<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>shimoga &#8211; Peepal Media</title>
	<atom:link href="https://peepalmedia.com/tag/shimoga/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 17 Aug 2024 02:11:32 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>shimoga &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ರಾಜ್ಯದ ಸರ್ಕಾರಿ ಶಾಲೆಗಳಿಗೆ ಮುಂದಿನ ಒಂದು ವರ್ಷದ ಅವಧಿ ಒಳಗಾಗಿ ಒಂದು ಸಾವಿರ ಕೋಟಿ ಆರ್ಥಿಕ ನೆರವು ಸಮುದಾಯದಿಂದ ಬರುವ ನಿರೀಕ್ಷೆ: ಸಚಿವ ಮಧು ಎಸ್ ಬಂಗಾರಪ್ಪ</title>
		<link>https://peepalmedia.com/expecting-thousand-crores-by-next-year-madhu-bangarappa/</link>
		
		<dc:creator><![CDATA[Peepal Media]]></dc:creator>
		<pubDate>Sat, 17 Aug 2024 02:11:32 +0000</pubDate>
				<category><![CDATA[ಶಿವಮೊಗ್ಗ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[madhu bangarappa]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[shimoga]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=43959</guid>

					<description><![CDATA[ಶಿವಮೊಗ್ಗ, ಆಗಸ್ಟ್ 16: ವರ್ಷದ ಅವಧಿ ಒಳಗಾಗಿ ಸಮುದಾಯದಿಂದ ಒಂದು ಸಾವಿರ ಕೋಟಿ ಆರ್ಥಿಕ ನೆರವು ಒದಗಿ ಬರುವ ನಿರೀಕ್ಷೆ ಇದೆ ಎಂದು ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.ಅವರು ಇಂದು ಸೊರಬ ತಾಲ್ಲೂಕು ಕುಬಟೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹತ್ತು ಲಕ್ಷ ರೂಪಾಯಿಗಳ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ ನಂತರ ಏರ್ಪಡಿಸಲಾಗಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ರಾಜ್ಯದ ಎಲ್ಲಾ [&#8230;]]]></description>
										<content:encoded><![CDATA[
<p>ಶಿವಮೊಗ್ಗ, ಆಗಸ್ಟ್ 16: ವರ್ಷದ ಅವಧಿ ಒಳಗಾಗಿ ಸಮುದಾಯದಿಂದ ಒಂದು ಸಾವಿರ ಕೋಟಿ ಆರ್ಥಿಕ ನೆರವು ಒದಗಿ ಬರುವ ನಿರೀಕ್ಷೆ ಇದೆ ಎಂದು ಸಚಿವ ಮಧು ಎಸ್ ಬಂಗಾರಪ್ಪ ಅವರು ಹೇಳಿದರು.<br>ಅವರು ಇಂದು ಸೊರಬ ತಾಲ್ಲೂಕು ಕುಬಟೂರಿನ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಹತ್ತು ಲಕ್ಷ ರೂಪಾಯಿಗಳ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ ನಂತರ ಏರ್ಪಡಿಸಲಾಗಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.<br>ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲದಂತೆ ಎಲ್ಲಾ ರೀತಿಯ ಅಗತ್ಯ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ರಾಜ್ಯದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ದೆಸೆಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳ ಮೌಲ್ಯದ ವಸ್ತುಗಳನ್ನು ನೀಡಿ ತಾವು ಓದಿದ ಶಾಲೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ವತಹ ತಾವುಗಳು ಕೂಡ ಅವರ ಹಾದಿಯಲ್ಲಿಯೇ ಮುನ್ನಡೆದು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ದಿವಂಗತ ಎಸ್ ಬಂಗಾರಪ್ಪನವರು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಶಾಲೆಯ ಸರ್ವಾಂಗಿಣ ವಿಕಾಸಕ್ಕೆ ತಾವು ಬದ್ಧರಿರುವುದಾಗಿ ತಿಳಿಸಿದರು.</p>



