<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Scam &#8211; Peepal Media</title>
	<atom:link href="https://peepalmedia.com/tag/scam/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 01 Oct 2024 11:45:56 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Scam &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹೆಚ್‍ಎಂಟಿ ಕಾರ್ಖಾನೆಯ ಭೂಮಿಯ ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ: ರಮೇಶ್ ಎನ್ ಆರ್</title>
		<link>https://peepalmedia.com/land-of-hmt-bangalore-is-sold-to-private-companies/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Oct 2024 11:43:23 +0000</pubDate>
				<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[HMT watches]]></category>
		<category><![CDATA[Scam]]></category>
		<guid isPermaLink="false">https://peepalmedia.com/?p=46489</guid>

					<description><![CDATA[ಬೆಂಗಳೂರು: ಹೆಚ್‍ಎಂಟಿ ಕಾರ್ಖಾನೆಯ ಭೂಮಿಗಳನ್ನು ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್ ಆರ್ ಆರೋಪ ಮಾಡಿದ್ದಾರೆ. 1953 ರಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆ ಸುಮಾರು 647 ಎಕರೆಗಳಷ್ಟು ವಿಸ್ತೀರ್ಣದ ಭೂಮಿಯನ್ನು ಹೊಂದಿದೆ. ಈ ಭೂಮಿಯಲ್ಲಿ 200 ಎಕರೆಗಳಷ್ಟು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ದಾನವಾಗಿ ನೀಡಿದ್ದರು. ಉಳಿದ 447 ಎಕರೆಗಳಷ್ಟು ಭೂಮಿಯನ್ನು ಸ್ಥಳೀಯ ರೈತರಿಂದ ಸ್ವಾಧೀನಪಡಿಸಿಕೊಂಡು ಹೆಚ್‍ಎಂಟಿ ಕಾರ್ಖಾನೆಯನ್ನು ನಿರ್ಮಿಸಲಾಗಿದೆ.&#160; ಸುಮಾರು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಹೆಚ್‍ಎಂಟಿ ಕಾರ್ಖಾನೆಯ ಭೂಮಿಗಳನ್ನು ಕಾನೂನುಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್ ಆರ್ ಆರೋಪ ಮಾಡಿದ್ದಾರೆ.</p>



<p>1953 ರಲ್ಲಿ ಬೆಂಗಳೂರಿನ ಜಾಲಹಳ್ಳಿಯಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆ ಸುಮಾರು 647 ಎಕರೆಗಳಷ್ಟು ವಿಸ್ತೀರ್ಣದ ಭೂಮಿಯನ್ನು ಹೊಂದಿದೆ. ಈ ಭೂಮಿಯಲ್ಲಿ 200 ಎಕರೆಗಳಷ್ಟು ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ದಾನವಾಗಿ ನೀಡಿದ್ದರು. ಉಳಿದ 447 ಎಕರೆಗಳಷ್ಟು ಭೂಮಿಯನ್ನು ಸ್ಥಳೀಯ ರೈತರಿಂದ ಸ್ವಾಧೀನಪಡಿಸಿಕೊಂಡು ಹೆಚ್‍ಎಂಟಿ ಕಾರ್ಖಾನೆಯನ್ನು ನಿರ್ಮಿಸಲಾಗಿದೆ.&nbsp; ಸುಮಾರು ಐದಾರು ದಶಕಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹೆಚ್‍ಎಂಟಿ ಕಾರ್ಖಾನೆಯನ್ನು, ಅದರಲ್ಲೂ ವಾಚ್ ತಯಾರಿಕಾ ಘಟಕವು ಬೇರೆ ಖಾಸಗಿ ಕಂಪನಿಗಳ ಸ್ಪರ್ಧೆಗಳನ್ನು ಎದುರಿಸಲಾಗದೇ ಮತ್ತು ಆಡಳಿತ ವೈಪಲ್ಯದಿಂದಾಗಿ ಅಪಾರ ಪ್ರಮಾಣದ ನಷ್ಟವನ್ನು ಕಂಡು ಕಳೆದ 20 ವರ್ಷಗಳಿಂದೀಚೆಗೆ ಉತ್ಪಾದನೆಯನ್ನು ನಿಲ್ಲಿಸಿದೆ.</p>



<p>2004 ರ ನಂತರ ಹೆಚ್‍ಎಂಟಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ನಡೆಸಿರುವ ಅಧಿಕಾರಿಗಳು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ತಳವೂರಿ ಕುಳಿತಿದ್ದ ಸರ್ಕಾರಿ ನೆಲಗಳ್ಳರು ಕಾಲಾನುಕಾಲದಲ್ಲಿ ಈ ಜಮೀನನ್ನು ಮಾರಾಟ ಮಾಡಿದ್ದಾರೆ. ಸಾರ್ವಜನಿಕ ಉದ್ಯಮವಾಗಿರುವ ಹೆಚ್‍ಎಂಟಿ ಕಾರ್ಖಾನೆಯ ಸೊತ್ತು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಸೇರಿದ್ದು, ಕೇಂದ್ರ ಸರ್ಕಾರದ ಗಮನಕ್ಕೆ ಬರದಂತೆ ಮತ್ತು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯದೇ ಸ್ಥಳೀಯ ಮಟ್ಟದಲ್ಲಿ “ಕಾರ್ಖಾನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸುವ” ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಲಾಗಿದೆ ಎಂದು ರಮೇಶ್ ಎನ್ ಆರ್ ಆರೋಪಿಸಿದ್ದಾರೆ. </p>



<p>ಸುಮಾರು 2,000 ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಸುಮಾರು 241 ಎಕರೆಗಳಷ್ಟು ವಿಸ್ತೀರ್ಣದ ಹೆಚ್‍ಎಂಟಿ ಕಾರ್ಖಾನೆಯ ಸ್ವತ್ತನ್ನು ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ಈಗಾಗಲೇ ಹರಿದು ಹಂಚಿ ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿದ್ದು ತಾವು ಯಾವುದೇ ಹೇಳಿಕೆಯನ್ನು ನೀಡುವ ಮೊದಲು ಸಂಬಂಧಪಟ್ಟ ಮಾಹಿತಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಮತ್ತು ಅಧ್ಯಯನ ಮಾಡಿದ ನಂತರವೇ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಮ್ಮ ಹೇಳಿಕೆಗಳನ್ನು ನೀಡಬೇಕು. ಆದರೆ,ಹೆಚ್‍ಎಂಟಿ ಕಾರ್ಖಾನೆಗೆ ಸೇರಿದ ಸುಮಾರು 2,000 ಕೋಟಿಗೂ ಹೆಚ್ಚು ಮೌಲ್ಯದ 241 ಎಕರೆಗಳಷ್ಟು ವಿಸ್ತೀರ್ಣದ ಅಮೂಲ್ಯ ಸರ್ಕಾರಿ ಸ್ವತ್ತನ್ನು ತಮ್ಮದೇ ಪಕ್ಷದ ಕೆಲವು ಹಿರಿಯ ಮುಖಂಡರು ಮತ್ತು ಕೆಲವು ಅತ್ಯಂತ ಪ್ರಭಾವೀ ಅಧಿಕಾರಿಗಳು ಈಗಾಗಲೇ ಕಾನೂನು ಬಾಹಿರವಾಗಿ ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಿರುವ “ಹೆಚ್‍ಎಂಟಿ ಭೂ ಹಗರಣ”ದ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಅಧ್ಯಯನ ಮೇಲೆಯೇ ತಮ್ಮ ಅಭಿಪ್ರಾಯವನ್ನು ಹೇಳಬೇಕೆಂದು ರಮೇಶ್ ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಎಲೆಕ್ಟೋರಲ್ ಬಾಂಡ್‌: ಮೇಘಾ ಇಂಜಿನಿಯರಿಂಗ್ ಕೊಟ್ಟಿದ್ದೆಷ್ಟು?</title>
		<link>https://peepalmedia.com/top-doner-telangana-based-megha-electoral-bond-scam/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 22 Mar 2024 09:30:00 +0000</pubDate>
				<category><![CDATA[ರಾಜಕೀಯ]]></category>
		<category><![CDATA[amit shah]]></category>
		<category><![CDATA[bjp]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[supreme court́]]></category>
		<guid isPermaLink="false">https://peepalmedia.com/?p=37363</guid>

					<description><![CDATA[ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 2 ಎಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬಂದಂತೆ ದೇಶ ಕಂಡು ಕೇಳರಿಯದ ಅನೇಕ ಭ್ರಷ್ಟಾಚಾರಗಳು ಹೊರಗೆ ಬಂದಿವೆ. ಈ ಡೇಟಾವು ಏಪ್ರಿಲ್ 12, 2019 ರಿಂದ ಪ್ರಾರಂಭವಾಗುವ ಮತ್ತು ಜನವರಿ 15, 2024 ರವರೆಗೆ (ಕೊನೆಯ ಬಾಂಡ್‌ಗಳನ್ನು ಮಾರಾಟ ಮಾಡಿದಾಗ) ಅವಧಿಗೆ ಸಂಬಂಧಿಸಿದೆ. ಇದು ಯೋಜನೆಯ ಮೊದಲ ವರ್ಷದ ಡೇಟಾವನ್ನು ಒಳಗೊಂಡಿಲ್ಲ. ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಏಪ್ರಿಲ್ 12, 2019 ಮತ್ತು [&#8230;]]]></description>
										<content:encoded><![CDATA[
<p><strong>ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – </strong>2</p>



<p>ಎಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬಂದಂತೆ ದೇಶ ಕಂಡು ಕೇಳರಿಯದ ಅನೇಕ ಭ್ರಷ್ಟಾಚಾರಗಳು ಹೊರಗೆ ಬಂದಿವೆ. ಈ ಡೇಟಾವು ಏಪ್ರಿಲ್ 12, 2019 ರಿಂದ ಪ್ರಾರಂಭವಾಗುವ ಮತ್ತು ಜನವರಿ 15, 2024 ರವರೆಗೆ (ಕೊನೆಯ ಬಾಂಡ್‌ಗಳನ್ನು ಮಾರಾಟ ಮಾಡಿದಾಗ) ಅವಧಿಗೆ ಸಂಬಂಧಿಸಿದೆ. ಇದು ಯೋಜನೆಯ ಮೊದಲ ವರ್ಷದ ಡೇಟಾವನ್ನು ಒಳಗೊಂಡಿಲ್ಲ.</p>



<p>ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್</p>



<p>ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಏಪ್ರಿಲ್ 12, 2019 ಮತ್ತು ಜನವರಿ 11, 2024 ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದಾನ ನೀಡಿದ ಎರಡನೇ ಅತಿದೊಡ್ಡ ದಾನಿ. ಹೊಸ ಡೇಟಾದ ಪ್ರಕಾರ ಇದು ಬಿಜೆಪಿಗೆ 584 ಕೋಟಿ ರುಪಾಯಿ ನೀಡಿದೆ. ತೆಲಂಗಾಣ ಮೂಲದ ಈ ಕಂಪನಿಯ ಚೇರ್‌ಮನ್ ಪಾಮಿರೆಡ್ಡಿ ಪಿಚಿ ರೆಡ್ಡಿ ಮತ್ತು ಅವರ ಸಂಬಂಧಿ ಪಿವಿ ಕೃಷ್ಣಾ ರೆಡ್ಡಿ ಈ ಅವಧಿಯಲ್ಲಿ 966 ಕೋಟಿ ರುಪಾಯಿ ನೀಡಿದ್ದಾರೆ.</p>



<p>ಗುರುವಾರ ಭಾರತೀಯಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯಲ್ಲಿ 966 ಕೋಟಿ ರೂಪಾಯಿಗಳಲ್ಲಿ ಮೇಘಾ ಇಂಜಿನೀಯರಿಂಗ್‌ ಕಂಪನಿಯಿಂದ 584 ಕೋಟಿ ರೂಪಾಯಿಗಳನ್ನು ಬಿಜೆಪಿಗೆ ನೀಡಿದೆ. ಎಂಐಇಎಲ್ ಖರೀದಿಸಿದ ಎಲೆಕ್ಟೋರಲ್ ಬಾಂಡ್‌ಗಳಿಂದ ಲಾಭ ಪಡೆದ ಎರಡನೇ ಅತಿ ದೊಡ್ಡ ಪಕ್ಷವೆಂದರೆ ಆಡಳಿತಾರೂಢ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ. ಇದು 195 ಕೋಟಿ ರುಪಾಯಿಗಳನ್ನು ಪಡೆದಿದೆ. ಅಲ್ಲದೇ, ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ 37 ಕೋಟಿ ರುಪಾಯಿ, ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ 85 ಕೋಟಿಯನ್ನು ಪಡೆದಿವೆ.</p>



<p>ಬಿಹಾರದ ಆಡಳಿತ ಪಕ್ಷವಾದ ನಿತೀಶ್ ಕುಮಾರ್ ಅವರ ಜನತಾ ದಳಕ್ಕೆ (ಯುನೈಟೆಡ್ ) ಈ ಎಂಐಇಎಲ್ ಕಂಪನಿ 10 ಕೋಟಿ ರುಪಾಯಿ ದೇಣಿಗೆ ನೀಡಿದೆ.</p>



<p>MIEL ವಿರೋಧ ಪಕ್ಷಗಳಿಗೆ ನೀಡಿದ ದೇಣಿಗೆ ಅತ್ಯಂತ ಸಣ್ಣ ಮೊತ್ತ. ಆಂಧ್ರ ಮೂಲದ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) 28 ಕೋಟಿ, ಕಾಂಗ್ರೆಸ್ 18 ಕೋಟಿ, ಜನತಾ ದಳ (ಜಾತ್ಯತೀತ) 5 ಕೋಟಿ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ 4 ಕೋಟಿ ರುಪಾಯಿಗಳನ್ನು ನೀಡಿದೆ.</p>



<p>ಎಪ್ರಿಲ್ 12, 2023 ರ ಮೊದಲು MIEL ನ ಚುನಾವಣಾ ಬಾಂಡ್‌ಗಳ 89.75 ಕೋಟಿ ರೂಪಾಯಿಗಳಲ್ಲಿ ಜನತಾ ದಳ (ಜಾತ್ಯತೀತ) 50 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಮಾಹಿತಿಗಳಿಂದ ತಿಳಿದು ಬಂದಿದೆ. ಒಟ್ಟು ಮೊತ್ತದ ಸುಮಾರು 56% ಭಾಗವನ್ನು ಮೇ 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲೇ ಜೆಡಿಎಸ್‌ ಸ್ವೀಕರಿಸಿದೆ.</p>



<p>ಈ ಅವಧಿಯಲ್ಲಿ MIEL ಅನೇಕ ಸರ್ಕಾರಿ ಮೂಲಸೌಕರ್ಯ ಯೋಜನೆಗಳನ್ನು ತನ್ನ ಪಾಲಿಗೆ ದಕ್ಕಿಸಿಕೊಂಡಿತ್ತು. ಕಂಪನಿಯು 14,400 ಕೋಟಿ ರುಪಾಯಿಯ ಥಾಣೆ-ಬೊರಿವಲಿ ಜೋಡಿ ಸುರಂಗ ಯೋಜನೆಗೆ ಟೆಂಡರ್ ಪಡೆದುಕೊಂಡಿದೆ. ಈ ಟೆಂಡರ್‌ 2023 ರ ಏಪ್ರಿಲ್ 11 ರಂದು 140 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ ಒಂದು ತಿಂಗಳ ನಂತರ ಸಿಕ್ಕಿದೆ. 140 ಕೋಟಿ ರೂಪಾಯಿಗಳಲ್ಲಿ, 115 ಕೋಟಿ ರುಪಾಯಿಗಳನ್ನು ಈ ಕಂಪನಿ ಬಿಜೆಪಿಗೆ, ಉಳಿದ 25 ಕೋಟಿ ರುಪಾಯಿಗಳನ್ನು ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹಂಚಿದೆ.</p>



