<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>science &#8211; Peepal Media</title>
	<atom:link href="https://peepalmedia.com/tag/science/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 17 Apr 2025 08:39:18 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>science &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?</title>
		<link>https://peepalmedia.com/is-science-alive-in-india/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 17 Apr 2025 08:29:47 +0000</pubDate>
				<category><![CDATA[ಅಂಕಣ]]></category>
		<category><![CDATA[atheism]]></category>
		<category><![CDATA[atheist]]></category>
		<category><![CDATA[Gauhar Raza]]></category>
		<category><![CDATA[hindu]]></category>
		<category><![CDATA[hinduism]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[islam]]></category>
		<category><![CDATA[islamic]]></category>
		<category><![CDATA[kunal kamra]]></category>
		<category><![CDATA[politics]]></category>
		<category><![CDATA[religion]]></category>
		<category><![CDATA[religious]]></category>
		<category><![CDATA[science]]></category>
		<category><![CDATA[scientific temper]]></category>
		<category><![CDATA[scientific temperament]]></category>
		<category><![CDATA[Unscientific]]></category>
		<guid isPermaLink="false">https://peepalmedia.com/?p=57411</guid>

					<description><![CDATA[ವೈಜ್ಞಾನಿಕ ಚಿಂತನೆ ಎಂದರೇನು?ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ. ವೈಜ್ಞಾನಿಕ ಚಿಂತನೆಯ ಪಥವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. [&#8230;]]]></description>
										<content:encoded><![CDATA[
<pre class="wp-block-code"><code><strong>ವೈಜ್ಞಾನಿಕ ಚಿಂತನೆ ಮತ್ತು ಅದನ್ನು ಪಾಲಿಸುವುದು ಒಂದು ಸಮಾಜದ ಬೌದ್ಧಿಕ ಪ್ರಗತಿಯನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವೈಜ್ಞಾನಿಕ ಮನೋಭಾವ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿಯ ಪ್ರಭಾವ ಮತ್ತು ರಾಜಕೀಯ ಒತ್ತಡಗಳ ನಡುವೆ ತೊಳಲಾಡುತ್ತಿದೆ. "Are We Indians Scientific? Nope" ಎಂಬ ಕುನಾಲ್ ಕಮ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ವಿಜ್ಞಾನಿ ಹಾಗೂ ಸಾಹಿತಿ <a href="https://en.wikipedia.org/wiki/Gauhar_Raza">ಗೌಹರ್ ರಾಝಾ </a>ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ್ದಾರೆ</strong>. ಇದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ</code></pre>



<p><strong>ವೈಜ್ಞಾನಿಕ ಚಿಂತನೆ ಎಂದರೇನು?</strong><br>ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.</p>



<p><strong>ವೈಜ್ಞಾನಿಕ ಚಿಂತನೆಯ ಪಥ</strong><br>ವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. ಇದು &#8220;ಏಕೆ?&#8221; ಎಂಬ ಧಾರ್ಮಿಕ ಅಥವಾ ತತ್ತ್ವಶಾಸ್ತ್ರೀಯ ಪ್ರಶ್ನೆಗಿಂತ ಭಿನ್ನವಾಗಿದೆ. &#8220;ಏಕೆ?&#8221; ಎಂಬ ಮತೀಯವಾದದ ಪ್ರಶ್ನೆ ದೇವರೇ ಕಾರಣ ಎಂಬಲ್ಲಿಗೆ ಅವಸಾನವಾಗುತ್ತದೆ. ಆದರೆ &#8220;ಹೇಗೇ?&#8221; ಎಂಬ ವಿಜ್ಞಾನ ಪ್ರಶ್ನೆ ಪ್ರತೀ ಬಾರಿ ಉತ್ತರಗಳನ್ನು ಕಂಡುಕೊಳ್ಳುತ್ತಾ, ಹಳೆಯ ಉತ್ತರ ತಿರಸ್ಕಾರವಾಗಿ ಹೊಸ ಉತ್ತರದೊಂದಿಗೆ ನವೀನವಾಗುತ್ತಾ ಹೋಗುತ್ತದೆ.<br><br>ಧರ್ಮ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವಿರಾರು ವರ್ಷಗಳ ಹಿಂದೆ ಬರೆದ ಓಟ್‌ಡೇಟೆಡ್‌ ಪುಸ್ತಕದ ಮೊರೆ ಹೋದರೆ, ವಿಜ್ಞಾನಕ್ಕೆ ನಿನ್ನೆಯ ದಿನ ಬಂದ ವೈಜ್ಞಾನಿಕ ಸಂಶೋಧನೆಯೇ ಮುಖ್ಯವಾಗುತ್ತದೆ.<br><br>ಹಾಗಾಗಿ, ಹಳೆಯ ನಂಬಿಕೆಗಳನ್ನು ಪ್ರಶ್ನಿಸುವವರ ಕೊಲೆಯಾಗಬಹುದು, ಮನೆಗಳಿಗೆ ಬೆಂಕಿ ಬೀಳಬಹುದು. ಸಂಪ್ರದಾಯವಾದಿಗಳಿಂದ ಈ ಜಗತ್ತಿನಲ್ಲಿ ರಕ್ತ ಹರಿದಿದೆಯೇ ಹೊರತು, ವಿಜ್ಞಾನಿಗಳಿಂದಲ್ಲ.<br><br>ತಮ್ಮ ನಂಬಿಕೆ ಶ್ರೇಷ್ಟ ಎಂದು ಸಾಬೀತು ಮಾಡಲು ಅವರು ಇನ್ನೊಂದು ಧರ್ಮವನ್ನು ನಿಸ್ಕೃಷ್ಟ ಎಂದು ತೋರಿಸಬೇಕು. ಹಾಗಾಗಿ, ಇನ್ನೊಂದು ಧರ್ಮ ಇಲ್ಲದೇ ಒಂದು ಧರ್ಮಕ್ಕೆ ಮೇಲು-ಕೀಳು ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ, ಪರಸ್ಪರ ಧರ್ಮಗಳು ಕಾದಾಡಿ ಜನರ ರಕ್ತ ಹರಿಸುತ್ತವೆ.<br><br>ಧರ್ಮದಲ್ಲಿ ಹಳೆಯ ನಂಬಿಕೆ ಸುಳ್ಳು ಎಂದು ಸಾಬೀತು ಆದರೆ ಅಲ್ಲಿ ಒಂದು ಕೊಲೆಯಾಗುತ್ತದೆ, ಜನ ದೊಂಬಿ ಏಳುತ್ತಾರೆ. ಆದರೆ ವಿಜ್ಞಾನದಲ್ಲಿ ಹಳೆಯ ಥಿಯೆರಿಗಳು ಸರಿ ಇಲ್ಲ ಎಂದು ಸಾಬೀತಾಗಿ, ಹೊಸ ಥಿಯೆರಿ ಬಂದಾಗ ವಿಜ್ಞಾನಿಗಳು ಸಂಭ್ರಮಿಸುತ್ತಾರೆ, ಆ ಹೊಸ ಅನ್ವೇಷಣೆಗಾಗಿ ನೋಬೆಲ್‌ನಂತಹ ಪ್ರಶಸ್ತಿಗಳು ಸಿಗುತ್ತವೆ.<br><br>ಉದಾಹರಣೆಗೆ, ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‌ಸ್ಟೈನ್ ಪ್ರಶ್ನಿಸಿದರು. ಥಿಯೆರಿ ಆಫ್‌ ರಿಲೇಟಿವಿಟಿಯನ್ನು ತಂದರು. ನ್ಯೂಟನ್‌ನ ಚಲನೆಯ ನಿಯಮಗಳ ಬಗ್ಗೆ ಐನ್‌ಸ್ಟೈನ್ ಎತ್ತಿದ ಈ ಪ್ರಶ್ನೆಯೇ ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ತು.<br><br>ಆದರೆ, <em>“ಓ… ಐನ್‌ಸ್ಟೈನ್ ನಮ್ಮ ನ್ಯೂಟನ್ನರ ವಾದವನ್ನು ಸರಿ ಇಲ್ಲ ಎಂದರು!” </em>ಎಂದು ನ್ಯೂಟನ್‌ನನ್ನು ಒಪ್ಪುವ ಜನರ ಗ್ಯಾಂಗ್‌ ಐನ್‌ಸ್ಟೈನ್ ಮನೆಗೆ ಹೋಗಿ ಕಲ್ಲುಹೊಡೆಯಲಿಲ್ಲ. ಆದರೆ ಧರ್ಮದಲ್ಲಿ ಹಳೆಯ ನಂಬಿಕೆಯನ್ನು ಪ್ರಶ್ನಿಸುವುದೇ ಅಪರಾಧ!<br><br><strong>ವೈಜ್ಞಾನಿಕತೆ ಮತ್ತು ಧರ್ಮದ ನಡುವಿನ ಸಂಘರ್ಷ</strong><br>ಭಾರತೀಯ ಸಮಾಜದಲ್ಲೂ ಪ್ರಶ್ನೆಗಳನ್ನು ಎತ್ತುವ ಸಂಸ್ಕೃತಿ ಇತ್ತು. ಗೌಹರ್ ರಾಝಾ ಅವರು ಭಾರತದ ತತ್ತ್ವಶಾಸ್ತ್ರದ ವಿಚಾರವಾಗಿ ಚಾರ್ವಾಕ ಮತ್ತು ಬುದ್ಧನ ಉಲ್ಲೇಖ ಮಾಡುತ್ತಾರೆ. ಚಾರ್ವಾಕನು &#8220;ಇಂದ್ರಿಯಗಳಿಗೆ ಗೋಚರವಾಗದ್ದನ್ನು ನಂಬಬೇಡಿ&#8221; ಎಂದು ಹೇಳಿದ. ಬುದ್ಧನು &#8220;ಯಾರಾದರೂ ಹೇಳಿದ್ದು ನಿಜವೆಂದು ನಂಬಬೇಡಿ, ಮೊದಲು ಆಲೋಚಿಸಿ, ಪರೀಕ್ಷಿಸಿ, ಆಮೇಲೆ ನಂಬಿ, ಅದನ್ನು ಜನರ ಒಳಿತಿಗಾಗಿ ಬಳಸಿ,&#8221; ಎಂದು ಬೋಧಿಸಿದ. ಈ ಎರಡು ದೃಷ್ಠಿಕೋನಗಳೂ ವೈಜ್ಞಾನಿಕ ಚಿಂತನೆಗೆ ಗಟ್ಟಿತನವನ್ನು ನೀಡುತ್ತವೆ.<br><br>ಗೌಹರ್ ರಾಝಾ ಅವರು ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ 179 ನೇ ಸೂಕ್ತವಾದ ನಾಸದೀಯ ಸೂಕ್ತವನ್ನು ಈ ವಿವೇಚನಾ ಸಂಸ್ಕೃತಿಯ ಬಗ್ಗೆ ಮಾತನಾಡಲು ಬಳಸುತ್ತಾರೆ.<br><br><em>&#8220;ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ತಿಳಿದವರು ಎಂಬ ಪ್ರಶ್ನೆಯನ್ನು ಇದರಲ್ಲಿ ಎತ್ತಿಕೊಳ್ಳುತ್ತಾರೆ. &nbsp;ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಬಂದಾಗ, ದೇವತೆಗಳು ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೆ, ದೇವತೆಗಳು ಸೃಷ್ಟಿಯ ನಂತರ ಬಂದವರಾದ್ದರಿಂದ ಅವರಿಗೂ ಇದು ತಿಳಿದಿಲ್ಲ.&#8221;</em><br><br>ನಾಸದೀಯ ಸೂಕ್ತದ ಈ ಪ್ರಶ್ನೋತ್ತರವು ಮನುಷ್ಯನ ವಿವೇಚನಾ ಶಕ್ತಿಯೇ ಆಗಿದೆ. ಆದರೆ ಕಾಲ ಕಳೆದಂತೆ ಪ್ರಶ್ನಿಸುವುದನ್ನು ಧರ್ಮಗಳು ಘನಘೋರ ಅಪರಾಧವಾಗಿ ಕಂಡವು, ಈಗಲೂ ಕಾಣುತ್ತಿದ್ದಾವೆ.</p>



