<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Silkyara &#8211; Peepal Media</title>
	<atom:link href="https://peepalmedia.com/tag/silkyara/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 28 Nov 2023 11:24:00 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Silkyara &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಿಲ್ಕ್ಯಾರಾ ಸುರಂಗ ದುರಂತ: ಸಿಲುಕಿರುವ ಕಾರ್ಮಿಕರನ್ನು ಹೊರತರಲು ಕ್ಷಣಗಣನೆ</title>
		<link>https://peepalmedia.com/rescuers-break-through-silkyara-tunnel-rubble/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 28 Nov 2023 11:16:07 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Silkyara]]></category>
		<category><![CDATA[Silkyara tunne]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[Uttarakashi]]></category>
		<category><![CDATA[Uttarakhand]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33206</guid>

					<description><![CDATA[ಉತ್ತರಕಾಶಿ: ಕಳೆದ 16 ದಿನಗಳಿಂದ 41 ಕಾರ್ಮಿಕರು ಸಿಲುಕಿ ಹಾಕಿಕೊಂಡಿರುವ ಸಿಲ್ಕ್ಯಾರಾ ಸುರಂಗವನ್ನು‌ ಮಂಗಳವಾರ ರಕ್ಷಣಾ ಕಾರ್ಯಕರ್ತರು 60 ಮೀಟರ್ ಕೊರೆದಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ಇಲಾಖೆ ಮುಖ್ಯಸ್ಥ ಬನ್ಸಿ ಧರ್ ತಿವಾರಿ ಈ ಪ್ರಕ್ರಿಯೆ ಮುಗಿದಿರುವ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಕೊರೆಯಲಾದ ಪ್ಯಾಸೇಜ್‌ಗೆ ಎಸ್ಕೇಪ್ ಪೈಪ್ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ತಿಳಿಸಿದ್ದಾರೆ. &#8220;ಶೀಘ್ರದಲ್ಲೇ ಎಲ್ಲಾ ಕಾರ್ಮಿಕರನ್ನು ಹೊರತರಲಾಗುವುದು&#8221; ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ [&#8230;]]]></description>
										<content:encoded><![CDATA[
<p><strong>ಉತ್ತರಕಾಶಿ: </strong>ಕಳೆದ 16 ದಿನಗಳಿಂದ 41 ಕಾರ್ಮಿಕರು ಸಿಲುಕಿ ಹಾಕಿಕೊಂಡಿರುವ ಸಿಲ್ಕ್ಯಾರಾ ಸುರಂಗವನ್ನು‌ ಮಂಗಳವಾರ ರಕ್ಷಣಾ ಕಾರ್ಯಕರ್ತರು 60 ಮೀಟರ್ ಕೊರೆದಿದ್ದಾರೆ. ರಾಜ್ಯ ಸರ್ಕಾರದ ಮಾಹಿತಿ ಇಲಾಖೆ ಮುಖ್ಯಸ್ಥ ಬನ್ಸಿ ಧರ್ ತಿವಾರಿ ಈ ಪ್ರಕ್ರಿಯೆ ಮುಗಿದಿರುವ ಬಗ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>



<p>ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಕೊರೆಯಲಾದ ಪ್ಯಾಸೇಜ್‌ಗೆ ಎಸ್ಕೇಪ್ ಪೈಪ್ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ತಿಳಿಸಿದ್ದಾರೆ. &#8220;ಶೀಘ್ರದಲ್ಲೇ ಎಲ್ಲಾ ಕಾರ್ಮಿಕರನ್ನು ಹೊರತರಲಾಗುವುದು&#8221; <a href="https://x.com/pushkardhami/status/1729419203395125658?s=20">ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.</a></p>



<p>ಇದಕ್ಕೂ ಮುನ್ನ ಎನ್‌ಎಚ್‌ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹಮೂದ್ ಅಹ್ಮದ್ ಈ ಕೊರೆಯುವ ಕೆಲಸ ಮುಗಿದಿದೆ ಎಂದು ತಕ್ಷಣ ಖಚಿತಪಡಿಸಲಿಲ್ಲ. ಪೈಪ್‌ನ ಕೊನೆಯ ಭಾಗವನ್ನು ತಳ್ಳಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದರು.</p>



<p>ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಳೆದ ಹಲವು ದಿನಗಳಿಂದ ಕೊರೆಯಲಾದ ಮಾರ್ಗಕ್ಕೆ ಸ್ಟೀಲ್‌ ಚ್ಯೂಟ್‌ ತಳ್ಳಿ ಒಬ್ಬೊಬ್ಬರಾಗಿ ಕಾರ್ಮಿಕರನ್ನು ಹೊರತರುವ ನಿರೀಕ್ಷೆಯಿದೆ.</p>



