<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>sanskrit &#8211; Peepal Media</title>
	<atom:link href="https://peepalmedia.com/tag/sanskrit/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 02 Sep 2024 15:01:07 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>sanskrit &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!</title>
		<link>https://peepalmedia.com/is-sanskrit-mother-to-all-the-languages/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 02 Sep 2024 10:24:55 +0000</pubDate>
				<category><![CDATA[ಅಂಕಣ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Aivarnad]]></category>
		<category><![CDATA[history]]></category>
		<category><![CDATA[language]]></category>
		<category><![CDATA[languages]]></category>
		<category><![CDATA[lingustics]]></category>
		<category><![CDATA[sanskrit]]></category>
		<category><![CDATA[udpi]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=44798</guid>

					<description><![CDATA[ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ. ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ [&#8230;]]]></description>
										<content:encoded><![CDATA[
<p>ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ.</p>



<p>ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ. ಈ ಸುಳ್ಳನ್ನು ಈ ದೇಶದಲ್ಲಿ ಮತ್ತೆ ಮತ್ತೆ ಹರಡಲಾಗುತ್ತಿದೆ. ಈಗ ಸಂಸ್ಕೃತ ಗೊತ್ತಿಲ್ಲದೇ ಇದ್ದರೆ ಸ್ವರ್ಗಕ್ಕೆ ಹೋಗುವುದೂ ಕಷ್ಟವಾಗಿದೆ.&nbsp;</p>



<p>ಸಂಸ್ಕೃತ ಒಂದು ಅಗಾದ ಜ್ಞಾನ ಪರಂಪರೆ ಇರುವ ಭಾಷೆ. ಇದರಲ್ಲಿ ಕೇವಲ ವೈದಿಕರು ಮಾತ್ರವಲ್ಲ, ಅವೈದಿಕ ಪರಂಪರೆಗಳೂ ತಮ್ಮ ಕೃತಿಗಳನ್ನು ಬರೆದಿವೆ. ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಬರೆದ ಕಾಳಿದಾಸ, ಕಿರತಾರ್ಜುನೀಯ ಬರೆದ ಭಾರವಿ, ಉತ್ತರರಾಮಚರಿತ ಬರೆದ ಎಂಟನೇ ಶತಮಾನದ ಕವಿ &#8211; ನಾಟಕಕಾರ ಭವಭೂತಿ, ಕ್ರಿ.ಪೂ 7 ರಿಂದ 4 ನೇ ಶತಮಾನದ ವರೆಗೆ ಜೀವಿಸಿದ್ದ ಅಷ್ಟಾಧ್ಯಾಯಿ ಬರೆದ ಮಹಾವೈಯಾಕರಣಿ ಪಾಣಿನಿ…ಇವರೆಲ್ಲರೂ ಸಂಸ್ಕೃತದಲ್ಲಿ ಬರೆದರು. ಇವರೆಲ್ಲರ ಬಗ್ಗೆ ಅಪಾರ ಗೌರವವಿದೆ.&nbsp;</p>



<p>ಬೌದ್ಧರು ಜನಸಾಮಾನ್ಯನನ್ನು ತಲುಪಲು, ವರ್ಣಾಶ್ರಮವನ್ನು ಪ್ರತಿಪಾದಿಸಲು ಬಳಸಲ್ಪಟ್ಟ ಸಂಸ್ಕೃತವನ್ನು ಬಿಟ್ಟು ಪ್ರಾಕೃತವನ್ನು ಬಳಸಿದರು. ದೇವನಾಂಪಿಯ ಪಿಯದಸಿ ಅಸೋಕ ಸೇರಿದಂತೆ ಮೌರ್ಯರೂ, ಶಾತವಾಹನರು ಪ್ರಾಕೃತದಲ್ಲಿಯೇ ಶಾಸನಗಳನ್ನು ಬರೆದರು. ಆ ನಂತರ ಬಂದ ಕದಂಬರು ಬ್ರಾಹ್ಮಣರಿಗೆ ಹೇರಳವಾಗಿ ಊರುಗಳನ್ನು, ಭೂಮಿಯನ್ನು ದಾನ ಕೊಡುತ್ತಾ, ದಕ್ಷಿಣ ಭಾರತದಲ್ಲಿ ಅವರನ್ನು ನೆಲೆಯೂರಿಸುವಾಗ ತಮ್ಮ ಆರಂಭಿಕ ಶಾಸನಗಳನ್ನು ಸಂಸ್ಕೃತದಲ್ಲಿ ಹಾಕಿಸಿದರು.&nbsp;</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ? | SANSKRIT | CHARAN AIVARNAD" width="696" height="392" src="https://www.youtube.com/embed/1faJR9AUS40?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>
</div></figure>



<p>ಸಂಸ್ಕೃತದ ಬಗ್ಗೆ ವೈಯಕ್ತಿಕವಾಗಿ ಕನ್ನಡ, ತುಳು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಭಾಷೆಗಳನ್ನು ಮಾತನಾಡಲು ಬರುವ ನಂಗೆ ಆ ಭಾಷೆಗಳಿಗೆ ಕೊಡುವಷ್ಟೇ ಗೌರವವವನ್ನು, ಎಲ್ಲಾ ಭಾಷೆಗಳಿಗೆ ಕೊಡುವ ಗೌರವವನ್ನು ಸಂಸ್ಕೃತಕ್ಕೂ ಕೊಡುತ್ತೇನೆ. ನನಗೆ ಇಲ್ಲಿ ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ಯಾವದೇ ಭಾಷೆಯನ್ನು ಮಾತನಾಡಿದರೂ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಬದಲಾಗಿ, ಯಾವುದೇ ಭಾಷೆಯನ್ನು ಮಾತನಾಡಲು ಕಲಿತರೆ ಅದರಲ್ಲಿ ಇರುವ ಜ್ಞಾನ ಸಂಪತ್ತನ್ನು ದಕ್ಕಿಸಿಕೊಳ್ಳುವುದೇ ಒಂದು ಸ್ವರ್ಗ. ಕನ್ನಡದಲ್ಲಿ ಪಂಪನ ಆದಿಪುರಾಣ, ರನ್ನನ ಗದಾಯುದ್ಧ ಮೊದಲಾದ ಕಾವ್ಯಗಳೂ, ಮಂಟೇಸ್ವಾಮಿ ಕಾವ್ಯ ಮೊದಲಾದ ಹೇರಳವಾದ ಜಾನಪದ ಪರಂಪರೆಯಿದೆ. ತುಳುನಾಡಿನಲ್ಲಿ ತುಳು ಪಾಡ್ದನ ಹಾಡುವ ಕನಿಷ್ಟ ಒಬ್ಬ ಕವಿಯಾದರೂ ಸಿಗುತ್ತಾನೆ. ತಮಿಳಿನಲ್ಲಿ ತಮಿಳಕಂನ ಇತಿಹಾಸವನ್ನು ಬಿಚ್ಚಿಡುವ ಅಗನಾನೂರು, ಪುರನಾನೂರು, ಕುರುತ್ತೊಕೈ, ಮಣಿಮೇಖಲೈ ಮೊದಲಾದ ಸಂಗಂ ಸಾಹಿತ್ಯವಿದೆ, ತೋಳ್ಕಾಪ್ಪಿಯಂನಂತಹ ವ್ಯಾಕರಣವಿದೆ. ಎಲ್ಲದರ ಮೇಲೂ ಗೌರವ, ಆಸಕ್ತಿ ನನಗಿದೆ.</p>



<p>ಆದರೆ ಸಂಸ್ಕೃತ ಮಾತನಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಾನು ಸ್ವರ್ಗದ ಮೇಲೆ ನಂಬಿಕೆಯಿಲ್ಲದ ಸಮುದಾಯದಿಂದ ಬಂದವನು. ನಮ್ಮ ಮನೆಯಲ್ಲಿ ಯಾರಾದರು ಸತ್ತರೆ ಅವರು ಹಿಂದೆ ಸಂದಿಹೋಗಿರುವ ಹದಿನಾರು ಮಂದಿ ಹಿರಿಯರ ಜೊತೆಗೆ ಸೇರುತ್ತಾನೆ ಎಂದು ನಂಬಿದ್ದೇವೆಯೇ ಹೊರತು, ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ. ಬಹುತೇಕ ಭಾರತೀಯ ಸಮುದಾಯಗಳಲ್ಲಿ ಸ್ವರ್ಗದ ಪರಿಕಲ್ಪನೆಯೇ ಇಲ್ಲ.</p>



<p>ಇರುವುದು ಒಂದೇ ಸ್ವರ್ಗ, ಅದು ಕಾಸರಗೋಡಿನಿಂದ ಸುಮಾರು ಮೂಮತ್ತಮೂರು ಕಿಲೋಮೀಟರ್‌ ದೂರದಲ್ಲಿ ಇರುವ ಸ್ವರ್ಗವೆಂಬ ಊರು. ಅದೂ ಎಂಡೋಸಲ್ಫಾನ್‌ ಬಾಧೆಗೆ ತುತ್ತಾಗಿ ನರಕವಾಗಿದೆ! ಅಲ್ಲಿಗೆ ಹೋಗುವವರಿಗೆ ಸಂಸ್ಕೃತ ಬರಬೇಕಾಗಿಲ್ಲ, ಕನ್ನಡ, ತುಳು, ಮಲಯಾಳಂ ಮಾತನಾಡಲು ಬಂದರೆ ಸಾಕು.&nbsp;</p>



<p class="has-regular-font-size"><strong>ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ?</strong></p>