<p>ಆದರೆ, ನಾವು ಭಯಯಿಂದ, ನಂಬಿಕೆಗಳಿಂದ, ಮತ್ತು ಅಜ್ಞಾನದ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಇಂತಹ ಪರಂಪರೆಯ ಬದಲು ಯಾವುದನ್ನು ಕೊಡಲು ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.</p>



<p>ಭಾರತೀಯ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ಸತ್ಯಗಳೊಂದಿಗೆ ಡಿಕ್ಕಿ ಹೊಡೆಯುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೆಲವೊಮ್ಮೆ ಪುರಾತನ ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿತವಾದ ವಿಚಾರಗಳನ್ನು ವೈಜ್ಞಾನಿಕ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತವೆ — ಉದಾಹರಣೆಗೆ, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಭಾರತದಲ್ಲೇ ಇದ್ದಿತೆಂಬ ಅರ್ಥಹೀನ ಹೇಳಿಕೆಗಳು. ಈ ರೀತಿಯ &#8216;ಸುಳ್ಳು ವಾದ&#8217;ಗಳು ಸಮಾಜದಲ್ಲಿ ವೈಜ್ಞಾನಿಕತೆಯ ನಿಜವಾದ ಅರ್ಥವನ್ನು ನಾಶ ಮಾಡುತ್ತಿವೆ. ಸ್ವತಃ ಪ್ರಧಾನಿ ಮೋದಿಯವರು ಗಣಪತಿಯನ್ನು ಪ್ಲಾಸ್ಟಿಕ್‌ ಸರ್ಜರಿಯಿಂದ ಹುಟ್ಟಿದವನು ಎಂದು ಹೇಳಿದರು. ಆದರೆ ಕುಲಶಾಸ್ತ್ರೀಯವಾಗಿ, ಧಾರ್ಮಿಕ ಪಠ್ಯಗಳಲ್ಲಿ ಈ ಆನೆ ತಲೆಗೆ ಬೇರೆಯೇ ಅರ್ಥಗಳು ಇವೆ. ಮೋದಿಯವರ ಹೇಳಿಕೆಯಿಂದ ವಿಜ್ಞಾನಕ್ಕೆ ಮಾತ್ರ ಅವಮಾನವಲ್ಲ, ಗಣಪತಿಗೂ ಅವಮಾನ ಆಯ್ತು.</p>



<p><strong>ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಚಿಂತ</strong><strong>ನೆಯ ಕೊರತೆ</strong><strong></strong></p>



<p>ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿಲ್ಲ. &nbsp;ವಿದ್ಯಾರ್ಥಿಗಳು ಪರೀಕ್ಷೆ ಪಾಸ್ ಆಗುವುದು ಮುಖ್ಯ ಎಂಬ ಒತ್ತಡವನ್ನು ಸೃಷ್ಟಿಸಿಕೊಂಡಿರುವುದರಿಂದ, ಪ್ರಶ್ನೆಗಳನ್ನು ಕೇಳುವ ಸಂಸ್ಕೃತಿಕ ಕಮ್ಮಿಯಾಗುತ್ತಿದೆ. “<em>ನೀವು ಪ್ರಶ್ನೆ ಕೇಳದಿದ್ದರೆ, ನೀವು ಮತ್ತೆ ಮನುಷ್ಯನಿಂದ ಪ್ರಾಣಿಯೆ ಆಗುತ್ತೀರಿ,</em>” ಎಂದು ಗೌಹರ್ ರಾಝಾ ಈ ಬಗ್ಗೆ ತೀವ್ರವಾಗಿ ಚಿಂತೆ ವ್ಯಕ್ತಪಡಿಸುತ್ತಾರೆ.<br><br>ನಮ್ಮ ಪಠ್ಯಪುಸ್ತಕಗಳಿಂದ ಡಾರ್ವಿನ್‌ನ ವಿಕಾಸವಾದವನ್ನು ತೆಗೆದುಹಾಕಲಾಗಿದೆ. ಸರಿ, ಆ ವಾದದ ಬಗ್ಗೆ ಇನ್ನೂ ವಿವಾದಗಳಿಗೆ, ಒಪ್ಪೋಣ. ಆದರೆ ಆವರ್ತಕ ಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ವನ್ನೂ ತೆಗೆದುಹಾಕಿದ್ದಾರೆ. ಯಾಕೆ?<br><br>ಯಾಕೆಂದರೆ, ಇದನ್ನು ಓದಿದ ಮಕ್ಕಳು ಬಾಬಾ-ಸ್ವಾಮಿಗಳು ಸೃಷ್ಟಿಯ ಬಗ್ಗೆ ನೀಡುವ ಅವೈಜ್ಞಾನಿಕ, ಸುಳ್ಳು ಪ್ರವಚನಗಳನ್ನು ಪ್ರಶ್ನಿಸದೇ ಇರಲೆಂದು! ಅವರು ಈ ಭೂಮಿ ಪಂಚಭೂತಗಳಿಂದ ಆಗಿದೆ ಎಂದು ಇಂದಿಗೂ ನಂಬುತ್ತಾರೆ, ಆದರೆ ಮ್ಯಾಂಡಲೀವನ ಆವರ್ತಕ ಕೋಷ್ಟಕವು ಇಲ್ಲಿಯ ವರೆಗೆ ಪತ್ತೆಯಾಗಿರುವ 119 ಅಂಶಗಳಿವೆ, ಇವುಗಳಿಂದ ಸೃಷ್ಟಿ ಆಗಿದೆ ಎಂದು ಹೇಳುತ್ತದೆ.<br><br>ಬಾಬಾಗಳು-ಮುಲ್ಲಾಗಳು-ಸ್ವಾಮಿಗಳು ಅವರ ಅಂಗಡಿಯ ಬಾಗಿಲು ಪರ್ಮನೆಂಟಾಗಿ ಮುಚ್ಚುವುದನ್ನು ತಡೆಯಲು ಅವರ ಕೈಯಲ್ಲಿರುವ ಸರ್ಕಾರ ಈ ಪೀರಿಯಾಡಿಕ್‌ ಟೇಬಲ್‌ನಂತರ ಮಹತ್ವದ ಪಾಠಗಳನ್ನು ವಿಜ್ಞಾನದ ಪಾಠಪುಸ್ತಕಗಳಿಂದ ಕಿತ್ತುಹಾಕಿದೆ.</p>



