<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Series &#8211; Peepal Media</title>
	<atom:link href="https://peepalmedia.com/tag/series/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 03 Sep 2024 15:55:04 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Series &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>Fact Check: IC 814 ಸೀರಿಸ್‌ನಲ್ಲಿ ಕಂದಹಾರ್ ಉಗ್ರರಿಗೆ ಹಿಂದೂ ಹೆಸರೇ? ಸತ್ಯ ಏನು?</title>
		<link>https://peepalmedia.com/fact-check-ic-814-the-kandahar-hijack-series-used-hindu-names-to-hijackers/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 03 Sep 2024 15:44:41 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[bjp]]></category>
		<category><![CDATA[fact]]></category>
		<category><![CDATA[Fact check]]></category>
		<category><![CDATA[facts]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[IC 814: The Kandahar Hijack]]></category>
		<category><![CDATA[kandahar hijack]]></category>
		<category><![CDATA[LK advani]]></category>
		<category><![CDATA[netflix]]></category>
		<category><![CDATA[Series]]></category>
		<category><![CDATA[webseries]]></category>
		<guid isPermaLink="false">https://peepalmedia.com/?p=44878</guid>

					<description><![CDATA[&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&#160; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&#160;&#160; 176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು [&#8230;]]]></description>
										<content:encoded><![CDATA[
<p>&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&nbsp; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&nbsp;&nbsp;</p>



<p>176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು ಹೊರಟಿತ್ತು. ಇದನ್ನು ಐವರು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದರು, ನಂತರ ಬೇರೆ ಬೇರೆ ಸ್ಥಳಗಳಲ್ಲಿ ವಿಮಾನವನ್ನು ಇಳಿಸಿ, ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದರು. ಏಳು ದಿನಗಳ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಅಪಹರಣಕಾರರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡಿತು. ಭಾರತದ ಜೈಲಿನಲ್ಲಿದ್ದ ಮೂವರು ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಳಿಸಿದರು. ಕೊನೆಗೆ ಅಪಹರಣಕಾರರು ಜನರನ್ನು ಬಿಡುಗಡೆ ಮಾಡಿದರು. ಈ ಘಟನೆಯನ್ನು ಆಧರಿಸಿ &#8216;IC 814: ದಿ ಕಂದಹಾರ್ ಹೈಜಾಕ್&#8217; ವೆನ್‌ಸೀರಿಸ್‌ ಪ್ರಸಾರವಾಗಿದೆ.&nbsp;</p>



<p>ಇದರಲ್ಲಿ ಅನುಭವ್ ಸಿನ್ಹಾ ಅವರು ವಿಮಾನ ಹೈಜಾಕ್‌ ಮಾಡಿದ ಉಗ್ರರನ್ನು ಭೋಲಾ ಮತ್ತು ಶಂಕರ್‌ ಎಂದು ಹೆಸರಿಸಿದ್ದಾರೆ. ಇದು ಉಗ್ರರನ್ನು &#8216;ವೈಟ್‌ವಾಶ್&#8217;‌ ಮಾಡುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರೂ, ಗೋದಿ ಮಾಧ್ಯಮಗಳೂ ಪ್ರಚಾರ ಮಾಡಿವೆ.</p>



<p>ಕರ್ನಾಟಕದ News18 ಕನ್ನಡ ಎಂಬ ಮಾಧ್ಯಮ ಕೂಡ ಈ ಸುಳ್ಳನ್ನು ಹರಿಯಬಿಟ್ಟಿದೆ. ಪೋಸ್ಟ್‌ ಕಾರ್ಡ್‌ ಸೇರಿದಂತೆ ಕೋಮು ಪ್ರಚೋದಕ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳು ಈ ವಿಚಾರವನ್ನು ತಿರುಚಿ ದ್ವೇಷ ಹೊರಹಾಕಿವೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="678" height="482" src="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg" alt="" class="wp-image-44882" style="width:482px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg 678w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-300x213.jpeg 300w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-150x107.jpeg 150w" sizes="(max-width: 678px) 100vw, 678px" /></figure></div>

<div class="wp-block-image">
<figure class="aligncenter size-full is-resized"><img decoding="async" width="576" height="916" src="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg" alt="" class="wp-image-44885" style="width:275px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg 576w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-189x300.jpeg 189w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-150x239.jpeg 150w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-300x477.jpeg 300w" sizes="(max-width: 576px) 100vw, 576px" /></figure></div>


<p><strong>ಸತ್ಯ ಏನು?</strong></p>



<p>IC 814 ವಿಮಾನವನ್ನು ಅಪಹರಿಸಿದ ಕುರಿತು ಅನೇಕ ಸುದ್ದಿ ವರದಿಗಳನ್ನು ನಾವು Google ನಲ್ಲಿ ನೋಡಬಹುದು. ಇವೆಲ್ಲವೂ ಇಬ್ಬರು ಅಪಹರಣಕಾರರು ಭೋಲಾ ಮತ್ತು ಶಂಕರ್ ಎಂಬ ಕೋಡ್ ಅನ್ನು ಬಳಸಿರುವುದನ್ನು ವರದಿ ಮಾಡಿವೆ. ವಿಮಾನದಲ್ಲಿದ್ದ ಭೋಪಾಲ್‌ನ ದಂಪತಿಗಳ ಅನುಭವದ ಬಗ್ಗೆ <a href="https://timesofindia.indiatimes.com/city/bhopal/21-yrs-on-kandahar-hijack-still-haunts-bhopal-couple/articleshow/79935600.cms">ಟೈಮ್‌ ಆಫ್‌ ಇಂಡಿಯಾ</a> ವರದಿಯೊಂದನ್ನು ಡಿಸೆಂಬರ್ 24, 2020 ರಂದು ಪ್ರಕಟಿಸಿದೆ. ಇದರಲ್ಲಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್…” ಎಂದು ಉಗ್ರರು ತಮ್ಮನ್ನು ತಾವು ಪರಸ್ಪರ ಕರೆಸಿಕೊಳ್ಳುತ್ತಿದ್ದರೆಂದೂ, ದುರ್ಗೇಶ್ ಮತ್ತು ರೇಣು ಗೋಯೆಲ್ ಎಂಬ ಈ ದಂಪತಿಗಳಿಗೆ ಅದೊಂದು ದುಸ್ವಪ್ನವಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.</p>



<p>TOI ನ ವರದಿಯಲ್ಲಿ, ಭಯಾನಕತೆಯನ್ನು ವಿವರಿಸುತ್ತಾ, ಗೋಯೆಲ್, &#8220;ಭೋಲಾ ಮತ್ತು ಬರ್ಗರ್ ಪ್ರಯಾಣಿಕರನ್ನು ಹೊಡೆಯುತ್ತಿದ್ದರು, ಆದರೆ ಡಾಕ್ಟರ್ ಮತ್ತು ಚೀಫ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು,&#8221; ಎಂದು ಹೇಳಿದ್ದಾರೆ.</p>



