<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Sexual Harassment &#8211; Peepal Media</title>
	<atom:link href="https://peepalmedia.com/tag/sexual-harassment/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 10 Mar 2025 06:52:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Sexual Harassment &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹಂಪಿ: ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಆರೋಪಿಯ ಬಂಧನ</title>
		<link>https://peepalmedia.com/hampi-gang-rape-and-murder-case-third-accused-arrested/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 10 Mar 2025 06:52:28 +0000</pubDate>
				<category><![CDATA[ಅಪರಾಧ]]></category>
		<category><![CDATA[crime]]></category>
		<category><![CDATA[hampi]]></category>
		<category><![CDATA[Sexual assault]]></category>
		<category><![CDATA[Sexual Harassment]]></category>
		<guid isPermaLink="false">https://peepalmedia.com/?p=55005</guid>

					<description><![CDATA[ಕರ್ನಾಟಕದ ಹಂಪಿ ಬಳಿ ನಡೆದ ಪ್ರವಾಸಿಗರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಶಂಕಿತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇತರ ಇಬ್ಬರು ಶಂಕಿತರನ್ನು ಶನಿವಾರ ಬಂಧಿಸಲಾಗಿದೆ. ಗುರುವಾರ ರಾತ್ರಿ, ಹಂಪಿ ಬಳಿಯ ಸಣಾಪುರ ಗ್ರಾಮದಲ್ಲಿ ಇಸ್ರೇಲ್‌ನ 27 ವರ್ಷದ ಮಹಿಳೆ ಮತ್ತು ಕೊಪ್ಪಳ ಜಿಲ್ಲೆಯ 29 ವರ್ಷದ ಹೋಂಸ್ಟೇ ಮಾಲಕಿಯ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆಯರು ಅಮೆರಿಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೂವರು ಪುರುಷ ಪ್ರಯಾಣಿಕರನ್ನು ಒಳಗೊಂಡ ಐದು ಜನರ ಗುಂಪಿನ [&#8230;]]]></description>
										<content:encoded><![CDATA[
<p>ಕರ್ನಾಟಕದ ಹಂಪಿ ಬಳಿ ನಡೆದ ಪ್ರವಾಸಿಗರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಶಂಕಿತನನ್ನು ತಮಿಳುನಾಡಿನಲ್ಲಿ <a href="https://www.newindianexpress.com/states/karnataka/2025/Mar/10/hampi-rape-case-third-accused-arrested-up-in-tamil-nadu" target="_blank" rel="noreferrer noopener">ಬಂಧಿಸಲಾಗಿದೆ</a>. ಈ ಪ್ರಕರಣದಲ್ಲಿ ಇತರ ಇಬ್ಬರು ಶಂಕಿತರನ್ನು ಶನಿವಾರ ಬಂಧಿಸಲಾಗಿದೆ.</p>



<p>ಗುರುವಾರ ರಾತ್ರಿ, ಹಂಪಿ ಬಳಿಯ ಸಣಾಪುರ ಗ್ರಾಮದಲ್ಲಿ ಇಸ್ರೇಲ್‌ನ 27 ವರ್ಷದ ಮಹಿಳೆ ಮತ್ತು ಕೊಪ್ಪಳ ಜಿಲ್ಲೆಯ 29 ವರ್ಷದ ಹೋಂಸ್ಟೇ ಮಾಲಕಿಯ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ಮಹಿಳೆಯರು ಅಮೆರಿಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೂವರು ಪುರುಷ ಪ್ರಯಾಣಿಕರನ್ನು ಒಳಗೊಂಡ ಐದು ಜನರ ಗುಂಪಿನ ಭಾಗವಾಗಿದ್ದರು. ಒಡಿಶಾದ ಪುರುಷ ಪ್ರವಾಸಿ ಶನಿವಾರ <a href="https://www.thenewsminute.com/karnataka/hampi-rape-and-assault-odisha-tourist-pushed-into-canal-found-dead" target="_blank" rel="noreferrer noopener">ಶವವಾಗಿ ಪತ್ತೆಯಾಗಿದ್ದಾನೆ.</a></p>



<p><strong>ಪ್ರಕರಣ</strong></p>



<p>ಹೋಂಸ್ಟೇ ಮಾಲೀಕಿ ತಮ್ಮ ದೂರಿನಲ್ಲಿ, <a href="https://www.thehindu.com/news/national/karnataka/two-women-including-a-foreigner-raped-near-hampi/article69304426.ece" target="_blank" rel="noreferrer noopener">ರಾತ್ರಿ 10.30 ರ ಸುಮಾರಿಗೆ</a> ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಊಟದ ನಂತರ ತಾನು ಮತ್ತು ತನ್ನ ನಾಲ್ವರು ಅತಿಥಿಗಳು ನಕ್ಷತ್ರ ವೀಕ್ಷಣೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.</p>



<p>ಮೂವರು ಪುರುಷರು ಮೋಟಾರ್ ಸೈಕಲ್‌ನಲ್ಲಿ ಬಂದು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿದರು. ನಂತರ, ಅವರಲ್ಲಿ ಒಬ್ಬ ಪ್ರವಾಸಿಗರಿಂದ 100 ರೂ.ಗೆ ಬೇಡಿಕೆ ಇಟ್ಟನು, ಆಗ ಅವರು ನಿರಾಕರಿಸಿದಾಗ ಆತ ಜಗಳವಾಡಲು ಪ್ರಾರಂಭಿಸಿ ಅವರ ಮೇಲೆ ಹಲ್ಲೆ ನಡೆಸಿದನು. ನಂತರ ಮೂವರು ಪುರುಷರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿ, ನಂತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತು.</p>



<p>ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ನಂತರ ಪ್ರಯಾಣಿಕರಿಂದ ಎರಡು ಮೊಬೈಲ್ ಫೋನ್‌ಗಳು ಮತ್ತು 9,500 ರೂ. ನಗದನ್ನು ತೆಗೆದುಕೊಂಡು ತಮ್ಮ ಬೈಕ್‌ನಲ್ಲಿ <a href="https://indianexpress.com/article/cities/bangalore/karnataka-rape-hampi-anegundi-police-israeli-tourist-tungabhadra-canal-9875258/lite/" target="_blank" rel="noreferrer noopener">ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ</a><em> ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ .</p>



<p>ಆಪಾದಿತ ಘಟನೆಯ ಎರಡು ದಿನಗಳ ನಂತರ, ಶೋಧ ತಂಡಗಳು ಒಡಿಶಾ ಮೂಲದ 26 ವರ್ಷದ ಬಿಬಾಶ್ ಅವರ ಶವವನ್ನು ವಶಪಡಿಸಿಕೊಂಡರೆ, 23 ವರ್ಷದ ಡೇನಿಯಲ್ ಮತ್ತು 42 ವರ್ಷದ ಪಂಕಜ್ ಎಂಬ ಇಬ್ಬರು ಪುರುಷರು ಕಾಲುವೆಯಲ್ಲಿ ಈಜಿ ಬಚಾವಾಗಿದ್ದಾರೆ. </p>



<p>ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ದರೋಡೆ, ಹಲ್ಲೆ ಮತ್ತು ಕೊಲೆಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೂವರು ಶಂಕಿತರನ್ನು ಹುಡುಕಲು ಪೊಲೀಸರು ಆರು ತಂಡಗಳನ್ನು ನಿಯೋಜಿಸಿದ್ದರು.</p>
]]></content:encoded>
					
		
		
			</item>
		<item>
		<title>ಕುಕ್ಕೆ: ವಿದ್ಯಾರ್ಥಿನಿಯ ಜೊತೆಗೆ ಅಸಭ್ಯ ವರ್ತನೆ- ಶಿವರಾಮ್‌ ಭಟ್‌ ಎಂಬಾತನ ಮೇಲೆ ದೂರು</title>
		<link>https://peepalmedia.com/indecent-behavior-with-student-in-kukke-temple/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 05 Nov 2024 08:25:28 +0000</pubDate>
				<category><![CDATA[Uncategorized]]></category>
		<category><![CDATA[ಅಪರಾಧ]]></category>
		<category><![CDATA[assult]]></category>
		<category><![CDATA[Indecent behavior]]></category>
		<category><![CDATA[kukke]]></category>
		<category><![CDATA[kukke subrahmanya]]></category>
		<category><![CDATA[Sexual Harassment]]></category>
		<guid isPermaLink="false">https://peepalmedia.com/?p=48365</guid>

					<description><![CDATA[ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ದೇಹ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಶಿವರಾಮ ಭಟ್ ಎಂಬಾತನ ಮೇಲೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೋರ್ವರು ದೀಪಾವಳಿ ಹಬ್ಬಕ್ಕಾಗಿ ತನ್ನ ಮನೆಗೆ ಬಂದಿದ್ದರು. ನವೆಂಬರ್‌ 2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯೊಂದರಲ್ಲಿ ಪಾಲ್ಗೊಳ್ಳಲು ತನ್ನ ಮನೆಯವರ ಜೊತೆಗೆ ಭೋಜನಾ ಶಾಲೆಯತ್ತ ಹೋಗಿದ್ದರು. ಭೋಜನಾ ಶಾಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ [&#8230;]]]></description>
										<content:encoded><![CDATA[
<p><strong>ಕುಕ್ಕೆ ಸುಬ್ರಹ್ಮಣ್ಯ: </strong>ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪೂಜೆಗೆ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯ ಜೊತೆಗೆ ದೇಹ ಸ್ಪರ್ಶಿಸಿ ಅಶ್ಲೀಲವಾಗಿ ವರ್ತಿಸಿದ ಶಿವರಾಮ ಭಟ್ ಎಂಬಾತನ ಮೇಲೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>



<p>ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೋರ್ವರು ದೀಪಾವಳಿ ಹಬ್ಬಕ್ಕಾಗಿ ತನ್ನ ಮನೆಗೆ ಬಂದಿದ್ದರು. ನವೆಂಬರ್‌ 2 ರಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿದ್ದ ಪೂಜೆಯೊಂದರಲ್ಲಿ ಪಾಲ್ಗೊಳ್ಳಲು ತನ್ನ ಮನೆಯವರ ಜೊತೆಗೆ ಭೋಜನಾ ಶಾಲೆಯತ್ತ ಹೋಗಿದ್ದರು. </p>



<p>ಭೋಜನಾ ಶಾಲೆಯಲ್ಲಿ ಊಟಕ್ಕೆ ಕುಳಿತುಕೊಳ್ಳಲು ಗೋಡೆ ಬದಿ ನಿಂತು ಕಾಯುತ್ತಿರುವಾಗ ಅಲ್ಲೇ ಪಕ್ಕದಲ್ಲಿ ಓಡಾಡುತ್ತಿದ್ದ ಆರೋಪಿ ಶಿವರಾಮ ಭಟ್ ಎಂಬಾತ ಆಕೆಯ ಎದೆ ಭಾಗಕ್ಕೆ ಕೈ ಹಾಕಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಆರೋಪಿ ಅವಾಚ್ಯ ಶಬ್ದ ಗಳಿಂದ ನಿಂದಿಸಿದ್ದಾನೆ. </p>