<p><strong>ತಂತ್ರಜ್ಞಾನ ಮತ್ತು ವಿಜ್ಞಾನ — ಸ್ಪಷ್ಟ ಭಿನ್ನತೆ</strong><br>ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೈಜ್ಞಾನಿಕತೆಯನ್ನು ನಿರಾಕರಿಸುವ ಒಂದು ವಿಚಿತ್ರ ಪ್ರವೃತ್ತಿ ಭಾರತದಲ್ಲಿ ಕಾಣಸಿಗುತ್ತದೆ. ಮುಲ್ಲಾಗಳು ಅಥವಾ ಸ್ವಾಮಿಗಳ ಪ್ರವಚನಗಳಲ್ಲಿ ವೈಜ್ಞಾನಿಕ ಸಾಧನೆಗಳ ಕುರಿತಾಗಿ ತಾತ್ವಿಕ ವಿರೋಧ ಕಂಡುಬರುತ್ತದೆ.<br><br>ಸಂಪ್ರದಾಯವಾದಿಗಳಿಗೆ ತಂತ್ರಜ್ಞಾನ ಬೇಕು, ವಿಜ್ಞಾನ ಬೇಡ. ವಿಜ್ಞಾನ ಒಂದು ಅರಿವು, ತಂತ್ರಜ್ಞಾನ ಎಂಬುದು ಆ ಅರಿವನ್ನು ಬಳಸಿಕೊಂಡು ಮಾನವೇಂದ್ರಿಯಗಳ ಅನುಕೂಲಕ್ಕೆ ಸಾಧನಗಳನ್ನು ಉತ್ಪಾಸಿಸುವ ಕ್ಷೇತ್ರ ಅಷ್ಟೇ. ಹಾಗಾಗಿ, ಬಾಬಾ- ಮುಲ್ಲಾಗಳಿಗೆ ತಂತ್ರಜ್ಞಾನದಿಂದ ಹುಟ್ಟಿದ ಸಾಧನಗಳು ಬೇಕು, ಆದರೆ ವಿಜ್ಞಾನ ಬೇಡ. ವಿಜ್ಞಾನ ಅವರು ಕೊಡುವ ಧಾರ್ಮಿಕ ಪ್ರವಚನಕ್ಕೆ ಸವಾಲನ್ನು ಒಡ್ಡುತ್ತದೆ.<br><br>ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಜನರು, ಮುಖ್ಯವಾಗಿ ಸ್ತ್ರೀಯರು, ಫೋಟೋ ತೆಗೆಸಿಕೊಳ್ಳುವುದನ್ನು, ಟಿವಿ ನೋಡುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದರು. ಆದರೆ ಅದೇ ತಾಲಿಬಾನಿ ನಾಯಕರು ಕ್ಯಾಮರಾದ ಮುಂದೆ ಬಂದು ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ತಂತ್ರಜ್ಞಾನ ಎಂಬ ವಿಜ್ಞಾನದ ಕೂಸು ಮತೀಯವಾದಿಗಳ ಕೈಗೆ ಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.<br><br>ಈ ನಿಖರ ವ್ಯತ್ಯಾಸವನ್ನು ತಿಳಿಯದಿದ್ದರೆ, ನಾವು ವೈಜ್ಞಾನಿಕ ಮನೋಭಾವವನ್ನು ಶ್ರದ್ದೆ ಅಥವಾ ಭಕ್ತಿಯನ್ನು ಇಟ್ಟು ಗೊಂದಲಕ್ಕೊಳಗಾಗುತ್ತೇವೆ.</p>



<p><strong>ವೈಜ್ಞಾನಿಕತೆಯ ರಾಜಕೀಯಕರಣ</strong><br>ವೈಜ್ಞಾನಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಅಥವಾ ನಿರಾಕರಿಸುವ ಉದಾಹರಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಜ್ಞಾನಿಗಳ ಧ್ವನಿಯನ್ನು ಹತ್ತಿಕ್ಕುವ ಅಪಾಯವಿದೆ. ಗೌಹರ್ ರಾಝಾ ಈ ಬಗ್ಗೆ, “<em>ಇದು ರಾಜಕೀಯಕ್ಕಾಗಿ ವೈಜ್ಞಾನಿಕ ಸತ್ಯವನ್ನು ಬಳಕೆ ಮಾಡುವುದು</em>” ಎಂದು ಎಚ್ಚರಿಕೆ ನೀಡುತ್ತಾರೆ.</p>



<p><strong>ವೈಜ್ಞಾನಿಕ ಶಕ್ತಿ ಮತ್ತು ಪ್ರಗತಿಯ ಪರಿಪೂರ್ಣ ಸಂಬಂಧ</strong><br>ವೈಜ್ಞಾನಿಕ ಮನೋಭಾವವು ಒಂದು ರಾಷ್ಟ್ರದ ಪ್ರಗತಿಯ ಮೂಲ ಆಧಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯ ಹಿಂದೆ ಇರುವ ವಿಜ್ಞಾನಕ್ಕೆ ಮಾನ್ಯತೆ ನೀಡದೆ ಕೇವಲ ಅದರಿಂದ ಉತ್ಪಾದಿಸಲ್ಪಟ್ಟ ಸಾಧನೆಗಳನ್ನು &nbsp;ಸಂಭ್ರಮಿಸುವ ನಕಲಿ ರಾಷ್ಟ್ರೀಯತೆಯು ಯಾವುದೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡದು.</p>



<p>ಈ ಪಾಡ್‌ಕಾಸ್ಟ್‌ನಲ್ಲಿ ಕುನಾಲ್‌ ಕಾಮ್ರಾ ಅವರು ಗೌಹರ್ ರಾಝಾ ಅವರೊಂದಿಗೆ ಸುದೀರ್ಘ ಮತ್ತು ಆಳವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ವೈಜ್ಞಾನಿಕತೆ ಹೇಗೆ ಧರ್ಮ, ರಾಜಕೀಯ ಮತ್ತು ಶಿಕ್ಷಣದೊಂದಿಗೆ ಸಂಘರ್ಷ ಮಾಡಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ — &#8220;ಪ್ರ<em>ಶ್ನೆಗಳು ತಪ್ಪಾಗುವುದಿಲ್ಲ, ಉತ್ತರಗಳು ತಪ್ಪಾಗಬಹುದು</em>.&#8221;<br><br><strong>ಕುನಾಲ್‌ ಕಾಮ್ರಾ ಮತ್ತು ಗೌಹರ್‌ ರಾಝಾ ಅವರ ಸಂವಾದವನ್ನು ವೀಕ್ಷಿಸಲು</strong>: <a href="https://youtu.be/OPLFh1A-HCE?si=HRoi_cnb6Mha5oaV">Are We 🇮🇳 Indians Scientific? | Nope ft. Gauhar Raza | Episode 001</a></p>



<p><br></p>



<p></p>
]]></content:encoded>
					
		
		
			</item>
		<item>
		<title>ಬಾಹ್ಯಾಕಾಶದಲ್ಲಿ ಸಿಲ್ಕ್ ರೋಡ್: 2050 ಕ್ಕೆ ಚೀನಾದ ಬಾಹ್ಯಾಕಾಶ ಯೋಜನೆಗಳ ಗುರಿ!</title>
		<link>https://peepalmedia.com/silk-road-in-space-the-goal-of-chinas-space-project-for-2050/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 27 Dec 2024 09:38:14 +0000</pubDate>
				<category><![CDATA[ಅಂಕಣ]]></category>
		<category><![CDATA[ವಿಜ್ಞಾನ-ತಂತ್ರಜ್ಞಾನ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[china]]></category>
		<category><![CDATA[China’s Space Plan]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mars]]></category>
		<category><![CDATA[Moon]]></category>
		<category><![CDATA[President Xi Jinping]]></category>
		<category><![CDATA[science]]></category>
		<category><![CDATA[Silk Road]]></category>
		<category><![CDATA[Space exploration]]></category>
		<category><![CDATA[space science]]></category>
		<category><![CDATA[stars]]></category>
		<category><![CDATA[sun]]></category>
		<category><![CDATA[technology]]></category>
		<category><![CDATA[universe]]></category>
		<category><![CDATA[Xi Jinping]]></category>
		<guid isPermaLink="false">https://peepalmedia.com/?p=51336</guid>

					<description><![CDATA[ಬಾಹ್ಯಾಕಾಶ ಸಂಶೋಧನೆಯು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಪ್ರಮುಖ ಕ್ಷೇತ್ರವಾಗಿದೆ, ಇದು ರಾಷ್ಟ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಪ್ರಬಲ ಸಂಕೇತವಾಗಿದೆ. ಇದು ಬಾಹ್ಯಾಕಾಶದಲ್ಲಿ ಚೀನಾದ ಭವಿಷ್ಯವನ್ನು ನಿರ್ಮಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ದೂರದೃಷ್ಟಿಯ ಕೇಂದ್ರ ಲಕ್ಷಣವಾಗಿದೆ. 2013 ರಲ್ಲಿ, ಕ್ಸಿ ದೃಢವಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಮತ್ತು ಚೀನಾವನ್ನು ಬಾಹ್ಯಾಕಾಶ ಶಕ್ತಿಯಾಗಿ ಪರಿವರ್ತಿಸಲು ಒತ್ತು ನೀಡಿದರು. ಸೆಪ್ಟೆಂಬರ್ 2024 ರಲ್ಲಿ, ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವರ್ಧಿತ ಪುಶ್‌ಗೆ ಕರೆ ನೀಡುವ ಮೂಲಕ ಕ್ಸಿ ಈ [&#8230;]]]></description>
										<content:encoded><![CDATA[
<pre class="wp-block-code"><code><em><strong>ಮುಂದಿನ 25 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ಚೀನಾ ನೀಡುತ್ತಿರುವ ಆದ್ಯತೆಗಳನ್ನು ಎತ್ತಿ ತೋರಿಸುವ ಐದು ಪ್ರಮುಖ ವಿಷಯಗಳು ಮತ್ತು ಮೂರು ಹಂತಗಳ ಕಾರ್ಯಕ್ರಮವನ್ನು ಅಜಯ್‌ ಲೆಲೆ ವಿವರಿಸಿದ್ದಾರೆ </strong></em></code></pre>



<p>ಬಾಹ್ಯಾಕಾಶ ಸಂಶೋಧನೆಯು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಪ್ರಮುಖ ಕ್ಷೇತ್ರವಾಗಿದೆ, ಇದು ರಾಷ್ಟ್ರದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯ ಪ್ರಬಲ ಸಂಕೇತವಾಗಿದೆ. ಇದು ಬಾಹ್ಯಾಕಾಶದಲ್ಲಿ ಚೀನಾದ ಭವಿಷ್ಯವನ್ನು ನಿರ್ಮಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ದೂರದೃಷ್ಟಿಯ ಕೇಂದ್ರ ಲಕ್ಷಣವಾಗಿದೆ.</p>