<p>ಸಂಸ್ಕೃತ ಇಂಡೀ-ಯುರೋಪಿಯನ್‌ ಭಾಷಾವರ್ಗಕ್ಕೆ ಸೇರಿದ ಭಾಷೆ. ಭಾರತದಲ್ಲಿ ಸಂಸ್ಕೃತ ಹೇಗೋ, ಯುರೋಪಿನಲ್ಲಿ ಗ್ರೀಕ್‌, ಲ್ಯಾಟಿನ್‌ ಭಾಷೆಗಳೂ ಅದೇ ಸ್ಥಾನವನ್ನು ಹೊಂದಿವೆ. ಋಗ್ವೇದದಲ್ಲಿ ಇರುವ ಸಂಸ್ಕೃತವೇ ಬೇರೆ, ಈಗ ಬಳಕೆಯಲ್ಲಿ ಇರುವ ಸಂಸ್ಕೃತವೇ ಬೇರೆ ಎಂಬಂತೆ ಬದಲಾವಣೆಗಳಾಗಿವೆ. ಋಗ್ವೇದದ ಭಾಷೆಯನ್ನು “ಋಗ್ವೇದಿಕ್‌ ಸಂಸ್ಕೃತ” ಅಥವಾ “ಹಳೆಯ ಇಂಡಿಕ್‌ ಭಾಷೆ” ಎಂದು ಕರೆಯುತ್ತೇವೆ. ಈ&nbsp; ಋಗ್ವೇದಿಕ್‌ ಸಂಸ್ಕೃತದ ಮೊದಲ ಶಾಸನ ಪತ್ತೆಯಾಗಿದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ.&nbsp;</p>



<p>ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗಳಿಗೆ ಬಳಸಲಾಗುತ್ತಿದ್ದ ಸಂಸ್ಕೃತಕ್ಕೂ ಆಗ ಮಾತನಾಡಲು ಬಳಸುತ್ತಿದ್ದ ಬೇರೆ ಬೇರೆ ಸಂಸ್ಕೃತಗಳಿಗೂ ವ್ಯತ್ಯಾಸವಿತ್ತು. ನಮಗೆ ಸದ್ಯ ಲಭ್ಯವಿರುವ ಸಂಸ್ಕೃತದ ಅತ್ಯಂತ ಹಳೆಯ ವ್ಯಾಕರಣವೆಂದರೆ ಕ್ರಿ.ಪೂ ಐದನೇ ಶತಮಾನದಲ್ಲಿ ಪಾಣಿನಿ ಬರೆದ ಅಷ್ಟಾಧ್ಯಾಯಿ. ವೇದಗಳ ಕಾಲದ ನಂತರ ಸಂಸ್ಕೃತವನ್ನು ಧಾರ್ಮಿಕ ಗ್ರಂಥಗಳನ್ನು ಬರೆಯಲು ಮಾತ್ರವಲ್ಲದೆ, ಸ್ವತಂತ್ರ ಸಾಹಿತ್ಯ ರಚನೆಗೂ ಬಳಸಲಾಯಿತು, ನಾಟಕ, ಕಾವ್ಯಗಳು ಬಂದವು.&nbsp;</p>



<p>ಶಾತವಾಹನರ ಕಾಲದಲ್ಲಿ ಸಂಸ್ಕೃತ ಮೆಲ್ಲನೆ ದಕ್ಷಿಣ ಭಾರತವನ್ನು ಹರಡಲು ಆರಂಭಿಸಿತು. ಕರ್ನಾಟಕದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವೆಂದರೆ ಕದಂಬ ದೊರೆ ಕಾಕುಸ್ಥವರ್ಮನ ಐದನೇ ಶತಮಾನದ ತಾಳೆಗುಂದ ಸ್ಥಂಭ ಶಾಸನ. ಕದಂಬರು ಬ್ರಾಹ್ಮಣರಿಗೆ ಊರು, ಹಳ್ಳಿಗಳನ್ನು ದತ್ತಿಕೊಡುತ್ತಿದ್ದರು. ಕೇರಳ, ತುಳುನಾಡಿಗೆ ಇವರು ಬ್ರಾಹ್ಮಣರನ್ನು ಕರೆತಂದರು. ಐದನೇ ಶತಮಾನದಲ್ಲಿ ಕದಂಬ ದೊರೆ ರವಿವರ್ಮ ಬ್ರಾಹ್ಮಣರಿಗೆ ಊರನ್ನು ದತ್ತಿಕೊಟ್ಟ ಉಲ್ಲೇಖ ಕೇರಳದ ನಿಲಂಬೂರು ತಾಮ್ರಶಾಸನದಲ್ಲಿ ಬರುತ್ತದೆ. ತುಳುನಾಡಿನ ಮತ್ತು ಕೇರಳದ ಬ್ರಾಹ್ಮಣರು ತಮ್ಮನ್ನು ಅಹಿಚ್ಛತ್ರಕ್ಷೇತ್ರದಿಂದ ಕದಂಬ ದೊರೆ ಮಯೂರವರ್ಮ ಕರೆತಂದ ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಇದೇ ಕಥೆಯನ್ನು ಕೇರಳೋತ್ಪತ್ತಿ, ಗ್ರಾಮಪದ್ಧತಿ, ಸ್ಕಂದಪುರಾಣದ ಸಹ್ಯಾದ್ರಿಖಂಡ ಕೂಡ ಹೇಳುತ್ತದೆ. ಹೀಗೆ ಸಂಸ್ಕೃತ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿತು.&nbsp;</p>



<p>ಮೌರ್ಯರ ಕಾಲದಿಂದ ಶಾತವಾಹನರ ಕಾಲದ ವರೆಗೆ ಪ್ರಚಾರದಲ್ಲಿದ್ದ ಬೌದ್ಧರು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಕದ್ರಿ ಮೊದಲಾದ ಬೌದ್ಧ ವಿಹಾರಗಳು (ಹತ್ತನೇ ಶತಮಾನದ ಆಲೂಪ ದೊರೆ ಕುಂದವರ್ಮ ಸ್ಥಾಪಿಸಿದ ಕದರಿಯ ಅವಲೋಕಿತೇಶ್ವರ ಪ್ರತಿಮೆಯಲ್ಲಿರುವ ಗ್ರಂಥ ಲಿಪಿಯ ಶಾಸನದಲ್ಲಿ ಇದು ಕದರಿಕಾ ವಿಹಾರ) ದೇವಾಲಯಗಳಾಗಿ ಬದಲಾದವು. ಜನರನ್ನು ಬೆಸೆಯಲು ಪ್ರಯತ್ನಿಸಿದ ಪ್ರಾಕೃತ ಕೂಡ ವಿಫಲವಾಗಿ ದಕ್ಷಿಣ ಭಾರತದಿಂದ ಇಲ್ಲವಾಯಿತು.</p>



<p>ಸಾಮಾನ್ಯವಾಗಿ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿದವು ಎಂಬ ವಾದವನ್ನು ಮಾಡುವವರು ಕನ್ನಡ, ತುಳು ಮೊದಲಾದ ಭಾಷೆಗಳಲ್ಲಿ ಇರುವ ಪದಗಳ ಎಟಿಮೊಲಾಜಿಕಲ್‌ ಮೂಲವನ್ನು ಸಂಸ್ಕೃತಕ್ಕೆ ಜೋಡಿಸಿ ಹೇಳುತ್ತಾರೆ.</p>



<p>ಉದಾಹರಣೆಗೆ: ಕನ್ನಡ-ತುಳುವಿನ ಸಕ್ಕರೆ ಸಂಸ್ಕೃತದ ಶರ್ಕರದಿಂದ ಬಂದಿದೆ ಎಂದು. ಇದು ಸಂಸ್ಕೃತದಿಂದಲೇ ಬಂದಿದ್ದು ಎಂದು ಹೇಗೆ ಹೇಳುವುದು? ಇದು ಪ್ರಾಕೃತ ಭಾಷೆಯ ಸಕ್ಕರ ಅಥವಾ ಸುಕ್ಕರ ಎಂಬ ಪದದಿಂದಲೂ ಬಂದಿರಬಹುದು. ತುಳುವರು ಸತ್ತವರನ್ನು ಹೂಳುವ ಅಥವಾ ಸುಟ್ಟ ನಂತರ ಆ ಜಾಗದಲ್ಲಿ ಕಟ್ಟುವ ಸಮಾಧಿಗೆ “ದೂಪೆ” ಎಂದು ಕರೆಯುತ್ತಾರೆ, ಇದು ಬೌದ್ಧರು ಬುದ್ಧನ ಅವಶೇಷಗಳನ್ನು ಇಟ್ಟಿರುವ “ಸ್ತೂಪ” ಎಂಬ ಪದದಿಂದ ಬಂದಿದೆ. ತುಳುವರು ಹೆಣ ಸುಡುವ ಕಟ್ಟಿಗೆಯ ರಾಶಿಗೆ “ಕಾಟ” ಎಂದು ಕರೆಯುತ್ತಾರೆ. ಪ್ರಾಕೃತದಲ್ಲಿಯೂ ಕಾಟ ಎಂದೇ ಕರೆಯುತ್ತಾರೆ.</p>



<p>ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮೊದಲಾದ ದಕ್ಷಿಣ ಭಾರತದ ಭಾಷೆಗಳೂ, ಪಾಕಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ, ಉತ್ತರ ಭಾರತದದಲ್ಲಿ ಮಾತನಾಡುವ ಮಾಲ್ಟೋ, ಕುರುಕ್‌, ಮಧ್ಯಭಾರತದಲ್ಲಿ ಮಾತನಾಡುವ ಕೊಲಮಿ, ನೈಕಿ, ಪರ್ಜಿ, ಒಲ್ಲಾರಿ, ಗಡಬ, ಗೊಂಡ, ಮಂಡ, ಕುಯ್‌, ಪೆಂಗೋ ಮೊದಲಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಗಳು.&nbsp;</p>



<p>ಹಿಂದಿ, ಸಂಸ್ಕೃತ, ಅವಧಿ, ಭೋಜ್‌ಪುರಿ, ಪ್ರಾಕೃತ, ಲ್ಯಾಟಿನ್‌, ಗ್ರೀಕ್‌, ಇಂಗ್ಲೀಷ್ ಮೊದಲಾದವು‌ ಯುರೋಪಿಯನ್‌ ಭಾಷೆಗಳು ಇಂಡೋ ಆರ್ಯನ್‌ ಭಾಷಾವರ್ಗಕ್ಕೆ ಸೇರಿದವರು.&nbsp;</p>