<p>ಸುಬ್ರಹ್ಮಣ್ಯದಲ್ಲಿ ಫೋಟೋಕಾಪಿ ಅಂಗಡಿ ಹೊಂದಿರುವ ಈತ ದೇವಾಲಯದ ಸುತ್ತಮುತ್ತ ಆಗಾಗ ಕಾಣಿಸಿಕೊಳ್ಳುತ್ತಿದ್ದ. ಯುವತಿಯ ದೂರನ್ನು ಪರಿಶೀಲಿಸಿ ಸುಬ್ರಹ್ಮಣ್ಯ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿ ( BNS ACT -75,352 ಕಾಲಂ) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ</p>
]]></content:encoded>
					
		
		
			</item>
		<item>
		<title>ಓಲಾ ಚಾಲಕನಿಂದ ಲೈಂಗಿಕ ಕಿರುಕುಳ- ಕಂಪನಿಯೇ ಪರಿಹಾರ ನೀಡಬೇಕು ಎಂದ ಕರ್ನಾಟಕ ಹೈಕೋರ್ಟ್</title>
		<link>https://peepalmedia.com/karnataka-hc-asks-company-to-pay-damages-in-sexual-harassment-case-by-driver/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Oct 2024 10:26:19 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Bangalore]]></category>
		<category><![CDATA[driver]]></category>
		<category><![CDATA[HC]]></category>
		<category><![CDATA[karnataka]]></category>
		<category><![CDATA[Karnataka High Court]]></category>
		<category><![CDATA[Ola]]></category>
		<category><![CDATA[Sexual Harassment]]></category>
		<guid isPermaLink="false">https://peepalmedia.com/?p=46595</guid>

					<description><![CDATA[ಬೆಂಗಳೂರು: ಚಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆತ ಕೆಲಸ ಮಾಡುವ ಎಎನ್‌ಐ ಟೆಕ್ನಾಲಜೀಸ್, ಕ್ಯಾಬ್ ಅಗ್ರಿಗೇಟರ್ ಓಲಾ ಮಾಲೀಕರು ಮತ್ತು ನಿರ್ವಾಹಕರಿಗೆ ಆದೇಶಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013, ಅಥವಾ POSH ಕಾಯಿದೆಯ ಅಡಿಯಲ್ಲಿ ಚಾಲಕನನ್ನು ಓಲಾ ಉದ್ಯೋಗಿ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಚಾಲಕನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಗೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಆತ ಕೆಲಸ ಮಾಡುವ ಎಎನ್‌ಐ ಟೆಕ್ನಾಲಜೀಸ್, ಕ್ಯಾಬ್ ಅಗ್ರಿಗೇಟರ್ ಓಲಾ ಮಾಲೀಕರು ಮತ್ತು ನಿರ್ವಾಹಕರಿಗೆ ಆದೇಶಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.</p>



<p>ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013, ಅಥವಾ POSH ಕಾಯಿದೆಯ ಅಡಿಯಲ್ಲಿ ಚಾಲಕನನ್ನು ಓಲಾ ಉದ್ಯೋಗಿ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಏಕಸದಸ್ಯ ಪೀಠವು ತಿಳಿಸಿದೆ.</p>



<p>ಆಗಸ್ಟ್ 2018 ರಲ್ಲಿ ಬೆಂಗಳೂರಿನಲ್ಲಿರುವ ತನ್ನ ಕಚೇರಿಗೆ ಓಲಾ ಕ್ಯಾಬ್ ಬಳಸಿ ಹೋಗಿದ್ದೆ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು.</p>



<p>ಚಾಲಕನು ತನ್ನನ್ನು ಕನ್ನಡಿಯ ಮೂಲಕ ನೋಡುತ್ತಿದ್ದನು ಮತ್ತು ಕಾರಿನಲ್ಲಿ ಹೋಗುವ ಸಮಯದಲ್ಲಿ ತನ್ನ ಫೋನ್‌ನಲ್ಲಿ ಅಶ್ಲೀಲ ವೀಡಿಯೊವನ್ನು ವೀಕ್ಷಿಸಿದನು ಎಂದು ಅವರು ಆರೋಪಿಸಿದ್ದರು. ಫೋನ್ ಮಹಿಳೆಗೆ ಕಾಣುವಂತೆ ಇಟ್ಟಿದ್ದಾಗಿ ಅವರು ತಿಳಿಸಿದ್ದಾರೆ.&nbsp;</p>



<p>ನಂತರ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಎನ್‌ಐ ಟೆಕ್ನಾಲಜೀಸ್‌ಗೆ ದೂರು ನೀಡಿದ್ದರು ಎಂದು ಲೈವ್ ಲಾ ವರದಿ ಮಾಡಿದೆ. ಆದರೆ, ಆಕೆಯ ದೂರನ್ನು ಪರಿಗಣಿಸಲಾಗಿಲ್ಲ, ಕಂಪನಿಯ ಆಂತರಿಕ ದೂರುಗಳ ಸಮಿತಿಯು ವಿಚಾರಣೆ ನಡೆಸಲು ನಿರಾಕರಿಸಿದೆ ಎಂದು ಮಹಿಳೆ ಹೇಳಿದ್ದರು.</p>



<p>ನಂತರ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ದೂರನ್ನು ಪರಿಶೀಲಿಸಲು ಎಎನ್‌ಐ ಟೆಕ್ನಾಲಜೀಸ್‌ಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ. ಕಂಪನಿಯು ಕಾಯಿದೆಗೆ ಬದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ನಿರ್ದೇಶನಗಳನ್ನು ಕೋರಿದರು. ಆಗಸ್ಟ್ 20ರಂದು ಈ ಅರ್ಜಿಯ ಆದೇಶವನ್ನು ನ್ಯಾಯಾಲಯ ಕಾಯ್ದಿರಿಸಿತ್ತು.</p>



<p>ವಿಚಾರಣೆಯ ಸಂದರ್ಭದಲ್ಲಿ, ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ಓಲಾ ಕೇವಲ ಪ್ಲಾಟ್‌ಫಾರ್ಮ್‌ ಅಲ್ಲ, ಸಾರಿಗೆ ಕಂಪನಿಯಂತೆ ವರ್ತಿಸಿದೆ ಎಂದು ಹೇಳಿದರು ಎಂದು ಲೈವ್ ಲಾ ವರದಿ ಮಾಡಿದೆ. &#8220;ಕಂಪನಿ ಮತ್ತು ಚಾಲಕನ ನಡುವೆ ಯಾವುದೇ ಒಪ್ಪಂದದ ಗೌಪ್ಯತೆಯಿಲ್ಲ ಹಾಗೂ ನನ್ನ ಮತ್ತು ಚಾಲಕನ ನಡುವೆಯೂ ಇಲ್ಲ&#8221; ಎಂದು ವಕೀಲರು ಹೇಳಿದರು.</p>



<p>ಚಾಲಕನ ಕೃತ್ಯಗಳಿಗೆ ಕಂಪನಿಯೇ ಹೊಣೆ ಎಂದು ಅರ್ಜಿದಾರರು ತಿಳಿಸಿದ್ದಾರೆ. &#8220;ನಾವು ನಿಮ್ಮ ಸುರಕ್ಷತೆಗೆ ಜವಾಬ್ದಾರರಲ್ಲ ಎಂದು OLA ಹೇಳಿದ್ದರೆ, ನಾನು [ಅರ್ಜಿದಾರ] ಕ್ಯಾಬ್ ಅನ್ನು ತೆಗೆದುಕೊಳ್ಳುತ್ತಿರಲಿಲ್ಲ&#8221; ಎಂದು ಆಕೆಯ ವಕೀಲರು ಹೇಳಿದ್ದಾರೆ.</p>



<p>POSH ಕಾಯಿದೆಯು ಕಂಪನಿಗೂ ಅನ್ವಯಿಸುತ್ತದೆ, ಆಂತರಿಕ ದೂರುಗಳ ಸಮಿತಿಯು ತನ್ನ ದೂರನ್ನು ತಳ್ಳಿಹಾಕಬಾರದು ಎಂದು ಅರ್ಜಿದಾರರು ವಾದಿಸಿದರು.</p>



<p>ಹಾಘಿದ್ದು, ಲೈವ್ ಲಾ ಪ್ರಕಾರ ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿರುವ ಸಂದರ್ಭಗಳಲ್ಲಿ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಲಾಗುವುದಿಲ್ಲ ಎಂದು ಓಲಾ ಪರ ವಕೀಲರು ಹೇಳಿದರು . ಆದ್ದರಿಂದ ಓಲಾ ಚಾಲಕನ ಉದ್ಯೋಗದಾತನಲ್ಲ ಎಂದು ವಕೀಲರು ಹೇಳಿದರು. ಓಲಾ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ತಿಳಿಸಿದರು.</p>



<p>ಸೋಮವಾರದ ತನ್ನ ಆದೇಶದಲ್ಲಿ, ಪೀಠವು OLA ಮತ್ತು ಚಾಲಕರ ನಡುವಿನ ಚಂದಾದಾರಿಕೆ ಒಪ್ಪಂದದ ನಿಯಮಗಳ ವಿಶ್ಲೇಷಣೆಯಿಂದ, “PoSH ಕಾಯಿದೆ, 2013 ರ ಸೆಕ್ಷನ್ 2 (ಎಫ್) ಅಡಿಯಲ್ಲಿ ಒದಗಿಸಲಾದ &#8216;ಉದ್ಯೋಗಿ&#8217; ಎಂಬ ಪದದ ವ್ಯಾಖ್ಯಾನವು ಸ್ಪಷ್ಟವಾಗಿದೆ. ಉದ್ಯೋಗದಾತನು ಉದ್ಯೋಗಿಯೊಂದಿಗೆ ಹೊಂದಬಹುದಾದ ಎಲ್ಲಾ ಸಂಭಾವ್ಯ ಸಂಬಂಧಕ್ಕೆ ಅನುಗುಣವಾಗಿದೆ,” ಎಂದು ಹೇಳಿದೆ</p>



<p>ಕಾಯಿದೆಯ ಸೆಕ್ಷನ್ 2(ಎಫ್) ನೌಕರನನ್ನು ಕೆಲಸದ ಸ್ಥಳದಲ್ಲಿ ಕೆಲಸ ಮಾಡುವ ನಿಯಮಿತ, ತಾತ್ಕಾಲಿಕ ಅಥವಾ ad hoc ಆಧಾರದ ಮೇಲೆ ಕೆಲಸ ಮಾಡುವ ವ್ಯಕ್ತಿ ಎಂದು ವ್ಯಾಖ್ಯಾನಿಸುತ್ತದೆ.</p>



<p>ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ದೂರಿನ ವಿಚಾರಣೆ ನಡೆಸುವಂತೆ ಓಲಾ ಆಂತರಿಕ ದೂರುಗಳ ಸಮಿತಿಗೆ ಪೀಠ ಸೂಚಿಸಿದೆ. 90 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.</p>
]]></content:encoded>
					