<p>ರಾಜ್ಯದಲ್ಲಿ ಸುಮಾರು 46000 ಸರ್ಕಾರಿ ಶಾಲೆಗಳಿದ್ದು, ಆ ಎಲ್ಲಾ ಶಾಲೆಗಳನ್ನು ಸರ್ಕಾರದ ಅನುದಾನದಿಂದಲೇ ಅಭಿವೃದ್ಧಿಪಡಿಸಲು ಸಾಧ್ಯವಾಗದು. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಇಂದು ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದಿದ್ದು, ಉತ್ತಮ ಜೀವನ ನಿರ್ವಹಣೆ ಮಾಡುತ್ತಿರುವ ಅನೇಕ ಜನರು ತಾವು ಓದಿದ ಹಾಗೂ ಇಂದು ತಮ್ಮ ಮಕ್ಕಳು ಮತ್ತು ತಮ್ಮ ಊರಿನ ಮಕ್ಕಳು ಓದುತ್ತಿರುವ ಶಾಲೆಗೆ ಋಣ ತೀರಿಸುವ ಭಾಗವಾಗಿ ಯಾವುದೇ ವಿಧದಲ್ಲಾದರೂ ನೆರವಾಗುವಂತೆ ಹಾಗೂ ಅಲ್ಲಿನ ಮಕ್ಕಳು ಜಗವಿಖ್ಯಾತರಾಗುವಂತೆ ಶ್ರಮಿಸಲು ಮನವಿ ಮಾಡಿದರು.<br>ಹಲವು ದಶಕಗಳ ಹಿಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳು ಹಾಗೂ ಅವುಗಳ ಭೌತಿಕ ಸ್ವರೂಪ ಸಮಗ್ರವಾಗಿ ಬದಲಾವಣೆಗೊಂಡಿದೆ. ಪ್ರತಿಭಾವಂತ ಶಿಕ್ಷಕರುಗಳ ನೇಮಕವಾಗಿದೆ. ಮಧ್ಯಾಹ್ನದ ಬಿಸಿ ಊಟ, ಪೌಷ್ಟಿಕ ಆಹಾರ, ಮೊಟ್ಟೆ, ಹಾಲು, ರಾಗಿ ಮಾಲ್ಟ್, ಸಮವಸ್ತ್ರ ಮತ್ತು ಪಠ್ಯಪುಸ್ತಕ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಿಂದ ಅನ್ವಯವಾಗುವಂತೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಪ್ರತಿಭಾವಂತ ಶಿಕ್ಷಕರೇ ಹೊಂದಿರುವ ಸರ್ಕಾರಿ ಶಾಲೆಗಳಿಗೆ ದಾಖಲಿಸಲು ಮುಂದಾಗುವAತೆ ಮನವಿ ಮಾಡಿದ ಅವರು, ಸರ್ಕಾರಿ ಶಾಲೆಯ ಸೊಗಡು ಮತ್ತು ಮಹತ್ವವನ್ನು ಅರಿಯುವಂತೆ ಅವರು ಮನವಿ ಮಾಡಿದರು.<br>ಉತ್ತರ ಕರ್ನಾಟಕದ ಏಳು ಜಿಲ್ಲೆಗಳ 1700 ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಸುಮಾರು 38,000 ವಿದ್ಯಾರ್ಥಿಗಳು ದಾಖಲಾಗಿರುವುದು ವಿಶೇಷ ಎನಿಸಿದೆ ಎಂದವರು ನುಡಿದರು.<br>ರಾಜ್ಯದ 46,000 ಶಾಲೆಗಳಿಗೆ ಸರ್ಕಾರ ಪ್ರತಿ ವರ್ಷ 44,000 ಕೋಟಿ ರೂಪಾಯಿಗಳ ಹಣ ವೆಚ್ಚ ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಸುಮಾರು 56 ಲಕ್ಷ ಮಕ್ಕಳು ಹಾಗೂ ಪಿಯುಸಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದರು.<br>ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಲ್ಲೇಶಪ್ಪ ನೆರಕೇರ, ಶ್ರೀಮತಿ ಅನಿತಾ ಮಧು ಬಂಗಾರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ. ಡಿ. ಶೇಖರ್ ನಾಗರಾಜ್ ಗೌಡ ಮುಂತಾದವರು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
		<item>
		<title>ಕುವೆಂಪು ವಿವಿಯಲ್ಲಿ ಅತಿಥಿ ಉಪನ್ಯಾಸಕರ ಕೊರತೆ, 40 ದಿನಗಳಿಂದ ಪಾಠ ಇಲ್ಲ! ಯಾರು ಹೊಣೆ?</title>
		<link>https://peepalmedia.com/lack-of-guest-faculty-in-kuvempu-university-no-classes/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 06 Nov 2023 05:29:59 +0000</pubDate>
				<category><![CDATA[ಶಿವಮೊಗ್ಗ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Kuvempu university]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[shimoga]]></category>
		<category><![CDATA[shimogga]]></category>
		<category><![CDATA[state politics]]></category>
		<category><![CDATA[teaching]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31233</guid>