<p>2013 ರಲ್ಲಿ, ಕ್ಸಿ ದೃಢವಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಮತ್ತು ಚೀನಾವನ್ನು ಬಾಹ್ಯಾಕಾಶ ಶಕ್ತಿಯಾಗಿ ಪರಿವರ್ತಿಸಲು ಒತ್ತು ನೀಡಿದರು. ಸೆಪ್ಟೆಂಬರ್ 2024 ರಲ್ಲಿ, ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವರ್ಧಿತ ಪುಶ್‌ಗೆ ಕರೆ ನೀಡುವ ಮೂಲಕ ಕ್ಸಿ ಈ ದೃಷ್ಟಿಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದರು.&nbsp;</p>



<p>ಅವರ ಹೇಳಿಕೆಗಳು ಚೀನಾದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಪ್ರಾಮುಖ್ಯತೆಯನ್ನು ಗುರುತಿಸುತ್ತಿದೆ. ಖಾಸಗಿ ಏರೋಸ್ಪೇಸ್ ವಲಯದ ಪಾತ್ರಕ್ಕೆ ಕ್ಸಿ ಒತ್ತು ನೀಡಿದ್ದು, ಚೀನಾದ ಬಾಹ್ಯಾಕಾಶ ಪರಿಶೋಧನೆಯನ್ನು ಮುಂದೂಡುವಲ್ಲಿ ಈ ವಲಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಸೂಚಿಸುತ್ತದೆ, ಇಲ್ಲದಿದ್ದರೆ ಅದು ಹೆಚ್ಚಾಗಿ ಪೀಪಲ್ಸ್ ಲಿಬರೇಶನ್ ಆರ್ಮಿ-ನಿಯಂತ್ರಿತ ಚಟುವಟಿಕೆಯಾಗಿದೆ.&nbsp;</p>



<p><strong>ಬಾಹ್ಯಾಕಾಶದಲ್ಲಿ ಚೀನಾದ ಯಶಸ್ಸು</strong></p>



<p>ಕ್ಸಿಯ 2013 ರ ಘೋಷಣೆಯು 2003 ರಲ್ಲಿ ಚೀನಾದ ಯಶಸ್ವಿ ಸಿಬ್ಬಂದಿ ಬಾಹ್ಯಾಕಾಶ ನೌಕೆ ಕಾರ್ಯಾಚರಣೆಯ ಒಂದು ದಶಕದ ನಂತರ ಹೊರಬಂದಿತು. ಕಳೆದ ಎರಡು ದಶಕಗಳಲ್ಲಿ, ಚೀನಾ ಬಾಹ್ಯಾಕಾಶ ಸಂಶೋಧನೆಯಲ್ಲಿ ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿದೆ.&nbsp;</p>



<p>ಇಲ್ಲಿಯವರೆಗೆ, ಚೀನಾ ಸುಮಾರು 14 ಮಾನವ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ ಮತ್ತು ಅವರ ಗಗನಯಾತ್ರಿಗಳು (ಟೈಕೋನಾಟ್ಸ್) ಬಾಹ್ಯಾಕಾಶ ನಡಿಗೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಚೀನಾದ ಮತ್ತೊಂದು ಪ್ರಮುಖ ಸಾಧನೆಯೆಂದರೆ ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ಜೋಡಣೆ (ನವೆಂಬರ್ 2022), ಅಲ್ಲಿ ಟೈಕೋನಾಟ್‌ಗಳು ನಿರಂತರವಾಗಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ.&nbsp;</p>



<p>ಚೀನಾದ ಚಂದ್ರನ ಅನ್ವೇಷಣೆಯ ಪ್ರಯತ್ನಗಳು ಅಷ್ಟೇ ಗಮನಾರ್ಹವಾಗಿದೆ. ಅವರ ಮೊದಲ ಚಂದ್ರನ ಕಾರ್ಯಾಚರಣೆಯನ್ನು (ಚಾಂಗ್&#8217;ಇ 1) ಅಕ್ಟೋಬರ್ 2007 ರಲ್ಲಿ ಪ್ರಾರಂಭಿಸಲಾಯಿತು. ಡಿಸೆಂಬರ್ 2013 ರ ವೇಳೆಗೆ, ತನ್ನ ಮೂರನೇ ಕಾರ್ಯಾಚರಣೆಯಲ್ಲಿ (ಚಾಂಗ್&#8217;ಇ 3), ಚೀನಾ ಯಶಸ್ವಿಯಾಗಿ ಚಂದ್ರನ ಮೇಲೆ ರೋವರ್ ಮತ್ತು ಲ್ಯಾಂಡರ್ ವ್ಯವಸ್ಥೆಯನ್ನು ಇಳಿಸಿತು.&nbsp;</p>



<p>ಮೇ 2024 ರಲ್ಲಿ, ಚೀನಾದ ಚಾಂಗ್ 6 ಮಿಷನ್ (ಮಾದರಿ ರಿಟರ್ನ್ ಮಿಷನ್) ಸರಿಸುಮಾರು 2 ಕೆಜಿ ಚಂದ್ರನ ಮಣ್ಣನ್ನು ಭೂಮಿಗೆ ತಲುಪಿಸಿತು. ಚೀನಾದ ಮಂಗಳ ಗ್ರಹದ ಅನ್ವೇಷಣೆಯು 2020 ರಲ್ಲಿ ಟಿಯಾನ್‌ವೆನ್-1 ಮಿಷನ್‌ನೊಂದಿಗೆ ಪ್ರಾರಂಭವಾಯಿತು. ಈ ಮೊದಲ ಕಾರ್ಯಾಚರಣೆಯಲ್ಲಿಯೇ ಚೀನಾ ಮಂಗಳದ ಮೇಲ್ಮೈಯಲ್ಲಿ ಲ್ಯಾಂಡರ್ ಮತ್ತು ರೋವರ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಇರಿಸಿದೆ.&nbsp;</p>



<p><strong>ಭವಿಷ್ಯದ ಯೋಜನೆ</strong></p>



<p>ಕಳೆದ ಕೆಲವು ದಶಕಗಳಲ್ಲಿ ಬಾಹ್ಯಾಕಾಶದಲ್ಲಿ ಇಂತಹ ಮಹತ್ವದ ಸಾಧನೆಗಳೊಂದಿಗೆ, ಚೀನಾ ಇತ್ತೀಚೆಗೆ (ಅಕ್ಟೋಬರ್ 2024) 2024 ರಿಂದ 2050 ರವರೆಗೆ ಬಾಹ್ಯಾಕಾಶ ಸಂಶೋಧನೆಗಾಗಿ ತನ್ನ ಕಾರ್ಯಸೂಚಿಯನ್ನು ಸ್ಪಷ್ಟಪಡಿಸಿದೆ.&nbsp;</p>



<p>ಈ ಪ್ರಗತಿಪರ ಯೋಜನೆಯು ಚೀನಾ ತನ್ನ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ದೃಢವಾದ ಅಡಿಪಾಯವನ್ನು ಸ್ಥಾಪಿಸುವುದನ್ನು ಮೊದಲು ಖಚಿತಪಡಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಇಂದು, ದೇಶವು ಒಂದು ನಿರ್ದಿಷ್ಟ ಮಟ್ಟದ ತಾಂತ್ರಿಕ ಬೆಳವಣಿಗೆಯನ್ನು ತಲುಪಿದೆ, ಅಲ್ಲಿ ಪ್ರಮುಖ ಆವಿಷ್ಕಾರಗಳು ನಡೆಯುತ್ತಿವೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ NASA ಚೀನಾದೊಂದಿಗೆ ಸಹಯೋಗ ಮಾಡಿಕೊಳ್ಳುತ್ತಿಲ್ಲ, ಆದರೆ ಅವರು ಕೆಲವು ಪ್ರಮುಖ ವಿದೇಶಿ ಸಹಯೋಗಗಳನ್ನು ಹೊಂದಿದ್ದಾರೆ.&nbsp;</p>



<p>ಇದಲ್ಲದೆ, ಚೀನಾ ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳಿಗಿರುವ ಅಡಚಣೆಯನ್ನು ಕಡಿಮೆ ಮಾಡುವ ಮೂಲಕ ಪೂರೈಕೆ ಸರಪಳಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಿದೆ. ಈ ನಿರ್ಣಾಯಕ ಅಂಶಗಳನ್ನು ಭದ್ರಪಡಿಸಿದ ನಂತರವೇ ಚೀನಾ ತನ್ನ ಬಾಹ್ಯಾಕಾಶ ಚಟುವಟಿಕೆಗಳ ಭವಿಷ್ಯದ ಪಥವನ್ನು ವ್ಯಾಖ್ಯಾನಿಸಲು ಪ್ರಾರಂಭಿಸಿದೆ. ಚೀನಾ ಘೋಷಿಸಿದ ಈ ಮಹತ್ವಾಕಾಂಕ್ಷೆಯ ಗುರಿಗಳನ್ನು ವಿಮರ್ಶಾತ್ಮಕವಾಗಿ ನೋಡುವುದು ಮತ್ತು ಅದರ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.&nbsp;</p>



<p>ಚೀನಾ 2024 ರ ಅಕ್ಟೋಬರ್ ಮಧ್ಯದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕಾಗಿ ರಾಷ್ಟ್ರೀಯ ಮಧ್ಯಮ ಮತ್ತು ದೀರ್ಘಾವಧಿಯ ಅಭಿವೃದ್ಧಿ ಕಾರ್ಯಕ್ರಮವನ್ನು ಅನಾವರಣಗೊಳಿಸಿತು. ಪ್ರೋಗ್ರಾಂ&nbsp;<a href="https://english.cas.cn/print_2019/index.shtml?docurl=https://english.cas.cn/newsroom/cas_media/202410/t20241015_691782.shtml">ಐದು ಪ್ರಮುಖ ವಿಷಯಗಳು ಮತ್ತು ಮೂರು ವಿಭಿನ್ನ ಹಂತಗಳನ್ನು</a>&nbsp;ಮುಂದಿನ 25 ವರ್ಷಗಳಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ ತಮ್ಮ ಆದ್ಯತೆಗಳನ್ನು ಎತ್ತಿ ತೋರಿಸುತ್ತದೆ.</p>



