696" height="392" src="https://www.youtube.com/embed/UuYdq0sCyu4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>
]]></content:encoded>
					
		
		
			</item>
		<item>
		<title>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು&#8230;&#8221;</title>
		<link>https://peepalmedia.com/yuva-nota-article-by-diganth-bimabail/</link>
		
		<dc:creator><![CDATA[Peepal Media]]></dc:creator>
		<pubDate>Fri, 04 Nov 2022 11:10:44 +0000</pubDate>
				<category><![CDATA[ಯುವ ನೋಟ]]></category>
		<category><![CDATA[adike]]></category>
		<category><![CDATA[arecanut]]></category>
		<category><![CDATA[diganth bimbail]]></category>
		<category><![CDATA[drone]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lalita prabandha]]></category>
		<category><![CDATA[malndad]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[shimoga]]></category>
		<category><![CDATA[tirthahalli]]></category>
		<category><![CDATA[wedding]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14179</guid>

					<description><![CDATA[ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. &#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು [&#8230;]]]></description>
										<content:encoded><![CDATA[
<p class="has-text-align-center"><strong>ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. </strong></p>



<p>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು ಫ್ಯಾನ್ ಮಾಡುಸ್ತಾರೆ..&#8221; ಅಂತ ಮನಸಲ್ಲಿ ಅಂದ್ಕೋತ ಮತಾಡ್ತ ಇದ್ದ ಹಾಗೆ ಗೊತ್ತಾಯ್ತು. ಅದು ಹಾರು ಫ್ಯಾನ್ ಅಲ್ಲ ಡ್ರೋನ್ ಎಂದು.</p>



<p>&nbsp;ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗ, ಮಗಳ ಮದ್ವೆ ಮಾಡ್ಬೇಕು, ಮನೆ ಕಟ್ಬೇಕು, ಅನಾರೋಗ್ಯ ಪೀಡಿತ ವಯಸ್ಸಾದವರ ಆಸ್ಪತ್ರೆಗೆ ಸೇರಿಸಬೇಕು ಏನೆಲ್ಲ ಮಾಡ್ಬೇಕು ಅಂದ್ರು ಮಲೆನಾಡಿಗರಿಗೆ ಬೆನ್ನೆಲುಬಾಗಿ ಆರ್ಥಿಕ ಧೈರ್ಯ ಕೊಟ್ಟಿದ್ದು ಅಡಿಕೆ. ಯಾವ ಮಟ್ಟಕ್ಕೆಂದರೆ ಮಲೆನಾಡಿನ ಮೂಲ ಪ್ರಭೇದವೇ ಅಲ್ಲದ ಅಡಿಕೆ ಬೆಳೆ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಮಾತು ಗದ್ದೆ, ತೋಟ, ಹಡ್ಡೆ, ಮದ್ವೆ ಮನೆ, ಸಾವಿನ ಮನೆ ಎಲ್ಲ ಕಡೆ ಕೇಳ್ತಿದೆ.</p>