<p>ಆಗ ಒಂದು ಟೆಂಡರ್ ಪ್ರಕ್ರಿಯೆ ವಿವಾದಕ್ಕೀಡಾಗಿತ್ತು. ಮಹಾರಾಷ್ಟ್ರ ಸರ್ಕಾರದ ಮುಂಬೈ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ (MMRDA) 2023 ರ ಜನವರಿಯಲ್ಲಿ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಎರಡು ರಸ್ತೆ ಸುರಂಗಗಳ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಇದರಲ್ಲಿ MEIL ನ ಬಿಡ್ ಮಾತ್ರ ಸರ್ಕಾರ ಸ್ಪಂದಿಸಿತ್ತು. MIEL ಟೆಂಡರ್ ಪಡೆದುಕೊಂಡ ಕೂಡಲೇ MIEL ನ ಪ್ರತಿಸ್ಪರ್ಧಿ L&amp;T ಮೇ 2023 ರಲ್ಲಿ ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸಿತ್ತು. ಆದರೆ ಬಾಂಬೆ ಉಚ್ಚ ನ್ಯಾಯಾಲಯವು ತಾಂತ್ರಿಕ ಆಧಾರದ ಮೇಲೆ L&amp;T ಕಂಪನಿಯ ಮನವಿಯನ್ನು ವಜಾಗೊಳಿಸಿತು.</p>



<p>ಒಂದು ಸಣ್ಣ ಕಂಪನಿಯಾಗಿದ್ದ MIEL ಭಾರತದಲ್ಲಿ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣದ ದೈತ್ಯ ಕಂಪನಿಯಾಗಿ ಬೆಳೆದಿದೆ. ಪ್ರಸ್ತುತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ವಿವಾದಗಳನ್ನೂ ಮೈಗೆಳೆದುಕೊಂಡಿದೆ. ತೆಲಂಗಾಣದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕೆಲವು ತಿಂಗಳ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, 1 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯಲ್ಲಿ ಹಲವಾರು ಗುತ್ತಿಗೆಗಳನ್ನು ಈ ಕಂಪನಿಗೆ ಹಸ್ತಾಂತರಿಸುವಲ್ಲಿ ನಡೆದಿರುವ ಅವ್ಯವಹಾರಕ್ಕಾಗಿ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಆರೋಪಗಳನ್ನು ಮಾಡಿದ್ದರು.</p>



<p>ಆಂಧ್ರಪ್ರದೇಶದಲ್ಲಿ, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2014 ರಿಂದ 2019 ರ ನಡುವೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಬೃಹತ್ ಪಟ್ಟಿಸೀಮಾ ನೀರಾವರಿ ಯೋಜನೆಯಲ್ಲಿ ಎಂಐಇಎಲ್‌ ಕಡೆ ಹೆಚ್ಚಿನ ಒಲವು ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ಮಾಡಿದ್ದ ಇದೇ ಜಗನ್ ತಾವು ಅಧಿಕಾರಕ್ಕೆ ಬಂದ ನಂತರ, MIEL ಗೆ ಹೆಚ್ಚಿನ ಗುತ್ತಿಗೆಗಳನ್ನು ನೀಡಿದರು. ಇದರಲ್ಲಿ ಪೋಲವರಂ ಅಣೆಕಟ್ಟು ಯೋಜನೆ ಕೂಡ ಒಂದು. ಜಗನ್‌, ನವಯುಗ ಇಂಜಿನಿಯರಿಂಗ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಈ ಯೋಜನೆಯನ್ನು MIELಗೆ ನೀಡಿದರು.</p>



<p>MIEL ಸಹ ಆದಾಯ ತೆರಿಗೆ ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿ ಬರುತ್ತದೆ. ಅಕ್ಟೋಬರ್, 2019 ರಲ್ಲಿ ಅದರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು, ಅದರ ನಂತರ ಈ ಕಂಪನಿ ಬೃಹತ್‌ ಪ್ರಮಾಣದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಝೋಝಿ-ಲಾ ಸುರಂಗವನ್ನು ನಿರ್ಮಿಸುವ 4,509 ಕೋಟಿ ಮೌಲ್ಯದ ಯೋಜನೆಯನ್ನು ಈ ಕಂಪನಿ ಆಗಸ್ಟ್ 2020 ರಲ್ಲಿ ಪಡೆದುಕೊಂಡಿದೆ.</p>



<p>ಕಳೆದ ಕೆಲವು ವರ್ಷಗಳಿಂದ MIEL ಹೈದರಾಬಾದ್ ಮೂಲದ ಮೈ ಹೋಮ್ ಗ್ರೂಪ್‌ನ ಸಹಭಾಗಿತ್ವದಲ್ಲಿ ಮಾಧ್ಯಮ ಕ್ಷೇತ್ರದ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದೆ. ಇದು ಪ್ರಭಾವಿ TV9TElugu ಚಾನೆಲನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮತ್ತು NTV ಚಾನೆಲ್‌ನ 22% ಷೇರನ್ನು ಖರೀದಿಸಿದೆ. MIEL ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದಿಸುವ ಉದ್ಯಮಕ್ಕೆ ಯೋಜನೆಗಳನ್ನು ಹಾಕಿಕೊಂಡಿದೆ.</p>



<p>ಎಂಐಇಎಲ್‌ನ ಸಹಭಾಗಿತ್ವ ಹೊಂದಿರುವ ಕಂಪನಿಗಳನ್ನೂ ಸೇರಿಸಿದರೆ, ಬಿಜೆಪಿಗೆ ಈ ಕಂಪನಿ ನೀಡಿದ ದೇಣಿಗೆಗಳು ಇನ್ನೂ ಹೆಚ್ಚಾಗುತ್ತವೆ. MIEL ಸಹಭಾಗಿತ್ವದ ಕಂಪನಿಗಳು ನೀಡಿದ ಕಡಿಮೆ ಮೊತ್ತದ ದೇಣಿಗೆಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಹೋಗಿವೆ.<br>ಎಂಐಇಎಲ್ ಒಡೆತನದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ 220 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡಿದೆ. ಇದು ಬಿಜೆಪಿಗೆ 80 ಕೋಟಿ ಬಾಂಡ್ ನೀಡಿದ್ದರೆ, ಕಾಂಗ್ರೆಸ್ ಗೆ 110 ಕೋಟಿ ದೇಣಿಗೆ ನೀಡಿದೆ. ಅಲ್ಲದೆ, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ ಟಿಡಿಪಿಗೆ ರೂ 20 ಕೋಟಿ ಮತ್ತು ಜನಸೇನಾಗೆ ಬಾಂಡ್‌ಗಳ ಮೂಲಕ ರೂ 10 ಕೋಟಿ ದೇಣಿಗೆ ನೀಡಿದೆ.</p>



<p>40 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ MIEL ನ ಮತ್ತೊಂದು ಕಂಪನಿ SEPC Power, ಕಾಂಗ್ರೆಸ್‌ಗೆ 30 ಕೋಟಿ ರುಪಾಯಿಗಳನ್ನೂ, ಬಿಜೆಪಿ ಮತ್ತು ಟಿಡಿಪಿಗೆ ತಲಾ 5 ಕೋಟಿ ರುಪಾಯಿಗಳನ್ನು ನೀಡಿದೆ. MIEL ನ ಮತ್ತೊಂದು ಕಂಪನಿ Evey Trans Private Limited ಬಿಆರ್‌ಎಸ್‌ ಪಕ್ಷಕ್ಕೆ ಬಾಂಡ್‌ಗಳ ಮೂಲಕ 6 ಕೋಟಿ ರುಪಾಯಿ ನೀಡಿದೆ.</p>



<p>ಎಲ್ಲವನ್ನೂ ಸಮಗ್ರವಾಗಿ ನೋಡಿದಾಗ MIEL ಮತ್ತು ಅದರ ಸಂಬಂಧಿತ ಕಂಪನಿಗಳ ಪಾಲು 1232 ಕೋಟಿ ರುಪಾಯಿಗಳಷ್ಟಿದೆ. ಅದರಲ್ಲಿ ಬಿಜೆಪಿ ಮಾತ್ರ 669 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಇದು ಒಟ್ಟು ದೇಣಿಗೆಯ ಸುಮಾರು 54.3% ಪಾಲು. ಈ ಕಂಪನಿಯಿಂದ ದೇಣಿಗೆ ಪಡೆದುಕೊಂಡಿರುವ ಎರಡನೇ ಅತಿದೊಡ್ಡ ಪಕ್ಷ ಬಿಆರ್‌ಎಸ್.</p>
]]></content:encoded>
					
		
		
			</item>
		<item>
		<title>ದೆಹಲಿ ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಬಂಧಿತನಾದವನಿಂದ ಬಿಜೆಪಿಗೆ 5 ಕೋಟಿ</title>
		<link>https://peepalmedia.com/approver-in-delhi-liquor-policy-case-donated-rs-5-crore-to-bjp/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 22 Mar 2024 09:21:54 +0000</pubDate>
				<category><![CDATA[ರಾಜಕೀಯ]]></category>
		<category><![CDATA[amit shah]]></category>
		<category><![CDATA[bjp]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37347</guid>

					<description><![CDATA[ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 1 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21, ಗುರುವಾರ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಪಿ. ಶರತ್ ಚಂದ್ರ ರೆಡ್ಡಿ ಎಂಬಾತನ ಕಂಪನಿ ಅರಬಿಂದೋ ಫಾರ್ಮಾ ಲಿಮಿಟೆಡ್  5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ. 2022 ರ ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿ [&#8230;]]]></description>
										<content:encoded><![CDATA[
<p style="font-size:17px"><p class="MsoNormal"><span lang="EN-US" style="font-family:&quot;Tunga&quot;,sans-serif;
mso-ansi-language:EN-US"><strong>ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 1  </strong></span></p></p>



<p><span style="font-family: Tunga, sans-serif; color: initial;">ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21, ಗುರುವಾರ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಪಿ. ಶರತ್ ಚಂದ್ರ ರೆಡ್ಡಿ ಎಂಬಾತನ ಕಂಪನಿ ಅರಬಿಂದೋ ಫಾರ್ಮಾ ಲಿಮಿಟೆಡ್  5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ. 2022 ರ ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿ ಈತನನ್ನು ಬಂಧಿಸಿತ್ತು, ಬಂಧನವಾಗಿ ಕೇವಲ ಐದು ದಿನಗಳ ನಂತರ ಈತ ಬಿಜೆಪಿಗೆ ದೇಣಿಗೆ ನೀಡಿದ್ದಾನೆ.</span><p class="MsoNormal"></p><span style="font-family: Tunga, sans-serif; color: initial;">ಚುನಾವಣಾ ಆಯೋಗವು ಪ್ರತಿ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ವಿಶಿಷ್ಟ ಸಂಖ್ಯೆಯನ್ನು ಗುರುವಾರ ಬಿಡುಗಡೆ ಮಾಡಿದ ಈ ಚುನಾವಣಾ ಬಾಂಡ್‌ ಹಗರಣದ ಒಂದು ಕಥೆ ಬೆಳಕಿಗೆ ಬಂದಿದೆ. ಅರಬಿಂದೋ ಫಾರ್ಮಾ ಲಿಮಿಟೆಡ್ ಎಂಬ ಈ ಕಂಪನಿಯನ್ನು ಶರತ್ ರೆಡ್ಡಿಯ ತಂದೆ ಪಿವಿ ರಾಮ್ ಪ್ರಸಾದ್ ರೆಡ್ಡಿ ಸ್ಥಾಪಿಸಿದ್ದು, ಶರತ್ ರೆಡ್ಡಿ ಅದರ ನಿರ್ದೇಶಕರಲ್ಲಿ ಓರ್ವ.</span> <p class="MsoNormal"></p><span style="font-family: Tunga, sans-serif; color: initial;">ಶರತ್ ರೆಡ್ಡಿಯ ಬಂಧನದ ನಂತರ ಈತ ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಈತನನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ಈ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಮೇ 2023 ರಂದು ನ್ಯಾಯಾಲಯವು ವೈದ್ಯಕೀಯ ಕಾರಣಕ್ಕೆ  ಜಾಮೀನು ನೀಡಿತ್ತು.</span> <p class="MsoNormal"></p><span style="font-family: Tunga, sans-serif; color: initial;">ಜೂನ್ 2023 ರಲ್ಲಿ, ಶರತ್ ರೆಡ್ಡಿ ಪ್ರಕರಣದಲ್ಲಿ ಅಪ್ರೂವರ್‌ ಆಗಿ, ಎರಡು ತಿಂಗಳ ನಂತರ ಈತನ ಫಾರ್ಮಾ ಕಂಪನಿಯು ಬಿಜೆಪಿಗೆ ಮತ್ತೆ 25 ಕೋಟಿ ರುಪಾಯಿ ನೀಡಿದ್ದ.</span> <p class="MsoNormal"></p><span style="background-color: rgba(0, 0, 0, 0.2); font-family: Tunga, sans-serif; color: initial;">ಶರತ್ ರೆಡ್ಡಿ ಬಂಧನಕ್ಕೂ ಮುನ್ನ ಇದೇ ಕಂಪನಿ ಭಾರತ್ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ನೀಡಿತ್ತು.</span></p>



<p><p class="MsoNormal"><span style="font-family: Tunga, sans-serif; color: initial;">ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಈ ಹಿಂದೆ ಲಿಕ್ಕರ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ದೇಶದಲ್ಲಿರುವ ಎಲ್ಲಾ ಭಿನ್ನ ದನಿಗಳನ್ನು ಮತ್ತು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.</span></p> </p>
]]></content:encoded>
					
		
		
			</item>
		<item>
		<title>ಎಲೆಕ್ಟೋರಲ್‌ ಬಾಂಡು: ಹೆಚ್ಚು ಉಂಡವರು ಯಾರು?</title>
		<link>https://peepalmedia.com/who-benefited-from-electoral-bonds/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 06 Mar 2024 08:57:50 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news updates]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RBI]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36703</guid>

					<description><![CDATA[2017-2018 ರಿಂದ 2022-2023 ರವರೆಗೆ ಮಾರಾಟವಾದ ಸುಮಾರು 12,000 ಕೋಟಿ ರುಪಾಯಿಗಳ ಒಟ್ಟು ಎಲೆಕ್ಟೋರಲ್ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಾಂಡ್‌ಗಳನ್ನು ಬಿಜೆಪಿ ಸ್ವೀಕರಿಸಿದೆ. ಅಲ್ಲದೇ, ಈ ಐದು ವರ್ಷಗಳ ಅವಧಿಯಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕೇವಲ 9.5% ರಷ್ಟು 1,135 ಕೋಟಿ ರುಪಾಯಿ ಬಾಂಡ್‌ಗಳನ್ನು ಕಾಂಗ್ರೇಸ್‌ ಹಾಗೂ ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 1,096 ಕೋಟಿ ರೂಪಾಯಿಗಳನ್ನು ಪಡೆದಿದೆ. 2017ರಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ತಂದಿರುವ ಎಲೆಕ್ಟೋರಲ್ ಬಾಂಡ್ [&#8230;]]]></description>
										<content:encoded><![CDATA[
<p>2017-2018 ರಿಂದ 2022-2023 ರವರೆಗೆ ಮಾರಾಟವಾದ ಸುಮಾರು 12,000 ಕೋಟಿ ರುಪಾಯಿಗಳ ಒಟ್ಟು ಎಲೆಕ್ಟೋರಲ್ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಾಂಡ್‌ಗಳನ್ನು ಬಿಜೆಪಿ ಸ್ವೀಕರಿಸಿದೆ. </p>



<p>ಅಲ್ಲದೇ, ಈ ಐದು ವರ್ಷಗಳ ಅವಧಿಯಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕೇವಲ 9.5% ರಷ್ಟು 1,135 ಕೋಟಿ ರುಪಾಯಿ ಬಾಂಡ್‌ಗಳನ್ನು ಕಾಂಗ್ರೇಸ್‌ ಹಾಗೂ ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 1,096 ಕೋಟಿ ರೂಪಾಯಿಗಳನ್ನು ಪಡೆದಿದೆ.</p>