<p>ಐದು ಪ್ರಮುಖ ವೈಜ್ಞಾನಿಕ ವಿಷಯಗಳು:&nbsp;</p>



<ol class="wp-block-list">
<li>ವ್ಯಾಪಕ ಬ್ರಹ್ಮಾಂಡ&nbsp;&#8211; The extreme universe&nbsp;</li>



<li>ಬಾಹ್ಯಾಕಾಶ-ಸಮಯದ ಅಲೆಗಳು &#8211; Space-time ripples</li>



<li>ಸೂರ್ಯ-ಭೂಮಿಯ ವ್ಯವಸ್ಥೆಯ ವಿಹಂಗಮ ನೋಟ &#8211; Panoramic view of Sun-Earth system</li>



<li>ವಾಸಯೋಗ್ಯ ಗ್ರಹಗಳು &#8211; Habitable planets</li>



<li>ಬಾಹ್ಯಾಕಾಶದಲ್ಲಿ ಜೈವಿಕ ಮತ್ತು ಭೌತಿಕ ವಿಜ್ಞಾನಗಳು &#8211; Biological and Physical sciences in space</li>
</ol>



<p>ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (CAS) ವಿವರಿಸಿದಂತೆ ಈ ಐದು ವಿಷಯಗಳ ಬಗ್ಗೆ ಹೀಗೆ ವ್ಯಾಖ್ಯಾನಿಸಲಾಗಿದೆ:</p>



<p><strong>ಎಕ್ಸ್‌ಟ್ರೀಮ್ ಯೂನಿವರ್ಸ್&nbsp;:&nbsp;</strong>&nbsp;ಬ್ರಹ್ಮಾಂಡದ ಮೂಲ ಮತ್ತು ವಿಕಸನವನ್ನು ಅನ್ವೇಷಿಸುವತ್ತ ಗಮನಹರಿಸಲಾಗಿದೆ, ವಿಪರೀತ ಕಾಸ್ಮಿಕ್ ಪರಿಸ್ಥಿತಿಗಳಲ್ಲಿ ಭೌತಿಕ ನಿಯಮಗಳನ್ನು ಬಹಿರಂಗಪಡಿಸುತ್ತದೆ. ಕಾಸ್ಮಿಕ್ ಬ್ಯಾರಿಯೋನಿಕ್ ಮ್ಯಾಟರ್ ಪತ್ತೆಗೆ ಸಹ ಪ್ರಯತ್ನಗಳನ್ನು ಮಾಡಲಾಗುವುದು.</p>



<p><strong>ಬಾಹ್ಯಾಕಾಶ-ಸಮಯದ ಅಲೆಗಳು&nbsp;:</strong> ಇಲ್ಲಿ, ಗುರುತ್ವಾಕರ್ಷಣೆ ಮತ್ತು ಬಾಹ್ಯಾಕಾಶ-ಸಮಯದ ಸ್ವರೂಪವನ್ನು ಬಹಿರಂಗಪಡಿಸುವ ಗುರಿಯೊಂದಿಗೆ ಮಧ್ಯಮದಿಂದ ಕಡಿಮೆ-ಆವರ್ತನದ ಗುರುತ್ವಾಕರ್ಷಣೆಯ ಅಲೆಗಳು ಮತ್ತು ಆದಿಸ್ವರೂಪದ (primordial) ಗುರುತ್ವಾಕರ್ಷಣೆಯ ಅಲೆಗಳನ್ನು ಕಂಡುಹಿಡಿಯುವ ಕಲ್ಪನೆಯಾಗಿದೆ. ಆದ್ಯತೆಯ ಪ್ರದೇಶವು ಬಾಹ್ಯಾಕಾಶ ಆಧಾರಿತ ಗುರುತ್ವಾಕರ್ಷಣೆಯ ತರಂಗ ಪತ್ತೆಯಾಗಿದೆ.</p>



<p><strong>ಸೂರ್ಯ-ಭೂಮಿಯ ವಿಹಂಗಮ ನೋಟ&nbsp;: </strong>ಇದು ಸೂರ್ಯ, ಭೂಮಿ ಮತ್ತು ಸೂರ್ಯಗೋಳದ ಅನ್ವೇಷಣೆಯನ್ನು ಸೂಚಿಸುತ್ತದೆ. ಸೂರ್ಯ-ಭೂಮಿಯ ವ್ಯವಸ್ಥೆಯೊಳಗಿನ ಸಂಕೀರ್ಣ ಸಂವಹನಗಳನ್ನು ನಿಯಂತ್ರಿಸುವ ಭೌತಿಕ ಪ್ರಕ್ರಿಯೆಗಳು ಮತ್ತು ನಿಯಮಗಳನ್ನು ಬಿಚ್ಚಿಡುವುದು ಇದರ ಉದ್ದೇಶವಾಗಿದೆ. ಭೂಮಿಯ ಚಕ್ರ ವ್ಯವಸ್ಥೆಗಳನ್ನು ಕಡಿಮೆ ಮಾಡಲು ಪ್ರಾಮುಖ್ಯತೆಯನ್ನು ನೀಡಲಾಗುವುದು. ಭೂಮಿ-ಚಂದ್ರ ವ್ಯವಸ್ಥೆ, ಬಾಹ್ಯಾಕಾಶ ಹವಾಮಾನ, ಮೂರು ಆಯಾಮದ ಸೌರ ಪರಿಶೋಧನೆ ಮತ್ತು ಹೀಲಿಯೋಸ್ಪಿಯರ್ ಪರಿಶೋಧನೆಯ ಸಮಗ್ರ ಅವಲೋಕನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ಇರುತ್ತವೆ.&nbsp;</p>



<p><strong>ವಾಸಯೋಗ್ಯ ಗ್ರಹಗಳು&nbsp;:</strong> ವಿಜ್ಞಾನಿಗಳು ಸೌರವ್ಯೂಹ ಮತ್ತು ಬಾಹ್ಯ ಗ್ರಹಗಳನ್ನು ಅನ್ವೇಷಿಸಿ ಮಾನವ ವಾಸಕ್ಕೆ ಅವುಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸುತ್ತಾರೆ. ಭೂಮ್ಯತೀತ ಜೀವಿಗಳ (extraterrestrial life) ಹುಡುಕಾಟ, ಸೌರವ್ಯೂಹದ ಮೂಲ ಮತ್ತು ವಿಕಸನ, ಗ್ರಹಗಳ ವಾತಾವರಣದ ಗುಣಲಕ್ಷಣಗಳು ಮತ್ತು ಎಕ್ಸೋಪ್ಲಾನೆಟ್ ಪತ್ತೆ ಕೂಡ ಈ ಹಂತದ ಪ್ರಮುಖ ಪ್ರಶ್ನೆಯಾಗಿದೆ.&nbsp;</p>



<p><strong>ಬಾಹ್ಯಾಕಾಶದಲ್ಲಿ ಜೈವಿಕ ಮತ್ತು ಭೌತಿಕ ವಿಜ್ಞಾನಗಳು&nbsp;: </strong>ಇಲ್ಲಿ, ಮೂಲಭೂತ ಭೌತಶಾಸ್ತ್ರದ ತಿಳುವಳಿಕೆಯನ್ನು ಗಾಢವಾಗಿಸಲು ಬಾಹ್ಯಾಕಾಶ ಪರಿಸ್ಥಿತಿಗಳಲ್ಲಿ ಮ್ಯಾಟರ್ ಚಲನೆ ಮತ್ತು ಜೀವನ ಚಟುವಟಿಕೆಗಳ ನಿಯಮಗಳನ್ನು ಪ್ರಶ್ನಿಸುವುದು ಪರಿಕಲ್ಪನೆಯಾಗಿದೆ. ಪ್ರಮುಖ ಆದ್ಯತೆಯ ಕ್ಷೇತ್ರಗಳಲ್ಲಿ ಮೈಕ್ರೋಗ್ರಾವಿಟಿ ವಿಜ್ಞಾನ, ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಸಾಮಾನ್ಯ ಸಾಪೇಕ್ಷತೆ ಮತ್ತು ಬಾಹ್ಯಾಕಾಶ ಜೀವ ವಿಜ್ಞಾನಗಳು ಸೇರಿವೆ.</p>



<p>ಕಾರ್ಯಕ್ರಮವು ಮೂರು ವಿಭಿನ್ನ ಹಂತಗಳ ಅಡಿಯಲ್ಲಿ ಸ್ಪೇಸ್ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ಸಹ ವಿವರಿಸುತ್ತದೆ:</p>



<ol class="wp-block-list">
<li><strong>ಮೊದಲ ಹಂತ (2024-2027)&nbsp;:</strong> ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳು ಮತ್ತು ಗ್ರಹಗಳ ಅನ್ವೇಷಣೆಯೊಂದಿಗೆ ಮಾನವಸಹಿತ ಚಂದ್ರನ ಪರಿಶೋಧನೆ ಯೋಜನೆಯ ಅನುಷ್ಠಾನದ ಮೇಲೆ ಕೇಂದ್ರೀಕರಿಸಲಾಗಿದೆ. ಕೆಲವು ಪ್ರಮುಖ ಯೋಜನೆಗಳನ್ನು ಪ್ರಸ್ತುತಪಡಿಸುವ ನಿರೀಕ್ಷೆಯಿದೆ ಮತ್ತು ಈ ಅವಧಿಯಲ್ಲಿ ಸುಮಾರು ಐದರಿಂದ ಎಂಟು ಬಾಹ್ಯಾಕಾಶ ವಿಜ್ಞಾನ ಉಪಗ್ರಹ ಕಾರ್ಯಾಚರಣೆಗಳನ್ನು ಅನುಮೋದಿಸುವ ಸಾಧ್ಯತೆಯಿದೆ:</li>