		
		
			</item>
		<item>
		<title>ಉತ್ತರಾಖಂಡ: ಬಿಜೆಪಿ ನಾಯಕನಿಂದ ಅಪ್ರಾಪ್ತೆಯ ಅತ್ಯಾಚಾರ</title>
		<link>https://peepalmedia.com/bjp-leader-booked-for-raping-a-minor-girl-in-uttarakhand/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 30 Dec 2023 08:25:33 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[BJP leader]]></category>
		<category><![CDATA[breaking newes]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sexual abuse]]></category>
		<category><![CDATA[Sexual assault]]></category>
		<category><![CDATA[sexual harase]]></category>
		<category><![CDATA[Sexual Harassment]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[Uttarakhand]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=34247</guid>

					<description><![CDATA[ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂಪಾವತ್ ಜಿಲ್ಲೆಯ ಬಿಜೆಪಿ ನಾಯಕನ ಮೇಲೆ ಉತ್ತರಾಖಂಡ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ. ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಮಲ್ ರಾವತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ: [&#8230;]]]></description>
										<content:encoded><![CDATA[
<p>ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಚಂಪಾವತ್ ಜಿಲ್ಲೆಯ ಬಿಜೆಪಿ ನಾಯಕನ ಮೇಲೆ ಉತ್ತರಾಖಂಡ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.</p>



<p>ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಕಮಲ್ ರಾವತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.<br><br><strong>ಪೀಪಲ್ ಮೀಡಿಯಾ ವಾಟ್ಸಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್‌ ಮಾಡಿ:</strong> <a href="https://chat.whatsapp.com/BoGCVVQyXYVE5m7RhIQRWv" data-type="link" data-id="https://chat.whatsapp.com/BoGCVVQyXYVE5m7RhIQRWv">ಪೀಪಲ್‌ ಮೀಡಿಯಾ</a></p>



<p>ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಬೆದರಿಕೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಅಡಿಯಲ್ಲಿ (ಪೋಕ್ಸೋ) &nbsp;ಪ್ರಕರಣ ದಾಖಲಿಸಲಾಗಿದೆ ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಿಂಚಾ.</p>



<p>ಶನಿವಾರ ವೈದ್ಯಕೀಯ ಪರೀಕ್ಷೆಯ ನಂತರ ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗುವುದು ಎಂದು ಪಿಂಚಾ ತಿಳಿಸಿದ್ದಾರೆ. (PTI)</p>
]]></content:encoded>
					
		
		
			</item>
		<item>
		<title>ವನಶ್ರೀ ಮಂಜಪ್ಪನ ವಿರುದ್ಧ ಎಫ್‌ ಐ ಆರ್‌ ನಲ್ಲಿ ಏನೇನಿದೆ?</title>
		<link>https://peepalmedia.com/what-is-in-the-fir-against-vanashree-manjappa/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 13 Jun 2023 11:35:49 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[Death case]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[Sexual Harassment]]></category>
		<category><![CDATA[SHIVAMOGGA POLICE]]></category>
		<category><![CDATA[Vanashree Manjappa]]></category>
		<guid isPermaLink="false">https://peepalmedia.com/?p=22350</guid>

					<description><![CDATA[ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ. ತನ್ನ ವಸತಿ ನಿಲಯಕ್ಕೆ [&#8230;]]]></description>
										<content:encoded><![CDATA[
<p>ಶಿವಮೊಗ್ಗ ಜಿಲ್ಲೆ ಸಾಗರದ ವನಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಹೊನ್ನೇಸರ ಪಿಣಿಯಜ್ಜಿ ಮಂಜಪ್ಪ ಆಲಿಯಾಸ್‌ ವನಶ್ರೀ ಮಂಜಪ್ಪ ಇದೀಗ ಪೋಕ್ಸೋ ಮತ್ತು ಎಸ್‌ ಸಿ, ಎಸ್‌ ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಜೈಲು ಪಾಲಾಗಿದ್ದಾನೆ. ವಸತಿ ನಿಲಯಕ್ಕೆ ಸೇರಿದ್ದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮಂಜಪ್ಪನ ಕೃತ್ಯಗಳು ಕಾರಣ ಎಂದು ಆರೋಪಿಸಲಾಗಿದೆ. ಇದರೊಂದಿಗೆ ಇನ್ನಿತರ ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೂ ಲೈಂಗಿಕ ಕಿರುಕುಳ ನೀಡಿರುವ ದೂರಿನ ಆಧಾರದ ಮೇರೆಗೆ ಪೋಕ್ಸೋ ಕಾಯ್ದೆ ಆಡಿ ಪ್ರಕರಣ ದಾಖಲಾಗಿದೆ.</p>



<p>ತನ್ನ ವಸತಿ ನಿಲಯಕ್ಕೆ ಸೇರಿದ ಕೂಡಲೇ ಏನೂ ತಿಳಿಯದ ಈ ಪರಿಶಿಷ್ಟ ಅಲೆಮಾರಿ ಸಮುದಾಯದ ವಿದ್ಯಾರ್ಥಿನಿಗೆ ಯೋಗಾಭ್ಯಾಸದ ಹೆಸರಿನಲ್ಲಿ ವಿಪರೀತ ದೇಹ ದಂಡಿಸಿದ್ದ ಮಂಜಪ್ಪ ನಂತರದಲ್ಲಿ ಅತಿರೇಕದ ಕೃತ್ಯಗಳನ್ನು ನಡೆಸಿ ಬಾಲಕಿಯ ದುರ್ಮರಣಕ್ಕೆ ಕಾರಣವಾಗಿರುವ ಕುರಿತು ಎಲ್ಲವನ್ನೂ ಖುದ್ದಾಗಿ ನೋಡಿರುವ ಬಾಲಕಿಯರು ದೂರಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡು 12.06.2023ರಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೋಹನ್‌ ಜಗದೀಶ್‌ ನೇತೃತ್ವದ ತಂಡ ವಸತಿ ನಿಲಯಕ್ಕೆ ಭೇಟಿ ನೀಡಿ ಸಂತ್ರಸ್ತ ಬಾಲಕಿಯರ ಮಾತುಗಳನ್ನು ವಿಡಿಯೋ ದಾಖಲೀಕರಣ ಮಾಡಿಕೊಂಡಿದೆ. ಜೊತೆಯಲ್ಲಿ ಪಂಚನಾಮೆ ಪ್ರಕ್ರಿಯೆ ಸಹ ನಡೆಸಲಾಗಿದೆ.</p>



<p><strong>ಪೀಪಲ್‌ ಮೀಡಿಯಾ</strong>ಕ್ಕೆ ಲಭ್ಯವಾಗಿರುವ ಎಫ್‌ ಐ ಆರ್‌ (ಪ್ರಥಮ ವರ್ತಮಾನ ವರದಿ) ಪ್ರತಿಯಲ್ಲಿ ಉಲ್ಲೇಖವಾಗಿರುವಂತೆ ಸಾಗರದ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ 10-06-2023ರಂದು ದೂರು ದಾಖಲಾಗಿದೆ.</p>



<p><strong>FIRನಲ್ಲಿ ಏನಿದೆ?</strong><br>ವನಶ್ರೀ ಮಂಜಪ್ಪ ನಡೆಸುವ ವಸತಿ ಶಾಲೆಗೆ ಸೇರಿದ್ದ ವಿದ್ಯಾರ್ಥಿನಿಯ ತಾಯಿಯು ನೀಡಿರುವ ದೂರಿನಲ್ಲಿ ಆಘಾತಕಾರಿ ಅಂಶಗಳಿವೆ. ದಿನಾಂಕ 04-06-23ರಂದು ಮೃತ ವಿದ್ಯಾರ್ಥಿನಿಯೂ ಸೇರಿದಂತೆ ಐದು ಮಂದಿ ವಿದ್ಯಾರ್ಥಿನಿಯರು ವಸತಿ ನಿಲಯಕ್ಕೆ ದಾಖಲಾಗಿದ್ದರು. ʼ07-06-23ರಂದು ಮದ್ಯಾಹ್ನ ಎರಡು ಗಂಟೆ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದಿದೆ. ಇದನ್ನು ಮಂಜಪ್ಪ ಅವರ ಗಮನಕ್ಕೆ ತಂದಾಗ ಅವರು ಅದನ್ನು ನಿರ್ಲಕ್ಷ್ಯ ಮಾಡಿದ್ದಲ್ಲದೆ ತಮಗೆ ತಿಳಿದ ಮಾತ್ರೆ ಹಾಗೂ ಕಷಾಯ ಕುಡಿಸಿದ್ದಾರೆ. ನಂತರ ಆಕೆ ಕಾಲು ನೋವು ಹಾಗೂ ತೊಡೆ ನೋವು ಎಂದು ತಮ್ಮ ಜೊತೆಯಲ್ಲಿದ್ದವರಿಗೆ ತಿಳಿಸಿದ್ದಳು. ಇದನ್ನು ಅವರು ಮಂಜಪ್ಪ ಅವರಿಗೆ ತಿಳಿಸಿದಾಗ ಮಂಜಪ್ಪ ಅವರು ಬಾಧಿತ ಬಾಲಕಿಯನ್ನು ಪ್ರತ್ಯೇಕವಾಗಿ ತಮ್ಮ ರೂಂಗೆ ಕರೆದುಕೊಂಡು ಹೋಗಿ ಮೊಣಕಾಲು, ತೊಡೆ ಹಾಗೂ ಇತರ ಕಡೆ ಮುಲಾಮು ಹಚ್ಚಿ ಹೊರ ಬಂದು ಉಳಿದವರಿಗೆ ಅವಳು ಹುಷಾರಾಗುತ್ತಾಳೆ, ನೀವು ಹೋಗಿ ಎಂದು ಹೇಳಿರುತ್ತಾರೆ. ಯಾವುದೇ ಆಸ್ಪತ್ರೆಗೆ ದಾಖಲಿಸಿರುವುದಿಲ್ಲ. ಮಾತ್ರವಲ್ಲದೇ ಮಕ್ಕಳಿಗೆ ಆ ವಿದ್ಯಾರ್ಥಿನಿಗೆ ಹುಷಾರಿಲ್ಲದ ವಿಷಯ ಯಾರಿಗೂ ಹೇಳಕೂಡದು ಎಂದು ಗದರಿಸಿದ್ದಾನೆ.</p>