<p>2017ರಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ತಂದಿರುವ ಎಲೆಕ್ಟೋರಲ್ ಬಾಂಡ್ (Eelectoral bonds) ಯೋಜನೆಯು ಅಸಂವಿಧಾನಿಕ ಮತ್ತು ಮಾಹಿತಿ ಹಕ್ಕು ಹಾಗೂ <a href="https://indiankanoon.org/doc/1218090/" data-type="link" data-id="https://indiankanoon.org/doc/1218090/">19(1)(ಎ) ವಿಧಿ</a>ಯನ್ನು ಉಲ್ಲಂಘಿಸುತ್ತದೆ ಎಂದು ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 2017 ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಲು ನ್ಯಾಯಾಲಯವು ಎಂಟು ವರ್ಷಗಳನ್ನು ತೆಗೆದುಕೊಂಡಿತು ಅಲ್ಲದೇ ಈ ಯೋಜನೆಯನ್ನು ರದ್ದು ಮಾಡಲು ಈ ಹಿಂದೆ ನಿರಾಕರಿಸಿತ್ತು. ಈ ವರ್ಷದ ಜನವರಿಯಲ್ಲಿ ನೂರಾರು ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾರಾಟ ಮಾಡಿದೆ.</p>



<p>ಹಾಗಾದರೆ ಈ ಯೋಜನೆಯಿಂದ ಯಾರು ಹೆಚ್ಚು ಲಾಭ ಪಡೆದರು ಮತ್ತು ನ್ಯಾಯಾಲಯದಿಂದ ವಿಳಂಬವಾದ ನಿರ್ಧಾರದಿಂದ ಯಾರಿಗೆ ಹೆಚ್ಚು ಪ್ರಯೋಜನವಾಗಿದೆ?</p>



<p>ಇತ್ತೀಚಿನ ಕಂತು ಸೇರಿದಂತೆ ಒಟ್ಟು 16,518.11 ಕೋಟಿ ರುಪಾಯಿಗಳ ಎಲೆಕ್ಟೋರಲ್ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದುವರೆಗೆ ಮಾರಾಟ ಮಾಡಿದೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="948" height="913" src="https://peepalmedia.com/wp-content/uploads/2024/03/image-2.png" alt="" class="wp-image-36705" style="width:458px;height:auto" srcset="https://peepalmedia.com/wp-content/uploads/2024/03/image-2.png 948w, https://peepalmedia.com/wp-content/uploads/2024/03/image-2-300x289.png 300w, https://peepalmedia.com/wp-content/uploads/2024/03/image-2-768x740.png 768w, https://peepalmedia.com/wp-content/uploads/2024/03/image-2-150x144.png 150w, https://peepalmedia.com/wp-content/uploads/2024/03/image-2-696x670.png 696w" sizes="(max-width: 948px) 100vw, 948px" /><figcaption class="wp-element-caption">ಮೂಲ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್</figcaption></figure></div>


<p>ಮೊದಲೇ ಹೇಳಿದಂತೆ, 2017-2018 ಮತ್ತು 2022-2023 ರ ನಡುವೆ ಮಾರಾಟವಾದ 12,008 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳಲ್ಲಿ ಸುಮಾರು 55% ಬಿಜೆಪಿಗೆ ಹೋಗಿದೆ. </p>



<p>2022-23ರಲ್ಲಿ ಬಿಜೆಪಿಯ ಒಟ್ಟು ಆದಾಯದ 54%, ಅಂದರೆ 2,120.06 ಕೋಟಿ ರುಪಾಯಿ ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು ದಿ ಹಿಂದೂ ಇತ್ತೀಚೆಗೆ ವರದಿ ಮಾಡಿದೆ. 2018 ಮತ್ತು 2023 ರ ನಡುವಿನ ಆರು ವರ್ಷಗಳ ಅವಧಿಯಲ್ಲಿ, ಬಿಜೆಪಿಯ ಒಟ್ಟು ದೇಣಿಗೆಯಲ್ಲಿ 52% ಕ್ಕಿಂತ ಹೆಚ್ಚು, ಅಂದರೆ 5271.9751 ಕೋಟಿ ರೂಪಾಯಿ ಮೌಲ್ಯ ಹಣ ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು <a href="https://adrindia.org/sites/default/files/Analysis_of_Donations_to_Registered_Recognised_Political_Parties_FY_2016-17_to_2021-22.pdf" data-type="link" data-id="https://adrindia.org/sites/default/files/Analysis_of_Donations_to_Registered_Recognised_Political_Parties_FY_2016-17_to_2021-22.pdf">ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್</a> ತಿಳಿಸಿದೆ.</p>



<p>2022-23ರಲ್ಲಿ ಚುನಾವಣಾ ಬಾಂಡ್‌ಗಳಿಂದ ಕಾಂಗ್ರೆಸ್ 171 ಕೋಟಿ ರೂಪಾಯಿ ದೇಣಿಗೆ ಪಡೆದಿತ್ತು.</p>



<p>ಪ್ರಾದೇಶಿಕ ಪಕ್ಷಗಳೂ ಕೂಡ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದಿವೆ. ಭಾರತ್ ರಾಷ್ಟ್ರ ಸಮಿತಿಯು 2022-23 ರಲ್ಲಿ ಎಲೆಕ್ಟೋರಲ್‌ ಬಾಂಡ್‌ಗಳ ಮೂಲಕ 529 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿ ಪ್ರಾದೇಶಿಕ ಪಕ್ಷಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಚುನಾವಣಾ ಬಾಂಡ್‌ಗಳ ಮೂಲಕ 329 ಕೋಟಿ ರುಪಾಯಿ ದೇಣಿಗೆ ಪಡೆದಿರುವ ಟಿಎಂಸಿ ಎರಡನೇ ಸ್ಥಾನದಲ್ಲಿದೆ. ಬಿಜೆಡಿ 152 ಕೋಟಿ ರುಪಾಯಿ ಮತ್ತು ವೈಎಸ್‌ಆರ್ ಕಾಂಗ್ರೆಸ್ 52 ಕೋಟಿ ರುಪಾಯಿ ದೇಣಿಗೆ ಪಡೆದಿವೆ. ಬಿಆರ್‌ಎಸ್ ಹೊರತುಪಡಿಸಿ ಈ ನಾಲ್ಕು ಪಕ್ಷಗಳು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದಿವೆ. ಟಿಎಂಸಿ 528 ಕೋಟಿ ರುಪಾಯಿ, ಡಿಎಂಕೆಗೆ 306 ಕೋಟಿ ರುಪಾಯಿ, ಬಿಜೆಡಿ 291 ಕೋಟಿ ರುಪಾಯಿ ಮತ್ತು ವೈಎಸ್‌ಆರ್‌ ಕಾಂಗ್ರೇಸ್ 60 ಕೋಟಿ‌ ರುಪಾಯಿ ಪಡೆದಿವೆ.</p>


<div class="wp-block-image">
<figure class="aligncenter size-large"><a href="https://peepalmedia.com/?attachment_id=36717"><img decoding="async" width="1024" height="427" src="https://peepalmedia.com/wp-content/uploads/2024/03/image-3-1024x427.png" alt="" class="wp-image-36717" srcset="https://peepalmedia.com/wp-content/uploads/2024/03/image-3-1024x427.png 1024w, https://peepalmedia.com/wp-content/uploads/2024/03/image-3-300x125.png 300w, https://peepalmedia.com/wp-content/uploads/2024/03/image-3-768x320.png 768w, https://peepalmedia.com/wp-content/uploads/2024/03/image-3-150x63.png 150w, https://peepalmedia.com/wp-content/uploads/2024/03/image-3-696x290.png 696w, https://peepalmedia.com/wp-content/uploads/2024/03/image-3-1068x445.png 1068w, https://peepalmedia.com/wp-content/uploads/2024/03/image-3.png 1300w" sizes="(max-width: 1024px) 100vw, 1024px" /></a><figcaption class="wp-element-caption"><a href="https://public.flourish.studio/visualisation/16811897/?utm_source=embed&amp;utm_campaign=visualisation/16811897" data-type="link" data-id="https://public.flourish.studio/visualisation/16811897/?utm_source=embed&amp;utm_campaign=visualisation/16811897">TEMPLATE CREDITS</a><br><a href="https://app.flourish.studio/%E2%80%A020762">Line, bar and pie charts</a> by <strong>Flourish team</strong></figcaption></figure></div>


<p><br>ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದ ಮೊದಲ ಸಾರ್ವತ್ರಿಕ ಚುನಾವಣೆಯಾದ 2019 ರ ಲೋಕಸಭಾ ಚುನಾವಣೆ ಇಲ್ಲಿಯ ವರೆಗೆ ಜಗತ್ತು ಕಂಡ ಅತ್ಯಂತ ದುಬಾರಿ ಚುನಾವಣೆಯಾಗಿದೆ ಎಂದು <a href="https://www.bloomberg.com/news/articles/2019-06-03/india-s-bitterly-fought-poll-becomes-the-world-s-most-expensive" data-type="link" data-id="https://www.bloomberg.com/news/articles/2019-06-03/india-s-bitterly-fought-poll-becomes-the-world-s-most-expensive">ಬ್ಲೂಮ್‌ಬರ್ಗ್ ವರದಿ</a> ಮಾಡಿದೆ . ಸುಮಾರು 8.7 ಶತಕೋಟಿ ಡಾಲರ್‌ಗಳನ್ನು ಈ ಚುನಾವಣೆಯಲ್ಲಿ ಭಾರತದ ರಾಜಕೀಯ ಪಕ್ಷಗಳು ಖರ್ಚು ಮಾಡಿದ್ದು, 2014ರ ಚುನಾವಣೆಗೆ ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ವ್ಯಯಿಸಲಾಗಿದೆ.  </p>



<p>ಎಲೆಕ್ಟೋರಲ್‌ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದಲೂ, ಸಾಮಾಜಿಕ ಕಾರ್ಯಕರ್ತರು ಮೋದಿ ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಯೋಜನೆ ಜಾರಿಗೆ ಬಂದಾಗ ಆಗಿನ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಕೇಂದ್ರ ಹಣಕಾಸು ಇಲಾಖೆ ನಿರ್ಲಕ್ಷ್ಯ ಮಾಡಿತ್ತು. ಯಾವುದೇ ರೀತಿಯ ಸಾರ್ವಜನಿಕ ಸಮಾಲೋಚನೆ ನಡೆಸದೆ ಇದನ್ನು ಹೇಗೆ ಜಾರಿಗೆ ತಂದರು ಎಂಬ ಬಗ್ಗೆ ಅನೇಕ ಆರ್ಥಿಕ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. </p>



<p>ಈ ಯೋಜನೆಯ ಬಗ್ಗೆ ನ್ಯಾಯಾಲಯಗಳಲ್ಲಿ ಪ್ರಶ್ನೆಗಳನ್ನು ಸಲ್ಲಿಸಲಾಯಿತು. ಈ ಯೋಜನೆಯು ಅನಾಮಧೇಯ ವ್ಯಕ್ತಿಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ಅನುಮತಿ ನೀಡುವ ಮೂಲಕ, ರಾಜಕೀಯ ಪಕ್ಷಗಳು ಮತ್ತು ದೊಡ್ಡ ದೊಡ್ಡ ಉದ್ಯಮಿಗಳ ನಡುವೆ ಅನೈತಿಕ ಸಂಬಂಧವನ್ನು ಏರ್ಪಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಲಿದೆ ಎಂದು ಆರೋಪಿಸಿದ್ದರು. ಸುಮಾರು ಏಳು ವರ್ಷಗಳ ನಂತರ, ಸುಪ್ರೀಂ ಕೋರ್ಟ್ ಆ ಎಲ್ಲಾ ಕಳವಳಗಳನ್ನು ಪರಿಗಣಿಸಿ ಇಲೆಕ್ಟೋರಲ್‌ ಬಾಂಡ್‌ಗಳನ್ನು ರದ್ದು ಮಾಡಿದೆ. ಖರೀದಿಸಿದ ಎಲ್ಲಾ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಿಡುಗಡೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನ್ಯಾಯಾಲಯವು ಆದೇಶಿಸಿದೆ.</p>



<p>(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಚುನಾವಣಾ ಬಾಂಡ್ ಪ್ರಕರಣದಲ್ಲಿ ಮಾರ್ಚ್ 6ರ ಗಡುವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟನ್ನು ಸಂಪರ್ಕಿಸಿರುವ ಹಿನ್ನಲೆಯಲ್ಲಿ ಈ ವರದಿ)</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="YSXEGDWcv0"><a href="https://peepalmedia.com/sbi-asks-supreme-court-for-time-till-june-end-to-hand-over-details-of-electoral-bonds/">ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ ಆಟವೇ?</a></blockquote><iframe class="wp-embedded-content" sandbox="allow-scripts" security="restricted"  title="&#8220;ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ ಆಟವೇ?&#8221; &#8212; Peepal Media" src="https://peepalmedia.com/sbi-asks-supreme-court-for-time-till-june-end-to-hand-over-details-of-electoral-bonds/embed/#?secret=u0MhQvsH3C#?secret=YSXEGDWcv0" data-secret="YSXEGDWcv0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
		<item>
		<title>ಅವೈಜ್ಞಾನಿಕ ನೀರಾವರಿ ಯೋಜನೆ: ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿದ ರೈತ ನಿಯೋಗ</title>
		<link>https://peepalmedia.com/unscientific-irrigation-projects-farmers-met-priyank-kharge/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jan 2024 08:18:50 +0000</pubDate>
				<category><![CDATA[ರಾಜ್ಯ]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[farmers]]></category>
		<category><![CDATA[india]]></category>
		<category><![CDATA[irrigation]]></category>
		<category><![CDATA[irrigation projects]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[priyank kharge]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[Unscientific]]></category>
		<category><![CDATA[Unscientific irrigation \]]></category>
		<category><![CDATA[Unscientific irrigation projects]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35429</guid>

					<description><![CDATA[ಬೆಂಗಳೂರು: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಗ್ರಾಮಪಂಚಾಯ್ತಿಗಳ ಮಟ್ಟದಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಕುಡಿಯುವ ನೀರಿನ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ರೈತರ ನಿಯೋಗ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿತು. ಸುಮಾರು 50ಕ್ಕೂ ಹೆಚ್ಚು ರೈತರು ಹಾಗೂ ಗ್ರಾಮಸ್ಥರನ್ನು ಒಳಗೊಂಡಿದ್ದ ನಿಯೋಗವು ಸಚಿವರಿಗೆ ತಳಮಟ್ಟದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಗಮನಕ್ಕೆ ತಂದಿತು. ಸುಮಾರು 350 ಕೋಟಿ ವೆಚ್ಚದಲ್ಲಿ ಕೇಂದ್ರದ ‘ಜಲ ಜೀವನ ಮಿಷನ್’ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಹಿಂದಿನ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ಗ್ರಾಮಪಂಚಾಯ್ತಿಗಳ ಮಟ್ಟದಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಕುಡಿಯುವ ನೀರಿನ ಅವೈಜ್ಞಾನಿಕ ಯೋಜನೆಯನ್ನು ಕೈಬಿಡುವಂತೆ ರೈತರ ನಿಯೋಗ ಶನಿವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿತು.</p>



