<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>sakaleshapura &#8211; Peepal Media</title>
	<atom:link href="https://peepalmedia.com/tag/sakaleshapura/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 29 Jul 2025 08:23:03 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>sakaleshapura &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಕಲೇಶಪುರ: ನಿರಂತರ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿ ಕುಂಠಿತ</title>
		<link>https://peepalmedia.com/sakleshpur-work-on-national-highway-75-has-been-delayed-due-to-continuous-rains/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 29 Jul 2025 08:19:21 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[bengaluru]]></category>
		<category><![CDATA[hasan]]></category>
		<category><![CDATA[karnataka]]></category>
		<category><![CDATA[sakaleshapura]]></category>
		<category><![CDATA[shreyas patel]]></category>
		<guid isPermaLink="false">https://peepalmedia.com/?p=63299</guid>

					<description><![CDATA[ಸಕಲೇಶಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಆರಂಭವಾದ ಕಾರಣ ಹಾಗೂ ಹಲವು ಕಡೆ ಗುಡ್ಡ ಕುಸಿತದಿಂದ ಕಾಮಗಾರಿಗೆ ಅಡ್ಡಿಯಾಗಿದ್ದು, ಕೆಲಸದಲ್ಲಿ ವಿಳಂಬ ಉಂಟಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ [&#8230;]]]></description>
										<content:encoded><![CDATA[
<p><strong>ಸಕಲೇಶಪುರ: </strong>ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದ್ದಾರೆ.</p>



<p>ರಾಷ್ಟ್ರೀಯ ಹೆದ್ದಾರಿ 75ರ ರಸ್ತೆ ಕಾಮಗಾರಿಯನ್ನು ವೀಕ್ಷಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಮಗಾರಿಯನ್ನು ಜುಲೈ ಅಂತ್ಯದಲ್ಲಿ ಪೂರ್ಣಗೊಳಿಸುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಮುಂಗಾರು ನಿರೀಕ್ಷಿತ ಸಮಯಕ್ಕಿಂತ ಒಂದು ತಿಂಗಳು ಮೊದಲೇ ಆರಂಭವಾದ ಕಾರಣ ಹಾಗೂ ಹಲವು ಕಡೆ ಗುಡ್ಡ ಕುಸಿತದಿಂದ ಕಾಮಗಾರಿಗೆ ಅಡ್ಡಿಯಾಗಿದ್ದು, ಕೆಲಸದಲ್ಲಿ ವಿಳಂಬ ಉಂಟಾಗಿದೆ ಎಂದು ಹೇಳಿದರು.</p>



<p>ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗುತ್ತಿಗೆದಾರರು ಯಾವುದೇ ಅಡಚಣೆ ಇಲ್ಲದೆ, ದಿನರಾತ್ರಿ ಶ್ರಮಿಸುತ್ತಿದ್ದಾರೆ. ಕುಸಿಯುತ್ತಿರುವ ಗುಡ್ಡ ಪ್ರದೇಶಗಳಲ್ಲಿ ಸುಮಾರು ₹40 ಕೋಟಿ ವೆಚ್ಚದ ತಡೆಗೋಡೆ ಕಾಮಗಾರಿಗೆ ಈಗಾಗಲೇ ಟೆಂಡರ್ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ. ಇದರಿಂದ ಶಾಶ್ವತ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದರು.</p>



<p>&#8220;ಈ ರಸ್ತೆಯ ವಿಳಂಬದಿಂದ ಮಂಗಳೂರು ಬಂದರಿನ ಶೇಕಡಾ 50ರಷ್ಟು ವಾಣಿಜ್ಯ ಚಟುವಟಿಕೆಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ರಾಜ್ಯದ ಪ್ರಮುಖ ವಸ್ತುಗಳು ಈಗ ಚೆನ್ನೈ ಮತ್ತು ಇತರ ಬಂದರುಗಳ ಮೂಲಕ ಸಾಗಾಟವಾಗುತ್ತಿದೆ. ಇದರಿಂದ ರಾಜ್ಯ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಬಂದರು ನಗರಿಯ ಸಂಪರ್ಕದ ಈ ರಸ್ತೆ ಸ್ಥಗಿತಗೊಂಡರೆ, ಹೀಗಾಗಿ ಈ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ, ಮಧ್ಯವರ್ತಿ ಪಾತ್ರವಹಿಸಲು ನಾನು ಸಿದ್ಧನಿದ್ದೇನೆ,&#8221; ಎಂದು ಹೇಳಿದರು.</p>



<p>ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸೈಯದ್ ಅಮಾನುಲ್ಲಾ, ವ್ಯವಸ್ಥಾಪಕ ವಿಪಿನ್ ಶರ್ಮಾ, ಡಿ ವೈ ಎಸ್ ಪಿ ಪ್ರಮೋದ್ ಕುಮಾರ್, ತಹಶೀಲ್ದಾರ್ ಮೋಹನ್, ಕಾಂಗ್ರೆಸ್ ಮುಖಂಡರಾದ ಸೈಯದ್ ಮುಫೀಸ್, ಬೈಕೆರೆ ದೇವರಾಜ್, ಉದಯ್ ಹೆಚ್.ಎಚ್. ಕಲ್ಗನೆ ಪ್ರಶಾಂತ್, ಕಲ್ಗನೆ ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಸಾಹಿತ್ಯ ಮತ್ತು ಭಾಷೆ ಜನರ ಬದುಕುಗಳನ್ನು ಬದಲಿಸಬೇಕು:  ಪ್ರಸಾದ್ ರಕ್ಷಿದಿ</title>
		<link>https://peepalmedia.com/literature-and-language-should-change-peoples-lives-prasad-raxidi/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 13 Dec 2024 13:00:18 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada saahithya parishatthu]]></category>
		<category><![CDATA[kannada sahithya academy]]></category>
		<category><![CDATA[kannada sahithya sammelana]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Prasad Raxidi]]></category>
		<category><![CDATA[sakaleshapura]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=50686</guid>

					<description><![CDATA[ಹಾಸನ: ಹಿಂದಿ ಬಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ ಇದೆ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡ ಬೇಕಿದೆ. ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರು ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ,&#8221; ಎಂದು ಡಿಸೆಂಬರ್‌ 13, 2024 ಶುಕ್ರವಾರದಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಾಲ್ಕನೆ ತಾಲೂಕು ಕನ್ನಡ [&#8230;]]]></description>
										<content:encoded><![CDATA[
<p><strong>ಹಾಸನ:</strong> ಹಿಂದಿ ಬಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ ಇದೆ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡ ಬೇಕಿದೆ. ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರು ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ,&#8221; ಎಂದು ಡಿಸೆಂಬರ್‌ 13, 2024 ಶುಕ್ರವಾರದಂದು ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ನಾಲ್ಕನೆ ತಾಲೂಕು ಕನ್ನಡ ಸಮ್ಮೇಳನದಲ್ಲಿ ರಂಗಕರ್ಮಿ, ಸಾಹಿತಿ ಪ್ರಸಾದ್‌ ರಕ್ಷಿದಿಯವರು ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.  </p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="575" src="https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1024x575.jpeg" alt="" class="wp-image-50689" style="width:626px;height:auto" srcset="https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1024x575.jpeg 1024w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-300x169.jpeg 300w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-768x431.jpeg 768w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-150x84.jpeg 150w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-696x391.jpeg 696w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM-1068x600.jpeg 1068w, https://peepalmedia.com/wp-content/uploads/2024/12/WhatsApp-Image-2024-12-13-at-6.09.02-PM.jpeg 1280w" sizes="(max-width: 1024px) 100vw, 1024px" /></figure></div>


<p>&#8220;ಇದರ ಪರಿಣಾಮ ಧಾನಿಗಳ ವಂಶಸ್ಥರು ಶಾಲೆಗಳ ಜಾಗವನ್ನು ವಶಕ್ಕೆಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಮುಚ್ಚಲು ಕಾರಣರಾಗುತ್ತಿದ್ದಾರೆ. ಆದ್ದರಿಂದ ಶಾಲೆಗಳಿರುವ ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ನೋಂದಾಯಿಸಿಕೊಳ್ಳುವ ಕೆಲಸ ವಾಗಬೇಕಿದೆ. ಪ್ರಾಥಮಿಕ ಶಾಲೆಗಳಿಗೆ ೪೫ ಸಾವಿರ ಶಿಕ್ಷಕರ ಕೊರತೆ ಇದೆ ೨೦೨೫ ಕ್ಕೆ ಮತ್ತೆ ೩೫ ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಕೊಡಲೇ ೭೫ ಸಾವಿರ ಶಿಕ್ಷಕರ ನೇಮಕ ಮಾಡದಿದ್ದರೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಬಡ ಮಕ್ಕಳಿಗೆ ದುಬಾರಿಯಾಗಲಿದೆ. ಕರ್ನಾಟಕ ದಲ್ಲಿ ೨೧೯ ಬಾಷೆಗಳಿವೆ. ಬಾಷೆಗಳೆಂಬುದು ಬಣ್ಣದ ರಂಗೋಲಿ. ಹೆಚ್ಚು ಬಾಷೆಗಳಿದ್ದಷ್ಟು ದೇಶದ ಪರಂಪರೆ ಚನ್ನಾಗಿರಲಿದೆ. ೨೦೦೧ ರಲ್ಲಿ ಕೊಡುವ ಬಾಷೆ ಮಾತನಾಡುವವರ ಸಂಖ್ಯೆ ೧.೫ ಲಕ್ಷ. ಆದರೆ, ೨೦೧೧ ರ ವೇಳೆಗೆ ಈ ಬಾಷೆ ಮಾತನಾಡುವವರ ಸಂಖ್ಯೆ ೧ ಲಕ್ಷಕ್ಕೆ ಕುಸಿದಿದೆ ಬಾಷೆಯ ಬಗ್ಗೆ ಅಧಮ್ಯ ಪ್ರೀತಿ ಇಲ್ಲದ ಕಾರಣ . ಈಗಾಗಲೇ ಹಲವು ಸಣ್ಣಪುಟ್ಟ ಬಾಷೆಗಳು ನಾಶವಾಗಿವೆ. ಇದು ಆತಂಕಕಾರಿ ಬೆಳವಣಿಗೆ. ಇದೆ ಹಾದಿಯನ್ನು ಕನ್ನಡಬಾಷೆ ಸಹ ಅನುಭವಿಸುತ್ತಿದೆ. ಹಿಂದಿ ಸೇರಿದಂತೆ ಉತ್ತರ ಭಾರತದ ಬಾಷೆಗಳು ಮಾತ್ರ ವೇಗವಾಗಿ ಬೆಳೆಯುತ್ತಿದೆ.&#8221;</p>