					<description><![CDATA[ಅತಿಥಿ ಉಪನ್ಯಾಸಕರ ಕೊರತೆಯಿಂದ ಕುವೆಂಪು ವಿಶ್ವವಿದ್ಯಾಲಯದ 2023-24 ರ ಪ್ರಸಕ್ತ ಶೈಕ್ಷಣಿಕ ವರ್ಷದ ವಿಧ್ಯಾರ್ಥಿಗಳಿಗೆ ಸುಮಾರು 40 ದಿನಗಳಿಂದ ಯಾವುದೇ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಶಿವಮೊಗ್ಗದ ವಕೀಲರು, ಪೇಪಲ್ಸ್ ಲಾಯರ್ಸ್ ಗಿಲ್ಡ್ ಮುಖ್ಯಸ್ಥರು ಆದ ಕೆ.ಪಿ.ಶ್ರೀಪಾಲ್ ಹಾಗೂ ವಿಜಯಕುಮಾರ್ ರವರು, ಕುವೆಂಪು ವಿವಿ ಬೇಜವಾಬ್ದಾರಿತನವನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 2022-23 ಸಾಲಿನ ಶೈಕ್ಷಣಿಕ ವರ್ಷ ಮುಗಿದಿದ್ದು, 2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸೆಪ್ಟೆಂಬರ್ 19 ಕ್ಕೆ ತರಗತಿಗಳು ಆರಂಭವಾಗಿವೆ. ತರಗತಿಗಳು ಪ್ರಾರಂಭವಾಗಿ [&#8230;]]]></description>
										<content:encoded><![CDATA[
<p>ಅತಿಥಿ ಉಪನ್ಯಾಸಕರ ಕೊರತೆಯಿಂದ ಕುವೆಂಪು ವಿಶ್ವವಿದ್ಯಾಲಯದ 2023-24 ರ ಪ್ರಸಕ್ತ ಶೈಕ್ಷಣಿಕ ವರ್ಷದ ವಿಧ್ಯಾರ್ಥಿಗಳಿಗೆ ಸುಮಾರು 40 ದಿನಗಳಿಂದ ಯಾವುದೇ ಪಾಠ ಪ್ರವಚನ ನಡೆಯುತ್ತಿಲ್ಲ ಎಂದು ಶಿವಮೊಗ್ಗದ ವಕೀಲರು, ಪೇಪಲ್ಸ್ ಲಾಯರ್ಸ್ ಗಿಲ್ಡ್ ಮುಖ್ಯಸ್ಥರು ಆದ ಕೆ.ಪಿ.ಶ್ರೀಪಾಲ್ ಹಾಗೂ ವಿಜಯಕುಮಾರ್ ರವರು, ಕುವೆಂಪು ವಿವಿ ಬೇಜವಾಬ್ದಾರಿತನವನ್ನು ಉಲ್ಲೇಖಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.</p>



<p>2022-23 ಸಾಲಿನ ಶೈಕ್ಷಣಿಕ ವರ್ಷ ಮುಗಿದಿದ್ದು, 2023-24 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸೆಪ್ಟೆಂಬರ್ 19 ಕ್ಕೆ ತರಗತಿಗಳು ಆರಂಭವಾಗಿವೆ. ತರಗತಿಗಳು ಪ್ರಾರಂಭವಾಗಿ 45 ದಿನಗಳು ಕಳೆದರೂ ಕುವೆಂಪು ವಿಶ್ವವಿದ್ಯಾಲಯದ ಈ ವರೆಗೆ ಅತಿಥಿ ಉಪನ್ಯಾಸಕರ ನೇಮಕ ಮಾಡದೇ ಬೇಜವಾಬ್ದಾರಿ ತೋರಿದೆ ಎಂದು ದೂರಿದ್ದಾರೆ.</p>



<p>2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕುವೆಂಪು ವಿವಿ ಯ ಎಲ್ಲಾ ಡಿಗ್ರಿ ಕಾಲೇಜುಗಳ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳು ಆಗಸ್ಟ್ 23 ಕ್ಕೆ ಮುಗಿದಿದೆ. ಸೆಪ್ಟೆಂಬರ್ 23 ರ ವರೆಗೆ ಪರೀಕ್ಷಾ ಕಾರ್ಯ ಸೇರಿದಂತೆ ಎಲ್ಲಾ ಕಾರ್ಯಗಳಿಗೆ ಅತಿಥಿ ಉಪನ್ಯಾಸಕರ ಸೇವೆ ಪಡೆದು ಸೆಪ್ಟೆಂಬರ್ 23 ಕ್ಕೆ ಅವರನ್ನು ರಿಲೀವ್ ಮಾಡಲಾಗಿದೆ. ಇದರ ನಡುವೆ ವಿಧ್ಯಾರ್ಥಿಗಳಿಗೆ ಉಪನ್ಯಾಸ ಮಾಡಬೇಕಾಗಿದ್ದ ಖಾಯಂ ಉಪನ್ಯಾಸಕರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯ ಮೌಲ್ಯಮಾಪನಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ವಿಧ್ಯಾರ್ಥಿಗಳು ಪಾಠವೇ ಇಲ್ಲದೆ ಪರಿತಪಿಸುವಂತಾಗಿದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>