<p>ಸುಮಾರು 50ಕ್ಕೂ ಹೆಚ್ಚು ರೈತರು ಹಾಗೂ ಗ್ರಾಮಸ್ಥರನ್ನು ಒಳಗೊಂಡಿದ್ದ ನಿಯೋಗವು ಸಚಿವರಿಗೆ ತಳಮಟ್ಟದಲ್ಲಿ ನಡೆಯುತ್ತಿರುವ ವಿಚಾರಗಳನ್ನು ಗಮನಕ್ಕೆ ತಂದಿತು. ಸುಮಾರು 350 ಕೋಟಿ ವೆಚ್ಚದಲ್ಲಿ ಕೇಂದ್ರದ ‘ಜಲ ಜೀವನ ಮಿಷನ್’ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಹಿಂದಿನ ಸರಕಾರದ ಕೊನೆಗಳಿಗೆಯಲ್ಲಿ ಅನುಮೋದನೆ ನೀಡಿಲಾಗಿತ್ತು. ಈ ಕುರಿತು ಸ್ಥಳೀಯರಿಗೆ ಹಾಗೂ ಯೋಜನೆಯ ಫಲಾನುಭವಿಗಳಿಗೆ ಯಾವುದೇ ಮಾಹಿತಿಯೂ ನೀಡಿರಲಿಲ್ಲ. ಸ್ಥಳೀಯ ಮಟ್ಟದಲ್ಲಿ ಯೋಜನೆಯಾಗಿ ಭೂಮಿ ಮಂಜೂರಾತಿಯಾಗುತ್ತಿದ್ದಂತೆ ಎಚ್ಚೆತ್ತ ಜನ ಸಾವಿರಾರು ಸಂಖ್ಯೆಯಲ್ಲಿ ತೀರ್ಥಹಳ್ಳಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದ್ದರು. ಇದೀಗ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಭೇಟಿ ಮಾಡಿದ ನಿಯೋಗವು ಯೋಜನೆಯು ಅನುಷ್ಠಾನದ ನೆಪದಲ್ಲಿ ನಡೆಯುತ್ತಿರುವ ಬಾನಗಡಿಗಳನ್ನು ಗಮನಕ್ಕೆ ತಂದಿತು.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="968" height="534" src="https://peepalmedia.com/wp-content/uploads/2024/01/image-19.png" alt="" class="wp-image-35432" style="width:569px;height:auto" srcset="https://peepalmedia.com/wp-content/uploads/2024/01/image-19.png 968w, https://peepalmedia.com/wp-content/uploads/2024/01/image-19-300x165.png 300w, https://peepalmedia.com/wp-content/uploads/2024/01/image-19-768x424.png 768w, https://peepalmedia.com/wp-content/uploads/2024/01/image-19-150x83.png 150w, https://peepalmedia.com/wp-content/uploads/2024/01/image-19-696x384.png 696w" sizes="auto, (max-width: 968px) 100vw, 968px" /></figure></div>


<p>“ತಾವು ವಿಕೇಂದ್ರಿಕರಣದಲ್ಲಿ ನಂಬಿಕೆ ಮತ್ತು ಶ್ರದ್ಧೆಯನ್ನು ಹೊಂದಿದವರು. ಜಲ ಜೀವನ್ ಮಿಷನ್ ಮತ್ತು ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನೆಪದಲ್ಲಿ ವಿಕೇಂದ್ರೀಕರಣದ ಕಲ್ಪನೆಯನ್ನೆ ತಿರಸ್ಕರಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿನ ವಿಕೇಂದ್ರಿಕರಣ ಯೋಜನೆಯು ಸದರಿ ಗ್ರಾಮಗಳ ಪ್ರಗತಿಗೆ ತೀವ್ರ ಧಕ್ಕೆ ತರಲಿದ್ದು, ಮಳೆನಾಡು ಎಂದು ಕರೆಸಿಕೊಳ್ಳುವ ಮಲೆನಾಡಿನಲ್ಲಿ ಮುಂದಿನ ದಿನಗಳಲ್ಲಿ ನೀರು ಸರಬರಾಜಿನ ವಿಚಾರದಲ್ಲಿ ತೀವ್ರ ಗೊಂದಲ ಮತ್ತು ಹಾಹಾಕಾರಗಳು ಉದ್ಭವಿಸುವುದು ಖಚಿತ,” ಎಂದು ನಿಯೋಗದ ಮುಖಂಡತ್ವ ವಹಿಸಿದ್ದ ರೈತ ನಾಯಕ ಕೋಡ್ಲು ವೆಂಕಟೇಶ್ ಸಚಿವರಿಗೆ ಮನದಟ್ಟು ಮಾಡಿಸಿದರು.</p>



<p>“ತೀರ್ಥಹಳ್ಳಿ ತಾಲೂಕಿನಲ್ಲಿ ತಮ್ಮ ಇಲಾಖೆ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಮೇಲ್ಕಂಡ ಕುಡಿಯುವ ನೀರಿನ ಯೋಜನೆ ಕೇಂದ್ರೀಕರಣಕ್ಕೆ ಮಾತ್ರ ಒತ್ತುನೀಡಿದ್ದು, ಗ್ರಾಮ ಪಂಚಾಯ್ತಿಗಳ ಸ್ವಾಯತ್ಥತೆಗೆ ಧಕ್ಕೆ ತರುವ ಸ್ವರೂಪದ ಯೋಜನೆ ಆಗಿದೆ. ಇದರಿಂದಾಗಿ ಬೇಸಿಗೆ ಸಮಯದಲ್ಲಿ ಮಲೆನಾಡಿನ ಜೀವನಾಡಿಯಾದ ತುಂಗಾ ನದಿಯ ಹರಿವು ನಿಂತು ಹೋಗುವ ಸಾಧ್ಯತೆಯೂ ಇದೆ,’’ ಎಂದು ಕೋಡ್ಲು ವೆಂಕಟೇಶ್ ಆತಂಕವನ್ನು ಹಂಚಿಕೊಂಡರು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="768" src="https://peepalmedia.com/wp-content/uploads/2024/01/image-20-1024x768.png" alt="" class="wp-image-35434" style="width:548px;height:auto" srcset="https://peepalmedia.com/wp-content/uploads/2024/01/image-20-1024x768.png 1024w, https://peepalmedia.com/wp-content/uploads/2024/01/image-20-300x225.png 300w, https://peepalmedia.com/wp-content/uploads/2024/01/image-20-768x576.png 768w, https://peepalmedia.com/wp-content/uploads/2024/01/image-20-1536x1153.png 1536w, https://peepalmedia.com/wp-content/uploads/2024/01/image-20-150x113.png 150w, https://peepalmedia.com/wp-content/uploads/2024/01/image-20-696x522.png 696w, https://peepalmedia.com/wp-content/uploads/2024/01/image-20-1068x802.png 1068w, https://peepalmedia.com/wp-content/uploads/2024/01/image-20.png 1599w" sizes="auto, (max-width: 1024px) 100vw, 1024px" /></figure></div>


<p>“ಸ್ಥಳೀಯ ಆಡಳಿತ ರೈತರ ಮತ್ತು ಗ್ರಾಮಸ್ಥರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ನೀರಿನ ಶುದ್ಧೀಕರಣ ಘಟಕ- ವಾಟರ್ ಟ್ರೀಟ್‌ಮೆಂಟ್ ಪ್ಲಾಂಟ್‌(ಡಬ್ಲ್ಯೂಟಿಪಿ)ನ್ನು ಮೂಲ ಯೋಜನೆಯಲ್ಲಿ ಗುರುತಿಸಿದಂತೆ ತುಂಗಾ ನದಿ ದಡದಲ್ಲಿಯೇ ಮುಂದುವರಿಸುವ ಹಠಮಾರಿತಕ್ಕೆ ಬಿದ್ದಿದೆ. ಈ ಮೇಲಿನ ಕಾರಣಗಳಿಂದಾಗಿ, ತುಂಗಾ ನದಿಯ ಇಕ್ಕೆಲ ದಡಗಳ ನಿವಾಸಿಗಳು ಮತ್ತು ರೈತರು ಭವಿಷ್ಯದ ಆತಂಕದಲ್ಲೇ ಕಾಲಕಳೆಯುತ್ತಿದ್ದಾರೆ. ಹಾಗೆಯೇ, ಗ್ರಾಮ ಪಂಚಾಯ್ತಿಗಳು ವಿವಿಧ ಗ್ರಾಮಗಳಲ್ಲಿನ ನೀರಿನ ಮೂಲಗಳನ್ನು ಅಭಿವೃದ್ಧಿಪಡಿಸಲು ಮತ್ತು ಬಳಸಲು ವಿಫಲರಾಗುತ್ತಿದ್ದಾರೆ ಮತ್ತು ವಿಕೇಂದ್ರಿಕರಣದ ಆಶಯಗಳಿಂದ ವಿಮುಖರನ್ನಾಗಿ ಮಾಡಲಾಗುತ್ತಿದೆ,’’ ಎಂದು ಅವರು ತಿಳಿಸಿದರು.</p>



<p>ಮಾಧ್ಯಮಗಳ ಜತೆ ಮಾತನಾಡಿದ ರೈತ ಮುಖಂಡರು, “ತೀರ್ಥಹಳ್ಳಿಯಂಥ ಮಲೆನಾಡ ಪ್ರತಿ ಗ್ರಾಮಗಳಲ್ಲಿ ನೀರಿನ ಮೂಲಗಳು ಇದ್ಧೆ ಇವೆ. ಅವುಗಳನ್ನೇ ಅಭಿವೃದ್ಧಿಪಡಿಸಿ ಗ್ರಾಮಗಳ ಕುಡಿಯುವ ನೀರಿನ ಸ್ವಾವಲಂಬನೆಯನ್ನ ಕಾಪಾಡಬೇಕಿದೆ. ಈ ಹಿನ್ನೆಲೆಯಲ್ಲಿ ವಿಕೇಂದ್ರಿಕರಣ ವಿರೋಧಿ, ಅವೃಜ್ಞಾನಿಕ, ಭ್ರಷ್ಟತೆಯ ಗುಣಲಕ್ಷಣಗಳನ್ನು ಒಳಗೊಂಡಿರುವ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಸಚಿವರಲ್ಲಿ ಅವಹಾಲು ಸಲ್ಲಿಸಿದೆವು,’’ ಎಂದು ತಿಳಿಸಿದರು.</p>



<p>ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, “ರೈತರ ಅವಹಾಲವನ್ನು ಆಲಿಸಿದ್ದೇನೆ. ಅವರು ನೀರಾವರಿ ಯೋಜನೆಗೇ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಿಗೆ ಅವೈಜ್ಞಾನಿಕ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬುದು ಅವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಅಧಿಕಾರಿಗಳು ಹಾಗೂ ರೈತರ ಸಭೆಯನ್ನು ಕರೆಯಲು ಎಸಿಎಸ್‌ಗೆ ಸೂಚಿಸಿದ್ದೇನೆ,’’ ಎಂದು ಮಾಧ್ಯಮಗಳಿಗೆ ತಿಳಿಸಿದರು.</p>



<p>ಇಲಾಖೆ ಮೂಲಗಳ ಪ್ರಕಾರ, ಫೆಬ್ರವರಿ 1ರಂದು ಬೆಂಗಳೂರಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತೀರ್ಥಹಳ್ಳಿ ರೈತರ ಸಭೆಯನ್ನು ಕರೆಯಲಾಗಿದ್ದು, ಜಲ ಜೀವನ ಮಿಷನ್ ಅಡಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವ ಯೋಜನೆಯ ಹಣೆಬರಹ ತೀರ್ಮಾನವಾಗಲಿದೆ.</p>
]]></content:encoded>
					
		
		
			</item>
		<item>
		<title>ಕರಣ್‌ ಥಾಪರ್‌ ಹೆಸರಿನಲ್ಲಿ ಬಿಟ್‌ಕಾಯಿನ್‌ ಸ್ಕ್ಯಾಮ್‌! ಮೋಸ ಹೋಗದಿರಿ</title>
		<link>https://peepalmedia.com/bit-coin-scam-in-karan-thaphar-name/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 08 Nov 2023 12:37:47 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[bit coin]]></category>
		<category><![CDATA[breaking news]]></category>
		<category><![CDATA[fake]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Karan Thapar]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[scammer]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31589</guid>

					<description><![CDATA[ಬೆಂಗಳೂರು: “ಹೇಯ್….ನೀವು ನಿಮ್ಮ ಹಣವನ್ನು ಡಬಲ್‌ ಮಾಡ್ಬೇಕಾ? ಇಪ್ಪತ್ತಾರು ಸಾವಿರ ಹಾಕಿ ನಿಮ್ಮ ಹಣ ಡಬಲ್‌ ಮಾಡಬಹುದು. ಬಿಟ್‌ ಕಾಯಿನ್‌ ಮೇಲೆ ಇನ್ವೆಸ್ಟ್‌ ಮಾಡಿ…” ಎಂಬ ನಿಮ್ಮ ಫೇಸ್ಬುಕ್‌, ಇನ್ಸ್ಟಾ ಎಲ್ಲಾ ಕಡೆ ಪಾಪಪ್‌ ಅಗುವ ಮೆಸೆಜ್‌ಗಳನ್ನು ನೀವು ನೋಡಿರಬಹುದು. ನೀವು ಇದನ್ನು ನಂಬಿ ದುಡ್ಡು ಹಾಕಿದರೆ, ಪಂಗನಾಮ ಗ್ಯಾರಂಟಿ. ಈ ಬಾರಿ, ಈ ಸ್ಕ್ಯಾಮರ್‌ಗಳು ತಮ್ಮ ಸ್ಕ್ಯಾಮನ್ನು ಪ್ರಚಾರ ಮಾಡಲು ಬಳಸಿಕೊಂಡದ್ದು ಬೇರೆ ಯಾರನ್ನೂ ಅಲ್ಲ, ತನ್ನ ಪ್ರಶ್ನೆಗಳ ಮೂಲಕವೇ ಬೆವರಿಳಿಸಿ, ನೀರು ಕುಡಿಸುತ್ತಿದ್ದ ಖ್ಯಾತ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> “ಹೇಯ್….ನೀವು ನಿಮ್ಮ ಹಣವನ್ನು ಡಬಲ್‌ ಮಾಡ್ಬೇಕಾ? ಇಪ್ಪತ್ತಾರು ಸಾವಿರ ಹಾಕಿ ನಿಮ್ಮ ಹಣ ಡಬಲ್‌ ಮಾಡಬಹುದು. ಬಿಟ್‌ ಕಾಯಿನ್‌ ಮೇಲೆ ಇನ್ವೆಸ್ಟ್‌ ಮಾಡಿ…” ಎಂಬ ನಿಮ್ಮ ಫೇಸ್ಬುಕ್‌, ಇನ್ಸ್ಟಾ ಎಲ್ಲಾ ಕಡೆ ಪಾಪಪ್‌ ಅಗುವ ಮೆಸೆಜ್‌ಗಳನ್ನು ನೀವು ನೋಡಿರಬಹುದು.</p>



<p>ನೀವು ಇದನ್ನು ನಂಬಿ ದುಡ್ಡು ಹಾಕಿದರೆ, ಪಂಗನಾಮ ಗ್ಯಾರಂಟಿ.</p>



<p>ಈ ಬಾರಿ, ಈ <a href="https://peepalmedia.com/earn-rs-20000-daily-scam/" data-type="link" data-id="https://peepalmedia.com/earn-rs-20000-daily-scam/">ಸ್ಕ್ಯಾಮರ್‌ಗಳು</a> ತಮ್ಮ ಸ್ಕ್ಯಾಮನ್ನು ಪ್ರಚಾರ ಮಾಡಲು ಬಳಸಿಕೊಂಡದ್ದು ಬೇರೆ ಯಾರನ್ನೂ ಅಲ್ಲ, ತನ್ನ ಪ್ರಶ್ನೆಗಳ ಮೂಲಕವೇ ಬೆವರಿಳಿಸಿ, ನೀರು ಕುಡಿಸುತ್ತಿದ್ದ ಖ್ಯಾತ ಸಂದರ್ಶಕ ಕರಣ್‌ ಥಾಪರ್!‌ ಕರಣ್‌ ಥಾಪರ್‌ರವರು ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರನ್ನು, ಸಾಹಿತಿಗಳನ್ನು, ಸಿನೇಮಾ ತಾರೆಗಳನ್ನು, ನೋಬೆಲ್‌ ಪುರಸ್ಕೃತರನ್ನು ಸಂದರ್ಶನ ಮಾಡಿ ಹೆಸರಾದವರು. ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಅವರ ಜೊತೆಗಿನ ʼಪುಲ್ವಾಮ ದಾಳಿʼಯ ಬಗೆಗಿನ ಸಂದರ್ಶನ ದೇಶದಾದ್ಯಂತ ಚರ್ಚೆಯಾಗಿತ್ತು. ಇನ್ಫೋಟೈನ್‌ಮೆಂಟ್ ಟೆಲಿವಿಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಅಧ್ಯಕ್ಷರಾಗಿರುವ ಥಾಪರ್, ಸದ್ಯ ದಿ ವೈರ್‌ನಲ್ಲಿ ಸಂದರ್ಶನಗಳನ್ನು ನಡೆಸಿಕೊಡುತ್ತಾರೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="499" src="https://peepalmedia.com/wp-content/uploads/2023/11/image-20-1024x499.png" alt="" class="wp-image-31593" style="width:522px;height:auto" srcset="https://peepalmedia.com/wp-content/uploads/2023/11/image-20-1024x499.png 1024w, https://peepalmedia.com/wp-content/uploads/2023/11/image-20-300x146.png 300w, https://peepalmedia.com/wp-content/uploads/2023/11/image-20-768x374.png 768w, https://peepalmedia.com/wp-content/uploads/2023/11/image-20-1536x748.png 1536w, https://peepalmedia.com/wp-content/uploads/2023/11/image-20-150x73.png 150w, https://peepalmedia.com/wp-content/uploads/2023/11/image-20-696x339.png 696w, https://peepalmedia.com/wp-content/uploads/2023/11/image-20-1068x520.png 1068w, https://peepalmedia.com/wp-content/uploads/2023/11/image-20.png 1917w" sizes="auto, (max-width: 1024px) 100vw, 1024px" /></figure></div>