<p>ನೇಪಾಳ ಟೈಮ್ಸ್‌ನ ಪತ್ರಿಕೆ ಡಿಸೆಂಬರ್ 31, 2019 ರಂದು ಪ್ರಕಟಿಸಿದ&nbsp; <a href="https://nepalitimes.com/latest/remembering-ic814">Remembering&nbsp; IC814</a> ಎಂಬ ವರದಿಯಲ್ಲಿ ಆ ವಿಮಾನದಲ್ಲಿದ್ದ ಸಂಜಯ್ ಧಿತಾಲ್, &#8220;ಐದು ಅಪಹರಣಕಾರರಲ್ಲಿ ಎಲ್ಲರಿಗೂ ಕೋಡ್ ನೇಮ್‌ಗಳು ಇದ್ದವು: ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್,&#8221; ಎಂದು ಹೇಳಿರುವುದು ವರದಿಯಾಗಿದೆ.</p>



<p>ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ&nbsp; ಮಾರ್ಚ್ 6, 2019 ರಂದು ಪ್ರಕಟವಾದ IC 814 hijack: How Jaish-e-Mohammed chief Masood Azhar’s brother planned Indian Airlines hijack in 1999 ಎಂಬ ವರದಿಯಲ್ಲಿ&nbsp; ಪ್ರತಿಯೊಬ್ಬ ಅಪಹರಣಕಾರರು ಕೋಡ್ ಹೆಸರನ್ನು ಬಳಸಿರುವುದನ್ನು ಉಲ್ಲೇಖಿಸಲಾಗಿದೆ.&nbsp;</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXcB-bRhOTZJGWPur_LxhNCH3xg3i0zQuSIuiiTP-bh-aa2cXENgZ7DlhAQwWfJ-K4Lk6wAfAJZvzJiNLINwwG096CVxPQguQ--EMDRt-1TL-C2hurmMhjBKG2Pe3f0zgol3mb-i7nmNy_z7eZYqAbTJXKHk?key=S0LKrvHHDnwa9IPkbPfMEw" alt=""/></figure>



<p>ಕೋಡ್ ಹೆಸರುಗಳನ್ನು ಬಳಸಿರುವುದನ್ನು IC 814 ರ ಫ್ಲೈಟ್ ಎಂಜಿನಿಯರ್&nbsp; ಅನಿಲ್ ಕೆ ಜಗ್ಗಿಯಾ ಕೂಡ ದೃಢೀಕರಿಸಿದ್ದಾರೆ&nbsp; , ಅವರು 2021 ರಲ್ಲಿ ತಮ್ಮ ಅನುಭವವನ್ನು&nbsp; <a href="https://dod.overdrive.com/media/6383398">IC 814 Hijacked: The Inside Story </a>ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.</p>



<p>ಎಲ್ಲಕ್ಕೂ ಮುಖ್ಯವಾಗಿ ಘಟನೆ ಮುಗಿದ ಒಂದು ವಾರದ ನಂತರ <a href="https://www.mea.gov.in/Speeches-Statements.htm?dtl/5481/Union+Home+Ministers+StatementIndian+Airlines+Flight+IC814">ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ</a>ಲ್ಲಿ ಈ ಅಪಹರಣಕಾರರು ಚೀಫ್‌, ಡಾಕ್ಟರ್‌, ಶಂಕರ್‌ ಮತ್ತು ಬೋಲಾ ಎಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXfIt-2ukwZhdcV0k0BfeZe1I6wE2f1UY5TAyap-E8f8X06SI8Ph7lZ1fgGNmJnNkX0PGoTlpBn1mCo5HyuxVjo0izO58RSXyoI0vCUb8tWjVaG3h5wyyJnGv2lbEqVctBhNCl3NAOSB5Uj0XvKHC-kYno5o?key=S0LKrvHHDnwa9IPkbPfMEw" alt=""/></figure>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXexkBtTuxoMV5Spu0hAb8MKP_qxeR--qaqhUR-6G_H7jQaKrpYfjgCCNYCKv6sI4BITgau-gwjUtC0wT9Chgo0fd2iyyjz0WuSVLz97FdZu2m0Pk4CGsdonj5JB6qXx0YOphzUIBzJGiyz8eNvXhcp2uoM?key=S0LKrvHHDnwa9IPkbPfMEw" alt=""/></figure>



<p>ಹೈಜಾಕ್ ಸಮಸ್ಯೆ ಮುಗಿದ ನಂತರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಆಗಿನ <a href="https://www.tribuneindia.com/2000/20000107/main2.htm">ಗೃಹ ಸಚಿವ ಎಲ್‌ ಕೆ ಅಡ್ವಾಣಿ</a> ಅವರು ಐವರು ಅಪಹರಣಕಾರರನ್ನು ಬಹವಾಲ್‌ಪುರದ ಇಬ್ರಾಹಿಂ ಅಖ್ತರ್ ಅಲಿಯಾಸ್ ಅಥರ್, ಕರಾಚಿಯ ಡಿಫೆನ್ಸ್‌ ಏರಿಯಾದ ನಿವಾಸಿ ಸನ್ನಿ ಅಹ್ಮದ್ ಖಾಜಿ, ಕರಾಚಿಯ  ಗುಲ್ಶನ್ ಅಖ್ತರ್ ಕಾಲೋನಿಯ ಮಿಸ್ತ್ರಿ ಜಹೂರ್ ಇಬ್ರಾಹಿಂ, ಸುಕ್ಕೂರ್ ನಗರದ ಶಾಕಿರ್ ಎಂದು ಗುರುತಿಸಿರುವುದಾಗಿ ಹೇಳಿದ್ದಾರೆ. ಮುಂದುವರಿದು, ಮೌಲಾನಾ ಅಜರ್‌ನ ಸಹೋದರ ಎಂದು ಕರೆಸಿಕೊಂಡಿರುವ ಇಬ್ರಾಹಿಂನನ್ನು &#8220;ಮುಖ್ಯಸ್ಥ&#8221; ಎಂದೂ, ಸಯೀದ್‌ನನ್ನು &#8220;ಡಾಕ್ಟರ್&#8221; ಎಂದೂ, ಖಾಜಿಯನ್ನು &#8220;ಬರ್ಗರ್&#8221; ಎಂದೂ, ಇಬ್ರಾಹಿಂನನ್ನು &#8220;ಭೋಲಾ&#8221; ಎಂದೂ, ಶಾಕಿರ್‌ನನ್ನು &#8220;ಶಂಕರ್&#8221; ಎಂದು ಎಂದು ಕರೆಯಲಾಗುತ್ತಿತ್ತು, ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಕರೆಸಿಕೊಳ್ಳಲು ಬಳಸುತ್ತಿದ್ದ ಹೆಸರುಗಳು ಇವು ಎಂದು ಅಡ್ವಾಣಿ ಹೇಳಿದ್ದಾರೆ.</p>