<p>&nbsp;ಇದು ಇವತ್ತಿನ ಮಲೆನಾಡಿನ ಸ್ಥಿತಿಯಲ್ಲಿ ಸತ್ಯವೂ ಹೌದು. ಅಡಿಕೆ ಇದ್ದರೆ ಬದುಕು ಎನ್ನುವಷ್ಟು ಅವಲಂಬನೆಯೇ ಬಹುಪಾಲು. ಈಗ ಕಾಡುತ್ತಿರುವ ಅಭದ್ರತೆ ಒಂದೆಡೆ ಆದರೆ ಅಡಿಕೆ ಮಲೆನಾಡಿನ ಸಂಸ್ಕೃತಿ, ಜನಜೀವನವನ್ನೇ ಮತ್ತೆಂದು ಸರಿಪಡಿಸಲಾಗದಷ್ಟು ಅಂದಗೆಡಿಸಿ ಇಟ್ಟಿರುವುದು ಜೀರ್ಣಿಸಿಕೊಳ್ಳಲಾಗದ್ದು. ಹಿರಿಯರು ಎರಡು ಗುಡ್ಡಗಳ ನಡುವಿನ ಸರಕಲು ಜಾಗದಲ್ಲಿ ಸಾಂಪ್ರದಾಯಿಕವಾಗಿ, ಸಾವಯವವಾಗಿ ಬೆಳೆಯುತ್ತಿದ್ದ ಬೆಳೆ ಕಳೆದೆರಡು ದಶಕಗಳಿಂದ ಭತ್ತದ ಗದ್ದೆಗಳ ಜೊತೆಜೊತೆಗೆ ಮನೆ ಬಳಿಯ ಗುಡ್ಡಗಾಡುಗಳನ್ನೆಲ್ಲ ಆವರಿಸಿ ಕೇಕೆ ಹಾಕುತ್ತಿತ್ತು. ಮದುವೆ ಮನೆ ಸಾವಿನ ಮನೆ ತೊಟ್ಟಿಲು ಶಾಸ್ತ್ರ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮಾತೆತ್ತಿದರೆ &#8220;ನಿಮ್ಗೆ ಎಷ್ಟ್ ಕುಂಟಾಲ್ ಅಡಿಕೆ ಆಗ್ತದೆ&#8230;&#8221; ಪರಿಚಯದ ನಂತರದ ಮಾತೇ ಇದಾಗಿತ್ತು. ಗದ್ದೆ ಮಾಡ್ತೇವೆ ಎಂದರೆ ಸಾಕು &#8220;ಇನ್ನೂ ಗದ್ದೆ ಇಟ್ಕೊಂಡಿರ? ನಮ್ಗ್ ಆ ರಗಳೆ ಇಲ್ಲ. ಪೂರ್ತಿ ತ್ವಾಟ ಹಾಕಿವಿ&#8221; ಹೊಟ್ಟೆಗೆ ಅನ್ನ ಬೆಳೆದು ಕೊಳ್ಳುವುದೇ ರಗಳೆ ಎನ್ನುವುದರ ಮಟ್ಟಕ್ಕೆ ಮಾತನಾಡಿಕೊಳ್ಳುವವರಿಗೇನು ಕಡಿಮೆ ಇರಲಿಲ್ಲ.</p>



<p>ಮಲೆನಾಡಿನಲ್ಲಿ ಬೇರೆ ಯಾವ ಬೆಳೆಯು ಕೊಡಲಾಗದ ಲಾಭದ ಹಿಂದೆ ಬಿದ್ದವರು ಇಲ್ಲಿಯ ಪ್ರಕೃತಿಗೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ, ಅದ್ದೂರಿ ಮದುವೆ, ಇನ್ನೂ ಮುಂದೆ ಹೋಗಿ ಹುಟ್ಟಿದ ಹಬ್ಬದ ಸಂಭ್ರಮ ಇನ್ನು ಏನೇನೋ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡುವಷ್ಟು ಗಟ್ಟಿಗರಾಗಿದ್ದರು. ಗಟ್ಟಿಗರಾಗಿದ್ದರು ಎನ್ನುವುದಕ್ಕಿಂತ ತೋರುಗಾಣಿಕೆಯ ಬದುಕು. ಈಗೀಗ ಮಲೆನಾಡಿನಲ್ಲಿ ನಿರ್ಮಾಣವಾದ ಯಾವುದೇ ಸ್ಲ್ಯಾಬ್ ಮನೆಗಳ ಒಳಹೊಕ್ಕರೂ ಸರ್ವೇ ಸಾಮಾನ್ಯವಾಗಿ ಗುರುತಿಸಬಹುದಾದ ಒಂದು ಅಂಶವೆಂದರೆ ಬಂದವರಿಗೆ ತೋರಿಸಲೆಂದೇ ಮಾಡಿಟ್ಟ ಲಕ್ಷದ ಖರ್ಚು ಮಾಡಿದ ಅಡುಗೆ ಮನೆ. ಅಲ್ಲಿ ಅಡುಗೆಯನ್ನು ಮಾಡದೆ ಕೇವಲ ವಾಸ್ತುವಿನ ಹೆಸರು ಹೇಳಿಕೊಂಡು ಬಂದವರಿಗೆ ಕರೆಕರೆದು ತೋರಿಸುವ ಗತ್ತಿಗಷ್ಟೇ ಆಗಿತ್ತದು. ದಿನ ನಿತ್ಯದ ಅಡುಗೆ ಕೆಲಸಕ್ಕೆ ಅಲ್ಲೆಲ್ಲೋ ಮೂಲೆಯಲ್ಲಿ ಮತ್ತೊಂದು ಅಡುಗೆ ಮನೆ. ಕೆಲವೇ ವರ್ಷಗಳಲ್ಲಿ ಮಳೆ ತಡೆದುಕೊಳ್ಳಲಾಗದೆ ಮಳೆ ನೀರು ತೊಟ್ಟಿಕ್ಕುವ ಸ್ಲ್ಯಾಬ್ ಮನೆಗಳ ಮೇಲೆ ಮತ್ತೆ ಕಟ್ಟಿ ಹೆಂಚು, ಶೀಟ್ ಹಾಕಿಸಿ ತಮ್ಮ ತೋರುಗಾಣಿಕೆ ಬದುಕು ಹೊರಕಾಣದಂತೆ ತೇಪೆ ಹಚ್ಚುವ ಕಾರ್ಯ.</p>