<li><strong>ಎರಡನೇ ಹಂತ (2028-2035)&nbsp;:</strong> ಅಂತರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರದ ನಿರ್ಮಾಣ. ಈ ಏಳು ವರ್ಷಗಳ ಹಂತದಲ್ಲಿ ಸುಮಾರು 15 ವೈಜ್ಞಾನಿಕ ಉಪಗ್ರಹ ಕಾರ್ಯಾಚರಣೆಗಳ ಉಡಾವಣೆ ನಿರೀಕ್ಷಿಸಲಾಗಿದೆ.&nbsp;</li>



<li><strong>ಮೂರನೇ ಹಂತ (2036-2050)&nbsp;:</strong> 30 ಕ್ಕೂ ಹೆಚ್ಚು ಬಾಹ್ಯಾಕಾಶ ವಿಜ್ಞಾನ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ.</li>
</ol>



<p><strong>ಮೌಲ್ಯಮಾಪನ&nbsp;</strong></p>



<p>2024-2050ರ ಕಾರ್ಯಕ್ರಮವನ್ನು ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ (CAS), ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (CNSA) ಮತ್ತು ಚೀನಾ ಮ್ಯಾನ್ಡ್ ಸ್ಪೇಸ್ ಏಜೆನ್ಸಿ (CMSA) ಜಂಟಿಯಾಗಿ ಬಿಡುಗಡೆ ಮಾಡಿದೆ. ಚೀನಾದ ಬಾಹ್ಯಾಕಾಶ ವಿಜ್ಞಾನ ಮತ್ತು ಪರಿಶೋಧನಾ ಉಪಕ್ರಮಗಳನ್ನು ಕಾರ್ಯಗತಗೊಳಿಸಲು ಇವು ಪ್ರಾಥಮಿಕ ಸಂಸ್ಥೆಗಳಾಗಿವೆ.&nbsp;&nbsp;</p>



<p>ಆಳವಾದ ಬಾಹ್ಯಾಕಾಶ ಪರಿಶೋಧನೆಯಿಂದ ಇತರ ಗ್ರಹಗಳನ್ನು ಅರ್ಥಮಾಡಿಕೊಳ್ಳಲು, ಚೀನಾ ಬಾಹ್ಯಾಕಾಶ ವಿಜ್ಞಾನದ ಪ್ರತಿಯೊಂದು ಕ್ಷೇತ್ರವನ್ನು ಅಧ್ಯಯನ ಮಾಡಲು ಪ್ರಸ್ತಾಪಿಸುತ್ತಿದೆ. ಅಂತಹ ಅಧ್ಯಯನಗಳನ್ನು ಕೈಗೊಳ್ಳಲು ಹಣಕಾಸಿನ ಹೂಡಿಕೆಗಳು ಗಮನಾರ್ಹವಾಗಿರುತ್ತವೆ. ಅದೇ ಸಮಯದಲ್ಲಿ, ಸಂಶೋಧನೆಗೆ ಸಂಬಂಧಿಸಿದ ಬಹಳಷ್ಟು ಅನಿಶ್ಚಿತತೆಗಳು ಒಳಗೊಂಡಿರುತ್ತವೆ. ಚೀನಾ ಯಾವುದೇ ತಕ್ಷಣದ ಆರ್ಥಿಕ ಪ್ರಯೋಜನಗಳನ್ನು ಹುಡುಕುತ್ತಿಲ್ಲ ಮತ್ತು ಕಾಯುವ ಆಟವನ್ನು (waiting game) ಆಡಬಹುದು ಎಂದು ಇದು ಸೂಚಿಸುತ್ತದೆ. ಅಂತಹ ಸಂಶೋಧನಾ ಹೂಡಿಕೆಗಳ ದೀರ್ಘಾವಧಿಯ ಪ್ರಾಮುಖ್ಯತೆಯನ್ನು ಚೀನಾ ಅರ್ಥಮಾಡಿಕೊಳ್ಳುತ್ತದೆ. ಅದು ಬಾಹ್ಯಾಕಾಶ ವಿಜ್ಞಾನದಲ್ಲಿ ನಾಯಕರಾಗಿ ಹೊರಹೊಮ್ಮಲು ಉತ್ಸುಕವಾಗಿದೆ.</p>



<p>ಚೀನಾದ ಬಾಹ್ಯಾಕಾಶ ಕಾರ್ಯಕ್ರಮವು ಬಲವಾದ ವಾಣಿಜ್ಯ ತಳಹದಿಯನ್ನು ಹೊಂದಿದೆ ಮತ್ತು ಅದರ ಭವಿಷ್ಯದ ಕಾರ್ಯಸೂಚಿಯು ಅದರ ವಿಶಾಲವಾದ ಬಾಹ್ಯಾಕಾಶ ದೂರದೃಷ್ಟಿಯೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ. ಉಪಗ್ರಹ ಅಭಿವೃದ್ಧಿ ಮತ್ತು ಉಡಾವಣೆಗಳಂತಹ ವಾಡಿಕೆಯ ವಾಣಿಜ್ಯ ಚಟುವಟಿಕೆಗಳ ಆಚೆಗೆ ಮತ್ತು ಸಂವಹನ, ಭೂಮಿಯ ವೀಕ್ಷಣೆ ಮತ್ತು ಸಂಚರಣೆಯಂತಹ ಸಂಬಂಧಿತ ಅಪ್ಲಿಕೇಶನ್‌ಗಳು, ಚೀನಾವು ಗ್ರಹಗಳ ಸಂಪನ್ಮೂಲ ಪರಿಶೋಧನೆಯಲ್ಲಿ ಉದ್ಯಮವನ್ನು ತೊಡಗಿಸಿಕೊಳ್ಳಲು ಬಯಸುತ್ತದೆ.&nbsp;</p>



<p>ಟಿಯಾನ್‌ವೆನ್-3 ಮಿಷನ್‌ನೊಂದಿಗೆ ಚಂದ್ರನಿಂದ ಮಾದರಿಗಳನ್ನು ಸಂಗ್ರಹಿಸಿದ ನಂತರ, ಚೀನಾ ಮಂಗಳದ ಮಾದರಿಗಳನ್ನು ಸಂಗ್ರಹಿಸಲು ಯೋಜಿಸುತ್ತಿದೆ. ಪ್ರಸ್ತುತ, ಬಾಹ್ಯಾಕಾಶ ಗಣಿಗಾರಿಕೆಯನ್ನು ಹೇಗೆ ನಿಯಂತ್ರಿಸುವುದು ಎಂಬುದರ ಕುರಿತು ಯಾವುದೇ ಜಾಗತಿಕ ಒಮ್ಮತವಿಲ್ಲ, ಮತ್ತು ಈ ಹೊಸ ಪ್ರದೇಶದಲ್ಲಿ ಕಾರ್ಯತಂತ್ರದ ಪ್ರಯೋಜನವನ್ನು ಪಡೆಯಲು ಭೌಗೋಳಿಕ ರಾಜಕೀಯ ಡೈನಾಮಿಕ್ಸ್ ಅನ್ನು ನಿಯಂತ್ರಿಸುವ ಮೂಲಕ ಚೀನಾ ತನ್ನನ್ನು ಆರಂಭಿಕ ಆಟಗಾರನಾಗಿ ಉಳಿದುಕೊಳ್ಳಲಿದೆ.</p>



<p>ಚೀನಾಕ್ಕೆ, ಬಾಹ್ಯಾಕಾಶವು ತನ್ನ ವಿದೇಶಾಂಗ ನೀತಿಯಲ್ಲಿ ಪ್ರಮುಖ ಸಾಧನವಾಗಿದೆ. ಚೀನಾದ ಮಹತ್ವಾಕಾಂಕ್ಷೆಯ ಯೋಜನೆಯಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ (BRI) ಸಾಂಪ್ರದಾಯಿಕ ಮೂಲಸೌಕರ್ಯವನ್ನು ಮೀರಿ ವಿಸ್ತರಿಸಿದೆ ಮತ್ತು ಅದು ಬಾಹ್ಯಾಕಾಶ ಸಿಲ್ಕ್ ರೋಡ್ ಅನ್ನು ಒಳಗೊಂಡಿದೆ. BRI ಸದಸ್ಯ ರಾಷ್ಟ್ರಗಳೊಂದಿಗೆ ತನ್ನ ಬಾಹ್ಯಾಕಾಶ ನೆರವು ಮತ್ತು ಸಹಯೋಗವನ್ನು ಹೆಚ್ಚಿಸಲು ಚೀನಾ ಉತ್ಸುಕವಾಗಿದೆ. ಅವರಿಗೆ, ಬಾಹ್ಯಾಕಾಶವು ಅವರ ಭೌಗೋಳಿಕ ರಾಜಕೀಯ ಪ್ರಭಾವವನ್ನು ಬಲಪಡಿಸುತ್ತದೆ.&nbsp;</p>



<p>ರಷ್ಯಾದ ಸಹಯೋಗದೊಂದಿಗೆ, ಚೀನಾ 2021 ರಲ್ಲಿ ಇಂಟರ್ನ್ಯಾಷನಲ್ ಲೂನಾರ್ ರಿಸರ್ಚ್ ಸ್ಟೇಷನ್ (ILRS) ಯೋಜನೆಯನ್ನು ಘೋಷಿಸಿತು, ಇದು ಈಗ 10 ಕ್ಕೂ ಹೆಚ್ಚು ಪಾಲುದಾರ ರಾಷ್ಟ್ರಗಳನ್ನು ಹೊಂದಿದೆ. ಈ ಯೋಜನೆಯು ಅಮೇರಿಕಾ ನೇತೃತ್ವದ ಆರ್ಟೆಮಿಸ್ ಕಾರ್ಯಕ್ರಮಕ್ಕೆ ಪ್ರತಿಸ್ಪರ್ಧಿಯಾಗಿದೆ, ಏಕೆಂದರೆ ಎರಡೂ ಯೋಜನೆಗಳು ಚಂದ್ರನ ಮೇಲೆ ಮತ್ತು ಅದರಾಚೆಗೆ ದೀರ್ಘಾವಧಿಯ ಮಾನವ ಉಪಸ್ಥಿತಿಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ.</p>