<p>ಆಗಲೇ ಹೇಳಿದಂತೆ, ಇಂದು ಬಳಕೆಯಲ್ಲಿ ಇಲ್ಲದ ಋಗ್ವೇದದ ಸಂಸ್ಕೃತದ ಮೊದಲ ಶಾಸನ ಸಿಕ್ಕಿದ್ದು ಉತ್ತರ ಸಿರಿಯಾದಲ್ಲಿ . ಇದು 1500 ಮತ್ತು 1350 BC ನಡುವೆ, ಅಪ್ಪರ್‌ ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳಿದ ಮಿಟಾನಿ ಎಂಬ ರಾಜವಂಶದ ಶಾಸನ. ಇವರ ಸಾಮ್ರಾಜ್ಯ ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ದೇಶಗಳಿಗೆ ಹರಡಿಕೊಂಡಿತ್ತು. ಮಿಟಾನಿಗಳು ಸಂಸ್ಕೃತಕ್ಕೆ ಸಂವಾದಿಯಾದ ಹುರಿಯನ್ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಮಿಟಾನಿ ರಾಜರು ತಮಗೆ <a href="https://global.oup.com/academic/product/the-quest-for-the-origins-of-vedic-culture-9780195169478">ಸಂಸ್ಕೃತದ ಹೆಸರನ್ನು </a>ಇಟ್ಟುಕೊಂಡಿದ್ದರು. ಉದಾಹರಣೆಗೆ ಪುರುಷ, ತುಸ್ರತ್ತಾ, ಸುವರ್ದತ, ಸುಬಂಧು, ಇಂದ್ರೊತ ಇತ್ಯಾದಿ. ಸಂಖ್ಯೆಗಳು ಕೂಡ&nbsp; ಐಕ ಅಂದ್ರೆ ಏಕ, ತೇರಾ ಅಂದ್ರೆ ಮೂರು, ಸತ್ತಾ ಎಂದರೆ ಸಪ್ತ.&nbsp; ಸಂಸ್ಕೃತಗಳನ್ನು ಮಾತನಾಡುವ ಆರ್ಯನ್‌ ಬುಡಕಟ್ಟಿನಂತೆ ಇವರಲ್ಲೂ ಕುದುರೆಗಳಿಗೆ ಅಸುವಾ ಎಂದು ಕರೆಯುತ್ತಾರೆ.&nbsp;</p>



<p>ಕ್ರಿ.ಪೂ 1380 ರಲ್ಲಿ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಮಿಟಾನಿ ರಾಜನೊಬ್ಬ <a href="https://www.azargoshnasp.net/history/Aryan/mitanniaryanpantheons.pdf">ಇಂದ್ರ, ವರುಣ, ಮಿತ್ರ </a>ಮತ್ತು ನಾಸತ್ಯರನ್ನು (ಅಶ್ವಿನಿ ದೇವತೆಗಳು) ದೈವಸಾಕ್ಷಿಗಳಾಗಿ <a href="https://www.heritageinstitute.com/zoroastrianism/ranghaya/suppiluliuma_shattiwaza_treaty.htm">ಶಾಸನದಲ್ಲಿ </a>ಹೆಸರಿಸುತ್ತಾನೆ .ಇವರೆಲ್ಲಾ ಋಗ್ವೇದದ ಪ್ರಮುಖ ದೇವರುಗಳು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="728" height="414" src="https://peepalmedia.com/wp-content/uploads/2024/09/Captureಜ.jpg" alt="" class="wp-image-44799" style="width:468px;height:auto" srcset="https://peepalmedia.com/wp-content/uploads/2024/09/Captureಜ.jpg 728w, https://peepalmedia.com/wp-content/uploads/2024/09/Captureಜ-300x171.jpg 300w, https://peepalmedia.com/wp-content/uploads/2024/09/Captureಜ-150x85.jpg 150w, https://peepalmedia.com/wp-content/uploads/2024/09/Captureಜ-696x396.jpg 696w" sizes="(max-width: 728px) 100vw, 728px" /></figure></div>


<p>ಈ ಲ್ಯಾಟಿನ್‌, ಸಂಸ್ಕತ, ಗ್ರೀಕ್‌ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ಇಂಡೋ ಯುರೋಪಿಯನ್ ಭಾಷೆ ಎಂದು ಕರೆಯಲಾಗುತ್ತದೆ. ತಮಿಳು, ಕನ್ನಡ, ತುಳು, ತೆಲುಗು, ಕೊರಗ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂದು ಕರೆಯಲಾಗುತ್ತದೆ. ಇವೆರಡೂ ಬೇರೆ ಬೇರೆ ಭಾಷಾ ಕುಟುಂಬಗಳು.&nbsp;</p>



<p>ಈ “ಪ್ರೋಟೋ ಇಂಡೋ ಯುರೋಪಿಯನ್ ಭಾಷೆಯ” ಮಗಳನ್ನು ಅಂದರೆ, ಒಂದು ಕವಲನ್ನು ಭಾಷಾಶಾಸ್ತ್ರದಲ್ಲಿ “ಪ್ರೋಟೋ-ಇಂಡೋ-ಇರಾನಿಯನ್‌” ಎಂದು ಕರೆಯಲಾಗುತ್ತದೆ. ಇದರಿಂದಲೇ ಸಂಸ್ಕೃತ, ಹಿಂದಿ ಮೊದಲಾದ ಉತ್ತರ ಭಾರತದ ಭಾಷೆಗಳೂ, ಇರಾನಿನ ಭಾಷೆಗಳೂ ಹುಟ್ಟಿದ್ದು.&nbsp;</p>



<p>ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್‌ ಸಂಪಾದನೆ ಮಾಡಿರುವ “<a href="https://www.jstor.org/stable/417487?seq=1#page_scan_tab_contents" data-type="link" data-id="https://www.jstor.org/stable/417487?seq=1#page_scan_tab_contents">ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡೋ-ಯುರೋಪಿಯನ್‌ ಕಲ್ಚರ್‌</a>ನಲ್ಲಿ” ಈ ಪ್ರೋಟೋ-ಇಂಡೋ-ಇರಾನಿಯನ್‌ ಭಾಷಿಕರು ಮೊದಲು ಉರಾಲ್ ಶ್ರೇಣಿಗಳ ದಕ್ಷಿಣದಲ್ಲಿ ಮತ್ತು ಕಝಕಿಸ್ತಾನ್‌ನಲ್ಲಿ ಕಾಣಿಸಿಕೊಂಡರು ಎಂದು ಹೇಳಲಾಗಿದೆ. ಕ್ರಿ.ಪೂ 2000 ರ ಮೊದಲು ಜೀವಿಸಿದ್ದ ಈ ಸ್ಟೆಪ್ಪಿ ಜನರು <a href="https://en.wikipedia.org/wiki/Andronovo_culture">ಆಂಡ್ರೋನೊವೊ</a> ಸಂಸ್ಕೃತಿಯವರು.</p>



<p>ಇವರಿಂದ ಬೇರೆಯಾದ ಒಂದು ಗುಂಪು&nbsp; ಪ್ರೋಟೋ-ಇಂಡೋ-ಇರಾನಿಯನ್‌ ಭಾಷೆಯನ್ನು ಬಿಟ್ಟು, ತಮ್ಮ ತಾಯ್ನೆಲವಾದ ಮಧ್ಯ ಏಷ್ಯಾವನ್ನು ತೊರೆದು ಸಂಸ್ಕೃತದ ಮೂಲ ಭಾಷೆಯನ್ನು ಮಾತನಾಡಲು ಶುರು ಮಾಡಿದರು. ಇವರ ಒಂದು ಗುಂಪು ಪಶ್ಚಿಮಕ್ಕೆ ನಡೆದು ಸಿರಿಯಾ ಸೇರಿದರೆ, ಇನ್ನೊಂದು ಗುಂಪು ಪೂರ್ವಕ್ಕೆ ನಡೆದು ಭಾರತದ ಪಂಜಾಬ್‌ ಪ್ರದೇಶಕ್ಕೆ ಬಂತು.</p>



<p>The Horse, the Wheel, and Language: How Bronze-Age Riders from the Eurasian Steppes Shaped the Modern World ಯಲ್ಲಿ <a href="https://press.princeton.edu/books/paperback/9780691148182/the-horse-the-wheel-and-language">ಡೇವಿಡ್ ಆಂಥೋನಿ </a>ಹೇಳುವಂತೆ ಪಶ್ಚಿಮದ ಕಡೆಗೆ ಹೋದ ಜನರ ಗುಂಪು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಸಾರಥಿಗಳಾಗಿ ನೇಮಕಗೊಂಡರು. ಈ ಸಾರಥಿಗಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪೂರ್ವಕ್ಕೆ ಬಂದ ಅವರದೇ ಜನರಿಂದ ಋಗ್ವೇದ ರಚನೆಯಾಯಿತು. ಈ ಎರಡೂ ಪಂಗಡಗಳೂ ಋಗ್ವೇದಿಕ್‌ ಸಂಸ್ಕೃತ ಮಾತನಾಡುತ್ತಿದ್ದರು.</p>



<p>ಈ ಋಗ್ವೇದ ಸಂಸ್ಕೃತ ಭಾಷೆಯನ್ನು ಮಾತನಾಡುವ ಜನರು ಸಿರಿಯಾಗೆ ಹೋಗಿ ಅಲ್ಲಿನ ಮೂಲ ರಾಜರನ್ನು ಪತನ ಮಾಡಿ ಅವರ ಸಿಂಹಾಸನದಲ್ಲಿ ಮಿಟಾನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮೇಣ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರು. ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಅಳವಡಿಸಿಕೊಂಡರು. ಆದರೂ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿಯೇ ಅವರ ಮೂಲದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು.&nbsp;</p>