<p>&#8220;ಆದ್ದರಿಂದ ಕನ್ನಡ ಬಾಷೆ ಉಳಿಸಿ ಬೆಳಸುವ ಬಗ್ಗೆ ದೀರ್ಘ ಚರ್ಚೆ ನಡೆಯ ಬೇಕಿದೆ ಎಂದರು.. ಜನಸಂಖ್ಯೆ ಏರಿಕೆ ಸಹ ಬಾಷೆ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಮದಗತಿಯಲ್ಲಿದ್ದು ಶೇ ೯ ರಷ್ಟಿದ್ದರೆ. ಉತ್ತರ ಭಾರತದ ಜನಸಂಖ್ಯೆ ಬೆಳವಣಿಗೆ ಶೇ ೬೬ ರಷ್ಟಿದೆ ಇದು ಸಹ ಬಾಷ ಬೆಳವಣಿಗೆಗೆ ತೊಡಕಾಗಿದೆ. ನಿಧಾನಗತಿಯಲ್ಲಿ ದೊಡ್ಡಬಾಷೆಗಳು ಸಣ್ಣ ಬಾಷೆಗಳನ್ನು ಅಪೋಷನ ತೆಗೆದುಕೊಳ್ಳುತ್ತಿವೆ.. ಆದ್ದರಿಂದ, ಸಮಸ್ಯೆ ಮೂಲಕ್ಕೆ ತೆರಳಿ ಸಮಸ್ಯೆ ಬಗೆಹರಿಸಿಕೊಳ್ಳದಿದ್ದರೆ ಕನ್ನಡ ಉಳಿಯುವುದು ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಗೋಕಾಕ್ ಚಳುವಳಿ ಮಾದರಿಯ ಹೋರಾಟ ಅಗತ್ಯವಿದೆ,&#8221; ಎಂದು ಸಮ್ಮೇಳನಾಧ್ಯಕ್ಷ ಪ್ರಸಾದ್‌ ರಕ್ಷಿದಿ ಹೇಳಿದರು. </p>



<p>&#8220;ತಾಲೂಕಿನ ಪರಿಸರ ರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವಾಗ ಬೇಕಿದೆ. ಸಣ್ಣ ಪ್ರಮಾಣದಲ್ಲಿನ ನಮ್ಮ ವಿರೋಧವನ್ನು ಸರ್ಕಾರ ಗಣನೇಗೆ ತೆಗೆದುಕೊಳ್ಳುತ್ತಿಲ್ಲ ಪರಿಣಾಮ ತಾಲೂಕಿನಲ್ಲಿ ದೊಡ್ಡದೊಡ್ಡ ಯೋಜನೆಗಳು ತಲೆ ಎತ್ತಲು ಸಾದ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ತಲೆ ಎತ್ತಲು ಅವಕಾಶ ನೀಡಬಾರದು. ಎಂದರು.ಸಂವೇದನೆ ಇಲ್ಲದೆ ಮನುಷ್ಯ ಬಧುಕಿರುವುದು ದಂಡ. ನೆರೆಮನೆಯ ಕಷ್ಟ ಕಂಡು ಕರಗದಿರುವುದು ಮನುಷ್ಯತ್ವದ ಸರ್ವ ಪತನದ ಸಂಕೇತ. ತಾಲೂಕಿನಲ್ಲಿ ಶಾಲೆಗಳ ಸಂಖ್ಯೆ ಕುಸಿತ ಆತಂಕಕಾರಿ ಬಡವರು ಮಕ್ಕಳ ಮಾತ್ರ ಸರ್ಕಾರಿ ಶಾಲೆಗೆ ಸೇರುತ್ತಾರೆ ಎಂಬ ಮನಸ್ಥಿತಿ ಜನರಲ್ಲಿ ನೆಲಸಿರುವುದೆ ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ತಾಲೂಕು ಕನ್ನಡ ಸಾಹಿತಿಗಳ ತವರಾಗಿದ್ದು ನೂರಕ್ಕೂ ಅಧಿಕ ಸಾಹಿತಿಗಳನ್ನು ನಮ್ಮ ನೆಲದಿಂದ ಹುಟ್ಟಿಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸಲು ಮಲೆನಾಡಿನಲ್ಲಿ ಸಾಕಷ್ಟು ವಿಷಯಗಳಿದ್ದು ಸೂಕ್ಷ್ಮ ಮನಸ್ಥಿತಿ ಸಾಹಿತ್ಯಕ್ಕೆ ಅಗತ್ಯವಿದೆ,&#8221; ಎಂದರು.</p>



<p>ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರೋ ಮಲ್ಲೇಶ್ಗೌಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಜ್ಯೋತಿರಾಜ್ಕುಮಾರ್,ಉಪಾಧ್ಯಕ್ಷೆ ಝರೀನಾ,ಸಾಹಿತಿ ಸುಬ್ಬುಹೊಲೇಯರ್, ಕಾಂಗ್ರೆಸ್ ಮುಖಂಡ ಮುರಳಿಮೋಹನ್, ಮುಂತಾದವರಿದ್ದರು.</p>



<p>ಸಕಲೇಶಪುರ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಉಪವಿಭಾಗಾಧಿಕಾರಿ ಡಾ. ಎಂ.ಕೆ ಶೃತಿಯವರು ಬೆಳಿಗ್ಗೆ 8 ಗಂಟೆಗೆ ರಾಷ್ಟ್ರಧ್ವಜದ ಆರೋಹಣ ಮಾಡಿದರೆ, ತಹಸೀಲ್ಧಾರ್ ಮೇಘನಾ ಕನ್ನಡ ಧ್ವಜದ ಅರೋಹಣವನ್ನು ನೇರವೆರಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಗುರುಮೂರ್ತಿ ಕನ್ನಡ ಸಾಹಿತ್ಯ ಪರಿಷತ್ ಧ್ವಜದ ಆರೋಹಣವನ್ನು ಮಾಡಿದರು. </p>



<p>10 ಗಂಟೆಗೆ ಸರಿಯಾಗಿ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಸಮ್ಮೇಳನಾಧ್ಯಕ್ಷ ಪ್ರಸಾದ್ ರಕ್ಷಿಧಿ ದಂಪತಿಗಳ ಮೆರವಣಿಗೆಯಲ್ಲಿ ವೀರಗಾಸೆ,ಕಂಸಾಳೆ,ಮಲೆನಾಡು ಸುಗ್ಗಿಕುಣಿತ ಗಮನಸೇಳೆದರೆ, ನಾಸಿಕ್ ವಾಧ್ಯಕ್ಕೆ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಜೊತೆಗೆ ಶಾಸಕ ಸೀಮೆಂಟ್ ಮಂಜು ಕುಣಿದರು. ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆಯ ನಂತರ ಕಾಡಾನೆಗಳನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಮೃತಪಟ್ಟ ಆನೆ ಅರ್ಜುನನ ನೆನಪಿಗಾಗಿ ನಿರ್ಮಿಸಿದ್ದ ಧ್ವಾರದ ಮೂಲಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. </p>



<p>ಅಭಿವೃದ್ದಿ ಹರಿಕಾರ ಎಂದು ಗುರುತಿಸಿಕೊಂಡಿದ್ದ ಬೈಕೆರೆ ನಾಗೇಶ್ ವೇದಿಕೆಯಲ್ಲಿ ಆರಂಭವಾದ ಕಾರ್ಯಕ್ರಮವದಲ್ಲಿ ಬಾಗೆ ಜೆ.ಎಸ್.ಎಸ್ ಶಾಲೆಯ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಸಮ್ಮೇಳನವನ್ನು ಕನ್ನಡ ಪ್ರಾಧಿಕಾರದ ಅದ್ಯಕ್ಷ ಪ್ರೋ ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ವೇದಿಕೆಯ ಮೇಲೆ ಶಾಸಕ ಸೀಮೆಂಟ್ ಮಂಜು, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಸಾಹಿತಿ ಸುಬ್ಬು ಹೊಲೆಯಾರ್, ಸಯ್ಯದ್ ಮುಪೀಜ್, ಹಸೆನಾರ್ ಆನೆಮಹಾಲ್, ಕಾಡಪ್ಪ, ಹೆತ್ತೂರು ನಾಗರಾಜ್,ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.</p>