<p>ಮರುದಿನ ಅಂದರೆ ʼ08-06-23ರಂದು ಬಾಲಕಿಯ ಆರೋಗ್ಯ ತೀರಾ ಹದಗೆಟ್ಟಿರುವಾಗ ಮಂಜಪ್ಪ ಬಲವಂತವಾಗಿ ತುಂಬಾ ನೀರು ಕುಡಿಸಿ ಆಕೆ ಸುಸ್ತಾಗಿ ಮಲಗಿದ್ದಳು. ನಂತರ ಆಕೆಯನ್ನು ಮಕ್ಕಳು ಮಾತಾಡಿಸಲು ಹೋದಾಗ ಅವಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಮಕ್ಕಳನ್ನು ಹೊರಕ್ಕೆ ಕಳಿಸಿ ಅವಳನ್ನು ಮಾತಾಡಿಸುವ ಪ್ರಯತ್ನ ಮಾಡಿದಾಗ ಆಕೆ ನಾಲಿಗೆ ಕಚ್ಚಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದಂತಾಗಿದ್ದಳು. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಗಲೂ ಸಹ ಬಾಲಕಿಯ ಪೋಷಕರಿಗೆ ವಿಷಯ ತಿಳಿಸಿರುವುದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಮಕ್ಕಳು ಅಪರಿಚಿತರ ಸಾಯದಿಂದ ಪೋಷಕರಿಗೆ ವಿಷಯ ತಿಳಿಸಿರುತ್ತಾರೆ.</p>



<p>ನಂತರ ಪೋಷಕರು ತಮ್ಮ ಮಗಳ ಜೊತೆಗಿದ್ದ ನಾಲ್ಕು ಜನ ಮಕ್ಕಳನ್ನು ವಿಚಾರಿಸಿದಾಗ ಮಂಜಪ್ಪನ ಅಶ್ಲೀಲ ವರ್ತನೆ ಬಗ್ಗೆ, ಅವನು ಖಾಸಗಿ ಭಾಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಅವಾಚ್ಯವಾಗಿ ಮಾತಾಡಿರುವ ಬಗ್ಗೆ ಮಾಹಿತಿ ನೀಡಿ ತಮಗಾದ ಅವಮಾನ ಹಿಂಸೆಯನ್ನು ಹೇಳಿಕೊಂಡು ಕಣ್ಣೀರು ಹಾಕಿರುತ್ತಾರೆ. ಇದೇ ರೀತಿಯ ಲೈಂಗಿಕ ದೌರ್ಜನ್ಯ ತಮ್ಮ ಮಗಳಿಗೂ ಆಗಿರಬಹುದುʼ ಎಂದು ಪೋಷಕರು ದೂರಿನಲ್ಲಿ ತಿಳಿಸಿರುತ್ತಾರೆ. ಮಂಜಪ್ಪನ ಈ ರೀತಿಯ ಲೈಂಗಿಕ ದೌರ್ಜನ್ಯದಿಂದ ತಮ್ಮ ಮಗಳು ಹೆದರಿಕೊಂಡು, ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ಅನುಭವಿಸಿ ಭಯ ಹಾಗೂ ಬೇಸರದಲ್ಲಿ ಮನಸ್ಸಿಗೆ ಹಚ್ಚಿಕೊಂಡು ಇದರಿಂದ ಜ್ವರ ಸುಸ್ತು ವಾಂತಿ ಪ್ರಾರಂಭವಾಗಿ ಎರಡು ದಿನ ನರಳಾಡಿದ್ದಾಳೆʼ ಎಂದು ದೂರಿದ್ದಾರೆ. ʼಮಂಜಪ್ಪನ ಭಯದಿಂದ ಹಾಗೂ ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಸಮಯ ವ್ಯರ್ಥಮಾಡಿ, ಆ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸದೇ, ಪೋಷಕರಿಗೂ ವಿಷಯ ತಿಳಿಸದೇ ಹೋಗಿದ್ದರಿಂದ ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಸೇರಿಸಿದ್ದರಂತಿ ತಮ್ಮ ಮಗಳು ಮೃತಪಟ್ಟಿದ್ದಾಳೆ ಎಂದು ದೂರುದಾರರು ತಿಳಿಸಿದ್ದಾರೆ.</p>



<p>ಈ ಎಲ್ಲಾ ವಿಚಾರಗಳು ಪಿರ್ಯಾದುದಾರರಿಗೆ ಮಂಜಪ್ಪನವರ ಮೇಲೆ ಬಲವಾದ ಅನುಮಾನಕ್ಕೆ ಕಾರಣವಾಗಿರುತ್ತವೆ ಹಾಗೂ ತಮ್ಮ ಮಗಳಿಗೆ ಅವಾಚ್ಯವಾಗಿ ನಿಂದಿಸಿರುವುದು, ಭಯ ಹುಟ್ಟಿಸಿರುವುದು, ತಾನು ಹೇಳಿದಂತೆ ಕೇಳದಿದ್ದರೆ ನಿಮ್ಮನ್ನು ನೋಡಿಕೊಳ್ಳುತ್ತೇನೆ, ಈ ವಿಚಾರವಾಗಿ ಯಾರಿಗೂ ಹೇಳಬಾರದು ಎಂದು ಎಚ್ಚರಿಕೆ ನೀಡಿದ್ದನ್ನು ಮಕ್ಕಳು ಮನೆಗೆ ಬಂದು ಹೇಳಿರುವ ಹಿನ್ನೆಲೆಯಲ್ಲಿ ಮಂಜಪ್ಪ ಅವರ ಮೇಲೆ ಎಸ್‌ ಸಿ ಎಸ್‌ ಟಿ ದೌರ್ಜನ್ಯ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತಮ್ಮ ಮಗಳ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು FIR ನಲ್ಲಿ ದಾಖಲಾಗಿರುತ್ತದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="UuYdq0sCyu4"><iframe title="ಪರಿಶಿಷ್ಟ ಅಲೆಮಾರಿ ಬಾಲಕಿ ತೇಜಸ್ವಿನಿಯ ಅನುಮಾನಾಸ್ಪದ ಸಾವು. ಆರ್ ಎಸ್ ಎಸ್ ವ್ಯಕ್ತಿ ವನಶ್ರೀ ಮಂಜಪ್ಪನೇ ತಪ್ಪಿತಸ್ಥನೆ?" width="696" height="392" src="https://www.youtube.com/embed/UuYdq0sCyu4?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>
]]></content:encoded>
					
		
		
			</item>
		<item>
		<title>ತನಗೆ ಬೇಕಾದ ಉಡುಪನ್ನು ಧರಿಸುವುದು ಪ್ರತಿ ವ್ಯಕ್ತಿಯ ಹಕ್ಕು: ಕೇರಳ ಹೈಕೋರ್ಟ್</title>
		<link>https://peepalmedia.com/right-of-every-person-to-wear-what-he-wants-kerala-high-court/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 15 Oct 2022 08:47:30 +0000</pubDate>
				<category><![CDATA[ದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kerala]]></category>
		<category><![CDATA[kerala HIGH COURT]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Right to wear clothes]]></category>
		<category><![CDATA[Sexual Harassment]]></category>
		<category><![CDATA[sexual harassment CASE]]></category>
		<guid isPermaLink="false">https://peepalmedia.com/?p=10788</guid>

					<description><![CDATA[ಕೇರಳ: ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬೇಕಾದ ಉಡುಪನ್ನು ಧರಿಸುವ ಸ್ವಾತಂತ್ರ್ಯವಿದೆ, ಅದು ಅವರ ಹಕ್ಕು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನೀರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಝಿಕ್ಕೋಡ್‌ ಸೆಷನ್‌ ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼ ಟೀಕೆಗಳನ್ನು ತೆಗೆದುಹಾಕುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮಹಿಳೆಯರನ್ನು, ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ವಿರೋಧಿಸುವುದನ್ನು ಸಮರ್ಥಿಸಲಾಗುವುದಿಲ್ಲ ಮತ್ತು ಮಹಿಳೆಯರನ್ನು ಅವರ ಉಡುಪಿನ ಆಯ್ಕೆಯ ಆಧಾರದ ಮೇಲೆ ವರ್ಗೀಕರಿಸುವ [&#8230;]]]></description>
										<content:encoded><![CDATA[
<p style="font-size:20px"><strong>ಕೇರಳ:</strong> ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬೇಕಾದ ಉಡುಪನ್ನು ಧರಿಸುವ ಸ್ವಾತಂತ್ರ್ಯವಿದೆ, ಅದು ಅವರ ಹಕ್ಕು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ.</p>



<p style="font-size:20px">ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನೀರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಝಿಕ್ಕೋಡ್‌ ಸೆಷನ್‌ ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼ ಟೀಕೆಗಳನ್ನು ತೆಗೆದುಹಾಕುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.</p>



<p style="font-size:20px">ಮಹಿಳೆಯರನ್ನು, ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ವಿರೋಧಿಸುವುದನ್ನು ಸಮರ್ಥಿಸಲಾಗುವುದಿಲ್ಲ ಮತ್ತು ಮಹಿಳೆಯರನ್ನು ಅವರ ಉಡುಪಿನ ಆಯ್ಕೆಯ ಆಧಾರದ ಮೇಲೆ ವರ್ಗೀಕರಿಸುವ ಮಾನದಂಡಗಳನ್ನು ಸಹಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಗುರುವಾರ ತಿಳಿಸಿದೆ.</p>



<p style="font-size:20px">ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼಯ ಟೀಕೆಗಳನ್ನು ಹೊರಹಾಕುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದ್ದು, ʼಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪನ್ನು ಧರಿಸಿದ್ದರೂ ಸಹ, ಅದು ತನ್ನ ನಮ್ರತೆಯನ್ನು ಅತಿರೇಕಗೊಳಿಸಲು ಪುರುಷನಿಗೆ ಪರವಾನಗಿ ನೀಡುವುದಿಲ್ಲʼ ಎಂದು ಹೈಕೋರ್ಟ್‌ ಆದೇಶಿಸಿದೆ.</p>



<p style="font-size:20px">ʼಮಹಿಳೆಯರು ಪುರುಷರ ಗಮನ ಸೆಳೆಯಲು ಮಾತ್ರ ಉಡುಗೆ ಧರಿಸುತ್ತಾರೆʼ ಎಂಬ ಯಾವುದೇ ಆಲೋಚನೆ ಇರಬಾರದು. ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವುದು ತಪ್ಪು. ಸಂತ್ರಸ್ತೆಯ ಲೈಂಗಿಕ ಪ್ರಚೋದನಕಾರಿ ಉಡುಗೆಯ ಆಧಾರದ ಮೇಲೆ, ಮಹಿಳೆಯ ಘನತೆಗೆ ಅವಮಾನ ಮಾಡಿದ ಆರೋಪದಿಂದ ಆರೋಪಿಯನ್ನು ಮುಕ್ತಗೊಳಿಸಲು ಕಾನೂನು ಸಹಮತ ನೀಡುವುದಿಲ್ಲ. ಭಾರತದ ಸಂವಿಧಾನವು ನೀಡಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಡಿ, ವ್ಯಕ್ತಿಯು ಯಾವುದೇ ಉಡುಪನ್ನು ಧರಿಸುವ ಸ್ವಾತಂತ್ರ್ಯವು ವಿಸ್ತರಿಸಲ್ಪಟ್ಟಿದೆ. ಹೀಗಾಗಿ ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಗೆಯನ್ನು ಧರಿಸಿದ್ದರೂ ಸಹ, ಅದು ಪುರುಷನಿಗೆ ಆಕೆಯ ಘನತೆಯನ್ನು ಅವಮಾನಿಸುವ ಪರವಾನಗಿ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.</p>