<p>ಪೂರ್ವದ ಕಡೆಗೆ ನಡೆದ ಗುಂಪು ಋಗ್ವೇದವನ್ನು ರಚಿಸಿತು. ಅವರು ತಮ್ಮ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ತಮ್ಮ ಭಾಷೆಯನ್ನು ಹರಡಲು ಸಶಕ್ತರಾದರು. ಅವರ ಭಾಷೆ ಮತ್ತು ಸಂಸ್ಕೃತಿ ಭಾರತದಲ್ಲಿ ಬೇರೂರಿತು.&nbsp;</p>



<p>ಸುಮಾರು 1500 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಸಂಸ್ಕೃತ ಪ್ರವೇಶಿಸಿತು. ಇಲ್ಲಿನ ಬ್ರಾಹ್ಮಣರು ತಮ್ಮ ಸಾಹಿತ್ಯಗಳಲ್ಲಿಯೇ ತಮ್ಮನ್ನು ವಲಸೆ ಬಂದವರು ಎಂದು ಕರೆಸಿಕೊಂಡಿದ್ದಾರೆ. ತುಳುವ ಬ್ರಾಹ್ಮಣರೂ ತಮ್ಮನ್ನು ಅಹಿಚ್ಛತ್ರ ಕ್ಷೇತ್ರದಿಂದ ಕದಂಬರ ಅರಸ&nbsp; ಮಯೂರವರ್ಮನೇ ಕರೆತಂದು ಘಟ್ಟದ ಕೆಳಗಿನ ದೇಶವನ್ನು ಅರವತ್ನಾಲ್ಕು ಭಾಗಗಳಾಗಿ ಹಂಚಿಕೊಟ್ಟಿದ್ದಾಗಿ ನಂಬುತ್ತಾರೆ.</p>



<p>ಕೇರಳ ನಂಬೂದಿರಿ ಬ್ರಾಹ್ಮಣರೂ ಕೇರಳೋತ್ಪತಿ ಮತ್ತು ಕೇರಳಮಾಹಾತ್ಮ್ಯ ವೃತ್ತಾಂತಗಳನ್ನು ಆಧರಿಸಿ ತಮ್ಮದೇ ಆದ ಕಥನವನ್ನು ಹೊಂದಿದ್ದಾರೆ. ಕೇರಳೋತ್ಪತಿಯ ಪ್ರಕಾರ ಪೌರಾಣಿಕ ವೀರನಾದ ಪರಶುರಾಮನು ಪಶ್ಚಿಮ ಕರಾವಳಿಯಲ್ಲಿ ಬ್ರಾಹ್ಮಣರಿಗಾಗಿ ಗ್ರಾಮಗಳನ್ನು ಸ್ಥಾಪಿಸಿದನು, ಅದರಲ್ಲಿ 32 ತುಳು ದೇಶದಲ್ಲಿಯೂ ಮತ್ತು ಉಳಿದವು ಕೇರಳದಲ್ಲಿಯೂ ಇದ್ದವು. ಅಯ್ಯಪುರಂ ಅಥವಾ ಅಹಿಚ್ಛತ್ರವು ಅವರ ಪೂರ್ವಜರ ಮನೆಯಾಗಿತ್ತು ಎಂದು ಅವರು ನಂಬುತ್ತಾರೆ.&nbsp;</p>



<p>ನಂಬೂದಿರಿ ಬ್ರಾಹ್ಮಣರು ಪರಶುರಾಮನ ನಂತರ ಮಯೂರವರ್ಮನ್&nbsp; ತಮಗೆ ಆಶ್ರಯ ನೀಡಿದವನು ಎಂದು ಹೇಳುತ್ತಾರೆ. ಕೇರಳದಲ್ಲಿ ಕದಂಬರು ಬ್ರಾಹ್ಮಣರನ್ನು ನೆಲೆಗೊಳಿಸಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಐದನೇ ಶತಮಾನದ ಕದಂಬ ದೊರೆ ರವಿಮರ್ಮನ ನಿಲಂಬೂರಿನ ತಾಮ್ರಶಾಸನ ನೀಡುತ್ತದೆ.</p>


<div class="wp-block-image">
<figure class="aligncenter size-full is-resized"><img decoding="async" width="715" height="494" src="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg" alt="" class="wp-image-44802" style="width:599px;height:auto" srcset="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg 715w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-300x207.jpeg 300w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-150x104.jpeg 150w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-218x150.jpeg 218w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-696x481.jpeg 696w" sizes="(max-width: 715px) 100vw, 715px" /></figure></div>


<p>ಹೀಗಿರುವಾಗ ಪುತ್ತಿಗೆ ಸ್ವಾಮಿಗಳು ಮಾತ್ರವಲ್ಲ, ಹಿಂದುತ್ವ ಕಟ್ಟುವ ಸುಳ್ಳು ಚರಿತ್ರೆಗಳು ಯಾವ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಹೇಳುತ್ತಿವೆ? ತುಳುವಿನ ಮದಿಮೆ, ಹೆಣ್ಣು, ಗಂಡು, ಅಣ್ಣ, ಅಕ್ಕ ಮೊದಲಾದ ಪದಗಳ ಸಂಸ್ಕೃತ ಮೂಲ ಏನು? ಎಲ್ಲಾ ಭಾಷೆಗಳೂ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದು ಬೆಳೆಯುತ್ತವೆ. ಇಡೀ ಜಗತ್ತೇ ಬಳಸುವ ರಿಕ್ಷಾ ಎಂಬ ಪದ ಜಪಾನಿ ಭಾಷೆಯ ಜಿನ್‌ರಿಕಿಶಾ (Jinrikisha) ಎಂಬ ಪದದಿಂದ ಬಂದಿದೆ. ಜಿನ್‌ ಅಂದ್ರೆ ಮನುಷ್ಯ, ರಿಕಿ ಅಂದ್ರೆ ಶಕ್ತಿ, ಶಾ ಅಂದ್ರೆ ಗಾಡಿ.</p>



<p>ಮಲಯಾಳಂ, ತುಳು, ಕನ್ನಡ ಭಾಷೆಗಳ ಅಡಕೆ, ಅರಕ್ಕವನ್ನು ಇಂಗ್ಲೀಷ್‌ ಅರೇಕಾ ಮಾಡಿಕೊಂಡಿದೆ. ತಮಿಳು, ಮಲಯಾಳಂನ ವೆತ್ತಲೈ, ವೆತ್ತಲೆ ಎಂಬ ವೀಳ್ಯದೆಲೆಯನ್ನು ಇಂಗ್ಲೀಷರು ಮತ್ತು ಪೋರ್ಜುಗೀಸರು ಬೀಟೆಲ್‌ ಎಂದು ಬಳಸಿದರು. ತಮಿಳಿನಿ ಅರ್ಸಿ, ತುಳುವಿನ ಅರಿ ಇಂಗ್ಲೀಷಿನ ರೈಸ್‌ ಆಗಿದೆ. ನಾವು ಬಳಸುವ ತಾಂಬೂಲ ಎಂಬ ಪದವೇ ಫರ್ಷಿಯನ್‌ ಪದ. ಈ ರೀತಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ. ಎಲ್ಲಾ ಭಾಷೆಗಳೂ ಅದರಿಂದಲೇ ಹುಟ್ಟಿದ್ದು ಎನ್ನುವುದು ಅಪ್ಪಟ ಸುಳ್ಳು. ಅದು ಸಂಸ್ಕೃತಕ್ಕೆ ಮಾಡಿದ ಅವಮಾನ.</p>



<p></p>



<p><strong>ಚರಣ್‌ ಐವರ್ನಾಡು,</strong> ಬೆಂಗಳೂರು</p>
]]></content:encoded>
					
		
		
			</item>
		<item>
		<title>ಕನ್ನಡದ ಬೆನ್ನೇರಿದ ಸಂಸ್ಕೃತದ ಬೇತಾಳ -ನಿಖಿಲ್ ಕೋಲ್ಪೆ</title>
		<link>https://peepalmedia.com/kannada-is-backed-by-sanskrit-betala/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 22 Mar 2024 12:19:10 +0000</pubDate>
				<category><![CDATA[ಅಂಕಣ]]></category>
		<category><![CDATA[ನಾಡು-ನುಡಿ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sanskrit]]></category>
		<guid isPermaLink="false">https://peepalmedia.com/?p=37368</guid>

					<description><![CDATA[ನಮ್ಮಲ್ಲಿ ಹುಟ್ಟಿಸಲಾಗಿರುವ ಕೀಳರಿಮೆಯಿಂದಾಗಿ ಸಂಸ್ಕತವು ಕನ್ನಡದ ಬೆನ್ನೇರಿ ಕುಳಿತ ಬೇತಾಳವಾಗಿದೆಯೆಂದೂ, ಅದು ಗಂಟಲು ಕಚ್ಚಿಹಿಡಿದ ಪುರಾಣದ ಬ್ರಹ್ಮ ಕಪಾಲದಂತೆಯೂ ಆಗಿದೆ ಎಂದೂ ಇತ್ತೀಚೆಗೆ ಹೆಚ್ಚುಹೆಚ್ಚಾಗಿ ಅರಿವಿಗೆ ಬರುತ್ತಿದೆ. ಇದು ನಡೆಯುತ್ತಿರುವುದು ಹೇಗೆ? ಈ ಸಂಸ್ಕೃತದ ಬೇತಾಳವನ್ನು ಕೆಳಗಿಳಿಸಬೇಕಾದರೆ ಮೊದಲು ಅನಗತ್ಯ ಸಂಸ್ಕೃತ ಪದಗಳನ್ನು ಗುಡಿಸಿಹಾಕುವ ಕಸಬರಿಕೆಯ ಅಗತ್ಯವಿದೆ. ಕೆಲದಶಕಗಳ ಹಿಂದೆ ಇಂಗ್ಲೀಶ್ ಭಾಷೆಯ ಪ್ರಭಾವದಿಂದ ಕನ್ನಡವು ಬಡವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಈ ಕುರಿತು ಹೆಚ್ಚಿನ ಆತಂಕವಿದ್ದದ್ದು ಸಂಸ್ಕೃತಮಯ ಕನ್ನಡದ ಅಭಿಮಾನಿಗಳಿಗೇ ಹೆಚ್ಚು. ಕನ್ನಡದ ನಡುವೆ ಇಂಗ್ಲೀಶ್ [&#8230;]]]></description>
										<content:encoded><![CDATA[
<hr class="wp-block-separator has-alpha-channel-opacity"/>