<p>ಮಧ್ಯಾಹ್ನದ ನಂತರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 13 ಸಾಹಿತಿಗಳನ್ನು ಒಳಗೊಂಡ ಕವಿಗೋಷ್ಠಿ ನಡೆಯಿತು. ಆ ನಂತರ ಮಲೆನಾಡ ಜನಜೀವನ ಹಾಗೂ ಸದ್ಯದ ಸವಾಲುಗಳ ಕುರಿತ ಸಂವಾದ ಕಾರ್ಯಕ್ರಮ ನಡೆಯಿತು. ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಅಧ್ಯಕ್ಷತೆಯಲ್ಲಿ ಸಮ್ಮೇಳನದ ಸಮರೋಪ ನಡೆಯಿತು. </p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ಕಾಡಾನೆ &#8216;ಭೀಮ&#8217;ನ ಭೀಕರ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವು</title>
		<link>https://peepalmedia.com/forest-department-personnel-sharp-shooter-venkatesh-killed/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 31 Aug 2023 12:37:17 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Death case]]></category>
		<category><![CDATA[Elephant attack]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<guid isPermaLink="false">https://peepalmedia.com/?p=26896</guid>

					<description><![CDATA[ಸಕಲೇಶಪುರ /ಆಲೂರು : ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಕಾಡಾನೆ &#8216;ಭೀಮ&#8217; ವೆಂಕಟೇಶ್ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ವೆಂಕಟೇಶ್ ಹಾಸನ ಆಸ್ಪತ್ರೆಯಲ್ಲಿ ಜೀವ ತೆತ್ತಿದ್ದಾರೆ. ಹಲವು ದಿನಗಳಿಂದ ಗಾಯಗೊಂಡು ಓಡಾಡುತ್ತಿದ್ದ &#8216;ಭೀಮ&#8217; ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು. ಈ ಸಂದರ್ಭದಲ್ಲಿ [&#8230;]]]></description>
										<content:encoded><![CDATA[
<p>ಸಕಲೇಶಪುರ /ಆಲೂರು : ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಕಾಡಾನೆ &#8216;ಭೀಮ&#8217; ವೆಂಕಟೇಶ್ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ವೆಂಕಟೇಶ್ ಹಾಸನ ಆಸ್ಪತ್ರೆಯಲ್ಲಿ ಜೀವ ತೆತ್ತಿದ್ದಾರೆ.</p>



<p>ಹಲವು ದಿನಗಳಿಂದ ಗಾಯಗೊಂಡು ಓಡಾಡುತ್ತಿದ್ದ &#8216;ಭೀಮ&#8217; ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು.</p>



<figure class="wp-block-image size-large"><img decoding="async" width="1024" height="998" src="https://peepalmedia.com/wp-content/uploads/2023/08/IMG-20230831-WA0023-1-1024x998.jpg" alt="" class="wp-image-26898" srcset="https://peepalmedia.com/wp-content/uploads/2023/08/IMG-20230831-WA0023-1-1024x998.jpg 1024w, https://peepalmedia.com/wp-content/uploads/2023/08/IMG-20230831-WA0023-1-300x292.jpg 300w, https://peepalmedia.com/wp-content/uploads/2023/08/IMG-20230831-WA0023-1-768x748.jpg 768w, https://peepalmedia.com/wp-content/uploads/2023/08/IMG-20230831-WA0023-1-150x146.jpg 150w, https://peepalmedia.com/wp-content/uploads/2023/08/IMG-20230831-WA0023-1-696x678.jpg 696w, https://peepalmedia.com/wp-content/uploads/2023/08/IMG-20230831-WA0023-1-1068x1040.jpg 1068w, https://peepalmedia.com/wp-content/uploads/2023/08/IMG-20230831-WA0023-1.jpg 1280w" sizes="(max-width: 1024px) 100vw, 1024px" /></figure>



<p>ಈ ಸಂದರ್ಭದಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದೆ. ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ದಾರೆ.</p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2023/08/IMG_20230831_141342-1-1024x472.jpg" alt="" class="wp-image-26899" style="width:437px;height:201px" width="437" height="201" srcset="https://peepalmedia.com/wp-content/uploads/2023/08/IMG_20230831_141342-1-1024x472.jpg 1024w, https://peepalmedia.com/wp-content/uploads/2023/08/IMG_20230831_141342-1-300x138.jpg 300w, https://peepalmedia.com/wp-content/uploads/2023/08/IMG_20230831_141342-1-768x354.jpg 768w, https://peepalmedia.com/wp-content/uploads/2023/08/IMG_20230831_141342-1-1536x708.jpg 1536w, https://peepalmedia.com/wp-content/uploads/2023/08/IMG_20230831_141342-1-150x69.jpg 150w, https://peepalmedia.com/wp-content/uploads/2023/08/IMG_20230831_141342-1-696x321.jpg 696w, https://peepalmedia.com/wp-content/uploads/2023/08/IMG_20230831_141342-1-1068x493.jpg 1068w, https://peepalmedia.com/wp-content/uploads/2023/08/IMG_20230831_141342-1.jpg 1600w" sizes="(max-width: 437px) 100vw, 437px" /></figure>



<p>ಇದನ್ನೂ ಓದಿ : <strong><a href="https://peepalmedia.com/serious-attack-by-kadane-bhima-on-sharp-shooter-venkatesh/" data-type="link" data-id="https://peepalmedia.com/serious-attack-by-kadane-bhima-on-sharp-shooter-venkatesh/">ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಕಾಡಾನೆ ‘ಭೀಮ’ನ ಗಂಭೀರ ದಾಳಿ</a></strong></p>



<p>ತಕ್ಷಣವೇ ವೆಂಕಟೇಶ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಕೆಲವು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಅಸುನೀಗಿದ್ದಾರೆ.</p>



<p>ಅರಣ್ಯ ಇಲಾಖೆಯಲ್ಲಿ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ರಾಜ್ಯದ ಎಲ್ಲೇ ಆನೆ ದಾಳಿ ಆದಾಗಲೂ ಅರೆವಳಿಕೆ ಚುಚ್ಚಲು ತೆರಳುತ್ತಿದ್ದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಕಲೇಶಪುರ : ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಕಾಡಾನೆ &#8216;ಭೀಮ&#8217;ನ ಗಂಭೀರ ದಾಳಿ</title>
		<link>https://peepalmedia.com/serious-attack-by-kadane-bhima-on-sharp-shooter-venkatesh/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 31 Aug 2023 08:42:57 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<category><![CDATA[Wild Elephant]]></category>
		<guid isPermaLink="false">https://peepalmedia.com/?p=26876</guid>

					<description><![CDATA[ಸಕಲೇಶಪುರ /ಆಲೂರು : ಸಕಲೇಶಪುರ ಆಲೂರು ತಾಲ್ಲೂಕು ಭಾಗದಲ್ಲಿ ಮತ್ತೊಂದು ಕಾಡಾನೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಗಂಭೀರವಾಗಿ ದಾಳಿ ಮಾಡಿದ ಕಾಡಾನೆ &#8216;ಭೀಮ&#8217; ವೆಂಕಟೇಶ್ ಮೇಲೆ ಏಕಾಏಕಿ ಮಾಡಿದ ದಾಳಿಯಿಂದಾಗಿ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲವು ದಿನಗಳಿಂದ ಗಾಯಗೊಂಡು ತಿರುಗಾಡುತಿದ್ದ &#8216;ಭೀಮ&#8217; ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು. [&#8230;]]]></description>
										<content:encoded><![CDATA[
<p>ಸಕಲೇಶಪುರ /ಆಲೂರು : ಸಕಲೇಶಪುರ ಆಲೂರು ತಾಲ್ಲೂಕು ಭಾಗದಲ್ಲಿ ಮತ್ತೊಂದು ಕಾಡಾನೆ ದಾಳಿ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಗಂಭೀರವಾಗಿ ದಾಳಿ ಮಾಡಿದ ಕಾಡಾನೆ &#8216;ಭೀಮ&#8217; ವೆಂಕಟೇಶ್ ಮೇಲೆ ಏಕಾಏಕಿ ಮಾಡಿದ ದಾಳಿಯಿಂದಾಗಿ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ.</p>



<figure class="wp-block-image size-large"><img loading="lazy" decoding="async" width="1024" height="472" src="https://peepalmedia.com/wp-content/uploads/2023/08/IMG_20230831_141342-1024x472.jpg" alt="" class="wp-image-26881" srcset="https://peepalmedia.com/wp-content/uploads/2023/08/IMG_20230831_141342-1024x472.jpg 1024w, https://peepalmedia.com/wp-content/uploads/2023/08/IMG_20230831_141342-300x138.jpg 300w, https://peepalmedia.com/wp-content/uploads/2023/08/IMG_20230831_141342-768x354.jpg 768w, https://peepalmedia.com/wp-content/uploads/2023/08/IMG_20230831_141342-1536x708.jpg 1536w, https://peepalmedia.com/wp-content/uploads/2023/08/IMG_20230831_141342-150x69.jpg 150w, https://peepalmedia.com/wp-content/uploads/2023/08/IMG_20230831_141342-696x321.jpg 696w, https://peepalmedia.com/wp-content/uploads/2023/08/IMG_20230831_141342-1068x493.jpg 1068w, https://peepalmedia.com/wp-content/uploads/2023/08/IMG_20230831_141342.jpg 1600w" sizes="auto, (max-width: 1024px) 100vw, 1024px" /></figure>



