<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>shashiraj harathale &#8211; Peepal Media</title>
	<atom:link href="https://peepalmedia.com/tag/shashiraj-harathale/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 07 Jan 2023 11:58:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>shashiraj harathale &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಾವೆದ್ದು ನಿಲ್ಲದಿದ್ದರೆ, ಸಂವಿಧಾನ ಉಳಿಯದು</title>
		<link>https://peepalmedia.com/if-we-do-not-stand-the-constitution-will-not-survive/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Jan 2023 10:34:44 +0000</pubDate>
				<category><![CDATA[ಜನ-ಗಣ-ಮನ]]></category>
		<category><![CDATA[bengalure]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shashiraj harathale]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18959</guid>

					<description><![CDATA[ನಾವೆದ್ದು ನಿಲ್ಲದಿದ್ದರೆ,ಸಂವಿಧಾನ ಉಳಿಯದು.ಪ್ರಜಾಪ್ರಭುತ್ವ ಉಳಿಯದು. ದುಡಿದು ನಾಡು ಕಟ್ಟಿದವರುಬದುಕಿಗಾಗಿ ಅಲೆದರುಸೂರಿಲ್ಲದೆ ಬಳಲಿದರು,ಕೂಳಿಲ್ಲದೆ ಸತ್ತರು.ನೂರಲ್ಲ ಸಾವಿರಾರುಕೋಟಿ ಕೋಟಿ ಜನಗಳು ನಾವೆದ್ದು ನಿಲ್ಲದಿದ್ದರೆಬೆವರ ಪಾಲು ಧಕ್ಕದು,ನೆಲೆಯು ಎಂದು ಕಾಣದು. ಧನ ಸಾಗಿಸೋ ರೈತರನ್ನುಕಳ್ಳರೆಂದು ಒಡೆದರು.ಸತ್ಯವನ್ನು ಬರೆದವರಗುಂಡಿಕ್ಕಿ ಕೊಂದರುಕೋಮು ದ್ವೇಷ ಬಿತ್ತಿದರು.ಬೆಂಕಿಯನ್ನು ಹಚ್ಚಿದರು. ನಾವೆದ್ದು ನಿಲ್ಲದಿದ್ದರೆಸ್ವಾತಂತ್ರ್ಯ ಉಳಿಯದುಸತ್ಯವಿಲ್ಲಿ ನಿಲ್ಲದು ಕಣ್ಣೆದುರೆ ಭ್ರಷ್ಟಾಚಾರಹಗಲಲ್ಲೆ ಅತ್ಯಚಾರಆರೋಗ್ಯವು ವ್ಯಾಪಾರನೀರಿಗೂ ಹಾಹಕರಬಡವರ ಎದೆಯಲ್ಲಿಬೆಂಕಿ ಹತ್ತಿ ಉರಿದಿದೆ ನಾವೆದ್ದು ನಿಲ್ಲದಿದ್ದರೆಅನ್ಯಾಯ ಅಳಿಯದುಭ್ರಷ್ಟಾಚಾರ ತೊಲಗದು ಕಾನೂನುಗಳ ಕಂತೆ ಕಟ್ಟಿಬಜಾರಲ್ಲಿ ಮಾರುತ್ತಿಹರುರಾಜಕೀಯ ಧರ್ಪದಲ್ಲಿದೇಶವನ್ನು ಒಡೆಯುತ್ತಿಹರುಪ್ರಜೆಗಳಿಲ್ಲಿ ಪ್ರಭುಗಳಲ್ಲಪರಕೀಯತೆ ಕಾಡಿದೆ‌ ನಾವೆದ್ದು ನಿಲ್ಲದಿದ್ದರೆನ್ಯಾಯವಿಲ್ಲಿ ಸಿಕ್ಕದು,ದೇಶ [&#8230;]]]></description>
										<content:encoded><![CDATA[
<p>ನಾವೆದ್ದು ನಿಲ್ಲದಿದ್ದರೆ,<br>ಸಂವಿಧಾನ ಉಳಿಯದು.<br>ಪ್ರಜಾಪ್ರಭುತ್ವ ಉಳಿಯದು.</p>