<p>ಇದರ ನಡುವೆ ಹಬ್ಬದ ರಜೆಗಳು ಬಂದ ಹಿನ್ನೆಲೆಯಲ್ಲಿ ಒಟ್ಟಾರೆ 40 ದಿನಗಳಿಗೂ ಹೆಚ್ಚು ದಿನ ಪಾಠವೇ ಶುರುವಾಗಿಲ್ಲ. 3 ಮತ್ತು 5 ನೇ ಸೆಮಿಸ್ಟರ್ ವಿಧ್ಯಾರ್ಥಿಗಳಿಗೆ ಸೆಪ್ಟೆಂಬರ್ 5 ಕ್ಕೆ ತರಗತಿಗಳು ಆರಂಭವಾದರೂ ಈ ವರೆಗೂ ಪಾಠವೇ ನಡೆದಿಲ್ಲ. ನಿಯಮಾವಳಿಗಳಂತೆ 8 ನೇ ವಾರಕ್ಕೆ ಈ ತರಗತಿಗಳಿಗೆ ಕಿರು ಪರೀಕ್ಷೆ ನಡೆಯಬೇಕಿದೆ. ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳು ನವೆಂಬರ್ 15 ರಿಂದ ಕಿರು ಪರೀಕ್ಷೆ ಆಯೋಜಿಸಿವೆ. ಪಾಠವೇ ನಡೆಯದೇ ವಿಧ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಪಿ.ಶ್ರೀಪಾಲ್ ಹಾಗೂ ವಿಜಯಕುಮಾರ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>


<div class="wp-block-image">
<figure class="aligncenter size-large is-resized"><img fetchpriority="high" decoding="async" width="1024" height="768" src="https://peepalmedia.com/wp-content/uploads/2023/11/1276730_1375770105988659_1315821191_o-1024x768.jpg" alt="" class="wp-image-31234" style="aspect-ratio:1.3333333333333333;width:317px;height:auto" srcset="https://peepalmedia.com/wp-content/uploads/2023/11/1276730_1375770105988659_1315821191_o-1024x768.jpg 1024w, https://peepalmedia.com/wp-content/uploads/2023/11/1276730_1375770105988659_1315821191_o-300x225.jpg 300w, https://peepalmedia.com/wp-content/uploads/2023/11/1276730_1375770105988659_1315821191_o-768x576.jpg 768w, https://peepalmedia.com/wp-content/uploads/2023/11/1276730_1375770105988659_1315821191_o-1536x1152.jpg 1536w, https://peepalmedia.com/wp-content/uploads/2023/11/1276730_1375770105988659_1315821191_o-150x113.jpg 150w, https://peepalmedia.com/wp-content/uploads/2023/11/1276730_1375770105988659_1315821191_o-696x522.jpg 696w, https://peepalmedia.com/wp-content/uploads/2023/11/1276730_1375770105988659_1315821191_o-1068x801.jpg 1068w, https://peepalmedia.com/wp-content/uploads/2023/11/1276730_1375770105988659_1315821191_o-1920x1440.jpg 1920w, https://peepalmedia.com/wp-content/uploads/2023/11/1276730_1375770105988659_1315821191_o.jpg 2048w" sizes="(max-width: 1024px) 100vw, 1024px" /><figcaption class="wp-element-caption"> ಕೆ.ಪಿ.ಶ್ರೀಪಾಲ್ </figcaption></figure></div>


<p>ಈ ನಡುವೆ ಹೊಸ ಶೈಕ್ಷಣಿಕ ವರ್ಷಕ್ಕೆ ಅಕ್ಟೋಬರ್ 27 ಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಈ ವರೆಗೂ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಸಧ್ಯ ಕುವೆಂಪು ವಿಶ್ವವಿದ್ಯಾಲಯಕ್ಕೆ ಕುಲಪತಿಗಳ ನೇಮಕವೂ ಆಗಿಲ್ಲ, ಹಂಗಾಮಿ ಇರುವವರು ಮತ್ತು ಹಂಗಾಮಿ ರಿಜಿಸ್ಟರ್ ಈ ವರೆಗೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತ ಎಂದಿದ್ದಾರೆ.</p>



<p>ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ ಅತಿಥಿ ಉಪನ್ಯಾಸಕರ ನೇಮಕ ಮಾಡಲು ಕುವೆಂಪು ವಿವಿಗೆ ನಿರ್ದೇಶಿಸಬೇಕು. ವಿಧ್ಯಾರ್ಥಿಗಳು ಕುವೆಂಪು ವಿವಿ ಮೇಲಿನ ನಂಬಿಕೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು&#8230;&#8221;</title>
		<link>https://peepalmedia.com/yuva-nota-article-by-diganth-bimabail/</link>
		