<p>ಇದರಿಂದ ತಿಳಿದು ಬರುವುದು ಏನೆಂದರೆ, IC 814: The Kandahar Hijack ನಲ್ಲಿ ಬಳಸಲಾಗಿರುವ ಭೋಲಾ ಮತ್ತು ಶಂಕರ್‌ ಎಂಬ ಅಪಹರಣಕಾರರ ಹೆಸರು ಸೀರಿಸ್‌ಗೆ ಕಥೆ ರಚಿಸಿದವರ ಸೃಷ್ಟಿಯಲ್ಲ, ಕಥೆಯನ್ನು ಬರೆಯುವಾಗ ನಿಜ ಘಟನೆಯನ್ನು ಅಧ್ಯಯನ ಮಾಡಿ ರಚಿಸಿದ್ದಾರೆ. ಅಪಹರಣಕಾರರು ತಮ್ಮನ್ನು ತಾವು ಈ ಹೆಸರುಗಳಿಂದ ಕರೆಸಿಕೊಂಡ ಬಗ್ಗೆ ಸ್ವತಃ ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವೇ ದೃಢೀಕರಿಸಿದೆ.</p>



<p>ಈ ವಿಚಾರದಲ್ಲಿ ಯಾವುದೇ ಅಧ್ಯಯನಗಳನ್ನು ಮಾಡದೆ ಗೋದಿ ಮೀಡಿಯಾಗಳು ಮತ್ತು ಬಲಪಂಥೀಯರು ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ಯಾವುದೇ ಹುರುಳಿಲ್ಲ, ಅದು ತಲೆಬುಡವಿಲ್ಲದ ವಾದ!</p>
]]></content:encoded>
					
		
		
			</item>
		<item>
		<title>ಎರಡು ವರ್ಷ ಪೂರೈಸಿದ `ಅಂಬೇಡ್ಕರ್ ಓದು’</title>
		<link>https://peepalmedia.com/ambedkar-odu-completes-two-years/</link>
		
		<dc:creator><![CDATA[Arun Jolada Kudligi]]></dc:creator>
		<pubDate>Sat, 15 Oct 2022 12:12:38 +0000</pubDate>
				<category><![CDATA[ವಿಶೇಷ]]></category>
		<category><![CDATA[Ambedkar]]></category>
		<category><![CDATA[Ambedkar odu]]></category>
		<category><![CDATA[Arun Jolada kudligi]]></category>
		<category><![CDATA[Bhimrao Ramji Ambedkar]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Series]]></category>
		<category><![CDATA[state politics]]></category>
		<category><![CDATA[writing]]></category>
		<category><![CDATA[youtube]]></category>
		<guid isPermaLink="false">https://peepalmedia.com/?p=10903</guid>

					<description><![CDATA[ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ [&#8230;]]]></description>
										<content:encoded><![CDATA[
<p>ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಅಂತರ್ಜಾಲದ ಮೂಲಕ ಮನೆ ಮನಗಳಿಗೆ ತಲುಪಿಸುವ `ಅಂಬೇಡ್ಕರ್ ಓದು’ ಯೂಟೂಬ್ ಸರಣಿಯು ಇದೀಗ ಎರಡು ವರ್ಷ ಪೂರೈಸಿದೆ. ಅಂಬೇಡ್ಕರ್ ಓದು ಸರಣಿ 525 ನೇ ಸಂಚಿಕೆ ತಲುಪಿದೆ. ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿದ ದಿನದ ಅಕ್ಟೋಬರ್-14 ರ ವಿಶೇಷ ಸಂಚಿಕೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ಅವರು ಓದಿದ್ದಾರೆ. ಸೆಪ್ಟಂಬರ್ 7, 2020 ರಂದು ಲೇಖಕಿ ಹೆಚ್.ಎಸ್.ಅನುಪಮಾ ಮೊದಲ ಸಂಚಿಕೆ ಓದಿದ್ದರು. ಹೀಗೆ ಆರಂಭವಾದ ಅಂಬೇಡ್ಕರ್ ಓದು ಎರಡು ವರ್ಷ ಪೂರೈಸಿ ಮುನ್ನಡೆದಿದೆ. ಈತನಕ 351 ಜನರಿಂದ 525 ಸರಣಿಗಳನ್ನು ಓದಿಸಲಾಗಿದೆ, ಈಗ ಅಂಬೇಡ್ಕರ್ ಚಿಂತನೆಗಳನ್ನು ಕನ್ನಡದಲ್ಲಿ 120 ಗಂಟೆಗಳ ಕಾಲ ಕೇಳಬಹುದಾಗಿದೆ. ಈತನಕ 167 ಮಹಿಳೆಯರು 300 ಕ್ಕಿಂತ ಹೆಚ್ಚಿನ ಸರಣಿಗಳನ್ನು ಓದಿರುವುದು ವಿಶೇಷವಾಗಿದೆ.</p>



<p>&nbsp;500 ನೇ ಸಂಚಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಓದಿದ್ದರು. ಈ ಹಿಂದೆ ರಾಜ್ಯಸಭಾ ಸದಸ್ಯರಾದ ಎಲ್.ಹನುಮಂತಯ್ಯ, ಸಂಗೀತ ನಿರ್ದೇಶಕ ಹಂಸಲೇಖ, ನಟರಾದ ರಮೇಶ್ ಅರವಿಂದ, ಕಿಶೋರ್, ರಂಗಾಯಣ ರಘು, ಅಚ್ಯುತ ಕುಮಾರ್, ಸಿನೆಮಾ ನಿರ್ದೇಶಕರಾದ ಬಿ.ಸುರೇಶ್, ಬಿ.ಎಂ ಗಿರಿರಾಜ, ರಾಜಕಾರಣಿ ಶ್ರೀಮತಿ ಮೋಟಮ್ಮ, ಬಿಜಾಪುರದ ಮಹಿಳಾ ವಿವಿಯ ವಿಶ್ರಾಂತ ಕುಲಪತಿಗಳಾದ ಪ್ರೊ.ಸಭಿಹಾ ಲೇಖಕರಾದ ದೇವನೂರು ಮಹಾದೇವ, ಅಮರೇಶ ನುಗಡೋಣಿ, ನಟರಾಜ ಹುಳಿಯಾರ, ಹೆಚ್.ಎಸ್.ರಾಘವೇಂದ್ರರಾವ್, ಜಾನಪದ ಅಕಾಡೆಮಿ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಪತ್ರಕರ್ತರಾದ ದಿನೇಶ ಅಮಿನಮಟ್ಟು, ರವೀಂದ್ರ ಭಟ್, ವೈ.ಗ ಜಗದೀಶ, ರಶ್ಮಿ ಎಸ್. ಹೀಗೆ ಸಾಹಿತಿಗಳು, ಪತ್ರಕರ್ತರು, ನಟ ನಟಿಯರು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು, ರೈತರು ಎಲ್ಲಾ ಹಿನ್ನೆಲೆಯವರೂ ಓದಿನ ಭಾಗವಾಗಿದ್ದಾರೆ.</p>