<div class="wp-block-image">
<figure class="aligncenter size-large"><img decoding="async" width="771" height="1024" src="https://peepalmedia.com/wp-content/uploads/2022/11/IMG_20221104_105916-1-771x1024.jpg" alt="" class="wp-image-14188" srcset="https://peepalmedia.com/wp-content/uploads/2022/11/IMG_20221104_105916-1-771x1024.jpg 771w, https://peepalmedia.com/wp-content/uploads/2022/11/IMG_20221104_105916-1-226x300.jpg 226w, https://peepalmedia.com/wp-content/uploads/2022/11/IMG_20221104_105916-1-768x1020.jpg 768w, https://peepalmedia.com/wp-content/uploads/2022/11/IMG_20221104_105916-1-1157x1536.jpg 1157w, https://peepalmedia.com/wp-content/uploads/2022/11/IMG_20221104_105916-1-1542x2048.jpg 1542w, https://peepalmedia.com/wp-content/uploads/2022/11/IMG_20221104_105916-1-150x199.jpg 150w, https://peepalmedia.com/wp-content/uploads/2022/11/IMG_20221104_105916-1-300x398.jpg 300w, https://peepalmedia.com/wp-content/uploads/2022/11/IMG_20221104_105916-1-696x924.jpg 696w, https://peepalmedia.com/wp-content/uploads/2022/11/IMG_20221104_105916-1-1068x1418.jpg 1068w, https://peepalmedia.com/wp-content/uploads/2022/11/IMG_20221104_105916-1-1920x2550.jpg 1920w, https://peepalmedia.com/wp-content/uploads/2022/11/IMG_20221104_105916-1-scaled.jpg 1928w" sizes="(max-width: 771px) 100vw, 771px" /></figure></div>


<p>ಇಲ್ಲಿಯ ಭೌಗೋಳಿಕ ಲಕ್ಷಣಗಳಿಗೆ ಹೊಂದಿಕೆಯಾಗದಂತಹ ಮನೆ ಕಟ್ಟಡಗಳ ನಿರ್ಮಾಣ ಒಂದೆಡೆಯಾದರೆ, ಮದುವೆ ಕಾರ್ಯಕ್ರಮಗಳು ಇಲ್ಲಿನ ಸಂಸ್ಕೃತಿ ಸೊಗಡನ್ನ ಬುಡಮೇಲು ಮಾಡಲು ಮುಂದಾಗಿದ್ದವು. ಹಳ್ಳಿ ಹಳ್ಳಿಗಳ ಹೊಕ್ಕಿದ ಡಿಜೆಯ ಸದ್ದಿನೊಂದಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಮತ್ತೇರಿಸಿ ಕುಣಿಸುತ್ತಿದ್ದವು. ಕಾಲುದಾರಿಯಲ್ಲಿ ಓಡಾಡಿ ಜೀವನ ಕಟ್ಟಿಕೊಂಡ ಊರು ಅಗಲವಾದ ಡಾಂಬರು ರಸ್ತೆಗಳೇ ಬೇಕೆನ್ನುವಷ್ಟು ಹಠ ಹಿಡಿದಿತ್ತು. ಮನೆಮನೆಗೂ ಬಂದು ನಿಂತ ಕಾರು ಬೈಕುಗಳಿಂದ ವೈಭವದ ಮೆಟ್ಟಿಲು ಹತ್ತುವ ತವಕ. ಒಬ್ಬರು ಮಾಡುತ್ತಾರೆಂದು ಮತ್ತೊಬ್ಬರು ಹೇಗೂ ಅಡಿಕೆ ಆಗುತ್ತದಲ್ಲ ಎಂಬ ನಂಬಿಕೆಯಲ್ಲಿಯೇ ಅಲ್ಲಿ ಇಲ್ಲಿ ಸಾಲ ಮಾಡಿ ಸುರಿಯುತ್ತಿದ್ದರು. ಈಗ ಅಡಿಕೆಯ ನಂಬಿಕೆಗೆ ಹೊಡೆತ ಬೀಳುವಂತಾಗಿದೆ.</p>