<p>ಪ್ರತಿಯೊಬ್ಬ ಕಾರ್ಮಿಕನೂ ಚಕ್ರದ ಸ್ಟ್ರೆಚರ್ ಮೇಲೆ ಮಲಗುತ್ತಾನೆ, ಅದನ್ನು ರಕ್ಷಣಾ ತಂಡದವರು ಹೊರಗೆ ಹಗ್ಗಗಳನ್ನು ಬಳಸಿ ಎಳೆಯುತ್ತಾರೆ. ಇದು ಸುಮಾರು ಎರಡು ಅಥವಾ ಮೂರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ.</p>



<p>ಚಾರ್ ಧಾಮ್ ಮಾರ್ಗದ ವಿಪತ್ತು ನಡೆದಿರುವ ಸ್ಥಳದಲ್ಲಿ ಈ ಸುದ್ದಿ ಹೊರಬೀಳುವ ಗಂಟೆಗಳ ಮುಂಚೆಯೇ ನಿರೀಕ್ಷೆಯ ವಾತಾವರಣ ನಿರ್ಮಾಣವಾಗಿತ್ತು. ಸ್ಟೀಲ್‌ ಚ್ಯೂಟ್‌ನಿಂದ ಒಂದೊಂದಾಗಿ ಹೊರಬರುವ ಕಾರ್ಮಿಕರನ್ನು ನೇರವಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಆಂಬ್ಯುಲೆನ್ಸ್‌ಗಳು ಸುರಂಗದ ಬಾಯಿಯ ಬಳಿ ಸಾಲುಗಟ್ಟಿ ನಿಂತಿದ್ದವು.</p>



<p>ಆಂಬ್ಯುಲೆನ್ಸ್‌ಗಳ ಸಂಚಾರವನ್ನು ಸುಲಭಗೊಳಿಸಲು ಮಣ್ಣಿನ ರಸ್ತೆಯನ್ನು ವಿಸ್ತರಿಸಲಾಗಿದೆ. ಸುರಂಗದ ಬಾಯಿಯೊಳಗೆ ಸ್ಟ್ರೆಚರ್‌ಗಳನ್ನು ಕಳುಹಿಸಲಾಗುತ್ತಿದೆ.</p>



<p>ಎಲ್ &amp; ಟಿ ತಂಡದ ನಾಯಕ ಕ್ರಿಸ್ ಕೂಪರ್ &#8220;ಅವರು ಸಂಜೆ 5 ಗಂಟೆಯ ಮೊದಲು ಹೊರಬರುವ ಸಾಧ್ಯತೆಯಿದೆ&#8221; ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುರಂಗದ ಮೇಲಿನಿಂದ ಕಾರ್ಮಿಕರನ್ನು ತಲುಪಲು ಲಂಬಾಕಾರದ ಡ್ರಿಲ್ಲಿಂಗ್, ಏಕಕಾಲದಲ್ಲಿ ಕೊರೆಯುವ ಕಾರ್ಯಾಚರಣೆಯನ್ನು ಈಗ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>



<p>ಸೀಮಿತ ಜಾಗದಲ್ಲಿ ಕೈಯಲ್ಲಿ ಹಿಡಿಯುವ ಉಪಕರಣಗಳನ್ನು ಬಳಸಿಕೊಂಡು ಕೊನೆಯ ಹಂತದ ಕೊರೆಯುವಿಕೆಯನ್ನು ಮುಗಿಸಲು ಹನ್ನೆರಡು ಗಣಿಗಾರಿಕೆ ತಜ್ಞರನ್ನು ಕರೆತರಲಾಗಿದೆ.</p>



<p>ರಕ್ಷಿಸಲ್ಪಟ್ಟ ಕಾರ್ಮಿಕರಿಗಾಗಿ ಸಿಲ್ಕ್ಯಾರಾದಿಂದ ಸುಮಾರು 30 ಕಿಮೀ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಆಮ್ಲಜನಕ ಸಹಿತ ಹಾಸಿಗೆಗಳನ್ನು ಹೊಂದಿರುವ ವಿಶೇಷ ವಾರ್ಡ್ ಅನ್ನು ದಿನಗಳ ಹಿಂದೆಯೇ ಸಿದ್ಧಪಡಿಸಲಾಗಿತ್ತು.</p>
]]></content:encoded>
					
		
		
			</item>
	</channel>
</rss>