<p>2019 ರ ಏಪ್ರಿಲ್ 14 ರಂದು ನನ್ನ ಪೇಸ್ ಬುಕ್ ಪೇಜಲ್ಲಿ ಅಂಬೇಡ್ಕರ್ ಓದನ್ನು ಲೈವ್ ಮಾಡಿದ್ದೆ. ಈ ಓದಿಗೆ ಸಿಕ್ಕ ಪ್ರತಿಕ್ರಿಯೆ ಓದನ್ನು ನಿರಂತರವಾಗಿ ನಡೆಸುವ ಕನಸೊಂದನ್ನು ಹುಟ್ಟಿಸಿತ್ತು. ಖಾಸಗಿ ವಾಹಿನಿಯಲ್ಲಿ ಮಹಾನಾಯಕ ದಾರವಾಹಿ ಶುರುವಾದ ನಂತರ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಹುಡುಕಾಟ ಹೆಚ್ಚಾಯಿತು. ಆದರೆ ಆಗ ಅಂತರ್ಜಾಲದಲ್ಲಿ ಕನ್ನಡದಲ್ಲಿ ಅಂಬೇಡ್ಕರ್ ಅರಿವು ಹೆಚ್ಚಾಗಿ ಇರಲಿಲ್ಲ, ಆಗ ಅಂತರ್ಜಾಲದಲ್ಲಿ ಅಂಬೇಡ್ಕರ್ ಚಿಂತನೆಗಳು ಸಿಗುವಂತಾಗಬೇಕು ಎಂದು ಅಂಬೇಡ್ಕರ್ ಓದು ಪ್ರಾರಂಭಿಸಲಾಯಿತು. ನಾನು ನೆಪಮಾತ್ರನಾಗಿದ್ದು `ಇದು ಸಹಭಾಗಿತ್ವದ ಯಶಸ್ಸು, `ಎಲ್ಲರ ಅಂಬೇಡ್ಕರ್’ ಎನ್ನುವ ತತ್ವದಡಿ ಎಲ್ಲರೂ ಅಂಬೇಡ್ಕರ್ ಅವರನ್ನು ಓದುವಂತಾಗಬೇಕು, ಎಲ್ಲರೂ ಕೇಳುವಂತಾಗಬೇಕು. ಅಂಬೇಡ್ಕರ್ ಚಿಂತನೆ ಕನ್ನಡದಲ್ಲಿ ಕೇಳಲು ಅಂತರ್ಜಾಲದಲ್ಲಿ ಸಿಗುವಂತಾಗಬೇಕು ಎನ್ನುವ ಕನಸು ಈ ಸರಣಿಯ ಹಿಂದಿದೆ.</p>



<p></p>



<figure class="wp-block-image size-full"><img decoding="async" width="696" height="409" src="https://peepalmedia.com/wp-content/uploads/2022/10/ambedkar-odu-sarani-peepal-media.jpg" alt="" class="wp-image-10904" srcset="https://peepalmedia.com/wp-content/uploads/2022/10/ambedkar-odu-sarani-peepal-media.jpg 696w, https://peepalmedia.com/wp-content/uploads/2022/10/ambedkar-odu-sarani-peepal-media-300x176.jpg 300w, https://peepalmedia.com/wp-content/uploads/2022/10/ambedkar-odu-sarani-peepal-media-150x88.jpg 150w" sizes="(max-width: 696px) 100vw, 696px" /><figcaption>ಡಾ. ಬಿ.ಆರ್‌ ಅಂಬೇಡ್ಕರ್‌ ಮತ್ತು ಅರುಣ್ ಜೋಳದಕೂಡ್ಲಿಗಿ</figcaption></figure>



<p> ಈ ತರಹದ ಅಂಬೇಡ್ಕರ್ ಆಡಿಯೋ ಆರ್ಖೈವ್ ರೂಪುಗೊಂಡಿರುವುದು ಭಾರತದ ದೇಸಿ ಭಾಷೆಗಳಲ್ಲಿ ಇದು ಮೊದಲ ಪ್ರಯತ್ನ. ಇದು ಇತರೆ ಭಾಷಿಕರಿಗೆ ಮಾದರಿಯಾಗಬೇಕು ಎನ್ನುವುದು ನನ್ನ ಕನಸಾಗಿದೆ. ಈ ತನಕ ಯೂಟೂಬ್ ಚಾನಲ್ಲಿನಲ್ಲಿ ಒಂಬತ್ತು ಲಕ್ಷದಷ್ಟು ಕೇಳುವಿಕೆ ಸಾಧ್ಯವಾಗಿದೆ. ಅನೇಕರು ಈ ಓದಿನಿಂದ ಪ್ರೇರಿತರಾಗಿದ್ದಾರೆ. ಇದೀಗ ಅನೇಕರು ಅಂಬೇಡ್ಕರ್ ಓದಿನ ಅವಕಾಶಕ್ಕಾಗಿ ಕೇಳುತ್ತಿದ್ದಾರೆ. ಇದು ಈ ಸರಣಿಯ ರೂಪಾಂತರವಾಗಿದೆ. ಅಂಬೇಡ್ಕರ್ ಅವರ ಸಮಕಾಲೀನವೆನಿಸುವ ಎಲ್ಲಾ ಬರಹಗಳನ್ನು ಓದಿಸುವ ಗುರಿ ಈ ಸರಣಿಗಿದೆ. ಹಾಗಾಗಿ ಅಂಬೇಡ್ಕರ್ ಓದು ಇನ್ನೂ ಮುಂದುವರಿಯಲಿದೆ. ಅಂಬೇಡ್ಕರ್ ಓದಿನ ಸಹಭಾಗಿಗಳಾದ ಎಲ್ಲರಿಗೂ ಮತ್ತೊಮ್ಮೆ ಜೈಭೀಮ್ ನಮನಗಳನ್ನು ಸಲ್ಲಿಸುವೆ.</p>
]]></content:encoded>
					
		
		
			</item>
		<item>
		<title>ತಂತಿ ಮೇಲಣ ಹೆಜ್ಜೆ</title>
		<link>https://peepalmedia.com/tanti-melana-hejje/</link>
		