<p>ವಿಶಾಲವಾಗಿ, ಭವಿಷ್ಯದ ಚೀನಾದ ಕಾರ್ಯಸೂಚಿಯು ಬಾಹ್ಯಾಕಾಶ ವಿಜ್ಞಾನ ಮತ್ತು ಅರ್ಥಶಾಸ್ತ್ರಕ್ಕೆ ಬಹಳ ನಿಕಟ ಸಂಪರ್ಕ ಹೊಂದಿದೆ ಎಂದು ತೋರುತ್ತಿದೆ. ಚೀನಾದ ಬಾಹ್ಯಾಕಾಶ ಕಾರ್ಯಸೂಚಿಯನ್ನು ಕಿರಿದಾದ ಮಿಲಿಟರಿ ಕನ್ನಡಕದ ಮೂಲಕ ನೋಡುವುದು ಇಲ್ಲಿನ ಉದ್ದೇಶವಲ್ಲ. ಹಾಗಿದ್ದೂ, ಚೀನಾದ ಬಾಹ್ಯಾಕಾಶ ಕಾರ್ಯಕ್ರಮದ ನಿಜವಾದ ಕಾರಂಜಿ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯಲ್ಲಿದೆ. ಆದ್ದರಿಂದ, PLA ಯ ಕೇಂದ್ರ ಪಾತ್ರ &#8211; ವಿಶೇಷವಾಗಿ PLA ಸ್ಟ್ರಾಟೆಜಿಕ್ ಸಪೋರ್ಟ್ ಫೋರ್ಸ್ (PLASSF) &#8211; CAS, CNSA ಮತ್ತು CMSA ಒಟ್ಟಾರೆ ಬಾಹ್ಯಾಕಾಶ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವ ಮುಂಚೂಣಿಯ ಏಜೆನ್ಸಿಗಳಾಗುವುದು.</p>



<p>ಬಾಹ್ಯಾಕಾಶ ತಂತ್ರಜ್ಞಾನಗಳು ಅಂತರ್ಗತವಾಗಿ ದ್ವಿ-ಬಳಕೆಯ ತಂತ್ರಜ್ಞಾನಗಳಾಗಿವೆ. ಚೀನಾದ ಬಾಹ್ಯಾಕಾಶ ಅಭಿವೃದ್ಧಿ ಯೋಜನೆಯು ಪ್ರಾಥಮಿಕವಾಗಿ ವೈಜ್ಞಾನಿಕ ಸಂಶೋಧನೆಯ ಮೇಲೆ ಕೇಂದ್ರೀಕೃತವಾಗಿದ್ದರೂ, ಅದರೊಂದಿಗೆ ಯಾವಾಗಲೂ ಕಾರ್ಯತಂತ್ರದ ಆಯಾಮಗಳು ಇರುತ್ತವೆ.&nbsp;</p>



<p>ಬಾಹ್ಯಾಕಾಶ ಹವಾಮಾನವನ್ನು ಅಧ್ಯಯನ ಮಾಡಲು ಚೀನಾದ ಪ್ರಸ್ತಾಪವು ಇದಕ್ಕೆ ಸರಳ ಉದಾಹರಣೆಯಾಗಿದೆ. ಯಾವುದೇ ಬಾಹ್ಯಾಕಾಶ ಸಾಂದರ್ಭಿಕ ಜಾಗೃತಿ (space situational awareness- SSA) ಕಾರ್ಯವಿಧಾನಕ್ಕೆ, ಬಾಹ್ಯಾಕಾಶ ಹವಾಮಾನವು ಒಂದು ಉಪಭಾಗವಾಗಿದೆ. SSA ಯ ಮಿಲಿಟರಿ ಹೊಸತನಕ್ಕೆ ಪ್ರಸಿದ್ಧವಾಗಿದೆ. ಬಾಹ್ಯಾಕಾಶ ಹವಾಮಾನವು ಉಪಗ್ರಹ ಸಂವಹನ ಮತ್ತು ಉಪಗ್ರಹ-ಆಧಾರಿತ ನ್ಯಾವಿಗೇಷನ್ ನಿಖರತೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಹೂಡಿಕೆಗಳು ಚೀನಾ ತನ್ನ ಮಿಲಿಟರಿ ಉಪಗ್ರಹ ಜಾಲವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಮುಂದಿನ 25 ವರ್ಷಗಳಲ್ಲಿ ನಡೆಯಬಹುದಾದ ವಿವಿಧ ತಾಂತ್ರಿಕ ಆವಿಷ್ಕಾರಗಳು ಮತ್ತು ತಾಂತ್ರಿಕ ಬೆಳವಣಿಗೆಗಳು PLA ಯ ಬಾಹ್ಯಾಕಾಶ ಕಾರ್ಯಸೂಚಿಗೆ ಕೆಲವು ನೇರ ಅಥವಾ ಪರೋಕ್ಷ ಉಪಯುಕ್ತತೆಯನ್ನು ಕಂಡುಕೊಳ್ಳಬಹುದು.&nbsp;</p>



<p>2050 ರವರೆಗೆ ವಿಸ್ತರಿಸುವ ಬಾಹ್ಯಾಕಾಶ ವಿಜ್ಞಾನಕ್ಕಾಗಿ ಚೀನಾ ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ಘೋಷಿಸಿದೆ ಎಂದು ಗುರುತಿಸುವುದು ಮುಖ್ಯವಾಗಿದೆ. ಹಾಗಿದ್ದೂ, ಇದು ಮುಂದಿನ ಎರಡು ಮೂರು ದಶಕಗಳವರೆಗೆ ಬಾಹ್ಯಾಕಾಶ ವಿಜ್ಞಾನದ ಮೇಲೆ ಮಾತ್ರ ಗಮನವನ್ನು ಹರಿಸುವುದಿಲ್ಲ. ಚೀನಾ ತನ್ನ ಮಿಲಿಟರಿ ಬಾಹ್ಯಾಕಾಶ ಯೋಜನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಸಾಧ್ಯತೆಯಿಲ್ಲ.</p>



<p>ಚೀನಾದ ಬಾಹ್ಯಾಕಾಶ ಕಾರ್ಯಕ್ರಮದ ಕಾರ್ಯತಂತ್ರದ ಆಧಾರವೆಂದರೆ ಮಿಲಿಟರಿ ಬಾಹ್ಯಾಕಾಶ ಸಾಮರ್ಥ್ಯಗಳ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಬಾಹ್ಯಾಕಾಶ ಪರಿಶೋಧನೆ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕತ್ವವನ್ನು ಪ್ರತಿಪಾದಿಸುವುದು. ತಮ್ಮ ತಂತ್ರಜ್ಞಾನಗಳನ್ನು ಪ್ರದರ್ಶಿಸಲು &#8216;optics&#8217; ಬಹಳ ಮುಖ್ಯ ಎಂದು ಚೀನಾ ಅರ್ಥಮಾಡಿಕೊಂಡಿದೆ ಮತ್ತು ಈ ಯೋಜನೆಯ ಮೊದಲ ಹಂತವು 2030 ರ ಮೊದಲು ಮಾನವರನ್ನು ಚಂದ್ರನತ್ತ ಕಳುಹಿಸುವುದನ್ನು ಒಳಗೊಂಡಿರುತ್ತದೆ, ಬಾಹ್ಯಾಕಾಶ ಓಟದಲ್ಲಿ ಯುನೈಟೆಡ್ ಸ್ಟೇಟ್ಸ್ ಅನ್ನು ಮೀರಿಸುತ್ತದೆ.</p>



<p><strong>ಅಜೇಯ್ ಲೆಲೆ </strong>ಬಾಹ್ಯಾಕಾಶ ಸಂಶೋಧಕ ಮತ್ತುInstitutions That Shaped Modern India: ISRO&nbsp;<em>ಪುಸ್ತಕದ ಲೇಖಕ.</em> ಈ ಲೇಖನ ದಿ ವೈರ್‌ನಲ್ಲಿ ಪ್ರಕಟವಾದ ಬರಹದ ಭಾವಾನುವಾದ</p>
]]></content:encoded>
					
		
		
			</item>
		<item>
		<title>ಚಂದ್ರಯಾನ-3 ಕ್ರೆಡಿಟ್‌ ಮೋದಿಯವರಿಗೆ; NCERTಯಿಂದ ಮಕ್ಕಳಿಗೆ ಅವೈಜ್ಞಾನಿಕ ಪಠ್ಯ</title>
		<link>https://peepalmedia.com/chandrayan-3-credit-to-modi-and-unscientific-text-by-ncert/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Oct 2023 10:09:53 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Chandrayan 3]]></category>
		<category><![CDATA[india]]></category>
		<category><![CDATA[isro]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[ncert]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[science]]></category>
		<category><![CDATA[state politics]]></category>
		<category><![CDATA[text book]]></category>
		<category><![CDATA[unscientic]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30072</guid>

					<description><![CDATA[ಬೆಂಗಳೂರು, ಅಕ್ಟೋಬರ್.‌18: ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ. &#8220;ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು, ಅಕ್ಟೋಬರ್.‌18:</strong> ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ.</p>



<p>&#8220;ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ ವಿಜ್ಞಾನಿಗಳು ಒಟ್ಟಾಗಿ ಹಿಂದಿನ ಅನುಭವದಿಂದ ಕಲಿಯುವ ಮುಖಾಂತರ ಪ್ರಯತ್ನಿಸಿದರು ಮತ್ತು ಸುಧಾರಿಸಿದರು. ಇದರಿಂದಾಗಿ ಲ್ಯಾಂಡರ್ &nbsp;ಚಂದ್ರನ ಮೇಲೆ ಲಾಂಚರ್‌ನಿಂದ ಯಶಸ್ವಿಯಾಗಿ ಇಳಿಯಬಹುದು,&#8221; ಎಂದಿರುವ ನರ್ಸರಿ, ಒಂದನೇ ಮತ್ತು ಎರಡನೇ ತರಗತಿಯ ಮಕ್ಕಳಿಗೆ ಮಾಡ್ಯೂಲನ್ನು ತಯಾರಿಸಲಾಗಿದೆ ಎಂದು <a href="https://www.theguardian.com/world/2014/oct/28/indian-prime-minister-genetic-science-existed-ancient-times">ದಿ ಟೆಲಿಗ್ರಾಫ್</a> ವರದಿ ಮಾಡಿದೆ.</p>