<p>ದುಡಿದು ನಾಡು ಕಟ್ಟಿದವರು<br>ಬದುಕಿಗಾಗಿ ಅಲೆದರು<br>ಸೂರಿಲ್ಲದೆ ಬಳಲಿದರು,<br>ಕೂಳಿಲ್ಲದೆ ಸತ್ತರು.<br>ನೂರಲ್ಲ ಸಾವಿರಾರು<br>ಕೋಟಿ ಕೋಟಿ ಜನಗಳು</p>



<p>ನಾವೆದ್ದು ನಿಲ್ಲದಿದ್ದರೆ<br>ಬೆವರ ಪಾಲು ಧಕ್ಕದು,<br>ನೆಲೆಯು ಎಂದು ಕಾಣದು.</p>



<p>ಧನ ಸಾಗಿಸೋ ರೈತರನ್ನು<br>ಕಳ್ಳರೆಂದು ಒಡೆದರು.<br>ಸತ್ಯವನ್ನು ಬರೆದವರ<br>ಗುಂಡಿಕ್ಕಿ ಕೊಂದರು<br>ಕೋಮು ದ್ವೇಷ ಬಿತ್ತಿದರು.<br>ಬೆಂಕಿಯನ್ನು ಹಚ್ಚಿದರು.</p>



<p>ನಾವೆದ್ದು ನಿಲ್ಲದಿದ್ದರೆ<br>ಸ್ವಾತಂತ್ರ್ಯ ಉಳಿಯದು<br>ಸತ್ಯವಿಲ್ಲಿ ನಿಲ್ಲದು</p>



<p>ಕಣ್ಣೆದುರೆ ಭ್ರಷ್ಟಾಚಾರ<br>ಹಗಲಲ್ಲೆ ಅತ್ಯಚಾರ<br>ಆರೋಗ್ಯವು ವ್ಯಾಪಾರ<br>ನೀರಿಗೂ ಹಾಹಕರ<br>ಬಡವರ ಎದೆಯಲ್ಲಿ<br>ಬೆಂಕಿ ಹತ್ತಿ ಉರಿದಿದೆ</p>



<p>ನಾವೆದ್ದು ನಿಲ್ಲದಿದ್ದರೆ<br>ಅನ್ಯಾಯ ಅಳಿಯದು<br>ಭ್ರಷ್ಟಾಚಾರ ತೊಲಗದು</p>



<p>ಕಾನೂನುಗಳ ಕಂತೆ ಕಟ್ಟಿ<br>ಬಜಾರಲ್ಲಿ ಮಾರುತ್ತಿಹರು<br>ರಾಜಕೀಯ ಧರ್ಪದಲ್ಲಿ<br>ದೇಶವನ್ನು ಒಡೆಯುತ್ತಿಹರು<br>ಪ್ರಜೆಗಳಿಲ್ಲಿ ಪ್ರಭುಗಳಲ್ಲ<br>ಪರಕೀಯತೆ ಕಾಡಿದೆ‌</p>



<p>ನಾವೆದ್ದು ನಿಲ್ಲದಿದ್ದರೆ<br>ನ್ಯಾಯವಿಲ್ಲಿ ಸಿಕ್ಕದು,<br>ದೇಶ ನಾಶವಾಗುವುದು</p>



<p>ಅನ್ನ ಬೆಳೆವ ಭೂಮಿಯನ್ನು<br>ಕೊಳ್ಳೆ ಒಡೆಯೋ ಹುನ್ನಾರ<br>ಹಣದ ದೊರೆಗಳೆಲ್ಲಾ ಸೇರಿ<br>ದೋಚುತ್ತಾರೆ ಊರೂರ<br>ಬೀದಿಯಲ್ಲಿ ಬದುಕು ಬಂದು<br>ಬಾಯಿ ಬಾಯಿ ಬಡಿದಿದೆ.</p>



<p>ನಾವೆದ್ದು ನಿಲ್ಲದಿದ್ದರೆ,<br>ಊರು ಕೇರಿ ಉಳಿಯದು,<br>ಬದುಕು ಬರಡು ಆಗುವುದು.</p>



<p>ಸಂವಿಧಾನ ಸುಟ್ಟರು<br>ಅರಾಜಕತೆ ತಂದರು<br>ಮನುಷ್ಯತ್ವ ಕೊಲೆಯಾಗಿದೆ<br>ನಾಡು ಮಸಣವಾಗಿದೆ<br>ಅಸಹಿಷ್ಣುತೆ ಕಟ್ಟೆ ಒಡೆದು<br>ನೆತ್ತರು ಹರಿದಿದೆ</p>