<p style="font-size:21px">ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 A(2) &amp; 341 ಮತ್ತು 354 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ ಆರೋಪ ಹೊತ್ತಿರುವ ಕಾರ್ಯಕರ್ತ ಸಿವಿಕ್ ಚಂದ್ರನ್‌ ಅವರಿಗೆ ಜಾಮೀನು ಮಂಜೂರು ಮಾಡುವ ಆದೇಶವನ್ನು ಪ್ರಶ್ನಿಸಿ, ಕೇರಳ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.</p>



<p style="font-size:21px">ಸಂತ್ರಸ್ತೆ &#8220;ಲೈಂಗಿಕ ಪ್ರಚೋದನಕಾರಿ ಉಡುಗೆ&#8221; ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಲೈಂಗಿಕ ಕಿರುಕುಳ ಪ್ರಕರಣವು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಾಧೀಶ ಎಸ್ ಕೃಷ್ಣ ಕುಮಾರ್ ಅವರು ನೀಡಿದ ತೀರ್ಪನ್ನು&nbsp; ಸೆಷನ್ಸ್&nbsp; ನ್ಯಾಯಾಲಯ ಆದೇಶಿಸಿದೆ.</p>



<p style="font-size:20px">ತೀರ್ಪಿನ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಾಲಾಗಬೇಕೆಂದರೆ ದೈಹಿಕ ಸಂಪರ್ಕ ಮತ್ತು ದೈಹಿಕ ಸಂಪರ್ಕಕ್ಕೆ ಇಷ್ವವಿಲ್ಲದ ಕಾರಣಗಳು, ಬೇಡಿಕೆಗಳು, ಒತ್ತಾಯಗಳು ಇರಬೇಕು. ಇಲ್ಲವಾದಲ್ಲಿ ಕೇವಲ ಲೈಂಗಿಕ ಪ್ರಚೋದನಕಾರಿ ಉಡುಗೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ದೌರ್ಜನ್ಯದ ಪ್ರಕರಣ ದಾಖಾಲಾಗಿದ್ದರೆ, ಅಂತಹ ಪ್ರಕರಣಗಳು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಲಯ ತಿಳಿಸಿದೆ.</p>



<p></p>
]]></content:encoded>
					
		
		
			</item>
		<item>
		<title>ರೋಗಿಯೊಂದಿಗೆ ಅನುಚಿತ ವರ್ತನೆ: ವೈದ್ಯನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ ಕರ್ನಾಟಕ ಪೊಲೀಸ್‌</title>
		<link>https://peepalmedia.com/misbehavior-with-patient-karnataka-police-formed-special-teams-to-arrest-doctor/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 10 Oct 2022 11:48:40 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[chandra layout police station]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Misbehavior]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sexual Harassment]]></category>
		<guid isPermaLink="false">https://peepalmedia.com/?p=9906</guid>

					<description><![CDATA[ಬೆಂಗಳೂರು: &#160;19 ವರ್ಷದ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿ ತಲೆಮರೆಸಿಕೊಂಡ ವೈದ್ಯನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಚಂದ್ರಾ ಲೇಔಟ್ ಸಮೀಪದ ಅರುಂಧತಿ ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಉದೇದುಲ್ಲಾ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆದಷ್ಟು ಬೇಗ ಬಂಧಿಸಲು ತಂಡಗಳು ಆರೋಪಿ ವೈದ್ಯನ ಬಗ್ಗೆ ಸುಳಿವುಗಳನ್ನು ಸಂಗ್ರಹಿಸುತ್ತಿವೆ ಎಂದು ಚಂದ್ರ‌ ಲೇಔಟ್‌ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ವೈದ್ಯ ಬೆಂಗಳೂರಿನ ಕಾಟನ್‌ಪೇಟೆಯ ಪಿಂಚಣಿ ಮೊಹಲ್ಲಾ ನಿವಾಸಿಯಾಗಿದ್ದು, ವಿವಾಹಿತ ವ್ಯಕ್ತಿ ಎಂದು [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು:</strong> &nbsp;19 ವರ್ಷದ ರೋಗಿಯೊಂದಿಗೆ ಅನುಚಿತವಾಗಿ ವರ್ತಿಸಿ ತಲೆಮರೆಸಿಕೊಂಡ ವೈದ್ಯನನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.</p>



<p style="font-size:20px">ಚಂದ್ರಾ ಲೇಔಟ್ ಸಮೀಪದ ಅರುಂಧತಿ ನಗರದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಉದೇದುಲ್ಲಾ ಎಂಬಾತ ಪ್ರಕರಣದ ಆರೋಪಿಯಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಆದಷ್ಟು ಬೇಗ ಬಂಧಿಸಲು ತಂಡಗಳು ಆರೋಪಿ ವೈದ್ಯನ ಬಗ್ಗೆ ಸುಳಿವುಗಳನ್ನು ಸಂಗ್ರಹಿಸುತ್ತಿವೆ ಎಂದು ಚಂದ್ರ‌ ಲೇಔಟ್‌ ಪೊಲೀಸರು ಮಾಹಿತಿ ನೀಡಿದ್ದಾರೆ.</p>



<p style="font-size:20px">ಆರೋಪಿ ವೈದ್ಯ ಬೆಂಗಳೂರಿನ ಕಾಟನ್‌ಪೇಟೆಯ ಪಿಂಚಣಿ ಮೊಹಲ್ಲಾ ನಿವಾಸಿಯಾಗಿದ್ದು, ವಿವಾಹಿತ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.</p>



<p style="font-size:20px">ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ಆರೋಪಿ ವೈದ್ಯರನ್ನು ಭೇಟಿಯಾದಾಗ ಬಾಲಕಿ ದೂರು ನೀಡಿದ್ದಳು.</p>



<p style="font-size:20px">ದೂರಿನ ಮಾಹಿತಿ ಪ್ರಕಾರ,ಸೆಪ್ಟೆಂಬರ್ 28ರ ರಾತ್ರಿ ನಾನು ನನ್ನ ತಾಯಿಯೊಂದಿಗೆ ಕ್ಲಿನಿಕ್‌ಗೆ ಹೋಗಿದ್ದೆ. ಆ ವೇಳೆ ವೈದ್ಯರು ನನ್ನನ್ನು ಅನುಚಿತವಾಗಿ ಮುಟ್ಟಿದ್ದರು. ಸೆಪ್ಟೆಂಬರ್ 29 ರಂದು ನಾನು ಎರಡನೇ ಬಾರಿಗೆ ಭೇಟಿ ನೀಡಿದಾಗ ಗ್ಲೂಕೋಸ್ ನೀಡುವಾಗ ನನ್ನ ಕೆನ್ನೆಯನ್ನು ಅನುಚಿತವಾಗಿ ಮುಟ್ಟಿದ್ದರು. ತದನಂತರ ಸೆಪ್ಟೆಂಬರ್ 30 ರಂದು, ನಾನು ನನ್ನ ಸಹೋದರನೊಂದಿಗೆ ವೈದ್ಯರ ಬಳಿಗೆ ಹೋಗಿದ್ದೆ. ಈ ವೇಳೆ ನನ್ನ ಸಹೋದರನನ್ನು ಹೊರಗೆ ಕಳುಹಿಸಿ ಕ್ಲಿನಿಕ್‌ನಲ್ಲಿ ಬೆಡ್ ಮೇಲೆ ಮಲಗುವಂತೆ ಹೇಳಿದರು. ನಂತರ ಅವರು ನನಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ಆಗ ನಾನು ಅಳಲು ಪ್ರಾರಂಭಿಸದ ನಂತರ ಅವರು ಕಿರುಕುಳ ನೀಡುವುದನ್ನು ನಿಲ್ಲಿಸಿದರು ಎಂದು ಸಂತ್ರಸ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ.</p>



<p style="font-size:20px">ದೂರಿನ ಮೇಲೆ ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ಆರೋಪಿ ಡಾ.ಉದೇದುಲ್ಲಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.</p>



<p style="font-size:20px">ಪೊಲೀಸ್‌ ಮಾಹಿತಿ ಪ್ರಕಾರ, ಚಿಕಿತ್ಸೆ ವೇಳೆ ಆರೋಪಿ ವೈದ್ಯ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಮತ್ತು ವಿಷಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.</p>



<p style="font-size:20px">ಸಂತ್ರಸ್ತೆ ಆರೋಪಿ ವೈದ್ಯರ ಕ್ಲಿನಿಕ್‌ಗೆ ಹೋಗಲು ನಿರಾಕರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆಕೆಯ ಮನೆಯವರು ಆರೋಪಿಯ ಬಳಿಗೆ ಕರೆದೊಯ್ಯಲು ಪಟ್ಟು ಹಿಡಿದಾಗ, ಕ್ಲಿನಿಕ್‌ನಲ್ಲಿ ತನಗಾದ ಕಷ್ಟವನ್ನು ಪೋಷಕರಿಗೆ ಹೇಳಿದ್ದಾಳೆ. ನಂತರ ಸಂತ್ರಸ್ತೆಯ ಸಹೋದರರು ಕ್ಲಿನಿಕ್‌ಗೆ ಹೋಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು, ಕ್ಲಿನಿಕ್‌ನಲ್ಲಿರುವ ಪೀಠೋಪಕರಣಗಳನ್ನು ಒಡೆದು ಹಾನಿ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಅನಂಗನ  ಕಿಚ್ಚಿಗೆ ಕಾವಿ ಕುಣಿದಾಗ…</title>
		<link>https://peepalmedia.com/why-civil-society-has-shut-its-mouth/</link>
		
		<dc:creator><![CDATA[Peepal Media]]></dc:creator>
		<pubDate>Thu, 01 Sep 2022 14:22:57 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[ವಿಶೇಷ]]></category>
		<category><![CDATA[muruga mutt]]></category>
		<category><![CDATA[Sexual Harassment]]></category>
		<category><![CDATA[Svamiji]]></category>
		<guid isPermaLink="false">https://peepalmedia.com/?p=3563</guid>

					<description><![CDATA[ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮವಾಂಛೆಯನ್ನು ಅವರು ಮೀರಲು ಸಾಧ್ಯವೇ ಎಂಬ ಸಣ್ಣ ಅನುಮಾನವೂ ಇವರಿಗೆಲ್ಲಾ ಬರುತ್ತಿಲ್ಲ ಯಾಕೆ? ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗೃಹಸಚಿವರು ಒಟ್ಟಿನಲ್ಲಿ ಇಡೀ ಸರಕಾರವೇ ಶಿವಮೂರ್ತಿ ಸ್ವಾಮಿಗಳ ಪರ ನಿಂತಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ತುಟಿಪಿಟಕ್ ಅಂದಿಲ್ಲ. ಮಹಿಳಾ ಹೋರಾಟಗಾರರ ಧ್ವನಿಯೂ ಅತ್ಯಂತ ಕ್ಷೀಣವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಮಾತಾಡುವವರೇ ಇಲ್ಲದಂತಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಮುರುಘಾ ಮಠಾಧೀಶರಿಗೆ ಬೆಂಬಲ ಸೂಚಿಸಿದ್ದಾರೆ!&#8230; &#160;ಮುರುಘಾ ಮಠದ ಸ್ವಾಮೀಜಿಗಳ ಮೇಲಿನ ಲೈಂಗಿಕ ಹಗರಣದ ಆರೋಪದ [&#8230;]]]></description>
										<content:encoded><![CDATA[
<p></p>