<p>ಕರಣ್‌ ಥಾಪರ್‌ರನ್ನು ಪತ್ರಕರ್ತೆ ಪೂಜಿತಾ ದೇವರಾಜು ಸನ್‌ ಟಿವಿಯಲ್ಲಿ ಸಂದರ್ಶನ ಮಾಡಿರುವುದಾಗಿ, ಈ ಸಂದರ್ಶನದ ಪಠ್ಯವನ್ನು ಹಾಗೂ ತಿರುಚಲ್ಪಟ್ಟ ಫೋಟೋಗಳನ್ನು ಬಳಸಿ BBC.INDIA ಹಾಗೂ SUNTV ಹೆಸರಿನಲ್ಲಿ ಫೇಕ್‌ ವೆಬ್‌ಸೈಟ್‌ ಸೃಷ್ಟಿಸಿ ಪ್ರಕಟಿಸಲಾಗಿದೆ. ಈ ಸುಳ್ಳು ವರದಿಯಲ್ಲಿ<a href="https://peepalmedia.com/earn-rs-20000-daily-scam/" data-type="link" data-id="https://peepalmedia.com/earn-rs-20000-daily-scam/"> ಸ್ಕ್ಯಾಮರ್‌ಗಳು</a> ತಮ್ಮ Immediate Bitwave  ವೆಬ್‌ಸೈಟ್‌ನ (octshareb.com) ಲಿಂಕ್‌ ಅನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿದ್ದಾರೆ.</p>



<p>octshareb.com ಎಂಬ ಲಿಂಕ್‌ನಲ್ಲಿ ಇರುವ ಬಿಬಿಸಿ ನ್ಯೂಸನ್ನು ಹೋಲುವ ವೆಬ್‌ಸೈಟ್‌ ಒಂದನ್ನು ಇವರು ಸೃಷ್ಟಿಸಿದ್ದಾರೆ. ಈ ಲಿಂಕನ್ನು ತೆರೆದಾಗ ನಾವು ಸಹಜವಾಗಿಯೇ ಇದು ಬಿಬಿಸಿ ಇಂಡಿಯಾದ ವೆಬ್‌ ಪೋರ್ಟಲ್‌ ಎಂಬಂತೆ ತೋರುತ್ತದೆ. ಆದರೆ, ಬಿಬಿಸಿಯ ಲೋಗೋ ಮೇಲೆ ನಾವು ಕ್ಲಿಕ್‌ ಮಾಡಿದರೆ ಅದು ಹೋಮ್‌ ಪೇಜಿಗೆ ತೆರೆದುಕೊಳ್ಳುವುದಿಲ್ಲ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="508" src="https://peepalmedia.com/wp-content/uploads/2023/11/wertyjk-1024x508.jpg" alt="" class="wp-image-31602" style="width:532px;height:auto" srcset="https://peepalmedia.com/wp-content/uploads/2023/11/wertyjk-1024x508.jpg 1024w, https://peepalmedia.com/wp-content/uploads/2023/11/wertyjk-300x149.jpg 300w, https://peepalmedia.com/wp-content/uploads/2023/11/wertyjk-768x381.jpg 768w, https://peepalmedia.com/wp-content/uploads/2023/11/wertyjk-1536x763.jpg 1536w, https://peepalmedia.com/wp-content/uploads/2023/11/wertyjk-150x74.jpg 150w, https://peepalmedia.com/wp-content/uploads/2023/11/wertyjk-696x346.jpg 696w, https://peepalmedia.com/wp-content/uploads/2023/11/wertyjk-1068x530.jpg 1068w, https://peepalmedia.com/wp-content/uploads/2023/11/wertyjk.jpg 1887w" sizes="auto, (max-width: 1024px) 100vw, 1024px" /></figure></div>


<p>ಮಾತ್ರವಲ್ಲ, ಈ ಬಿಬಿಸಿ ಪೇಕ್‌ ವೆಬ್‌ಸೈಟ್‌ ನಲ್ಲಿ ಬಿಬಿಸಿ ಎಪ್ರಿಲ್‌  10ರಂದು ಪ್ರಕಟಿಸಿದ China aircraft carrier &#8216;seals off&#8217; Taiwan in drill, Nashville council to hold vote on expelled lawmaker, What does the huge leak of Ukraine war documents tell us? ಎಂಬ ಮೂರು ವರದಿಗಳನ್ನು ಕ್ರಮವಾಗಿ ಒಂದು ಗಂಟೆ, 29 ನಿಮಿಷ, ಐದು ಗಂಟೆಗಳ ಹಿಂದಿನ ಪ್ರಕಟಣೆ ಎಂಬಂತೆ ಎಡಿಟ್‌ ಮಾಡಲಾಗಿದೆ. ಆದರೆ ಈ ವರದಿಗಳ ಮೇಲೆ ಕ್ಲಿಕ್‌ ಮಾಡಿದರೆ, ಇದು ತೆರೆದುಕಳ್ಳುವುದಿಲ್ಲ. ಬದಲಾಗಿ, ಈ ವರದಿಗಳ ಹೆಡ್‌ಲೈನ್‌ಗಳನ್ನು ಕಾಪಿ ಮಾಡಿ ಸರ್ಚ್‌ ಇಂಜಿನ್‌ನಲ್ಲಿ ಹುಡುಕಿದರೆ, ಬಿಬಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಎಪ್ರಿಲ್‌ 10ರಂದು ಪ್ರಕಟಿಸಿರುವ ಈ ವರದಿಗಳನ್ನು ಓದಬಹುದು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="499" src="https://peepalmedia.com/wp-content/uploads/2023/11/image-23-1024x499.png" alt="" class="wp-image-31596" style="width:446px;height:auto" srcset="https://peepalmedia.com/wp-content/uploads/2023/11/image-23-1024x499.png 1024w, https://peepalmedia.com/wp-content/uploads/2023/11/image-23-300x146.png 300w, https://peepalmedia.com/wp-content/uploads/2023/11/image-23-768x374.png 768w, https://peepalmedia.com/wp-content/uploads/2023/11/image-23-1536x749.png 1536w, https://peepalmedia.com/wp-content/uploads/2023/11/image-23-150x73.png 150w, https://peepalmedia.com/wp-content/uploads/2023/11/image-23-696x339.png 696w, https://peepalmedia.com/wp-content/uploads/2023/11/image-23-1068x521.png 1068w, https://peepalmedia.com/wp-content/uploads/2023/11/image-23.png 1904w" sizes="auto, (max-width: 1024px) 100vw, 1024px" /></figure></div>


<p>ಪೂಜಿತಾರವರು ಕರಣ್‌ರನ್ನು ಸಂದರ್ಶನ ಮಾಡಿದ್ದಾರೆ ಎಂದು ಬಿಂಬಿಸಲಾಗಿರುವ ಈ ವರದಿಯಲ್ಲಿ ಪೂಜಿತಾ, “ನೀವು ತುಂಬಾ ಲೇಜೀ, ಒಂದು ವರ್ಷದ ಹಿಂದೆ ನಿಮ್ಮಲ್ಲಿ ಹಳೇಯ ಕಾರು, ಸಣ್ಣ ಅಪಾರ್ಟ್‌ಮೆಂಟ್‌ ಇತ್ತು. ಈಗ ದೊಡ್ಡ ಅಪಾರ್ಟ್‌ ಮೆಂಟ್‌, ಹೊಸ ಕಾರು ಎಲ್ಲಾ ಇದೆ. ಎಲ್ಲಿಂದ ಬಂತು ಕಾಸು?” ಎಂದು ಕೇಳುತ್ತಾರೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="842" height="862" src="https://peepalmedia.com/wp-content/uploads/2023/11/image-27.png" alt="" class="wp-image-31600" style="width:275px;height:auto" srcset="https://peepalmedia.com/wp-content/uploads/2023/11/image-27.png 842w, https://peepalmedia.com/wp-content/uploads/2023/11/image-27-293x300.png 293w, https://peepalmedia.com/wp-content/uploads/2023/11/image-27-768x786.png 768w, https://peepalmedia.com/wp-content/uploads/2023/11/image-27-150x154.png 150w, https://peepalmedia.com/wp-content/uploads/2023/11/image-27-300x307.png 300w, https://peepalmedia.com/wp-content/uploads/2023/11/image-27-696x713.png 696w" sizes="auto, (max-width: 842px) 100vw, 842px" /></figure></div>


<p>ಆಗ ಕರಣ್‌ ಥಾಪರ್‌ ತಮ್ಮ ಫೋನಿನಲ್ಲಿ ಇಮಿಡಿಯೆಟ್‌ ಬಿಟ್‌ ವೇವ್‌ನ ಲಿಂಕ್‌ ಓಪನ್‌ ಮಾಡಿ ತೋರಿಸುತ್ತಾರೆ. ಇದರಲ್ಲಿ ಹೇಗೆ 26 000 ಕಾಸು ಹಾಕಿ ಹಣ ಹೆಚ್ಚಿಸಿಕೊಳ್ಳಬಹುದು ಎಂದು ಹೇಳುತ್ತಾರೆ.</p>



<p>ಸ್ವತಃ ಪೂಜಿತಾರವರ ಫೋನನ್ನು ತೆಗೆದುಕೊಂಡು 26000 ಇನ್ವೆಸ್ಟ್‌ ಮಾಡಿ, ಸ್ವಲ್ಪ ಸಮಯಯದ ನಂತರ 31 094 ಆಗಿದ್ದನ್ನು ಅವರು ತೋರಿಸುತ್ತಾರೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="570" src="https://peepalmedia.com/wp-content/uploads/2023/11/image-22-1024x570.png" alt="" class="wp-image-31595" style="width:426px;height:auto" srcset="https://peepalmedia.com/wp-content/uploads/2023/11/image-22-1024x570.png 1024w, https://peepalmedia.com/wp-content/uploads/2023/11/image-22-300x167.png 300w, https://peepalmedia.com/wp-content/uploads/2023/11/image-22-768x427.png 768w, https://peepalmedia.com/wp-content/uploads/2023/11/image-22-1536x854.png 1536w, https://peepalmedia.com/wp-content/uploads/2023/11/image-22-150x83.png 150w, https://peepalmedia.com/wp-content/uploads/2023/11/image-22-696x387.png 696w, https://peepalmedia.com/wp-content/uploads/2023/11/image-22-1068x594.png 1068w, https://peepalmedia.com/wp-content/uploads/2023/11/image-22.png 1690w" sizes="auto, (max-width: 1024px) 100vw, 1024px" /></figure></div>


<p>ಈ ವರದಿಯಲ್ಲಿ ಲಿಂಕ್‌ಅನ್ನು ಮಧ್ಯ ನೀಡಿರುವುದರಿಂದ, ಈ ವರದಿಯನ್ನು ಓದುವ ಓದುಗ ಈ ವಿಚಾರ ಸತ್ಯವೆಂದು ತಿಳಿದು, ಲಿಂಕ್‌ ತೆರೆದು ಹಣ ಹೂಡುವಂತೆ ಮಾಡುವುದು ಈ ಸ್ಕ್ಯಾಮರ್‌ಗಳ ತಂತ್ರ.</p>



<p>ಇದನ್ನೂ ಓದಿ: <a href="https://peepalmedia.com/earn-rs-20000-daily-scam/" data-type="link" data-id="https://peepalmedia.com/earn-rs-20000-daily-scam/">“ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ</a></p>



<p>ಇದರ ಜೊತೆಗೆ, ಬಿಬಿಸಿ ಇಂಡಿಯಾದ ಸುದ್ದಿ ಸಂಪಾದಕ ಎಂದು ಅಮೀರ್‌ ಪಾಲೇಕರ್‌ ಎಂಬ ಫೋಟೋವನ್ನು ಬಳಸಿ, ಕರಣ್‌ ಥಾಪರ್‌ ಹೇಳಿದ ವೆಬ್‌ಸೈಟಿನಿಂದ ತಾನೂ ಹಣ ಸಂಪಾದಿಸಿದ್ದಾಗಿ ಬರೆಯಲಾಗಿದೆ. ಜೊತೆಗೆ, ಹಣ ಜಮೆಯಾದ ಸುಳ್ಳು ಬ್ಯಾಂಕ್ ವಿವರಗಳನ್ನೂ ನೀಡಲಾಗಿದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="748" height="449" src="https://peepalmedia.com/wp-content/uploads/2023/11/image-24.png" alt="" class="wp-image-31597" style="width:476px;height:auto" srcset="https://peepalmedia.com/wp-content/uploads/2023/11/image-24.png 748w, https://peepalmedia.com/wp-content/uploads/2023/11/image-24-300x180.png 300w, https://peepalmedia.com/wp-content/uploads/2023/11/image-24-150x90.png 150w, https://peepalmedia.com/wp-content/uploads/2023/11/image-24-696x418.png 696w" sizes="auto, (max-width: 748px) 100vw, 748px" /></figure></div>

<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="543" src="https://peepalmedia.com/wp-content/uploads/2023/11/image-25-1024x543.png" alt="" class="wp-image-31598" style="width:432px;height:auto" srcset="https://peepalmedia.com/wp-content/uploads/2023/11/image-25-1024x543.png 1024w, https://peepalmedia.com/wp-content/uploads/2023/11/image-25-300x159.png 300w, https://peepalmedia.com/wp-content/uploads/2023/11/image-25-768x407.png 768w, https://peepalmedia.com/wp-content/uploads/2023/11/image-25-150x80.png 150w, https://peepalmedia.com/wp-content/uploads/2023/11/image-25-696x369.png 696w, https://peepalmedia.com/wp-content/uploads/2023/11/image-25-1068x567.png 1068w, https://peepalmedia.com/wp-content/uploads/2023/11/image-25.png 1212w" sizes="auto, (max-width: 1024px) 100vw, 1024px" /></figure></div>


<p>ಈ ವರದಿಯಲ್ಲಿ, ಕರಣ್ ಥಾಪರ್‌ ಹಾಗೂ ಪೂಜಿತಾರ ಫೋಟೋಗಳನ್ನು ಸನ್‌ ಟಿವಿಯ ಲೋಗೋದ ಜೊತೆಗೆ ಬಳಸಲಾಗಿದೆ. ಹೀಗಾಗಿ, ಓದುಗ ಈ ಸಂದರ್ಶನವನ್ನು ಸತ್ಯ ಎಂದು ತಿಳಿಯುತ್ತಾನೆ. ಕರಣ್‌ ಥಾಪರ್‌ರಂತಹ ಖ್ಯಾತನಾಮರು ಇಂತಹ ಬಿಟ್‌ ಕಾಯಿನ್‌ ಹೂಡಿಕೆಯನ್ನು ಮಾಡುವಾಗ ತಾವೂ ಮಾಡಬಹುದು ಎಂಬಂತೆ ಪ್ರೇರೇಪಿಸುತ್ತದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="835" height="891" src="https://peepalmedia.com/wp-content/uploads/2023/11/image-26.png" alt="" class="wp-image-31599" style="width:360px;height:auto" srcset="https://peepalmedia.com/wp-content/uploads/2023/11/image-26.png 835w, https://peepalmedia.com/wp-content/uploads/2023/11/image-26-281x300.png 281w, https://peepalmedia.com/wp-content/uploads/2023/11/image-26-768x820.png 768w, https://peepalmedia.com/wp-content/uploads/2023/11/image-26-150x160.png 150w, https://peepalmedia.com/wp-content/uploads/2023/11/image-26-300x320.png 300w, https://peepalmedia.com/wp-content/uploads/2023/11/image-26-696x743.png 696w" sizes="auto, (max-width: 835px) 100vw, 835px" /></figure></div>