		<dc:creator><![CDATA[Peepal Media]]></dc:creator>
		<pubDate>Fri, 04 Nov 2022 11:10:44 +0000</pubDate>
				<category><![CDATA[ಯುವ ನೋಟ]]></category>
		<category><![CDATA[adike]]></category>
		<category><![CDATA[arecanut]]></category>
		<category><![CDATA[diganth bimbail]]></category>
		<category><![CDATA[drone]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lalita prabandha]]></category>
		<category><![CDATA[malndad]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sagara]]></category>
		<category><![CDATA[shimoga]]></category>
		<category><![CDATA[tirthahalli]]></category>
		<category><![CDATA[wedding]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14179</guid>

					<description><![CDATA[ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. &#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು [&#8230;]]]></description>
										<content:encoded><![CDATA[
<p class="has-text-align-center"><strong>ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರುಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮುಂದೇನು? ಎಂಬ ಆತಂಕದ ದನಿ ಮಲೆನಾಡಿನ ಯುವ ಬರಹಗಾರ ದಿಗಂತ್‌ ಬಿಂಬೈಲ್‌ ಅವರದು. </strong></p>



<p>&#8220;ಅವ್ರ್ ಮನೇಲಿ ಮಗಳು ಮದುವೆಗೆ ಹಾರು ಫ್ಯಾನ್ ಮಾಡ್ಸಿದ್ರು ಹಂಗೆ ನಾವು ನಮ್ ಮನೆ ಮದ್ವೆ ಮನೇಲಿ ಮಾಡುಸ್ಬೇಕು ಅಂತಿದೀವಿ…&#8221; ಹೀಗೆ ಮಾತಾಡ್ತಾ ಪರಿಚಯದವರೊಬ್ಬರು ಹೇಳಿದ್ರು. &#8220;ಇವ್ರ್ ಕರ್ಮ ಎಂತ ಹಾರು ಫ್ಯಾನ್ ಮಾಡುಸ್ತಾರೆ..&#8221; ಅಂತ ಮನಸಲ್ಲಿ ಅಂದ್ಕೋತ ಮತಾಡ್ತ ಇದ್ದ ಹಾಗೆ ಗೊತ್ತಾಯ್ತು. ಅದು ಹಾರು ಫ್ಯಾನ್ ಅಲ್ಲ ಡ್ರೋನ್ ಎಂದು.</p>



<p>&nbsp;ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು, ಮಗ, ಮಗಳ ಮದ್ವೆ ಮಾಡ್ಬೇಕು, ಮನೆ ಕಟ್ಬೇಕು, ಅನಾರೋಗ್ಯ ಪೀಡಿತ ವಯಸ್ಸಾದವರ ಆಸ್ಪತ್ರೆಗೆ ಸೇರಿಸಬೇಕು ಏನೆಲ್ಲ ಮಾಡ್ಬೇಕು ಅಂದ್ರು ಮಲೆನಾಡಿಗರಿಗೆ ಬೆನ್ನೆಲುಬಾಗಿ ಆರ್ಥಿಕ ಧೈರ್ಯ ಕೊಟ್ಟಿದ್ದು ಅಡಿಕೆ. ಯಾವ ಮಟ್ಟಕ್ಕೆಂದರೆ ಮಲೆನಾಡಿನ ಮೂಲ ಪ್ರಭೇದವೇ ಅಲ್ಲದ ಅಡಿಕೆ ಬೆಳೆ ಇಲ್ಲದಿದ್ದರೆ ಬದುಕೇ ಇಲ್ಲ ಎನ್ನುವಷ್ಟರ ಮಟ್ಟಿಗಿನ ಮಾತು ಗದ್ದೆ, ತೋಟ, ಹಡ್ಡೆ, ಮದ್ವೆ ಮನೆ, ಸಾವಿನ ಮನೆ ಎಲ್ಲ ಕಡೆ ಕೇಳ್ತಿದೆ.</p>