<p>ನಾವೆದ್ದು ನಿಲ್ಲದಿದ್ದರೆ<br>ಸಂವಿಧಾನ ಉಳಿಯದು<br>ಪ್ರಜಾಪ್ರಭುತ್ವ ಉಳಿಯದು</p>



<p>ನಾವೆದ್ದು ನಿಲ್ಲ ಬೇಕಿದೆ<br>ಸಂವಿಧಾನದ ಉಳಿಲು<br>ಪ್ರಜಾಪ್ರಭುತ್ವ ಉಳಿಸಲು.</p>



<p>✍️<strong> ಶಶಿರಾಜ್ ಹರತಲೆ</strong></p>
]]></content:encoded>
					
		
		
			</item>
		<item>
		<title>ಜನ ತೀರ್ಮಾನವೇ ನಿಜವಾದ ಪ್ರಜಾಪ್ರಭುತ್ವ</title>
		<link>https://peepalmedia.com/peoples-decision-is-true-democracy/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 14 Nov 2022 07:00:51 +0000</pubDate>
				<category><![CDATA[ಚಿಕ್ಕಬಳ್ಳಾಪುರ]]></category>
		<category><![CDATA[bengalure]]></category>
		<category><![CDATA[chikkaballapur]]></category>
		<category><![CDATA[grama panchayath]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[konap[alli]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shashiraj harathale]]></category>
		<guid isPermaLink="false">https://peepalmedia.com/?p=15431</guid>

					<description><![CDATA[ಚಿಕ್ಕಬಳ್ಳಾಪುರ: ನಿಜ ಪ್ರಜಾಪ್ರಭುತ್ವ ಗ್ರಾಮ ಪಂಚಾಯತ್ ಕಾನೂನಿನಲ್ಲಿದೆ. ಅದು ಜನ ತೀರ್ಮಾನ ಮೂಲಕ ಸಾಧ್ಯ ಎಂದು ಶನಿವಾರದಂದು ಜಿಲ್ಲೆಯ ಕೋನಪಲ್ಲಿ ಗ್ರಾಮ ಪಂಚಾಯತ್ ಧನಮಿಟ್ಟೆನಹಳ್ಳಿಯಲ್ಲಿ ನಡೆದ ನಿವೇಶನ ಒದಗಿಸುವ ವಿಶೇಷ ಗ್ರಾಮ ಸಭೆಯಲ್ಲಿ ಶಶಿರಾಜ್ ಹರತಲೆ ಅಭಿಪ್ರಾಯಪಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನ ಮತ ಹಾಕುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಷ್ಟೆ ಅಲ್ಲದೆ ಸ್ಥಳಿಯ ಸರ್ಕಾರಗಳಾದ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ನ ಸದಸ್ಯರುಗಳನ್ನು [&#8230;]]]></description>
										<content:encoded><![CDATA[
<p><strong>ಚಿಕ್ಕಬಳ್ಳಾಪುರ:</strong> ನಿಜ ಪ್ರಜಾಪ್ರಭುತ್ವ ಗ್ರಾಮ ಪಂಚಾಯತ್ ಕಾನೂನಿನಲ್ಲಿದೆ. ಅದು ಜನ ತೀರ್ಮಾನ ಮೂಲಕ ಸಾಧ್ಯ ಎಂದು ಶನಿವಾರದಂದು ಜಿಲ್ಲೆಯ ಕೋನಪಲ್ಲಿ ಗ್ರಾಮ ಪಂಚಾಯತ್ ಧನಮಿಟ್ಟೆನಹಳ್ಳಿಯಲ್ಲಿ ನಡೆದ ನಿವೇಶನ ಒದಗಿಸುವ ವಿಶೇಷ ಗ್ರಾಮ ಸಭೆಯಲ್ಲಿ ಶಶಿರಾಜ್ ಹರತಲೆ ಅಭಿಪ್ರಾಯಪಟ್ಟಿದ್ದಾರೆ.</p>