<p style="font-size:20px"><strong>ಕರಣ್‌ ಥಾಪರ್‌ ಸ್ಪಷ್ಟೀಕರಣ</strong></p>



<p>ಆದರೆ, ಈ ಸಂದರ್ಶನ ಒಂದು ಅಪ್ಪಟ ಸುಳ್ಳು. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಕರಣ್‌ ಥಾಪರ್‌, ತಾವು ಅಂತಹ ಹಣ ಸಂಪಾದಿಸುವ ವೆಬ್‌ಸೈಟ್‌ ಬಳಿಸಿಲ್ಲ, ಇದೊಂದು ಸುಳ್ಳು ವೆಬ್‌ಸೈಟ್‌ ಮತ್ತು ಸುಳ್ಳು ವರದಿ ಎಂದು ಹೇಳಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕರಣ್‌ ಥಾಪರ್‌, “ ನಕಲಿ ವೆಬ್‌ಪುಟಗಳು ತಮ್ಮ ಮೇಲೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಷಯವನ್ನು ಪ್ರಸಾರ ಮಾಡುತ್ತಿವೆ ಮತ್ತು ಅವುಗಳನ್ನು ನಂಬಬೇಡಿ,” ಎಂದು ಹೇಳಿದ್ದಾರೆ.</p>



<p>&#8220;ನನ್ನ ಬಗ್ಗೆ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರಗಳೊಂದಿಗೆ BBC.INDIA ಮತ್ತು SUNTV ಹೆಸರುಗಳನ್ನು ಬಳಸಿಕೊಂಡು ನಕಲಿ ಮತ್ತು ಫೇಕ್ ವೆಬ್‌ಪೇಜ್‌ಗಳು ಮತ್ತು ಫೇಸ್‌ಬುಕ್ ಪೋಸ್ಟ್‌ಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂಬುದು ಸ್ನೇಹಿತರು ಮತ್ತು ಹಿತೈಷಿಗಳ ಮೂಲಕ ನನ್ನ ಗಮನಕ್ಕೆ ಬಂದಿದೆ&#8221; ಎಂದು ಥಾಪರ್ ಹೇಳಿಕೆಯಲ್ಲಿ ಬರೆದಿದ್ದಾರೆ.</p>



<p>&#8220;octequiti.com&#8217; ಎಂಬ ವೆಬ್‌ಪೇಜ್ ನನ್ನ ಮತ್ತು SUNTV ನ ಪೂಜಿತ ದೇವರಾಜು ನಡುವಿನ ಆಪಾದಿತ ಸಂಭಾಷಣೆಯನ್ನು ಪ್ರಕಟಿಸಲಾಗಿದೆ, ಅಲ್ಲಿ ಒಂದು ನಿರ್ದಿಷ್ಟ ಮೋಸದಿಂದ ಹಣ ಮಾಡುವ ಯೋಜನೆಯ ವೆಬ್‌ಸೈಟ್ ಅನ್ನು ಕ್ಲಿಕ್ ಬೈಟ್ ಶೀರ್ಷಿಕೆಯೊಂದಿಗೆ ಪ್ರಚಾರ ಮಾಡಲಾಗುತ್ತಿದೆ&#8221; ಎಂದು ಅವರು ಬರೆದಿದ್ದಾರೆ. &nbsp;</p>



<p>“ಜವಾಬ್ದಾರಿಯುತ ನಾಗರಿಕನಾಗಿ, ನನ್ನ ಪ್ರತಿಕ್ರಿಯೆಯನ್ನು ನೀಡುವುದು ಮತ್ತು ಈ ವಿಚಾರದಲ್ಲಿ ನಿಜವಾದ ಹಾಗೂ ನಿಖರವಾದ ಸಂಗತಿಗಳನ್ನು ಸಾರ್ವಜನಿಕರ ಮುಂದೆ ಇಡುವುದು ಅಗತ್ಯವೆಂದು ನಾನು ಭಾವಿಸುತ್ತೇನೆ. ಆದ್ದರಿಂದ, ಆರಂಭದಲ್ಲಿ, ನಾನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ದುರುದ್ದೇಶಪೂರಿತ ಮತ್ತು ಮಾನಹಾನಿಕರ ವಿಚಾರವನ್ನು ಸುಳ್ಳು ಮತ್ತು ಕಟ್ಟುಕಥೆ ಎಂದು ಹೇಳುತ್ತಾ ನಿರಾಕರಿಸುತ್ತೇನೆ. ಇದನ್ನು ನಂಬಬೇಡಿ ಅಥವಾ ಅವರು ಹೇಳಿದಂತೆ ಕೇಳಬೇಡಿ ಎಂದು ಸಾರ್ವಜನಿಕರಿಗೆ ಈ ಮೂಲಕ ವಿನಂತಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.</p>



<p>ಈ ಮೂಲಕ ತಾವು ಇಂತಹ &#8220;ಸಂದರ್ಶನವನ್ನು ಎಂದಿಗೂ ನೀಡಿಲ್ಲ, ಪೋಸ್ಟ್‌ಗಳು ಮತ್ತು ವೆಬ್‌ಪೇಜ್‌ಗಳಲ್ಲಿ ಉಲ್ಲೇಖಿಸಿರುವಂತಹ ಹೇಳಿಕೆಗಳನ್ನು ನೀಡಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.</p>



<p>“ನಾನು ಈಗಾಗಲೇ ವಿಚಾರವನ್ನು ಫೇಸ್‌ಬುಕ್‌ಗೆ ರಿಪೋರ್ಟ್‌ ಮಾಡಿ, ಪೋಸ್ಟನ್ನು ತೆಗೆದುಹಾಕಲು ವಿನಂತಿಸಿದ್ದೇನೆ. ಈ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳು/ವೆಬ್‌ಪೇಜ್‌ಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ. ನಾನು ಬಿಬಿಸಿ ಇಂಡಿಯಾ ಮತ್ತು SUNTV ಗೆ ವಿಚಾರದ ಬಗ್ಗೆ ಸೂಚನೆ ನೀಡಿದ್ದೇನೆ,” ಎಂದು ಥಾಪರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಇಡಿ ವಿಚಾರಣೆಗೆ ಹಾಜರಾಗದ ಕೇಜ್ರೀವಾಲ್‌ ಮದ್ಯ ಹಗರಣದ ರಾಜ: ಬಿಜೆಪಿ ಮಾತಿನ ದಾಳಿ</title>
		<link>https://peepalmedia.com/bjp-attacks-kejriwal-for-questioning-ed-summons/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 02 Nov 2023 10:28:27 +0000</pubDate>
				<category><![CDATA[ರಾಜಕೀಯ]]></category>
		<category><![CDATA[Aam Aadmi Party]]></category>
		<category><![CDATA[arvind kejriwal]]></category>
		<category><![CDATA[bengalure]]></category>
		<category><![CDATA[congress]]></category>
		<category><![CDATA[corruption]]></category>
		<category><![CDATA[Delhi]]></category>
		<category><![CDATA[Enforcement Directorate]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[liquor scam]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sambit Patra]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31036</guid>

					<description><![CDATA[ನವದೆಹಲಿ, ನವೆಂಬರ್.2: ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಗೈರು ಹಾಜರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಗುರುವಾರ ಸತ್ಯವನ್ನು ಎದುರಿಸಲು ಇವರು ಸಿದ್ಧರಿಲ್ಲ ಎಂದು ಟೀಕಿಸಿದೆ. ಕೇಜ್ರಿವಾಲ್ ಈ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗದೆ, &#8220;ಅಕ್ರಮ ಮತ್ತು ರಾಜಕೀಯ ಪ್ರೇರಿತ&#8221; ಎಂದು ಆರೋಪಿಸಿ ತಮಗೆ ಸಮನ್ಸ್ ನೀಡಿದ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದ ನಂತರ ಬಿಜೆಪಿ ಈ ಮಾತಿನ ದಾಳಿ ನಡೆಸಿದೆ. ಇದನ್ನೂ ಓದಿ: [&#8230;]]]></description>
										<content:encoded><![CDATA[
<p><strong>ನವದೆಹಲಿ, ನವೆಂಬರ್.2: </strong>ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಗೈರು ಹಾಜರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಗುರುವಾರ ಸತ್ಯವನ್ನು ಎದುರಿಸಲು ಇವರು ಸಿದ್ಧರಿಲ್ಲ ಎಂದು ಟೀಕಿಸಿದೆ.</p>



<p>ಕೇಜ್ರಿವಾಲ್ ಈ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗದೆ, &#8220;ಅಕ್ರಮ ಮತ್ತು ರಾಜಕೀಯ ಪ್ರೇರಿತ&#8221; ಎಂದು ಆರೋಪಿಸಿ ತಮಗೆ ಸಮನ್ಸ್ ನೀಡಿದ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಏಜೆನ್ಸಿಗೆ ಪತ್ರ ಬರೆದ ನಂತರ ಬಿಜೆಪಿ ಈ ಮಾತಿನ ದಾಳಿ ನಡೆಸಿದೆ.</p>



<p><strong>ಇದನ್ನೂ ಓದಿ:</strong><a href="https://peepalmedia.com/kejiriwal-not-appeared-before-ed/" data-type="link" data-id="https://peepalmedia.com/kejiriwal-not-appeared-before-ed/"> ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು</a></p>



<p>&#8220;ಅರವಿಂದ್ ಕೇಜ್ರಿವಾಲ್ ಇಡಿ ಸಮನ್ಸ್‌ನಿಂದ ಓಡಿಹೋದರು. ಅವರು ಸತ್ಯವನ್ನು ಎದುರಿಸದೆ ಓಡಿಹೋಗಿದ್ದಾರೆ &#8230; ದೆಹಲಿಯ ಮದ್ಯ ಹಗರಣದ ಅರಸ ತಾನು ಮದ್ಯ ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಹೇಳುವುದು ಅತಿಶಯೋಕ್ತಿಯಾಗುವುದಿಲ್ಲ&#8221; ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>&#8220;ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!&#8221;: ವಂಚನೆಯ ಆಳ-ಅಗಲ</title>
		<link>https://peepalmedia.com/earn-rs-20000-daily-scam/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 20 Oct 2023 13:56:34 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bank]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[CBI]]></category>
		<category><![CDATA[charan Aivarnad]]></category>
		<category><![CDATA[cyber crime]]></category>
		<category><![CDATA[cypto]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[financial crime]]></category>
		<category><![CDATA[fool]]></category>
		<category><![CDATA[fraud]]></category>
		<category><![CDATA[india]]></category>
		<category><![CDATA[investigation]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[money]]></category>
		<category><![CDATA[news]]></category>
		<category><![CDATA[news.viral news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Police Department]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30265</guid>

					<description><![CDATA[ಬೆಂಗಳೂರು,ಅಕ್ಟೋಬರ್.‌20: &#8220;ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ&#8221; ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು &#8220;ಆಪರೇಷನ್ ಚಕ್ರ 2&#8221;. ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ [&#8230;]]]></description>
										<content:encoded><![CDATA[
<pre class="wp-block-code"><code><strong>ಮನೆಯಿಂದಲೇ ನೀವು 20,000 ರುಪಾಯಿ ಗಳಿಸಬಹುದು. ಇದು ವರ್ಕ್‌ ಫ್ರೊಂ ಹೋಮ್‌ ಉದ್ಯೋಗ..ಈ ರೀತಿಯ ಮೆಸೆಜ್‌ಗಳು ನಿಮ್ಮ ವಾಟ್ಸಾಪ್‌, ಟೆಲಿಗ್ರಾಮಿಗೆ ಬಂದಿರಬಹುದು. ಆರಂಭದಲ್ಲಿ ಚೆನ್ನಾಗಿ ಸಂವಹನ ನಡೆಸಿ ವಿಶ್ವಾಸವನ್ನು ಗಳಿಸುತ್ತಾರೆ. ಅವರು ಹೇಳಿದಂತೆ ನಡೆದುಕೊಂಡರೆ ಮೋಸ ಖಚಿತ. ಈ ವಂಚನೆಯ ಆಳ-ಅಗಲ ಇಲ್ಲಿದೆ</strong></code></pre>



<p><strong>ಬೆಂಗಳೂರು,ಅಕ್ಟೋಬರ್.‌20:</strong> &#8220;ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ&#8221; ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ  ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು &#8220;ಆಪರೇಷನ್ ಚಕ್ರ 2&#8221;.</p>



<p>ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ ಒಡ್ಡಿ ಜನರಿಗೆ ಹಣದ ವಂಚನೆ ಮಾಡುತ್ತಿದ್ದಾರೆ.  ಈ ಹಣವನ್ನು ನಂತರ ಶೆಲ್ ಕಂಪನಿಗಳ ಮೂಲಕ ಕಳುಹಿಸಿ, ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐ ಪ್ರಕಾರ, ಇದೊಂದು ದೇಶದ ಅತ್ಯಂತ ದೊಡ್ಡ ಸೈಬರ್-ಮನಿ ಲಾಂಡರಿಂಗ್‌ ವಂಚನೆಯ ಜಾಲ.</p>



<p>ಈ ವಾರ ಸಿಬಿಐ &#8220;ಆಪರೇಷನ್ ಚಕ್ರ 2&#8221; ಎಂಬ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿಯನ್ನು ನಡೆಸಿದೆ. ಈ ಬಗ್ಗೆ <a href="https://cbi.gov.in/press-detail/NTk0MQ==" data-type="link" data-id="https://cbi.gov.in/press-detail/NTk0MQ==">ಅಕ್ಟೋಬರ್‌  19</a> ಮತ್ತು <a href="https://cbi.gov.in/press-detail/NTk0Mg==" data-type="link" data-id="https://cbi.gov.in/press-detail/NTk0Mg==">ಅಕ್ಟೋಬರ್‌ 20</a> ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.</p>



<p>ಈ ಸಂದರ್ಭದಲ್ಲಿ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು-ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಫೋಟೋಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ಡಂಪ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಹೆಣೆದಿರುವ ವಂಚನೆಯ ಸಂಕೀರ್ಣ ಜಾಲವನ್ನು ಬೆಳಕಿಗೆ ತಂದಿದೆ.</p>



<p>ಹೂಡಿಕೆ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕರನ್ನು ವಂಚಿಸುತ್ತಿರುವ ಈ ಹಗರಣದ ವಿರುದ್ಧ ಸಿಬಿಐನಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಿಸಲಾಗಿತ್ತು. ಸತತ ಅಧ್ಯಯನಗಳ ನಂತರ ಸಿಬಿಐ ಈ ಜಾಲದ ಒಳಸುಳಿವು, ತಂತ್ರಜ್ಞಾನಗಳ ಬಳಕೆಯನ್ನು ಬೇಧಿಸಿ ದಂಧೆಯನ್ನು ಬಹಿರಂಗಪಡಿಸಿದೆ.</p>



<p>ಈ ದಂಧೆಯಲ್ಲಿ ಹಲವು ವಂಚಕರು ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಹೂಡಿಕೆ , ಇಲ್ಲವೇ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ಹಣವನ್ನು ಸಂಗ್ರಹಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ಯುಪಿಐಗಳನ್ನು ಬಳಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.</p>



<p>ವಿವಿಧ ಬ್ಯಾಂಕ್ ಖಾತೆಗಳು ಮತ್ತು ವಿದೇಶಿ ಮೂಲದ ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿನ ಹಣವನ್ನು ಡ್ರಾ ಮಾಡಲು ವಿವಿಧ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಹೆಚ್ಚಿನ ಶೆಲ್‌ ಕಂಪನಿಗಳು ಚೀನಾದ ಜೊತೆಗೆ ಸಂಬಂಧವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ. &nbsp;</p>