<h2 class="wp-block-heading">ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮವಾಂಛೆಯನ್ನು ಅವರು ಮೀರಲು ಸಾಧ್ಯವೇ ಎಂಬ ಸಣ್ಣ ಅನುಮಾನವೂ ಇವರಿಗೆಲ್ಲಾ ಬರುತ್ತಿಲ್ಲ ಯಾಕೆ? ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗೃಹಸಚಿವರು ಒಟ್ಟಿನಲ್ಲಿ ಇಡೀ ಸರಕಾರವೇ ಶಿವಮೂರ್ತಿ ಸ್ವಾಮಿಗಳ ಪರ ನಿಂತಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ತುಟಿಪಿಟಕ್ ಅಂದಿಲ್ಲ. ಮಹಿಳಾ ಹೋರಾಟಗಾರರ ಧ್ವನಿಯೂ ಅತ್ಯಂತ ಕ್ಷೀಣವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಮಾತಾಡುವವರೇ ಇಲ್ಲದಂತಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಮುರುಘಾ ಮಠಾಧೀಶರಿಗೆ ಬೆಂಬಲ ಸೂಚಿಸಿದ್ದಾರೆ!&#8230; &nbsp;ಮುರುಘಾ ಮಠದ ಸ್ವಾಮೀಜಿಗಳ ಮೇಲಿನ ಲೈಂಗಿಕ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಹಳ ಮುಖ್ಯವಾದ ಪ್ರಶ್ನೆಗಳನ್ನು ಎತ್ತಿದ್ದಾರೆ ಲೇಖಕರೂ ಕೃಷಿಕರೂ ಆಗಿರುವ ಉಷಾ ಕಟ್ಟೆಮನೆ. </h2>



<p>ಅಪ್ರಾಪ್ತ ಬಾಲಕಿಯರನ್ನು ತಮ್ಮ ಲೈಂಗಿಕ ಲಾಲಸೆಗೆ ಬಳಸಿಕೊಂಡರೆಂಬ ಆರೋಪ&nbsp; ಮುರುಘಾ ಮಠದ ಶಿವಮೂರ್ತಿ ಶ್ರೀಗಳ ಮೇಲೆ ಬಂದಾಗ ಅದು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ದೊಡ್ಡ ಸುದ್ದಿಯಾಯ್ತು. ಅದರ ಬಗ್ಗೆ ನಾನಾ ಆಯಾಮಗಳಲ್ಲಿ ಚರ್ಚೆ ನಡೆಯಿತು. ಅಲ್ಲಿ ನಡೆದ ಚರ್ಚೆಗಳಲ್ಲಿ ಕೆಲವು ಜನ ‘ ಈ ವಯಸ್ಸಿನಲ್ಲಿ ಸ್ವಾಮಿಗಳು ಹಾಗೆ ಮಾಡಲು ಸಾಧ್ಯವಿಲ್ಲ’ ಎಂಬ ರೀತಿಯಲ್ಲಿ ತಣ್ಣಗೆ ವಕಾಲತು ಮಾಡತೊಡಗಿದರು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಕೇವಲ ಸಂಭೋಗ ಕ್ರಿಯೆ ನಡೆದರೆ ಮಾತ್ರ ಲೈಂಗಿಕ ದೌರ್ಜನ್ಯವೆಂದು ಪರಿಗಣಿಸುವುದಿಲ್ಲ. ಬಲವಂತವಾಗಿ ಮುಟ್ಟುವುದು, ಮುತ್ತಿಡುವುದು, ಲೈಂಗಿಕ ಸನ್ನೆಗಳನ್ನು ರವಾನಿಸುವುದು. ಲೈಂಗಿಕ ಹಾವಭಾವಗಳು ಎಲ್ಲವೂ ಕೂಡಾ ಲೈಂಗಿಕತೆಯ ವ್ಯಾಪ್ತಿಗೆ ಬರುತ್ತದೆ. ಇದಕ್ಕೆ ಎದುರಿಗಿರುವ ವ್ಯಕ್ತಿಯಿಂದ ವಿರೋಧ ವ್ಯಕ್ತವಾದರೆ ಅದು ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ, ಲೈಂಗಿಕ ಸಂಬಂಧಗಳಲ್ಲಿ ಪರಸ್ಪರ ಒಪ್ಪಿಗೆಯಿಲ್ಲದೆ ಮುಂದುವರಿದರೆ ಅದು ಲೈಂಗಿಕ ಅತ್ಯಾಚಾರವೇ ಆಗುತ್ತದೆ. ಅದು ಪತ್ನಿಯೇ ಆಗಿದ್ದರೂ ಕೂಡಾ. ಹಾಗಿರುವಾಗ,&nbsp; ತಮ್ಮ ಅಶ್ರಯದಾತರಾದ ಸ್ವಾಮೀಜಿಯವರೇ ತಮ್ಮನ್ನು ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ ಎಂದು ಬಾಲಕಿಯರೇ ಆರೋಪಿಸುತ್ತಿರುವಾಗ ನಾಗರೀಕ ಸಮಾಜಕ್ಕೆ ಸ್ವಾಮೀಜಿಯ ಬಗ್ಗೆ ಸಣ್ಣದೊಂದು ಸಂಶಯವಾದರೂ ಮೂಡಬೇಕಲ್ಲವೇ? ಪೊರೆಯಬೇಕಾದ ಕೈಗಳೇ ಕತ್ತು ಹಿಸುಕಲು ಹೊರಟರೆ?</p>



<p>ಅವರು ಪ್ರಗತಿಪರ ಸ್ವಾಮೀಜಿಗಳಾದ ಕಾರಣ ಜನಸಾಮಾನ್ಯರಿಗೆ, ಅವರ ಭಕ್ತರಿಗೆ. ಅಭಿಮಾನಿಗಳಿಗೆ ಅವರ ಮೇಲೆ ಬಂದಿರುವ ಅರೋಪವನ್ನು ನಂಬಲು ಸಾಧ್ಯವಾಗುತ್ತಿಲ್ಲ. ರಾಜಕಾರಣಿಗಳೂ ಮಾತನಾಡುತ್ತಿಲ್ಲ. ಯಾಕೆಂದರೆ ಪಕ್ಷಾತೀತವಾಗಿ ಅವರಿಗೆಲ್ಲಾ ಬಹುಸಂಖ್ಯಾತ ಲಿಂಗಾಯಿತ ಮತಬ್ಯಾಂಕಿನ ಮೇಲೆ ಕಣ್ಣಿದೆ. ಆದರೆ ಸಮಾಜದ ಮಾದರಿ ವ್ಯಕ್ತಿತ್ವಗಳಾದ ಸಾಹಿತಿಗಳ, ಕಲಾವಿದರ, ಬುದ್ಧಿಜೀವಿಗಳ ಬುದ್ಧಿ ಎಲ್ಲಿ ಅಡಗಿದೆ? ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮ ವಾಂಛೆಯನ್ನು ಅವರು ಮೀರಲು ಸಾಧ್ಯವೇ ಎಂಬ ಸಣ್ಣ ಅನುಮಾನವೂ ಇವರಿಗೆಲ್ಲಾ ಬರುತ್ತಿಲ್ಲ ಯಾಕೆ? ಯಾಕೆಂದರೆ ಇತ್ತೀಚೆಗೆ ಬ್ರಹ್ಮಚರ್ಯವನ್ನು ವೈಭವಿಕರಿಸಲಾಗುತ್ತಿದೆ. ಅದು ಶ್ರೇಷ್ಟ ಗುಣ ಎಂಬ ನರೇಶನ್ ಹುಟ್ಟಿಕೊಂಡಿದೆ. ಅವರನ್ನು ದೇವಮಾನವರ ಸ್ಥಾನದಲ್ಲಿಟ್ಟು ನೋಡಲಾಗುತ್ತಿದೆ. ವ್ಯಕ್ತಿ ಆರಾಧನೆ ಜನರ ವಿವೇಚನ ಶಕ್ತಿಯನ್ನು ಮಸುಕಾಗಿಸುತ್ತದೆ.</p>



<p>ನಿಜ. ಮುರುಘಾ ಶ್ರೀಗಳು ಸಮಾಜ ಸುಧಾರಣೆಗಾಗಿ ಶ್ರಮಿಸಿದ, ಸಮಸಮಾಜದ ಕನಸು ಕಾಣುತ್ತಿರುವ, ಬಸವಾದಿ ಶರಣರ ಹಾದಿಯಲ್ಲಿ ಮುನ್ನಡೆಯುತ್ತಿರುವ ವಿರಕ್ತ ಮಠದ ಸ್ವಾಮೀಜಿ. ಮುರುಘಾ ಮಠವು 17ನೇ ಶತಮಾನದಲ್ಲಿ ಆರಂಭವಾದ ಮಠ. ಆ ಮಠದ ಪರಂಪರೆಯಂತೆ ಇವರು ತಮ್ಮನ್ನು ತಾವು ಜಗದ್ಗುರುಗಳು ಎಂದು ಕರೆಸಿಕೊಳ್ಳಲಿಲ್ಲ, ಶರಣಸಂಸ್ಕೃತಿಯ ವಿನಯವಂತಿಕೆಯಿಂದ ತಮ್ಮನ್ನು ‘ಶರಣ’ ಎಂದೇ&nbsp; ಕರೆದುಕೊಂಡರು. ಬೆಳ್ಳಿ ಸಿಂಹಾಸನದ ಮೇಲೆ ಕುಳಿತುಕೊಳ್ಳಲಿಲ್ಲ, ಅಡ್ಡಪಲ್ಲಕ್ಕಿಯನ್ನು ತಿರಸ್ಕರಿಸಿದರು. ಸಮಾಜದ ಎಲ್ಲಾ ವರ್ಗದ ಜನರನ್ನು ಮಠದೊಳಗೆ ಕರೆತಂದರು.</p>