<blockquote class="wp-block-quote is-layout-flow wp-block-quote-is-layout-flow">
<p>ನಮ್ಮಲ್ಲಿ ಹುಟ್ಟಿಸಲಾಗಿರುವ ಕೀಳರಿಮೆಯಿಂದಾಗಿ ಸಂಸ್ಕತವು ಕನ್ನಡದ ಬೆನ್ನೇರಿ ಕುಳಿತ ಬೇತಾಳವಾಗಿದೆಯೆಂದೂ, ಅದು ಗಂಟಲು ಕಚ್ಚಿಹಿಡಿದ ಪುರಾಣದ ಬ್ರಹ್ಮ ಕಪಾಲದಂತೆಯೂ ಆಗಿದೆ ಎಂದೂ ಇತ್ತೀಚೆಗೆ ಹೆಚ್ಚುಹೆಚ್ಚಾಗಿ ಅರಿವಿಗೆ ಬರುತ್ತಿದೆ. ಇದು ನಡೆಯುತ್ತಿರುವುದು ಹೇಗೆ? ಈ ಸಂಸ್ಕೃತದ ಬೇತಾಳವನ್ನು ಕೆಳಗಿಳಿಸಬೇಕಾದರೆ ಮೊದಲು ಅನಗತ್ಯ ಸಂಸ್ಕೃತ ಪದಗಳನ್ನು ಗುಡಿಸಿಹಾಕುವ ಕಸಬರಿಕೆಯ ಅಗತ್ಯವಿದೆ.</p>
</blockquote>



<hr class="wp-block-separator has-alpha-channel-opacity"/>



<p>ಕೆಲದಶಕಗಳ ಹಿಂದೆ ಇಂಗ್ಲೀಶ್ ಭಾಷೆಯ ಪ್ರಭಾವದಿಂದ ಕನ್ನಡವು ಬಡವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಈ ಕುರಿತು ಹೆಚ್ಚಿನ ಆತಂಕವಿದ್ದದ್ದು ಸಂಸ್ಕೃತಮಯ ಕನ್ನಡದ ಅಭಿಮಾನಿಗಳಿಗೇ ಹೆಚ್ಚು. ಕನ್ನಡದ ನಡುವೆ ಇಂಗ್ಲೀಶ್ ಪದಗಳ ಬಳಕೆಯ ಈ ಚಾಳಿ ಉಳಿದವರಲ್ಲೂ ಆತಂಕ ಉಂಟುಮಾಡಿತ್ತು. ಈಗಿನ ಕನ್ನಡ ಟಿವಿ ಚಾನೆಲುಗಳನ್ನು ನೋಡಿದರೆ, ಈ ಚಾಳಿ ಇಂಗ್ಲೀಶ್ ಪದಗಳ ನಡುವೆ ಕನ್ನಡ ಪದಗಳನ್ನು ಬಳಸುವಷ್ಟು ಮುಂದುವರಿದಿದೆ! ಏನೇ ಇದ್ದರೂ ನಾವು ಸಾವಿರಾರು ಇಂಗ್ಲೀಶ್ ಪದಗಳನ್ನು ಸರಳವಾಗಿ ಕನ್ನಡೀಕರಿಸಿ ನಮ್ಮದೇ ಮಾಡಿಕೊಂಡಿದ್ದೇವೆ.</p>



<p>ಬಸ್ಸು, ಕೋರ್ಟು, ಸ್ಕೂಟರು, ಪೆನ್ನು, ಗ್ಲಾಸು, ಹೊಟೇಲು, ಪೊಲೀಸು ಇತ್ಯಾದಿ ಉದಾರಣೆಗಳು ಸಾವಿರಾರು ಇವೆ. ಇದೇ ರೀತಿ ಪರ್ಶಿಯನ್, ಹಿಂದಿ, ಉರ್ದು, ಪಾರ್ಸಿ, ಮರಾಠಿಯಿಂದಲೂ ಚಾದರ, ಜಮಖಾನ, ದವಾಖಾನೆ, ಮೆಹನತ್ತು, ವಾಯಿದೆ, ಕರಾರು, ಕಾಯಿದೆ, ಫರ್ಮಾನು, ಜೈಲು ಇತ್ಯಾದಿ ಉದಾರಣೆಗಳೂ ಸಾವಿರಾರು ಇವೆ. ಇದಕ್ಕೂ &#8220;ಖಡಾಖಂಡಿತ, ಕಠಿಣ&#8221; ವಿರೋಧ ತೋರಿಸಿದವರುಂಟು. ಇಂತವರು ಇಂತಹ ಪದಗಳಿಗೆ ಬದಲಾಗಿ ತಂದದ್ದು ಏನನ್ನು? ಆರಕ್ಷಕ, ಅಭಿಯಂತರರು ಇತ್ಯಾದಿಯಾಗಿ ಸಂಸ್ಕೃತ ಪದಗಳನ್ನು!</p>



<p>ಉದಾಹರಣೆಗೆ ಪೊಲೀಸು ಎಂಬ ಪದವನ್ನೇ ನೋಡೋಣ. ಅದು ಪೊಲೀಸ್, ಪೊಲೀಸಿ, ಪೊಲೀಸಿಯಾ, ಪೋಲ್ಝಿ… ಇತ್ಯಾದಿಯಾಗಿ ಬದಲಾವಣೆಗೊಂಡು ಬೇರೆಬೇರೆ ದೇಶಗಳಲ್ಲಿ ಬಳಕೆಯಲ್ಲಿದೆ. ನಮ್ಮಲ್ಲಿ ಪೋಲೀಸ್ ‌‌‌ಪಾಟೀಲ ಎಂಬ ಜೊತೆಹೆಸರೇ ಇದೆ. ಹಳ್ಳಿಗರೇ ಸಹಜವಾಗಿಯೇ ಪೊಲೀಸಪ್ಪ, ಪೋಲೀಸ್ ಟೇಸನ್ನು, ಇನಸ್ಪೆಕ್ಟರು ಇತ್ಯಾದಿ ಪದ ಬಳಕೆ ಮಾಡುತ್ತಿರುವಾಗ ಈ ಕರ್ಮಠರು ಆರಕ್ಷಕ, ನಿರೀಕ್ಷಕ ಇತ್ಯಾದಿ ಪದಗಳನ್ನು ಅವರ ಮೇಲೆ ಹೇರುವುದೇ, ಅದಕ್ಕೇ ಅಧಿಕೃತ ಚಾಪು ಒತ್ತುವುದೇ ಭಾಷಾ ದಬ್ಬಾಳಿಕೆ. ಇಂತಹ ಕುರುಡು ಕನ್ನಡ ಪ್ರೇಮಿಗಳೇ ಈಗ ಸಂಸ್ಕೃತ ಹೇರಿಕೆಯಿಂದ ನಿಜಗನ್ನಡವನ್ನು ಕೊಲ್ಲುತ್ತಿರುವ ಭಾಷಾಶಾಸ್ತ್ರಿಗಳು!</p>



<p>ಇಲ್ಲೊಂದು ದೊಡ್ಡ ಮೋಸವನ್ನು ಗಮನಿಸಬೇಕು. ಬೇರೆ ಭಾಷೆಗಳ ಪದಗಳನ್ನು ಬದಲಿಸಿ ನಮ್ಮದನ್ನಾಗಿ ಮಾಡಿಕೊಂಡಿದ್ದೇವೆ. ಆದರೆ, ಸಂಸ್ಕೃತ ಪದಗಳನ್ನು ಮಾತ್ರ ಕಿಂಚಿತ್ತೂ ಬದಲಿಸುವ ಹಕ್ಕು ನಿಮಗಿಲ್ಲ. ಅಷ್ಟು ಶುದ್ಧತೆಯ ವ್ಯಸನ. ಅದಕ್ಕಾಗಿಯೇ ನಾವೀಗ ಬಳಸುವ ಕನ್ನಡಕ್ಕೆ ಸ್ವಲ್ಪ ಮಟ್ಟಿಗೆ ಅನುಕೂಲವಾದ ಕೆಲವು ಮತ್ತು ಸಾರಾಸಗಟು ಹೊರೆಯಾಗಿ ಪ್ರಾಣ ಹಿಂಡುವ ಕೆಲವು ಮಹಾಪ್ರಾಣಗಳನ್ನು ತಂದಿದ್ದಾರೆ‌. ಒಂದು ಬಾಲ ಆಚೆ ಈಚೆಯಾದರೂ ಇವರು ನಿಮಗೆ ಕನ್ನಡ ಬರೆಯಲು ಗೊತ್ತಿಲ್ಲ ಎಂಬಂತೆ ಅವಮಾನ ಮಾಡುತ್ತಾರೆ. ಕಾರಣ ಸುಲಭ. ಭೇದ ಮತ್ತು ಬೇಧಿಯ ನಡುವಿನ ಗೊಂದಲ ಇಲ್ಲದ ಯಾವುದೇ ಸಾಮಾನ್ಯ ಕನ್ನಡಿಗ ಇರಲು ಸಾಧ್ಯವಿಲ್ಲ. ಉಳಿದವರಿಗೆ ಅರ್ಥವಾಗದ ಸಂಸ್ಕೃತ ಮಂತ್ರಗಳನ್ನು ಇಟ್ಟುಕೊಂಡು ಧರ್ಮವನ್ನು ಹೈಜಾಕ್ ಮಾಡಿದಂತೆ, ಗೊಂದಲಕಾರಿ, ಪರಿಚಯ ಇಲ್ಲದ, ಕಬ್ಬಿಣದ ಕಡಲೆಯಂತಹ ಸಂಸ್ಕೃತ ಪದಗಳ ಮೂಲಕ ಕನ್ನಡ ಭಾಷೆಯನ್ನು ಹೈಜಾಕ್ ಮಾಡುವ ಪ್ರಯತ್ನ ಇದು.</p>