<p>ಸೈಬರ್ ವಂಚನಕರು &#8220;ಗೂಗಲ್ ಜಾಹೀರಾತುಗಳು, ಎಸ್‌ಎಂಎಸ್, ಸಿಮ್ ಬಾಕ್ಸ್ ಆಧಾರಿತ ಎಸ್‌ಎಂಎಸ್, ಕ್ಲೌಡ್ ಸೇವೆಗಳು, ಫಿನ್‌ಟೆಕ್ ಕಂಪನಿಗಳು, ಪಾಪ್‌ಅಪ್‌ ಮೆಸೆಜ್‌ಗಳು ಮತ್ತು ಎಪಿಐ&#8221; ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಸಿಬಿಐ ಪ್ರಕಾರ &#8220;ಸಾಮಾಜಿಕ ಮಾಧ್ಯಮಗಳು ಮತ್ತು ಜಾಹೀರಾತು ಪೋರ್ಟಲ್‌ಗಳು, ಎನ್‌ಕ್ರಿಪ್ಟ್ ಮಾಡಿದ ಚಾಟ್ ಅಪ್ಲಿಕೇಶನ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಬಳಸಿ ಜನರ ಗಮನ ಸೆಳೆಯುತ್ತಾರೆ.&#8221; ಅಲ್ಲದೇ, ವಂಚಕರ ಸರ್ಚ್ ಇಂಜಿನ್‌ನ ಜಾಹೀರಾತು ಟೂಲ್‌ಗಳನ್ನು ಬಳಸುತ್ತಿದ್ದಾರೆ, ಜೊತೆಗೆ ಬೃಹತ್ ಗಾತ್ರದಲ್ಲಿ ಬಲ್ಕ್‌ SMS ಕಳುಹಿಸಲು ರೆಂಟೆಡ್ ಹೆಡರ್‌ಗಳನ್ನು ಬಳಸುತ್ತಿದ್ದಾರೆ.</p>



<p>ವಿದೇಶಿ ಪ್ರಜೆಗಳನ್ನು ವಂಚಿಸಲು ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗೆ ತಾಂತ್ರಿಕ ಬೆಂಬಲ ನೀಡುವವರಂತೆ‌ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ 72 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ದಾಳಿ ನಡೆಸಿದೆ. ಚೀನೀ ಲಿಂಕ್‌ಗಳನ್ನು ಹೊಂದಿರುವ ಕಂಪನಿಗಳ &#8220;ಕ್ರಿಪ್ಟೋಕರೆನ್ಸಿ ವಂಚನೆ&#8221; ಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ.</p>



<p>ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್‌ಐಯು-ಇಂಡಿಯಾ)ದ ಮಾಹಿತಿಯಂತೆ ಆಪರೇಷನ್ ಚಕ್ರ-II ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ಭೇದಿಸಿತು. ಈ ವಂಚನೆಯನ್ನು ಭಾರತೀಯರನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದು, ಸುಮಾರು 100 ಕೋಟಿ ರುಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ.</p>



<p>ವಂಚಕ ಇದಕ್ಕಾಗಿ ಫೇಕ್ ಕ್ರಿಪ್ಟೋಕರೆನ್ಸಿ ಟೋಕನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಯು ಭಾರತ ಮೂಲದ ಹೆಸರಾಂತ ಅಮೇರಿಕನ್ ಕ್ರಿಪ್ಟೋ ಟೆಕ್ನಾಲಜಿಸ್ಟ್‌ ಒಬ್ಬರ ಫೋಟೋವನ್ನು ಬಳಸಿಕೊಂಡು ವೆಬ್‌ಸೈಟ್ ಮಾಡಿದ್ದಾನೆ. ಗಣಿಗಾರಿಕೆ ಯಂತ್ರಗಳನ್ನು ಖರೀದಿಸಲು ಹೂಡಿಕೆದಾರರ ಹಣವನ್ನು ಬಳಸುತ್ತಾರೆ ಎಂಬಂತೆ ನಂಬಿಸಿ,  ಬಂದ ಲಾಭವನ್ನು ಮುದ್ರಿಸಲಾದ ಕ್ರಿಪ್ಟೋಕರೆನ್ಸಿಗಳ ಮೂಲಕ ವಿತರಿಸಲಾಗಿದೆ.</p>



<p>ಈ ಅಪ್ಲಿಕೇಷನ್‌ ಆಗಸ್ಟ್ 2021 ರವರೆಗೆ ಕಾರ್ಯನಿರ್ವಹಿಸಿತ್ತು. ಈ ಸಮಯದಲ್ಲಿ ಅನೇಕ ಭಾರತೀಯರು ವಿವಿಧ ಗೇಟ್‌ವೇಗಳ ಮೂಲಕ ಹೂಡಿಕೆ ಮಾಡಿದ್ದರು. ಆರಂಭದಲ್ಲಿ, ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ರಿಟರ್ನ್ಸ್ ಕೂಡ ನೀಡಲಾಯಿತು, ಆದರೆ ಆಗಸ್ಟ್ 2021ರ ನಂತರ ಎಲ್ಲಾ ಪಾವತಿಗಳು ಸ್ಥಗಿತಗೊಂಡವು.</p>



<p>Payment aggregator ಸರ್ವಿಸ್‌ಗಳನ್ನು ಬಳಸಿ ಆರೋಪಿಯು ಅಂದಾಜು 168.75 ಕೋಟಿ ರುಪಾಯಿಯ ವಂಚನೆ ನಡೆಸಿದ್ದ. ತನಿಖೆಯ ಸಮಯದಲ್ಲಿ 150 ಖಾತೆಗಳನ್ನು ಪತ್ತೆಮಾಡಲಾಗಿದ್ದು, ಇದರಲ್ಲಿ 46 ಶೆಲ್ ಕಂಪನಿಗಳು, 42 ಮಾಲೀಕತ್ವ ಸಂಸ್ಥೆಗಳು ಮತ್ತು 50 ವೈಯಕ್ತಿಕ ಖಾತೆಗಳು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಿದ ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಅಂತಿಮ ಫಲಾನುಭವಿಗಳಿಗೆ ವರ್ಗಾಯಿಸಲು ಮಾರ್ಗಗಳಾಗಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಎರಡು ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಸೇರಿದಂತೆ ಅನೇಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ.</p>



<p>ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಆಪರೇಷನ್ ಚಕ್ರ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಿಬಿಐ ತಿಳಿಸಿವೆ.</p>



<p style="font-size:20px"><strong>ಬೆಂಗಳೂರಿನಲ್ಲಿ ಕೂತು ಸಿಂಗಾಪುರದವರಿಗೆ ವಂಚನೆ!</strong></p>



<p>ಈ ವಂಚಕರ 137 ಶೆಲ್ ಕಂಪನಿಗಳನ್ನು ಸಿಬಿಐ ಗುರುತಿಸಿದ್ದು, ಹೆಚ್ಚಿನ ಸಂಖ್ಯೆಯ ಘಟಕಗಳು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟಿವೆ. ಸಿಬಿಐಯ ತನಿಖೆಯ ನಂತರ ಈ ಕಂಪನಿಗಳ ನಿರ್ದೇಶಕರನ್ನು ಗುರುತಿಸಲಾಗಿದ್ದು, ಹೆಚ್ಚಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕೆಲವು ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪಾರಿಯೊಂದಿಗೆ (ಪೇಮೆಂಟ್‌ ಮರ್ಚೆಂಟ್‌) ಸಂಬಂಧ ಹೊಂದಿದ್ದರು. ವಂಚನೆಯ ಕೇಂದ್ರವಾಗಿರುವ ಈ ವ್ಯಾಪಾರಿ ಸುಮಾರು 16 ವಿಭಿನ್ನ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದಾನೆ, ಅಲ್ಲಿ ಬೃಹತ್ ಮೊತ್ತ ಅಂದಾಜು 357 ಕೋಟಿ ರುಪಾಯಿಯ ಹಣ ಹರಿದು ಬಂದಿದೆ. </p>



<p>ಈ ಹಣದ ಜಾಡನ್ನು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ ಉದ್ದೇಶಪೂರ್ವಕವಾಗಿ ಹಣ ಜಮೆಯಾದ ನಂತರ ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬೆಂಗಳೂರು, ಕೊಚ್ಚಿನ್ ಮತ್ತು ಗುರ್‌ಗಾಂವ್‌ನಲ್ಲಿ ನಡೆಸಲಾದ ಹುಡುಕಾಟಗಳಿಂದ ಸಿಬಿಐಗೆ ಗಣನೀಯ ಸಂಖ್ಯೆಯ ಪುರಾವೆಗಳನ್ನು ಸಿಕ್ಕಿದ್ದು, ಶೆಲ್ ಕಂಪನಿಗಳ ನಿರ್ದೇಶಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ.</p>



<p>ಈ ಆರೋಪಿಗೆ ವಿದೇಶಿ ಪ್ರಜೆಯ ಜತೆಗಿನ ಒಡನಾಟವೂ ಇದ್ದು, ಈ ವಂಚಕ ಘಟಕಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಯನ್ನು ಬದಲಾಯಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರವೂ ಕಂಡುಬಂದಿದೆ. </p>



<p>ಸಿಂಗಾಪುರದ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸೈಬರ್ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡನೇ ಪ್ರಕರಣವನ್ನು ಸಿಬಿಐ ದಾಖಲಿಸಲಾಗಿದೆ. ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 100 ಭಾರತೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಸಿಂಗಾಪುರ ನಾಗರಿಕರ ಮೇಲೆ ನಡೆಸಲಾದ 300 ಕ್ಕೂ ಹೆಚ್ಚು ಸೈಬರ್ ವಂಚನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು INTERPOL ಚಾನೆಲ್‌ಗಳ ಮೂಲಕ ಸಿಂಗಾಪುರ್ ಪೋಲೀಸ್ ಫೋರ್ಸ್‌ ನೀಡಿದೆ. </p>



<p>ಫಿಶಿಂಗ್, ವಿಶಿಂಗ್, ಸ್ಮಿಶಿಂಗ್ ಮತ್ತು ಮೋಸದ ತಂತ್ರಜ್ಞಾನ (phishing, vishing, smishing, &amp; fraudulent tech support) ದಂತಹ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಅಪರಾಧಿಗಳು 400 ಸಿಂಗಾಪುರ್ ನಾಗರಿಕರಿಗೆ ವಂಚನೆ ಮಾಡಿದ್ದಾರೆ. ಈ ತಂತ್ರಗಾರಿಕೆಯನ್ನು ಬಳಸಿಕೊಂಡು ವಂಚಕರು ಸಿಂಗಪುರದ ಬ್ಯಾಂಕ್‌ ಖಾತೆಗಳಿಂದ ಭಾರತೀಯ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ 150 ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.</p>



<p>ಪಾಟ್ನಾ, ಕೋಲ್ಕತ್ತಾ, ಲಕ್ನೋ, ವಾರಣಾಸಿ, ಚಂಡೀಗಢ, ಜಲಂಧರ್, ಭೋಪಾಲ್, ಚೆನ್ನೈ, ಕೊಚ್ಚಿ ಮತ್ತು ಮಧುರೈ ಸೇರಿದಂತೆ 35 ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲೇ ಶೋಧ ನಡೆಸಿದಾಗ ಗುರುತಿನ ಪುರಾವೆಗಳಿಗೆ ಸಂಬಂಧಿಸಿದ ದೋಷಾರೋಪಣೆ ದಾಖಲೆಗಳು, ಮೋಸದ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳು ಲಭ್ಯವಾಗಿವೆ. </p>



<p style="font-size:20px"><strong>ಹೇಗೆ ಮೋಸ ಮಾಡುತ್ತಾರೆ?</strong></p>



<p>ಸಿಬಿಐ ಮೂಲಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಗೂಗಲ್, ಫೇಸ್‌ಬುಕ್ ಜಾಹೀರಾತುಗಳು, ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬೇಗ ಹಣ ಗಳಿಸಲು ಅವರಿಗೆ ಉದ್ಯೋಗಗಳನ್ನು ನೀಡುವ ಬರವಸೆ ನೀಡುತ್ತವೆ.</p>



<p>ಸಾಮಾನ್ಯವಾಗಿ ಈ ಮೆಸೆಜ್‌ಗಳು, </p>



<p>“ಸರ್, ಅಮೆಜಾನ್ &nbsp;ಅರೆಕಾಲಿಕ ಉದ್ಯೋಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ನೀವು ದಿನನಿತ್ಯ 3000-10000 ರುಪಾಯಿ ಗಳಿಸಬಹುದು”</p>



<p>“ಆತ್ಮೀಯ ನಾನು ಎಚ್‌ಆರ್‌. ನೀವು ಪಾರ್ಟ್‌ಟೈಮ್‌ ಹಾಗೂ ಫುಲ್‌ ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ, ಈಗ ನೀವು ದಿನಕ್ಕೆ 20000 ರುಪಾಯಿ ಗಳಿಸಬಹುದು. ಅದಕ್ಕಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ…”.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="590" height="1024" src="https://peepalmedia.com/wp-content/uploads/2023/10/cab08340-da47-4818-ab51-7c02192c58d1-590x1024.jpg" alt="" class="wp-image-30268" style="aspect-ratio:0.576171875;width:246px;height:auto" srcset="https://peepalmedia.com/wp-content/uploads/2023/10/cab08340-da47-4818-ab51-7c02192c58d1-590x1024.jpg 590w, https://peepalmedia.com/wp-content/uploads/2023/10/cab08340-da47-4818-ab51-7c02192c58d1-173x300.jpg 173w, https://peepalmedia.com/wp-content/uploads/2023/10/cab08340-da47-4818-ab51-7c02192c58d1-150x260.jpg 150w, https://peepalmedia.com/wp-content/uploads/2023/10/cab08340-da47-4818-ab51-7c02192c58d1-300x520.jpg 300w, https://peepalmedia.com/wp-content/uploads/2023/10/cab08340-da47-4818-ab51-7c02192c58d1-696x1207.jpg 696w, https://peepalmedia.com/wp-content/uploads/2023/10/cab08340-da47-4818-ab51-7c02192c58d1.jpg 738w" sizes="auto, (max-width: 590px) 100vw, 590px" /><figcaption class="wp-element-caption">ಲೇಖಕರ ವೈಯಕ್ತಿಕ ಸಂಭಾಷಣೆ</figcaption></figure></div>


<p>ಸಾಮಾನ್ಯವಾಗಿ ಇಂತಹ ಮೆಸೆಜ್‌ಗಳ ಜೊತೆಗೆ ವಾಟ್ಸಾಪ್‌ ಅಥವಾ ಟೆಲಿಗ್ರಾಮ್‌ಗಳ ಲಿಂಕ್‌ಗಳು ಇರುತ್ತವೆ. ಇದರ ಮೇಲೆ ಕ್ಲಿಕ್‌ ಮಾಡಿದರೆ, ಅದು ನೇರವಾಗಿ ಚ್ಯಾಟಿಂಗ್‌ಗೆ ಹೋಗುತ್ತದೆ. ಈ ಸಂದರ್ಭದಲ್ಲಿ ವಂಚಕ ಸಂಭಾಷಣೆಯನ್ನು ನಡೆಸಿ, ಹೂಡಿಕೆಯ ವೆಬ್‌ಸೈಟ್‌ ಲಿಂಕ್‌ ಕಳಿಸುತ್ತಾನೆ.</p>



<p>ಇಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಚ್ಯಾಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ತಕ್ಷಣವೇ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ಹೇಳಲಾಗುತ್ತದೆ. ಜೊತೆಗೆ, ಡಾಕ್ಯುಮೆಂಟ್‌ ಟೈಪ್‌ ಮಾಡುವ, ಯೂಟ್ಯೂಬ್‌ ಚಾನೆಲ್‌ ಲೈಕ್‌ ಮಾಡುವ, ಇ-ಮೇಲ್‌ ಟೈಪ್‌ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಡ್ಡಾಯದ ಷರತ್ತು ಏನೆಂದರೆ, ವ್ಯಕ್ತಿ ತನ್ನ ಕ್ರೆಡೆನ್ಷಿಯಲ್ಸ್‌ ಪ್ರೂವ್‌ (ವಿಶ್ವಾಸಾರ್ಹತೆ) ಮಾಡಲು ತನ್ನ UPI ವ್ಯಾಲೆಟ್‌ನಲ್ಲಿ ಹಣ ಹಾಕಬೇಕು. ಇದಕ್ಕಾಗಿ ವಂಚಕರ ಸೈಟ್‌ಗಳು ಅನಧಿಕೃತ ಪೇಮೆಂಟ್‌ ಗೇಟ್‌ವೇಗಳನ್ನು ನೀಡುತ್ತಾರೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="643" height="1024" src="https://peepalmedia.com/wp-content/uploads/2023/10/27cb28cb-a716-400c-aed5-a6743f0788c4-643x1024.jpg" alt="" class="wp-image-30269" style="aspect-ratio:0.6279296875;width:269px;height:auto" srcset="https://peepalmedia.com/wp-content/uploads/2023/10/27cb28cb-a716-400c-aed5-a6743f0788c4-643x1024.jpg 643w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-188x300.jpg 188w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-768x1223.jpg 768w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-964x1536.jpg 964w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-150x239.jpg 150w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-300x478.jpg 300w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-696x1108.jpg 696w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4-1068x1701.jpg 1068w, https://peepalmedia.com/wp-content/uploads/2023/10/27cb28cb-a716-400c-aed5-a6743f0788c4.jpg 1080w" sizes="auto, (max-width: 643px) 100vw, 643px" /><figcaption class="wp-element-caption">ಲೇಖಕರ ವೈಯಕ್ತಿಕ ಸಂಭಾಷಣೆ</figcaption></figure></div>