<p>ಹಲವು ದಿನಗಳಿಂದ ಗಾಯಗೊಂಡು ತಿರುಗಾಡುತಿದ್ದ &#8216;ಭೀಮ&#8217; ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು.</p>



<p>ಈ ಸಂದರ್ಭದಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದೆ. ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ವೆಂಕಟೇಶ್ ಅವರನ್ನು ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.</p>
]]></content:encoded>
					
		
		
			</item>
		<item>
		<title>ಸಕಲೇಶಪುರ : ಕಾಡಾನೆ ದಾಳಿಗೆ ಮತ್ತೊಂದು ಬಲಿ ; ಈವರೆಗೆ ಸತ್ತವರ ಸಂಖ್ಯೆ ಎಷ್ಟು ಗೊತ್ತಾ?</title>
		<link>https://peepalmedia.com/sakaleshpur-another-victim-of-jungle-attack/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Aug 2023 06:47:54 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Elephant attack]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<guid isPermaLink="false">https://peepalmedia.com/?p=25791</guid>

					<description><![CDATA[ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರಿದಿದೆ. ಕಾಫಿ ತೋಟಕ್ಕೆಂದು ಹೋಗಿದ್ದ ಮಹಿಳೆ ಮೇಲೆ ಕಾಡಾನೆ ತೀವ್ರವಾಗಿ ದಾಳಿ ನಡೆಸಿದ್ದು, ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಫಲಿಸದೇ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಇದು 78 ನೇ ಬಲಿಯಾಗಿದೆ. ಶುಕ್ರವಾರ ಬೆಳಿಗ್ಗೆ ಮುಂಚೆಯೇ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದೆ. ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ತಕ್ಷಣವೇ ಸ್ಥಳೀಯರ ಸಹಕಾರದಿಂದ ಜಿಲ್ಲಾಸ್ಪತ್ರೆ ದಾಖಲಾದ ಕೆಲವೇ ನಿಮಿಷಗಳಲ್ಲಿ [&#8230;]]]></description>
										<content:encoded><![CDATA[
<p>ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರಿದಿದೆ. ಕಾಫಿ ತೋಟಕ್ಕೆಂದು ಹೋಗಿದ್ದ ಮಹಿಳೆ ಮೇಲೆ ಕಾಡಾನೆ ತೀವ್ರವಾಗಿ ದಾಳಿ ನಡೆಸಿದ್ದು, ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಫಲಿಸದೇ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಇದು 78 ನೇ ಬಲಿಯಾಗಿದೆ.</p>



<p>ಶುಕ್ರವಾರ ಬೆಳಿಗ್ಗೆ ಮುಂಚೆಯೇ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದೆ. ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ತಕ್ಷಣವೇ ಸ್ಥಳೀಯರ ಸಹಕಾರದಿಂದ ಜಿಲ್ಲಾಸ್ಪತ್ರೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಸಾವನ್ನಪ್ಪಿದ್ದಾರೆ.</p>



<figure class="wp-block-image size-large"><img loading="lazy" decoding="async" width="462" height="1024" src="https://peepalmedia.com/wp-content/uploads/2023/08/IMG_20230818_121641-462x1024.jpg" alt="" class="wp-image-25793" srcset="https://peepalmedia.com/wp-content/uploads/2023/08/IMG_20230818_121641-462x1024.jpg 462w, https://peepalmedia.com/wp-content/uploads/2023/08/IMG_20230818_121641-135x300.jpg 135w, https://peepalmedia.com/wp-content/uploads/2023/08/IMG_20230818_121641-150x332.jpg 150w, https://peepalmedia.com/wp-content/uploads/2023/08/IMG_20230818_121641-300x665.jpg 300w, https://peepalmedia.com/wp-content/uploads/2023/08/IMG_20230818_121641.jpg 520w" sizes="auto, (max-width: 462px) 100vw, 462px" /></figure>



<p>ಕವಿತಾ ಅವರನ್ನು ಹತ್ತಿರದ ನಾರ್ವೆ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪತಿಯನ್ನು ಕಳೆದುಕೊಂಡಿದ್ದ ಕವಿತಾ ತವರು ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮನೆಯ ಹಿಂಭಾಗದ ಕಾಫಿ ತೋಟಕ್ಕೆ ಕವಿತಾ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿ ಸೊಂಡಲಿನಿದ್ದ ಎತ್ತಿ ಬಿಸಾಡಿ ತುಳಿದು ಗಾಯಗೊಳಿಸಿದೆ. ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.</p>



<figure class="wp-block-image size-full"><img loading="lazy" decoding="async" width="390" height="537" src="https://peepalmedia.com/wp-content/uploads/2023/08/IMG-20230818-WA0022.jpg" alt="" class="wp-image-25794" srcset="https://peepalmedia.com/wp-content/uploads/2023/08/IMG-20230818-WA0022.jpg 390w, https://peepalmedia.com/wp-content/uploads/2023/08/IMG-20230818-WA0022-218x300.jpg 218w, https://peepalmedia.com/wp-content/uploads/2023/08/IMG-20230818-WA0022-150x207.jpg 150w, https://peepalmedia.com/wp-content/uploads/2023/08/IMG-20230818-WA0022-300x413.jpg 300w" sizes="auto, (max-width: 390px) 100vw, 390px" /></figure>



<p>ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.</p>



<p>ಸಕಲೇಶಪುರ ಭಾಗದಲ್ಲಿ ನಿರಂತರ ನಡೆಯುತ್ತಿರುವ ಈ ಕಾಡಾನೆ ದಾಳಿಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮೃತಪಟ್ಟ ಕವಿತಾ ಸೇರಿದಂತೆ ಈವರೆಗೆ ಬರೋಬ್ಬರಿ 78 ಮಂದಿ ಕಾಡಾನೆ ದಾಳಿಗೆ ಮೃತಪಟ್ಟರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.</p>
]]></content:encoded>
					
		
		
			</item>
		<item>
		<title>ಅಮರನಾಥ ಯಾತ್ರೆಗೆ ತೆರಳಿದ್ದ ಸಕಲೇಶಪುರ ಮಂದಿ ಸೇಫ್</title>
		<link>https://peepalmedia.com/sakaleshpur-people-who-went-for-amarnath-yatra-are-safe/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 11 Jul 2023 16:24:17 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Amaranath Yathra]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<guid isPermaLink="false">https://peepalmedia.com/?p=23556</guid>

					<description><![CDATA[ಸಕಲೇಶಪುರ : ರಾಜ್ಯದಿಂದ ಅಮರ್‌ನಾಥ ಯಾತ್ರೆಗೆ ತೆರಳಿದ್ದ ಹಲವಷ್ಟು ಮಂದಿ ಅಲ್ಲಿನ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಕಲೇಶಪುರ ಪಟ್ಟಣದಿಂದ ತೆರಳಿದ್ದ 16 ಮಂದಿಯ ತಂಡ ಯಾವುದೆ ಅಪಾಯವಿಲ್ಲದೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ನಿನ್ನೆ ಸುರಿದ ಬಾರಿ ಮಳೆಯಲ್ಲಿ ಸಾವಿರಾರು ಮಂದಿ ಸಿಲುಕಿದ ಬಗ್ಗೆ ವರದಿಯಾಗಿದೆ. ಅಮರನಾಥ್ ಯಾತ್ರೆಯಲ್ಲಿ ಜಲಪ್ರವಾಹಕ್ಕೆ ಸಿಲುಕಿದವರನ್ನು ಈಗಾಗಲೇ ಮಿಲಿಟರಿ ಪಡೆ ರಕ್ಷಣಾ ಕಾರ್ಯದ ಮೂಲಕ ಸೂಕ್ತ ಜಾಗಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ರಾಜ್ಯದ ನಾನಾ ಭಾಗಗಳಿಂದ ಹೋದಂತಹ [&#8230;]]]></description>
										<content:encoded><![CDATA[
<p>ಸಕಲೇಶಪುರ : ರಾಜ್ಯದಿಂದ ಅಮರ್‌ನಾಥ ಯಾತ್ರೆಗೆ ತೆರಳಿದ್ದ ಹಲವಷ್ಟು ಮಂದಿ ಅಲ್ಲಿನ ಮಳೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಸಕಲೇಶಪುರ ಪಟ್ಟಣದಿಂದ ತೆರಳಿದ್ದ 16 ಮಂದಿಯ ತಂಡ ಯಾವುದೆ ಅಪಾಯವಿಲ್ಲದೆ ಸುರಕ್ಷಿತವಾಗಿ ಹಿಂತಿರುಗಿದ್ದಾರೆ.</p>



<p>ನಿನ್ನೆ ಸುರಿದ ಬಾರಿ ಮಳೆಯಲ್ಲಿ ಸಾವಿರಾರು ಮಂದಿ ಸಿಲುಕಿದ ಬಗ್ಗೆ ವರದಿಯಾಗಿದೆ. ಅಮರನಾಥ್ ಯಾತ್ರೆಯಲ್ಲಿ ಜಲಪ್ರವಾಹಕ್ಕೆ ಸಿಲುಕಿದವರನ್ನು ಈಗಾಗಲೇ ಮಿಲಿಟರಿ ಪಡೆ ರಕ್ಷಣಾ ಕಾರ್ಯದ ಮೂಲಕ ಸೂಕ್ತ ಜಾಗಕ್ಕೆ ರವಾನಿಸುವ ಕೆಲಸ ಮಾಡುತ್ತಿದೆ. ಹಾಗೆಯೇ ರಾಜ್ಯದ ನಾನಾ ಭಾಗಗಳಿಂದ ಹೋದಂತಹ ಯಾತ್ರಾರ್ಥಿಗಳನ್ನು ಮಿಲಿಟರಿ ಪಡೆ ಮತ್ತು ಸ್ಥಳೀಯ ಆಡಳಿತ ರಕ್ಷಣೆ ಮಾಡುತ್ತಿದೆ.</p>