<p>&nbsp;ಇದು ಇವತ್ತಿನ ಮಲೆನಾಡಿನ ಸ್ಥಿತಿಯಲ್ಲಿ ಸತ್ಯವೂ ಹೌದು. ಅಡಿಕೆ ಇದ್ದರೆ ಬದುಕು ಎನ್ನುವಷ್ಟು ಅವಲಂಬನೆಯೇ ಬಹುಪಾಲು. ಈಗ ಕಾಡುತ್ತಿರುವ ಅಭದ್ರತೆ ಒಂದೆಡೆ ಆದರೆ ಅಡಿಕೆ ಮಲೆನಾಡಿನ ಸಂಸ್ಕೃತಿ, ಜನಜೀವನವನ್ನೇ ಮತ್ತೆಂದು ಸರಿಪಡಿಸಲಾಗದಷ್ಟು ಅಂದಗೆಡಿಸಿ ಇಟ್ಟಿರುವುದು ಜೀರ್ಣಿಸಿಕೊಳ್ಳಲಾಗದ್ದು. ಹಿರಿಯರು ಎರಡು ಗುಡ್ಡಗಳ ನಡುವಿನ ಸರಕಲು ಜಾಗದಲ್ಲಿ ಸಾಂಪ್ರದಾಯಿಕವಾಗಿ, ಸಾವಯವವಾಗಿ ಬೆಳೆಯುತ್ತಿದ್ದ ಬೆಳೆ ಕಳೆದೆರಡು ದಶಕಗಳಿಂದ ಭತ್ತದ ಗದ್ದೆಗಳ ಜೊತೆಜೊತೆಗೆ ಮನೆ ಬಳಿಯ ಗುಡ್ಡಗಾಡುಗಳನ್ನೆಲ್ಲ ಆವರಿಸಿ ಕೇಕೆ ಹಾಕುತ್ತಿತ್ತು. ಮದುವೆ ಮನೆ ಸಾವಿನ ಮನೆ ತೊಟ್ಟಿಲು ಶಾಸ್ತ್ರ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಮಾತೆತ್ತಿದರೆ &#8220;ನಿಮ್ಗೆ ಎಷ್ಟ್ ಕುಂಟಾಲ್ ಅಡಿಕೆ ಆಗ್ತದೆ&#8230;&#8221; ಪರಿಚಯದ ನಂತರದ ಮಾತೇ ಇದಾಗಿತ್ತು. ಗದ್ದೆ ಮಾಡ್ತೇವೆ ಎಂದರೆ ಸಾಕು &#8220;ಇನ್ನೂ ಗದ್ದೆ ಇಟ್ಕೊಂಡಿರ? ನಮ್ಗ್ ಆ ರಗಳೆ ಇಲ್ಲ. ಪೂರ್ತಿ ತ್ವಾಟ ಹಾಕಿವಿ&#8221; ಹೊಟ್ಟೆಗೆ ಅನ್ನ ಬೆಳೆದು ಕೊಳ್ಳುವುದೇ ರಗಳೆ ಎನ್ನುವುದರ ಮಟ್ಟಕ್ಕೆ ಮಾತನಾಡಿಕೊಳ್ಳುವವರಿಗೇನು ಕಡಿಮೆ ಇರಲಿಲ್ಲ.</p>



<p>ಮಲೆನಾಡಿನಲ್ಲಿ ಬೇರೆ ಯಾವ ಬೆಳೆಯು ಕೊಡಲಾಗದ ಲಾಭದ ಹಿಂದೆ ಬಿದ್ದವರು ಇಲ್ಲಿಯ ಪ್ರಕೃತಿಗೆ ಹೊಂದಿಕೆಯಾಗದ ಸ್ಲ್ಯಾಬ್ ಮನೆ, ಅದ್ದೂರಿ ಮದುವೆ, ಇನ್ನೂ ಮುಂದೆ ಹೋಗಿ ಹುಟ್ಟಿದ ಹಬ್ಬದ ಸಂಭ್ರಮ ಇನ್ನು ಏನೇನೋ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ಖರ್ಚು ಮಾಡುವಷ್ಟು ಗಟ್ಟಿಗರಾಗಿದ್ದರು. ಗಟ್ಟಿಗರಾಗಿದ್ದರು ಎನ್ನುವುದಕ್ಕಿಂತ ತೋರುಗಾಣಿಕೆಯ ಬದುಕು. ಈಗೀಗ ಮಲೆನಾಡಿನಲ್ಲಿ ನಿರ್ಮಾಣವಾದ ಯಾವುದೇ ಸ್ಲ್ಯಾಬ್ ಮನೆಗಳ ಒಳಹೊಕ್ಕರೂ ಸರ್ವೇ ಸಾಮಾನ್ಯವಾಗಿ ಗುರುತಿಸಬಹುದಾದ ಒಂದು ಅಂಶವೆಂದರೆ ಬಂದವರಿಗೆ ತೋರಿಸಲೆಂದೇ ಮಾಡಿಟ್ಟ ಲಕ್ಷದ ಖರ್ಚು ಮಾಡಿದ ಅಡುಗೆ ಮನೆ. ಅಲ್ಲಿ ಅಡುಗೆಯನ್ನು ಮಾಡದೆ ಕೇವಲ ವಾಸ್ತುವಿನ ಹೆಸರು ಹೇಳಿಕೊಂಡು ಬಂದವರಿಗೆ ಕರೆಕರೆದು ತೋರಿಸುವ ಗತ್ತಿಗಷ್ಟೇ ಆಗಿತ್ತದು. ದಿನ ನಿತ್ಯದ ಅಡುಗೆ ಕೆಲಸಕ್ಕೆ ಅಲ್ಲೆಲ್ಲೋ ಮೂಲೆಯಲ್ಲಿ ಮತ್ತೊಂದು ಅಡುಗೆ ಮನೆ. ಕೆಲವೇ ವರ್ಷಗಳಲ್ಲಿ ಮಳೆ ತಡೆದುಕೊಳ್ಳಲಾಗದೆ ಮಳೆ ನೀರು ತೊಟ್ಟಿಕ್ಕುವ ಸ್ಲ್ಯಾಬ್ ಮನೆಗಳ ಮೇಲೆ ಮತ್ತೆ ಕಟ್ಟಿ ಹೆಂಚು, ಶೀಟ್ ಹಾಕಿಸಿ ತಮ್ಮ ತೋರುಗಾಣಿಕೆ ಬದುಕು ಹೊರಕಾಣದಂತೆ ತೇಪೆ ಹಚ್ಚುವ ಕಾರ್ಯ.</p>