<p>ಇಂತಹ &nbsp;ಗೇಟ್‌ವೇಗಳು ಭಾರತದಲ್ಲಿ ಕೆಲಸ ಮಾಡಲು ಯಾವುದೇ ಅಧಿಕಾರ ಹೊಂದಿಲ್ಲ. ಈ ಎಲ್ಲಾ ಪಾವತಿಗಳನ್ನು ಇಂಟರ್ನೆಟ್ ಲಿಂಕ್‌ಗಳನ್ನು ಬಳಸಿಕೊಂಡು UPI ಮೂಲಕ ಮಾಡಲಾಗುತ್ತದೆ.</p>



<p>ಕೆಲವು ಬಾರಿ, ಟೆಲಿಗ್ರಾಮ್‌ಗಳಲ್ಲಿ ಸಂಪರ್ಕಿಸಿ, ಉದ್ಯೋಗದ ಆಮಿಷವನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಕಳಿಸಬೇಕು. ಇದಾದ ನಂತರ, ಬೋನಸ್‌ ಹಣಕ್ಕಾಗಿ ಇನ್ನೊಂದು ಟೆಲಿಗ್ರಾಮ್‌ ಲಿಂಕ್‌ ಕಳಿಸುತ್ತಾರೆ. ಆ ಲಿಂಕ್‌ ತೆರೆದು ಮೊದಲಿನ ವ್ಯಕ್ತಿ ನೀಡಿದ ಕೋಡ್‌ ಒಂದನ್ನು ನೀಡಬೇಕು… ಹೀಗೆ ವಂಚಕರು ಇ-ಮೇಲ್, UPI ಮೊದಲಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.</p>



<p>ಈ ರೀತಿಯ ಮೆಸೆಜ್‌ಗಳನ್ನುವಾಟ್ಸಾಪ್‌, ಟೆಲಿಗ್ರಾಮ್‌ ಮೊದಲಾದ ಕಡೆ ಲಿಂಕ್‌ಗಳನ್ನು ಕಳುಹಿಸಲು ಬಳಸುವ‌ ಮೊಬೈಲ್ ಸಂಖ್ಯೆಗಳು ಬೇರೆ ಬೇರೆ ಸ್ಥಳಗಳನ್ನು ಆಧರಿಸಿರುತ್ತವೆ.‌ ಟೆಲಿಗ್ರಾಮಿನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ ಇರುವುದಿಲ್ಲ. ವಾಟ್ಸಾಪ್‌ನಲ್ಲಿ ಬಳಸುವ ಸಂಖ್ಯೆಗಳು ಅವುಗಳ ಮೂಲ ಬಳಕೆದಾರರಿಗೆ ತಿಳಿಯದಂತೆ ವಂಚಕರು ಬಳಸುತ್ತಿರುತ್ತಾರೆ.</p>



<p>ಈ ಜಾಲದಲ್ಲಿ ವಂಚಕರು ಕಾಲ್‌ ಸೆಂಟರ್‌ಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಸಂಭಾಷನೆ ನಡೆಸುವ ಇವರು, ಉಳಿದ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ವಾಟ್ಸಾಪ್‌, ಟೆಲಿಗ್ರಾಮ್ ಮೂಲಕ ಚಾಟಿಂಗ್‌ ನಡೆಸುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಚಾಟಿಂಗ್‌ ನಡೆಸುವ ಇವರು, ಗೂಗಲ್‌ ಟ್ರಾನ್ಸ್‌ಲೇಷನ್‌ ಕೂಡಾ ಬಳಸುತ್ತಾರೆ.</p>



<p>ಹಣದ ವ್ಯವಹಾರಕ್ಕೆ ವಿದೇಶಿಗರು ಉಪಯೋಗಿಸುವ ಗೇಟ್‌ವೇಗಳನ್ನು ಬಳಸುತ್ತಾರೆ. ಈ ಪೇಮೆಂಟ್‌ ಗೇಟ್‌ವೇಗಳು UPI ಮೂಲಕ ಹಣವನ್ನು ಸ್ವೀಕರಿಸುತ್ತವೆ. ಯುಪಿಐಗಳನ್ನು RazorPay, BharatPe, ಇತ್ಯಾದಿಗಳ ಹಿಂದೆ ಲೇಯರಿಂಗ್ ರಚಿಸಲು ಬಳಸಿ, ದಿನದ ಕೊನೆಯಲ್ಲಿ ವ್ಯವಹಾರವನ್ನು ಮುಗಿಸುತ್ತಾರೆ. ರೇಜರ್ ಪೇ, ಈಸ್ ಬಝ್, ಪೇಟಿಎಂ, ಸ್ಪೀಡಿ ಪೇ, ಇನ್‌ಸ್ಟಂಟ್ ಪೇ, ಕ್ಯಾಶ್ ಫ್ರೀ ಮುಂತಾದ ಫಿನ್‌ಟೆಕ್ ಕಂಪನಿಗಳನ್ನು ಪಾವತಿಗಳಿಗೆ ಬಳಸಲಾಗುತ್ತದೆ.</p>



<p>ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಶೆಲ್ ಕಂಪನಿಗಳು ಮತ್ತು ಬಾಡಿಗೆ ಕಂಪನಿಗಳು ಹೇಗೆ ವ್ಯವಹರಿಸಲು ಸಾಧ್ಯ? ಪಾವತಿಗಳಿಗೆ ಸೇವೆಗಳನ್ನು ಪಡೆಯಲು ನೋಂದಣಿ ಪ್ರಮಾಣಪತ್ರಗಳನ್ನು ಬಳಸಲಾಗುತ್ತದೆ. ಈ ಫಿನ್‌ಟೆಕ್ ಕಂಪನಿಗಳಲ್ಲಿ ಹೆಚ್ಚಿನವು ಮಾನ್ಯತೆ ಪಡೆದಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ನಿಯಂತ್ರಿಸಲ್ಪಡುವುದಿಲ್ಲ.</p>



<p>ನಿಮ್ಮ ಫೋನ್‌ಗೆ ಇಂತಹ ಮೆಸೆಜ್‌ಗಳು ಬಂದರೆ ಅವುಗಳನ್ನು ಬ್ಲಾಕ್‌ ಮಾಡುವುದೇ ಒಳಿತು. ಅವರ ನಿರ್ದೇಶನದಂತೆ ನಾವು ಮುಂದುವರಿಸಿ, ನಮ್ಮೆಲ್ಲಾ ಮಾಹಿತಿಗಳನ್ನು ಅವರಿಗೆ ನೀಡಿದರೆ ಅಥವಾ ಹಣದ ವ್ಯವಹಾರ ನಡೆಸಿದರೆ ಮೋಸ ಖಚಿತ. ಹಣದ ವ್ಯವಹಾರ ಮುಗಿದ ತಕ್ಷಣ ನಾವು ಹಣ ಕಳುಹಿಸಿದ ವ್ಯಕ್ತಿ ಪತ್ತಯೇ ಇರುವುದಿಲ್ಲ!</p>



<p>ಎಚ್ಚರ….</p>



<p></p>



<p><strong>ಲೇಖನ: </strong>ಚರಣ್‌ ಐವರ್ನಾಡು, ಬೆಂಗಳೂರು</p>
]]></content:encoded>
					
		
		
			</item>
		<item>
		<title>&#8216;ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣ ; ಬೊಮ್ಮಾಯಿ ಬಂಧನಕ್ಕೆ ಕಾಂಗ್ರೆಸ್ ಪಟ್ಟು</title>
		<link>https://peepalmedia.com/operation-electoral-roll-revision-scam-congress-supported-bommais-arrest/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 17 Nov 2022 09:48:26 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[basavaraja bommai]]></category>
		<category><![CDATA[congress]]></category>
		<category><![CDATA[dk shivakumar]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[Siddaramaiah]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=15756</guid>

					<description><![CDATA[“ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಸಚಿವರು, ಎಲ್ಲ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಇಂದು ನಡೆದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇದು ಸ್ಪಷ್ಟವಾಗಿ ಸಂವಿಧಾನದ ಅಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆ. ಒಬ್ಬ ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಪ್ರಕರಣದ [&#8230;]]]></description>
										<content:encoded><![CDATA[
<p style="font-size:20px">“ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಸಚಿವರು, ಎಲ್ಲ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.</p>



<p style="font-size:20px">ಇಂದು ನಡೆದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಒಳಗೊಂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇದು ಸ್ಪಷ್ಟವಾಗಿ ಸಂವಿಧಾನದ ಅಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆ. ಒಬ್ಬ ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂತಹ ಪ್ರಕರಣದ ನೇರ ಆರೋಪಿಯಾಗಿದ್ದಾರೆ. ಅವರನ್ನು ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುವ ಮೂಲಕ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ.</p>



<p style="font-size:20px">ಇದು “ಆಪರೇಷನ್ ಕಮಲ’ದ ಮುಂದುವರಿದ ಭಾಗವಾದ “ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಗಂಭೀರ ಅಪರಾಧ ಪ್ರಕರಣ. ಈ ಬಗ್ಗೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ಉಸ್ತುವಾರಿಯಲ್ಲಿಯೇ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.</p>



<p style="font-size:20px">ಈ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಸಿದರೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮಾತ್ರವಲ್ಲ ಚುನಾವಣಾ ಆಯೋಗ ಕೂಡಾ ಈ ಹೀನ ಕೃತ್ಯದಲ್ಲಿ ಭಾಗಿಯಾಗಿರುವ ಗುಮಾನಿಗಳಿವೆ. ಕೇಂದ್ರ ಚುನಾವಣಾ ಆಯೋಗ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ನೇರವಾಗಿ ಸರ್ಕಾರ ಮತ್ತು ಬಿಬಿಎಂಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.</p>



<p style="font-size:20px">ಮತದಾರರ ಪಟ್ಟಿಯ ಅಕ್ರಮ ಪರಿಷ್ಕರಣೆಯ ಹಗರಣ ನಡೆಸಿದ ಸಂಸ್ಥೆಯ ಹೆಸರು ರಾಜ್ಯದ ಸಚಿವರೊಬ್ಬರ ಒಡೆತನದ ಸಂಸ್ಥೆಯ ಹೆಸರಿನ ಜೊತೆ ತಾಳೆಯಾಗುವುದು ಕಾಕತಾಳಿಯವಾಗಿರಲಾರದು. ಅದೇ ರೀತಿ ಸಂಸ್ಥೆಯ ಕಚೇರಿ ಇರುವ ಸ್ಥಳದ ಸಮೀಪದಲ್ಲಿಯೇ ಈ ಸಂಶಯಿತ ಸಚಿವರ ಸಂಸ್ಥೆಗಳೂ ಇರುವುದು ಸಂಶಯವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ್ ಮತ್ತು ಮುಖ್ಯಮಂತ್ರಿ ಮೇಲೆ ಆರೋಪಿಸಿದ್ದಾರೆ.</p>



<p style="font-size:20px">ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗದೆ ಇಂತಹದ್ದೊಂದು ಹಗರಣ ನಡೆಸಲು ಸಾಧ್ಯವಿಲ್ಲ, ಅಧಿಕಾರಿಗಳು ಸ್ವಯೀಚ್ಚೆಯಿಂದ ಇಷ್ಟೊಂದು ಬೇಜವಾಬ್ದಾರಿಯಿಂದ ನಡೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಂದ ಹಿಡಿದು ಹಿರಿಯ ಸಚಿವರೆಲ್ಲರೂ ಭಾಗಿಯಾಗಿಯೇ ಈ ಕೆಲಸ ಮಾಡಿದ್ದಾರೆ.</p>



<p style="font-size:20px">‘ಮೇಲಿನವರ’ ರಕ್ಷಣೆ ಇಲ್ಲದೆ ಮಹಾನಗರ ಪಾಲಿಕೆ ಯಾವುದೇ ಪೂರ್ವಪರ ಪರಿಶೀಲನೆ ನಡೆಸದೆ “ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಮತದಾರರ ಪಟ್ಟಿಯನ್ನು ಉಚಿತವಾಗಿ ಪರಿಷ್ಕರಣೆ ಮಾಡಲು ಅನುಮತಿ ನೀಡಲು ಹೇಗೆ ಸಾಧ್ಯ?</p>



<p style="font-size:20px">ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಮತದಾರರ ಮಾಹಿತಿ ಸಂಗ್ರಹದ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿದ್ದು ಖಾಸಗಿ ಸಂಸ್ಥೆಗೆ ಇದನ್ನು ಒಪ್ಪಿಸುವುದೇ ಅಪರಾಧವಾಗಿದೆ. ಬಿಬಿಎಂಪಿಯ ಅಧಿಕಾರಿಗಳೇ ಎಂದು ತಪ್ಪಾಗಿ ತಿಳಿದು ಮತದಾರರು ವೈಯಕ್ತಿಕ ಮಾಹಿತಿಯನ್ನು ನೀಡಿದ್ದಾರೆ. ಇದು ವಿಶ್ವಾಸ ದ್ರೋಹವಾಗಿದೆ.</p>



<p style="font-size:20px">ಚಿಲುಮೆ ಸಂಸ್ಥೆಯ ಮಾಲೀಕ ಕೃಷ್ಣಪ್ಪ ರವಿಕುಮಾರ ಎಂಬವರು ಈ ಹಗರಣದ ರೂವಾರಿಯಾಗಿ ಮೇಲ್ನೋಟಕ್ಕೆ ಕಾಣಿಸಿದರೂ ಇದರ ಹಿಂದೆ ಸರ್ಕಾರದ ಉನ್ನತ ಸ್ಥಾನದಲ್ಲಿರುವವರ ಕೈವಾಡ ಖಂಡಿತ ಇದೆ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಬಯಲಾಗಲು ಸಾಧ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.</p>



<p style="font-size:20px">ಪತ್ರಿಕಾ ಪ್ರಕಟಣೆ ನಂತರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಇತರೆ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು, ಚಿಲುಮೆ ಸಂಸ್ಥೆಯ ಅಧಿಕಾರಿಗಳು ಸೇರಿದಂತೆ ಪ್ರಕರಣದ ಅಡಿಯಲ್ಲಿ ಬರುವ ಎಲ್ಲರನ್ನೂ ಬಂಧಿಸುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.</p>



<p style="font-size:20px;margin-bottom:0px">ಜೊತೆಗೆ ಮತದಾರರ ಪಟ್ಟಿಯನ್ನು ಅಕ್ರಮವಾಗಿ ಪರಿಷ್ಕರಿಸುವ ಈ ರಾಜಕೀಯ ಸಂಚನ್ನು ಬಯಲಿಗೆಳೆಯುವ ಮೂಲಕ ಮಾಧ್ಯಮ ಧರ್ಮವನ್ನು ಎತ್ತಿಹಿಡಿದರುವ <a href="https://www.thenewsminute.com/article/tnm-investigation-armed-govt-order-bengaluru-ngo-steal-voter-data-170013" data-type="URL" data-id="https://www.thenewsminute.com/article/tnm-investigation-armed-govt-order-bengaluru-ngo-steal-voter-data-170013">Newsminute</a> ಸಂಸ್ಥೆಯ ಕಾರ್ಯವನ್ನು ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