<p>ಇವರ ಇನ್ನೊಂದು ಅಹಂಕಾರ ನೋಡಿ. ನಮಗೆ ಶಾಲೆಯಲ್ಲಿ- ತತ್ಸಮ ಅಂದರೆ ಅದಕ್ಕೆ ಸಮನಾದದ್ದು ಮತ್ತು ತದ್ಭವ ಅಂದರೆ, ಅದರಿಂದ ಹುಟ್ಟಿದ್ದು ಎಂದು ಪದಗಳ ಪಟ್ಟಿಯನ್ನೇ ಉರುಹೊಡೆಸುತ್ತಿದ್ದರು. &#8216;ಈ ಎಲ್ಲಾ ಶಬ್ದಗಳು ಸಂಸ್ಕೃತದ್ದು; ಅದರಿಂದ ಹುಟ್ಟಿದ್ದು; ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ&#8221; ಎಂಬ ಸುಳ್ಳನ್ನು ನಮ್ಮ ತಲೆಗೆ ದಾಟಿಸುವ ಮೇಲ್ಮೆಯ ಅಹಂಕಾರವಿದು.</p>



<p>ಹೊಸದಾಗಿ ಧರ್ಮವನ್ನು ಸೇರಿದವರು, ಮೊದಲಿಂದಲೂ ಇದ್ದವರಿಗಿಂತ ಹೆಚ್ಚು ಕರ್ಮಠರೂ, ಮೂಲಭೂತವಾದಿಗಳೂ ಆಗಿರುವುದು ಜಾಗತಿಕ ವಿದ್ಯಮಾನ. ಇದು ಭಾಷೆಯ ಮಟ್ಟಿಗೂ ನಿಜ. ಈಗ ಸಂಸ್ಕೃತದ ಪರವಾಗಿ ಮಾತನಾಡುವವರು ಹೆಚ್ಚಾಗಿ ಬ್ರಾಹ್ಮಣರೇ ಮೊದಲಾದ ಮೇಲ್ಜಾತಿಯವರು ಮತ್ತು ಶಾಲೆಯಲ್ಲಿ ಕನ್ನಡ ಕಲಿತ ತುಳು, ಬ್ಯಾರಿ, ಕೊಂಕಣಿ, ಕೊಡವ ಇತ್ಯಾದಿಯನ್ನು ತಾಯಿ ನುಡಿಯಾಗಿ ಹೊಂದಿರುವವರು; ನೆಲದ ಕನ್ನಡದವರಲ್ಲ. ಸ್ವತಃ ಸಂಸ್ಕೃತ ಬರದವರೂ, ಅಲ್ಪಪ್ರಾಣ ಮಹಾಪ್ರಾಣಗಳಲ್ಲಿ ಗೊಂದಲಿಸುವವರೂ, ಬಾಲದ ಸಮಸ್ಯೆಯವರೂ ಇವರಲ್ಲಿ ಸೇರಿರುವುದು ತಮಾಷೆಯಾಗಿದೆ. ಇದೊಂದು ಕುರುಡು ನಂಬಿಕೆ. ದೇಶಪ್ರೇಮ, ಪುರಾತನ, ಸಂಸ್ಕೃತ ಇತ್ಯಾದಿ ಬೆರೆಸಿದ ಗಾಂಜಾ. (ಈ ಕುರಿತು ಹಿಂದಿನ ಬರಹದಲ್ಲಿ ವಿವರಿಸಲಾಗಿದೆ.)</p>



<p>ಇಂತ ಗುಲಾಮಿ ಮನಸ್ದಿತಿಯಲ್ಲಿ ಜೀವನದ ಪ್ರತಿಯೊಂದು ಅಂಶದಲ್ಲೂ ಸಂಸ್ಕೃತವನ್ನು ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಹೇಗೆ ತುರುಕಿಸಿ &#8220;ಪ್ರತಿಷ್ಟಾಪನೆ&#8221; ಮಾಡಲಾಗಿದೆ ಎಂದು ಮೊದಲು ನೋಡಬೇಕು. ಹುಟ್ಟಿದ ಕೂಡಲೇ ಬ್ರಾಹ್ಮಣಶಾಹಿಯೇ ಇಡುತ್ತಿದ್ಧ ಅವಹೇಳನಕಾರಿ ಹೆಸರುಗಳ ಕುರಿತ ಜಿಗುಪ್ಸೆ ನಂತರ ಅಪ್ಪಟ ಗ್ರಾಮೀಣ ಹೆಸರುಗಳಿಗೂ ವ್ಯಾಪಿಸಿ, ಈಗ ಸಂಸ್ಕೃತ ಹೆಸರುಗಳೇ ರಾರಾಜಿಸುತ್ತಿವೆ. ಈಗ ಅವರಿಗೆ ಈ ಕುರಿತು ತಕರಾರುಗಳಿಲ್ಲ. ಸತ್ತ ಬಳಿಕ ಮಾಡುವುದೆಲ್ಲವೂ ಸಂಸ್ಕೃತದ &#8220;ಅಪರ ಕ್ರಿಯೆ&#8221;ಗಳಾಗಿವೆ. ಬೊಜ್ಜ ಎಂಬುದು ವೈಕುಂಠ ಸಮಾರಾಧನೆ ಇತ್ಯಾದಿಯಾಗಿದೆ. ನಡುವೆಯೂ ಬಹಳಷ್ಟು ಸಂಸ್ಕೃತಮಯ ಆಗಿವೆ. ಹುಟ್ಟಿದ ದಿನ-ಜನ್ಮ ದಿನೋತ್ಸವ, ಹೆಸರಿಡುವ ಹಬ್ಬ- ನಾಮಕರಣ, ಮನೆಯೊಕ್ಕಲು-ಗೃಹಪ್ರವೇಶ, ಮದುವೆ- ವಿವಾಹ, ಪಾಣಿಗ್ರಹಣ… ಬೆಳ್ಳಿ ಹಬ್ಬ- ರಜತ ಮಹೋತ್ಸವ… ಇನ್ನು ಸಾವಿಗೆ ಬಳಸಲಾಗುತ್ತಿರುವ ಸಂಸ್ಕೃತ ಪದಗಳಿಗೆ ಲೆಕ್ಕವೇ ಇಲ್ಲ. ಇಲ್ಲೆಲ್ಲಾ ಸಂಸ್ಕೃತದ ಆಕ್ರಮಣವು ಸಾಂಸ್ಕೃತಿಕ ಆಕ್ರಮಣ- ಎಂದರೆ ನಡೆನುಡಿಯ ಮೇಲಿನ ದಾಳಿಯ ಜೊತೆಗೇ ನಡೆದಿದೆ ಎಂಬುದನ್ನು ಗಮನಿಸಬೇಕು.</p>



<p>ಕರಾವಳಿಯ ಶೂದ್ರಾದಿಗಳ ಬೂತ (ಇದು ಭೂತವಲ್ಲ!)ದ ನಡಾವಳಿಗಳು &#8220;ಭೂತಾರಾಧನೆ&#8221;ಗಳಾಗಿ, ಕೋಲ, ನೇಮಗಳು, ಕೋಲೋತ್ಸವ, ನೇಮೋತ್ಸವಗಳಾಗಿವೆ. ಅಷ್ಟೇಕೆ ದೈವಗಳ ಹೆಸರೂ ಸಂಸ್ಕೃತಮಯ. ಲೆಕ್ಕೆಸಿರಿ-ರಕ್ತೇಶ್ವರಿ, ಕಲ್ಲುಟ್ಟಿ- ಕಲ್ಲುರ್ಟಿ ಸತ್ಯಜಾವದೆ- ಸತ್ಯದೇವತೆ; ಅಷ್ಟೇ ಏಕೆ ಮುಸ್ಲಿಂ ಬೂತವಾದ ಬೊಬ್ಬರ್ಯ-ಬಬ್ರುವಾಹನ… ಹೀಗೆ…! ಊರಿನ ಹೆಸರುಗಳನ್ನೂ ಇವರು ಬಿಟ್ಟಿಲ್ಲ. ಹೆಸರುಗಳನ್ನು ಮೊದಲು ಕನ್ನಡೀಕರಿಸಿ ನಂತರ ಸಂಸ್ಕೃತಮಯಗೊಳಿಸುವುದು ತಂತ್ರ. ಉದಾರಣೆಗೆ: ಸೊರ್ನಾಡು- ಸುವರ್ಣ ನಾಡಾಗುತ್ತದೆ; ಮನಿತ್ತಾರ್ ಎಂಬುದು ಮಣಿಹಳ್ಳವಾಗುತ್ತದೆ. ಯಾವುದೇ ಊರಿನ ಮೂಲ ಹೆಸರನ್ನು ಯಾವುದರೂ ಗೊಡ್ಡು ಪುರಾಣಕ್ಕೆ, ದೇವಸ್ಥಾನಕ್ಕೆ ತಳಕುಹಾಕುವುದು ನಡೆಯುತ್ತಿದ್ದರೂ ಯಾರಿಗೂ ನಾಚಿಕೆ ಆಗುವುದಿಲ್ಲ. ಇತ್ತೀಚೆಗೆ ಬರುವ ಎಲ್ಲಾ ಸರಕಾರಿ ಯೋಜನೆಗಳು, ಕಾರ್ಯಕ್ರಮಗಳು, ಹೊಸ ರಾಕೆಟುಗಳು, ಉಪಗ್ರಹಗಳು… ಇತ್ಯಾದಿಗಳ ಹೆಸರುಗಳನ್ನು ನೋಡಿದರೆ, ಸಂಸ್ಕೃತವೇ ಕಾಣುತ್ತದೆ.</p>