<p>ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ, ಜನ ಮತ ಹಾಕುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಷ್ಟೆ ಅಲ್ಲದೆ ಸ್ಥಳಿಯ ಸರ್ಕಾರಗಳಾದ ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ನ ಸದಸ್ಯರುಗಳನ್ನು ಆಯ್ಕೆ ಮಾಡ್ತಾರೆ.&nbsp; ಗ್ರಾಮ ಪಂಚಾಯತಿ ಹೊರತು ಪಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳಲ್ಲಿ ಅನುಷ್ಟಾನಿಸಬಹುದಾದ ಕಾರ್ಯಗಳು ಮತ್ತು ಅವುಗಳಿಗೆ ಅನುಮೋದನೆಯನ್ನು ಅಲ್ಲಿನ ಜನ ಪ್ರತಿನಿಧಿಗಳು ಮಾಡುತ್ತಾರೆ. ಅದರೆ ಗ್ರಾಮ ಪಂಚಾಯತ್ ಆಡಳಿತದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳನ್ನು ಜನ ಆಯ್ಕೆ ಮಾಡ್ತಾರೆ ಅದಕ್ಕೆ ಅನುಮೋದನೆಯನ್ನು ಕೂಡ ಗ್ರಾಮ ಸಭೆ ಮೂಲಕ ಜನರೇ ನೀಡ್ತಾರೆ. ಹಾಗಾಗಿ ನಿಜವಾದ ಪ್ರಜಾಪ್ರಭುತ್ವ ದ ಬಳಕೆ ಗ್ರಾಮ ಪಂಚಾಯತ್ ಗಳಲ್ಲಿ ಆಗುತ್ತದೆ. ಅದನ್ನು ಜನ ಅರಿತು ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಹೇಳಿದ್ದಾರೆ.</p>



<figure class="wp-block-image size-full"><img fetchpriority="high" decoding="async" width="1013" height="527" src="https://peepalmedia.com/wp-content/uploads/2022/11/Screenshot-2022-11-14-122908.jpg" alt="" class="wp-image-15436" srcset="https://peepalmedia.com/wp-content/uploads/2022/11/Screenshot-2022-11-14-122908.jpg 1013w, https://peepalmedia.com/wp-content/uploads/2022/11/Screenshot-2022-11-14-122908-300x156.jpg 300w, https://peepalmedia.com/wp-content/uploads/2022/11/Screenshot-2022-11-14-122908-768x400.jpg 768w, https://peepalmedia.com/wp-content/uploads/2022/11/Screenshot-2022-11-14-122908-150x78.jpg 150w, https://peepalmedia.com/wp-content/uploads/2022/11/Screenshot-2022-11-14-122908-696x362.jpg 696w" sizes="(max-width: 1013px) 100vw, 1013px" /></figure>