<p>&nbsp;ಸಾಂಪ್ರದಾಯಿಕ ಕೃಷಿಯಲ್ಲಿ ಮುಂದುವರಿಯುತ್ತಿರುವ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳು ದುರಾಸೆ ಬೀಳದೆ ಉಳಿದಿದ್ದರೂ ಸಹ ಅವರ ಬದುಕಿನ ಅವಲಂಬನೆ ಅಡಿಕೆಯೇ ಆಗಿತ್ತು. ಅಡಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ಮನೆಯಲ್ಲಿಯೇ ಇರಲಿ ಎಂಬ ಭಾವನೆ ತೆಗೆದು ಎಷ್ಟೋ ಹೆಣ್ಣು ಮಕ್ಕಳು ಡಿಗ್ರಿ ಪಡೆಯುವಂತಾಯ್ತು. ಮನೆಮಕ್ಕಳು ಓದಿ ಉದ್ಯೋಗ ಹಿಡಿಯುವಂತಾಯ್ತು. ಇವೆಲ್ಲಕ್ಕೂ ಮೂಲ ಬಲವಾಗಿದ್ದ ಅಡಿಕೆ ಯಾವ ಮಟ್ಟಕ್ಕೆ ಚರ್ಚಾ ವಸ್ತು ಆಗಿತ್ತೆಂದರೆ, ಮುಖ್ಯವಾಗಿ ಜಾತಿಯ ಆಧಾರದ ಮೇಲೆ ಮೇಲು ಕೀಳು ನಡೆಸುವುದಕ್ಕಿಂತ ಅಡಿಕೆ ಎಷ್ಟು ಕುಂಟಾಲ್ ಆಗುತ್ತದೆ ಎನ್ನುವುದರ ಮೇಲೆ ಜನರ ಯೋಗ್ಯತೆ ಅಳೆಯುವ ಮಟ್ಟಕ್ಕೆ ಬಂದು ನಿಂತಿತ್ತು ಬದುಕು. ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರು ಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರ ಕೊಟ್ಟಿದ್ದು ಕಡಿಮೆ ಇಲ್ಲಿಂದ ಪಡೆದದ್ದೇ ಹೆಚ್ಚು. ಹಳದಿ ಎಲೆ ರೋಗ ಬಂದು ಮೂರು ದಶಕಗಳಾದರು ಸಹ ಯಾವುದೇ ಔಷಧಿ ಕಂಡುಹಿಡಿಯಲಿಲ್ಲ. ಎಲೆಚುಕ್ಕಿ ರೋಗಕ್ಕೂ ಮದ್ದು ಕಂಡು ಹಿಡಿಯುವ ಸಂಶೋಧನೆಗಳನ್ನ ಸಮರ್ಥವಾಗಿ ನಡೆಸುತ್ತಾರೆಂಬ ಖಾತ್ರಿಯೂ ಇಲ್ಲ. ಆದರೆ ಅಡಿಕೆಯ ವಿಷಯದಲ್ಲಿ ಎಲ್ಲ ಹೆಚ್ಚು ಗಾರಿಕೆ ಮುರಿದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟ ಪ್ರಕೃತಿಯ ಶಕ್ತಿ ನಿಜದ ಆಶ್ಚರ್ಯ.&nbsp;</p>



<p></p>



<p><strong>ದಿಗಂತ್ ಬಿಂಬೈಲ್‌</strong></p>



<p>ಹವ್ಯಾಸಿ ಬರಹಗಾರರು</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/WhatsApp-Image-2022-11-04-at-3.21.11-PM-872x1024.jpeg" alt="" class="wp-image-14182" width="159" height="184"/></figure>
]]></content:encoded>
					
		
		
			</item>
		<item>
		<title>ʼರಾಮ ಮಂದಿರ ಏಕೆ ಬೇಡ? ಕೃತಿ ವಿವಾದ :    ಪ್ರೊಫೆಸರ್‌ ಕೆ.ಎಸ್ ಭಗವಾನ್‌ ಬಂಧನಕ್ಕೆ ವಾರೆಂಟ್‌ ಜಾರಿ</title>
		<link>https://peepalmedia.com/rama-mandira-eke-beku-kruti-vivada-bhagavan-bandhanakke-warrrent-jaari/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 03 Nov 2022 06:16:42 +0000</pubDate>
				<category><![CDATA[ಶಿವಮೊಗ್ಗ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[rama̧ mandira yake beda]]></category>
		<category><![CDATA[sagara]]></category>
		<guid isPermaLink="false">https://peepalmedia.com/?p=13889</guid>