<p>ಇನ್ನು, ವಯಸ್ಸಿನ ಬಗ್ಗೆ ಹೇಳುವುದಾದರೆ ಅವರ ಈಗಿನ ವಯಸ್ಸು 64. ಆರೋಗ್ಯವಂತ ಮನುಷ್ಯನೊಬ್ಬ ಸೆಕ್ಸ್ ಅನ್ನು ನಿರಾಕರಿಸುವಂತ ವಯಸ್ಸೇನೂ ಅಲ್ಲ. ಅಲ್ಲದೆ&nbsp; 2018ರಲ್ಲಿ ನಡೆದ ಸಮೀಕ್ಷೆಯೊಂದರ&nbsp; ಪ್ರಕಾರ 65 ರಿಂದ 80 ವಯಸ್ಸಿನ ಗಂಡು ಹೆಣ್ಣಿನಲ್ಲಿ ಪ್ರತಿಶತ ನಲ್ವತ್ತು ಮಂದಿ ಲೈಂಗಿಕವಾಗಿ ಕ್ರಿಯಾಶೀಲರಾಗಿರುತ್ತಾರೆ ಮತ್ತು ಶೇಕಡಾ 54 ರಷ್ಟು ಜನ ಗುಣಾತ್ಮಕವಾದ ಬದುಕಿಗೆ ಸೆಕ್ಸ್ ಬಹಳ ಮುಖ್ಯವೆಂದು ಹೇಳುತ್ತಾರೆ. ಆದರೆ ಇಲ್ಲಿ ಪ್ರಶ್ನೆ ಇರುವುದು ಅರುವತ್ತನಾಲ್ಕು ವಯಸ್ಸಿನ ವ್ಯಕ್ತಿಯೊಬ್ಬ 15-16 ವಯಸ್ಸಿನ ಬಾಲಕಿಯರ ಜೊತೆ ಲೈಂಗಿಕ ಸಂಬಂಧಕ್ಕೆ ಮುಂದಾದರೆ ಅದು ಅಸಹಜ. ಚೈಲ್ಡ್ ಅಬ್ಯೂಸ್ ಎಂಬುದೊಂದು ಮಾನಸಿಕ ಕಾಯಿಲೆ. ಸೆಕ್ಸ್ ಹಾರ್ಮೋನ್ ಗಳು ಹೆಚ್ಚು ಕ್ರಿಯಾಶೀಲವಾಗಿದ್ದ ಕಾಲಘಟ್ಟದಲ್ಲಿ ಸಂಯಮದಿಂದ ಇದ್ದ ವ್ಯಕ್ತಿ ಇಳಿ ವಯಸ್ಸಿನಲ್ಲಿ ಲೈಂಗಿಕ ತೃಷೆಗಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಾನೆ ಎಂದರೆ ಅಲ್ಲೇನೋ ಸಮಸ್ಯೆ ಇದೆ ಎಂದು ಭಾಸವಾಗುತ್ತದೆ. ಉದಾತ್ತ ವ್ಯಕ್ತಿಯಲ್ಲಿರುವ ಒಂದೇ ಒಂದು ದೌರ್ಬಲ್ಯ ಆತನನ್ನು ಪತನದಂಚಿಗೆ ತಂದು ನಿಲ್ಲಿಸಬಹುದು. ಅಂತಹ ಒಂದು ದೌರ್ಬಲ್ಯ ಸ್ವಾಮಿಗಳಲ್ಲಿತ್ತೇ? ಶಿವಮೂರ್ತಿ ಸ್ವಾಮೀಜಿಯವರು ಪೀಠವೇರಿದ್ದು 1991ರಲ್ಲಿ ಅಂದರೆ ತಮ್ಮ 33ನೇ ವಯಸ್ಸಿನಲ್ಲಿ. ಈಗ 64ರ ಪರಿಪಕ್ವಗೊಂಡ ಪ್ರೌಢ ವಯಸ್ಸು. ಅಂದು ಜಾರಿ ಬೀಳದವರು ಅಥವಾ ಸಿಕ್ಕಿಬೀಳದವರು ಇಂದು ಬಿದ್ದರೇಕೆ? ಅಥವಾ ಯಾರಾದರೂ ಕಾಲುಕೊಟ್ಟು ಕೆಡವಿದರೆ? ಆ ನಿಟ್ಟಿನಲ್ಲೂ ತನಿಖೆ ನಡೆಯಬೇಕಾಗಿದೆ.</p>



<p>ಈ ಸಂದರ್ಭದಲ್ಲೇ 2014ರಲ್ಲಿ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯ ಮೇಲೆ ಬಂದ ಅತ್ಯಾಚಾರದ ಆರೋಪವೂ ನೆನಪಿಗೆ ಬರುತ್ತದೆ. ಅಲ್ಲಿಯ ಪ್ರಕರಣದಲ್ಲಿ ಕೂಡಾ ಸಂತ್ರಸ್ತೆ ಎದುರು ಹಾಕಿಕೊಂಡದ್ದು ಸಾಮಾನ್ಯ ಸ್ವಾಮೀಜಿಯನ್ನಲ್ಲ. ನೂರಾರು ವರ್ಷ ಇತಿಹಾಸವಿರುವ, ಶಂಕರಾಚಾರ್ಯರ ಪಾದುಕೆಗಳು ತಮ್ಮಲ್ಲಿದೆಯೆಂದು ಹೇಳಿಕೊಳ್ಳುವ, ತನ್ನನ್ನು ತಾನು ಗೋಕರ್ಣ ಮಂಡಲಾಧೀಶ್ವರ ಎಂದು ಕರೆಸಿಕೊಳ್ಳುವ, ದಂತ ಸಿಂಹಾಸನದ ಮೇಲೆ ಆಸೀನರಾಗುವ ಅಧಿಕಾರ ಪೀಠದ ಸ್ವಾಮೀಜಿಯನ್ನು. ಅಲ್ಲಿ ಏನಾಯ್ತು? ಅರೋಪಿ ಬಲಾಢ್ಯ ಮತ್ತು ಪ್ರಭಾವಶಾಲಿಯಾಗಿದ್ದ ಕಾರಣ ಪ್ರತಿ ದೂರು ದಾಖಲಿಸಿದ ದೂರುದಾರ ಸಂತ್ರಸ್ತೆಯನ್ನೇ ಸುಮಾರು ಒಂದು ತಿಂಗಳ ಕಾಲ ಕಾರಾಗೃಹಕ್ಕೆ ತಳ್ಳಲಾಗಿತ್ತು. ಅದೇ ಸ್ವಾಮೀಜಿಯ ಮೇಲೆ ಇನ್ನೊಂದು ಅತ್ಯಾಚಾರ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು. ಆದ್ರೆ ಇವತ್ತಿನವರೆಗೂ ಸ್ವಾಮೀಜಿಯ ಬಂಧನವಾಗಿಲ್ಲ. ಪ್ರಕರಣದ ಬಗ್ಗೆ ಸರಿಯಾದ ತನಿಖೆಯೂ ಆಗಿಲ್ಲ. ಹತ್ತಾರು ಜಡ್ಜ್ ಗಳು ಈ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ!.</p>



<p>ಅದಕ್ಕೆ ಕಾರಣಗಳೇನು ಎಂದು ನೋಡಿದರೆ ನಿಚ್ಚಳವಾಗಿ ಕಾಣುವುದು ಅಧಿಕಾರದ ಜಾತಿ ರಾಜಕಾರಣ. ಮಠದ ಕೃಪಾಶಯದಲ್ಲಿ ನಡೆಯುವ ಅರ್ಥಿಕ ವ್ಯವಹಾರಗಳು ಮತ್ತು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲ್ಪಡುವ ಪತ್ರಿಕೋದ್ಯಮದ ಸ್ವಜನ ಪಕ್ಷಪಾತ. ಅದರಿಂದ ಉದ್ಭವಿಸಿದ ಸಾಮಾಜಿಕ ನಿಷ್ಕಾಳಜಿ.</p>



<p>ನಿಜ. ಆ ಪ್ರಕರಣದಲ್ಲಿ ಸಂತ್ರಸ್ತೆ ಪ್ರೌಢ ವಯಸ್ಕಳಾಗಿದ್ದಳು. ತಾನು ವಶೀಕರಣಕ್ಕೆ ಒಳಗಾಗಿದ್ದೆ ಎಂದು ಆಕೆ ಎಷ್ಟೇ ವಾದಿಸಿದ್ದರೂ ಅದು ಪರಸ್ಪರ ಸಮ್ಮತದ ಸೆಕ್ಸ್ ಆಗಿತ್ತು ಎಂದೇ ಪರಿಗಣಿಸಲಾಗಿತ್ತು. ಆದ್ರೆ ಪೀಠಾಧಿಪತಿಯೊಬ್ಬ ಪರಸ್ತ್ರೀ ವ್ಯಾಮೋಹಕ್ಕೆ ಒಳಗಾಗಿಯೂ ಆ ಪೀಠದಲ್ಲಿ ಮುಂದುವರೆಯುತ್ತಿರುವುದನ್ನು ಈ ಸಮಾಜ ಪ್ರಶಿಸಲೇ ಇಲ್ಲ. ಮಕ್ಕಳನ್ನು ಏಕಾಂತಕ್ಕೆ ಕರೆಸಿಕೊಳ್ಳುವ ‘ ಕನ್ಯಾ ಸಂಸ್ಕಾರ’ ವಿಧಿಯಲ್ಲಿ ಏನು ನಡೆಯುತ್ತದೆಯೆಂದು ಅರಿಯುವ ಪ್ರಯತ್ನ ಮಾಡಲೇ ಇಲ್ಲ. ಅಲ್ಲೂ ಇಲ್ಲೂ ಎಲ್ಲವೂ ಸರದಿ ಪ್ರಕಾರವೇ! ಇದಕ್ಕೆ ಪೀಠಕ್ಕೆ ಹತ್ತಿರದವರು ಪೂರಕವಾಗಿ ನಡೆದುಕೊಳ್ಳುತ್ತಾರೆ. ಅಂದರೆ ಈ ಸಮಾಜ, ಈ ನ್ಯಾಯವ್ಯವಸ್ಥೆ, ಈ ಕುಟುಂಬ ಪದ್ಧತಿ ಎಲ್ಲವೂ ಪುರುಷ ಪಕ್ಷಪಾತಿ ಎಂಬುದು ಸಾಬೀತಾದಂತೆ, ಅಲ್ಲವೇ?</p>



<p>&nbsp;ಆದರೆ ಇಲ್ಲಿ ಈ ಬಾಲಕಿಯರು ಎಳೆಯರು. ಲೈಂಗಿಕತೆಯ ಬಗ್ಗೆ ಮೇಲ್ಪದರಿನ ಅರಿವಷ್ಟೇ ಉಳ್ಳವರಾಗಿದ್ದರು. ಹಾಗೆ ಹೇಳಲೂ ಕಾರಣವಿದೆ. ಅವರು ಹೈಸ್ಕೂಲ್ ವಿದ್ಯಾರ್ಥಿನಿಯರು. ಮೇಲಾಗಿ ಬಡವರು. ಮಠದ ಕಣ್ಣಳತೆಯಲ್ಲಿದ್ದವರು. ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಗದಂತಹ ವಾತಾವರಣ. ಅಂತಹುದರಲ್ಲಿ ಸಹಮತದ ಸೆಕ್ಸ್ ಎಂಬುದಕ್ಕೆ ಆಸ್ಪದವೇ ಇಲ್ಲ. ಕಾನೂನಿನ ಅಡಿಯಲ್ಲಿ 16 ನೇ ವರ್ಷಕ್ಕೆ ಪರಸ್ಪರ ಸಮ್ಮತದ ಸೆಕ್ಸ್ ಮಾನ್ಯವಾದರೂ 15-16 ವರ್ಷದ ಬಾಲಕಿಯೊಬ್ಬಳು 64 ವರ್ಷದ ಒಬ್ಬ ವ್ಯಕ್ತಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಹಾತೊರೆಯುವುದು ಸಾಧ್ಯವೇ? ಅಂತಹ ಆಕರ್ಷಣೆ ಆ ಕಾವಿಧಾರಿಯಲ್ಲಿ ಏನಿದೆ?</p>