<figure class="wp-block-image size-large"><img loading="lazy" decoding="async" width="467" height="1024" src="https://peepalmedia.com/wp-content/uploads/2023/07/IMG-20230711-WA0030-467x1024.jpg" alt="" class="wp-image-23557" srcset="https://peepalmedia.com/wp-content/uploads/2023/07/IMG-20230711-WA0030-467x1024.jpg 467w, https://peepalmedia.com/wp-content/uploads/2023/07/IMG-20230711-WA0030-137x300.jpg 137w, https://peepalmedia.com/wp-content/uploads/2023/07/IMG-20230711-WA0030-700x1536.jpg 700w, https://peepalmedia.com/wp-content/uploads/2023/07/IMG-20230711-WA0030-150x329.jpg 150w, https://peepalmedia.com/wp-content/uploads/2023/07/IMG-20230711-WA0030-300x658.jpg 300w, https://peepalmedia.com/wp-content/uploads/2023/07/IMG-20230711-WA0030-696x1528.jpg 696w, https://peepalmedia.com/wp-content/uploads/2023/07/IMG-20230711-WA0030.jpg 729w" sizes="auto, (max-width: 467px) 100vw, 467px" /></figure>



<p>ಸೋಮವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಅಮರ್‌ನಾಥ್ ದರ್ಶನಕ್ಕೆ ಸಕಲೇಶಪುರದಿಂದ ತೆರಳಿದ್ದ ತಂಡ, ಸಂಜೆಯ ವೇಳೆಗೆ ವಿಪರೀತ ಮಳೆ ಆರಂಭವಾಗಿ ತೊಂದರೆಗೆ ಸಿಲುಕಿದೆ. ಈ ಸಂಧರ್ಭದಲ್ಲಿ ಮಿಲಿಟರಿ ಪಡೆಯ ಹೆಲಿಕ್ಯಾಪ್ಟರ್ ಮುಖಾಂತರ ಎಲ್ಲಾ 16 ಮಂದಿ ಹೊರ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>



<p>ಆ ನಂತರ ಉತ್ತರ ಪ್ರದೇಶದ ಬಳ್ತಲ್ ಮಿಲಿಟರಿ ಕ್ಯಾಂಪ್‌ಗೆ ಈ ತಂಡ ಬಂದು ಆಗಮಿಸಿ ಆಶ್ರಯ ಪಡೆದಿದೆ. ನಂತರ ಮಂಗಳವಾರ ಮಧ್ಯಾಹ್ನದ ಸಕಲೇಶಪುರದ ಈ ತಂಡ ಶ್ರೀನಗರದ ಕಡೆಗೆ ಪ್ರಯಾಣ ಮುಂದುವರೆಸಿದೆ.</p>



<p>ತಂಡದಲ್ಲಿ ಮಾಜಿ ಪುರಸಭಾ ಸದಸ್ಯ ವೆಂಕಟೇಶ್, ವರ್ತಕರುಗಳಾದ ಮಧುಕುಮಾರ್, ಉಮಾಪತಿ, ನರೇಂದ್ರಸಿಂಗ್, ಯುವರಾಜ್ ಸೇರಿದಂತೆ ಒಟ್ಟು 8 ಪುರುಷರು ಹಾಗೂ 8 ಮಹಿಳೆಯರಿದ್ದಾರೆ.</p>
]]></content:encoded>
					
		
		
			</item>
		<item>
		<title>ಹಾವಿನ ದ್ವೇಷ 12 ವರುಷ: ಆನೆಗೂ ಅಂತಹ ಸೇಡಿನ ಗುಣವಿದೆಯೇ!</title>
		<link>https://peepalmedia.com/snake-hate-12-years-does-the-elephant-have-such-revenge/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 25 Nov 2022 08:26:43 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[Hasana]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Makna Kadane]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<category><![CDATA[Sakleshpur Forest Department]]></category>
		<guid isPermaLink="false">https://peepalmedia.com/?p=16477</guid>

					<description><![CDATA[ಸಕಲೇಶಪುರ: ಸ್ಥಳಾಂತರಕ್ಕೆ ಕೋಪಗೊಂಡಿದ್ದ ಆನೆಯೊಂದು, ಆರು ತಿಂಗಳ ಬಳಿಕ ಅದೇ ಸ್ಥಳಕ್ಕೆ ಬಂದು ದಾಂಧಲೆ ನಡೆಸಿರುವ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ. ಕೆಸಗುಲಿ ಗ್ರಾಮದಲ್ಲಿನ ಮನೆಗಳ ಮೇಲೆ ಆನೆಯೊಂದು ಪದೇಪದೆ ಮಾಡುತ್ತಿತ್ತು. ಈ ಕಾರಣ ಬೇಸತ್ತ ಮನೆಯವರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಆರು ತಿಂಗಳ ಹಿಂದೆ ಕೊನೆಯ ಬಾರಿಗೆ ದಾಳಿ ಮಾಡಿದ್ದ ಕಾಡಾನೆಯನ್ನು(ಮಕ್ನ ಕಾಡಾನೆ) ಸೆರೆಹಿಡಿದು ನೂರಾರು ಕಿಲೋಮೀಟರ್‌ ದೂರದ ಕಾಡಿನಲ್ಲಿ, ಅಂದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬರಲಾಗಿತ್ತು. ಅದೇ [&#8230;]]]></description>
										<content:encoded><![CDATA[
<p><strong>ಸಕಲೇಶಪುರ:</strong> ಸ್ಥಳಾಂತರಕ್ಕೆ ಕೋಪಗೊಂಡಿದ್ದ ಆನೆಯೊಂದು, ಆರು ತಿಂಗಳ ಬಳಿಕ ಅದೇ ಸ್ಥಳಕ್ಕೆ ಬಂದು ದಾಂಧಲೆ ನಡೆಸಿರುವ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ.</p>



<figure class="wp-block-video"><video controls src="https://peepalmedia.com/wp-content/uploads/2022/11/WhatsApp-Video-2022-11-25-at-1.15.19-PM.mp4"></video><figcaption class="wp-element-caption"><strong>ಕಾಡಾನೆ(ಮಕ್ನಾ ಕಾಡಾನೆ) ಮನೆಯ ಮೇಲೆ ದಾಳಿ ನಡೆಸಿ, ಕಿಟಕಿಯ ಗಾಜುಗಳನ್ನು ಧ್ವಂಸ ಮಾಡಿರುವ ದೃಶ್ಯ</strong></figcaption></figure>



<p>ಕೆಸಗುಲಿ ಗ್ರಾಮದಲ್ಲಿನ ಮನೆಗಳ ಮೇಲೆ ಆನೆಯೊಂದು ಪದೇಪದೆ ಮಾಡುತ್ತಿತ್ತು. ಈ ಕಾರಣ ಬೇಸತ್ತ ಮನೆಯವರು, ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದರು. </p>



<p>ಈ ಹಿನ್ನಲೆಯಲ್ಲಿ ಆರು ತಿಂಗಳ ಹಿಂದೆ ಕೊನೆಯ ಬಾರಿಗೆ ದಾಳಿ ಮಾಡಿದ್ದ ಕಾಡಾನೆಯನ್ನು(ಮಕ್ನ ಕಾಡಾನೆ) ಸೆರೆಹಿಡಿದು ನೂರಾರು ಕಿಲೋಮೀಟರ್‌ ದೂರದ ಕಾಡಿನಲ್ಲಿ, ಅಂದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬರಲಾಗಿತ್ತು.</p>



<p>ಅದೇ ಆನೆ ಬುಧವಾರ ರಾತ್ರಿ ಕುಮಾರ್‌ ಎಂಬುವರ ಮನೆ ಮೇಲೆ ದಾಳಿ ನಡೆಸಿ, ಕಿಟಕಿಯ ಗಾಜುಗಳನ್ನು ಧ್ವಂಸ ಮಾಡಿದೆ. ಕಳೆದ 6 ತಿಂಗಳ ಹಿಂದೆ ಇದೇ ಮನೆ ಪಕ್ಕದಲ್ಲಿರುವ ಅವರ ಅಣ್ಣ ಗಿರೀಶ್ ಎಂಬುವರ ಮನೆಯ ಮೇಳೆ ದಾಳಿ ನಡೆಸಿತ್ತು. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ. ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.</p>



<p>ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆಗೆ 6 ತಿಂಗಳ ಹಿಂದೆ ಹಿಡಿದ ಮಕ್ನ ಕಾಡಾನೆ ಎಂಬುದು ಅದಕ್ಕೆ ಹಾಕಿರುವ ರೇಡಿಯೋ ಕಾಲರ್ ನಿಂದ ಗೊತ್ತಾಗಿದೆ.</p>



<figure class="wp-block-video"><video controls src="https://peepalmedia.com/wp-content/uploads/2022/11/WhatsApp-Video-2022-11-25-at-1.16.11-PM.mp4"></video></figure>