<p>ಇತ್ತೀಚೆಗೆ ಮದುವೆಯಿಂದ ಹಿಡಿದು ಸಂಮಾನದ ತನಕ ಎಲ್ಲಾ ಕಾರ್ಯಕ್ರಮಗಳಲ್ಲಿ ಎಂಸಿ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಿರೂಪಕರ ಹಾವಳಿ ಆರಂಭವಾಗಿದೆ. ಇವರು ತಮಗೂ ಅರ್ಥವಾಗದ ಸಂಸ್ಕೃತಮಯ ಕನ್ನಡದಲ್ಲಿ ಒದರಿದಲ್ಲಿ ಜನ ಅರ್ಥವಾಗದೆಯೂ ಚಪ್ಪಾಳೆ ತಟ್ಟುತ್ತಾರೆ. ಭಾಷೆಯ ಮೂಲ ಉದ್ದೇಶವಾದ ಬೇರೆಯವರಿಗೆ ಅರ್ಥವಾಗಬೇಕು ಎಂಬುದನ್ನೇ ಗಾಳಿಗೆ ತೂರಿ, ಅರ್ಥವಾಗದ ಭಾರೀ ಪದಗಳಿದ್ದರೆ ಮಾತ್ರ ಉತ್ತಮ ಭಾಷೆ ಎಂಬ ಭ್ರಮೆಯಿಂದ ಜನರನ್ನು ಹೊರಗೆಳೆದು, ಕೀಳರಿಮೆ ದೂರಮಾಡುವ ಕೆಲಸ ಮೊದಲು ಆಗಬೇಕಾಗಿದೆ. ಆದರೆ, ನಮ್ಮ ಸರಕಾರಿ ಸಾಹಿತ್ಯ ಸಮ್ಮೇಳನಗಳು, ಸಿರಿವಂತರ &#8220;ಸಿರಿ&#8221; ಜಾತ್ರೆಗಳು ಜನರನ್ನು ಇದರಿಂದ ಮೇಲೆತ್ತುವ ಬದಲು ಇನ್ನಷ್ಟು ಆಳದ ಬಾವಿಗೆ ತಳ್ಳುತ್ತಿವೆ.</p>



<p>ಈ ನಿಟ್ಟಿನಲ್ಲಿ ನಾವು ಸ್ಪಷ್ಟ ಉದ್ದೇಶ ಇಟ್ಟುಕೊಂಡು ನಿತ್ಯದ ಮಾತು, ಬರವಣಿಗೆಯಲ್ಲಿ- ಮನಸ್ಸಿಗೆ ಬರುವ ಅಗತ್ಯವಿಲ್ಲದ ಸಂಸ್ಕೃತ ಪದಗಳನ್ನು ಅಲ್ಲಲ್ಲಿಯೇ ಗುಡಿಸಿಹಾಕಬೇಕು. ಎರಡೂವರೆ ದಶಕಗಳ ಹಿಂದೆ ನಾನು ಸಹಾಯಕ ಸುದ್ದಿ ಸಂಪಾದಕನಾಗಿದ್ದ &#8220;ಜನವಾಹಿನಿ&#8221; ಪತ್ರಿಕೆಯಲ್ಲಿ ಇಂತ ಪ್ರಯೋಗ ಮಾಡಲಾಗಿತ್ತು. ಸರಳ ಕನ್ನಡ ಪದಗಳು ಇವೆ ಎಂದಾದರೆ, ಸಂಸ್ಕೃತ ಪದಗಳ ಜಾಗದಲ್ಲಿ ಅವುಗಳನ್ನೇ ಬಳಸುವುದು. ಉದಾ: ಜ್ಞಾನ-ಅರಿವು, ತಿಳುವಳಿಕೆ, ಸಂತೋಷ-ಸಂತಸ, ಆಶ್ಚರ್ಯ-ಅಚ್ಚರಿ, ಲೇಖನ-ಬರಹ, ಗ್ರಾಂಥಿಕ-ಪುಸ್ತಕದ… ಹೀಗೆ ಸರಳ ಪದಗಳಿಂದ ಇದು ಆರಂಭವಾಗಿತ್ತು. ಆಡಂಬರದ, ತೋರಿಕೆಯ ಘನಘೋರ ಸಂಸ್ಕೃತ ಶಬ್ದಗಳನ್ನು ಸಾರಾಸಗಟು ಉಚ್ಛಾಟಿಸಲಾಗಿತ್ತು. ಉದಾ: ಉಚ್ಛ್ರಾಯ, ಪ್ರಕ್ಷೇಪ, ಪ್ರಜ್ವಲನ…. ಇತ್ಯಾದಿ. ಕೆಲವು ಸರಿಹೊಂದುವ ಸಂದರ್ಭಗಳಲ್ಲಿ ಕೆಲವು ಪ್ರಾಣ ತಿನ್ನುವ ಮಹಾಪ್ರಾಣಗಳಿಂದಲೂ ಮುಕ್ತಿ ಪಡೆಯಲಾಗಿತ್ತು. ಉದಾ: ಉಚ್ಛಾಟನೆ- ಉಚ್ಚಾಟನೆ, ಕಛೇರಿ-ಕಚೇರಿ, ಕೊಠಡಿ-ಕೊಟಡಿ, ಶ್ರೇಷ್ಠ-ಶ್ರೇಷ್ಟ… ಇತ್ಯಾದಿ.</p>



<p>ಇದನ್ನು ಮಾಡುವಾಗ ಒಂದು ಎಚ್ಚರ ವಹಿಸದೇ ಇದ್ದರೆ, ಅದು ಕನ್ನಡಕ್ಕೆ ಸಹಾಯವಾಗುವ ಬದಲು ಹಾನಿಯನ್ನೇ ಉಂಟುಮಾಡುವುದು ನೂರಕ್ಕೆ ನೂರರಷ್ಟು ನಿಜ. ಸಂಸ್ಕೃತ ಪ್ರೇಮಿಗಳು ಅದರ ಭಾಷಾ ಶುದ್ಧತೆ ಬಗ್ಗೆ ಮತ್ತು ಬೇರೆ ಭಾಷೆಗಳ ಪದಗಳ ಎರವಲಿನ ಕುರಿತು ತೋರುವ ಕರ್ಮಠತನವನ್ನು ಸಂಸ್ಕೃತವನ್ನು ಗುಡಿಸುವುದರಲ್ಲಿ ನಾವು ತೋರಿಸಬೇಕಾಗಿಲ್ಲ. ಕನ್ನಡದಲ್ಲಿ ಮೂರು ರೀತಿಯ ಸಂಸ್ಕೃತ ಪದಗಳನ್ನು ಗುರುತಿಸಬಹುದು. ಮೊದನೆಯವು &#8220;ಸಹಜ&#8221; ಮತ್ತು &#8220;ಸರಳ&#8221;ವಾಗಿ ಕನ್ನಡದಲ್ಲಿ &#8220;ಮಿಲನ&#8221;ಗೊಂಡು &#8220;ಸ್ವಂತ&#8221;ದ್ದೇ ಆಗಿರುವಂತವುಗಳು. ಇಂತಹ ಪದಗಳ ತಂಟೆಗೆ ಹೋಗುವುದು ಕನ್ನಡದ ಪದಸಂಪತ್ತಿನ ದರೋಡೆಗೆ ಸಮ. ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯದ ಭಾಷೆಯೇ ಇಲ್ಲ. ಇಂಗ್ಲೀಶಿನಿಂದ ಲ್ಯಾಟಿನ್, ಗ್ರೀಕ್, ಫ್ರೆಂಚ್ ಮೂಲದ ಪದಗಳನ್ನು ಕಿತ್ತುಹಾಕಿದರೆ, ಅದರ ಹಂದರ ಮಾತ್ರ ಉಳಿಯಬಹುದು.</p>



<p>ಇನ್ನು ಕೆಲವು ಪದಗಳು ಬೇರೆ ಬೇರೆ ಕಾಲಗಳಲ್ಲಿ ಬಂದು ಸೇರಿದವು. ಇವುಗಳಲ್ಲಿ ಕೆಲವು &#8220;ಸಹನೀಯ&#8221; ಮತ್ತು ಕೆಲವು ಈಗಲೂ ಕನ್ನಡಕ್ಕೆ ಒಗ್ಗದೆ, ನಿಜ ಕನ್ನಡಿಗರಿಗೆ ಸವಾಲು ಒಡ್ಡುತ್ತಾ, ವಂದಿಮಾಗಧ, ಆಸ್ತಾನ ಕವಿ-ಸಾಹಿತಿಗಳ &#8220;ಕೃಪಾಕಟಾಕ್ಷ&#8221;ದಿಂದ ಮತ್ತು ಕನ್ನಡಿಗರ ನಾಚಿಕೆಗೇಡಿನ ಕೀಳರಿಮೆಯಿಂದ ಮಾತ್ರ ಉಳಿರುವಂತವು. ಅವುಗಳನ್ನು ಸುಲಭದಲ್ಲಿ ಕಿತ್ತೆಸೆಯಬಹುದು. ಆದರೆ ತಕ್ಷಣವೇ ಒದ್ದೋಡಿಸಬೇಕಾದ ಕೆಲವು ಸಂಸ್ಕೃತ ಪದಗಳಿವೆ. ಅವು- ಇರುವ ಕನ್ನಡ ಪದಗಳನ್ನು ಕೀಳುಗಾಣಿಸಿ, ಅವುಗಳ ಜಾಗದಲ್ಲಿ ಸಭ್ಯತೆ, ಸಂಸ್ಕೃತಿಯ ಸೋಗಿನಲ್ಲಿ ಮೆರೆಯುತ್ತಿರುವಂತವು. ಹೆರಿಗೆ ಎನ್ನಲು ನಾಚಿಕೆಪಟ್ಟು ಪ್ರಜನನ ಎನ್ನಬೇಕು ಎಂದು ಒತ್ತಾಯಿಸುವಂತವು.</p>