		<dc:creator><![CDATA[Vani Satish]]></dc:creator>
		<pubDate>Thu, 13 Oct 2022 09:49:10 +0000</pubDate>
				<category><![CDATA[ಅಂಕಣ]]></category>
		<category><![CDATA[ಹೆಣ್ಣೋಟ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Series]]></category>
		<category><![CDATA[special]]></category>
		<category><![CDATA[special story]]></category>
		<category><![CDATA[tanti]]></category>
		<category><![CDATA[tanti melan hejje]]></category>
		<category><![CDATA[Vani Sathish]]></category>
		<category><![CDATA[Vani Sathish Series]]></category>
		<category><![CDATA[woman]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10476</guid>

					<description><![CDATA[ಇದೊಂದು ಕಥೆಯಲ್ಲದ ಕಥೆ! ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಬಲದ ಸೂಕ್ಷ್ಮತೆಯ ಅನಾವರಣದ ಕಥನ. ದೇಹವೊಂದು ವಿಕಸನಗೊಂಡಂತೆಲ್ಲ ಆ ದೇಹದ ಜತೆ ಹೆಣೆದುಕೊಂಡ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ಬದುಕಿನ ದಿಟ್ಟ ಪಯಣದ ಕಥನ. ಈ ಕಥನವನ್ನು “ತಂತಿ ಮೇಲಣ ಹೆಜ್ಜೆ” ಅಂಕಣದಲ್ಲಿ ಪಡಿ ಮೂಡಿಸಲಿದ್ದಾರೆ ರಂಗಭೂಮಿ ಹಾಗೂ ನೃತ್ಯ ಕಲಾವಿದೆ ವಿದುಷಿ ವಾಣಿ ಸತೀಶ್‌. “ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ತಿಳ್ಕೋ..” ಇದು ನನ್ನ [&#8230;]]]></description>
										<content:encoded><![CDATA[
<p><strong>ಇದೊಂದು ಕಥೆಯಲ್ಲದ ಕಥೆ! ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಬಲದ ಸೂಕ್ಷ್ಮತೆಯ ಅನಾವರಣದ ಕಥನ. ದೇಹವೊಂದು ವಿಕಸನಗೊಂಡಂತೆಲ್ಲ ಆ ದೇಹದ ಜತೆ ಹೆಣೆದುಕೊಂಡ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ </strong><strong>ಒಂಟಿ </strong><strong>ಹೆಣ್ಣೊಬ್ಬಳ </strong><strong>ಬದುಕಿನ ದಿಟ್ಟ ಪಯಣದ </strong><strong>ಕಥನ. ಈ ಕಥನವನ್ನು </strong><strong>“</strong><strong>ತಂತಿ ಮೇಲಣ ಹೆಜ್ಜೆ” ಅಂಕಣದಲ್ಲಿ ಪಡಿ </strong><strong>ಮೂಡಿಸ</strong><strong>ಲಿ</strong><strong>ದ್ದಾರೆ </strong><strong>ರಂಗಭೂಮಿ ಹಾಗೂ ನೃತ್ಯ ಕಲಾವಿದೆ ವಿದುಷಿ ವಾಣಿ ಸತೀಶ್‌.</strong></p>



<p>“ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ತಿಳ್ಕೋ..” ಇದು ನನ್ನ ಹೈಸ್ಕೂಲಿನ ಗೆಳತಿ &nbsp;ಪದೇಪದೇ ಹೇಳುತ್ತಿದ್ದ&nbsp; ಮಾತು. ಆ ದಿನಗಳಲ್ಲಿ ನಮ್ಮ ನಡುವೇ ಯಾವುದೇ ಘನ ಗಂಭೀರ &nbsp;ಚರ್ಚೆ ಆರಂಭವಾದರೂ ಅದು ಸುತ್ತಿ ಬಳಸಿ ಕೊನೆಯಾಗುತ್ತಿದ್ದದ್ದು ಮಾತ್ರ ಅವಳ ಇದೇ ಮಾತಿನಿಂದ. ಒಂದು ಸಾರಿ ಅವಳಲ್ಲಿ, “ಈ ಪದ ಅಂದ್ರೆ ನಿನಗೆ ಯಾಕೆ ಅಷ್ಟು ಇಷ್ಟ” ಅಂತ ಕೇಳಿದ್ದೆವು. ಆಗ ಅವಳು ಒಂದು ಕತೆಯನ್ನೇ ನಮ್ಮ ಮುಂದೆ ಬಿಚ್ಚಿಟ್ಟಿದ್ದಳು. ಅವಳ ಅತ್ತೆ ಬಹಳ ಸುಂದರಿಯೂ, ಚುರುಕಿನವಳೂ ಆಗಿದ್ದಳಂತೆ. ಅವಳ&nbsp; ಸುತ್ತ ಸದಾ ಹೆಂಗಸರು ಮಕ್ಕಳು ಸಕ್ಕರೆಗೆ ಇರುವೆ ಮುತ್ತಿಕ್ಕುವಂತೆ ಸುಳಿದಾಡುತ್ತಲೇ ಇರುತ್ತಿದ್ದರಂತೆ. ಇದನ್ನು ಸಹಿಸದ ಅವರ ಗಂಡ ಸಣ್ಣ ಪುಟ್ಟ ಕಾರಣಗಳನ್ನು ಹಿಡಿದು ಬಡಿಯುತ್ತಿದ್ದನಂತೆ. ಹೊಡೆತ ತಿಂದ ಅತ್ತೆ ಮೂರು ಮೂರು ದಿನಕ್ಕೂ ತವರಿಗೆ ಬಂದು ಕೂರುವುದು, ತವರಿನವರು ಅತ್ತೆಗೆ ಬುದ್ಧಿ ಹೇಳಿ ಕಳಿಸುವುದು ಸಾಮಾನ್ಯವಾಗಿತ್ತು.&nbsp; “ನಿನ್ನಂತ ಹೆಂಡ್ತಿನ ಬಾಳಿಸೋಕೆ ಏನವ್ವ ಅವನಿಗೆ ಸಂಕಟ” ಎಂದು ಪ್ರಶ್ನೆ ಮಾಡುತ್ತಿದ್ದ ನೆಂಟರಿಷ್ಟರಿಗೆ, ಊರಿನವರಿಗೆ, ಅತ್ತೆ ಹೇಳುತ್ತಿದ್ದುದು ಇದೊಂದೇ ಮಾತಂತೆ. “ಏ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರ್ತು ಹುಲ್ಲೆನಲ್ಲ ಅಲುವ್ರ….? ನನ್ನ ಬುದ್ದಿವಂತಿಕೆ ನನ್ನ ಹಿಂದೆ ಇರೋ ಜನ ಕಂಡ್ರೆ ನನ್ನ ಗಂಡುಂಗೆ ಹೆದ್ರುಕೆ. ನನ್ನುನ್ನ ಅವನ ಅಂಕೆ ಸಂಕೆಲಿಟ್ಕೊಬೇಕು ಅನ್ನೋ ಚಿತಾವಣೆ. ನಾನೇನು ಹೆಡ್ಡಿನೋ ಮಡ್ಡಿನೋ ಹೇಳಿ. ಬುಟ್ರೆ ಅವನ ಅಪ್ಪನಂಗೆ ವ್ಯವಾರ ಜಯ್ಸ್ಕೊಂಡು ಬತ್ತಿನಿ. ಅಂತದ್ರಲ್ಲಿ &nbsp;ಯಾವಾಗ್ಲು ಅವನ ಕಾಲ್ ಸಂದಿಲೇ ಬಿದ್ದಿರ್ಲಿ ಅಂದ್ರೆ ನನ್ಗಾಕಿಲ್ಲ. ನಾನು ಇದುನ್ನ &nbsp;ಪ್ರಶ್ನೆ ಮಾಡ್ತಿನಿ ಅಂತ್ಲೇ ನನಗೆ ಈ ಪರಿ &nbsp;ಬವುಮಾನ” ಎಂದು ಹೇಳಿ ಊದಿದ ಮೈಕೈ ತೋರಿಸುತ್ತಿದ್ದಳಂತೆ. ಕೆಲವು ವರ್ಷಗಳು ಹೀಗೆ ಸರಿದು ಒಮ್ಮೆ ತವರಿಗೆ ಸುದ್ದಿ ಬಂದಿತಂತೆ ಅತ್ತೆ ಗಂಗೆಯ ಪಾಲಾದಳೆಂದು. ಅತ್ತೆ ಹೋದ ಮೂರು ತಿಂಗಳಿಗೆ &nbsp;ಅವಳ ಗಂಡನ ನಿಗಾ ನೋಡಿಕೊಳ್ಳುವವರಿಲ್ಲವೆಂದು ಅವನಿಗೆ &nbsp;ಸುಸೂತ್ರವಾಗಿ ಮದುವೆ ಮಾಡಿ ಮುಗಿಸಿದರಂತೆ.</p>