<p>ಸಾಮಾನ್ಯವಾಗಿ ಆನೆಗಳು ಹೊಲ ಗದ್ದೆಗಳಿಗೆ ನುಗ್ಗುತ್ತವೆ. ಈ ಆನೆ ಮನೆಗಳನ್ನು ಟಾರ್ಗೆಟ್ ಮಾಡುತ್ತಿರುವುದರಿಂದ ಪರಿಸರದಲ್ಲಿ ಆತಂಕ ಸೃಷ್ಟಿಯಾಗಿದೆ.</p>



<figure class="wp-block-video"><video controls src="https://peepalmedia.com/wp-content/uploads/2022/11/WhatsApp-Video-2022-11-25-at-12.55.24-PM.mp4"></video><figcaption class="wp-element-caption"><strong>ಆರು ತಿಂಗಳ ಹಿಂದೆ ಅರಣ್ಯಾಧಿಕಾರಿಗಳು ಮಕ್ನ ಕಾಡಾನೆಯನ್ನು ಸೆರೆ ಹಡಿಯಲು ಪ್ರಯತ್ನಿಸುತ್ತಿರುವ ದೃಶ್ಯ</strong></figcaption></figure>
]]></content:encoded>
					
		
		<enclosure url="https://peepalmedia.com/wp-content/uploads/2022/11/WhatsApp-Video-2022-11-25-at-1.15.19-PM.mp4" length="6868515" type="video/mp4" />
<enclosure url="https://peepalmedia.com/wp-content/uploads/2022/11/WhatsApp-Video-2022-11-25-at-1.16.11-PM.mp4" length="6730364" type="video/mp4" />
<enclosure url="https://peepalmedia.com/wp-content/uploads/2022/11/WhatsApp-Video-2022-11-25-at-12.55.24-PM.mp4" length="7943180" type="video/mp4" />

			</item>
		<item>
		<title>ಸ್ಥಳಾಂತರಕ್ಕೆ ಸೇಡು ತೀರಿಸಿಕೊಂಡ ಆನೆ ; ಸಕಲೇಶಪುರದಲ್ಲಿ ಆಶ್ಚರ್ಯ ಮತ್ತು ಅಪರೂಪದ ಘಟನೆ</title>
		<link>https://peepalmedia.com/elephant-avenged-the-displacement-a-surprise-and-a-rare-event-in-sakaleshpur/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 25 Nov 2022 05:59:20 +0000</pubDate>
				<category><![CDATA[ರಾಜ್ಯ]]></category>
		<category><![CDATA[ಹಾಸನ]]></category>
		<category><![CDATA[Elephant]]></category>
		<category><![CDATA[hassan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<guid isPermaLink="false">https://peepalmedia.com/?p=16461</guid>

					<description><![CDATA[ಆನೆಯೊಂದು ತನಗೆ ತೊಂದರೆ ಕೊಟ್ಟವರ ಗುರುತು ಹಿಡಿದು, ಸ್ಥಳಾಂತರಗೊಂಡ 6 ತಿಂಗಳ ನಂತರವೂ ಬಂದು ಮನೆ ಮೇಲೆ ದಾಳಿ ನಡೆಸಿದ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ಸಕಲೇಶಪುರದ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ತೀವ್ರವಾಗಿದೆ. ಕಳೆದ ಒಂದೂವರೆ ವರ್ಷಗಳ ವ್ಯಾಪ್ತಿಯಲ್ಲಿ ಮೂಡಿಗೆರೆ ಭಾಗದಲ್ಲಿ ಆನೆ ದಾಳಿಗೆ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಕ್ರಮ ತಗೆದುಕೊಳ್ಳದ ಕಾರಣಕ್ಕೆ ಮೂಡಿಗೆರೆ ಶಾಸಕರನ್ನು ಆ ಭಾಗದ [&#8230;]]]></description>
										<content:encoded><![CDATA[
<p style="font-size:20px">ಆನೆಯೊಂದು ತನಗೆ ತೊಂದರೆ ಕೊಟ್ಟವರ ಗುರುತು ಹಿಡಿದು, ಸ್ಥಳಾಂತರಗೊಂಡ 6 ತಿಂಗಳ ನಂತರವೂ ಬಂದು ಮನೆ ಮೇಲೆ ದಾಳಿ ನಡೆಸಿದ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ಸಕಲೇಶಪುರದ ಹಳ್ಳಿಯೊಂದರಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.</p>



<p style="font-size:20px">ಇತ್ತೀಚಿನ ದಿನಗಳಲ್ಲಿ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ತೀವ್ರವಾಗಿದೆ. ಕಳೆದ ಒಂದೂವರೆ ವರ್ಷಗಳ ವ್ಯಾಪ್ತಿಯಲ್ಲಿ ಮೂಡಿಗೆರೆ ಭಾಗದಲ್ಲಿ ಆನೆ ದಾಳಿಗೆ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಕ್ರಮ ತಗೆದುಕೊಳ್ಳದ ಕಾರಣಕ್ಕೆ ಮೂಡಿಗೆರೆ ಶಾಸಕರನ್ನು ಆ ಭಾಗದ ಜನ ಅಟ್ಟಾಡಿಸಿದ್ದು ಸಹ ಇಲ್ಲಿ ನೆನೆಸಿಕೊಳ್ಳಬೇಕು.</p>



<p style="font-size:20px">ಸಕಲೇಶಪುರದ ಕೆಸಗುಲಿ ಗ್ರಾಮ ಕೂಡಾ ಇಂತಹದ್ದೇ ನಿರಂತರ ಆನೆ ದಾಳಿಗೆ ತುತ್ತಾದ ಊರಾಗಿದೆ. ಕೆಸಗುಲಿ ಗ್ರಾಮದಲ್ಲಿ ಆನೆ ಹಾವಳಿ ವಿಪರೀತವಾಗಿದ್ದು, ಜಮೀನು ಮಾತ್ರವಲ್ಲ ಮನೆಗಳ ಮೇಲೂ ದಾಳಿ ಇಡುವ ಗುಣವನ್ನು ಆನೆಗಳು ಬೆಳೆಸಿಕೊಂಡಿವೆ. ಹಾಗಾಗಿ ನಿರಂತರವಾಗಿ ಇಲ್ಲಿನ ಮನೆಗಳಿಗೆ ಆನೆಯೊಂದು ಪದೇಪದೆ ದಾಳಿ ಮಾಡುತ್ತಿತ್ತು. ಇದರಿಂದ ಬೇಸತ್ತ ಮನೆಯವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಆನೆ ಸ್ಥಳಾಂತರಕ್ಕೆ ಮನವಿಯನ್ನೂ ಮಾಡಿದ್ದರು.</p>



<p style="font-size:20px">ನಂತರ ಅರಣ್ಯಾಧಿಕಾರಿಗಳ ಸಹಕಾರದಿಂದ ಈ ರೀತಿ ದಾಳಿ ಇಡುವ ಮಕ್ನ ಎಂಬ ಕಾಡಾನೆಯನ್ನು 6 ತಿಂಗಳ ಹಿಂದೆ ಇಲ್ಲಿಂದ ಸ್ಥಳಾಂತರ ಮಾಡಲಾಗಿತ್ತು. ಸಕಲೇಶಪುರದಿಂದ ನೂರಾರು ಕಿಲೋಮೀಟರ್ ದೂರದ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ ಆನೆಯನ್ನು ಸ್ಥಳಾಂತರ ಮಾಡಲಾಗಿತ್ತು.</p>



<p style="font-size:20px">ಆ ನಂತರ ಸ್ವಲ್ಪ ಮಟ್ಟಿಗೆ ಆನೆಗಳ ಹಾವಳಿ ತಗ್ಗಿತ್ತು. ಆದರೆ ಮೊನ್ನೆಯ ದಿನ ಬುಧವಾರ ರಾತ್ರಿ ಕೆಸಗುಲಿ ಗ್ರಾಮದ ಕುಮಾರ್ ಎಂಬುವರ ಮನೆ ಮೇಲೆ ದಾಳಿ ನಡೆಸಿದ ಒಂಟಿ ಸಲಗವೊಂದು ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದೆ. ಕಳೆದ 6 ತಿಂಗಳ ಹಿಂದೆ ಇದೇ ಮನೆಯ ಪಕ್ಕದಲ್ಲಿರುವ ಅವರ ಅಣ್ಣ ಗಿರೀಶ್ ಎಂಬುವರ ಮನೆಯ ಮೇಳೆ ದಾಳಿ ನಡೆಸಿತ್ತು. ಒಂಟಿ ಸಲಗದ ಆರ್ಭಟಕ್ಕೆ ಮನೆಯ ಬಾಗಿಲು ಕಿಟಕಿಗಳೆಲ್ಲಾ ಪುಡಿ ಪುಡಿಯಾಗಿವೆ.</p>



<p style="font-size:20px">ಮುಂಜಾನೆ ಎರಡು ಗಂಟೆಯ ಹೊತ್ತಿಗೆ ಆನೆ ಏಕಾಏಕಿಯಾಗಿ ದಾಳಿ ಮಾಡಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದಾಗ ಬಂದಿದ್ದ ಆನೆ ದಾಳಿ ಮಾಡುತ್ತಿದ್ದಂತೆಯೇ ಮನೆಯವರು ಎಚ್ಚೆತ್ತು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.</p>