<p>ಇದರನಲ್ಲಿ ಉಡಾವಣೆಯ ಲೈವ್ ಟೆಲಿಕಾಸ್ಟ್‌ನ ಚಿತ್ರಗಳು ಮತ್ತು ಚಂದ್ರಯಾನ-3 ಜೊತೆಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಯಲ್ಲಿ ವಿಜ್ಞಾನಿಗಳೊಂದಿಗೆ ಮೋದಿಯವರ ಸಂವಾದದ ಚಿತ್ರಗಳನ್ನು ಹಾಕಲಾಗಿದೆ.</p>



<p>ಅಕ್ಟೋಬರ್ 17 ಸೋಮವಾರ ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್.ಪಿ.ಸೋಮನಾಥ್ ಅವರ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು <a href="https://dsel.education.gov.in/sites/default/files/update/PIB1968545.pdf">ಚಂದ್ರಯಾನ ಮಿಷನ್‌ನ ವಿಶೇಷ ಓದುವ ಸಾಮಗ್ರಿಗಳನ್ನು ಬಿಡುಗಡೆ</a> ಮಾಡಿದ್ದರು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="631" height="368" src="https://peepalmedia.com/wp-content/uploads/2023/10/sdsfdggfg.jpg" alt="" class="wp-image-30074" style="aspect-ratio:1.7146739130434783;width:507px;height:auto" srcset="https://peepalmedia.com/wp-content/uploads/2023/10/sdsfdggfg.jpg 631w, https://peepalmedia.com/wp-content/uploads/2023/10/sdsfdggfg-300x175.jpg 300w, https://peepalmedia.com/wp-content/uploads/2023/10/sdsfdggfg-150x87.jpg 150w" sizes="(max-width: 631px) 100vw, 631px" /></figure></div>


<p>&#8220;ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವು ಚಂದ್ರಯಾನ-3 ರ ವಿಜಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ನಮ್ಮ ದೇಶದ ಹೆಸರನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದೆ&#8221; ಎಂದು ಮಾಡ್ಯೂಲ್‌ಗಳಲ್ಲಿ ಒಂದು ಮೋದಿಯವರನ್ನು ಹೊಗಳಿದೆ.</p>



<p>ಟೆಲಿಗ್ರಾಫ್‌ ವರದಿ ಮಾಡಿರುವಂತೆ ಹಲವಾರು ಬಾಹ್ಯಾಕಾಶ ತಜ್ಞರು ಈ ಇದು ಸಮಸ್ಯಾತ್ಮಕ ಮಾತುಗಳು ಎಂದು ವಿವರಿಸಿದ್ದಾರೆ, ಏಕೆಂದರೆ ಅವರ ಪ್ರಕಾರ ಈ ಪಠ್ಯ ಚಂದ್ರಯಾನ -3 ಮಿಷನ್ ಮೋದಿಯವರಿಂದಲೇ ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ನೀಡುತ್ತದೆ. ಇದು ತನ್ನ ವೈಫಲ್ಯಗಳಿಂದ ಮತ್ತೆ ಪುಟಿದೇಳುವ ಇಸ್ರೋದ ದಾಖಲೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.</p>



<p>ಇಸ್ರೋದ ಇತಿಹಾಸದಲ್ಲಿ ಇಂತಹ ಸೋಲು-ಗೆಲುವಿನ ಪಾಠಗಳು ಅನೇಕ ಬಾರಿ ನಡೆದಿದ್ದು, ಇವೇ ಇಸ್ರೋದ ಸಾಧನೆಗಳಿಗೆ ಕಾರಣವಾಗಿವೆ. &nbsp;1979 ರಲ್ಲಿ &nbsp;ಉಡಾವಣೆ ಮಾಡಿದ ಉಪಗ್ರಹ ಉಡಾವಣಾ ವಾಹನವು ವಿಫಲವಾಯಿತು. ಆದರೆ ಮುಂದಿನ ವರ್ಷ ಮತ್ತೆ &nbsp;ಪ್ರಯತ್ನಿಸಿ ಯಶಸ್ವಿಯಾಯಿತು ಎಂದು ಬಾಹ್ಯಾಕಾಶ ತಜ್ಞರು ನೆನಪಿಸಿಕೊಂಡಿದ್ದಾರೆ. 1987 ರಲ್ಲಿ ವಿಫಲವಾದಾಗ ಮತ್ತೆ ತನ್ನ ಯೋಜನೆಯನ್ನು 1988 ರಲ್ಲಿ ಯಶಸ್ವಿಗೊಳಿಸಿತು. 1993 ರಲ್ಲಿ ವಿಫಲವಾದ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ 1994 ರಲ್ಲಿ ಯಶಸ್ಸನ್ನು ಕಂಡಿತು.</p>



<p>ಶಾಲಾ ಮಕ್ಕಳಿಗಾಗಿ ಸಿದ್ದಪಡಿಸಿರುವ ಮತ್ತೊಂದು ಮಾಡ್ಯೂಲ್‌ನಲ್ಲಿ ಬಾಹ್ಯಾಕಾಶ ವಿಜ್ಞಾನದೊಂದಿಗೆ ಪುರಾಣವನ್ನು ಬೆರೆಸಲಾಗಿದೆ. &#8220;ವೈಜ್ಞಾನಿಕ ಸಾಧನೆಯು ಈಗ ಮಾತ್ರ ಸಂಭವಿಸಿದೆಯೇ? ಎಂಬ ಪಠ್ಯದಲ್ಲಿ ಅದನ್ನು ವೈಮಾನಿಕ ಶಾಸ್ತ್ರ ಎಂಬ ಪುರಾವೆ ರಹಿತ ಕಲ್ಪನೆಯನ್ನು ಮಕ್ಕಳಿಗೆ ಹಂಚಲಾಗಿದೆ. ಎಂದು ಹೇಳುತ್ತದೆ. “ಇದು ನಮ್ಮ ದೇಶವು ಈ ದಿನಗಳಲ್ಲಿ ಹಾರುವ ವಾಹನಗಳ ಜ್ಞಾನವನ್ನು ಹೊಂದಿತ್ತು ಎಂದು ತಿಳಿಸುತ್ತದೆ,&#8221; ಮಾಡ್ಯೂಲ್ ಹೇಳುತ್ತದೆ.</p>



<p>&#8220;ಭಾರತೀಯ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ ವೇದಗಳು, ಪ್ರಾಣಿಗಳು, ಸಾಮಾನ್ಯವಾಗಿ ಕುದುರೆಗಳು ಎಳೆಯುವ ಚಕ್ರದ ರಥಗಳ ಮೇಲೆ ಸಾಗಿಸಲ್ಪಡುವ ವಿವಿಧ ದೇವರುಗಳ ಉಲ್ಲೇಖವನ್ನು ಮಾಡುತ್ತವೆ, ಆದರೆ ಈ ರಥಗಳು ಹಾರಬಲ್ಲವು ಕೂಡ&#8221; ಎಂದು ಅದು ಹೇಳುತ್ತದೆ.</p>



<p>ಮಾಡ್ಯೂಲ್‌ನಲ್ಲಿ ರಾಮಾಯಣದ ಹಾರುವ ರಥ ಪುಷ್ಪಕ ವಿಮಾನದ ಉಲ್ಲೇಖವನ್ನು ಸಹ ಮಾಡಲಾಗಿದೆ. &#8220;ಇದನ್ನು ಬ್ರಹ್ಮನಿಗಾಗಿ ದೇವತೆಗಳ ಮುಖ್ಯ ವಾಸ್ತುಶಿಲ್ಪಿ ವಿಶ್ವಕರ್ಮ ಸೂರ್ಯನ ಧೂಳಿನಿಂದ ಸೃಷ್ಟಿಸಿದ. &nbsp;ಬ್ರಹ್ಮ ಇದನ್ನು ಕುಬೇರನಿಗೆ ಕೊಟ್ಟನು. ರಾವಣನು ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಂಡಾಗ, ಅದನ್ನು ತನ್ನ ವೈಯಕ್ತಿಕ ವಾಹನವಾಗಿ ಬಳಸಿಕೊಂಡನು,” ಎಂದು ಬಾಹ್ಯಾಕಾಶ ವಿಜ್ಞಾನವನ್ನು ಸಮಸ್ಯಾತ್ಮಕವಾಗಿ ಪುರಾಣಗಳ ಜೊತೆಗೆ ಜೋಡಿಸಲಾಗಿದೆ.</p>



<p>ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆನೆ ತಲೆ ಇರುವ ದೇವತೆ ʼಗಣಪತಿʼಯನ್ನು ಪ್ಲಾಸ್ಟಿಕ್‌ ಸರ್ಜರಿ ಹಾಗೂ ಕರ್ಣನನ್ನು ಜೆನೆಟಿಕ್‌ ಟೆಕ್ನಾಲಜಿಯಿಂದ ಹುಟ್ಟಿದ್ದು ಎಂಬ <a href="https://indianexpress.com/article/india/india-others/pm-takes-leaf-from-batra-book-mahabharat-genetics-lord-ganesha-surgery/" data-type="link" data-id="https://indianexpress.com/article/india/india-others/pm-takes-leaf-from-batra-book-mahabharat-genetics-lord-ganesha-surgery/">ಅವೈಜ್ಞಾನಿಕ ಹೇಳಿಕೆಯನ್ನು</a> ಮುಂಬೈಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದರು.</p>



<p></p>
]]></content:encoded>
					
		
		
			</item>
	</channel>
</rss>