<p>ಇದನ್ನು ಹೇಳುತ್ತಿದ್ದ ಗೆಳತಿಯ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಅವಳ ಅತ್ತೆಯೇ ಇಲ್ಲಿ ಬಂದು ಅವಳ ಕತೆ ಹೇಳಿ ಹೋದಳಾ ಎಂಬಷ್ಟರ ಮಟ್ಟಿಗೆ ಅತ್ತೆಯನ್ನು ಆವಾಹಿಸಿಕೊಂಡು ಬಿಡುತ್ತಿದ್ದಳು. ಬಹುವಾಗಿ ಅತ್ತೆಯನ್ನು ಹಚ್ಚಿ ಕೊಂಡಿದ್ದ &nbsp;ಗೆಳತಿಗೆ, &nbsp;ಅತ್ತೆ ಸದಾ ಹೇಳುತ್ತಿದ್ದ “ ಹುಲಿನ ಬೋನ್ನಲ್ಲಿ ಇಡ್ತಾರೆ ಹೊರತು ಹುಲ್ಲೆಯನ್ನಲ್ಲ” ಎನ್ನುವ ಮಾತು, ತಾನು ಅತ್ತೆಯ &nbsp;ಜೊತೆಯಲ್ಲಿಯೇ ಜೀವಿಸುತ್ತಿದ್ದೇನೆ ಎನ್ನುವ ಭಾವ ಮೂಡಿಸುತ್ತಿತ್ತಂತೆ. ಹಾಗಾಗಿ ಗೆಳತಿಯ ನಾಲಿಗೆ ಮೇಲೆ&nbsp; ಹುಲಿ ಹುಲ್ಲೆಯ ನೆನಪಲ್ಲಿ ಅತ್ತೆಯ ಗಾಢವಾದ ನೆನಪು ಸದಾ ಜೀವಂತವಾಗಿ ಇಣುಕುತ್ತಲೇ ಇರುತ್ತಿತ್ತು…</p>