<div class="wp-block-image">
<figure class="aligncenter size-large"><img decoding="async" width="771" height="1024" src="https://peepalmedia.com/wp-content/uploads/2022/11/IMG_20221104_105916-1-771x1024.jpg" alt="" class="wp-image-14188" srcset="https://peepalmedia.com/wp-content/uploads/2022/11/IMG_20221104_105916-1-771x1024.jpg 771w, https://peepalmedia.com/wp-content/uploads/2022/11/IMG_20221104_105916-1-226x300.jpg 226w, https://peepalmedia.com/wp-content/uploads/2022/11/IMG_20221104_105916-1-768x1020.jpg 768w, https://peepalmedia.com/wp-content/uploads/2022/11/IMG_20221104_105916-1-1157x1536.jpg 1157w, https://peepalmedia.com/wp-content/uploads/2022/11/IMG_20221104_105916-1-1542x2048.jpg 1542w, https://peepalmedia.com/wp-content/uploads/2022/11/IMG_20221104_105916-1-150x199.jpg 150w, https://peepalmedia.com/wp-content/uploads/2022/11/IMG_20221104_105916-1-300x398.jpg 300w, https://peepalmedia.com/wp-content/uploads/2022/11/IMG_20221104_105916-1-696x924.jpg 696w, https://peepalmedia.com/wp-content/uploads/2022/11/IMG_20221104_105916-1-1068x1418.jpg 1068w, https://peepalmedia.com/wp-content/uploads/2022/11/IMG_20221104_105916-1-1920x2550.jpg 1920w, https://peepalmedia.com/wp-content/uploads/2022/11/IMG_20221104_105916-1-scaled.jpg 1928w" sizes="(max-width: 771px) 100vw, 771px" /></figure></div>


<p>ಇಲ್ಲಿಯ ಭೌಗೋಳಿಕ ಲಕ್ಷಣಗಳಿಗೆ ಹೊಂದಿಕೆಯಾಗದಂತಹ ಮನೆ ಕಟ್ಟಡಗಳ ನಿರ್ಮಾಣ ಒಂದೆಡೆಯಾದರೆ, ಮದುವೆ ಕಾರ್ಯಕ್ರಮಗಳು ಇಲ್ಲಿನ ಸಂಸ್ಕೃತಿ ಸೊಗಡನ್ನ ಬುಡಮೇಲು ಮಾಡಲು ಮುಂದಾಗಿದ್ದವು. ಹಳ್ಳಿ ಹಳ್ಳಿಗಳ ಹೊಕ್ಕಿದ ಡಿಜೆಯ ಸದ್ದಿನೊಂದಿಗೆ ದುಬಾರಿ ಬೆಲೆಯ ಮದ್ಯದ ಬಾಟಲಿಗಳು ಮತ್ತೇರಿಸಿ ಕುಣಿಸುತ್ತಿದ್ದವು. ಕಾಲುದಾರಿಯಲ್ಲಿ ಓಡಾಡಿ ಜೀವನ ಕಟ್ಟಿಕೊಂಡ ಊರು ಅಗಲವಾದ ಡಾಂಬರು ರಸ್ತೆಗಳೇ ಬೇಕೆನ್ನುವಷ್ಟು ಹಠ ಹಿಡಿದಿತ್ತು. ಮನೆಮನೆಗೂ ಬಂದು ನಿಂತ ಕಾರು ಬೈಕುಗಳಿಂದ ವೈಭವದ ಮೆಟ್ಟಿಲು ಹತ್ತುವ ತವಕ. ಒಬ್ಬರು ಮಾಡುತ್ತಾರೆಂದು ಮತ್ತೊಬ್ಬರು ಹೇಗೂ ಅಡಿಕೆ ಆಗುತ್ತದಲ್ಲ ಎಂಬ ನಂಬಿಕೆಯಲ್ಲಿಯೇ ಅಲ್ಲಿ ಇಲ್ಲಿ ಸಾಲ ಮಾಡಿ ಸುರಿಯುತ್ತಿದ್ದರು. ಈಗ ಅಡಿಕೆಯ ನಂಬಿಕೆಗೆ ಹೊಡೆತ ಬೀಳುವಂತಾಗಿದೆ.</p>