<p>ಇನ್ನು ಮಠದ ಮಾಜಿ ಆಡಳಿತಗಾರ ಆ ಬಾಲಕಿಯರಿಗೆ ಆಮಿಷವೊಡ್ಡಿ ಪುಸಲಾಯಿಸಿ ಸ್ವಾಮಿಗಳ ವಿರುದ್ಧ ಷಡ್ಯಂತರ ಹೆಣಿದಿರಬಹುದು ಎಂಬ ವಾದವೂ ಇದೆ. ಹಾಗೆ ವಾದಿಸುವವರು ಆ ಬಾಲಕಿಯರ ಜಾಗದಲ್ಲಿ ತಮ್ಮ ಮಕ್ಕಳನ್ನೋ ತಮ್ಮ ತಂಗಿಯರನ್ನೋ ಇಟ್ಟು ನೋಡಲಿ. ಆಗ ಆ ಬಾಲಕಿಯರು&nbsp; ವಿವರಿಸಿದ ಲೈಂಗಿಕ ಹಿಂಸೆಯ ವಿವರಗಳು ಕಲ್ಪಿತ ಕಥೆ ಎಂದು ಎದೆ ಮುಟ್ಟಿ ಹೇಳಲಿ ನೋಡುವಾ. ಆ ಮಹಿಳಾ ವಾರ್ಡನ್ ಸೇರಿದಂತೆ ಉಳಿದ ನಾಲ್ಕು ಜನರ ಪಾತ್ರ ಇದರಲ್ಲಿ ಏನಿತ್ತು? ಒಂದು ತಿಂಗಳ ಕಾಲ ಆ ಬಾಲಕಿಯರನ್ನು ಮಾಜಿ ಅಡಳಿತಗಾರ ತನ್ನ ಮನೆಯಲ್ಲಿಟ್ಟುಕೊಂಡದ್ದು ಯಾಕೆ? ಮಕ್ಕಳು ಎಲ್ಲೆಲ್ಲೋ ಅಲೆದಾಡಿ ಮೈಸೂರಿನ ಒಡನಾಡಿ ಸಂಸ್ಥೆಯನ್ನು ಸೇರಿದ್ದು ಹೇಗೆ ಎಂಬುದು ತನಿಖೆಯಿಂದಷ್ಟೇ ಹೊರ ಬೀಳಬೇಕು ಅಲ್ಲವೇ?. ನಿರ್ಭೀತ ವಾತಾವರಣದಲ್ಲಿ ಅನುನಯದಿಂದ ಕೇಳಿದರೆ ಮಕ್ಕಳು ನಿಜವನ್ನೇ ಬಿಚ್ಚಿಡುತ್ತಾರೆ. ಯಾಕೆಂದರೆ ಅವರಿನ್ನೂ ಹೈಸ್ಕೂಲ್ ಮೆಟ್ಟಲು ದಾಟದ ಎಳೆಯರು. ಪುರುಷ ಮನಸ್ಥಿತಿಯೇ ಹಾಗೆ. ಅದು ಹೆಣ್ಮಕ್ಕಳನ್ನು ತಮ್ಮ ಸ್ವಾರ್ಥ ಲಾಲಸೆಗಳಿಗೆ ಮೆಟ್ಟಲುಗಳಾಗಿ ಬಳಸಿಕೊಳ್ಳುತ್ತದೆ; ಬಲಿ ಕೇಳಿದರೆ ಅವರ ಮೇಲೆ ಕತ್ತಿ ಎತ್ತಿಯೇ ಬಿಡುತ್ತದೆ.</p>



<p>ಹೋರಿಸ್ವಾಮಿ ಸಂದರ್ಭದಲ್ಲಿ ಇಡೀ ಪತ್ರಿಕೋದ್ಯಮ ಅವರ ಪರವಾಗಿತ್ತು. ಸ್ವತಃ ವಿಶ್ವೇಶ್ವರ ಭಟ್ಟರೇ ಮಠದ ಮಾಧ್ಯಮ ಸಲಹೆಗಾರರಾಗಿದ್ದರು. ನಿವೃತ್ತ ಐಪಿಎಸ್ ಅಧಿಕಾರಿ ಟಿ ಮಡಿಯಾಳ್ ಮಠದ ಉಸ್ತುವಾರಿಯ ಹೊಣೆ ಹೊತ್ತಿದ್ದರು. ಈಗಲೂ ಪಕ್ಷಬೇಧ ಮರೆತು ರಾಜಕಾರಣಿಗಳು ಮುರುಘ ಮಠಾಧೀಶರ ಪರ ನಿಂತಿದ್ದಾರೆ ಇಲ್ಲವೇ ಮೌನಕ್ಕೆ ಶರಣಾಗಿದ್ದಾರೆ. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗೃಹಸಚಿವರು ಒಟ್ಟಿನಲ್ಲಿ ಇಡೀ ಸರಕಾರವೇ ಶಿವಮೂರ್ತಿ ಸ್ವಾಮಿಗಳ ಪರ ನಿಂತಿದೆ. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ತುಟಿಪಿಟಕ್ ಅಂದಿಲ್ಲ. ಮಹಿಳಾ ಹೋರಾಟಗಾರರ ಧ್ವನಿಯೂ ಅತ್ಯಂತ ಕ್ಷೀಣವಾಗಿದೆ. ಮಕ್ಕಳ ಹಕ್ಕುಗಳ ಬಗ್ಗೆ ಮಾತಾಡುವವರೇ ಇಲ್ಲದಂತಾಗಿದೆ. ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರು ಸುದ್ದಿಗೋಷ್ಟಿ ನಡೆಸಿ ಮುರುಘಾ ಮಠಾಧೀಶರಿಗೆ ಬೆಂಬಲ ಸೂಚಿಸಿದ್ದಾರೆ!</p>



<p>ಮೊನ್ನೆ ಮಂಗಳವಾರ ಸಂತ್ರಸ್ತ ಬಾಲಕಿಯರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಭಾರತೀಯ ದಂಡ ಸಂಹಿತೆಯ 164 ಸೆಕ್ಷನ್ ಅಡಿ ಅವರ ಹೇಳಿಕೆಗಳನ್ನು ಪಡೆಯಲಾಗಿದೆ. ನ್ಯಾಯಾಧೀಶರಾದ ಅನಿತಾಕುಮಾರಿ ಇಬ್ಬರೂ ಮಕ್ಕಳಿಂದ ಪ್ರತ್ಯೇಕವಾಗಿ&nbsp; ಐದು ಘಂಟೆಗಳ ಕಾಲ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಅದರ ವಿಡಿಯೋ ರೆಕಾರ್ಡಿಂಗ್ ಕೂಡಾ ಮಾಡಲಾಗಿದೆ. ಮಕ್ಕಳ ಹೇಳಿಕೆಯನ್ನು ಆಧರಿಸಿ ಮ್ಯಾಜಿಸ್ಟ್ರೇಟ್, ಆರೋಪಿಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಲು ಆದೇಶ ನೀಡಬೇಕಿತ್ತು. ಆದರೆ ನೀಡಿಲ್ಲ. ಅವರು ಆರಾಮವಾಗಿಯೇ ಮಠದಲ್ಲಿ ಓಡಾಡಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಮತ್ತು ದಲಿತರ ಮೇಲಿನ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಾಗಿ ಐದು ದಿನಗಳೇ ಕಳೆದಿವೆ. ಜನಸಾಮಾನ್ಯರನ್ನಾದರೆ ದೂರು ದಾಖಲಾದ ತಕ್ಷಣವೇ ಬಂಧಿಸುವ ಶಕ್ತಿ ಈ ಕಾಯ್ದೆಗಿದೆ. ಇವೆರಡೂ ಜಾಮೀನು ರಹಿತ ಕೇಸುಗಳೇ. ಅಂದರೆ ಬಲಾಢ್ಯರಿಗೊಂದು ಕಾನೂನು ದುರ್ಬಲರಿಗೆ ಇನ್ನೊಂದು ಕಾನೂನು ಎಂಬುದಿದೆಯೇ?.</p>



<p>ಪೋಲಿಸರು ತಮ್ಮನ್ನು ಬಂಧಿಸದಂತೆ ಶಿವಮೂರ್ತಿ ಸ್ವಾಮಿಗಳು&nbsp; ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಅದು ಸೆಪ್ಟಂಬರ್ ಒಂದರಂದು ಅಂದರೆ ಇಂದು ವಿಚಾರಣೆಗೆ ಬಂದಿದ್ದು ಅದನ್ನು ನಾಳೆಗೆ ಮುಂದೂಡಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಲಯದ ಮೇಲೆಯೂ ಧಾರ್ಮಿಕ ಮತ್ತು ರಾಜಕೀಯ ಒತ್ತಡ ಬಂದರೆ? ನ್ಯಾಯಾಲಯಗಳು ವಿಳಂಬ ನೀತಿಯನ್ನು ಅನುಸರಿಸಿದರೆ? ತಪ್ತ ನಾಗರಿಕ ಸಮಾಜ ಅಡವಿ ನ್ಯಾಯದ ಕಡೆಗೆ ವಾಲಬೇಕೇ? ಹಾಗಾಗಬಾರದು.</p>



<p>ಈಗ ನಾವು ಆಶಿಸುವುದು ಇಷ್ಟೇ. ಎಲ್ಲಾ ಬಣ್ಣವನ್ನೂ ಮಸಿ ನುಂಗಿತು ಎಂಬ ಗಾದೆಯಂತೆ ಆಗಬಾರದು.ಶಿವಮೂರ್ತಿ ಶರಣರು ‘ಸಮರಕ್ಕೂ ಸಿದ್ಧ’ ಎಂದು ತೋಳೇರಿಸದೆ ಕಾನೂನಿಗೆ ತಲೆಬಾಗಿ ತಮ್ಮ ಸ್ಥಾನವನ್ನು ತ್ಯಜಿಸಲಿ. ಅಗ್ನಿಪರೀಕ್ಷೆಗೆ ಒಳಪಟ್ಟು ಮತ್ತೆ ಪರಿಶುದ್ಧರಾಗಿ ಹೊರಬರಲಿ.</p>



<p>.<strong> ಉಷಾ ಕಟ್ಟೆಮನೆ, </strong>ಲೇಖಕರು, ಕೃಷಿಕರು\</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/09/ushakka.jpg" alt="" class="wp-image-3564" width="134" height="160" srcset="https://peepalmedia.com/wp-content/uploads/2022/09/ushakka.jpg 626w, https://peepalmedia.com/wp-content/uploads/2022/09/ushakka-251x300.jpg 251w" sizes="(max-width: 134px) 100vw, 134px" /></figure>
]]></content:encoded>
					
		
		
			</item>
	</channel>
</rss>