<p>&nbsp;ಹೆಣ್ಣಿನ ದೃಷ್ಟಿಯಿಂದ ಅಕ್ಷರಶಃ ಸತ್ಯ ಎನ್ನಿಸುವ &nbsp;ಈ &nbsp;ವಾಕ್ಯ ನನ್ನ ಜೋಳಿಗೆಗೆ ಬಿದ್ದಂದಿನಿಂದ ನಾನು ಬಹಳ ಸೂಕ್ಷ್ಮವಾಗಿ ಹೆಣ್ಣು ಲೋಕವನ್ನು ಗಮನಿಸುತ್ತಾ ಅರಿಯ ತೊಡಗಿದೆ. ಶತ ಶತಮಾನಗಳಿಂದಲೂ ನಮ್ಮ ಪುರುಷ ಪ್ರಧಾನ ಸಮಾಜ, ಹೆಣ್ಣಿನ ಸುತ್ತಾ &nbsp;ದಬ್ಬಾಳಿಕೆಯಿಂದಲೋ &nbsp;ಅಥವಾ ನವಿರು ಭಾವದ ಸೋಗಿನಿಂದಲೋ ಬಲೆ ಹೆಣೆದು, ಅವಳ ಅದಮ್ಯ ಚೈತನ್ಯ ಶಕ್ತಿಯನ್ನು ತನ್ನ ಸುಪರ್ದಿಗೆ ತೆಗೆದು ಕೊಳ್ಳುವ ಹುನ್ನಾರ ನಡೆಸುತ್ತಲೇ ಬಂದಿದೆ. ಅಂದು ಅವಳು ಗೌರಮ್ಮನ ಹಾಗೆ ಸೆರಗೊದ್ದು, ತಲೆ ತಗ್ಗಿಸಿ ಮುಗ್ಧತೆಯಿಂದ ನಡೆದು ಬಂದಂದಿನಿಂದ ಹಿಡಿದು, ಇಂದು ತನ್ನಿಷ್ಟದ ಉಡುಗೆ ತೊಟ್ಟು ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುತ್ತಿರುವ ಈ ಹೊತ್ತಿನವರೆಗೂ ಅವಳ ಬಗ್ಗೆ ನಿಂದನೆಯ ಅಪಮಾನದ ಮಾತುಗಳು ನಿಂತಿಲ್ಲ. ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ನಡೆಯುವ ಎಲ್ಲಾ ಅನಾಹುತಗಳಿಗೆ, ಅಪರಾಧಗಳಿಗೆ ಅವಳೇ ಕಾರಣೀ ಭೂತಳು ಎನ್ನುವ ಕುಹಕದ ಮಾತುಗಳಂತೂ &nbsp;ಹಾಸ್ಯಾಸ್ಪದವೇ ಸರಿ. ನಮ್ಮ ಪ್ರತಿಷ್ಠಿತ ಸಮಾಜದ &nbsp;ಪ್ರತಿಯೊಂದು &nbsp;ಧರ್ಮ, &nbsp;ಜಾತಿ, ಜನಾಂಗಗಳಲ್ಲಿಯೂ ಅಂದಿನಿಂದ ಇಂದಿನ ವರೆಗೂ &nbsp;ಹೆಣ್ಣು ಕುಲ ಎಂಬುದನ್ನು ಎರಡನೆಯ ದರ್ಜೆಯಲ್ಲಿಟ್ಟೇ &nbsp;ನೋಡುತ್ತಾ, ನಡೆಸಿಕೊಳ್ಳತ್ತಾ ಬಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ನಾನು ಸಮಾಜ ಶಾಸ್ತ್ರದಲ್ಲಿ ಓದಿದ್ದ , ಹೆಣ್ಣು ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಅಪ್ಪ, ಗಂಡ, ಮಗ ಹೀಗೆ ಗಂಡಿನ ಆಶ್ರಯದಲ್ಲಿಯೇ ಬಾಳ ಬೇಕು ಎನ್ನುವ ಸಾಲುಗಳು ನನ್ನಲ್ಲಿ ಈಗಲೂ ನಖಶಿಖಾಂತ ಕೋಪ ತರಿಸುತ್ತವೆ. ನಮ್ಮ ಬಾಲ್ಯ, ಯೌವ್ವನಗಳನ್ನು ಸೂರೆ ಗೊಳ್ಳಲು ಹೊರಟ ಇದೇ ಗಂಡಸರ&nbsp; ನೀಚತನದ ಎದುರು ಸಿಡಿದು, ಒಂಟಿಯಾಗಿ ಬದುಕು ಕಟ್ಟಿಕೊಂಡ ನನ್ನ ಅಮ್ಮನಂತಹ ಅನೇಕ ಮಹಿಳೆಯರನ್ನು ನಾನು ಕಂಡಿದ್ದೇ. ಈಗಲೂ ಕಾಣುತ್ತಲೇ ಇದ್ದೇನೆ. ಹೆಣ್ಣು ತನ್ನ ಬಾಲ್ಯದಿಂದ ಮುದಿತನದ ವರೆಗೂ ಯಾರ ಆಸರೆ ಇಲ್ಲದೆ, ಹೆತ್ತ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು &nbsp;ಯಶಸ್ವಿಯಾಗಿ ಒಂಟಿ ಜೀವನ ನಡೆಸ ಬಲ್ಲಳು…. ಇದು ಗಂಡಿನಿಂದ ಸಾಧ್ಯವ&#8230;? &nbsp;ಎಂಬ ಪ್ರಶ್ನೆ ಎದುರಾದಾಗೆಲ್ಲಾ ನನ್ನೆದುರು ತಟ್ಟನೆ ಬಂದು ನಿಲ್ಲುವುದು “ಜಟ್ಟಿ ಬಿದ್ದರು ಮೀಸೆ ಮಣ್ಣಾಗಲಿಲ್ಲ” ಎಂಬ ಗಾದೆ ಮಾತು. ನಾನು ಬೆಳೆದು ಬಂದ&nbsp; ಇಡೀ ವಾತಾವರಣದಲ್ಲಿ ನಾನು ಕಂಡದ್ದು, ತಮ್ಮ ದಿನಚರಿಯ ಪ್ರತೀ ಹಂತದಲ್ಲು ಹೆಣ್ಣಿನ ಮೇಲೆ ಒರಗಿ ನಿಂತಿರುವ &nbsp;ಪುರುಷರ ಬಲವಾದ ಅವಲಂಬನೆಯನ್ನೇ. ತಾಯಿ, ಹೆಂಡತಿ, ಮಗಳು, ಸೊಸೆ ಹೀಗೆ ಬೇರೆ ಬೇರೆ ಹೆಣ್ಣು ಮಡಿಲಿನ ಆಶ್ರಯದಲ್ಲಿಯೇ ಪೊರೆಯಲ್ಪಡುವ ಗಂಡು, ತನ್ನ ಈ ಅವಲಂಬನೆಯನ್ನು ಯಾಕೆ ಒಪ್ಪಿಕೊಳ್ಳಲು ತಯಾರಿಲ್ಲ…!? ಎಂಬುದು&nbsp; ಬಾಲ್ಯದಿಂದಲೂ ನನ್ನೊಂದಿಗೆ ಬೆಳೆದು ಬಂದ ದೊಡ್ಡ ಪ್ರಶ್ನೆಯಾಗಿತ್ತು. ನಾನು ಬೆಳೆದಂತೆಲ್ಲಾ ನಿಧಾನವಾಗಿ ಇದರ ಹಿಂದಿನ ಹುನ್ನಾರ ಅರಿವಾಗತೊಡಗಿತು.</p>



<p>ಪ್ರಕೃತಿದತ್ತವಾಗಿ ಬಂದ ಅವನ ದೈಹಿಕ ಬಲಾಢ್ಯತೆಯನ್ನೇ ಅಸ್ತ್ರವನ್ನಾಗಿಸಿದ ಪುರುಷ, ಹೆಣ್ಣು ತಾನು ಭೋಗಿಸಲೆಂದೇ ಹುಟ್ಟಿ ಬಂದವಳು ಎಂಬಂತೆ ಅವಳ ಮೇಲೆ ಸವಾರಿ ನಡೆಸುತ್ತಾ ಯಜಮಾನನಾಗಿ ಮೆರೆಯತೊಡಗಿದ್ದನ್ನು &nbsp;ಅರಿತೆ. &nbsp;ಹೆಣ್ಣು ಅಸಮಾನ್ಯ ಧಾರಣ ಶಕ್ತಿಯುಳ್ಳ ಮಹಾತಾಯಿ, ಮಹಾಲಕ್ಷ್ಮಿ, ಮಹಾಕಾಳಿ ಎಂದು ಹಾಡಿ ಹೊಗಳುತ್ತಲೇ, ಕಾದ ಒಲೆಯ ಮುಂದೆ ಅವಳನ್ನು ಪ್ರತಿಷ್ಠಾಪಿಸಿ, ಗೋರಿ ಕಟ್ಟಿ ಅವನು ಹುಲಿ ವೇಷ ತೊಟ್ಟು ಎದೆಯುಬ್ಬಿಸಿ ನಡೆದು ಬಂದುದ ಅರಿತೆ. ತನ್ನ ಕಪಿಮುಷ್ಟಿಯಲ್ಲಿ ಆರ್ಥಿಕತೆ ಎನ್ನುವ ಮಂತ್ರ ದಂಡವ ಹಿಡಿದು &nbsp;ಅವಳ ಮಾತು, ಮೆದುಳು, ಬಿಸಿ ನೆತ್ತರು, ಎಲ್ಲವನ್ನು ಹೀರಿ &nbsp;ಸದಾ ಕಾಲಕ್ಕೂ ಅವಳು ತನ್ನ ಸೇವೆ ಮಾಡುತ್ತಾ ತಣ್ಣಗೆ ಜೀವಿಸ ಬೇಕು ಎನ್ನುವ ಅವನ ಒಳ ಹುನ್ನಾರ ಅರಿತೆ. &nbsp;ವಿಧಿ ನಿಯಮಗಳ ಸಂಕೋಲೆ ತೊಡಿಸಿ ಅವಳ ಅಭಿವ್ಯಕ್ತಿಯನ್ನೇ ಅಪಹರಿಸಿ ಮೆರೆಯುತ್ತಿರುವ ಭಯಗ್ರಸ್ಥ ಗಂಡಿನ ನಯವಂಚಕತನವನ್ನು ಅರಿತೆ. ಶ್ರೇಷ್ಠ ಎಂದು ಎದೆಯುಬ್ಬಿಸಿ ನಡೆವ &nbsp;ಜಾತಿಯಿಂದ&nbsp; ಹಿಡಿದು, ಕನಿಷ್ಠ ಎಂದು ನಡು ಬಗ್ಗಿಸಿ ನಡೆವ&nbsp; ಜಾತಿಯವರೆಗೂ ಹೆಣ್ಣನ್ನು ಕನಿಷ್ಠಳಲ್ಲಿ ಕನಿಷ್ಠಳಾಗಿ ತಮ್ಮ ಅಡಿಯಾಳಾಗಿ ನಡೆಸಿಕೊಳ್ಳುತ್ತಲೇ ಬರುತ್ತಿರುವ ಮಹಾ ಸತ್ಯವನ್ನರಿತೆ…….!</p>