<p style="font-size:20px">ದೂರಿನ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಂತರ ತಿಳಿದ ವಿಷಯ ಏನೆಂದರೆ, 6 ತಿಂಗಳ ಹಿಂದೆ ಹಿಡಿದ ಮಕ್ನ ಎಂಬ ಕಾಡಾನೆಯೇ ಈಗ ದಾಳಿ ನಡೆಸಿದ್ದು ಎಂಬುದು ಅದಕ್ಕೆ ಹಾಕಿರುವ ರೇಡಿಯೋ ಕಾಲರ್ ನಿಂದ ಗೊತ್ತಾಗಿದೆ. ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ತಾತ್ಕಾಲಿಕ ಕ್ರಮ ತಗೆದುಕೊಳ್ಳುವ ಭರವಸೆ ನೀಡಿದ್ದಾರೆ.</p>



<p style="font-size:20px">ಅಷ್ಟರ ಮಟ್ಟಿಗೆ ನೂರಾರು ಕಿಲೋಮೀಟರ್ ದೂರದಿಂದ ಮನೆಯನ್ನೂ ಹುಡುಕಿ ಬಂದು ದಾಳಿ ಮಾಡುವಷ್ಟು ಆನೆಗಳು ಸೇಡಿನ ಗುಣವನ್ನು ಹೊಂದಿವೆಯಾ ಎಂಬ ಆಶ್ಚರ್ಯ ಎಲ್ಲರಲ್ಲೂ ಮನೆ ಮಾಡಿದೆ. ಆನೆಗಳು ತನ್ನ ಪಾಡಿಗೆ ತಾನು ಓಡಾಡಿಕೊಂಡಿರುವಾಗ ಅವಕ್ಕೆ <strong>ಪಟಾಕಿ ಸಿಡಿಸುವುದು, ಕಲ್ಲು ಹೊಡೆಯುವುದು, ಗುಂಡು ಹಾರಿಸಿಯೋ ಅಥವಾ ವಿಚಿತ್ರವಾಗಿ ಶಬ್ದ ಮಾಡಿ ಹೆದರಿಸುವುದು </strong>ಇಂತಹ ಪ್ರಕ್ರಿಯೆಗಳನ್ನು ಮಾಡಿದಾಗ ಅವುಗಳು ರೊಚ್ಚಿಗೆದ್ದು ತಿರುಗಿ ಬೀಳುವುದು ಸರ್ವೇಸಾಮಾನ್ಯ, ಸಾಧ್ಯವಾದಷ್ಟು ಅವುಗಳಿಗೆ ಈ ರೀತಿಯ ತೊಂದರೆಯಾಗದಂತೆ ನೋಡಿಕೊಂಡರೆ ಇಂತಹ ದಾಳಿಯಿಂದ ದೂರ ಇರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಕಲೇಶಪುರ ದುರಂತ: ಕಾಡಾನೆ ಸಮಸ್ಯೆಗೆ ಪ್ರತಿಕ್ರಿಯಿಸಿದ ಸಿಎಮ್‌</title>
		<link>https://peepalmedia.com/sakaleshpur-tragedy-cm-promised-a-permanent-solution-to-the-forest-problem/</link>
		
		<dc:creator><![CDATA[Peepal Media]]></dc:creator>
		<pubDate>Wed, 02 Nov 2022 08:11:56 +0000</pubDate>
				<category><![CDATA[ರಾಜ್ಯ]]></category>
		<category><![CDATA[deaths by elephants]]></category>
		<category><![CDATA[hassan]]></category>
		<category><![CDATA[hebbana halli]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manu]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sakaleshapura]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=13688</guid>

					<description><![CDATA[ಸಕಲೇಶಪುರ: ನಿನ್ನೆ ಸಕಲೇಶಪುರದ ಹೆಬ್ಬನ ಹಳ್ಳಿಯ ಮನು ಎನ್ನುವ 32 ವರ್ಷದ ಯುವಕ ಹತ್ತಿರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ಬೆಳಗಿನ ಜಾವ ತೆರಳಿದ್ದಾಗ ಆನೆ ತುಳಿತಕ್ಕೊಳಗಾಗಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಲ್ಲಿನ ಜನರು ಶವವನ್ನು ಎದುರಿಗಿಟ್ಟುಕೊಂಡು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು. ಸಿಎಮ್‌ ಈ ಕುರಿತು ಸ್ಥಳಕ್ಕೆ ಬಂದು ಪ್ರತಿಕ್ರಿಯೆ ನೀಡುವ ತನಕ ತಾವು ಸ್ಥಳದಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದ ಜನರನ್ನು ಸಮಾಧಾನಗೊಳಿಸುವ ಪ್ರಯತ್ನವಾಗಿ, ಮಾಜಿ ಶಾಸಕ ಎಚ್‌ ಎಮ್‌ ವಿಶ್ವನಾಥ್‌ ಅವರೊಡನೆ ಮುಖ್ಯಮಂತ್ರಿಯವರು [&#8230;]]]></description>
										<content:encoded><![CDATA[
<p>ಸಕಲೇಶಪುರ: ನಿನ್ನೆ ಸಕಲೇಶಪುರದ ಹೆಬ್ಬನ ಹಳ್ಳಿಯ ಮನು ಎನ್ನುವ 32 ವರ್ಷದ ಯುವಕ ಹತ್ತಿರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಪೂಜೆಗೆಂದು ಬೆಳಗಿನ ಜಾವ ತೆರಳಿದ್ದಾಗ ಆನೆ ತುಳಿತಕ್ಕೊಳಗಾಗಿ <a href="https://peepalmedia.com/hassan-forestwild-attack-youth-killed/">ಮೃತಪಟ್ಟಿದ್ದರು</a>. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಅಲ್ಲಿನ ಜನರು ಶವವನ್ನು ಎದುರಿಗಿಟ್ಟುಕೊಂಡು ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದರು. ಸಿಎಮ್‌ ಈ ಕುರಿತು ಸ್ಥಳಕ್ಕೆ ಬಂದು ಪ್ರತಿಕ್ರಿಯೆ ನೀಡುವ ತನಕ ತಾವು ಸ್ಥಳದಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದ ಜನರನ್ನು ಸಮಾಧಾನಗೊಳಿಸುವ ಪ್ರಯತ್ನವಾಗಿ, ಮಾಜಿ ಶಾಸಕ ಎಚ್‌ ಎಮ್‌ ವಿಶ್ವನಾಥ್‌ ಅವರೊಡನೆ ಮುಖ್ಯಮಂತ್ರಿಯವರು ಫೋನ್‌ ಮೂಲಕ ಸಂಪರ್ಕಕ್ಕೆ ಬಂದಿದ್ದರು.</p>



<p>ವಿಶ್ವನಾಥ ಅವರೊಡನೆ ಮಾತನಾಡುತ್ತಾ ಮುಖ್ಯಮಂತ್ರಿ ಬೊಮ್ಮಾಯಿಯವರು, &#8220;ನಾನು ಈ ಕುರಿತು [ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ] ಬಜೆಟ್ಟಿನಲ್ಲಿ ನೂರು ಕೋಟಿ ಎತ್ತಿಟ್ಟಿದ್ದೇನೆ. ಅಲ್ಲದೆ ಇಂತಹ ಘಟನೆಗಳಲ್ಲಿ ಮೃತಪಟ್ಟವರಿಗೆ ಪರಿಹಾರ ಮೊತ್ತವನ್ನು ಸಹ ಹೆಚ್ಚಿಸಿದ್ದೇನೆ,&#8221; ಎಂದ ಅವರು ಹಣವೇ ಮುಖ್ಯವಲ್ಲವೆನ್ನುವುದು ನಿಜವಲ್ಲವಾದರೂ ಇದು ನನಗೆ ಆ ಜನರ ಕುರಿತು ಇರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು. </p>



<p>ಎಚ್‌ ಎಮ್‌ ವಿಶ್ವನಾಥ ಅವರು ಮುಖ್ಯಮಂತ್ರಿಯವರೊಡನೆ ಹಂಚಿಕೊಂಡ ಮಾಹಿತಿಯ ಪ್ರಕಾರ ಜನರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಿಂದ ಕೇವಲ ಐನೂರು ಮೀಟರ್‌ ದೂರದಲ್ಲಿ 30 ಆನೆಗಳಿದ್ದವು. ಒಟ್ಟಾರೆ ಈ ವಲಯದಲ್ಲಿ ಜನ ವಸತಿ ಪ್ರದೇಶದಲ್ಲೇ ಸುಮಾರು 100-120 ಆನೆಗಳಿರುವುದಾಗಿ ಹೇಳಿದ್ದಾರೆ. ಅಲ್ಲದೆ ಇಲ್ಲಿರುವ ಜನರೆಲ್ಲ ಸಣ್ಣ-ಪುಟ್ಟ ರೈತರಾಗಿದ್ದು ಈ ಪ್ರದೇಶದಲ್ಲಿ ಇದುವರೆಗೆ ಸುಮಾರು 77 ಜನರು ಸತ್ತಿದ್ದು, ವಾರ-ಹದಿನೈದು ದಿನಗಳಿಗೊಮ್ಮೆ ಜನರು ಸಾಯುತ್ತಿದ್ದಾರೆ ಎಂದು ಅತಂಕದಿಂದ ಹೇಳಿಕೊಂಡರು.</p>



<p>ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಇನ್ನೆರಡು ದಿನಗಳಲ್ಲಿ ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಜನರ ಅಹವಾಲುಗಳನ್ನು ಆಲಿಸಿ ನಂತರ ಅದಕ್ಕೆ ಸಂಬಂಧಿಸಿದಂತೆ ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ದೊಡ್ಡ ಪ್ರಮಾಣದಲ್ಲಿ ಬಂದೋಬಸ್ತ್‌ ವ್ಯವಸ್ಥೆ ಮಾಡಿ, ಫೆನ್ಸಿಂಗ್‌ ವ್ಯವಸ್ಥೆ ಮಾಡಿಸುವುದಾಗಿ ಹೇಳಿದರು.</p>