<p>ಇಲ್ಲಿ ಇರುವ ಇನ್ನೊಂದು ಅಪಾಯ ಎಂದರೆ, ಕೆಲವರು ಸಂಸ್ಕೃತವನ್ನು ಒಂದು ಭಾಷೆಯಾಗಿ ದ್ವೇಷಿಸುವ ಮೂಲಭೂತವಾದ ತೋರುತ್ತಿರುವುದು. ಇವರು ಹೇಳಿದ್ದನ್ನು ಒಪ್ಪಿದರೆ, ಸಂಸ್ಕೃತ ಪದಗಳು ಸಾಕಷ್ಟು ಇರುವ ಕುವೆಂಪು ಸಹಿತ ಈ ತನಕದ ಬಹುತೇಕ ಸಾಹಿತ್ಯವನ್ನು ಕಡೆಗಣಿಸಬೇಕಾಗುತ್ತದೆ. ಇಂತವರು ಸಂಸ್ಕೃತದಂತೆಯೇ, ಆಳುವ ಜಾತಿ, ವರ್ಗಗಳಿಗೆ ಹತ್ತಿರವಾಗಿ ಸತ್ತ ಮತ್ತು ಜನ ಸಾಮಾನ್ಯರಿಗೆ ಅರ್ಥವಾಗದ ಹಳೆಗನ್ನಡ ಕಾವ್ಯಗಳಿಂದ ಕನ್ನಡ ಪದಗಳ ಹೆಣ ಅಗೆದು ತಂದು ಸಂಸ್ಕೃತ ಪದಗಳ ಜಾಗದಲ್ಲಿ ಕೂರಿಸುತ್ತಿರುವುದು. ಇವು ಜನಭಾಷೆಗೆ ಸಂಬಂಧವಿಲ್ಲದ ಪದಗಳು. ಇದು ಎಷ್ಟು ಅಪಾಯಕಾರಿ ಎಂದರೆ, ಮೃತ ಸಂಸ್ಕೃತಮಯ ಕನ್ನಡಕ್ಕೆ ಎದುರಾಗಿ ಅಷ್ಟೇ ಕಷ್ಟವಾದ ಸತ್ತ ಹಳೆಗನ್ನಡವನ್ನು ನಿಲ್ಲಿಸುವುದು! ಇದರಿಂದ ಯಾರಿಗೇನು ಲಾಭ?</p>



<p>ನಾವು ಸಂಸ್ಕೃತವನ್ನು ಏಕೆ ವಿರೋಧಿಸಬೇಕು ಎಂಬ ಬಗ್ಗೆ ನಮಗೆ ಸ್ಪಷ್ಟತೆ ಇರಲಿ. ಮೇಲುಕೀಳಿನ ಜಾತಿಪದ್ಧತಿಯನ್ನು ಕ್ರೂರವಾಗಿ ಬೆಳೆಸಿ, ಇಂದಿಗೂ ಸಾಕುತ್ತಿರುವ ಧಾರ್ಮಿಕತೆಯೊಂದಿಗೆ ಅದು ಹೊಂದಿರುವ ಹೊಕ್ಕುಳಬಳ್ಳಿ ನಂಟು ಮತ್ತು ಅದಕ್ಕಿರುವ ಶ್ರೇಷ್ಟತೆಯ ವ್ಯಸನವೇ ಈ ಕಾರಣಗಳು; ಇತರ ಭಾಷೆ ಸಂಸ್ಕೃತಿಗಳನ್ನು ಕೀಳಾಗಿ ಕಾಣುವ ಮೇಲರಿಮೆಯ ಅಹಂಕಾರದ ಜೊತೆಗೆ ಒಳಗೆ ಸೇರಿ ಕಬಳಿಸುವ ವೈರಸ್ ಸ್ವಭಾವ.</p>



<p>ನಾವೊಂದು ಪ್ರಯೋಗ ಮಾಡಬಹುದು. ಇನ್ನು ಮುಂದೆ ಬರೆಯುವಾಗ ಆದಷ್ಟು ಸಂಸ್ಕೃತ ಪದಗಳನ್ನು ದೂರ ಇಟ್ಟು, ನೆನಪಿಗೆ ಬರುವ ಕನ್ನಡ ಪದಗಳನ್ನು, ಆಡುಮಾತುಗಳನ್ನು ಬಳಸೋಣ. ಇದನ್ನು ಕೃತಕವಾಗಿ, ಹಗೆ ಇಟ್ಟುಕೊಂಡು, ಹಟದಿಂದ ಮಾಡದೇ ಸಹಜವಾಗಿ ಮಾಡೋಣ. ಕೆಲವೊಮ್ಮೆ ಇದಕ್ಕಾಗಿ ವಾಕ್ಯ ರಚನೆಯ ರೀತಿಯನ್ನು ಕೊಂಚ ಬದಲಿಸಬೇಕಾಗಿ ಬರಬಹುದು. ಆದರೆ, ನಿಮ್ಮ ಬರವಣಿಗೆ ಸರಾಗವಾಗಿ ಹೊಸ ಮೆರುಗುಪಡೆಯುವುದನ್ನು ನೀವು ಕಾಣಲಿದ್ದೀರಿ. ಜೊತೆಗೆ ನಿಮ್ಮ ಬರವಣಿಗೆ ಮುಂದೆ ಹೆಚ್ಚು ಜನರನ್ನು ತಟ್ಟಬಹುದು.</p>



<hr class="wp-block-separator has-alpha-channel-opacity"/>
]]></content:encoded>
					
		
		
			</item>
		<item>
		<title>ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಕೋರಿ ಅರ್ಜಿ : ವಜಾಗೊಳಿಸಿದ ಸುಪ್ರೀಂ ಕೋರ್ಟ್‌  </title>
		<link>https://peepalmedia.com/supreme-court-rejects-pil-to-declare-sanskrit-as-national-language/</link>
		
		<dc:creator><![CDATA[Peepal Media]]></dc:creator>
		<pubDate>Fri, 02 Sep 2022 13:51:20 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[karnataka]]></category>
		<category><![CDATA[language]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sanskrit]]></category>
		<category><![CDATA[supremecourt]]></category>
		<guid isPermaLink="false">https://peepalmedia.com/?p=3656</guid>

					<description><![CDATA[ನವದೆಹಲಿ: ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರಾದ&#160;ಎಂ ಅರ್‌ ಶಾ&#160;ಮತ್ತು&#160;ಕೃಷ್ಣ ಮುರಾರಿ&#160;ಅವರ ನೇತೃತ್ವದ ಪೀಠವು, ʼಈ ವಿಚಾರವನ್ನು ಪರಿಗಣಿಸಲು ಸಂಸತ್ತು ಸೂಕ್ತ ವೇದಿಕೆಯೇ ಹೊರತು ನ್ಯಾಯಾಲಯವಲ್ಲʼ ಎಂದು ಹೇಳಿತು. &#8220;ನಾವೇಕೆ ನೋಟಿಸ್‌ ನೀಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ಇದನ್ನು ಚರ್ಚಿಸಲು ಸಂಸತ್ತು ಸೂಕ್ತವಾದ ವೇದಿಕೆ. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇದೆ. ಇದು ನೀತಿನಿರೂಪಣೆಯ ವಿಷವಾಗಿದ್ದು ನಾವು ಅದನ್ನು [&#8230;]]]></description>
										<content:encoded><![CDATA[
<p class="has-medium-font-size"><strong>ನವದೆಹಲಿ:</strong> ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.</p>



<p class="has-medium-font-size">ಪ್ರಕರಣದ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರಾದ&nbsp;<strong>ಎಂ ಅರ್‌ ಶಾ&nbsp;</strong>ಮತ್ತು&nbsp;<strong>ಕೃಷ್ಣ ಮುರಾರಿ&nbsp;</strong>ಅವರ ನೇತೃತ್ವದ ಪೀಠವು, ʼಈ ವಿಚಾರವನ್ನು ಪರಿಗಣಿಸಲು ಸಂಸತ್ತು ಸೂಕ್ತ ವೇದಿಕೆಯೇ ಹೊರತು ನ್ಯಾಯಾಲಯವಲ್ಲʼ ಎಂದು ಹೇಳಿತು.</p>



<p class="has-medium-font-size">&#8220;ನಾವೇಕೆ ನೋಟಿಸ್‌ ನೀಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ಇದನ್ನು ಚರ್ಚಿಸಲು ಸಂಸತ್ತು ಸೂಕ್ತವಾದ ವೇದಿಕೆ. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇದೆ. ಇದು ನೀತಿನಿರೂಪಣೆಯ ವಿಷವಾಗಿದ್ದು ನಾವು ಅದನ್ನು ಬದಲಿಸಲಾಗುವುದಿಲ್ಲ. ಹಾಗಾಗಿ ನಾವು ಈ ಮನವಿಯನ್ನು ತಿರಸ್ಕರಿಸಿತ್ತೇವೆ ಎಂದು ವಜಾಗೊಳಿಸಲಾಗಿದೆ. ಸೂಕ್ತ ಪ್ರಾಧಿಕಾರದ ಮುಂದೆ ಮನವಿ ನೀಡಲು ಅರ್ಜಿದಾರರು ಸ್ವತಂತ್ರರು” ಎಂದು ನ್ಯಾಯಾಲಯ ಹೇಳಿದೆ.</p>
]]></content:encoded>
					
		
		
			</item>
	</channel>
</rss>