					<description><![CDATA[ಸಾಗರ: ʼರಾಮ ಮಂದಿರ ಏಕೆ ಬೇಡ?ʼ ಕೃತಿ ರಚಿಸಿದ ಸಾಹಿತಿ ಭಗವಾನ್‌ ಕೋರ್ಟ್‌ಗೆ ಹಾಜರಾಗದ ಕಾರಣ ಅವರ ಬಂಧನಕ್ಕೆ ಸಾಗರ JMFC ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ. ಪ್ರೊಫೆಸರ್‌ ಕೆ.ಎಸ್ ಭಗವಾನ್‌ ರಚಿಸಿದ ʼರಾಮ ಮಂದಿರ ಏಕೆ ಬೇಡ?ʼ ಕೃತಿಯು ವಿವಾದಾತ್ಮಕವಾಗಿದ್ದು, ಇದು ಬಹುಜನರ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಾಗರ ತಾಲ್ಲೂಕಿನ ಇಕ್ಕೇರಿ ಗ್ರಾಮದ ನಿವಾಸಿ ಮಹಾಬಲೇಶ್ವರ್‌ ಎಂಬುವವರು ತಾಲ್ಲೂಕಿನ JMFC ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ದೂರಿನ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ [&#8230;]]]></description>
										<content:encoded><![CDATA[
<p style="font-size:20px"><strong>ಸಾಗರ</strong>: ʼರಾಮ ಮಂದಿರ ಏಕೆ ಬೇಡ?ʼ ಕೃತಿ ರಚಿಸಿದ ಸಾಹಿತಿ ಭಗವಾನ್‌ ಕೋರ್ಟ್‌ಗೆ ಹಾಜರಾಗದ ಕಾರಣ ಅವರ ಬಂಧನಕ್ಕೆ ಸಾಗರ JMFC ನ್ಯಾಯಾಲಯವು ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ.</p>



<p style="font-size:20px">ಪ್ರೊಫೆಸರ್‌ ಕೆ.ಎಸ್ ಭಗವಾನ್‌ ರಚಿಸಿದ ʼರಾಮ ಮಂದಿರ ಏಕೆ ಬೇಡ?ʼ ಕೃತಿಯು ವಿವಾದಾತ್ಮಕವಾಗಿದ್ದು, ಇದು ಬಹುಜನರ ಭಾವನೆಗೆ ಧಕ್ಕೆ ತರುತ್ತದೆ ಎಂದು ಸಾಗರ ತಾಲ್ಲೂಕಿನ ಇಕ್ಕೇರಿ ಗ್ರಾಮದ ನಿವಾಸಿ ಮಹಾಬಲೇಶ್ವರ್‌ ಎಂಬುವವರು ತಾಲ್ಲೂಕಿನ JMFC ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ದೂರಿನ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್‌ ವಿರುದ್ದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ IPC ಸೆಕ್ಷನ್‌ 295(a) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು.</p>



<p style="font-size:20px">ಪ್ರಕರಣದ ವಿಚಾರಣೆಗೆ ನವೆಂಬರ್‌ 3ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಮೈಸೂರು ಎಸ್‌ಪಿ ಅವರ ಮೂಲಕ ಸಮನ್ಸ್‌ ಜಾರಿ ಮಾಡಿತ್ತು. ಆದರೆ ಇಂದು ಅವರು ನ್ಯಾಯಾಲಯಕ್ಕೆ ಹಾಜಾರಾಗದ ಕಾರಣ ಸಾಗರದ JMFC ನ್ಯಾಯಾಧೀಶರಾದ ಶ್ರೀ ಶೈಲ ಭೀಮ್‌ಸೇನ್‌ ಭಗಾಡೆಯವರು ಭಗವಾನ್‌ ಅವರ ಬಂಧನಕ್ಕೆ ಜಾಮೀನು ರಹಿತ ಬಂಧನದ ವಾರೆಂಟ್‌ ಜಾರಿ ಮಾಡಬೇಕೆಂದು ಸಾಗರ ಟೌನ್‌ ಪೊಲೀಸರಿಗೆ ಆದೇಶ ಮಾಡಿದ್ದಾರೆ. ವಕೀಲ ಕೆ.ವಿ ಪ್ರವೀಣ್‌ ದೂರುದಾರ ಮಹಾಬಲೇಶ್ವರ ಅವರ ಪರವಾಗಿ ವಾದವನ್ನು ಮಂಡಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