<p>ಈಗ ಸಮಾಜ ಬದಲಾಗಿದೆ, ಎಲ್ಲೆಡೆಯೂ ಹೆಣ್ಣು ಆರ್ಥಿಕತೆಯತ್ತ ಮುಖ ಮಾಡಿ ಗಂಡಿಗೆ ಸರಿ ಸಮನಾಗಿ ನಿಲ್ಲುತ್ತಿದ್ದಾಳೆ, ಅವಳಿಗೂ ತನ್ನ ಬೇಕು ಬೇಡಗಳನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ ಬಂದಿದೆ ಎಂದು ಹೇಳುತ್ತಿರುವ ಈ ಹೊತ್ತಿನಲ್ಲು ನನಗೆ ಗಂಟಲು ಕಟ್ಟಿದಂತಾಗುತ್ತದೆ. ಸಂಸಾರ ಮತ್ತು ಉದ್ಯೋಗ ಎಂಬ ಎರಡು ಅಲಗಿನ ಮೇಲೆ ನಡೆಯುತ್ತಿರುವ ಇಂದಿನ &nbsp;ಹೆಣ್ಣು, ತನ್ನ ತಲೆ ತಲಾಂತರದ ಕನಸು ಕನವರಿಕೆಗಳನ್ನು ಸಾಕಾರ ಗೊಳಿಸಲೋ ಎಂಬಂತೆ, ದಣಿವರಿಯದ ಹಾಗೆ ಓಡುತ್ತಲೇ ಇದ್ದಾಳೆ. ಒಳ ಹೊರಗುಗಳಲ್ಲಿ ಎದುರಾಗುವ ಸಮಸ್ಯೆ ಸವಾಲುಗಳನ್ನು, ದಿಟ್ಟತನದಲ್ಲಿ ಎದುರಿಸಿ ನಿಲ್ಲುವ ಸಾಹಸದಲ್ಲಿ ಹೈರಾಣಾಗುತ್ತಲೇ ಇದ್ದಾಳೆ. &nbsp;ಇಷ್ಟು ಸಾಲದೆಂಬಂತೆ ಪ್ರತಿ &nbsp;ಕ್ಷಣವೂ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಅಮಾನವೀಯ ಘಟನೆಗಳು ಅವಳ ಅಂತಃಶಕ್ತಿಗೆ ಸವಾಲೆಸೆದು ಭೂತದಂತೆ ನಿಂತು, ಅವಳ ಆತ್ಮವಿಶ್ವಾಸ&nbsp; ಕಸಿಯುವ ಹುನ್ನಾರ ನಡೆಸುತ್ತಲೇ ಇವೆ.</p>



<p>&nbsp;ಎಲ್ಲಾ ಕಾಲದಲ್ಲು ಇಂತಹ ಲೆಕ್ಕವಿಲ್ಲದಷ್ಟು ಸಮಸ್ಯೆ ಗಳನ್ನು ಎದುರಿಸುತ್ತಲೇ ,ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸತತ ಹೋರಾಟ ಮಾಡಿಕೊಂಡೇ ಬರುತ್ತಿರುವ ಹೆಣ್ಣಿನೊಂದಿಗೆ, ಇಷ್ಟಾದರು ಇಂಬಾಗಿ ನಿಂತ, ಇಂದೂ ನಿಲ್ಲುತ್ತಿರುವ ಮಾನವೀಯ ಅಂತಃಕರಣವುಳ್ಳ ಪುರುಷರ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ ಎನ್ನುವ ಎಚ್ಚರವನ್ನು ಕಾಪಿಟ್ಟುಕೊಂಡೇ, ಈ ಎಲ್ಲಾ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ದಿಟ್ಟತನದ ಕಥಾನಕವನ್ನು &nbsp;ಈ “ತಂತಿ ಮೇಲಣ ಹೆಜ್ಜೆ” ಅಂಕಣದ ಮೂಲಕ ಪ್ರಸ್ತುತ ಪಡಿಸುತ್ತಿದ್ದೇನೆ.</p>



<p class="has-text-align-center"><mark style="background-color:rgba(0, 0, 0, 0)" class="has-inline-color has-vivid-red-color">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದಾಗಿರುತ್ತೆ.)</mark></p>



<p class="has-regular-font-size"><strong>ವಾಣಿ ಸತೀಶ್‌</strong><br>ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.</p>



<p class="has-regular-font-size"></p>



<p><strong>ಇದನ್ನೂ ನೋಡಿ:</strong> <a href="https://youtu.be/G-kSJJhCYxc">ಬಡವರ ಮನೆ ಕಾಣುವ BBMP ಅಧಿಕಾರಿಗಳಿಗೆ ಬಲಿತವರ ಮನೆ ಕಾಣುವುದಿಲ್ಲವೇ?</a></p>



<ul class="wp-block-list"><li>ಅಶೋಕ್‌ ಮೃತ್ಯುಂಜಯ, AAP ವಕ್ತಾರ</li></ul>



<p>ಪೀಪಲ್ ಟೀವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe loading="lazy" title="ಕೆರೆ ಒತ್ತುವರಿ ಬೀದಿಗೆ ಬಂದ ಬಡಜನ | BBMP&#039;s anti-encroachment drive an eyewah | ASHOK MRUTHYUNJAYA | AAP" width="696" height="392" src="https://www.youtube.com/embed/G-kSJJhCYxc?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
	</channel>
</rss>