<p>ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರನ್ನು ರಾತ್ರಿಯ ಒಳಗೆ ಕಳುಹಿಸುವುದಾಗಿ ತಿಳಿಸಿದರಾದರೂ ಜನರು ಮುಖ್ಯಮಂತ್ರಿಯವರು ಇಲ್ಲಿಗೆ ಬರಬೇಕೆಂದು ಪಟ್ಟುಹಿಡಿದು ಕುಳಿತಿದ್ದರು. ನಂತರ ಜನರೊಡನೆ ಫೋನ್‌ ಮೂಲಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿಯವರು, &#8220;ನಿಮ್ಮ ಮನೆಯಲ್ಲಿ ಸಂಭವಿಸಿರುವ ನಮ್ಮ ಮನೆಯದೂ ಹೌದು, ಈ ಕುರಿತು ನಾನು ಎಲ್ಲ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಿದ್ದೇವೆ. ನಾವು ನಿಮ್ಮೊಡನಿದ್ದೇವೆ,&#8221; ಎಂದು ಭರವಸೆ ನೀಡಿದರು. </p>



<p>ಆದರೆ ಜನರು ಸಚಿವರು ಸ್ಥಳಕ್ಕೆ ಬಾರದೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು. ಸ್ಥಳೀಯ ಶಾಸಕ ಎಚ್‌ ಕೆ ಕುಮಾರಸ್ವಾಮಿ ಮತ್ತು ಮಾಜಿ ಶಾಸಕರು, ಜಿಲ್ಲಾಧಿಕಾರಿ, ಎಸ್ ಪಿ, ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಪ್ರತಿಭಟನಕಾರರ ಮನವೊಲಿಸಲು ಮಾಡಿದ ಪ್ರಯತ್ನಗಳು ಫಲ ನೀಡದೆ ಹೋದವು.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/11/gOpalayya.jpg" alt="" class="wp-image-13704" width="576" height="573" srcset="https://peepalmedia.com/wp-content/uploads/2022/11/gOpalayya.jpg 720w, https://peepalmedia.com/wp-content/uploads/2022/11/gOpalayya-300x298.jpg 300w, https://peepalmedia.com/wp-content/uploads/2022/11/gOpalayya-150x150.jpg 150w, https://peepalmedia.com/wp-content/uploads/2022/11/gOpalayya-696x692.jpg 696w, https://peepalmedia.com/wp-content/uploads/2022/11/gOpalayya-24x24.jpg 24w, https://peepalmedia.com/wp-content/uploads/2022/11/gOpalayya-48x48.jpg 48w, https://peepalmedia.com/wp-content/uploads/2022/11/gOpalayya-96x96.jpg 96w" sizes="auto, (max-width: 576px) 100vw, 576px" /><figcaption class="wp-element-caption">ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಗೋಪಾಲಯ್ಯ</figcaption></figure></div>


<p>ನಂತರದ ಬೆಳವಣಿಗೆಯಲ್ಲಿ ನಿನ್ನೆ ತಡರಾತ್ರಿ ಸ್ಥಳಕ್ಕೆ ಸಚಿವ ಗೋಪಾಲಯ್ಯ ಅವರು ಭೇಟಿ ನೀಡಿ, ಮೃತ ಪಟ್ಟ ಮನುವಿನ ಮನೆಯವರಿಗೆ 15 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಒಂದು ವಾರದಲ್ಲಿ ಆನೆಗಳ ಸ್ಥಳ ಬದಲಾವಣೆಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.</p>



<p>ಒಬ್ಬರ ನಂತರ ಒಬ್ಬರಂತೆ ತಮ್ಮ ಊರಿನ ಜನರನ್ನು, ಸಂಬಂಧಿಕರನ್ನು ಕಳೆದುಕೊಳ್ಳುತ್ತಿರುವ ಈ ಪ್ರದೇಶದ ಜನರ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ದೊರೆತು ಆನೆಗಳು ಮತ್ತು ಜನರು ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಾಣವಾಗಲಿಯೆನ್ನುವುದು ಪೀಪಲ್‌ ಮೀಡಿಯಾದ ಕಾಳಜಿಯಾಗಿದೆ.</p>



<p>ಮುಖ್ಯಮಂತ್ರಿಯವರೊಡನೆ ನಡೆದ ಮಾತುಕತೆಯ ಆಡಿಯೋ ಕ್ಲಿಪ್‌ ಕೇಳಲು ಇಲ್ಲಿ <a href="https://youtu.be/gbsRGUI3YAo">ಕ್ಲಿಕ್‌</a> ಮಾಡಿ.</p>
]]></content:encoded>
					
		
		
			</item>
		<item>
		<title>ಹಾಸನ: ಕಾಡಾನೆ ದಾಳಿ, ಯುವಕ ಸಾವು</title>
		<link>https://peepalmedia.com/hassan-forestwild-attack-youth-killed/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Nov 2022 05:54:11 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ಹಾಸನ]]></category>
		<category><![CDATA[forestwild]]></category>
		<category><![CDATA[h k kumaraswami]]></category>
		<category><![CDATA[Hasana]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sakaleshapura]]></category>
		<guid isPermaLink="false">https://peepalmedia.com/?p=13516</guid>

					<description><![CDATA[ಸಕಲೇಶಪುರ: ಕಾಡಾನೆಯ ದಾಳಿಗೀಡಾಗಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಿಂದ ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತಾಗಿ ಪರಿಶೀಲನೆ ನಡೆಸಿ. ಸಾವನ್ನಪ್ಪಿರುವ ವ್ಯಕ್ತಿ, ಮನು (34) ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಕಾಡಾನೆ ದಾಳಿಯಿಂದ ಈ ಯುವಕನೂ ಸೇರಿದಂತೆ, ಈ ಪ್ರದೇಶದಲ್ಲಿ ಇದುವರೆಗೆ ಒಟ್ಟು 76 ಜನರು ಬಲಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯು [&#8230;]]]></description>
										<content:encoded><![CDATA[
<p><strong>ಸಕಲೇಶಪುರ:</strong> ಕಾಡಾನೆಯ ದಾಳಿಗೀಡಾಗಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿ ಗ್ರಾಮದಿಂದ ವರದಿಯಾಗಿದೆ.</p>



<p>ಈ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಘಟನೆ ನಡೆದ ಬಳಿಕ ಸ್ಥಳಕ್ಕೆ ಭೇಟಿ ನೀಡಿ, ಘಟನೆಯ ಕುರಿತಾಗಿ ಪರಿಶೀಲನೆ ನಡೆಸಿ. ಸಾವನ್ನಪ್ಪಿರುವ ವ್ಯಕ್ತಿ, ಮನು (34) ಎಂದು ತಿಳಿಸಿದ್ದಾರೆ.</p>



<p>ಮೂಲಗಳ ಪ್ರಕಾರ, ಕಾಡಾನೆ ದಾಳಿಯಿಂದ ಈ ಯುವಕನೂ ಸೇರಿದಂತೆ, ಈ ಪ್ರದೇಶದಲ್ಲಿ ಇದುವರೆಗೆ ಒಟ್ಟು 76 ಜನರು ಬಲಿಯಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆಯು ಕುರುಡಾಗಿರುವುದರ ವಿರುದ್ಧ ಜನರು ಕೆಂಡ ಕಾರುತ್ತಿದ್ದಾರೆ. ಕಾಡಾನೆ ಸಮಸ್ಯೆಗೆ ಸರಿಯಾದ ಪರಿಹಾರ ಕಂಡುಹಿಡಿಯಬೇಕೆಂದು ಆಗ್ರಹಿಸುತ್ತಿದ್ದಾರೆ.</p>



<p>ಘಟನೆಯನ್ನು ಉಲ್ಲೇಖಿಸಿ ಸ್ಥಳೀಯ ಶಾಸಕ ಎಚ್‌. ಕೆ. ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ತಾಲ್ಲೂಕಿನಲ್ಲಿ ಆನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಇದು ದುರಾದೃಷ್ಟಕರ ಸಂಗತಿ, ನಾವು ಆನೆ ದಾಳಿ ಕುರಿತು ಬಹಳಷ್ಟು ಹೋರಾಟ ಮಾಡಿದ್ದರು ಕೂಡ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ, ಹೀಗಾಗಿ ದಾಳಿ ಮುಂದುವರೆದಿದೆ ಎಂದು ತಿಳಿಸಿದರು. ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದ ಅವರು ಅಲ್ಲಿಂದಲೇ ಸುದ್ದಿ ತಿಳಿದಾಕ್ಷಣ ಪ್ರತಿಕ್ರಿಯಿಸಿದ್ದಾರೆ.</p>



<p>ಘಟನೆಯ ಕುರಿತು ಉಸ್ತುವಾರಿ ಸಚಿವರ ಬಳಿ ಈಗಾಗಲೇ ಕರೆ ಮಾಡಿ, ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡುವಂತೆ ಸೂಚಿಸಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳುವುದರೊಂದಿಗೆ, ಮೃತನ ಕುಟುಂಬಕ್ಕೆ ಪರಿಹಾರವನ್ನು ಒದಗಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