<p>&nbsp;ಸಾಂಪ್ರದಾಯಿಕ ಕೃಷಿಯಲ್ಲಿ ಮುಂದುವರಿಯುತ್ತಿರುವ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳು ದುರಾಸೆ ಬೀಳದೆ ಉಳಿದಿದ್ದರೂ ಸಹ ಅವರ ಬದುಕಿನ ಅವಲಂಬನೆ ಅಡಿಕೆಯೇ ಆಗಿತ್ತು. ಅಡಿಕೆ ಆಗುತ್ತದೆ ಎಂಬ ನಂಬಿಕೆಯಲ್ಲಿಯೇ ಮನೆಯಲ್ಲಿಯೇ ಇರಲಿ ಎಂಬ ಭಾವನೆ ತೆಗೆದು ಎಷ್ಟೋ ಹೆಣ್ಣು ಮಕ್ಕಳು ಡಿಗ್ರಿ ಪಡೆಯುವಂತಾಯ್ತು. ಮನೆಮಕ್ಕಳು ಓದಿ ಉದ್ಯೋಗ ಹಿಡಿಯುವಂತಾಯ್ತು. ಇವೆಲ್ಲಕ್ಕೂ ಮೂಲ ಬಲವಾಗಿದ್ದ ಅಡಿಕೆ ಯಾವ ಮಟ್ಟಕ್ಕೆ ಚರ್ಚಾ ವಸ್ತು ಆಗಿತ್ತೆಂದರೆ, ಮುಖ್ಯವಾಗಿ ಜಾತಿಯ ಆಧಾರದ ಮೇಲೆ ಮೇಲು ಕೀಳು ನಡೆಸುವುದಕ್ಕಿಂತ ಅಡಿಕೆ ಎಷ್ಟು ಕುಂಟಾಲ್ ಆಗುತ್ತದೆ ಎನ್ನುವುದರ ಮೇಲೆ ಜನರ ಯೋಗ್ಯತೆ ಅಳೆಯುವ ಮಟ್ಟಕ್ಕೆ ಬಂದು ನಿಂತಿತ್ತು ಬದುಕು. ಅವರಂತೆ ನಾವು ಮನೆ ಕಟ್ಬೇಕು, ಮದುವೆ ಮಾಡ್ಬೇಕು ಎಂಬ ಕನಸುಗಳಿಗೆಲ್ಲ ಧೈರ್ಯ ಕೊಡುತ್ತಿದ್ದ ಅಡಿಕೆಗೀಗ ಉಸಿರು ಕಟ್ಟುತ್ತಿದೆ. ಬದುಕು ಮುಂದೆ ಹೇಗೆ ಎಂಬ ಉತ್ತರವಿಲ್ಲದ ಪ್ರಶ್ನೆ ಮಲೆನಾಡಿನ ಪ್ರತಿಯೊಬ್ಬರಲ್ಲೂ ಹೊಕ್ಕಿ ಕುಳಿತಿದೆ. ಮಲೆನಾಡಿನ ವಿಷಯದಲ್ಲಿ ಸರ್ಕಾರ ಕೊಟ್ಟಿದ್ದು ಕಡಿಮೆ ಇಲ್ಲಿಂದ ಪಡೆದದ್ದೇ ಹೆಚ್ಚು. ಹಳದಿ ಎಲೆ ರೋಗ ಬಂದು ಮೂರು ದಶಕಗಳಾದರು ಸಹ ಯಾವುದೇ ಔಷಧಿ ಕಂಡುಹಿಡಿಯಲಿಲ್ಲ. ಎಲೆಚುಕ್ಕಿ ರೋಗಕ್ಕೂ ಮದ್ದು ಕಂಡು ಹಿಡಿಯುವ ಸಂಶೋಧನೆಗಳನ್ನ ಸಮರ್ಥವಾಗಿ ನಡೆಸುತ್ತಾರೆಂಬ ಖಾತ್ರಿಯೂ ಇಲ್ಲ. ಆದರೆ ಅಡಿಕೆಯ ವಿಷಯದಲ್ಲಿ ಎಲ್ಲ ಹೆಚ್ಚು ಗಾರಿಕೆ ಮುರಿದು ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟ ಪ್ರಕೃತಿಯ ಶಕ್ತಿ ನಿಜದ ಆಶ್ಚರ್ಯ.&nbsp;</p>



<p></p>



<p><strong>ದಿಗಂತ್ ಬಿಂಬೈಲ್‌</strong></p>



<p>ಹವ್ಯಾಸಿ ಬರಹಗಾರರು</p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/11/WhatsApp-Image-2022-11-04-at-3.21.11-PM-872x1024.jpeg" alt="" class="wp-image-14182" width="159" height="184"/></figure>
]]></content:encoded>
					
		
		
			</item>
	</channel>
</rss>