<p>ಸ್ವಾತಂತ್ರ್ಯ ಬಂದ ನಂತರವೂ ಹಳ್ಳಿ ಆಡಳಿತ ಕಟ್ಟೆ ಪಂಚಾಯತಿ ಮೂಲಕ ನಡೆಯೋದು ವಂಶಪಾರಂಪರ್ಯವಾಗಿ ಮೇಲ್ವರ್ಗದ ಶ್ರಿಮಂತ ಕುಟುಂಬಗಳ 5  ಜನರು ಮಾತ್ರ  ನ್ಯಾಯ ಪಂಚಾಯತ್ ಮಾಡೋರು ಅಸ್ಪೃಶ್ಯರು, ಮಹಿಳೆಯರು, ಅಲ್ಲಿಗೆ ಹೋಗುವ ಹಾಗೆ ಇರಲಿಲ್ಲ. ಹಿಂದುಳಿದ ಸಮುದಾಯದವರೂ  ಹೋದರು ತೀರ್ಮಾನಿಸುವ ಹಕ್ಕಿರಲಿಲ್ಲ. ಆದರೆ ಸಂವಿಧಾನದ ಅಡಿಯಲ್ಲಿ ರಚಿತವಾದ ಕಾನೂನು ಪಂಚಾಯತ್ ನಲ್ಲಿ ಮಹಿಳೆಯರಿಗೆ 50% ರಾಜಕೀಯ ಮಿಸಾಲಾತಿ ನೀಡಲಾಗಿದ್ದು, ಈಗ ಪುರಷರಷ್ಟೆ ಮಹಿಳೆರು ಕೂಡ ಚುನಾಯಿತರಾಗುತ್ತಿದ್ದಾರೆ. ಪರಿಶಿಷ್ಟ ವರ್ಗ ಮತ್ತು ಪಂಗಡ ಹಾಗೂ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಲಾಗಿದ್ದು ಅವರು ಕೂಡ ಸದಸ್ಯರಾಗಿ ಅಧ್ಯಕ್ಷರಾಗಿ ಉಪಾಧ್ಯಕ್ಷ ರಾಗುತ್ತಿರುವುದನ್ನು ನೋಡಬಹುದು. ಅದಕ್ಕಾಗಿಯೇ ಇದನ್ನು ಗ್ರಾಮ ಸರ್ಕಾರ ಅಂತ ಕರೆಯಲಾಗತ್ತೆ. ಹಾಗಾಗಿ ವ್ಯಕ್ತಿ ನಾಯಕತ್ವಕ್ಕೆ ಮನ್ನಣೆ ನೀಡದೆ ಜನ ನಾಯಕತ್ವವನ್ನು ಎತ್ತಿಡಿಯುವಲ್ಲಿ ಇಂತಹ ಗ್ರಾಮ ಸಭೆ ಸಾಗಬೇಕು. ಕಳೆದ ಹತ್ತು ವರ್ಷಗಳ ಜನರ ಹಕ್ಕೊತ್ತಾಯಕ್ಕೆ  ಈ ದಿನ ಮನೆ ಮತ್ತು ನಿವೇಶನ ರಹಿತ 25 ಕುಟುಂಬಗಳಿಗೆ ಜನ ಸಹಭಾಗಿತ್ವದಲ್ಲಿ ನಿವೇಶನ ಹಂಚಿಕೆ ಮಾಡುವ ಮೂಲಕ  ಗ್ರಾಮ ಸಭೆಯ ಮಹತ್ವವನ್ನು ಎತ್ತಿಹಿಡಿಯಲಾಗಿದೆ ಎಂದು ತಿಳಿಸಿದರು. ಅಷ್ಟೆ ಅಲ್ಲದೆ ನಿವೇಶನ ಮತ್ತು ಮನೆ ವಂಚಿತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಅವರಿಗೂ ಕೂಡಲೆ ನಿವೇಶನ ಮತ್ತು ಮನೆ ನೀಡಲು ಗ್ರಾಮ ಪಂಚಾಯತ್ ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.</p>



<p>ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ ರೆಡ್ಡಿ ಮಾತನಾಡಿ, ʼನನ್ನ ಅವಧಿ ಇರುವುದರೊಳಗೆ ನನ್ನ ಗ್ರಾಮ ಪಂಚಾಯತಿ ಯಲ್ಲಿ ಇರುವ ಎಲ್ಲಾ ಬಡವರಿಗೂ ನಿವೇಶನ ಮತ್ತು ಮನೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಆರೋಗ್ಯ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದು, ಅವರ ಸಹಕಾರ, ಬೆಂಬಲ ಪಡೆದು ಎಲ್ಲರಿಗೂ ನ್ಯಾಯ ಕೊಡಿಸುತ್ತೇನೆ ಎಂದು ಮಾತನಾಡಿದ್ದಾರೆ.</p>



<p>ಈ ಸಂಧರ್ಭದಲ್ಲಿ ಪಿ.ಡಿ.ಓ ಪ್ರತಿಭಾ, ಕಾರ್ಯದರ್ಶಿ ಚಲಪತಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಗಿರೀಶ್, ಸುಧಾಕರ್, ಸುವರ್ಣ, ವೆಂಕಟೇಶಪ್ಪ, ಮಾಜಿ ಸದಸ್ಯರಾದ ಡಿ.ಸಿ ವೆಂಕಟೇಶಪ್ಪ, ಆಶೋಕ ಕರವಸೂಲಿಗಾರ ನಾಗರಾಜ್, ಕಾಯಕ ಮಿತ್ರ ಸಾವಿತ್ರಮ್ಮ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.</p>
]]></content:encoded>
					
		
		
			</item>
	</channel>
</rss>
